Skip to main content

Full text of "ಶ್ರೀ ಸ್ಕಾಂದಮಹಾಪುರಾಣಂ ೨ ಬ್ರಹ್ಮಖಂಡ"

See other formats


THE BOOK WAS 
DRENCHED 


UNIVERSAL 
LIBRARY 


OU _200500 


೬೬11೬೮1] 
IVSHAINN 


OSMANIA UNIVERSITY LIBRARY 


hd i 
Call No.K ಗ Vu Wh Accession No {4 ೨ Y 

1 4 pS ಎ ಸ್ಯ | 
HY Wn 


Author 
110 


‘This book should be returned on or before the date last marked below, 


ಶ್ರೀಸ್ಥಾಂದಮಹಾಪುರಾಣಂ 
ಶ್ರೀಧರ್ಮಾಂರಣ್ಯಮಾಹಾತ್ಮ್ಯ 
(ಮೂಲ ಮತ್ತು ಅನುವಾದ ಸಹಿತ) 


ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ತಮಾಲಾ ಸಂಖ್ಯಾ ೧೪ 


ಶ್ರೀಸ್ಕಾಂದಮಹಾಪುರಾಣಂ 
ಬ್ರಹ್ಮಖಂಡ 
ಹ 
ಶ್ರೀಧರ್ಮಾಂರಣ್ಯಮಾಹಾತ್ಮ್ಯ 


(ಮೂಲ ಮತ್ತು ಅನುವಾದ ಸಹಿತ) 


ಅನುವಾದಕ 
ಆಸ್ಥಾನ ವಿದ್ವಾನ್‌ 
ನೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ 


ಬೆಂಗಳೂರು ಪ್ರೈಸ್‌ 
ಮೈಸೂರು ರೋಡು, ಬೆಂಗಳೂರು ಸಿಟ 
೧೯೪೭ 


ಅರಿಕೆ 


ಈ ಹನ್ನೆರಡನೆಯ ಸಂಪುಟದಲ್ಲಿ ಶ್ರೀಸ್ಥಾಂದಮಹಾಪುರಾಣದ ತೃತೀಯ 
ಮೂಲಖಂಡವಾದ ಬ್ರಹ್ಮಖಂಡದ ಎರಡನೆಯ ಭಾಗವಾದ ಧರ್ಮಾರಣ್ಯ 
ಮಾಹಾತ್ಮ್ಯವು ಉಪಕ್ರಮವಾಗಿ ಮುಗಿದಿರುತ್ತದೆ. 

ಈ ಬ್ರಹ್ಮಖಂಡದ ಅನುವಾದಕಾರ್ಯದಲ್ಲಿ ನನ್ನ ಮಾನ್ಯಮಿತ್ರರಾದ 
ಸಾಹಿತ್ಯವಿದ್ವಾನ್‌ ಶ್ರೀ॥ ಕೆ. ನರಸಿಂಹಾಚಾರ್ಯರವರು ಸಹಭಾಗಿಗಳು; 
ಅದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಯ ವಂದನೆಗಳು. 

ಇಂತಹ ಅನೇಕಾನೇಕ ಕ್ಸೇತ್ರಮಾಹಾತ್ಮ್ಯಗಳ ಸಂಪುಟನೆನಿಸಿರುವ 
ಈ ಮಹಾಪುರಾಣವನ್ನು ಕನ್ನಡದ ಅನುವಾದದೊಡನೆ ಪ್ರಕಟಿಸಲು ಪ್ರೇರೇಪಿಸಿ 
ಕನ್ನಡಿಗರೆಲ್ಲರಿಗೂ ಮಹೋಸಕೃತಿಯೆನ್ನಸಗಿ ಅವರೆಲ್ಲರ ಚಿರಕೃ ತಜ್ಞ ತೆಗೆ ಪಾತ್ರ 
ರಾಗಿರುವ ನಮ್ಮನ್ನಾಳುವ ಶ್ರೀಮದ್‌ ಜಯಚಾಮರಾಜೇಂದ್ರ ಒಡೆಯರ್‌ 
ಬಹದ್ದೂರ್‌, ಜಿ.ಸಿ.ಬಿ., ಜಿ.ಸಿ.ಎಸ್‌.ಐ. ಮಹಾಪ್ರಭುಗಳವರಿಗೆ ಪರಮೇಶ್ವರನು 
. ಇತೋಪ್ಯತಿಶಯವಾದ ಸಮಸ್ತ ಸನ್ಮಂಗಳಗಳನ್ನೂ ದಯೆಪಾಲಿಸಿ ಸಂರಕ್ಸಿಸ 
ಲೆಂದು ಸಂಪ್ರಾರ್ಥಿಸುತ್ತೇನೆ. 


ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ 


ನಿಷಯಾನುಕ್ರಮಣಿಕೆ 


ಒಂದನೆಯ ಅಧ್ಯಾಯ -- 
ಯುಧಿಷ್ಠಿರನ ಪ್ರಶ್ನವರ್ಣನ 
ಎರಡನೆಯ ಅಧ್ಯಾಯ 
ಯುಧಿಸ್ಮಿರನ ಪ್ರಶ್ನವರ್ಣನ 
ಮೂರನೆಯ ಅಧ್ಯಾಯ -- 
ಇಂದ್ರಭಯ ಕಥನ 
ನಾಲ್ಕನೆಯ ಅಧ್ಯಾಯ -- 
ಕ್ಸೇತ್ರಸ್ಥಾಪನ 
ಐದನೆಯ ಅಧ್ಯಾಯ 
ಸದಾಚಾರವರ್ಣನ 
ಆರನೆಯ ಅಧ್ಯಾಯ 
ಸದಾಚಾರಲಕ್ಸಣವರ್ಣನ 
ಏಳನೆಯ ಅಧ್ಯಾಯ 
ಧರ್ಮಾಚಾರವರ್ಣನ 
ಎಂಟನೆಯ ಅಧ್ಯಾಯ -- 
ವಿಷ್ಣು ಸಮಾಗಮ 


ಒಂಬತ್ತನೆಯ ಅಧ್ಯಾಯ 
ಗೊತ್ರಪ್ರ ವರಗೋತ್ರಡೇನೀಕಥನ ಸ 


ಹತ್ತನೆಯ ಅಧ್ಯಾಯ 
ವಣಿಕ್ಪರಿಗ್ರಹವರ್ಣನ 


ಹನ್ನೊಂದನೆಯ ಅಧ್ಯಾಯ -- 
ಲೋಲಜಿಹ್ವಾಸುರವಧ-ಸತ್ಯಮಂದಿರ ಸಂಸ್ಥಾಪನವರ್ಣನ 


ಹನ್ನೆರಡನೆಯ ಅಧ್ಯಾಯ 


ಗಣೇಶಪ್ರಸ್ಮಾಪನಾವರ್ಣನ 


ಹದಿಮೂರನೆಯ ಅಧ್ಯಾಯ 
ಬಕುಲಾರ್ಕಮಾಹಾತ್ಮ, ಕಥನ 


ಪುಟ ಸಂಖ್ಯೆ 


೨೦- ೨೪ 


೨೫- ೩೭ 


೩೮-- ೫೫ 


೫೬- ೭೭ 


೬೮೨ ೯೩ 


೯೪-೧೦೯ 


೧೧೦-೧೧೮ 


೧೧೯-೧೩೫ 


೧೩೬-೧೪೪ 


೧೪೫-೧೪೯ 


೧೫೦-೧೫೫ 


೧೫೬-೧೬೭ 


ಹದಿನಾಲ್ಲನೆಯ ಅಧ್ಯಾಯ --. 
ವಿಷ್ಣುಶಿರೋನಾಶವರ್ಣನ 

ಹದಿನೈದನೆಯ ಅಧ್ಯಾಯ 
ಹಯಗ್ರೀವಾಖ್ಯಾನವರ್ಣನ 

ಹದಿನಾರನೆಯ ಅಧ್ಯಾಯ 


ಆನಂದಾಸ್ಥಾಪನವರ್ಣನ 


ಹದಿನೇಳನೆಯ ಅಧ್ಯಾಯ -- 
ಶ್ರೀಮಾತಾಮಾಹಾತ್ಮ್ಯವರ್ಣನ 
ಹದಿನೆಂಟನೆಯ ಅಧ್ಯಾಯ 


ಮಾತಂಗೀಕರ್ಣಾಟಕೋಪಾಖ್ಯಾನವರ್ಣನ 


ಹತ್ತೊಂಬತ್ತನೆಯ ಅಧ್ಯಾಯ 
ಇಂಡ್ಲೇಶ್ವರ ಜಯಂತೇಶ್ವರ ಮಹಿಮಾನುವರ್ಣನ 


ಇಪ್ಪತ್ತನೆಯ ಅಧ್ಯಾಯ 
ಧರಾಕ್ಟೇತ್ರವರ್ಣನ 


ಇಪ್ಪತ್ತೊಂದನೆಯ ಅಧ್ಯಾಯ 


ಶ್ರಿ ಮಾತಾಕಥಿತ ನಾಮಗೋತ್ರಪ್ರವರಕೃತ ದೇವ್ಯವಟಿಂಕ ಕಥನ.. 


ಇಪ್ಪು ತ್ತೆ ರಡನೆಯ ಅಧ್ಯಾಯ 
ದೇವತಾಸ್ಥಾಪನ 
ಇಪ್ಪತ್ತಮೂರನೆಯ ಅಧ್ಯಾಯ 
ಜ್ಞಾತಿಭೇದವರ್ಣನ 
ಇಪ್ಪತ್ತನಾಲ್ಕನೆಯ ಅಧ್ಯಾಯ 
ಧರ್ಮಾರಣ್ಯತೀರ್ಥಪ್ರಭಾವಕಥನ pa 
ಇಪ್ಪತ್ತೈದನೆಯ ಅಧ್ಯಾಯ 
ಸರಸ್ವತೀ ಮಾಹಾತ್ಮ್ಯವರ್ಣನ 
ಇಪ್ಪತ್ತಾರನೆಯ ಅಧ್ಯಾಯ 
ದ್ವಾರಕಾಮಾಹಾತ್ಮ್ಯವರ್ಣನ 
ಇಪ್ಪತ್ತೇಳನೆಯ ಅಧ್ಯಾಯ 
ಬಲಾಹಕೋಪಾಖ್ಯಾನವರ್ಣನ 


ಪುಟಿ ಸಂಖ್ಯೆ 


೧೭೦-೧೭೬ 


೧೭೭-೧೮೯ 


೧೯೦-೧೯೪ 


೧೯೫-೨೦೦ 


೨೦೧-೨೨೪ 


೨೨೫-೨೩೦ 


೨೩೧-5೯೩೭ 


೨೬೩೮-೨೪ 


೨೪೪-೨೪೭ 


೨೪೮-೨೫೪ 


೨೫೫-೨೫೭ 


೨೫೮-೨೬೦ 


೨೬೧-೨೬೩ 


೨೬೪-೨೭೧ 


ಇಸ್ಸತ್ತೆಂಟಿನೆಯ ಅಧ್ಯಾಯ 
ತೀರ್ಥಮಾಹಾತಕ್ಮ್ಯವರ್ಣನ 

ಇಸ್ಪತ್ತೊಂಬತ್ತನೆಯ ಅಧ್ಯಾಯ 
ಲೋಹಾಸು ರಮಾಹಾತ್ಮ್ಮಸಂಪೂರ್ತಿವರ್ಣನ 


ಮೂವತ್ತನೆಯ ಅಧ್ಯಾಯ 
ರಾಮಚರಿತ್ರವರ್ಣನ 


ಮೂವತ್ತೊಂದನೆಯ ಅಧ್ಯಾಯ 
ದೂತಾಗಮನ 
ಮೂವತ್ತೆರಡನೆಯ ಅಧ್ಯಾಯ 
ಬ್ರಹ್ಮನಾರದಸಂವಾದೇ ಸತ್ಯಮಂದಿರಸ್ಕಾಪನವರ್ಣನ 
ಮೂವತ್ತಮೂರನೆಯ ಅಧ್ಯಾಯ -- 
ಶ್ರೀರಾಮಚಂದ್ರನ ಪುರಪ್ರತ್ಕಾಗಮನನರ್ಣನ 
ಮೂವತ್ತನಾಲ್ಕನೆಯ ಅಧ್ಯಾಯ -- 
ಶ್ರೀರಾಮ ಕೃತ ಶಾಸನಪಟ್ಟಿ ಪ್ರದಾನವರ್ಣನ 
ಮೂವತ್ತೈೆ ದನೆಯ ಅಧ್ಯಾಯ -- 


ಶ್ರೀರಾಮಚಂದ್ರಕೃತ ಧರ್ಮಾರಣ್ಯತೀರ್ಥಕ್ಸೇತ್ರ ಜೀರ್ಣೋ 
ದಾರವರ್ಣನ | 


ಮೂವತ್ತಾರನೆಯ ಅಧ್ಯಾಯ 
ಹನುಮತ್ಸಮಾಗವು ಸ 
ಮೂವತ್ತೇಳನೆಯ ಅಧ್ಯಾಯ -- 
ಬ್ರಾಹ್ಮಣಪ್ರತ್ಕಾಗಮನವರ್ಣನ 
ಮೂವತ್ತೆಂಟನೆಯ ಅಧ್ಯಾಯ 
ಬ್ರಾಹ್ಮಣಶಾಸನವೃತ್ತಿಪ್ರಾಪ್ತಿವರ್ಣನ 
ಮೂವತ್ತೊಂಬತ್ತನೆಯ ಅಧ್ಯಾಯ-- 
ಜ್ಞ್ಞಾತಿಭೇದವರ್ಣನ 
ನಲವತ್ಮನೆಯ ಅಧ್ಯಾಯ -- 


ಧರ್ಮಾರಣ್ಯನಸಿವಾಸಿ ವ್ಯವಸ್ಥಾ ಪನಪೂರ್ವಕ ಧರ್ಮಾ5ರಣ್ಕ 
ಪುರಾಣಶ್ರವಣಮಾಹಾತ್ಮ್ಯವರ್ಣನ Ae 


ಪು ಸುಖ್ಯೆ 


೨೭೨-೨೭೪ 


೨೭೫-೨೮೫ 


೨೮೬-೩೦೦ 


೩ಿಂ೧-೩೧೨ 


೩೧೩-೩೨೨ 


೩ಿ೨೩-ಷಿತ್ಲಿ೦ 


೩೩೧-೩೩೯ 


೩೪೦-೩೪೮ 


೩೪೯-೩೭೬ 


೩೭೭೨೩೮೬ 


೩೮೭-೩೯೯ 


೪೦೦-೪೪೧ 


೪೪೨-೪೫೩ 


! ಶ್ರೀಃ 
ಅಥ ಮಂಗಳಾಚರಣಶ್ಲೋಕ; 


ಯಸ್ಯ್ಕಾಜ್ಞಯಾ ಜಗತ್ಸ್ಪ್ರೃಷ್ಟಾ ನಿರಿಂಚಿಃ ಸಾಲಕೋ ಹರಿಃ । 
ಸಂಹರ್ತಾ ಕಾಲರುದ್ರಾಖ್ಯೋ ನಮಸ್ತಸ್ಮೈ ಸಿನಾಕಿನೇ ॥ 
ತಾತ್ರ್ತರ್ಯ 
ಯಾವ ಪ್ರಭುವಿನ ಅಪ್ಪಣೆಯಿಂದ 
ಬ್ರಹ್ಮನು ಜಗತ್ತನ್ನು ಸೃಜಿಸುವವನಾಗಿಯೂ 
ಶ್ರೀಮನ್ನಾರಾಯಣಮೂರ್ತಿಯು ಸಂರಕ್ಸಿಸುವವನಾಗಿಯೂ 
ಕಾಲರುದ್ರನೆಂದು ಹೆಸರಾದ ಸ್ವಾಮಿಯು ಸಂಹಾರಕರ್ತನಾಗಿಯೂ ಇರುವರೋ 
ಆ ಪಿನಾಕಪಾಣಿಯಾದ ಪರಮಶಿವನಿಗೆ 


ನಮಸ್ಕಾರವು 


1 ಶ್ರೀಃ ॥ 


1 ಶ್ರೀಶಂಕರಃ ಶಂಕರಃ ॥ 


ಶ್ರೀ ಸ್ಕಾಂದಮಹಾಪುರಾಣಂ 


a 


ಅಥ ಧರ್ಮಾಂರಣ್ಯಮಾಹಾತ್ಮ್ಮ್ಯಂ ಪ್ರಾರಭ್ಯತೇ 


ಓಂ ಶ್ರೀ ಗಣೇಶಾಯ ನಮಃ 1 ಓಂ ನಮೋ ಬೃಹಸ್ಪತಯೇ । 
ನಮಸ್ತಸ್ಮ್ಮೃ ಬ್ರಹ್ಮಣೇ | ವಿಷ್ಣವೇ ನಮಃ ॥ 


ಶ್ರೀಮತ್ತುಂದರಖಾಶಾನಂ ಶ್ರೀಮತ್ತಿದ್ದಿನಿನಾಯೆಕಂ | 
ಸಣ್ಮುಖಂ ಸ್ಮಂದಮಾನಂದಂ ಬ್ರಹ್ಮಾಣಂ ವಿಷ್ಣುಮಾಶ್ರಯೇ ॥ 
ಯಸ್ಕಾಜ್ಞ್ಞಯಾ ಜಗತ್ಸ್ಪ್ರಷ್ಟಾ ವಿರಿಂಚಿಃ ಪಾಲಕೋ ಹರಿಃ ! 
ಸಂಹರ್ತಾ ಕಾಲರುದ್ರಾಖ್ಕೋ ನಮಸ್ತಸ್ಮೈ ಹಿನಾಕಿನೇ ॥ 
ಅಥ ಪ್ರಥಮೋಧ್ಯಾಯಸಃ 
ಯುಧಿಷ್ಠಿರ ಪ್ರಶ್ನವರ್ಣನಂ 


ನೈಮಿಸೇನಿಮಿಷಕ್ಸೇತ್ರೇ ಯುಷಯಃ ಶೌನಕಾದಯಃ | 

ಸತ್ರಂ ಸ್ಪರ್ಗಾಯ ಲೋಕಾಯ ಸಹಸ್ರಸಮಮಾಸತ mon 
ಏಕದಾ ಸೂತನಾಯಾಂತಂ ದೃಷ್ಟಾ ತಂ ಶೌನಕಾದಯಃ । 

ಪರಂ ಹರ್ಷಂ ಸಮಾವಿಷ್ಟಾಃ ಪಪುರ್ನೇತ್ರೆಃ ಸುಚೇತಸಾ । 

ಚಿತ್ರಾಃ ಶ್ರೋತುಂ ಕಥಾಸ್ತತ್ರ ಪರಿನವ್ರುಸ್ತ ಸಸ್ಟಿನಃ ॥೨॥ 


೫2೨೨೫೨ ೨೨೨2೨2 





ಕನ್ನಡದ ಅನುವಾದ 
ಯುಧಿಷ್ಠಿರನ ಪ್ರಶ್ನವರ್ಣನ 

೧. ಪರಮಾತ್ಮನ ಸಾಸ್ಸಿಧ್ಯದಿಂದ ಪವಿತ್ರಕ್ಷೇತ್ರವೆನಿಸಿದ ನೈಮಿಷಾರಣ್ಯ 
ದಲ್ಲಿ ಶೌನಕರೇ ಮೊದಲಾದ ಮುನಿಗಳು ಶಾಶ್ವತವಾದ ಮೋಕ್ಸಸುಖಕ್ಕಾಗಿ 
ಒಂದು ಸಾವಿರ ವರ್ಷ ನೆರವೇರಿಸುವ, ಅನೇಕ ಬುತ್ತಿಜರ: ಮಾಡುವ ಸತ್ರವೆಂಬ 
ಕರ್ಮವನ್ನುದ್ದೇಶಿಸಿ ಕುಳಿತರು, 

೨. ಒಂದು ದಿನ ಅವರು ಬರುತ್ತಿರುವ ಸೂತಪುರಾಣಿಕನನ್ನು ಕಣ್ಣಣಿವಂತೆ 
ನೋಡಿ ಸರಮಾನಂದಗೊಂಡು ಆ ಪುರಾಣಿಕನಿಂದ ಅದ್ಭುತವಾದ ಕಥೆಗಳನ್ನು 
ಒಮ್ಮನಸ್ಸಿನಿಂದ ಕೇಳಲು ಸುತ್ತುವರಿದರು. 


೨ ಶ್ರೀ ಸ್ಕ್ಯಾಂದಮಹಾಪುರಾಣಂ 


ಅಥ ತೇಷೂಪವಿಷ್ಟೇಷು ತಪಸ್ವಿಷು ಮಹಾತ್ಮಸು । 


ನಿರ್ದಿಷ್ಟಮಾಸನಂ ಭೇಜೇ ನಿನಯಾಲ್ಲೋಮಹರ್ಷಣಿಃ Han 

ಸುಖಾಸೀನಂ ಚ ತಂ ದೃಷ್ಟ್ವಾ ನಿಫ್ನಾಂತಮುಪಲಕ್ಸ್ಯ್ಯ ಚೆ। 

ಅಥಾಂಪೃಚ್ಛಂಸ್ತ ಖಯಷಯಃ ಕಾಶ್ಲಿತ್ರ್ರಾಸ್ತಾನಿಕೀಃ ಕಥಾಃ ॥೪॥ 

ಪುರಾಣಮಖಿಲಂ ತಾತ ಪುರಾ ತೇಂಧೀತವಾಸ್ಪಿತಾ । 

ಕಚ್ಚಿತ್ತ್ವಯಾಂಫಿ ತತ್ಸರ್ವಂ ಅಧೀತಂ ಲೋಮಹರ್ಷಣೇ ॥ ೫ 

ಕಥಯಸ್ವ ಕಥಾಂ ಸೂತ ಪುಣ್ಯಾಂ ಸಾಪನಿಷೂದಿನೀಂ । 

ಶ್ರುತ್ವಾ ಯಾಂ ಯಾತಿ ವಿಲಯಂ ಪಾಪಂ ಜನ್ಮಶತೋದ್ಭನಂ ॥೬॥ 
ಸೂತ ಉವಾಚ :- 

ಶ್ರೀಭಾರತ್ಯಂಘಫ್ರಿಯುಗಲಂ ಗಣನಾಥಪದದ್ಧಯಂ | 

ಸರ್ವೇಷಾಂ ಚೈನ ದೇವಾನಾಂ ನನುಸ್ಕೃತ್ಯ ವದಾಮ್ಯಹಂ ॥೭॥ 

ಶಕ್ತೀಂಶ್ಸೈವ ನಸೂಂಶ್ಲೈನ ಗ್ರಹಾನ್ಯಜ್ಞಾ ಧಿದೇವತಾಃ । 

ನಮಸ್ಕೃತ್ಯ ಶುಭಾನ್ಹಿಷ್ಟಾನ್ಶನಿಮುಖ್ಯಾಂಶ್ಚ ಸರ್ವಶಃ ॥೮॥ 

ಅಭೀಷ್ಟದೇನತಾಶ್ಚೆವ ಪ್ರಣಮ್ಯ ಗುರುಸತ್ತಮಂ | 

ನಮಸ್ಕೃತ್ಯ ಶುಭಾನ್ಹೇವಾನ್ರಾಮಾದೀಂಶ್ಚ ನಿಶೇಷತಃ ॥೯॥ 





೩. ಮಹಾತ್ಮರಾದ ಆ ತಪೋಧನರು ಕುಳಿತುಕೊಳ್ಳಲು ವಿನಯದಿಂದ 
ಸೂತನು ತನಗೆ ಸಿದ್ಧವಾದ ಆಸನವನ್ನು ಮಂಡಿಸಿದನು. 

೪. ಬಳಿಕ ಆ ಮಹರ್ಷಿಗಳು ನೀಠವನ್ನಲಂಕರಿಸಿದ ಸೂತನನ್ನೀಕ್ಸಿಸಿ 
ಬೇರೆ ಯಾವ ಅಡ್ಡಿಗಳೂ ಇಲ್ಲವೆಂಬುದನ್ನರಿತು ಪ್ರಸ್ತಾನಕ್ರಮದಿಂದ ಕೆಲವು 
ಕಥೆಗಳನ್ನು ಕೇಳಿದರು. 

೫. ಅಯ್ಯಾ! ನಿಮ್ಮ ತಂದೆಯವರು ಎಲ್ಲ ಪುರಾಣಗಳನ್ನು ಓದಿರುವರು. 
ನೀನೂ ಅವೆಲ್ಲವನ್ನೂ ಓದಿರುವೆಯಲ್ಲವೆ? 

೬. ಸೂತ! ಅನೇಕ ಜನ್ಮಗಳಿಂದುಂಟಾದ ಪಾಪಗಳನ್ನು ನೀಗಿಸುವ 
ಪವಿತ್ರವಾದ ಕಥೆಯನ್ನು ಹೇಳು. 

೭. ಸೂತನು ಹೇಳಿದನು :-- ಮುನಿವರ್ಯರೆ! ಶ್ರೀಭಾರತೀದೇವಿಯ, 
ಗಣೇಶನ ಮತ್ತು ಸಮಸ್ತ ದಿವಿಜರ ಅಡಿಗಳಿಗೆರಗಿ ಹೇಳುತ್ತೇನೆ. 

೮-೧೦. ಶಕ್ತಿದೇವತೆಗಳನ್ನೂ, ಅಷ್ಟವಸುಗಳನ್ನೂ, ನವಗ್ರಹೆಗಳನ್ನೂ, 
ಯಜ್ಞ ದೇವತೆಗಳನ್ನೂ, ಶ್ರೋತ್ರಿಯರಾದ ಬ್ರಾಹ್ಮೆಣರನ್ನೂ, ಸಕಲ ಜ್ಞಾನಿ 
ವರೇಣ್ಯರನ್ನೂ, ಇಷ್ಟದೇವತೆಗಳನ್ನೂ, ಗುರುವರ್ಯರನ್ನೂ, ಯಾರ ನಾಮ 
ಸ್ಮರಣೆಯಿಂದ ತ್ರಿವಿಧವಾದ ಪಾಪವು ಕಳೆಯುವುದೊ ಅಂತಹ ಪವಿತ್ರರಾದ 
ರಾಮಾದಿ ದೇವತೆಗಳನ್ನೂ, ಸರ್ವನಿಯಾಮಕನಾದ ಧರ್ಮರಾಜನನ್ನೂ ಭಕ್ತಿ 


ಪ್ರಥನೋತಿಧ್ಯಾಯಃ 4 


ಯಾನ್ಸ್ಮ ತ್ವಾ ತ್ರಿನಿಥೈಃ ಸಾಸೈರ್ಮುಚ್ಯತೇ ನಾಂತ್ರ ಸಂಶಯಃ । 
ತೇಷಾಂ ಪ್ರಸಾವಾದ್ವಳ್ಸ್ಯೇಂಹಂ ತೀರ್ಥಾನಾಂ ಫಲಮುತ್ತಮಂ 1 
ಸರ್ವೇಷಾಂ ಚ ನಿಯಂತಾರಂ ಧರ್ಮಾತ್ಮಾನಂ ಪ್ರಣಮ್ಯ ಚ ॥೧೦॥ 
ಧರ್ಮಾರಣ್ಯಹಪತಿಸ್ತ್ರಿನಿಷ್ಟಪಪತಿರ್ನಿತ್ಯಂ ಭವಾನೀಪತಿಃ 

ಪಾಯಾದ್ಮಃ ಸ್ಥಿರಭೋಗಂಯರೋಗಸುಲಭೋ ದೇನಃ ಸ ಧರ್ಮೇಶ್ವರ । 
ಸರ್ವೇಷಾಂ ಹೃದಯಾನಿ ಜೀವಕಲಯಾ ವ್ಯಾಪ್ಯ ಸ್ಥಿತಃ ಸರ್ವದಾ 
ಧ್ಯಾತ್ವಾ ಯಂನ ಪುನರ್ವಿಶಂತಿ ಮನುಜಾಃ ಸಂಸಾರಕಾರಾಗೃಹಂ noo 
ಏಕದಾ ತು ಸಧರ್ನೋ ವೈ ಜಗಾಮ ಬ್ರಹ್ಮಸಂಸದಿ । 


ತಾಂ ಸಭಾಂ ಸ ಸಮಾಲೋಕ್ಯ ಜ್ಞಾನನಿಷ್ಠ್ಕೋಂ ಭವತ್ತದಾ ॥ ೧೨॥ 
ನೇವೈರ್ಮುನಿನರೈಃ ಕ್ರಾಂತಾಂ ಸಭಾಮಾಲೋಕ್ಯ ನಿಸ್ಮಿತಃ । 
ದೇನೈರ್ಯಕ್ಸೈಸ್ತಥಾ ನಾಗೈಃ ಸನ್ನಗೈಶ್ಚ ತಥಾಂಸುರೈಃ ॥ ೧೩ ॥ 
ಯಸಿಭಿಃ ಸಿದ್ಧಗಂಧರ್ವೈಃ ಸಮಾಕ್ರಾಂತೋಚಿತಾಸನಾ । 

ಸಸುಖಾ ಸಾ ಸಭಾ ಬ್ರಹ್ಮನ್ನಶೀತಾ ನ ಚ ಘರ್ಮದಾ ॥ ೧೪॥ 
ನಕ್ಸುಧಂನ ಸಿಸಾಸಾಂಚ ನ ಗ್ಲಾನಿಂಪ್ಪಾಪ್ನುವಂತ್ಯುತ। 
ನಾನಾರೂಪೈರಿನ ಕೃತಾ ಮಣಿಭಿಃ ಸಾ ಸಭಾ ವರೈಃ ॥ ೧೫ ॥ 





ಯಿಂದ ಮಣಿದು ಅವರ ಅನುಗ್ರಹದಿಂದ ತೀರ್ಥಗಳ ಉತ್ಕೃಷ್ಟವಾದ ಫಲವನ್ನು 
ಹೇಳುವೆನು. 

೧೧. ಯಾವ ಪರಶಿವನನ್ನು ಧ್ಯಾನಗೈದು ಮಾನವರು ಸಂಸಾರವೆಂಬ 
ಸೆರೆಮನೆಯನ್ನು ತಿರುಗಿ ಪ್ರವೇಶಿಸುವುದಿಲ್ಲವೊ, ಅಂತಹ ಧರ್ಮವೆಂಬ ಕಾಡಿಗೆ 
ಧೊರೆಯೂ, ಸ್ವರ್ಗದರಸೂ, ಭವಾನೀವಲ್ಲಭನೂ, ದೃಢವಾದ ಯೋಗಾಭ್ಯಾಸ 
ದಿಂದ ಹೊಂದಲು ಶಕ್ಯನೂ, ಎಲ್ಲರ ಹೃದಯವನ್ನೂ ಜೀವಾಂಶದಿಂದ ವ್ಯಾಪಿಸಿರು 
ವವನೂ ಆಗಿರುವ ಆ ಮಹಾದೇವನು ನಿಮ್ಮೆಲ್ಲರನ್ನೂ ಪೊರೆಯಲಿ. 

೧೨-೧೩. ಒಂದಾನೊಂದು ವೇಳೆ ಆ ಯಮಧರ್ಮನು ಬ್ರಹ್ಮಸಭೆಗೆ 
ಹೋಗಿ ದೇವತೆಗಳಿಂದಲೂ, ಮುಠಿಶ್ರೇಷ್ಠರಿಂದಲೂ, ಯಕ್ಸರಿಂದಲೂ, 
ಮನುಷ್ಯರಂತಿರುವ ಸರ್ಪಗಳಿಂದಲೂ, ಸಾಮಾನ್ಯ ಸರ್ಪಗಳಿಂದಲೂ, ಅಸುರ 
ರಿಂದಲೂ ಆಕ್ರಾಂತವಾಗಿರುವ ಆ ಸಭೆಯನ್ನು ನೋಡಿ ಆಶ್ಚರ್ಯಗೊಂಡು 
ಜ್ಞಾನನಿರತನಾದನು. ` 

೧೪. ಮುನಿಗಳೂ, ಸಿದ್ಧರೂ, ಗಂಧರ್ವರೂ ಕುಳಿತಿರುವ ಆ ಸಭೆಯು 
ತಣ್ಣಗೂ ಬಿಸಿಯೂ ಆಗಿರದೆ ಸುಖಕರವಾಗಿದ್ದಿತು. 

೧೫. ನಾನಾ ವಿಧವಾದ ಉತ್ತಮ ರತ್ನಗಳಿಂದ ಥಿರ್ಮಿತವಾದಂತಿರುವ 


‘w ಶ್ರೀ ಸ್ಥಾಂದಮಹಾಪುರಾಣಂ 


ಸ್ತಂಭೈಶ್ಚ ನಿಧೃತಾ ಸಾ ತು ಶಾಶ್ವತೀ ನ ಚ ಸಕ್ಸಯಾ। 


ದಿನ್ಶೈರ್ನಾನಾನಿಧೈರ್ಭಾವೈರ್ಭಾಸದ್ಭಿರಮಿತಪ್ರಭಾ ॥ ೧೬ ॥ 
ಅತಿಚಂದ್ರಂ ಚ ಸೂರ್ಯಂ ಚ ಶಿಖಿನಂ ಚ ಸ್ವಯಂಪ್ರಭಾ | 

ದೀಪ್ಯತೇ ನಾಕಪೃಷ್ಠಸ್ಥಾ ಭರ್ತ್ಸ್ವಯಂತೀವ ಭಾಸ್ಕರಂ ॥ ೧೭॥ 
ತಸ್ಯಾಂ ಸ ಭಗವಾಂಭಾಸ್ತಿ ವಿವಿಧಾನ್ಹೇನಮಾನುಷಾನ್‌ । 
ಸ್ವಯಮೇಕೋನಿಶಂ ಬ್ರಹ್ಮಾ ಸರ್ವಲೋಕನಸಿತಾಮಹಃ ॥ ೧೮ ॥ 
ಉಪತಿಷ್ಕಂತಿ ಚಾಂಪ್ಯೇನಂ ಪ್ರಜಾನಾಂ ಪತಯಃ ಪ್ರಭುಂ । 

ದಕ್ಷಃ ಪ್ರಚೇತಾಃ ಪುಲಹೋ ಮರೀಚಿಃ ಕಶ್ಯಪಃ ಪ್ರಭುಃ ॥೧೯॥ 
ಭೃಗುರತ್ರಿರ್ವಸಿಷ್ಠಶ್ಚ ಗೌತನೋಂ*ಥ ತಥಾಂಂಗಿರಾಃ । - 

ಪುಲಸ್ಕೃಶ್ಚ ಕ್ರತುಶ್ಚೈವ ಪ್ರಹ್ಲಾದಃ ಕರ್ದಮಸ್ತಥಾ ॥೨೦॥ 


ಅಥರ್ವಾಂಗಿರಸಕ್ಚೈನ ವಾಲಖಿಲ್ಯಾ ಮರೀಚಿಸಾಃ । 
ಮನೋಂತರಿಕ್ಸಂ ವಿದ್ಯಾಶ್ಚ ನಾಯುಸ್ತೇಜೋ ಜಲಂ ಮಹೀ ॥ ೨೧॥ 
ಶಬ್ದಸ್ಪರ್ಶೌ ತಥಾ ರೂಪಂ ರಸೋ ಗಂಧಸ್ತಥೈನ ಚ। 


ಪ್ರಕೃತಿಶ್ಚ ವಿಕಾರಶ್ಚ ಸದಸತ್ಕಾರಣಂ ತಥಾ ॥ 2೨ ॥ 
ಅಗಸ್ತ್ಯಶ್ಚ ಮಹಾತೇಜಾ ಮಾರ್ಕಂಡೇಯಶ್ಚ ನೀರ್ಯವಾನ್‌ । 
ಜಮದಗ್ನಿರ್ಭರದ್ದಾಜಃ ಸಂವರ್ತಶ್ವ್ಯನನಸ್ತಥಾ ॥ ೨೩॥ 





ಆ ಸಭೆಯಲ್ಲಿ ಕುಳಿತಿರುವ ಜನರು ಹಸಿವು, ಬಾಯಾರಿಕೆ, ಬಳಲಿಕೆಯಿಂದ 
ದಣಿಯುತ್ತಿರಲಿಲ್ಲ. 

೧೬. ಕಂಬಗಳ ಮೇಲೆ ನಿಂತಿರುವ ಹೊಳೆಯುವ ರಮ್ಯವಾದ ಬಗೆ ಬಗೆಯ 
ವಸ್ತುಗಳಿಂದ ಭಾಸಮಾನವಾದ ಆ ಸಭೆಯು ನಾಶನಿಲ್ಲದೆ ಸ್ಥಿರವಾದುದು. 

೧೭. ತನ್ನಿಂದಲೇ ಕಂಗೊಳಿಸುವ ದೇವಲೋಕದಲ್ಲಿರುವ ಆ ಸಭೆಯು 
ಚಂದ್ರ, ಸೂರ್ಯ, ಅಗ್ನಿಗಳಿಗಿಂತ ಮಿಗಿಲಾಗಿ ಹೊಳೆಯುತ್ತ ಸೂರ್ಯದೇವ 
ನನ್ನು ಧಿಕ್ಕರಿಸುವಂತಿದ್ದಿತು. 

೧೮. ಆ ಸಭೆಯಲ್ಲಿ ಷಡ್ಗುಣೈಶ್ವರ್ಯಗಳಿಂದೊಡಗೂಡಿದ ಸಕಲಲೋಕ 
ಗಳನ್ನು ಸೃಜಿಸುವ ಬ್ರಹ್ಮದೇವನು ತಾನೊಬ್ಬನೆ ಯಾವಾಗಲೂ ನಾನಾವಿಧ 
ದೇವತೆಗಳನ್ನೂ, ಮನುಷ್ಯರನ್ನೂ ಆಳುತ್ತಾನೆ. 

೧೯-೨೭. ಈ ಬ್ರಹ್ಮದೇವನನ್ನು ದಕ್ಷ ಸ್ರಜೇತಾ, ಪುಲಹ, ಮರೀಚಿ, 
ಕಶ್ಯಪ, ಭೃಗು, ಅತ್ತಿ, ವಸಿಷ್ಠ, ಗೌತಮ, ಅಂಗಿರಸ್ಸು, ಪುಲಸ್ತ್ಯ, ಕ್ರತು, 
ಪ್ರಹ್ಲಾದ, ಕರ್ದಮ ಎಂಬ ಪ್ರಜಾಪತಿಗಳೂ, ಅಧರ್ಮ, ಆಂಗಿರಸರೂ, ವಾಲ 
ಖಲ್ಯರೂ, ಸೂರ್ಯನ ಕಿರಣಗಳಿಂದ ಜೀವಿಸುವ ಖುಷಿಗಳೂ, ಮನಸ್ಸು, 
ಅಂತರಿಕ್ಟ, ನಿದ್ಯಾ, ವಾಯು, ತೇಜಸ್ಸು, ನೀರು, ಭೂಮಿಗಳೂ, ಶಬ್ದ, 


ಪ್ರಥನೋ9ಧ್ಯಾಯಃ ೫ 


ದುರ್ನಾಸಾಶ್ಚ ಮಹಾಭಾಗಃ ಖಷ್ಯಶೃಂಗಶ್ಚ ಧಾರ್ಮಿಕಃ । 
ಸನತ್ಕುಮಾರೋ ಭಗವಾನ್ಯೋಗಾಚಾರ್ಯೋ ಮಹಾತಪಾಃ ॥೨೪॥ 
ಅಸಿತೋ ದೇನಲಶ್ಚೈನ ಜೈಗೀಷವ್ಯಶ್ನ ತತ್ವನಿತ್‌ । 


ಆಯುರ್ನೆೇದಸ್ತಥಾಂಷ್ಟಾಂಗೋ ಗಾಂಧರ್ವಶ್ಚೈನ ತತ್ರ ಹಿ ॥ ೨೫ ॥ 
ಚಂದ್ರಮಾಃ ಸಹನಕ್ಸತ್ರೈರಾದಿತ್ಯಶ್ನ ಗಭಸ್ತಿಮಾನ್‌ । 
ವಾಯವಸ್ತಂತವಕಶ್ಚೈವ ಸಂಕಲ್ಪಃ ಪ್ರಾಣ ಏನ ಚ ॥ ೨೬ 0 
ಮೂರ್ತಿಮಂತೋ ಮಹಾತ್ಮಾನೋ ಮಹಾವ್ರತಪರಾಯಣಾಃ | 

ಏತೇ ಚಾನ್ಯೇ ಚ ಬಹವೋ ಬ್ರಹ್ಮಾಣಂ ಸಮುಪಾಸಿರೇ ॥ ೨೭ 
ಅರ್ಥೊೋ ಧರ್ಮಶ್ಚ ಕಾಮಶ್ಚ ಹರ್ಷೊೋ ದ್ವೇಷಸ್ತಮೋ ದಮಃ । 
ಆಯಾಂತಿ ತಸ್ಯಾಂ ಸಹಿತಾ ಗಂಧರ್ವಾಪ್ಸರಸಾಂ ಗಣಾಃ ॥ ೨೮ ॥ 
ಶುಕ್ರಾದ್ಯಾಶ್ಚ ಗ್ರಹಾಶ್ಚೆನ ಯೇ ಚಾಂನ್ಯೇ ತತ್ಸನಿಖಾಪಗಾಃ । 

ಮಂತ್ರಾ ರಥಂತರಂ ಚೈನ ಹರಿಮಾನ್ವಸುಮಾನಸಿ ॥೨೯॥ 
ಮಹಿತೋ ವಿಶ್ವಕರ್ಮಾ ಚ ವಸನಶ್ಚೈವ ಸರ್ವಶಃ । 

ತಥಾ ಪಿತೃಗಣಾಃ ಸರ್ವೇ ಸರ್ವಾಣಿ ಚ ಹನೀಂಷ್ಯಥ i ೩೦.॥ 





ಸ್ಪರ್ಶ, ರೂಪ, ರಸ, ಗಂಧಗಳೂ, ಸದಸತ್ತಿಗೆ ಕಾರಣವಾದ ಪ್ರಕೃತಿವಿಕೃತಿ 
ಗಳೂ, ತೇಜಸ್ವಿಯಾದ ಅಗಸ್ತ್ಯ, ವೀರನಾದ ಮಾರ್ಕಂಡೇಯ, ಜಮದಗ್ಗಿ, 
ಭರದ್ವಾಜ, ಸಂವರ್ತ, ಚ್ಯವನ, ಭಾಗ್ಯವಂತನಾದ ದುರ್ವಾಸ, ಧರ್ಮಿಷ್ಮನಾದ 
ಖುಷ್ಕಶೃಂಗ, ಪೂಜ್ಯನಾದ ಸನತ್ಕುಮಾರ, ಅತ್ಯಂತ ತಪೋನಿಷ್ಠ ಯೋಗಾ 
ಚಾರ್ಯ, ಅಸಿತ, ದೇವಲ, ತತ್ತ್ವಜ್ಞಾನಿಯಾದ ಜೈಗೀಷವ್ಯರೆಂಬ ಮುನಿಗಳೂ, 
ಅಷ್ಟಾಂಗಗಳಿಂದ ಸೇರಿದ ಆಯುರ್ವೇದವೂ, ಸಂಗೀತ ಕಲೆಗಳೂ, ನಕ್ಸತ್ರ 
ಸಹಿತನಾದ ಚಂದ್ರ, ಕಾಂತಿಮಂತರಾದ ಸೂರ್ಯಗ್ರಹಗಳೂ, ವಾಯುಗಳೂ, 
ಸಂಕಲ್ಪ, ಪ್ರಾಣಗಳೂ ದೇಹಧಾರಿಗಳಾಗಿರುವರಲ್ಲದೆ ಇತರ ಬಹುಮಂದಿ 
ಮಹಾತ್ಮರೂ ಕಠಿನವ್ರತವನ್ನಾಚರಿಸುತ್ತ ಸೇವಿಸುತ್ತಿರುವರು. 

೨೮. ಅರ್ಥ, ಧರ್ಮ, ಕಾಮಗಳೆಂಬ ಪುರುಷಾರ್ಥಗಳೂ, ಸಂತೋಷ, 
ದ್ವೇಷ, ಅಜ್ಞಾನ, ಇಂದ್ರಿಯನಿಗ್ರಹಗಳೂ, ಗಂಧರ್ವಾಪ್ಸರಸರೂ ಆ ಸಭೆಗೆ 
ಬರುತ್ತಾರೆ. 

೨೯-೩೫. ಅವರ ಹತ್ತಿರವಿರುವ ಶುಕ್ರಾದಿ ಇತರ ಗ್ರಹೆಗಳೂ ಮಂತ್ರ 
ಗಳೂ, ರಥಂತರವೆಂಬ ಸಾಮವೂ, ಪೂಜ್ಯನಾದ ವಿಶ್ವಕರ್ಮನೂ, ಸಕಲ 
ವಸುಗಳೂ, ಎಲ್ಲಾ ಹಿತೃಗಳೂ, ಎಲ್ಲಾ ಆಜ್ಯಾದಿ ಹನಿಸ್ಸುಗಳೂ, ಖುಗ್ಹೇದ, 
ಯಜುರ್ವೇದ, ಸಾಮವೇದ, ಅಥರ್ವಣವೇದಗಳೆಂಬ ನಾಲ್ಕು ವೇದಗಳೂ, ಸಕಲ 
ಶಾಸ್ತ್ರಗಳೂ, ಇತಿಹಾಸಗಳೂ, ಆಯುರ್ವೇದ, ಧನುರ್ವೇದ, ಗಾಂಧರ್ವವೇದ, 


A ಶ್ರೀ ಸ್ಕಾಂದಮಹಾಪುರಾಣಂ 


ಖುಗ್ಗೇದಃ ಸಾಮುವೇದಶ್ಚ ಯಜುರ್ನೇದಸ್ತಥೈನ ಚ। 


ಅಥರ್ವನೇದಶ್ಚ ತಥಾ ಸರ್ವಶಾಸ್ತ್ರಾಣಿ ಚೈನ ಹ ॥೩೧॥ 
ಇತಿಹಾಸೋಪನೇದಾಶ್ಹ ವೇದಾಂಗಾನಿ ಚ ಸರ್ವಶಃ । 

ಮೇಧಾ ಧೃತಿಃ ಸ್ಮೃತಿಶ್ಚೈನ ಪ್ರಜ್ಞಾ ಬುದ್ಧಿರ್ಯಶಃ ಸಮಾಃ ೩4೨ ॥ 
ಕಾಲಚಕ್ರಂ ಚ ತದ್ದಿನ್ಯಂ ನಿತ್ಯಮಕ್ಸಯಮವ್ಯಯಂ I 

ಯಾನಂತ್ಯೋ ದೇವಪತ್ಸ್ಯಶ್ನ ಸರ್ವಾ ಏನ ಮನೋಜವಾಃ ॥ ೩೩ ॥ 
ಗಾರ್ಹಸತ್ಯಾ ನಾಕಚರಾಃ ಪಿತರೋ ಲೋಕನಿಶ್ರುತಾಃ । 

ಸೋಮಾ ಏಕಶೃಂಗಾಶ್ಚ ತಥಾ ಸರ್ವೇ ತಪಸ್ಸಿನಃ ॥ ೩೪॥ 
ನಾಗಾಃ ಸುಪರ್ಣಾಃ ಪಶವಃ ಪಿತಾಮುಹನುಷಪಾಸತೇ!। 

ಸ್ಥಾ ವರಾ ಜಂಗಮಾಶ್ಚಾಂಸಿ ಮಹಾಭೂತಾಸ್ತಥಾಂ ಪರೇ ॥ ೩೫ ॥ 
ಪುರಂಡರಶ್ವ ದೇವೇಂದ್ರೊ € ವರುಣೋ ಧನದಸ್ತ ಥಾ । 

ಮಹಾದೇನಃ ಸಹೋನೋಂತ್ರ ಸದಾ ಗಚ್ಛತಿ ಸರ್ವದಃ ॥ ೩೬॥ 
ಗಚ್ಛಂತಿ ಸರ್ವದಾ ದೇವಾ ನಾರಾಯಣಸ್ಪ ಫರ್ಷಯಃ 

ಖುಷಯೋ ವಾಲಖಿಲ್ಯಾಶ್ಚ ಯೋನಿಜಾಂಯೋನಿಜಾಸ್ತಥಾ ॥ ೩೭॥ 


ಯತ್ಕಿಂಚಿತ್ರ್ರಿಸು ಲೋಕೇಷು ದೃಶ್ಯತೇ ಸ್ಥಾಣುಜಂಗಮಂ | 
ತಸ್ಯಾಂ ಸಹೋಪನಿಷ್ಟಾಯಾಂ ತತ್ರ ಜ್ಞಾತ್ವಾ ಸ ಧರ್ಮವಿತ್‌ ॥ ೩೮॥ 








ಶಸ್ತ್ರ de ಉಪವೇದಗಳೂ, ಶಿಕ್ಲಾದಿ ಆರು ವೇದಾಂಗಗಳೂ, ಮೇಧಾ, 
ಧೃತಿ ಸ್ಮೃತಿ, ಪ್ರಜ್ಞಾ, ಬುದ್ಧಿಗಳೆಂಬ ಮತಿಪ್ರಭೇದಗಳೂ, ಕೀರ್ತಿ, ಸಂವತ್ಸರ, 
ನಾಶ ಮತ್ತು ವ್ಯತ್ಯಾಸವನ್ನು ಹೊಂದದಿರುವ ನಿತ್ಯವಾದ ದಿವ್ಯಕಾಲಚಕ್ರವೂ, 
ಮನಸ್ಸಿನಂತೆ ವೇಗವುಳ್ಳ ಎಲ್ಲಾ ದೇವತೆಗಳ ಪತ್ನಿಯರೂ, ಗಾರ್ಹಪತ್ಯಾದಿ 
ಅಗ್ನಿಗಳೂ, ದೇವಲೋಕವಾಸಿಗಳಾದ ಪ್ರಸಿದ್ಧರಾದ ಪಿತೃದೇವತೆಗಳೂ, 
ಸೋಮರಸವನ್ನು ಸವಿದ ಒಂದೇ ವಿಧವಾದ ಚಿಹ್ನೆಯುಳ್ಳ ಎಲ್ಲ ದೇವತೆಗಳೂ, 
ಸರ್ಪಗಳೂ, ಗರುಡನ ಜಾತಿಯ ಪಕ್ಷಿಗಳೂ, ಪಶುಗಳೂ ಅಲ್ಲದೆ ಇತರ ಎಲ್ಲ 
ಸ್ಥಾವರಜಂಗಮಗಳೂ ಬ್ರ ಬ್ರಹ್ಮದೆ ವನ್ನು ಸೇವಿಸುತ್ತವೆ. 

೩೬, ಸನದ ಶಕ್ರನೂ, ನರುಣನೂ, ಕುಬೇರನೂ, ಸಕಲವನ್ನೂ 
ಕೊಡುವ ಪಾರ್ವತೀಸಮೇತನಾದ ಮಹಾದೇವನೂ ಅಲ್ಲಿಗೆ ಯಾವಾಗಲೂ 
ಹೋಗುತ್ತಾರೆ. 

೩೭. ದೇವತೆಗಳೂ, ಶ್ರೀಮನ್ನಾರಾಯಣನೂ, ಮುನಿಗಳೂ, ಯೋನಿಜ 
ಅಯೋನಿಜರಾದ ವಾಲಖಿಲ್ಯರೆಂಬ ಖಯಷಿಗಳೂ ಯಾವಾಗಲೂ ಅಲ್ಲಿಗೆ 
ಹೋಗುತ್ತಾರೆ. 

೩೮-೩೯, ಧರ್ಮಜ್ಞನಾದ ಯಮಧರ್ಮರಾಜನು ಪ್ರಪಂಚದ ಸಕಲ 


ಪ್ರಥಮೋ $ಧ್ಯಾಯಃ ೭ 


ದೇವೈರ್ಮುನಿವಕೈ 8 ಕ್ರಾಂತಾಂ ಸಮಾಲೋಕ್ಕಾ *ತಿನಿಸ್ಮಿ ತಃ । 
ಹರ್ಷೇಣ ಮಹತಾ ಯುಕ್ತೊ « BSAA ॥೩೯॥ 
ತತ್ರ ಧರ್ಮೋ ನುಹಾತೇಜಾಃ ಕಥಾಂ ಪಾಪಪ್ರಣಾಶಿನೀಂ | 


ವಾಚ್ಯಮಾನಾಂ ತು ಶುಶ್ರಾವ ವ್ಯಾಸೇನಾಂಮಿತತೇಜಸಾ ॥ ೪೦॥ 
ಧರ್ಮಾಂರಣ್ಯಕಥಾಂ ದಿವ್ಯಾಂ ತಥೈವ ಸುಮನೋಹರಾಂ | 
ಧರ್ಮಾಂರ್ಥಕಾಮನೋಕ್ಪ್ಸಾಣಾಂ ವ ತಥೈವ ಚ ॥ ೪೧॥ 
ಪುತ್ರಪೌತ್ರ ಪ್ರಸೌತಾ ್ರಾದಿಫಲದಾತ್ರೀಂ ತಥೈನ ಚ 

ಧಾರಣಾಚ್ಛೆ  ನಣಾಚ್ಞಾಂ ಹಿ ಫಸ ಚಾ ಟಟ 3 ॥ ೪೨॥ 
ತಾಂ ನಿಮ್ಮ ಸುವಿಸ್ತಿ ರ್ಣಾಂ ಕಥಾಂ ಬ್ರಹ್ಮಾ ಚತತ | 

ಪ ಸ್ರಿ ಮೋಡೋತ್ತು ಲ್ಲನಯನೋ ಬ ಬ್ರಹ್ಮಾ ) ಮಸುಮತ್ಯ ಚ ET 
ಕ್ರತಕಾರ್ಯೋಲನಿ ಧರ್ಮಾತ್ಮಾ ಸಂತುಕಾಮಸ ಸ ದಾಂಭವತ್‌ | 

ನಮಸ್ಯ ತ್ಯ ತದಾ ಧರ್ನೋೊೋ ಬ ್ರುಹ್ಮಾ ₹0 ಸ ಪಿತಾನುಹಂ ॥ ೪೪ ॥ 
ಅನುಚ್ಞಾತಸ್ತ ದಾ ತೇನ ಗತೋಂನೌ ಯಮುಶಾಸನಂ । 
ಪಿತಾಮಹಪ್ರಸಾದಾಚ್ಚ ಶ್ರುತ್ವಾ ಪುಣ್ಯಸ್ರದಾ ಯಿನೀಂ ॥ ೪೫ ॥ 
ಧರ್ಮಾಂರಣ್ಯ ಕಥಾಂ `ಿನ್ಯಾಂ ರಿ ತ ಷಾಪನಾಶಿನೀಂ | 

ಸಗ ತೋಂನುಚರೈ 8 ಸಾರ್ಧಂ ತತಃ ಸಂಯವಿಂನೀಂ ಪ್ರತಿ ॥ ೪೬ ॥ 








ಸ್ಥಾವರಜಂಗಮಗಳ್ಳೂ ದೇವತೆಗಳೂ, ಮುನಿಗಳೂ ಒಟ್ಟುಸೇರಿದ ಆ ಸಭೆಯನ್ನು 
ತಂಡ ಅತ್ಯಾಶ್ಚ ಬಾಜ ಬಹು ಸಂತೋಷದಿಂದ Re 

೪೦-೪೨. ಅಲ್ಲಿ ಮಹಾ ತೇಜಸ್ತಿಯಾದ ಧರ್ಮರಾಜನು ವ್ಯಾಸನು 
ಹೇಳುತ್ತಿರುವ ಪಾಸನಿನಾರಕವೂ, ಮನೋಹರವೂ, ಮನಸ್ಸಿನಲ್ಲಿಡುವುದು, 
ಕೇಳುವುದು, ಪಠಿಸುವುದು ಮತ್ತು ನೋಡುವುದು ಇವುಗಳಿಂದ ಧರ್ಮಾರ್ಥ 
ಕಾಮನಮೋಕ್ಪಗಳೆಂಬ ನಾಲ್ಕುವಿಧ ಪುರುಷಾರ್ಥಗಳನ್ನು ನೀಡುವುದೂ, ಮಕ್ಕಳು, 
ಮೊಮ್ಮಕ್ಕಳು, ಮರಿಮಕ್ಕಳು ಮೊದಲಾದ ಫಲಗಳನ್ನೀಯುವುದೂ ಆಗಿರುವ 
ಧರ್ಮಾರಣ್ಯದ ಕಥೆಯನ್ನು ಕೇಳಿದನು. 

೪೩-೪೪, ಧರ್ಮರಾಜನು ಬ್ರಹ್ಮಲೋಕದಲ್ಲಿ ಹೇಳುತ್ತಿದ್ದ ಬಹು ದೊಡ್ಡ 
ಇದ ಆ ಕಥೆಯನ್ನು ಕೇಳಿ ಆನಂದದಿಂದ ಅರಳಿದ ಕಣ್ಣುಳ್ಳವನಾಗಿ ತನ್ನ 
ಕಾರ್ಯವು ಮುಗಿದುದರಿಂದ ಬ್ರಹ್ಮದೇವಸಿಗೆರಗಿ ಅವನ ಆಣತಿಯನ್ನು ಪಡೆದು 
ಹೊರಡಲಿಚ್ಛಿಸಿದನು. 

೪೫-೪೬. ವಿತಾಮಹನ ಅನುಗ್ರಹದಿಂದ ಪ ಾಪವನ್ನು ಕಳೆದು ಪುಣ್ಯವ 
ನ್ನೀಯುವ ಧರ್ಮಾರಣ್ಯದ ಕಥೆಯನ್ನು ಕೇಳಿದ ಚತ | ಆ ಬ್ರಹ್ಮನ 
ಅನುಮತಿಯಿಂದ ತನ್ನ ಸೇವಕರೊಡನೆ ಸಂಯಮಿನೀನಗರವನ್ನು ಸೇರಿದನು. 


ಆ ಶ್ರೀ ಸ್ಕಾಂದಮಹಾಪುರಾಣಂ 


ಅಮಾತ್ಯಾನುಚರೈಃ ಸಾರ್ಧಂ ಪ್ರವಿಷ್ಟಃ ಸ್ವಪುರಂ ಯಮಃ । 


ತತ್ರಾಂತರೇ ಮಹಾತೇಜಾ ನಾರದೋ ಮುನಿಪುಂಗವಃ ॥ ೪೭॥ 
ದುರ್ನಿರೀಕ್ಬ್ಯಃ ಕೃಸಾಯುಕ್ತಃ ಸಮದರ್ಶೀ ತಪೋನಿಧಿಃ । 

ತಪಸಾ ದಗೃದೇಹೋಿ ನಿಷ್ಣುಭಕ್ತಿಪರಾಯಣಃ ॥ ೪೮ ॥ 
ಸರ್ವಗಃ ಸರ್ವವಿಚ್ಚೈನ ನಾರದಃ ಸರ್ವದಾ ಶುಚಿಃ । 
ನೇದಾಂಧ್ಯಯನಶೀಲಶ್ಚ ತ್ವಾಗತಸ್ತತ್ರ ಸಂಸದಿ ॥೪೯॥ 
ತಂ ದೃಷ್ಟ್ಯಾ ಸಹಸಾ ಧರ್ಮೋ ಭಾರ್ಯಯಾ ಸೇನಕ್ಕೆಃ ಸಹ । 
ಸಂಮುಖೋ ಹರ್ಷಸಂಯುಕ್ತೋ ಗಚ್ಛನ್ನೇವ ಸ ಸತ್ವರಃ ॥ ೫೦॥ 


ಅದ್ಯ ಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ಕುಲಂ | 
ಅದ್ಯ ಮೇ ಸಫಲೋ ಧರ್ಮಸ್ತ್ಯಯ್ಯಾಯಾತೇ ತಪೋಧನೇ H ೫Ou 
ಅರ್ಥ್ಯಪಾದ್ಯಾದಿನಿಧಿನಾ ಪೂಜಾಂ ಕೃತ್ವಾ ವಿಧಾನತಃ । 


ದಂಡವತ್ತಂ ಪ್ರಣಮ್ಯಾಂಥ ವಿಧಿನಾ ಚೋಪನೇಶಿತಃ ॥ ೫೨ ॥ 
ಆಸನೇ ಸ್ಟೇ ಮಹಾದಿವೈೇ ರತ್ನಕಾಂಚನಭೂಷಿತೇ । 
ಚಿತ್ರಾಂರ್ಪಿತಾ ಸಭಾ ಸರ್ವಾ ದೀಪಾ ನಿರ್ವಾತಗಾ ಇವ ॥ ೫೩ ॥ 
ವಿಧಾಯ ಕುಶಲಪ್ರಶ್ನಂ ಸ್ಥಾಗತೇನಾಃಭಿನಂದ್ಯ ತಂ। 
ಪ್ರಹರ್ಷಮತುಲಂ ಲೇಭೇ ಧರ್ಮಾರಣ್ಯಕಥಾಂ ಸ್ಮರನ್‌ ॥ ೫೪ ॥ 


೪೭-೪೯. ಹೀಗೆ ಪರಿಜನರೊಡನೆ ಯಮಧರ್ಮರಾಜನು ತನ್ನ ಪಟ್ಟಣ 
ವನ್ನು ಸೇರಿ ಅಲ್ಲಿ ಸಭೆಯಲ್ಲಿ ಕುಳಿತಿರಲು ಅತಿ ತೇಜಸ್ವಿಯೂ, ದಯಾಳುವೂ, 
ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವವನೂ, ತಪಸ್ಸಿನಿಂದ ಕೃಶವಾದ ಶರೀರ 
ವುಳ್ಳವನೂ, ವಿಷ್ಣುಭಕ್ತಿನಿರತನೂ, ಸರ್ವಗಾಮಿಯೂ, ಸರ್ವಜ್ಞನೂ, ಸದಾ 
ಪನಿತ್ರನೂ, ವೇದಗಳನ್ನು ಪಠನಮಾಡುವ ಸ್ವಭಾವವುಳ್ಳ ವನೂ ಆಗಿರುವ 
ನಾರದಮಹರ್ಷಿಯು ಅಲ್ಲಿಗೆ ಬಂದನು. 

೫೦. ಕೂಡಲೆ ಧರ್ಮರಾಜನು ಅವನನ್ನು ನೋಡಿ ಹೆಂಡತಿ ಮತ್ತು, 
ಸೇನಕರೊಡನೆ ಸಂತೋಷದಿಂದ ಎದುರುಗೊಂಡನು. 

೫೧. "" ಮುನಿವರ್ಯ! ನಿನ್ನ ಆಗಮನದಿಂದ ಈ ದಿನ ನನ್ನ ಜನ್ಮವೂ, 
ವಂಶವೂ, ಧರ್ಮಾನುಷ್ಠಾನವೂ ಸಾರ್ಥಕವಾದುವು'' ಎಂದನು. 

೫೨-೫೩. ಅರ್ಥ್ಯಪಾದ್ಯಾದಿ ಕ್ರಮದಿಂದ ಶಾಸ್ತ್ರರೀತಿಯಿಂದ ಪೂಜಿಸಿ 
ಸಾಷ್ಟಾಂಗ ನಮಸ್ಕಾರಮಾಡಿ ರತ್ನಗಳಿಂದ ಕೆತ್ತಿದ ತನ್ನ ದಿವ್ಯಾಸನದಲ್ಲಿ ಕುಳ್ಳಿರಿ 
ಸಿದನು. ಆಗ ಆ ಯಮನ ಪೂರ್ತಿ ಸಭೆಯು ಪಟದಲ್ಲಿ ಬರೆದ ಚಿತ್ರದಂತೆಯೂ, 
ಗಾಳಿಯಿಲ್ಲದ ಸ್ಥಳದಲ್ಲಿರುವ ದೀಪಗಳಂತೆಯೂ ವಿರಾಜಿಸಿತು. 

೪. ಯಮನು ಸುಖಾಗಮನವನ್ಯು ಬಯಸಿ ಕುಶಲಪ್ರಶ್ನೆಯನ್ನು ಕೇಳಿದ 


ಪ್ರಥಮೋಕಧ್ಯ್ಮಾಯಃ ೯ 


ನಾರದಂ ಪೂಜಯಿತ್ವಾ ತು ಪ್ರಹೃಷ್ಟೇನಾಂಂತರಾತ್ಮನಾ । 

ಹರ್ಷಿತಂ ಶು ಯಮಂ ದೃಷ್ಟ್ಯಾ ನಾರದೋ ವಿಸ್ಮಿತಾನನಃ ॥ ೫೫ ॥ 

ಚಿಂತಯಾಮಾಸ ಮನಸಾ *ವಿಂದಂ ಹರ್ಷಿತೋ ಹರಿಃ । 

ಅತಿಹರ್ಷಂ ಚ ತಂ ದೃಷ್ಟ್ಯಾ ಯಮರಾಜಸ್ವರೂಪಿಣಂ । 

ಆಶ್ಚರ್ಯಮನಸಂ ಚೈನ ನಾರದಃ ಸೃಷ್ಟನಾಂಸ್ತದಾ ॥ ೫೬ ॥ 
ನಾರದ ಉವಾಚ :-- 

ಕಂ ದೃಷ್ಟಂ ಭವತಾಶ್ಚರ್ಯಂ ಕಿಂ ವಾ ಲಬ್ಧಂ ಮುಹತ್ಸದಂ । 

ದಮಷ್ಟಸ್ತ್ಯಂ ದುಷ್ಟಕರ್ಮಾ ಚ ದುಷ್ಟಾತ್ಮಾ ಕ್ರೋಧರೂಪಧೃಕ್‌ 1 ೫೭॥ 

ಪಾಪಿನಾಂ ಯಮನಂ ಚೈನಮೇತದ್ರೂಪಂ ಮಹತ್ತರಂ । 

ಸೌಮ್ಯರೂಪಂ ಕಥಂ ಜಾತಮೇತನ್ಮೇ ಸಂಶಯಃ ಪ್ರಭೋ ॥ ೫೮ ॥ 

ಅದ್ಯ ತ್ವಂ ಹರ್ಷಸಂಯುಕ್ತೋೋ ದೃಶ್ಯಸೇ ಕೇನ ಹೇತುನಾ । 

ಕಥಯಸ್ವ ಮಹಾಕಾಯ ಹರ್ಷಸ್ಯೈನ ಹಿ ಕಾರಣಂ ॥ರ೫೯॥ 
ಧರ್ಮರಾಜ ಉವಾಚ: 

ಶ್ರೂಯತಾಂ ಬ್ರಹ್ಮಪುತ್ರೆತತ್ಕ ಫಯಾಮಿ ನ ಸಂಶಯಃ । 

ಪುರಾಃಹಂ ಬ್ರಹ್ಮಸದನಂ ಗತವಾನಭಿವಂದಿತುಂ ॥೬೦॥ 


ಬಳಿಕ ತಾನು ಬ್ರಹ್ಮನ ಸಭೆಯಲ್ಲಿ ಶ್ರವಣಮಾಡಿದ ಧರ್ಮಾರಣ್ಯದ ಕಥೆಯನ್ನು 
ಜ್ಞಾನಿಸಿಕೊಳ್ಳುತ್ತ ಪರಮಾನಂದವನ್ನು ಹೊಂದಿದನು. 

೫೫. ನಾರದನು ತನ್ನನ್ನು ಸತ್ಕರಿಸಿ ಅತಿ ಸಂತೋಷಗೊಂಡ ಧರ್ಮರಾಜ 
ನನ್ನು ಕಂಡು ಅಶ್ಚರ್ಯಗೊಂಡನು. 

೫೬. ಏತಕ್ಕೆ ಈ ಯಮನು ಇಷ್ಟೊಂದು ಸಂತೋಷಗೊಂಡಿದ್ದಾನೆಂದು 
ಮನಸ್ಸಿನಿಂದ ಆಲೋಚಿಸಿ ಆಶ್ಚರ್ಯಸಂತೋಷಗಳಿಂದುಬ್ಬಿದ ಧರ್ಮರಾಜನನ್ನು 
ಹೀಗೆ ಪ್ರಶ್ನಿಸಿದನು —— 

೫೭-೫೮. ನಾರದನು ಕೇಳುತ್ತಾನೆ: ಧರ್ಮರಾಜ! ನೀನು ಅದ್ಭುತ 
ವಿಷಯವನ್ನು ಕೇಳಿದೆಯೋ? ಉನ್ನತಪದವಿಯನ್ನು ಪಡೆದೆಯೋ?. ನೀನು 
ದುಷ್ಟನು. ಕೆಟ್ಟ ಕೆಲಸದವನು. ದುಷ್ಟಸ್ತಭಾವದವನು. ಸಿಟ್ಟಿನರೂಪ 
ದವನು. ನಿನ್ನೀ ಭಯಂಕರರೂಪವು ಪಾಪಿಗಳನ್ನು ದಂಡಿಸತಕ್ಕುದು. ಇಂತಹ 
ನಿನಗೆ ಸೌಮ್ಯರೂಪವು ಹೇಗೆಬಂದಿತು? ಸ್ವಾಮಿ! ನನಗೆ ಸಂಶಯ 
ವಾಗಿದೆಯಲ್ಲ. 

ರ್ಜ. ನೀನು ಯಾವುದರಿಂದ ಸಂತೋಷಗೊಂಡಿರುವೆ? ಈ ಸಂತೋಷಕೆ 
ಕಾರಣವನ್ನು ತಿಳಿಸು. 

೬೦. ಧರ್ಮರಾಜನು ಹೇಳಿದನು: ಬ್ರಹ್ಮಸುತನಾದ ನಾರದನೆ! 

F 


"ಂ ಶ್ರೀ ಸ್ಕಾಂದಮಹಾಪುರಾಣಂ 


'ತತ್ರಾಸೀನಃ ಸಭಾನುಧ್ಯೇ ಸರ್ನಲೋಕೈಕಪೂಜಿತೇ । 

ನಾನಾ ಕಥಾಃ ಶ್ರುತಾಸ್ತತ್ರ ಧರ್ಮ ನರ್ಗಸಮನ್ನ್ಚಿತಾಃ ॥ ೬೧॥ 

ಕಥಾಃ ಪುಣ್ಯಾ ಧರ್ಮುಯುತಾ ರಮ್ಯಾ ವ್ಯಾಸಮುಖಾಚ್ಛುತಾಃ | 

ಧರ್ನುಕಾಮಾರ್ಥಸಂಯುಕ್ತಾಃ ಸರ್ವಾಾಘೌಘನಿನಾಶಿನೀಃ ॥ ೬೨ ॥ 

ಯಾಃ ಶ್ರುತ್ವಾ ಸರ್ವಪಾಪೇಭ್ಯೋ ಮುಚ್ಕಂತೇ ಬ್ರಹ್ಮಹತ್ಯಯಾ । 

ತಾರಯಂತೀಃ ಪಿತೃಗಣಾಂಛತಮೇಕೋತ್ತರಂ ಮುನೇ ॥ ೬೩॥ 
ನಾರದ ಉವಾಚ:- 

ಕೀದೃಶೀ ತತ್ಕಥಾಮೇತಾಂ ಪ್ರಶಂಸ ಭವತಾ ಶ್ರುತಾಂ । 

ಕಥಾಂ ಯವ ಮಹಾಬಾಹೋ ಶ್ರೋತುಕಾಮೋಸ್ಮ್ಯಹಂ ಚೆ ತಾಂ॥ 
ಯಮ ಉವಾಚ :-- 


ಏಕದಾ ಬ್ರಹ್ಮಲೋಕೇಂಹಂ ನಮಸ್ಕರ್ತುಂ ಪಿತಾಮಹಂ ! 


ಗತನಾನಸ್ಮಿ ತಂ ದೇಶಂ ಕಾರ್ಯಾಂಕಾರ್ಯವಿಚಾರಣೇ ! ೬೫॥ 
ಮಯಾ ತತ್ರಾಂದ್ದು ತಂ ದೃಷ್ಟಂ ಶ್ರುತಾ ಚ ಮುನಿಸತ್ತಮ । 
ಧರ್ಮಾಂರಣ್ಯಕಥಾ ದಿವ್ಯಾ ಕೃಷ್ಣದ್ಧೈಸಾಯನೇರಿತಾ ॥ ೬೬॥ 





ಹೇಳುತ್ತೇನೆ; ಕೇಳು. ಸಂದೇಹಪಡಬೇಡ. ಹಿಂದೆ ನಾನು ಬ್ರಹ್ಮದೇವನನ್ನು 
ವಂದಿಸುವುದಕ್ಕೆ ಅವನ ಮನೆಗೆ ಹೋದೆನು. 

೬೧-೬೨, ಅಲ್ಲಿ ಸಮಸ್ತೆ ಜಗತ್ತಿಗೂ ಪೂಜ್ಯವಾದ ಸಭೆಯ ನಡುವೆ ಕುಳಿತು 
ಕೊಂಡು ಧರ್ಮಪೂರ್ಣಗಳಾದ ಬಗೆ ಬಗೆಯ ಕಥೆಗಳನ್ನು ಕೇಳಿದೆನು. ವ್ಯಾಸರಿಂದ 
ಕೇಳಿದ ಧರ್ಮಾದಿ ಪುರುಷಾರ್ಥಗಳಿಂದ ಕೂಡಿದ ಪವಿತ್ರವಾದ ಆ ದಿವ್ಯ ಕಥೆಗಳು 
ಶ್ರವಣಮಾಡುವವರ ಸಕಲದುರಿತಗಳನ್ನೂ ಕಳೆಯತಕ್ಕವು. 

೬೩. ಮುನಿಯೆ! ಈ ಕಥೆಗಳನ್ನು ಕೇಳಿದವನು ತಾನು ಸಕಲ ಪಾನಮುಕ್ತ 
ನಾಗುವುದಲ್ಲದೆ ನೂರೊಂದು ಪಿತೃಗಣಗಳನ್ನು ಬ್ರಹ್ಮಹೆತೈೆಯಿಂದ ಉದ್ದಾರ 
ಮಾಡುತ್ತಾನೆ. 

೬೪. ನಾರದನು ಹೇಳಿದನು: "ವೀರನಾದ ಧರ್ಮರಾಜನೆ! ನೀನು 
ಬ್ರಹ್ಮದೇವನ ಸಭೆಯಲ್ಲಿ ಕೇಳಿದ ಕಥೆಯು ಯಾವುದು? ಅದನ್ನು ನಾನು 
ಕೇಳಲು ಬಯಸುನೆನು.” 

೬೫-೬೬, ಯಮನು ಹೇಳುತ್ತಾನೆ: ಮುನಿನರ! ಒಂದಾನೊಂದುವೇಳೆ 
ನಾನು ಬ್ರಹ್ಮದೇವನನ್ನು ನಮಸ್ಕರಿಸುವುದಕ್ಕೆ ಅವನ ಲೋಕಕ್ಕೆ ತೆರಳಿಡೆನು. 
ಅಲ್ಲಿ ನಾನು ಕರ್ತವ್ಯಾಕರ್ತವ್ಯಗಳನ್ನು ನಿಚಾರಿಸುವಾಗ ಅದ್ಭುತ ನಿಷಯಗಳನ್ನು 
ನೋಡಿಜೆನಲ್ಲದೆ ವ್ಯಾಸರು ಹೇಳಿದ ರಮ್ಯವಾದ ಧರ್ಮಾರಣ್ಯದ ಕಥೆಯನ್ನೂ 
ಕೇಳಿದೆನು. 


ಪ್ರಥಮೋಕಧ್ಯ್ಮಾಯಃ ೧೧ 


ಶ್ರುತ್ವಾ ಕಥಾಂ ಮಹಾಪುಣ್ಯಾಂ ಬ್ರಹ್ಮನ್ಪ್ಸ್ರಹ್ಮಾಂಡಗಾಂ ಶುಭಾಂ । 
ಗುಣಪೂರ್ಣಾಂ ಸತ್ಯಯುಕ್ತಾಂ ತೇನ ಹರ್ಷೇಣ ಹರ್ಷಿತಃ ॥ ೬೭॥ 
ಅನ್ಯಚ್ಚೈನ ಮುನಿಶ್ರೇಷ್ಠ ತವಾಂಂಗಮನಕಾರಣಂ | 

ಶುಭಾಯ ಚ ಸುಖಾಯೈನ ಕ್ಲೇನಾಯ ಚ ಜಯಾಯ ಹಿ ॥ ೬೮॥ 
ಅದ್ಯಾಃಸ್ಮಿ ಕೃತಕೃತ್ಯೊ ಉಹನುಷ್ಯಾಂಹಂ ಸುಕೃತೀ ಮುನೇ। 

ಧರ್ನೋ' ನಾನಾಂದ್ಯ ಜಾತೋ ಹಂ ತನ ಪದಡ್ಯುಗ್ಮದರ್ಶನಾತ್‌ ॥ ೬೯॥ 
ಪೂಜ್ಯೋಂಹಂ ಚ ಕೃತಾರ್ಥೋಂಹಂ ಧನ್ಯೋಃಹಂ ಚಾಂದ್ಯ ನಾರದ । 


ಯುಸ್ಮತ್ಪಾದಪ್ರಸಾದಾಚ್ಹ ಪೂಜ್ಯೋಃ ಹಂ ಭುವನತ್ರಯೇ ॥೭೦॥ 
ಸೂತ ಉವಾಚ:- 

ಏನಂ ನಿಧೈರ್ವಚೋಭಿಶ್ಚ ತೋಷಿತೋ ಮುನಿಸತ್ತಮಃ । 

ಪಸ್ರ ಚ್ಛ ಪರಯಾ ಭಕ್ತ್ಯಾ ಫಾ ಕಥಾಂ ಶುಭಾಂ ॥೭೧॥ 
ನಾರ ಉವಾಚ: 

ಶ್ರುತಾ ವ್ಯಾ ಸಮುಖಾದ್ಧ ರ್ಮ ಕ ಕಥಾ ಶುಭಾ । 

ತತ್ಪ ರ್ವಂ & ಕಥೆಯ ಮೇ ವಿಸ್ತೀರ್ಣಂ ಚ ಯಥಾತಥಂ ॥೭೨॥ 





೬೭. ಬ್ರಾಹ್ಮಣೋತ್ತಮ! ಬ್ರಹ್ಮಲೋಕದ, ಗುಣಗಳಿಂದ ತುಂಬಿದ, 
ಸತ್ಯವಾದ, ಮಂಗಳಕರವಾದ ಆ ಪವಿತ್ರಕಥೆಯನ್ನು ಕೇಳಿ ಸಂತೋಷ 
ಗೊಂಡೆನು. 

೬೮. ಮುನಿವರ್ಯ! ನಿನ್ನ ಆಗಮನವು ಮಂಗಳ, ಸೌಖ್ಯ ಕ್ಸೇಮ, 
ಜಯಗಳಿಗೆ ಮತ್ತೊಂದು ಕಾರಣವು. 

೬೯. ಇಂದು ನಾನು ನಿನ್ನ ಅಡಿಗಳೆರಡರ ಸಂದರ್ಶನದಿಂದ ಧನ್ಯನಾದೆ. 
ಇಂದು ನಾನು ಪುಣ್ಯವಂತನಾದೆ. ಇಂದು ನಾನು ಧರ್ಮನೆಂಬ ಹೆಸರನ್ನು 
ಅನ್ವರ್ಥವಾಗಿ ಪಡೆದೆ. 

೭೦. ಓ ನಾರದಮುನಿಯೆ! ನಿನ್ನ ಪಾದಗಳ ಅನುಗ್ರಹೆದಿಂದ ನಾನು 
ಈ ದಿನ ಮೂರು ಲೋಕಗಳಲ್ಲಿ ಮಾನ್ಯನೂ, ಕೃತಕೃತ ತ್ಯನೂ, ಪುಣ್ಯವಂತನೂ 
ಆದೆನು. 

೭೧. ಇಂತಹ ನುಡಿಗಳಿಂದ ಸಂತೋಷಗೊಂಡ ನಾರದನು ಅತಿಭಕ್ತಿ 
ಯಿಂದ ಮಂಗಳಕರವಾದ ಆ ಧರ್ಮಾರಣ್ಯದ ಕಥೆಯನ್ನು ಕುರಿತು ಪ್ರಶ್ನಿಸಿದನು. 

೭೨. ನಾರದನು ಕೇಳುತ್ತಾನೆ:--ಧರ್ಮರಾಜ! ನೀನು ವ್ಯಾಸರ ವದನ 
ದಿಂದ ಮಂಗಳಕರವಾದ ಧರ್ಮಾರಣ್ಯದ ಕಥೆಯನ್ನು ಕೇಳಿದೆಯಷ್ಟೆ. ಅದನ್ನೆಲ್ಲ 
ಕೇಳಿದಂತೆಯೇ ವಿಸ್ತಾರವಾಗಿ ನನಗೆ ಹೇಳು. 


5೨ ಶ್ರೀ ಸ್ಥಾಂದಮಹಾಪುರಾಣಂ 


ಯಮ ಉವಾಚ :-- 
ವ್ಯಗ್ರೋಂಹಂ ಸತತಂ ಬ್ರಹ್ಮನ್ರ್ರಾಣಿನಾಂ ಸುಖದುಃಖನಾಂ | 
ತತ್ತತ್ಕರ್ಮಾಂನುಸಾರೇಣ ಗತಿಂ ದಾತುಂ ಸುಖೇತರಾಂ H ೭೩1 
ತಥಾಪಿ ಸಾಧುಸಂಗೋ ಹಿ ಧರ್ಮಾಯ್ಕೆನ ಪ್ರಜಾಯತೇ । 
ಇಹಲೋಕೇ ಪರತ್ರಾಃಪಿ ಕ್ರೇನಾಯ ಚ ಸುಖಾಯ ಚ ॥ ೭೪! 
ಬ್ರಹ್ಮಣಃ ಸನ್ನಿಧೌ ಯಚ್ಚ ಶ್ರುತಂ ವ್ಯಾಸಮುಖೇರಿತಂ | 
ತತ್ಸರ್ವಂ ಕಥಯಿಷ್ಯಾನಿಾ ಮಾನುಸಾಣಾಂ ಹಿತಾಯ ವೈ ೧ ೭೫1 
ಸೂತ ಉವಾಚ: 
ಯಮೋನ ಕಥಿತಂ ಸರ್ವಂ ಯಚ್ಛು ತಂ ಬ್ರಹ್ಮಸಂಸದಿ | 
ಆದಿಮಧ್ಯಾಂವಸಾನಂ ಚ ಸರ್ವಂ ನೈವಾಂತ್ರ ಸಂಶಯಃ ॥೭೬। 
ಕಲಿದ್ವಾಸರಯೋರ್ಮಥೈೇ ಧರ್ನುಪುತ್ರಂ ಯುಧಿಷ್ಠಿರಂ | 
ಗತೋಸೌ ನಾರದೋ ಮರ್ತ್ಯೈೇ ರ್‌ೌಜ್ಯಂ ಧರ್ಮಸುತಸ್ಯ ವೈ ॥೭೭॥ 
ಆಗತಃ ಶ್ರೀಹರೇರಂಶೋ ನಾರದಃ ಪ್ರತ್ಯದೃಶೃತ | 


ಜ್ವಲಿತಾಂಗ್ನಿಪ್ರತೀಕಾಶೋ ಬಾಲಾಂರ್ಕಸದೃಶೇಶ್ಚಣಃ ॥ ೭೮ । 
ಸವ್ಯಾಪವೃತ್ತಂ ನಿಪುಲಂ ಜಟಾಮಂಡಲನುದ್ಧಹನ್‌ । 
ಚಂದ್ರಾಂಶುಶುಕ್ಲನಸನೇ ವಸಾನೋ ರುಕ್ಮಭೂಷಣಃ ॥ ೭೯1 





೭೩. ಯಮನು ಹೇಳಿದನು :ಎಬ್ರಾಹ್ಮಣೋತ್ತಮ! ನಾನು ಸು೩ 
ದುಃಖಾನುಭನಿಗಳಾದ ಪ್ರಾಣಿಗಳಿಗೆ ಯಾವಾಗಲೂ ಅವವುಗಳ ಆಯಾ ಕಮ 
ವನ್ನ ನುಸರಿಸಿ ಸುಖದುಃಖಾವಸ್ಥೆ ಯನ್ನು ನೀಡುವುದರಲ್ಲಿ ಆಸಕ್ತಿಯುಳ್ಳ ನ 
ನಾಗಿದ್ದೇನೆ. 

೭೪-೭೫. ಹಾಗಾದರೂ ಒಳ್ಳೆಯವರ ಒಡನಾಟವು ಈ ಲೋಕದಲ್ಲಿಯ 
ಪರಶೋಕದಲ್ಲಿಯೂ ಧರ್ಮ, ಕ್ಷೇಮ, ಸುಖಗಳಿಗೆ ಕಾರಣವಾದುದರಿಂದ ನಾನ. 
ಬಹ್ಮದೇವನ ಬಳಿ ವ್ಯಾಸರಿಂದ ಕೇಳಿದುದನ್ನೆಲ್ಲವನ್ನೂ ಮಾನವರ ಹಿತಕ್ಕಾ? 
ನನಗೆ ಹೇಳುವೆನು. 

೭೬. ಸೂತನು ಹೇಳಿದನು:-ಯನುನು ತಾನು ಬ್ರಹ್ಮಸಭೆಯಲ್ಲಿ ಕೇಳಿದ 
ಕಥೆಗಳನ್ನೆಲ್ಲ ಸಂಪೂರ್ಣವಾಗಿ ನಾರದನಿಗೆ ವಿವರಿಸಿದನು. ಈ ವಿಷಯದಲ್ಲಿ 
ಸಂದೇಹವಿಲ್ಲ. 

೭೭. ನಾರದನಾದರೊ ಕಲಿ ಮತ್ತು ದ್ವಾಪರಯುಗಗಳ ನಡುವೆ ಭೂಲೋಃ 
ದಲ್ಲಿರುವ ಯಮಧರ್ಮನ ತನಯನಾದ ಯುಧಿಷ್ಠಿರನ ರಾಜ್ಯಕ್ಕೆ ಹೋದನು 

೬೮-೮೩. ಹೀಗೆ ಬಂದಿರುವ ಶ್ರೀವಿಷ್ಣುವಿನ ಅಂಶವಾದವನೂ, ಬಾ 
ಸೂರ್ಯನನ್ನು ಹೋಲುವ ಕಣ್ಣುಳ್ಳವನೂ, ಎಡಭಾಗದಲ್ಲಿ ಚದರಿದ ನೀಳಐಾಂ 


ಪ್ರಥಮೋಕಿಧ್ಯಾಯಃ ೧೩ 


ನೀಣಾಂ ಗೃಹೀತ್ವಾ ಮಹತೀಂ ಕಕ್ಸಾಸಕ್ತಾಂ ಸಖೀನಿನ । 
ಕೃ ಷ್ಣಾ $ಜಿನೋತ್ತರಾಸಂಗೋ ಹೇಮಯಜ್ಞೋಪನೀತನಾನ್‌ neon 
ಜಡ ಕಮಂಡಲುಕರಃ ಸಾಕಾ ದ್ದಹಿರಿನಾಾ ಪರಃ । 


ಭೇತ್ತಾ ಬಗತಿ ಗುಹ್ಯಾನಾಂ ವಿಗ್ರಹಾಣಾಂ ಗುಹೋಪನುಃ ॥ ೮೧॥ 
ಮಹರ್ಷಿಗಣಸಂಸಿದ್ಧೊ ಳೆ ನಿದ್ವಾ ನ್ನಾಂಧರ್ವನೇದವಿತ್‌ । 
ವೈರಕೇಲಿಕಲೋ ವಿಪ್ರೋ ಬ್ರಾ ಪ 8 ಕೆಲಿರಿವಾ ಪರಃ ॥ ೮೨॥ 
ದೇವಗಂಧರ್ನ ಲೋಕಾಫಾವನಿದಿವಕ್ತಾ ಸುನಿಗ್ರಹಃ । 

ಗಾತಾ ಚತುರ್ಣಾಂ ನೇದಾನಾಮುದ್ದಾತಾ ಹರಿಸದ್ದು ಣಾನ್‌ || ೮೩ ॥ 
ಸನಾರದೋಂಥ ನಿಪ್ರರ್ಷಿರ್ಬ್ರಹ್ಮ ಮೈಲೋಕಚರೋಂವ್ಯ ಯಃ । 

ಆಗತೋಶ ಪುರೀಂ `ಹರಾದೃ ರ್ನುರಾಜೇನ ಪಾಲಿತ ॥ ೮೪ ॥ 
ಅಥ ತತ್ರೊ ೇಪವಿಷ್ಟೆ ಷು ರಾಜನ್ಯ ಷು ಮಹಾತ್ಮ ಸು। 

ಮಹತ್ತು 'ಜೋಪನಿಷ್ಟೇಷು ಸರತ (ಷು ಚ ತತ್ರ ವೈ 1 ಆ೫ ॥ 
ಲೋಕಾನನುಚರಸ್ಪರ್ನಾನಾಗತಃ ಸ ಮಹರ್ಷಿರಾಬ್‌ | 

ನಾರವಃ ಸುಮಹಾತೇಜಾ ಯಷಿಭಿಃ ಸಹಿತಸ್ತದಾ H ೮೬ ॥ 





ಜಟಿಯನ್ನು ಧರಿಸಿದವನೂ, ಬೆಳದಿಂಗಳಿನಂತಿರುವ ಬಿಳಿಯ ಬಟ್ಟೆಯನ್ನುಟ್ಟ ವನೂ, 
ಸುವರ್ಣದ ಒಡವೆಯುಳ ಳ್ಳವನೂ, ತನ್ನ ಗೆಳತಿಯಂತಿರುವ ಮಹತೀ ಎಂಬ ವೀಣೆ 
ಯನ್ನು ಕಂಕುಳಲ್ಲಿಟ್ಟನನೂ, ಕೃಷ್ಣಾಜಿನದ ಉತ್ತರೀಯಧಾರಿಯೂ, ಚಿನ್ನದ 
ಯಜ್ಞೋಸನೀತವನ್ನು ಧರಿಸಿದವನೂ, ಜಲಪಾತ್ರೆ ದಂಡಗಳನ್ನು ಕೈಯಲ್ಲಿ 
ಹಿಡಿದು ಬೇರೊಬ್ಬ ಅಗ್ನಿದೇವನಂತಿರುವನನೂ, ಪ್ರಪಂಚದ ಗುಟ್ಟಿನ್ನು ಹೊರ 
ಗೆಡಹುವವನೂ, ಯುದ್ಧವಿಷಯದಲ್ಲಿ ಕುಮಾರಸ್ತಾಮಿಯಂತಿರುವವನೂ, ಖುಷಿ 
ಮಂಡಲದಲ್ಲಿ ನ ಬಾ ಬಾಜರ್ಯ್‌ ಪಂಡಿತನೂ, ಸಂಗೀತಕಲೆಯಲ್ಲಿ 
ನಿಷ್ಠಾ ಸನ ಪರಸ್ಪ ರಕಲಹದಲ್ಲಿಸ್ರಿ ೇತಿಯುಳ್ಳ ವನೂ, ಬೇರೊಬ್ಬ ಕಲಿಯಂತಿರು 
ನವನೂ, ಬ್ರಹ್ಮಸುತನೂ, ದೇವಗಂಧರ್ವರ 'ಶೋಕಗಳಲ್ಲಿ ಪ್ರಥಮ ಭಾಷಣ 
ಕಾರನೂ, `ಜಿತೇಂದ್ರಿ ಯನೂ, ನಾಲ್ಕು ವೇದಗಳನ್ನು ಗಾನಮಾಡುವವನೂ, 
ಶ್ರಿ ಶ್ರೀವಿಷ್ಣು ನಿನ ಸದು ಣಗಳನ್ನು ಹಾಡುತ್ತಿರುವವನೂ ಆಗಿರುವ ಆ ನಾರದ 
ಮುನಿವರ್ಯನು ಉರಿಯುತ್ತಿ ರುವ ಬೆಂಕಿಯಂತೆ ಬೆಳಗುತ್ತಿದ್ದನು. 

೮೪. ಬ್ರಹ್ಮಲೋಕನಿಹಾರಿಯಾಗಿ ನಿಕಾರಶೂನ್ಯನಾಗಿದ್ದ ಆ ನಾರದನು 
ಸಂತೋಷದಿಂದ ಯುಧಿಷ್ಠಿರನು ಆಳುತ್ತಿರುವ ಹಸ್ತಿನಾಪುರಿಗೆ ಬಿಜಯಂಗೈ ದನು. 

೮೫-೮೬. ಅಲ್ಲಿ ಪ್ರಭಾವಶಾಲಿಗಳಾದ ಅರಸರೂ, ಮಹಾತ್ಮ ರೊ, 
ಗಂಧರ್ವರೂ ಕುಳಿತುಕೊಂಡಿರಲು ಅತ್ಯಂತವಾಗಿ ಶೋಭಿಸುತ್ತಿರುವ ಆ ನಾರದ 
ಮುನಿವರೇಣ್ಯನು ಇತರ ಮುಸಿಗಳೊಡನೆ ಸಕಲ ಲೋಕಗಳಲ್ಲಿ ಸಂಚರಿಸುತ್ತ 
ಅಲ್ಲಿಗೈ ತಂದನು. 


೧೪ ಶ್ರೀ ಸ್ಕಾಂದಮಹಾಪುರಾಣಂ 


ತಮಾಗತನ್ಳು ೩ಿಂ ದೃಷ್ಟ್ವಾ ನಾರದಂ ಸರ್ವದಧರ್ಮನಿತ್‌ । 


ಸಿಂಹಾಸನಾತೃ ಮುತ್ತಾ ಯ ಪ್ರಯಯೌ ಸಮ್ಮುಖಸ್ತ ದಾ ॥ ೮೭ ॥ 
ಅಭ್ಯ ವಾದಯೆತ ಪಿ ಪ್ರೀತ್ಯಾ ನಿನಯಾಂನನತಸ್ತ ದಾ। 

ತಡರ್ಜಸಾಸತು ತಸ್ಮೆ 4 ಸಂಪ್ರದಾಯ ಯಥಾವಿಧಿ ॥ ೮೮ ॥ 
ಗಾಂ ಚೈನ ಮಹ ಚ ಸಂಪ್ರದಾಯಾರ್ಫ ಮೇವ ಚ। 
ಅರ್ಚಯಾಮಾಸ ರತ್ನ ತ್ತೆ ಸನಕ ಧರ್ಮವಿತ್‌ ॥೮೯॥ 
ತುತೋಷ ಚ ಯಥಾದದ್ಜೆ ಪೂಜಾಂ ಪ್ರಾಪ್ಯ ಚ ಧರ್ಮನಿತ್‌ । 

ಕುಶಲೀ ತ್ಯಂ ಮಹಾಭಾಗ ತಪಸಃ ಸುತಂ ತವ neon 


ನ ಕಶ್ಚಿದ್ಬಾ “ತೇ ದುಷ್ಟೋ ದೈತ್ಯೋಹಿ ಸ್ಪರ್ಗಭೂಪತಿಂ। 
ಮುನೇ ಕಲ್ಯಾಣರೂಪಸ್ಸ್ವಂ ನಮಸ್ಕಾರ್ಯಃ ಸುರಾಂ ಸುರೈಃ ] 


ಸರ್ವಗಃ ಸರ್ವನೇತ್ತಾ ಚ ಬ್ರಹ್ಮಪುತ್ರ ಕೃಷಾನಿಥೇ ॥ ೯೧ 
ನಾರದ ಉವಾಚ :-- 

ಸರ್ವತಃ ಕುಶಲಂ ಮೇಂದ್ಯ ಪ್ರಸಾದಾದ್ಬ್ರಹ್ಮಣಃ ಸದಾ । 

ಕುಶಲೀ ತ್ವಂ ಮಹಾಭಾಗ ಧರ್ಮಪುತ್ರ ಯುಧಿಷ್ಠಿರ ॥ ೯೨॥ 

ಭ್ರಾತೃಭಿಃ ಸಹ ರಾಜೇಂದ್ರ ಧರ್ಮೇಷು ರಮತೇ ಮನಃ । 

ದಾರೈಃ ಪತ್ರೆಶ್ಚ ಭೃತ್ಯೈಶ್ಚ ಕುಶಲೈರ್ಗಜವಾಜಿಭಿಃ ॥ ೯೩ 





೮೭. ಸಕಲ ಧರ್ಮಗಳನ್ನರಿತ ಯುಧಿಷ್ಠಿರನು ಬಂದಿರುವ ಆ ಮ:ನಿ 
ವರ್ಯನನ್ನು ಕಂಡು ಸಿಂಹಾಸನದಿಂದೆದ್ದು ಎದುರುಗೊಂಡನು. 

೮೮. ಅವನನ್ನು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ ಸಂತೋಷದಿಂದ 
ವಿನೀತನಾಗಿ ಮಣಿದನು. 

ರ್‌. ಆಕಳು, ಮಧುಸಕ್ಕ, ಅರ್ಥ್ಯಗಳನ್ನೊಪ್ಪಿಸಿ ರತ್ನಗಳಿಂದಲ್ಕೂ 
ಯವಸ್ತು,ಗಳಿಂದಲೂ ಪೂಜಿಸಿದನು. 
೦-೯೧. ಶಾಸ್ತ್ರರೀತಿಯಿಂದ ಆ ಧರ್ಮಜನು ಮುನಿವರ್ಯನಿಗೆ ಪೂಜೆ 
ಯನ್ನು ಸಲ್ಲಿಸಿ ಹರ್ಷಗೊಂಡು ಮಹಾನುಭಾವ! ನಿನಗೆ ಕ್ಲೇಮವೆ? ತಪಸ್ಸು 
ಚ ನಡೆಯುತ್ತಿರುವುದೇ? ಸರ್ವಜ್ಞನೂ, ಸರ್ವಗಾಮಿಯೂ ಆಗಿ 
ದಯಾಳುವಾದ ಓ ಚತುರ್ಮುಖಸುತ! ದೇವಾಸುರರಿಂದ ನೀನು ವಂದಿತ 
ನಾಗಿರುಬೆ. ಈಗ ದೇವರಾಜನನ್ನು ಯಾವನೊಬ್ಬ ದುಷ ತದೈತ್ಯನೂ ಪೀಡಿಸು 
ಕ್ರಿಲ್ಲವಷ್ಟೆ. 

ಸ್ಯ ನಾರದನು ಹೇಳುತ್ತಾನೆ :--ಧರ್ಮನಂದನ! ನಾನು ನಮ್ಮ ಪಿತೃ 
ಪಾದದ ಒಲುಮೆಯಿಂದ ಯಾವಾಗಲೂ ಎಲ್ಲೆಡೆಯಲ್ಲಿಯೂ ಕುಶಲಿಯು” 
ಮಹಾನುಭಾವ! ನೀನು ಸೌಖ್ಯವಾಗಿರುವೆಯೊ? 

೯೩. ನರೇಂದ್ರ! ನೀನು ಕುಶಲಿಗಳಾದ ತಮ್ಮಂದಿರು, ಪತ್ಲಿಯರು, 


9 
ಎಲ್ಲ ಪ್ರಿ 
ಈ 


ಪ್ರಥಮೋತಧ್ಯಾಯಃ ೧೫ 


ಔರಸಾನಿವ ಪುತ್ರಾಂಶ್ಚ ಪ್ರಜಾ ಧರ್ಮೇಣ ಧರ್ಮುಜ | 

ಪಾಲಯಸಿ ತ್ವಂ ಕಿಮಾಶ್ಚರ್ಯಂ ತ್ವಯಾ ಧನ್ಯಾಹಿ ಸಾ ಪ್ರಜಾ ॥ ೯೪॥ 

ಸಪಾಲನಾತ್ಸೋಷಣಾನ್ಯೂಣಾಂ ಧರ್ಮೋ ಭನತಿವೈ ಧ್ರುವಂ । 

ತತ್ತದ್ಧರ್ಮಸ್ಯ ಭೋಕ್ತಾ ತೃಮಿತ್ಯೇನಂ ಮನುರಬ್ರನೀತ್‌ ॥ ೯೫॥ 
ಯುಧಿಷ್ಠಿರ ಉವಾಚ: 

ಕುಶಲಂ ಮಮ ರಾಷ್ಟ್ರಂ ಚ ಭವತಾಮಂಫ್ರ ದರ್ಶನಾತ್‌ । 


ದರ್ಶನೇನ ಮಹಾಭಾಗ ಜಾತೋಹಂ ಗತಕಿಲ್ಬಿಷಃ ॥ ೯೬॥ 
ಧನ್ಯೋಹಂ ಕೃತಕೃತ್ಯೋಹಂ ಸಭಾಗ್ಯೋಂಹಂ ಧರಾತಲೇ । 
ಅದ್ಯಾಃಹಂ ಸುಕೃತೀ ಜಾತೋ ಬ್ರಹ್ಮಪುತ್ರೇ ಗೃಹಾಗತೇ 1 ೯೭॥ 


ಕುತ ಆಗಮನಂ ಬ್ರಹ್ಮನ್ನದ್ಯ ತೇ ಮುನಿಸತ್ತಮ । 

ಅನುಗ್ರಹಾರ್ಥಂ ಸಾಧೂನಾಂ ಕಿಂ ನಾ ಕಾರ್ಯೇಣ ಕೇನ ಚ ॥ ೯೮॥ 
ನಾರದ ಉವಾಚ:- 

ಆಗತೋಂಹಂ ನೃಪಶ್ರೇಷ್ಮ ಸಕಾಶಾಚ್ಛಮನಸ್ಯ ಚ। 

ವ್ಯಾಸೇನೋಕ್ತಾಂ ಬ್ರಹ್ಮಣೋಂಗ್ರೇ ಕಥಾಂ ಪೌರಾಣಿಕೀಂ ಶುಭಾಂ॥೯೯॥ 

ಮಕ್ಕಳು, ಆಳುಗಳು, ಆನೆ ಕುದುರೆಗಳು ಇವುಗಳೊಡನೆ ಧರ್ಮದಲ್ಲಿ ಮನಸ್ಸ 

ಸ್ಟಿಟ್ಟಿರುವೆಯಷ್ಟೆ. 

೯೪. ಧರ್ಮರಾಜ! ನೀನು ನಿನ್ನ ರಾಜ್ಯದ ಪ್ರಜೆಗಳನ್ನು ಬಟ್ಟೆಯಲ್ಲಿ 
ಜನಿಸಿದ ಮಕ್ಕಳಂತೆ ಕಾಪಾಡುತ್ತಿರುವೆ. ಆ ಪ್ರಜೆಗಳು ಪುಣ್ಯವಂತರೆಂದರೇ 
ನಾಶ್ಚರ್ಯ? 

೯೫. ಧರ್ಮಶಾಸ್ತ್ರವನ್ನು ರಚಿಸಿರುವ ಮನುವು "" ಪ್ರಜೆಗಳನ್ನು ಆಪತ್ತಿ 
ನಿಂದ ರಕ್ಸಿಸುವುದರಿಂದಲೂ, ಅನ್ನಬಟ್ಟಿಗಳನ್ನು ಕೊಟ್ಟು ಪೋಷಿಸುವುದ 
ರಿಂದಲೂ ಧರ್ಮಾರ್ಜನೆಯಾಗುವುದು. ಆ ಧರ್ಮದ ಫಲಗಳನ್ನು ರಾಜನು 
ಭುಜಿಸುವನು'' ಎಂದು ಹೇಳಿದ್ದಾನೆ. 

೯೬೨೯೭. ಯುಧಿಷ್ಠಿರನು ಹೇಳುತ್ತಾನೆ :--ಮುಫಿಯೆ! ನಿನ್ನ ಅಡಿಗಳ 
ಸ್ಪರ್ಶದಿಂದ ನನ್ನ ರಾಜ್ಯವು ಕ್ಸೇಮಗೊಂಡಿರುವುದು. ಪುಣ್ಯಶಾಲಿಯೆ! ನಿನ್ನ 
ಸಂದರ್ಶನದಿಂದ ನಾನು ಪಾಪವಿಲ್ಲದವನಾಡೆನು. ಈಗ ಪಿತಾಮಹನ ಮಗನಾದ 
ನೀನು ನಮ್ಮ ಮನೆಗೆ ಆಗಮಿಸಿದ್ದರಿಂದ ನಾನು ಭೂಮಿಯಲ್ಲಿ ಪುಣ್ಯವಂತನೂ, 
ಕೃತಾರ್ಥನೂ, ಭಾಗ್ಯವಂತನೂ ಆದೆನು. 

೯೮, ಬ್ರಹ್ಮಜ್ಞಾನಿಯಾದ ಓ ಮುನಿವರ್ಯನೆ! ನೀನು ಈಗ ಸಜ್ಜನರಿಗೆ 
ಅನುಗ್ರಹಮಾಡಲೋಸುಗ ಎಲ್ಲಿಂದ ಯಾನ ಕೆಲಸಕ್ಕಾಗಿ ಬಂದಿರುವೆ? 

೯೯-೧೦೨. ನಾರದನು ಹೇಳುತ್ತಾನೆ:-ರಾಜೇಂದ್ರ! ನಾನು ಯನುಪುರಿಗೆ 





6೬ ಶ್ರೀ ಸ್ಕಾಂದಮುಹಾಪುರಾಣಂ 


ಧರ್ಮಾರಣ್ಯಾಶ್ರಿತಾಂ ದಿವ್ಯಾಂ ಸರ್ವಸಂತಾಸಹಾರಿಣೇಂ । 

ಯಾಂ ಶ್ರುತ್ವಾ ಸರ್ವಪಾಪೇಭ್ಯೋ ಮುಚ್ಯತೇ ಬ್ರಹ್ಮಹತ್ಯಯಾ॥ ೧೦೦ ॥ 

ಹತ್ಯಾಂಯುತಪ್ರಶಮನೀಂ ತಾಪತ್ರಯವಿನಾಶಿನೀಂ । 

ಯಾಂ ವೈ ಶ್ರುತ್ವಾಃತಿಭಕ್ಟ್ಯಾ ಚ ಕಠಿನೋ ಮೃದುತಾಂ ಭಜೇತ್‌ ॥೧೦೧॥ 

ಧರ್ಮರಾಜೇನ ತಾಂ ಶ್ರುತ್ವಾ ಮಮಾಗ್ರೇ ಚ ನಿನೇದಿತಾಂ | 

ತಮಪೃಚ್ಛದಮೇಯಾತ್ಮಾ ಕಥಾಂ ಧರ್ಮನಿನೋದಿನೀಂ ॥ ೧೦೨ ॥ 
ಯುಧಿಷ್ಠಿರ ಉವಾಚ: 

ಧರ್ಮಾಂರಣ್ಯಾಶ್ರಿತಾಂ ಪುಣ್ಯಾಂ ಕಥಾಂ ಮೇ ದ್ವಿಜಸತ್ತಮ । 


ಕಥಯಸ್ವ ಪ್ರಸಾದೇನ ಲೋಕಾನಾಂ ಹಿತಕಾಮ್ಯುಯಾ ॥ ೧೦೩ ॥ 
ನಾರದ ಉವಾಚ :- 

ಸ್ನಾನಕಾಲೋಂಯನಮಸ್ಮಾಕಂ ನ ಕಥಾಂವಸರೋ ಮನು । 

ಪರಂ ತು ಶ್ರೂಯತಾಂ ರಾಜನ್ನುಪದೇಶಂ ದದಾಮ್ಯಹಂ ॥ ೧೦೪ ॥ 
ಮಾಸಾನಾಮುತ್ತಮೋ ಮಾಘಃ ಸ್ನಾನದಾನಾದಿಕೇ ತಥಾ । 

ತಸ್ಮಿನ್ಮಾಫೇ ಚ ಯಃ ಸ್ನಾತಿ ಸರ್ವಸಾಸೈಃ ಪ್ರಮುಚ್ಯತೇ ॥ ೧೦೫ ॥ 
ಸ್ನಾನಾರ್ಥಂ ಯಾಹಿ ಶೀಘ್ರಂ ತ್ವಂ ಗಂಗಾಯಾಂ ನೃಪತೇಂಧುನಾ । 
ವ್ಯಾಸಸ್ಯಾಗಮನಂ ಚಾಂದ್ಯ ಭವಿಷ್ಯತಿ ನೃಪೋತ್ತಮ ॥ ೧೦೬ ॥ 


ತೆರಳಿದ್ದೆ ನು. ಅಲ್ಲಿ ನಿತಾಮಹನ ಮುಂದೆ ವ್ಯಾಸರು ಹೇಳಿದ ಸಕಲ ಕಷ್ಟಗಳನ್ನು 
ನೀಗಿಸುವುದೂ, ಬ್ರಹ್ಮಹತ್ಯಾದಿ ಸಕಲದುರಿತಗಳನ್ನು ಹೋಗಲಾಡಿಸುವುದೂ, 
ಆಧ್ಯಾತ್ಮಿಕಾದಿ ತಾಪತ್ರಯಗಳನ್ನು ಹರಣಮಾಡುವುದ್ಕೂ ಅತಿ ಭಕ್ತಿಯಿಂದ 
ಕೇಳುವ ಕಠಿನನನ್ನೂ ಸೌಮ್ಯನನ್ನಾಗಿ ಮಾಡುವುದೂ ಆಗಿರುವ ಧರ್ಮಾರಣ್ಯದ 
ದಿವ್ಯಕಥೆಯನ್ನು ಧರ್ಮರಾಜನಿಂದ (ಯಮನಿಂದ) ಕೇಳಿ ಇಲ್ಲಿಗೆ ಬಂದೆನು. 
ಆಗ ಧರ್ಮಜನು ಆ ಪುಣ್ಯಕಥೆಯನ್ನು ತನಗೆ ಹೇಳಬೇಕೆಂದು ವಿಜ್ಞಾಪಿಸಿದನು. 

೧೦೩. ಯುಧಿಷ್ಠಿರನು ಕೇಳುತ್ತಾನೆ: ದ್ವಿಜನರ್ಯ! ಜನರ ಹಿತದೃಷ್ಟಿ 
ಯಿಂದ ಕೃಪೆಮಾಡಿ ಧರ್ಮಾರಣ್ಯದ ಪನಿತ್ರಕಥೆಯನ್ನು ಹೇಳು. 

೧೦೪. ನಾರದನು ಹೇಳುತ್ತಾನೆ:-ಅರಸ! ಇದು ನನಗೆ ಸ್ಲಾನಸಮಯವು. 
ಕಥೆಯನ್ನು ಹೇಳುವ ಸಮಯವಲ್ಲ. ಆದರೆ ನಾನು ನಿನಗೆ ಉಪದೇಶಮಾಡು 
ವೆನು; ಕೇಳು. 

೧೦೫. ಸ್ನಾನದಾನಗಳಿಗೆ ಮಾಸಗಳಲ್ಲೆಲ್ಲ ಮಾಘಮಾಸವು ಉತ್ತಮವು. 
ಆ ಮಾಸದಲ್ಲಿ ಮಿಂದವನ ಪಾಪಗಳೆಲ್ಲ ನೀಗುವುವು. 

೧೦೬. ರಾಜೇಂದ್ರ! ನೀನು ಈಗ ಜಾಗ್ರತೆಯಾಗಿ ಸ್ನಾನಕ್ಕೋಸ್ಟರ. 
ಗಂಗೆಗೆ ತೆರಳು. ಈ ದಿನ ವ್ಯಾಸರು ಅಲ್ಲಿಗೆ ಬರುವರು. 





ಪ್ರಥಮೋರತಧ್ಯ್ಮಾಯಃ ೧೭ 


ಪೃ ಚೃಸ್ಥ ಓ ಮಹಾಭಾಗ ಶ್ರಾನಯಿಷ್ಯತಿ ತೇ ಶುಭಂ | 

ಬಾ ಚೈ ವ ಸರ್ವೇಷಾಂ ಫಲಂ ಪುಣ್ಯಂ ಯದದ್ಭುತಂ ॥ ೧೦೭ ॥ 

ಓೂತಂ ಭವ್ಯಂ 'ಭವಿಷ್ಯಂ ಚ ಉತ್ತಮಾಧನುನುಧ್ಯಮಾಃ । 

ನಾಚಯಿಷ್ಯತಿ ತತ್ಸರ್ವಮಿತಿಹಾಸಸಮುದ್ಭನಂ | 

'ರ್ಮಾಂರಣ್ಯಸ್ಯ ಸಕಲಂ ವೃತ್ತಂ ಯದೃತ್ಪುರಾತನಂ । 

ಣ್ಯಸಃ ಸತ್ಯವತೀಪುತ್ರೋ ನದಿಸ್ಯತಿ ಚ ತೇಂಖಿಲಂ | 
ಸೂತ ಉವಾಚ :- 

'ವಮುಶ್ತ್ವಾ ನಿಧೇಃ ಪುತ್ರಸ್ತತ್ರೈವಾಂಂತರಧೀಯತ । 

ಸ್ಮಿನ್ನತೇ ಸನೃಪತಿಃ ಕ್ರೀಡತೇ ಸಚಿವೈಃ ಸಹ | 

'ತಸ್ಮಿನ್ನಂತರೇ ತತ್ರ ಸ್ರಾಸ್ತಃ ಸತ್ಯವತೀಸುತಃ | 

'ಜ್ಞಾಷಯಾಮಾಸ ತದಾ ವಿದುರಃ ಪಾಂಡವಸ್ಯ ಹಿ ॥ ೧೧೧ ॥ 
ಸೂತ ಉವಾಚ :-- 

ಗತಂ ತು ಮುನಿಂ ಶ್ರುತ್ವಾ ಸರ್ವೇ ಹರ್ಷಸಮಾಕುಲಾಃ । 

ಮುತ್ತ ಸ್ಥ ರ್ಜ ನೀರ 8 ಸಹ ಧರ್ಮೇಣ ಸರ್ವಶಃ ॥ ೧೧೨ ॥ 

[ದಾ ಹಿ ಸನ್ನು ಖೋ ಭೂತ್ವಾ ಮುನುುದೇ ನತಕಂಧರಃ । 

ಕಂಡನತ್ತಂ ಪ್ರ ಣಮ್ಮಾ *ಥ ಭ್ರಾತೃಭಿಃ ಸಹಿತಸ್ತದಾ ॥ ೧೧೩ ॥ 


೧೦೮ ॥ 


೧೦೯॥ 


೧೧೦ ॥ 





೧೦೭. ಪ್ರಣ್ಯಶಾಲಿಯಾದ ದೊರೆಯೆ! ನೀನು ಆವಾ ಸರನ್ನು ಕೇಳು. 
೨ವರು ನಿನಗೆ ಎಲ್ಲ ತೀರ್ಥಗಳ ಆಶ್ಚರ್ಯಕರವೂ ಪವಿತ್ರವೂ ಆಗಿರುವ ಫಲವನ್ನು 
ಳಿಸುವರು. 

೧೦೮. ಉತ್ತಮ, ಮಧ್ಯಮ, ಅಧಮ ಜೀನಿಗಳಿಗೆ ಇತಿಹಾಸದಲ್ಲಿ ಹೇಳಿ 
ಸವ ಭೂತ, Wie ime ಭವಿಷ್ಯತ್ಕಾಲಗಳ ಸರ್ವಫಲವನ್ನೂ ಹೇಳುವರು. 

೧೦೯. ಸತ್ಯ ವತೀತನಯರಾದ ಆ ವ್ಯಾಸ ಸರು ಧರ್ಮಾರಣ್ಯದ ಎಲ್ಲ 
ರಿರಾತನ ಸಮಾಜಾರಗಳನ್ನೂ ನಿನಗೆ ಹೇಳುವರು. 

೧೧೦. ಸೂತನು ಹೇಳುತ್ತಾನೆ:--ಬ ಬ್ರ ಹ್ಮತನಯನಾದ ನಾರದನು ಹೀಗೆ 
ಹೇಳಿ ಅಲ್ಲಿಯೇ ಅದೃಶ್ಯನಾದನು. ಅವನು ಹೊರಟುಹೋದ ಬಳಿಕ 
ತ ಯುಧಿಷ್ಠಿರನು ಮಂತ್ರಿಗಳೊಡನೆ ನಿನೋದಸಡುತ್ತಿದ್ದನು. 

೧೧೧. ಈ ಮಧ್ಯದಲ್ಲಿ ಅಲ್ಲಿಗೆ ಸತ್ಯವತೀಪುತ್ರರಾದ ವ್ಯಾಸರು ಬರಲು 
ನಿದುರನು ಪಾಂಡುತನಯನಾದ ಧರ್ಮಜನಿಗೆ ಈ ನಿಷಯವನು ್ಲಿಸುರಿದನು. 

೧೧೨. ಸೂತನು ಹೇಳುತ್ತಾನೆ :—ವ್ಯ್ಯಾಸಮುನೀಶ್ವರನು ಬಂದಿರುವುದನ್ನು 
ಕೇಳಿ ಧರ್ಮಜನೊಡನೆ ಭೀಮಾದಿಗಳೆಲ್ಲರೂ ತೋರ ಮೇಲಕ್ಕೆ ದ್ದ ಕು 

೧೧೩. ಆಗ ಯುಧಿಷ್ಠಿರನು ನಮ್ರನಾಗಿ ಅವನನ್ನು ಎಡ ರುಗ ಹು 
ಸಹೋದರರೊಡನೆ ಸಾಷ್ಟಾ ಂಗ ಪ ಕ್ರ ಹಾಮಮಾಡಿದನು, 


೧೮ ಶ್ರೀ ಸ್ಕಾಂದಮಹಾಪುರಾಣಂ 


ಮಧುಪರ್ಕೇಣ ನಿಧಿನಾ ಪೂಜಾಂ ಕೃತ್ವಾ ಸುಶೋಭನಇಂ | 

ಸಿಂಹಾಸನೇ ಸಮಾನೇಶ್ಶ್ಯ ಪಪ್ರಚ್ಛಾನಾಮಯಂ ತದಾ ॥ ೧೧೪ ॥ 

ತತಃ ಪುಣ್ಯಾಂ ಕಥಾಂ ದಿವ್ಯಾಂ ಶ್ರಾನಯಾಮಾಸ ಧರ್ಮನಿತ್‌ । 

ಕಥಾಂತೇ ಮುನಿಶಾರ್ದೂಲಂ ನಚನಂ ಚೇದಮುಬ್ರನೀತ್‌ ॥ ೧೧೫ ॥ 
ಯುಧಿಷ್ಠಿರ ಉನಾಚ :-- 

ತ್ವತ್ರಸಾದಾನ್ಮಯಾ ಬ್ರಹ್ಮನ್ನು ತಾಸ್ತು ಪ್ರವರಾಃ ಕಥಾಃ । 


ಆಸದ್ಭರ್ಮಾ ರಾಜಧರ್ಮಾ ಮೋಕ್ಸಧರ್ನಾ ಹ್ಯನೇಕಶಃ ॥ ೧೧೬ ॥ 
ಪುರಾಣಾನಾಂ ಚ ಧರ್ಮಾಶ್ಚ ವ್ರತಾನಿ ಬಹುಶಸ್ತಥಾ । 
ತೀರ್ಥಾನ್ಯನೇಕರೂಪಾಣೆ ಸರ್ವಾಣ್ಯಾಯತನಾನಿ ಚ ॥ ೧೧೭ ॥ 
ಇದಾನೀಂ ಶ್ರೋತುಮಿಚ್ಛಾಮಿ ಧರ್ಮಾಂ ರಣ್ಯಕಥಾಂ ಶುಭಾಂ ॥ 

ಶ್ರುತ್ವಾ ಯಾಂ ಹಿ ವಿನಶ್ಯೇತ ಸಾಪಂ ಬ್ರಹ್ಮವಧಾದಿಕಂ ॥ ೧೧೮ ॥ 
ಧರ್ಮಾಂರಣ್ಯಸ್ಥ ತೀರ್ಥಾನಾಂ ಶ್ರೋತುಮಿಚ್ಛಾ ಮಿ ತತ್ವತಃ । 

ಕಸ್ಕೇದಂ ಸ್ಥಾಸಿತಂ ಸ್ಥಾನಂ ಕಸ್ಮಾದೇತದ್ವಿನಿರ್ಮಿತಂ ॥ ೧೧೯॥ 


ರಕ್ಷಿತಂ ಪಾಲಿತಂ ಕೇನ ಕಸ್ಮಿನ್ಫಾಲೇಂಥ ನಿರ್ನೀತಂ । 
ಕಿಂ ಕಿಂ ತೈತ್ರಾಾಭನತ್ಪೂರ್ವಂ ಶಂಸೈತತ್ಸೃಚ್ಛತೋ ಮಮ ॥ ೧೨೦॥ 





೧೧೪. ಮಥುನರ್ಕಕ್ರಮದಿಂದ ಮಂಗಳಕರವಾದ ಪೂಜೆಗೈದು ಸಿಂಹಾ 
ಸನದಲ್ಲಿ ಕುಳ್ಳಿರಿಸಿ ಕುಶಲಪ್ರಶ್ನೆ ಮಾಡಿದನು. 

೧೧೫. ತರುವಾಯ ಧರ್ಮಜ್ಞನಾದ ವ್ಯಾಸನು ಪವಿತ್ರವಾಗಿಯೂ 
ಮನೋಹರವಾಗಿಯೂ ಇರುವ ಕಥೆಯನ್ನು ಹೇಳಿದನು. ಧರ್ಮಜನು ಕಥೆಯ 
ಕೊನೆಯಲ್ಲಿ ಮುನಿವರ್ಯನಾದ ವ್ಯಾಸನನ್ನು ಕುರಿತು ಇಂತೆಂದನು. 

೧೧೬-೧೧೭, ಯುಧಿಷ್ಠಿರನು ಕೇಳುತ್ತಾನೆ: ಮುನಿವರ್ಯ! ನಿನ್ನ 
ಅನುಗ್ರಹದಿಂದ ಉತ್ತಮ ಕಥೆಗಳನ್ನೂ ಆಪತ್ಕಾಲದ ಧರ್ಮಗಳನ್ನೂ, ರಾಜರ 
ಧರ್ಮಗಳನ್ನೂ, ಮೋಕ್ಚಧರ್ಮಗಳನ್ನೂ, ಅನೇಕ ವಿಧಗಳಾದ ಪುರಾಣ 
ಧರ್ಮಗಳನ್ನೂ, ಬಗೆ ಬಗೆಯ ವ್ರತಗಳನ್ನೂ, ನಾನಾ ವಿಧವಾದ ತೀರ್ಥಗಳನ್ನೂ 
ಎಲ್ಲ ದೇವಾಲಯಗಳನ್ನೂ ತಿಳಿದುಕೊಂಡೆನು. 

೧೧೮. ಕೇಳಿದ ಮಾತ್ರದಿಂದ ಬ್ರಹ್ಮಹತ್ಯಾದಿ ಪಾಪಗಳನ್ನು ಪರಿಹರಿಸುವ 
ಧರ್ಮಾರಣ್ಯದ ಶುಭಕಥೆಯನ್ನು ಈಗ ಕೇಳಬಯಸುವೆನು. 

೧೧೯. ಧರ್ಮಾರಣ್ಯದಲ್ಲಿರುವ ತೀರ್ಥಗಳ ನಿಜಸ್ವರೂಪವನ್ನೂ, ಈ ಸ್ಥಳವು 
ಏತಕ್ಕೆ ಸ್ಥಾಪಿತವಾಗಿದೆ, ಯಾವುದರಿಂದ ನಿರ್ಮಿತವಾಗಿದೆಯೆಂಬುದನ್ನೂ 
ಕೇಳಲಿಚ್ಛಿಸುವೆನು. 

೧೨೦-೧೨೧. ಯಾರು ಯಾವಾಗ ಇದನ್ನು ಕಾಪಾಡಿದರು? ಇಲ್ಲಿ ಹಿಂಡೆ 


ಪ್ರಥಮೋ$ಧ್ಯಾಯಃ ೧೯ 


ಭೂತಂ ಭವ್ಯ ೦ ಭವಿಷ್ಯಚ್ಚ ತಸ್ಮಿನ್ಸಾ ಎನೇ ಚ ಯದ್ಭವನೇತ್‌ | 
ತತ್ಸರ್ವಂ ಕಥಯಸ್ಕಾ ದ್ಯ ತೀರ್ಥಾನಾಂ ಚ ಯಥಾ ಸ್ಥಿತಿಃ ॥ ೧೨೧॥ 


ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಮೇ "" ಯುಧಿಷ್ಠಿರ 
ಪ್ರಶ್ನವರ್ಣನಂ ನಾಮ ಪ್ರಥಮೋಂಧ್ಯಾಯಃ 





ಏನಿದ್ದಿತು? ಈಗ ಏನಿದೆ? ಮುಂದೆ ಏನಾಗುವುದು. ತೀರ್ಥಗಳು ಹೇಗಿವೆ? 
ಇವೆಲ್ಲವನ್ನು ಈಗ ನನಗೆ ತಿಳಿಸು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ ತ್ರಹ್ಮಖಂಡದ ಪೂರ್ನಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ "" ಯುಧಿಷ್ಮಿ ಸೆನ್‌ ಪ್ರಶ್ನನರ್ಣನ''ವೆಂಬ 
ನೋದಲನೆಯ ಅಧ್ಯಾ ಯವು ಸಗಿದುದು 


| ಶ್ರೀಃ [) 
ಅಥ ದ್ವಿತಿಯೋಂಧ್ಯಾಯಃ 
ಯುಧಿಷ್ಠಿರ ಪ್ರಶ್ನವರ್ಣನಂ 
ವ್ಯಾಸ ಉವಾಚ :-- 
ಪ ಶೈ ಥ್ವೀಪುರಂಧ್ರ್ಯಾಸ್ತಿಲಕಂ ಅಲಾಟೀ 
ಲಕ್ಷಿ ಒಲಿತಾಯಾಃ ಸುಟಮಾಲವಾಲಂ | 
ವಾಗ್ಟೇನತಿಕೆಯಾ ಜಲಕೇಲಿರಮ್ಯಂ 





ನೋಹೇರಕಂ ಸಂಪ್ರತಿ ನರ್ಣಯಾಮಿ “Hon 
ಸಾಧು ಪೃಷ್ಟಂ ತ್ವಯಾ ರಾಜನ್ಹಾರಾಣಸ್ಯಧಿಕಾಂಧಿಕಂ । 
ಧರ್ಮಾಃ ರಣ್ಯಂ ನೃಸಶ್ರೇಷ್ಠ ಶೃಣುಷ್ಟಾಃವಹಿತೋ ಭೃಶಂ ns 
ಸರ್ವತೀರ್ಥಾನಿ ತತ್ರೈವ ಊಸರಂ ತೇನ ಕಥ್ಯತೇ । 
ಬ್ರಹ್ಮನಿಷ್ಣುನುಹೇಶಾದ್ಯೈ ರಿಂದಾ ್ರಿದ್ಯೈಃ ಪರಿಸೇನಿತಂ nan 
ಲೋಕಪಾಲೈಶ್ಚ ದಿಕ್ಸಾಲೈರ್ಮಾತೃಭಿಃ ಶಿನಶಕ್ತಿಭಿಃ । 
ಗಂಧರ್ವೈೈಶ್ಚಾಂ ಪ್ಸರೋಭಿಶ್ಚ ಸೇವಿತಂ ಯಜ್ಞ ಕರ್ಮಭಿಃ HY 
ಭೂತವೇತಾಲಶಾಕನೀಗ್ರಹದೇವಾ:ಧಿದೇವತ್ತೆಃ 
ಖುತುಭಿರ್ಮಾಸಪಕ್ರ್ಸೈಶ್ಚ ಸೇವ್ಯಮಾನಂ ಸುರಾಸುರೈಃ ॥೫॥ 

ಕನ್ನಡದ ಅನುವಾದ 


ಯಧಿಷ್ಠಿ ರನ ಪ್ರಶ್ನ ಶ್ಲ ವರ್ಣನ 

೧. ವ್ಯಾಸನು ಹೇಳುತ್ತಾನೆ ಕಗ ಭೂಮಿನ ಸಾಧ್ವೀಮಣೆಯ 
ಹಣೆಯ ತಿಲಕವೂ, ಐಶ್ವರ್ಯವೆಂಬ ಬಳ್ಳಿಗೆ ಸರಿಕೂಡಿದ ಪಾತಿಯೂ, ವಾಗ್ದೇವಿಯ 
14 ಮನೋಹರವೂ ಆಗಿರುವ ನೋಹೇರಕನೆಂಬ ತೀರ್ಥವನ್ನು 

ಣ್ಣಿಸುವೆನು. 

೨. ನೃ ಪವರ್ಯ! ನೀನು ಕಾಶೀಕ್ಷೇತ್ರಕ್ಕಿಂತ ಮಿಗಿಲಾದ ಧಮಾ 
ವನ್ನು ಕುರಿತು ಪ್ರಶ್ಚಿಸಿದುದು ಒಳ್ಳಿ ತಾಜ ಈಗ ಅತ್ಯಂತ ಜಃ ನದಿಂದ 
ಶ್ರವಣಮಾಡು. 

೩-೭. ಎಲ್ಲ ತೀರ್ಥಗಳೂ ಇಲ್ಲಿಯೇ ಇವೆ. ಆದ್ದರಿಂದ ಇದನ್ನು ಊಷರ 
ವೆಂದು ಕರೆಯುತ್ತಾರೆ. ಇದನ್ನುಬ್ರ ಹ್ಮ, ವಿಷ್ಣು, ಮಹೇಶ್ವರರೆ ಮೊದಲಾದವರೂ, 
ಇಂದ್ರಾದಿ ದಿನಿಜರೂ, ಲೋಕಪಾಲಕರೂ, ದಿಕ್ಬಾಲಕರೂ, ಪರಮೇಶ್ವರನ ಶಕ್ತಿ 
ರೂಪರಾದ ಬ್ರಾಹ್ಮ್ಮ್ಯಾದಿ ಸಪ್ತಮಾತೃಕೆಯರೂ, ಗಂಧರ್ವರೂ, ಅಪ್ಪರಸರೂ, 
ಯಜ್ಞ ಕರ್ಮಗಳೂ, ಭೂತ, ಭೇತಾಳ, ಶಾಕಿನಿಗಳೆಂಬ ಗ್ರಹದೇವತೆ ಮತ್ತು 
ಅಧಿದೇವತೆಗಳೂ, ಖುತುಗಳೂ ಮಾಸಗಳೂ, ಪಕ್ಬ್ಚಗಳೂ, ದೇವದಾನವರೂ, 


೫. 


ದ್ವಿತೀಯೋರಧ್ಯಾಯಃ ೨೧ 


ತದಾದ್ಯಂ ಚ ನೃಪ ಸ್ಥಾನಂ ಸರ್ವಸೌಖ್ಯಪ್ರದಂ ತಥಾ । 


ಯಜ್ಞ್ಞೈಶ್ಚ ಬಹುಭಿಶ್ಚೆವ ಸೇವಿತಂ ಮುನಿಸತ್ತಮೈಃ WN 
ಸಿಂಹವ್ಯಾಸೈರ್ದಿಸೈಶ್ಸೈನ ಪಕ್ಸಿಭಿರ್ನಿನಿಧೈಸ್ತಥಾ । 
ಗೋನುಹಿಷ್ಯಾದಿಭಿಶ್ಚೈನ ಸಾರಸೈರ್ಮ್ಮಗಶೂಕರೈಃ ॥೭॥ 
ಸೇವಿತಂ ನೃಸಶಾರ್ದೂಲ ಶ್ವಾಪದೈರ್ನಿನಿಧೈರನಿ | 

ತತ್ರ ಯೇ ನಿಧನಂ ಪ್ರಾಪ್ತಾಃ ಪಕ್ಷಿಣಃ ಕೀಟಿಕಾದಯಃ nn 
ಪಶವಃ ಶ್ವಾಪದಾಶ್ಚೈನ ಜ ಲಸ ಲಚೆರಾಶ್ತ ಯೆ 

ಖೇಚರಾ ಭೂಚರಾಶ್ಛೈನ ಡಾಕಿನ್ಯೋ ರಾಕ್ಟಸಾಸ್ತಹಥಾ ॥೯॥ 


ಏಕೋತ್ತರಶತೈಃ ಸಾರ್ಧಂ ಮುಕ್ತಿಸ್ತೇಷಾಂ ಹಿ ಶಾಶ್ವತೀ | 
ತೇ ಸರ್ನೇ ನಿಷ್ಣುಲೋಕಾಂಶ್ಚ ಪ್ರಯಾಂತ್ಯೇನ ನ ಸಂಶಯಃ ॥೧೦॥ 
ಸಂತಾರಯತಿ ಪೂರ್ವಜ್ಞಾನ್ನಶ ಪೂರ್ನಾನ್ಸಶಾಃಪರಾನ್‌ । 


ಯನನ್ರೀಹಿತಿಲೈಃ ಸರ್ಪಿರ್ಬಿಲ್ಬಪತ್ರೆಶ್ಚ ಡೂರ್ವಯಾ ॥ ೧೧॥ 
ಗುಡೈಶ್ಚೆವೋದಕೈರ್ವಾಂಥ ತತ್ರ ಪಿಂಡಂ ಕರೋತಿ ಯಃ । 
ಉದ್ಭರೇತ್ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಂ ॥ ೧೨॥ 





ಸೇವಿಸುತ್ತಿದ್ದಾರೆ. ಮುಸಿಶ್ರೀಷ್ಕರು ಇಲ್ಲಿ ಅನೇಕ ಯಜ್ಞಗಳನ್ನು ಮಾಡಿದ್ದಾರೆ. 
ಮತ್ತು ಇದನ್ನು ಸಿಂಹಗಳೂ, ಹುಲಿಗಳೂ, ಆನೆಗಳೂ, ಬಗೆ ಬಗೆಯ ಹಕ್ಕಿಗಳೂ, 
ಹಸುಗಳೂ, ಎಮ್ಮೆ ಮೊದಲಾದವುಗಳೂ ಕೊಕ್ಕರೆಗಳೂ, ಜಿಂಕೆಗಳೂ, 
ಹಂದಿಗಳೂ ಸೇವಿಸುವುದರಿಂದ ಇದು ಸಮಸ್ತ ಸೌಖ್ಯಗಳನ್ಸೀಯುವ ಮೊದಲ 
ನೆಯ ಸ್ಥಾನವು. 

೮-೧೦. ರಾಜವರ! ನಾನಾ ವಿಧವಾದ ಹಿಂಸ್ರಪ್ರಾಣಿಗಳಿಂದ ಸೇವಿತ 
ವಾದ ಈ ಸ್ಥಳದಲ್ಲಿ ಹಕ್ಕೆಗಳಾಗಲಿ, ಹುಳು ಹುಪ್ಪಟಿ ಮೊದಲಾದವುಗಳಾಗಲಿ, 
ಪಶುಗಳಾಗಲಿ, ಸಿಂಹ ಮೊದಲಾದ ಮೃಗಗಳಾಗಲಿ, ಜಲ ಮತ್ತು ಭೂಮಿಯಲ್ಲಿ 
ವಾಸಿಸುವ ಪ್ರಾಣಿಗಳಾಗಲಿ, ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಸಂಚರಿಸುವ 
ಡಾಕಿನ್ಯಾದಿ ಭೂತಗಳಾಗಲಿ, ರಾಕ್ಸಸರಾಗಲಿ ಮೃತಿಯೊಂದಿದರೆ ಅವರೆಲ್ಲರೂ 
ತಮ್ಮ ಹಿಂದಿನ ನೂರೊಂದು ಜನರೊಡನೆ ಮುಕ್ತರಾಗಿ ನಿಷ್ಣುಲೋಕವಾದ 
ವೈಕುಂಠಕ್ಕೆ ತೆರಳುವರು. ಇದರಲ್ಲಿ ಸಂಶಯವಿಲ್ಲ. 

೧೧-೧೨. ಯಾರು ಭತ್ತ, ಎಳ್ಳು, ತುಪ್ಪ, ಬಿಲ್ವಪತ್ರೆ, ಗರಿಕೆ, ಬೆಲ್ಲ, 
ನೀರು ಇವುಗಳಿಂದ ಇಲ್ಲಿ ಪಿತೃಗಳಿಗೆ ತರ್ಪಣಗಳನ್ನು ಪ್ರದಾನಮಾಡುವರೊ 
ಅವರು ತಮ್ಮ ಹಿಂದಿನ ಮತ್ತು ಮುಂದಿನ ಹತ್ತುತಲೆ ವಿತೃಗಳನ್ನೂ, ಏಳು 
ಗೋತ್ರದವರನ್ನೂ, ನೂರೊಂದು ವಂಶದವರನ್ನೂ ಉದ್ದಾರಮಾಡುವರು. 


೨೨ ಶ್ರೀ ಸ್ಕಾಂದಮ ಹಾಫುರಾಣಂ 


ವೃ ಕ್ಪೈರನೇಕಥಾ ಯುಕ್ತಂ ಲತಾಗುಲ್ವೆ ೈಃ ಸುಶೋಭಿತಂ । 


ಸದಾ ಪುಣ್ಯಪ್ರದಂ ತಚ್ಚ ಇದಾ ಫಲಸವಮೆಸ್ಸಿ ತಂ ॥ ೧೩ ॥ 
ನಿರ್ನೈೆರಂ ಗೂ ಚೈವ ಧರ್ಮಾಂರಣ್ಣು ಚ ಚಕ | 

ಹೋತಾ ವ್ಯಾಫ್ಸೈಃ ಕ್ರೀಡ್ಯತೇ ತತ್ರ ತಥಾ ಮಾರ್ಜಾರನೂಷಕ್ಕೆ ॥ ೧೪ ॥ 
ಭೇಕೋಹಿ ನಾ 3 (ಡತೇ ಚಿ ಮಾನುಷಾ ರಾಕ್ಸಸೈಃ ai | 

ನಿರ್ಭಯಂ ವಸತೇ ತತ್ರ ಧರ್ಮಾಂರಣ್ಯಂ ಚ Rp ॥ ೧೫ ॥ 
ಮಹಾನಂದಮಯಂ ದಿವ್ಯಂ ಪಾನನಾತ್ಪಾನನಂ ಪರಂ । 

ಕಲಕಂಠಃ ಕಲೋತ್ಕೆಂಠಮನುಗುಂಜತಿ ಕುಂಜರಃ ॥ ೧೬ ॥ 
ಧ್ಯಾನಸ್ಮಃ ಶ್ರೋಷ್ಯತಿ ತದಾ ಸಾರಾನತ್ಯೇತಿವಾರ್ಯತೇ | 

ಕೇಕಃ ಕೋಕೀಂ ಪರಿತ್ಯಜೃ ಮೌನಂ ತಿಷ್ಠತಿ ತದ್ಭಯಾತ್‌ ॥ ೧೭॥ 
ಚಕೋರಶ್ಚಂದ್ದಿ ್ರ್ರಕಾಭೋಕ್ತಾ ನಕ್ತವ್ರ ತಮಿವಾಸ್ಟೆ ತಃ । 

ಪಠಂತಿ ಸಾರೀ $ ಸಾರಂ ಶುಕಂ ಸಂಜೋಧಯತ್ತ ಹೋ ॥ ೧೮ ॥ 


ಅಸಾರವಾರಸಂಸಾರಸಿಂಧುಪಾರಪ್ರದಃ ಶಿನಃ । 
ಆಲಸ್ಯೇನಾಸಿ ಯೋ ಯಾಯಾದ್ಧೃಹಾದ್ದರ್ಮವನಂ ಯಯೌ ॥ ೧೯ ॥ 





೧೩. ಅನೇಕ ಜಾತಿಯ ಮರಗಳುಳ್ಳುದೂ, ಲತೆಗಳ ಪೊದೆಗಳಿಂದ 
ಅಲಂಕೃತವಾದುದೂ ಆಗಿರುವ ಆ ಧರ್ಮಾರಣ್ಯವು ಯಾವಾಗಲೂ ಪುಣ್ಯವನ್ನು 
ಕೊಡುವುದು; ಫಲಗಳಿಂದ ಕೂಡಿರುವುದು. 

೧೪-೧೫. ರಾಜನೆ! ಧರ್ಮಾರಣ್ಯದಲ್ಲಿ ದ್ವೇಷವೂ, ಭಯವೂ, ಇರುವು 
ದಿಲ್ಲ. ಅಲ್ಲಿ ಹಸುಗಳು ಹುಲಿಗಳೊಡನೆಯೂ, ಬೆಕ್ಕುಗಳು ಇಲಿಗಳೊಡನೆಯೂ, 
ಕಪ್ಪೆಯು ಸರ್ಪದೊಡನೆಯೂ, ಮನುಷ್ಯರು ರಾಕ್ಸಸರೊಡನೆಯೂ ಆಡುತ್ತ 
ಭಯವನಿವ್ಬದೆ ವಾಸಿಸುತ್ತಾರೆ. 

೧೬. ಆ ಧರ್ಮಾರಣ್ಯವು ಅತ್ಯಂತ ಅನಂದಪ್ರದವೂ, ಅತಿ ಪವಿತ್ರವೂ 
ಆದುದು. ಅಲ್ಲಿ ನವಿಲು ಪೊದೆಯಲ್ಲಿದ್ದು ಇಂಪಾಗಿ ಕೂಗುವುದು. 

೧೭. ಧ್ಯಾನಾಸಕ್ತ ನಾದ ಮುನಿಯು ಕೇಳುವನೆಂದು ಕಪೋತಿಯು 
ಸುಮ್ಮನಿರುವುದು. ಚಕ್ರವಾಕವು ಆ ಧ್ಯಾನಾ ನಾಸಕ್ತನ ಹೆದರಿಕೆಯಿಂದ ತನ್ನ 
ಪತ್ಲಿಯನ್ನಗಲಿ ಸಾಗುತ್ತ 

೧೮. ಬೆಳದಿಂಗಳನ್ನು ಕುಡಿಯುವ ಚಕೋರವು ರಾತ್ರಿವ್ರತವನ್ನು 
ಹೊಂದಿರುವಂತಿರುವುದು. ಸಾರಿಕೆಗಳು (ಗೊರವಂಕಗಳು) ಇಂಪಾಗಿ ಮಾತಾ 
ಡುತ್ತ ಗಿಳಿಯನ್ನು ಸಂಬೋಧಿಸುವುವು. 

೧೯-೨೧. ಪರಮೇಶ್ವರನು ಅಲ್ಲಿ ನೆಲೆಗೊಂಡಿರುವುದರಿಂದ ಅವನು 
ಸಂಸಾರಸಾಗರವನ್ನು ದಾಟಸುವನು. ಯಾವನಾದರೂ ಮನೆಯಿಂದ 


ದ್ವಿತೀಯೋಂಧ್ಯಾಯಃ। ೨ 


ತ್ಸಮೇಧಾಧಿಕೋ ಧರ್ಮುಸ್ತಸ್ಯ ಸ್ಯಾಚ್ಹ ಪದೇಪದೇ । 


ಇಷಾಂನುಗ್ರ ಹಸಂಯುಕ್ತಾ ಬ್ರಾಹ್ಮಣಾಸ್ತತ್ರ ಸಂತಿ ನೈ ॥ ೨೦॥ 
*ಷ್ಟಾದಶಸಹಸ್ರಾಣಿ ಪುಣ್ಯಕಾರ್ಯೇಷು ನಿರ್ಮಿತಾಃ । 
ಸಟ್ರ್ರಿಂಶತ್ತು ಸಹಸ್ರಾಣಿ ಭೃತ್ಯಾಸ್ತೇ ನಣಿಜೋ ಭುವಿ iW ೨೧॥ 


ತ್ರಿಜಭಕ್ತಿಸಮಾಯುಕ್ತಾ ಬ್ರಹ್ಮಣ್ಯಾ ಸ್ತೇ ಶ್ವಯೋನಿಜಾಃ । 
ತಿರಾಣಜ್ಞಾ $ ಸದಾಚಾರಾ `ಧಾರ್ದಿಕಾಃ ಶುದ್ಧ ಬುದ್ಧ ಯಃ 1 


ಓರ್ಗೇ ದೇವಾಃ ಪ್ರಶಂಸಂತಿ ಧರ್ಮಾಂರಣ್ಯ ನಿನಾಸಿನೌ ॥ ೨೨ ॥ 
ಯುಧಿಷ್ಠಿರ dk ದಾ 

ಕರ್ಮಾಂರಣ್ಯೇತಿ ತ್ರಿದಶೈಃ ಕದಾ ನಾಮ ಪ್ರತಿಷ್ಠಿತಂ । 

ಕಾನನಂ ಭೂತಲೇ ಜಾತಂ ಕಸ್ಕ್ಮಾತ್ತೇನ ವಿನಿರ್ನಿತಂ ॥ ೨೩ ॥ 

ಶಕೀರ್ಧಭೂತಂ ಹಿ ಕಸ್ಮಾಚ್ಚ ಕಾರಣಾತ್ತದ್ವ್ಧದಸ್ವ ಮೇ । 

ನ್ರಾಹ್ಮಣಾಃ ಕತಿಸಂಖ್ಯಾಕಾಃ ಕೇನ ವೈ ಸ್ಥಾಪಿತಾಃ ಪುರಾ ॥ ೨೪ ॥ 

ತಿಷ್ಟಾದಶಸಹಸ್ರಾಣಿ ಕಿಮರ್ಥಂ ಸ್ಥಾಪಿತಾನಿ ವೈ। 

ಕಸ್ಮಿನ್ನಂಶೇ ಸಮುತ್ಸನ್ನಾ ಬ್ರಾಹ್ಮಣಾ ಬ್ರಹ್ಮಸತ್ತಮಾಃ ॥ ೨೫ ॥ 





೨ನಾದರದಿಂದಾಗಲಿ ಆ ಧರ್ಮಾರಣ್ಯಕ್ಕೆ ಹೋದರೆ ಅವನಿಗೆ ಪ್ರಕಿಹೆಜ್ಜೆ 
ಯಲ್ಲಿಯೂ ಅಶ್ವಮೇಧಯಾಗ ಮಾಡುವುದಕ್ಕಿಂತ ಹೆಚ್ಚಾದ ಧರ್ಮವು ಲಭಿಸು 
ಪುದು, ಅಲ್ಲಿ ಶಾಪವನ್ನು ಕೊಡುವುದರಲ್ಲಿಯೂ ಅನುಗ್ರಹಮಾಡುವುದ 
ರಲ್ಲಿಯೂ ಸಮರ್ಥರಾದ ಪುಣ್ಯಕಾರ್ಯಗಳಲ್ಲಿ ನಿರತರಾದ ಹದಿನೆಂಟು ಸಾವಿರ 
ಬ್ರಾಹ್ಮಣರಿದ್ದಾರೆ. ಮತ್ತು ಅವರಿಗೆ ಸೇವಕರಾದ ಮೂನತ್ತಾರುಸಾವಿರ 
ನರ್ತಕರಿರುವರು. 

೨೨. ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, ಬ್ರಹ್ಮನಿಷ್ಠರೂ, ಅಯೋ 
ನಿಜರೂ, ಪುರಾಣವನ್ನರಿತವರೂ, ಒಳ್ಳೆಯ ನಡಸೆಯುಳ್ಳಪರೂ, ಧರ್ಮಬುದ್ಧಿ 
ಯುಳ್ಳವರೂ, ಶುದ್ಧ ಜ್ಞಾನವುಳ್ಳವರೂ ಆಗಿರುವ ಆ ಧರ್ಮಾರಣ್ಯವಾಸಿಗಳನ್ನು 
ಸ್ವರ್ಗಲೋಕದಲ್ಲಿ ದೇವತೆಗಳೂ ಹೊಗಳುತ್ತಾರೆ. 

೨೩. ಯುಧಿಷ್ಠಿರನು ಕೇಳುತ್ತಾನೆ:--ದೇವತೆಗಳು ಯಾವಾಗ ಅದಕ್ಕೆ 
ಧರ್ಮಾರಣ್ಯನೆಂಬ ಹೆಸರನ್ಲಿಟ್ಟರು? ಯಾವುದರಿಂದ ಭೂಮಿಯಲ್ಲಿ ಅದು 
ಪವಿತ್ರವಾಯಿತು? ಯಾರು ಅದನ್ನು ಸೃಜಿಸಿದರು? 

೨೪. ಯಾವ ಕಾರಣದಿಂದ ಅದು ತೀರ್ಥವಾಯಿತು? ಎಷ್ಟುಜನ 

ಹ್ಮಣರನ್ನು ಹಿಂದೆ ಯಾರು ಅಲ್ಲಿ ಇಟ್ಟರು? ಅದನ್ನು ನನಗೆ ಹೇಳು. 

೨೫-೨೯. ಹದಿನೆಂಟುಸಾವಿರ ಬ್ರಾಹ್ಮಣರನ್ನು ಏಕೆ ಅಲ್ಲಿ ನೆಲಸುವಂತೆ 
ಮಾಡಿದರು? ಸಕಲನಿದ್ಯೆಗಳಲ್ಲಿ ಕುಶಲರೂ, ವೇದವೇದಾಂಗಗಳನ್ನು ಸಂಪೂರ್ಣ 


೨೪ ಶ್ರೀ ಸ್ಕಾಂದಮಹಾಪುರಾಣಂ 


ಸರ್ವನಿದ್ಯಾಸು ನಿಷ್ಣಾತಾ ವೇದವೇದಾಂಗಪಾರಗಾಃ । 


ಖುಗ್ಗೇದೇಷು ಚ ನಿಷ್ಣಾತಾ ಯಜುರ್ವೇದಕೃತಶ್ರಮಾಃ 1 ೨೬ ॥ 
ಸಾಮನೇದಾಂಗಸಾರಜ್ಜಾ ಸ್ತ್ರೈನಿದ್ಯಾ ಧರ್ಮವಿಶ್ತಮಾಃ । 
ತಪೋನಿಷ್ಮಾಃ ಶುಭಾಚಾರಾಃ ಸತ್ಯವ್ರತಪರಾಯಣಾಃ ॥ ೨೭॥ 


ಮಾಸೋಪನಾಸೈಃ ಕೃಶಿತಾಸ್ತಥಾ ಚಾಂದ್ರಾಯಣಾದಿಭಿಃ । 
ಸದಾಚಾರಾಶ್ಚ ಬ್ರಹ್ಮಣ್ಯಾಃ ಕೇನ ನಿತ್ಕ್ಯೋಪಜೀವಿನಃ । 


ತತ್ಸರ್ವಮಾದಿತಃ ಕೃತ್ಸ್ನಂ ಬ್ರೂಹಿ ಮೇ ವದತಾಂ ವರ ॥ ೨೮ ॥ 
ದಾನನಾಸ್ತತ್ರ ದೈತೇಯಾ ಭೂತವೇತಾಲಸಂಭವಾಃ । 
ರಾಕ್ಟಸಾಶ್ಚ ಪಿರಾಚಾಶ್ಚ ಉದ್ದೇಜಂತೇ ಕಥಂ ನ ತಾನ್‌ ॥೨೯॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ$ರಣ್ಯಮಾಹಾತ್ಮ್ಯೇ "" ಯುಧಿಷ್ಠಿರ 
ಪ್ರಶ್ನವರ್ಣನಂ''ನಾಮ ದ್ವಿತೀಯೋಂಧ್ಯಾಯಃ 





ವಾಗಿ ಅಧ್ಯಯನಮಾಡಿದವರೂ, ಖುಗ್ರೇದಾದಿ ಮೂರು ವೇದಗಳ ಸಾರವನ್ನು 
ಬಲ್ಲವರೂ, ಧರ್ಮಜ್ಞರೂ, ಒಳ್ಳೆನಡತೆಯುಳ್ಳವರೂ, ತಪಸ್ತಿಗಳೂ, ಸತ್ಯ 
ಮತ್ತು ನಿಯಮಸರರೂ, ಒಂದು ತಿಂಗಳು ಉಪವಾಸ ಮಾಡುವುದರಿಂದಲೂ, 
ಚಾಂದ್ರಾಯಣಾದಿವ್ರತಗಳಿಂದಲೂ ಕೃಶಾಂಗರೂ, ಬ್ರಹ್ಮಜ್ಞಾನಿಗಳೂ ಆಗಿರುವ 
ಈ ಬ್ರಾಹ್ಮಣೋತ್ತಮರು ಯಾವ ವಂಶದಲ್ಲಿ ಜನಿಸಿದರು? ಪ್ರತಿದಿನವೂ 
ಇವರು ಯಾವುದರಿಂದ ಜೀವನಮಾಡುವರು? ಅವರನ್ನು ಅಲ್ಲಿರುವ ದಾನವರೂ, 
ದೈತ್ಯರೂ, ಭೂತಗಳೂ, ಬೇತಾಳಗಳೂ, ರಾಕ್ಸಸರೂ, ಪಿಶಾಚಗಳೂ ಏತಕ್ಕೆ 
ಹೆದರಿಸುವುದಿಲ್ಲ? ವಾಗ್ಮಿಯಾದ ವ್ಯಾಸನೆ! ಇದನ್ನೆಲ್ಲ ಸಂಪೂರ್ಣವಾಗಿ 
ಮೊದಲಿನಿಂದ ನನಗೆ ತಿಳಿಸು. 





ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ "" ಯುಧಿಷ್ಠಿರನ ಪ್ರಶ್ನವರ್ಣನ??ನೆಂಬ 
ಎರಡನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ತೃತೀಯೋಂಧ್ಯಾಯಃ 
ಇಂದ್ರಭಯ ಕಥನಂ 
ವ್ಯಾಸ ಉವಾಚ :-- 
ಶ್ರೂಯತಾಂ ನೃಪಶಾರ್ಮೂಲ ಕಥಾಂ ಪೌರಾಣಿಕೀಂ ಶುಭಾಂ | 
ಯಾಂ ಶುತ್ವಾ ಸರ್ವಪಾಸೇಭ್ಯೋ ಮುಚ್ಯತೇ ನಾಂತ್ರ ಸಂಶಯಃ ॥ ೧॥ 
ಏಕದಾ ಧರ್ಮರಾಜೋ ನೈ ತಪಸ್ತೇಸೇ ಸುದುಷ್ಕರಂ | 


ಬ್ರಹ್ಮನಿಷ್ಣುಮಹೇಶಾದ್ಯೈರ್ಜ ಲವರ್ಹಾತಸಪಾದಿಷಾಟ್‌ 1 ೨॥ 
ಆದೌ ತ್ರೇತಾಯುಗೇ ರಾಜನ್ವರ್ಷಾಣಾಮಯುತತ್ರಯಂ । 
ಮಧ್ಯೇವನಂ ತಪಸ್ಯಂತಮಶೋಕತರುಮೂಲಗಂ 1೩॥ 
ಶುಷ್ಕಸ್ನಾಯುಪಿನದ್ದಾಸ್ಥಿ ಸಂಚಯಂ ನಿಶ್ಚಲಾಕೃತಿಂ । 
ವಲ್ಮೀಕಕೀಟಕಾಕೋಟಶೋಷಿತಾಂಶೇಷಶೋಣಿತಂ ॥೪॥ 
ನಿರ್ಮಾಂಸಕೀಕಸಚಯಂ ಸ್ಫಟಕೋಪಲನಿಶ್ಚಲಂ ! 
ಶಂಖಕುಂದೇಂದುತುಹಿನಮಹಾಶಂಖಲಸಚ್ಛ್ಛ್ರಿಯಂ ॥೫॥ 








ಕನ್ನಡದ ಅನುವಾದ 
ಇಂದ್ರಭಯ ಕಥನ 

೧. ವ್ಯಾಸನು ಹೇಳುತ್ತಾನೆ: ನೈಪೇಂದ್ರ! ಪುರಾತನವಾದ ಈ ಶುಭ 
ಕಥೆಯನ್ನು ಕೇಳು. ಇದನ್ನು ಕೇಳಿದವನು ಈ ಲೋಕದಲ್ಲಿ ಸಮಸ್ತಪಾಸ 
ಗಳಿಂದಲೂ ಮುಕ್ತನಾಗುವನು. ಸಂದೇಹವಿ.. 

೨. ಒಂದಾನೊಂದು ವೇಳೆ ಯಮಧರ್ಮನು ಬ್ರಹ್ಮ, ವಿಷ್ಣು, ಮಹೇ 
ಶ್ವರರೇ ಮೊದಲಾದ ದೇವತೆಗಳಿಂದಲೂ ಮಾಡಲಾಗದ ಘೋರ ತಪಸ್ಸನ್ನು 
ಮಳೆ ಬಿಸಿಲು ಮೊದಲಾದವುಗಳನ್ನು ಸಹಿಸಿಕೊಂಡು ಆಚರಿಸಿದನು. 

೩-೧೨. ಅರಸ! ತ್ರೇತಾಯುಗದ ಮೊದಲುಭಾಗದಲ್ಲಿ ಮೂರು ಅಯುತ 
ವರ್ಷಗಳಕಾಲ (ಮೂವತ್ತು ಸಾವಿರವರ್ಷ) ಕಾಡಿನ ನಡುವೆ ಅಶೋಕವೃಕ್ಸದ 
ತಳದಲ್ಲಿ ತಪಸ್ಸನ್ನು ಮಾಡುತ್ತಿರುವ, ಒಣಗಿದ ನರಗಳಿಂದ ಬಿಗಿಯಲ್ಪಟ್ಟಿ 
ಅಸ್ಥಿ ಸಂಜರವುಳ್ಳವನೂ, ನಿಶ್ಚಲನೂ, ಕೋಟ್ಯಂತರ ಗೆದ್ದಲು ಹುಳುಗಳಿಂದ 
ಒಣಗಿಸಲ್ಪಟ್ಟ ಸಕಲ ರಕ್ತವುಳ್ಳ ವನೂ, ಮಾಂಸವಿಲ್ಲದ ಮೂಳೆಗಳುಳ್ಳ ವನೂ, 
ಸ್ಫಟಕಮಣಿಯಂತೆ ನಿಶ್ಚಲನೂ, ಶಂಖ, ಮಲ್ಲಿಗೆ ಹೂವು, ಹಿಮಗಳಂತೆ ಶುಭ್ರ 
ಕಾಂತಿಯುಳ್ಳವನೂ, ಸತ್ವಗುಣದಿಂದ ಪ್ರಾಣಧಾರಣಮಾಡಿಕೊಂಡಿರುವವನೂ, 
ಆಯುಸ್ಸು ಇರುವುದರಿಂದ ಮಾತ್ರ ಜೀನಿಸಿರುವವನೂ, ಉಸಿರಾಡುವುದರಿಂದ 


೨೬ ಶ್ರೀ ಸ್ಕಾಂದಮಹಾಪುರಾಣಂ 


ಸತ್ವಾಃವಲಂಬಿತಪ್ರಾಣಮಾಯುಃಶೇಷೇಣ ರಕ್ಷಿತಂ 1 


ನಿಃಶ್ವಾಸೋಚ್ಛಾಸಪವನವೃತ್ತಿಸೂಚಿತಜೀವಿತಂ ॥ ೬॥ 
ನಿಮೇಷೋನ್ಮೇಷಸಂಚಾರಸಿಶುನೀಕೃತಜಂತುಕಂ | 
ಏಿಶಂಗಿತಸ್ಸುರದ್ರಶ್ಮಿನೇತ್ರದೀಪಿತದಿಜ್ಮುಖಂ nen 
ತತ್ತಪೋಂಗ್ನಿಶಿಖಾದಾವಚುಂಬಿತನ್ಸಾನಕಾನನಂ । 
ತಚ್ಛಾಂತೃದಸುಧಾವರ್ಷಸಂಸಿಕ್ತಾಂಖಿಲಭೂರುಹಂ nen 
ಸಾಕ್ಸಾತ್ರ ಪಸ್ಕಂತನಿನ ತಪೋ ಧೃತ್ವಾ ನರಾಕೃತಿಂ । 

ನಿರಾಕೃತಿಂ ನಿರಾಕಾಂಕ್ಟಂ ಕೃತ್ವಾ ಭಕ್ತಂ ಚ ಕಾಂಚನಂ nen 
ಕುರಂಗಶಾವನೈರ್ಗಣಶೋ ಭ್ರಮುದ್ಧಿಃ ಪರಿವಾರಿತಂ । 
ನಿನಾದಭೀಷಣಾಸ್ಯೈಶ್ಚ ನನಜೈಃ ಪರಿರಕ್ಸಿತಂ ॥ ೧೦॥ 


ಏತಾದೃಶಂ ಮಹಾಭೀಮಂ ದೃಷ್ಟ್ಯಾ ದೇವಾಃ ಸವಾಸವಾಃ । 

ಧ್ಯಾಯಂತಂ ಚ ಮಹಾದೇವಂ ಸರ್ವೇಷಾಂ ಚಾಂಭಯಪ್ರದಂ ॥ ೧೧॥ 

ಬ್ರಹ್ಮಾದ್ಯಾ ದೈನತಾಃ ಸರ್ನ್ಮೇ ಕೈಲಾಸಂ ಪ್ರತಿ ಜಗ್ಮಿರೇ | 
ಇರಿಜಾತತರುಚಾ ಯಾ ಸಾಸೀನಂ ಚ ಸಹೋಮಯಾ ॥ ೧೨॥ 

ನಂದಿರ್ಭ್ಯಂಗಿರ್ಮಹಾಕಾಲಸ್ತಥಾಂನ್ಯೇ ಚ ಮಹಾಗಣಾಃ । 

ಸೃಂದಸ್ವಾನಿನಾ ಚ ಭಗವಾನ್ನಣಪಶ್ಚ ತಥೈವ ಚ। 

ತತ್ರ ದೇವಾಃ ಸಬ್ರಹ್ಮಾದ್ಯಾಃ ಸ್ವಸ್ಥಸ್ಥಾನೇಷು ತಸ್ಲಿಕೇ ॥ ೧೩ ॥ 





ತಿಳಿಯುವ ಜೀವವುಳ್ಳ ನನೂ, ಕಣ್ಣಿನ ರೆಪ್ಪೆ ಹಾಕುವುದರಿಂದ ಪ್ರಾಣಿಯೆಂದು 
ತಿಳಿಯಲು ಯೋಗ್ಯನೂ, ಹಳದಿ ಬಣ್ಣದ ಕಾಂತಿಯುಳ್ಳ ಕಣ್ಣುಗಳಿಂದ 
ಪ್ರಕಾಶಗೊಳಿಸುವ ದಿಕ್ಕುಗಳುಳ್ಳವನೂ, ತನ್ನ ತಸಸ್ಸಿನ ಅಗ್ಲಿಜ್ವಾಲೆಯಿಂದ 
ಬಾಡಿದ ಕಾಡುಗಳುಳ್ಳವನೂ, ಕಾಡು ತಣಿಯಲು ನೀರಿನ ಮಳೆಯನ್ನು ಸುರಿಸಿ 
ಅದರಿಂದ ನೆನೆಯಿಸಿದ ಎಲ್ಲ ಮರಗಳುಳ್ಳ ವನೂ, ಅನಿರ್ವಚನೀಯ ಭಕ್ತಿಯಿಂದ 
ಯಾವದೊಂದು ಫಲಾಪೇಕ್ಷೆಯಿಲ್ಲದೆ ತಪಸ್ಸೇ ಮನುಷ್ಯದೇಹಧಾರಿಯಾಗಿ 
ತಪಸ್ಸನ್ನು ಆಚರಿಸುವುದೊ ಎಂಬಂತಿರುವವನೂ, ಹಿಂಡು ಹಿಂಡಾಗಿ ಜಿಂಕೆ 
ಮರಿಗಳಿಂದ ಸುತ್ತುವರಿಯಲ್ಪಟ್ಟವನೂ, ಭಯಂಕರವಾಗಿ ಘರ್ಜಿಸುತ್ತಿರುವ 
ಕಾಡಿನ ಪ್ರಾಣಿಗಳಿಂದ ರಕ್ಸಿತನೂ, ಸಮಸ್ತರಿಗೂ ಅಭಯದಾನ ಮಾಡುವ 
ಮಹಾದೇವನ ಧ್ಯಾನದಲ್ಲಿ ಮಗ್ಗನೂ ಆಗಿರುವ ಭಯಂಕರನಾದ ಧರ್ಮರಾಜ 
ನನ್ನು ಬ್ರಹ್ಮಾದಿ ದೇವತೆಗಳು ಕಂಡು ಕೈಲಾಸಕ್ಕೆ ತೆರಳಿ, ಅಲ್ಲಿ ದೇನಿಯೊಡನೆ 
ಪಾರಿಜಾತ ಮರದ ನೆರಳಲ್ಲಿ ಸುಖಾಸೀನನಾದ ಮಹಾದೇವನನ್ನು ಸವಿಸಾಪಿ 
ಸಿದರು, 

೧೩. ಅಲ್ಲಿ ನಂದಿ, ಭೃಂಗಿ, ಮಹಾಕಾಲ ಮೊದಲಾದ ಮಹಾಗಣಗಳೂ, 


ತೃತೀಯೋಂಧ್ಯಾಯಃ ೨೭ 





ಬ್ರಹ್ಮೋವಾಚ; 

ನನೋಂಸ್ತನಂತರೂಪಾಯ ನೀಲಕಂಠ ನಮೋಸ್ತುತೇ । 
ಅನಿಜ್ಞಾತಸ್ಸರೂಷಾಯ ಕೈನಲ್ಯಾಯಾಂ ಮೃತಾಯ ಚ ॥ ೧೪ ॥ 
ನಾಂಂತಂ ದೇವಾ ವಿಜಾನಂತಿ ಯಸೃ ತಸ್ಮೈ ನನೋ ನಮಃ । 
ಯಂ ನ ವಾಚಃ ಪ್ರಶಂಸಂತಿ ನಮಸ್ತೃಸ್ಮೈ ಚಿದಾತ್ಮನೇ ॥ ೧೫ ॥ 
ಯೋಗಿನೋ ಯಂ ಹೃದಃಕೋಶೇ ಪ್ರಣಿಧಾನೇನ ನಿಶ್ಚಲಾಃ । 
ಜ್ಯೋತೀರೂಪಂ ಪ್ರಪಶ್ಯಂತಿ ತಸ್ಮೈ ಶ್ರೀ ಬ್ರಹ್ಮಣೇ ನಮಃ ॥ ೧೬॥ 
ಕಾಲಾಶ್ಚರಾಯ ಕಾಲಾಯ ಸ್ವೇಚ್ಛಯಾ ಪುರುಷಾಯ ಚ! 
ಗುಣತ್ರಯಸ್ವರೂಪಾಯ ನಮಃ ಪ್ರಕೃತಿರೂಪಿಣೇ I ೧೭ ॥ 
ವಿಷ್ಣ ನೇ ಸತ್ತ್ಯರೂಸಾಯ ರಜೋರೂಪಾಯ ವೇಧಸೇ! 
ತನಕ ರುದ್ರಾಯ ಸ್ಥಿ ತಿಸರ್ಗಾಂಂತಕಾರಿಣೇ ॥ ೧೮ ॥ 
ನನೋ ಬುದ್ಧಿ ಸ್ವ ಪ ತ್ರಿಥಾಹಂಕಾರರೂಪಿಣೇ | 
ಸಂಚತನ್ಮಾ: ತ್ರ ಬಾ ಸಮಃ ಪ್ರ ಕೃ ತಿರೂಪಿಣೇ ॥೧೯॥ 
ಕುಮಾರಸ್ವಾಮಿಯೂ, ಗಣೇಶನೂ ತಾ ಬ್ರಹ್ಮಾದಿ ದೇವತೆಗಳೂ 
ಅಲ್ಲಿ ಹೋಗಿ ಕುಳಿತರು. 

೧೪. ಬ್ರ ಹ್ಮನು ಹೇಳುತ್ತಾನೆ: ನಾನಾ ರೂಸನೂ, ತಿಳಿಯಲಾಗದ 


ಸ್ವರೂಪವುಳ್ಳ ವನೂ, ನಿರ್ನಿಕಲ್ಪನೂ, ಶಾಶ್ವತನೂ ಆಗಿರುವ ಓ ಮಹಾದೇವ! 
ನ್ನ ನ್ಸು ಸಿ. 

೧೫. ಜ್ಞಾನಸ್ವರೂಪನೂ, ವಾಚಾಮಗೋಚರನೂ, ದೇನತೆಗಳೂ 
ತಿಳಿಯದ ಅವಸಾನವುಳ್ಳವನೂ ಆಗಿರುವ ನಿನಗೆ ನಮಸ್ಕಾರವು. 

೧೬. ಯೋಗಿಗಳು ವಿಶ ಶೃ ಲಧ್ಯಾನದಿಂದ ಹೃದಯಕಮಲದಲ್ಲಿ ಕಾಣು 

ತ್ರಿರುವ ಪ್ರಕಾಶರೂಪನಾದ ಪರಮೇಶ್ವ ರ! ನಿನಗೆ ನಮಸ್ಕಾರವು. 

೧೭. ಕಾಲಕ್ಕಿ ೦ತ EEN ಕಾಲರೂಪನೂ, ಇಷ್ಟ ದಂತೆ ದೇಹ 
ವನ್ನು ತ್ನ ತ್ರಿಗುಣಸ್ವರೂಪನೂ, ಪ್ರಕೃತಿರೂಪಿಯೂ ಆಗಿರುವ 
ನೀಲಕಂಠ! ನಿನಗೆ ನಮಸ್ಕಾರವು. 

೧೮. ಸತ್ವಗುಣರೂಪನಾದ ವಿಷ್ಣುವಾಗಿ ಪ್ರಪಂಚವನ್ನು ಪಾಲಿಸುವ, 
ರಜೋಗುಣರೂಪನಾದ ಬ್ರಹ್ಮನಾಗಿ ಸೃಷ್ಟಿಸುವ, ತಮೋಗುಣರೂಪನಾದ 
ರುದ್ರನಾಗಿ ನಾಶಗೊಳಿಸುವ ಓ ಮಹಾದೇವ! ಸಿನಗೆ ನಮಸ್ಕಾರವು. 

೧೯. ಬುದ್ದಿಸ್ನ ೈರೂಸನೂ, ತಿ ತ್ರಿನಿಧಾಹಂಕಾರರೂಸನೂ, ಸೃಧಿ ವ್ಯಾದಿ 
ಸಂಚತನ್ಮಾತ್ರ ರೂಸ ಹ ರ್ರಕೃತಿಸ್ವ ರಾಜ ಆಗಿರುವ ಮಹೇಶ್ವರ! ನಿನಗೆ 
ನಮಸ್ಕಾರವು. 


೨೮ ಶಿ 


ಶ್ರೀ ಸ್ಫಾಂದಮಹಾಪುರಾಣಂ 


ನನೋ ನಮಃ ಸ್ವರೂಸಾಯ ಸಂಚಬುದ್ಧೀಂದ್ರಿಯಾತ್ಮನೇ | 


ಕ್ಸಿತ್ಯಾದಿ ಸಂಚರೂಪಾಯ ನಮಸ್ತೇ ನಿಷಯಾತ್ಮನೇ nu ೨೦॥ 
ನಮೋ ಬ್ರಹ್ಮಾಂಡರೂಪಾಯ ತದಂತರ್ವರ್ಶಿನೇ ನಮಃ । 
ಅರ್ವಾಚೀನಪರಾಚೀನವಿಶ್ಚರೂಸಾಯ ತೇ ನಮಃ 1 ೨೧॥ 
ಅನಿತ್ಯನಿತ್ಯರೂಪಾಯ ಸದಸತ್ಸತಯೇ ನಮಃ । 

ನಮಸ್ತೇ ಭಕ್ತಕೃಪಯಾ ಸ್ಕೇಚ್ಛಾನಿಷೃತನಿಗ್ರಹ ॥ ೨೨ ॥ 
ತನ ನಿಶ್ಚಸಿತಂ ವೇದಾಸ್ತನ ನೇದೋಂಖಲಂ ಜಗತ್‌ । 

ವಿಶ್ವಾ ಭೂತಾನಿ ತೇ ಪಾದಃ ಶಿರೋ ದ್ಯೌಸ್ಸಮವನರ್ತತ ॥ ೨೩ ॥ 


ನಾಭ್ಯಾ ಆಸೀದಂತರಿಕ್ಸುಂ ಲೋಮಾನಿ ಚ ನನಸ್ಪತಿಃ 1 
ಚಂದ್ರಮಾ ಮನಸೋ ಜಾತಶ್ಚಕ್ಸೋಃ ಸೂರ್ಯಸ್ತವ ಪ್ರಭೋ ॥ ೨೪ ॥ 
ತ್ವಮೇವ ಸರ್ವಂ ತ್ವಯಿ ದೇವ ಸರ್ವಂ 
ಸರ್ವಸ್ತುತಿಸ್ತವ್ಯ ಇಹ ತ್ವಮೇವ । 
ಈಶ ತ್ವಯಾ ವ್ಯಾಪ್ತಮಿದಂ ಹಿ ಸರ್ವಂ 
ನನೋಂಸ್ತು ಭೂಯೋಂಪಿ ನಮೋ ನಮಸ್ತೇ ॥೨೫॥ 





೨೦. ಮನಸ್ಸು, ಪಂಚೇಂದ್ರಿಯಗಳು, ಬುದ್ಧಿ, ಭೂಮ್ಯಾದಿ ಪಂಚ 
ಭೂತಗಳು, ರೂಪಾದಿ ವಿಷಯಗಳು ಇವುಗಳ ಸ್ವರೂಪನಾದ ಮಹಾದೇವ! 
ನಿನಗೆ ನಮಸ್ಕಾರವು. 

೨೧. ಬ್ರಹ್ಮಾಂಡರೂಸನೂ, ಆ ಬ್ರಂಹ್ಮಾಂಡದೊಳಗಡಗಿರುವವನೂ, 
ಇಂದಿನ ಮತ್ತು ಹಿಂದಿನ ಪ್ರಸಂಚಗಳ ಸ್ವರೂಪನೂ ಆಗಿರುವ ಮಹಾದೇವ! 
ನಿನಗೆ ನಮಸ್ಕಾರವು. 

೨೨. ಫಿತ್ಯಾನಿತ್ಯಸ್ವರೂಪನೂ, ಸತ್‌ ಮತ್ತು ಅಸದ್ರೂಪವಾದ ವಸ್ತು 
ಗಳಿಗೆ ಒಡೆಯನೂ, ಭಕ್ತರಮೇಲಿನ ದಯೆಯಿಂದ ತನ್ನಿಷ್ಟದಂತೆ ತನ್ನ ಮೂರ್ತಿ 
ಯನ್ನು ತೋರಿಸುವವನೂ ಆಗಿರುವ ನೀಲಕಂಠ! ನಿನಗೆ ನಮಸ್ಕಾರವು. 

೨೩. ನಿನ್ನ ಉಸಿರೇ ವೇದಗಳು. ನಿನ್ನ ವೇದಗಳೇ ಸಕಲಪ್ರಪಂಚ 
ಗಳು. ನಿನ್ನ ನಾದವೇ ಸಕಲ ಪ್ರಾಣಿಗಳು. ನಿನ್ನ ತಲೆಯೇ ಆಕಾಶವಾಗಿದೆ. 

೨೪. ಸ್ವಾಮಿ! ನಿನ್ನ ಹೊಕ್ಕಳಿನಿಂದ ಅಂತರಿಕ್ಸವೂ, ರೋಮಗಳಿಂದ 
ವೃಕ್ಸಗಳೂ, ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ ಹುಟ್ಟಿದರು. 

೨೫. ಈಶ್ವರ! ಎಲ್ಲವೂ ನೀನೇ. ನಿನ್ನಲ್ಲಿಯೇ ಎಲ್ಲವೂ ಇರುವುವು. 
ಸ್ತೋತ್ರವೂ, ಸ್ತೋತ್ರಮಾಡಿಸಿಕೊಳ್ಳುವವನೂ ನೀನೇ. ಈ ಸಮಸ್ಕ ಜಗತ್ತು 
ಗಳಲ್ಲಿಯೂ ನೀನು ಅಂತರ್ಯಾಮಿಯಾಗಿರುವೆ. ನಿನಗೆ ಪುನಃ ಪುನಃ ನಮಸ್ಕಾರವು. 


ತೃತೀಯೋಂಧ್ಯಾಯಃ ೨೯ 


ಇತಿ ಸ್ತುತ್ವಾ ಮಹಾದೇವಂ ನಿಸೇತುರ್ದಂಡನತ್ಮಿತೌ । 

ಪ್ರತ್ಯುವಾಚ ತದಾ ಶಂಭುರ್ವರದೋ ಸಿ ಕಿಮಿಚ್ಛತಿ ॥ ೨೬ಓ 
ನಾಕ ಉವಾಚ :-- 

ಕಥಂ ವ್ಯಗ್ರಾಃ ಸುರಾಃ ಸರ್ವೇ ಬೃಹಸ್ಪತಿಪುರೋಗಮಾಃ | 

ತತ್ಸಮಾಚಕ್ಟ್ಚ ಮಾಂ ಬ್ರಹ್ಮನ್ಸನತಾಂ ದುಃಖಕಾರಣಂ ॥ ೨೭॥ 
ಬ್ರಹ್ಮೋವಾಚ: 

ನೀಲಕಂಠ ಮಹಾದೇನ ದುಃಖನಾಶಾಂಭಯಪ್ರದ । 

ಶೃಣು ತ್ವಂ ದುಃಖಮಸ್ಮಾಕಂ ಭವತೋ ಯದ್ದದಾಮ್ಯಹಂ ॥ ೨೮ ॥ 

ಸರ್ಮರಾಜೋಸಿ ಧರ್ಮಾತ್ಮಾ ತಪಸ್ತೇಪೇ ಸುದುಃಸಹಂ । 

ಕಿಮಿಚ್ಛ ತಿನ ಜಾನೇಸೌ ದೇವಾನಾಂ ಪದಮುತ್ತಮಂ ॥ ೨೯॥ 

ತೇನ ತ್ರಸ್ತಾತ್ತತ್ತಸ ಪಸಾ ಸರ್ವ ಇಂದ್ರಪುರೋಗಮಾಃ । 

ಭವತೋಂಘ್ರಿ ಚಿರೇಣೈನ ಮನಸ್ತೇನ ಸಮರ್ಸಿತಂ | 

ತಮುತ್ನಾ ಪಯ ದೇವೇಶ *ಮಿಚ್ಛತಿ ಸ ಧರ್ಮುರಾಟ್‌ ॥ ೩೦ ॥ 
ಈಶ್ವರ ಉವಾಚ :- 


ಭವತಾಂ ನಾಸ್ತಿ ನು ಭಯಂ ಧರ್ಮಾತ್ಸತ್ಯಂ ಬ್ರನೀಮ್ಯಹಂ ॥ ೩೧॥ 





ನು ಸ್ತು ತಿಸಿ ನೆಲದ 
ಮೇಲೆ ಸಾಷ್ಟಾಂಗ ಪ್ರ ಪ್ರಣಾನುಂಗೈ ದರು. ಆಗ ಪರಮೇ ಶ್ವರನು « ಫಿಮಗೆ 
ವರದಾನಮಾಡಲು ಉದ್ಯುಕ್ತನಾಗಿದ್ದೆ ನೆ. ನಿಮ್ಮ ಅಭೀಪ್ಲ್ಸಿ ತವೇನು??' 
ಎಂದು ಕೇಳಿದನು. 

೨೭. ಮಹಾದೇವನು ಕೇಳುತ್ತಾನೆ :--ನಿತಾಮಹ! ಬೃಹಸ್ಪತಿ ಮೊದ 
ಲಾದ ಸಕಲ ದೇವತೆಗಳು ತವಕಿಸುತ್ತಿದ್ದಾರಸ್ಟೆ. ನಿಮ್ಮ ದುಃಖಕ್ಕೆ ಕಾರಣ 
ವೇನು? ಸಿ 

೨೮. ಬ್ರಹ್ಮನು ಹೇಳುತ್ತಾನೆ: ಮಹಾದೇವ! ನಮ್ಮ ದುಃಖವನ್ನು 
ನಿವಾರಿಸಲು Ri ಅಭಯದಾನ ಮಾಡಿದ್ದೀಯೆ. ನಿನಗೆ ನಮ್ಮ ದುಃ ಖವನ್ನು. 
ತಿಳಿಸುವೆನು, ಕೇಳು. i 

೨೯-೩೦. ಧರ್ಮಾತ್ಮನಾದ ಯಮಧರ್ಮನು ಘೋರತಪಸ್ಸನ್ನು ಮಾಡು 

ತ್ರಿದ್ದಾ ನೆ. ಇವನು ದೇವತೆಗಳ ಉತ್ತಮ ಪದವಿಯನ್ನು ಬಯಸುವನೊ ಏನೊ 
ನಾನರಿಯೆ. ಅವನ ಆ ತಸಸ್ಪಿನಿಂದ ಚಲಿತರಾದ ಇಂದ್ರಾದಿ ದೇವತೆಗಳು ಬಹು 
ಕಾಲದಿಂದ ನಿನ್ನಡಿಯಲ್ಲಿ ಮನಸ್ಸ ನಿಟ್ಟಿರುವರು. ಶಂಭೊ! ಆ ಧರ್ಮನು 
ಬಯಸುವುದನ್ನು ಅವನಿಗಿತ್ತು ಹ ತಪಸ್ಸಿನಿಂದ ಎಚ್ಚ ರಗೊಳಿಸು. 

೩೧. ಈಶ್ವರನು ಭತ ತಲಗ ಹೇಳುತ್ತೇನೆ. ನಿಮಗೆ 
ಆ ಧರ್ಮನಿಂದ ಹೆದರಿಕೆಯಿಲ್ಲ. 


೨೬. ಹೀಗೆ ಬ ್ರಿಹ್ಮಾದಿ ದಿವಿಜ ರು ಮಹಾದೇವನನು 


» 


೩೦ ಶ್ರೀ ಸ್ಕಾಂದಮಹಾಪುರಾಣಂ 


ತತ ಉತ್ಥಾಯ ತೇ ಸರ್ನೇ ದೇವಾಃ ಸಹದಿವೌಕಸಃ । 


ಇದ್ರಂ ಪ್ರದಕ್ಸಿಣೇಕೃತ್ಯ ನಮಸ್ಕೃತ್ವಾ ಪುನಃ ಪುನಃ ॥೩೨॥ 
ಇಂದ್ರೇಣ ಸಹಿತಾಃ ಸರ್ವೇ ಕೈಲಾಸಾತ್ಪುನರಾಗತಾಃ । 

ಸ್ವಸ್ತಸ್ಥಾನೇ ತದಾ ಶೀಘ್ರಂ ಗತಾಃ ಸರ್ವೇ ದಿವೌಕಸಃ ॥ ೩೩ ॥ 
ಇಂದ್ರೋಪಿ ನೈ ಸುಧರ್ಮಾಯಾಂ ಗತವಾನ್ರ್ರಭುರೀಶ್ವರಃ | 

ನ ನಿದ್ರಾಂ ಲಬ್ಧವಾಂಸ್ತೃತ್ರ ನ ಸುಖಂನ ಚ ನಿರ್ವೃತಿಂ ॥ ೩೪॥ 
ಮನಸಾ ಚಿಂತಯಾಮಾಸ ವಿಘ್ನಂ ಮೇ ಸಮುಪಸ್ಥಿತಂ | 

ಅವಾಪ ಮಹತೀಂ ಚಿಂತಾಂ ತದಾ ದೇವಃ ಶಜೀಪತಿಃ 1 ೩೫ ॥ 
ಸುಮ ಸ್ಥಾನಂ ಪರಾಹರ್ತುಂ ತಪಸ್ತೇಪೇ ಸುದುಶ್ಚರಂ | 
ಸರ್ವಾನ್ಹೇನಾನ್ಸನಮಾಹೂಯ ಇದಂ ನಚನಮುಬ್ರನೀತ್‌ ॥ ೩೬॥ 


ಇಂದ್ರ ಉವಾಚ :-- 
ಶೃಣ್ಣಂತು ದೇವತಾಃ ಸರ್ವಾ ಮನು ದುಃಖಸ್ಯ ಕಾರಣಂ । 
ದುಃಖೇನ ಮಮ ಯಲ್ಲಬ್ನಂ ತತ್ಕಿಂ ವಾ ಪ್ರಾರ್ಥಯೇದ್ಯಮಃ । 
ಬೃಹಸ್ಪತಿಃ ಸಮಾಲೋಕ್ಕ್ಯ ಸರ್ವಾನ್ಹೇವಾನಥಾಂ ಬ್ರವೀತ್‌ ॥೩೭॥ 
ಬೃಹಸ್ಪತಿರುವಾಚ: 
ತಪಸೇ ನಾಸ್ತಿ ಸಾಮರ್ಥ್ಯಂ ವಿಘ್ನುಂ ಕರ್ತುಂ ದಿವೌಕಸಃ । 
ಉರ್ವಶ್ಯಾದ್ಯಾಃ ಸಮಾಹೂಯ ಸಂಪ್ರೇಷ್ಯಂತಾಂ ಚ ತತ್ರ ವೈ ॥೩೮॥ 








೩೨-೩೩. ಬಳಿಕ ದೇವಲೋಕವಾಸಿಗಳಾದ ದೇವತೆಗಳೆಲ್ಲ ಇಂದ್ರ ನೊಡನೆ 
ರುದ್ರನಿಗೆ ಪ್ರದಕ್ಸಿಣ ನಮಸ್ಕಾರಗಳನ್ನು ಅನೇಕಬಾರಿ ಮಾಡಿ ಕೈಲಾಸದಿಂದ 
ಜಾಗ್ರತೆಯಾಗಿ ತಮ್ಮತಮ್ಮ ಸ್ಥಳಗಳಿಗೆ ಹಿಂದಿರುಗಿದರು. 

೩೪-೩೬. ದೇವೇಶ್ವರನಾದ ಇಂದ್ರನು ಸುಧರ್ಮಾ ಎಂಬ ತನ್ನ ಸಭೆ 
ಯನ್ನು ಸೇರಿ ಅಲ್ಲಿ ನಿದ್ರೆಯನ್ನೂ, ಸೌಖ್ಯವನ್ನೂ, ಮನಸ್ಸಿಗೆ ನೆಮ್ಮದಿಯನ್ನೂ 
ಹೊಂದಲಿಲ್ಲ. ಶಚೀಪತಿಯಾದ ಶಕ್ರನು ಆಗ ತನಗೆ ವಿಘ್ನವು ಸಂಭವಿಸಿ 
ತೆಂದು ಆಲೋಚಿಸಿದನು. ಅಂತೆಯೇ ಈ ಧರ್ಮನು ನನ್ನ ಪದವಿಯನ್ನು 
ಅಸಹರಿಸುವುದಕ್ಕಾಗಿ ಘೋರತಪಸ್ಸನ್ನಾಚರಿಸಿರುವನೆಂದು ಚಿಂತಾಕ್ರಾಂತ 
ನಾದನು. ಆದ್ದರಿಂದ ಸಕಲ ದೇವತೆಗಳನ್ನೂ ಕರೆದು ಈ ಮಾತನ್ನುಸುರಿದನು. 

೩೭. ಇಂದ್ರನುಹೇಳುತ್ತಾನೆ:--""ಎಲೈ ದೇವತೆಗಳಿರಾ! ಕೇಳಿ. ನಾನು 
ಕಷ್ಟಪಟ್ಟು ಸಂಪಾದಿಸಿದ ಈ ದೇವರಾಜಪದವಿಯನ್ನು ಯಮನು ಅಪಹರಿಸುವ 
ನೆಂದು ಬಹಳ ದುಃಖಪಡುತ್ತಿದ್ದೇನೆ.?' ಶಕ್ರನು ಹೀಗೆ ಹೇಳಲು ಬ್ರಹಸ್ಪ ತ್ಯಾ 
ಚಾರ್ಯನು ಎಲ್ಲ ದೇವತೆಗಳನ್ನು ಈಕ್ಸಿಸಿ ಇಂತೆಂದನು. 

೩೮. ಬೃಹಸ್ಪತಿಯು ಹೇಳುತ್ತಾನೆ: ಡೇವತೆಗಳಿರಾ! ಧರ್ಮ 


ತೃತೀಯೋಕಿಧ್ಯಾಯಃ ತಿ 


ತಾಸಾಮಾಕಾರಣಾರ್ಥಾಯ ಪ್ರತಿದ್ವಾರಂ ಪ್ರತಸ್ಥಿ ನಾನ್‌ । 
ಸ ಗತ್ವಾ ತಾಃ ಸಮಾದಾಯ ಸಭಾಯಾಂ ಶೀಘ್ರಮಾಯಯೌ ॥ ೩೯॥ 
ಅಗತಾಸ್ತಾ ಹರಿಃ ಪ್ರಾಹ ಮಹತ್ಕಾರ್ಯಮುಸೆಸ್ಮಿ ತಂ | 





ಗಚ್ಛ ಂತು ತ್ವರಿತಾಃ ಸರ್ನಾ ಧರ್ಮಾಃರಣ್ಯಂ ಪ್ರತಿ ದ್ರುತಂ 1೪೦॥ 

ಯತ್ರ ವೈ ದರ್ಮರಾಜೋಂಸೌ ತಪಶ್ಚ ಕ್ರೇ ಸುದುಷ ರಂ I 

ಹಾಸ್ಯಭಾವಕಟಾಕ್ಸ್ಮೈಶ್ಚ ಗೀತನೃತ್ಯಾದಿಭಿಸ್ತಥಾ n von 

ತಂ ಲೋಭಯದಧ್ವಂ ಯಮಿನಂ ತಪಃಸ್ಮಾನಾಚ್ಚ್ಯುತಿರ್ಭವೇತ್‌ | 

ದೇವಸ್ಯ ವಚನಂ ಶ್ರುತ್ವಾ ತಥಾ ಅಪ್ಸರಸಾಂ ಗಣಾಃ ॥ ೪೨॥ 

ಮಿಥಃ ಸಂರೇಭಿರೇ ಕರ್ತುಂ ವಿಚಾರ್ಯ ಚೆ ಪರಸ್ಪರಂ [ 

ಧರ್ಮಾಃರಣ್ಯಂ ಸತ ಸಸ ವುರ್ವಶೀ ಸ್ಪರ್ವರಾಂಗನಾ 1 ೪೩॥ 

ತುಷ್ಟುವುಃ ಪುಷ್ಪವರ್ಷಾಂಶ್ಚ ಸಸೃಜುಸ್ತಚ್ಛಿರಸ್ಯವಿನಾ । 

ತತಸ್ತು, ದೇನೈ ರ್ನಿಪ್ಟೈ ಶ್ಚ ಸ್ತೂ ಬರೂ 1ನ 6ತತಃ ॥ ೪೪ ॥ 

ನಿರ್ಯಯೌ "ಇರವಪಿ ತ್ಯಾ ವನಂ ಹರಮಸಾವನಂ । 

ಬಿಲ್ದ್ಯಾ I ಬಂ ಕೆಪಿತೃಧವಸಂಕುಲಂ 1 ೪೫ ॥ 
ಪಸ್ಸನ್ನು ಕೆಡಿಸಲು ಸಾಮರ್ಥ್ಯವಿಲ್ಲವೆ? ಉರ್ವಶ್ಯಾದಿ ಸ್ಸರಸ್ತ್ವಿ ನ್ನು 


| ಆ ಧರ್ಮನೆಡೆಗೆ ಕಳುಹಿಸಿರಿ.” 

೩೯, ಆ ಉರ್ವಶೀ ಮೊದಲಾದವರನ್ನು ಕರೆತರುವುದಕ್ಕಾಗಿ ಹೊರಟ 
ಬೃಹಸ್ಪತಿಯು ಆ ಸ್ತ್ರೀಯರನ್ನು ಕರೆದುಕೊಂಡು ಸಭೆಗೆ ಜಾಗ್ರತೆಯಾಗಿ 
ಬಂದನು. 

೪೦. ಆಸಿ ಸ್ತ್ರೀಯರು ಬರಲು ದೇವೇಂದ್ರನು ಅವರನ್ನು ಕುರಿತು, "" ದೊಡ್ಡ ಸ 
ದೊಂದು ಕೆಲಸ ತ ಒದಗಿದೆ. ನೀವು ಶೀಘ್ರವಾಗಿ ಧರ್ಮಾರಣ್ಯಕ್ಕೆ ಹೊರಡಿ. 

೪೧-೪೩. ಧರ್ಮಾರಣ್ಯದಲ್ಲಿ ಧರ್ಮನು ಘೋರತನಸಸ್ಸನ್ನು ಮಾಡುತ್ತಿ 
ದ್ದಾನೆ. ಜಿತೇಂದ್ರಿಯನಾದ ಅವನನ್ನು ನಿಮ್ಮ ಹಾವಭಾವಕಟಾಕ್ಟೃಗಳಿಂದಲೂ, 
ಗೀತನರ್ತನಾದಿಗಳಿಂದಲೂ ಮೋಹಗೊಳಿಸಿ ತಪೋವಿಮುಖನನ್ನಾಗಿ ಮಾಡಿರಿ]? 
ಎಂದನು. ಶಕ್ರನು ಇಂತು ಆಜ್ಞಾಪಿಸಲು ಆ ಅಪ್ಪರಸ್ತ್ರೀಯರು ಅವನ 
ಮಾತನ್ನು ಕೇಳಿ ನರಸ್ಪರ ಆಲೋಚಿಸಿ ಧರ್ಮಾರಣ್ಯಕ್ಕೆ ' ಉರ್ವಶಿಯನ್ನು 
ಕಳುಹಿದರು. 

೪೪-೫೧. ಈ ಅಪ್ಪರಸ್ತ್ರೀಯರು ಆ ಉರ್ವಶಿಯನ್ನು ಸ್ತುತಿಸಿ ಮಸ್ತಕ 
ದಲ್ಲಿ ಹೂಮಳೆಗರೆದರು. ಬಳಿಕ ದೇವತೆಗಳೂ ದ್ವಿಜರೂ ಎಲ್ಲೆ ಡೆಯಲ್ಲಿಯೂ 
ಹೊಗಳಲು ಸಂತೋಷಗೊಂಡ ಉರ್ವಶಿಯು ಅಸ್ಸರಸ್ತ್ರಿ «ಯಕೊಡಕನೆ ಬಿಲ್ವ, 
ಎಕ್ಕೆ, ಖದಿರ, ಬೇಲ, ಧವವೆಂಬ ವೃಕ್ಷ ಗಳಿಂದ ANE 


a ಶ್ರೀ ಸ್ಕಾಂದಮಹಾಪುರಾಣಂ 


ನ ಸೂರ್ಯೋ ಭಾತಿ ತತ್ರೈವ ಮಹಾಂಧಕಾರಸಂಯುತಂ । 


ನಿರ್ಜನಂ ನಿರ್ಮನುಷ್ಯಂ ಚ ಬಹುಯೋಜನಮಾಯತಂ ॥ ೪೬॥ 
ಮೃಗೈಃ ಸಿಂಹೈರ್ನ್ವತಂ ಘೋರೈರನ್ಯೈಶ್ವಾಪಿ ನನೇಚರೈಃ । 

ಪುಷ್ಪಿತೈಃ ಸಾದಸೈಃ ಕೀರ್ಣಂ ಸುಮನೋಹರಶಾದ್ವಲಂ ॥೪೭॥ 
ವಿಪುಲಂ ಮಧುರಾನಾದೈರ್ನಾದಿತಂ ನಿಹಗೈಸ್ತಫಾ । 

ಪುಂಸ್ಕೋಕಿಲ ನಿನಾದಾಢ್ಯಂ ರಿುಲ್ಲೀಕ ಗಣನಾದಿತಂ ॥ ೪೪ ॥ 


ಪ್ರವೃದ್ಧನಿಕಟೈರ್ನ್ಯಸ್ಸೈಃ ಸುಖಚ್ಛಾಯೈಃ ಸಮಾವೃತಂ । 
ವೃಕ್ಸೈರಾಚ್ಛಾದಿತತಲಂ ಲಕ್ಟ್ಮ್ಮ್ಯಾ ಪರಮಯಾ ಯುತಂ ॥1೪೯॥ 
ನಾಂಪುಷ್ಪಃ ಸಾದಪಃ ಕಶ್ಚಿನ್ನಾಃಫಲೋ ನಾಪಿ ಕಂಟಿಕೀ। 
ಸಟ್ಟದೈರಪ್ಯನಾಕೀರ್ಣಂ ನಾಂಸ್ಕಿನ್ಸೈ ಕಾನನೇ ಭವೇತ್‌ ॥೫೦॥ 
ವಿಹಂಗೈರ್ನಾದಿತಂ ಪುಸ್ಸೈರಲಂಕೃತಮತೀನವ ಹಿ । 
ಸರ್ವರ್ತುಕುಸುಮೈರ್ವ್ವಕ್ಸ್ಸೈಃ ಸುಖಚ್ಛಾಯೈಃ ಸಮಾವೃತಂ ॥೫೧॥ 
ಮಾರುತಾಕಲಿತಾಸ್ಕತ, ದಮೃುಮಾಃ ಕುಸುಮಶಾಖನಃ । 


ಮಲ ಬಲ 
ಪುಷ್ಪವೃಷ್ಟಿಂ ನಿಚಿತ್ರಾಂ ತು ನಿಸ್ಫಜಂತಿ ಚ ಸಾದಪಾಃ ॥ ೫೨ ॥ 
ದಿನಸ್ಸೃಶೋಥ ಸಂತುಷ್ಟಾಃ ಪಕ್ಸಿಭಿರ್ಮಥಧುರಸ್ವನೈಃ । 
ವಿರೇಜುಃ8 ಪಾದಪಾಸ್ತತ್ರ ಸುಗಂಧಕುಸುಮೈರ್ವ್ಯತಾಃ ॥ ೫೩ ॥ 





ಸೂರ್ಯನ ಬಿಸಿಲು ಬೀಳದಿರುವುದರಿಂದ ಹೆಗ್ಗತ್ತಲೆಯುಳ್ಳುದೂ, ನಿರ್ಜನವೂ, 
ಅನೇಕಗಾವುದ ವಿಶಾಲವೂ, ಜಿಂಕೆ, ಹಿಂಸ್ರಸಿಂಹಗಳು, ಇತರ ವನಜಂತು 
ಗಳು--ಇವುಗಳುಳ್ಳುದೂ, ಹೂಬಿಟ್ಟರುವ ಮರಗಳುಳ್ಳುದೂ, ರಮ್ಯವಾದ 
ಹುಲ್ಲು ಮೈದಾನವುಳ್ಳುದೂ, ಇಂಪಾಗಿ ದನಿಗೈವ ಹಕ್ಕಿಗಳ ಧೃನಿಯುಳ್ಳು ದೂ, 
ಗಂಡುಕೋಗಿಲೆ ಮತ್ತು ಮಿಲ್ಲಿ ಎಂಬ ಹುಳುಗಳ ಸ್ವರಗಳಿಂದ ರಮ್ಯವಾದುದೂ, 
ಉನ್ನತವಾಗಿ ಬೆಳೆದು ನೆರಳನ್ನೀಯುವ ಮರಗಳುಳ್ಳುದೂ, ಮರಗಳಿಂದ 
ಮುಟ್ಟಿದ ಆಕಾಶತಳವುಳ್ಳುದೂ, ಅತಿ ಪ್ರಕಾಶಮಾನವಾದುದೂ, ಹೂವು ಹಣ್ಣು 
ದುಂಬಿಗಳಿಂದಲಂಕೃತವಾಗಿ ಮುಳ್ಳಿಲ್ಲದ ಮರಗಳುಳ್ಳುದೂ, ಸಕಲ ಖುತು 
ಗಳಲ್ಲಿಯೂ ಹೂವುಗಳನ್ನು ಬಿಡುವ ವೃಕ್ಸಗಳಿಂದ ಶೋಭಿತವೂ ಆಗಿರುವ 
ಆ ಧರ್ಮಾರಣ್ಯಕ್ಕೆ ಹೊರಟಳು. 

೫೨, ಅಲ್ಲಿ ಹೂಮರಗಳು ಗಾಳಿಯಿಂದ ಚಲಿಸುತ್ತ ಅದ್ಭುತವಾದ 
'ಹೂಮಳೆಗರೆಯುತ್ತಿದ್ದುವು. 

೫೩. ಸ್ವರ್ಗಸ್ಪರ್ಶಿಗಳಾದ ಪಾದಪಗಳು ಪಕ್ಸಿಗಳ ಇಂಪಾದ ಕೂಗಿನಿಂದ 
ರಮ್ಯುಗಳಾಗಿ ಸುವಾಸನೆಯಾದ ಹೂವುಗಳಿಂದ ವಿರಾಜಿಸುತ್ತಿದ್ದುವು. 


ತೃತೀಯೋರಧ್ಯಾಯಃ ತಿತ್ಲಿ 


ತಿಷ್ಮಂತಿ ಚ ಪ್ರವಾಲೇಷು ಪುಸ್ಪಭಾರಾವನಾದಿಷು । 


ರುವಂತಿ ಮಧುರಾಲಾಪಾಃ ಸಟ್ಟಿದಾ ಮಧುಲಿಪ್ಸವಃ ॥ ೫೪ ॥ 
ತತ್ರ ಪ್ರದೇಶಾಂಶ್ಚ ಬಹೂನಾನೋದಾಂಕುರಮಂಡಿತಾನ್‌ । 
ಲತಾಗೃಹಪರಿಕ್ಸಿಸ್ತಾನ್ಮನಸಃ ಪ್ರೀತಿನರ್ಧನಾನ್‌ 1 ೫೫ ॥ 
ಸಂಪಶ್ಯಂತೀ ಮಹಾತೇಜಾ ಬಭೂನ ಮುದಿತಾ ತಡಾ । 
ಪರಸ್ಪರಾಶ್ಲಿಷ್ಟಶಾಖೈಃ ಪಾದಸೈಃ ಕುಸುಮಾಚಿತೈಃ ॥ ೫೬ ॥ 
ಅಶೋಭತ ವನಂ ತತ್ತು ಮುಹೇಂದ್ರಧ್ವಜಸನ್ನಿಭೈಃ । 

ಸುಖಶೀತಸುಗಂಧೀ ಚ ಪುಷ್ಪರೇಣುವಹೋಂನಿಲಃ ॥ ೫೭ ॥ 
ಏನಂಗುಣಸಮಾಯುಕ್ತಂ ಸಾ ದದರ್ಶ ವನಂ ತದಾ । 

ತದಾ ಸೂರ್ಯೋದ್ಭವಾಂ ತತ್ರ ಪನಿತ್ರಾಂ ಪರಿಶೋಭಿತಾಂ ॥ ೫೮ ॥ 
ಆಶ್ರಮಪ್ರನರಂ ತತ್ರ ದದರ್ಶ ಚ ಮುನೋರಮಂ ಟ 
ಯತಿಭಿರ್ವಾಲಖಿಲ್ಯೈಶ್ಚ ವೃತ್ತಂ ಮುನಿಗಣಾನೃತಂ ॥೫೯॥ 
ಅಗ್ನ್ಯಗಾರೈಶ್ಚ ಬಹುಭಿರ್ನ್ವಕ್ಸೃಶಾಖಾಂವಲಂಬಿತೈಃ। 
ಧೂನ್ರುಪಾನಕಣೈಸ್ತತ್ರ ದಿಗ್ವಾಸೋಯತಿಭಿಸ್ತಥಾ 1 ೬೦॥ 
ಪಾಲ್ಯಾ ವನ್ಯಾ ಮೃಗಾಸ್ತತ್ರ ಸೌಮ್ಯಾ ಭೂಯೋ ಬಭೂವಿರೇ 1 


ಮಾರ್ಜಾರಾ ಮೂಷಕೈಸ್ತತ್ರ ಸರ್ಪ್ರೈಶ್ಚ ನಕುಲಾಸ್ತಥಾ ॥೬೧॥ 





೫೪. ಅಲ್ಲಿ ವೃಕ್ಸಗಳಲ್ಲಿರುವ ಚಿಗುರುಗಳೊಡಗೂಡಿ ಹೂಗೊಂಚಲುಗಳಲ್ಲಿ 
ದುಂಬಿಗಳು ಮಕರಂದದಾಶೆಯಿಂದ ಇಂಪಾಗಿ ಮೋಂಕರಿಸುತ್ತಿದ್ದುವು. 

೫೫-೫೮. ಅಲ್ಲಿ ಅವಳು ಘಮಘಮಿಸುವ ಲತಾಗೃಹಗಳುಳ್ಳ, ಮನಸ್ಸಿಗೆ 
ಅತ್ಯಾನಂದವನ್ನುಂಟುಮಾಡುವ ಸ್ಥಳಗಳನ್ನು ಕಂಡು ಪರಮಾನಂದಗೊಂಡಳು. 
ಪರಸ್ಪರ ಸಂಮಿಳಿತಗಳಾದ ಕೊಂಬೆಗಳುಳ್ಳ ಇಂದ್ರನ ಧ್ವಜದಂತಿರುವ ಮರ 
ಗಳಿಂದ ರಮ್ಯವಾಗಿಯೂ, ಶೈತ್ಯ, ಸೌರಭ್ಯ, ಮಾಂದ್ಯಗಳಿಂದೊಪ್ಪಿ ಬೀಸುವ 
ಗಾಳಿಯಿಂದ ಸುವಾಸನೆಯಾಗಿಯೂ ಇರುವ ಕಾಡನ್ನೂ, ಪವಿತ್ರವಾದ ನರ್ಮದಾ 
ನದಿಯನ್ನೂ ಕಂಡಳು. 

೫೯-೬೦, ಮತ್ತು ವಾಲಖಿಲ್ಯಯತಿಗಳಿಂದಲೂ, ಮುನಿವರ್ಯರಿಂದಲೂ, 
ಅನೇಕ ಯಜ್ಞಶಾಲೆಗಳಿಂದಲ್ಕೂ ಮರಗಳ ಕೊಂಬೆಗಳಲ್ಲಿ ಜೋಲುತ್ತಿರುವ 
ಹೊಗೆಗಳಿಂದಲೂ, ದಿಗಂಬರ ಸನ್ಯಾಸಿಗಳಿಂದಲೂ ಕಂಗೊಳಿಸುತ್ತಿರುವ ಒಂದು 
ಆಶ್ರಮವನ್ನು ಕಂಡಳು. 

೬೧-೬೨, ಅಲ್ಲಿ ಗೃಹಪೋಷಿತಗಳಾದ ಮೃಗಗಳಂತೆ ಕಾಡುಮೃಗಗಳು 
ಸೌಮ್ಯವಾಗಿದ್ದುವು. ಬೆಕ್ಕುಗಳು ಇಲಿಗಳೊಡನೆಯೂ, ಮುಂಗಸಿಗಳು 
ಸರ್ಪಗಳೊಡನೆಯೂ, ಸಿಂಹೆಗಳು ಜಿಂಕೆಮರಿಗಳೊಡನೆಯೂ, ಸಾಧುಗಳಾಗಿ 

2 


೩೪ ಶ್ರೀ ಸ್ಕಾಂದಮಹಾಪುರಾಣಂ 


ಮೃಗಶಾವೈಸ್ತಥಾ ಸಿಂಹಾಃ ಸತ್ವರೂಪಾ ಬಭೂನಿರೇ । 

ಪರಸ್ಪರಂ ಚಿಕ್ರೀಡುಸ್ತೇ ಯಥಾ ಚೈವ ಸಹೋದರಾಃ । 

ದೂರಾದ್ದದರ್ಶ ಚ ವನಂ ತತ್ರ ದೇವೊಂಬ್ರವೀತ್ರದಾ ॥ ೬೨॥ 
ಇಂದ್ರ ಉವಾಚ :-- 

ಅಯಂ ಚ ಖಲು ಧರ್ನ್ಮುರಾಟ್‌ ತಸಸ್ಯುಗ್ರೇಂವತಿಷ್ಠತೇ | 

ಮಮ ರಾಜ್ಯಾಭಿಕಾಂಕ್ಸೋಂಸಾನತೋಂರ್ಥೆೇ ಯತ್ಯತಾಮಿಹ ॥ ೬೩ ॥ 

ತಪೋವಿಫ್ನುಂ ಪ್ರಕುರ್ವಂತು ಮಮಾಜ್ಞಾ ತತ್ರ ಗಮ್ಯುತಾಂ | 


ಇಂದ ನ್ರಸ್ಯ ವಚನಂ ಶ್ರುತಾ ಉರ್ವಶೀ ಚೆ ತಿಳೋತ್ತ ಹ ॥ ೬೪ ॥ 
ಸುಕೇಶೀ ಜತ ಚ ಘೃತಾಚೀ ಮೇನಕಾ ತಥಾ । 

ವಿಶ್ವಾಚೀ ಚೈನ ರಂಭಾ ಚ ಪ್ರನ್ಲೋಚಾ ಚಾರುಭಾಷಿಣೀ ॥ ೬೫ ॥ 
ಪೂರ್ವಚಿತ್ರ್ತಿಃ ಸುರೂಸಾ ಚ ಅನುನ್ಲೋಚಾ ಯಶಸ್ವಿನೀ । 
ಏತಾಶ್ವಾಂನ್ಯಾಶ್ಚ ಬಹುಶಸ್ತತ್ರ ಸಂಸ್ಕಾ' ವ್ಯಚಿಂತಯನ್‌ ॥ ೬೬॥ 
ಪರಸ್ಪರಂ ನಿಲೋಕೈೈನ ಶಂತಮಾನ್‌ ಭಯೇನ ಹಿ । 

ಯನುಕ್ಟ ವ ತಥಾ ಶಕ್ರ ಉಭಾನಾಯತನಂ ಹಿ ನಃ ॥ ೬೭॥ 
ಏನಂ ರ್ಯ ಬಹುಧಾ ವರ್ಧನೀನಾಮ ಭಾರತ! 
ಸರ್ವಾಸಾಮಪ್ಸರಸಾಂಶ್ರೆ ೇಷ್ಮಾ ಸು ಸಸಯ ॥೬೮॥ 








ಸಹೋದರರಂತೆ ಆಡುತ್ತಿದ್ಳು ವು... ಆಗ ಅವನನ್ನು ದೂರದಿಂದ ನೋಡಿ ದೇವ 
ರಾಜನು ಇಂತೆಂದನು 

೬೩, ಇಂದ್ರನು ಹೇಳುತ್ತಾನೆ: ಈ ಧರ್ಮರಾಜನು ನನ್ನ ದೇವರಾಜ್ಯ 
ದಾಶೆಯಿಂದ ಉಗ್ರತಪವಂಗೈಯುತ್ತಿರುವನು. ಅದಕ್ಕಾಗಿ ನೀವು ಈ ರೀತಿ 
ಪ್ರಯತ್ನಿಸಬೇಕು. 

೬೪-೬೭, ನೀವೆಲ್ಲ ಸೇರಿ ಅವನ ತಪಸ್ಸನ್ನು ಕೆಡಿಸಬೇಕು. ನಾನು 
ಅಪ್ಪಣೆಮಾಡುತ್ತೇನೆ. ನೀವು ಅವನೆಡೆಗೆ ನಡೆಯಿರಿ. ಇಂದ್ರನ ಮಾತನ್ನು 
ಉರ್ವಶೀ, ತಿಲೋತ್ತಮಾ, ಸುಕೇಶೀ, ಮಂಜುಘೋಷಾ, ಫೃತಾಚೀ, 
ಮೇನಕಾ, ವಿಶ್ವಾಚೀ, ರಂಭಾ, ಇಂಪಾಗಿ ಮಾತಾಡುವ ಸ್ರಮ್ಣೋಚಾ, 
ಸುಂದರಿಯಾದ ಪೂರ್ವಚಿತ್ತಿ, ಕೇರ್ತಿಮತಿಯಾದ ಅನುಮ್ಣ್ಲೋಚಾ ಇವರೂ, 
ಅಲ್ಲಿರುವ ಇನ್ನೂ ಬೇರೆಯವರೂ ಸೇರಿ ಒಬ್ಬರನ್ನೊಬ್ಬರು ನೋಡಿ ಕಳವಳ 
ಗೊಳ್ಳುತ್ತ, " ಯಮಧರ್ಮನೂ ಇಂದ್ರನೂ ಇವರಿಬ್ಬರೂ ನಮಗೆ ಆಶ್ರಯದಾತ 
ರಲ್ಲವೆ?' ಎಂದು ಚಿಂತಿಸತೊಡಗಿದರು. 

೬೮-೬೯. ಹೀಗೆ ಬಹುವಾಗಿ ಆಲೋಚಿಸಿ ಸಮಸ್ತಾಪ್ಸರಸ್ತ್ರೀಯರಲ್ಲಿ 
ಉತ್ತಮಳಾದ ಎಲ್ಲಾ ಆಭರಣಗಳಿಂದಲಂಕೃತಳಾಗಿರುವ ವರ್ಧನೀ ಎಂಬವಳು 


ತೃತೀಯೋತಧ್ಯಾಯಃ " ‘an 


ಉವಾಚ್ಛೈವೋರ್ವಶೀ ತತ್ರ ಕಿಂ ಖಿದ್ಯಸಿ ಶುಭಾನನೇ ! 

ದೇವಾನಾಂ ಕಾರ್ಯಸಿದ್ಧ್ಯರ್ಥಂ ಮಾಯಾರೂಪಬಲೇನ ಚ! 

ವರ್ಣಧರ್ಮೋ ಯಥಾ ಭೂಯಾತ್ಮ್ಯರಿಷ್ಕ್ಯೇ ಪಾಕಶಾಸನ ॥೬೯॥ 
ಇಂದ್ರ ಉವಾಚ:- 

ಸಾಧು ಸಾಧು ಮಹಾಭಾಗೇ ವರ್ಧನೀನಾಮ ಸುನ್ರತಾ | 

ಶೀಘ್ರಂ ಗಚ್ಛ ಸ್ವಯಂ ಭದ್ರೇ ಕುರು ಕಾರ್ಯಂ ಕೃಶೋದರಿ ॥ ೭೦॥ 

ಧೀರಾಣಾಮುವನೇ ಶಕ್ತಾ ನಾಂನ್ಯಾ ಸುಭ್ರು ತ್ವಯಾ ವಿನಾ । 


ವರ್ಧನೀ ಚ ತಥೇತ್ಯುಕ್ತ್ವಾ ಗತಾ ಯತ್ರ ಸ ಧರ್ಮರಾಟ್‌ ॥ ೭೧॥ 
ಮಹತಾ ಭೂಷಣೇನೈನ ರೂಪಂ ಕೃತ್ವಾ ಮನೋರಮಂ | 

ಕುಂಕುಮೈಃ ಕಜ್ಜಲೈರ್ವಸ್ತ್ರೈರ್ಭೂಷಣೈಶ್ಸೆನ ಭೂಷಿತಾ ॥ ೭೨ ॥ 
ಕುಸುಮಂ ಚ ತಥಾ ವಸ್ತ್ರಂ ಕಿಂಕಣೀಕಟಿರಾಜಿತಾ । 

ರುಣತ್ಕಾರೈಸ್ತಥಾ ಕಷ್ಟೈರ್ಭೂಷಿತಾ ಚ ಪದದ್ವ್ದಯೇ ॥ ೭೩ ॥ 
ನಾನಾಭೂಷಣಭೂಸಾಥ್ಯಾ ನಾ ನಾನಾಚಂದನಚರ್ಚಿತಾ | 
ನಾನಾಕುಸುಮಮಾಲಾಡ್ಯಾ ಡುಕೂಲೇನಾವೃ ತಾ ಶುಭಾ 1 ೭೪॥ 
ಪ್ರಗೃ ಪ್ಯ ನೀಣಾಂ ಸಂಶುದ್ಧಾ ೦ ೫ರೇ he 02668 ] 

ಸ ತ್ರಿನಿಧಂ ತತ್ರ ಚಕ್ಕೆ € ಲೋಕನುನೋರನುಂ ॥ ೭೫ ॥ 
ತಾರಸ್ವ ರಣ ಮಧುಕ್ಕಿ EEE ಮಿಶ್ರಿತಂ ॥ ೭೬॥ 





"" ಉರ್ವಶಿ! | ಏತಕ್ಕೆ ವ ವೃಥೆಸಡುತ್ತಿ ರುವೆ? ಎಂದು ಹೇಳಿ, "ದೇವರಾಜ! 
ದೇವತೆಗಳ ಕಾ ಜೂ ಮಾಯಾರೂಪದ ಸಾಮರ್ಥ್ಯದಿಂದ ಜಾತಿ 
ಧರ್ಮವು ಕೆಡದಂತೆ ಮಾಡುವೆನು? ಎಂದು ನುಡಿದಳು. 

೭೦-೭೧. ಇಂದ್ರನು ಹೇಳುತ್ತಾನೆ: ಪುಣ್ಯಶಾಲಿನಿಯಾದ ವರ್ಧನಿ! 
ಒಳ್ಳೆಯದು. ನೀರರನ್ನು ಬಗ್ಗಿ ಸುವುದರಲ್ಲಿ ನಿನ್ನನ್ನು ಬಿಟ್ಟರೆ ಬೇರೆಯವರು 
ಶಕ್ತರಲ್ಲ. ಸುಂದರಿ! ಬೇಗನೆ ಜಾತು ನಮ್ಮ ಕಾರ್ಯವನ್ನು ನೆರವೇರಿಸು. 
ಎಂದು ಇಂದ್ರನು ಆಜ್ಞೆಯನ್ಸೀಯಲು ವರ್ಭನಿದು ಅದನ್ನು ಒಪ್ಪಿ ಧರ್ಮ 
ನಿಡ್ಡೆಡೆಗೆ ಹೋದಳು. 

೭೨-೭೭. ಅವಳು ಒಳ್ಳೆ ಒಡನೆಗಳಿಂದ ಸುಂದರ ರೂಪವನ್ನು ಧರಿಸಿ 
ಕುಂಕುಮ, ಕಾಡಿಗೆ, ವಸ್ತ್ರ, ಇವುಗಳಿಂದ ಅಲಂಕೃತಳೂ, ಹೂವು ಮುಡಿ 
ದವಳೂ, ಸೊಂಟದಲ್ಲಿ *ೆರುಗೆಜ್ಜೆ ಯಿಂದ ವಿರಾಜಿತಳೂ, ಕಾಲುಗಳಲ್ಲಿ 
ನೂಪುರಗಳ ಧ್ವನಿಯುಳ್ಳವಳೂ ಆಗಿ ಗಂಧವನ್ನು ಬಳಿದುಕೊಂಡು, ಕೊರಳಲ್ಲಿ 
ಪುಷ್ಪ ಮಾಲೆಯನ್ನು ಧರಿಸಿ, ದುಕೂಲವನ್ನುಟ್ಟು ಕೈಯಲ್ಲಿ ವೀಣೆಯನ್ನು ಸಿಡಿದು 
ಉಚ್ಚವಾದ ವೇಣುನಾದದಿಂದಲೂ, ಸ್ವರದ ಆರೋಹಾವರೋಹ ಮತ್ತು 


೩೬ ಶ್ರೀ ಸ್ಕಾಂದಮಹಾಪುರಾಣಂ 


ಮೂರ್ಛನಾತಾಲಸಂಯುಕ್ತಂ ತಂತ್ರೀಲಯಸನಮುನ್ವಿತಂ । 

ಕ್ಪಣೇನ ಸಹಸಾ ದೇವೋ ಧರ್ಮರಾಜೋ ಜಿತಾತ್ಮವಾನ್‌ । 

ನಿಮನಾಃ ಸ ತದಾ ಜಾತೋ ಧರ್ನುರಾಜೋ ನೃಪಾತ್ಮಜ ॥೭೭॥ 
ಯುಧಿಷ್ಠಿರ ಉವಾಚ: 

ಆಶ್ಚರ್ಯಂ ಪರಮಂ ಬ್ರಹ್ಮನ್‌ ಜಾತಂ ಮೇ ಬ್ರಹ್ಮಸತ್ತಮ । 

ಕಥಂ ಬ್ರಹ್ಮೋಪಪನ್ನಸ್ಯ ತಪಚ್ಛೇದೋ ಬಭೂನ ಹ ॥೭೮॥ 

ಧರ್ಮೇ ಧರಾ ಚ ನಾಕಶ್ಚ ಧರ್ಮೇ ಪಾತಾಲಮೇವ ಚ। 

ಧರ್ಮೇ ಚಂದ್ರಾಃರ್ಕಮಾಸಪಶ್ಚ ಧರ್ಮೇಚ ಪನನೋಂನಲಃ ॥೭೯॥ 

ಧರ್ಮೇ ಚೈವಾಂಖಿಲಂ ವಿಶ್ವಂ ಸ ಧರ್ಮೋ ವ್ಯಗ್ರತಾಂ ಕಥಂ । 

ಗತಃ ಸಾ ಮಿಂಸ್ತೃಜ್ಛೈಯಗ್ರ ೦ ತಥ್ಯಂ ಕಥಯ ಸುವ್ರತ ॥ ೮೦॥ 
ವ್ಯಾಸ ಉವಾಚ :-- 

ಪತನಂ ಸಾಹಸಾನಾಂ ಚ ನರಕಸ್ಕೈನ ಕಾರಣಂ । 

ಯೋನಿಕುಂಡಮಿದಂ ಸೃ ಷ್ಟಂ ANE ಭುವಿ ॥ ೮೧॥ 

ನೇತ್ರರಜ್ಞ್ಯಾ ದೃಢಂ ಬದ್ದ 3 ಧರ್ಷಯಂತಿ ಮನಸ್ಸಿನಃ । 

ಕುಚರೂಪೈರ್ಮಹಾದಂಡೈ ಜ್ರ ಡ್ಯ ಮಾತನ ॥ ೮೨ ॥ 

ಕೃತ್ವಾ ವೈ “ಸಾತಯಂತ್ಯಾ ಶು 'ಸರಕಂ ನೃಪಸತ್ತಮ । 

ನಸ ಹಾ 0 ನಾರೀ ಚೈನಂ ವಿನಿರ್ಮಿತಾ ॥ ೮೩ ॥ 





ತಾಳಲಯಗಳಿಂದಲೂ ಸೇರಿ ತ್ರಿವಿಧವಾದ ನರ್ತನಮಾಡಿದಳು. ಯುಧಿಷ್ಠಿರ! 
ಕೂಡಲೆ ಜಿತೇಂದ್ರಿಯನಾದ ಧರ್ಮರಾಜನು ಚಂಚಲಚಿತ್ತನಾದನು. 

೭೮-೮೦. ಯುಧಿಷ್ಠಿರನು ಕೇಳುತ್ತಾನೆ:--ಬ್ರಹ ನಿಷ್ಠ ನಾದ ವ್ಯಾ ಸನೆ! 

ಬ್ರಹ್ಮಜ್ಞಾ ನಿಯಾದ ಧರ್ಮರಾಜನ ತಪಸ್ಸು ಹೇಗೆ ಕಟ್ಟ ತು? ನನಗೆ 4 
ಆಶ್ಚರ್ಯ್ಯವಾಗಿದೆಯಲ್ಲ. ಆ ಯಮರಧರ್ಮನಕಲ್ಲಿಯೇ ಭೂಮಿ, ಸ್ವರ್ಗ, 
ಪಾತಾಳ, ಚಂದ್ರಸೂರ್ಯರು, ಜಲ, ವಾಯು, ಅಗ್ನಿಗಳೂ, ಸಮಸ್ತ ಲೋಕ 
ಗಳೂ ಅಧೀನವಾಗಿರುವುವು. ಸ್ವಾಮಿ! ಅಂತಹ ಧರ್ಮನು ಹೇಗೆ ಚಂಚಲ 
ನಾದನು? ಅವನಿಗುಂಟಾದ ಚಿತ್ತಚಾಂಚಲ್ಯವು ನಿಜವಾದುದೆ? ನನಗೆ ತಿಳಿಸು. 

೮೧. ವ್ಯಾಸನು ಹೇಳುತ್ತಾನೆ: ಲೋಕದಲ್ಲಿ ಸಾಹಸಿಕರ ಅಧೋಗತಿಗೂ 
ನರಕಕ್ಕೂ ಕಾರಣವಾದ ಕುಂಭೀಪಾಕ ನರಕವನ್ನು ಹೋಲುವುದಾಗಿ ಈ ಯೋನಿ 
ಕುಂಡವು ನಿರ್ಮಿತವಾಗಿದೆ. 

೮೨-೮೩. ನೃಪೇಂದ್ರ | ಸಕಲ ಪ್ರಾಣಿಗಳನ್ನು ಮೋಹಪಾಶಕ್ಕೆ ಸಿಕ್ಕಿಸು 
ವುದಕ್ಕಾಗಿ ನಿರ್ಮಿತಳಾದ ನಾರಿಯು ಜ್ಞಾ ನಿಯನ್ನೂ ತನ್ನ ನಯನಗಳೆಂಬ ಹಗ್ಗ 
ಗಳಿಂದ ಬಿಗಿದು, ಕುಚಗಳೆಂಬ ದಂಡಗಳಿಂದ ಬಡಿದು. ಮೂಢನನ್ನಾಗಿಸಿ ನರಕಕ್ಕೆ 
ತಳ್ಳುವಳು. 


'ತೃತೀಯೋರಧ್ಯಾಯಃ ೩೭ 


ತಾವದ್ಧ ಂತ ಮನಃ ಸ್ಥೆ 4ರ್ಬ್ಯೇಂ ಶ್ರುತಂ ಸತ್ಯ ಮನಾಕುಲಂ । 

ಯಾನನ್ಮ ತಾ ಸಂಂಗನಾಳ್ಥ ನ ನಾಗುಕೀವ ese ॥ ೮೪ ॥ 
ತಾನತ್ತಪೋಂಭಿವೃ ದೃಸ್ತು ತಾನದ್ದಾನಂ ದಯಾ ದಮಃ । 
ತಾನತ್ಸ್ಟ್ವಾಧ್ಯಾಯಂ ವೃತ್ತಂ ಚ ತಾವಚ್ಛೌಚಂ ಧೃತಂ ವ್ರತಂ ॥ ೮೫ ॥ 
ಯಾವನತ್ರಸ್ತ್ರಮ್ಬುಗೀದೃಷ್ಟಿಂ ಚಪಲಾಂ ನ ನಿಲೋಕಯೇತ್‌ । 

ತಾವನ್ಮಾತಾ ಪಿತಾ ತಾವದ್ಭಾ ತಾ ತಾನತ್ಸುಹೃಜ್ಜನಃ ॥ ೮೬ ॥ 
ತಾನಲ್ಲಜ್ಜಾ ಭಯಂ ತಾನತ್ಪ್ಯಾಚಾರಸ್ತಾನದೇನ ಹಿ | 
ಜ್ಞಾನಮೌದಾರ್ಯಮೈಶ್ವ J ತಾನದೇನ ಹಿ ಭಾಸತೇ। 
ಯಾನನ್ಮತ್ತಾಂಂಗನಾಸಾಕ್ಯಿ ಃ ಸಾತಿತೋ ಸೈನ ಬಂಧನೈಃ ॥ ೮೭॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "ಇಂದ್ರ 
ಭಯಕಥನಂ'' ನಾಮ ತೃತೀಯೋಂಧ್ಯಾಯಃ 


೮೪. ಕಾಮದಿಂದ ಮದಿಸಿದ ಅಂಗನೆಯು ಜ್ಞಾ ತ ನಿಗಳ ಮುಂದೆ ಬಲೆ 
ಯಂತೆ ನಿಲ್ಲದಿರುವವರೆಗೆ ಮಾತ್ರ ಅವರ ಮನಸ್ಸು ಸಿ ರವಾಗಿರುವುದು. ವಿದ್ಯೆ 
ಸತ್ಯಗಳು ಸರಿಯಾಗಿರುವುವು. 

೮೫-೮೭. ಜ್ಞಾನಿಯು ಚಕಿತಹರಿಣದಂತೆ ನೇತ್ರಗಳುಳ್ಳ, ಚಸಲೆಯಾದ 
ನಾರಿಯನ್ನು ನೋಡುವವರೆಗೆ ಅವನ ತಪಸ್ಸು ಹೆಚ್ಚುವುದು. ದಾನ, ದಯೆ, 
ಇಂದ್ರಿಯನಿಗ್ರಹ, ವೇದಾಧ್ಯಯನ, ಶುದ್ಧತೆ ಧೈರ್ಯ, ಪ್ರತಗಳು ಕೆಡದಿ 
ರುವುವು. ಮತ್ತು ಮತ್ತಾಂಗನೆಯೆಂಬ ಹಗ್ಗದ ಕಟ್ಟುಗಳಿಗೆ ಸಿಲುಕಿಬೀಳುವ 
ವರೆಗೆ ಅವನಿಗೆ ತಾಯಿ, ತಂದೆ, ಅಣ್ಣ, ತಮ್ಮ, ಸ್ನೇಹಿತ, ನಾಚಿಕೆ, ಭಯ, 
ಸದಾಚಾರ, ಜ್ಞಾನ, ಔದಾರ್ಯ, ಐಶ್ವರ್ಯ ಇವುಗಳಲ್ಲಿ ದೃಷ್ಟಿಯಿರುವುದು. 

ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 


ಶ್ರೀ ಸ್ಕಾಂದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರ 
ಮಾಹಾತ್ಮ ದಲ್ಲಿ " ಇಂದ್ರ ಭಯಕಥನ''ನೆಂಬ ಮೂರನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಚತುರ್ಥೋಂಧ್ಯಾಯಃ 
ಕ್ರೇತ್ರಸ್ಪಾಪನಂ 
ವ್ಯಾಸ ಉವಾಚ:- ತ 
ಅತಃ ಪರಂ ಪ್ರನಕ್ಸ್ರ್ಯಾನಿ ಧರ್ಮರಾಜಸ್ಯ ಚೇಷ್ಟಿತಂ । 
ಯಚ್ಚು ತ್ವಾ ಯಮದೂತಾನಾಂ ನ ಭಯಂ ವಿದ್ಯತೇ ಕ್ವಚಿತ್‌ ॥೧॥ 
ಧರ್ಮರಾಜೇನ ಸಾ ದೃಷ್ಟಾ ವರ್ಧನೀ ಚ ನರಾಂಪ್ಸರಾ । 


ಮಹತ್ಕ್ಯರಣ್ಯೇ ಕಾ ಹ್ಯೇಷಾ ಸುಂದರಾಂಗ್ಯತಿಸುಂದರೀ ॥೨॥ 
ನಿರ್ಮಾನುಷನನಂ ಚೇದಂ ಸಿಂಹನ್ಯಾಫ್ರಭಯಾನಕಂ । 
ಆಶ್ಚರ್ಯಂ ಪರಮಂ ಜ್ಞಾತ್ವಾ ಧರ್ಮರಾಜೋ ಬ್ರವೀದಿದಂ nan 


ಧರ್ಮರಾಜ ಉವಾಚ:-- 
ಕಸ್ಮಾತ್ತ್ಯಂ ಮಾನಿನಿ ಹ್ಯೇಕಾ ನನೇ ಚರಸಿ ನಿರ್ಜನೇ । 


ಕಸ್ಮಾತ್ಸ್ಮಾನಾತ್ಸಮಾಯಾತಾ ಕಸ್ಯ ಪತ್ನೀ ಸುಶೋಭನೇ ॥೪॥ 
ಸುತಾ ತ್ವಂ ಕಸ್ಯ ವಾನೋರು ಅತಿರೂಸನತೀ ಶುಭಾ | 
ಮಾನುಷೀ ವಾಂಥ ಗಂಧರ್ನೀ ಅಮರೀ ವಾಥ ಕಿನ್ನರೀ ॥೫॥ 





ಕನ್ನಡದ ಅನುವಾದ 
ಕ್ಸ್ಟೇತ್ರಸ್ತಾಪನ 

೧. ವ್ಯಾಸನು ಹೇಳುತ್ತಾನೆ:--ಇನ್ನುಮುಂದೆ ಧರ್ಮರಾಜನ ಕೆಲಸವನ್ನು 
ಹೇಳುವೆನು. ಇದನ್ನು ಕೇಳಿದ ಮನುಜರಿಗೆ ಯಮದೂತರ ಭಯವಿರುವುದಿಲ್ಲ. 

೨-೩. ಧರ್ಮರಾಜನು ನರ್ತನಮಾಡುತ್ತಿರುವ ವರ್ಧನಿಯೆಂಬ ಅಸ್ಸ 
ಸ್ತ್ರೀಯನ್ನು ಕಂಡು, ಸಿಂಹಾದಿ ಘಾತುಕ ಮೃಗಗಳಿಂದ ಭಯಂಕರವಾದ ಈ 
ನಿರ್ಜನಾರಣ್ಯದಲ್ಲಿ ಬಂದಿರುವ ಸುಂದರಿಯಾದ ಅಂಗನೆ ಯಾರಿವಳು? ಎಂದು 
ಆಶ್ಚರ್ಯಗೊಂಡು ಅವಳನ್ನು ಕುರಿತು ಹೀಗೆ ನುಡಿದನು. 

೪. ಓ ಸ್ತ್ರೀಯೆ! ಜನರಿಲ್ಲದ ಈ ಗೊಂಡಾರಣ್ಯದಲ್ಲಿ ನೀನು ಒಬ್ಬಂಟಗ 
ಳಾಗಿ ಏಕೆ ಸಂಚರಿಸುತ್ತೀಯೆ! ನೀನು ಎಲ್ಲಿಂದ ಇಲ್ಲಿಗೆ ಬಂದೆ? ಸುಂದರಿ! 
ನೀನು ಯಾರ ಹೆಂಡತಿ? 

೫. ಅತಿ ಸುಂದರಿಯಾದ ಅಂಗನೆಯೆ! ನೀನು ಯಾರ ಮಗಳು 
ಮನುಷ್ಯಳೊ? ಗಂಧರ್ವಳೊ? ದೇವತೆಯೊ? ಕಿನ್ನರಸ್ತ್ರೀಯೊ? 


ಚತುರ್ಥೋರಧ್ಯಾಯಃ ೩೯, 


ಅಪ್ಸರಾ ಪಕ್ಸಿಣೀ ನಾಥ ಅಥವಾ ನನದೇವತಾ | 


ರಾಕ್ಚಸೀ ವಾ ಖೇಚರೀ ನಾ ಕಸ್ಯ ಭಾರ್ಯಾ ಚ ತದ್ದದ ॥೬॥ 

ಸತ್ಯಂ ಚ ವದ ಮೇ ಸುಭ್ರೂರಿತೃಾಹಾಂಕಸುತಸ್ತದಾ । 

ಕಮಿಚ್ಛಸಿ ತ್ವಯಾ ಭದ್ರೇ ಕಿಂ ಕಾರ್ಯಂ ವಾ ವದಾತ್ರ ವೈ ॥೭॥ 

ಯದಿಚ್ಛಸಿ ತ್ವಂ ಜಾಮೋರು ದದಾನಿ ತನ ವಾಂಛಿತಂ ॥೮॥ 
ವರ್ಧನ್ಮುವಾಚ ನಾ 

ಧರ್ನೊೇ ತಿಷ್ಕತಿ ಸರ್ವಂ ವೈ ಸ್ಥಾವರಂ ಜಂಗಮಂ ವಿಭೋ | 

ಸ ಧರ್ಮೋ ದುಷ್ಕರಂ ಕರ್ಮ ಕಸ್ಮಾತ್ರ್ವಂ ಕುರುಸೇಂನಘ ॥೯॥ 
ಯಮ ಉವಾಚ :-- 

ಈಶಾನಸ್ಯ ಚ ಯದ್ರೂಪಂ ದ್ರಷ್ಟುಮಿಚ್ಛಾಮಿ ಭಾಮಿನಿ । 

ತೇನಾ:ಹಂ ತಪಸಾ ಯುಕ್ತಃ ಶಿನಯಾ ಸಹ ಶಂಕರಂ ॥ ೧೦॥ 

ಯಶಃ ಪ್ರಾಪ್ಸ್ಯೇ ಸುಖಂ ಪ್ರಾಪ್ಸ್ಯೇ ಕರೋಮಿ ಚ ಸುದುಷ್ಕರಂ | 

ಯುಗೇ ಯುಗೇ ಮಮ ಖ್ಯಾತಿರ್ಭವೇದಿತಿ ಮತಿರ್ಮಮ ॥ ೧೧॥ 

ಕಲ್ಪೇ ಕಲ್ಪೇ ನುಹಾಕಲ್ಪೇ ಭೂಯಃ ಖ್ಯಾತಿರ್ಭವೇದಿತಿ । 

ಏತಸ್ಮಾತ್ಕಾರಣಾತ್ಸುಭ್ರೂಸ್ತಪ್ಯತೇ ಪರಮಂ ತಪಃ ॥ ೧೨ ॥ 





೬. ಅಪ್ಸರೆಯೊ? ಪಕ್ಸಿಜಾತಿಯ ಹೆಂಗಸೊ? ಈ ಕಾಡಿನ ದೇವತೆಯೊ? 
ರಾಕ್ಸಸಿಯೊ? ಆಕಾಶಚಾರಿಗಳ ಹೆಂಗಸೊ? ಯಾರ ಹೆಂಡತಿಯೆಂಬುದನ್ನುಹೇಳು. 

೭-೮. ನಿನಗೆ ಏನು ಬೇಕು? ಇಲ್ಲಿ ನಿನಗೇನು ಕೆಲಸವಿದೆ? ಸುಂದರಿ! 
ನೀನು ಬಯಸಿದ್ದನ್ಸೀಯುವೆನು. ನಿಜವಾಗಿ ಹೇಳು ಎಂದು ಧರ್ಮರಾಜನು 
ಕೇಳಿದನು. 

೯. ವರ್ಧನಿಯು ಕೇಳುತ್ತಾಳೆ: ಈ ಸ್ಥಾನರಜಂಗಮಾ ತ್ಮಕವಾದ 
ಸಕಲ ಪ್ರಪಂಚವು ಧರ್ಮಾಧೀನವಾದುದು. ಆ ಧರ್ಮಾನುಷ್ಕಾನವು ಬಹಳ 
ತೊಡಕಿನದು. ನೀನು ಏತಕ್ಕೆ ಅದನ್ನು ಮಾಡುತ್ತಿದ್ದೀಯೆ? ಕ 

೧೦. ಯಮನು ಹೇಳುತ್ತಾನೆ:--ಅಂಗನೆ! ನಾನು ಪಾರ್ವತೀಸಹಿತನಾದ 
ಪರಮೇಶ್ವರನ ರೂಪವನ್ನು ನೋಡಲಿಚ್ಚಿಸುವೆನು. ಅದಕ್ಕಾಗಿ ತಪಸ್ಸನ್ನು 
ಮಾಡುತ್ತಿದ್ದೇನೆ. 

೧೧. ಕೀರ್ತಿಯನ್ನೂ, ಸುಖವನ್ನೂ ಗಳಿಸುವೆನೆಂದು ತಪಸ್ಸನ್ನು ಮಾಡು 
ಕ್ರಿರುವೆನು. ನನಗೆ ಎಲ್ಲಾ ಯುಗಗಳಲ್ಲಿಯೂ ಪ್ರಸಿದ್ಧನಾಗಬೇಕೆಂಬ ಆಕೆಯಿದೆ. 

೧೨. ಎಲ್ಲಾ ಕಲ್ಪಗಳಲ್ಲಿಯೂ, ಮಹಾಕಲ್ಪದಲ್ಲಿಯೂ ಪ್ರಸಿದ್ಧನಾಗ 
ಬೇಕೆಂಬ ಅಭಿಲಾಷೆಯಿಂದ ಈ ದುಷ್ಟರ ತಪಸ್ಸನ್ನು ಮಾಡುವೆನು. 


೪೦ ಶ್ರೀ ಸ್ಕಾಂದಮಹಾಪುರಾಣಂ 


ಕಸ್ಮಾತ್ತ್ಮಮಾಗತಾ ಭದ್ರೇ ಕಥಯಸ್ವ ಯಥಾ ತಥಾ । 

ಕಿಂ ಕಾರ್ಯಂ ತಸ್ಯ ಹೇತುಶ್ಚ ಸತ್ಯಮಾಖ್ಯಾತುಮರ್ಹಸಿ ॥ ೧೩ ॥ 
ವರ್ಧನ್ಯು ವಾಚ 

ತಪಸೈನ ತ್ವಯಾ ಧರ್ಮ ಭಯಭೀತೋ ದಿನಸ್ಸತಿಃ । 

ತ ತೆ ಚೋದಿತಾ ಚಾತ್ರ ತಪೋವಿಫ್ನುಸ್ಯ ಕಾಂಕ್ಸ ಯಾ ॥೧೪॥ 

ಇಂದ್ರಾಸನಭಯಾದ್ದೀತಾ ಹರಿಣಾ ಹರಿಸನ್ನಿಧೌ । 

ಪ್ರೇಷಿತಾಃಹಂ ಮಹಾಭಾಗ ಸತ್ಯಂ ಹಿ ಪ್ರನದಾನ್ಯುಹಂ ॥ ೧೫ ॥ 
ಸೂತ ಉವಾಚ :-- 

ಸತ್ಯವಾಕ್ಕೇನ ಚ ತದಾ ತೋಷಿತೋ ರವಿನಂದನಃ । 

ಉನಾಚೈನಾಂ ಮಹಾಭಾಗ್ಯೋ ನರದೋಂಹಂ ಪ್ರಯಚ್ಛ ಮೇ ॥ ೧೬॥ 

ಯಮೋಜಹಂ ಸರ್ವಭೂತಾನಾಂ ದುಷ್ಬಾನಾಂ ಕರ್ಮುಕಾರಿಣಾಂ । 

ಧರ್ಮರೂಪೋ ಹಿ ಸರ್ವೇಷಾಂ ಮನುಜಾನಾಂ ಜಿತಾತ್ಮನಾಂ ॥ ೧೭ ॥ 

ಸಧರ್ಮೋಂಹಂ ನರಾರೋಹೇ ದದಾಮಿ ತನ ದುರ್ಲಭಂ | 


ತತ್ಸರ್ವಂ ಪ್ರಾರ್ಥಯ ತ್ವಂ ಮೇ ಶೀಘ್ರಂ ಚಾಂಪ್ಸರಸಾಂ ವರೇ ॥ ೧೮ ॥ 





೧೩. ಎಲ್ಫೈ ಶುಭಾಂಗನೆಯೆ ! ನೀನು ಏತಕ್ಕೆ ಇಲ್ಲಿಗೆ ಬಂದಿರುವೆ? ಯಾವ 
ಕೆಲಸವಾಗಬೇಕಾಗಿದೆ? ಎಲ್ಲವನ್ನೂ ನಿಜವಾಗಿ ತಿಳಿಸು. 

೧೪. ವರ್ಧನಿಯು ಹೇಳುತ್ತಾಳೆ :--ಧರ್ಮರಾಜ! ದೇವೇಂದ್ರನು ನಿನ್ನ 
ತಪಸ್ಸಿನಿಂದ ಭಯಗೊಂಡು ಆ ತಪಸ್ಸಿನ ಭಂಗಕ್ಕಾಗಿ ನನ್ನನ್ನು ನಿನ್ನೆಡೆಗೆ 
ಕಳುಹಿಸಿದನು. 

೧೫. ಎಲ್ಫೆ ಮಹಾಭಾಗ! ದೇವರಾಜನು ನೀನು ಅವನ ಪದವಿಯನ್ನು 
ಕೆತು ಕೊಳ್ಳುವೆಯೆಂಬ ಭಯದಿಂದ ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ಇದು 
ನಿಜವಾದ ಮಾತು. 

೧೬. ಸೂತನುಹೇಳುತ್ತಾನೆ:-ಅವಳ ಸತ್ಯವಾದ ಮಾತಿನಿಂದ ತುಷ್ಪನಾದ 
ಯಮನು ಅವಳನ್ನು ಕುರಿತು ನಾನು ನಿನಗೆ ವರವನ್ನು ಕೊಡಲು ಬಯಸುವೆ 
ನೆಂದನು. 

೧೭-೧೮. ಎಲೈ ಅಪ್ಪರಮಣಿಯೆ! ನಾನು ಲೋಕದಲ್ಲಿ ದುಷ್ಕರ್ಮವನ್ನು 
pe ಎಲ್ಲಾ ಗೂ, ಜಿತಮನಸ್ಸುಳ್ಳ ಎಲ್ಲ ಮನುಷ್ಯರಿಗೂ ಧರ್ಮ 

ರೂಸನು. ಅಂತಹ ನಾನು ನಿನಗೆ ದುರ್ಲಭವಾದ ವರವನ್ನು ಕೊಡುವೆನು. 
ಅದನ್ನೆಲ್ಲ ನೀನು ಶೀಘ್ರವಾಗಿ ಕೇಳಿಕೊ. 


ಚತುರ್ಥೋ5ಧ್ಯಾಯಃ ೪೧ 
ವರ್ಧನ್ಮುವಾಚ ನಾ 
ಇಂದ್ರಸ್ಥಾನೇ ಸದಾ ರಮ್ಯೇ ಸುಸ್ಥಿರತ್ತಂ ಪ್ರಯಚ್ಛ ಮೇ। 
ಸ್ವಾಮಿನ್ಫರ್ಮಭೃತಾಂ ಶ್ರೇಷ್ಠ ಲೋಕಾನಾಂ ಚ ಹಿತಾಯ ವೈ ॥೧೯॥ 
ಯಮ ಉವಾಚ :-- 


ಏವಮಸ್ತ್ರಿತಿ ತಾಂ ಪ್ರಾಹ ಚಾಂನ್ಯಂ ವರಯ ಸತ್ವರಂ I 


ದದಾನಿ ವರಮುತೃಷ್ಟಂ ಗಾನೇನ ತೋಷಿತೋಂಸ್ಮ್ಯಹಂ ॥ ೨೦॥ 
ವರ್ಧನ್ಮುವಾಚ :- 

ಅಸ್ಮಿನ್ಸ್ಯಾನೇ ಮಹಾಕ್ಸೇತ್ರೇ ಮಮ ತೀರ್ಥಂ ಮಹಾಮತೇ । 

ಭೂಯಾಚ್ಚ ಸರ್ವಪಾಪಷ್ನುಂ ಮನ್ನಾಮ್ನೇತಿ ಚ ವಿಶ್ರುತಂ ॥ ೨೧ 1. 

ತತ್ರ ದತ್ತಂ ಹುತಂ ತಪ್ತಂ ಪಠಿತಂ ವಾಂಕ್ಟ್ಚಯಂ ಭವೇತ್‌ । 

ಪಂಚರಾತ್ರಂ ನಿಷೇವೇತ ವರ್ಧಮಾನಂ ಸರೋವರಂ ॥ ೨೨ ॥ 


ಪೂರ್ವಜಾಸ್ತಸ್ಯ ತುಷ್ಕೇರಂಸ್ತರ್ಪೃ್ಯಮಾನಾ ದಿನೇ ದಿನೇ । 

ತಥೇತ್ಯುಕ್ತ್ವಾ ತು ತಾಂ ಧರ್ಮೋ ಮೌನಮಾಚಸ್ಟ ಸಂಸ್ಥಿತಃ । 

ತ್ರಿೀಪರಿಕ್ರಮ್ಯ ತಂ ಧರ್ಮಂ ನಮಸೃತ್ಯ ದಿನಂ ಯಯೌ 1 ೨೩1 
ವರ್ಧನ್ಯುವಾಚ :-- 

ಮಾ ಭಯಂ ಕುರು ದೇವೇಶ ಯಮುಸ್ಕಾಂರ್ಕಸುತಸ್ಯ ಚ! 

ಅಯಂ ಸ್ಪ್ವಾರ್ಥಪರೋ ಧರ್ಮಂ ಯಶಸೇ ಚ ಸಮಾಚರೇತ್‌ ॥ ೨೪ ॥ 





ರಾಜ! ಸಕಲಲೋಕಗಳ ಹಿತದೃಷ್ಟಿಯಿಂದ ಯಾವಾಗಲೂ ಮನೋಹರವಾದ 
ಇಂದ್ರಸದವಿಯು ದೃಢವಾಗಿರುವಂತೆ ವರವನ್ನು ನೀಡು. 

೨೦. ಯಮನು ಹೇಳುತ್ತಾನೆ: ಹಾಗೆಯೇ ಆಗಲಿ. ನಿನ್ನ ಹಾಡಿನಿಂದ 
ಸಂತೋಷಗೊಂಡಿದ್ದೇನೆ. ಇನ್ನೂ ಉತ್ತಮವಾದ ಬೇರೆ ವರವನ್ನು ಕೇಳು; 
ಕೊಡುತ್ತೇನೆ. 

೨೧-೨೩. ವರ್ಧನಿಯು ಹೇಳುತ್ತಾಳೆ:--ಈ ಮಹಾಕ್ಸೇತ್ರದಲ್ಲಿ ನನ್ನ 
ಹೆಸರಿನಿಂದ ಪ್ರಸಿದ್ಧವಾದ ಸಕಲ ಪಾಪಗಳನ್ನು ನೀಗಿಸುವ ಒಂದು ಕ್ಸೇತ್ರ 
ವಾಗಲಿ. ಇಲ್ಲಿ ಮಾಡಿದ ದಾನ, ಹೋಮ, ತಪಸ್ಸು, ಅಧ್ಯಯನಗಳು ಅಕ್ಬಯ 
ವಾಗಲಿ. ಈ ವರ್ಧಮಾನ ಸರೋವರವನ್ನು ಐದು ರಾತ್ರಿ ಸೇವಿಸಿ ಪ್ರತಿದಿನವೂ 
ತರ್ಪಣಂಗೈದ ಮನುಜನ ಹಿಂದಿನ ನಿತೃಗಳು ಸಂತುಷ್ಟರಾಗಲಿ' ಎಂದು 
ವರ್ಧನಿಯು ಬೇಡಿಕೊಳ್ಳಲು, ಧರ್ಮನು ಹಾಗೆಯೇ ಆಗಲೆಂದು ಹೇಳಿ ಮೌನ 
ಗೊಂಡನು. ಅವಳು ಅವನಿಗೆ ಮೂರು ಪ್ರದಕ್ಟಿಣೆಗಳನ್ನೂ, ನಮಸ್ಕಾರವನ್ನೂ 
ಮಾಡಿ ದೇವಲೋಕಕ್ಕೆ ಹೊರಟಳು. 

೨೪. ವರ್ಧನಿಯು ಹೇಳುತ್ತಾಳೆ: ದೇವರಾಜ! ಈ ಧರ್ಮರಾಜನು 

F 


೧೯. ವರ್ಧನಿಯು ಹೇಳುತ್ತಾಳೆ:-- ಧರ್ಮಿಷ್ಮರಲ್ಲಿ ವರಿಷ್ಠನಾದ ಧರ್ಮ 


೪'s ಶ್ರೀ ಸ್ಕಾಲದಮಹಾಪುರಾಣಂ 


ನ್ಯಾಸ ಉವಾಚ :-- 
ವರ್ಧನೀ ಪೂಜಿತಾ ತೇನ ಶಕ್ರೇಣ ಚ ಶುಭಾನನಾ । 
ಸಾಧು ಸಾಧು ಮಹಾಭಾಗೇ ದೇನಕಾರ್ಯಂ ಕೃತಂ ತ್ವಯಾ ॥ ೨೫॥ 
ನಿರ್ಭಯತ್ವಂ ವರಾರೋಹೇ ಸುಖವಾಸಶ್ಚತೇ ಸದಾ । 
ಯಶಃ ಸೌಖ್ಯಂ ಶ್ರಿ ಶ್ರಿಯಂ ರಮ್ಯಾಂ ಪ್ಪಾ ಸಸಿ ತ್ವಂ ಶುಭಾನನೇ ॥ ೨೬ ॥ 


ತಥೇತಿ ದೇವಾಸ್ತಾ EE ಕ. ಜನ | 

ನಮಸ್ಕೃತ್ಯ ಚ ಶಕ್ರಂ ಸಾ ಗತಾ ಸ್ಥಾನಂ ಸ್ವಕಂ ಶುಭಂ ॥ ೨೭ ॥ 
ಸೂತ ಉವಾಚ ಃ-- 

ಗಶೇಂಪ್ಪರಸಿ ರಾಜೇಂದ್ರ ಧರ್ಮಸ್ತಸ್ಥೌ ಯಥಾವಿಧಿ । 

ತಪಸ್ತೇಷೇ ಮಹಾಘೋರಂ ವಿಶ್ವಸ್ಕೋದ್ಧೇಗದಾಯಕಂ ॥ ೨೮ ॥ 

ಪಂಚಾಂಗ್ನಿಸಾಧನಂ ಶುಕ್ರೇ ಮಾಸಿ ಸೂರ್ಯೆೇಣ ತಾಪಿತೇ । 

ಚಕ್ರೇ ಸುದುಸ್ಸಹಂ ರಾಜನ್ಹೇವೈರಪಿ ದುರಾಸದಂ ॥ ೨೯॥ 

ತಶೋ ವರ್ಷಶತೇ ಪೂರ್ಣೇ ಅಂತಕೋ ಮೌನಮಾಸ್ಥಿತಃ | 

ಕಾಠಷ್ಕಭೂತ ಇವಾತಸ್ಥೌ ವಲ್ಮೀಕಶತಸಂನೃತಃ ॥ ೩೦॥ 

ನಾನಾಪಕ್ಸಿ ಗಣೈಸ್ತತ್ರ ಸತತ ಸ ಹಹ | 

ಉಪವಿಸ್ಟೇ € ವ್ರತಂ ರಾಜನ್ಹೃಶ್ಯತೇ ಸೈನ ಕುತ್ರಚಿತ್‌ ॥೩೧॥ 





ತನ್ನ ಪ್ರಯೋಜನವಾದ ಕೀರ್ತಿಗಾಗಿ ತನಸ್ಸನ್ನು ಮಾಡುತ್ತಿರುವುದರಿಂದ ಬ 
ಆವನಿಗೆ ಹೆದರಬೇಡ. 

೨೫:೨೬, ವ್ಯಾಸನು ಹೇಳುತ್ತಾನೆ: ದೇವೇಂದ್ರನು ಆ ಸುಂದರಿಯಾದ 
ವರ್ಧನಿಯನ್ನು ಪೂಜಿಸಿ ಇಂತೆಂದನು:-- ಪುಣ್ಯಾತ್ಮಳೆ! ನೀನು ದೇವತೆಗಳ 
ಕೆಲಸವನ್ನು ಮಾಡಿರುವೆ. ನೀನು ಯಾವಾಗಲೂ ನಿರ್ಭಯಳಾಗಿ ಸುಖದಿಂದಿರು. 
ನಿನಗೆ ಕೀರ್ತಿ, ಸೌಖ್ಯ, ಸಂಪತ್ತುಗಳು ಲಭಿಸುವುವು. 

೨೭. ದೇವತೆಗಳೂ ಹಾಗೆಯೇ ಅವಳಿಗೆ ಹೇಳಿದರು. ಅವಳು ಸಂತುಷ್ಟ 
ಚಿತ್ತಳಾಗಿ ಇಂದ್ರನನ್ನು ನಂದಿಸಿ ತನ್ನ ಶುಭಸ್ಕಾನಕ್ಕೆ ತೆರಳಿದಳು. 

5೮-೨೯. ಸೂತನು ಹೇಳುತ್ತಾನೆ: ಆ ವರ್ಧನಿಯು ಹೊರಡಲು ಧರ್ಮ 

ಜನು ಜ್ಯೇಷ್ಠ ಮಾಸದಲ್ಲಿ ಸೂರ್ಯನು ತಪಿಸುತ್ತಿರಲು ಕ್ರಮದಂತೆ ಸಕಲ 
lr ಭಯವನ್ನು ಂಟುಮಾಡುವ ದೇವತೆಗಳೂ ಮಾಡಲಾಗಿ ಘೋರ 
ತಪಸ್ಸನ್ನು ಪಂಚಾಗ್ತಿ ಮಧ್ಯದಲ್ಲಿ ಆಚರಿಸಿದನು. 

೩೦. ಅನಂತರ ನೂರು ವರ್ಷಗಳು ಕಳೆಯಲು ಯಮನು ಅನೇಕ ಹುತ್ತ 
ಗಳಿಂದ ಮುಚ್ಚಲ್ಪ ಟ್ಟು ಕಟ್ಟ ಗೆಯಂತಾಗಿ ಮೌನಗೊಂಡನು. 

೩೧. ಆನೇಕ ನ್ಟ ಸ ಅವನಮೇಲೆ ಗೂಡುಗಳನ್ನು dee 
ಅವನು ಕುಳಿತ ಸ್ಥಳವೇ ಎಲ್ಲಿಯೂ ತಿಳಿಯುತ್ತಿರಲಿಲ್ಲ. 


ಚತುರ್ಥೋಂಧ್ಯಾಯ। ೪೩ 


ಸಂಸ್ಕರಂತೋಥ ದೇನೇಶಮುಮಾಪತಿಮನಿಂದಿತಂ । 

ತತೋ ದೇವಾಃ ಸಗಂಧರ್ವಾ ಯಕ್ಸಾಶ್ಹೋದ್ವಿಗ್ನಮಾನಸಾಃ | 

ಫೈಲಾಸಶಿಖರಂ ಭೂಯ ಆಜಗ್ಮುಃ ಶಿನಸನ್ನಿಧೌ ॥೩೨॥ 
ದೇವಾ ಊಚುಃ: 

ತ್ರಾಹಿ ತ್ರಾಹಿ ಮಹಾದೇವ ಶ್ರೀಕಂಠ ಜಗತಃ ಪತೇ । 

ತ್ರಾಹಿ ನೋ ಭೂತಭವ್ಯೇಶ ತ್ರಾಹಿ ನೋ ವೃಷಭಧ್ಯಜ | 


ದಯಾಲುಸ್ತ್ಯಂ ಕೃಪಾನಾಥ ನಿರ್ವಿಘ್ನಂ ಕುರು ಶಂಕರ ॥ ೩೩ ॥ 
ಈಶ್ವರ ಉವಾಚ :-- 

ಕೇನಾಂಪರಾಧಿತಾ ದೇನಾಃ ಕೇನ ನಾ ಮಾನನುರ್ದಿತಾಃ । 

ಮರ್ಶ್ಶೇ ಸ್ಪರ್ಗೇಃಥ ನಾನಾಗೇ ಶೀಘ್ರಂ ಕಥಯತಾಂಚಿರಂ ॥ ೩೪ ॥ 


ಅನೇನೈನ ತ್ರಿಶೂಲೇನ ಖಟ್ಟಾಂಗೇನಾಃಥ ವಾ ಪುನಃ । 
ಅಥ ಪಾಶುಪಶೇನೈವ ನಿಹನಿಷ್ಯಾಮಿ ತಂ ರಣೇ । 


ಶೀಘ್ರಂ ನೈ ವದತಾಂಸ್ಮಾಕಮತ್ತಾಗಮನಕಾರಣಂ ॥ ೩೫ ॥ 
ದೇವಾ ಊಚುಃ: 

ಕೃಪಾಸಿಂಘೋ ಹಿ ದೇನೇಶ ಜಗದಾನಂದಕಾರಕ । 

ನ ಭಯಂ ಮಾನುಷಾದದೃ ನ ನಾಗಾದ್ದೇವದಾನವಾತ್‌ nN &೬ 


೩೨. ತರುವಾಯ ದೇವತೆಗಳೂ, ಗಂಧರ್ವರೂ, ಯಕ್ಸರೂ ಭಯ 
ಗೊಂಡು ನಿರವದ್ಯನಾದ ಪರಶಿವನನ್ನು ನೆನೆಯುತ್ತ ತಿರುಗಿ ಕೈಲಾಸ ಶಿಖರದಲ್ಲಿ 
ರುವ ಅವನೆಡೆಗೆ ಬಂದರು. 

೩೩. ದೇವತೆಗಳು ಹೇಳುತ್ತಾರೆ: ಮಹಾದೇವ! ನಮ್ಮನ್ನು ಸಲಹು. 
ಶ್ರೀಕಂಠ! ಜಗದೊಡೆಯ! ಕಾಪಾಡು. ತ್ರಿಕಾಲದ ಆಗುಹೋಗುಗಳಿಗೆ 
ಕಾರಣನಾದ ಶಂಭೋ! ರಕ್ಷಿಸು. ಶಂಕರ! ನೀನು ದಯಾಲುವು. ನಮಗೆ 
ತೊಂದರೆಯಿಲ್ಲದಂತೆ ಮಾಡು. 

೩೪-೩೫. ಈಶ್ವರನು ಹೇಳುತ್ತಾನೆ :--ದೇವತೆಗಳೆ! ನೀವು ಏತಕ್ಕೆ ಇಲ್ಲಿಗೆ 
ಬಂದಿರುವಿರಿ? ನಿಮಗೆ ಯಾವನು ಅಪರಾಧಮಾಡಿದನು? ಯಾವನು ಅವಮಾನ 
ಮಾಡಿದನು? ಶೀಘ್ರವಾಗಿ ಹೇಳಿ, ಈ ತ್ರಿಶೂಲದಿಂದಾಗಲಿ, ಖಟ್ಟಾಂಗ 
ದಿಂದಾಗಲಿ, ಪಾಶುಸತಾಸ್ತ್ರದಿಂದಾಗಲಿ ಅವನನ್ನು ಯುದ್ಧದಲ್ಲಿ ವಧಿಸುವೆನು. 
ಕೂಡಲೆ ಹೇಳಿ. 

೩೬. ದೇವತೆಗಳು ಹೇಳುತ್ತಾರೆ ಪ್ರಪಂಚಕ್ಕೆ ಆನಂದವನ್ನುಂಟುಮಾಡುವ 
ದಯಾಲುವಾದ ಪರಮೇಶ್ವರ! ನಮಗೆ ಈಗ ಮನುಷ್ಯರಿಂದಾಗಲಿ, ಸರ್ಪ 
ಗಳಿಂದಾಗಲಿ, ದೇವತೆಗಳಿಂದಾಗಲಿ, ಡಾನವರಿಂಡಾಗಲಿ ಭಯವಿಲ್ಲ. 





೪೪ ಶ್ರೀ ಸ್ಕಾಂದಮಹಾಪುರಾಣಂ 


ಮರ್ತ್ಯಲೋಕೇ ಮಹಾದೇನ ಪ್ರೇತನಾಥೋ ಮಹಾಕೃತಿಃ । 

ಆತ್ಮಕಾರ್ಯಂ ಮಹಾಘೋರಂ ಕ್ಲೇಶಯೇದಿತಿ ನಿಶ್ಚಯಃ ॥ ೩೭॥ 

ಉಗ್ರೇಣ ತಪಸಾ ಕೃತ್ವಾ ಕ್ಲಿಶ್ಯದಾತ್ಮಾನಮಾತ್ಮನಾ | 

ತೇನಾಂತ್ರ ನಯಮುದ್ವಿಗ್ನಾ ದೇವಾಃ ಸರೇ ಸದಾಶಿವ । 

ಶರಣಂ ತ್ಯಾಮನುಸ್ರಾಸ್ತಾ ಯದಿಚ್ಛಸಿ ಕುರುಷ್ವ ತತ್‌ ॥ ೩೮ ॥ 
ಸೂತ ಉವಾಚ :-- 

ದೇವಾನಾಂ ವಚನಂ ಶ್ರುತ್ವಾ ವೃಷಾರೂಢೋ ವೃಷಧ್ವಜಃ । 

ಆಯುಧಾನ್ಸರಿಸಂಗೃಹ್ಯ ಕವಚಂ ಸುಮನೋಹರಂ | 

ಗತವಾನಥ ತಂ ದೇಶಂ ಯತ್ರ ಧರ್ಮೋ ವೃವಸ್ಥಿತಃ WF I 
ಈಶ್ವರ ಉವಾಚ:- 

ಅನೇನ ತಪಸಾ ಧರ್ಮ ಸಂತುಷ್ಟಂ ಮನು ಮಾನಸಂ | 

ನರಂ ಬ್ರೂಹಿ ನರಂ ಬ್ರೂಹಿ ವರಂ ಬ್ರೂಹೀತ್ಯುವಾಚ ಹ ॥೪೦॥ 

ಇಚ್ಛಸೇ ತ್ವಂ ಯಥಾ ಕಾಮಾನ್ಯಥಾ ತೇ ಮನಸಿ ಸ್ಥಿತಾನ್‌ | 

ಯಂ ಯಂ ಪ್ರಾರ್ಥಯಸೇ ಭದ್ರ ದದಾಮಿ ತನ ಸಾಂಪ್ರತಂ ॥ ೪೧॥ 
ಸೂತ ಉವಾಚ:- 

ಏವಂ ಸಂಭಾಷಮಾಣಂ ತು ದೃಷ್ಟ್ಯಾ ದೇನಂ ಮಹೇಶ್ವರಂ । 

ವಲ್ಮೀಕಾದುತ್ತಿತೋ ರಾಜನ್ಸೃಹೀತ್ಕಾ ಕರಸಂಪುಟಂ । 

ತುಷ್ಟಾವ ವಚನೈಃ ಶುದ್ದೈಲ್ಲೋಕನಾಫಮರಿಂದಮುಂ ॥ ೪೨॥ 





೩೭-೩೮, ಭೂಲೋಕದಲ್ಲಿ ಯಮಧರ್ಮನು ದೊಡ್ಡ ಆಕಾರವುಳ್ಳವನಾಗಿ 
ಘೋರ ತಪಸ್ಸನ್ನು ಮಾಡುತ್ತ ತನ್ನ ದೇಹವನ್ನು ದಂಡಿಸುತ್ತ ನಮ್ಮ ಕೆಲಸ 
ವನ್ನು ಹಾಳುಮಾಡುತ್ತಾನೆಂದು ನಾವು ಭಯಗೊಂಡು ನಿನ್ನೆಡೆಗೆ ಬಂದು 
ಮರೆಸೊಕ್ಕಿದ್ದೇವೆ. ನಿನ್ನಿಷ್ಟದಂತೆ ಮಾಡು. 

೩೯. ಸೂತನು ಹೇಳುತ್ತಾನೆ:--ಸರಮೇಶ್ವರನು ದೇವತೆಗಳ ಮಾತನ್ನು 
ಕೇಳಿ ಬಸವನನ್ನೇರಿ ಸುಂದರವಾದ ಅಂಗಿಯನ್ನು ತೊಟ್ಟು ಆಯುಧಗಳನ್ನು 
ಪಿಡಿದು ಧರ್ಮರಾಜನಿದ್ದೆಡೆಗೆ ತೆರಳಿದನು. 

೪೦. ಪರಮೇಶ್ವರನು ಹೇಳುತ್ತಾನೆ:--ಧರ್ಮರಾಜ! ಈ ತಪಸ್ಸಿನಿಂದ 
ನನ್ನ ಮನಸ್ಸು ಸಂತೋಷನಗೊಂಡಿದೆ. ವರವನ್ನು ಕೇಳು ಎಂದು ಮೂರು 
ಸಾರಿ ಹೇಳಿದನು. 

೪೧. ಮಂಗಳಕರನೆ! ಯಾವ ಇಷ್ಟಾರ್ಥವನ್ನು ಅಪೇಕ್ಸಿಸುನೆ? ನಿನ್ನ 
ಮನಸ್ಸಿನಲ್ಲೇನಿದೆ? ನೀನು ಬೇಡಿದ್ದನ್ನೆಲ್ಲ ಈಗ ನಿನಗೀಯುನೆನು. 

೪೨. ಸೂತನು ಹೇಳುತ್ತಾನೆ: ಹೀಗೆ ಮಾತಾಡುತ್ತಿರುವ ಆ ಮಹೇಶ್ವರ 


ಚತುರ್ಕೊೋ5ಧ್ಯಾಯಃ। ೪೫ 


ಧರ್ಮ ಉವಾಚ :- 
ಈಶ್ವರಾಯ ನಮಸ್ತುಭ್ಯಂ ನಮಸ್ತೇ ಯೋಗರೂಪಿಣೇ । 
ನಮಸ್ತೇ ತೇಜೋರೂಷಾಯ ನೀಲಕಂಠ ನನೋಸ್ತು ತೇ ॥ ೪೩1 
ಧ್ಯಾತೃಣಾಮುನುರೂಷಾಯ ಭಕ್ತಿಗಮ್ಮಾಯ ತೇ ನಮಃ । 
ನಮಸ್ತೇ ಬ್ರ ಹ್ಮ ರೂಪಾಯ ನಿಷ್ಣು ರೂಪ ನಮೋಸ್ತು ತೇ 1 ೪೪ / 
ನಮಃ ಸೂ ಚಾಯ ಸೂಕ್ಸಾ ಯೆ ಅಣುರೂಪಾಯ ನೈ ನಮಃ । 
ನಮಸ್ತೇ ಘಿ ಸೃ ಷ್ಟಿ ಸ್ಥಿ ತ್ಯ ೦ತಕಾರಿಣೇ ॥ ೪೫ ॥ 
ನನೋ ನಿತ್ಯಾಯ ಸೌಮ್ಯಾ ಸ ಮ್ಮ” ER ಹರಯೇ ನಮಃ । 
ಆತಸಾಯ ನಮಸ್ತುಭ ನ್ಯೈಂ 'ಸಮಃ ನೀತಕರಾಯ ಚ ॥ ೪೬ ॥ 
ಸೃಷ್ಟಿರೂಪ ನಮಸ್ತುಭ್ಯಂ ಲೋಕಪಾಲ ನಮೋಸ್ತು ತೇ। 
ನಮ ಉಗ್ರಾಯ ಭೀಮಾಯ ಶಾಂತರೂಪಾಯ ತೇ ನಮಃ 1 ೪೭॥ 


ನಮಶ್ಚಾಃನಂತರೂಷಾಯ ನಿಶ್ಚರೂಪಾಯ ತೇ ನಮಃ । 
ನಮೋ ಭಸ್ಮಾಂಗಲಿಷ್ತಾಯ ನಮಸ್ತೇ ಚಂದ್ರಶೇಖರ । 
ನನೋಸ್ತು 'ಸಂಚನಕ್ಕ್ರಾ ಯತ್ರಿ ನೇತ್ರಾ ಯ `ಸನೋಸ್ತು ತೇ ॥1೪೮॥ 
ನನ್ನು ನೋಡಿ ಜೂಹಿ ಹುತ ತ್ರದಿಂದೆದ್ದು ಕೈಮುಗಿದುಕೊಂಡು ಪವಿತ್ರ 
ಗಳಾದ ನುಡಿಗಳಿಂದ ಶತ್ರುಸಂಹಾರಕನಾದ "ನುಹೇಶ್ವರನನ್ನು ಹೀಗೆ ಸ್ತುತಿ 
ಸಿದನು. 
೪೩. ಧರ್ಮರಾಜನು ಹೇಳುತ್ತಾನೆ:-ಅಣಿಮಾದಿ ಅಷ್ಟೈಶ್ವರ್ಯವುಳ್ಳ ವನೂ, 
ಯೋಗರೂಪನೂ, ಪ್ರಕಾಶಮಯನೂ ಆಗಿರುವ ನೀಲಕಂಠ! ನಿನಗೆ ನಮಸ್ಕಾರ. 
ಲಭ, ಇಚ್ಟನಗ ಜಟ್ಟ ಸಸಿಗೆ ಅನುಕೂಲನೂ, ಭಕ್ತಿಯಿಂದ ತಿಳಿಯಲು 
ಶಕ್ಯನೂ, ಬ್ರಹ ಒನಿಷ್ಣುರೂಪನೂ ಆಗಿರುವ ನಿನಗೆ ನಮಸ್ಕಾರ. 
೪೫. ಸ್ಫೂ ಸ ಸೂಕ್ಷ ಗ ೬ಶೊಸನೂ, ಅಣುರೂಪನೂ, ಸ್ವೇಚ್ಛಾ 
ರೂಸಿಯೂ, ಪ್ರಪಂಚದ ಸೃಷ್ಠಿ ಸ್ಹಿತಿಲಯಗಳಿಗೆ ಕಾರಣನೂ ಆಗಿರುವ ನಿನಗೆ 
೪೬, ನಿತ್ಯನೂ, ಸೌ ಹ ಸುಖಕರನೂ, ಭಕ್ತರ ಪಾಪವನ್ನು 
ಅಪಹರಿಸುವವನೂ, ಚಂದ್ರಸೂರ್ಯರೂಸನೂ ಆಗಿರುನ ನಿನಗೆ ನಮಸ್ಕಾರ. 
೪೭. ಸೃಷ್ಟಿಸ್ನ ರೊಸನೂ, ಲೋಕಪಾಲಕನೂ, ಕಠಿನನೂ, ಭಯೆಂಕರನೂ, 
ಶಾಂತನೂ ಶು ನಿನಗೆ ನಮಸ್ಕಾರ. 
೪೮. ಲೆಕ್ಕವಿಲ್ಲದ ರೂಪಗಳುಳ್ಳ ವನೂ, ಪ್ರಪಂಚಸ್ವರೂಪನೂ, ವಿಭೂತಿ 
ಯಿಂದ ಲಿಪ್ತವಾದ ಅಂಗವುಳ್ಳವನೂ, ಚಂದ್ರಮೌಲಿಯೂ, ಐದುಮುಖ 
ಗಳುಳ್ಳವನೂ, ಮುಕ್ಕಣ್ಣನೂ ಆಗಿರುವ ನಿನಗೆ ನಮಸ್ಕಾರ. 





೪೬ ಶ್ರೀ ಸ್ಕಾಂದಮಹಾಪುರಾಣಂ 


ನಮಸ್ತೇ ನ್ಯಾಲಭೂಸಾಯ ಕಕ್ಸಾಸಟಧರಾಯ ಚ । 
ನನೋಂಧಕನಿನಾಶಾಯ ದಕ್ಬಸಾಪಾಂಪಹಾರಿಣೇ । 


ಕಾನುನಿರ್ದಾಹಿನೇ ತುಭ್ಯಂ ತ್ರಿಪುರಾಕೇ ನಮೋಸ್ತು ತೇ ॥೪೯॥ 
ಚತ್ವಾರಿಂಶಚ್ಚ ನಾಮಾನಿ ಮಯೋಕ್ತಾನಿ ಚ ಯಃ ಪಠೇತ್‌ । 
ಶುಚಿರ್ಭೂತ್ವಾ ತ್ರಿಕಾಲಂ ತು ಪಠೇದ್ದಾ ಶೃಣುಯಾದಸಿ ॥ ೫೦॥ 
ಗೋಫ್ಲ್ನಶ್ಚೈನ ಕೃತಪ್ಪುಶ್ಚ ಸುರಾಪೋ ಗುರುತಲ್ಪಗಃ । 

ಬ್ರಹ್ಮಹಾ ಹೇನುಹಾರೀ ಚ ಹೃಥನಾ ನೃಷಲೀಪತಿಃ ॥ ೫೧॥ 
ಸ್ತ್ರೀಬಾಲಘಾತಕಕ್ಷೈವ ಸಾಹೀ ಚಾಂನೃತಭಾಷ ಣಃ | 

ಅನಾಚಾರೀ ತಥಾ ಸ್ತೇಯಿಾ ಪರದಾರಾಂಭಿಗಸ್ತಥಾ ॥ ೫೨ ॥ 


ಪರಾಃಪವಾದೀ ದ್ವೇಷೀ ಚ ವೃತ್ತಿಲೋಪಕರಸ್ತಥಾ। 
ಅಕಾರ್ಯಕಾರೀ ಕೃತ್ಯಫ್ನೋ ಬ್ರಹ್ಮದ್ಧಿಡ್ವಾಡನಾಾಧಮಃ । 


ಮುಚ್ಯತೇ ಸರ್ವಪಾಪೇಭ್ಯಃ ಕೈಲಾಸಂ ಸ ಚ ಗಚ್ಛತಿ ॥ ೫೩॥ 
ಸೂತ ಉವಾಚ :-- 

ಇತ್ಯೇವಂ ಬಹುಭಿರ್ವಾಕ್ಕೈರ್ಧರ್ಮರಾಜೇನ ನೈ ಮುಹುಃ । 

ಈಡಿತೋಸಿ ಮಹದ್ಭಶ್ತ್ಯಾ ಪ್ರಣಮ್ಯ ಶಿರಸಾ ಸ್ವಯಂ ॥ ೫೪ ॥ 

ತುಷ್ಟಃ ಶಂಭುಸ್ತದಾ ತಸ್ಮಾ ಉವಾಚೀದಂ ವಚಃ ಶುಭಂ । 


ನರಂ ವೃಣು ಮಹಾಭಾಗ ಯತ್ತೇ ಮನಸಿ ವರ್ತತೇ ॥ ೫೫ ॥ 





೪೯. ಉರಗಭೂಷಣನೂ, ಅಂಧಕಾಸುರಹೆಂತಕನೂ, ದಕ್ಷಬ್ರಹ್ಮನ 
ಪಾಸನಿವಾರಕನೂ, ಮನ್ಮಥನನ್ನು ಭಸ್ಮಮಾಡಿದವನೂ, ತ್ರಿಪುರಧ್ವಂಸಕನೂ 
ಆಗಿರುವ ನಿನಗೆ ನಮಸ್ಕಾರ. 

೫೦-೫೩. ನಾನು ಈಗ ಉಸುರಿದ ನಲವತ್ತು ನಾಮಗಳನ್ನು ಶುಚಿಯಾಗಿ 
ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಹೇಳುವ ಅಥವಾ ಕೇಳುವ ನರನು, ಗೋಹತ್ಯ 
ಮಾಡಿದವನೂ, ಕೃತಫ್ಲನೂ, ಹೆಂಡಕುಡಿದವನೂ, ಗುರುಪತ್ಲೀಗಾಮಿಯೂ, 
ಬ್ರಾಹ್ಮಣನನ್ನು ಕೊಂದವನೂ, ಚಿನ್ನವನ್ನುಕದ್ದವನ್ಕೂ ಶೂದ್ರಸ್ತ್ರೀಯ ಗಂಡನೂ, 
ಹೆಂಗಸು ಮಕ್ಕಳಾಗಳನ್ನು ಕೊಂದವನೂ, ಪಾಪಿಯೂ, ಸುಳ್ಳಾಡುವವನೂ, 
ದುರ್ನಡತೆಯುಳ್ಳವನೂ, ಕಳ್ಳನೂ, ಪರಸ್ತ್ರ್ರೀಗಮನಮಾಡಿದವನೂ, ಇತರರ 
ಅಸವಾದವನ್ನು ಹೇಳುವವನೂ, ದ್ವೇಷವುಳ್ಳವನೂ, ಮತ್ತೊಬ್ಬನ ಜೀವನ 
ವನ್ನು ಹಾಳುಮಾಡಿದವನೂ, ಕೆಟ್ಟಿಕೆಲಸವನ್ನು ಮಾಡಿದವನೂ, ಕಾರ್ಯ 
ಧ್ವಂಸಿಯೂ, ಬ್ರಾಹ್ಮಣದ್ವೇಷಿಯೂ, ನೀಚಬ್ರಾಹ್ಮಣನೂ ಆಗಿದ್ದರೂ ಸಕಲ 
ಪಾಪಗಳಿಂದ ಮುಕ್ತನಾಗಿ ಕೈಲಾಸಕ್ಕೆ ಹೋಗುತ್ತಾನೆ. 

೫೪-೫೫. ಸೂತನು ಹೇಳುತ್ತಾನೆ:-ಹೀಗೆ ಧರ್ಮರಾಜನು ಅನೇಕ ಮಾತು. 


ಚತುರ್ಥೋಂಧ್ಯಾಯ॥ : ಇ 


ಯಮ ಉವಾಚ :-- 
ಯದಿ ತುಷ್ಬೊ ಆಸಿ ದೇನೇಶ ದಯಾಂ ಕೃ ತ್ವಾ ಮನೋಹರಿ । 
ತಂ ಕುರುಷ ಮಹಾಭಾಗ ತೈಲೋಕ್ಕಂ ಸಚರಾಚರಂ ॥ ೫೬ ॥ 
ಮನ್ನಾಮ್ನಾ' ಸ್ಥಾನಮೇತತದ್ದಿ : ಖ್ಯಾತಂ ತಾತ ಭನೇದಿತಿ। 
ಅಚ್ಛೇದ್ಯಂ ಚಾಂಪ್ಯಭೇದ್ಯಂ ಚ ಪುಣ್ಯಂ ಪಾಪಪ್ರಣಾಶನಂ ॥ ೫೭॥ 


ಸ್ಥಾನಂ ಕುರು ಮಹಾದೇನ ಯದಿ ತುಷ್ಟೋಂಸಿ ಮೇ ಭವಾನ್‌ । 

ಶಿವೇನ ಸ್ಥಾನಕಂ ದತ್ತಂ ಕಾಶೀತುಲ್ಯಂ ತದಾ ನೃಪ | 

ತದ್ದತ್ವಾ ಚ ಪುನಃ ಪ್ರಾಹ ಅನ್ಯಂ ವರಯ ಸತ್ತನು ॥ ೫೮ ॥ 
ಧರ್ಮ ಉವಾಚ :-- 

ಯದಿ ತುಷ್ಬೋಃಸಿ ದೇನೇಶ ದಯಾಂ ಕೃತ್ವಾ ಮನೋಪರಿ । 

ತಂ ಕುರುಷ್ಟ ಮಹಾಭಾಗ ತ್ರೈಲೋಕ್ಯಂ ಸ ಚರಾಚರಂ । 

ನರೇಣೈನಂ ಯಥಾಖ್ಯಾತಿಂ ಗನಿಷ್ಕಾಮಿ ಯುಗೇ ಯುಗೇ ॥ರ೯॥ 
ಈಶ್ವರ ಉವಾಚ :-- 

ಬ್ರೂಹಿ ಕೀನಾಶ ತತ್ಸರ್ವಂ ಪ್ರಕರೋಮಿ ತನೇಪ್ಸಿತಂ । 

ತಪಸಾ ತೋಷಿತೋಂಹಂ ವೈ ದದಾಮಿ ವರಮಾಪ್ಸಿತಂ ॥೬೦॥ 
ಯಮ ಉನಾಚ:-- 

ಯದಿ ಮೇ ನಾಂಛಿತಂ ದೇನ ದದಾಸಿ ತರ್ಹಿ ಶಂಕರ | 

ಅಸ್ಮಿನ್ಸ್ನ್ಮಾನೇ ಮಹಾಕ್ಟೇತ್ರೇ ಮನ್ನಾನ್ನಾ ಭನ ಸರ್ವದಾ HO 





ಗಳಿಂದ ಸ್ತುತಿಸಿ ಅತಿ ಭಕ್ತಿಯಿಂದ ನಮಿಸಲು, ಸಂತೋಷಗೊಂಡ ಪರವೆ ಶ್ವ 
ರನು " ನಿನಗಿಷ್ಟ ವಾದ ವರವನ್ನು ಕೇಳಿಕೊ' ಎಂದು ಸನಿನುಡಿಯನ್ನಾ ಡಿದನು. 

೫೬-೫೮. ಯಮನು ಹೇಳುತ್ತಾ ನೆ: ಮಹೇಶ್ವರ! ನೀನು” ತುಪ್ಪನಾ 
ಗಿದ್ದರೆ ನನ್ನಮೇಲೆ ದಯೆಮಾಡಿ ಈ ಸ್ನ ಸ್ಥಳವು ನ ಮೂರುಲೋಕದಲ್ಲಿ ನನ್ನ ೫ಸಂ 
ನಿಂದಪ್ರ ಸಿದ್ಧ ವಾಗುವಂತೆಯೂ, ಯಾರಿಂದಲೂ ಹಾಳುಮಾಡಲಾ ಗದಂತೆಯೂ. 
ಪವಿತ್ರ ಗುರುತರ ಪಾಪನಿವಾರೆಕವಾಗುವಂತೆಯೂ ಮಾಡು ಎಂದನು. 
ಆಗ `ಕಂಭುವು ಕಾಶಿಗೆ ಸಮಾನವಾದ ಆ ಸ್ಥಳವನ್ನು ಕೊಟ್ಟು ಬೇರೆ ವರವನ್ನು 
ನೇಳಿಕೊ ಎಂದು ತಿರುಗಿ ಹೇಳಿದನು. 

೫೯. ಧರ್ಮರಾಜನು ಹೇಳುತ್ತಾನೆ: ದೇವೇಶ! ನೀನು ಸಂತೋಷ 
ಗೊಂಡಿದ್ದರೆ ನನ್ನಮೇಲೆ ದಯೆಯಿಟ್ಟು ಪ್ರತಿ ಯುಗಗಳಲ್ಲಿಯೂ ನಿನ್ಸೀವರದಿಂದೆ 
ನಾನು ಮೂರುಲೋಕಗಳಲ್ಲಿಯೂ ಪ್ರಸಿದ್ಧನಾಗುವಂತೆ ಮಾಡು. 

೬೦. ಈಶ್ವರನು ಹೇಳುತ್ತಾನೆ:-ಯಮಧರ್ಮ! ನಿನ್ನ ವರದಿಂದ ಆನಂದ: 
ಗೊಂಡಿದ್ದೇನೆ. ನ್ನ ಅಭೀಪ್ಸಿ ತಗಳನ್ನೆಲ್ಲ ಹೇಳು. ಅವುಗಳನ್ನೆಲ್ಲ ಕೊಡುವೆನು. 

೬೧. ಯಮನು ಹೇಳುತ್ತಾನೆ:-ಶಂಕರ! ನೀನು ನನ್ನ ಇಷ್ಟಾ ರ್ಥಗಳನ್ನೆಲ್ಲ 
ಕೊಡುವುದಾದರೆ ಈ ಸ ಳದಲ್ಲಿ ನನ್ನ ಹೆಸರಿನಿಂದ ನೀನು ಯಾವಾಗಲೂ ನೆಲೆಸು. 


೪೪ ಶ್ರೀ ಸ್ಯಾಂದಮಹಾಪುರಾಣಂ 


ಧರ್ಮಾಃರಣ್ಯಮಿತಿ ಖ್ಯಾತಿಸ್ತೈಲೋಕ್ಕೇ ಸಚರಾಚರೇ । 

ಯಥಾ ಸಂಜಾಯತೇ ದೇವ ತಥಾ ಕುರು ಮಹೇಶ್ವರ ॥ ೬೨ 0 
ಈಶ್ವರ ಉವಾಚ: 

ಧರ್ಮಾಂರಣ್ಯವಿಂದಂ ಖ್ಯಾತಂ ಸದಾ ಭೂಯಾದ್ಯುಗೇ ಯುಗೇ । 

ತ್ನನ್ನಾನ್ನಾ ಸ್ಥಾಸಿತಂ ದೇನ ಖ್ಯಾತಿಮೇತದ್ಗಮಿಷ್ಯತಿ । 


ಅಥಾನ್ಯದಪಿ ಯತ್ಕಿಂಚಿತ್ಯರೋಮ್ಯೇವ ವದಸ್ಮ ತತ್‌ ॥ ೬೩ ॥ 
ಯಮ ಉವಾಚ :-- 

ಯೋಜನದ್ವಯನಿಸ್ತೀರ್ಣಂ ಮನ್ನಾನ್ನಾ ತೀರ್ಥಮುತ್ತಮಂ | 

ಮುಕ್ತೇಶ್ವ್ಚ ಶಾಶ್ವತಂ ಸ್ಥಾನಂ ಪಾನನಂ ಸರ್ವದೇಹಿನಾಂ i ೬೪ ॥ 

ಮಕ್ಸಿಕಾಃ ಕೀಟಿಕಾಶ್ಚೈನ ಪಶುಪಕ್ರಿಮೃಗಾದಯಃ । 

ಪತಂಗಾ ಭೂತವೇತಾಲಾ ಪಿಶಾಚೋರಗರಾಕ್ಬಸಾಃ ॥ ೬೫ ॥ 

ನಾರೀ ನಾಥ ನರೋ ನಾಥ ಮತ್ಸೇತ್ರೇ ಧರ್ನುಸಂಜ್ಞಕೇ | 

ತ್ಯಜತೇ ಯಃ ಪ್ರಿಯಾನ್ಸಾಣಾನ್ಮುಕ್ತಿರ್ಭವತು ಶಾಶ್ವತೀ ॥ ೬೬ ॥ 

ಏವಮಸ್ತ್ವಿತಿ ಸರ್ನೇಂಸಿ ದೇವಾ ಬ್ರಹ್ಮಾದಯಸ್ತಥಾ। 

ಪುಷ್ಪವೃಷ್ಟಿಂ ಪ್ರಕುರ್ನಾಣಾಃ ಪರಂ ಹರ್ಷಮನಾಸಪ್ಲುಯುಃ ॥೬೭॥ 

ದೇನದುಂದುಭಯೋ ನೇದುರ್ಗಂಧರ್ವಪತಯೋ ಜಗುಃ। 

ನವುಃ ಪುಣ್ಯಾಸ್ತಥಾ ವಾತಾ ನನೃತುಶ್ಚಾಂಪ್ಸರೋಗಣಾಃ ॥ ೬೮ ॥ 





೬೨. ಮಹೇಶ್ವರ! ಚರಾಚರಾತ್ಮಕವಾದ ಮೂರು ಲೋಕಗಳಲ್ಲಿ ಈ 
ಸ್ಥಳವು ಧರ್ಮಾರಣ್ಯವೆಂದು ಪ್ರಸಿದ್ಧವಾಗಲಿ. ಆರೀತಿ ನೀನು ಅನುಗ್ರಹಿಸು. 

೬೩. ಈಶ್ವರನು ಹೇಳುತ್ತಾನೆ: ಧರ್ಮರಾಜ! ಪ್ರತಿಯುಗದಲ್ಲಿಯೂ 
ಈ ಸ್ಥಳವು ಧರ್ಮಾರಣ್ಯವೆಂದು ಪ್ರಸಿದ್ಧವಾಗಿ. ನಿನ್ನ ಹೆಸರಿನಿಂದ ಸ್ಕಾಪಿತ 
ವಾದ ಈ ಕ್ಷೇತ್ರವು ಪ್ರಪಂಚದಲ್ಲಿ ನಿಖ್ಯಾತವಾಗುವುದು. ಮತ್ತೊಂದನ್ನೂ 
ನಿನಗೆ ಮಾಡಬೇಕೆಂದಿದ್ದೇನೆ. ಅದನ್ನು ಹೇಳು. 

೬೪-೬೬. ಯಮನು ಹೇಳುತ್ತಾನೆ: ಎರಡು ಗಾವುದ ವಿಶಾಲವಾದ 
ಈ ನನ್ನ ತೀರ್ಥವು ಸಕಲ ಪ್ರಾಣಿಗಳಿಗೆ ಪವಿತ್ರವಾದ ಶಾಶ್ವತ ಮೋಕ್ಸಸ್ಥಾನ 
ವಾಗಲಿ. ನೊಣಗಳೂ, ಹುಳುಗಳೂ, ಪಶುಗಳೂ, ಪಕ್ಷಿಗಳೂ, ಮೃಗಗಳೂ, 
ಮಿಡಿತೆಗಳೂ, ಭೂತ ಬೇತಾಳಗಳೂ, ನಿಶಾಚಗಳೂ, ಹಾವುಗಳೂ, ರಾಕ್ಸಸರೂ, 
ಹೆಂಗಸರೂ, ಗಂಡಸರೂ, ಯಾರೇ ಆಗಲಿ, ಈ ನನ್ನ ಧರ್ಮವೆಂಬ ಕ್ಷೇತ್ರದಲ್ಲಿ 
ಪ್ರಿಯವಾದ ಪ್ರಾಣವನ್ನು ಬಿಟ್ಟರೆ ಸ್ಥಿರವಾದ ಮೋಕ್ಸವು ಲಭಿಸಲಿ. 

೬೭. ಹೀಗೆಯೇ ಆಗಲೆಂದು ಶಿವನೂ ಬ್ರಹ್ಮಾದಿ ದೇವತೆಗಳೂ ಹೇಳಿ 
ಹೂಮಳೆಗರೆದು ಅತ್ಯಾನಂದಭರಿತರಾದರು. 

೬೮. ದೇವತೆಗಳ ನಗಾರಿಗಳು ಮೊಳಗಿದುವು. ಗಂಧರ್ವಶ್ರೇಷ್ಕರು 


ಚತುರ್ಥೊೋತಧ್ಯಾಯಃ ೪೯ 


ಸೂತ ಉವಾಚ: 

ಯಮೇನ ತಪಸಾ ಭಕ್ತ್ಯಾ ತೋಷಿತೋ ಹಿ ಸದಾಶಿವ । 

ಉನಾಚ ನಚನಂ ದೇವಂ ರನ್ಯುಂ ಸಾಧು ಮುನೋರಮಂ ॥ ೬೯॥ 

ಅನುಜ್ಞಾಂ ದೇಹಿ ಮೇ ತಾತ ಯಥಾ ಗಚ್ಛಾಮಿ ಸತ್ತರಂ | 

ಕೈಲಾಸಂ ಪರ್ನತಶ್ರೇಷ್ಮಂ ದೇವಾನಾಂ ಹಿತಕಾಮ್ಯಯಾ ॥೭೦॥ 
ಯಮ ಉವಾಚ :-- 

ನಮೇ ಸ್ಥಾನಂ ಪರಿತೃಕ್ತುಂ ತ್ವಯಾ ಯುಕ್ತಂ ಮಹೇಶ್ವರ । 

ಕೈಲಾಸಾದಧಿಕಂ ದೇವ ಜಾಯತೇ ನಚನಾದಿದಂ neon 
ಶಿವ ಉವಾಚ :-- 

ನಾಧು ಪ್ರೋಕ್ತಂ ತ್ವಯಾ ಯುಕ್ತಮೇಕಾಂಶೇನಾಂತ್ರ ಮೇ ಸ್ಥಿತಿಃ । 

ನ ಮಯಾತ್ಯ ಚತ ಸಾಧು ಸ್ಥಾ ನೆಂ ತವ ನನನಲ ಅಂ ೭೨ 

ನಿಶ್ಚೇಶ್ವರಂ ಹಾರಿ ಮನ್ನಾಮ್ನಾ $ತ್ರ ಭವಿಷ್ಯ ತಿ। 

ನಿವಮಾಕ್ತ್ವಾ 4 ನುಹಾಡೇವಸ್ತ ಸ ತೈವಾಂಂತರಥೀಯತ ॥ ೭೩ ॥ 

ಶಿವಸ್ಯ ಚಾ ತ್ತತ್ರ ತದಾ ಲಿಂಗಂ ತದದ್ದುತಂ 1 

ತಂ ದ ಷ್ಟಾ ಚ. ಸುಕ್ಕಿ ಸ್ತ ತ್ರ ಯಥಾ ನಾಮಾನುಕೀರ್ತನಂ ॥ ೭೪.॥ 





ಹಾಡಿದರು. ಗಾಳಿಯು ಸುಖವಾಗಿ ಬೀಸಿತು. ಅಪ್ಪ ರಸ್ತ್ರಿ €ಯರು ನರ್ತನ 
ಮಾಡಿದರು. 

೬೯-೭೦. ಸೂತನು ಹೇಳುತ್ತಾನೆ:-ಯನಮನ ತಸಸ್ಸಿಗೂ, ಭಕ್ತಿಗೂ 
ನೆಚ್ಚಿದ ಸದಾಶಿವನು ಮಗು! ದೇವತೆಗಳಿಗೆ ಹಿತವನ್ನು ಡಲು ಕೈಲಾಸ 
ನರ್ವತಕ್ಕೆ ಶೀಘ್ರವಾಗಿ ನಾನು ತೆರಳಲು ಅನುಮತಿಯನ್ನು ಕೊಡು ಅ 
ಹಗ ಮಾತನ್ನಾಡಿದನು. 

೭೧. ಯತು ಹೇಳುತ್ತಾನೆ :ಎಮಹೇಶ್ವ ರ! ನೀನು ಈ ನನ್ನ 1 
ನನ್ನು ಬಿಟ್ಟುಹೋಗಲುಚಿತವಲ್ಲ. ನಿನ್ನ ಮಾತಿನಂತೆ ಈಸ್ಗ ಳವು ಕ್ಲೆ 
ಹಂತ ನಗಲಸುವಡು. 

೭೨. ಶಿವನು ಹೇಳುತ್ತಾನೆ: ಯಮಧರ್ಮ! ನೀನು ಚೆನ್ನಾಗಿ ಹೇಳಿದೆ. 
ಒಂದಂಶದಿಂದ ನಾನು ಇಲ್ಲಿರುವುದು ಯೋಗ್ಯವಾದುದು. ನಿನ್ನೀ ನಿರ್ಮಲ 
ನಾದ ಸ್ತ ಕಳವನ್ನು ನಾನು ಬಿಡಲಿಲ್ಲ. 

2೩. ನಿಶ್ವೇಶ್ವರವೆಂಬ ಮಹಾಲಿಂಗವು ಇಲ್ಲಿ ನನ್ನ ಹೆಸರಿನಿಂದಿರುವುದು 
ನಿಂದು ಹೇಳಿ ಮಹೇಶ್ವ ರನು ಅಲ್ಲಿಯೇ ಾಯತಾಡಿಕು: 

೭೪-೭೫. ಶಿವನೆ ಮಾತಿನಂತೆ ಅದ್ಭುತವಾದ ಆ ಮಹಾಲಿಂಗವು ಅಲ್ಲಿ 
ಉದ್ಭವಿಸಲು ದೇವತೆಗಳೆಲ್ಲ ಆ ಧರ್ಮಾರಣ್ಯದಲ್ಲಿ ತಮ್ಮ ತಮ್ಮ ಹೆಸರಿನಿಂದ 
ಒಂದೊಂದು ಲಿಂಗವನ್ನು ಸ್ಥಾಪಿಸಿದರು. 





8೦ ಶ್ರೀ ಸ್ಮಾಂದಮಹಾಪುರಾಣಂ 


ಸ್ವಂ ಸ್ವಂ ಲಿಂಗಂ ತದಾ ಸೃಷ್ಟಂ ಧರ್ಮಾಃರಣ್ಯೇ ಸುಕೋತ್ತಮೈಃ | 


ಯಸ್ಯ ದೇವಸ್ಯ ಯಲ್ಲಿಂಗಂ ತನ್ನಾಮ್ಲಾ ಪರಿಕೀರ್ತಿತಂ ॥ ೭೫ ॥ 
ಸೂತ ಉವಾಚ: 

ಧರ್ಮೇಣ ಸ್ಥಾ ಹಿತಂ ಲಿಂಗಂ ಧರ್ಮೇಶ್ವ ರಮುಪಸ್ಥಿ ತಂ! 

ಸ್ಮರಣಾತ್ಪೂ ಜನಾತ ತ್ತಸ್ಯ ಸರ್ವಪಾಪೈಃ ಪ್ರ ಪ ಮುಚ ತೇ ॥ ೭೬॥ 

ಯದ ೨ಹ್ಮ ಜೋಗಿ ಗಮ್ಯ ೦ ಸತಾರ ಹೃ ದಯೇ ಸ್ಥಿತಂ | 

ತಿಷ್ಠ ತ ಯಸ್ಯ ಲಿಂಗಂ ತುಸ ಯಂಭುನನಿತಿ ಸ್ಥಿ ತ ॥ ೭೭॥ 

ಭೂತನಾಥಂ ಚ ಸಂಪೂಜ್ಯ ವ್ಯಾಧಿಭಿರ್ಮುಚ್ಯ ತೇ ಜನಃ । 

ಧರ್ಮವಾಪೀಂ ತತಶ್ಚೈವ ಚಕ್ರ ಕ್ತ ತತ್ರ ನುನೋರಮಾಂ ॥ ೭೮॥ 

ಆಹತ್ಯ ER ಜಲಂ "ವಾಸ್ಯಾಂ ಮುಮೋಚ ಹ। 

ಯಮತೀರ್ಥಸ್ವರೂಪಂ ಚ ಸ್ನಾನಂ ಕೃತ್ವಾ ಮನೋರಮಂ ॥ ೭೯ ॥ 
ಸ್ನಾನಾರ್ಥಂ ದೇನತಾನಾಂ ಚ ಖಸಹೀಣಾಂ ಭಾವಿತಾತ್ಮನಾಂ । 

ತತ್ರ ಸ್ನಾತ್ವಾ ಚ ಪೀತ್ವಾ ಚ ಸರ್ವಸಾಸೈಃ ಪ್ರ ಮುಚ್ಯ ತೆ ॥೪೦॥ 


ಧರ್ಮವಾಷ್ಯಾಂ ನರಃ ಸ್ನಾತ್ಸಾ ಸ ದೃಷ್ಟ್ಟ್ವಾ ಧರ್ಟೇಕಶ್ವ ಕಂ ಶಿವಂ । 
ಮುಚ್ಯತೇ ಸರ್ನಪಾಪೇಭ್ಯೊ ನ ಮಾಶುರ್ಗರ್ಭವಖನಿಕೇತ್‌ ॥ ೮೧॥ 





೭೬. ಸೂತನು ಹೇಳುತ್ತಾನೆ: ಯಮಧರ್ಮನು ಪ್ರತಿಷ್ಠೆಮಾಡಿದ 
ಧರ್ಮೇಶ್ವರಲಿಂಗವನ್ನು ಸ್ಮರಿಸುವುದರಿಂದಲೂ, ಪೂಜಿಸುವುದರಿಂದಲೂ 
ಮನುಷ್ಯನು ಸಕಲ ಪಾಪಗಳಿಂದ ಮುಕ್ತನಾಗುವನು. 

೭೭. ಸಮಸ್ತರ ಹೃದಯಗಳಲ್ಲಿರುವ ಯಾವ ಪರಬ್ರಹ್ಮನು ಯೋಗಿಗಳಿಗೆ 
ಧ್ಯಾನದಿಂದ ಹೊಂದಲು ಶಕ್ಯನೊ ಅವನೇ ಅಲ್ಲಿ ಸ್ವಯಂಭುವಲಿಂಗವೆಂಬ 
ಹೆಸರಿನಿಂದ ನೆಲಸಿದನು. 

೭೮-೮೦. ಮನುಷ್ಯರು ಆ ಮಹಾದೇವನನ್ನು ಆರಾಧಿಸಿ ವ್ಯಾಧಿಮುಕ್ತ 
ರಾಗುವರು. ಬಳಿಕ ಯಮನು ದೇವತೆಗಳ ಮತ್ತು ಜ್ಞಾನಿಗಳಾದ ಮುನಿಗಳ 
ಸ್ನಾನಕ್ಟೋಸ್ಪರ ಅಲ್ಲಿ ಮನೋಹರವಾದ ಧರ್ಮವಾಪೀ ಎಂಬ ಕೊಳವನ್ನು 
ಕಲ್ಪಿಸಿ ಅದರಲ್ಲಿ ಕೋಟಸಂಖ್ಯಾತಗಳಾದ ತೀರ್ಥಗಳ ನೀರನ್ನು ಬಿಟ್ಟನು. 
ಈ ಯನುತೀರ್ಥದಲ್ಲಿ ಸ್ನಾನಮಾಡಿದ ಮನುಷ್ಯನು ಸಕಲ ಪಾಪಮುಕ್ತ 
ನಾಗುವನು. 

೮೧. ಮಾನವನು ಈ ಧರ್ಮವಾಸಿಯಲ್ಲಿ ಮಿಂದು ಧರ್ಮೇಶ್ವರನ ದರ್ಶನ 
ಮಾಡಿದರೆ ಸಕಲಪಾಸಮುಕ್ತನಾಗಿ ತಿರುಗಿ ಜನ್ಮವಿಲ್ಲದೆ ಮೋಕ್ಸವನ್ನು 
ಹೊಂದುವನು. 


ಚತುರ್ಥೋ9ಧ್ಯಾಯಃ ೫೧. 


ತತ್ರ ಸ್ನಾತ್ವಾ ನರೋ ಯಸ್ತು ಕರೋತಿ ಯನುತರ್ಪಣಂ । 
ನ್ಯಾಧಿದೋಷನಿನಾಶಾರ್ಥಂ ಕ್ಲೇಶತೋಷೋಪಶಾಂತಯೇ ॥ 
ಯಮಾಯ ಧರ್ಮರಾಜಾಯ ಮೃತ್ಯನೇ ಚಾಂಂತಕಾಯ ಚ 


ವೈವಸ್ವತಾಯ ಕಾಲಾಯ ದಧ್ನಾಯ ಪರಮೇಷ್ಮಿನೇ ॥ ೮೨॥ 
ವೃಕೋದರಾಯ ನೃಕಾಯ ದಕ್ಸಿ ಣೇಶಾಯ ತೇ ನಮಃ । 

ನ ಚಿತ್ರ ಗೊಸ್ತಾ ಯ ಚಿತ್ರ ನ ಚಿತ್ರ ತೇ ನಮಃ ॥ ೮೩ ॥ 
ಯಮಾರ್ಥಂ ತರ್ಪಣ Fy FY 'ಧರ್ನುವಾಸ್ಯಾ ೦ ಕೆರಿಷ್ಯತಿ । 

ಸಾಕ ಕ್ಲೈತೈರ್ನಾಮ ಭಿಶ್ಟೈತೈಸ ಸ್ತ ಸ್ಯ ನೋಷದ್ರ ವೋ ಚ ॥ ೮೪ ॥ 
ಏಿಕಾಂತರಸ್ತೃತೀಯಸ್ಸು ಜ ; ರೆಪ್ತಾತುರ್ಥಿಕಸ್ತಥಾ | 

ನೇಲಾಯಾಂ ಜಾಯತೇ ಯಸ್ತು ಜ್ವರಃ ಶೀತಜ್ವರಸ್ತಥಾ ॥ ೮೫ ॥ 
ಪೀಡಯಂತಿ ನ ಚೈತಸ್ಯ ಯಸ್ಕೈನ ಮತಿರೀದೃಶೀ । 

ರೇವತ್ಯಾದಿಗ್ರಹಾ ದೋಷಾ ಡಾಕನೀ ಶಾಕನೀ ತಥಾ ॥ ೮೬ ॥ 
ಧನಧಾನ್ಯಸನೃದ್ಧಿಃ ಸ್ಪಾತ್ಸಂತತಿರ್ವರ್ಧಶೇ ಸದಾ। 

ಭೂತೇಶ್ವರಂ ತು ಸಂಪೂಜ್ಯ ಸುಸ್ನಾತೋ ವಿಜಿತೇಂದ್ರಿಯಃ ॥ ೮೭ ॥ 


ಸಾಂಂಗಂ ರುದ್ರಜಪಂ ಕೃತ್ವಾ ವ್ಯಾಧಿದೊಷಾತ್ಸ ಮುಚ್ಯತೇ | 
ಅಮಾವಾಸ್ಯಾಂ ಸೋಮದಿನೇ ವ್ಯತೀಷಾಶತೇ ಚ ವೈಧೃತೌ । 
ಸಂಕ್ರಾಂತೌ ಗ್ರಹಣೇ ಚೈನ ತತ್ರ ಶ್ರಾದ್ಧಂ ಸ್ಮೃತಂ ನೃಣಾಂ ॥ ೪೮॥ 





೮೨-೮೪. ಮನುಷ್ಯ ನು ತನ್ನ ವಾ ಧಿ ಮತ್ತು ದುಃಖಗಳ ನಾಶಕ್ಕಾಗಿ 
ಈ ಯಮತೀರ್ಥದಲ್ಲಿ 11 ಯಮ ಧರ್ಮರಾಜ, ಮೃತ್ಯು, ಅಂತಕ್ಕ. 
ವೈವಸ್ವತ ಕಾಲ, ದದ, ಪರಮೇಸ್ಮಿ, ವೃಕೋದರ, ವೃಕ, ದಕ್ಷಿಣೇಶ, 
ನೀಲ, ಚಿತ್ರಗುಪ್ತ, ಚಿತ್ರ, ವೈಚಿತ್ರ ಎಂಬ ನಾಮಗಳಿಂದ ಅಕ್ಬತಸಹಿತ 
ವಾಗಿ ಯಮನಿಗೆ ತರ್ನಣಮಾಡಿದರೆ ಅವನ ತೊಂದರೆಗಳು ನೀಗುವುವು. 

೮೫-೮೮. ಮೂರುದಿನಕ್ಕೊಮ್ಮೆಯೂ, ನಾಲ್ಕುದಿನಕ್ಕೊಮ್ಮೆಯೂ ಬರುವ 
ಜ್ವರವೂ, ಶೀತಜ್ವರವೂ, ರೇವತ್ಯಾದಿ ಗ್ರಹದೋಷಗಳೂ, ಶಾಕಿನೀ ಡಾಕಿಠೀ 
ನಿಶಾಚಗಳೂ ಪೀಡಿಸುವುದಿಲ್ಲ. ಧನ ಮತ್ತು ಧಾನ್ಯಗಳ ಸಮೃದ್ಧಿಯಾಗು 
ವುದು. ಯಾವಾಗಲೂ ಸಂತತಿಯು ಬೆಳೆಯುವುದು. ಈ ಧರ್ಮವಾಪಿಯಲ್ಲಿ 
ಸ್ನಾನಮಾಡಿ ಜಿತೇಂದ್ರಿಯನಾಗಿ ಮಹಾದೇವನನ್ನು ಪೂಜಿಸಿ ಅಂಗನ್ಯಾಸ 
ಕರನ್ಯಾಸಸಹಿತವಾದ ರುದ್ರಜಪವನ್ನುಮಾಡಿದರೆ ರೋಗದ ಉಪದ್ರವವು 
ಮಾಯವಾಗುವುದು. ಅಮಾನಾಸ್ಯೆ, ಸೋಮವಾರ, ವ್ಯತೀಪಾತ್ಕ ನೈಧೃತಿ, 
ಸಂಕ್ರಮಣ, ಗ್ರಹೆಣಕಾಲಗಳಲ್ಲಿ ಮಾನವನು ಇಲ್ಲಿ ಶ್ರಾದ್ಧ ಮಾಡಬೇಕೆಂದು 
ವಿಹಿತವಾಗಿದೆ. 


೫೨ ಶ್ರೀ ಸ್ಕಾಂದಮಹಾಪುರಾಣಂ 


ಶ್ರಾದ್ಧಂ ಕೃತಂ ತೇನ ಸಮಾಃ ಸಹಸ್ರಂ 
ನಿರಸ್ಯ ಚೈತತ್ಪಿತರಸ್ತ್ಪದಂತಿ । 
ಪಾನೀಯಮೇವಾಿ ತಿಲೈರ್ನಿಮಿಶ್ರಿತಂ 
ದದಾತಿಯೋನವೆೈ ಪ್ರಥಿತೋ ಮನುಷ್ಯಃ ॥೮೯॥ 
ಏಕವಿಂಶತಿವಾರೈಸ್ತು ಗಯಾಯಾಂ ಪಿಂಡದಾನತಃ । 
ಧರ್ಮೆೇಶ್ವರೇ ಸಕೃದ್ದತ್ತಂ ಸಿತೃಣಾಂ ಚಾಂಕ್ಟೃಯಂ ಭವೇತ್‌ ॥ ೯0॥ 
ಧರ್ಮೆಶಾತ್ಪಶ್ಚಿಮೇ ಭಾಗೇ ವಿಶ್ಚೇಶ್ವರಾಂತರೇಂಹಿ ವಾ | 


ಧರ್ಮುವಾಪೀತಿ ವಿಖ್ಯಾತಾ ಸ್ವರ್ಗಸೋಪಾನದಾಯಿನೀ ॥೯೧॥ 
ಧರ್ಮೇಣ ನಿರ್ಮಿತಾ ಪೂರ್ವಂ ಶಿವಾಂರ್ಥಂ ಧರ್ಮಬುದ್ಧಿನಾ | 
ತತ್ರ ಸ್ನಾತ್ವಾ ಚ ಪೀತ್ವಾ ಚ ತರ್ಪಿತಾಃ ಸಿತೃದೇನತಾಃ WF 


ಶನಾಪತ್ರಪ್ರಮಾಣಂ ತು ಪಿಂಡಂ ದದ್ಯಾಚ್ಹ್ಚ ಯೋ ನರಃ । 
ಧರ್ಮವಾಪ್ಯಾಂ ಮಹಾಪುಣ್ಯಾಂ ಗರ್ಭವಾಸಂ ನ ಚಾಪ್ಲುಯಾತ್‌ ॥೯೩॥ 
ಕುಂಭೀಪಾಕಾನ್ಮಹಾರೌದ್ರಾದ್ರೌರವಾನ್ನರಕಾತ್ತುನಃ | 


ಅಂಧತಾಮಿಸ್ರಕಾದ್ರಾಜನ್ಮುಚ್ಛತೇ ನಾಂತ್ರ ಸಂಶಯಃ ॥ ೯೪॥ 








ರ್‌. ಇಂತಹ ದಿನಗಳಲ್ಲಿ ಇಲ್ಲಿ ಯಾವ ಮನುಷ್ಯನು ತಿಲತರ್ಪಣವನ್ನು 
ಮಾಡುವನೊ, ಅಂತಹ ಮನುಷ್ಯನ ಪಿತೃಗಳು ಅವನು ಹಿಂದೆ ಮಾಡಿದ 
ಸಾವಿರವರ್ಷದ ಶ್ರಾದ್ಧವನ್ನೂ ತ್ಯಜಿಸಿ ಈ ತರ್ನಣೋದಕವನ್ನೇ ಪಾನ 
ಮಾಡುವರು. 

೯೦. ಇಪ್ಪತ್ತೊಂದುಸಾರಿ ಗಯೆಯಲ್ಲಿ ಪಿಂಡಪ್ರದಾನ ಮಾಡುವುದಕ್ಕಿಂತ 
ಈ ಧರ್ಮೆಶ್ವರದಲ್ಲಿ ಒಂದುಸಾರಿ ಮಾಡಿದ ಸಿಂಡಪ್ರದಾನವು ಪಿತೃಗಳಿಗೆ 
ಅಕ್ಸುಯವಾಗುವುದು. 

೯೧-೯೨. ಧರ್ಮೆಶ್ವರಕ್ಕಿಂತ ಪಶ್ಚಿಮದಲ್ಲಿ ವಿಶ್ವೇಶ್ವರನ ಸಮ್ಮುಖದಲ್ಲಿ 
ಧರ್ಮಬುದ್ಧಿ ಯುಳ್ಳ ಯಮನು ಮಹೇಶ್ವರನಿಗೋಸ್ಕರ ಸ್ವರ್ಗಲೋಕದ ಮೆಟ್ಟ 
ಲಾದ ಧರ್ಮವಾಪಿಯನ್ನು ನಿರ್ಮಿಸಿ ಅದರಲ್ಲಿ ಸ್ನಾನಮಾಡಿ ತರ್ಪಣದಿಂದ 
ಪಿತೃದೇವತೆಗಳನ್ನು ಸಂತೋಷಗೊಳಿಸಿದನು. 

೯೩. ಪವಿತ್ರವಾದ ಧರ್ಮವಾಪಿಯಲ್ಲಿ ಯಾವ ನರನು ಶನಿಯ ಎಲೆಯಷ್ಟು 
ಪ್ರಮಾಣದ ಪಿಂಡವನ್ನು ಪಿತೃಗಳಿಗೆ ಕೊಡುವನೊ, ಅವನು ತಿರುಗಿ ತಾಯಿಯ 
ಗರ್ಭವಾಸಕಷ್ಟವನ್ನನುಭನಿಸಿ ಹುಟ್ಟುವುದಿಲ್ಲ. 

೯೪. ರಾಜೇಂದ್ರ! ಮತ್ತು ಕುಂಭೀಪಾಕ್ಕ ರೌರವ, ಅಂಧತಾಮಿಸ್ರಕ 
ವೆಂಬ ಅತಿಭಯಂಕರವಾದ ನರಕದಿಂದ ಮುಕ್ತನಾಗುವನು. ಸಂದೇಹವಿಲ್ಲ. 


ಚತುರ್ಸೋ5ಧ್ಯಾಯಃ ೫೩ 


ಸೂತ ಉವಾಚ ;-- 
ಏಕನರ್ಷಂ ತರ್ಪಣೇಯಂ ಧರ್ಮವಾಸ್ಯಾಂ ನರೋತ್ತಮಃ । 
ಯುತೌ ಮಾಸೇ ಚ ಪಕ್ಸೇ ಚ ನಿಪರೀತಂ ಚ ಜಾಯತೇ ॥ ೯೫ ॥ 
ಬರ್ಹಿಷದೋಂಗ್ನಿಷ್ಟಾತ್ತಾಶ್ಚ ಆಜ್ಯಸಾಃ ಸೋಮಸಾಸ್ತಥಾ | 
ತೃಪ್ತಿಂ ಪ್ರಯಾಂತಿ ಪರಮಾಂ ವಾಸ್ಯಾಂ ವೈ ತರ್ಪಣೇನ ತು... ॥೯೬॥ 
ಕುರುಕ್ಸೇತ್ರಾದಿಕ್ಸೇತ್ರಾಣಿ ಅಯೋಧ್ಯಾದಿಪುರಾಸ್ತಥಾ | 
ಪುಷ್ಕರಾದ್ಯಾನಿ ಸರ್ವಾಣಿ ಮುಕ್ತಿನಾಮಾನಿ ಸಂತಿ ವೈ ॥೯೭॥ 
ತಾನಿ ಸರ್ವಾಣಿ ತುಲ್ಕಾನಿ ಧರ್ನುಕೂಪೋಂಧಿಕೋ ಭವೇತ್‌ । 
ಮಂತ್ರೋ ವೇದಾಸ್ತಥಾ ಯಜ್ಞಾ ದಾನಾನಿ ಚ ವ್ರತಾನಿ ಚ Fen 
ಅಕ್ಸಯಾಣಿ ಪ್ರಜಾಯಂತೇ ದತ್ವಾ ಜಷ್ಟ್ವಾ ನರೇಶ್ವರ । 
ಅಭಿಚಾರಾಶ್ಚ ಯೇ ಚಾಂನ್ಯೇ ಸುಸಿದ್ಧಾಂ ಥರ್ನನೇದಜಾಃ ॥೯೯॥ 
ತೇ ಸರ್ವೇ ಸಿದ್ಧಿಮಾಯಾಂತಿ ತಸ್ಮಿನ್ಸ್ಟ್ಮಾನೇ ಕೃತಾ ಅಸಿ । 
ಆದಿತೀರ್ಥಂ ನೃಪಶ್ರೇಷ್ಠ ಕಾಜೇಶೈರುಪಸೇನಿತಂ wu ೧೦೦ ॥ 


ಸಿದ್ದಿಸ್ಮಾನಂ ಸುಸೌಮ್ಯಂ ಚ ಬ್ರಹ್ಮಾದ್ಯೈರಸಿ ಸೇವಿತಂ । 
ಕೃತೇ ತು ಯುಗಪರ್ಯಂತಂ ಶ್ರೇತಾಯಾಂ ಲಕ್ಸೃಪಂಚಕಂ ॥ ೧೦೧ ॥ 








೯೫. ಸೂತನು ಹೇಳುತ್ತಾನೆ:;-- ಮಾನವನು ಇಲ್ಲಿ ಒಂದು ಖುತು, 
ಒಂದು ತಿಂಗಳು, ಒಂದು ಸಕ್ಸಗಳಲ್ಲಿ ಮಾಡಿದ ತರ್ಪಣವು ಒಂದು ವರ್ಷದ 
ತರ್ಪಣನಾಗುವುದು. 

೯೬. ಈ ಧರ್ಮವಾಸಿಯಲ್ಲಿ ಮಾಡಿದ ತರ್ಪಣದಿಂದ ಬರ್ಹಿಷದ, ಅಗ್ನಿ 
ಷ್ವಾತ್ರ, ಆಜ್ಯಪ್ಯ, ಸೋಮಪ ಎಂಬ ಪಿತೃಗಳು ತೃಪ್ತಿಯೊಂದುವರು. 

೯೭-೧೦೨. ಕುರುಕ್ಸೇತ್ರ ಮೊದಲಾದ ಕ್ಷೇತ್ರಗಳೂ, ಅಯೋಧ್ಯಾದಿ 
ಪಟ್ಟಿಣಗಳೂ, ಪುಷ್ಕರಾದಿ ಮುಕ್ಕಿಕ್ಸೇತ್ರಗಳೂ ಸಮಾನವಾದುವು. ಇವುಗಳಿ 
ಗಿಂತ ಧರ್ಮಕೂಪವು ಹೆಚ್ಚಿನದು. ರಾಜೇಂದ್ರ! ಇಲ್ಲಿ ಜಪಿಸಿದ ಮಂತ್ರ 
ಗಳು, ವೇದಗಳು, ಯಜ್ಞಗಳು, ಕೊಟ್ಟ ದಾನಗಳು, ವ್ರತಗಳು ಇವೆಲ್ಲ ಅಕ್ಷಯ 
ಗಳಾಗುವುವು. ಈ ಸ್ಥಳದಲ್ಲಿ ಅಥರ್ವಣ ವೇದೋಕ್ತವಾದ ಮಾಟಗಳನ್ನು 
ಮಾಡಿದರೂ ಅವು ಸಫಲನಾಗುವುವು. ಈ ಸಿದ್ಧಿಕ್ಸೇತ್ರವನ್ನು ಯಮ, 
ಬ್ರಹ್ಮ ಮಹೇಶ್ವರರೂ ಸೇವಿಸಿರುತ್ತಾರೆ. ಇದರಲ್ಲಿ ಮಾಡಿದ ಸತ್ಕಾರ್ಯದ 
ಫಲವು ಕೃತಯುಗದಲ್ಲಿ ಒಂದು ಯುಗಕಾಲದಲ್ಲಿಯೂ, ತ್ರೇತಾಯುಗದಲ್ಲಿ 
ಐದುಲಕ್ಬವರ್ಷಗಳಲ್ಲಿಯೂ, ದ್ವಾಪರಯುಗದಲ್ಲಿ ಒಂದು ಲಕ್ಷವರ್ಷಗಳಲ್ಲಿಯೂ, 


೫೪ ಶ್ರೀ ಸ್ಥಾಂದಮಹಾಪುರಾಣಂ 


ದ್ವಾಪರೇ ಲಕ್ಪ್ಮಮೇಕಂ ತು ದಿನೈಕೇನ ಫಲಂ ಕಲೌ । 
ಏತದುಕ್ತಂ ಮಯಾ ಬ್ರಹ್ಮನ್ನರ್ಮಾರಣ್ಯಸ್ಕ ವರ್ಣನಂ | 


ಫಲಂ ಚೈವಾಃತ್ರ ಸರ್ವಂ ಹಿ ಉಕ್ತಂಜೆ ಸಾಯನೇನ ತು ॥೧೦೨॥ 
ಸೂತ ಉವಾಚ; 

ಅತಃ ಪರಂ ಪ್ರವಕ್ಸ್ಯಾಮಿ ಧರ್ಮವಾಕ್ಯಂ ಮನೋರಮಂ | 

ದೇವಾನಾಂ ಹಿತಕಾಮಾಯ ಅಜ್ಞಾಪ್ಯ ಚ ಯದುಕ್ತನಾನ್‌ ॥೧೦೩॥ 


ಬ. ಉವಾಚ :-- 
ಸ್ಮಿನ್ನೆ ಎತ್ರೇಪ್ರ ಕುರ್ವಂತಿ ನಿಷ್ಣು ಮಾಯಾನಿಮೋಹಿತಾಃ । 


೬% 


ಚೆ ಮಹಾಮಷ್ಟಂ ಸ್ಟ 'ರ್ಣಸ್ತೆ ೀಯಾದಿಕಂ ತಥಾ ॥ ೧೦೪ ॥ 
ಅನೃಚ್ಚ ನಿಕೃತಿಂ ಸರ್ವಂ ತುರತ ನರಕಂ ನ ಪ್ರಜೇತ್‌ । 

ಅನ ಕ್ಷೇತ್ರೇ ಕೃ ಕೃತಂ ಪಾಪಂ ಧರ್ಮಾಂರಣ್ಕೇ ನಿನತ್ರ ತಿ ॥ ೧೦೫ ॥ 
ಧರ್ಮಾಃರಣ್ಯೇ ಕೃತಂ ಪಾಪಂ ವಜ 5 ಶೇಪೋ ಭವಿಷ್ಯ ತಿ 1 

ಯಥಾ ಪುಣ್ಯಂ ತಥಾ ಪಾಪಂ ಯತ್ಸಿಂಜಿಚ್ಚ ಶುಭಾಶುಭಂ ॥ ೧೦೬ ॥ 


ತತ್ಸರ್ನಂ ವರ್ಧತೇ ನಿತ್ಯಂ ವರ್ಷಾಣಿ ಶತನಿತ್ಯುತ । 

ಕಾಮಿನಾಂ ಕಾನುದಂ ಪುಣೃಂ ಯೋಗಿನಾಂ ಮುಕ್ತಿದಾಯಕೆಂ ॥ ೧೦೭ ॥ 
ಸಿವ್ಧಾನಾಂ ಸಿದ್ಧಿ ದಂಪ್ರೊ ಕ್ರ ೦ ಧರ್ಮಾಂರಣ್ಯಂ ತು ಸರ್ವದಾ । 
ಅಸುತ್ರೊ e ಲಭತೇ ಪುತಾ ್ರಿಸ್ಷಿರ್ಧನೋ ಧನವಾನ್ಸ ಷೇತ್‌ ॥ ೧೦೮ ॥ 





ಕಲಿಯುಗದಲ್ಲಿ ಒಂದು ದಿನದಲ್ಲಿಯೂ ಸಿದ್ಧಿಸುವುದು. ಈಗ ನಾನು ಚ 


ರಣ್ಯವನ್ನು ವರ್ಣಿಸಿದ್ದಾಯಿತು. ಈ ಫಲಗಳನ್ನೆಲ್ಲ ವ್ಯಾಸರೇ ಹೇಳಿರುತ್ತಾರೆ. 

೧೦೩. ಸೂತನು ಹೇಳುತ್ತಾನೆ:--ಇನ್ನುಮುಂದೆ ಧರ್ಮರಾಜನು ದೇವತೆ 
ಗಳ ಹಿತದೃಷ್ಟಿಯಿಂದ ಅಪ್ಪಣೆಮಾಡಿ ಹೇಳಿದ ಮನೋಹರವಾದ ಮಾತನ್ನು 
ಹೇಳುವೆನು. 

೧೦೪-೧೦೮. ಧರ್ಮನು ಹೇಳುತ್ತಾನೆ:--ಈ ಕ್ಲೇತ್ರದಲ್ಲಿ ಮನುಷ್ಯರು 
ವಿಷ್ಣುಮಾಯೆಯಿಂದ ಮೋಹಗೊಂಡು ಪರಸ್ತ್ರೀಗಮನ, ಅತಿ ಕೆಟ್ಟುದಾದ 
ಸುವರ್ಣಚೌರ್ಯ, ಇನ್ನೂ ಇತರ ಕೆಟ್ಟ ಕೆಲಸಗಳನ್ನು ಮಾಡಿದರೆ ನರಕವನ್ನು 
ಸೇರುವರು. ಇತರ ಪುಣ್ಯಕ್ಸೇತ್ರ ಗಳಲ್ಲಿ ಮಾಡಿದ ಪಾಪವು ಧರ್ಮಾರಣ್ಯದಲ್ಲಿ 
ನಾಶವಾಗುವುದು. ಇಲ್ಲಿ ಮಾಡಿದ ಪಾನವು ಇನ್ನೂ ದ ಢವಾಗುವುದು. ಇಲ್ಲಿ 
ಪುಣ್ಯವು ಹೆಚ್ಚಿದಂತೆ ಪಾಪವೂ ನೂರುವಷ ಗಳವರೆಗೆ ನಿತ್ಯ ವೂವೃ ದ್ವಿಯಾಗುತ್ತಿ 
ರುವುದು. ಣೆ ಧರ್ಮಾರಣ್ಯವು ಕಾಮಿಗಳಿಗೆ ಕಾಮವನ್ನೂ ಯೋಗಿಗಳಿಗೆ 
ಮೋಕ್ಸವನ್ನೂ, ಸಿದ್ಧರಿಗೆ ಜ್ಞಾನಸಿದ್ದಿಯನ್ನೂ Ms ನೀಡುವುದು. 
ಮಕ್ಕಳಿಲ್ಲದವನು ಮಕ್ಕಳನ್ನೂ, ಬಡಔನು ಹಣವನ್ನೂ ನಡೆಯುವನು. 


ಚತುರ್ಥೋರಧ್ಯಾಯಃ ೫೫ 


ಏತದಾಖ್ಯಾನಕಂ ಪುಣ್ಯಂ ಧರ್ಮೇಣ ಕಥಿತಂ ಪುರಾ । 
ಯಃ ಶೃಣೋತಿ ನರೋ ಭಕ್ತ್ಯಾ ನಾರೀ ವಾ ಶ್ರಾನಯೇತ್ತು ಯಃ । 
ಗೋಸಹಸ್ರಫಲಂ ತಸ್ಯ ಅಂತೇ ಹರಿಪುರಂ ವ್ರಜೇತ್‌ ॥ ೧೦೯॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರಾಂರಣ್ಯ ಮಾಹಾತ್ಮ್ಯೇ *" ಕ್ಷೇತ್ರ 
ಸ್ಥಾಪನಂ'' ನಾಮ ಚತುರ್ಥೋಂಧ್ಯಾಯಃ 





೧೦೯. ಹಿಂದೆ ಧರ್ಮರಾಜನು ಹೇಳಿದ ಪವಿತ್ರವಾದ ಈ ಕಥೆಯನ್ನು 
ಗಂಡಸಾಗಲಿ, ಹೆಂಗಸಾಗಲಿ ಕೇಳಿದರೆ ಅಥವಾ ಇನ್ನೊಬ್ಬರಿಗೆ ಹೇಳಿದರೆ ಅವರು 
ಸಹಸ್ರಗೋದಾನದ ಫಲವನ್ನು ಸಡೆದು ಕೊನೆಯಲ್ಲಿ ಕೈಲಾಸವನ್ನು 
ಹೊಂದುವರು. 





ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಕ 
66 ೨೨ ತಿ 
ಮಾಹಾತ್ಮ್ಮ್ಯದಲ್ಲಿ ಕ್ರೇತ್ರಸ್ಮಾಪನ ನೆಂಬ 
ನಾಲ್ಕನೆಯ ಅಧ್ಯಾಯವು ನಂಂಗಿದುದು 


1 ಶ್ರೀಃ ॥ 
ಅಭ ಪಂಚಮೋಂಧ್ಯಾಯಃ 
ಸಬಾಚಾರವರ್ಣನಂ 

ವ್ಯಾ ಸ ಉವಾಚ:- 
ಅತನಕಂ ಪ್ರವಕ್ಸ್ರ್ಯಾನಿ ಧರ್ಮಾಂರಣ್ಯನಿವಾಸಿನಾ । 
ಯತ್ಕಾರ್ಯಂ ಪುರುಷೇಣೇಹ ಗಾರ್ಹಸ್ಥ್ಯಮನುತಿಷ್ಯತಾ ॥೧॥ 
ಧರ್ಮಾಃರಣ್ಯೇಷು ಯೇ ಜಾತಾ ಬ್ರಾಹ್ಮಣಾಃ ಶುದ್ಧವಂಶಜಾಃ | 
ಅಷ್ಟಾದಶಸಹಸ್ರಾಶ್ಚ ಕಾಜೇಶೈಶ್ಚ ವಿನಿರ್ನಿತಾಃ ॥ ೨॥ 
ಸದಾಚಾರಾಃ ಪನಿತ್ರಾಶ್ನ್ಟ ಶ್ಲ ಜ್ಹಾ ಹ್ಮ ಹಾಬ ಿಹ್ಮವಿತ್ತಮಾಃ [ 
ತೇಷಾಂ ವರ್ಶನಮಾತ್ರೆ ಣನ ea ಪಾಪೈರ್ನಿಮುಚ್ಯತೇ Han 

ಯುಧಿಷ್ಠಿರ ಗರ — 
ಪಾರಾಶರ್ಯ ಸಮಾಖ್ಯಾಹಿ ಸದಾಚಾರಂ ಚ ಮೇ ಪ್ರಭೋ | 
ಆಚಾರಾದ್ಧರ್ಮಮಾಪ್ನೋತಿ ಆಚಾರಾಲ್ಲಭತೇ ಫಲಂ । 
ಆಚಾರಾಜಚ್ಛ್ರ್ರಯಮಾಪ್ನೋತಿ ತವಾಜಾರಂ ವದಸ್ವ ಮೇ ॥೪॥ 

ವ್ಯಾಸ ಉವಾಚ :-- 
ಸ್ಥಾವರಾಃ ಕೃಮಯೋಬ್ದಾಶ್ತ ಪಕ್ಸಿಣಃ ಪಶವೋ ನರಾಃ । 
ಕ್ರಮೇಣ ಧಾರ್ಮಿಕಾಸ್ತ್ವೈ ಆತ ಏತೇಭೊ ಸ್ಯ ಧಾರ್ಮಿಕಾಃ ಸುರಾಃ ॥೫॥ 





SR ಅನುವಾದ 
ಸದಾಚಾರವರ್ಣನ 

೧. ವ್ಯಾಸನು ಹೇಳುತ್ತಾನೆ -- ಇನ್ನುಮುಂದೆ ಧರ್ಮಾರಣ್ಯದಲ್ಲಿ ವಾಸಿಸುವ 

ಹಸನು ಮಾಡುವ ಕಾರ್ಯವನ್ನು ಹೇಳುವೆನು. 

೨-೩. ಧರ್ಮಾರಣ್ಯದಲ್ಲಿ ಹುಟ್ಟಿದ ಶುದ್ಧವಂಶಜರೂ, ಬ್ರಹ್ಮಾದಿಗಳಿಂದ 
ನಿರ್ಮಿತರೂ, ಒಳ್ಳೆಯ ನಡತೆಯುಳ್ಳವರೂ, ಬ್ರಹ್ಮಜ್ಞಾನಿವರೇಣ್ಯರೂ, ಶುದ್ಧರೂ 
ಆಗಿರುವ ಬ್ರಾಹ್ಮಣರನ್ನು ನೋಡುವುದರಿಂದಲೆ ಮನುಷ್ಯನ ಪಾಪವು ತೊಲಗು 
ವುದು. 

೪. ಯುಧಿಷ್ಠಿರನು ಕೇಳುತ್ತಾನೆ :-ಪರಾಶರತನಯನಾದ ಎಲೈ ವ್ಯಾಸನೆ! 
ಮನುಷ್ಯನು ಸದಾಚಾರದಿಂದ ಧರ್ಮವನ್ನೂ, ಸತ್ಸಲವನ್ನೂ, ಸಂಪತ್ತನ್ನೂ 
ಪಡೆಯುವನು. ಅಂತಹ ಒಳ್ಳೆ ಯ ಆಚಾರವನ್ನು ನನಗೆ ಹೇಳು. 

೫. ವ್ಯಾಸನು ಚತ ನೆ ಸ್ಟ್ರಾ ವರಗಳು, ಕೃ ಮಿಗಳು, ನೀರಿನಲ್ಲಿರುವ 
ಪ್ರಾಣಿಗಳು, ಹಕ್ಕಿಗಳು, ಪಶುಗಳು, ಮನುಷ್ಯರು, ಇಸ ಕ್ರಮವಾಗಿ ಒಬ್ಬರ 
ಗಿಂತೊಬ್ಬ ರು ಧರ್ಮಿಷ್ಠರು. ಇವರೆಲ್ಲರಿಗಿಂತಲೂ ದೇವತೆಗಳು ಧಾರ್ಮಿಕರು. 


ಸಂಚಮೋ9ಧ್ಯಾಯಃ ೫೭ 


ಸಹಸ್ರಭಾಗಾತ್ರಥಮೇ ದ್ವಿತೀಯಾಂನುಕ್ರಮಾಸ್ತಥಾ । 


ಸರ್ವ ಏತೇ ಮಹಾಭಾಗಾಃ ಪಾಪಾನ್ಮುಕ್ತಿಸಮಾಶ್ರಯಾಃ ॥೬॥ 
ಚತುರ್ಣಾಮಸಿ ಭೂತಾನಾಂ ಪ್ರಾಣಿನೋ$ತೀನ ಚಜೋತ್ತಮಾಃ ! 

ಷಾ ್ರಿಣಿಭ್ಯೊ ಪ ಮುನಿಶ್ರೇಷ್ಠಾಃ ಸರ್ವೇ ಬುಮ್ಹ್ಯುಪಜೀವನಃ 2 
ಮತಿಮದ್ಬೊ 56 ನರಾಃ ತ ೇಷ್ಮಾಸ್ತೇಭ್ಯಃ ಶ್ರೇಷ್ಠಾಸ್ತು ನಾಡವಾಃ | 

ವಿಸೆ ಕ್ರೀಭ್ಕೊ ತೆ ಚೆ ನಿದಾ ಸೋ ನಿಷ ದ್ಧ ಕ್ಸ ತಬುದ್ಧ ಯಃ wen 
ತ್‌ ತಥೀಭ್ಯೊ ಆಪಿ ಕರ್ತಾನಃ ಕರ್ತ,ಭ್ಯೋಬ್ರ ಪ್ರೆ ತತ್ಪ ರಾ । 

ಸ ತೇಭ್ಯೋಂಭ್ಯಧಿಕಃ ಶಶ್ಚಿತ್ರ್ರಿಷು ಲೋಕೇಷು ಭಾರತ 1೯ ॥ 


ಅನ್ಯೋನ್ಯಪೂಜಕಾಸ್ತೇ ನೈ ತಪೋನಿದ್ಯಾನಿಶೇಷತಃ । 
ಬ್ರಾಹ್ಮ ಹೋ ಬ ಹ್ಮ ಣಾ ಸೃ ಷ್ಟಃ ಸರ್ವಭೂತೇಶ್ವ ರೋ ಯತಃ ॥೧೦॥ 
ಅತೋ ಜಗತ್ತಿ ತ ಸರ್ವಾ ಬ್ರಾ ಹ | ಹೋಂರ್ಹತಿ ನಾಂಪರಃ । 

ಸದಾಚಾರೋ. ತೆ ಸರ್ವಾಹೊೋ ನಾಚಾರಾದ್ವಿ ಚ್ಯುತಃ ಪುನಃ ॥೧೧ 





೬. ಸ್ಥಾವರಗಳಲ್ಲಿ ಸಾವಿರದಲ್ಲೊಂದ. ಹಾರ ಕೃಮ್ಯಾದಿಗಳಲ್ಲಿ 


ಪ್ರತಿಯೊಬ್ಬ ಮಹಾನುಭಾನರೂ ಪಾಸಮುಕ್ತರ ನೋಕ್ಪವನ್ನು ಪಡೆ 
ಯುವರು. 

೭. ನಾಲ್ಕುನಿಧವಾದ ಭೂತಗಳಲ್ಲಿ ಪ್ರಾಣಿಗಳು ಅತ್ಯಂತ ಉತ್ತಮ 
ವಾದುವು. ಈ ಪ್ರಾಣಿಸಾಮಾಕೃಕ್ಕಿಂತ ಬುದ್ಧಿಯಿಂದ ಜೀವಿಸುವವರು 
ಉತ್ತಮರು. 


೮೯. ಬುದ್ದಿ ವಂತರಲ್ಲಿ ಮನುಷ್ಯರು ಶೆ ಶ್ರೇಷ್ಠರು. ಅವರಿಗಿಂತ ಬ್ರಾಹ್ಮ 
ಣರೂ, ಬ್ರಾಹ್ಮಣರಿಗಿಂತ ವಿದ್ವಾಂಸರೂ. ವಿದ್ವಾಂಸರಿಗಿಂತ ಕುಶಲಬುದ್ಧಿ 
ಯುಳ್ಳ ವರೂ ಕ ಲ ಬುದ್ಧಿ ನಂತ ಅನುಷ್ಕಾನಪರರೂ, ಅನುಷ್ಠಾನ 
ತ ಬ್ರಹ್ಮ ಜ್ಞಾ ನಿಗಳೂ "ಉತ್ತ ಮರು. ಬ್ರಹ್ಮನಿಷ್ಯರಿಗಿಂತ ಉತ್ತಮರು 
ಮೂರುಲೋಕದಲ್ಲಿ 'ಯಾರೂ ಇರುವುದಿಲ್ಲ. 

೧೦. ಬ್ರಹ್ಮದೇವನು ಬ್ರಾಹ್ಮಣರನ್ನು ಸಕಲ ಪ್ರಾಣಿಗಳಿಗಿಂತ ಶ್ರೇಷ್ಠ 
ರನ್ನಾಗಿ ಸೃಷ್ಟಿ ಸಿರುವುದರಿಂದ ಅವರಲ್ಲಿ ತಪಸ್ಸು ವಿದ್ಯೆ ಇವುಗಳ ಅತಿಶಯದಿಂದ 
ಬ್ರಾಹ್ಮಣರು ಪರಸ್ಪರ ಪೂಜ್ಯರು. 

೧೧. 0೧200 ಬ್ರಾಹ್ಮಣನು ಪ್ರಸಂಚದಲ್ಲಿರುವುದನ್ನೆಲ್ಲ ಹೊಂದಲು 
ಯೋಗ್ಯನು. ಇತರನು ಹಾಗೆ ಎಲ್ಲವನ್ನೂ ಹೊಂದಲು ಅರ್ಹನಲ್ಲ. ಆದರೆ 
ಸದಾಚಾರಿಯಾದ ಬ್ರಾ ಹ್ಮಣನು ಸರ್ವಪೂಜ್ಯನೇ ಹೊರತು ಆಚಾರಭ್ರಷ್ಟನಾದ 
ಬ್ರಾಹ್ಮಣನು ಪೂಜ್ಯನಲ್ಲ. 


೫೪ ಶ್ರೀ ಸ್ಯಾಂದಮಹಾಪುರಾಣಂ 


ತಸ್ಮಾದ್ವಿಪ್ರೇಣ ಸತತಂ ಭಾವ್ಯಮಾಚಾರಶೀಲಿನಾ | 


ನಿದ್ದೇಷರಾಗರಹಿತಾ ಅನುತಿಸ್ಕಂತಿ ಯಂ ಮುನೇ ॥ ೧೨ ॥ 
ಸದ್ಧಿಯಸ್ತಂ ಸದಾಚಾರಂ ಧರ್ಮಮೂಲಂ ವಿಡುರ್ಬುಧಾಃ । 

ಲಕ್ಸ್ಮಣೈಃ ಸರಿಹೀನೋಂಪಿ ಸಮ್ಯಗಾಚಾರತತ್ಸರಃ ॥ ೧೩॥ 
ಶ್ರಷ್ಠಾಲುರನಸೂಯಶ್ಚ ನರೋ ಜೀನೇತ್ಸಮಾಃ ಶತಂ | 
ಶ್ರುತಿಸ್ಮೃತಿಭ್ಯಾನುದಿತಂ ಸ್ಕೇಷು ಸ್ಟೇಷು ಚ ಕರ್ಮಸು ॥ ೧೪ ॥ 


ಸದಾಚಾರಂ ನಿಷೇವೇತ ಧರ್ಮಮೂಲನುತಂದ್ರಿತಃ । 
ದುರಾಚಾರರತೋ ಲೋಕೇ ಗರ್ಹಣೀಯಃ ಪುಮಾನ್ಸವೇತ್‌ ॥ ೧೫ ॥ 
ವ್ಯಾಧಿಭಿಶ್ವಾಂಭಿಭೂಯೇತ ಸದಾಂಲ್ಬಾಯುಃ ಸುದುಃಖಭಾಕ್‌ । 


ತ್ಕಾಜ್ಯಂ ಕರ್ಮ ಪರಾಧೀನಂ ಕಾರ್ಯಮಾತ್ಮವಶಂ ಸದಾ ॥ ೧೬ ॥ 
ದುಃಖೀ ಯತಃ ಪರಾಧೀನಃ ಸದೈವಾತ್ಮವಶಃ ಸುಖೀ । 
ಯಸ್ಮಿನ್ಶರ್ಮಣ್ಯಂತರಾತ್ಮಾ ಕ್ರಿಯಮಾಣೇ ಪ್ರಸೀದತಿ ॥ ೧೭ ॥ 


ತದೇವ ಕರ್ಮ ಕರ್ತವ್ಯಂ ವಿಸರೀತಂ ನ ಚ ಕ್ವಚಿತ್‌ । 

ಪ್ರಥನುಂ ಧರ್ಮಸರ್ನಸ್ವಂ ಪ್ರೋಕ್ತಂ ಯನ್ನಿಯಮಾ ಯಮಾಃ ॥ ೧೮ ॥ 
ಅತಸ್ತೇಸ್ಟೇವ ಮೈ ಯತ್ನಃ ಕರ್ತವ್ಯೋ ಧರ್ಮನಿಚ್ಛತಾ । 

ಸತ್ಯಂ ಕ್ಲಮಾರ್ತವಂ ಧ್ಯಾನಮಾನೃಶಂಸ್ಕಮಹಿಂಸನಂ nor i 





೧೨-೨೬. ಆದುದರಿಂದ ಬ್ರಾಹ್ಮಣನು ಯಾವಾಗಲೂ ಆಚಾರಶೀಲ 
ನಾಗಿರಬೇಕು. ಬ್ರಾಹ್ಮಣನು ರಾಗದ್ವೇಷವಿಲ್ಲದೆ ಯಾವುದನ್ನು ಅನುಷ್ಠಾನ 
ಮಾಡುವನೊ ಸಜ್ಜನರಾದ ಪಂಡಿತರು ಅದನ್ನು ಧರ್ಮಕ್ಕೆ ಕಾರಣವಾದ ಸದಾ 
ಚಾರನೆನ್ನುವರು. ಲಕ್ಸಣನಿಲ್ಲದವನಾದರೂ ಶ್ರದ್ಧೆಯುಳ್ಳವನೂ, ಅಸೂಯೆ 
ಯುಲ್ಲದವನೂ ಆಗಿ ಮನುಷ್ಯನು ಆಚಾರದಲ್ಲಿ ಚೆನ್ನಾಗಿ ಆಸಕ್ತನಾಗಿದ್ದರೆ ಅವನು 
ನೂರುವರ್ಷಕಾಲ ಬದುಕುವನು. ತನಗೆ ವಿಹಿತವಾದ ಕರ್ಮಗಳಲ್ಲಿ ಶ್ರುತಿ 
ಸ್ಮೃತಿಗಳಿಂದ ಬೋಧಿತವಾದ ಧರ್ಮಕ್ಕೆ ಕಾರಣವಾಗಿರುವ ಸದಾಚಾರವನ್ನು 
ಆಲಸ್ಯವಿಲ್ಲದೆ ಸೇವಿಸಬೇಕು. ಪ್ರಪಂಚದಲ್ಲಿ ದುರಾಚಾರಪರನಾದ ಮನುಷ್ಯನು 
ನಿಂದಾಸ್ಪದನಾಗಿ ರೋಗಗಳಿಂದ ನೀಡಿಸಲ್ಪಟ್ಟು ಯಾವಾಗಲೂ ದುಃಖಗಳ 
ನ್ಹನುಭವಿಸುತ್ತ ಅಲ್ಫಾ ಯುಸ್ಸುಳ್ಳವನಾಗುವನು. ಪರಾಧೀನನು ದುಃಖಿಯೂ, 
ಸ್ಪತಂತ್ರನು ಸುಖಿಯೂ ಆಗುವುದರಿಂದ ಯಾವಾಗಲೂ ಪರಾಧೀನವಾದ 
ಕಾರ್ಯವನ್ನು ತ್ಯಜಿಸಿ ಸ್ವಾಧೀನವಾದ ಕಾರ್ಯವನ್ನವಲಂಬಿಸಬೇಕು. ಯಾವ 
ಕೆಲಸವನ್ನು ಮಾಡಿದರೆ ಮನಸ್ಸು ಪ್ರಸನ್ನವಾಗುವುದೊ ಅದನ್ನೇ ಮಾಡಬೇಕಲ್ಲದೆ 
ಅದಕ್ಕೆ ನಿರುದ್ಧವಾಡುದನ್ನು ಯಾವಾಗಲೂ ಮಾಡಬಾರದು. ಮೊದಲು 
ಧರ್ಮದ ಸಾರವನ್ನು ಹೇಳಿದೆನು. ಧರ್ಮಾನುಷ್ಕಾನಮಾಡಲು ಬಯಸು 


ಪಂಚಮನೋತಧ್ಯಾಯಃ ೫೯ 


ದಮಃ ಪ್ರಸಾಜೋ ಮಾಧುರ್ಯಂ ಮೃದುತೇಶಿ ಯಮಾ ದಶ! 

ಶೌಚಂ ಸ್ನಾನಂ ತಪೋ ದಾನಂ ಮೌನೇಜ್ಯಾಧ್ಯಯನರೆ ವ್ರತಂ ॥೨೦॥ 
ಉಸಪೋಷಣೋಪಸ್ಥದಂಡೋ ದಶೈತೇ ನಿಯನಮಾಃ ಸ್ಮೃತಾಃ । 

ಕಾನುಂ ಕ್ರೋಧಂ ದನುಂ ನೋಹಂ ಮಾತ್ಸರ್ಯಂ ಲೋಚಭಮೇನ ಚ ॥ 
ಅನೂನ್ಸಡ್ಹೈರಿಣೋ ಜಿತ್ವಾ ಸರ್ವತ್ರ ನಿಜಯಾ ಭನೇತ್‌ । 


ಶನೈಃ ಸಂಚಿನುಯಾದ್ದರ್ಮುಂ ನಲ್ಮೀಕಂ ಶೃಂಗವಾನ್ಯಥಾ ॥ ೨೨ ॥ 
ಪರಪೀಡಾಮುಕುರ್ನಾಣಃ ಪರಲೋಕಸಹಾಯಿನಂ! 

ಧರ್ಮ ಏವ ಸಹಾಯಾ ಸ್ಕಾದಮುತ್ರ ಪರಿರಕ್ಸಿತಃ ॥ ೨೩ ॥ 
ಪಿತೃಮಾಶೃಸುತಭ್ರಾತೃಯೋಹಿದ್ಧಂಧುಜನಾದಿಕಃ | 

ಜಾಯತೇ ಚೈಕಲಃ ಪ್ರಾಣೀ ಮ್ರಿಯತೇ ಚ ತಥೈಕಲಃ ॥ ೨೪ ॥ 
ಏಕಲಃ ಸುಕೃತಂ ಭುಂಕ್ತೇ ಭುಂಕ್ತೇ ದುಷ್ಕೃತನೇಕಲಃ | 

ದೇಹೇ ಸಂಚತ್ವಮಾಸನ್ನೇ ತ್ಯಕ್ತ್ಟೈಕಂ ಕಾಷ್ಮಲೋಷ್ಮನತ್‌... ಭ ೨೫॥ 
ಬಾಂಧವಾ ನಿಮುಖಾ ಯಾಂತಿ ಧರ್ಮೋ ಯಾಂತನುನುನ್ರಜೇತ್‌ । 
ಅತಃ ಸಂಚಿನುಯಾದ್ದರ್ಮಮತ್ತಾ$ ಮುತ್ರ ಸಹಾಯಿನಂ ೨೬ I 





ವವನು ಯಮ ನಿಯಮಗಳ ಅನುಷ್ಕಾನದನ್ಲಿಯೂ ಪ್ರಯತ್ನಿಸಬೇಕು. ಸತ್ಯ, 
ಸಹನೆ, ಆರ್ತವ, ಧ್ಯಾನ, ಫಾತುಕನಲ್ಲದಿರುವುದು, ಅಹಿಂಸೆ, ಇಂದ್ರಿಯ 
ನಿಗ್ರಹ, ಪ್ರಸನ್ನತೆ, ಸ್ನೇಹ, ಸೌಮ್ಯತೆ ಇವು ಹತ್ತೂ ಯಮಗಳು. ಶೌಚ, 
ಸ್ನಾನ, ತಸಸ್ಸು, ದಾನ, ಮೌನ, ಪೂಜೆ, ಅಧ್ಯಯನ, ವ್ರತ, ಉಪವಾಸ, 
ಗುಹ್ಯೇಂದ್ರಿಯನಿಗ್ರಹ ಇವು ಹತ್ತೂ ನಿಯಮಗಳು. ಕಾಮ, ಕ್ರೋಧ, 
ಮದ, ಮೋಹ, ಮಾತ್ಸರ್ಯ, ಲೋಭ ಈ ಸಡ್ಶ್ರೈರಿಗಳನ್ನು ಗೆದ್ದು ಎಲ್ಲೆಡೆ 
ಯಲ್ಲಿಯೂ ಜಯಶಾಲಿಯಾಗುವನು. ಗೆದ್ದಲು ಹುಳುವು ಹುತ್ತವನ್ನು 
ಬೆಳೆಯಿಸುವಂತೆ ಪರರಿಗೆ ತೊಂದರಮಾಡದೆ. ಪರಲೋಕಕ್ಕೆ ಬೆಂಬಲನಾದ 
ಧರ್ಮವನ್ನು ಮೆಲ್ಲನೆ ಗಳಿಸಬೇಕು. ಈ ಲೋಕದಲ್ಲಿ ಕಾಪಾಡಿದ ಧರ್ಮ 
ವೊಂದೇ ಪರಲೋಕದಲ್ಲಿ ತಾಯಿ, ತಂದೆ, ಮಕ್ಕಳು, ಸಹೋದರರು, ಹೆಂಡತಿ, 
ಬಂಧುಜನಗಳಿಗಿಂತ ಮಿಗಿಲಾಗಿ ಸಹಾಯಮಾಡುವುದು. ಪ್ರಾಣಿಯು ಒಂಟ 
ಯಾಗಿ ಹುಟ್ಟುವುದು, ಒಂಟಿಯಾಗಿ ಸಾಯುವುದು. ಒಂಬಯಾಗಿ ಪುಣ್ಯ 
ಪಾಸಗಳನ್ನನುಭವಿಸುವುದು. ಈ ದೇಹವು ಮೃತವಾದ ಕೂಡಲೆ ಬಾಂಧವರು 
ಇದನ್ನು ಕಟ್ಟಿಗೆ ಮತ್ತು ಮಣ್ಣಿನ ಹೆಂಟಿಯಂತೆ ಒಂಟಿಯಾಗಿ ತ್ಯಜಿಸಿ ಹೊರಟು 
ಹೋಗುವರು. ಧರ್ಮನವೊಂದೇ ಹಿಂಬಾಲಿಸುವುದು. , ಆದುದರಿಂದ ಇಹಪರ 
ಗಳಲ್ಲಿ ಸಹಾಯಕವಾದ ಧರ್ಮವನ್ನು ಗಳಿಸಬೇಕು. | 


೬೦ ಶ್ರೀ ಸ್ಕಾಂದಮಹಾಪುರಾಣಂ 


ಧರ್ಮಂ ಸಹಾಯಿನಂ ಲಬ್ಧಾ ಆ ಸಂತರೇದ್ದು ಸ್ಮರಂ ತಮಃ । 
ಸಂಬಂಧಾನಾಚಾರೇನ್ನಿ ತ್ಯ ಮಸ್ತಿ ಮೈ ರುತ್ತ ಮೈಃ 8 ಸುಧೀಃ ॥ ೨೭॥ 
ಅಧಮಾನಧಮಾಂಸ ಸಕ್ತಾ ಕುಲಮುತ್ಯ ಕ ನಯೇತ್‌ । 
ಉತ್ತಮಾನುತ್ತಮಾಸೇವ ಗಚ್ಛೇಷ್ಹೀನಾಂಶ್ಚ ವರ್ಜಯೇತ್‌ । 


ಬ್ರಾಹ್ಮಣಃ ಶ್ರೇಷ್ಠತಾಮೇತಿ ಪ್ರತ್ಯನಾಯೇನ ಶೂದ್ರತಾಂ 1 ೨೮ ॥ 
ಅನಧ್ಯಯನಶೀಲಂ ಚ ಸದಾಚಾರನಿಲಂಘಿನಂ । 

ಸಾಲಸಂ ಚ ದುರನ್ನಾದಂ ಬ್ರಾಹ್ಮಣಂ ಬಾದತೇಂಂತಕಃ ॥೨೯॥ 
ಅತೊಇಭ್ಯಸ್ಯೇತ್ಛ್ರಯತ್ನೇನ ಸದಾಚಾರಂ ಸದಾ ದ್ವಿಜಃ । 
ತೀರ್ಥಾನ್ಯಪ್ಯಭಿಲಷ್ಯಂತಿ ಸದಾಚಾರಿಸಮಾಗವುಂ ॥ ೩೦॥ 
ರಜನೀಪ್ರಾಂತಯಾಮಾರ್ಧಂ ಬ್ರಾಹ್ಮಃ ಸಮಯ ಉಚ್ಯತೇ । 

ಸ್ವಹಿತಂ ಚಿಂತಯೇತ್ಪ್ರಾಜ್ಞಸ್ತ ಸೃಸಿ ಶೊ ಆತ್ಸಾ ಯ ಇವರೂ Hao 
ಗಜಾಸ್ಯ ೦ ಸಂಸ ಕೇದಾದೌ ತತ" ಈಶಂ ಸಹಾಂಂಬಯಾ | 

ಶ್ರಿ ಗ ಶಿ ್ರೀಸೆಮೇತಂ ತು ಬ್ರಹ್ಮಾಣಂ ಕನುಲೋದ್ಭ ವಂ ॥ ೩೨ ॥ 
ಇಂದ್ರಾದೀಸ್ಸ ಕಲಾನ್ಲೇವಾನ್ಯಸಿಷ್ಮಾದೀನ್ಮು ನೀನಸಿ | 

ಗಂಗಾದ್ಯಾಃ ಸರಿತಃ ಸರ್ವಾಃ ಶ್ರೀಶೈಲಾದ್ಯಖಲಾನ್ಸಿರೀನ್‌ ॥ ೩೩ ॥ 





೨೭. ಮಾನವನು ಧರ್ಮದ ಸಹಾಯದಿಂದ ನರಕವನ್ನು ದಾಟುವನು. 
ಜ್ಞಾ ನಿಯು ಯಾವಾಗಲೂ ಉತ್ತಮರ ಸಹೆವಾಸಮಾಡಬೇಕು. 

೨೮. ಬ್ರಾಹ್ಮ! ಇನು ನಿ ಸ್ಸ ಬಿಟ್ಟು ತನ್ನ ವಂಶವನ್ನು ಊರ್ಜಿತ 
ಗೊಳಿಸಬೇಕು. ಉತ್ತ ಮರ ಸಹವಾಸಮಾಡುತ್ತ ದೀನರ ಸಹವಾಸವನ್ನು 
ಬಿಟ್ಟ ರೆಶೆ ಶ್ರೇಷ್ಠ ನಾಗುವನು. ಪಾಪವನ್ನು ಮಾಡಿದರೆ ಶೂದ್ರ ನಾಗುವನು. 

೨೯. ವೇದಾಧ್ಯಯನ ಮಾಡದವನೂ, ಸದಾಚಾರಬಾಹ್ಯನೂ, ಮೈಗ 
ಳ್ಳನ್ಕೂ ದುಷ್ಬಾನ್ನವ ನ್ನು ಭುಂಜಿಸುವನೂ ಆಗಿರುವ ಬಾ ತ್ರಾಹ್ಮಣನನ್ನು ಯಮನು 
ಪೀಡಿಸುವನು. 

೩೦. ಆದುದರಿಂದ ಬ್ರಾಹ್ಮಣನು ಯಾನಾಗಲೂ ಸದಾಚಾರವನ್ನು 
ಅಭ್ಯಾಸ ಮಾಡುವುದಕ್ಕೆ ಯತ್ತಿ ಸಬೇಕು. ಇಂತಹ ಸದಾಚಾರಿಗಳ ಆಗ 
ಮನವನ್ನು ತೀರ್ಥಗಳೂ ಅಸೇಕ್ಸಿಸುವುವು. 

೩೧. ರಾತ್ರಿಯ ಕೊನೆಯ ಜಾಮದ ಅರ್ಧಭಾಗವು ಬ್ರಾಹ್ಮ ಮುಹೂರ್ತ 
ವೆನ್ನಿಸಿಕೊಳ್ಳುವುದು. ಬುದ್ದಿವಂತನು ಅದರಲ್ಲೆದ್ದು ಯಾವಾಗಲೂ ತನ್ನ ಇಷ್ಟ 
ದೇವತೆಯನ್ನು ಧ್ಯಾನಿಸಬೇಕು. 

೩೨-೩೫. ಮೊದಲು ಗಜಾನನನ್ನೂ ಬಳಿಕ ಭವಾನೀ ಸಹಿತನಾದ 


ಮಹೇಶ್ವರನನ್ನೂ, ಲಕ್ಷ್ಮೀೀಸಹಿತನಾದ ಶ್ರೀರಂಗಸ್ವಾಮಿಯನ್ನೂ, ಬ್ರಹ್ಮ 


ಸತ್ತಮ 
ಚ 


ಪಂಚಮೋರಧ್ಯಾಯಃ ೬೧ 


ಕ್ಸೀರೋದಾಡೀನ್ಸಮುದ್ರಾಂಶ್ಚ ಮಾನಸಾದಿಸರಾಂಸಿ ಚ । 

ವನಾನಿ ನಂದನಾದೀನಿ ಧೇನೂಃ ಕಾಮದುಘಾದಯಃ ॥ ೩೪॥ 
ಕಲ್ಪವೃಕ್ಸಾದಿನೃಕ್ಸಾಂಶ್ಚ ಧಾತೂನ್ಯಾಂಚನಮುಖ್ಯತಃ | 
ದಿನ್ಯಸ್ತ್ರೀರುರ್ವಶೀಮುಖ್ಯಾಃ ಪ್ರಹ್ಲಾದಾದ್ಯಾನ್ಹರೇಃ ಪ್ರಿಯಾನ್‌ ॥ ೩೫ ॥ 
ಜನನೀಚರಣೌ ಸ್ಮೃತ್ವಾ ಸರ್ವತೀರ್ಥೋತ್ತ ಮೋತ್ತಮ್‌ೌ । 


ಪಿತರಂ ಚ ಗುರೂಂಶ್ಚಾಃಸಿ ಹೃದಿ ಧ್ಯಾತ್ಸಾ ಪ್ರಸನ್ನಧೀಃ ॥ ೩೬ ॥ 
ತತಶ್ಚಾಂವಶ್ಯಕಂ ಕರ್ತುಂ ನೈರ್ಜುತೀಂ ದಿಶಮಾವ್ರಜೇತ್‌ | 
ಗ್ರಾಮಾದ್ಧನುಶ್ಶತಂ ಗಚ್ಛೇಸ್ನಗರಾಚ್ಞ ಚತುರ್ಗುಣಂ ॥ ೩೭॥ 
ತೃಣೈರಾಚ್ಛಾದ್ಯ ವಸುಧಾಂ ಶಿರಃ ಪ್ರಾವೃತ್ಯ ವಾಸಸಾ | 
ಕರ್ನೋಪನೀತೋದಗ್ವಕ್ಟ್ರೋ ದಿನಸೇ ಸಂಧ್ಯಯೋರಪಿ ॥ ೩೮ ॥ 
ನಿಜ್ಮೂತ್ರೇ ನಿಸೃಜೇನ್ಮೌನೀ ನಿಶಾಯಾಂ ದಕ್ಸಿಣಾಮುಖಃ । 

ನ ತಿಷ್ಕನ್ನಾಶು ನೋ ವಿಪ್ರಗೋವನ್ನ್ಹ್ಯನಿಲಸಂಮುಖಃ ॥೩೯॥ 


ನ ಫಾಲಕೃಷ್ಟೇ ಭೂಭಾಗೇ ನ ರಥ್ಯಾಸೇವ್ಯಭೂತಲೇ । 
ನಾಲೋಕಯೇದ್ದಿಶೋ ಭಾಗಾನ್ಜ್ಯೋತಿಶ್ಚಕ್ರಂ ನಭೋ ಮಲಂ ॥ ೪೦॥ 
ನನ್ನೂ, ಇಂದ್ರಾದಿ ಸಮಸ್ತದೇವತೆಗಳನ್ನೂ, ವಸಿಷ್ಠ ಮೊದಲಾದ ಮುನಿಗ 
ಳನ್ನೂ, ಗಂಗಾದಿ ಸಕಲ ನದಿಗಳನ್ನೂ, ಶ್ರೀಶೈಲಾದಿ ಸರ್ವತಗಳನ್ನೂ, 
ಕ್ಪೇರಸಾಗರವೆ ಮೊದಲಾದ ಸಮುದ್ರಗಳನ್ನೂ, ಮಾನಸಾದಿ ಸರೋವರಗಳನ್ನೂ, 
ನಂದನಾದಿ ವನಗಳನ್ನೂ, ಕಾಮಧೇನು ಮೊದಲಾದ ಗೋವುಗಳನ್ನೂ, ಕಲ್ಪ 
ವೃಕ್ಸ ಮೊದಲಾದ ವೃಕ್ಸಗಳನ್ನೂ, ಸುವರ್ಣ ಮೊದಲಾದ ಲೋಹೆಗಳನ್ನೂ, 
ಉರ್ವಶೀ ಮೊದಲಾದ ದೇವತಾಸ್ತ್ರೀಯರನ್ನೂ, ಪ್ರಹ್ಲಾದನೆ ಮೊದಲಾದ 
ಭಾಗವತರನ್ನೂ ಧ್ಯಾನಿಸಬೇಕು. 

೩೬. ಸಕಲತೀರ್ಥಗಳಿಗಿಂತ ಶ್ರೇಷ್ಠವಾದ ತಾಯಿಯ ಅಡಿಗಳನ್ನೂ, 
ತಂದೆಯನ್ನೂ, ಗುರುಗಳನ್ನೂ ಧ್ಯಾನಿಸಿ ಪ್ರಸನ್ನನಾದ ಮನಸ್ಸುಳ್ಳವನಾಗ 
ಬೇಕು. 

೩೭. ಬಳಿಕ ಶೌಚಕ್ಕಾಗಿ ಗ್ರಾಮದಿಂದ ನೂರು ಬಿಲ್ಲುಗಳ ದೂರವೂ, 
ಪಟ್ಟಣದಿಂದ ನಾನೂರು ಬಿಲ್ಲುಗಳ ದೂರವೂ ನೈಖುತ್ಯ ದಿಕ್ಕಿಗೆ ತೆರಳಬೇಕು. 

೩೮-೪೦. ಭೂಮಿಯನ್ನು ಹುಲ್ಲುಗಳಿಂದ ಮುಚ್ಚಿ, ತಲೆಗೆ ಬಟ್ಟೆ ಯನ್ನು 
ಸುತ್ತಿಕೊಂಡು, ಉಪವೀತವನ್ನು ಕೆನಿಯಲ್ಲಿ ಧರಿಸಿ, ಹಗಲು ಮತ್ತು ಸಂಧ್ಯಾ 
ಕಾಲಗಳಲ್ಲಿ ಉತ್ತರಾಭಿಮುಖನಾಗಿಯೂ, ರಾತ್ರಿಯಲ್ಲಿ ದಕ್ಸಿಣಾಭಿಮುಖ 
ನಾಗಿಯೂ, ಮಲಮೂತ್ರಗಳನ್ನು ವಿಸರ್ಜಿಸಬೇಕು. ನಿಂತುಕೊಂಡೂ, 
ಬ್ರಾಹ್ಮಣರು, ಗೋವು, ಅಗ್ನಿ, ಗಾಳಿ ಇವುಗಳಿಗೆ ಎದುರಾಗಿಯೂ ಉತ್ತ 








43 ಶ್ರೀ ಸ್ಕಾಂದಮ ಹಾಪುರಾಣಂ 


ವಾಮೇನ ಪಾಣಿನಾ ಶಿಶ್ನಂ ಧೃತ್ವೋತ್ತಿಸ್ಲೇತ್ರಯತ್ನ ನಾನ್‌ । 


ಅಥೋ ಮೃದಂ ಸಮಾದದ್ಯಾಜ್ಜಂತುಕರ್ಕರನರ್ಜಿತಾಂ 1 ೪೧॥ 
ನಿಹಾಯ ಮೂಷಕೋತ್ಪಾತಾಂ ಚೋಟಚ್ಛಿಷ್ಟಾಂ ಕೇಶಸಂಕುಲಾಂ । 
ಗುಹ್ಯೇ ದದ್ಯಾನ್ಮೃ ದಂಚೈಕಾಂ ಪ್ರಕ್ಸಾಲ್ಯ ಚಾಂಂಬುನಾ ತತಃ ॥೪೨॥ 
ಪುನರ್ನಾಮಕರೇಣೇತಿ ಪಂಚಧಾ ಕ್ಸಾಲಯೇದ್ಗುದಂ । 
ಏಕೈಕಸಾದಯೋರ್ದದ್ಯಾತ್ರಿಸ್ರಃ ಸಾಣ್ಯೋರ್ಪುದಸ್ತಥಾ W ೪೩॥ 


ಇತ್ನಂ ಶೌಚಂ ಗೃಹೀ ಕುರ್ಯಾದ್ದಂಧಲೇಪಕ್ಸಯಾನಧಿ । 


ಗ 
ಕ್ರಮಾದ್ಮೈಗುಣ್ಯತಃ ಕುರ್ಯಾದ್ಬ್ರಹ್ಮಚರ್ಯಾದಿಷು ತ್ರಿಷು 1 ೪೪ ॥ 


ದಿವಾ ನಿಹಿತಶೌಚಾಚ್ಚ ರಾತ್ರಾನರ್ಧಂ ಸಮಾಚರೇತ್‌ । 

ಪರಗ್ರಾನೇ ತದರ್ಥಂ ಚ ಪಥಿತಸ್ಕಾಂರ್ಧನೇನ ಚ ॥ ೪೫ ॥ 
ತದರ್ಧಂ ರೋಗಿಣಾಂ ಚಾಪಿ ಸುಸ್ಥೇ ನ್ಯೂನಂ ನ ಕಾರಯೇತ್‌ । 

ಅಸಿ ಸರ್ವನದೀತೋಯೈರ್ಮ್ಭತ್ಕೂಟೈಶ್ವಾಂ ಸಪ್ಯಗೋಪನಮೈಃ ॥೪೬॥ 
ಅಸಾತಮಾಚರೇಚ್ಛೌಚಂ ಭಾವದುಷ್ಟೋ ನ ಶುದ್ಧಿ ಭಾಕ್‌ | 
ಆರ್ದ್ರಧಾತ್ರೀಫಲೋನ್ಮಾನಾಮೃದಃ ಶೌಚೇ ಪ್ರಕೀರ್ತಿತಾಃ ॥ ೪೭॥ 


ಭೂಮಿಯಲ್ಲಿಯೂ, ರಸ್ತೆಯಲ್ಲಿಯೂ, ಮಲವಿಸರ್ಜನೆಮಾಡಬಾರದು. ಮತ್ತು 
ಮಲನವಿಸರ್ಜನೆಮಾಡುವಾಗ ದಿಕ್ಕುಗಳನ್ನೂ, ನಕ್ಸತ್ರ ಮಂಡಲವನ್ನೂ, ಆಕಾಶ 
ವನ್ನೂ ಅಮೇಧ್ಯವನ್ನೂ ಕಾಣಕೂಡದು. 

೪೧-೪೩, ಎಡಗೈಯಿಂದ ಶಿಶ್ನವನ್ನು ಹಿಡಿದುಕೊಂಡು ಮೇಲಕ್ಕೆದ್ದು 
ಜಂತುಗಳಿರುವುದೂ, ಇಲಿಗಳು ಅಗೆದುದೂ, ಎಂಜಲೂ, ಕೂದಲಿರುವುದೂ 
ಆಗಿರುವ ಮೃತ್ತಿಕೆಯನ್ನು ಬಿಟ್ಟು ಬೇರೆ ಮಣ್ಣನ್ನು ಐದಾವೃತ್ತಿ ಗುದದಲ್ಲಿಯೂ, 
ಕೈಕಾಲುಗಳಲ್ಲಿ ಮೂರುಸಲವೂ ಲೇಪಿಸಿಕೊಂಡು ಎಡಗೈಯಿಂದ ನೀರಿನಿಂದ 
ತೊಳೆಯಬೇಕು. 

೪೪. ಹೀಗೆ ಗೃಹಸ್ಥನು ವಾಸನೆಯು ಹೋಗುವವರೆಗೂ, ಬ್ರಹ್ಮಚಾರೀ, 
ವಾನಪ್ರಸ್ಥ, ಸನ್ಯಾಸಿಗಳು ಕ್ರಮವಾಗಿ ಗ್ರಹಸ್ಥನಿಗಿಂತ ಇಮ್ಮಡಿಯಾಗಿಯೂ 
ಶೌಚವನ್ನು ಮಾಡಿಕೊಳ್ಳಬೇಕು. 

೪೫-೪೯. ಹೆಗಲು ಮಾಡಬೇಕಾಗಿ ನಿಹಿತವಾದ ಶೌಚಸಂಖ್ಯೆಗಿಂತ ರಾತ್ರಿ 
ಯಲ್ಲಿ ಅರ್ಧಭಾಗವನ್ನೂ, ಪರಸ್ಪಳದಲ್ಲಿ ಅದರರ್ಧಭಾಗವನ್ನೂ, ದಾರಿಯಲ್ಲಿ 
ಆದರರ್ಧಭಾಗವನ್ನು ಮಾಡಬೇಕು. ವ್ಯಾಧಿಗ್ರಸ್ತನು ಅದರರ್ಧಭಾಗವನ್ನು 
ಮಾಡಬೇಕು. ಸೌಖ್ಯವಾಗಿರುವಾಗ ಕಡಿಮೆ ಶೌಚವನ್ನು ಮಾಡಕೂಡದು. 
ಮರಣಕಾಲದವರೆಗೆ ಎಲ್ಲನದಿಯ ಜಲದಿಂದಲೂ, ಪರ್ವತದಂತಿರುವ ಮಣ್ಣಿನ 
ಮುದ್ದೆಗಳಿಂದಲೂ ಶುದ್ಧಿ ಮಾಡಿಕೊಳ್ಳಬೇಕು. ಆದರೆ ಮನಸ್ಸು ಶುದ್ಧವಾಗಿಲ್ಲ 


ಪಂಚಮೋಠಿಧ್ಮಾಯಃ ಒಸಿ 


ಸರ್ವಾಶಾ _ಹುತಯೋಂಪ್ಯೆ ೀವಂಗಾ ಗ್ರಾಸಾಚ್ಹಾಂದ್ರಾ ಯಣೇಸಿ ಚೆ! 


ಪ್ರಾ ಗಾಸ್ಯ' ಉದಗಾಸ್ಕೋ ವಾ ಸೂಪನಿಷ್ಠ ry ಶುಚೌ ಭುವಿ ॥ ೪೮ ॥ 

ಉಸಸ್ಟ ಶೇಡಿ ) ಹೀನಾಭಿಸ್ತು ಹಾಂಗಾರಾನಿ. ಭಸ್ಮ ಭಿಃ । 

ಅತಿಸ ಬ್ಬ ಭಿರದ್ಧಿ ಶ್ಚ ಯಾನದ ಎಂದಾ ಭಿರತ್ಸೆ ರಃ ॥೪೯॥ 
ಬ್ರಾಹ್ಮಣೋ ಬ್ರಹ್ಮ ತೀರ್ಥೇನ ದ ಬ್ಬಪೂತಾಭಿರಾಚಮೇತ್‌ | 

ಕಂಕಗುಭಿನೃ ಜಾ! “ುಧ್ಯೇತ್ತಾಲುಗಾಭಿಸ್ತಥೋರುಜಃ 1೫೦॥ 

ಸ್ತ್ರೀ ಶೂದ್ರಾ ವಾಂಥ ಸಂಸ್ಪರ್ಶಮಾತ್ರೇಣಾಂಏ ವಿಶುಧ್ಯತಃ । 

ಶಿರಃ ಶಬ್ದಂ ಸಕಂಠಂ ವಾ ಜಲೇ ಮುಕ್ತಶಿಖೋಂಪಿ ವಾ ॥೫೧॥ 


ಅಕ್ಸಾ ಲಿತಪದದ್ವ ದ್ಧ ಆಚಾಂತೋಪ್ಯ ಶುಚಿರ್ಮುತಃ। 
ತ್ರಿಃ&ನೀತ್ಚಾಂಬು 'ನಿಶುದ್ಧ $ರ೯ಂ ತತಃ ಮಾನಿ ನಿಶೋಧಯೇತ್‌ ॥ ೫೨॥ 
ಅಂಗುಷ್ಠ NEA ಹ್ಮಧ ಧರೋಷ್ಟೌ ಪರೀಮೃ ಜೇತ್‌ । 


ಸ್ಪೃಷ್ಟ್ರಾ ಜಲೇನ ಹೃದಯಂ ಸನುಸ್ತಾಭಿಃ ಶಿರಃ ಸ್ಪೃಶೇತ್‌ ॥ ೫೩॥ 
ಅಂಗುಲ ಸ್ಮಥಾ ಸ್ಕೈ ೦ಧೌ ಸಾಂಬು ಸರ್ವತ್ರ ಸಂಸ್ಸೃಶೇತ್‌ । 
ಬಾ 'ಪ್ರನರಾಚಾನುತ್ವ ತ್ಕಾ ರಥ್ಯೊ ಸನ ॥ ೫೪ ॥ 





ದಿದ್ದ ರೆ ಕುಡ್ಡನಾಗಲಾರನು. ಈ ಶೌಚಕ್ಕೆ ಹಸಿ ನೆಲ್ಸಿಕಾಯಿಯಷ್ಟು ಮಣ್ಣ ನ್ಫ್ಸು 
ತೆಗೆದುಕೊಳ್ಳ ಸಬೇಕು. ಹೀಗೆಯೇ ಹೋಮದ ಆಹುತಿಗಳೂ, ಚಾಂದ್ರಾ ಯಣ 
ವ್ರತದಲ್ಲಿ ಕವಳವೂ ಹಸಿ ನೆಲ್ಲಿಕಾಯಿಯಷ್ಟೇ ಇರಬೇಕು. ಶುಚಿಯಾದ ಸ್ಥಳೆ 
ದಲಿ ಪೂರ್ವ ಅಥವಾ ಪಶ್ಚಿ _ಮಾಭಿಮುಖನಾಗಿ ಚೆನ್ನಾಗಿ ಕುಳಿತುಕೊಂಡು ಭತ್ತ ದ 
ಘು ಇದ್ದಲು, ಮೂಳೆ, ಬೂದಿಗಳಿಲ್ಲದೆ ಸ _ಚ್ಚವಾಗಿರುವ ನೀರಿನಿಂದ 

ರ ಹೃ ದಯವನ್ನು ವ್ಯಾವಿಸುವವರೆಗೆ ಚಮಕ ಮಾಡಬೇಕು. 

೫೦. ಚಾ ಬನು ದೃಷ್ಟಿಯಿಂದ ಶುದ್ಧವಾದ ಬ್ರಹ ೈತೀರ್ಥವೆಂಬ ಹೆಬ್ಬೆರಳಿನ 
ಬುಡದಲ್ಲಿರುವ ಕರ ಲ್‌ ತ್ರಿಯನು ಕಂಠಗತವಾದ ನಕ ಯ್ಯ 
ವೈಶ್ಯನು ದವಡೆಯನ್ನು ಸೇರಿದ AEN ಶುದ್ಧನಾಗುವನು. 

೫೧-೫೨. ಸ್ತ್ರೀ ಶೂದ್ರರು ಶಿರಸ್ಸು, ಕೆವಿ, ಕಂಠಗಳಲ್ಲಿ ಜಲಸ್ಪರ್ಶದಿಂದಲೆ 
ಶುದ್ಧರಾಗುವರು. ತಲೆಗೂದಲನ್ನು ಬಿಡಿಸಿಕೊಂಡೂ, ಕಾಲುಗಳನ್ನು ತೊಳೆ 
ಯದೆಯೂ ಆಚಮನಮಾಡಿದರೂ ಬ್ರಾಹ್ಮಣಾದಿಗಳು ಶುದ್ಧರಾಗುವುದಿಲ್ಲ. 
ಮೂರುಸಾರಿ ನೀರನ್ನು ಕುಡಿದು ಬಳಿಕ ಇಂದ್ರಿಯಗಳನ್ನು ಶುದ್ಧಿಗೊಳಿಸಬೇಕು. 

೫೩-೫೪, ಹೆಬ್ಬೆರಳಿನ ಬುಡದಿಂದ ತುಟಗಳನ್ನೂ, ನೀರಿನಿಂದ ಎದೆ 
ಯನ್ನೂ, ಎಲ್ಲ ಬೆರಳುಗಳಿಂದ ತಲೆಯನ್ನೂ, ಬೆರಳುಗಳ ತುದಿಗಳಿಂದ ಹೆಗಲು 
ಗಳನ್ನೂ ಮುಟ್ಟಬೇಕು. ಹೀಗೆ ಆಚಮನಮಾಡಿದವನು ರಸ್ತೆಯಲ್ಲಿ ನಡೆದರೆ 
ತಿರುಗಿ ಕಟು. 


೬೪ ಶ್ರೀ ಸ್ಕಾಂದಮಹಾಪುರಾಣಂ 


ಸ್ನಾತ್ವಾ ಭುಕ್ತ್ವಾ ಸಯಃ ಪೀತ್ಕಾ ಪ್ರಾರಂಭೇ ಶುಭಕರ್ಮಣಾಂ । 
ಸುಪ್ತ್ಯಾ ವಾಸಃ ಪರೀಧಾಯ ತಥಾ ದೃಷ್ಟ್ವಾಂಃಸ್ಯಮಂಗಲಂ 1॥ ೫೫॥ 
ಪ್ರಮಾದಾದಶುಚಿ ಸ್ಮ ತ್ವಾ ದ್ವಿರಾಚಾಂತಃ ಶುಚಿರ್ಭನೇತ್‌ । 


ದಂತಧಾನನಂ ಪ್ರಕುರ್ನೀತ ಯಥೋಕ್ತಂ ಧರ್ಮಶಾಸ್ತ್ರತಃ । 


ಆಚಾಂತೋಃಪ್ಯಶುಚಿರ್ಯಸ್ಮಾದಕೃತ್ವಾ ದಂತಧಾವನಂ ॥ ೫೬ ॥ 
ಪ್ರತಿಸದ್ದರ್ಶಷಷ್ಮೀಷು ನವಮ್ಮಾಂ ರವಿವಾಸರೇ | 

ದಂತಾನಾಂ ಕಾಷ್ಮಸಂಯೋಗೋ ದಹೇದಾಸಪ್ತಮಂ ಕುಲಂ ॥ ೫೭ 
ಅಲಾಭೇ ದಂತಕಾಷ್ಠ್ಮಾನಾಂ ನಿಷಿದ್ಧೇ ನಾಥ ವಾಸರೇ | 

ಗಂಡೂಷಾ ದ್ವಾದಶ ಗ್ರಾಹ್ಯಾ ಮುಖಸ್ಯ ಪರಿಶುದ್ಧಯೇ ॥ ೫೮॥ 
ಕನಿಷ್ಕಾಗ್ರ ಸರೀಮಾಣಂ ಸತ್ವಚಂ ನಿರ್ವಣಾರುಜಂ | 
ದ್ವಾದಶಾಂಗುಲಮಾನಂ ಚ ಸಾರ್ದ್ರಂ ಸ್ಯಾದ್ದಂತಧಾವನಂ ॥೫೯॥ 
ಏಕೈಕಾಂಂಗುಲಮಾನಂ ತಚ್ಚರ್ವಯೇದ್ದಂತಧಾವನಂ । 


ಪ್ರಾತಃ ಸ್ನಾನಂ ಚರಿತ್ವಾ ಚ ಶುದ್ಧ್ಯೈ ತೀರ್ಥೇ ವಿಶೇಷತಃ HW ೬೦॥ 





೫೫-೫೬, ಸ್ನಾನಮಾಡಿ, ಉಂಡೂ, ನೀರನ್ನು (ಹಾಲನ್ನು) ಕುಡಿದೂ, 
ಶುಭಕಾರ್ಯಗಳ ಆದಿಯಲ್ಲಿಯೂ, ನಿದ್ರೆಮಾಡಿಯೂ, ಬಟ್ಟೆಯನ್ನು ಟ್ಟೂ, 
ಅಮಂಗಳ ವಸ್ತುವನ್ನು ನೋಡಿಯೂ, ಅಜಾಗರೂಕತೆಯಿಂದ ಅಶುಚಿಯನ್ನು 
ಸ್ಮರಿಸಿಯೂ ಎರಡುಸಾರಿ ಆಚಮನಮಾಡಿದರೆ ಶುದ್ಧನಾಗುವನು. ಧರ್ಮ 
ಶಾಸ್ತ್ರವಿಹಿತವಾದ ಕ್ರಮದಿಂದ ಹಬ್ಲುಗಳನ್ನುಜ್ಜಿ ಕೊಳ್ಳಬೇಕು. ಹೀಗೆ ಹಲ್ಲು 
ಗಳನ್ನುಜ್ಜದೆ ಆಚಮನಮಾಡಿದರೂ ಶುದ್ಧನಾಗುವುದಿಲ್ಲ. 

೫೭. ಪಾಡ್ಯ, ಅಮಾವಾಸ್ಯೆ, ಸಷ್ಮೀ, ನವಮಿಾತಿಥಿಗಳಲ್ಲಿಯೂ, ಭಾನು 
ವಾರದ ದಿನವೂ ಹಲ್ಲುಗಳಿಗೆ ಉಜ್ಜುವ ಕಡಿ ಯ ಸಂಬಂಧವಾದರೆ ಏಳು ವಂಶದ 
ವರೆಗಿನ ಪಿತೃಗಳು ಹಾಳಾಗುವರು. | 

೫೮. ದಂತಕಾಷ್ಠವು ಸಿಕ್ಕದಿರುವಾಗಲೂ, ದಂತಧಾವನಕ್ಕೆ ನಿಷಿದ್ಧವಾದ 
ದಿನಗಳಲ್ಲಿಯೂ ಬಾಯಿಯು ಶುದ್ಧವಾಗುವುದಕ್ಕಾಗಿ ಹನ್ನೆರಡುಸಾರಿ ಗಂಡೂಷ 
ವನ್ನು ಮಾಡಬೇಕು. 

೫೯. ಕಿರುಬೆರಳಿನ ತುದಿಯಷ್ಟು ದಸ್ಪಗೂ, ತೊಗಟೆಯಿಂದ ಸಹಿತವೂ, 
ಘಾಯವಿಲ್ಲದೆಯೂ, ತುಂಡಾಗದೆಯೂ, ಇರುವ ಹನ್ನೆರಡಂಗುಲ ಉದ್ದವಾದ 
ಹಸಿ ಕಡ್ಡಿಯು ದಂತಕಾಷ್ಠವೆನಿಸುವುದು. 

೬೦. ಆ ದಂತಧಾವನದ ಕಡ್ಡಿಯನ್ನು ಒಂದು ಅಂಗುಲದಷ್ಟು ಅಗಿದು 
ಹಲ್ಲುಗಳನ್ನು ಜಜ್ಜಿ ಕೊಂಡು ಶುದ್ಧಿಗಾಗಿ ಬೆಳಗ್ಗೆ ಸ್ನಾನಮಾಡಬೇಕು, ತೀರ್ಥದಲ್ಲಿ 
ಮಿಂದರೆ ಇನ್ನೂ ಉತ್ತಮ. 


ಪಂಚನೋತಧ್ಯಾಯಃ ೬೫ 


ಪ್ರಾತಃಸ್ನಾನಾದ್ಯತಃ ಶುದ್ಧೆ ತ್ಕಾಯೋಂಯಂ ಮಲಿನಃ ಸದಾ । 


ಯನ್ಮಲಂ ನವಭಿಶ್ಛ್ರಿದ್ರೆಃ ಸ್ಪನತ್ಯೇನ ದಿವಾನಿಶಂ ॥೬೧॥ 
ಉತ್ಸಾಹಮೇಧಾಸೌಭಾಗ್ಯರೂಪಸಂಪತ್ರವರ್ಧಕಂ | 
ಪ್ರಾಜಾಪತ್ಯಸಮಂ ಪ್ರಾಹುಸ್ತನ್ಮಹಾಘನಿನಾಶಕೃತ್‌ ॥ ೬೨॥ 
ಪ್ರಾತಃಸ್ನಾನಂ ಹರೇತ್ಸಾಪಮಲಕ್ಸಿ ಸ ಗ್ಲಾನಿಮೇವ ಚ । 
ಅತುಚಿತ್ವ ೦ ಚ ದುಃಸ್ಕಸ್ನ ಸ ಸ್ಲಂ ತುಪ್ಬಿಂ “ಸುಷ್ಟ ೦ ಪ್ರಯಚ್ಛತಿ ॥ ೬೩ ॥ 
ನೋಪಸರ್ಪಂತಿ ವೈ 'ದುಷ್ಬಾಃ ಪ್ರಾ ತಸ್ನಾ ಜತ ಕೃಚಿತ್‌ । 
ವೃ ಷ್ಟ ದ ೈಷ್ಟ ಇ ಯಸಾ ತ್ರಾತಸ್ನಾ ದ ಸಮಾಚಕೀತ್‌ | ೬೪ ॥ 
ಪ್ರ ಸಂಗತ ಸ್ನ ನನಿಧಿಂ ಪ್ರ ವಕ್ಟಾ 3ನ ನೃಪೋತ್ತಮಃ । 

ನಿಧಿಸ್ನಾ ನಂ ತ ಪ್ರಾ EE ಸ್ನಾನಾಚ್ಛ ತಗುಣೋತ್ತರಂ ॥ ೬೫॥ 
ವಿಶುದ್ಧಾ ಮೃ ಜಸು ಬರ್ಹಿಷಸ್ತಿ ಅಗೋನುಯಂ | 
ಶುಚೌ ಡೇಶೇ 'ಪರಿಸ್ಥಾ ಸ್ಯ ಹ್ಯಾಚಮ್ಯ ಸ್ನಾನಮಾಚರೇತ್‌ 1 ೬೬॥ 
ಉಪಗ್ರಹೀ ಬದ್ಧ ಖೋ ಜಲಮಥ್ಯೆ! ತ ಸಸಾನಿಶೇತ್‌ | 
ಸ್ವ ಶಾಷೋಕ್ತ ನಿಧಾನೇನ ಸ್ನಾನಂ ಕುರ್ಯಾವ ್ಯಥಾವಿಧಿ ॥೬೭॥ 


೬೧. ಹಗಲೂ ರಾತ್ರಿಯೂ ನವದ್ವಾರಗಳಿಂದ ಸುರಿದ ಮಲದಿಂದ ಮಲಿನ 
ವಾದ ಶರೀರವು ಪ್ರಾತಃಸ್ನ್ತಾನದಿಂದ ಶುದ್ಧವಾಗುವುದು. 

೬೨-೬೪, ಉತ್ಸಾಹ, ಬುದ್ಧಿ | ಸೌಭಾಗ್ಯ, ರೂಪಗಳ ಸಮೃದ್ಧಿಯನ್ನು 

ಚ್ಛಿಸುವುದೂ, ವಿಪುಲ ಪಾಪವನ್ನು. ಪರಿಹರಿಸುವುದೂ ಆದ ಪ್ರಾತಃಸ್ನಾನವು 
ಪಾ ಮ ಕೃಚ್ಛ ಕ್ಕೆ ಸಮವು. ಈ ಪ್ರಾತಃಸ್ತಾನದಿಂದ ಪಾಪವೂ, 
ಅಮಂಗಳವೂ, ಅಶುದ್ಧ ಯೂ, ದುಃಸ್ವಸ್ನದೋಷವೂ ಹೋಗಿ ಸಂತೋಷ 
ಮತ್ತು ಪುಷ್ಟಿ ಗಳು ಉಂಟಾಗುವುದು. ಬೆಳಗ್ಗೆ ಸ್ನಾನಮಾಡುವವನನ್ನು ದುಷ್ಟರು 
ಸಮಾಸಿ ಸುಂ ಹೀಗೆ ದೃಷ್ಟಾದೃಷ್ಟಫಲಗಳಾಗುವುದರಿಂದ ಪ್ರಾತಃಸ್ನಾನ 
ವನ್ನು ಮಾಡಬೇಕು. 

೬೫. ರಾಜೇಂದ್ರ! ಬರಿಯ ಸ್ನಾನಕ್ಕಿಂತಲೂ ಶಾಸ್ತ್ರ (ಕೈರೀತಿಯಿಂದ 
ಮಾಡಿದ ಸ್ನಾನವು ನೂರ್ಮಡಿಯಷ್ಟು ಉತ್ತ ಮಾಡತಾ ಐ ಪ್ರಸ್ತಾವಕ್ರಮ 
ದಿಂದ ಈಗ ಸ್ನಾನವಿಧಿಯನ್ನು ಹೇಳುವೆನು. 

೬೬. ಶುದ್ಧವಾದ ಮಣ್ಣನ್ನೂ, ದರ್ಭೆಗಳನ್ನೂ, ಎಳ್ಳನ್ನೂ, ಗೋಮಯ 
ವನ್ನೂ ಶುದ್ಧ ವಾದ ಸ | ಛದಲ್ಲಿಟ್ಟು ಕೊಂಡು ಆಚಮನಮಾಡಿ ಸ್ನಾನಮಾಡಬೇಕು. 
೬೭. "ಸಮಾಪದೆಲ್ಲಿರುವ 'ಮಾವುದಾದಕೊಂದನ್ನು ಅವಲಂಬಿಸಿ ಜುಟಿ ಸನ್ನು 
ಕಟ್ಟಕೊಂಡು ನೀರಿನಲ್ಲಿಳಿದು ಖುಗಾದಿಯಾಗಿ ತನ್ನ ಶಾಖೆಯಲ್ಲಿ ವಿಹಿತವಾದ 
ಶ್ರನುದಿಂದ ಸ್ನಾನಮಾಡಬೇಕು. 
3 


೨೩.೬ ಶ್ರೀ ಸ್ಮಾಂದಮಹಾವುರಾಣಂ 


ಸ್ನಾತ್ವೇತ್ಮಂ ವಸ್ತ್ರ ಮಾಪೀಡ್ಯ ಗೃಹ್ಮೀಯಾದ್ಧೌತವಾಸಸೀ | 

ಆಚಮ್ಯ ಚ ತತಃ ಕುರ್ಯಾತ್ಪ್ರಾತಃ ಸಂಧ್ಯಾಂ ಕುಶಾನ್ವಿತಃ ॥ ೬೮॥ 
ಪ್ರಾಣಾಯಾಮಾಂಶ್ಚರಸ್ಸಿಪ್ರೋ ನಿಯನ್ಯು ಮಾನಸಂ ದೃಢಂ | 
ಅಹೋರಾತ್ರಕೃತೈಃ ಪಾಸೈರ್ಮುಕ್ತೋ ಭವತಿ ತತ್ಕ್ಸೃಣಾತ್‌ ॥೬೯॥ 
ದಶದ್ವಾದಶಸಂಖ್ಯಾ ನಾ ಪ್ರಾಣಾಯಾಮಾಃ ಕೃತಾ ಯದಿ । 


ನಿಯನ್ಯು ಮಾನಸಂ ತೇನ ತದಾ ತಪ್ತಂ ಮಹತ್ತಪಃ ॥೭೦॥ 
ಸವ್ಯಾಹೃತಿ ಪ್ರಣನಕಾಃ ಪ್ರಾಣಾಯಾಮಾಸ್ತು ಷೋಡಶ ! 
ಅಪಿ ಭ್ರೂಣಹನಂ ಮಾಸಾತ್ಸುನಂತ್ಯಹರಹಃ ಕೃತಾಃ ॥ ೭೧॥ 


ಯಥಾ ಪಾರ್ಥಿವಧಾತೂನಾಂ ದಹ್ಯಂತೇ ಧಮನಾನ್ಮಲಾಃ । 
ತಥೇಂದ್ರಿಯೈಃ ಕೃತಾ ದೋಷಾ ಜ್ಯಾಲ್ಯಂತೇ ಪ್ರಾಣಸಂಯಮಾತ್‌ ॥೭೨॥ 
ಏಕಾಂಕ್ಟರಂ ಪರಂ ಬ್ರಹ್ಮ ಪ್ರಾಣಾಯಾನುಃ ಪರಂ ತಪಃ । 
ಗಾಯತ್ರ್ರಾಸ್ತು ಪರಂ ನಾಸ್ತಿ ಪಾವನಂ ಚ ನೃಪೋತ್ತಮ ॥ ೭೩ ॥ 
ಕರ್ಮಣಾ ಮನಸಾ ವಾಚಾ ಯದ್ರಾತೌ ಕುರುತೇ ತ್ವಘಂ | 
ಉತ್ತಿಷ್ಠನ್ಸೂರ್ವಸಂಧ್ಯಾಯಾಂ ಪ್ರಾಣಾಯಾಮೈರ್ನಿಶೋಧಯೇತ್‌ ॥ 





೬೮. ಹೀಗೆ ಸ್ನಾನಮಾಡಿ ಬಟ್ಟೆ ಯನ್ನು ಹಿಂಡಿಕೊಂಡು ಒಗೆದ ಬಟ್ಟೆಗಳನ್ನು 
ಉಟ್ಟು ಆಚಮನಮಾಡಿ ದರ್ಭೆಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾತ 
ಸ್ಪಂಧ್ಯಾವಂದನೆಯನ್ನು ಮಾಡಬೇಕು. 

೬೯. ಬ್ರಾಹ್ಮಣನು ಪ್ರಾಣಾಯಾಮಮಾಡಿ ಮನಸ್ಸನ್ನು ಸ್ಥಿರಗೊಳಿಸಿದರೆ 
ಕೂಡಲೆ ಹಗಲು ಮತ್ತು ರಾತ್ರಿಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತನಾಗುವನು. 

೭೦. ದೃಢಮನಸ್ಸಿನಿಂದ ಹತ್ತು ಅಥವಾ ಹನ್ನೆರಡು ಪ್ರಾಣಾಯಾಮ 
ಗಳನ್ನು ಮಾಡುವುದರಿಂದ ಮಹಾತಪಸ್ಸನ್ನಾಚರಿಸಿದಂತಾಗುವುದು. 

೭೧. ವ್ಯಾಹೈತಿಪ್ರಣವ ಮಂತ್ರಗಳಿಂದ ಸಹಿತವಾಗಿ ಹೆದಿನಾರು ಪ್ರಾಣಾ 
ಯಾಮಗಳನ್ನು ಪ್ರತಿನಿತ್ಯವೂ ಮಾಡಿದಲ್ಲಿ ಆ ಪ್ರಾಣಾಯಾಮಗಳು ಶಿಶುಹತ್ಯ 
ಮಾಡಿದವನನ್ನೂ ಸನಿತ್ರಗೊಳಿಸುವುವು. 

೭೨. ಸುವರ್ಣಾದಿ ಲೋಹಗಳನ್ನು ಬೆಂಕಿಯಲ್ಲಿಟ್ಟು ಊದುವುದರಿಂದ 
ಅವುಗಳ ಕೊಳೆಯು ಹೋಗುವಂತೆ ಇಂದ್ರಿಯಗಳಿಂದ ಮಾಡಿದ ದೋಷಗಳು 
ಪ್ರಾಣಾಯಾಮಗಳಿಂದ ನೀಗುವುವು. 

೭೩. ರಾಜವರ! ಗಾಯತ್ರಿಯ ಒಂದೊಂದು ಅಕ್ಬರವೂ ಪರಬ್ರಹ್ಮಸ್ರತಿ 
ಪಾದಕನಾದುದು. ಆ ಗಾಯತ್ರಿಯ ಉಚ್ಛಾರಣಪೂರ್ವಕವಾಗಿ ಮಾಡುವ 
ಪ್ರಾಣಾಯಾಮವು ಉತ್ತಮವಾದ ತಪಸ್ಸು. ಅದರಿಂದ ಗಾಯತ್ರಿಗಿಂತಲೂ 
ಉತ್ತಮವಾದ ಪವಿತ್ರಮಂತ್ರವು ಮತ್ತೊಂದಿಲ್ಲ. 

೭೪. ರಾತ್ರಿಯಲ್ಲಿ ಕಾಯಿಕವಾಚಿಕ ಮಾನಸಿಕವಾಗಿ ಮಾಡಿದ ಪಾಪವನ್ನು 





ಪಂಚನೋತಧ್ಯಾಯಃ ಸ 


ಯದಹ್ನಾ ಕುರುತೇ ಸಾಪಂ ಮನೋವಾಕ್ಕಾಯಕರ್ಮಭಿಃ | 
ಆಸೀನಃ ಪಶ್ಚಿಮಾಂ ಸಂಧ್ಯಾಂ ಪ್ರಾಣಾಯಾಮೈರ್ವೃ್ಯಪೋಹತಿ । 


ಪಶ್ಚಿಮಾಂ ತು ಸಮಾಸೀನೋ ಮಲಂ ಹಂತಿ ದಿವಾಕೃತಂ ॥ ೭೫ ॥ 
ನೋಪತಿಸ್ಕೇತ್ತು ಯಃ ಪೂರ್ನಾಂ ನೋಪಾಸ್ತೇ ಯಸ್ತು ಪಶ್ಚಿಮಾಂ | 

ಸ ಶೂದ್ರವದ್ಬಹಿಷ್ಕಾರ್ಯಃ ಸರ್ವಸ್ಮಾದ್ದಿಜಕರ್ಮಣಃ ॥ ೭೬॥ 
ಅಸಾಂ ಸಮಿಾಪಮಾಸಾದ್ಯ ನಿತ್ಯಕರ್ಮ ಸಮಾಚರೇತ್‌ । 

ತತ ಆಚೆಮುನಂ ಕುರ್ಯಾದ್ಯಥಾ ನಿಧ್ಯನುಪೂರ್ವಶಃ ॥ ೭೭ ॥ 
ಆಸೋಹಿಷ್ಕೇತಿ ತಿಸೃಭಿರ್ಮಾರ್ಜನಂ ತು ತತಶ್ಚರೇತ್‌ । 

ಭೂಮೌ ಶಿರಸಿ ಚಾಕಾಶ ಆಕಾಶೇ ಭುವಿ ಮಸ್ತಕೇ ॥ ೭೮ ॥ 


ಮಸ್ತಕೇ ಚ ತಥಾಕಾಶೇ ಭೂಮೌ ಚ ನನಧಾ ನ್ಬಸೇತ್‌ । 
ಭೂಮಿಶಬ್ದೇನ ಚರಣಾವಾಕಾಶಂ ಹೃದಯಂ ಸ್ಮೃತಂ । 

ಶಿರಸ್ಕೇವ ಶಿರಶಜ್ದೋ ಮಾರ್ಜನಂ ತೈರುದಾಹೃತಂ ॥೭೯॥ 
ವಾರುಣಾದಫಿ ಚಾಗ್ನೇಯಾದ್ಯಾಯನ್ಯಾದನಿ ಚೇಂದ್ರತಃ ! 
ಮಂತ್ರಸ್ನಾನಾದಪಿ ಪರಂ ಬ್ರಾಹ್ಮಂ ಸ್ಲಾನಮಿದಂ ಪರಂ । 
ಬ್ರಾಹ್ಮಸ್ನಾನೇನ ಯಃ ಸ್ನಾತಃ ಸ ಬಾಹ್ಯಾಭ್ಯಂತರಂ ಶುಚಿಃ ॥ ೮೪೦ ॥ 


ಪ್ರಾತಃಕಾಲ ಸಂಧ್ಯಾಕಾಲಗಳಲ್ಲೆದ್ದು ಪ್ರಾಣಾಯಾಮಮಾಡಿ ಹೋಗಲಾಡಿಸ 
ಬೇಕು. 

೭೫-೭೬. ಹಗಲು ಕಾಯಿಕವಾಚಿಕ ಮಾನಸಿಕವಾಗಿ ಮಾಡಿದ ಮತ್ತು 
ಇತರ ವಿಧವಾದ ಪಾಪವು ಸಾಯಂಸಂಧ್ಯಾಕಾಲದಲ್ಲಿ ಪ್ರಾಣಾಯಾಮಮಾಡು 
ವುದರಿಂದ ನೀಗುವುದು. ಯಾವ ಬ್ರಾಹ್ಮಣನು ಪ್ರಾತಃಕಾಲ ಮತ್ತು ಸಾಯಂ 
ಕಾಲಗಳಲ್ಲಿ ಸಂಧ್ಯಾವಂದನೆಯನ್ನು ಮಾಡುವುದಿಲ್ಲವೊ ಅವನು ಬ್ರಾಹ್ಮಣನ 
ಎಲ್ಲಾ ಕರ್ಮಗಳಿಗೂ ಅನಧಿಕಾರಿಯಾಗುವನು. 

೭೭. ನೀರಿನ ಹತ್ತಿರದಲ್ಲಿ ನಿತ್ಯಕರ್ಮವನ್ನು ನೆರನೇರಿಸಬೇಕು. ಮೊದಲು 
ನಿಹಿತಕ್ರಮದಿಂದ ಆಚಮನಮಾಡಬೇಕು. 

೭೮೨೭೯. ತರುವಾಯ ಆಪೋಹಿಷ್ಯೇತ್ಯಾದಿ ಮೂರು ಖಕ್ಕುಗಳಿಂದ 
ಭೂಮಿ ಶಿರಸ್ಸು ಆಕಾಶ, ಆಕಾಶ ಭೂಮಿ ಶಿರಸ್ಸು, ಶಿರಸ್ಸು ಆಕಾಶ ಭೂಮಿ 
ಗಳಲ್ಲಿ ಒಂಬತ್ತುಸಾರಿ ನೀರನ್ನು ಪ್ರೋಕ್ಸಿಸಿಕೊಳ್ಳಬೇಕು. ಇಲ್ಲಿ ಭೂಮಿ ಶಬ್ದಕ್ಕೆ 
ಪಾದಗಳೆಂದೂ, ಆಕಾಶ ಶಬ್ದಕ್ಕೆ ಎದೆಯೆಂದೂ, ಶಿರಶ್ಶಬ್ದಕ್ಕೆ ತಲೆಯೆಂದೂ 
ಅರ್ಥವು. 

೮೦. ವಾರುಣವೆಂಬ ಅವಗಾಹನಸ್ನಾನದಿಂದಲೂ, ಆಗ್ನೇಯವೆಂಬ ಭಸ್ಮ 
ಸ್ನಾನದಿಂದಲೂ, ವಾಯವ್ಯವೆಂಬ ಗೋಧೂಳಿಸ್ನಾನದಿಂದಲೂ, ಐಂದ್ರವೆಂಬ 


೩೪ ಶ್ರೀ ಸ್ಮಾಂದಮಹಾಪುರಾಣಂ 


ಸರ್ವತ್ರ ಚಾಃರ್ಹತಾಮೇತಿ ದೇವಪೂಜಾದಿ ಕರ್ಮಣಿ । 


ನಕ್ತನ್ಹಿನಂ ನಿಮಜ್ಯಾಪ್ಪು ಕೈವರ್ತಾಃ ಕಿಮು ಸಾವನಾಃ ॥ ೮೧ ॥ 
ಶತಶೋಪಿ ತಥಾಸ್ನಾತಾ ನ ಶುದ್ಧಾ ಭಾವದೂಸಿತಾಃ । 
ಅಂತಃಕರಣಶುದ್ಧಾಂಶ್ಚ ತಾನ್ಹಿ ಭೂತಿಃ ಪನಿತ್ರಯೇತ್‌ ॥ ೮೨ 
ಕಂ ಪಾವನಾಃ ಪ್ರಕೀರ್ತ್ಯಂತೇ ರಾಸಭಾ ಭಸ್ಮಧೂಸರಾಃ । 

ಸ ಸ್ನಾತಃ ಸರ್ವತೀರ್ಥೇಷು ಮಲೈಃ ಸರ್ವೈರ್ನಿವರ್ಜಿತಃ ॥ ೮೩ ॥ 
ತೇನ ಕ್ರತುಶತೈರಿಷ್ಟಂ ಚೇತೋ ಯಸ್ಯೇಹ ನಿರ್ಮಲಂ । 
ತದೇನ ನಿರ್ಮಲಂ ಚೇತೋ ಯಥಾಸ್ಕಾತ್ತನ್ಮುನೇ ಶೃಣು ॥ ೮೪ ॥ 


ನಿಶ್ವೇಶಶ್ಚೇತ್ಛೃಸನ್ನಃ ಸ್ಯಾತ್ತದಾ ಸ್ಯಾನ್ನಾಃ ನೃಥಾ ಕೃಚಿತ್‌ । 
ತಸ್ಮಾಚ್ಹೇತೋ ನಿಶುದ್ಧ್ಯರ್ಥಂ ಕಾಶೀನಾಥಂ ಸಮಾಶ್ರಯೇತ್‌ ॥ ೮೫ ॥ 
ಇದಂ ಶರೀರಮುತ್ಸೃಜ್ಯ ಪರಂ ಬ್ರಹ್ಮಾಧಿಗಚ್ಛತಿ | 

ದ್ರುಪದಾಂತಂ ತತೋ ಜಪ್ಪ್ಯಾ ಜಲಮಾದಾಯ ಪಾಣಿನಾ C೬ ॥ 





ಬಿಸಿಲು ಮಳೆಯ ಸ್ನಾನದಿಂದಲ್ಕೂ ಮಂತ್ರಸ್ನಾನದಿಂದಲೂ ಈಗ ಹೇಳಿದ 
ಆಪೋಹಿಷ್ಯೇತ್ಯಾದಿ ಮಂತ್ರಸ್ನಾನವು ಉತ್ತಮವಾದುದು. ಈ ಬ್ರಾಹ್ಮಸ್ನಾನ. 
ಮಾಡಿದವನು ಒಳಗೂ ಹೊರಗೂ ಶುಚಿಯಾಗುವನು. 

೮೧, ಇಂತಹನು ದೇವಪೂಜಾದಿಕಾರ್ಯಗಳಿಗೆ ಅರ್ಹನಾಗುವನು. 
ಮನುಷ್ಯನು ಹಗಲು ರಾತ್ರಿ ನೀರಿನಲ್ಲಿ ಜಿಸ್ತನಂತೆ ಮುಳುಗಿದಮಾತ್ರಕ್ಕೆ 
ಪವಿತ್ರನಾಗುವುದಿಲ್ಲ. 

೮೨, ನೂರಾರು ಸಾರಿ ಸ್ನಾನಮಾಡಿದರೂ ಮನಸ್ಸು ದುಷ್ಟವಾಗಿದ್ದರೆ 
ಮನುಷ್ಯನು ಶುದ್ಧನಾಗುವುದಿಲ್ಲ. ಮನಸ್ಸು ಶುದ್ಧವಾಗಿದ್ದರೆ ಮಾತ್ರ ವಿಭೂ 
ತಿಯು ಅವನನ್ನು ಪವಿತ್ರನನ್ನಾಗಿಸುವುದು. 

೮೩-೮೪. ಭಸ್ಮಲಿಪ್ತವಾದ ಮಾತ್ರಕ್ಕೆ ಕತ್ತೆಯು ಸನಿತ್ರಪ್ರಾಣಿಯೆನಿಸಿ 
ಕೊಳ್ಳುವುದೇ? ಯಾವನ ಮನಸ್ಸು ಶುದ್ಧವಾಗಿರುವುದೊ, ಅವನೇ ಸಮಸ್ತ 
ತೀರ್ಥಗಳಲ್ಲಿ ಸ್ನಾನಮಾಡಿದವನಾಗುವನು. ಸಕಲ ದೋಷಮುಕ್ತನೂ ಅವನೆ. 
ಅವನೇ ಅನೇಕ ಯಾಗಗಳನ್ನು ಮಾಡಿದವನು. ಹಾಗೆ ಮನಸ್ಸು ಶುದ್ಧವಾಗು 
ವುದಕ್ಕೆ ಕಾರಣವೇನೆಂಬುದನ್ನು ಹೇಳುತ್ತೇನೆ ಕೇಳು. 

೮೫. ವಿಶ್ವೇಶ್ವರನು ಪ್ರಸನ್ನನಾದರೆ ಮನಸ್ಸು ಶುದ್ಧವಾಗುವುದು. 
ಆದುದರಿಂದ ಮನಸ್ಸಿನ ಶುದ್ಧಿಗಾಗಿ ಕಾಶೀನಾಥನಾದ ನಿಶ್ರೇಶ್ವರನನ್ನು ಶರಣು 
ಹೊಂದಬೇಕು. 

೮೬-೮೮. ಆ ವಿಶ್ವೇಶ್ವರನ ಅನುಗ್ರಹದಿಂದ ಈ ದೇಹವನ್ನು ತ್ಯಜಿಸಿ 
ಪರಬ್ರಹ್ಮನನ್ನು ಸೇರುವನು. ಸ್ನಾನವಿಧಿಯನ್ನರಿತ ವಿಸ್ರನು ಕೈಯಲ್ಲಿ ನೀರನ್ನು 


ಪಂಚಮೋರಧ್ಮಾಯಃ ' ೬೯ 


ರ್ಯಾದೃತಂ ಚ ಮಂತ್ರೇಣ ವಿಧಿಜ್ಞಸ್ತೃಘಮರ್ಷಣಂ ! 

ಕುಜ್ಜಾ ಬಸ್ಸು ಚ ಯೋ ನಿದ್ಯಾನ್‌ "'ಜಪೇಸ್ತ್ರಿರಘನರ್ಷಣಂ ॥ ೮೭ ॥ 
ಲೇ ವಾಸಿ ಸ್ಸ ಲೇಮಾಸಿ ಯಃ ಕುರ್ಯಾದಘನುರ್ಷಣಂ । 
ಸ್ಯಂಘೌಘೋ ನಿನಶ್ಯೇತ ಯಥಾ ಸೂರ್ಯೋದಯೇ ತಮಃ ॥ ೮೮ ॥ 
ಯತ್ರೀಂ ಶಿರಸಾ ಹೀನಾಂ ಮಹಾವ್ಯಾಹೃತಿಪೂರ್ನಿಕಾಂ । 


ಣವಾದ್ಯಾಂ ಜಪಂಸ್ತಿಷ್ಠನ್ಶಿಷೇದಂಭೋಂಂಜಲಿತ್ರಯಂ 101೮೯॥ 
ನ ನಜ್ರೋದಕೇನಾಶು ಮಂದೇಹಾ ನಾಮ ರಾಕ್ಸಸಾಃ। 
ಇರ್ಯತೇಜಃಪ್ರಲೋಪಂ ತೇ ಶೈಲಾ ಇವ ವಿವಸ್ವತಃ uo 


ಸಾಯಾರ್ಥಂ ಚ ಸೂರ್ಯಸ್ಯ ಯೋ ದ್ವಿಜೋ ನಾಂಂಜಲಿತ್ರಯಂ ! 
ಪೇನ್ಮಂದೇಹನಾಶಾಯ ಸೋಪಿ ಮಂದೇಹತಾಂ ವ್ರಜೇತ್‌ ॥ ೯೧॥ 
ಶ್ರಿತಸ್ತಾವಜ್ಞ ಸಂಸ್ತಿ ಸ್ಠೇದ್ಯಾವನತ್ಸೂರ್ಯಸ್ಯ ದರ್ಶನಂ । 

:ಪವಿಷ್ಟೋ ಜಪೇತ್ಸಾಯನೃಕ್ಸಾಣಾಮಾವಿಲೋಕನಾತ್‌ ॥ ೯೨॥ 
`ಲಲೋಪೋ ನ ಕರ್ತವ್ಯೋ ದ್ವಿಜೇನ ಸ್ವಹಿತೇಪ್ಪುನಾ | 
ರ್ಧೋದಯಾಸ್ತಸಮಯೇ ತಸ್ಮಾದ್ವಜ್ರೋದಕಂ ಕ್ಸಿಷೇತ್‌ ॥ ೯೩॥ 





ಡಿದುಕೊಂಡು ""ಖುತಂ ಚ ಸತ್ಯಂಚೇ > ತ್ಯಾದಿ ಅಘಮರ್ಷಣ ಮಂತ ತ್ರವನ್ನು 
ಲದಲ್ಲಾಗಲಿ, ಜಲದಲ್ಲಾಗಲಿ ಮೂರಾವೃತ್ತಿ ತ್ತಿ ಜಪಿಸಿ ಸ್ನಾನಮಾಡಿದರೆ ಅವನ 
ಎಪರಾಶಿಯು ಸೂರ್ಯನು ರಟ ಕತ್ತಲೆಯು ಹೇಗೊ ಹಾಗೆ 
ತಾಯವಾಗುವುದು. 

೮೯-೯೧. ನಿಂತುಕೊಂಡು ಪ್ರಣವ ಮತ್ತು ವ್ಯಾಹೃತಿ ಪೂರ್ವಕವಾಗಿ 
ತಯತ್ರಿಯನ್ನುಚ್ಚರಿಸಿ ಮೂರು ಬೊಗಸೆ ನೀರನ್ನು ಅರ್ಫ್ಥ್ಯವಾಗಿ ಕೊಟ್ಟರೆ 
ಜ್ರದಂತಿರುವ ಆ ನೀರಿನಿಂದ ಸೂರ್ಯನ ತೇಜಸ್ಸನ್ನು ಹಾಳುಮಾಡುತ್ತಿರುವ 
ುಂಡೇಹರೆಂಬ ರಾಕ್ಷಸರು ಹತರಾಗುವರು. ಯಾವ ಬ್ರಾಹ್ಮಣನು ಸೂರ್ಯ 
ಗೆ ಸಹಾಯವನ್ನು ಮಾಡುವ ಮೂಲಕ ಮಂದೇಹರಾಕ್ಸಸರನ್ನು ನಾಶಮಾಡು 
ದಕ್ಕಾಗಿ ಮೂರಾವೃತ್ತಿ ಜಲದಿಂದ ಅರ್ಥ್ಯವನ್ನು ಕೊಡುವುದಿಲ್ಲವೊ ಅವನೂ 
3ಂದೇಹನೇ ಜಾತ, 

೯೨. ಬೆಳಗ್ಗೆ ಸೂರ್ಯನ ದರ್ಶನವಾಗುವವರೆಗೆ ನಿಂತುಕೊಂಡೂ 
ಇಯಂಕಾಲ ನಕ್ಸತ ಶ್ರಗಳು ಕಾಣಿಸುವವರೆಗೆ ಕುಳಿತುಕೊಂಡೂ ಜಪಿಸಬೇಕು. 

೯೩. ತನಗೆ ತನನ್ನು ಬಯಸುವ ವಿಪ್ರನು ಕಾಲಾತಿಕ್ರಮನನ್ನು 
ಬಾಡದೆ ಸೂರ್ಯನ ಅರ್ಥೋದಯ ಮತ್ತು ಅರ್ಧಾಸ್ತಮಯಕಾಲದಲ್ಲಿ 
'ಜ್ರೋದಕವನ್ನು ಕೊಡಬೇಕು. 


೩೦ ಶ್ರೀ ಸ್ಕಾಂದೆಮೆಹಾಪುರಾಣಂ 


ವಿಧಿನಾಂಪಿ ಕೃತಾ ಸಂಧ್ಯಾ ಕಾಲಾಂತೀತಾಂಫಲಾ ಭವೇತ್‌ । 
ಅಯಮೇನಹಿ ದೃಷ್ಟಾಂತೋ ವಂಧ್ಯಾಸ್ತ್ರೀಮೈಥುನಂ ಯಥಾ ॥ ೯೪॥ 
ಜಲೇ ವಾಮಕರಂ ಕೃತ್ವಾ ಯಾ ಸಂಧ್ಯಾಚರಿತಾ ದ್ವಿಜೈಃ । 


ವೃಷಲೀಸಾ ಸರಿಜ್ಞೇಯಾ ರಕ್ಟೋಗಣಮುದಾನಹಾ ॥ ೯೫॥ 
ಉಪಸ್ಥಾನಂ ತತಃ ಕುರ್ಯಾಚ್ಛಾಖೋಕ್ತವಿಧಿನಾ ತತಃ । 

ಸಹಸ್ಪಕೃತ್ವೋ ಗಾಯತ್ರ್ಯಾಃ ಶತಕೃತ್ತೋಂಥವಾ ಪುನಃ ॥ ೯೬॥ 
ದಶಕೃತ್ಟೋಂಥ ದೇವ್ಯೈ ಚ ಕುರ್ಯಾತ್ಸೌರೀಮುಪಸ್ಥಿತಿಂ | 
ಸಹಸ್ರಪರಮಾಂ ದೇವೀಂ ಶತಮಧ್ಯಾಂ ದಶಾನರಾಂ ॥ ೯೭॥ 
ಗಾಯತ್ರೀಂ ಯೋಜಸೇದ್ವಿಪ್ರೋ ನ ಸ ಪಾಪೈಃ ಪ್ರಲಿಪ್ಯತೇ । 
ರಕ್ತಚಂದನಮಿಶ್ರಾಭಿರದ್ಳಿಶ್ಚ ಕುಸುಮೈಃ ಕುಶೈಃ ॥ ೯೮॥ 
ನೇದೋಕ್ತೈರಾಗಮೋಕ್ತೈರ್ವಾ ಮಂತ್ರೆರರ್ಫ್ಯಂ ಪ್ರದಾಪಯೇತ್‌ । 
ಅರ್ಚಿತಃ ಸನಿತಾ ಯೇನ ತೇನ ತ್ರೈಲೋಕ್ಯಮರ್ಚಿತಂ ॥೯೯॥ 
ಅರ್ಚಿತಃ ಸವಿತಾ ದತ್ತೇ ಸುತಾನ್ಪಶುವಸೂನಿಚ । 
ವ್ಯಾಧೀನ್ಹರೇದ್ದಧಾತ್ಯಾಯುಃ ಪೂರಯೇದ್ವಾಂಭಿತಾನ್ಯಪಿ ॥ ೧೦೦ ॥ 


೯೪. ಕಾಲವನ್ನು ಮಾರಿ ವಿಹಿತಕ್ರಮದಿಂದ ಸಂಧ್ಯಾವಂದನೆಯನ್ನು 
ಮಾಡಿದರೂ ಅದು ಬಂಜೆಯ ಮೈಥುನದಂತೆ ನಿಷ್ಟಲವಾದೀತು. 

೯೫. ನೀರಿನಲ್ಲಿ ಎಡಗೈಯನ್ನಿಟ್ಟು ಬ್ರಾಹ್ಮಣನು ಮಾಡಿದ ಸಂಧ್ಯಾ 
ವಂದನೆಯು ರಾಕ್ಷಸರಿಗೆ ಸಂತೋಷವನ್ನುಂಟುಮಾಡುವ ವೃಷಲೀ ಎನ್ಲಿಸು 
ವುದು. 

೯೬-೧೦೦. ಅರ್ಥ್ಯಪ್ರದಾನವಾದ ಮೇಲೆ ತನ್ನ ಶಾಖೋಕ್ತಕ್ರಮದಿಂದ 
ಉಪಸ್ಸಾನಮಾಡಬೇಕು. ತರುವಾಯ ಸಾವಿರ, ನೂರು, ಅಥವಾ ಹತ್ತು 
ಸಾರಿ ಗಾಯತ್ರಿಯನ್ನು ಜಸಿಸಿ ಸೂರ್ಯೊೋಪಸ್ಥಾನಮಾಡಬೇಕು. ಗಾಯತ್ರಿ 
ಯನ್ನು ಸಾವಿರಸಾರಿ ಜಪಿಸುವುದು ಉತ್ತಮವು, ನೂರುಸಾರಿ ಜಪಿಸುವುದು 
ಮಧ್ಯಮವು, ಹತ್ತುಸಾರಿ ಜಪಿಸುವುದು ಅಧಮವು. ಹೀಗೆ ಹತ್ತಕ್ಕೆ ಕಮ್ಮಿ 
ಯಾಗದಂತೆ ಗಾಯತ್ರಿಯನ್ನು ಜಪಿಸಿದ ಬ್ರಾಹ್ಮಣನು ಸಮಸ್ತ ಪಾಸಮುಕ್ತ 
ನಾಗುವನು. ಕೆಂಪು ಗಂಧದಿಂದಲೂ, ಹೂವುಗಳಿಂದಲೂ ಮಿಶ್ರವಾದ ನೀರಿ 
ನಿಂದ ವೇದೋಕ್ತ ಅಥವಾ ಆಗಮೋಕ್ತ ಮಂತ್ರಗಳೊಡನೆ ಅರ್ಥ್ಯವನ್ನು 
ಕೊಡಬೇಕು. ಸೂರ್ಯನನ್ನು ಪೂಜಿಸಿದವನು ಮೂರು ಲೋಕವನ್ನೂ ಪೂಜಿಸಿ 
ದವನಾಗುವನು. ಹೀಗೆ ಅರ್ಚಿಸಿದ ಸೂರ್ಯದೇವನು ಮಕ್ಕಳನ್ನೂ 
ಪಶುಗಳನ್ನೂ, ದ್ರವ್ಯಗಳನ್ನೂ ಕೊಡುತ್ತಾನೆ. ರೋಗವನ್ನು ಹೋಗಲಾಡಿಸಿ 
ಆಯುಸ್ಸನ್ನು ಕೊಟ್ಟು ಇಷ್ಟಾರ್ಥಗಳನ್ನು ಅನುಗ್ರಹಿಸುವನು. 


ಸಂಚನೋಂಧ್ಯಾಯಃ FY 


ಅಯಂ ಹಿ ರುದ್ರ ಆದಿತ್ಯೋ ಹರಿರೇಷ ದಿವಾಕರಃ । 
ರವಿರ್ಹಿರಣ್ಯರೂಪೋಂಸೌ ತ್ರಯಾ ರೂಪೋಂಯಮರ್ಯಮಾ ॥೧೦೧॥ 
ತತಸ್ತು ತರ್ಪಣಂ ಕುರ್ಯಾತ್ಸೃಶಾಖೋಕ್ತನಿಧಾನತಃ । 
ಬ್ರಹ್ಮಾದೀನಖಿಲಾನ್ಹೇವಾನ್ಮರೀಚ್ಯಾದೀಂಸ್ತಥಾ ಮುನೀನ್‌ ॥ ೧೦೨ ॥ 
ಚಂದನಾಂಗರುಕರ್ಪೂರಗಂಧವತ್ಯುಸುಮೈರನಿ। 
ತರ್ಪಯೇಚ್ಛುಚಿಭಿಸ್ತೋಯೈಸ ಕೆ ಂತ್ರಿತಿ ಸಮುಚ್ಚರೇತ್‌ ॥ ೧೦೩8 


ಹ 
ಸನಕಾದೀನ್ಮನುಷ್ಯಾಂಶ್ಚ ಸಿನೀತೀ ತರ್ಷಯೇದ್ಯವೈಃ I 
ಅಂಗುಷ್ಮದ್ವಯನಮುಥ್ಯೇ ತು ಕೃತ್ವಾ ದರ್ಭಾನೃಜೂನ್ಹ್ವಿಜ ೧೦೪ 
ಕನ್ಯವಾಡನಲಾದೀಂಶ್ಚ ಪಿತ್ಯೂಸ್ಸಿ ನ್ಯಾನ್ರತರ್ಸ್ಷಯೇತ್‌ । 
ಪ್ರಾಚೀನಾನೀತಿಕೋ ದರ್ಭೈರ್ದ್ವಿಗುಣೈಸ್ತಿಲಮಿಶ್ರಿತೈಃ ೧೦೫ ॥ 


ರವೌ ಶುಕ್ಲೇ ತ್ರಯೋದಶ್ಯಾಂ ಸಪ್ತಮ್ಯಾಂ ನಿಶಿ ಸಂಧ್ಯಯೋಃ | 
ಶ್ರೇಯೋಂರ್ಥೀ ಬ್ರಾಹ್ಮಣೋ ಜಾತು ನ ಕುರ್ಯಾತ್ರಿಲತರ್ಪಣಂ ॥೧೦೬॥ 
ಯದಿ ಕುರ್ಯಾತ್ತತಃ ಕುರ್ಯಾಚ್ಛುಕ್ಸೈರೇನ ತಿಲೈಃ ಕೃತೀ 1 
ಚತುರ್ದಶ ಯಮಾನ್ಸಶ್ಚಾತ್ರರ್ಪಯೇನ್ನಾಮ ಉಚ್ಚರನ್‌ ॥ ೧೦೭ ॥ 


೧೦೧. ಈ ಆದಿತ್ಯನು ರುದ್ರ, ವಿಷ 

ಸ್ವರೂಪನು. 

೧೦೨-೧೦೩. ಬಳಿಕ ತನ್ನ ಶಾಖೋಕ್ತಕ್ರಮದಿಂದ ಚಂದನ, ಕೃಷ್ಣಾ 
ಗುರು. ಕರ್ಪೂರಗಳ ಸುವಾಸನೆಯುಳ್ಳ ಹೂವುಗಳಿಂದ ಸಹಿತವಾದ ಶುದ್ಧ 
ಜಲದಿಂದ "ತೃಪ್ಯಂತು' ಎಂದು ಹೇಳುತ್ತ ಬ್ರಹ್ಮಾದಿ ದೇವತೆಗಳಿಗೂ ಮರೀಚ್ಯಾದಿ 
RES, ತರ್ಪಣಕೊಡಬೇಕು. 

೧೦೪. ಬ್ರಾ ಹ್ಮಣನು ನೆಟ್ಟಿಗಿರುವ ದರ್ಭೆಗಳನ್ನು ಬೆರಳಿನ ಮಧ್ಯದಲ್ಲಿ 
ಸಿಕ್ಕಿಸಿಕೊಂಡು ಯಜ್ಞೋಪವೀತವನ್ನು ಮಾಲಾಕಾರವಾಗಿ ಹಾಕಿಕೊಂಡು 
ಅಕ್ಕಿಯ ಕಾಳುಗಳಿಂದ ಸನಕಾದಿ ಮನುಷ್ಯಖುಸಿಗಳನ್ನು ತರ್ಪಿಸಬೇಕು. 

೧೦೫. ಜನಿವಾರವನ್ನು ಎಡಮಾಡಿಕೊಂಡು ಎಳ್ಳು ಸಹತವಾದ ಇಮ್ಮಡಿ 
ದರ್ಭೆಗಳಿಂದ ಕವ್ಯವಾಟ್‌, ಅನಲ ಮೊದಲಾದ ದಿವ್ಯಪಿತೃಗಳಿಗೆ ತರ್ಪಣ 
ಕೊಡಬೇಕು. 

೧೦೬-೧೦೭. ಭಾನುವಾರ, ಸಪ್ತನಾ, ತ್ರಯೋದಶಿ ತಿಥಿಗಳಲ್ಲಿಯೂ, 
ರಾತ್ರಿಯಲ್ಲಿಯೂ, ಸಂಧ್ಯಾಕಾಲದಲ್ಲಿಯ ಯೂ ಶೆ ಕ ೀಯಸ್ಸನ್ನು ಬಯಸುವ ಬ್ರಾ ಹ್ಮ 
ಣನು ತಿಲತರ್ಪಣ ಮಾಡಕೂಡದು. ಹಾಗೆ ತರ್ಪಣಮಾಡಬೇಕಾದರೆ ಏಳಿ 
ಎಳ್ಳಿನಿಂದ ತರ್ನಣಮಾಡಬೇಕು. ಬಳಿಕ ಹದಿನಾಲ್ಕು ಯಮರಿಗೆ ಅವರ 
ನಾಮಗಳನ್ನುಚ್ಚರಿಸಿ ತರ್ಪಣ ಮಾಡಬೇಕು. 


ಲ 
ಣಾ 


» ಹಿರಣ್ಯ, ವೇದ ಇವುಗಳ 


೭೨ ತ್ರೀ ಸ್ಕಾಂದೆಮಹಾಪುರಾಣಂ 


ತತಃ ಸ್ವಗೋತ್ರಮುಚ್ಹಾರ್ಯ ತರ್ಪಯೇತ್ಸ್ಯಾಸ್ಪಿತ್ಳೂನ್ಮುದಾ । 


ಸವ್ಯಜಾನುನಿಪಾತೇನ ಪಿತೃತೀರ್ಥೇನ ವಾಗ್ಯತಃ ॥ ೧೦೮ ॥ 
ಏಕೈಕಮಂಜಲಿಂ ದೇವಾ ದ್ಮೌಡ್ಟೌ ತು ಸನಕಾದಿಕಾಃ । 
ಪಿತರಸ್ತ್ರೀನ್ಭ್ರವಾಂಛಂತಿ ಸ್ತ್ರಿಯ ಏಕೈ ಕಮಂಜಲಿಂ ॥ ೧೦೯ ॥ 


ಅಂಗುಲ್ಯಗ್ರೇಣ ವೈ ದೇವಮಾರ್ಷಮಂಗುಲಿಮೂಲಗಂ । 
ಬ್ರಾಹ್ಮಮಂಗುಷ್ಮಮೂಲೇ ತು ಷಾಣಿನುಥ್ಯೇ ಪ್ರಜಾಪತೇಃ ॥ ೧೧೦ ॥ 
ಮಧ್ಯೇಂಂಗುಷ್ಕಪ್ರದೇಶಿನ್ಯೋಃ ಪಿತ್ರ್ಯಂ ತೀರ್ಥಂ ಪ್ರಚಕ್ಷತೇ । 
ಆಬ್ರಹ್ಮಸ್ತಂಬಪರ್ಯಂತಂ ದೇನರ್ಷಿಪಿತೃ ಮಾನವಾಃ ॥ ೧೧೧ 
ತೃಪ್ಯಂತು ಸರ್ವೇ ಪಿತರೋ ಮಾತೃಮಾತಾಮಹಾದಯಃ । 

ಅನ್ಯೇಚ ಮಂತ್ರಾಃ ಪ್ರೋಕ್ತಾ ಯೇ ನೇದಸೌರಾಣಸಂಭವಾಃ ॥ 

ಸಾಂಗಂ ಚ ತರ್ಪಣಂ ಕುರ್ಯಾತ್ಸಿತೃೂಣಾಂ ಚ ಸುಖಪ್ರದಂ । 


ಅಗ್ನಿಕಾರ್ಯಂ ತತಃ ಕೃತ್ವಾ ವೇದಾಭ್ಯಾಸಂ ತತಶ್ಚರೇತ್‌ ॥ ೧೧೩॥ 
ಶ್ರುತ್ಯಭ್ಯಾಸಃ ಪಂಚಧಾ ಸ್ಕಾತ್ತ್ಸ್ಮೀಕಾರೋಂರ್ಥನಿಚಾರಣಂ । 
ಅಭ್ಯಾಸಶ್ವ ತಸಶ್ವಾಂಸಿ ಶಿಷ್ಕೇಭ್ಯಃ ಪ್ರತಿಸಾದನಂ ॥ ೧೧೪ ॥ 








೧೦೮. ಅನಂತರ ಪಿತೃತೀರ್ಥದಿಂದ ಎಡಮೊಣಕಾಲೂರಿಕೊಂಡು ತನ್ನ 
ಪಿತೃಗಳಿಗೆ ಗೋತ್ರೋಚ್ಚಾರಣಪೂರ್ವಕವಾಗಿ ಸಂತೋಷದಿಂದ ತರ್ಪಣ ಕೊಡ 
ಬೇಕು. 

೧೦೯. ದೇವತೆಗಳಿಗೆ ಒಂದೊಂದು ಬೊಗಸೆ ನೀರನ್ಪೂ, ಸನಕಾದಿ 
ಗಳಿಗೆ ಎರಡೆರಡು ಬೊಗಸೆ ನೀರನ್ನೂ, ಪಿತೃಗಳಿಗೆ ಮೂರು ಮೂರು ಬೊಗಸೆ 
ನೀರನ್ನೂ, ಹೆಂಗಸರಿಗೆ ಒಂದೊಂದು ಬೊಗಸೆ ನೀರನ್ನೂ ತರ್ಪಣವಾಗಿ 
ಕೊಡಬೇಕು. 

೧೧೦-೧೧೪. ಬೆರಳುಗಳ ಕೊನೆಯಲ್ಲಿ ದೇವತೀರ್ಥವೂ, ಬೆರಳುಗಳ 
ಬುಡದಲ್ಲಿ ಖುಸಿತೀರ್ಥವೂ, ಹೆಚ್ಚಟ್ಟನ ಬುಡದಲ್ಲಿ ಬ್ರಾಹ್ಮತೀರ್ಥವೂ, ಅಂಗೈಯ: 
ನಡುವೆ ಪ್ರಜಾಪತಿತೀರ್ಥವೂ, ಹೆಬ್ಬೆಟ್ಟು ಮತ್ತು ಪ್ರದೇಶಿನೀ ಎಂಬ ಅದರ 
ಪಕ್ಕದಲ್ಲಿರುವ ಬೆರಳಿನ ಮಧ್ಯದಲ್ಲಿ ನಿತೃತೀರ್ಥವೂ ಇರುವುದು. ಆಬ್ರಹ್ಮೇ 
ಶ್ಯಾದಿ ಮಂತ್ರದಿಂದಲೂ, ಇನ್ನೂ ವೇದ ಮತ್ತು ಪುರಾಣಗಳ ಮಂತ್ರಗಳಿಂದಲೂ 
ಪಿತೃಗಳಿಗೆ ಸೌಖ್ಯವನ್ನುಂಟುಮಾಡುವ ತರ್ಪಣವನ್ನು ಮಾಡಬೇಕು. ಬಳಿಕ 
ಅಗ್ನಿಕಾರ್ಯವನ್ನೂ, ವೇದಾಭ್ಯಾಸವನ್ನೂ ಮಾಡಬೇಕು. ಗುರುವಿನಿಂದ 
ಉಪದೇಶ, ಅರ್ಥವಿಚಾರ, ಅಭ್ಯಾಸ, ತಪಸ್ಸು, ಶಿಷ್ಯರಿಗೆ ಹೇಳಿಕೊಡುವುದು, 
ಹೀಗೆ ವೇದಾಭ್ಯಾಸವು ಐದು ಪ್ರಕಾರವಾಗಿದೆ. 


ಪಂಜಮನೋಕಧ್ಯಾಯಃ ೭೩ 


ಅಬ್ಬಸ್ಯ ಪ್ರತಿಪಾಲಾರ್ಥಮಲಬ್ಧಸ್ಯ ಚ ಲಬೃಯೇ I 
ಪ್ರಾತಃ ಕೃತ್ಯನಿದಂ ಪ್ರೋಕ್ತಂ ದ್ವಿಜಾತೀನಾಂ ನೃಪೋತ್ತಮ ॥ ೧೧೫ ॥ 
ಅಥವಾ ಪ್ರಾತರುತ್ಥಾಯ ಕೃತ್ವಾಂವಶ್ಯಕಮೇವ ಚ । 


ಶೌಚಾಚನುನಮಾದಾಯ ಭಕ್ಟೆಯೇದ್ದಂತಧಾನನಂ ॥ ೧೧೬ ॥ 
ನಿಶೋಧ್ಯ ಸರ್ವಗಾತ್ರಾಣಿ ಪ್ರಾತಃಸಂಧ್ಯಾಂ ಸಮಾಚರೇತ್‌ । 
ನೇದಾಂರ್ಥಾನಧಿಗಚ್ಛೇದ್ಹೈ ಶಾಸ್ತ್ರಾಣಿ ನಿವಿಧಾನ್ಯಪಿ ॥ ೧೧೭ ॥ 


ಅಧ್ಯಾಪಯೇಚ್ಛು ಚೀಂಥಿಷ್ಯಾನ್ದಿ ತಾನ್ಮೇಧಾಸಮನ್ನಿತಾನ್‌ | 
ಉಪೇಯಾದೀಶ್ಚರಂ ಚಾಪಿ ಯೋಗಕ್ಲೇಮಾದಿಸಿದ್ದಯೇ ೧೧೮ ॥ 
ತತೋ ಮಧ್ಯಾಂಹ್ನಸಿದ್ಧ್ಯರ್ಥಂ ಪೂರ್ವೋಕ್ತಂ ಸ್ನಾನಮಾಚರೇಶ್‌ । 


ಸ್ನಾತ್ಕಾ ಮಾಢ್ಯಾಟ್ನಿ ಕೀರ ಸಂಧ್ಯಾಮುಷಾಸೀತ ವಿಚಕ್ಸಣಃ ॥ ೧೧೯॥ 
ದೇವತಾಂ ಪರಿಸೂಜ್ಯಾಥ ನೈನಿತ್ತಿಕನಿಧಿಂ ಚರೇತ್‌ । 

ಸವನಾಂಗ್ನಿಂ ಸಮುಜ್ಜಾಲ್ಯ ವೈಶ್ಚದೇನಂ ಸಮಾಚರೇತ್‌ ॥ ೧೨೦ ॥ 
ನಿಷ್ಪಾಸಾನ್ಕೋದ್ರವಾನ್ಮಾಷಾನ್ಕಲಾಸಾಂಶ್ಚಣಕಾಂಸ್ಕೃಜೇತ್‌ | 
ಕೈಲಪಕ್ಸಮಪಕ್ಟಾಂನ್ನಂ ಸರ್ವಂ ಲವಣಯುಕ್ರ್ಯಜೇತ್‌ ॥ ೧೨೧ ॥ 


ಅಢಕ್ಕನ್ನಂ ಮಸೂರಾನ್ನಂ ನರ್ತುಲಂ ಧಾನ್ಯಸಂಭವಂ । 
ಭುಕ್ತಶೇಷಂ ಪರ್ಯುಸಿತಂ ವೈಶ್ವದೇನೇ ವಿವರ್ಜಯೇತ್‌ ॥ ೧೨೨॥ 

೧೧೫. ರಾಜೇಂದ್ರ! ಲಬ್ಧವಾದುದರ ಪಾಲನೆಗೂ, ಅಪ್ಪಾಪ್ತವಾದುದರ 
ಸ್ರಾಪ್ತಿಗೂ ದ್ವಿಜರಿಗೆ ಈ ಬೆಳಗಿನ ಕರ್ತವ್ಯವು ವಿಹಿತವಾಗಿದೆ. 

೧೧೬-೧೧೭. ಅಥವಾ ಬೆಳಗ್ಗೆ ಎದ್ದು ಆವಶ್ಯಕವಾದ ಶೌಚಾಚಮನಗಳನ್ನು 
ಮಾಡಿ ಹಲ್ಲುಗಳನ್ನುಜ್ಜಿಕೊಂಡು ಮಿಂದು ಪ್ರಾತಃಸ್ಸಂಧ್ಯಾವಂದನೆಯನ್ನು 
ಮಾಡಿ ವೇದಾರ್ಥಗಳನ್ನೂ ಬಗೆ ಬಗೆಯ ಶಾಸ್ತ್ರಾರ್ಥಗಳನ್ನೂ ತಿಳಿಯಬೇಕು. 

೧೧೮. ಶುದ್ಧರೂ, ಪ್ರಿಯರೂ, ಬುದ್ಧಿ ಶಾಲಿಗಳೂ ಆಗಿರುವ ಶಿಷ್ಯರಿಗೆ 
ಪಾಠಹೇಳಿ ಯೋಗಕ್ಟೇಮಾದಿಗಳ ಪ್ರಾಪ್ತಿಗಾಗಿ ಪರಮಾತ್ಮನನ್ನು ಶರಣುಹೋಗ 
ಬೇಕು. 

೧೧೯. ತರುವಾಯ ಮಧ್ಯಾಹ್ನದಲ್ಲಿ ಹಿಂದೆ ಹೇಳಿದಂತೆ ಮಿಂದು 
ಮಾಧ್ಯಾಹ್ನಿಕ ಸಂಥ್ಯೋಪಾಸನೆಯನ್ನು ಮಾಡಬೇಕು. 

೧೨೦. ಬಳಿಕ ದೇವಪೂಜೆಗೈದು ನೈಮಿತ್ತಿಕ ಕರ್ಮವನ್ನಾಚರಿಸಿ 
ಉರಿಯುವ ಪವನಾಗ್ನಿಯಲ್ಲಿ ವೈಶ್ವದೇವ ಹೋಮವನ್ನು ನೆರವೇರಿಸಬೇಕು. 

೧೨೧-೧೨೨. ವೈಶ್ವದೇವ ಹೋಮದಲ್ಲಿ ಅವರೆ, ಹಾರಕ, ಉದ್ದು, 
ಕಡಲೆ ಮೊದಲಾದ ಧಾನ್ಯಗಳನ್ನೂ, ಎಣ್ಣೆಯಿಂದ ಕರೆದ ಪದಾರ್ಥಗಳನ್ನೂ, 
ಬೇಯಸಿದ ಅನ್ನನನ್ನೂ, ಉಪ್ಪು ಮಿಶ್ರವಾದ ಪದಾರ್ಥವನ್ನೂ, ತೊಗರಿಕಾಳಿನ 


2೪ ಶ್ರೀ ಸ್ಕಾಂದಮುಹಾಪುರಾಣಂ 


ದರ್ಭಪಾಣಿಃ ಸಮಾಚನ್ಯು ಪ್ರಾಣಾಯಾಮಂ ವಿಧಾಯ ಚ । 
ಪೃಷೋದಿನೀತಿ ಮಂತ್ರೇಣ ಪರ್ಯುಕ್ಸಣಮಾಥಾಚರೇತ್‌ ॥ ೧೨೩॥ 
ಪ್ರದಕ್ಟಿಣಂ ಚ ಸರ್ಯುಕ್ಸ್ಛ ದ್ವಿಃಪರಿಸ್ತೀರ್ಯ ವೈ ಕುಶಾನ್‌ । 
ರಾಪೋರ್ಧದೇವಮಂತ್ರೇಣ ಕುರ್ಯಾದ್ವಹ್ನಿಂ ಸ್ವಸಂಮುಖೇ ॥ 
ವೈಶ್ವಾನರಂ ಸಮಭ್ಯರ್ಚ್ಯ ಗಂಧಪುಷ್ಬಾಕ್ಸತೈಸ್ತಥಾ | 

ಸ್ವಶಾಖೋಕ್ತ ಪ್ರಕಾರೇಣ ಹೋಮಂ ಕುರ್ಯಾದ್ವಿಚಕ್ಸಣಃ ॥ ೧೨೫ ॥ 
ಅಧ್ಯಗಃ ಕ್ಸೀಣವೃತ್ತಿಶ್ಚ ನಿದ್ಯಾರ್ಥೀ ಗುರುಪೋಷಕಃ । 

ಯತಿಶ್ಚ ಬ್ರಹ್ಮಚಾರೀ ಚ ಷಡೇತೇ ಧರ್ಮಭಿಕ್ಸುಕಾಃ ॥ ೧೨೬ ॥ 
ಅತಿಥಿಃ ಸಾಂಥಿಕೋ ಜ್ಞೇಯೋಂ ನೂಚಾನಃ ಶ್ರುತಿಷಾರಗಃ । 
ಮಾನ್ಯಾವೇತೌ ಗೃ ಹಸ್ಥಾ ನಾಂ ಬ್ರಹ್ಮ ಲೋಕಮಭೀಪ್ಸತಾಂ ॥ ೧೨೭॥ 
ಅಸಿ ಶ್ವಪಾಫೇ ಕುನಿ ಮಾ ನೈನಾನ್ನಂ ನಿಷ ಲಂ ಭವೇತ್‌ । 

ಅತ್ರಾಂರ್ಥಿಸಿ ಸಕ ಸಾತ್ರಾಂಪಾತ್ರಂ ನ ಚಿಂತಯೇತ್‌ ॥ ೧೨೮ ॥ 
ಶುನಾಂ ಚ ಪತಿತಾನಾಂ ಚೆ ಶ್ವಪಚಾಂ ಪಾಪರೋಗಿಣಾಂ | 

ಕಾಕಾನಾಂ ಚ ಕೃಮಾಣಾಂ ಚ ಬಹಿರನ್ನಂ ಕಿರೇದ್ಭುನಿ ॥ ೧೨೯॥ 
ಅನ್ನೆನನ್ನೂ, ಕಾಡುಕಡಲೆ ಗುಗ್ಗುರಿಯನ್ನೂ, ಗುಂಡಗಿರುವ ಧಾನ್ಯಗಳನ್ನೂ, 
ಎಂಜಲನ್ನೂ, ತಂಗಳನ್ನೂ ಉಪಯೋಗಿಸಕೂಡದು. 

೧೨೩-೧೨೪, ದರ್ಭೆಯನ್ನು ಹಿಡಿದುಕೊಂಡು ಆಚಮನಪ್ರಾಣಾಯಾಮ 
ಗಳನ್ನುಮಾಡಿ ಪೃಷೋದಿವೀತ್ಯಾದಿ ಮಂತ್ರದಿಂದ ಎರಡುಸಾರಿ ಸರ್ಯುಕ್ಸಣ 
ಮಾಡಿ ದರ್ಭೆಗಳನ್ನು ಅಗ್ನಿಯ ಸುತ್ತಲೂ ಹಾಸಿ ರಾಪೋರ್ಧದೇವಮಂತ್ರದಿಂದ 
ಅಗ್ನಿಯನ್ನು ಸ್ವಾಭಿಮುಖವಾಗಿ ಮಾಡಿಕೊಳ್ಳಬೇಕು. 

೧೨೫. ಗಂಧ, ಹೂವು, ಅಕ್ಸತೆಗಳಿಂದ ಅಗ್ನಿದೇವನನ್ನು ಪೂಜಿಸಿ ತನ್ನ 
ಶಾಖೋಕ್ತಕ್ರಮದಿಂದ ಹೋಮವನ್ನು ಮಾಡಬೇಕು. 

೧೨೬-೧೨೭. ದಾರಿಹೋಕ, ಜೀವನಕ್ಕೆ ಆಶ್ರಯವಿಲ್ಲದವನು, ವಿದ್ಯಾರ್ಥಿ, 
ಗುರುವನ್ನು ಪೋಷಿಸುವವನು, ಸನ್ಯಾಸಿ, ಬ್ರಹ್ಮಚಾರಿ ಈ ಆರು ಜನರು ಧರ್ಮ 
ಭಿಕ್ಸಾರ್ಹರು. ಬ್ರಹ ೈಲೋತಾಭಿಲಾಸಿಗಳಾದ ಗೃ ಹೆಸ್ಮ ರಿಗೆ ಅತಿಥಿಯಾದ ದಾರಿ 
ಗನೂ, ಸಾಂಗನೇದಾಧ್ಯಯನ ಮಾಡಿದ ಶ್ರೋತ್ರಿ pn ಪೂಜಾರ್ಹನು. 

೧೨೮. ಚಂಡಾಲನಿಗಾಗಲಿ, ನಾಯಿಗಾಗಲಿ ನೀಡಿದ ಅನ್ನವು ನಿರರ್ಥಕ 
ವಾಗಲಾರದು. ಅನ್ಸಾರ್ಥಿಯಾಗಿ ಬಂದವರಲ್ಲಿ ಪಾತ್ರಾಪಾತ್ರನಿಚಾರಮಾಡ 
ಬಾರದು. 

೧೨೯. ನಾಯಿ, ಪತಿತ, ಚಂಡಾಲ, ಕುಷ್ಕಾದಿ ಪಾಸರೋಗಿಗಳಿಗೂ, 
ಕೃಮಿಗಳಿಗಾಗಿಯೂ ಹೊರಗದೆ ಅನ್ನವನ್ನು ಎರಚಬೇಕು. 


ಪಂಚಮೋರ9ಧ್ಯ್ಮಾಯಃ ೭೫ 


ಐಂದ್ರನಾರುಣನಾಯನವ್ಯಾಃ ಸೌಮ್ಯಾ ನೈ ನೈರ್ಜ್ನುತಾಶ್ಚಯೇ । 
ಪ್ರತಿಗೃಹ್ಹಂತ್ಹಿಮಂ ಹಿಂಡಂ ಕಾಕಾ ಭೂಮೌ ಮಯಾರ್ಪಿತಂ ॥ ೧೩೦ ॥ 
ಇತ್ನಂ ಭೂತಬಲಿಂ ಕೃತ್ವಾ ಕಾಲಂ ಗೋದೋಹಮಾತ್ರಕಂ I 


ಪ್ರತೀಕ್ಸ್ರ್ಯಾಃತಿಥಿಮಾಯಾತಂ ನಿಶೇದೊ ೇಜ್ಯಗೃಹಂ ತತಃ ॥ ೧೩೧ ॥ 
ಅದತ್ಕಾ ನಾಯಸಬಲಿಂ ನಿತ್ಯಶ್ರಾದ್ಧಂ ಸಮಾಚರೇತ್‌ । 

ನಿತ್ಯಶ್ರಾದ್ಧೇ ಸ್ಪಸಾಮರ್ಥ್ಯಾತ್ರ್ರೀನ್ಹ್ವಾವೇಕಮಥಾಃಪಿ ಮಾ ॥೧೩೨(॥ 
ಭೋಜಯೇತ್ಪಿತೃಯಜ್ಞಾರ್ಥಂ ದದ್ಯಾದುದ್ಭೃತ್ಯ ವಾರಿ ಚ। 
ನಿತ್ಯಶ್ರಾದ್ಧಂ ದೈನಹೀನಂ ನಿಯಮಾದಿನಿವರ್ಜಿತಂ ॥ ೧೩೩ ॥ 
ದಕ್ಸಿಣಾರಹಿತಂ ತ್ಹೇತದ್ದಾತೃಭೋಕ್ತಸುತೃಪ್ತಿಕೃತ್‌ । 

ಸಿತೃಯಜ್ಞಂ ನಿಧಾಯೇತ್ಮಂ ಸ್ವಸ್ಥ ಬುದ್ದಿ ರನಾತುರಃ ॥ ೧೩೪ ॥ 


ಅದುಷ್ಟಾಸನಮಧ್ಯಾಸ್ಯ ಭುಂಜೀತ ಶಿಶುಭಿಃ ಸಹ । 

ಸುಗಂಧಿಃ ಸುಮನಾಃ ಸ್ಪಗ್ಯೀ ಶುಚಿವಾಸೋಂದ್ವಯಾಸ್ಚಿತಃ ॥ ೧೩೫ ॥ 
ಪ್ರಾಗಸ್ಯ ಉದಗಾಸ್ಕೋನವಾ ಭುಂಜೀತ ಪಿತೃಸೇನಿತಂ । 
ನಿಧಾಯಾಂನ್ನಮನಗ್ನಂ ತದುಪರಿಷ್ಟಾದಧಸ್ತಥಾ ॥ ೧೩೬ ॥ 
ಆಪೋಶನ ನಿಧಾನೇನ ಕೃತ್ವಾ ಶ್ಲೀಯಾತ್ಸುಧೀರ್ದಿಜಃ 1 

ಭೂಡ್‌ೌ ಬಲಿತ್ರಯಂ ಕುರ್ಯಾದಪೋ ದದ್ಯಾತ್ತದೋಪರಿ ॥ ೧೩೭॥ 





೧೩೦-೧೩೧. ಪೂರ್ವ, ಪಶ್ಚಿಮ, ವಾಯವ್ಯ, ಉತ್ತರ, ನೈಜುತ್ಯ 
ದಿಕ್ಕುಗಳ ಕಾಗೆಗಳು ನಾನು ಭೂಮಿಯಲ್ಲಿ ಕೊಟ್ಟ ಪಿಂಡವನ್ನು ತೆಗೆದುಕೊಳ್ಳಲಿ, 
ಎಂದು ಭೂತ ಬಲಿಗೈದು ಹಸುವಿನ ಹಾಲನ್ನು ಕರೆಯುವಷ್ಟು ಕಾಲ ಬರುವ 
ಅತಿಥಿಯನ್ನು ನಿರೀಕ್ಸಿಸಿ ಊಟದ ಮನೆಯನ್ನು ಪ್ರವೇಶಿಸಬೇಕು. 

೧೩೨-೧೩೭, ವಾಯಸಬಲಿಯನ್ನು ಕೊಡದೆ ನಿತ್ಯಶ್ರಾದ್ಧವನ್ನು ಮಾಡ 
ಬೇಕು. ಈ ನಿತ್ಯಶ್ರಾದ್ಧದಲ್ಲಿ ತನ್ನ ಶಕ್ರ್ಯನುಸಾರ ಮೂವರು, ಇಬ್ಬರು, 
ಅಥವಾ ಒಬ್ಬ ಬ್ರಾಹ್ಮಣನನ್ನು ಪಿತೃಯಜ್ಞಾರ್ಥವಾಗಿ ಭೋಜನಮಾಡಿಸಿ 
ನೀರನ್ನೂ ನೀಡಬೇಕು. ದೇವರಹಿತವಾಗಿಯೂ, ನಿಯಮಗಳಿಲ್ಲದೆಯೂ, 
ದಕ್ಸಿಣೆಯಿಲ್ಲದೆಯೂ ಮಾಡಿದ ನಿತ್ಯಶ್ರಾದ್ಧವು ಶ್ರಾದ್ಧ ಮಾಡುವವನಿಗೂ, 

£ಜನಮಾಡುವವರಿಗೂ ತೃಪ್ತಿಯನ್ನುಂಟುಮಾಡುವುದು. ಹೀಗೆ ಪಿತೃ 
ಯಜ್ಞವನ್ನುಮಾಡಿ ಸ್ವಸ್ಯಚಿತ್ತನಾಗಿ ಶುಭಾಸನದಲ್ಲಿ ಕುಳಿತು ಶಿಶುಗಳೊಡನೆ 
ಭುಜಿಸಬೇಕು. ಸುಗಂಧನೂ, ಒಳ್ಳೆಯ ಮನಸ್ಸುಳ್ಳವನೂ, ಹೂವಿನ ಹಾರ 
ವುಳ್ಳವನೂ, ಶುದ್ಧವಾದ ಎರಡು ವಸ್ತ್ರಗಳನ್ನು ಧರಿಸಿದವನೂ, ಪೂರ್ವಾಭಿ 
ಮುಖನೂ ಅಥವಾ ಉತ್ತರಾಭಿಮುಖನೂ ಆಗಿ ವಿತೃತೇಷವನ್ನು ಊಟ 
ಮಾಡಬೇಕು. ಆ ಅನ್ನವನ್ನು ಮೇಲೆ ಮತ್ತು ಕೆಳಗೆ ಆಪೋಶನಕ್ರಮದಿಂದ 


೭೬ ಶ್ರೀ ಸ್ಥಾಂದಮಹಾಪುರಾಣಂ 


ಸಕೃಚ್ಚಾಂಪ ಉಪಸ್ಪೃಶ್ಯ ಪ್ರಾಣಾದ್ಯಾಹುತಿಪಂಚಕಂ 1 


ದದ್ಯಾಜ್ಜ್ಞಠರ ಕುಂಡಾಂಗ್ಸ್ಸ್‌ ದರ್ಭಪಾಣಿಃ ಪ್ರಸನ್ನಧೀಃ ॥ ೧೩೮ ॥ 
ದರ್ಭಪಾಣಿಸ್ತು ಯೋ ಭುಂಕ್ತೇ ತಸ್ಯ ದೋಷೋ ನವಿದೃತೇ। 
ಕೇಶಕೀಟಾದಿ ಸಂಭೂತಸ್ತದಶ್ಚೀಯಾತ್ಸದರ್ಭಕಃ ॥ ೧೩೯ ॥ 
ತತೋ ಮೌನೇನ ಭುಂಜೀತ ನ ಕುರ್ಯಾದ್ದಂತಘರ್ಷಣಂ | 
ಪ್ರಕ್ಸಾಲಿತನ್ಯಹಸ್ತಸ್ಯ ದಕ್ಷಿಣಾಂಂಗುಷ್ಮಮೂಲತಃ ॥ ೧೪೦ ॥ 
ರೌರನೇಃ ಪುಣ್ಯನಿಲಯೇ ಅಧೋಲೋಕ ನಿವಾಸಿನಾಂ | 
ಉಚ್ಛಿಷ್ಟೋದಕಮಿಚ್ಛೂನಾಮಕ್ಪಯ್ಯಮುಪತಿಷ್ಠತಾಂ ॥ ೧೪೧ ॥ 
ಪುನರಾಚನ್ಯು ಮೇಧಾವೀ ಶುಚಿರ್ಭೂತ್ಥಾ ಪ್ರಯತ್ನತಃ । 

ಮುಖಕಶುದ್ಧಿಂ ತತಃ ಕೃತ್ವಾ ಪುರಾಣಶ್ರನಣಾದಿಭಿಃ ॥ ೧೪೨ ॥ 


ಅತಿವಾಹ್ಯ ದಿವಾಶೇಷಂ ತತಃ ಸಂಧ್ಯಾಂ ಸಮಾಚರೇತ್‌ । 

ಗೃಹೇಷು ಪ್ರಾಕೃತಾ ಸಂಧ್ಯಾ ಗೋಷ್ಕೇ ದಶಗುಣಾಸ್ಮೃತಾ ॥೧೪೩॥ 
ಆವರಣಗೊಳಿಸಿ ಊಟಮಾಡಬೇಕು. ನೆಲದಲ್ಲಿ ಮೂರು ಬಲಿಯನ್ನಿತ್ತು 
ಅದರ ಮೇಲೆ ನೀರನ್ನೆರೆಯಬೇಕು. 

೧೩೮. ಒಂದುಸಾರಿ ಆಪೋಶನ ತೆಗೆದುಕೊಂಡು ಕುಶಹಸ್ತನಾಗಿ ಪ್ರಸನ್ನ 
ಮನಸ್ಸಿನಿಂದ ಹೊಟ್ಟೆ ಯೆಂಬ ಅಗ್ನಿಕುಂಡದಲ್ಲಿ ಪ್ರಾಣಾದಿಯಾದ ಐದು ಅಹುತಿ 
ಗಳನ್ನು ಕೊಡಬೇಕು. 

೧೩೯. ದರ್ಭೆಯನ್ನು ಕೈಯಲ್ಲಿಟ್ಟುಕೊಂಡು ಊಟಮಾಡಿದವನಿಗೆ 
ಕೂದಲು ಕೃಮಿ ಮೊದಲಾದುವುಗಳಿಂದುಂಟಾದ ದೋಷವು ಸಂಭವಿಸುವುದಿಲ್ಲ. 
ಆದುದರಿಂದ ಕುಶಹಸ್ತನಾಗಿ ಭುಂಜಿಸಬೇಕು. 

೧೪೦-೧೪೧. ಹಲ್ಲುಗಳನ್ನು ಕಡಿಯದೆ ಮೌನನಾಗಿ ಊಟಮಾಡಿ 
ಕೈಯನ್ನು ತೊಳೆದುಕೊಳ್ಳುವುದಕ್ಕಿಂತ ಮುಂಚೆ ಬಲಗೈಯ ಹೆಬ್ಬೆಟ್ಟನ ಬುಡ 
ದಿಂದ "" ಪಾಪಕ್ಕೆ ಆವಾಸಸ್ಥಾನವಾದ ರೌರವವೆಂಬ ನರಕಲೋಕವಾಸಿಗಳಾಗಿ 
ಎಂಜಲು ನೀರನ್ನು ಬಯಸುವವರಿಗೆ ಈ ಉದಕವು ಅಕ್ಸಯವಾಗಿ ಸೇರಲಿ? 
ಎಂದು ಎಂಜಲು ನೀರನ್ನು ಬಿಡಬೇಕು. 

೧೪೨-೧೪೪. ಜಾಣನಾದ ವಿಪ್ರನು ಬಾಯಿತೊಳೆದುಕೊಂಡು ತಿರುಗಿ 
ಆಚಮನಮಾಡಿ ಪುರಾಣಶ್ರವಣ ಮೊದಲಾದವುಗಳಿಂದ ಉಳಿದ ಹಗಲನ್ನು 
ಕಳೆದು ಸಾಯಂಕಾಲ ಸಂಧ್ಯಾವಂದನೆಯನ್ನು ಮಾಡಬೇಕು. ಮನೆಯಲ್ಲಿ 
ಮಾಡಿದ ಸಂಧ್ಯಾವಂದನೆಯು ಸಾಮಾನ್ಯವಾಗುವುದು. ಇದಕ್ಕಿಂತ ಹಸುವಿನ 
ಕೊಟ್ಟಿಗೆಯಲ್ಲಿ ಮಾಡಿದ ಸಂಧ್ಯಾವಂದನೆಯು ಹತ್ತರಷ್ಟೂ, ನದಿಯಲ್ಲಿ ಮಾಡಿದ 
ಸಂಧ್ಯಾವಂದನೆಯು ಹತ್ತುಸಾವಿರದಷ್ಟೂ, ಶಿವಸನ್ನಿಧಿಯಲ್ಲಿ ಮಾಡಿದ ಸಂಧ್ಯಾ 


ಪಂಚಮೋಕಿಧ್ಯಾಯಃ ೭೭ 


ನವ್ಯಾಮಯುತಸಂಖ್ಯಾಸ್ಯಾದನಂತಾ ಶಿವಸನ್ನಿಧೌ । 
ಅನೃತಂ ಮದ್ಯಗಂಧಂ ಚ ದಿನಾಮೈಥುನಮೇವ ಚ । 


ಪುನಾತಿ ವೃಷಲಸ್ಥಾನಂ ಸಂಧ್ಯಾ ಬಹಿರುಪಾಸಿತಾ ॥ ೧೪೪ ॥ 
ಉದ್ದೇಶತಃ ಸಮಾಖ್ಯಾತ ಏಷ ನಿತ್ಯತನೋ ವಿಧಿಃ । 
ಇತ್ನಂ ಸಮಾಚರನ್ವಿಪ್ರೋ ನಾಂವಸೀದಶಿ ಕರ್ಹಿಚಿತ್‌ ॥ ೧೪೫ ॥ 


ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ರ್ಯಾಂ ಸಂಹಿತಾಯಾಂ 


ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯ ಮಾಹಾತ್ಮ್ಯೇ "" ಸದಾಚಾರ 


ವರ್ಣನಂ'' ನಾಮ ಪಂಚಮೋ9ಧ್ಯಾಯಃ 
ವಂದನೆಯು ಅನಂತವೂ ಆಗುವುದು. ಹೊರಗೆ ಮಾಡಿದ ಸಂಧ್ಯಾವಂದ 
ನೆಯು ಸುಳ್ಳನ್ನೂ, ಹೆಂಡದ ವಾಸನೆಯನ್ನೂ, ಹಗಲು ಮೈಥುನವನ್ನೂ, 
ಶೂದ್ರ ಸ್ಥಳವನ್ನೂ ಪವಿತ್ರಗೊಳಿಸುವುದು. 
೧೪೫. ಈ ರೀತಿ ಕ್ರಮವಾಗಿ ಪ್ರತಿದಿನವೂ ದ್ವಿಜನು ಮಾಡತಕ್ಕ ವಿಧಿ 
ಯನ್ನು ಹೇಳಿದೆನು. ಹೀಗೆ ಮಾಡಿದ ಸದಾಚಾರಿಯಾದ ವಿಸ್ರನು ಯಾವಾಗಲೂ 
ಕೆಡುವುದಿಲ್ಲ. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಮ 
ಮಾಹಾತ್ಮ್ಯೆ ಯಲ್ಲಿ "" ಸದಾಚಾರವರ್ಣನ'ವೆಂಬ 
ಐದನೆಯ ಅಧ್ಯಾಯವು ಮುಗಿದುದು 


॥ ಶ್ರೀಃ (| 
ಅಥ ಷಷ್ಠ್ಕೋಂಧ್ಯಾಯಃ 
ಸದಾಚಾರಲಕ್ರಣವರ್ಣನಂ 
ವ್ಯಾಸ ಉವಾಚ :-- 
ಉಪಕಾರಾಯ ಸಾಧೂನಾಂ ಗೃಹಸ್ಕಾಶ್ರಮವಾಸಿನಾಂ | 
ಯಥಾ ಚ ಕ್ರಿಯತೇ ಧರ್ಮೋ ಯಥಾನತ್ಕ್ಯಥಯಾಮಿ ತೇ HOH 
ವತ್ಸ ಗಾರ್ಹಸ್ಥ್ಯಮಾಸ್ಥಾಯ ನರಃ ಸರ್ವಮಿದಂ ಜಗತ್‌ । 


ಪುಷ್ಣಾತಿ ತೇನ ಲೋಕಾಂಶ್ಚ ಸ ಜಯತ್ಯಭಿನಾಂಛಿತಾನ್‌ ॥ ೨॥ 
ಪಿತರೋ ಮುನಯೋ ದೇವಾ ಭೂತಾನಿ ಮನುಜಾಸ್ತಥಾ ! 
ಕ್ರಿಮಿಕೀಟಿಪತಂಗಾಶ್ಚ ವಯಾಂಸಿ ನಿತರೋಸುರಾಃ uA 
ಗೃಹಸ್ಥ ಮುಪಜೀವಂತಿ ತತಸ್ತ್ಯೃಪ್ತಿಂ ಪ್ರಯಾಂತಿ ಚ । 

ಮುಖಂ ವಾಸ್ಯ ನಿರೀಕ್ಷಂತೇ ಅಪೋ ನೋ ದಾಸ್ಯತೀತಿ ಚ ॥೪॥ 
ಸರ್ವಸ್ಯಾಧಾರಭೂತಾ ಯೇ ವತ್ಸಧೇನುಸ್ತ್ರಯಾಮಯಿಾ | 

ಅಸ್ಯಾಂ ಪ್ರತಿಷ್ಠಿತಂ ವಿಶ್ವಂ ನಿಶ್ಚಹೇತುಶ್ಚ ಯಾ ಮತಾ ॥ ೫॥ 


ಕನ್ನಡದ ಅನುವಾದ 
ಸದಾಚಾರಲಕ್ಟಣವರ್ಣನ 

೧. ವ್ಯಾಸನು ಹೇಳುತ್ತಾನೆ:--ಗೃಹಸ್ಥಾಶ್ರನಿಗಳಾದ ಸಾಧುಗಳ ಉಸ 
ಕಾರಕ್ಟೋಸ್ಕರ ಸದಾಚಾರಾನುಷ್ಕಾನಕ್ರಮವನ್ನು ಹೇಳುತ್ತೇನೆ. 

೨. ಮಗು! ಮನುಷ್ಯನು ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಅದರಿಂದ 
ಈ ಪ್ರಪಂಚವನ್ನು ಪೋಸಿಸುತ್ತಾನೆ. ತನ್ನ ಇಷ್ಟಾರ್ಥಗಳನ್ನೂ ದೊರಕಿಸಿ 
ಕೊಳ್ಳುವನು. 

೩-೪. ಸಿತೃಗಳು, ಮುನಿಗಳು, ದೇವತೆಗಳು, ಹಸು ಮೊದಲಾದ ಪ್ರಾಣಿ 
ಗಳು, ಮನುಷ್ಯರು, ಕೃಮಿಕೀಟಗಳು, ಪತಂಗಗಳು, ಪಕ್ಷಿಗಳು, ಅಸುರರು 
ಇವರೆಲ್ಲರೂ ಗೃಹಸ್ಥನನ್ನು ಆಶ್ರಯಿಸಿ ಜೀವಿಸುತ್ತಾರೆ, ಅವನಿಂದ ತೃಪ್ತರಾಗು 
ತ್ತಾರೆ. ನಮಗೆ ನೀರನ್ನೆರೆಯುವನೆಂದು ಅವನ ಮುಖವನ್ನು ನೋಡುತ್ತಿರು 
ತ್ತಾರೆ. 

೫. ಮಗು! ವೇದತ್ರಯರೂಪವಾದ ಥೇನುವು ಸಮಸ್ತ ಕ್ಕೂ ಆಶ್ರಯ 
ಭೂತವಾದುದು. ಇದರಲ್ಲಿ ಸಮಸ್ತವೂ ನೆಲಸಿರುವುದು. ಇದು ಸಕಲಕ್ಕೂ 
ಕಾರಣವಾದುದು. 


ಸಸ್ಕೋತಿಧ್ಯಾಯ॥। ೭೯ 


ಖುಕ್ಬೃಷ್ಮಾಂಸೌ ಯಜುಃ ಸಂಧ್ಯಾ ಸಾಮಕುಕ್ಸಿಷಯೋದಧರಾ । 


ಇಷ್ಟಾ ಪೂರ್ತಿನಿಷಾಣಾ ಚ ಸಾಧುಸೂಕ್ತತನೂರುಹಾ 1೬॥ 
ಶಾಂತಿಪುಷ್ಟಿಶಕೃನ್ಮೂತ್ರಾ ವರ್ಣಪಾದಪ್ರತಿಸ್ಥಿತಾ । 

ಉಪಜೀವ್ಯಮಾನಾ ಜಗತಾಂ ಪದಕ್ರನುಜಬಾಘನ್ಸೈಃ en 
ಸ್ವಾಹಾಕಾರಸ್ಪಧಾಕಾರೌ ವಷಟ್ಯಾರಶ್ಚ ಪುತ್ರಕ । 
ಹನ್ತಕಾರಸ್ತಥೈನಾಂನ್ಯಸ್ತಸ್ಯಾಃ ಸ್ಮನಚತುಷ ಸ್ಸೈಯಂ !೮॥ 
ಸ್ವಾಹಾಕಾರಸ್ತನಂ ದೇವಾಃ ಪಿತರಶ್ಚ ಸ್ವಧಾಮಯಂ । 

ಮುನಯಶ್ಚ ವಷಟ್ಯಾರಂ ದೇನಭೂತಸುರೇಶ್ವರಾಃ ॥೯॥ 
ಹಂತಕಾರಂ ಮನುಷ್ಯಾಶ್ಚ ಪಿಬಂತಿ ಸತತಂ ಸ್ತನಂ । 
ಏನಮಧ್ಯಾಪಯೇದೇವ ವೇದಾನಾಂ ಪ್ರತ್ಯಹಂ ತ್ರಯಾಂ ॥೧೦॥ 
ತೇಷಾಮುಚ್ಛೇದಕರ್ತಾ ಯಃ ಪುರುಷೋನಂತ ಸಾಪಕೃತ್‌ । 

ಸ ತಮಸ್ಕಂಧತಾಮಿಸ್ರೇ ನರಕೇ ಹಿ ನಿಮಜ್ಜತಿ ॥ ೧೧॥ 
ಯಸ್ವ್ವೇನಾಂ ಮಾನವೋ ಧೇನುಂ ಸ್ಪರ್ವತ್ಸೈರಮರಾದಿಭಿಃ । 
ಪೂಜಯತ್ಯುಚಿತೇ ಕಾಲೇ ಸ ಸ್ವರ್ಗಾಯೋಪಪದ್ಯತೇ ॥ ೧೨॥ 





೬-೮. ಈ ಹಸುವಿಗೆ ಖುಗ್ವೇದವು ಬೆನ್ನು. ಯಜುರ್ವೇದ ಸಾಮವೇದ 
ಗಳು ಹೊಟ್ಟೆ ಮತ್ತು ಸ್ತನಗಳು. ಯಜ್ಞಾದಿಗಳೂ, ಛತ್ರ ಬಾನಿ ಮುಂತಾದ 
ಧರ್ಮಕಾರ್ಯಗಳೂ ಕೊಂಬುಗಳು. ಸೂಕ್ತಗಳು ರೋಮಗಳು. ಶಾಂತಿಪುಸ್ಟಿ 
ಕರ್ಮಗಳು ಗೋಮಯ ಗೋಮೂತ್ರಗಳು. ಅಕ್ಷರಗಳು ಕಾಲುಗಳು. 
ಈ ಹಸುವು ಸದ, ಕ್ರಮ, ಜಟೆ, ಘನ ಇವುಗಳಿಂದ ಪ್ರಸಂಚವನ್ನು ಕಾಪಾಡು 
ವುದು. ಸ್ವಾಹಾಕಾರ, ಸ್ವಧಾಕಾರ, ವಷಟ್ಯಾರ, ಹಂತಕಾರಗಳು ನಾಲ್ಕು 
ಸ್ತನಗಳು. 

೯-೧೦. ಈ ಧೇನುವಿನ ಸ್ವಾಹಾಕಾರಸ್ಕನವನ್ನು ದೇವತೆಗಳೂ, ಸ್ವಧಾಕಾರ 
ಸ್ತನವನ್ನು ಪಿತೃಗಳೂ, ವಷಟ್ಭಾರಸ್ತನವನ್ನು ಮುನಿಗಳೂ, ಹಂತಕಾರಸ್ತನ 
ವನ್ನು ದೇವತೆಗಳೂ, ಮನುಷ್ಯರೂ, ಭೂತಗಳೂ ಯಾನಾಗಲೂ ಕುಡಿಯು 
ತ್ತಾರೆ. ಹೀಗೆಯೇ ಅವನ್ನು ಸಂಧಾನಮಾಡಿಕೊಂಡು ಪ್ರತಿದಿನವೂ ಈ ವೇದ 
ತ್ರಯಗಳನ್ನು ಅಧ್ಯಯನಮಾಡಬೇಕು. 

೧೧. ಈ ವೇದಗಳನ್ನು ಹಾಳುಮಾಡುವ ಮನುಷ್ಯನು ಅತ್ಯಂತ ಪಾನ 
ವನ್ನು ಮಾಡಿದವನಂತೆ ಕಾರ್ಗತ್ತಲುಳ್ಳ ನರಕದಲ್ಲಿ ಮುಳುಗುವನು. 

೧೨. ಯಾವ ಮಾನವನು ಉಚಿತಸಮಯದಲ್ಲಿ ದೇವಲೋಕದ ಕರು 
ಗಳಾದ ಜೀವತೆಗಳೇ ಮೊದಲಾವರೊಡನೆ ಪೂಜಿಸುವನೊ, ಅವನು ಸ್ವರ್ಗವನ್ನು 
ಸಡೆಯಲು ಯೋಗ್ಯನಾಗುವನು. 


೪೦ ಶ್ರೀ ಸ್ಥಾಂಡಮಹಾಪುರಾಣಂ 


ತಸ್ಮಾತ್ಸುತ್ರ ಮನುಷ್ಯೇಣ ದೇವರ್ಷಿಪಿತೃಮಾನವಾಃ ! 
ಭೂತಾನಿ ಚಾಂನುದಿವಸಂ ಪೋಷ್ಯಾಣಿ ಸೃತನುರ್ಯಥಾ ॥ ೧೩ ॥ 
ತಸ್ಮಾತ್ಸ್ಮಾತಃ ಶುಚಿರ್ಭೂತ್ವಾ ದೇವರ್ಷಿಸಿತೃತರ್ಪಣಂ । 
ಯಜ್ಞಸ್ಯಾಂಂತೇ ತಥೈವಾಂದ್ರಿಃ ಕಾಲೇ ಕುರ್ಯಾತ್ಸಮಾಹಿತಃ ॥ ೧೪ ॥ 
ಸುಮನೋಗಂಧಪಷ್ಟೈಶ್ಚ ದೇನಾನಭ್ಯರ್ಚ್ಯ ಮಾನನಃ । 
ತತೋಂಗ್ನೇಸ್ತರ್ಪಣಂ ಕುರ್ಯಾದ್ದದ್ಯಾಚ್ಚ್ವಾಂಪಿ ಬಲೀಂಸ್ತಥಾ ॥ ೧೫ ॥ 
ನಕ್ತಂಚರೇಭ್ಯೋ ಭೂತೇಭ್ಯೋ ಬಲಿಮಾಕಾಶತೋ ಹರೇತ್‌ । 
ಪಿತ್ಯೂಣಾಂ ನಿರ್ವಪೇತ್ತದ್ಧದ್ದಕ್ಸಿಣಾಭಿಮುಖಸ್ತತಃ ॥ ೧೬॥ 
ಗೃಹಸ್ಥಸ್ತತ್ಸರೋ ಭೂತ್ವಾ ಸುಸಮಾಹಿತಮಾನಸಃ । 
ತತಸ್ತೋಯಮುಪಾದಾಯ ತೇಷ್ಟೇವಾಾರ್ಸ್ಹಣಸತ್ಮಿ$ಯಾಂ ॥ ೧೭॥ 
ಸ್ಥಾನೇಷು ನಿಕ್ಸಿಸೇತ್ಛಾಜ್ಞೋನಾಮ್ನಾತೂದ್ದಿಶ್ಯ ದೇನತಾಃ । 

ಏವಂ ಬಲಿಂ ಗೃಹೇ ದತ್ತ್ವಾ ಗೃಹೇ ಗೃಹಪತಿಃ ಶುಚಿಃ ॥ ೧೮ ॥ 
ಆಚಮ್ಯಚ ತತಃ ಕುರ್ಯಾತ್ಪ್ರಾಜ್ಞೋ ದ್ವಾರಾಃವಲೋಕನಂ | 
ಮುಹೂರ್ತಸ್ಯಾಂಷ್ಟಮಂ ಭಾಗಮದೀಕ್ಬೇತಾತಿಥಿಂ ತತಃ ॥೧೯॥ 
ಅತಿಥಿಂ ತತ್ರ ಸಂಪ್ರಾಸ್ತಮರ್ಥ್ಯಸಾದ್ಯೋದಕೇನ ಚ। 
ಬುಭುಕ್ಸುಮಾಗತಂ ಶ್ರಾಂತಂ ಯಾಚಮಾನಮಕಿಂಚನಂ ॥ ೨೦॥ 

೧೩-೧೪. ಮಗು! ಆದುದರಿಂದ ಮನುಷ್ಯನು ಯಾವಾಗಲೂ ದೇವತೆ. 
ಗಳನ್ನೂ, ಖಯಸಿಗಳನ್ನೂ, ನಿತೃಗಳನ್ನೂ, ಮನುಷ್ಯರನ್ನೂ, ಇತರ ಪ್ರಾಣಿಗಳನ್ನೂ 
ತನ್ನ ದೇಹದಂತೆ ಕಾಪಾಡಬೇಕು. ಸ್ನಾನಮಾಡಿ ಶುದ್ಧನಾಗಿಯೂ, ಸಾವಧಾನ 
ಮನಸ್ಸುಳವನಾಗಿಯೂ, ಬ್ರಹ್ಮಯಜ್ಞದ ಕೊನೆಯಲ್ಲಿ ದೇವತೆಗಳಿಗೂ, ಖುಷಿ 
ಗಳಿಗೂ, ಪಿತೃಗಳಿಗೂ ತರ್ಪಣಕೊಡಬೇಕು. 

೧೫. ಮಾನವನು ಹೂವು ಗಂಧಗಳಿಂದ ದೇವತೆಗಳನ್ನು ಆರಾಧಿಸಿ ಅಗ್ನಿ 
ತರ್ಪಣಮಾಡಿ ಬಲಿಯನ್ನು ಕೊಡಬೇಕು. 

೧೬. ಬಳಿಕ ರಾಕ್ಸಸರಿಗೂ, ಭೂತಗಳಿಗೂ ಆಕಾಶದಲ್ಲಿ ಬಲಿಯನ್ನು 
ಕೊಟ್ಟು ದಕ್ಟಿಣಾಭಿಮುಖನಾಗಿ ಪಿತೃತರ್ನಣಮಾಡಬೇಕು. 

೧೭-೧೯. ಗೃಹಸ್ಥನು ಸಾವಧಾನ ಮನಸ್ಸಿನಿಂದ ನಿತೃಗಳಲ್ಲಿಯೇ ಆಸಕ್ತ 
ನಾಗಿ ನೀರಿನಿಂದ ತರ್ನಣಮಾಹಬೇಕು. ಮನೆಯಲ್ಲಿ ದೇವತೆಗಳನ್ನುಡ್ದೇಶಿಸಿ 
ಆಯಾ ಸ್ಥಾನಗಳಲ್ಲಿ ಬಲಿಯನ್ನಿತ್ತು ಆಚಮನಮಾಡಿ ಬಾಗಿಲಿನಲ್ಲಿ ಆರು ನಿಮಿಷ 
ಗಳ ಕಾಲ ಅತಿಥಿಯ ಆಗಮನವನ್ನು ನಿರೀಕ್ಸಿಸಬೇಕು. 

೨೦-೨೨, ಭೋಜನಕ್ಕಾಗಿ ಬಂದವನೂ, ಬಳಲಿದವನೂ, ಖಬೇಡುತ್ತಿರು. 
ವವನೂ, ಬಡವನೂ ಆಗಿರುವ ಬ್ರಾಹ್ಮಣನನ್ನು ಅತಿಥಿಯೆಂದು ಹೇಳುವರು. 


ಸಸ್ಫೋರಧ್ಯಾಯಃ ೪೧ 


ಬ್ರಾಹ್ಮಣಂ ಪ್ರಾಹುರತಿಥಿಂ ಸಂಪೂಜ್ಯಂ ಶಕ್ತಿತೋ ಬುಧೈಃ । 


ನ ಸೃಚ್ಛೇತ್ತತ್ರಾಚರಣಂ ಸ್ಮಾಧ್ಯಾಂಯಂ ಚಾಪಿ ಪಂಡಿತಃ ॥ ೨೧ ॥ 
ಶೋಭನಾಂಶೋಭನಾಕಾರಂ ತಂ ಮನ್ಯೇತ ಪ್ರಜಾಪತಿಂ । 

ಅನಿತ್ಯಂ ಹಿ ಸ್ಥಿತೋ ಯಸ್ಮಾತ್ತಸ್ಮಾದತಿಥಿರುಚ್ಕತೇ ॥ ೨೨ ॥ 
ತಸ್ಮೈ ದತ್ವಾ ತು ಯೋ ಭುಂಕ್ತೇ ಸತು ಭುಂಕ್ತೇಃ ನ್ಳುತಂ ನರಃ । 
ಅತಿಥಿರ್ಯಸ್ಯ ಭಗ್ಗಾಶೋ ಗೃಹಾತ್ಪೃತಿ ನಿನರ್ತತೇ ॥ ೨೩॥ 


ಸ ದತ್ವಾ ದುಷ್ಕೃತಂ ತಸ್ಮೈ ಪುಣ್ಯಮಾದಾಯ ಗಚ್ಛತಿ | 

ಅಸಿ ನಾ ಶಾಕದಾನೇನ ಯದ್ವಾ ತೋಯಪ್ರದಾನತಃ । 

ಪೂಜಯೇತ್ತಂ ನರಃ ಶಕ್ತ್ಯಾ ತೇನೈನಾಃತೋ ವಿಮುಚ್ಯತೇ ॥ ೨೪ ॥ 
ಯುಧಿಷ್ಠಿರ ಉವಾಚ :- 

ವಿನಾಹಾ ಬ್ರಾಹ್ಮದೈೆನಾರ್ಸಾಃ ಪ್ರಾಜಾಪತ್ಯಾಂಸುರೌ ತಥಾ । 

ಗಾಂಧರ್ವೋ ರಾಕ್ಬಸಶ್ವಾಸಿ ಪೈಶಾಚೋಂಷ್ಟಮ ಉಚ್ಯತೇ ॥ ೨೫॥ 

ಏತೇಷಾಂ ಚ ವಿಧಿಂ ಬ್ರೂಹಿ ತಥಾ ಕಾರ್ಯಂ ಚ ತತ್ವತಃ । 

ಗೃಹಸ್ಥಾನಾಂ ತಥಾ ಧರ್ಮಾನ್ಬೂಹಿ ಮೇ ತ್ವಂ ವಿಶೇಷತಃ ॥ ೨೬॥ 
ಪರಾಶರ ಉವಾಚ :- 

ಸ ಬ್ರಾಹ್ಮೋ ನರಮಾಹೂಯ ಯತ್ರ ಕನ್ಯಾ ಸ್ವಲಂಕೃತಾ । 

ದೀಯತೇ ತತ್ಸು ತಃ ಪೂಯಾತ್ಬ್ಸು ರುಷಾನೇಕವಿಂತತಿಂ ॥ ೨೭॥ 





ಅವನನ್ನು ಅರ್ಥ್ಯಪಾದ್ಯಾದಿಗಳಿಂದ ಶಕ್ಕ್ಯನುಸಾರ ಪೂಜಿಸಿ ಅವನ ಆಚಾರ ಮತ್ತು 
ವೇದಾಧ್ಯಯನ ವಿಷಯವನ್ನು ಕೇಳದೆ ಸುರೂಪಿ ಅಥವಾ ಕುರೂಪಿಯಾಗಿ 
ದ್ದಾಗ್ಗೂ ಅವನನ್ನು ಬ್ರಹ್ಮನೆಂದು ತಿಳಿಯಬೇಕು. ಅವನು ಸ್ಥಿರವಾಗಿ ನೆಲೆಸು 
ವವನಲ್ಲದುದರಿಂದ ಅತಿಥಿಯೆನಿಸಿಕೊಳ್ಳುವನು. 

೨೩-೨೪. ಆ ಅತಿಥಿಗೆ ಅನ್ನವನ್ನು ನೀಡಿ ತರುವಾಯ ಭುಂಜಿಸುವ ಮನು 
ಷ್ಯನು ಅಮೃತವನ್ನು ಸವಿಯುವನು. ಯಾವನ ಮನೆಯಿಂದ ಅತಿಥಿಯು 
ತನ್ನ ಅಭೀಷ್ಟ ವನ್ನು ಪಡೆಯದೆ ಹಿಂದಿರುಗುವನೊ ಅವನು ಭಗ್ನಾಶನಾಗಿ. 
ತೆರಳುವಾಗ ತನ್ನ ಪಾಸವನ್ನು ಗೃಹಸ್ಥನಿಗೆ ಕೊಟ್ಟು ಅವನ ಪುಣ್ಯ ವನ್ನು ತಾನು. 
ಒಯ್ಯ್ಯ ವನು. "ಅಪ್ಪ ರಿಂದ ಮನುಷ್ಯ ನು ತನ್ನ ಶಕ್ಯ ನುಸಾರ ತತೆಕಾರಿಯನ್ನಾ 
ಗಲಿ, ಸೀರನ್ನಾಗಲಿ “ಅವನಿಗಿತ್ತು ಪ ಜಿಸಿದರೆ ಆ ಅನಿಷ್ಟ ದಿಂದ ಪಾರಾಗುವನು. 

೨೫-೨೬, ಯುಧಿಷ್ಠಿರನು ಕೆಳುತ್ತಾನೆ :--ಎಲೈ ಕಗ ಬ್ರಾಹ್ಮ, 
ದೈವ, ಆರ್ಷ, ಪಾ ತ್ರಾಜಾಪತ್ಯ, ಆಸುರ, ಗಾಂಧರ್ವ, ರಾಕ್ಟೃಸ, ಸೈಶಾಚವೆಂದು 
ಎಂಟು ವಿಧವಾದ ವಿವಾಹಗಳು ಇರುವುವಷ್ಟೆ. ಇವುಗಳ ವಿಧಿಯನ್ನೂ ಮಾಡ 
ತಕ್ಕ ಕ್ರಮವನ್ನೂ, ಗೃಹಸ್ಥರ ಧರ್ಮಗಳನ್ನೂ ವಿಶೇಷವಾಗಿ ತಿಳಿಸು, 

೨೭. ವ್ಯಾಸನು ಹೇಳುತ್ತಾನೆ: ವರನನ್ನು ಮನೆಗೆ ಕರೆಯಿಸಿ ಅವನಿಗೆ. 


೮೨ ಶ್ರೀ ಸ್ಕ್ಯಾಂದಮಹಾಪುರಾಣಂ 


ಯಜ್ಞ ಸ್ಕಾ ಯತ್ತಿ ೯ಜೇ ದೈವಸ್ತಜ್ಯಃ ಪಾತಿ ಚತುರ್ದಶ! 

ವರಾದಾದಾಯ “ಗೋದ್ವ ದ್ಧ ಮಾರ್ಷಸ್ತ ಜ್ಜಃ ಪುನಾತಿ ಷಟ್‌ 0 ೨೮॥ 
ಸಹೋಭೌ ಚರತಾಂ SE ಪ್ರಾ ಜಾಪತ್ಯೆ 8 ಸ ಈರೀತಃ । 

ವರವಧ್ವೋಃ ಸ್ಟೇಚ್ಛಯಾ ಚ ಗಾಂಧರ್ವೊಆನ್ಕೊ ೇನ್ಯಮೈತ್ರತಃ ॥ ೨೯॥ 
ಪ್ರಸಹ್ಯ ಕನ್ಯಾ ಹರಣಾದ್ರಾ ಕ್ಪಸೋ ನಿಂದಿತಃ ಸತಾಂ । 

ಛರೇನ ಕನ್ಯಾಹರಣಾತ್ಸೆ 'ಶಾಚೋ ಗರ್ಜಿತೋಷ್ಟನಮಃ । 

ಪ್ರಾ ಯಃ ಕ್ಸ ತ್ರ ನಿಶೋರುಕ್ತಾ ಗಾಂಧರ್ನಾಃಸುರರಾಕ್ಸ ಸಾಃ ॥ ೩೦॥ 
ಅಸ ಮಸ್ತೆ “ಹ ಪಾಸಿಷ್ಠಃ ಪಾಪಿಷ್ಠಾನಾಂ ಚ ಸಂಭವಃ । 

ಸರರ್ಪಿಯಾ ಕರೋ ಗ್ರಾಹ್ಯೋ ಧಾರ್ಯಃ ಕೃತ್ರಿಯಯಾ ಶರಃ ॥ ೩೧ ॥ 
ಪ್ರ ತೋದೋ ವೈಶ್ಯ ಚಾ EN ಮ ಶೂದ್ರಯಾ ತಥಾ 

ಅಸವರ್ಣಾಸ್ಯೆ ಷನಿಧಿಃ ಸ್ಮೃತೌ ದೃಷ್ಟಶ್ಚ ನೇದನೇ ॥ ೩೨॥ 





ಒಡನೆ ಮೊದಲಾದವುಗಳಿಂದ ಭೂಷಿತಳಾದ ಕನ್ಯೆಯನ್ನು ಮದುವೆಮಾಡಿ 
ಕೊಟ್ಟರೆ ಅದು ಬ್ರಾ ಹ್ಮ ವಿವಾಹವು. ಹೀಗೆ ವಿವಾಹಿತಳಾದ *ನ್ಯೆಯಲ್ಲಿ ಜನಿಸಿದ 
ಸ ಇಪ್ಪ ತೊ 1 ಜನ ಪೂರ್ವಜರನ್ನು ಸನಿತ್ರ ಗೊಳಿಸುವನು. 

೨೮. ಯಜ್ಞ, ಮಾಡಿಸಿದ ಖುತ್ತಿಜನಿಗೆ ಕನ್ಯೆಯನ್ನು ಕೊಟ್ಟು ವಿವಾಹ 
ಮಾಡಿದರೆ ಅದು ದೈ ನವಿವಾಹವೆಸ್ಸ್ರಿಸುವುದು. ಆ ಕನೈೆಯಲ್ಲಿ ಜನಿಸಿದ ಪುತ್ರನು 
ಹದಿನಾಲ್ಕು FN ಪೂರ್ವಪುರುಸನ್ನು ತ ವರನಿಂದ ಎರಡು 
ಥೇನುಗಳನ್ನು ಪಡೆದು ಮಾಡುವ ವಿವಾಹವು ಆರ್ಹವೆನಿಸುವುದು. ಅಂತಹ 
ವಿವಾಹದಲ್ಲಿ ಊಡಳಾದ ಕನ್ಯೈಯಲ್ಲಿ ಹುಟ್ಟದ ತನಯನು ಆರು ಜನ ಪೂರ್ವಜ 
ರನ್ನು ಸವಿತ್ರಗೊಳಿಸುವನು. 

೨೯. ದಂಪತಿಗಳಿಬ್ಬರೂ ಸೇರಿ ಬು ಜಸು ಹೇಳಿ ಮಾಡುವ 
ಮದುವೆಯು ಪ್ರಾ ಜಾಪತ್ಯ ವೆಂದೂ, ಪರಸ್ಪರ ಸ್ನೇಹದಿಂದ ವರವಧುಗಳು 
ತಮ್ಮ ಇಷ್ಟ ಸ ಮಾಡಿಕೊಳ್ಳುವ ವಿವಾಹಕ್ಕೆ ಗಾಂಧರ್ಭವೇಡೂ ಹೆಸರು. 

ಬಲಾತ್ಕಾರವಾಗಿ ಕನ್ಯೆಯನ್ನು ಅಪಹರಿಸಿ ಮದುವೆಮಾಡಿಕೊಂಡರೆ ಅದು 
ರಾಕ್ಸುಸ ವಿವಾಹವೆನ್ನಿಸುವುದು. ಅದು ಸಜ್ಜ ನರಿಗೆ ನಿಂದಿತವಾದುದು. 

೩೦. ಮೋಸದಿಂದ ಕನ್ಯೆಯನ್ನ ಸಹಿಸಿ ವಿವಾಹವಾದರೆ ಪೈಶಾಚವೆಂಬ 
ನಿಂದ್ಯವಾದ ಎಂಟನೆ ನಿನಾಹವಾಗುವುದು. ಸಾಮಾನ್ಯವಾಗಿ ಗಾಂಧರ್ವ, 
ಆಸುರ, ರಾಕ್ಸಸ ನಿವಾಹಗಳು ಕ್ಷತ್ರಿಯ ಮೆತ್ತು ವೈಶ್ಯರಿಗೆ ವಿಹಿತವಾಗಿವೆ. 

೩೧-೩೨. ಈ ಎಂಟನೆಯಸ್ಟೆ ಪೈ ಚ ನಿನಾಹವು ಅತ್ಯಂತ ಪಾಪಿಷ್ಠವಾದುದು. 
ಈ ವಿವಾಹದಿಂದ ಊಡಢಳಾದ ಶಕೆ ಯಲ್ಲಿ ಪಾಪಿಷ್ಯ ಪ್ರಜೆಗಳು ಜನಿಸುವರು. 
ಬ್ರಾಹ್ಮಣ ಕನ್ಯೆಯು ವರನ ಕೈಯ ತ್ರಿಯಜಾತಿಯ Kn ವಿವಾಹ 
ಮಾಡಿಕೊಳ್ಳು ವಾ ವಾಗ ಬಾಣನನ್ನೂ ಮ ಚಾವುಟಿಯನ್ನೂ, ಶೂದ್ರ 


ಸಸ್ಕೊೋರ6ಧ್ಯಾಯಃ ೮ಷಿ 


ಸವರ್ಣಾಭಿಸ್ತು ಸರ್ವಾಭಿಃ ಪಾಣಿರ್ಗ್ರಾಹೃಸ್ತ್ತ್ರಯಂ ವಿಧಿಃ । 
ಧಮ್ಮೆ ೯ ವಿನಾಹೇ ಜಾಯಂತೇ ಧನ್ಯಾ ೯8 ಪುತ್ರಾಃ ಶತಾಯುಪಷಃ ॥೩೩॥ 
ಅಧಮ್ಯಾ ೯ದ್ದ ರ್ಮರಹಿತಾ ಮಂದಭಾಗ್ಯ ಸಯ | 


ಕ | ತಕಾಲಾಫಿಗಮನೇ ಜರ್ಷೂಟಯೇ ಗೃಹಿಣಃ ಸರಃ navn 
ಸ್ರೀಹಾಂ ವರಮನುಸ್ಮೃೃತ್ಯ ಯಥಾಕಾನಮಃ ನಾ ಭವೇತ್‌ । 
ದಿನಾಃಭಿಗಮನಂ ಪುಂಸಾಮುನಾಯುಷ್ಯ ೦ ಪರ) ಮತಂ ॥ ೩೫ ॥ 
ಶ್ರಾದ್ಧಾ ಹಃ ಸರ್ವಪರ್ವಾಣಿ ನ ಗಂತವಾ ಸಿ ಧೀಮತಾ । 

ತತ್ರ ಗಚ್ಛ ನ್ಸಿ ಅಯೆಂ ಮೋಹಾದ್ದ ರ್ಮಾತ್ರ ಜ್ಯ ನತೇ ಪರಾತ್‌ ॥ ೩೬ ॥ 
ಜುತ್ತುಾಲಾರಭಿಗಾಮಿ ಯಃ ಸ ದಾರನಿರತಕ್ಕ ಯಃ । 

ಸ ಸದಾ ಬ್ರಹ್ಮಚಾರೀ ಹಿ ವಿಜ್ಞೇಯಃ ಸ ಗೃಹಾಶ್ರಮಿಸಾ ॥ ೩೭ ॥ 
ಆರ್ಷೇ ನಿನಾಹೇ ಗೋದ್ವ ೦ದ್ವಂ ಯದುಕ್ತಂ ತತ್ರ ಶಸ್ಯತೇ 

ಶುಲ್ಕ ಮಣ್ಣನಿ ಕನ್ಯಾಯಾಃ ಕನ್ಯಾವಿಕ್ರ ಯಸಾಪಕೃ ತ” ॥ ೩೮ ॥ 
ಅಸತ್ಯ ವಿಕ್ರ 'ಯಾತ್ಯ ಲ್ಪಂ ವಸೇದ್ವಿಟಿ ನುಭೋಜನೇ | 

ಹಸ ನಾಣ್ವಪಿ ಕನ್ಯಾಯಾ 'ಉನೆಜೀವ್ಯಂ ನರೈರ್ಧನಂ ॥೩೯॥ 


ಕನ್ಯೆಯು ವರನ ಬಟ್ಟೆಯ ಕೊನೆಯನ್ನೂ ಹಿಡಿದುಕೊಳ್ಳಬೇಕು. ಅಸಜಾತೀಯ 
ವಿವಾಹದಲ್ಲಿ ಈ ಕ್ರಮವು ಸ್ಮೃತಿ ಮತ್ತು ವೇದಗಳಲ್ಲಿ ಕಂಡುಬರುತ್ತದೆ. 

೩೩. ಸವರ್ಣಸ್ರ್ರೀವಿವಾಹದಲ್ಲಿ ಇದು ವಿಹಿತವಾಗಿದೆ. ಧರ್ಮವಿಹಿತ 
ವಿವಾಹದಲ್ಲಿ ಧರ್ಮಿಷ್ಠರೂ, ನೂರು ವರ್ಷ ಆಯುಸ್ಸುಳ್ಳವರೂ ಆಗಿರುವ 
ಪುತ್ರರು ಜನಿಸುವರು. 

೩೪-೩೫. ಅಧರ್ಮ ವಿವಾಹದಲ್ಲಿ ಧರ್ಮಬಾಹ್ಯರೂ, ಅಲ್ಪಭಾಗ್ಯರೂ, 
ಬಡವರೂ, ಅಲ್ಪ್ಬಾಯುಷ್ಯ ರೂ ಆದ ಪುತ್ರರು ಹುಟ್ಟುವರು. ಗ್ಗಹಸ್ಸರು ವಿಹಿತ 
ಕಾಲದಲ್ಲಿ ಸ್ತ್ರೀಯನ್ನು ಸೇರಬೇಕು. ಅಥವಾ ಸ್ತ್ರೀಯರ ಇಷ್ಟವನ್ನರಿತು ಅವರ 
ಅಭಿಲಾಷೆಯಂತೆ ನಡೆಯಬಹುದು ಹಗಲು ಪುರುಷನು ಸ್ತ್ರೀಸಂಗವನ್ನು 
ಮಾಡಿದರೆ ತನ್ನ ಆಯುಸ್ಸನ್ನು ಕಳೆದುಕೊಳ್ಳುವನು. 

೩೬. ಜಾಣನಾದ ಗೃಹಸ್ಥನು ಶ್ರಾದ್ಧ ದಿನಗಳಲ್ಲಿಯೂ, ಅಮಾವಾಸ್ಯೆ 
ಮೊದಲಾದ ಎಲ್ಲ ಪರ್ವಕಾಲಗಳಲ್ಲಿಯೂ | ಸ್ರ ಸೆಂಗಮಾಡಕೂಡದು. ಮೋಹ 
ದಿಂದ ಅಂತಹ "ದಿವಸಗಳಲ್ಲಿ ಸಿ ಸ್ರ್ರೀಸಂಗಮಾಜಿದವನು ಧರ್ಮಭ್ರಷ್ಟ ನಾಗುವನು. 

೩೭, ಯತುಕಾಲಗಳೆಲ್ಲಿ ಮಾತ್ರ ತನ್ನ ಸತಿಯ ಸಂಗವನ್ನು ಮಾಡುವ 
ಮಾನವನು ಯಾವಾಗಲೂ ಗೃಹಸ್ತ ನಾದರೂ. ಬ ಬ್ರಹ್ಮಚಾರಿಯೂ ಆಗಿರುವನು. 

೩೮. yd ವಿವಾಹದಲ್ಲಿ ಎರಡು ಹೆಸುಗಳನ್ನಲ್ಲದೆ ಕನ್ಯಾನಿಕ್ರ ಯ ಪಾಪ. 
ವನ್ನೆಸಗುವ ಸ್ವ ಲ್ಪ ಕನ್ಯಾಶುಲ್ಕವನ್ನೂ ತೆಗೆದುಕೊಳ್ಳ ಕೂಡದು. 

೩೯. ಕತಯ ವಿಕ್ರಯಮಾಡುವುದರಿಂದ ಮಾನವನು ಕಲ್ಬಾಂತ್ಯದವರೆಗೆ 


೮೪ ಶ್ರೀ ಸ್ಕಾಂದಮಹಾಪುರಾಣಂ 


ತತ್ರ ತುಷ್ಟಾ ನುಹಾಲಕ್ಸ್ಮೀರ್ನಿವಸೇದ್ದಾನವಾರಿಣಾ । 

ವಾಣಿಜ್ಯಂ ನೀಚಸೇನಾ ಚ ನೇದಾಃನಧ್ಯಯನಂ ತಥಾ ॥೪೦॥ 
ಕುನಿವಾಹಃ ಕ್ರಿಯಾಲೋಪಃ ಕುಲೇ ಸತನಹೇತನಃ । 
ಕುರ್ಯಾದ್ದ್ಬೈನಾಹಿಕೇ ಚಾಂಗ್ಸ್ಸೌ ಗೃಹ್ಯಕರ್ಮಾಂನ್ವಹಂ ಗೃಹೀ ॥ ೪೧॥ 
ಪಂಚಯಜ್ಞಸಕ್ರಿಯಾಂ ಚಾಪಿ ಪಕ್ತಿಂ ದೈನಂದಿನೀಮುಪಿ । 
ಗೃಹಸ್ಥಾಶ್ರಮಿಣಃ ಪಂಚಸೂನಾ ಕರ್ಮ ದಿನೇದಿನೇ ॥ ೪೨॥ 
ಕುಂಡನೀ ಸೇಷಹಿಣೇ ಚುಲ್ಲೀ ಹ್ಯುದಕುಂಭೀ ತು ಮಾರ್ಜನೀ । 

ತಾಸಾಂ ಚ ಪಂಚಸೂನಾನಾಂ ನಿರಾಕರಣಹೇತನಃ । 

ಸ್ಪತವಃ ಪಂಚ ನಿರ್ದಿಷ್ಟಾ ಗೃಹಿಶ್ಟೆ ಶ್ರೇಯೋ ಭಿನರ್ಧನಾಃ ॥ ೪೩ ॥ 
ಕುಜ ಬ್ರಹ್ಮ, ಯಜ್ಞ 8 ಸ್ಕಾ ತ ಸಚ ಚ ಸಿತೃಕ್ರತುಃ । 

ಹೋನೋದೆ ವೋ ಬಲಿರ್ಜ್‌ತ ಆತಿಥ್ಯ ನೃ ಬ ತುಃ ಕ್ರಮಾತ್‌ ॥ ೪೪ ॥ 
ವೈಶ್ವ ಸಂತೇ ಪ್ರಾಪ್ತಃ ಧೂ ಡವ ಸ್ಮೃತಃ | 
ಅತಿಫೇರಾದಿತೋಸೆ ತೇ ಭೋಜ್ಯಾ ನಾತ್ರ ವಿಚಾರಣಾ ॥ ೪೫ ॥ 


ಅಮೇಧ್ಯ ಮತ್ತು ಕೃಮಿಭೂಯಿಷ್ಯವಾದ ನರಕದಲ್ಲಿ ವಾಸಿಸುವನು. ಆದ್ದ 
ರಿಂದ ಗೃಹಸ್ಯನು ಸ್ವಲ್ಪವಾದರೂ ಕನ್ಶೆಯ ಹಣದಿಂದ ಜೀವಿಸಬಾರದು. 

೪೦-೪೩. ಆ ವಿವಾಹದಲ್ಲಿ ಸಂತುಷ್ಟಳಾದ ಮಹಾಲಕ್ಷ್ಮಿಯು ದಾನೋ 
ದಕದೊಡನೆ ವಾಸಿಸುವಳು. ವ್ಯಾಪಾರ, ನೀಚಜನರ ಸೇವೆ, ವೇದಗಳನ್ನು 
ಓದದಿರುವುದು, ನಿಂದ್ಯವಾದ ಮದುವೆ, ವಿಹಿತಕರ್ಮಗಳನ್ನು ಮಾಡದಿರು 
ವುದು ಇವುಗಳು ವಂಶಭ್ರಷ್ಟನಾಗಲು ಕಾರಣಗಳಾಗುವುವು. ಗೃಹಸ್ಥನು 
ಪ್ರತಿದಿನವೂ ನಿವಾಹಾಗ್ನಿಯಲ್ಲಿ ಗೃಹ್ಯಕರ್ಮಗಳನ್ನೂ, ಪಂಚಯಜ್ಞಗಳನ್ನೂ 
ಪ್ರತಿದಿನದ ಅಡುಗೆಯನ್ನೂ ಮಾಡಬೇಕು. ಗೃಹಸ್ಥಾಶ್ರಮಿಯು ಪ್ರತಿದಿನವೂ 
ಕುಂಡನೀ, ಪೇಷಣೀ, ಚುಲ್ಲೀ, ಉದಕುಂಭೀ, ಮಾರ್ಜನೀ ಎಂಬ ಐದು 
ಸೂನಾಕರ್ಮಗಳನ್ನು ಮಾಡಬೇಕಾಗುವುದು. ಆ ಪಂಚಸೂನಾ ದೋಷಗಳ 
ನಿವಾರಣೆಗಾಗಿ ಅವನ ಶ್ರೇಯಸ್ಸಿನ ಅಭಿವೃದ್ಧಿಗೆ ಕಾರಣಗಳಾದ ಈ ಪಂಚ 
ಯಜ್ಞಗಳು ವಿಹಿತವಾಗಿವೆ. 

೪೪. ವೇದಾಧ್ಯಯನವು ಬ್ರಹ್ಮಯಜ್ಞ ವು. ಪಿತೃತರ್ಪಣವು ಪಿತೃಯಜ್ಞ ಬ್ದ ವು. 
ವೈಶ್ವದೇವಹೋಮವು ದೈವಯಜ್ಞ, ವು. ಭತಿ ಭೂತಯಜ್ಞ. ನ್ದ ವು. 
ಅತಿಥಿಪೂಜೆಯು ಮನುಷ್ಯ ಯಜ್ಞವು. 

೪೫. ವೈಶ್ವದೇವ  ಹೋಮುಮಾಡುವಾಗ ನೂತನ ವಧುವಿನೊಡನೆ 
ಬಂದವನೂ ಅತಿಥಿಯೆನಿಸಿಕೊಳ್ಳುವನು. ಅತಿಥಿಗಿಂತ ಮೊದಲೇ ಇಂತಹವರಿಗೆ 
ಭೋಜನಮಾಡಿಸಬಹುದು. ಈ ವಿಷಯದಲ್ಲಿ ವಿಚಾರವಿಲ್ಲ. 


ಷಸ್ಕೋಂಧ್ಯಾ ಯಃ ೮೫: 


ಪಿತೃದೇವಮನುಷ್ಯೇಭ್ಯೋ ದತ್ವ್ಯಾಶ್ನಾತ್ಯಮೃತಂ ಗೃಹೀ । 

ಅದತ್ವಾಂ ನ್ನಂ ಚ ಯೋ ಭುಂಕ್ತೇ ಕೇನಲಂ ಸ್ಟೋದರಂಭರಿಃ ॥ ೪೬॥ 
ವೈಶ್ಚದೇನೇನ ಯೇ ಹೀನಾ ಆತಿಥ್ಯೇನ ನಿವರ್ಜಿತಾಃ । 

ಸರ್ವೇ ತೇ ವೃಷಲಾ ಜ್ಹೇಯಾಃ ಪ್ರಾಸ್ತನೇದಾ ಅಪಿ ದ್ವಿಜಾಃ ॥ ೪೭॥ 
ಅಕೃತ್ವಾ ನೈಶ್ಚದೇವಂ ತು ಭುಂಜಂತೇ ಯೇ ದ್ವಿಜಾಂಧಮಾಃ । 


ಇಹಲೋಕೇಂನ್ನಹೀನಾಃ ಸ್ಕುಃ ಕಾಕಯೋನಿಂ ವ್ರಜಂತ್ಯಥಃ ॥ ೪೮ ॥ 
ವೇದೋಕ್ತಂ ವಿದಿತಂ ಕರ್ಮ ನಿತ್ಯಂ ಕುರ್ಯಾದತಂದ್ರಿತಃ । 
ಯದಿ ಕುರ್ಯಾದ್ಯಥಾಶಕ್ತಿ ಪ್ರಾಪ್ಲುಯಾತ್ಸದ್ಧತಿಂ ಪರಾಂ ॥೪೯॥ 
ಷಷ್ಠ್ಯಷ್ಟಮ್ಯೋರ್ವಸೇತ್ಪಾಪಂ ತೈಲೇ ಮಾಂಸೇ ಸದೈನಹಿ। 
ಚತುರ್ದಶ್ಯಾಂ ಪಂಚದಶ್ಯಾಂ ತಥೈನ ಚ ಕ್ಸುರೇ ಭಗೇ ॥ ೫೦॥ 


ಉದಯಂತಂ ನ ವೀಕ್ಬೇತ ನಾಂಸ್ತಂ ಯಂತಂ ನ ಮಸ್ತಕೇ!। 
ನ ರಾಹುಣೋಸಸ್ಸೃಷ್ಟಂ ಚ ನಾಂಂಡಸ್ಥಂ ವೀಕ್ಷಯೇದ್ರನಿಂ ॥೫೧॥ 


೪೬. ಗೃಹಸ್ಥನು ಪಿತೃಗಳು, ದೇವತೆಗಳು, ಮನುಷ್ಯರು ಇವರ ಯಜ್ಞ 
ವಾದ ಮೇಲೆ ಉಳಿದ ಅಮೃತವೆಂಬ ಯಜ್ಞ ಶೇಷವನ್ನು ಭುಂಜಿಸಬೇಕು. 
ಹೀಗೆ ಪಿತ್ರಾದಿಯಜ್ಞಗಳನ್ನು ನೆರವೇರಿಸದೆ ಊಟಮಾಡುವವನು ತನ್ನ ಹೊಟ್ಟಿ 
ಯನ್ನು ಮಾತ್ರ ತುಂಬಿಸಿಕೊಳ್ಳುವವನು. 

೪೭. ಬ್ರಾಹ್ಮಣರು ವೇದಾಧ್ಯಯನ ಮಾಡಿದ್ದರೂ ಅವರು ವೈಶ್ವದೇವ 
ಮತ್ತು ಅತಿಥಿ ಪೂಜೆಯನ್ನು ಮಾಡದಿದ್ದರೆ ಶೂದ್ರರೆಸಿಸಿಕೊಳ್ಳುವರು. 

೪೮. ಯಾವ ನೀಚಬ್ರಾಹ್ಮಣರು ವೈಶ್ವಜೀವವನ್ನು ಮಾಡದೆ ಭೋಜನ 
ಮಾಡುವರೊ, ಅವರು ಈ ಲೋಕದಲ್ಲಿ ಅನ್ನವಿಲ್ಲದವರಾಗಿ ಜನ್ಮಾಂತರದಲ್ಲಿ 
ಕಾಗೆಯ ಜನ್ಮನನ್ನು ಪಡೆಯುವರು. 

೪೯. ವೇದವಿಹಿತವಾದ ಕರ್ಮಗಳಲ್ಲಿ ತನಗೆ ತಿಳಿದಷ್ಟನ್ನು ಯಾವನು 
ನಿತ್ಯವೂ ಆಲಸ್ಯವಿಲ್ಲದೆ ಶಕ್ಕ್ಯನುಸಾರ ಆಚರಿಸುವನೊ, ಅವನು ಉತ್ತಮಗತಿ 
ಯನ್ನು ಹೊಂದುವನು. 

೫೦. ಷಷ್ಠೀ ಮತ್ತು ಅಷ್ಟಮಾ ತಿಥಿಗಳಲ್ಲಿ ಪಾಪವು ಎಣ್ಣೆಯಲ್ಲಿಯೂ, 
ಮಾಂಸದಲ್ಲಿಯೂ, ಚತುರ್ದಶೀ, ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ಬೆಂಡೆಕಾಯಿ 
ಯಲ್ಲಿಯೂ, ಯೋನಿಯಲ್ಲಿಯೂ ಇರುವುದು. 

೫೧. ಸೂರ್ಯನು ಉದಯಿಸುತ್ತಿರುವಾಗಲೂ, ಮುಳುಗುತ್ತಿರುವಾಗಲೂ, 
ಮಧ್ಯದಲ್ಲಿರುವಾಗಲೂ, ರಾಹುಗ್ರಸ್ತನಾಗಿರುವಾಗಲೂ, ಪರಿಧಿಯೊಳಗಿರು 
ವಾಗಲೂ ಅವನನ್ನು ನೋಡಬಾರದು. 


೮೬ ಶ್ರೀ ಸ್ಕಾಂದಮ ಹಾಪುರಾಣಂ 


ನಾನೀಕ್ಸೇತಾತ್ಮನೋ ರೂಪಮಪ್ಪು ಧಾವೇನ್ನ ಕರ್ದಮ । 


ನ ನಗ್ಗಾಂ ಸ್ತ್ರಿಯಮಿಾಾಕ್ಸೇತ ನ ನಗ್ನೋ ಜಲಮಾನಿಶೇತ್‌ ॥ ೫೨ ॥ 
ದೇವತಾಯತನಂ ನಿಸ್ರಂ ಧೇನುಂ ಮಧು ಮೃದಂ ತಥಾ | 

ಜಾತಿವೃದ್ಧಂ ವಯೋವೃದ್ಧಂ ನಿದ್ಯಾನೃದ್ಧಂ ತಥೈವ ಚ ॥ ೫೩ ॥ 
ಅಶ್ವತ್ನಂ ಚೈತ್ಯವೃಕ್ಸಂ ಚ ಗುರುಂ ಜಲಭೃತಂ ಘಟಂ । 

ಸಿದ್ಧಾಂನ್ನಂ ದಧಿ ಸಿದ್ಧಾರ್ಥಂ ಗಚ್ಛನ್ಯುರ್ಯಾತೃ್ರದಕ್ಸಿಣಂ ॥ ೫೪ ॥ 
ರಜಸ್ವಲಾಂ ನ ಸೇವೇತ ನಾಃಶ್ಲೀಯಾತ್ಸಹಭಾರ್ಯಯಾ । 

ಏಕವಾಸಾ ನ ಭುಂಜೀತ ನ ಭುಂಜೀತೋತ್ಯಟಾಸನೇ ॥ ೫೫ ॥ 
ನಾಶುಚಿಂ ಸ್ತ್ರಿಯನಿಕ್ಸೇತ ತೇಜಸ್ಕಾಮೋ ದ್ವಿಜೋತ್ತಮಃ । 
ಅಸಂತರ್ಪ್ಯ ಪಿತ್ರೂನ್ಹೇವಾನ್ನಾಂದ್ಯಾದನ್ನಂ ಚೆ ಕುತ್ರಚಿತ್‌ ॥ ೫೬॥ 
ಪಕ್ಕಾನ್ನಂ ಚಾಪಿ ನೋ ಮಾಂಸಂ ದೀರ್ಥಕಾಲಂ ಜಿಜೀವಿಷುಃ । 

ನ ಮೂತ್ರಣಂ ವ್ರಜೇ ಕುರ್ಯಾನ್ನ ನಲ್ಮೀಕೇ ನ ಭಸ್ಮನಿ ॥ ೫೭ ॥ 
ನ ಗರ್ತೇಷು ನ ಸತ್ವೇಷು ನ ತಿಸ್ಮನ್ನ ವ್ರಜನ್ನಪಿ । 

ಬ್ರಾಹ್ಮಣಂ ಸೂರ್ಯಮಗ್ಗ್ನಿಂ ಚ ಚಂದ್ರಯಕ್ಸಗುರೂನಪಿ ॥ ೫೮ ॥ 


೫೨. ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡಕೂಡದು. ಕೆಸರಿನಲ್ಲಿ 
ಓಡಕೂಡದು. ಬತ್ತಲೆಯಾಗಿರುವ ಹೆಂಗಸನ್ನು ನೋಡಬಾರದು. ತಾನು 
ಬತ್ತಲೆಯಾಗಿ ನೀರಿಗಿಳಿಯಬಾರದು. 

೫೩-೫೪. ದಾರಿಯಲ್ಲಿ ದೇವಾಲಯವನ್ನೂ, ಬ್ರಾಹ್ಮಣನನ್ನೂ , ಹಸು 
ವನ್ನೂ, ಜೇನನ್ನೂ, ಮೃತ್ತಿಗೆಯನ್ನೂ ಸ್ವಜಾತಿಯಲ್ಲಿ ವೃದ್ಧನಾದವನನ್ನೂ , 
ವಯೋವೃದ್ಧನನ್ನೂ, ವಿದ್ಯೆಯಿಂದ ದೊಡ್ಡ ವನಾದವನನ್ನೂ, ಅಶ್ವತ್ಥವೃಕ್ಸ 
ವನ್ನೂ ರಾಜಬೀದಿಯಲ್ಲಿರುವ ದೇವಯೋಗ್ಯವಾದ ಮರವನ್ನೂ, ಗುರುವನ್ನೂ, 
ನೀರು ತುಂಬಿದ ಗಡಿಗೆಯನ್ನೂ, ಸಿದ್ಧಾನ್ನವನ್ನೂ, ಮೊಸರನ್ನೂ, ಬಿಳಿ ಸಾಸಿವೆ 
ಯನ್ನೂ ಪ್ರದಕ್ಸಿಣೆಮಾಡಿ ಮುಂದಕ್ಕೆ ಸಾಗಬೇಕು. 

೫೫. ಮುಟ್ಟಾದ ಹೆಂಗಸಿನ ಸಂಗವನ್ಮು ಮಾಡಕೂಡದು. ಹೆಂಡತಿ 
ಯೊಡನೆಯೂ, ಒಂದು ಬಟ್ಟಿ ಯಿಂದಲೂ, ಉನ್ನತಾಸನದಲ್ಲಿ ಕುಳಿತೂ ಭೋಜನ 
ಮಾಡಬಾರದು. 

೫೬-೫೯. ತೇಜಸ್ಸನ್ನು ಬಯಸುವ ಮಾನವನು ಅಶುದ್ಧಳಾದ ಹೆಂಗಸನ್ನು 
ನೋಡಕೂಡದು. ಬಹಳಕಾಲ ಬದುಕಲಿಚ್ಛಿಸುವವನು ಪಿತೃಗಳನ್ನು ತೃಪ್ಲಿಗೊ 
ಳಿಸದೆ ಅನ್ನವನ್ನೂ ಮಾಂಸವನ್ನೂ ತಿನ್ನಬಾರದು. ದನದ ಕೊಟ್ಟಿ ಗೆಯಲ್ಲಿಯೂ, 
ಹುತ್ತದಲ್ಲಿಯೂ, ಬೂದಿಯಲ್ಲಿಯೂ, ಪ್ರಾಣಿಗಳಿರುವ ಕುಣಿಗಳಲ್ಲಿಯೂ 
ಮೂತ್ರವಿಸರ್ಜನೆ ಮಾಡಬಾರದು. ಮತ್ತು ನಿಂತುಕೊಂಡೂ, ಹೋಗು 


ಸಸ್ಟೋರಧ್ಯಾಯಃ ಆಕಿ 


ಅಭಿಪಶ್ಯನ್ನ ಶುರ್ಪೀತ ಮಲಮೂತ್ರ ನಿಸರ್ಜನಂ । 
ಮುಖೇನೋಪಧಮೇನ್ನಾಂಗ್ನಿಂ ನಗ್ನಾಂ ನೇಕ್ಸೇತ ಯೋಷಿತಂ ॥೫೯॥ 
ನಾಂಂಘಫ್ರೀ ಪ್ರತಾಪಯೇದಗ್ಗೌ ನ ವಸ್ತು ಅಶುಚಿ ಕ್ಸಿಸೇತ್‌ । 
ಪ್ರಾಣಿಹಿಂಸಾಂ ನ ಕುರ್ವೀತ ನಾ ಶ್ಲೀಯಾತ್ಸಂಧ್ಯಯೋರ್ಡ್ಯಯೋಕ ೬ ೦॥ 
ನ ಸಂನಿಶೇಚ್ಞ ಸಂಧ್ಯಾಯಾಂ ಪ್ರಾತಃ ಸಾಯಂ ಕೈಚಿದ್ದುಧಃ । 
ನಾಂಂಚಕ್ಸೀತ ಧಯಂತೀಂ ಗಾಂ ನೇಂದ್ರಚಾಪಂ ಪ್ರದರ್ಶಯೇತ್‌ ॥೬೧॥ 
ನೈಕಃ ಸುಪ್ಯಾತ್ಮ್ವೃಚಿಚ್ಛೂನ್ಯೇ ನ ಶಯಾನಂ ಪ್ರಬೋಧಯೇತ್‌ । 
ಪಂಥಾನಂ ನೈಕಲೋ ಯಾಯಾನ್ಸವಾರ್ಯಂಜಲಿನಾ ಪಿಬೇತ್‌ ॥ ೬೨ ॥ 
ನ ದಿವೋದ್ಧೂತಸಾರಂ ಚ ಭಕ್ಟಯೇದ್ದಧಿನೋ ನಿಶಿ। 

ಸ್ತ್ರೀಧರ್ಮಿಣೀಂ ನಾಂಭಿವದೇನ್ನಾಂದ್ಯಾದಾತೃಪ್ತಿ ರಾತ್ರಿಷು ॥೬೩॥ 
ತೌರ್ಯತ್ರಿಕಪ್ರಿಯೋ ನಸ್ಯಾತ್ಕಾಂಸ್ಯೇ ಪಾದೌ ನ ಧಾನಯೇತ್‌ । 
ಶ್ರಾದ್ಧಂ ಕೃತ್ವಾ ಸರಶ್ರಾದ್ಧೇ ಯೋಶ್ಲೀಯಾದ್ದಾನವರ್ಜಿತಃ ॥ ೬೪ ॥ 
ದಾತುಃ ಶ್ರಾದ್ಧಫಲಂ ನಾಸ್ತಿ ಭೋಕ್ತಾ *ಿಲ್ಬಿಷಭುಗ್ಭನೇತ್‌ | 

ನ ಧಾರಯೇದನ್ಯಭುಕ್ತಂ ವಾಸಶ್ಹೋಪಾನಹಾವಸಹಿ ॥ ೬೫ ॥ 








ತ್ತಲೂ, ಬ್ರಾಹ್ಮಣ, ಸೂರ್ಯ, ಅಗ್ನಿ, ಚಂದ್ರ, ನಕ್ಷತ್ರ, ಗುರುಗಳನ್ನು 
ನೋಡುತ್ತಲೂ ಮಲಮೂತ್ರ ವಿಸರ್ಜನೆಮಾಡಬಾರದು. ಬಾಯಿಯಿಂದ ಬೆಂಕಿ 
ಯನ್ನೂದಬಾರದು. ಬತ್ತಲೆಯಾದ ಹೆಂಗಸನ್ನು ನೋಡಕೂಡದು. 

೬೦. ಪಾದಗಳನ್ನು ಬೆಂಕಿಯಲ್ಲಿ ಕಾಯಿಸಬಾರದು. ಅಶುದ್ಧವಸ್ತುವನ್ನು 
ಕಾಲಿನಿಂದ ಎಸೆಯ ಕೂಡದು. ಪ್ರಾಣಿಹಿಂಸೆ ಮಾಡಕೂಡದು. ಬೆಳಗ್ಗೆ ಮತ್ತು 
ಸಾಯಂಕಾಲ ಸಂಧ್ಯಾಕಾಲಗಳಲ್ಲಿ ಭುಂಜಿಸಬಾರದು. 

೬೧. ಸಂಧ್ಯಾಕಾಲಗಳಲ್ಲಿ ಎಲ್ಲಿಯೂ ಮಲಗಬಾರದು. ಕುಡಿಯುತ್ತಿರುವ 
ಆಕಳನ್ನು ಅಡ್ಡಿ ಮಾಡಕೂಡದು. ಕಾಮನಬಿಲ್ಲನ್ನು ನೋಡಕೂಡದು. 

೬೨. ಯಾರೂ ಇಲ್ಲದ ಸ್ಥಳದಲ್ಲಿ ಒಬ್ಬನೇ ನಿದ್ರಿಸಬಾರದು. ನಿದ್ರಿಸು 
ತ್ರಿರುವವನ್ನು ಎಚ್ಚರಿಸಕೂಡದು. ಒಬ್ಬಂಟಿಗನಾಗಿ ದಾರಿಯಲ್ಲಿ ಪ್ರಯಾಣ 
ಮಾಡಬಾರದು. ನೀರನ್ನು ಬೊಗಸೆಯಿಂದ ಕುಡಿಯಕೂಡದು. 

೬೩. ಹಗಲು ಜೆಣ್ಣೆತೆಗೆದ ಮೊಸರನ್ನು ರಾತ್ರಿ ಊಟಮಾಡಬಾರದು. 
ರಜಸ್ವಲೆಯನ್ನು ವಂದಿಸಕೂಡದು. ರಾತ್ರಿಯ ವೇಳೆಯಲ್ಲಿ ತೃಪ್ತಿಯಾಗುವವರೆಗೆ 
ಊಟಮಾಡಬಾರದು. 

೬೪-೬೫. ನೃತ್ಯ, ಗೀತ, ವಾದ್ಯ ಮೂರರಲ್ಲಿ ಪ್ರೀತಿಯುಳ್ಳ ವನಾಗ 
ಬಾರದು. ಕಂಚಿನಲ್ಲಿ ಪಾದಗಳನ್ನು ತೊಳೆಯ ಕೂಡದು. ಯಾವನು ತಾನು 
ಶ್ರಾದ್ಧಮಾಡಿ ಮತ್ತೊಬ್ಬನು ಮಾಡಿದ ಶ್ರಾದೃದಲ್ಲಿ ತಿಳುವಳಿಕೆಯಿಲ್ಲದೆ ಭುಂಜಿ 


ಆಳ ಶ್ರೀ ಸ್ಯಾಂದಮಹಾಪುರಾಣಂ 


ನ ಭಿನ್ನಭಾಜನೇಂಶ್ಚೀಯಾನ್ನಾಸೀತಾಗ್ನ್ಯಾದಿದೂಹಿತೇ । 


ಆರೋಹಣಂ ಗವಾಂ ಪೃಷ್ಠೇ ಪ್ರೇತಧೂಮಂ ಸರಿತ್ತಟಿಂ ॥ ೬೬॥ 
ಬಾಲಾತಪಂ ದಿನಾಸ್ವಾಪಂ ತ್ಯಜೇದ್ದೀರ್ಥಂ ಜಿಜೀನಿಷುಃ । 

ಸ್ನಾತ್ವಾ ನ ಮಾರ್ಜಯೇದ್ದಾತ್ರಂ ನಿಸೃಜೇನ್ನ ಶಿಖಾಂ ಪಥಿ ॥ ೬೭॥ 
ಹಸ್ತೌ ಶಿರೋ ನಧುನುಯಾನ್ನಾಕರ್ಷೇದಾಸನಂ ಪದಾ । 

ಕರೇಣ ನೋ ಮೃಜೇದ್ದಾತ್ರಂ ಸ್ನಾನನಸ್ತ್ರೇಣ ವಾ ಪುನಃ ॥ ೬೮॥ 
ಶುನೋಚ್ಛೆಷ್ಟಂ ಭವೇದ್ಗಾತ್ರಂ ಪುನಃ ಸ್ನಾನೇನ ಶುಧ್ಯತಿ । 
ನೋತ್ಸಾಟಿಯೇಲ್ಲೋಮನಖಂ ದಶನೇನ ಕದಾಚನ ॥೬೯॥ 


ಕರಜೈಃ ಕರಜಚ್ಛೇದಂ ನಿವರ್ಜಯೇಚ್ಛುಭಾಯ ತು! 

ಯದಾಯತ್ಕಾಂ ತ್ಯಜೇತ್ವನ್ನ ಕುರ್ಯಾತ್ಕರ್ಮ ಪ್ರಯತ್ನತಃ ॥೭೦॥ 
ಅದ್ವಾರೇಣ ನ ಗಂತವ್ಯಂ ಸ್ವವೇಶ್ಮಾಂಸಿ ಕದಾಚನ । 

ಕ್ರೀಡೇನ್ಹ್ನಾಃಜ್ಞೈಃ ಸಹಾಂಸೀತ ನ ಧರ್ಮಸ್ನೈರ್ನ ರೋಗಿಭಿಃ ॥ ೭೧॥ 


ನಾಯ ಕಾ ಎಎ 





ಸುವನೊ, ಅವನು ಪಾಪಿಷ್ಕನಾಗುವನು. ಶ್ರಾದ್ಭಮಾಡಿದವನ ಶ್ರಾದ್ಧಫಲವು 
ಹಾಳಾಗುವುದು. ಬೇರೆಯವರುಟ್ಟ ಬಟ್ಟೆಯನ್ನೂ ಬೇರೆಯವರ ಪಾದರಕ್ಷೆ 
ಗಳನ್ನೂ ಧರಿಸಬಾರದು. 

೬೬-೬೭, ಒಡೆದ ಪಾತ್ರೆಯಲ್ಲಿ ಊಟಮಾಡಬಾರದು. ಬೆಂಕಿ ಮೊದ 
ಲಾದವುಗಳಿಂದ ಕೆಡಿಸಲ್ಪಟ್ಟ ಸ್ಥಳದಲ್ಲಿ ಕೂತುಕೊಳ್ಳಬಾರದು. ಗೋವುಗಳ 
ಬೆನ್ನಿನಮೇಲೆ ಕೂತುಕೊಳ್ಳುವುದನ್ನೂ, ಚಿತಿಯ ಹೊಗೆಯನ್ನೂ, ನದಿಯ ದಡ 
ವನ್ನೂ, ಎಳೆಬಿಸಿಲನ್ನೂ, ಹಗಲು ನಿದ್ರೆಯನ್ನೂ, ಬಹುಕಾಲ ಜೀವಿಸಲಿಚ್ಛಿಸು 
ವವನು ಬಿಡಬೇಕು. ಸ್ನಾನವಾದ ಮೇಲೆ ದೇಹವನ್ನುಜ್ಜಿಕೊಳ್ಳಬಾರದು. 
ದಾರಿಯಲ್ಲಿ ಜುಟ್ಟನ್ನು ಬಿಡಿಸಿಕೊಂಡು ಹೋಗಬಾರದು. 

೬೮. ಕೈಗಳನ್ನೂ, ತಲೆಯನ್ನೂ ಅಲ್ಲಾಡಿಸಕೂಡದು. ಆಸನವನ್ನು 
ಪಾದದಿಂದ ಎಳೆಯಬಾರದು. ಶರೀರವನ್ನು ಕೈಯಿಂದಾಗಲಿ, ಸ್ನಾನದ ಬಟ್ಟಿ 
ಯಿಂದಾಗಲಿ ಉಜ್ಜಿ ಕೊಳ್ಳಬಾರದು. 

೬೯-೭೦. ನಾಯಿಯನ್ನು ಮುಟ್ಟದರೆ ತಿರುಗಿ ಸ್ನಾನಮಾಡಿದರೆ ಶುದ್ಧ 
ನಾಗುವನು. ಒಂದುವೇಳೆಯೂ ಹಲ್ಲಿನಿಂದ ರೋಮ ಮತ್ತು ಉಗುರುಗಳನ್ನು 
ಕೀಳಕೂಡದು. ಉಗುರುಗಳಿಂದ ಉಗುರನ್ನು ಕೀಳಬಾರದು. ಮಂದಿನ ಶುಭ 
ಕ್ಟಾಗಿ ಬಿಟ್ಟ ಕೆಲಸವನ್ನು ತಿರುಗಿ ಮಾಡಲು ಪ್ರಯತ್ನಿಸಬಾರದು. 

೭೧. ತನ್ನ ಮನೆಯನ್ನೂ ಒಂದುವೇಳೆಯೂ ಬಾಗಿಲನ್ನು ಬಿಟ್ಟು ಬೇರೆ 
ಕಡೆಯಿಂದ ಪ್ರವೇಶಿಸಕೂಡದು. ಆಡಲರಿಯದನರೊಡನೆಯೂ, ಧರ್ಮಬಾಹ್ಯ 
ಕೊಡನೆಯೂ, ರೋಗಿಗಳೊಡನೆಯೂ ಆಡುತ್ತ ಕೂತುಕೊಳ್ಳಬಾರದು. 


ಷಷ್ಮೋತಧ್ಯ್ಮಾಯಃ ೪೯ 


ನ ಶಯಾತ ಕೃಚಿನ್ನಗ್ನಃ ಸಾಣೌ ಭುಂಜೀತ ನೈವ ಚ | 


ಆರ್ದ್ರಸಾದಕರಾಸ್ಯೋಶ್ನನ್ಹೀರ್ಥಕಾಲಂ ನ ಜೀನತಿ ॥ ೭೨ ॥ 
ಸಂನಿಶೇನ್ನಾರ್ದಚರಣೋ ನೋಚ್ಛಿಷ್ಟಃ ಕ್ವಜಿದಾವ್ರಜೇತ್‌ । 

ಶಯನಸ್ಕೋ ನಚಾ ಶ್ಲೀಯಾನ್ನಪಿಬೇಚ್ಛ ಜಲಂ ದ್ವಿಜಃ ॥ ೭೩ ॥ 
ಸೋಷಾನತ್ಕೋ ನೋಪನಿಶೇನ್ನಜಲಂ ಚೋತ್ಲಿತಃ ಪಿಬೇತ್‌ । 
ಸರ್ವಮನ್ನುಮರಯಂ ನಾಂವ್ಯಾದಾರೋಗ್ಯಸ್ಯಾಭಿಲಾಷುಕಃ ॥ ೭೪॥ 
ನ ನಿರೀಕ್ಸೇತ ನಿಣ್ಮೂತ್ರೇ ನೋಚ್ಛೆಷ್ಟಃ ಸಂಸ್ಸೃಶೇಚ್ಛೆರಃ । 
ನಾಂಧಿತಿಷ್ಕೇತ್ತುಷಾಂಂಗಾರಭಸ್ಮಕೇಶಕಪಾಲಿಕಾಃ ॥ ೭೫ ॥ 
ಪತಿತೈಃ ಸಹ ಸಂವಾಸಃ ಪತನಾಯ್ಕೆವ ಜಾಯತೇ । 
ದದ್ಯಾದೂರ್ಧ್ಯಾಸನಂ ಮಂಚಂನ ಶೂದ್ರಾಯ ಕದಾಚನ ET 


ಬ್ರಾಹ್ಮಣ್ಯಾದ್ಧೀಯತೇ ವಿಪ್ರಃ ಶೂದ್ರೋ ಧರ್ಮಾಚ್ಚ ಹೀಯತೇ! 
ಧರ್ಮೋಪದೇಶಃ ಶೂದ್ರಾಣಾಂ ಸೃಶ್ರೇಯಃ ಪ್ರತಿಘಾತಯೇತ್‌ ॥ ೭೭॥ 





೭೨, ಬತ್ತಲೆಯಾಗಿ ಎಲ್ಲಿಯೂ ಮಲಗಬಾರದು. ಎಲೆ ಮೊದಲಾದವು 
ಗಳಿಲ್ಲದೆ ಕೈಯಲ್ಲಿಯೇ ಬಡಿಸಿಕೊಂಡು ಊಟಮಾಡಬಾರದು. ಒದ್ದೆಯಾದ 
ಪಾದ, ಕ್ಸ ಮುಖವುಳ್ಳ ವನಾಗಿ ಊಟಮಾಡುವವನು ಹೆಚ್ಚುಕಾಲ ಜೀವಿಸು 
ವುದಿಲ್ಲ. 

೭೩. ಬ್ರಾಹ್ಮಣನು ಒದ್ದೆಯಾದ ಅಡಿಯುಳ್ಳವನಾಗಿ ಮಲಗಬಾರದು. 
ಎಂಜಲುಳ್ಳವನಾಗಿ ಎಲ್ಲಿಗೂ ಹೋಗಕೂಡದು. ಹಾಸಿಗೆಯಲ್ಲಿಯೇ ಕುಳಿತು 
ಕೊಂಡು ಊಟಮಾಡಕೂಡದು. ನೀರನ್ನೂ ಕುಡಿಯಬಾರದು. 

೭೪. ಆರೋಗ್ಯವನ್ನು ಬಯಸುವವನು ಪಾದರಕ್ಷೆಗಳನ್ನು ಹಾಕಿಕೊಂಡು 
ಕುಳಿತುಕೊಳ್ಳಬಾರದು. ನಿಂತುಕೊಂಡು ನೀರನ್ನು ಕುಡಿಯಬಾರದು. ಪೂರ್ತಿ 
ಹುಳಿಯಾದ ವಸ್ತುವನ್ನು ತಿನ್ನಕೂಡದು. 

೭೫. ಮಲಮೂತ್ರಗಳನ್ನು ನೋಡಕೂಡದು. ಉಚ್ಛಿಷ್ಟನಾಗಿ ತಲೆ 
ಯನ್ನು ಮುಟ್ಟಬಾರದು; ಹೊಟ್ಟು, ಕೆಂಡ, ಬೂದಿ, ಕೂದಲು, ಮಡಿಕೆಯ 
ಹೋಳುಗಳಲ್ಲಿ ನಿಲ್ಲಬಾರದು. 

೭೬. ಪಾಪಿಗಳ ಸಹವಾಸವು ಅಥೋಗತಿಗೆ ಕಾರಣ. ಶೂದ್ರನಿಗೆ ಎತ್ತರ 
ವಾದ ಮಂಚವನ್ನು ಆಸನವಾಗಿ ಒಂದುವೇಳೆಯೂ ಕೊಡಬಾರದು. 

೭೭. ಬ್ರಾಹ್ಮಣನು ಶೂದ್ರನಿಗೆ ಧರ್ಮೋದೇಶಮಾಡಿದರೆ ಬ್ರಾಹ್ಮಣ್ಯ 
ದಿಂದ ಭ್ರಷ್ಟನಾಗುವುದಲ್ಲದೆ ಶೂದ್ರನೂ ಅವನ ಧರ್ಮದಿಂದ ಭ್ರೃಷ್ಟನಾಗು 
ವನು. ಮತ್ತು ತನ್ನ ಶ್ರೇಯಸ್ಸನ್ನೂ ಹಾಳುಮಾಡಿಕೊಳ್ಳುವನು. 


೯0 ಶ್ರೀ ಸ್ಕಾಂದಮಹಾಪುರಾಣಂ 


ದ್ವಿಜ ಶುಶ್ರೂಸಣಂ ಧರ್ಮಃ ಶೂದ್ರಾಣಾಂ ಹಿ ಪರೋ ಮತಃ । 
ಕಂಡೂಯನಂ ಹಿ ಶಿರಸಃ ಪಾಣಿಭ್ಯಾಂ ನ ಶುಭಂ ಮತಂ ॥ ೭೮ ॥ 
ಆದಿಶೇದ್ವೈದಿಕಂ ಮಂತ್ರಂ ನ ಶೂದ್ರಾಯ ಕದಾಚನ । 
ಬ್ರಾಹ್ಮಣ್ಯಾದ್ಮೀಯತೇ ವಿಪ್ರಃ ಶೂದ್ರೋ ಧರ್ಮಾಚ್ಚ ಹೀಯತೇ॥ ೭೯ ॥ 
ಆತಾಡನಂ ಕರಾಭ್ಯಾಂ ಚ ಕ್ರೋಶನಂ ಕೇಶಲುಂಚನಂ । 


ಅಶಾಸ್ತ್ರವರ್ತನಂ ಭೂಯೋ ಲುಬ್ಭಾತೃತ್ವಾ ಪ್ರತಿಗ್ರಹಂ ॥ ೮೦॥ 
ಬ್ರಾಹ್ಮಣಃ ಸ ಚ ನೈ ಯಾತಿ ನರಕಾನೇಕನಿಂಶತಿಂ । 
ಅಕಾಲಮೇಘಸ್ತನಿತೇ ವರ್ಷರ್ತೌ ಸಾಂಸುವರ್ಷಣೀ ॥ ೮೧॥ 
ಮಹಾಬಾಲಧ್ಯನೌ ರಾತ್ರಾವನಧ್ಯಾಯಾಃ ಪ್ರಕೀರ್ತಿತಾಃ । 

ಉಲ್ಯಾಸಾತೇ ಚ ಭೂಕಂಪೇ ದಿಗ್ದಾಹೇ ಮಧ್ಯರಾತ್ರಿಷು ॥ ೮೨ ॥ 
ಸಂಧ್ಯಯೋನವೃ ೯ಷಲೋಪಾಂತೇ ರಾಜ್ಯಹಾರೇ ಚ ಸೂತಕೇ। 
ದಶಾಂಷ್ಟ್ರಕಾಸು ಭೂತಾಯಾಂ ಶಾ ಶ್ರಾದ್ಧಾಂಹೇ ಪ್ರತಿಸದ್ಯಪಿ ॥ ೮೩ ॥ 
ಪೂರ್ಣಿಮಾಯಾಂ ತಥಾಂಷ್ಟಮ್ಯಾಂ ವಿಡ್ವರೇ ರಾಷ್ಟ್ರನಿಷ್ಲವೇ | 
ಉಪಾಕರ್ಮಣಿ ಚೋತ್ಪರ್ಗೇ ಕಲ್ಪಾ ದಿಷು ಯುಗಾದಿಷು ॥ ೮೪ ॥ 
ಆರಣ್ಯಕಮಧೀತ್ಯಾಂನಿ 'ಬಾಣಸಾನ್ನೊ ರಪಿ ಧ್ವನೌ । 

ಅನಧ್ಯಾಯೇಷು ಚೈ ತೇಷು SE ನವೈ ಕೃಚಿತ್‌ ॥ ೮೫ ॥ 


೭೮. ದ್ವಿಜಸೇವೆಯು ಶೂದ್ರರಿಗೆ ಉತ್ತಮವಾದ ಧರ್ಮವು. ಎರಡು 
ಕೈಗಳಿಂದ ತಳೆಯನ್ನು ಕೆರೆದುಕೊಳ್ಳುವುದು ಅನಿಷ್ಟವು. 

೭೯. ಒಂದುವೇಳೆಯೂ ಶೂದ್ರನಿಗೆ ವೈದಿಕಮಂತ್ರ ವನ್ನು ಉಪದೇಶಿಸ 
ಬಾರದು. ಹಾಗೆ ಮಾಡಿದರೆ ವಿಸ ಕ್ರನು ಬಾ ತ್ರಾ ಹ್ಮಣ್ಯ ದಿಂದಲೂ, ಶೂದ್ರನು ನು ಸ್ವಧರ್ಮ 
ದಿಂದಲೂ ಭ್ರಷ್ಟನಾಗುವನು. 

೮೦-೮೫. ಕೈಗಳಿಂದ ಹೊಡೆದುಕೊಳ್ಳುವುದು, ಕರಿಚಿಕೊಳ್ಳು ವುದು, 
ಕೂದಲನ್ನು ಕತ್ತರಿಸಿಕೊಳ್ಳುವುದು, ಶಾಸ್ತ್ರಬಾಹ್ಯನಾಗಿ ನಡೆಯುವುದು. 
ಲೋಭಿಯಿಂದ ದಾನಪಡೆಯುವುದು ಇವುಗಳನ್ನು ಮಾಡಿದ ಬ್ರಾಹ್ಮಣನು 
ಇಪ್ಪತ್ತೊಂದು ನರಕಗಳಿಗೆ ಹೋಗುವನು. ಅಕಾಲದ ಗುಡುಗು, ವರ್ಷರ್ತು 
ದೂಳು ಸುರಿಯುವುದು, ಹುಡುಗರ ಘಟ್ಟಿಯಾದ ಶಬ್ದ, ಕೊಳ್ಳಿಬೀಳುವುದು, 
ಭೂಕಂಪ, ದಿಕ್ಕುಗಳ ಸುಡುವಿಕೆ, ನಡುರಾತ್ರಿ, ಸಂಧ್ಯಾಕಾಲಗಳು, ಶೂದ್ರನ 
ಸಮಾಸ, ರಾಜ್ಯಾಪಹಾರ, ಸೂತಕ, ಹತ್ತು ಅಷ್ಟ ತಕಗಳು, ಕೃಷ್ಣಸಕ್ಸ ಚತು 
ರ್ದಶೀ, ಶಾ ್ರೌದ್ಧದಿನ್ನ ಪ ಪಾಡ್ಯಮಿ, ಹುಣ್ಣಿ ಮೆ ಅಷ್ಟಮಿ, ರಾಜ್ಯದ” ಉಪಪ್ಪ ವ, 
ಉಪಾಕರ್ಮ, ಉತ್ತ ರ್ಜ? ಕಲಾ ನದಿಗಳು, ಯುಗಾದಿಗಳು, ಬಾಣ ಮತ್ತು 
ಸಾಮಧ್ವಫಿಗಳು ಇವು ಅನಧ್ಯಾಯಗಳು. ಇವುಗಳಲ್ಲಿ ಎಲ್ಲಿಯೂ ಅಧ್ಯಯನ 
ಮಾಡಬಾರದು. 


ಸಸ್ಕೋಂಧ್ಮಾಯಃ ೯೧ 


ಭೂತಾಂಸ್ಟವಮ್ಯೋಃ ಪಂಚದಶ್ಯೋರ್ಬ್ಯಹ್ಮಚಾರೀ ಸದಾ ಭನೇತ್‌ । 
ಅನಾಯುಷ್ಯಕರಂ ಚೇಹ ಪರದಾರೋಪಸರ್ಪಣಂ | 
ತಸ್ಮಾತ್ತದ್ದೂರತಸ್ತ್ಯಾಜ್ಯಂ ನೈರಿಣಾಂ ಚೋಪಸೇವನಂ ॥ ೮೬ ॥ 
ಪೂರ್ವರ್ಥಿಭಿಃ ಪರಿತ್ಯಕ್ತಮಾತ್ಮಾನಂ ನಾಂವಮಾನಯೇತ್‌" | 
ಸದೋದ್ಯಮನತಾಂ ಯಸ್ಮಾಚ್ಛ್ರ್ರೆಯೋ ನಿದ್ಯಾ ನ ದುರ್ಲಭಾಃ ॥ ೮೭॥ 
ಸತ್ಯಂ ಬ್ರೂಯಾತ್ರಿಯಂ ಬ್ರೂಯಾನ್ನ ಬ್ರೂಯಾತ್ಸತ್ಯಮಪ್ರಿಯಂ | 
ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ನೋ ವಿಧೀಯತೇ ॥ ೮೮ ॥ 
ವಾಚೋವೇಗಂ ಮನೋವೇಗಂ ಜಿಹ್ಹಾನೇಗಂ ಚ ನರ್ಜಯೇತ್‌ । 


ಗುಹ್ಯಜಾನ್ಯಸಿ ಲೋಮಾನಿ ತತ್ಸ್ಪರ್ಶಾದಶುಚಿರ್ಭನೇತ್‌ ॥೮೯॥ 
ಪಾದಧೌತೋದಕಂ ಮೂತ್ರಮುಚ್ಛೆ ಷ್ಟಾನ್ಯುವಕಾನಿ ಚೆ! 

ನಿಷ್ಟೀನನಂ ಚ ಶ್ಲೇಷ್ಮಾಣಂ ಗೃಹಾದ್ದೂರಂ ವಿಸನಿಕ್ಸಿಪೇತ್‌ ॥೯೦॥ 
ಅಹರ್ನಿಶಂ ಶ್ರುತೇರ್ಜಾಪ್ಯಾಚ್ಛ್‌ಚಾಚಾರ ನಿಷೇವಣಾತ್‌ । 
ಅದ್ರೋಹನತ್ಯಾ ಬುದ್ಧ್ಯಾ ಚ ಪೂರ್ವಜನ್ಮ ಸ್ಮರೇದ್ದಿಜಃ ॥೯೧॥ 





೮೬, ಚತುರ್ದಶೀ ಮತ್ತು ಅಷ್ಟಮಿಗಳಲ್ಲಿಯೂ, ಹುಣ್ಣಿಮೆ ಅಮಾವಾಸ್ಯೆ 
ಗಳಲ್ಲಿಯೂ ಯಾವಾಗಲೂ ಬ್ರಹ್ಮಚಾರಿಯಾಗಿರಬೇಕು. ಈ ಪ್ರಪಂಚದಲ್ಲಿ 
ಸರಸತಿಯ ಗಮನವೂ ವೈರಿಗಳ ಆಶ್ರಯವೂ ಆಯುಷ್ಯಕ್ಕೆ ಹಾಸಿಕರವು. 
ಆದ್ದರಿಂದ ಅವುಗಳನ್ನು ದೂರದಿಂದಲೆ ಬಿಡಬೇಕು. 

೮೭. ಹಿಂದಿನ ಸಂಪತ್ಸಮೃದ್ಧಿಯು ಹಾಳಾದರೆ ತನ್ನನ್ನು ಅವಮಾನ 
ಮಾಡಿಕೊಳ್ಳಬಾರದು. ಯಾವಾಗಲೂ ಪ್ರಯತ್ನಿಸುತ್ತಿರುವವರಿಗೆ ಸಂಪತ್ತು 
ಗಳೂ, ವಿದ್ಯೆಗಳೂ ದುರ್ಲಭಗಳಲ್ಲ. 

೮೮. ಸತ್ಯವನ್ನು ಹೇಳಬೇಕು. ಹಿತವಾಗಿ ನುಡಿಯಬೇಕು. ಅಪ್ರಿಯ 
ವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗಿದ್ದರೂ ಸುಳ್ಳ ನ್ಹಾಡಬಾರದು. 
ಇದು ಧರ್ಮನೆನಿಸುವುದು. 

ರ. ಮಾತು, ಮನಸ್ಸು, ನಾಲಿಗೆಗಳ ವೇಗವನ್ನು ತ್ಯಜಿಸಬೇಕು. 
ಗುಹೃಸ್ಥಾನಗಳಲ್ಲಿರುವ ಕೂದಲುಗಳನ್ನು ಮುಟ್ಟಿ ದರೆ ಅಶುದ್ಧನಾಗುವನು. 

೯೦. ಕಾಲುತೊಳೆದ ನೀರನ್ನೂ, ಮೂತ್ರನನ್ನೂ, ಎಂಜಲು ನೀರನ್ತ್ಯೂ 
ಉಗುಳನ್ನೂ, ಕಫವನ್ನೂ ಮನೆಯಿಂದ ದೂರದಲ್ಲಿ ಚೆಲ್ಲಬೇಕು. 

೯೧. ಹೆಗಲೂ ರಾತ್ರಿ ವೇದಾಧ್ಯಯನದಿಂದಲೂ, ಶೌಚ ಮತ್ತು ಆಚಾರಗಳ 
ಅನುಷ್ಠಾನದಿಂದಲೂ, ದ್ರೋಹವಿಲ್ಲದ ಬುದ್ಧಿಯಿಂದಲೂ ನಡೆಯುವ ದ್ವಿಜನು 
ಹಿಂದಿನ ಜನ್ಮವನ್ನು ಸ್ಮರಿಸಿಯಾನು. 


೯೨ ಶ್ರೀ ಸ್ಕಾಂಹಮಹಾಪುರಾಣಂ 


ವೃದ್ಧಾನ್ಪ್ರಯತ್ನಾದ್ವಂದೇತ ದದ್ಯಾತ್ರೇಷಾಂ ಸ್ವಮಾಸನಂ ।' 

ನಿನನ ಪ್ರಿಕಂಥರೋ 'ಭೂಯಾಡನುಯಾಯಾತ್ರ. ತಶ್ಚ ತಾನ್‌ ॥ ೯೨॥ 
ಶು ತ್ರಿತಿಧೂದೇನಜೀವಾನಾಂ ನೃಪ ಸಾಧುತಪಸ್ವಿ ನಾಂ । 

ಪತಿವ್ರ ತಾನಾಂ ನಾರೀಣಾಂ ತಃ ಕುರ್ಯಾನ್ನ ಕರ್ಹಿಚಿತ್‌ ॥ ೯೩॥ 
ಉದ. ತ್ಯ ಪಂಚ ಮೃತ್ಟಿಂಡಾನ್ಸಾ ಫ್ಸಿಯಾತ್ಸರಜಲಾಶಯೇ । 

ಶ್ರ ದ್ದ ಯಾ ಪಾತ್ರ ಮಾಸಾದ್ಯ ಯತ್ಕಿಂಚಿದ್ದೀಯತೇ ವಸು ॥ ೯೪ ॥ 
ಸೇಶೇ ಕಾಲೇ ಚ ವಿಧಿನಾ ತದಾನಂತ್ಯಾಯಕಲ್ಪತೇ | 

ಭೂಪ್ರದೋ ಮಂಡಲಾ ಧೀಶಃ ಸರ್ವತ್ರ ಸುಖಿತೋಸ್ನದಃ ॥ ೯೫॥ 
ತೋಯದಾತಾ ಸುರೂಪಃ ಸ್ಯಾತ್ಸುಷ್ಟಶ್ಹಾಃನ್ನಪ್ರದೋ ಭವೇತ್‌ । 
ಪ್ರದೀಪದೋ ನಿರ್ಮಲಾಃಕ್ಟೋ ಗೋದಾತಾಂರ್ಯಮಲೋಕಭಾಕ್‌ ॥ 
ಸ್ಹ ರ್ಜದಾತಾಚ ದೀರ್ಫಾಯುಸ್ತಿ ಲದಃಸ್ಯಾ ಚ್ಚ ಸುಪ್ರಜಃ। 

ವೇಶ್ಮ ದೋಂತ್ಯುಚ್ಚ ಸೌಧೇಶೋ ವಸ್ತ್ರದಶ್ಚ ಚೆ ಸ ಶೋಕಭಾಕ್‌ ॥ ೯೭॥ 
ಹಯಪ್ರ ದೋ "ನ್ಯ ದೇಹೋ ಲಕ್ಷಿ ವಾಸ, ಷಭಪ್ರ ದಃ । 

ಸುಭಾರ್ಯಃ ಕನಕದ ಸುಪರ್ಯೆಂಕಪ್ಪ ದೋಪಿಚ ॥ ೯೮॥ 


೯೨, ವೃದ್ಧರನ್ನು ಪ್ರಯತ್ನದಿಂದ ವಂದಿಸಿ ಅವರಿಗೆ ತನ್ನ ಆಸನವನ್ನಿತ್ತು 
ನಮ್ರನಾಗಿ ತಲೆ ತಗ್ಗಿಸಿಕೊಂಡಿರಬೇಕು. ತರುವಾಯ ಅವರನ್ನು ಹಿಂಬಾಲಿಸ 
ಬೇಕು. 

೯೩. ನೇದ, ಬ್ರಾಹ್ಮಣರು, ದೇವತೆಗಳು, ರಾಜರು, ಸಜ್ಜನರು, ಮುನಿ 
ಗಳು, ಪತಿವ್ರತೆಯರಾದ ಹೆಂಗಸರು ಇವರನ್ನು ಯಾವಾಗಲೂ ನಿಂದಿಸಬಾರದು. 

೯೪-೯೫. ಐದು ಮಣ್ಣಿನ ಉಂಡೆಗಳನ್ನು ಎತ್ತಿ ಇತರರ ಕೊಳದಲ್ಲಿ ಸ್ನಾನ 
ಮಾಡಬೇಕು. ದೇಶಕಾಲವನ್ನರಿತು ಉತ್ತಮ ಪಾತ್ರವನ್ನು ಹೊಂದಿ ವಿಧಿಯಿಂದ 
ಶ್ರದ್ಧಾಪುರಸ್ಸರವಾಗಿ ಕೊಟ್ಟಿ ಸ್ವಲ್ಪ ದ್ರವ್ಯವೂ ಅನಂತವಾಗುವುದು. ಭೂದಾನ 
ಮಾಡಿದವನು ರಾಜನೂ, ಅನ್ನವನ್ನು ನೀಡಿದವನು ಸುಖಿಯೂ ಆಗುವನು. 

೯೬-೯೮. ನೀರನ್ನು ದಾನಮಾಡಿದವನು ಸುಂದರನೂ, ಅನ್ನದಾನಮಾಡಿ 
ದವನು ಪುಷ್ಪ ನೂ, ದೀಪದಾನಮಾಡಿದವನು ಶುದ್ಧ ವಾದ ಕಣ್ಣುಳ್ಳ ಳ್ಳವನೂ, 
ಗೋದಾನಮಾಡಿದವನು ಸೂರ್ಯಲೋಕವನ್ನು ಹೊಂದುವವನ್ಮೂ ಸ ಸ್ವೆರ್ಜಿದಾನ 
ಮಾಡಿದವನು ದೀರ್ಫಾಯುಷ್ಯವುಳ್ಳ ವನೂ, ಎಳ್ಳ ನ್ನು ದಾನಮಾಡಿದವನು ಒಳ್ಳೆ 
ಮಕ್ಕಳುಳ್ಳ ವನೂ, ಗೃ ಹೆದಾನಮಾಡಿದವನು ಉನ್ನತವಾದ ಮಹಡಿಮನೆಯುಳ್ಳೆ 
ವನೂ, ನಸ್ತ್ರವನ್ನು ದಾನಮಾಡಿದವನು ಚಂದ್ರಲೋಕಗಾಮಿಯೂ, ಅಕ್ರ 
ದಾನಮಾಡಿದವನು ಸುಂದರದೇಹವುಳ್ಳವನೂ, ಎತ್ತನ್ನು ದಾನಮಾಡಿದವನು 
ಸಂಪತ್ತುಳ್ಳವನೂ, ಪಲ್ಲಕ್ಕಿ ಮತ್ತು ಮಂಚವನ್ನು ದಾನಮಾಡಿದವನು ಒಳ್ಳೆ ಯ 
ಪತ್ತಿ ಯುಳ್ಳ ವನೂ ಆಗುವನು. 


ಸಸ್ಮೋ9ಧ್ಯಾಯ। ೯೩ 


ಶ್ರದ್ಧಯಾ ಪ್ರತಿಗೃಹ್ಣಾತಿ ಶ್ರದ್ಧಯಾ ಯಃ ಪ್ರಯಚ್ಛತಿ | 


ಸ್ಪರ್ಗಿಣೌ ತಾವುಭೌ ಸ್ಯಾತಾಂ ಸತತೋಃಶ್ರದ್ಧಯಾ ತ್ವಧಃ ॥೯೯॥ 
ಅನೃತೇನ ಕ್ಸರೇದ್ಯಜ್ಞಸ್ತಪೋ ವಿಸ್ಮಯತಃ ಕ್ಸರೇತ್‌ । 
ಕ್ಪೃರೇತ್ಮೀರ್ತಿರ್ನಿನಾದಾನಮಾಯುರ್ನಿಪ್ರಾ: ಸಮಾನತಃ ॥ ೧೦೦॥ 
ಗಂಧಂ ಪುಷ್ಪಂ ಕುಶಾ ಗಾವಃ ಶಾಕಂ ಮಾಂಸಂ ಪಯೋ ದಧಿ । 
ಮಣಿಮತ್ಸ್ಯಗೃಹಂ ಧಾನ್ಯಂ ಗ್ರಾಹ್ಯಮೇತದುಪಸ್ಥಿತಂ ॥ ೧೦೧ ೬ 
ಮಧೂದಕಂ ಫಲಂ ಮೂಲಮೇಧಾಂಸ್ಕಭಯದಕ್ಸಿಣಾ I 

ಅಭ್ಯುದ್ಯ ತಾನಿ ಗ್ರಾಹ್ಯಾಣಿ ತ್ರೇತಾನ್ಯಪಿ ನಿಕೃಷ್ಟತಃ ॥ ೧೦೨ ॥ 
ದಾಸ ನಾಪಿತ ಗೋಪಾಲ ಕುಲಮಿತ್ರಾರ್ಥಸೀರಿಣಃ | ' 

ಭೋಜ್ಯಾನ್ನಾಃ ಶೂದ್ರವರ್ಗೇಂಮಿಾ ತಥಾತ್ಮನಿನಿನೇದಕಃ ॥ ೧೦೩ ॥ 
ಇತ್ಯಮಾಚಾರಧರ್ಮೊೋಯಂ ಧರ್ಮಾಃರಣ್ಯನಿವಾಸಿನಾಂ I 
ಶ್ರುತಿಸ್ಮೃತ್ಯುಕ್ತಧರ್ನೊೋಯಂ ಯುಧಿಷ್ಠಿರ ನಿನೇದಿತಃ ॥ ೧೦೪ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ " ಸದಾಚಾರ 
ಲಕ್ಷ್ಮಣವರ್ಣನಂ'' ನಾಮ ಸಸ್ಕೋಂಧ್ಯಾಯಃ 





೯೯. ಶ್ರದ್ಧೆಯಿಂದ ದಾನಕೊಡುವವನೂ, ಶ್ರದ್ಧೆಯಿಂದ ದಾನ ತೆಗೆದು. 
ಕೊಳ್ಳುವವನೂ ಸ್ವರ್ಗಲೋಕವನ್ನು ಸೇರುವರು. ಅಶ್ರದ್ಧೆಯಿಂದ ಕೊಡುವ. 
ಮತ್ತು ತೆಗೆದುಕೊಳ್ಳುವವರು ನಥಕವನ್ನು ಸೇರುವರು. 

೧೦೦. ಸುಳ್ಳಿನಿಂದ ಯಜ್ಞ ವೂ, ಗರ್ವದಿಂದ ತಸಸ್ಸೂ, ದಾನಮಾಡ 
ದಿದ್ದರೆ ಕೀರ್ತಿಯೂ, ಬ್ರಾಹ್ಮಣನ ಅವಮಾನದಿಂದ'ಆಯುಸ್ಸೂ ಹಾಳಾಗುವುದು. 

೧೦೧-೧೦೨. ಗಂಧ, ಹೂವು ದರ್ಭೆ, ಗೋವುಗಳು, ತರಕಾರಿ, 
ಮಾಂಸ, ಹಾಲು, ಮೊಸರು, ರತ್ನ, ಮಾನು, ಮನೆ, ಧಾನ್ಯ, ಜೇನು, 
ನೀರು, ಹಣ್ಣು, ಗೆಣಸು, ಕಟ್ಟಿಗೆ, ಅಭಯದಕ್ಸಿಣೆ ಇವುಗಳನ್ನು ನೀಚ 
ನಿಂದಲೂ ತೆಗೆದುಕೊಳ್ಳಬಹುದು. 

೧೦೩. ಸೇವಕ, ಕ್ಸೌರಕ, ಗೊಲ್ಲ, ವಂಶದಗೆಳೆಯ, ಉಳುವನ ಇವ. 
ರನ್ನು ಶೂದ್ರರ ಗುಂಸಿನಲ್ಲಿ ಊಟಿಮಾಡಿಸಬೇಕು. 

೧೦೪. ಯುಧಿಷ್ಠಿರ! ಹೀಗೆ ಶ್ರುತಿಸ್ಮೃತಿ ವಿಹಿತವಾದ ಧರ್ಮಾರಣ್ಯವಾಸಿ 
ಗಳ ಆಚಾರ ಧರ್ಮವನ್ನು ನಿನಗೆ ತಿಳಿಸಿರುವೆನು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಕ ಮಾಹಾತ್ಮ್ಮ್ಯೆಯಲ್ಲಿ "" ಸದಾಚಾರಲಕ್ಸಣವರ್ಣನ''ವೆಂಬ 
ಆರನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ i 
ಅಥ ಸಪ್ತಮೋಧ್ಯಾಯಃ 
ಧರ್ಮಾಚಾರವರ್ಣನಂ 
ವ್ಯಾಸ ಉವಾಚ: 
ಸಂಪ್ರಾಪ್ಯ ಧರ್ಮವನಾಪ್ಯಾಂ ಚ ಯಃ ಕುರ್ಯಾತ್ಸಿತೃತರ್ಸ ಣಂ । 
ತೃಸ್ತಿಂ ಪ್ರಯಾಂತಿ ಪಿತರೋ ಯಾನದಿಂದ್ರಾಶ್ಚತುರ್ದಶ Hon 
ಸಿತರಶ್ಹಾಂತ್ರ ಸೂಜ್ಯಾಶ್ಚ ಸ್ವರ್ಗತಾ ಯೇ ಚ ಪೂರ್ವಜಾಃ | 
ಹಿಂಡಾಂಶ್ಚ ನಿರ್ವಸೇತ್ತೇಷಾಂ ಪ್ರಾಸ್ಕೇಮಾಂ ಮುಕ್ತಿದಾಯಿಕಾಂ ॥ ೨ ॥ 
ತ್ರೇತಾಯಾಂ ಪಂಚದಿನಸೈರ್ದ್ವಾಪರೇ ತ್ರಿದಿನೇನ ತು | 


ಏಕಚಿತ್ತೇನ ಯೋ ವಿಪ್ರಾಃ ಪಿಂಡಂ ದದ್ಯಾತ್ಮಲೌ ಯುಗೇ ian 
ಲೋಲುಪಾ ಮಾನವಾ ಲೋಕೇ ಸಂಪ್ರಾಪ್ತೇ ತು ಕಲೌ ಯುಗೇ! 
ಪರದಾರರತಾ ಲೋಕಾಃ ಸ್ತ್ರಿಯೋತಿಚಪಲಾಃ ಪುನಃ ॥೪॥ 
ಪರದ್ರೋಹರತಾಃ ಸರ್ವೇ ನರನಾರೀನಪುಂಸಕಾಃ । 

ಪರನಿಂದಾಪರಾ ನಿತ್ಯಂ ಸರಚ್ಛದ್ರೋಪದರ್ಶಕಾಃ ॥೫॥ 





ಕನ್ನಡದ ಅನುವಾದ 
ಧರ್ಮಾಚಾರವರ್ಣನ 

೧. ವ್ಯಾಸರು ಹೇಳುತ್ತಾರೆ :--ಧರ್ಮವಾಸಿಯನ್ನು ಹೊಂದಿ ಪಿತೃತರ್ಸ್ಪಣ 
ಮಾಡಿದರೆ ಚತುರ್ದಶಸಿತೃಗಳು ತೃಪ್ತಿಗೊಳ್ಳುವರು. 

೨. ಮುಕ್ತಿಸ್ರದವಾದ ಈ ಧರ್ಮವಾಪಿಯಲ್ಲಿ ಸ್ವರ್ಗವಾಸಿಗಳಾದ ಹಿಂದಿನ 
ಪೂಜ್ಯಪಿತೃಗಳಿಗೆ ನಿಂಡಪ್ರ ದಾನಮಾಡಬೇಕು. 

೩. ತ್ರೇತಾಯುಗದಲ್ಲಿ ಐದು ದಿವಸಗಳಲ್ಲಿಯೂ, ದ್ವಾಪರಯುಗದಲ್ಲಿ 
ಮೂರುದಿನಗಳಲ್ಲಿಯೂ, ಕಲಿಯುಗದಲ್ಲಿ ಒಂದೇ ಮನಸ್ಸಿನಲ್ಲಿಯೂ ಇಲ್ಲಿ 
ವಿಪ್ರನು ಪಿಂಡಪ್ರದಾನಮಾಡಿದರೆ ಪಿತೃಗಳು ಮುಕ್ತರಾಗುವರು. 

೪, ಕಲಿಯುಗವು ಪ್ರಾಪ್ತವಾಗಲು ಪ್ರಪಂಚದಲ್ಲಿ ಮನುಷ್ಯರು ಅತ್ಯಾಶೆ 
ಯುಳ್ಳವರೂ, ಪರರಪತ್ನಿಯರಲ್ಲಿ ಆಸಕ್ತರೂ ಆಗುವರು. ಹೆಂಗಸರು ಅತ್ಯಂತ 
ಚಂಚಲಚಿತ್ರರಾಗಿರುವರು. 

೫. ಗಂಡಸರು, ಹೆಂಗಸರು, ನಪುಂಸಕರು ಇವರೆಲ್ಲರೂ ಪರರಿಗೆ ದ್ರೋಹ 
ಮಾಡುವುದರಲ್ಲಿ ಆಸಕ್ತರೂ, ಮತ್ತೊಬ್ಬರ ನಿಂದೆಯಲ್ಲಿ ಥಿರತರೂ, ಯಾನಾ 
ಗಲೂ ಇತರರ ದೋಷಾನ್ವೇಷಣಸರರೂ ಆಗಿರುವರು. 


ಸಪ್ತ್ರಮೋಕಧ್ಯಾಯಃ ೪೫ 


ಪರೋಜ್ಟೇಗಕರಾ ನೂನಂ ಕಲಹಾ ಮಿತ್ರಭೇದಿನಃ । 
ಸರ್ವೇತೇ ಶುದ್ಧತಾಂ ಯಾಂತಿ ಕಾಜೇಶಾಃ ಸ್ವಯಮಬ್ರಾವನ್‌ ॥ ೬॥ 
ಏತದುಕ್ತಂ ಮಹಾಭಾಗ ಧರ್ಮಾಃರಣ್ಯ ಸ್ಯ ವರ್ಜನಂ | 


ಫಲಂ ಚ್ಛೈ ವಾಂತ್ರ ಸರ್ವಂ ಹಿ ಯದುಕ್ತ 0 UAH ॥೭॥ 
ವಾಜ್ಮನಃಕಾಯಶುದ್ಧಾಶ್ಚ ಪರದಾರಸರಾಜ್ಮುಖಾಃ । 

ಅದ್ರೋಹಾಶ್ಚ ಸಮಾಃ ಕ್ರುದ್ಧಾ ಮಾತಾಪಿತೃ ಪರಾಯಣಾಃ ॥೮॥ 
ಅಲೌಲ್ಯಾ ಲೋಭರಹಿತಾ ದಾನಧರ್ಮಪರಾಯಣಾಃ । 

ಆಸ್ತಿಕಾಶ್ಚೈನ ಧರ್ಮಜ್ಞಾಃ ಸ್ವಾಮಿಭಕ್ತಿರತಾಶ್ಚಯೇ ॥೯॥ 
ಪತಿವ್ರತಾ ತು ಯಾ ನಾರೀ ಪತಿಶುಶ್ರೂಷಣೇ ರತಾ | 

ಅಹಿಂಸಕಾ ಆತಿಥೇಯಾಃ ಸ್ವಧರ್ಮನಿರತಾಃ ಸದಾ Hu ೧೦॥ 

ಶೌನಕ ಉನಾಚ:- 

ಶೃಣು ಸೂತ ಮಹಾಭಾಗ ಸರ್ವಧರ್ಮವಿದಾಂ ವರ । 

ಗ್ದ ಹಸ್ಥಾ ನಾಂ ಸದಾಚಾರಃ ಶ್ರು ತಶ್ನ ತ್ವನ್ಮುಖಾನ್ಮಯಾ ॥ ೧೧॥ 
ಏಕಂ ಮೌನೇಷ್ಟಿ ತಂ ಮೇಂದ್ಯ ತತ  ಫಯಸ್ಸ ಸೂತೆಜ | 

ಪತಿವ್ರತಾನಾಂ ವಾಗ py ಣಂ ಕೀದೃಶಂ ವದ ॥ ೧೨ ॥ 


ಮ್ತ: ಸಮು ಸಸ ಯಮ ವಣ ಜು 2ಜ ಮಿಮಿ 


೬-೭, ಹೀಗೆ ಪರರಿಗೆ | ವ್ಯಥೆಯನ್ನು ಂಟುಮಾಡುವವರೂ, ಜಗಳವಾಡಿ 
ಮಿತ್ರರನ್ನು ಭೇದಿಸತಕ್ಕವರೂ ತತ ಅವರೆಲ್ಲರೂ ಶುದ್ಧ ರಾಗುವರೆಂದು ಯಮ 
ಬ್ರಹ್ಮ ಮಹೇಶ್ವರರು ಸ್ವಂತವಾಗಿ ಹೇಳಿದ್ದಾರೆ. ಎಲೈ ಭಾಗ್ಯಶಾಲಿಯಾದ 





ಪ 
ಯುಧಿಸ್ಕಿರನೆ ! ಧರ್ಮಾರಣ್ಯವನ್ನು ಈರೀತಿ ವರ್ಣಿಸಿ ಹೇಳಿದೆನು. ಮಹೇಶ್ವ 


ರನು ಹೇಳಿದ ಫಲವನ್ನೂ ಸಮಗ್ರವಾಗಿ ತಿಳಿಸಿರುವೆನು. 

೮-೧೦. ಧರ್ಮಾರಣ್ಯವಾಸಿಗಳಾದ ಜನರು ಮಾತು, ಮನಸ್ಸು, ಶರೀಠ 
ಗಳಿಂದ ಸವಿತ್ರರೂ, ಪರರಸತಿಯರಲ್ಲಿ ಪರಾಜ್ಮುಖರೂ, ದ್ರೋಹಬುದ್ಧಿಯಿಲ್ಲ 
ದವರೂ, ಸರ್ವಸಮರೂ, ತಾಯಿತಂದೆಗಳ ಸೇವೆಯಲ್ಲಿ ಆಸಕ್ತರೂ, ಸ್ಲಿರಮಾನ 
ಸರೂ, ಆಶೆಯಿಲ್ಲದವರೂ, ದಾನಧರ್ಮನಿರತರೂ, ಆಸ್ತಿಕರೂ, ಧರ್ಮವನ್ನರಿ 
ತವರೂ, ಯಜಮಾನನಲ್ಲಿ ಭಕ್ತಿಯುಳ್ಳವರೂ ಆಗಿರುವರು. ಹೆಂಗಸು ಪತಿ 
ವ್ರತೆಯಾಗಿ ಪತಿಸೇವೆಯಲ್ಲಿ ನಿರತಳಾಗಿರುವಳು. ಗಂಡಸರು ಹಿಂಸೆಮಾಡದ 
ವರೂ, ಅತಿಥಿಗಳನ್ನು ಸತೃರಿಸುವವರೂ, ಯಾವಾಗಲೂ ಸ್ವಧರ್ಮದಲ್ಲಿ 
ಆಸಕ್ತ್ಕರೂ ಆಗಿರುವರು. 

೧೧. ಶೌನಕನು ಕೇಳುತ್ತಾನೆ: ಸಕಲ ಧರ್ಮಜ್ಞರಲ್ಲಿ ಅಗ ಗ್ರಗಣ್ಯನಾದ 
ಸೂತನೆ! ನಿನ್ನಿಂದ ನಾನು ಗ್ಯ ಹೆಸರ ಸದಾಚಾರವನ್ನು ಕೇಳಿದೆನು. 

೧೨. ನನಗೆ ಸಕಲ ಸತವ ತೆಯರ ಲಕ ಕ್ಷಣವನ್ನು ತಿಳಿಯಬೇಕೆಂದು 
ಒಂದು ಅಭಿಲಾಷೆಯಿಡೆ. ಆ ಜಿ ಕ್ಸಣವು ಎಂತಹುದೆಂಬುದನ್ನು ನನಗೆ ಹೇಳು. 


ಳಿ ಶ್ರೀ ಸ್ಥಾಂಡಮೆಹಾಪುರಾಣಂ 


ಸೂತ ಉವಾಚ: 
ಪತಿವ್ರತಾ ಗೃಹೇ ಯಸ್ಯ ಸಫಲಂ ತಸ್ಯ ಜೀವನಂ । 
'ಯಸ್ಯಾಂಂಗಚ್ಛಾಯಯಾ ತುಲ್ಯಾ ಯತ್ಯಥಾ ಪುಣ್ಯಕಾರಿಣೇ ॥೧೩॥ 
ಪತಿವ್ರತಾಸ್ತ್ಪರುಂಥತ್ಯಾ ಸಾವಿತ್ರಾ ಕಸ್ಯ ನಸೂಯಯಾ । 


ಶಾಂಡಿಲ್ಯಾ ಚೈವ ಸತ್ಯಾ ಚ ಲಕಾ 4 ಶತರೂಪಯಾ ॥ ೧೪॥ 
ಮೇನಯಾಚ “ಸುನೀತ್ಕಾ ಚ ಸಂಜ್ಞಯಾ ಸ್ವಾಹಯಾ ಸಮಾಃ । 
ಪತಿವ್ರತಾನಾಂ ಕರ್ಮಾ ಹಿ ಮುನಿನಾ ಚ ಪ್ರಕೀರ್ತಿತಾಃ ॥ ೧೫ ॥ 
ಭುಂಕ್ತೇ ಭುಂಕ್ತೇ ಸ್ವಾಮಿನಿ ಚ ಚ ತಿಸ್ಮತಿ ತ್ವನುತಿಸ್ಮತಿ । 

ನಿನಿದ್ರಿತೇ ಯಾ ನಿದ್ರಾತಿ ಪ್ರಥಮಂ ಸೆರಿಬುದ್ಧ ತಿ 1 ೧೬ ॥ 


ಅನಲಂಕೃ ತಮಾತ್ಮಾ ಸಂ ದೌಶಾಂತೇ ಭರ್ತರಿ i ತೇ। 
ಕಾರ್ಯಾರ್ಥಂ ಪ್ರೋಸಿತೇ ಕ್ವಾಪಿ ಸರ್ವಮಂಡನವರ್ಜಿಕಾ ॥ ೧೭॥ 
'ಭರ್ತುರ್ನಾಮ ನ ಗೃಹ್ಣಾತಿ ಹ್ಯಾಯುಷೋಸ್ಕ ಹಿ ವೃದ್ಧಯೇ | 


ಪುರುಷಾಂಂತರನಾಮಾಂಸಿ ನ ಗೃಹ್ಣತಿ ಕದಾಚನ ॥ ೧೮ ॥ 
ಆಕೃಷ್ಟಾಂಸಿ ಚ ನಾಕ್ರೋಶೇತ್ತಾಡಿತಾಸಿ ಪ್ರಸೀದತಿ । 
ಇದಂ ಕುರು ಕೃತಂ ಸ್ವಾನಿನ್ಮನ್ಯತಾಮಿತಿ ನಕ್ತಿಚ ॥೧೯॥ 








೧೩. ಸೂತನು ಹೇಳುತ್ತಾನೆ: ಯಾವನ ಮನೆಯಲ್ಲಿ ದೇಹದ ನೆರಳಿ 
ನಂತಿರುವ ಪತಿವ್ರ ತೆಯಿರುವಳೊ, ಅವನ ಜೀವನವು ಸಫಲವಾದುದು. ಅವನ 
ಕಥೆಯು ಪುಣ್ಯವನ್ನುಂಟುಮಾಡುವುದು. 

೧೪. ಪತಿವ್ರತೆಯರು ಅರುಂಧತಿ, ಸಾವಿತ್ರಿ, ಅನಸೂಯಾ, ಶಾಂಡಿಲ್ಯಾ, 
ಪಾರ್ವತೀ, ಲಕ್ಷ್ಮೀ, ಶತರೂಪಾ, ಮೇನಾ, ಸುನೀತಿ, ಸಂಜ್ಞಾ, ಸ್ವಾಹಾ 
"ಇವರಿಗೆ ಸಮಾನರು. ಈ ಪತಿವ್ರತೆಯರ ಧರ್ಮವನ್ನು ವ್ಯಾಸರು ಹೇಳಿರುತ್ತಾರೆ. 

೧೫-೧೬. ಪತಿವ್ರತೆಯು ಪತಿಯು ಭೋಜನಮಾಡಿದ ಮೇಲೆ ಊಟ 
ಮಾಡುವಳು. ಅವನು ನಿಂತಿರಲು ತಾನೂಥಿಂತಿರುವಳು. ಅವನು ನಿದ್ರೆಮಾಡಲು 
ಸಿದ್ರಿಸಿ ಅವನಿಗಿಂತ ಮೊದಲು ಏಳುವಳು. 

೧೭. ಪತಿಯು ಯಾವುದಾದರೂ ಕೆಲಸಕ್ಕಾಗಿ ಬೇರೆ ದೇಶಕ್ಕೆ ಹೋಗಿರಲು 
ತಾನು ಯಾವ ಒಡವೆ ವಸ್ತುಗಳಿಂದಲೂ ಅಲಂಕಾರಮಾಡಿಕೊಳ್ಳದಿರುವಳು. 

೧೮. ಪತಿಯ ಆಯುಷ್ಯದ ವೃದ್ಧಿಗಾಗಿ ಅವನ ಹೆಸರನ್ನು ಹೇಳುವುದಿಲ್ಲ. 
ಪರಪುರುಷನ ಹೆಸರನ್ನೂ ಎತ್ತುವುದಿಲ್ಲ. 

೧೯. ಪತಿಯು ಎಳೆದರೂ ಕೂಗಿಕೊಳ್ಳುವುದಿಲ್ಲ. ಹೊಡೆದರೂ ಪ್ರಸನ್ನ 
ಳಾಗಿಯೇ ಇರುವಳು. "ಪತಿಯು ಇದನ್ನು ಮಾಡು'' ಎಂದು ಆಜ್ಞೆಮಾಡಿ 
ಪರೆ ""ಸ್ವಾಮಿ ಮಾಡಿದ್ದೇನೆ. ಪರಾಂಬರಿಸಿ'' ಎನ್ನುವಳು. 





ಸಪ್ತನೋಳಿಧ್ಯಾಯಃ ೯೭ 


ಆಹೂತಾ ಗೃ ಹಕಾರ್ಯಾಣಿ ತ್ಯಕ್ತ್ವಾ ಗಚ್ಛತಿ ಸತ್ತ aರಂ! 


ಕಿಮರ್ಥಂ ನ್ಯಾಹ ೈತಾ ನಾಥ ಸ ಪ್ರ ಸೌಮೋ ನಿಧೀಯಂತಾಂ ॥ ೨೦ ॥ 
ನ ಚಿರಂ ತಿಷೃತಿ ದ್ವಾರಿನ ದ್ವಾರಮುಷಸೇವತೇ | 

ಅದಾತವ್ಯಂ ಸ್ವಯಂ ಕಿಂಚಿತೃರ್ಜಿಚಿನ್ನ ದದಾತ್ಯಪಿ ॥ ೨೧॥ 
ಪೂಜೋಪಕರಣಂ ಸರ್ವಮನುಕ್ತಾ ಸಾಧಯೇತ್ಸಯಂ ! 
ನಿಯಮೋದಕಬರ್ಹಿಂಹಿ ಯತ್ರ ಪುಷ್ಪಾಕ್ಸತಾದಿಕಂ ॥ ೨೨ ॥ 
ಪ್ರತೀಕ್ಷಮಾಣಾ ಚ ವರಂ ಯಥಾ ಕಾಲೋಚಿತಂ ಹಿ ಯತ್‌ । 
ತದುಪಸ್ಮಾ ಪಯೇತ್ಸರ್ವಮನುದ್ದಿಗ್ನಾಂತಿಹೃಷ್ಟವತ್‌ ॥ ೨೩॥ 
ಸೇವತೇ ಭರ್ತುರುಚ್ಛಷ್ಟ ಮಿಷ್ಟ ಮನ್ನ 0 ಫಲಾದಿಕಂ I 

ದೂರತೋ ವರ್ಜಯೇಡೇಷಾ' ಸಮಾಜೋತ್ಸ ವದರ್ಶನಂ ॥೨೪॥ 
ನ ಗಚ್ಛೇತ್ತೀರ್ಥಯಾತ್ರಾದಿ ನಿವಾಹಪ್ರೇಕ್ಸಣಾದಿಷು | 

ಸುಖಸುಪ್ತಂ ಸುಖಾಸೀನಂ ರಮಮಾಣಂ ಯದೃಚ್ಛಯಾ ॥ ೨೫ ॥ 


ಅಂತರಾಯೀಪಿ ಕಾರ್ಯೇಷು ಪತಿಂ ನೋತ್ಥಾ ಪಯೇತ್ಕ ಎಚೆತ್‌ । 
`ಸಿ ಸ್ತ್ರೀಧರ್ಮಿಣೇ ತ್ರಿ ತ್ರಿರಾತ್ರಂ ತು ಸೃಸುಖಂ ನೈವ ರಾಯ್‌ ॥ ೨೬ ॥ 

೨೦. ಯಾವುದಾದರೂ ಕೆಲಸಕ್ಕಾಗಿ ಪತಿಯು ಕರೆದರೆ ಮನೆಗೆಲಸ 

ಗಳನ್ನು ಮಾಡುತ್ತಿದ್ದರೂ ಅವುಗಳನ್ನು ತ್ಯಜಿಸಿ ಕೂಡಲೆ ಹೋಗುವಳು. 
«ನಾಥ! ಏಕೆ ಕಕೆದಿರಿ; ಕೆಲಸವನ್ನು ಹೇಳಿ ಅನುಗ್ರಹೆಮಾಡಿರಿ'” ಎನ್ನುವಳು. 

೨೧. ಬಾಗಿಲಲ್ಲಿ ಹೆಚ್ಚುಕಾಲ ನಿಲ್ಲುವುದಿಲ್ಲ. ಯಾವಾಗಲೂ ಬಾಗಿಲಲ್ಲೇ 
ಇರುವುದಿಲ್ಲ. ತಾನು ಸ್ವಂತವಾಗಿ ಕೊಡಬಾರದ್ದನ್ನು ಯಾರಿಗೂ ಕೊಡು 
ವುದಿಲ್ಲ. 

೨೨. ದೇವಸೂಜೆಗೆ ಬೇಕಾಗಿರುವ ಶುದ್ಧೋದಕ, ದರ್ಭೆ, ಹೂವು, 
ಅಕ್ಬತೆ ಮೊದಲಾದವುಗಳನ್ನು ಹೇಳಿಸಿಕೊಳ್ಳ ದೆ ತಾನೇ ಸಿದ್ಧ ಮಾಡಿಡುವಳು. 

೨೩. ಪತಿಯ ಅನುಗ್ರಹನನ್ನು ನಿರೀತ್ಸಿ ಸುತ್ತ * ಕಾಲೋಚಿತವಾದ 
ಪದಾರ್ಥಗಳನ್ನು ಸಂತೋಷದಿಂದ ಬೇಸ ರಗೊಳ್ಳಿದೆ ಅವನಿಗೆ ಅಣಿಮಾಡಿ 
ಕೊಡುವಳು. 

೨೪. ಪತಿಯ ಉಚ್ಛಿಷ್ಟವಾದ ಅನ್ನ, ಹಣ್ಣು ಮೊದಲಾದವುಗಳನ್ನು 
ಪ್ರೀತಿಯಿಂದ ಭುಜಿಸುವಳು. ಸಾಮಾಜಿಕೋತ್ಸವಗಳ ನೋಟವನ್ನು ದೂರ 
ದಿಂದಲೇ ತ್ಯಜಿಸುವಳು. 

೨೫-೨೬. ತೀರ್ಥಯಾತ್ರೆ, ಮದುವೆ ಮೊದಲಾದವುಗಳಿಗೆ ತಾನೊಬ್ಬಳೇ 
ಹೋಗುವುದಿಲ್ಲ. ಸುಖವಾಗಿ ನಿದ್ರಿಸುತ್ತಿರುವವನೂ, ಸೌಖ್ಯದಿಂದ ಕೂತು 
ವಿನೋದಪಡುತ್ತಿರುವವನೂ ಆದ ಸತಿಯನ್ನು ಆಕಸ್ಮಿಕನಾದ ಕಾರ್ಯಗಳ 

4 


೯೪ ಶ್ರೀ ಸ್ಥಾಂಡಮಹಾಪುರಾಣಂ 


ಸ್ವವಾಕ್ಯಂ ಶ್ರಾವಯೇನ್ನಾಃಪಿ ಯಾವತ್ಸ್ನಾ ತ್ವಾ ನ ಶುಧ್ಯತಿ। 
ಸುಸ್ನಾ ಭತೃ ೯ನದನಮಾಳೆ ಕ್ಲೇ ತಾಂನ್ಯಸ್ಯ ನ ಕೃಚಿತ್‌ । 


ಚಕರ ಮು ಧ್ಯಾತ್ವಾ ಪತಿಂ ಭಾನುಂ ನಿಲೋಕಯೇತ್‌ ॥೨೭॥ 
ಹರಿದ್ರಾ ೦ ಕುಂಕುಮಂ ಚೈವ ಸಿಂದೂರಂ ಕಜ್ಜ ಲಂ ತಥಾ! 
ಕೂರ್ಸಾಸಕಂ ಚ ಮ ಮಾಂಗಲ್ಯಾಭರಣಂ ಶುಭಂ ॥ ೨೮ ॥ 
ಸೇಶಸಂಸ್ಥಾ ರಕಂ ಚೈವ ಕರಕರ್ಣಾದಿಭೂಷಣಂ ! 

ಭರ್ತುರಾಯುಷ್ಯ ನಿಜ ೈಂತೀ ದೂರಯೇನ್ನ ಪತಿವ್ರತಾ ॥೨೯॥ 
ಭರ್ತೃವಿದ್ದೆ ಹಿಣೀಂ ನಾರೀಂ ನೈಷಾ ಸಂಭಾಷತೇ p ಚಿತ್‌ । 

ನೈಕಾಕಿನೀ ಕೃಜಿದ್ಭೂಯಾನ್ನ ನಗ್ನಾ ಸ್ನಾತಿಚೆ ಕ್ಟ ಚಿತ್‌ ॥೩೦॥ 
ನೋಲೂಖಲೇ ನ ಮುಸಲೇ ನ ವರ್ಥನ್ಯಾಂ ದೃ ಸದ್ಯ ಏ। 

ನ ಯಂತ್ರಕೇ ನ ದೇಹಲಾ ಲ್ಯಾಂ ಸತೀ ಚೋಷವಿಕೇತ್ಕಚಿತ್‌ Wao 
ವಿನಾ ವ್ಯ ಯತರ? ಶ್ರಾಗಲ್ಭ್ಯಂ ನ ಕೃಚಿಚ್ಚರೇತ್‌ । 

ಯತ್ರ ಯತ್ರ ರುಚಿರ್ಭರ್ತುಸ್ತತ್ರ ಪ್ರೇಮನತೀ ಸದಾ ॥ ೩೨೪ 


ಅಡ್ಡಿ ಗಳು ಒದಗಿದರೂ ಎಬ್ಬಿಸಕೂಡದು. ತಾನು ರಜಸ್ವಲೆಯಾಗಿರುವಾಗ 
ಮೂರು ರಾತ್ರಿ ತನ್ನ ಮುಖವನ್ನು ತೋರಿಸಕೂಡದು. 

೨೭. ಸ್ನಾನಮಾಡಿ ಶುದ್ಧಳಾಗುವವರೆಗೂ ಪತಿಯೊಡನೆ ಮಾತನಾಡ 
ಬಾರದು. ಸ್ನಾನಮಾಡಿ ಪತಿಯ ಮುಖವನ್ನು ನೋಡಬೇಕು. ಪರರ ಮುಖ 
ವನ್ನು ನೋಡಕೂಡದು. ಅಥವಾ ಹಾಗೆ ನೋಡಿದರೂ ಗಂಡನನ್ನು ಮನಸ್ಸಿನಲ್ಲಿ 
ಚಿಂತಿಸಿ ಸೂರ್ಯನನ್ನು ಈಕ್ಸಿಸಬೇಕು. 

೨೮-೨೯. ಪತಿವ್ರತೆಯು ಅರಿಸಿನ ಕುಂಕುಮ, ಸಿಂದೂರ್ಕ, ಕಾಡಿಗೆ, 
ಕುಪ್ಪಸ, ತಾಂಬೂಲ, ಮಂಗಳಾಭರಣ, ತಲೆಬಾಚಿಕೊಳ್ಳುವುದು, ಕೈ 
ಮತ್ತು ಕಿವಿಗಳ ಒಡವೆಗಳು ಇವುಗಳನ್ನು ಪತಿಯ ಆಯುಷ್ಯದ ವೃದ್ಧಿಗಾಗಿ 
ತ್ಯಜಿಸಕೂಡದು. 

೩೦. ಅವಳು ಗಂಡನನ್ನು ದ್ವೇಷಿಸುವ ಹೆಂಗಸಿನೊಡನೆ ಮಾತಾಡ 
ಕೂಡದು. ಒಬ್ಬಂಟಗಳಾಗಿ ಎಲ್ಲಿಯೂ ಮಾತಾಡಬಾರದು. ಬತ್ತಲೆಯಾಗಿ 
ಸ್ಲಾನಮಾಡಬಾರದು. 

೩೧. ಒರಳು, ಒನಕೆ, ಈಳಿಗೆಮಣೆ ಅಥವಾ ಮಡಿಕೆ, ಬೀಸುವಕಲ್ಲು, 
ಯಂತ್ರ, ಹೊಸಲುಗಳಲ್ಲಿ ಕುಳಿತುಕೊಳ್ಳ ಕೂಡದು. 

೩೨. ಕೂಡುವ ಸಮಯನ್ನು ಬಿಟ್ಟು ಬೇಕಿಲ್ಲಿಯೂ ತನ್ನ ಧಾಷ್ಟ ವನ್ನು 
ತೋರಿಸಬಾರದು. ಗಂಡನಿಗೆ ಪಿ ್ರ್ರಯವಾದವುಗಳಲ್ಲೆಲ್ಲ ಲ ತಾನೂ ಪ್ರಿ (ತಿಯುಳ್ಳ ವ 
ಳಾಗಿರಬೇಕು. 


ಸಪ್ತನೋಕಿಥ್ಠಾ ಯಃ ೯೯ 


ಇದನೇವ ವ್ರತಂ ಸ್ತ್ರೀಣಾಮುಯಮೇವ ಪರೋ ವೃಷಃ । 

ಇಯಮೇನ ಚ ಪೂಜಾ ಚ ಭರ್ತುರ್ವಾಕ್ಕಂ ನಲಂಘಯೇತ್‌ ॥ ೩೩॥ 
ಕ್ಲೀಬಂ ನಾ ದುರವಸ್ಥಂ ನಾ ವ್ಯಾಧಿತಂ ವೃ ದೃಮೇವ ವಾ। 

ಸುಸ್ಥಿ ರಂ ದುಃಸ್ಲಿರಂ ನಾಪಿ ಪತಿಸೇಕಂ ನ ಲಿಂಘಯೇತ್‌ ॥ ೩೪॥ 
ಸರ್ಪಿರ್ಲನಣಬಂಗ್ಟಾ ದಿ ಕ್ಸಯೇಪಿ ಚ ಪತಿವ್ರತಾ। 

ಪತಿಂ ನಾಸ್ತೀತಿ ನ ಬ್ರೂ ಯಾಡಾಯಸೀಷು ನ ಭೋಜಯೇತ್‌ ॥ ೩೫ ॥ 
ತೀರ್ಥಸ್ನಾನಾಂರ್ಥಿನೀ ಚೈವ ಪತಿಷಾದೋದಕಂ ಪಿಬೇತ್‌ । 


ಶಂಕರಾದನಿ ನಾ ವಿಷ್ಣೋಃ ಪತಿಕೇವಾಧಿಕಃ ಸ್ತ್ರಿಯಃ ॥ ೩೬ಯ 
ವ್ರತೋಪನಾಸನಿಯಮಂ ಪತಿಮುಲ್ಲಂಘ್ಯ ಯಾ ಚರೇತ್‌ । 

ಆಯುಷ್ಯಂ ಹರತೇ ಭರ್ತುರ್ಮುತಾ ನಿರಯಮೃಚ್ಛತಿ 1 ೩೭॥ 
ಉಕ್ತಾ ಪ್ರತ್ಯುತ್ತರಂ ದದ್ಯಾನ್ನಾರೀ ಯಾ ಕ್ರೋಧತತ್ಪರಾ । 

ಸರಮಾ ಜಾಯತೇ ಗ್ರಾಮೇ ಸೃಗಾಲೀ ನಿರ್ಜನೇ ನನೇ ॥ ೩೮ ॥ 
ಸ್ತ್ರೀಣಾಂ ಹಿ ಪರಮಶ್ಚೈಕೋ ನಿಯಮಃ ಸಮುದಾಹೃತಃ I 

ಅಭ್ಯರ್ಚ್ಯ ಚರಣೌ ಭರ್ತುರ್ಭೋಕ್ತನ್ಯಂ ಕೃತನಿಶ್ಚಯಾ ॥೩೯॥ 





೩೩-೩೪. ಪತಿವ್ರತೆಗೆ ಇದೇ ನಿಯಮ, ಇದೇ ಉತ್ತಮವಾದ ಧರ್ಮ, 
ಇದೇ ಪೂಜೆ. ಗಂಡನ ಮಾತನ್ನು ಯಾವಾಗಲೂ ಮಾರಬಾರದು. ಪತಿಯ: 
ನಪುಂಸಕನಾಗಲಿ, ದುರವಸ್ಥೆ ಯುಳ್ಳವನಾಗಲಿ, ಕೋಗಿಯಾಗಲಿ, ಮುದುಳ 
ನಾಗಲಿ, ದೃಢಕಾಯನಾಗಲಿ, ನಿರ್ಬಲನಾಗಲಿ ಅವನನ್ನು ಬಿಡಕೂಡದು. 

೩೫-೩೬, ಮನೆಯಲ್ಲಿರುವ ತುಪ್ಪ, ಉಪ್ಪು, ಹಿಂಗುಗಳು ಇವೇ ಮೊದ 
ಲಾದವು ಮುಗಿದಾಗ್ಲೂ ಊಟಮಾಡುವಾಗ ಇಲ್ಲವೆಂದು ಗಂಡನಿಗೆ ಹೇಳ 
ಬಾರದು. ಕಬ್ಬಿಣದ ಪಾತ್ರೆಗಳಲ್ಲಿ ಬಡಿಸಬಾರದು. ಪತಿವ್ರತೆಗೆ ತೀರ್ಥಸ್ನಾನ 
ಮಾಡಬೇಕೆಂದಪೇಕ್ಷೆಯಾದರೆ ಪತಿಯ ಪಾದೋದಕವನ್ನು ಕುಡಿಯಬೇಕು. 
ಹೆಂಗಸಿಗೆ ಶಂಕರ ನಿಷ್ಣುಗಳಿಗಿಂತಲೂ ಗಂಡನೇ ಅಧಿಕನು. 

೩೭. ಗಂಡನನ್ನು ಮಾರಿ ಯಾವಳು ವ್ರತೋಪವಾಸ ನಿಯಮಗಳನ್ನು 
ಮಾಡುವಳೊ, ಅವಳು ಗಂಡನ ಆಯುಸ್ಸನ್ನು ಅಪಹರಿಸುವಳು. ತಾನೂ 
ಮೃ ತಳಾದ ಮೇಲೆ ನರಕವನೆ ಥಿ ದುವಳು. 

೩೮. ಯಾವ ಹೆಂಗಸು ಕೋಪದಿಂದ ಪತಿಯು ಹೇಳಿದ್ದಕ್ಕೆ ಪ್ರತ್ಯುತ್ತರ 
ವನ್ನು ಕೊಡುವಳೊ, ಅವಳು ಗ್ರಾಮದಲ್ಲಿ ಹೆಣ್ಣು ನಾಯಿಯಾಗಿಯೂ, 
ನಿರ್ಜನವಾದ ಕಾಡಿನಲ್ಲಿ ಹೆಣ್ಣು ನರಿಯಾಗಿಯೂ ಹುಟ್ಟುವಳು. 

೩೯. ಹೆಂಗಸು ನಿಶ್ಚ ಲಮನಸ್ಸಿಥಿಂದ ಗಂಡನ ಪಾದವನ್ನು ಪೂಜಿಸಿ 
ಊಟಮಾಡಬೇಕು. ಇದು ಅವಳಿಗೆ ಅತ್ಯುತ್ತಮವ್ರತವೆಂದು ಹೇಳಿದೆ. 


೧೦೦ ಶ್ರೀ ಸ್ಕಾಂನನುಶಾಷುಕಾಣಂ 


ಉಚ್ಚಾಸನಂ ನ ಸೇವೇತ ನ ನ್ರಜೇತ್ಛರವೇಶಕ್ಮಸು । 

ತತ್ರ ಸಾರುಷ್ಯವಾಕ್ಕಾನಿ ಬ್ರೂಯಾನ್ನೈನ ಕದಾಚನ ॥೪೦॥ 
ಗುರೂಣಾಂ ಸನ್ನಿಧೌ ವಾಸಿ ನೋಚ್ಚೈರ್ಬ್ರೂಯಾನ್ನನಾಹಯೇತ್‌ ॥೪೧॥ 
ಯಾ ಭರ್ತಾರಂ ಪರಿತ್ಯಜ್ಯ ರಹಶ್ಚರತಿ ದುರ್ಮತಿಃ । 

ಉಲೂಕೀ ಜಾಯತೇ ಕ್ರೂರಾ ವೃಕ್ಸಕೋಟರಶಾಯಿನೀ ॥ ೪೨ ॥ 
ತಾಡಿತಾ ತಾಡಯೇಚ್ಚೇತ್ತಂ ಸಾ ವ್ಯಾಫ್ರೀ ಪೃಷದಂಶಿಕಾ । 

ಕಟಾಕ್ಸಯತಿ ಯಾಃನ್ಯಂ ನೈ ಕೇಕರಾಕ್ಸೀ ತು ಸಾ ಭವೇತ್‌ ॥ ೪೩ ॥ 
ಯಾ ಭರ್ತಾರಂ ಪರಿತ್ಯಜ್ಯ ಮಿಷ್ಟಮಶ್ನಾತಿ ಕೇನಲಂ | 

ಸಾ ಗ್ರಾಮೇ ಸೂಕರೀ ಭೂಯಾದ್ವಲ್ಲುಲೀ ನಾಥ ನಿಜ್ಛುಜಾ ॥೪೪॥ 
ಹುನ್ಹ್ಹಂ ಕೃತ್ವಾಂಪ್ರಿಯಂ ಬ್ರೂತೇ ಮೂಕಾ ಸಾ ಜಾಯತೇ ಖಲು | 
ಯಾ ಸಪತ್ನೀಂ ಸದೇರ್ಷೈೇತ ದುರ್ಭಗಾ ಸಾ ಪುನಃ ಪುನಃ । 

ದೃಷ್ಟಿಂ ನಿಲುಪ್ಯ ಭರ್ತುರ್ಯಾ ಕಂಚಿದನ್ಯಂ ಸಮಿನಾಕ್ಟೃತೇ 1 ೪೫॥ 
ಕಾಣಾಚ ನಿಮುಖಾ ವಾಪಿ ಕುರುಪಾಪಿ ಚ ಜಾಯತೇ! 
ಬಾಹ್ಯಾದಾಯಾಂತಮಾಲೋಕ್ಯ ತೃರಿತಾಚ ಜಲಾಸಸೈಃ | 
ತಾಂಬೂಲೈರ್ವ್ಯಜನೈಶ್ಚೆೈವ ಪಾದಸಂವಾಹನಾದಿಭಿಃ ॥ ೪೬ ॥ 

೪೦. ಗಂಡನಿಗಿಂತ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬಾರದು. 
ಪರರ ಮನೆಗೆ ಹೋಗಬಾರದು. ಹೋದರೂ ಅಲ್ಲಿ ಕಠಿನವಾದ ಮಾತುಗಳನ್ನು 
ಒಂದುವೇಳೆಯೂ ಆಡಬಾರದು. 

೪೧-೪೨. ಗುರುಗಳ ಹತ್ತಿರ ಘಟ್ಟಯಾಗಿ ಮಾತಾಡಬಾರದು. ವಾಹನ 
ದಲ್ಲಿ ಸಂಚರಿಸಲೂಬಾರದು. ದುಷ್ಟಳಾದ ಯಾವ ಹೆಂಗಸು ಪತಿಯನ್ನು ತ್ಯಜಿಸಿ 
ಗುಟ್ಟಾಗಿ ಸಂಚರಿಸುವಳೊ, ಅವಳು ಮರದ ಪೊಟರೆಯಲ್ಲಿ ವಾಸಿಸುವ 
ಮೊರಟು ಗೂಬೆಯಾಗಿ ಹುಟ್ಟುವಳು. 

೪೩. ಗಂಡನು ಹೊಡೆದರೆ ಅವನನ್ನು ತಿರುಗಿ ಹೊಡೆಯುವ ಹೆಂಗಸು 
ಹೆಣ್ಣು ಹುಲಿಯೂ, ಹೆಣ್ಣು ಬೆಕ್ಕೂ ಆಗಿ ಹುಟ್ಟುವಳು. ಯಾವಳು ಪರಪುರು 
ಷನನ್ನು ಕಟಾಕ್ಸಿಸುವಳೊ, ಅವಳು ಮೆಲ್ಲಗಣ್ಣಿನವಳಾಗುವಳು. 

೪೪. ಪತಿಯನ್ನು ಬಿಟ್ಟು ತಾನೊಬ್ಬಳೆ ಮೃಷ್ಟಾನ್ನವನ್ನು ಭುಂಜಿಸು 
ವವಳು ಗ್ರಾಮದಲ್ಲಿ ಹೆಣ್ಣು ಹಂದಿ ಅಥವಾ ಹೆಣ್ಣು ನಾಯಿಯಾಗಿ ಜನಿಸುವಳು. 

೪೫-೪೮. ಪತಿಗೆ ಹುಂಕಾರದಿಂದ ಅಪ್ರಿಯವನ್ನಾಡುವವಳು ಮೂಕಳಾ 
ಗುವಳು. ಸವತಿಯಲ್ಲಿ ಯಾವಾಗಲೂ ತಿರುತಿರುಗಿ ಅಸೂಯೆ ಸಡುವವಳು 
ದೌರ್ಭಾಗ್ಯವುಳ್ಳವಳಾಗುವಳು. ಗಂಡನ ಕಣ್ಣನ್ನು ಮರೆಸಿ ಪರಪುರುಷನನ್ನು 
ನೋಡುವವಳು ಕುರುಡಿ ಅಥವಾ ಕುರೂಪಿನಿಯಾಗುವಳು. ಹೊರಗಿನಿಂದ 


: ಸಪ್ತನೋ5ಧ್ಯಾಯ। ೧೦6 


ತಥೈವ ಚಾರುವಚನೈಃ ಸ್ಟೇದಸನ್ನೋದನೈಃ ಪರೈಃ । 

ಯಾ ಪ್ರಿಯಂ ಪ್ರೀಣಯೇತ್ರೀತಾ ತ್ರಿಲೋಕೀ ಪ್ರಿ ಚಟ ತಯಾ | 

ಮಿತಂ `ಔದಾತಿ ಹಿ ಪಿತಾ ಮಿತಂ ಭ್ರಾತಾ ಸುತಂ ಸುತಃ 1 ೪೭ ॥ 
ಅಮಿತಸ್ಯಹಿ ದಾತಾರಂ ಭರ್ತಾರಂ ಕಾ ನ ಪೂಜಯೇತ್‌ । 

ಭರ್ತಾ ದೇವೋ ಗುರುರ್ಭರ್ತಾ ಧರ್ಮಸ್ತೀರ್ಥವ್ರತಾನಿ ಚ । 


ತಸ್ಮಾತ್ಸರ್ವಂ ಪರಿತ್ಯಜ್ಯ ಪತಿಮೇಕಂ ಸಮರ್ಚಯೇತ್‌ ॥ ೪೮ 8 
ಜೀನಹೀನೋ ಯಥಾ ದೇಹೀ ಕ್ಪಣಾದಶುಚಿತಾಂ ವ್ರಜೇತ್‌ । 
ಭರ್ತೃಹೀನಾ ತಥಾ ಯೋಷಿತ್ಸುಸ್ನಾತಾಃ ಪೃಶುಚಿಃ ಸದಾ ॥೪೯॥ 
ಅಮಂಗಲೇಭ್ಯಃ ಸರ್ನೇಭ್ಯೋ ನಿಧವಾ ಸ್ಕಾದಮಂಗಲಾ । 
ವಿಧವಾದರ್ಶನಾತ್ಸಿದ್ಧಿಃ ಕ್ವಾಪಿ ಜಾತು ನ ಜಾಯತೇ ॥೫೦॥ 
ವಿಹಾಯ ಮಾತರಂ ಚೈಕಾಂ ಸರ್ವಾಮಂಗಲವರ್ಜಿತಾಃ । 

ತದಾಶಿಷಮನಿ ಪ್ರಾ ಜ್ಞ ಸ್ಯ ಜೇದಾಶೀವಿಷೋಪಮಾಂ u ೫೧॥ 


ಕನ್ಯಾನಿವಾಹಸಮಯೇ. ನಾಚಯೇಯುರಿತಿ ದ್ವಿಜಾಃ । 
ಭರ್ತುಃ ಸಹಚರೀ ಭೂಯಾಜ್ಚಿ ೇವತೋಜೀವತೋಷಿ ವಾ ॥ಜ೨॥ 


ಬರುತ್ತಿರುವ ಗಂಡನನನ್ನು ನೋಡಿ ಯಾವಳು ಜಾಗ್ರತೆಯಾಗಿ ಪ್ರೀತಿಯಿಂದ 
ನೀರು, ಆಸನ, ತಾಂಬೂಲ, ಬೀಸಣಿಗೆ, ಇವುಗಳಿಂದಲೂ, ಕಾಲು ಒತ್ತು 
ವುದು, ಒಳ್ಳೆಯ ಮಾತನ್ನಾಡುವುದು, ಬೆವರನ್ನೊರಿಸುವುದು ಇವುಗಳಿಂದಲೂ 
ಅವನನ್ನು REE ತಳೊ, ಅವಳು ಮೂರುಲೋಕಗಳನ್ನೂ ಸಂತೋಷ 
ಪಡಿಸಿದವಳಂತಾಗುವಳು. ತಂದೆ, ಸಹೋದರ ಮತ್ತು ಮಕ್ಕಳು ಇವರೆಲ್ಲರೂ 
ಇಷ್ಟವಾದುದನ್ನು ಮಿತವಾಗಿ ಕೊಡುವರು. ಗಂಡನು ಇಷ್ಟವಾದುದನ್ನು 
ಅಮಿತವಾಗಿ ಕೊಡುವನಾದುದರಿಂದ ಅವನನ್ನು ಯಾವ ಹೆಂಡತಿಯು ತಾನೆ 
ಪೂಜಿಸಲಾರಳು. ಗಂಡನೇ ದೇವರು, ಗುರುವು, ಧರ್ಮ, ತೀರ್ಥ, ವ್ರತಗಳು. 
ಆದುದರಿಂದ ಎಲ್ಲವನ್ನೂ ಬಿಟ್ಟು ಗಂಡನನ್ನೊಬ್ಬನನ್ನೇ ಪೂಜಿಸಬೇಕು. 

೪೯, ಜೀವವಿಲ್ಲದ ಪ್ರಾಣಿಯು ಕೂಡಲೆ ಅಶುಚಿಯಾಗುವಂತೆ ಗಂಡನಿಲ್ಲದ 
ಹೆಂಗಸು ಸ್ಲಾನಮಾಡಿದಾಗ್ಲೂ ಯಾವಾಗಲೂ ಅಶುದ್ದಳೇ. 

೫೦. ವಿಧನೆಯು ಸಕಲ ಅಮಂಗಳ ವಸ್ತುಗಳಿಗಿಂತಲೂ ಅಮಂಗಳ 
ಕರಳು. ವಿಧವೆಯನ್ನು ನೋಡಿದರೆ ಎಲ್ಲಿಯೂ ಯಾವ ಕೆಲಸವೂ ಸಿದ್ಧಿಸುವುದಿಲ್ಲ. 

೫೧-೫೨. ವಿಧವೆಯಾದ ತಾಯಿಯೊಬ್ಬಳನ್ನು ಬಿಟ್ಟು ಉಳಿದ ವಿಧವೆ 
ಯರೆಲ್ಲರೂ ಅಮಂಗಳರು. ಜಾಣನಾದವನು ಸರ್ಪದಂತಿರುವ ಆ ವಿಧವೆಯರ 
ಆಶೀರ್ವಾದವನ್ನು ಸರಿಗ್ರಹಿಸಕೂಡದು. ಬ್ರಾಹ್ಮಣರು ಕನ್ಯೆಯ ಮದುವೆಯ 
ಕಾಲದಲ್ಲಿ ""ಗಂಡನು ಜೀವಿಸಿರಲಿ, ಅಥವಾ ಮೃತನಾಗಲಿ ಅವನಿಗೆ ನೀನು 
ಸಹಚಾರಿಣಿಯಾಗು?'' ಎಂದು ಹೇಳುವರು. 





ಕಿಂ೨ ಶ್ರೀ ಸ್ಕಾಂದಮುಹಾಫುಕಾಣಂ 


ಅನುವ್ರಜಂತೀ ಭರ್ತಾರಂ ಗೃಹಾತ್ಛಿತೃವನಂ ಮುದಾ । 


ಪದೇಪದೇಃಶ್ವಮೇಧಸ್ಯ ಫಲಂ ಪ್ರಾಪ್ನೋತ್ಯಸಂಶಯಂ ॥ ೫೩ ॥ 
ವ್ಯಾಲಗ್ರಾಹೀ ಯಥಾವ್ಯಾಲಂ ಬಲಾದುದ್ಧರತೇ ಬಿಲಾತ್‌ । 

ಏನಮುತ್ಯ್ಪನ್ಯ ದೂತೇಭ್ಯಃ ಪತಿಂ ಸ್ವರ್ಗಂ ವ್ರಜೇತ್ಸತೀ ॥ ೫೪ ॥ 
ಯಮದೂತಾಃ ಪಲಾಯಂತೇ ತಾಮಾಲೋಕ್ಕ್ಯ ಪತಿವ್ರತಾಂ । 
ತಪನಸ್ತಪ್ಯತೇ ನೂನಂ ದಹನೋಸಿ ಚ ದಹ್ಯತೇ ॥ ೫೫ ॥ 


ಕಂಪಂತೇ ಸರ್ವತೇಜಾಂಸಿ ದೃಷ್ಟ್ವಾ ಸಾತಿನ್ರತಂ ಮಹಃ । 
ಯಾನತ್ಸೃಲೋಮಸಂಖ್ಯಾಸ್ತಿ ತಾನತ್ಕೋಟ್ಯಯುತಾನಿ ಚ ॥ ೫೬॥ 
ಭರ್ತ್ರಾ ಸ್ವರ್ಗಸುಖಂ ಭುಂಕ್ತೇ ರಮಮಾಣಾ ಪತಿವ್ರತಾ । 

ಧನ್ಯಾ ಸಾ ಜನನೀ ಲೋಕೇ ಧನ್ಯ್ಕೋಸೌ ಜನಕಃ ಪುನಃ ॥ ೫೭ 
ಧನ್ಯಃ ಸ ಚ ಪತಿಃ ಶ್ರೀಮಾನ್ಯೇಷಾಂ ಗೇಹೇ ಪತಿವ್ರತಾ । 

ಪಿತೃನಂಶ್ಯಾ ಮಾತೃವಂಶ್ಯಾಃ ಪತಿನಂಶ್ಯಾಸ್ತ್ರಯಸ್ತ್ರಯಃ | 


ಸತಿವ್ರತಾಯಾಃ ಪುಣ್ಯೇನ ಸ್ಪರ್ಗಸೌಖ್ಯಾನಿ ಭುಂಜತೇ ॥ ೫೮ - 
ಶೀಲಭಂಗೇನ ದುರ್ವೃತ್ತಾಃ ಪಾತಯಂತಿ ಕುಲತ್ರಯಂ | 
ಸಿತುರ್ಮಾತುಸ್ತಥಾ ಪತ್ಯುರಿಹಾಂಮುತ್ರ ಚ ದುಃಖಿತಾಃ ॥೫೯॥ 





೫೩. ಮನೆಯಿಂದ ಸ್ಮಶಾನದವರೆಗೆ ಮೃತಪತಿಯನ್ನು ಹಿಂಬಾಲಿಸುವ 
ಹೆಂಗಸು ನಿಶ್ಚಯವಾಗಿ ಪ್ರತಿಹೆಜ್ಜೆಯಲ್ಲಿಯೂ ಅಶ್ವನೇಧಯಾಗದ ಫಲವನ್ನು 
ಹೊಂದುವಳು. 

೫೪. ಹಾವಾಡಿಗನು ಹಾವನ್ನು ಬಿಲದಿಂದ ಹೊರಗೆಳೆಯುವಂತೆ 
ಪತಿವ್ರತೆಯು ಪತಿಯನ್ನು ಯಮದೂತರಿಂದ ಸೆಳೆದು ಸ್ವರ್ಗಕ್ಕೆ ಕಳುಹಿಸುವಳು. 

೫೫. ಆ ಪತಿವ್ರತೆಯನ್ನು ನೋಡಿ ಯಮದೂತರು ಓಡಿಹೋಗುವರು. 
ಸೂರ್ಯನೂ ತಪಿಸಿಹೋಗುವನು. ಬೆಂಕಿಯೂ ದಗ್ಗವಾಗುವುದು. 

೫೬-೫೮. ಪತಿವ್ರತೆಯ ತೇಜಸ್ಸನ್ನು ಕಂಡು ಸಕಲ ತೇಜಸ್ಸುಗಳೂ 
ನಡುಗುವುವು. ಪತಿವ್ರತೆಯು ತನ್ನ ರೋಮಸಂಖ್ಯೆಗೆ ಸರಿಯಾಗಿ ಅಯುತಕೋಟ 
ವರ್ಷಗಳ ಕಾಲ ಗಂಡನೊಡನೆ ನಿನೋದಸಡುತ್ತ ಸ್ವರ್ಗಸೌಖ್ಯವನ್ನನುಭವಿಸು 
ವಳು. ಪತಿವ್ರತೆಯ ತಾಯಿಯೂ, ತಂದೆಯೂ, ಪತಿಯೂ ಪುಣ್ಯವಂತರು. 
ಪತಿವ್ರತೆಯ ಪುಣ್ಯದಿಂದ ಅವಳ ತಂದೆ, ತಾಯಿ, ಪತಿಯ ವಂಶದ ಮೂರು 
ಮೂರು ಮಂದಿ ಪಿತೃಗಳೂ ಸ್ವರ್ಗಸೌಖ್ಯಗಳನ್ನನುಭವಿಸುವರು. 

೫೯. ಹೆಂಗಸರು ತಮ್ಮ ನಡತೆಗಳನ್ನು ಕೆಡಿಸಿಕೊಂಡು ದುರ್ಮಾರ್ಗ 
ಗಾಮಿನಿಯರಾದರೆ ಅವರು ತಮ್ಮ ತಾಯಿ, ತಂದೆ ಮತ್ತು ಪತಿಯ ಕುಲಗಳನ್ನು 
ಕೆಡಿಸುವುದಲ್ಲದೆ ತಾವೂ ಇಹಪರಗಳಲ್ಲಿ ದುಃಖಸಡುವರು. 


ಸಪ್ರಮೋರಧ್ಯಾಯಃ ಗಿರಿ 


ಪತಿವ್ರತಾಯಾಶ್ಚರಣೋ ಯತ್ರಯತ್ರ ಸ್ಪೃಶೇಷ್ಟುವಂ ) 

ಸಾ ತೀರ್ಥಭೂನಿರ್ಮಾನ್ಯೇತಿ ನಾತ್ರ ಭಾರೋಸಸ್ತಿ ಪಾನನಃ 1 ೬೦॥ 
ಬಿಭ್ಯತ್ಪತಿವ್ರತಾಸ್ಪರ್ಶಂ ಕುರುತೇ ಭಾನುಮಾನಸಿ । 

ಸೋಮೋ ಗಂಧರ್ವ ಏವಾಿ ಸ್ವಸಾನಿತ್ರ್ಯಾಯ ನಾನ್ಯಥಾ ೬೧೩ 
ಆಸಃ ಪತಿವ್ರತಾಸ್ಪರ್ಶಮಭಲಷ್ಯಂತಿ ಸರ್ವದಾ । 
ಗಾಯತ್ರ್ಯಾಂಘವಿನಾಶೋ ನೋ ಪಾತಿವ್ರತ್ಯೇನ ಸಾಂಘನುತ್‌ ೫ ೬೨ ೫ 
ಗೃಹೇ ಗೃಹೇ ನ ಕಂ ನಾರ್ಯೋ ರೂಪಲಾನಣ್ಯಗರ್ನಿತಾಃ | 

ಪರಂ ನಿಶ್ವೇಶಭಕ್ರೈವ ಲಭ್ಯತೇ ಸ್ತ್ರೀ ಪತಿವ್ರತಾ ॥೬೩॥ 
ಭಾರ್ಯಾ ಮೂಲಂ ಗೃಹಸ್ಮಸ್ಯ ಭಾರ್ಯಾ ಮೂಲಂ ಸುಖಸ್ಯ ಚ । 
ಭಾರ್ಯಾ ಧರ್ಮಫಲಾಯೈನ ಭಾರ್ಯಾ ಸಂತಾನವೃದ್ಧಯೇ ॥ ೬೪.4 
ಪರಲೋಕಸ್ತ್ವಯಂ ಲೋಕೋ ಜೀಯತೇ ಭಾರ್ಯಯಾ ದ್ವಯಂ 1 
ದೇವಪಿತ್ರತಿಥೀನಾಂ ಚ ತೃಪ್ತಿಃ ಸ್ಯಾದ್ಭಾರ್ಯಯಾ ಗೃಹೇ। 

ಗೃಹಸ್ಥಃ ಸತು ನಿಜ್ಞೇಯೋ ಗೃಹೇ ಯಸ್ಯ ಪತಿವ್ರತಾ 1 ೬೫॥ 





೬೦. ಪತಿವ್ರತೆಯ ಪಾದಗಳು ಎಲ್ಲಿ ಎಲ್ಲಿ ಭೂಮಿಯನ್ನು ಸ್ಪರ್ಶಿಸುವುವೊ 
ಆ ಸ್ಥಳವು ಪೂಜ್ಯವಾದ ತೀರ್ಥಭೂಮಿಯಾಗುವುದು. ಪವಿತ್ರವಾದುದು 
ಎಂದಿಗೂ ಭಾರವಾಗುವುದಿಲ್ಲ. 

೬೧. ಸೂರ್ಯನೂ ಹೆದರುತ್ತಲೇ ಪತಿವ್ರತೆಯನ್ನು ಮುಟ್ಟುವವನು. 
ಚಂದ್ರನೂ, ಗಂಧರ್ವನೂ ತಮ್ಮಶುದ್ಧಿಗಾಗಿಯೆ ಪತಿವ್ರತೆಯನ್ನು ಮುಟ್ಟುವರು. 

೬೨. ನೀರು ಯಾವಾಗಲೂ ಪತಿವ್ರತೆಯ ಸ್ಪರ್ಶವನ್ನು ಅಪೇಕ್ಸಿಸುವುದು. 
ಗಾಯತ್ರಿ ಯು ಪಾಪವನ್ನು ಹೋಗಲಾಡಿಸುವುದಿಲ್ಲ; ಪತಿವ್ರತೆಯು ತನ್ನ 
ಪಾತಿವ್ರತ್ಯದಿಂದ ಪಾಪವನ್ನು ಪರಿಹರಿಸುವಳು. 

೬೩. ಪ್ರತಿಯೊಂದು ಮನೆಯಲ್ಲಿಯೂ ಸೌಂದರ್ಯದಿಂದ ಅಹಂಕಾರ 
ಗೊಂಡ ಹೆಂಗಸರಿಲ್ಲವೇನು? ಆದರೆ ಮಾನವನಿಗೆ ಪರಮೇಶ್ವರನಲ್ಲಿಯ ಭಕ್ತಿ 
ಯಿಂದಲೇ ಪತಿವ್ರತೆಯಾದ ಪಶ್ಚಿಯು ದೊರಕುವಳು. 

೬೪. ಗೃಹಸ್ಥನಿಗೆ ಹೆಂಡತಿಯೇ ಗಾರ್ಹಸ್ಥ್ಯಕ್ಕೂ, ಸುಖಕ್ಕೂ, ಧರ್ಮ 
ಫಲಕ್ಕೂ, ಸಂತತಿವೃದ್ಧಿಗೂ ಕಾರಣಳು. 

೬೫. ಪತಿಯು ಹೆಂಡತಿಯಿಂದಲೇ ಇಹಪರಲೋಕಗಳನ್ನು ಗೆಲ್ಲುವನು. 
ಮನೆಯಲ್ಲಿ ಪಶ್ನಿಯಿಂದಲೇ ದೇವತೆಗಳಿಗೂ, ನಿತ್ಯಗಳಿಗೂ, ಅತಿಥಿಗಳಿಗೂ 
ತೃಪ್ತಿಯಾಗುವುದು. ಯಾವನ ಮನೆಯಲ್ಲಿ ಪತಿವ್ರತೆಯಿರುವಳೊ, ಅವನೇ 
ಗೃಹಸ್ಥನು. 


೧೦೪ ಶ್ರೀ ಸ್ಥಾಂಡಮಹಾಪುರಾಣಂ 


ಯಥಾ ಗಂಗಾಂ ನಗಾಹೇನ ಶರೀರಂ ಪಾವನಂ ಭವೇತ್‌ । 


ತಥಾ ಪತಿವ್ರತಾಂ ದೃಷ್ಟ್ವಾ ಸದನಂ ಪಾವನಂ ಭವೇತ್‌ ॥ ೬] 
ಪೇರ್ಯಂಕಶಾಯಿನೀ ನಾರೀ ವಿಧವಾ ಪಾತಯೇತ್ಪತಿಂ । 

ತಸ್ಮಾ ದ್ಭೂ ಶಯನಂ ಕಾರ್ಯಂ ಪತಿಸೌಖ್ಯ ಸಮಾಹಯಾ ॥ ೬। 
ನೈವಾಂಗೋದ್ದ ರ್ತನಂ ಕಾರ್ಯಂ ಸ್ತ್ರ ಈ ನಿಧವಯಾ ಕ್ವಚಿತ್‌ । 
ಗಂಧದ ದ್ರವ್ಯಸ್ಯ ಸಂಭೋಗೋ ನೈವಕಾರ್ಯಸ್ತ ಯಾ ಕ್ಸ್‌ ಜಿಫ್‌ ॥ ೬೮ 
ತರ್ಪಣಂ ಪ್ರತ್ಯಹಂ ಕಾರ್ಯಂ ಭರ್ತುಃ ಕುಶತಿಲೋದಕ್ಕೆ 81 
ತತ್ಪಿತುಸ್ತತ್ವಿ 'ತುಶ್ತಾ $ಪಿ ನಾಮಗೋತ್ರಾದಿ ಪೂರ್ವಕಂ ॥ ೬% 
ವಿಷ ನೀ ಸಂಪೂಜನಂ ಕಾರ್ಯಂ ಪತಿಬುದ್ಧಾ $ ನ ಚಾಂನ್ಯಥಾ। 
ಪತಿಮೇವ ಸದಾ ಧ್ಯಾಯೇದ್ವಿ ಷ್ಣ ರೂಪಧರಂ” ಕರು Hac 
ಯದ್ಯದಿಪ್ಪತಮಂ ಲೋಕೇ ಯಡ್ಯತ್ಪತ್ಯುಃ ಸಮಿಾಹಿತಂ । 
ತತ್ತದ್ಗುಣನತೇ ದೇಯಂ ಪತಿಪಿ ಪ್ರೀಣನಕಾಮ್ಯ ಯಾ ॥ ೭೧ 
ನೆಪ ೈಶಾಖೇ ಕಾರ್ತಿಕೇ ಮಾಸೇ ನಿಶೇಷನಿಯಮಾಂಶ್ಚ ಕೇತ್‌ । 

ಸ್ನಾನಂ ದಾನಂ ತೀರ್ಥಯಾತ್ರಾಂ ಪುರಾಣಶ್ರ ವಣಂ ಮುಹುಃ ॥ ೭೩ 


೬೬. ಗಂಗೆಯಲ್ಲಿ ಸ್ನಾನಮಾಡುವುದರಿಂದ ಶರೀರವು ಪವಿತ್ರವಾಗುತ್ತ 
ಪತಿವ್ರತೆಯನ್ನು ನೋಡಿದರೆಯೆ ಮನೆಯು ಪಾವನವಾಗುವುದು. 

೬೭-೬೯. ಮಂಚದಲ್ಲಿ ಮಲಗುವ ವಿಧವೆಯ ಗಂಡನನ್ನು ನರಃ 
ತಳ್ಳುವಳು. ಆದುದರಿಂದ ವಿಧವೆಯು ಪರಲೋಕದಲ್ಲಿ ಪತಿಯ ಸೌಖ್ಯಕೆ. 
ಸ್ಫರವೇ ಭೂಮಿಯಲ್ಲಿ ಮಲಗಬೇಕು. ವಿಧವೆಯು ಯಾವಾಗಲೂ ತನ್ನ ಆ 
ಗಳಿಗೆ ಲೇಪನ ದ್ರವ್ಯಗಳನ್ನು ಹೆಚ್ಚಿಕೊಳ್ಳ ಕೂಡದು. ಅವಳು ಸುವಾಸನೆ 
ವಸ್ತುಗಳನ್ನು ಉಪಯೋಗಿಸಬಾರದು, ವಿಧವೆಯು ದರ್ಭೆ, ಎಳ್ಳು, ನೀರುಗಳಿ 
ಪ್ರತಿದಿನವೂ ಗಂಡನಿಗೂ, ಅವನ ತಂದೆಗೂ, ಅಜ್ಜನಿಗೂ ನಾಮಗೋತೆ. 
ಚ್ಚಾರಣಪುರಸ್ಸರವಾಗಿ ತರ್ನಣಕೊಡಬೇಕು. 

೭೦. ಪತಿಯೆಂದು ತಿಳಿದು ವಿಷ್ಣುವನ್ನು ಪೂಜಿಸಬೇಕು. ವಿಷ್ಣುವ 
ವಿಷ್ಣುರೂಪಧಾರಿಯಾದ ಪತಿಯನ್ನಾಗಿಯೇ ಭಾವಿಸಿ ಧ್ಯಾನಿಸಬೇಕು. 

೭೧. ಲೋಕದಲ್ಲಿ ಗಂಡನಿಗೆ ಸಾ ಯಾವ ವಸ್ತುಗಳು ಪ್ರಿ 
ವಾದುವೊ, ಆಯಾ ವಸ್ತುಗಳನ್ನು ಗಂಡನ ಪ್ರಿ ಪ್ರೀತಿಯನ್ನು ಪಡೆಯಲೋಸ 
ಗುಣಶಾಲಿಯಾದ ಬ್ರಾಹ್ಮಣನಿಗೆ ದಾರನಾಕಣ[ಕು: 

೭೨. ವಿಧವೆಯು ವೈಶಾಖ, ಕಾರ್ತಿಕಮಾಸಗಳಲ್ಲಿ ಸ್ನಾನ, ದಾ 
ಕೀರ್ಥಯಾತ್ರೆ, ಪುರಾಣಶ್ರವಣ ರೂಪಗಳಾದ ವಿಶೇಷ ನಿಯಮಗಳನ್ನಾಚ 
ಬೇಕು. 


ಸಪ್ತನೋರಿಧ್ಯಾಯಃ ೧೦೩ 


ವೈಶಾಖೇ ಜಲಕುಂಭಾಶ್ಚ ಕಾರ್ತಿಕೇ ಫೃತದೀಸಿಕಾಃ । 


ಮಾಘೇ ಧಾನ್ಯತಿಲೋತ್ಸರ್ಗಃ ಸ್ವರ್ಗಲೋಕೇ ವಿಶಿಷ್ಯತೇ ॥ ೭೩ ॥ 
ಪ್ರಸಾ ಕಾರ್ಯಾಚ ನೈಶಾಖೇ ದೇನೇ ದೇಯಾ ಗಲಂತಿಕಾ । 

ಉಶೀರಂ ವ್ಯಜನಂ ಛತ್ರಂ ಸೂಕ್ಷ್ಮ್ಮನಾಸಾಂಸಿ ಚಂದನಂ ॥ ೭೪॥ 
ಸಕರ್ಪೂರಂ ಚ ತಾಂಬೂಲಂ ಪುಷ್ಪದಾನಂ ತಥೈವ ಚ । 
ಜಲಪಾತ್ರಾಣ್ಯನೇಕಾನಿ ತಥಾ ಪುಷ್ಪಗೃಹಾಣಿ ಚ ॥೭೫॥ 
ಪಾನಾನಿ ಚ ವಿಚಿತ್ರಾಣಿ ದ್ರಾಕ್ಸಾರಂಭಾಫಲಾನಿ ಚ । 

ದೇಯಾನಿ ದ್ವಿಜಮುಖ್ಯೇಭ್ಯಃ ಪತಿರ್ಮೇ ಪ್ರೀಯತಾಮಿತಿ ॥ ೭೬ ॥ 


ಊರ್ಜೇ ಯವಾಂನ್ನಮಶ್ಚೀಯಾದೇಕಾನ್ನಮಥವಾ ಪುನಃ । 

ವೃಂತಾಕಂ ಸೂರಣಂ ಚೈವ ಶೂಕಶಿಂಬೀಂ ಚ ವರ್ಜಯೇತ್‌ ॥೭೭॥ 
ಕಾರ್ತಿಕೇ ನರ್ಜಯೇತ್ರೈಲಂ ಕಾಂಸ್ಕಂ ಚಾಪಿ ವಿವರ್ಜಯೇತ್‌ । 
ಕಾರ್ತಿಕೇ ಮೌನನಿಯನೇ ಚಾರುಘಂಟಾಂ ಪ್ರದಾಸಯೇತ್‌ ॥ ೭೮ ॥ 
ಪತ್ರಭೋಜೀ ಕಾಂಸ್ಕಪಾತ್ರಂ ಫೃತಪೂರ್ಣಂ ಪ್ರಯಚ್ಛತಿ | 
ಭೂಮಿಶಯ್ಯಾವ್ರತೇ ದೇಯಾ ಶಯ್ಯಾ ಶ್ಲ ಕಾ ಸತೂಲಿಕಾ ॥ ೭೯॥ 


೭೩. ವೈಶಾಖಮಾಸದಲ್ಲಿ ನೀರಿನ ಕಲಶಗಳನ್ನೂ, ಕಾರ್ತಿಕಮಾಸದಲ್ಲಿ 
ತುಪ್ಪದ ದೀವಿಗೆಗಳನ್ನೂ, ಮಾಘಮಾಸದಲ್ಲಿ ಧಾನ್ಯ ಮತ್ತು ಎಳ್ಳುಗಳನ್ನೂ 
ದಾನಮಾಡಿದರೆ ಅವು ಸ್ವರ್ಗಲೋಕದಲ್ಲಿ ಅನಂತವಾಗುವುವು. 

೭೪-೭೬. ವೈಶಾಖಮಾಸದಲ್ಲಿ ಅರವಟ್ಟಿಗೆಗಳನ್ನಿಡಬೇಕು. ದೇವರಿಗೆ 
ತೀರ್ಥದ ಗಿಂಡಿಯನ್ನು ದಾನಮಾಡಬೇಕು. ಲಾವಂಚ, ಬೀಸಣಿಗೆ, ಕೊಡೆ, 
ತೆಳುವಾದ ಬಟ್ಟೆ, ಗಂಧ, ಕರ್ಪೂರಸಹಿತವಾದ ತಾಂಬೂಲ, ಹೊವು, ಅನೇಕ 
ವಿಧಗಳಾದ ಜಲಪಾತ್ರೆಗಳು, ಹೂವಿನ ಮನೆಗಳು, ಅನೇಕ ಬಗೆಯ ಪಾನೀಯ 
ಗಳು, ದ್ರಾಕ್ಷಿ, ಬಾಳೆಹಣ್ಣು, ಇವುಗಳನ್ನು "" ನನ್ನ ಸತಿಯು ತೃಪ್ತನಾಗ'' 
ಲೆಂದು ಉತ್ತಮಬ್ರಾಹ್ಮಣರಿಗೆ ದಾನಮಾಡಬೇಕು. 

೭೭. ಕಾರ್ತಿಕಮಾಸದಲ್ಲಿ ಯಾವುದಾದರೂ ಒಂದು ಧಾನ್ಯದ ಅನ್ನವನ್ನೊ 
ಅಥವಾ ಯಾವುದಾದರೊಂದನ್ನವನ್ನೊ ಊಟಮಾಡಬೇಕು. ಬದನೆಕಾಯಿ, 
ಸುವರ್ಣಗಡ್ಡೆ, ನಸುಗುನ್ನಿಗಳನ್ನು ಬಿಡಬೇಕು. 

೭೮. ಕಾರ್ತಿಕಮಾಸದಲ್ಲಿ ಎಣ್ಣೆಯನ್ನೂ ಕಂಚನ್ನೂ ತ್ಯಜಿಸಬೇಕು. 
ಈ ಮಾಸದಲ್ಲಿ ಮಾನವ್ರತವನ್ನಾ ಚರಿಸಿ ಸುಂದರವಾದ ಘಂಟಿಯನ್ನು ದಾನ 
ಮಾಡಬೇಕು. 

೭೯. ಎಲೆಯಲ್ಲಿ ಭೋಜನಮಾಡುವವಳು ತುಪ್ಪತುಂಬಿದ ಕಂಚಿನ 
ಪಾತ್ರೆಯನ್ನು ದಾನಮಾಡಬೇಕು. ನೆಲದಲ್ಲಿ ಮಲಗುವ ವ್ರತವನ್ನು ಹಿಡಿದರೆ 
ಮೃದುವಾದ ಹಾಸಿಗೆಯನ್ನು ದಾನಮಾಡಬೇಕು. 

೫ 


೦೦೬ ಶ್ರೀ ಸ್ಥಾಂಡಪು ಹಾಪುರಾಣಂ 


ಫಲತ್ಯಾಗೇ ಫಲಂ ದೇಯಂ ರಸತ್ಯಾಗೇ ಚೆ ತದ್ರಸಃ। 
ಫಾನೃತ್ಯಾಗೇ ಚ ತದ್ಭಾನ್ಯಮಥನಾ ಶಾಲಯಃ ಇ ಮತಾಃ | 


ಧೇನುಂ ದದ್ಯಾತ್ರಯತ್ಲೇನ ಸಾಲಂಕಾರಾಂ ಸ ಕಳಂಚನಾಂ ॥ ೮೦ 
ಏಕತಃ ಸರ್ವದಾನಾನಿ ದೀಪದಾನಂ ತಥೈಕತಃ । 

ಕಾರ್ತಿಕೇ ದೀಪದಾನಸ್ಯ ಕಲಾಂ ನಾರ್ಹಂತಿ ಸೋಡಶೀಂ ! ೮೧ 
ಇತ್ಯಾದಿ ನಿಧವಾನಾಂ ಚ ನಿಯಮಾಃ ಸಂಪ್ರಕೀರ್ತಿತಾಃ । 

ತೇಸಾಂ ಫಲವಿದು ರಾಜನ್ನಾಂನ್ಯೇಷಾಂ ಚ ಕದಾಚನ n ೮೨ 
ಧರ್ಮವಾಹೀಂ ಸಮಾಸಾದ್ಯ ದಾನಂ ದದ್ಯಾದ್ವಿಚಕ್ಪ,ಣಃ । 

ಕೋಟಧಾ ವರ್ಧತೇ ನಿತ್ಯಂ ಬ್ರಹ್ಮಣೋ ವಚನಂ ಯಥಾ ॥ ೮೩ 
ತಿಲಥೇನುಂ ಚ ಯೋ ದಜ್ರಾ ಡೆ ರ್ಮೆೇಶ್ವ ರಪುರಃಸ್ಲಿ ತಃ । 

ತಿಲಸಂಖ್ಯಾನಿ ವರ್ಷಾಣಿ ಸ್ಕ ಗೇ ಲೋಕೇ ಮಹೀಯತೇ 1 ೮೪ 
ಧರ್ಮಕ್ಸೆ ತ್ರೆ € ತು ಸಂಸ್ರಾ ಸ್ಯ ಶಾ ಿದ್ಧಂ ಕುರ್ಯಾದತಂದ್ರಿತಃ | 

ತಸ್ಯ ಸಂವತ್ಸರಂ ಯಾನತ್ತಪ್ಟಾಃ ಸ್ಯುಃ ಪಿತರೋ ಧ್ರುವಂ ॥ ೮೫ 


ಯೇ ಚಾಂನ್ಕೇ ಪೂರ್ನಜಾಃ ಸ್ಪರ್ಗೇ ಯೇ ಚಾನ್ಯೇ ನರಕೌಕಸಃ । 
ಯೇ ಚ ತಿರ್ಯಕ್ರ್ಟಮಾಪನ್ನಾ ಯೇ ಚ ಭೂತಾದಿ ಸಂಸ್ಥಿತಾಃ ॥ ೮೬ 





೮೦. ಫಲವನ್ನು ಬಿಟ್ಟದ್ದರೆ ಫಲವನ್ನೂ, ರಸ ಪದಾರ್ಥಗಳನ್ನು ಬಿಟ್ಟದ್ದ 
ಸ ಪದಾರ್ಥಗಳನ್ನೂ, ಧಾನ್ಯವನ್ನು ಬಿಟ್ಟಿದ್ದರೆ ಆ ಧಾನ್ಯವನ್ನೂ. ಅಥವಾ ಬ: 
ವನ್ನೂ ಹಡಬೇಕು: ಪ್ರಯತ್ನದಿಂದಲಾದರೂ ಅಲಂಕಾರಗಳಿಂದಲು 
ಸುವರ್ಣದಿಂದಲೂ ಸಹಿತವಾದ ಗೋವನ್ನು ದಾನಮಾಡಬೇಕು. 

೮೧. ಒಂದೆಡೆ ಸಕಲದಾನಗಳನ್ನೂ, ಒಂಡೆದೆ ದೀಪದಾನವನ್ನೂ ತುಲ 
ಮಾಡಿದರೆ ಕಾರ್ತಿಕಮಾಸದಲ್ಲಿ ದೀಪದಾನಕ್ಕೆ ಒಂದು ಕಲೆಯಷ್ಟಾದರೂ ಸನ 
ವಾಗುವುದಿಲ್ಲ. 

೮೨. ಅರಸ! ವಿಥೆವೆಯರ ನಿಯಮಗಳನ್ನು ಈ ರೀತಿ ನಿನಗೆ ಹೇಳಿದೆನ 
ಅವುಗಳ ಫಲವು ಇತರ ಥಿಯಮಗಳಿಂದಾಗುವುದಿಲ್ಲ. 

೮೩. ಜಾಣನು ಧರ್ಮವಾಪಿಯನ್ನು ಹೊಂದಿ ದಾನವನ್ನಿತ್ತರೆ ಆಂ 
ಬ್ರಹ್ಮನ ವಚನದಂತೆ ನಿತ್ಯವೂ ಕೋಟ ಪ್ರಕಾರವಾಗಿ ಹೆಚ್ಚು ವುದು. 

೮೪. ಧರ್ಮೇಶ್ವ ರನ ಮುಂದೆ ನಿಂತು ಯಾವನು ತಿಲಫೇನುವನ್ನು ದಾ 
ಮಾಡುವನೊ, ಚನ ತಿಲಸಂಖ್ಯೆಯಷ್ಟು ವರ್ಷಕಾಲ ಸ್ವರ್ಗಲೋಕದ: 
ಪೂಜ್ಯನಾಗುವನು. 

೮೫. ಧರ್ಮಕ್ಸೇತ್ರವನ್ನು ಹೊಂದಿ ಆಲಸ್ಯ ನಿಜದ ಶ್ರಾದ್ಧವನ್ನು 
ದರೆ ಅವನ ನಿತೃ ಗಳು ಒಂದು we ತೃಪ್ತ ಾಕುವಕು. 
ಘ್‌ ಯಾವನ ಪೂರ್ವಪಿತೃ ಗಳು ಸ್ವರ್ಗವಾಸಿಗಳಾಗಿರುವರೊ 


ಸಪ್ತಮೋಠ9ಿಧ್ಯಾಯಃ ೧೦೩ 


ಶಾನ್ಸರ್ವಾನ್ಫರ್ಮಕೂಪೇ ವೈ ಶ್ರಾದ್ಧಂ ಕುರ್ಯಾದ್ಯಥಾವಿಧಿ I 

ಅತ್ರ ಪ್ರಕಿರಣಂ ಯತ್ತು ಮನುಸೈೈಃ ಕ್ರಿಯತೇ ಭುವಿ । 

ಕೇನ ತೇ ತೃಪ್ತಿಮಾಯಾಂತಿ ಯೇ ಪಿಶಾಚತ್ವಮಾಗತಾಃ ॥ ೮೭ ॥ 
ಯೇಷಾಂ ತು ಸ್ನಾನವಸ್ತ್ರೋತ್ಸಂ ಭೂಮೌ ಪತತಿ ಪುತ್ರಕ । 

ತೇನ ಯೇ ತರುತಾಂ ಪ್ರಾಸ್ತಾಸ್ತೇಷಾಂ ತೃಪ್ತಿಃ ಪ್ರಜಾಯತೇ ॥ ೮೮ ॥ 
ಯಾ ವೈ ಯನಾನಾಂ ಕಣಿಕಾಃ ಪತಂತಿ ಧರಣೀತಲೇ । 


ತಾಭಿರಾಷ್ಯಾಯನಂ ತೇಷಾಂ ಯೇ ತು ದೇನತ್ವಮಾಗತಾಃ ॥೮೯॥ 
ಉದ್ಭೃತೇಷ್ಟಥ ಪಿಂಡೇಷು ಯಾವಾನ್ನ ಕಣಿಕಾ ಭುವಿ | 
ತಾಭಿರಾಷ್ಯಾಯನಂ ತೇಷಾಂ ಯೇಚ ಪಾತಾಲಮಾಗತಾಃ ॥೯೦॥ 
ಯೇ ವಾ ವರ್ಣಾಶ್ರಮಾಚಾರಕ್ರಿಯಾಲೋಸಾ ಹ್ಯಸಂಸ್ಕೃತಾಃ । 
ವಿಪನ್ನಾಸ್ತೇ ಭವಂತ್ಯತ್ರ ಸಮ್ಮಾರ್ಜನಜಲಾಶಿನಃ ॥೯೧॥ 
ಭುಕ್ತ್ವಾ ವಾಚಮನಂ ಯಚ್ಚ ಜಲಂ ಪತತಿ ಭೂತಲೇ । 
ಬ್ರಾಹ್ಮಣಾನಾಂ ತಥೈವಾಂನ್ಯೇ ತೇನ ತೃಪ್ತಿಂ ಪ್ರಯಾಂತಿ ವೈ ॥೯೨॥ 
ಏವಂ ಯೋ ಯಜಮಾನಶ್ಚ ಯಚ್ಚ ತೇಷಾಂ ದ್ವಿಜನ್ಮನಾಂ । 
ಕೃಚಿಜ್ಜಲಾನ್ನನಿಕ್ಸ್ಟೇಪಃ ಶುಚಿರಪ್ಸೃಷ್ಟ ಏನ ಚ ॥ ೯೩/ 





ಯಾರು ನರಕವಾಸಿಗಳಾಗಿರುವರೊ, ಯಾರು ಸಶುಪಕ್ಸಿಭೂತಾದಿಗಳಾಗಿರು 
ವರೊ, ಅವರೆಲ್ಲರನ್ನೂ ಉದ್ದೇಶಿಸಿ ಧರ್ಮವಾಪಿಯಲ್ಲಿ ವಿಹಿತಕ್ರಮದಿಂದ ಶ್ರಾದ್ಧ 
ಮಾಡಬೇಕು. ಇಲ್ಲಿ ನೆಲದಮೇಲೆ ಅನ್ನವನ್ನು ಎರಚಿದರೆ ಪಿಶಾಚಜನ್ಮನನ್ನು 
ಪಡೆದ ಪಿತೃಗಳು ತೃಪ್ತರಾಗುವರು. 

೮೮. ಇಲ್ಲಿ ಸ್ನಾನಮಾಡುವಾಗ ಬಟ್ಟೆಯಿಂದ ಸುರಿದ ನೀರಿನಿಂದ ವೃಕ್ಷ 
ಜನ್ಮವನ್ನು ಪಡೆದ ಪಿತೃಗಳು ತೃಸ್ತರಾಗುವರು. 

೮೯. ಇಲ್ಲಿ ನೆಲದ ಮೇಲೆ ಬಿದ್ದ ಅಕ್ಕಿಯ ಕಾಳುಗಳಿಂದ ದೇವತ್ವವನ್ನು 
ಹೊಂದಿದ ಪಿತೃಗಳಿಗೆ ಸುಖವಾಗುವುದು. 

೯೦. ಸಿಂಡೋದ್ಧರಣಮಾಡಿದ ಮೇಲೆ ಭೂಮಿಲ್ಲಿರುವ ಅನ್ನದಗಳು 
ಗಳಿಂದ ಪಾತಾಳವಾಸಿಗಳಾದ ಪಿತೃಗಳು ಸುಖಸಡುವರು. 

೯೧. ಯಾರು ಜಾತಿ ಮತ್ತು ಆಶ್ರಮಗಳ ಆಚಾರ ಕ್ರಿಯೆಗಳಿಲ್ಲದೆಯೂ, 
ಸಂಸ್ಕಾರನಿಲ್ಲದೆಯೂ ಮೃತರಾಗಿರುವರೊ, ಅವರು ಇಲ್ಲಿ ಸಂಮಾರ್ಜನದ 
ನೀರನ್ನು ಕುಡಿಯುವರು. 

೯೨, ಇತರರು ಬ್ರಾಹ್ಮಣರ ಊಟ ಮತ್ತು ಆಚಮನವಾದ ಬಳಿಕ 
ನೆಲದಮೇಲೆ ಬಿದ್ದ ನೀರಿನಿಂದ ತೃಪ್ತರಾಗುವರು. 

೯೩-೯೪. ಸರಿಯಾಗಿ ಶ್ರಾದ್ಧವನ್ನು ಮಾಡುವ ಬ್ರಾಹ್ಮಣರ ಸಂಬಂಧ 


೦೧೦೮ ಶ್ರಿ 


ಶ್ರೀ ಸ್ಕಾಂದಮಹಾಪುರಾಣಂ 


ಯೇ ಚಾನ್ಯೆ € ನರಕೇ ಜಾತಾಸ್ತತ ತ್ರ ಯೋನ್ಯ ತರಂ ಗತಾಃ । 
ಪ ಗ್ರೈಯಾಂತ್ಯಾಸ್ಕಾ ಯನಂ ವತ್ಸ ಇನು ಕ್ಸ ದೃತ್ರಿ ಯಾವತಾಂ ॥ ೯೪ ॥ 
ಅನ್ಯಾ ಯೋಪಾರ್ಜಿತೈೆ ದ್ರ ಕೆ [| ಶ್ರಾ ದ್ಧ 0 ಯತ್ಮ್ರೀಯತೇ ನರೈಃ । 


ತೃ ಪೇ ತಿ ತೇನ ಚಂಡಾಲಪುಲ್ಕ' ಸಾದಿಸು “ಯೋನಿಷು ॥ ೯೫ ॥ 
ಏನಮಾಸ್ಯಾಯಿತಾ ವತ್ಸ ತೇನ ಚಾಂನೇಕ ಬಾಂಧವಾಃ । 
ಶ್ರಾದ್ಧಂ ಕರ್ತುಮಶಕ್ತಿಶ್ಚೇಚ್ಛಾಕೈರನಿ ಹಿ ಜಾಯತೇ ॥೯೬॥ 
ತಸ್ಪಾ ಿಚ್ಛಾ ದ್ಧ ೦ ನರೋ ಭಕ್ತ್ಯಾ ಶಾಕೈರನಿ ಯಥಾವಿಧಿ । 
ಕುರುತೇ ಕುರ್ನೆತಃ ಶ್ರಾ ದ್ಧ ೦ pe ಣ್‌ ಚಿನ್ನ ಸೀದತಿ ॥ ೯೭॥ 


ಸಾಸಂ ಯದಿ ಕೃತಂ ಸರ್ವಂ ಷಾಪಂ ಚ ವರ್ಧತೇ ಧ್ರುವಂ । | 
ಕುರ್ನಾಣೋ ನರಕೇ ಘೋರೇ ಪಚ್ಯತೇ ನಾತ್ರ ಸಂತಯಃ ॥ ೯೮॥ 
ಯಥಾ ಪುಣ್ಯಂ ತಥಾ ಪಾಪಂ ಕೃತಂ ಹು ತುಭಾಕುಳಾ | 

ತತ್ಸರ್ನಂ ನರ್ಧತೇ ನೂನಂ ಧರ್ಮಾಂ ರಣ್ಯೇ ನೃಪೋತ್ತಮ ॥೯೯॥ 





ವಾದ ಶುದ್ಧವೂ, ಯಾರೂ ಮುಟ್ಟದೆಯೂ ಇರುವ ಕೆಳಗೆ ಬಿದ್ದಿರುವ ನೀರು 
ಮತ್ತು ಅನ್ನಗಳಿಂದ ನರಕವನ್ನು “ಹೊಂದಿ ಬೇರೆ ಜನ್ಮನನ್ನು ಪಡೆದಿರುವ 
ಪಿತೃ ಗಳು ತೃಪ್ತಿ ಿಗೊಳ್ಳು ವರು. 

೯೫. ಅನ್ಯಾಯದಿಂದ ಸ ಸಂಪಾದಿಸಿದ ದ್ರವ್ಯಗಳಿಂದ ದ್ವಿಜನು ಶ್ರಾದ್ಧ 
ಮಾಡಿದರೆ ಅದರಿಂದ ಹೊಲೆಯ ಮತ್ತು ಮಾದಿಗರ ಜಾತಿಯಲ್ಲಿ ಹುಟ್ಟಿದವರು 
ತೃಪ್ತರಾಗುವರು. 

೯೬. ಹೀಗೆ ಈ ಧರ್ಮಾರಣ್ಯದಲ್ಲಿ ವಿಧಿಯಂತೆ ಶ್ರಾದ್ಧ ಮಾಡುವವನಿಂದ 
ಅನೇಕ ಮಂದಿ ಬಂಧುಗಳು ಸಂತೋಷಗೊಳ್ಳುವರು. ಈ ರೀತಿ ಶ್ರಾದ್ಧ 
ಮಾಡಲಾಗದಿದ್ದರೆ ತರಕಾರಿಯಿಂದಲಾದರೂ ಆ ಶ್ರಾದ್ಧವನ್ನು ಮಾಡ 
ಬಹುದು. 

೯೭. ಆದ್ದರಿಂದ ಮನುಷ್ಯನು ಭಕ್ತಿಯಿಂದ ತರಕಾರಿಯಿಂದಲಾದರೂ 
ವಿಹಿತಕ್ರಮದಿಂದ ಶ್ರಾದ್ಧ ಮಾಡಬೇಕು. ಶ್ರಾದ್ಧಮಾಡುವವನ ವಂಶವು 
ಯಾವಾಗಲೂ ಕೆಡುವುದಿಲ್ಲ. 

೯೮. ಪಾಸವನ್ನು ಮಾಡಿದರೆ ಆ ಪಾಪವು ಹೆಚ್ಚುತ್ತಲೇ ಹೋಗುವುದು. 
ಪಾಸ ಮಾಡುವವನು ಘೋರ ನರಕದಲ್ಲಿ ಬಿದ್ದು ದುಃಖಪಡುವನು. 

೯೯. ನರೇಂದ್ರ! ಈ ಧರ್ಮಾರಣ್ಯದಲ್ಲಿ ಮಾಡಿದ ಪುಣ್ಯವು ಹೆಚ್ಚಾಗು 
ವಂತೆ ಸಾಪವೂ ಹೆಚ್ಚುವುದು. 


ಸಪ್ತಮೋಠಿಧ್ಯಾಯಃ ೧೦೯ 


ಕಾಮಿನಾಂ ಕಾಮದಂ ಚೈನ ಯೋಗಿನಾಂ ಮುಕ್ತಿದಾಯಕಂ । 
ಸಿದ್ಧಾನಾಂ ಸಿದ್ಧಿದಂ ಪ್ರೋಕ್ತಂ ಧರ್ಮಾಂರಣ್ಯಂ ತು ಸರ್ವದಾ ॥ ೧೦೦ ॥ 


ಇತಿ ಶ್ರೀ ಸ್ಕಾಂದ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ 44ಧರ್ಮಾಂಚಾರ 
ವರ್ಣನಂ'' ನಾಮ ಸಸ್ತಮೋಂಧ್ಯಾಯ: 


೧೦೦. ಈ ಧರ್ಮಾರಣ್ಯವು ಕಾಮಿಗಳಿಗೆ ಕಾಮವನ್ನೂ ಯೋಗಿಗಳಿಗೆ 
ಮುಕ್ತಿಯನ್ನೂ, ಸಿದ್ಧರಿಗೆ ಕಾರ್ಯಸಿದ್ಧಿಯನ್ನೂ ಯಾವಾಗಲೂ ಕೊಡುವುದು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ ಯಲ್ಲಿ "" ಧರ್ಮಾಚಾರವರ್ಣನ??ವೆಂಬ 
ಏಳನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 


ಅಥಾಷ್ಟಮೋಧ್ಯಾಯಃ 
ವಿಷ್ಣುಸಮಾಗಮಃ 

ಯುಧಿಷ್ಠಿರ ಉವಾಚ:- 
ಧರ್ಮಾಃರಣ್ಯಕಥಾಂ ಪುಣ್ಯಾಂ ಶ್ರುತ್ವಾ ತೃಪ್ತಿರ್ನ ಮೇ ನಿಭೋ | 
ಯದಾ ಯದಾ ಕಥಯಸಿ ತದಾ ಪ್ರೋತ್ಸಹತೇ ಮನಃ । 
ಅತಃಪರಂ ಕಿಮಭವತ್ಸರಂ ಕೌತೂಹಲಂ ಹಿ ಮೋ mon 

ವ್ಯಾಸ ಉವಾಚ: 
ಶೃಣು ಸಾರ್ಥ ಮಹಾಪುಣ್ಯಾಂ ಕಥಾಂ ಸ್ಕಂದಪುರಾಣಜಾಂ । 
ಸ್ಥಾಜುನೋಕ್ತಾಂ ಚ ಸ್ಕಂದಾಯ ಧರ್ಮಾಃ ರಣ್ಯೋದ್ಭನಾಂ ಶುಭಾಂ॥೨॥ 
ಸರ್ವತೀರ್ಥಸ್ಯ ಫಲದಾಂ ಸರ್ವೋಪದ್ರನನಾಶಿನೀಂ । 
ಕೈಲಾಸಶಿಖರಾಸೀನಂ ದೇವದೇವಂ ಜಗದ್ಗುರುಂ । 
ಪಂಚವಕ್ತ್ರಂ ದಶಭುಜಂ ತ್ರಿಣೇತ್ರಂ ಶೂಲಪಾಣಿನಂ wan 
ಕಪಾಲ ಖಟ್ವಾಂಗಕರಂ ನಾಗಯಜ್ಞ್ಜೋಪವೀತಿನಂ I 
ಗಣೈಃ ಪರಿವೃತಂ ತತ್ರ ಸುರಾಂಸುರನಮಸ್ಕೃತಂ ॥೪॥ 


ಕನ್ನಡದ ಅನುವಾದ 
ನಿಷ್ಣುಸಮಾಗವಮು 

೧. ಯುಧಿಷ್ಠಿರನು ಕೇಳುತ್ತಾನೆ: ಸ್ವಾಮಿನ್‌! ಪವಿತ್ರವಾದ ಧರ್ಮಾ 
ರಣ್ಯದ ಕಥೆಯನ್ನು ಕೇಳಿ ನನಗೆ ಇನ್ನೂ ತೃಪ್ತಿಯಾಗಲಿಲ್ಲ. ನೀನು ಹೇಳಿದ 
ಹಾಗೆಲ್ಲ ನನ್ನ ಮನಸ್ಸು ಉತ್ಸಾಹಗೊಳ್ಳುತ್ತಲೇ ಇರುವುದು. ಮುಂದೇ 
ನಾಯಿತು? ನನಗೆ ಕೇಳಲು ಬಹಳ ಕುತೂಹಲವುಂಬಾಗಿದೆ. 

೨-೫. ವ್ಯಾಸನು ಹೇಳುತ್ತಾನೆ:-ಯುಧಿಸ್ಥಿರ! ಸ್ಥಂದಪುರಾಣದಲ್ಲಿರುವಂತೆ 
ಶಿವನು ಸ್ವಂದನಿಗೆ ಹೇಳಿದುದೂ, ಸಕಲ ತೀರ್ಥಗಳ ಫಲವನ್ನು ಕೊಡುವುದೂ, 
ಸಮಸ್ತ ಕಷ್ಟಗಳನ್ನು ನಾಶಗೊಳಿಸುವುದೂ ಆದ ಧರ್ಮಾರಣ್ಯದ ಕಥೆಯನ್ನು 
ಕೇಳು. ಕೈಲಾಸಶಿಖರದಲ್ಲಿ ಕುಳಿತವನೂ, ಜಗತ್ತುಗಳಿಗೆ ಗುರುವೂ, ಐದು 
ಮುಖಗಳುಳ್ಳವನೂ, ಹತ್ತು ತೋಳುಗಳುಳ್ಳವನೂ, ಮೂರು ಕಣ್ಣುಗಳುಳ್ಳ 
ವನೂ, ಶಲವನ್ನೂ ಬ್ರಹ್ಮಕಪಾಲ ಮತ್ತು ಖಟ್ಟಾಂಗಗಳನ್ನೂ ಕೈಯಲ್ಲ 
ಹಡಿದವನೂ, ಸರ್ಪದ ಜನಿವಾರವುಳ್ಳ ವನೂ, ಪ್ರಮಥಗಣಗಳಿಂದ ಸುತ್ತುವರಿ 
ಯಲ್ಪಟ್ಟವನೂ, ದೇವಾಸುರರಿಂದ ನಮಸ್ಕೃತನೂ, ನಾನಾ ನಿಧ ರೂಪಗುಣ 


ಅಸ್ಪಮೋತಧ್ಯಾಯಃ ೧೧೧ 


ನಾನಾರೂಪಗುಣೈರ್ಗಿೀತಂ ನಾರದಪ್ರಮುಖೈರ್ಯುತಂ। 

ಗಂಧರ್ವೈೈಶ್ಚಾಃಪ್ಸರೋಭಿಶ್ಚ ಸೇವಿತಂ ತಮುಮಾಪತಿಂ | 

ತತ್ರಸ್ಥಂ ಚ ಮಹಾದೇನಂ ಪ್ರಣೆಪತ್ಕಾಂಬ್ರನೀತ್ಸುತಃ ॥೫॥ 
ಸ್ಕಂದ ಉವಾಚ: 

ಸ್ವಾಮಿನ್ಸಿಂದ್ರಾದಯೋ ದೇವಾ ಬ ಬ್ರಹ್ಮಾದ್ಯಾ ಶ್ಚ ವ ಸರ್ವಶಃ । 

ತನ ದ್ವಾ ಕೀ ಸಮಾಯಾತಾಸ್ತ ಎದ್ದರ್ಶನೈಕಲಾಲಸಾಃ | 

ಕಿಮಾಜ್ದಾಪಯಸೇ ದೇವ ಕರವಾಣಿ ತವಾಂಗ್ರತಃ ॥೬॥ 
ವ್ಯಾ ಸ ಉವಾಚ: 

ಸ್ಯ ಂಡಸ್ಯ ನಚನಂ ಶ್ರುತ್ವಾ ಆಸನಾದುತ್ತಿ ತೋ ಹರಃ! 

ಷಭ ನ ನಕಾಡ ಗಂತುಕಾಡೋಂಭವತ್ತ ದಾ nan 

ಭು ಶಿನಂ ದೃಷ್ಟ್ಯಾ ಸ್ಕ ದೋ ವಾಕ ್ಯಮಥಾಬ್ರನೀತ್‌ ॥ ೮॥ 

ಸ್ವ ೦ದ ಉವಾಚ :-- 

ಕಂ ಕ ದೇವ ದೇವಾನಾಂ ಯತ್ತ್ರೃಮಾಹೂಯಸೇ ತ್ವರಂ । 
ವೃಷಂ ತ್ಯಕ್ತ್ವಾ ಕೃಷಾಸಿಂಧೋ ಕ್ಕ ಸಾಂತ ಯದಿ ಮೇ ನದ” ॥೯॥ 
ದೇವದಾನನಯುಷ್ಟಂ ಮಾ ಕಂ ಕಾರ್ಯಂ ವಾ ಮಹತ್ತರಂ ॥ ೧೦ 
ಗಳಿಂದ ಸ್ತೋತ್ರ ಮಾಡಲ್ಪಟ್ಟ ಶವನ ನಾರದಾದಿ ಮುನಿವರೇಣ್ಯರೊಡಗೂಡಿ 
ದವನೂ, ರಕತ | ಅಪ್ಪರರಿಂದಲೂ ಸೇವಿತನೂ ಆಗಿರುವ ಭವಾನೀ 
ಪ್ರಿಯನಾದ ಮಹಾದೇವನನ್ನು ವಂದಿಸಿ ಮಗನಾದ ಕುಮಾರಸ್ವಾಮಿಯು 
ಕೇಳಿದನು. | 

೬. ಸ್ಫಂದನು ಕೇಳುತ್ತಾನೆ:--*" ಸ್ವಾಮಿನ್‌! ಬ್ರಹ್ಮೇಂದ್ರಾದಿ ದಿವಿಜ 
ರೆಲರೂ ನಿನ್ನನ್ನು ನೋಡಲು ಕುತೂಹೆಲವುಳ್ಳವರಾಗಿ ಬಾಗಿಲಿನಲ್ಲಿ ಬಂದು 
ನಿಂತಿದ್ದಾರೆ. ನನಗೇನಪ್ಪಣೆ? ಮುಂದೆ ನಾನೇನುಮಾಡಲಿ? 

೭-೮. ವ್ಯಾಸನು ಹೇಳುತ್ತಾನೆ:;--ಆಗಕುಮಾರಸ್ವಾಮಿಯ ವಚನವನ್ನು 
ಕೇಳಿ ಮಹೇಶ್ವರನು ಖೀಠದಿಂಡೆದ್ದು ವೃಷಭವನ್ನೇರದೆಯೆ ಹೊರಡಲು ಬಯಸಿ 
ದನು. ಬಳಿಕ ಸ್ವಂದನು ಹಾಗೆ ಹೊರಡಲಸೇಕ್ಲೆಯುಳ್ನ. ಶಿವನನ್ನು ಕಂಡು 
ಇಂತೆಂದು ಕೇಳಿದನು. 

೯-೧೦. ಸ್ವಂದನು ಕೇಳುತ್ತಾನೆ: ಎಲ್ಫೆ ದಯಾಳುವೆ! ಸ್ವಾಮಿನ್‌! 
ನೀನು ವೃಷಭವನ್ನೂ ಬಿಟ್ಟುಹೊರಡುತ್ತಿರುವೆ. ದೇವತೆಗಳು ನಿನ್ನನ್ನು ತ್ವರೆಯಿಂದ 
ಕರೆಯುತ್ತಿರುವರು. ಅವರ ಕಾರ್ಯವೇನಿದೆ? ದೇವಾಸುರರ ಕಾಳೆಗವೊ? 
ಅಥವಾ ಇನ್ನಾವುದಾದರೂ ಮಹತ್ತರವಾದ ಕಾರ್ಯವಿರುವುದೊ? ನನ್ನಮೇಲೆ 
ದಯೆಯಿದ್ದಕೆ ಅದನ್ನು ನನಗೆ ಹೇಳು. 








೦೨೧೨ ಶ್ರೀ ಸಾಂದಮು ಹಾಪುರಾಣಂ 


ಶಿವ ಉವಾಚ. 
ಶೃಣುಷ್ಟೈಕಾಗ್ರ ಮನಸಾ ಯೇನಾ ಹಂ ವ್ಯಗ್ರಚೇತಸಃ । 


ಅಸ್ತಿ ಸ್ಥಾನಂ ಮಹಾಪುಣ್ಯಂ ಧರ್ಮಾಂರಣ್ಯಂ ಚ ಭೂತಲೇ ॥ ೧೧8 

ತತ್ರಾಪಿ ಗಂತುಕಾನೋಹಂ ದೇವೈಃ ಸಹ ಷಡಾನನ ॥ ೧೨॥ 
ಸ್ಕಂದ ಉವಾಚ... 

ತತ್ರ ಗತ್ವಾ ಮಹಾದೇವ ಕಿಂ ಕರಿಷ್ಯಸಿ ಸಾಂಪ್ರತಂ । 

ತನ್ಮೇ ಬ್ರೂಹಿ ಜಗನ್ನಾಥ ಕೃತ್ಯಂ ಸರ್ವಮಶೇಷತಃ ॥ ೧೩॥ 
ಶಿವ ಉವಾಚ: 

ಶ್ರೂಯತಾಂ ವಚನಂ ಪುತ್ರ ಮನಸೋಲ್ಲಾದಕಾರಣಂ । 

ಆದಿತಃ ಸರ್ವವೃತ್ತಾನಾಂ ಸೃಷ್ಟಿಸ್ಥಿತಿಕರಂ ಮಹತ್‌ 1 ೧೪% 

ಪರಂತು ಪ್ರಲಯೇ ಜಾತೇ ಸರ್ವತಸ್ತಮಸಾ ವೃತಂ । 

ಆಸೀದೇಕಂ ತದಾ ಬ್ರಹ್ಮ ನಿರ್ಗುಣಂ ಬೀಜಮವ್ಯಯಂ ॥ ೧೫ ॥ 

ನಿರ್ಮಿತಂ ವೈ ಗುಣೈರಾದೌ ಮಹದ್ದ್ರವ್ಯಂ ಪ್ರಚಕ್ಸತೇ ॥ ೧೬ ॥ 

ಮಹಾಕಲ್ಪ್ಸೇ ಚ ಸಂಪ್ರಾಪ್ತೇ ಚರಾಂಚರೇ ಕ್ಷಯಂ ಗತೇ । 

ಜಲರೂಪೀ ಜಗನ್ನಾಥೋ ರಮಮಾಣಸ್ತು ಲೀಲಯಾ ॥ ೧೭॥ 


೧೧-೧೨. ಶಿವನು ಹೇಳುತ್ತಾನೆ:--ಷಣ್ಮುಖ! ಒಮ್ಮನಸ್ಸಿನಿಂದ ಕೇಳು, 
ಭೂಮಿಯಲ್ಲಿ ಪವಿತ್ರವಾದ ಧರ್ಮಾರಣ್ಯವೆಂಬ ಕ್ಷೇತ್ರವಿದೆ. ಅಲ್ಲಿಗೆ ನಾನು 
ಹೋಗಲಿಚ್ಛಿಸುವೆನು. ಅದರಿಂದಲೇ ಈ ರೀತಿ ತ್ವರೆಗೊಳ್ಳುತ್ತಿರುವೆನು. 

೧೩. ಸ್ಫಂದನು ಹೇಳುತ್ತಾನೆ:--ಮಹೇಶ್ವರ! ಈಗ ಅಲ್ಲಿಗೆ ಹೋಗಿ 
ಏನನ್ನು ಮಾಡುವೆ? ಜಗದೊಡೆಯ! ಆ ಕಾರ್ಯವನ್ನೆಲ್ಲ ಸಮಗ್ರವಾಗಿ ನನಗೆ 
ತಿಳಿಸು, 

೧೪. ಶಿವನು ಹೇಳುತ್ತಾನೆ:--ಮಗು! ಮನಸ್ಸಿಗೆ ಆನಂದವನ್ನುಂಟು 
ಮಾಡುವ ಸೃಷ್ಟಿ ಸ್ಥಿತಿ ವಿಷಯಕವಾದ ಈ ವೃತ್ತಾಂತವನ್ನು ಮೊದಲಿನಿಂದ 
ಹೇಳುವೆನು ಕೇಳು. 

೧೫. ಪ್ರಳಯವಾದ ಬಳಿಕ ಕತ್ತಲೆಯಿಂದ ಆವೃತನಾಗಿಯೂ, ನಿರ್ಗುಣ 
ನಾಗಿಯೂ, ಜಗತ್ತಿಗೆ ಬೀಜರೂಪನಾಗಿಯೂ ನಾಶರಹಿತನಾಗಿಯೂ ಇರುವ 
ಬ್ರಹ್ಮನೊಬ್ಬನುಮಾತ್ರ ಉಳಿದಿದ್ದನು. 

೧೬-೧೭. ಮೊದಲು ಸತ್ತ್ವರಜಸ್ತಮೋಗುಣಗಳಿಂದ ನಿರ್ಮಿತವಾದ 
ವಸ್ತುವು ಮಹತ್ತತ್ವವೆಂದು ಹೇಳಿಸಿಕೊಳ್ಳಲ್ಪ ಡುವುದು. ಮಹಾಕಲ್ಪವು ಪ್ರಾಪ್ತ 
ವಾಗಿ ಚೇತನಾಚೇತನಾತ್ಮಕವಾದ ಪ್ರಸಂಚವು ನಷ್ಟ ವಾಗಲು, ಜಗನ್ನಾಥನಾದ 
ಬ್ರಹ್ಮನು ಲೀಲೆಯಿಂದ ವಿನೋದಸಡುತ್ತ ಜಲರೂಸಿಯಾಗಿದ್ದನು. 


ಅಸ್ಟನೋರಧ್ಯ್ಮಾಯಃ ೧೧ತ್ಪಿ 


ಚಿರಕಾಲೇ ಗತೇ ಸೋಪಿ ಪೃಥಿವ್ಯಾದಿಸುತತ್ತ್ವಕ್ಕೆಃ । 
ನೃಕ್ಚಮುತ್ಸಾದಯಾಮಾಸಾಂಯುತಶಾಖಾಮನೋರಮಂ ॥ ೧೮ ॥ 
ಫಲೈರ್ವಿಶಾಲೈರಾಕೀರ್ಣಂ ಸ್ಯಂಧಕಾಂಡಾದಿಶೋಭಿತಂ | 

ಫಲೌಘಾಢ್ಯೋ ಜಟಾಯುಕ್ತೋ ನ್ಯಗ್ರೋಧೋ ನಿಟಿಪೋ ಮಹಾನ್‌ ॥ 
ಬಾಲಭಾನಂ ತತಃ ಕೃತ್ವಾ ವಾಸುದೇವೋ ಜನಾರ್ದನಃ । 


ಶೇತೇಃಸೌ ನಟಪತ್ರೇಷು ನಿಶ್ವಂ ನಿರ್ಮಾತುಮುತ್ತುಕಃ ॥ ೨೦ ॥ 
ಸ ನಾಭಿಕಮಲೇ ವಿಷ್ಣೋರ್ಜಾತೋ ಬ್ರಹ್ಮಾ ಹಿ ಲೋಕಕೃತ್‌ । 

ಸರ್ವಂ ಜಲನುಯಂ ಪಶ್ಯನ್ನಾನಾಕಾರಮರೂಪಕಂ ॥ ೨೧ ॥ 
ತಂ ದೃಷ್ಟ್ಯಾ ಸಹಸೋದ್ದೇಗಾವ್ಬ್ರಹ್ಮಾ ಲೋಕಪಿತಾಮಹಃ । 
ಇದಮಾಹ ತದಾ ಪುತ್ರ ಕಂ ಕರೋಮಿತಾತಿ ನಿಶ್ಚಿತಂ ॥ ೨೨ ॥ 
ಖೇ ಜಗಾದ ತತೋ ವಾಣೀ ದೈವಾತ್ಸಾ ಚಾಂಶರೀರಿಣೇ । 

ತಪಸ್ತಪ ನಿಧೇ ಧಾತರ್ಯಥಾ ಮೇ ದರ್ಶನಂ ಭವೇತ್‌ ॥ ೨೩ ॥ 


ತಚ್ಛ್ರುತ್ವಾ ವಚನಂ ತತ್ರ ಬ್ರಹ್ಮಾ ಲೋಕಪಿತಾಮಹಃ । 

ಪ್ರಾಃತಸ್ಯತ ತಪೋ ಘೋರಂ ಪರಮಂ ದುಷ್ಕರಂ ಮಹತ್‌ ॥ ೨೪ ॥ 

ಪ್ರಹಸನ್ಸ ತದಾ ಬಾಲರೂಪೇಣ ಕಮುಲಾಪತಿಃ । 

ಉವಾಚ ಮಧುರಾಂ ವಾಚಂ ಕೃಪಾಲುರ್ಬಾಲಲೀಲಯಾ ॥ ೨೫ ॥ 
೧೮. ಹೀಗೆ ಅನೇಕ ವರ್ಷಕಾಲವು ಕಳೆಯಲು ಆ ಬ್ರಹ್ಮನು ಹತ್ತು 

ಸಾವಿರ ಕೊಂಬೆಗಳಿಂದ ರಮ್ಯವಾದ ಒಂದು ಆಲದಮರವನ್ನು ಸೃಷ್ಟಿಸಿದನು. 
೧೯. ಈ ದೊಡ್ಡ ಮರವು ದೊಡ್ಡ ದೊಡ್ಡ ಹಣ್ಣುಗಳಿಂದ ತುಂಬಿದುದೂ, 

ಕಾಂಡಾದಿಗಳಿಂದ ಶೋಭಾಯಮಾನವೂ, ಬಿಳಲುಗಳಿಂದ ಸಹಿತವೂ ಆಗಿದ್ದಿತು. 
೨೦. ಬಳಿಕ ಈ ಬ್ರಹ್ಮನು ಪ್ರಪಂಚದ ಸೃಷ್ಟಿಗಾಗಿ ವಾಸುದೇವರೂಪಿಯಾಗಿ 

ಬಾಲಕನ ರೂಪವನ್ನು ತಾಳಿ ಆಲದೆಲೆಯಲ್ಲಿ ಮಲಗುತ್ತಾನೆ. 

, ೨೧-೨೨, ಆಗ ಆ ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಲೋಕಗಳನ್ನು 
ಸೃಜಿಸುವ ಚತುರ್ಮುಖಬ್ರಹ್ಮನು ಬಗೆ ಬಗೆಯ ಆಕಾರವುಳ್ಳ ಜಲಮಯ 
ವಾದ ಪ್ರಪಂಚವನ್ನು ಕಂಡು ಕೂಡಲೆ ವ್ಯಾಕುಲಗೊಂಡು ಈಗ ನಾನೇನು 
ಮಾಡಲೆಂದು ಕೇಳಿದನು. 

೨೩. ಬಳಿಕ ವಿಧಿಯೆ! ನೀನು ತನಸ್ಸನ್ನು ಮಾಡು. ಅದರಿಂದ ನೀನು 
ನನ್ನನ್ನು ನೋಡುವೆ'' ಎಂದು ಆಕಾಶದಲ್ಲಿ ಅಶರೀರವಾಣಿಯಾಯಿತು. 

೨೪-೨೫, ಆ ಮಾತನ್ನು ಕೇಳಿ ಬ್ರಹ್ಮನು ದುಷ್ಕರವಾಗಿಯೂ, ಘೋರವಾ 
ಗಿಯೂ ಇರುವ ಮಹಾತಪಸ್ಸನ್ನು ಮಾಡಿದನು. ಆಗ ಲಕ್ಸ್ಷ್ಮೀಸತಿಯಾದ ವಿಷ್ಣುವು 
ನಗುತ್ತ ದಯೆಯುಳ್ಳವನಾಗಿ ಬಾಲಲೀಲೆಯಿಂದ ಇಂಪಾದ ಮಾತನ್ನಾಡಿದನು. 








೧೧೪ ಶ್ರೀ ಸ್ಕಾಂದಮಹಾಪುರಾಣಂ 


ಶ್ರೀ ವಿಷ್ಣು ರುವಾಚ:- 
ಪುತ್ರ ತ್ವಂ ನಿಧಿನಾ ಚಾಂದ್ಯ ಕುರು ಬ್ರಹ್ಮಾಂಡಗೋಲಕೇ | 
ಆ ಭೂತಲಂ ಚೈ ನ ಸಿಂಧುಸಾಗರಕಾನನಂ ॥ ೨೬ ॥ 
ದ್ವಿಪದಾ ಗಿರಯೋ ವೃ ಕ್ಸ ಸ್ತಥಾ ಪಶುಮೃಗಾದಯಃ । 
ಸ್ಟ ಣಕ್ಚೈ ವ ನಡ "ಸಿದ್ದಾ ಯಕ್ಕಾ ಕ್ಸ ರಾಕ್ಸಸಾಃ ॥ ೨೭॥ 
ಶ್ವಾ  ಪದಾದ್ಯಾ ಶ್ಚ ಯೇ ಜೀವಾಶ್ಚ ರಾತೀ ಯತಃ | 
ದಿ ಜ್ಞಾತ ಸ ೇಡಜಾಶ್ಚೆ ವ ಜರಾಯುಜಾಸ್ತ ಥಾಂಂಡಜಾಃ ॥ ೨೮॥ 
ಏಕವಿಂಶತಿಲಕ್ಷಾಣೆ ಎತೈಕಸ್ಯ ಚ ಯೋನಯಃ [ 
ಶುರು ತ್ವಂ ಸಕಲಂ ಚಾಶು ಇತ್ಯುಕ್ತ್ವಾ 90ತರಧೀಯತ | 

ಬ್ರಹ್ಮ ಹ ನಿರ್ಮಿತಂ ಸರ್ವಂ ಬ್ರಹ್ಮಾ ಇಡ ಚ ಯಥೋದಿತಂ (॥ ೨೯॥ 
ಯಸ ್ಮನ್ಸಿತಾನುಹೋ ಜಜ್ಞೇ ಪ್ರ; ಗ್ರ ಭುರೇಕಃ ಪ್ರಜಾಪತಿಃ । 


ಸ್ಥಾಣು ಸುರಗುರುರ್ಭಾನುಃ ಸ್ರಚೇತಾಃ ಸರಮೇಷ್ಟಿ ನಃ 40 
ಯಥಾ ದಕ್ಟೋ ದಕ್ಟಪುತ್ರಾಸ್ಪಥಾ ಸಪ್ತರ್ಷಯಶ್ಚ "ಯೇ | 
ತತಃ ಪ್ರಜಾನಾಂ ಪತಯಃ ಪ್ರಾ *ಭವನ್ನೆ ಇಕನಿಂಶತಿ3 ॥ ೩೧॥ 
ಪುರಷಶ್ಚಾಃಪ್ರಮೇಯಶ್ಚ ಏನಾ ನಂಶ್ಯರ್ಷಯೋ ನಿದುಃ । 
ನಿಶ್ವೇದೇವಾಸ್ತ ಥಾದಿತ್ಯಾ ನಸವಶ್ಚಾಃ ಶ್ರಿನಾವಪಿ ॥ ೩೨॥ 


ಯಕ್ಸಾಃ ಪಿಶಾಚಾಃ ಸಾಧ್ಯಾಶ್ಹ ಸಿತರೋ ಗುಹ್ಯಕಾಸ್ತಥಾ | 
ತತಃ ಪ್ರಸೂತಾ ವಿದ್ವಾ ಸೋ ಹೃಷ್ಟ್‌ ಬ್ರಹ್ಮ ಮರ್ಷಯೋಂಮಲಾಃ ॥ ೩೩ ॥ 

೨೬-೨೯. ಶ್ರೀ ವಿಷ್ಣು ವು ಹೇಳುತ್ತಾನೆ ಮಗು! ನಡು ಈಗ ಕ್ರಮದಂತ 
ಬ್ರಹ್ಮಾಂಡಗೋಲಕದಲ್ಲಿ ಸಾತಾಳವನ್ನೂ , ಭೂಮಿಯನ್ನೂ, ನದಿ, "ಸಮುದ್ರ, 
ಕಾಡುಗಳನ್ನೂ, ಮರ್ಕ ಬೆಟ್ಟ, ಮನುಷ್ಯ. ಪಶುಗಳನ್ನೂ, ಪಕ್ಷಿ, ಗಂಧರ್ವ, ಸಿದ್ಧ, 
ಯಕ್ಸೃ ರಾಕ್ಟೃಸರನ್ನೂ, ಸಿಂಹಾದಿಗಳನ್ನೂ, ಹೀಗೆ ಒಂದೊಂದಕ್ಕೆ ಇಪ್ಪತ್ತೊಂದು 
ಲಕ್ಷಗಳಂತೆ ಉದ್ಭಿಜ್ಜ, ಸ್ವೇದಜ, ಜರಾಯುಜ, ಅಂಡಜಗಳ ಎಂಬತ್ತು ನಾಲ್ಕು 
ಲಕ್ಷ ಜೀವರಾಶಿಗಳನ್ನು ಸೃಷ್ಟಿಸೆಂದು ಹೇಳಿ ಅಂತರ್ಧಾನನಾದನು. ಬ ಸಿ ಹ್ಮನ: 
ವಿಷ್ಣುವು ಹೇಳಿದಂತೆ ಸಕಲಬ್ರಹ್ಮಾಂಡವನ್ನು ನಿರ್ಮಿಸಿದನು. 

೩೦-೩೬. ಈ ಬ್ರಹ್ಮಾಂಡದಲ್ಲಿ ಪಿತಾಮಹ, ಮಹೇಶ್ವ ರ, ಬ್ಬ ಹಸ್ಪತಿ, 
ಸೂರ್ಯ, ವರುಣ, ದಕ್ಷ ದಕ್ಷ ಪುತ್ರರು, ಸಪ್ತ ಇಟ ಇಪ್ಪ ತ್ರ ಸಕ 
ಮಂದಿ ಪ್ರಜಾಪತಿಗಳು, ಸಜನ, "ಅನ್ರಮೇಯ, ನಿಶ್ವೇಡೇವರು, 'ಅದಿತ್ಯರು, 
ವಸುಗಳು, ಅಶ್ವಿನೀದೇವತೆಗಳು, ಯಕ್ಸರು, ಸಿಶಾಚಗಳು, ಸಾಧ್ಯರು, ನಿತೃ 
ಗಳು, ಗುಹ್ಯಕರು, ವಿದ್ವಾಂಸರಾದ ಎಂಟು ಜನ ಬ್ರಹ್ಮರ್ಸಿಗಳು, ಗುಣಶಾಲಿ 
ಗಳಾದ ಬಹುಮಂದಿ ರಾಜರ್ಷಿಗಳು, ಸ್ವರ್ಗ, ನೀರು, ಭೂಮಿ, ವಾಯು, 





ಅಷ್ಟಮೋ5ಧ್ಯಾಯಃ ೧೧೫% 


ರಾಜರ್ಷಯಶ್ಚ ಬಹವಃ ಸರ್ವೇ ಸಮುದಿತಾ ಗುಣೈಃ | 


ದ್ಯೌರಾಪಃ ಪೃಥಿನೀ ವಾಯುರಂತರಿಕ್ಸಂ ದಿಶಸ್ತಥಾ ॥ ೩೪ ॥ 

ಸಂವತ್ಸ ರಾ ರ್ತವೋ ಮಾಸಾಃ ಪಕ್ಕಾ :ಹೋರಾತ್ರ ಯಃ ಕ್ರಮಾತ್‌ । 

ಕಲಾ ಕಾಷ್ಮಾ ಮುಹೂರ್ತಾದಿ ನಿಮೇಷಾದಿ ಅನಾಸ ಸ್ತಥಾ” ॥ ೩೫ ॥ 

ಗ್ರಹಚಕ್ರಂ ಸನಕ್ಟತ್ರಂ ಯುಗಾ ಮನ್ಹಂತರಾದಯಃ. I 

ಯಚ್ಚಾ $ನ್ಯ ದಪಿ ತತ್ಸರ್ವಂ ಸಂಭೂತಂ ಲೋಕಸಾಕ್ಸಿಕಂ ॥ ೩೬ ॥ 

ಯದಿದಂ ಡೈ ಶ್ಯ ತೇ ಚಿಕ್ರ 0 ಸಿಂಚಿತ್ಸಾ ವರಜಂಗಮಂ | 

ಪುನಃ ಸಂಕ್ಸಿ ಸ ಡೀ ಪುತ್ರ ಜಗತ್ತಾ ಸೆ K ಯುಗಕ್ಸ್ಸಯೇ ॥ ೩೭ ॥ 

ಯಥರ್ತಾನ್ಯ ತುಲಿಂಗಾನಿ A ಸರೇ | 

ದೃಶ್ಯಂತೇ ತಾನಿ ತಾನ್ಯೇನ ತಥಾ ನತ್ಸ ಯುಗಾದಿಕಂ ॥ ೩೮ ॥ 
ಶಿವ ಉವಾಚ 

ಅತಃ ಪರಂ ಪ್ರವಕ್ಗಾ ಠ್ಸ್ಯಾನಿ ಕಥಾಂ ಪೌರಾಣಿಕೀಂ ಶುಭಾಂ । 

ಬ್ರಹ್ಮಣಶ್ಚ ತಥಾ ಪುತ್ರ ನಂಶಸೆ ್ಯೈವಾಂನುಕೀರ್ತನಂ 1 ೩೯॥ 

ಬ್ರಹ್ಮಣೋ ಮಾನಸಾಃ ಪುತ್ರಾ ನಿದಿತಾಃ ಷಣ್ಮಹರ್ಷಯಃ । 

ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ ॥ ೪೦ ॥ 

ಮರೀಚೇಃ ಕಶ್ಯಪಃ ಪುತ್ರಃ ಕಶ್ಯಪಾಚ್ಚರಮಾಃ ಪ್ರಜಾಃ । 

ಪ್ರಜಜ್ಜಿರೇ ಮಹಾಭಾಗಾ ದಕ್ಸಕನ್ಯಾಸ್ತ್ರಯೋದಶ ॥ ೪೧॥ 











ಆಕಾಶ, ದಿಕ್ಕುಗಳು, ಸಂವತ್ಸರ, ಖುತುಗಳು, ಮಾಸಗಳು, ಪಕ್ಷಗಳು, ಹಗಲು 
ರಾತ್ರಿಗಳು, ಕಲಾ, ಕಾಷ್ಠ, ಮುಹೂರ್ತಗಳು, ಲವನಿಮಿಷಗಳು, ಗ್ರಹಗಳು, 
ನಕ್ಬತ್ರಗಳು, ಯುಗಗಳು, ಮಸ್ತಂತರಾದಿಗಳು, ಇನ್ನೂ ಇತರ ಪ್ರಸಂಚ 
ಸಾಕ್ಷಿಗಳಾದ ವಸ್ತುಗಳೆಲ್ಲವೂ ಹುಟ್ಟಿ ದುವು. 

೩೭. ಮಗು! ಕಣ್ಣಿಗೆ ಕಾಣುವ ಈ ಚರಾಚರಾತ್ಮಕವಾದ ಈ ಪ್ರಪಂಚವು 
ಯುಗಾಂತ್ಯದಲ್ಲಿ ತಿರುಗಿ 'ಸಂಕ್ಸಿಪ ರ್ವವಾಗುವುದು, 

೩೮. ಮಗು! ಯುತುಗಳಲ್ಲಿ ಅವುಗಳ ಚಿಹ್ನೆಗಳು ಕಾಣುವಂತೆ ಯುಗವು 
ಆರಂಭಿಸಿದಾಗ ಮತ್ತೆ ಅದೇ ನಾಮರೂಪಗಳು ಕಾಣಿಸುವುವು. 

೩೯. ಶಿವನು ಹೇಳುತ್ತಾನೆ:--ವತ್ಸ! ಇನ್ನುಮುಂದೆ ಬ್ರ ಹ್ಮನ ವಂಶವನ್ನು 
ತಿಳಿಸುವ ಪೌರಾಣಿಕ ಕಥೆಯನ್ನು ಹೇಳುವೆನು. 

ಬ್ರಹ್ಮನ ಮನಸ್ಸಿನಿಂದ ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ಥ, 

ಪುಲಹ, ಕ್ರತುಗಳೆಂಬ ಪ್ರಸಿದ್ಧರಾದ ಆರು ಜನ ಮಹರ್ಷಿಗಳು ಉದ್ಭವಿಸಿದರು. 

೪೧. ಮರೀಚಿಯಿಂದ ಕಶ್ಯಸನೂ, ಕಶ್ಯಸನಿಂದ ಉಳಿದ ಪ್ರಜೆಗಳೂ, 
ದಕ್ಸನಿಂದ ಹದಿಮೂರು ಜನ ಹೆಣ್ಣುಮಕ್ಕಳೂ ಹುಟ್ಟಿದರು. 


೧೧೬ ಶ್ರೀ ಸ್ಕಾಂಡನುಹಾಪುರಾಣಂ 


ಅದಿತಿರ್ದಿತಿರ್ದನುಃ ಕಾಲಾ ದನಾಯುಃ ಸಿಂಹಿಕಾ ತಥಾ । 
ಕ್ರೋಧಾ ಪ್ರೋನಾ ವಸಿಸ್ಮಾ ಚ ವಿನತಾ ಕಪಿಲಾ ತಥಾ ॥ ೪೨ ॥ 
ಕಂಡೂಕ್ಟೈನ ಸುನೇತ್ರಾ ಚ ಕಶ್ಯಪಾಯ ದದೌ ತದಾ । 


ಅದಿತ್ಯಾಂ ದ್ವಾದಶಾದಿತ್ಯಾಃ ಸಂಜಾತಾ ಹಿ ಶುಭಾನನಾಃ ॥ ೪೩ ॥ 
ಸೂರ್ಯಾದ್ಹೈ ಧರ್ಮರಾಡ್ವಚ್ಞೇ ತೇನೇದಂ ನಿರ್ನಿತಂ ಪುರಾ । 
ಧರ್ಮೇಣ ನಿರ್ಮಿತಂ ದೃಷ್ಟ್ಯಾ ಧರ್ಮಾಃ ರಣ್ಯಮನುತ್ತಮಂ | 
ಧರ್ಮಾಂರಣ್ಯಮಿತಿಪ್ರೋಕ್ತಂ ಯನ್ಮಯಾ ಸ್ಕಂದ ಪುಣ್ಯದಂ ॥ ೪೪॥ 
ಸ್ಕಂದ ಉವಾಚ :-- 
ಧರ್ಮಾಂರಣ್ಯಸ್ಯ ಚಾಖ್ಯಾನಂ ಸರಮಂ ಪಾವನಂ ತಥಾ | 
ಶ್ರೋತುಮಿಚ್ಚಾಮಿ ತತ್ಸರ್ವಂ ಕಥಯಸ್ಥ ಮಹೇಶ್ವರ ॥ ೪೫ ॥ 
ಈಶ್ವರ ಉವಾಚ :-- 
ಇಂದ್ರಾದ್ಯಾಃ ಸಕಲಾ ದೇವಾ ಅನ್ನಯುರ್ಬ್ಯ ಹ್ಮಣಾ ಸಹ । 
ಅಹಂ ವೈ ತತ್ರ ಯಸ್ಯಾನಿ ಕ್ಸೇತ್ರಂ ಸಾಪನಿಷೂದನಂ ॥ ೪೬॥ 
ಸ್ಕಂದ ಉವಾಚ :- 
1 ೪೭ ॥ 


ಅಹನುಪ್ಯಾಗಮಿಷ್ಯಾನಿ ತಂ ದ್ರಷ್ಟುಂ ಶಶಿಶೇಖರ | 





೪೨-೪೩. ಈ ಹದಿಮೂರು ಜನರು ಅದಿತಿ, ದಿತಿ, ದನು, ಕಾಲಾ, 
ದನಾಯು, ಸಿಂಹಿಕಾ ಕ್ರೋಧಾ, ಪ್ರೋನಾ, ವಸಿಷ್ಠಾ, ವಿನತಾ, ಕಪಿಲಾ, 
ಕಂಡೂ, ಸುನೇತ್ರಾ ಎಂಬವರು. ಈ ಕನ್ಯೆಯರನ್ನು ದಕ್ಷನು ಕಶ್ಯಸನಿಗೆ 
ಮದುನೆಮಾಡಿಕೊಟ್ಟನು. ಅವರಲ್ಲಿ ಅದಿತಿಯಲ್ಲಿ ಸುಂದರರಾದ ಹನ್ನೆರಡು ಜನ 
ಆದಿತ್ಯರು ಜನಿಸಿದರು. 

೪೪. ಸೂರ್ಯನೆಂಬ ಆದಿತ್ಯನಿಂದ ಯಮನು ಹುಟ್ಟಿದನು. ಅವನಿಂದ 
ಈ ಧರ್ಮಾರಣ್ಯವು ನಿರ್ಮಿತವಾಗಲು ನಾನು ಪವಿತ್ರವಾದ ಈ ಕ್ಸೇತ್ರಕ್ಕೆ 
ಧರ್ಮಾರಣ್ಯವೆಂದು ಹೆಸರನ್ಸಿಟ್ಟಿನು. 

೪೫. ಸ್ವಂದನು ಕೇಳುತ್ತಾನೆ: ಮಹೇಶ್ವರ! ಧರ್ಮಾರಣ್ಯದ ಪವಿತ್ರ 
ವಾದ ಕಥೆಯನ್ನು ಕೇಳಲಿಚ್ಛಿಸುವೆನು. ಅದನ್ನೆಲ್ಲ ನನಗೆ ಹೇಳು. 

೪೬, ಈಶ್ವರನು ಹೇಳುತ್ತಾನೆ: ಮಗು! ಇಂದ್ರಾದಿ ದೇವತೆಗಳು 
ಬ್ರಹ್ಮನೊಡನೆ ಇಲ್ಲಿಗೆ ಬಂದಿದ್ದಾರೆ. ನಾನು ಪಾಸನಿನಾಶಕನಾದ ಆ ಕ್ಸೇತ್ರಕ್ಕೆ 
ತೆರಳುವೆನು. 

೪೭. ಸ್ಫಂದನು ಹೇಳುತ್ತಾನೆ;--ಓ ಚಂದ್ರಮೌಳಿ! ನಾನೂ ಅದನ್ನು 
ನೋಡಲು ಬರುವೆನು. 


ಅಸ್ಪನೋರಧ್ಯಾಯಃ ೧೧೭ 


ಸೂತ ಉವಾಚ:- 
ತತಃ ಸ್ವಂದಸ್ತಥಾ ರುದ್ರಃ ಸೂರ್ಯಕ್ಚೈವಾಃನಿಲೋಂನಲಃ । 


ಸಿದ್ಧಾಶ್ಚೈನ ಸಗಂಧರ್ವಾಸ್ತಫೈವಾಂಪ್ಸರಸಃ ಶುಭಾಃ ॥ ೪೮ ॥ 

ಪಿಶಾಚಾ ಗುಹ್ಯಕಾಃ ಸರ್ವ ಇಂದ್ರೋ ವರುಣ ಏವ ಚ । 

ನಾಗಾಃ ಸರ್ವಾಃ ಸಮಾಜಗ್ಮುಃ ಶುಕ್ರೋ ವಾಚಸ್ಪತಿಸ್ತಥಾ ॥೪೯॥ 

ಗ್ರಹಾಃ ಸರ್ವೇ ಸನಕ್ಸತ್ರಾ ವಸವೋ ಷ್ಟೌ ಧ್ರುನಾದಯಃ । 

ಅಂತರಿಕ್ಟಚರಾಃ ಸರ್ನೇ ಯೇ ಚಾನ್ಯೇ ನೆಗನಾಸಿನಃ ॥೫೦॥ 

ಬ್ರಹ್ಮಾದಯಃ ಸುರಾಃ ಸರ್ವೇ ವೈಕುಂಠಂ ಪರಯಾ ಮುದಾ । 

ಮಂತ್ರಣಾರ್ಥಂ ತದಾ ಬ್ರಹ್ಮಾ ನಿಷ್ಠವೇಂನಿಂತತೇಜಸೇ ॥ ೫೧॥ 

ಗತ್ವಾ ತಸ್ಮಿಂಶ್ಚ ವೈಕುಂಠೇ ಬ್ರಹ್ಮಾ ಲೋಕಪಿತಾಮಹಃ । 

ಧ್ಯಾತ್ವಾ ಮುಹೂರ್ತಮಾಚಷ್ಟ ನಿಷ್ಣುಂ ಪ್ರತಿ ಸುಹರ್ಹಿತಃ ॥ ೫೨॥ 
ಬ್ರಹ್ಮೋವಾಚ :-- » 

ಕೃಷ್ಣ ಕೃಷ್ಣ ಮಹಾಬಾಹೋ ಕೃಷಾಲೋ ಪರಮೇಶ್ವರ । 

ಸ್ರಷ್ಟಾ ತ್ವಂ ಚೈನ ಹರ್ತಾ ತ್ವಂ ತ್ವನೇವ ಜಗತಃ ಪಿತಾ ॥ ೫೩ ॥ 

ನಮಸ್ತೇ ನಿಷ್ಠನೇ ಸೌಮ್ಯ ನಮಸ್ತೇ ಗರುಡಧ್ವಜ । 

ನಮಸ್ತೇ ಕಮಲಾಕಾಂತ ನಮಸ್ತೇ ಬ್ರಹ್ಮರೂಪಿಣೇ ॥ ೫೪॥ 





೪೮-೫೧. ಸೂತನು ಹೇಳುತ್ತಾನೆ:--ಬಳಿಕ ಸ್ಕಂದ, ರುದ್ರ, ಸೂರ್ಯ, 
ವಾಯು, ಅಗ್ನಿ ಸಿದ್ಧರು, ಗಂಧರ್ವರು, ಮಂಗಳಕರರಾದ ಅಸ್ಪರಸ್ತ್ರೀಯರು, 
ಪಿಶಾಚರು, ಗುಹೈಕರು, ಇಂದ್ರ, ವರುಣ, ಸಕಲನಾಗಗಳು, ಶುಕ್ರ, 
ಬೃಹಸ್ಪತಿ, ಸಕಲ ಗ್ರಹಗಳು, ನಕ್ಸತ್ರಗಳು, ಅಷ್ಟವಸುಗಳ್ಳು ಧ್ರುವಾದಿಗಳು, 
ಆಕಾಶಚಾರಿಗಳು, ಬೆಟ್ಟಗಳಲ್ಲಿ ವಾಸಿಸುವವರು, ಬ್ರಹ್ಮಾದಿ ಸಕಲ ಸುರರು, 
ಇವರೆಲ್ಲರೂ ವಿಷ್ಣು ವಿನೊಡನೆ ಆಲೋಚಿಸುವುದಕ್ಕಾಗಿ ಅತಿ ಸಂತೋಷದಿಂದ 
ವೈಕುಂಠಲೋಕಕ್ಕೆ ಹೋದರು. 

೫೨. ಅಲ್ಲಿ ಚತುರ್ಮುಖಬ್ರಹ್ಮನು ಮುಹೊರ್ತಕಾಲ ವಿಷ್ಣುವನ್ನು 
ಧ್ಯಾನಿಸಿ ಸಂತೋಷದಿಂದ ಹೀಗೆ ಸ್ತುತಿಸಿದನು. 

೫೩. ಬ್ರಹ್ಮನು ಹೇಳುತ್ತಾನೆ :--ಪಾಸನಾಶಕನೂ, ಆಜಾನುಬಾಹುವೂ, 
ದಯಾಳುವೂ, ಮಹಾಸ್ರಭುತ್ವವುಳ್ಳನನೂ ಆದ ಓ ನಾರಾಯಣ! ನೀನೆ 
ಜಗತ್ತನ್ನು ಸೃಷ್ಟಿಸುವವನೂ, ಪಾಲಿಸುವವನೂ, ನಾಶಗೊಳಿಸುವನನೂ 
ಆಗಿರುವೆ. 

೫೪. ಸೌಮ್ಯನೂ, ಗರುಡವಾಹನನೂ, ಲಕ್ಷ್ಮ್ಮೀಸತಿಯೂ, ಬ್ರಹ್ಮ 
ರೂಪಿಯೂ ಆಗಿರುವ ನಿಷ್ಣುವೆ! ನಿನಗೆ ನಮಸ್ಕಾರವು. 


೧೧೪ ಶ್ರೀ ಸ್ಕಾಂದಮಹಾಪುರಾಣಂ 


ನಮಸ್ತೇ ಮತ್ಸ್ಯರೂಸಾಯ ನಿಶ್ವರೂಪಾಯ ವೈ ನಮಃ । 


ನಮಸ್ತೇ ದೈತ್ಯನಾಶಾಯ ಭಕ್ತಾನಾಮುಭಯಾಯ ಚ ॥ ೫೫ ॥ 
ಕಂಸಘ್ನಾಯ ನಮಸ್ತೇಸ್ತು ಬಲದೈತ್ಯಜಿತೇ ನಮಃ। 
ಬ್ರಹ್ಮಣೈನಂ ಸ್ತುತಶ್ಹಾಸೀತ್ರತ್ಯಕ್ಟೋಂಸೌ ಜನಾರ್ದನಃ ॥ ೫೬ ॥ 
ಪೀತಾಂಂಬರೋ ಘನಶ್ಯಾಮೋ ನಾಗಾರಿಕೃತವಾಹನಃ । 

ಚತುರ್ಭುಜೋ ಮಹಾತೇಜಾಃ ಶಂಖಚಕ್ರಗದಾಧರಃ ॥ ೫೭॥ 
ಸ್ತೂಯಮಾನಃ ಸುರೈಃ ಸರ್ವೈಃ ಸ ದೇವೋಮಿತನಿಕ್ರಮಃ । 
ವಿದ್ಯಾಧರೈಸ್ತಥಾ ನಾಗೈಃ ಸ್ತೂಯಮಾನಶ್ಚ ಸರ್ವಶಃ ॥ ೫೮॥ 
ಉತ್ತಸ್ಕೌ ಸ ತದಾ ದೇವೋ ಭಾಸ್ಕರಾಃನಿತದೀಪ್ತಿ ಮಾನ್‌ । 

ಕೋಟರತ್ನ ಪ್ರಭಾಭಾಸ್ಪನ್ಮುಕುಟಾದಿನಿಭೂಷಿತಃ ॥೫೯॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "ವಿಷ್ಣು 
ಸಮಾಗಮೊಲಿ?ನಾಮಾಷ WU 





೫೫. ಮತ್ಸ್ಯರೂಪನೂ, ವಿಶ್ವ ಚು ರೈತ್ಯನಾಶಕನೂ. Wi 
ಅಭಯಪ್ರ ದನೂ : ಸಹ ನಿನಗೆ ನನುಸ್ಯಾರವು. 

೫೬, ಕಂಸಾಂತಕನೂ, ಬಂ ಸತು ಗೆದ ವನೂ ಆಗಿರುವ ರಿನಗೆ 
ವಂದನೆಯು. ಎಂದು ಬ್ರಹ್ಮನು ಸ್ತೋತ್ರ ಮಾಡಲು ವಿಷ್ಣುವು ಪ್ರ ತ್ಯಕ್ಸ 
ನಾದನು. 

೫೭-೫೯. ಬಳಿಕ ಪೀತಾಂಬರಧಾರಿಯೂ, ಮೇಘದಂತೆ ಕಪ್ಪು ಬಣ್ಣ 
ವುಳ್ಳವನೂ, ಗರುಡನನ್ನೇರಿದವನೂ, ನಾಲ್ಕು ತೋಳುಗಳುಳ್ಳವನೂ, ಅತ್ಯಂತ 
ತೇಜಸ್ವಿಯೂ, ಶಂಖ, ಚಕ್ರ, ಗದೆಗಳನ್ನು ಕೈಯಲ್ಲಿ ಹಿಡಿದವನೂ, ಸೂರ್ಯ 
ನಂತೆ ಅತ್ಯಂತ ಕಾಂತಿಯುಳ್ಳವನೂ, ಅನೇಕ ರತ್ನಗಳ ಕಾಂತಿಗಳಿಂದ ಬೆಳಗುವ 
ಕಿರೀಟಾದಿಗಳಿಂದ ಅಲಂಕೃತನೂ ಆಗಿರುವ ಶ್ರೀ ಮಹಾವಿಷ್ಣುವು ಸಕಲ 
ದೇವತೆಗಳಿಂದಲೂ, ನಿದ್ಯಾಧರರಿಂದಲೂ, ನಾಗರಿಂದಲೂ ಸ್ತುತಿಸಲ್ಪಡುತ್ತ 
ಆವಿರ್ಭವಿಸಿದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ ಸಿದ್ಧವಾದ 
ಶ್ರೀ ಸ್ಕಾ "ದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮೆ ,ಯೆಲ್ಲಿ 98 ವಿಷ್ಣು ಸಮಾಗನು ೨ ನೆಂಬ 
ಎಂಟನೆಯ ಅಧ್ಯಾಯವು ಮುಗಿದುದು 


॥ ಪ್ರೀ 

ಅಥ ನವಮೋಂಧ್ಯಾಯಃ 

ಗೋತ್ರಪ್ರನರ ಗೋತ್ರದೇವಿಕಥನಂ 
ವ್ಯಾಸ ಉವಾಚ :-- 
ಯತಾಂ ರಾಜಶಾರ್ದೂಲ ಪುಣ್ಯಮಾಖ್ಯಾನಮುತ್ತಮಂ । 
ಯಮಾನೋ ಜಗನ್ನಾಥ ಇದಂ ವಚನನುಬ್ರನೀತ್‌ non 

ವಿಷ್ಣುರುನಾಚ:- 

"ಮರ್ಥಮಾಗತಾಃ ಸರ್ವೇ ಬ್ರಹ್ಮಾದ್ಯಾಃ ಸುಳ್ಳಸತ್ತಮಾಃ । 
ಕೈಥಿವ್ಯಾಂ ಕುಶಲಂ ಕಚ್ಚಿತ್ಯುತೋ ವೋ ಭಯಮುಾಗತಂ ॥೨॥ 
ತಃ ಪ್ರೋವಾಚ ವೈ ಹೃಷ್ಟೋ ಬ್ರಹ್ಮಾ ತಂ ಕೇಶವಂ ನಚಃ । 
1 ಭಯಂ ನಿದ್ಯತೇಃಸ್ಮಾಕಂ ತ್ರೈಲೋಕ್ಯ್ಕೇ ಸಚರಾಚರೇ ॥೩॥ 
ಕಂ ನಿಜ್ಜಾಪನಾರ್ಥಾಯ ಆಗತೋಹಂ ತಮಾಂತಿಕೇ । 
$ದಹಂ ಸಂಪ್ರನಕ್ಸ್ಟ್ಯಾನಿ ತದೇತಚ್ಛೃಣು ನೇ ನಚಃ ॥೪॥ 
ಕರಂ ತು ಪೂರ್ವಂ ಧರ್ಮೇಣ ಸ್ಥಾಪಿತಂ ತೀರ್ಥನಮುತ್ತಮಂ | 
1ದ್ಹ್ರೃಷ್ಟುಕಾನೋಂಹಂ ದೇವ ತ್ವತ್ಪ್ರಸಾವಾಜ್ಜನಾರ್ದನ 1೫॥ 


ಜ್ಯ 
ಸೂ 


ಕನ್ನಡದ ಅನುವಾದ 
ಗೋತ್ರಪ್ರವರ ಗೋತ್ರದೇನೀಕಥನ 

೧. ವ್ಯಾಸನು ಹೇಳುತ್ತಾನೆ:-ರಾಜೇಂದ್ರ! ಉತ್ತಮವಾದ ಈ ಕಥೆಯನ್ನು 
ಕೀಳು. ದೇವತೆಗಳು ಸ್ಕೋತ್ರಮಾಡಲು ವಿಷ್ಣುವು ಈ ಮಾತನ್ನಾಡಿದನು. 

೨. ವಿಷ್ಣುವು ಹೇಳುತ್ತಾನೆ: ಎಲೈ ಬ್ರಹ್ಮಾದಿ ಸುರೋತ್ತಮಕಿ! 
ನೀವೆಲ್ಲರೂ ಇಲ್ಲಿಗೆ ಏಕೆ ಬಂದಿದ್ದೀರಿ? ಭೂಮಿಯಲ್ಲೆಲ್ಲ ಕ್ಲೇಮವಷ್ಟೆ. ನಿಮಗೆ 
ಯಾರಿಂದ ಭಯವು ಸಂಭವಿಸಿರುವುದು?'' 

೩. ಬಳಿಕ ಸಂತೋಷಗೊಂಡ ಬ್ರಹ್ಮನು ಶ್ರೀವಿಷ್ಣು ವನ್ನು ಕುರಿತು 
೩ಂತೆಂದನು:-"" ನಮಗೆ ಚರಾಚರಾತ್ಮಕನಾದ ಈ ಮೂರು ಲೋಕಗಳಲ್ಲಿ 
ಯಾವ ಹೆದರಿಕೆಯೂ ಇರುವುದಿಲ್ಲ. 

೪. ಒಂದನ್ನುಮಾತ್ರ ಅರಿಕೆಮಾಡಿಕೊಳ್ಳುವುದಕ್ಕಾಗಿ ನಾನು ನಿನ್ನೆಡೆಗೆ 
ುಂದಿರುವೆನು. ಅದನ್ನು ಹೇಳುವೆನು, ಲಾಲಿಸಬೇಕು. 

೫. ಜನಾರ್ದನ! ನಾನು ನಿನ್ನ ಅನುಗ್ರಹದಿಂದ ಯಮನು ಹಿಂದೆ 
ಸ್ಥಾಪಿಸಿದ ಉತ್ತಮ ತೀರ್ಥವನ್ನು ನೋಡಲು ಬಯಸುವೆನು. 


೧೨೦ ಶ್ರೀ ಸ್ಕಾಂದಮಹಾಪುರಾಣಂ 


ತತ್ರ ತ್ವಂ ದೇವದೇವೇಶ ಗಮನೇ ಕುರು ಮಾನಸಂ | 

ಯಥಾ ಸತ್ತೀರ್ಥತಾಂ ಯಾತಿ ಧರ್ಮಾಃ ರಣ್ಯಮನುತ್ತಮಂ ॥೬॥ 
ವಿಷ್ಣುರುನಾಚ:-- 

ಸಾಧು ಸಾಧು ಮಹಾಭಾಗ ತ್ವರ್ಯತಾಂ ತತ್ರ ಮಾ ಚಿರಂ। 

ಮಮಾಃಸಿ ಚಿತ್ತಂ ತತ್ರೈನ ತದ್ದರ್ಶನೇಂಸ್ತಿ ಲಾಲಸಂ un 
ವ್ಯಾಸ ಉವಾಚ:- 

ತಾರಮಾರುಹ್ಯ ಗೋವಿಂದಸ್ತತ್ರಾಃಗಾಚ್ಛೇಫ್ರಮೇನ ಹಿ । 

ತತೋ ಧರ್ಮೇಣ ತೇ ದೇವಾಃ ಸೇಂದ್ರಾಃ ಸರ್ಷಿಗಣಾಸ್ತಥಾ nen 

ಬ್ರಹ್ಮನಿಷ್ಣುಮಹೇಶಾದ್ಯಾ ದೃಷ್ಟಾ ದೂರಾನ್ಮುಮೋದ ಚ। 

ಧರ್ಮರಾಜೋನಿ ತಾನ್ಸೃಷ್ಟ್ಯಾ ದೇವಾನ್ಹಿಷ್ಟುಪುರೋಗಮಾನ್‌ wen 

ಆಗತಃ ಸ್ವಾಶ್ರಮಾತ್ತತ್ರಪೂಜಾಂ ಪ್ರಗೃಹ್ಯ ತತ್ಸುರಃ । 

ಆಸನಾದುತ್ತಿತಃ ಶೀಘ್ರಂ ಸಪರ್ಯಾದ್ಯಂ ಪ್ರಗೃಹ್ಯ ಚ । 

ಏಕೈಕಸ್ಯ ಚಕಾರಾಂಥ ಪೂಜಾಂ ಚೈನ ಪೃಥಕ್ಪೃಥಕ್‌ ॥ ೧೦॥ 

ಚಕಾರ ಪೂಜಾಂ ವಿಧಿವತ್ತೇಷಾಂ ತತ್ರಾಂರ್ಕನಂದನಃ | 

ಆಸನೇಷೂಪನೇಶ್ಯಾಂಥ ಪೂಜಾಂ ಕೃತ್ವಾ ಗರೀಯಸೀಂ ॥ ೧೧॥ 
ಯಮ ಉವಾಚ: 

ತೀರ್ಥರೂಪಮಿದಂ ಕ್ಸೇತ್ರಂ ಪ್ರಸಾದಾಜದ್ದೇವಕೀಸುತ 1 


ಎ 


ತ್ವತ್ತೋಷವಿಧಿನಾ ಚಾದ್ಯ ಕೃಪಯಾ ಚ ಶಿವಸ್ಯ ಚ ॥ ೧೨॥ 





೬. ದೇವತೆಗಳಿಗೊಡೆಯನಾದ ಇಂದ್ರನಿಗೂ ಸ್ವಾಮಿಯಾದ 12 
ನಾರಾಯಣ! ಅಲ್ಲಿಗೆ ಹೋಗಲು ನೀನು ಮನಸ್ಸನ್ನು ಮಾಡು. ಆ ಧರ್ಮಾ 
ರಣ್ಯವು ನಿನ್ನ ಸನ್ನಿಧಾನದಿಂದ ಉತ್ತಮ ತೀರ್ಥವಾಗಲಿ. 

೭. ವಿಷ್ಣುವು ಹೇಳುತ್ತಾನೆ :--ಮಹಾಭಾಗ್ಯಶಾಲಿಯಾದ ಸಿತಾಮಹನೆ! 
ಒಳ್ಳೆಯದು, ತ್ವರೆಮಾಡು. ನನ್ನ ಮನಸ್ಸೂ ಆ ತೀರ್ಥವನ್ನು ನೋಡಲು 
ಕುತೂಹಲವುಳ್ಳುದಾಗಿದೆ. 

೮-೧೧. ವ್ಯಾಸನು ಹೇಳುತ್ತಾನೆ:--ವಿಷ್ಣುವು ಗರುಡನನ್ನೇರಿ ಶೀಘ್ರವಾಗಿ 
ಆ ಧರ್ಮಾರಣ್ಯಕ್ಕೆ ಹೋದನು. ಬಳಿಕ ಯಮಧರ್ಮನು ತನ್ನ ತೀರ್ಥಕ್ಕೆ 
ಬಂದಿರುವ ಬ್ರಹ್ಮಾದಿಗಳನ್ನು ಕಂಡು ಸಂತೋಷದಿಂದ ಆಸನದಿಂದೆದ್ದು ಆಶ್ರಮ 
ದಿಂದ ಹೊರಕ್ಕೆ ಬಂದು ಅವರ ಮುಂದೆ ಪೂಜಾಸಾಮಗ್ರಿಗಳನ್ನು ಸಿದ್ಧಮಾಡಿ 
ಕೊಂಡು ಒಬ್ಬೊಬ್ಬರಿಗೂ ಬೇಕೆ ಬೇರೆಯಾಗಿ ಪೂಜೆಮಾಡಿದನು. ಹೀಗೆ ಆ 
ಯಮನು ಶಾಸ್ತ್ರೋಕ್ತರೀತಿಯಿಂದ ಆ ವಿಷ್ಣುವೇ ಮೊದಲಾದವರಿಗೆ ಅತಿಶಯ 
ಪೂಜೆಯನ್ನ ರ್ಪಿಸಿ ಅವರನ್ನು ಉಚಿತಾಸನಗಳಲ್ಲಿ ಕುಳ್ಳಿರಿಸಿದನು. 

೧೨. ಯಮನುಹೇಳುತ್ತಾನೆ:--ದೇವಕೀಪುತ್ರನಾದ ಎಲೈ ಶ್ರೀಕೃಷ್ಣನೆ! 


ನನಮೋತಧ್ಯಾಯಃ ೧೨೧ 


ಅದ್ಯ ಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ತಪಃ । 

ಅದ್ಯ ಮೇ ಸಫಲಂ ಸ್ಥಾನಂ ಕಾಜೇಶಾನಾಂ ಸಮಾಗಮಾತ್‌ ॥ ೧೩ ॥ 
ವ್ಕಾಸಉವಾಚ:- 

ಏನಂ ಸ್ತುತಸ್ತದಾ ವಿಷ್ಣುಃ ಪ್ರೋನಾಚ ಮಧುರಂ ವಚಃ । 

ತುಷ್ಬೋಸ್ಮಿ ಧರ್ಮರಾಜೇಂದ್ರ ಅಹಂ ಸ್ತೋತ್ರೇಣ ತೇವಿಭೋ ॥ ೧೪ ॥ 

ಕಿಂಚಿತ್ರಾರ್ಥಯ ಮತ್ತೋಂಹಂ ಕರೋಮಿ ತವ ವಾಂಛಿತಂ | 

ಯತ್ತೇಇಸ್ತ್ಯಭೀಸ್ಸಿತಂ ತುಭ್ಯಂ ತದ್ದದಾಮಿ ನ ಸಂಶಯಃ ॥ ೧೫ ॥ 
ಯಮ ಉವಾಚ :-- 

ಯದಿ ತುಷ್ಬೋಸಿ ದೇನೇಶ ವಾಂಛಿತಂ ಕುರುಷೇ ಯದಿ । 

ಧರ್ಮಾಃರಣ್ಯೇ ಮಹಾಪುಣ್ಯೇ ಬುಹೀಣಾಮಾಶ್ರಮಾನ್ಯುರು ॥ ೧೬॥ 

ವಸಂತಿ ವಾಡವಾ ಯತ್ರ ಯಜಂತಿ ಚೈವ ಯಾಜ್ಞಿಕಾಃ | 

ನೇದನಿರ್ಫೊೋಷಸಂಯುಕ್ತಂ ಭಾತಿ ತತ್ತೀರ್ಥಮುತ್ತಮಂ ॥ ೧೭ ॥ 

ಅಬ್ರಾಹ್ಮಣನಿದಂ ತೀರ್ಥಂ ಪೀಡಯಿಷ್ಯಂತಿ ಜಂತವಃ । 

ತಸ್ಮಾತ್ರೃಂ ವಾಡವಾಂಛೌರೇ ಸಮಾನಯ ಯಷೀನ್ಸಹೂನ್‌ । 

ಧರ್ಮಾಂರಣ್ಯಂ ಯಥಾ ಭಾತಿ ತ್ರೈಲೋಕ್ಕೇ ಸಚರಾಚರೇ ॥ ೧೮ ॥ 

ಈಗ ಈ ಕ್ಷೇತ್ರವು ನಿನ್ನನ್ನು ಸಂತೋಷಪಡಿಸಿದುದರಿಂದಲೂ, ಶಿವನ ದಯೆ 

ಯಿಂದಲೂ, ತೀರ್ಥವಾಯಿತು. 

೧೩. ಬ್ರಹ್ಮ ವಿಷ್ಣು ಮಹೇಶ್ವರರ ಸಮಾಗಮದಿಂದ ನನ್ನ ಈ ಜನ್ಮವೂ, 
ತಸಸ್ಸೂ, ಕ್ಸೇತ್ರವೂ ಸಫಲವಾದುವು. 

೧೪-೧೫. ವ್ಯಾಸನು ಹೇಳುತ್ತಾನೆ: ಆಗ ಈ ರೀತಿ ಸ್ತೋತ್ರಮಾಡಲ್ಪಟ್ಟ 
ವಿಷ್ಣುವು, ಧರ್ಮರಾಜ! ನಿನ್ನ ಸ್ತೋತ್ರಕ್ಕೆ ನಾನು ಮೆಚ್ಚಿದೆನು. ನಿನಗೆ 
ಇಷ್ಟವಾದುದನ್ನು ಏನನ್ನಾದರೂ ನನ್ನಿಂದ ಕೇಳಿಕೊ. ಅ ನಿನ್ನ ಅಭೀಪ್ಸಿತವನ್ನು 
ಕೊಡುವೆನು. ಸಂಶಯಪಡಬೇಡ:'' ಎಂದು ಸವಿನುಡಿಗಳನ್ನಾಡಿದನು. 

೧೬. ಯಮನು ಹೇಳುತ್ತಾನೆ:--ಸ್ವಾಮಿ! ನೀನು ಸಂತೋಷಗೊಂಡಿರು 
ವುದು ದಿಟವಾದರೆ ನನ್ನ ಇಷ್ಟಾರ್ಥವನ್ನು ಕೊಡುವುದಾದರೆ ಮಹಾಪುಣ್ಯಕರೆವಾದ 
ಈ ಧರ್ಮಾರಣ್ಯದಲ್ಲಿ ಮುನಿಗಳ ಆಶ್ರಮಗಳನ್ನು ನಿರ್ಮಿಸು. 

೧೭-೧೮. ಎಲ್ಲಿ ಬ್ರಾಹ್ಮಣರು ವಾಸಮಾಡುವರೊ, ಖುತ್ತಿಜರು ಯಜ್ಞ 
ಮಾಡುವರೊ, ವೇದಘೋಷಸಹಿತವಾದ ಆ ಸ್ಥಳವು ಉತ್ತಮ ತೀರ್ಥವಾಗಿ 
ಬೆಳಗುವುದು. ಬ್ರಾಹ್ಮಣರಿಲ್ಲದ ಈ ತೀರ್ಥವನ್ನು ಪ್ರಾಣಿಗಳು ಪೀಡಿಸುವುವು. 
ಕೃಷ್ಣ! ಆದುದರಿಂದ ಬಹುಮಂದಿ ಖುಷಿಗಳನ್ನು ಇಲ್ಲಿಗೆ ಕರೆಯಿಸು. ಧರ್ಮಾ 
ರಣ್ಯವನ್ನು ಮೂರುಲೋಕದಲ್ಲೆಲ್ಲ ಪ್ರಕಾಶಿಸುವಂತೆ ಮಾಡು. 


೨೨ ಶ್ರೀ ಸ್ಕಾಂನನುಹಾಪುರಾಣಂ 


ತತೋ ವಿಷ್ಣುಃ ಸಹಸ್ಪಾಃಕ್ಟಃ ಸಹಸ್ಪ್ರಶೀರ್ಷಃ ಸಹಸ್ರಪಾತ್‌ ! 

ಸಹಸ್ರ ಶಸ್ತ್ರ ದೌರೂಪಂ ಕ ಗ ತವಾನ್ಮರ್ಮವತ್ಸ ಲಕಿ । 

ಯಸ್ಸಿ ನ್ಸಾನೇ ಚೆ ಯೇ ವಿಪ್ರಾಃ ಸದಾಚಾರಾಃ ಶುಭವ್ರಶಾಃ ॥೧೯॥ 
ಅಶೇಷಧರ್ಮಕುಶಲಾಃ ಸರ್ವಶಾಸ್ತ್ರವಿಶಾರದಾಃ | 

ತಪೋಜ್ಞಾನೇ ಮಹಾಖ್ಯಾತಾ ಬ್ರಹ್ಮಯಜ್ಞಪರಾಯಣಾಃ । 


ಸ್ಥಾ ಪಿತಾ ಯಷಯಃ ಸರ್ವೇ ಸಹಸ್ರಾ ್ಯಷ್ಟಾ ದಶೈ ವತು wn ೨೦ 
ನಾನಾದೇಶಾತ್ಸ ಮಾನೀಯ ಸ್ಥಾ ಪಿತಾಸ್ತ ತ್ರ 4 8 ಸುಕ್ಕ $1 
ಆಶ್ರ ಮಾಂಶ್ಚ "ಬಹೂಂಸ್ತ ತ್ರ ಕಾಜೇಶೈ ಕನಿ ರಾ ॥ ೨೧॥ 


ಥರ್ಮೋಸನೇಕಾತ್ಯ ಷ್ಠ ನಬ ಬ್ರಹ್ಮಣಾ ಚ ಶಿವೇನ ಚ । 

ಸ್ವೇಸ್ಟೇ ಸ್ಥಾನೇ ಯಥಾಯೋಗ್ತೆ. € ಸ್ಮಾಪಯಾಮಾಸ ಕೇಶವಃ ॥ ೨೨ ॥ 
ಯುಧಿಷಿ ಕ್ಕ ಉವಾಚ :-- 

ಕಸ್ಮಿನ್ವಂಶೇ ಸಮುತ್ಪನ್ನಾ ಬ್ರಾಹ್ಮಣಾ ವೇದಪಾರಗಾಃ 

ಸ್ಥಾಪಿತಾಃ ಸಪರೀವಾರಾಃ ಪುತ್ರಸೌತ್ರಸಮಾವೃತಾಃ | 

ಶಿಷ್ಕೈಶ್ಚ ಬಹುಭಿರ್ಯುಕ್ತಾ ಅಗ್ನಿಹೋತ್ರ ಪರಾಯಣಾಃ 

ತೇಷಾಂ ಸ್ಥಾನಾನಿ ನಾಮಾನಿ ಯಥಾನಚ್ಚ ವದಸ್ವ ಮೇ ॥ ೨೩ ॥ 





೧೯-೨೧. ತರುವಾಯ ಧರ್ಮರಾಜನಲ್ಲಿ ಪ್ರೀತಿಯುಳ್ಳ ವಿಷ್ಣುವು ಸಹಸ್ತ 
ನೇತ್ರಗಳುಳ್ಳವನೂ, ಸಾನಿರತಲೆಗಳುಳ್ಳವನೂ, ಸಹಸ್ರ ಪಾದಗಳುಳ್ಳ ವನೂ 
ಆಗಿರುವ ತನ್ನ ಸಾವಿರಾರು ರೂಪಗಳನ್ನುಂಟುಮಾಡಿದನು. ನಾನಾ ದೇಶಗಳಿಂದ 
ಸದಾಚಾರಸಂಪನ್ನರೂ ಒಳ್ಳೆ ನಿಯಮವುಳ್ಳ ವರೂ, ಸಕಲಧರ್ಮಗಳಳ್ಳಿ 

ಗ ಸಕಲ ನಿ ಸ್ರ ಪಂಡಿತರೂ ತಪಸ್ಸು ಮತ್ತು ಜ್ಞಾನದಲ್ಲಿ ಪ್ರ ಸ ಸಿದ್ಧ ರೂ 

ಬ್ರಹ್ಮಯಜ್ಞದಲ್ಲಾ ಸಕ್ತರ ರೂ ಆಗಿರುವ Be Rn ಮಂದಿ ಬ್ರಾ ಹ್ಮ ಇ 
ರನ್ನೂ, ಖುಷಿಗಳನ್ನೂ ಕರೆಯಿಸಿ ದೇವತೆಗಳೂ, ತಾನೂ ಬ್ರಹ್ಮರುದ್ರರೂ 
ನಿರ್ಮಿಸಿದ ಆಶ್ರಮಗಳಲ್ಲಿ ನೆಲೆಸುವಂತೆ ಮಾಡಿದನು. 

೨೨. ಧರ್ಮೋಪದೇಶಕ್ಕಾಗಿ ಬ್ರಹ್ಮ ನಿಷ್ಣು ಮಹೇಶ್ವರರು ಅಲ್ಲಿ ಉಚಿತ 
ವಾದ ತಮ್ಮ ತಮ್ಮ ಸ್ಥಾನಗಳಲ್ಲಿ ನೆಲೆಸಿದರು. 

೨೩. ಯುಧಿಷ್ಠಿರನು ಕೇಳುತ್ತಾನೆ: ಶ್ರೀಕ್ನ ಷ್ಣನು ಯಾವ ವಂಶದಲ್ಲಿ 


ಟೆ 
ಹುಟ್ಟದ ವೇದಪಾರಂಗತರೂ, ಸರಿವಾರಯುಕ್ತರೂ, ಮಕ್ಕಳು ಮೊಮ್ಮಕ್ಕ 
ಳಿಂದಲೂ, ಶಿಷ್ಯರಿಂದಲೂ ಸಹಿತರೂ, ಅಗ್ನಿಹೋತ್ರನಿರತರೂ ಆಗಿರುವ 
ಬ್ರಾಹ್ಮಣರನ್ನು ಕರೆಯಿಸಿ ಸ್ಥಾಪಿಸಿದನು? ಅವರ ಸ್ಥಳ ಮತ್ತು ಹೆಸರುಗಳನ್ನು 


ನನಗೆ ಹೇಳ 


ನವಮೋತಿಧ್ಯಾಯಃ ೧ತತಿ 


ವ್ಯಾಸ ಉವಾಚ:- 
ಶ್ರೂಯತಾಂ ನೃಪಶಾರ್ಜೂಲ ಧರ್ಮಾಂರಣ್ಯನಿವಾಸಿನಾಂ ॥ ೨೪ ॥ 
ಮಹಾತ್ಮನಾಂ ಬ್ರಾಹ್ಮಣಾನಾನೃುಷೀಣಾಮೂರ್ಥ್ವರೇತಸಾಂ | 
ತೇಷಾಂ ವೈ ಪುತ್ರಸೌತ್ರಾಣಾಂ ನಾಮಾನಿ ಚ ನದಾಮ್ಯಹಂ ॥ ೨೫ ॥ 
ಚತುರ್ವಿಂಶತಿಗೋತ್ರಾಣಿ ದ್ವಿಜಾನಾಂ ಸಾಂಡನರ್ಷಭ ! 
ತೇಷಾಂ ಶಾಖಾಃ ಪ್ರಶಾಖಾಶ್ಚ ಪುತ್ರಸೌತ್ರಾದಯಸ್ತಥಾ ॥ ೨೬ ॥ 


ಜಜ್ಜಿರೇ ಬಹವಃ ಪುತ್ರಾಃ ಶತಶೋ ಸಹಸ್ರಶಃ । 
ಚತುರ್ವಿಂಶತಿಮುಖ್ಯಾನಾಂ ನಾಮಾನಿ ಪ್ರವದಾಮಿ ತೇ । 


ದ್ವಿಜಾನಾನುಷಯಃ ಪ್ರೋಕ್ತಾಃ ಪ್ರನರಾಣಿ ತಥಾ ಶೃಣು ॥ ೨೭॥ 
ಭಾರದ್ವಾಜಸ್ತಥಾ ನತ್ಸಃ ಕೌಶಿಕಃ ಕುಶ ಏನ ಚ । 

ಶಾಂಡಿಲ್ಯಃ ಕಾಶ್ಯಪಶ್ಚೈನ ಗೌತನುಶ್ಚಾಂಧನಸ್ತಥಾ ॥ ೨೮॥ 
ಜಾತೂಕರ್ಜ್ಯಸ್ತಥಾ ವತ್ಪೋ ವಸಿಷ್ಮೋ ಧಾರಣಸ್ತಥಾ । 

ಆತ್ರೇಯೋ ಭಾಂಡಿಲಶ್ಚೈನ ಲೌಕಕಾಶ ಇತಃ ಪರಂ ॥ ೨೯॥ 
ಕೃಷ್ಣಾಯನೋಪಮನ್ಯುಶ್ಚ ಗಾರ್ಗ್ಯಮುಡ್ಗಲಮೌಷಕಾಃ । 

ಪುಣ್ಯಾಸನಃ ಪರಾಶರಃ ಕೌಂಡಿನ್ಯಶ್ಚ ತತಃ ಪರಂ ॥ ೩೦॥ 
ತಥಾ ಗಾನ್ಯಾಸನಶ್ಚೆನ ಪ್ರವರಾಣಿ ಚತುರ್ನಿಂಶತಿಃ । 

ಜಾಮದಗ್ಗ್ಯಸ್ಯ ಗೋತ್ರಸ್ಯ ಪ್ರನರಾಃ ಪಂಚ ಏವ ಹಿ nan 





೨೪-೨೫, ವ್ಯಾಸನು ಹೇಳುತ್ತಾನೆ: ಮಹಾರಾಜ! ಕೇಳು. ಧರ್ಮಾ 
ರಣ್ಯದಲ್ಲಿ ವಾಸಮಾಡುವ ಮಹಾತ್ಮರಾದ ಬ್ರಾಹ್ಮಣರ, ಬ್ರಹ್ಮಚಾರಿಗಳಾದ 
ಮಹರ್ಷಿಗಳ ಮತ್ತು ಅವರ ಪುತ್ರ ಪೌತ್ರರ ಹೆಸರುಗಳನ್ನು ನಾನು 
ಹೇಳುವೆನು. 

೨೬-೨೭. ಪಾಂಡವಶ್ರೇಷ್ಠ! ಬ್ರಾಹ್ಮಣರಿಗೆ ಇಪ್ಪತ್ತುನಾಲ್ಕು ಗೋತ್ರಗಳಿ 
ರುವುವು. ಆ ಬ್ರಾಹ್ಮಣರಿಂದ ಶಾಖೆ ಪ್ರಶಾಖೆಗಳೂ, ಮಕ್ಕಳು ಮೊಮ್ಮಕ್ಕಳೂ, 
ಅವರಿಗೆ ಸಾವಿರಾರು ಮಕ್ಕಳೂ ಹುಟ್ಟಿದರು. ಇಪ್ಪತ್ತುನಾಲ್ಕು ಮುಖ್ಯ 
ಗೋತ್ರಗಳ ಹೆಸರನ್ನು ನಿನಗೆ ಹೇಳುತ್ತೇನೆ. ಬ್ರಾಹ್ಮಣರಿಗೆ ಖುಷಿಗಳು ಪ್ರವರ್ತಕ 
ರಾಗಿರುವರು. 

೨೮-೩೨, ಭಾರದ್ವಾಜ, ವತ್ಸ, ಕೌಶಿಕ, ಕುಶ, ಶಾಂಡಿಲ್ಯ, ಕಶ್ಯಪ, 
ಗೌತಮ, ಛಾಂದನ, ಜಾತೂಕರ್ಣ್ಯ್ಯ, ವತ್ಸ, ವಸಿಷ್ಠ, ಧಾರಣ, ಆತ್ರೇಯ, 
ಭಾಂಡಿಲ, ಲೌಕಿಕ, ಕೃಷ್ಣಾಯನ, ಉಪಮನ್ಯು, ಗಾರ್ಗ್ಯ, ಮುದ್ಗಲ, 
ಮಾಷಕ, ಪುಣ್ಯಾಸನ, ಪರಾಶರ, ಕೌಂಡಿನ್ಯ, ಗಾನ್ಯಾಸನ ಎಂದು ಇಪ್ಪತ್ತು 


೧೨೪ ಶ್ರೀ ಸ್ಕ್ಯಾಂದಮಹಾಪುರಾಣಂ 


ಭಾರ್ಗವಶ್ಚ್ಯವನಾಪ್ನ್ನುವಾನೌರ್ವಶ್ಚ ಜಮದಗ್ನಿಕಃ । 


'ಪಂಚೈತೇ ಪ್ರನರಾ ರಾಜನ್ವಿಖ್ಯಾತಾ ಲೋಕನಿಶ್ರುತಾಃ ॥ ೩೨ ॥ 
ಏನಂ ಗೋತ್ರಸಮುತ್ಸನ್ನಾ ವಾಡವಾ ನೇದಪಾರಗಾಃ । 
ದ್ವಿಜಪೂಜಾಕ್ರಿಯಾಯುಕ್ತಾ ನಾನಾಕ್ರತುಕ್ರಿಯಾಪರಾಃ ॥ ೩೩॥ 
ಗುಣೇನ ಸಂಹಿತಾ ಆಸನ್‌ ಷಟ್ಕಿರ್ಮನಿರತಾಶ್ಮ ಯೇ।ಟ 
ಏವಂವಿಧಾ ಮಹಾಭಾಗಾ ನಾನಾದೇಶಭವಾ ದ್ವಿಜಾಃ ॥ ೩೪॥ 


ಭಾನೇವಸಂ ತೃತೀಯಂ ಚ ಪ್ರನರಾಃ ಪಂಚ ಏನ ಹಿ । 
ಭಾರ್ಗವಚ್ಯಾವನಾಪ್ಲ್ನುವಾನೌರ್ವಜಾಮದಗ್ಗ್ಯ ಸಂಯುತಾಃ । 


ಆತ್ರೇಯೋಂರ್ಚನಾನಸಶ್ಟ ಶ್ಯಾವಾಸ್ಯೇತಿ ತೃತೀಯಕಃ ॥ ೩೫ ॥ 
ಅಸ್ಮಿನ್ಲೋತ್ರೇ ಭವಾ ವಿಪ್ರಾ ದುಷ್ಬ್ಟಾಃ ಕುಟಛಗಾಮಿನಃ । 
ಧನಿನೋ ಧರ್ನುನಿಷ್ಕಾ ಶ್ಚ `ಸೇದನೇವಾಂಂಗಸಾರಗಾಃ ॥ ೩೬॥ 


ದಾನಭೋಗರತಾಃ ಸರ್ವೇ ಶ್ರೌತಸ್ಮಾರ್ತೇಷು ಸಂಮತಾಃ । 
ಮಾಂಡವ್ಯ ಗೋತ್ರೆ ತ್ತ ನಿಜ್ಞೇಯಾಃ ಪ್ರ ವರೈಃ ಪಂಚಭಿರ್ಯುತಾಃ ॥ ೩೭॥ 
ಭಾರ್ಗವಶ್ಚಾ ,ವಸೋತತಿ ಶಾ ಪ್ನ್ನವಾನೌರ್ವಸ್ತ ಥೈನ ಚ। 


ಅಸಿ ್ಮನ್ಗೊ ತ್ರೆ ಕ ಭವಾ ನಿಪ್ರಾ 8 ಶ್ರುತಿಸ್ಮೃತಿಸರಾಯಣಾಃ ॥೩೮॥ 
ಕೋಗಿಣೊ ಲೋಭಿನೋ 2 ದುಷ್ಟಾ ಯಜನೇ ಯಾಜನೇ ರತಾಃ । 
ಬ್ರಹ್ಮ ಸ ಕ್ರಿಯಾಪರಾಃ ಸರ್ವೇ ಮಾಂಡವ್ಯಾಃ ಕುರುಸತ್ತನು ॥ರ೩೯॥ 


ನಾಲ್ಕು ಪ್ರವರಗಳು. ಜಾಮದಗ್ಗ ಖೋತ ಕಳ್ಳ ತ ಚ್ಯವನ, ಅನ್ನ 
ವಾನ, ಔರ್ವ, ಜಮದಗ್ನಿ ಎಂದು. ಟಿ ಸಿದ್ಧವಾದ ಐದು ಪ್ರವರಗಳು. 

೩೩. ಈ ಗೋತ್ರ ದಲ್ಲಿ ಹುಟ್ಟಿದ ನಾನಕರ ಬ್ರಾಹ್ಮಣರು `ನೇದಾಧ್ಯ 
ಯನಪರರೂ, ಬ್ರಾ ಹಣ ಇ ಪೂಜಾನಿರತರೂ, ಅನೇಕ ಯಜ್ಞ ಗಳಲ್ಲಿ ಆಸಕ್ತ ಚ 
ಗುಣಶಾಲಿಗಳೂ, `ಸಟ್ಟೆರ್ಮನಿರತರೂ ಆಗಿರುವರು. 

೩೪-೩೯. ಭಾಮೇವಸ ಗೋತ್ರಕ್ಕೆ ಭಾರ್ಗವ, ಚ್ಯಾವನ, ಆಪ್ಲ್ಲುವಾನ, 
ಔರ್ವ, ಜಾಮದಗ್ಗ್ಯ ಎಂಬ ಐದು ಪ್ರವರಗಳಿರುವುವು. ಆತ್ರೇಯ, ಅರ್ಚ 
ನಾನಸ, ಶ್ಯಾವಾಸ್ಯಪ್ರವರಗಳುಳ್ಳ ಗೋತ್ರದ ಜನರು ದುಷ್ಟರೂ, ವಕ್ರಮಾರ್ಗ 
ದವರೂ, ಹಣಗಾರರೂ, ಧರ್ಮಪರಾಯಣರೂ, ವೇದ ಮತ್ತು ವೇದಾಂಗಗ 
ಳನ್ನು ಅಧ್ಯಯನಮಾಡಿದವರೂ, ದಾನ ಮತ್ತು ಸುಖಾನುಭವಗಳಲ್ಲಿ ಆಸಕ್ತರೂ. 
ಶ್ರೌತಸ್ಮಾರ್ತ ಕರ್ಮಗಳಲ್ಲಿ ನಿರತರೂ ಆಗಿರುವರು. ಮಾಂಡವ್ಯ ಗೋತ್ರಕ್ಕೆ 
ಭಾರ್ಗವ, ಚ್ಯಾವನ, ಅತ್ರಿ, ಅಪ್ಪುವಾನ, ಔರ್ವನೆಂಬ ಐದು ಪ್ರವರಗಳು. 
ಈ ಗೋತ್ರದ ಬ್ರಾಹ್ಮಣರು ಶೃತಿ ಸ್ಮೃತಿನಿರತರೂ, ಅತ್ಯಾಶೆಯುಳ್ಳ ವರೂ, 
ದುಷ್ಟರೂ, ಯಾಗಮಾಡುವುದು, ಯಾಗಮಾಡಿಸುವುದು ಇವುಗಳಲ್ಲಿ ಆಸಕ್ತರೂ, 
ಬ್ರಾಹ್ಮಣಧರ್ಮಪರರೂ ಆಗಿರುವರು. 


ನವಮೋ$ಧ್ಯಾಯಃ ೧೨೫ 


ಗಾರ್ಗ್ಯಸ್ಯ ಗೋತ್ರೇ ಯೇ ಜಾತಾಸ್ತೇಷಾಂ ತು ಪ್ರವರಾಸ್ತ್ರಯಃ | 


ಅಂಗಿರಾಶ್ಚಾಂಂಬರೀಷಶ್ಚ ಯೌವನಾಶ್ವಸ್ತೃತೀಯಕಃ ॥ vol 
ಅಸ್ಮಿನ್ಲೋತ್ರೇ ಸಮುತ್ಸನ್ನಾಃ ಸದ್ಭೃತ್ತಾಃ ಸತ ೈಭಾಷಿಣಕ । 

ಶಾಂತಾಶ್ಚ ಭಿನ್ನವರ್ಣಾಶ್ಚ ನಿರ್ಧನಾಶ್ಚ ಕುಚ್ಛೈಲಿನಃ ॥ ೪೧॥ 
ಸಂಗವಾತ್ಸಲ್ಯಯುಕ್ತಾಶ್ಚ ನೇದಶಾಸ್ತ್ರೇಷು ನಿಶ್ಚಲಾಃ । 

ವತ್ಸಗೋತ್ರೇ ದ್ವಿಜಾ ಭೂಪ ಪ್ರವರಾಃ ಪಂಚ ಏವ ಹಿ ॥ ೪೨ ॥ 
ಭಾರ್ಗವಶ್ಚ ik ಜನದಗ್ನಿಕಃ । 

ಏಭಿಸ್ತು ಸಜ ವಿಖ್ಯಾತಾ ದಿ ಬ್ರಹ್ಮ: ಸ್ವರೂಪಿಣಃ ॥ ೪೩॥ 
ಶಾಂತಾ ದಾಂತಾಃ ಸುಶೀಲಾಶ್ಚ iss ಸುಸಂಯುತಾಃ । 

-ವೇಡಾಂ ಧ್ಯಯನಹೀನಾಶ್ಚ ಕುಶಲಾಃ ಸರ್ವಕರ್ಮುಸು ॥ ೪೪ ॥ 
ಸುರೂಪಾಶ್ಚ ಸದಾಚಾರಾಃ ಸರ್ವಧರ್ಮೆೇಷು ನಿಷ್ಠಿತಾಃ । 
ದಾನಧರ್ಮರತಾಃ ಸರ್ವೇ ಅನ್ನದಾ ಜಲದಾ ದ್ವಿಜಾಃ ॥ ೪೫ ॥ 
ದಯಾಲನಃ ಸುಶೀಲಾಶ್ಚ ಸರ್ವಭೂತಹಿತೇ ರತಾಃ । 

ಕಾಶ್ಯಪಾ ಬ್ರಾಹ್ಮಣಾ ರಾಜನ್ರುವರತ್ರಯಸಂಯುತಾಃ ॥ ೪೬ ॥ 
ಕಾಶ್ಯಸಶ್ವಾಪನತ್ಸಾರೋ ನೈಧ್ರುನಶ್ಚ ತೃತೀಯಕಃ । 

ವೇದಜ್ಞಾ ಗೌರನರ್ಣಾಶ್ಚ ನೈಷ್ಮಿಕಾ ಯಜ್ಞಕಾರಕಾಃ ॥ ೪೭॥ 
ಪ್ರಿಯವಾಸಾ ಮಹಾದಕ್ಸಾ ಗುರುಭಕ್ತಿರತಾಃ ಸದಾ । 
ಪ್ರತಿಷ್ಠಾಮಾನವಂತಶ್ಚ ಸರ್ವಭೂತಹಿತೇ ರತಾಃ ॥ ೪೮॥ 








೪೦-೫೩. ಗಾರ್ಗ್ಯಗೋತ್ರದವರಿಗೆ ಅಂಗಿರಾ, ಅಂಬರೀಷ, ಯೌವನಾಶ್ವ 
ವೆಂದು ಮೂರು ಪ್ರವರಗಳಿರುವುವು. ಈ ಗೋತ್ರದವರು ಒಳ್ಳೆ ನಡತೆಯುಳ್ಳ 
ವರೂ, ನಿಜನನ್ನಾಡುವವರೂ, ಶಾಂತರೂ, ಬೇರೆಬೇರೆ ಬಣ್ಣದವರೂ, 
ಬಡವರೂ, ಕೊಳೆಬಟ್ಟಿಯುಳ್ಳವರೂ, ಸಹವಾಸ ಪ್ರಿಯರೂ, ವೇದಶಾಸ್ತ್ರ 
ಗಳಲ್ಲಿ ದೃಢಮನಸ್ಸುಳ್ಳವರೂ ಆಗಿರುವರು. ವತ್ಸಗೋತ್ರದ ಬ್ರಾಹ್ಮಣರಿಗೆ 
ಭಾರ್ಗವ, ಚ್ಯವನ, ಆಪ್ಪುವಾನ, ಓರ್ವ, ಜಮದಗ್ನಿ ಎಂಬ ಐದು ಪ್ರವರಗಳು. 
ಈ ಗೋತ್ರದ ಬ್ರಾಹ್ಮಣರು ಪ್ರ ಸಿದ್ಧರೂ ಬ್ರ ಹ್ಮರೂಪಿಗಳೂ, ಶಾಂತರೂ, 
ಜಿತೇಂದ್ರಿಯರೂ, ಒಳ್ಳೆ ನಡತೆಯುಳ್ಳ ಎಕೊ ಧರ್ಮಾತ್ಮ ರಾದ ಮಕ್ಕಳುಳ್ಳ ವರೂ, 
ಪೀ ದಾಥ್ಯಯನವಿಲ್ಲದನರೂ, ಸಕಲಕಾರ್ಯಗಳಲ್ಲಿ ನಿಪುಣರೂ, ಸುಂದರರೂ, 
ಸದಾಚಾರವುಳ್ಳವರೂ, ಸಮಸ್ತಧರ್ಮಗಳಲ್ಲಿ ನಿರತರೂ, ದಾನಧರ್ಮಪರರೂ, 
ಅನ್ನನೀರನ್ನು ದಾನಮಾಡುವವರೂ, ದಯಾವಂತರ್ಕೂ ಸಕಲಪ್ರಾ ಣಿಗಳ 
ಹಿತಗಳಲ್ಲಿ ನಿರತರೂ ಆಗಿರುವರು. ಕಾಶ್ಯಸಗೋತ್ರದ ಬ್ರಾಹ್ಮಣರಿಗೆ ಕಾಶ್ಯಪ, 
ಅಸನಶ್ಸಾರ, ನೈಧ್ರುವನೆಂಬ ಮೂರು ಪ್ರವರಗಳಿರುವುವು. ಈ ಬ್ರಾಹ್ಮ 


೧೨೬ ಶ್ರೀ ಸ್ಕಾಂದೆಮೆಹಾಪುರಾಣಂ 


ಯಜಂತೇ ಚ ಮಹಾಯಜ್ಞಾನ್ಕಾಶ್ಯಪೇಯಾ ದ್ವಿಜಾತಯಃ । 
'ಧಾರೀಣಸಗೋತ್ರಜಾಶ್ಚ ಪ್ರನರೈಸ್ತ್ರಿಭಿರನ್ವಿತಾಃ ॥ ೪೯॥ 
ಅಗಸ್ತಿ ದರ್ನಿಶ್ಚೇತಾಶ್ಚದಧ್ಯವಾಹನಸಂಜ್ಞಕಾಃ । 

ಅಸ್ಮಿನ್ಲೋತ್ರೇ ಚ ಯೇ ಜಾತಾ ಧರ್ಮಕರ್ನುಸಮಾಶ್ರಿತಾಃ ॥ #೫೦ ॥ 
ಕರ್ಮಕ್ರೂರಾಶ್ಚ ತೇ ಸರ್ವೇ ತಥೈವೋದರಿಣಸ್ತು ತೇ। 


ಲಂಬಕರ್ಣಾ ಮಹಾದಂಷ್ಟ್ರಾ ದ್ವಿಜಾ ಧನಪರಾಯಣಾಃ ॥ ೫೧॥ 
ಕ್ರೋಧಿನೋ ದ್ವೇಷಿಣಶ್ಚೈವ ಸರ್ವಸತ್ವಭಯಂಕರಾಃ । 
ಲೌಗಾಕ್ಸಸೋದ್ಭವಾ ಯೇ ವೈ ನಾಡವಾಃ ಸತ್ಯಸಂಶ್ರಿತಾಃ ॥ ೫೨ ॥ 
ಪ್ರವರಾಶ್ಚ ತ್ರಯಸ್ತೇಷಾಂ ತತ್ರ ಜ್ಞಾನಸ್ಸರೂಪಕಾಃ । 
ಕಶ್ಯಪಶ್ಚೈವ ವತ್ಸಶ್ಚ ವಸಿಷ್ಠಶ್ಚ ತೃತೀಯಕಃ ॥ ೫೩॥ 


ಸದಾಚಾರಾಸ್ತು ವಿಖ್ಯಾತಾ ವೈಷ್ಣವಾ ಬಹುವೃತ್ತಯಃ । 
ರೋಮಭಿರ್ಬಹುಭಿರ್ವ್ಯಾಪ್ತಾಃ ಕೃಷ್ಣನರ್ಣಾಸ್ತು ವಾಡವಾಃ 1 ೫೪ 8 
ಶಾಂತಾ ದಾಂತಾಃ ಸುಶೀಲಾಶ್ಚ ಸ್ವದಾರನಿರತಾಃ ಸದಾ । 
ಕುಶಿಕಸಗೋತ್ರೇ ಯೇ ಜಾತಾಃ ಪ್ರವರೈಸ್ತ್ರಿಭಿರನ್ವಿತಾಃ ॥ ೫೫ ॥ 
ವಿಶ್ವಾಮಿತ್ರೋ ದೇವರಾತ ಔದಲಶ್ಚ ತ್ರಯಶ್ಚಯೇ। 


ಅಸ್ಮಿನ್ಸೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ ॥ ೫೬॥ 








ಇರು ವೇದಜ್ಞರೂ, ಹೆಳದಿಬಣ್ಣದವರೂ, ಯಜ್ಞ ಮಾಡುವವರೂ, ಬಟ್ಟಿ 
ಯಲ್ಲಿ ಪ್ರೀತಿಯುಳ್ಳವರೂ, ಅತ್ಯಂತಕುಶಲರೂ, ಗುರುಗಳಲ್ಲಿ ಭಕ್ತಿಯುಳ್ಳ 
ವರೂ, ಗೌರವವುಳ್ಳವರೂ, ಸಕಲಪ್ರಾಣಿಗಳ ಹಿತಗಳಲ್ಲಿ ನಿರತರೂ, ದೊಡ್ಡ 
ದೊಡ್ಡ ಯಜ್ಞಗಳನ್ನು ಮಾಡುವವರೂ ಆಗಿರುವರು. ಧಾರೀಣಸಗೋತ್ರಜರಿಗೆ 
ಅಗಸ್ತಿದರ್ನಿ, ಶ್ವೇತಾಶ್ವ, ದಧ್ಯವಾಹನ ಎಂಬ ಮೂರು ಪ್ರವರಗಳು. ಈ 
ಗೋತ್ರದವರು ಧರ್ಮಕಾರ್ಯಗಳನ್ನು ಮಾಡುವವರ ಕಠಿನಕಾರ್ಯವುಳ್ಳ 
ವರೂ, ಹೊಟ್ಟೆ ಬಾಕರೂ, ಜೋಲು ಕಿವಿಯುಳ್ಳವರೂ, ದೊಡ್ಡ ಹಲ್ಲುಳ್ಳವರೂ, 
ಧನಾಸಕ್ತರೂ, ಕೋಪಿಷ್ಯರೂ, ದ್ವೇಷಮಾಡುವವರೂ, ಸಕಲಪ್ರಾಣಿಗಳಿಗೆ 
ಭಯವನ್ನುಂಟುಮಾಡುವವರೂ ಆಗಿರುವರು. ಲೌಗಾಕ್ಸಸಗೋತ್ರದ ಸತ್ಯ 
ವಂತರೂ, ತತ್ತ್ವಜ್ಞಾನಿಗಳೂ ಆಗಿರುವ ಬ್ರಾಹ್ಮಣರಿಗೆ ಕಶ್ಯಪ, ವತ್ಸ, ವಸಿಷ್ಠ 
ಎಂಬ ಮೂರು ಪ್ರವರಗಳು. 
೫೪-೫೭, ಈ ಗೋತ್ರದ ಬ್ರಾಹ್ಮಣರು ಸದಾಚಾರಸಂಪನ್ನರೂ, 
ಪ್ರಸಿದ್ಧರೂ, ನಿಷ್ಣುಭಕ್ಕರೂ, ನಾನಾ ವೃತ್ತಿಯುಳ್ಳವರೂ, ಹೆಚ್ಚು ರೋಮ 
ವುಳ್ಳವರೂ, ಕಪ್ಪು ಬಣ್ಣ ದವರೂ, ಶಾಂತರೂ, ಜಿತೇಂದ್ರಿಯರೂ, ಸುಶೀಲರೂ, 
ತಮ ಸತ್ತಿಯರಲ್ಲಿ ಮಾತ್ರವೆ ಆಸಕ್ತರೂ ಆಗಿರುವರು. ಕುಶಿಕಗೋತ್ರದ 


ನನನೋ9ಧ್ಯಾಯಃ ; ೧೨೭ 


ಅಸತ್ಯಭಾಷಿಣೋ ವಿಪ್ರಾಃ ಸುರೂಪಾ ನೃಪಸತ್ತಮಾಃ । 


ಸರ್ವವಿದ್ಯಾಕುಶಲಿನೋ ಬ್ರಾಹ್ಮಣಾ ಬ್ರಹ್ಮಸತ್ತಮಾಃ ॥ ೫೭॥ 
ಉಪಮನ್ಯುಸಗೋತ್ರೇಯಾಃ ಪ್ರವರತ್ರಯಸಂಯುತಾಃ | 

ವಸಿಷ್ಮಶ್ಚ ಭರದ್ವಾಜಸ್ತ್ರಿಂದ್ರಪ್ರಮದ ಏನ ವಾ ॥ ೫೮ ॥ 
ಅಸ್ಮಿನ್ಗೋತ್ರೇ ತು ಯೇ ವಿಪ್ರಾಃ ಕ್ರೂರಾಃ ಕುಟಲಗಾಮಿನಃ । 
ದೂಷಣಾ ದ್ವೇಷಿಣಸ್ತುಚ್ಛಾಃ ಸರ್ವಸಂಗ್ರಹತತ್ಬರಾಃ ॥೫೯॥ 
ಕಲಹೋತ್ಪಾದನೇ ದಕ್ಬಾ ಧನಿನೋ ಮಾನಿನ ಸ್ತಥಾ । 

ಸರ್ವದೈನ ಪ್ರದುಸ್ಟಾಶ್ನ ದುಷ್ಟಸಂಗರತಾಸ್ತಥಾ ॥೬೦॥ಓ 


ರೋಗಿಣೋ ದುರ್ಬಲಾಶ್ಚೆನ ನೃತ್ತ್ಯುಪಕಲ್ಪನರ್ಜಿತಾಃ । 
ವಾತ್ಸ್ಯಗೋತ್ರೇ ಭವಾ 'ವಿಪ್ರಾಃ ಪ್ರವರೈಃ ಪಂಚಭಿರ್ಯುತಾಃ ॥ ೬೧॥ 
ಭಾರ್ಗವಚ್ಯಾನನಾಪ್ಲುವಾನೌರ್ವಶ್ಮ ಜಮದಗ್ನಿಕಃ । 


ಅಸ್ಮಿನ್ನೋತ್ರೇ ಭವಾ ವಿಪ್ರಾಃ ಸ್ಕೂಲಾಶ್ಚ ಬಹುಬುದ್ಧಯಃ 1೬೨೪ 
ಸರ್ವಕರ್ಮರತಾಶ್ಚೈನ ಸರ್ವಧರ್ಮ ಷು ನಿಶ್ಚಲಾಃ Ms 
ವೇದಶಾಸ್ಟ್ರಾಂರ್ಥನಿಪುಣಾ ಯಜನೇ ಯಾಜನೇ ರತಾಃ ॥ ೬೩ ॥ 


ಸ ಸುರೂಪಾಶ್ನ ಬುದ್ಧಿತೋ ದೀರ್ಥದರ್ಶಿನಃ । 
ತ್ಸ್ಯಾಯನಸಗೋತ್ರೇ "ಯಾಃ "ಪ್ರ ವರೈಃ ಪಂಚಭಿರ್ಯುತಾಃ ॥ ೬೪ ॥ 





ಬ್ರಾಹ್ಮಣರಿಗೆ ವಿಶ್ವಾಮಿತ್ರ, ದೇವರಾತ, ಔದಲನೆಂಬ ಮೂರು ಪ್ರವರಗಳು. 
ಈ ಗೋತ್ರದ ಬ್ರಾಹ್ಮಣರು ದುರ್ಬಲರೂ, ದೀನವಾದ ಮನಸ್ಸುಳ್ಳವರೂ, 
ಸುಳ್ಳನ್ನಾಡುವವರೂ, ಸಮಸ್ತ ವಿದ್ಯಾನಿಪುಣರೂ, ಬ್ರಹ್ಮಜ್ಞಾ ನಿಗಳೂ ಆಗಿರು. 
ವರು. ಈ ಗೋತ್ರದ ರಾಜರು ಸುಂದರರಾಗಿರುವರು. 

೫೮-೬೫. ಉಪಮನ್ಯುಗೋತ್ರದವರಿಗೆ ವಸಿಷ್ಠ, ಭರದ್ವಾಜ, ಇಂದ್ರ 
ಪ್ರಮದ ಎಂಬ ಮೂರು ಪ್ರವರಗಳು. ಈ ಗೋತ್ರದ ಬ್ರಾಹ ಣರು ಕ 
ವಕ್ರ ಮಾರ್ಗದಲ್ಲಿ ನಡೆಯುವವರೂ, ಪರರನ್ನು RR ದ್ವೇಷಿ 
ಗಳೂ, ಅಲ್ಬರೂ, ಸಕಲ ವಸ್ತುಗಳನ್ನು ಕೂಡಿಡುವುದರಲ್ಲಿ ಆಸಕ್ತರೂ, ಜಗಳ 
ವನ್ನೆಬ್ಬಿಸುವುದರಲ್ಲಿ ಕುಶಲರೂ, ಹೆಣನಂತರೂ, ಮಾನವಂತರೂ, ಯಾವಾ 
ಗಲೂ ದುಷ,್ಮರೂ, ದುಷ್ನಸಹವಾಸಿಗಳೂ, ರೋಗಿಗಳೂ, ಅಶಕ್ತರೂ, ಜೀವನ 

ಟಿ ಟೆ 
ವೃತ್ತಿಯನ್ನು ಕಲ್ಪಿಸಿಕೊಳ್ಳದಿರುವವರೂ ಆಗಿರುವರು. ವಾತ್ಸ್ಯಗೋತ್ರ 
ದವರಿಗೆ ಭಾರ್ಗವ, ಚ್ಯಾವನ, ಆಪ್ಲುವಾನ, ಔರ್ವ, ಜಮದಗ್ನಿ ಎಂಬ ಐದು. 
ಪ್ರವರಗಳು. ಈ ಗೋತ್ರದ ಬ್ರಾಹ್ಮಣರು ದಪ್ಪಗೂ, ಅತಿ ಬುದ್ಧಿಯುಳ್ಳ 
ವರೂ ಸಕಲ ಕರ್ಮಗಳಲ್ಲಿ ನಿರತರೂ ಸಮಸ್ತೃಧರ್ಮಗಳಲ್ಲಿ ದೃಢಮನಸ್ಸುಳ್ಳ 


ಲತ ಶ್ರೀ ಸ್ಕಾಂಡಮಹಾಪುರಾಣಂ 


ಭಾರ್ಗವಚ್ಯಾವನಾಪ್ನುಷಾನೌರ್ವಶ್ಚ ಜಮಡಗ್ನಿಕಃ । 


ಪೂರ್ವೋಕ್ತಾಃ ಪ್ರನರಾಶ್ಚಾಸ್ಯ ಕಥಿತಾಸ್ತನ ಭಾರತ ॥ ೬೫1 
ಅಸ್ಮಿನ್ಸೋತ್ರೇ ತುಯೇ ಜಾತಾ ಸಾಕಯಜ್ಞರತಾಃ ಸದಾ । 
ಲೋಭಿನಃ ಕ್ರೋಧಿನಶ್ಚೈವ ಪ್ರಜಾಯಂತೇ ಬಹುಪ್ರಜಾಃ ॥ ೬೬ ॥ 


ಸ್ನಾನದಾನಾದಿನಿರತಾಃ ಸರ್ವದಾಶ್ಚ ಜಿತೇಂದ್ರಿಯಾಃ I 
ಮಾಪೀಕೂಪತಬಾಕಾನಾಂ ಕರ್ತಾರಶ್ಚ ಸಹಸ್ರಶಃ | 


ವ್ರತಶೀಲಾ ಗುಣಜ್ಞಾಶ್ಮ ಮೂರ್ಹಾ ವೇದನಿವರ್ಜಿತಾಃ ॥೬೭॥ 
ಕೌಶಿಕವಂಶೇ ಯೇ ಜಾತಾಃ ಪ್ರವರತ್ರಯಸಂಯುತಾಃ । 

ವಿಶ್ವಾಮಿತ್ರೋ ಘಮರ್ಷಿೀ ಚ ಕೌಶಿಕಶ್ತ ತೃತೀಯಕಃ ॥ ೬೮॥ 
ಅಸ್ಮಿನ್ಸೋತ್ರೇ ಚ ಯೇ ಜಾತಾ ಬ್ರಾಹ್ಮಣಾ ಬ್ರಹ್ಮನೇದಿನಃ । 

ಶಾಂತಾ ದಾಂತಾಃ ಸುಶೀಲಾಶ್ಚ ಸರ್ನಧರ್ಮುಪರಾಯಣಾಃ ॥೬೯॥ 
ಅಪುತ್ರಿಣಸ್ತಥಾ ರೂಕ್ಸಾಸ್ತೇಜೋಹೀನಾ ದ್ವಿಜೋತ್ತಮಾಃ । 
ಭಾರದ್ವಾಜಸಗೋತ್ರೇಯಾಃ ಪ್ರವಕೈಃ ಪಂಚಭಿರ್ಯುತಾಃ Hou 
ಆಂಗಿರಸೋ ಬಾರ್ಹಸ್ಪತ್ಕೋ ಭಾರದ್ವಾಜಸ್ತು ಸೈನ್ಯಸಃ । 
ಸಾರ್ಗ್ಯಕ್ಟೆನೇತಿ ನಿಜ್ಞೇಯಾಃ ಪ್ರವರಾಃ ಪಂಚ ಏನ ಚ ॥೭೧॥ 





ವರೂ ವೇದ ಮತ್ತು ಶಾಸ್ತ್ರಾರ್ಥಗಳಲ್ಲಿ ಕುಶಲರೂ, ಯಜನ ಮತ್ತು ಯಾಜನ 
ದಲ್ಲಿ ನಿರತರೂ, ಸದಾಚಾರಸಂಪನ್ನರ್ಕೂ ಸುಂದರರೂ ದೂರದೃಷ್ಟಿಯುಳ್ಳ 
ವರೂ ಆಗಿರುವರು. ವಾತ್ಸ್ಯಾಯನ ಗೋತ್ರದವರಿಗೆ ಭಾರ್ಗವ, ಚ್ಯಾವನ, 
ಅಪ್ಪುವಾನ್ನ ಓರ್ವ, ಜಮದಗ್ನಿ ಎಂಬ ಹಿಂದೆ ಹೇಳಿದ ಐದು ಪ್ರವರಗಳು. 

೬೬-೬೭. ಈ ಗೋತ್ರದವರು ಯಾವಾಗಲೂ ಪಾಕ ಯಜ್ಞಾಸಕ್ತರೂ, 
ಲೋಭಿಗಳ್ಕೂ ಕೋಪಿಷ್ಠರೂ, ಬಹುಮಂದಿ ಮಕ್ಕಳುಳ್ಳವರ್ಕೂ ಸ್ಲಾನದಾನಾ 
ದಿಗಳಲ್ಲಿ ನಿರತರೂ ಸಮಸ್ತವನ್ನೂ ದಾನಮಾಡುವವರೂ, ಜಿತೇಂದ್ರಿಯರೂ, 
ಸಾವಿರಾರು ಕೊಳ್ಳ ಬಾನಿ ಕೆರೆಗಳನ್ನು ಕಟ್ಟಸುವವರೂ, ನಿಯಮಶೀಲರ್ಕೂ 
ಗುಣಜ್ಞರೂ, ಮೂರ್ಬರೂ, ವೇದಾಧ್ಯಯನಮಾಡದವರೂ ಆಗಿರುವರು. 

೬೮-೭೧. ಕೌಶಿಕವಂಶದ ಬ್ರಾಹ್ಮಣರಿಗೆ ವಿಶ್ವಾಮಿತ್ರ ಅಘಮರ್ಷಿೀ 
ಕೌಶಿಕನೆಂಬ ಮೂರು ಪ್ರವರಗಳು. ಈ ಗೋತ್ರದಲ್ಲಿ ಜನಿಸಿದ ಬ್ರಾಹ್ಮಣರು 
ಬ್ರಹ್ಮಜ್ಞಾನಿಗಳೂ ಶಾಂತರೂ ಜಿತೇಂದ್ರಿಯರೂ ಸುಶೀಲರ್ರೂ ಸಕಲ 
ಧರ್ಮನಿರತರೂ, ಪುತ್ರರಿಲ್ಲದವರೂ ಕಠಿನರ್ಲೂ ತೇಜಸ್ಸಿಲ್ಲದವರೂ ಆಗಿರುವರು. 
ಭಾರದ್ವಾಜಗೋತ್ರದ ಬ್ರಾಹ್ಮಣರಿಗೆ ಆಂಗಿರಸ್ಕ ಬಾರ್ಹಸ್ಪತ್ಯ ಭಾರದ್ವಾಜ, 
ಸೈನ್ಯಸ್ಯ ಗಾರ್ಗ್ಯ ಎಂಬ ಐದು ಪ್ರವರಗಳು. 


ನವಮೋ9ಧ್ಯಾಯಃ ೧೨೯ 


ಒನ್ನೋತ್ರೇ ಚ ಯೇ ಜಾತಾ ವಾಡವಾ ಧನಿನಃ ಶುಭಾಃ । 


ಗ್ವ್ರಾಃಲಂಕರಣೋಪಹೇತಾ ದ್ವಿಜಭಕ್ತಿಪರಾಯಣಾಃ ॥ ೭೨ ॥ 
ಹ್ಮಭೋಜ್ಯಪರಾಃ ಸರ್ವೇ ಸರ್ವಧರ್ಮಪರಾಂಯಣಾಃ ! 

ಶ್ಯ ಪಗೋತ್ರೆ ೀಯೇ ಜಾತಾಃ ಪ್ರ ವರತ್ರ ಯಸಂಯುತಾಃ 1 ೭೩ ॥ 
ಕು ಪಶ್ಚಾ ಸನತ್ಸಾ ರೋ ಕೈಚ್ಛೇತಿ: ವಿಶ್ತು: ತಾಸ್ಟ್ರ ಯಃ ।- 

ಸ್ಲೋತ್ರೇ ಭವಾ ವಿಸ್ತಾ ರಕ್ತಾಕ್ಷಾಸ ಕ್ಲೂರದೃಷ್ಟಯಃ navn 
ನ್ವಲೌಲ್ಯರತಾಃ ಸರ್ವೇ: ಸರ್ವೆ ತೇ ಯಾರಿ 

೯ನಾ ರೋಗಿಣಶ್ಚೈತೇ ತಸ್ಕರಾಂನೃತಭಾಷಿಣಃ ॥ ೭೫ ॥ 
ಕಾ ರ್ಥಾಂವೇದಿನಃ ಸರ್ವೇ ನೇದಸ್ಮೃೃತಿನಿನರ್ಜಿತಾಃ | 

ಕಕೇಷು ಚ ಯೇ ಜಾತಾ ವಿಪ್ರಾ ಧ್ಯಾನಪರಾಯಣಾಃ ॥ ೭೬ ॥ 
ಸ್ವಿನೋ ಯೋಗಿನಶ್ಚ ನೇದವೇದಾಂಗಪಾರಗಾಃ । 

ಧವಶ್ಚ ಸದಾಚಾರಾ ನಿಷ್ಣುಭಕ್ತಿಷರಾಯಣಾಃ ॥ ೭೭ ॥ 
ಕೃಕಾಯಾ ಭಿನ್ನವರ್ಣಾ ಬಹುರಾಮಾ ದ್ವಿಜೋತ್ತಮಾಃ । 

ಖಾಲಾಃ ಸರಲಾಃ ಶಾಂತಾ ಬ್ರಹ್ಮಭೋಜ್ಯ ಪರಾಯಣಾಃ i ೭೮ ॥ 
ಕಕೇಷು ಚ ಯೇ ಜಾತಾಃ ಪ್ರವರತ್ರಯಸಂಯುತಾಃ । 

ರ್ಗವ ಶೌನಹೋತ್ರೇತಿ ಗಾರ್ತ್ಸ್ಯಪ್ರಮದ ಇತಿ ತ್ರಯಃ ॥೭೯॥ 


೬೨-೭೪. ಈ ಗೋತ್ರದಲ್ಲಿ ಹುಟ್ಟಿದವರು ಹಣಗಾರರೂ ಮಂಗಳ 
ಶೂ ಒಡವೆ ವಸ್ತ್ರಗಳಿಂದ ಕೂಡಿದವರೂ, ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, 
ಹ್ಮಣಭೋಜ್ಯವಾದ ವಸ್ತುಗಳಲ್ಲಿ ಆಸಕ್ತರ,  ಸರ್ವಧರ್ಮನಿರತರೂ 
ರುವರು. ಶಾಶಪಗೋತ್ರ ದಬಾ ್ರ ಹೃಣರಿಗೆ ಕಾಶ್ಯಪ, ಅಪಸವತ್ಸಾರ,- ರೈಭ್ಯ 
ಬ ಮೂರು ಪ್ರಸಿದ್ಧಪ್ರವರಗಳು. ಈ ಗೋತ್ರದ oR ತ್ರಹ್ಮಣರು, ಕೈಿಗಣ್ಣು ಳ್ಳ 
ಇ, ಕ್ಯೂರದೃ A ಯುಳ್ಳವರೂ, ಜಿಹ್ವಾಚಾಸಲ್ಯವುಳ್ಳ ವರೂ, ಪಾರಮಾರ್ಥಿಕ 
ಯುಳ್ಳ ವರೂ, ಬಡವರೂ, ರೋಗಿಗಳೂ, i. ಸುಳ್ಳಾಡುವವರೂ, 
ತ್ರಾ ರ್ಥಜ್ಞಾಾ ನವಿಲ್ಲದವರೂ, ವೇದ ಮತ್ತು ಸ್ಮ ಎಕಿಗಳನ್ನರಿಯದವರೂ, 
ಕಜ ಶುನಕಗೋತ್ರಜರು ಧ್ಯಾನಾಸಕ್ತ ಸ “ತಪಸ್ವಿ ಗಳೂ, ಯೋಗಿ 
ಇ, ವೇದ ಮತ್ತು ವೇದಾಂಗಗಳನ್ನ' ರಿತವರೂ, . ಸಜ್ಜ ಎಶ: ಸದಾಚಾರ 
ಪನ್ನರೂ, ವಿಷ್ಣುಭಕ್ತರೂ, ಕುಳ್ಳ ರೂ. ನಾನಾ ವರ್ಣದವರೂ, ಬಹಳ 
ದಲುಳ್ಳವರೂ, ಬ್ರಾಹ್ಮಣೋತ್ತಮರೂ, ದಯೆಯುಳ್ಳವರೂ, ಸರಳಸ್ವಭಾವ 
'ರೂ, ಶಾಂತರೂ, ಬ್ರಾಹ್ಮಣರು ತಿನ್ನಲು ಯೋಗ್ಯವಾದ ವಸ್ತುಗಳಲ್ಲಿ 
ತ್ರವೇ ಆಸಕ್ತರೂ ಆಗಿರುವರು. 

೭೯. ಶೌನಕಸಗೋತ್ರದಲ್ಲಿ ಜನಿಸಿದ ಬ್ರಾಹ್ಮಣರಿಗೆ ಭಾರ್ಗವ, ಶೌನ 

ತ್ರ, ಗಾರ್ತೃಪ್ರ ಹ ಎಂಬ ಮೂರು ಪ ನರಗಳು. 

5 


೧೩0 ಶ್ರೀ ಸತ್ಕಂಪಮಹಸಪುರಾಣಂ 


ಅಸ್ಮಿನ್ಸಂಶೇ ಸಮುತ್ಸನ್ನಾ ವಾಡವಾ ದುಃಸಹಾ ನೃಪ | 

ಮಹೋತ್ಕ ಟಾ ಮಹಾಕಾಯಾಃ ಪ್ರಲಂಜಾಶ್ಚ ಮಹೋದ್ಧ ತಾಃ ॥ ೮೦ ॥ 
ತ್ಹ ಕ್ಲೀಶರೂಸಾ॥ ಕ್ಟ ಷ್ಣ ವರ್ಣಾಃ ಸರ್ವಶಾಸ್ತ್ರ ನಿಶಾರದಾಃ | 

ಬಹುಭುಜೋ ಸಕ ದಕ್ಸಾ ರಾಗ ೀಸೋಪವರ್ಜಿತಾಃ ॥ ೮೧ ॥ 
ಸುವಸ ಸ್ರಭೂಷಾ ರೂಪಾ ವೈ ಬ್ರಾಹ್ಮಣಾ ಬ್ರಹ್ಮವಾದಿನಃ । 


ವಸಿಷ್ನಗೋತ್ರೇ ಯೇ | ಪ್ರಷರತ್ರಯಸಂಯುತಾಃ ॥ ೮೨ ॥ 
ವಸಿಷ್ಠೋ ಭಾರದ್ವಾಜಶ್ಚ ಇಂದ್ರ ಪ್ರಮದ ಏನ ಚ । 

ಅಸ್ಮಿನ್ಸೋತ್ರೇ ಭವಾ ವಿಪ್ರಾ ವೇದನೇದಾಂಗಪಾರಗಾಃ ॥ ೮೩ ॥ 
ಯಾಜ್ಞಿ ಕಾ "ಯಜ್ಞ ಶೀಲಾಕ್ನ ಸುಸ್ವರಾಃ ಸುಖಿನಸ್ತಥಾ । 

ದ್ವೇಷಿಣೋ ಧನವಂತಶ್ವ ಪುತ್ರಿ ಸ ಗುಣಿನಸ್ತಥಾ ॥ ೮೪ 


ವಿಶಾಲಹೃದಯಾ ರಾಜಂ ಫನಿರಾಃ ಶತ್ರುನಿಬರ್ಹಣಾಃ । 
ಗೌತಮಸಗೋತ್ರೇ ಯೇ ಜಾತಾಃ ಪ್ರವರಾಃ ಪಂಚಏನಹಿ ॥ ೮೫ ॥ 
ಕೌತ್ಸಗಾರ್ಗ್ಯೋಮವಾಹಾಶ್ಚ ಅಸಿತೋ ದೇವಲಸ್ತಥಾ। 


ಅಸ್ಮಿನ್ಲೋತ್ರೇ ಚ ಯೇ ಜಾತಾ ವಿಪ್ರಾಃ ಪರಮಪಾವನಾಃ ॥ ೮೬ ॥ 
ಪರೋಪಕಾರಿಣಃ ಸರ್ವೇ ಶ್ರು ತಿಸ್ಮ ಎತಿಸರಾಯಣಾಃ | 


ಬಕಾಸನಾಶ್ಚ ಕುಟಲಾ ಚ್ಛ ದ: ನೃ ತಿ “ರಾಸ ಸ್ಪಥಾ ॥ ೮೭ 0 





೮೦-೮೮. ಅರಸ! ಈ ವಂಶದಲ್ಲಿ ಉತ್ಪ ನ್ನರಾದ ಬ್ರಾಹ ರು Gd 
ರಾಗಿ ಇತರರಿಂದಲೂ ಸಹಿಸಲಾಗದವರೂ, ಡೊಡ್ಡ ದೇಹವುಳ್ಳ: ವರೂ, ಉದ್ದ 
ವಾದವರೂ, ಮದದಿಂದ ಕೊಬ್ಬಿ ದವರೂ, ಕಷ್ಟ 'ಕರವಾದ ರೊಸವುಳ್ಳ ವರೂ, 
ಕಪ್ಪು ಬಣ್ಣ ದವರೂ, ಸಕಲ ತ ಸ್ತನಿಷ್ಞಾ ತರೂ, ER ತಿನ್ನು ಸಸ: 
ಮಾನವಂತರೂ, ಕುಶಲರೂ, ರಾಗಡ್ವೀಷವಿಲ್ಲದವರೂ, ಒಳ್ಳೆ ಯ ಬಟ್ಟಿ ಒಡವೆ 
ಗಳನ್ನು ತೊಡುವವರೂ, ಒಳ್ಳೆಯ ಆಕೃತಿಯುಳ್ಳವರೂ, ನೇದಾಧ್ಯ ಯನಮಾಡಿ 
ದವರೂ ಆಗಿರುವರು. ನಸಿನ್ಮಗೋತ್ತ ದವರಿಗೆ. ವಸಿಷ್ಠ, ೩ 1 ಇಂದ್ರ 
ಪ್ರಮದ ಎಂಬ ಮೂರು ಪ್ರವರಗಳು. ಈ ಗೋತ್ರದ ಬ್ರಾ ಹ್ಮಣರು ನೇದ ಮತ್ತು 
ವೇದಾಂಗಗಳಲ್ಲಿ ವಿಶಾರದರೂ, ಯಜ್ಞ ಮಾಡುವವರೂ, ಒಳ್ಳೆಯ ಸ್ವರವುಳ್ಳ 
ವರೂ, ಸೌಖ್ಯವುಳ್ಳ ವರೂ, ದ್ವೇಷವುಳ್ಳ ವರೂ, ಹಣಗಾರರೂ, ಪುತ್ರರುಳ್ಳವರೂ, 
ಗುಣಶಾಲಿಗಳೂ, ಅಗಲವಾದ ಎದೆಯುಳ್ಳವರೂ, ಶೂರರೂ, ಶತ್ರುನಾಶಕರೂ 
ಆಗಿರುವರು. ಗೌತಮಗೋತ್ರದವರಿಗೆ ಕಾತ್ಸ, ಗಾರ್ಗ್ಯ, ಉಮವಾಹ, ಅಸಿತ, 
ದೇವಲ ಎಂದು ಐದು ಪ್ರವರಗಳು. ಈ ಗೋತ್ರದ ಬ್ರಾಹ್ಮಣರು ಅತ್ಯಂತ 
ಪವಿತ್ರರೂ, ಪರೋಪಕಾರಿಗಳೂ, ವೇದ ಮತ್ತು ಸ್ಮೃತಿಗಳಲ್ಲಿ ನಿರತರೂ, 
ಕೊಕ್ಕರೆಯಂತೆ ಮೌನವಾಗಿ ಕುಳಿತು ಕಾರ್ಯವನ್ನು ಸಾಧಿಸುವವರೂ, ವಕ್ರ 
ಸ್ವಭಾವದವರೂ, ಕಪಟವೃತ್ತಿಯುಳ್ಳವರೂ, ನಾನಾ ಶಾಸ್ತ್ರಾರ್ಥಗಳಲ್ಲಿ 


ಸವಮೋ$ವ್ಶಾಯ॥ ಗ *ಗಿಫಿಲಿ 


ನಾನಾಶಾಸ್ಟ್ರಾಂರ್ಥನಿಪುಣಾ ನಾನಾಭರಣಭೂಸಿತಾಃ । 


ವೃಕ್ಸಾದಿಕರ್ಮಕುಶಲಾ ದೀರ್ಫ್ಥರೋಷಾಶ್ಚ ರೋಗಿಣಃ ॥ ಆಲ ॥ 
ಆಂಗಿರಸಗೋತ್ರೇ ಯೇ ಜಾತಾಃ ಪ್ರವರತ್ರಯಸಂಯುತಾಃ । 
ಆಂಗಿರಸೋಂಂಬರೀಷಶ್ಚ ಯೌವನಾಶ್ಚ ಸ್ತೃತೀಯ ಕಃ ॥ ೮೯॥ 
ಅಸ್ಮಿನ್ಗೋತ್ರೇ ಚ ಯೇ ಜಾತಾಃ ಸತ್ಯಸಂಭಾಸಿಣಸ್ತಥಾ । 
ಜಿತೇಂದ್ರಿಯಾಃ ಸುರೂಪಾಶ್ಚ ಅಲ್ಪಾಹಾರಾಃ ಶುಭಾನನಾಃ ॥೯೦॥ 
ಮಹಾವ್ರತಾಃ ಪುರಾಣಜ್ಞಾ 'ನುಹಾದಾನಪರಾಯಹಾಃ | 

ನಿರ್ದೇಷಿಣೋ ಲೋಭಯುತಾ ನೇದಾಂಧ್ಯಯನತತ್ಸ್ಪ ರಾಃ ॥೯೧॥ 
ದೀರ್ಫದರ್ಶಿಮಹಾತೇಜೋ ಮಹಾಮಾಯಾವಿನೋಹಿತಾಃ । 
ಶಾಂಡಿಲ್ಕಸಗೋತ್ರೇ ಯೇ ಪ್ರನರತ್ರಯಸಂಯುತಾಃ ॥ ೯೨॥ 
ಅಸಿತೋ ದೇವಲಕ್ಚೆೈನ ಶಾಂಡಿಲಸ್ತು ತೃತೀಯಕಃ । 

ಅಸ್ಮಿಸ್ಸೋತ್ರೇ ಮಹಾಭಾಗಾಃ ಕುಬ್ಬಾಶ್ಚ ದ್ವಿಜಸತ್ತಮಾಃ 1 ೯೩॥ 
ನೇತ್ರರೋಗೀ ಮಹಾದುಷ್ಟಾ ಮಹಾತ್ಯಾಗಾ ಅನಾಯುಷಃ । 
ಕಲಹೋತ್ಸಾದನೇ ದಕ್ಬಾಃ ಸರ್ವಸಂಗ್ರಹತತ್ಸರಾಃ 1 ೯೪॥ 


ಮಲಿನಾ ಮಾನಿನಶ್ಚೈನ ಜ್ಯೋತಿಃಶಾಸ್ತ್ರನಿಶಾರದಾಃ | 

ಆತ್ರೇಯಸಗೋತ್ರೇ ಯೇ ಜಾತಾಃ ಪಂಚಪ್ರನರಸಂಯುತಾಃ ॥ ೯೫॥ 
ಕುಶಲರೂ, ನಾನಾವಿಧಗಳಾದ ಒಡವೆಗಳಿಂದ ಅಲಂಕೃತರೂ, ಮರವನ್ನು 
ಬೆಳಿಸುವುದೇ ಮೊದಲಾದ ಕೆಲಸಗಳಲ್ಲಿ ನಿಪುಣರೂ, ಬಹುಕಾಲ ಕೋಪವುಳ್ಳ 
ವರೂ, ರೋಗಿಗಳೂ ಆಗಿರುವರು. 

೮೯-೯೯. ಆಂಗಿರಸ ಗೋತ್ರದಲ್ಲಿ ಹುಟ್ಟಿ ದವರಿಗೆ ಆಂಗಿರಸ, ಅಂಬರೀಷ, 
ಯಾವನಾಶ್ವವೆಂಬ ಮೂರುಪ್ರವರಗಳು. ಈ ಗೋತ್ರ ದಬ್ರಾಹೆ ಣರು ಸತ ೈವನ್ನು 
ನುಡಿಯುವವರೂ, ಜಿತೇಂದ್ರಿಯರೂ, ಸರ ಸ್ವಲ್ಪಾ ಹಾರವನ್ನು. 
ತಿನ್ನುವವರೂ, ಮಂಗಳಕರವಾದ ಮುಖವುಳ್ಳವರೂ, ಮಹಾನ ತನಳ್ಳ ವರೂ, 
ಪುರಾಣಾಭಿಜ್ಞರೂ, ಅತ್ಯಂತದಾನಾಸಕ್ತರೂ, ದ್ವೇಷವಿಲ್ಲದವರೂ, 'ತ್ಯಾತೆ 
ಯುಳ್ಳವರೂ, ವೇದಾಧ್ಯಯನ ನಿರತರೂ, ದೂರದೃಷ್ಟಿಯುಳ್ಳವರೂ, ಮಹಾ 
ತೇಜಸ್ತಿಗಳೂ, ಅತ್ಯಂತವಾಗಿ ಮಾಯೆಯಿಂದ ಮೋಹಗೊಂಡವರೂ ಆಗಿರು 
ವರು. ಶಾಂಡಿಲ್ಯಗೋತ್ರಜರಿಗೆ ಅಸಿತ, ದೇವಲ, ಶಾಂಡಿಲವೆಂಬ ಮೂರು 
ಪ್ರವರಗಳು. ಈ ಗೋತ್ರದವರು ಅತ್ಯಂತ ಭಾಗ್ಯಶಾಲಿಗಳೂ, ಗೂನುಬೆನ್ಸಿ 
ನವರೂ, ಬ್ರಾಹ ಶ್ರೇಷ್ಟ ರೂ, ಕಣಿ ನ ರೋಗವುಳ್ಳ ವರೂ, ಅತಿ ದುಷ್ಟ ರೂ, 
ಅತ್ಯಂತ ep ಆಯುಷ್ಯವಿಲ್ಲದವರೂ. ಜಗಳವನ್ನುಂಟುಮಾಡು 
ವುದರಲ್ಲಿ ನಿಪುಣರೂ, ಸಮಸ್ತವನ್ನೂ ಕೂಡಿಡುವುದರಲ್ಲಿ ಆಸಕ್ತರೂ, ಮಲಿನರೂ, 





೧೩೨ ಶ್ರೀ ಸ್ಕಾಂದಮಹಾಪುರಾಣಂ 


ಆತ್ರೇಯೋಂರ್ಚನಾನಸಶ್ಯಾವಾಶ್ಟೋಂಂಗಿರಸೋತತ್ರಿಶ್ಚ 1 
ಆಸಿ ನ್ವ ಶೇ ಚ ಯೇ ಜಾತಾ ದ್ವಿ ಜಾಸ್ತೇ ಸೂರ್ಯವರ್ಚಸಃ ॥ ೯೬೫ 
ಚಂದ್ರಃ ವಚ್ಛಿ €ತಲಾಃ ಸರ್ವೇ ಧರ್ಮಾಃ ರಣೆ (ನ್ಯ ಮ್ನ ತಾಃ । 


ಸದಾಜಾರು ಮಹಾದಕ್ಕಾಃ ಶ್ರು ತಿಶಾಸ್ತ್ರ EL Fen 
ಯಾಜ್ಞೆ ಕಾಶ್ಚ ಶುಭಾಚಾರಾಃ ಸತ್ಯ ಶೌಷಪರಾಯಣಾಃ | 

ಧರ್ಮಜ್ಞಾ 'ದಾನಶೀಲಾಶ್ಮ ನಿರ್ಮಲಾಶ್ಚ ಮಹೋತ್ಸುಕಾಃ ॥ ೯೮.॥ 
ತಪಃಸ್ವಾಧ್ಯಾಯನಿರತಾ ಜು ವು! ॥೯೯॥ 


ಯುಧಿಷ್ಠಿರ ಉವಾಚ: 
ಕಥಯಸ್ವ ಮಹಾಬಾಹೋ ಧರ್ಮಾರಣ ಕಥಾಮೃುತಂ । 
ಯಚ್ಛು ತ್ವಾ ಮುಚ್ಯತೇ ಪಾಪಾಜ್ಟೊ, (ರಾದ್ವ ಹ | ವಧಾದಪಿ ॥ ೧೦೦ ॥ 
ವ್ಯಾಸ ಉವಾಚ:- . - . 

ಶೃಣು ರಾಜನ್ಮನಕ್ಸ್ಸ್ಯಾಮಿ ಕಥಾನೇತಾಂ ಸುದುರ್ಲಭಾಂ ॥ ೧೦೧॥ 
ಯಕ್ಸ್ಸರಕ್ಸೃಃ ಪಿಶಾಚಾವ್ಯಾ ಉದ್ದೇಜಯಂತಿ ವಾಡವಾನ್‌ । 
ಜೃಂಭಕೋ ನಾಮ ಯಕ್ಲೋಃಭೂದ್ಧರ್ಮಾಃ ರಣ್ಯಸಮಿಸಾಪತಃ ॥ ೧೦೨ ॥ 
ಉದ್ದೇಜಯುತಿ ನಿತ್ಯಂ ಸ ಧರ್ಮಾಃ ರಣ್ಯನಿವಾಸಿನಃ । 
ತತಸ್ತೈಶ್ಚ ದ್ವಿಜಾಗ್ರೈಸ್ತು ದೇನೇಭ್ಯೋ ವಿನಿನೇದಿತಂ i ೧೦೩-॥ 
ಮಾನವಂತರೂ, ಜ್ಯೋತಿಶ್ಯಾಸ್ತ್ರದಲ್ಲಿ ನಿಪುಣರೂ ಆಗಿರುವರು. ಆತ್ರೇಯಸ 
ಗೋತ್ರದವರಿಗೆ ಆತ್ರೇಯ, ಅರ್ಚನಾನಸ, ಶ್ಯಾವಾಶ್ವ, ಅಂಗಿರಸ, ಅತ್ರಿ 
ಎಂದು ಐದು ಪ್ರವರಗಳು. ಈ ವಂಶದ ಬ್ರಾಹ್ಮಣರು ಸೂರ್ಯನಂತೆ ವರ್ಚ 
ಸ್ಸುಳ್ಳವರೂ, ಚಂದ್ರನಂತೆ, ತಣ್ಣಗಿರುವವರೂ, ಸದಾಚಾರವುಳ್ಳವರೂ, ಅತ್ಯಂತ 
ನಿಪುಣರೂ, ವೇದಶಾಸ್ತ್ರನಿರತರೂ, ಯಜ್ಞಮಾಡುವವರೂ, ಮಂಗಳಕರವಾದ 
ನಡತೆಯುಳ್ಳವರೂ, ಸತ್ಯ, ಶೌಚಗಳಲ್ಲಿ ಆಸಕ್ತರೂ, ಧರ್ಮಜ್ಞರೂ, ದಾನ 
ಶೀಲರೂ, ಶುದ್ಧ ರೂ ಅತ್ಯಂತ ಔತ್ಸು ಕ್ಟ ವುಳ್ಳ ವರೂ, ತಪಸ್ಸು, ಸೇದಾಧ್ಯಯನ 
ಗಳಲ್ಲಿ ನಿರತರ ನ್ಯಾಯ ಮತ್ತು ಧರ್ಮಗಳಲ್ಲಿ ಆಸಕ್ತರೂ ಆಗಿರುವರು. 

೧೦೦. ಯುಧಿಸ್ಠಿರನು ಕೇಳುತ್ತಾ ನೆ:--ಇಎಲೈ ವ್ಯಾಸಮುನಿಯೆ ! ಯಾವು 
ದನ್ನು ಹೇಳಿ ಮನುಷ್ಯನು ಘೋರವಾದ ಬ್ರಹ ೈಹತ್ಯಾವಾಸದಿಂದ ಮುಕ್ತ ನಾಗು 
ವನೊ ಅಂತಹ ಧರ್ಮಾರಣ್ಯದ ಕಥೆಯನ್ನು ಹೇಳು. 

೧೦೧. ವ್ಯಾಸನು ಹೇ ಸತಾ ನೆ -ಡೊರೆಯೆ ! ಅಪೂರ್ವವಾದ ಈ ಕಥೆ 
ಯನ್ನು ಹೇಳುವೆನು ಕೇಳು. 

೧೦೨. ಯಕ್ಚರೂ, ರಾಕ್ಸುಸರೂ, ಪಿಶಾಚಾದಿಗಳೂ ಬ್ರಾಹ್ಮಣರನ್ನು 
ಹೆದರಿಸುತ್ತಾರೆ. ಧರ್ಮಾರಣ್ಯದ ಬಳಿ ಜೃಂಭಕನೆಂಬ ಯಕ್ಸನೊಬ್ಬನಿದ್ದನು. 

೧೦೩-೧೦೪. ಅವನು ಧರ್ಮಾರಣ್ಯವಾಸಿಗಳಾದ ಬ್ರಾಹ್ಮಣರನ್ನು ಯಾವಾ 


ನನನೋತಧ್ಯಾಯಃ ೧೩ಕ್ಕಿ 


ಯಕ್ಷರಕ್ಸಾದಿನಾ ಚೈವ ಪರಿಭೂತಾ ವಯಂ ಸುರಾಃ । 

ತ್ಯ ಕ್ಸ್‌ ಸನೊಂಡ್ಯ ಪ ಸ್ಥಾ ನಂ ತದ್ಭಯಾನ್ನಾಃತ್ರ ಸಂಶಯಃ ॥ ೧೦೪ ॥ 
ತಕೋ ದೇವೈಃ ಸೆಗಂಥವೈ ೯ ಸ್ಥಾ ಪಿತಾಸ್ತತ್ರ ಭೂಮಿಷು 1 

ಸಿದ್ಧಾ ಶ್ವ ವರೆಯೋಗಿನ್ಯಃ ಶ್ರಿ i (ಮಾತೃ ಪ ಕ್ರಭ್ವತಯಸ್ತ ಥಾ 1೧೦೫ ॥ 
ರಕ್ಷ ಣಾರ್ಥಂ ಹಿ ನಿಪ್ರಾಣಾಂ ಲೋಕಾನಾಂ ಹಿತಕಾನ್ಯುಯಾ । 


ಗೋತ್ರಾನ್ರತಿ ತಥೈಕೈಕಾ ಸಾ ಪಿತಾ ಯೋಗಿನೀ ತದಾ ॥ ೧೦೬ ॥ 
ಯಸ್ಯ ಗೋತ್ರಸ್ಯ ಯಾ ಶಕ್ತೀ ರಕ್ಷ್ಮಣೇ ಸಾಲನೇ ಕ್ಷಮಾ । 

ಸಾ ತಸ್ಯ ಕುಲದೇನೀತಿ ಸಾಕ್ಸಾತ್ರತ್ರ ಬಭೂವ ಹ : 1 ೧೦೭॥ 
ಶ್ರೀಮಾತಾ ತಾರಣೀ ದೇವೀ ಆಶಾಪೂರೀ ಚ ಗೋತ್ರಸಾ। 
ಇಚ್ಛಾಂರ್ತಿನಾಶಿನೀ ಚೈನ ಪಿಪ್ಪಲೀ ನಿಕಾರವಶಾ ॥ ೧೦೮ ॥ 
ಜಗನ್ಮಾತಾ SNe ಸಿದ್ಧಾ ಭಟ್ಟಾ ರಿಕಾ ತಥಾ । 

ಕದಂಬಾ ವಿಕರಾ ಮಾಾಠಾ ಸುವರ್ಣಾ ವೆಸುಜಾ ತಥಾ ॥ ೧೦೯॥ 
ಮಾತಂಗೀ ಚ ಮಹಾದೇವೀ ವಾಣೀ ಚ ಮುಕುಟೇಶ್ವರೀ । 

ಭದ್ರೀ ಚೈನ ಮಹಾಶಕ್ತಿಃ ಸಂಹಾರೀ ಚ ಮಹಾಬಲಾ ॥ ೧೧೦॥ 


ಗಲೂ ಹೆದರಿಸುತ್ತಿದ್ದನು. ಆಗ ಅಲ್ಲಿರುವ ಬ್ರಾಹ್ಮಣರು ""ದೇವತೆಗಳೆ! 
ಯಕ್ಬರು, ರಾಕ್ಸಸರೇ ಮೊದಲಾದವರು ನಮ್ಮನ್ನು ಬಾಧಿಸುತ್ತಿದ್ದಾರೆ. ಅವರ 
ಭಯದಿಂದ ಈಗ ನಾವು ಉತ್ತಮವಾದ ಈ ಸ್ಥಳವನ್ನು ನಿಶ್ಚಯವಾಗಿಯೂ 
ಬಿಟ್ಟುಬಿಡುವೆವು'' ಎಂದು ದೇವತೆಗಳಿಗೆ ತಿಳಿಸಿದರು. 

೧೦೫. ಬಳಿಕ ದೇವತೆಗಳೂ ಗಂಧರ್ವರೂ ಸೇರಿ ಆ ಧರ್ಮಾರಣ್ಯದಲ್ಲಿ 
ಸಿದ್ಧರನ್ನೂ, ಶ್ರೀಮಾತೆಯೇ ಮೊದಲಾದ ಯೋಗಿನಿಯರನ್ನೂ ನೆಲೆಗೊಳಿಸಿದರು. 

೧೦೬. ಬ್ರಾ ಹ್ಮಣರ ರಕ್ಷ ೆಗಾಗಿಯೂ, ಲೋಕಕ್ಕೆ ಹಿತವನ್ನುಂಟು 
ಮಾಡುವುದಕ್ಕಾಗಿಯೂ ಬಾ ಗೋತ್ರದ ಜನರಿಗೆ ಒಬ್ಬೊಬ್ಬ ್ಬ ಯೋಗಿನಿ 
ಯನ್ನು ಏರ್ಪಡಿಸಿಕೊಟ್ಟರು. 

೧೦೭. ಯಾವ ಶಕ್ತಿದೇವತೆಯು ಯಾವ ಗೋತ್ರದವರನ್ನು ಪೋಸಿಸುವು 
`ದರಲ್ಲಿಯೂ ರಕ್ಷಿಸುವುದರಲ್ಲಿಯೂ ಶಕ್ತಳೊ, ಅವಳು ಅವರಿಗೆ ಕುಲದೇವಿಯಾಗಿ 
ನೆಲೆಸಿ ಹೆಸರಾದಳು. 

೧೦೮-೧೧೧. ಶ್ರೀಮಾತಾ, ತಾರಣೀ, ಆಶಾಪೂರೀ, ಗೋತ್ರಪಾ, 

ಚ್ಭ್ರಾ. ಆರ್ತಿನಾಶಿನೀ, ಪಿಪ್ಪಲೀ, ವಿಕಾರವಶಾ, ಜಗನ್ಮಾತಾ, ಮಹಾಮಾತಾ, 

ಸಿದ್ಧಾ, ಭಟ್ಟಾರಿಕಾ, ಕದಂಬಾ, ವಿಕಿರಾ, ಮಾಠಾ, ಸುಪರ್ಣಾ, ವಸುಜಾ, 
ಮಾತಂಗೀ, ವಾಣೀ, ಮುಕುಟೇಶ್ವರೀ, ಭದ್ರೀ, ಮಹಾಶಕ್ತಿ, ಅತ್ಯಂತ 


೧೩೪ ಶ್ರೀ ಸ್ಕಾಂಡಮಹಾವುರಾಣಂ 


ಚಾಮುಂಡಾ ಚ ಮಹಾದೇವೀ ಇತ್ಯೇತಾ ಗೋತ್ರಮಾತರಃ I 


ಬ್ರಹ್ಮನಿಷ್ಲುಮಹೇಶಾದ್ಯೈಃ ಸ್ಥಾಪಿತಾಸ್ತತ್ರ ರಕ್ಸುಣೇ ೧೧೦೧ ॥ 
ತಾಃ ಪೂಜಯಂತಿ ನಿಪ್ರೇಂದ್ರಾಃ ಸ್ವಧರ್ಮನಿರತಾಃ ಸದಾ | 
ತತಃ ಪ್ರಭೃತಿ ಯೋಗಿನ್ಯಃ ಸ್ಟೇ ಸ್ವೇ ಕಾಲೇ ಸುರಕ್ಸಿತಾಃ ॥ ೧೧೨ ॥ 


ವಾಡನಾಃ ಸ್ವಸ್ಥತಾಂ ಜಗ್ಮುಃ ಪುತ್ರಸೌತ್ರೈೆಃ ಸಮಾವೃತಾಃ । 

ತತೋ ದೇವಾಃ ಸ ಗಂಧರ್ವಾ ಹರ್ಷನಿರ್ಭರಮಾನಸಾಃ । 
ವಿಮಾನವರಮಾರೂಢಾ ಜಗುರ್ನಾಕೇಂಮೃತಾಂಶನಾಃ ॥ ೧೧೩ ॥ 
ಗತೇ ನರ್ಷಶತೇ ರಾಜನ್ಸ್ರಹ್ಮನಿಷ್ಲುಮಹೇಶ್ವರಾಃ । 


ಸ್ಮೃತ್ವಾತು ಧರ್ಮಾರಣ್ಯಸ್ಯ ಪ್ರೇಕ್ಸಣಾರ್ಥಂ ಕುತೂಹಲಾತ್‌ ॥ ೧೧೪ ॥ 


ಸಮಾಜಗ್ಮುಸ್ತದಾ ರಾಜನ್ಮ್ರಭಾತೇ ಉದಿತೇ ರನೌ । 
ವಿಮಾನವರಮಾರುಹ್ಯ ಅಪ್ಸರೋಗಣಸೇನಿತಾಃ 1 ೧೧೫ ॥ 
ಗಂಧರ್ನೈರ್ಗೀಯಮಾನಾಸ್ತೇ ಸ್ತೂಯಮಾನಾಃ ಪ್ರಬೋಧಕ್ಕೆಃ । 

ತತ್ರ ಸ್ಥಾನೇ ದ್ವಿಜಾ ರಾಜನ್ಸಮಿತ್ಪುಷ್ಟಕುಶಾನ್ಪಹೂನ್‌ ॥ ೧೧೬ ॥ 
ಆಶ್ರಮಾಂಸ್ತಾನ್ಸರಿತ್ಯಜ್ಯ ಗತಾಃ ಸರ್ವೇ ದಿಶೋದಶ । 

ತಮಾಶ್ರಮಪದಂ ದೃಷ್ಟ್ವಾ ಶೂನ್ಯಂ ಚೈನ ಮಹೇಶ್ವರಃ ॥ ೧೧೭ ॥ 


ಉವಾಚ ವಾಕ್ಯಂ ಧರ್ಮಜ್ಞೋ ವಾಡವಾಸ್ತಿ ಶ್ಯತೇ ನಿಭೋ । 
ಶುಶ್ರೂಷಾರ್ಥಂಹಿ ಶುಶ್ರೂಷೂನ್‌ ಕಲ್ಪಯೇದಿತಿ ನೇ ಮತಿಃ॥ ೧೧೮ ॥ 
ಬಲವುಳ್ಳ ಸಂಹಾರೀ, ಚಾಮುಂಡಾ ಎಂಬ ಗೋತ್ರದೇವಿಯರನ್ನು ಅಲ್ಲಿ 
ಬ್ರಹ್ಮಾದಿ ದೇವತೆಗಳು ಬ್ರಾಹ್ಮಣರ ರಕ್ಸಣೆಗಾಗಿ ಸ್ಥಾಪಿಸಿದರು. 

೧೧೨-೧೧೩. ಬ್ರಾಹ್ಮಣರು ಯಾವಾಗಲೂ ಸ್ವಧರ್ಮನಿರತರಾಗಿ ಆ ದೇವಿ 
ಯರನ್ನು ಪೂಜಿಸಿದರು. ಅದು ಮೊದಲ್ಗೊಂಡು ಆಯಾ ಕಾಲದಲ್ಲಿ ಯೋಗಿನಿ 
ಯರಿಂದ ರಕ್ಷಿಸಲ್ಪಟ್ಟ ಬ್ರಾಹ್ಮಣರು ಮಕ್ಕಳು ಮೊಮ್ಮಕ್ಕಳೊಡನೆ ಸುಖವಾಗಿ 
ದ್ದರು. ಬಳಿಕ ದೇವತೆಗಳು ಸಂತೋಷಗೊಂಡು ಗಂಧರ್ವರೊಡನೆ ವಿಮಾನ 
ವನ್ನೇರಿ ದೇವಲೋಕಕ್ಕೆ ತೆರಳಿದರು. 

೧೧೪-೧೧೮. ಹೀಗೆ ನೂರು ವರ್ಷಗಳು ಕಳೆಯಲು ಬ್ರಹ್ಮ, ವಿಷ್ಣು 
ಮಹೇಶ್ವರರು ಧರ್ಮಾರಣ್ಯವನ್ನು ಜ್ಞಾಪಿಸಿಕೊಂಡು ಅದನ್ನು ನೋಡುವ ಕುತೂ 
ಹಲದಿಂದ ವಿಮಾನದಲ್ಲಿ ಕುಳಿತು ಅಪ್ಸರರ ವೃಂದದಿಂದ ಸೇವಿಸಲ್ಪಡುವವರೂ, 
ಗಂಧರ್ವರಿಂದ ಗಾನಮಾಡಿಸಿಕೊಳ್ಳಲ್ಪ ಡುವವರೂ, ವಂದಿಮಾಗದಧರಿಂದ ಸ್ತುತಿ 
ಸಲ್ಪಡುನವರೂ ಆಗಿ ಸೂರ್ಯೋದಯಕಾಲಕ್ಕೆ ಸರಿಯಾಗಿ ಆ ಧರ್ಮಾರಣ್ಯಕ್ಕೆ 
ಬಂದರು. ಆಗ ಅಲ್ಲಿರುವ ಬ್ರಾಹ್ಮಣರು ಕಟ್ಟಿಗೆ, ಹೂವು, ದರ್ಭೆಗಳುಳ್ಳ 
ಆಶ್ರಮಸ್ಥಾನಗಳನ್ನು ಬಿಟ್ಟು ಎಲ್ಲರೂ ದಿಕ್ಕುದಿಕ್ಕಿಗೂ ಹೊರಟುಹೋಗಿದ್ದರು. 


ನವಮೋ5ಧ್ಯಾಯಃ ೧೩೫ 


ಶ್ರುತ್ವಾ ತು ವಚನಂ ಶಂಭೋರ್ದೇವದೇವೋ ಜನಾರ್ದನಃ । 

ಸತ್ಯಂ ಸತ್ಯನಿತಿ ಪ್ರೋಚ್ಯ ಬ್ರಹ್ಮಾಣನಿಂದಮಬ್ರನೀತ್‌ ॥ ೧೧೯॥ 
ಭೋ ಭೋ ಬ್ರಹ್ಮನ್ಸಿಜಾತೀನಾಂ ಶುಶ್ರೂಷಾರ್ಥಂ ಪ್ರಕಲ್ಪಯ । 
ಸೃಷ್ಟಿರ್ಹಿ ಶಾಶ್ಚತೀನಾಂದ್ಯ ದ್ವಿಜೌಘೋಂಪಿ ಸುಖೀಭವೇತ್‌ । 


ವಿಷ್ಣೋರ್ವಾಕ್ಯಮಭಿಶ್ರುತ್ಯ ಬ್ರಹ್ಮಾ ಲೋಕಸಿತಾಮಹಃ ॥ ೧೨೦ ॥ 
ಸಂಸ್ಕರನ್ಯಾಮಧೇನುಂ ವೈ ಸ್ಮರಣೇನೈನ ತತ್ಕೃಣೇ । 
ಆಗತಾ ತತ್ರ ಸಾ ಧೇನುರ್ಧರ್ಮಾಃರಣ್ಯೇ ಪವಿತ್ರಕೇ ॥ ೧೨೧॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ಶೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "" ಗೋತ್ರ 
ಪ್ರನರ ಗೋತ್ರದೇನಿಕಥನಂ *ನಾಮ ನನಮೋಂಧ್ಯಾಯಃ 





ಮಹೇಶ್ವರನು ಬರಿದಾದ ಆಶ್ರಮಗಳನ್ನು ನೋಡಿ ವಿಷ್ಣುವನ್ನು ಕುರಿತು, 
" ಇಲ್ಲಿ ಬ್ರಾಹ್ಮಣರಿಗೆ ಬಹಳ ಕಷ್ಟವಾಗಿದೆ. ಆದುದರಿಂದ ಇವರ ಸೇವೆಗಾಗಿ 
ಸೇವಕರನ್ನು ಏರ್ಪಡಿಸಬೇಕೆಂದು ನನಗೆ ಇಷ್ಟವಿದೆ' ಎಂದನು. 

೧೧೯. ಶ್ರೀಮಹಾವಿಷ್ಣುವು ಶಿವನ ಮಾತನ್ನು ಕೇಳಿ ನಿಜವೆಂದುಸುರಿ 
ಬ್ರಹ್ಮನನ್ನು ಕುರಿತು ಇಂತೆಂದನು. 

೧೨೦-೧೨೧. ""ಎಲೈ ಬ್ರಹ್ಮನೆ! ಬ್ರಾಹ್ಮಣರ ಸೇವೆಗಾಗಿ ಸ್ಥಿರವಾಗಿ 
ನೆಲೆಸುವ ಜನರನ್ನು ಸೃಜಿಸು. ಅವರಿಂದ ಬ್ರಾಹ್ಮಣರು ಸುಖವಾಗಿರಬೇಕು'' 
ಎಂದನು. ಶ್ರೀವಿಷ್ಣುವಿನ ಈ ಮಾತನ್ನು ಕೇಳಿ ರೋಕನಿತಾಮಹನಾದ 
ಬ್ರಹ್ಮನು ಕಾಮಧೇನುವನ್ನು ಸ್ಮರಿಸಿದನು. ಕೂಡಲೆ ಕಾಮಥೇನುವು ಆ 
ಧರ್ಮಾರಣ್ಯಕ್ಕೆ ಬಂದಿತು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಮಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಮ 
ಮಾಹಾತ್ಮ್ಯದಲ್ಲಿ "" ಗೋತ್ರಪ್ರವರ ಗೋತ್ರದೇವೀಕಥನ''ನೆಂಬ 
ಒಂಬತ್ತನೆ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ದಶನೋ$ಧ್ಯಾಯಃ 
ವಣೆಕ್ಟರಿಗ್ರಹವರ್ಣಸಂ 
ವ್ಯಾಸ ಉವಾಚ :-- ಸ 

ಶೃಣು ರಾಜನ್ಯಥಾವೃತ್ತಂ ಧರ್ಮಾಃರಣ್ಯೇ ಶುಭಂ ಮತಂ । 
ಯದಿದಂ ಕಥಯಿಷ್ಯಾಮಿ ಅಶೇಷಾಃಘೌಘನಾಶನಂ Hor 
ಅಜೇಶೇನ ತದಾರಾಜನ್ರ್ರೇರಿತೇನ ಸ್ವಯಂಭುವಾ । 
ಕಾಮಧೇನುಃ ಸಮಾಹೂತಾ ಕಥಯಾಮಾಸ ತಾಂ ಪ್ರತಿ ॥೨॥ 
ನಿಪ್ರೇಭ್ಯೋಂನುಚರಾನ್ಸೇಹಿ ಏಕೈಕಸ್ಮೈ ದ್ವಿಜಾತಯೇ । 
ದ್ಕ್‌್ಧ್ಯೌ ಶುದ್ಧಾತ್ಮಕೌ ಚೈನಂ ದೇಹಿ ಮಾತಃ ಪ್ರಸೀದ ಮೇ ॥೩॥ 
ತಥೇತ್ಯುಕ್ತ್ವಾ ಮಹಾಧೇನುಃ ಕ್ಸೀರೇಣೋಲ್ಲೇಖಯದ್ಳರಾಂ । 
ಹುಂಕಾರಾತ್ತಸ್ಯ ನಿಷ್ಕ್ರ್ರಾಂತಾಃ ಶಿಖಾಶೂತ್ರಧರಾ ನರಾಃ ॥೪॥ 
ಷಟ್ಟ್ರಂಶಚ್ಚ ಸಹಸ್ರಾಣಿ ನಣಿಜಶ್ಚ ಮಹಾಬಲಾಃ । 
ಸೋಪನೀತಾ ಮಹಾದಕ್ಷಾಃ ಸರ್ವಶಾಸ್ತ್ರನಿಶಾರದಾಃ ॥೫॥ 
ದ್ವಿಜಭಕ್ತಿಸಮಾಯುಕ್ತಾ ಬ್ರಹ್ಮಣ್ಯಾಸ್ತೇ ತಪೋನನ್ಹಿತಾಃ । 


ಎಡ 
ಪುರಾಣಜ್ಞಾಃ ಸದಾಚಾರಾ ಧಾರ್ನಿಕಾ ಬ್ರಹ್ಮಭೋಜಕಾಃ ॥೬॥ 


ಕನ್ನಡದ ಅನುವಾದ 
ವಣಿಕ್ಟರಿಗ್ರಹವರ್ಣನ 

೧. ವ್ಯಾಸರು ಹೇಳುತ್ತಾರೆ:--ಯುಧಿಷ್ಠಿರ! ಸಕಲ ಪಾಪಗಳ ಸಮೂಹ 
ವನ್ನು ನಾಶಗೊಳಿಸುವ ಧರ್ಮಾರಣ್ಯದಲ್ಲಿ ನಡೆದ ಸಮಾಚಾರವನ್ನು ಹೇಳುವೆನು; 
ಕೇಳು. 

೨, ವಿಷ್ಣುವಿನಿಂದ ಪ್ರೇರಿತನಾದ ಬ್ರಹ್ಮನು ಕಾಮಧೇನುವನ್ನು ಕರೆದು 
ಹೀಗೆಂದನು. 

೩. ತಾಯೆ ! ಪ್ರಸನ್ನಳಾಗು. ಇಲ್ಲಿರುವ ಒಬೊಬ್ಬ ಬ್ರಾಹ್ಮಣನಿಗೂ 
ಶುದ್ಧರಾದ ಇಬ್ಬಿಬ್ಬರು ಸೇವಕರನ್ನು ಕೊಡು.?' 

೪-೬, ಕಾಮಧೇನುವು ಅದನ್ನು ಕೇಳಿ ಭೂಮಿಯನ್ನು ಹಾಲಿನ ಧಾರೆ 
ಯಿಂದ ಒರೆಯಿತು. ಆ ಧೇನುವಿನ ಹುಂಕಾರದಿಂದ ಜುಟ್ಟು ಜರಿವಾರ 
ಗಳುಳ್ಳ ವರೂ, ವರ್ತಕರೂ, ಬಲಿಷ್ಮರೂ, ಅತ್ಯಂಶ ಕುಶಲರೂ, ಸಕಲಶಾಸ್ತ್ರ 
ಪಾರಂಗತರೂ, ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, ಬ್ರಹ್ಮನಿಷ್ಕರೂ, ತಪಸ್ವಿ 
ಗಳೂ, ಪುರಾಣನನ್ನರಿತವರೂ, ಸದಾಚಾರವುಳ್ಳವರೂ, ಧರ್ಮಿಷ್ಠರೂ, 
ಬ್ರಾಹ್ಮಣರನ್ನು ಭೋಜನಮಾಡಿಸುವವರೂ ಆಗಿರುವ ಮೂವತ್ತಾರು ಸಾವಿರ 
ಮನುಷ್ಯರು ಉದ್ಭವಿಸಿದರು. 


ನಶಮೋಕಧ್ಯಾಯಃ ೧೩೭ 


ಸ್ವರ್ಗೇ ದೇವಾಃ ಪ್ರಶಂಸಂತಿ ಧರ್ಮಾಃ ರಣ್ಯನಿವಾಸಿನಃ 1 


ತಪೋಧ್ಯಯನದಾನೇಷು ಸರ್ವಕಾಲೇಃಪ್ಯತೀಂದ್ರಿಯಾಃ ॥೭॥ 
ಏಕೈಕಸ್ಮೈ ದ್ವಿಜಾಯೈನ ದತ್ತಂ ಜಾತು ಚರದ್ವಯಂ । 

ವಾಡನಸ್ಯ ಚ ಯದ್ಗೋತ್ರಂ ಪುರಾ ಪ್ರೋಕ್ತಂ ಮಹೀಪತೇ ॥೮॥ 
ಪರಸ್ಪರಂ ಚ ತಡ್ಲೋತ್ರಂ ತಸ್ಯ ಚಾಂನುಚರಸ್ಯ ಚ । : 

ಇತಿ ಕೃತ್ವಾ ವ್ಯವಸ್ಥಾಂ ಚ ನ್ಯವಸಂಸ್ತತ್ರ ಭೂಮಿಷು nen 
ತತಶ್ಚ ಶಿಷ್ಯತಾ ದೇವೈರ್ದತ್ತಾ ಚಾಂನುಚರಾನುನಿ । 

ಬ್ರಹ್ಮಣಾ ಕಥಿತಂ ಸರ್ವಂ ತೇಷಾಮನುಹಿತಾಯ ವೈ ॥ ೧೦॥ 
ಕುರುಧ್ವಂ ವಚನಂ ಚೈಷಾಂ ದದಧ್ವಂ ಚ ಯದಿಚ್ಛಿತಂ | 

ಸಮಿತ್ಸುಷ್ಟ ಕುಶಾದೀನಿ ಅನಯಧ್ವಂ ದಿನೇದಿನೇ Hoon 
ಅನುಜ್ಞ ಯೈಷಾಂ ವರ್ತಧ್ಯಂ ಮಾಂನಜ್ಞಾ ೦ ಕುರುತ ಕೃಚಿತ್‌ । 

ಜಾತಕ ನ ತಥಾನ್ನಪ್ರಾ ಶನಂ ಶುಭಂ ॥೧೨॥ 
ಕ್ಸೌರಂ ಚೈವೋಪನಯನಂ ಮಹಾನಾಮ್ಮ್ಯಾದಿಕಂ ತಥಾ । 

ಹಯಾ ದಿನ ಯಚ್ಚ ವ್ರತಂ ಪಾಶ ಶನಾಸಕರ ॥ ೧೩ ॥ 
ಅನುಜ್ಞ ಯೈಷಾಂ ಕರ್ತವ್ಯಂ  ಕಾಜೇಶಾ ಇದಮಬ್ರೂವನ್‌ । 

ಅನುಜ್ಞ ಯೂ ನಿನೈಷಾಂ KR ಕಾರ್ಯಮಾರಭತೇ ಯದಿ ॥ ೧೪ ॥ 
ದರ್ಶಂ ವಾಶ್ರಾ ದ್ಧ ಕಾರ್ಯಂ ವಾ ಶುಭಂ ವಾ ಯದಿವಾಃಶುಭಂ। 
ದಾರಿದ್ರ್ಯಂ ಪುತ್ರ ಶೋಕಂ ಚ ಕೀರ್ತಿನಾಶಂ ತಥೈವ ಚ ॥ ೧೫ ॥ 





೭. ಈ ಧರ್ಮಾರಣ್ಯದಲ್ಲಿ ವಾಸಮಾಡುವವರಾಗಿರಿ. ತಪಸ್ಸು, ವೇದಾ 
ಧ್ಯಯನ, ದಾನಗಳಲ್ಲಿ ನಿರತರೂ, ಯಾವಾಗಲೂ ಜ್ಞಾನದೃ ಷ್ಮಿಯುಳ್ಳವರೂ, 
ಆಗಿರುವ ಚಾ ಬತ್ತ ದೇವತೆಗಳೂ ಹೊಗಳುತ್ತಾರೆ. 

ಹ್ಮನು ಒಬ್ಬೊಬ್ಬ ಬ್ರಾಹ್ಮಣನಿಗೆ ಇಂತಹ ಇಬ್ಬರು ಸೇವಕರಂತೆ 
ಎ Bai ಅಲ್ಲಿರುವ ಬ್ರಾಹ್ಮಣರ ಗೋತ್ರವೇ ಆ ಸೇವಕರಿಗೂ 
ಇರತಕ್ಕುದೆಂದು ವ್ಯವಸ್ಥೆ ಮಾಡಿ ಅವರನ್ನು ಅಲ್ಲಿ ವಾಸಿಸುವಂತೆ ಕಟ್ಟುಮಾಡಿದನು. 

೧೦-೧೭. ಮತ್ತು ಅವರನ್ನು ಬ್ರಾಹ್ಮಣರಿಗೆ ಶಿಷ್ಯರನ್ನಾಗಿಸಿ "" ನೀವು 

ಬಾಸ್ಕರ ಮಾತನ್ನು ನೆರವೇರಿಸಿಕೊಂಡಿರಿ. ಇವರಿಗೆ ಇಷ್ಟವಾದುದನ್ನು 
ಕೊಡಿರಿ. ಪ್ರತಿದಿನವೂ ಸಮಿತ್ತು, ಹೂವು, ದರ್ಭೆಗಳನ್ನು ತೆಗೆದುಕೊಂಡು ಬನ್ನಿ. 
ಇವರ ಅಪ ಧೃ ಣೆಯಂತೆ ನಡೆಯಿರಿ. ಒಂದುವೇಳೆಯೂ ಇವರಿಗೆ ಅಪಮಾನಮಾಡ 
ಬೇಡಿರಿ. ಸಕತ ನಾಮಕರಣ, ಅನ್ನ ಪ್ರಾಶನ, ಚೌಲ, ಉಪನಯನ, 
ಮಹಾಸಾಮ್ಯಾದಿವ್ರತಗಳು, ಇತರ ಕರ್ಮಗಳು, ದಾನ ಮತ್ತು ಉಪವಾಸಾದಿ 
ವ್ರತಗಳು ಇವುಗಳನ್ನು ಇವರ ಅಪ್ಪಣೆಯಂತೆ ಮಾಡಬೇಕು. ಇವರ ಆಣತಿ 


F 


೧೩೮ ಶ್ರೀ ಸ್ಕಾಂದಮಹಾಷುಕಾಣಂ 


ಕೋಗೈರ್ನಿಸೀಡ್ಯತೇ ನಿತ್ಯಂ ನ ಕೃಚಿತ್ಸುಖಮಾಪ್ನ್ನಯುಃ । 


ತಥೇತಿ ಚ ತತೋ ದೇವಾಃ ಶಕ್ರಾದ್ಯಾಃ ಸುರಸತ್ತಮಾಃ 1 ೧೬ ॥ 
ಸ್ತುತಿಂ ಕುರ್ವಂತಿ ತೇ ಸರ್ವೇ ಕಾಮಥೇನೋಃ ಪುರಃ ಸ್ಥಿತಾಃ । 
ಕೃತಕೃತ್ಯಾಸ್ತದಾ ದೇನಾ ಬ್ರಹ್ಮನಿಷ್ಣುಮಹೇಶ್ವರಾಃ nH ೧೭॥ 


ತ್ವಂ ಮಾತಾ ಸರ್ವದೇವಾನಾಂ ತ್ವಂ ಚ ಯಜ್ಞಸ್ಯ ಕಾರಣಂ | 
ತ್ವಂ ತೀರ್ಥಂ ಸರ್ವತೀರ್ಥಾನಾಂ ನಮಸ್ತೇಸ್ತು ಸದಾನಘೇ ॥ ೧೮॥ 
ಶಶಿಸೂರ್ಯಾಂರುಣಾ ಯಸ್ಯಾ ಲಲಾಟೇ ನೃಸಭಧ್ವಜಃ । 


ಸರಸ್ಪೃತೀ ಚ ಹುಂಕಾರೇ ಸರ್ನೇ ನಾಗಾಶ್ಚ ಕಂಬಲೇ ॥೧೯॥ 
ಕ್ಸುರಪೃ ಷ್ಠೇ ಚ ಗಂಧರ್ವಾ ವೇದಾಶ್ಚ ತ್ವಾರ ಏನ ಚ । 

ನುಖಾಗ್ಛೆ' " ಸರ್ವತೀರ್ಥಾನಿ ಸ್ಥಾ ನರಾಣಿ ಚರಾಣಿ ಚ nu ೨0 
ಏನಂ ನಿಧೈಶ್ಚ ಬಹುಶೋ ನಚಸೈಸ್ತೊ ಹಿತಾಚಸಾ। 

ಸುಪ್ರಸನ್ನಾ ತದಾ ಥೇನುಃ ಕಂಕರೋಮಾತಿ ಚಾಂಬ್ರನೀತ್‌ ॥ ೨೧॥ 

ದೇವಾ ಊಚುಃ: 
ಸೃಷ್ಟಾಃ ಸರ್ವೇ ತ್ವಯಾ ಮಾತರ್ಜೀನವ್ಯೈತೇಂನುಚರಾಃ ಶುಭಾಃ । 
ತ ತೃತ್ವಸಾದಾಸ್ಮ ಹಾಭಾಗೇ ಬ್ರಾಹ್ಮಣಾಃ ತೋಟವ ॥ ೨೨ ॥ 


ಇಲದೆ ಯಾರು ದರ್ಶ. ಶಾ ದ್ಧ ಮೊದಲಾದ RE. ಮಾಡು 
ವರೊ, ಅವರು ವಿಷ ಪುತ್ರ ಶೋಕ, ಕೀರ್ತಿನಾಶಗಳನ್ನು ಹೊಂದುವುದಲ್ಲದೆ 
ನಿತ್ಯವೂ ರೋಗಪೀಡಿತರಾಗಿ ಸುಖಿಗಳಾಗಿರುವುದಿಲ್ಲ?' ಎಂದು ಬ್ರಹ್ಮನು 
ಹೇಳಲು ಇಂದ್ರಾದಿ ದೇವತೆಗಳೂ ಅದನ್ನು ಅನುಮೋದಿಸಿ ಕೃತಕೃತ್ಯರಾಗಿ 
ಬ್ರಹ್ಮಾದಿಗಳೊಡನೆ ಕಾಮಧೇನುವಿನ ಮುಂದೆ ನಿಂತು ಹೀಗೆ ಸ್ತುತಿಸಿದರು. 

೧೮. "ನೀನು ಸಕಲ ದೇವತೆಗಳಿಗೂ ಮಾತೆಯು. ನೀನೇ ಯಜ್ಞಕ್ಕೆ 
ಕಾರಣಳು. ನೀನು ಸಕಲ ತೀರ್ಥಗಳಿಗೂ ತೀರ್ಥರೂಸಳು. ಯಾವಾಗಲೂ 
ನಿರ್ದಷ್ಟಳಾದ ನಿನಗೆ ನಮಸ್ಕಾರವು. 

೧೯-೨೦. ನಿನ್ನ ಹಣೆಯಲ್ಲಿ ಸೂರ್ಯ, ಚಂದ್ರ, ಅರುಣ, ಮಹೇಶ್ವರರೂ, 
ಹುಂಕಾರದಲ್ಲಿ ಸರಸ್ಪತಿಯೂ, ಕುತ್ತಿಗೆಯ ಪಟ್ಟಿಯಲ್ಲಿ (ಗಂಗದೊಗಲಿನಲ್ಲಿ) 
ಸರ್ಪಗಳೂ, ಗೊರಸಿನ ಕೆಳಗೆ ಗಂಧರ್ವರೂ, ನಾಲ್ಕು ವೇದಗಳೂ, ಬಾಯಿಯ 
ಕೊನೆಯಲ್ಲಿ ಸಕಲ ತೀರ್ಥಗಳೂ, ಸ್ಥಾವರ ಜಂಗಮಗಳೂ ಇರುವುವು. 

೨೧. ದೇವತೆಗಳು ಇಂತಹ ಮಾತುಗಳಿಂದ ಬಹಳವಾಗಿ ಸ್ತೋತ್ರಮಾಡಲು 
ಸಂತೋಷಗೊಂಡ ಕಾಮಥೇನುವು, ""ನಿಮಗಾಗಿ ಏನನ್ನು ಮಾಡಲಿ?” ಎಂದಿತು. 

೨೨. ದೇವತೆಗಳು ಹೇಳುತ್ತಾರೆ: ದೇನಿ! ನೀನು ಸೃಷ್ಟಿಸಿದ ಎಲ್ಲಾ 
ಸೇವಕರೂ ಒಳ್ಳೆಯವರು. ನಿನ್ನ ಅನುಗ್ರಹದಿಂದ ಬ್ರಾಹ್ಮಣರು ಸುಖಿಗಳಾದರು. 


ದಶಷೋಭ್ಯಾಯಃ «4೯ 


ತತೋಸೌ ಸುರಭೀ ರಾಜನ್ಗತಾ ನಾಕಂ ಯಶಸ್ವಿನೀ ! 

ಬ್ರಹ್ಮನಿಸ್ಸುಮಹೇಶಾದ್ಯಾಸ್ತತ್ರೈನಾಂತರಧುಸ್ತತಃ ॥ ೨೩ ॥ 
ಯುಧಿಷ್ಠಿರ ಉವಾಚ:- 

ಅಭಾರ್ಯಾಸ್ತೇ ಮಹಾತೇಜಾ ಗೋಜಾ ಅನುಚರಾಸ್ತಥಾ । 


ಉದ್ವಾಹಿತಾಃ ಕಥಂ ಬ್ರಹ್ಮಸ್ಸುತಾಸ್ತೇಷಾಂ ಕದಾಂಭವನ್‌ ॥ ೨೪ ॥ 
ವ್ಯಾಸ ಉವಾಚ :-- 

ಪರಿಗ್ರಹಾರ್ಥಂ ವೈ ತೇಷಾಂ ರುದ್ರೇಣ ಚ ಯಮೇನ ಚ । 

ಗಂಧರ್ವಕನ್ಯಾ ಆಹೃತ್ಯ ರಾರಾಸ್ತೃತ್ರೋಪಕಲ್ಪಿತಾಃ ॥ ೨೫ ॥ 


ಯಂಧಿಷ್ಠಿರ ಉವಾಚ :- 
ಕೋವಾ ಗಂಧರ್ವರಾಜಾಸೌ ಕಂ ನಾಮಾ ಕುತ್ರ ವಾ ಸ್ಥಿತಃ | 
ಕಿಯನ್ಮಾತ್ರಾಸ್ತಸ್ಯ ಕನ್ಯಾಃ ಕಿಮಾಚಾರಾ ಬ್ರವೀಹಿ ಮೇ ॥ ೨೬॥ 
ವ್ಯಾಸ ಉವಾಚ :-- 
ವಿಶ್ವಾವಸುರಿತಿ ಖ್ಯಾತೋ ಗಂಧರ್ವಾಃ ಧಿಸತಿರ್ಸ್ಯಪ। 
ಷಸ್ಟಿಕನ್ಯಾಸಹಸ್ರಾಣಿ ಆಸತೇ ತಸ್ಯ ವೇಶ್ಮನಿ ॥ ೨೭ 
ಅಂತರಿಕ್ಸೇ ಗೃಹಂ ತಸ್ಯ ಗಂಧರ್ವನಗರಂ ಶುಭಂ । 
ಯೌನನಸ್ಥಾಃ ಸುರೂಪಾಶ್ಚ ಕನ್ಯಾ ಗಂಧರ್ವಜಾಃ ಶುಭಾಃ ॥ ೨೮ ॥ 





೨೩. ಬಳಿಕ ಕಾಮಥೇನುವು ದೇವಲೋಕಕ್ಕೆ ತೆರಳಿತು. ಬ್ರಹ್ಮ ವಿಷ್ಣು 
ಮಹೇಶ್ವರರೇ ಮೊದಲಾದ ದೇವತೆಗಳೂ ಅಂತರ್ಧಾನರಾದರು. 

೨೪. ಯುಧಿಷ್ಠಿರನು ಕೇಳುತ್ತಾನೆ:--ಎಲೈ ಮುನಿವರ್ಯನೇ! ಕಾಮ 
ಧೇನು ಸಂಭೂತರಾದವರೂ ತೇಜಸ್ವಿಗಳೂ ಆದ ಆ ಸೇವಕರು ಹೆಂಡತಿಯರಿಲ್ಲ 
ದವರಾಗಿದ್ದರಷ್ಟೆ! ಅವರು ವಿವಾಹ ಮಾಡಿಕೊಂಡುದೆಂತು? ಅವರಿಗೆ ಮಕ್ಕಳು 
ಯಾವಾಗ ಹುಟ್ಟಿದರು. 

೨೫. ವ್ಯಾಸನು ಹೇಳುತ್ತಾನೆ;--ಯಮ ರುದ್ರರು ಆ ಸೇವಕರಿಗಾಗಿ 
ಗಂಧರ್ವರಾಜನ ಕನ್ಯೆಯರನ್ನು ಕರೆಯಿಸಿ ಮದುವೆಮಾಡಿಕೊಟ್ಟರು. 

೨೬. ಯುಧಿಷ್ಠಿರನು ಕೇಳುತ್ತಾನೆ:-ಮುನಿಯೆ! ಈ ಗಂಧರ್ವರಾಜ 
ನಾರು? ಇವನ ಹೆಸರೇನು? ಇವನು ಎಲ್ಲಿರುವನು? ಇವನಿಗೆಷ್ಟುಜನ ಕನ್ಯೆಯ 
ರಿರುವರು? ಆ ಕನ್ಯೆಯರ ನಡತೆಯು ಹೇಗೆ? ಅದನ್ನು ನನಗೆ ತಿಳಿಯಹೇಳು. 

೨೭-೨೮. ವ್ಯಾಸನು ಹೇಳುತ್ತಾನೆ:--ಅಯ್ಯಾ ಧರ್ಮರಾಜನೇ ! ವಿಶ್ವಾ 
ವಸುವೆಂಬ ಗಂಧರ್ವರಾಜನಿರುವನು. ಅವನ ಮನೆಯಲ್ಲಿ ಅರುವತ್ತು ಸಾವಿರ 
` ಮಂದಿ ಕನ್ಯೈಯರಿರುವರು. ಆ ಗಂದರ್ವರಾಜನ ಶುಭನಗರವು ಆಕಾಶದಲ್ಲಿರು 
ವುದು. ಆ ಕನ್ಯೆಯರೆಲ್ಲ ಯುವತಿಯರೂ, ಮಂಗಳಕರರೂ ಆಗಿರುವರು. 


೧೪೦ ಶ್ರೀ ಸ್ಕಾಂಡಮಹಾಪುರಾಣಂ 


ಶುದ್ರಸ್ಯಾಂನುಚರೌ ರಾಜನ್ನಂದೀ ಭೃಂಗೀ ಶುಭಾನನೌ । 


ಪೂರ್ವದೃಷ್ಟಾಶ್ಚ ತಾಃ ಕನ್ಯಾಃ ಕಥಯಾಮಾಸತುಃ ಶಿವಂ ॥ ೨೯॥ 
ದೃಷ್ಟಾಃ ಪುರಾ ಮಹಾದೇನ ಗಂಧರ್ವನಗರೇ ನಿಭೋ । 
ನಿಶ್ವಾನಸುಗೃಹೇ ಕನ್ಯಾ ಅಸಂಖ್ಯಾತಾಃ ಸಹಸ್ರಶಃ ॥೩೦॥ 
ತಾ ವಯ ಬಲಾಡೇವ ಗೋಭುಜೇಭ್ಯಃ ಪ್ರೇ ಯಚ್ಛ ಚೋ 

ಏನಂ ಶ್ರುತ್ವಾ ತತೋ ದೇವಸಿ ್ಪಿಪುರಫ್ಮ ಸದಾಶಿವ NAO 
ಪ್ರೇಷ ತವಾ ದೂತಂ ತ್ತು. ವಿಜಯಂ ನಾಮು ಭಾರತ । 

ಸ ತತ್ರ ಗತಾ ಯತ್ರಾಸ್ತೇ ನಿಶ್ವಾವಸುರರಿಂದನುಃ ॥ ೩೨॥ 
ಉವಾಚ ವಚನಂ ಚೈನ ಪಥ್ಯಂ ಚೈನ ಶಿನೇರಿತಂ । 
ಧರ್ಮಾಃರಣ್ಕೆ € ಮಹಾಭಾಗ ಕಾಜೇಶೇನ ವಿನಿರ್ನೀತಾಃ ॥ ೩೩ ॥ 


ಸ್ಕಾ ಹಿತಾ ವಾಡವಾಸ್ತ ತ್ರ ನೇದನೇದಾಂಗಪಾರಗಾಃ । 
ತೇಸಾಂ ನೈ JPEG ಕಾಮಧೇನುಶ್ಚ ಪ್ರಾರ್ಥಿತಾ 1 ೩೪ ॥ 
ತಯಾ ಕೃ ಚ ಶುಭಾಚಾರಾ ವಣಿಜಸ್ತೇ ತ ಯೋನಿ ಜಾಃ | 


ಸಟ್ಟ್ರಂಶಜ್ಜ ಸಹಸ್ರಾ ಣಿ ಕುಮಾರಾಸ್ತೇ ಮು ಕಾನಿಶಾ8 1 ೩೫॥ 
ಶಿನೇನ ಪ್ರೆ ತೋಹಿ ವೈ ತ್ವತ್ಸ ಬಾಷಮುಷಾಗತಃ I 
ಕನ್ಯಾರ್ಥಂ ಹಿ BYES ದಜ ದೇಹೀತ್ಯುವಾಚಹ ॥ ೩೬ ॥ 


೨೯. ಆ ಕನ್ಯೆಯರನ್ನು ಮಹೇಶ್ವರನ ಸೇವಕರಾದ ನಂದಿ ಮತ್ತು ಭೃಂಗಿ 
ಗಳು ಮೊದಲು ನೋಡಿ ಶಿವನನ್ನು ಕುರಿತು ಹೀಗೆಂದರು. 

೩೦. "ಮಹಾದೇವ! ಹಿಂದೆ ನಾವು ಗಂಧರ್ವನಗರದಲ್ಲಿರುವ ವಿಶ್ವಾ 
ವಸುವಿನ ಮನೆಯಲ್ಲಿ ಎಣಿಕೆಯಿಲ್ಲದಸಷ ಶ್ರಿ ಮಂದಿ ಕನೈಯರನ್ನು ನೋಡಿದ್ದೇವೆ. 

೩೧-೩೬. ಅವರನ್ನು ಜು. ಈ ವೈಶ್ಯ ರಿಗೆ ಕೊಡು!” ಇದನ್ನು ಳಿ 
ತಿ ತ್ರಿ ಪುರಾರಿಯಾದ ಸದಾಶಿವನು ವಿಜಯನೆಂಬ ದೂತನನ್ನು ಕಳುಹಿಸಿದನು. 
ಕ ನಿಶ್ವಾವಸ ಸುವಿನ ಹತ್ತಿ ರಕ್ಕೆ ಹೋಗಿ ಶಿವನು ಕಸ ಕಳುಹಿಸಿದ ಹಿತ 
ವಚನನನ್ನು ಹೇಳಿದನು. ಎಲೈ ಭಾಗ್ಯಶಾಲಿಯಾದ ಗಂಧರ್ವರಾಜನೇ! 
ಧರ್ಮಾರಣ್ಯದಲ್ಲಿ ಬ್ರ ಮ ಮಹೇಶ್ವ ಕರು ವೇದ ವೇದಾಂಗಗಳಲ್ಲಿ ಪಂಡಿತ 
ರಾದ ಬ್ರಾಹ ಒಣರನ್ನು ಸ್ಥಾಪಿಸಿದ್ದಾರೆ. ಆ ಬ್ರಾಹ ಣರ ಸೇವೆಗಾಗಿ ಬ್ರ ಹ್ಮಾದಿ 
ಗಳೂ ಕಾಮಥೇನುವನ್ನು ಪ್ರಾರ್ಥಿಸಲಾಗಿ ಬ ಆ ಸಾಜಾ ಬಲಿಷ್ಕ ರೂ, 
ಒಳ್ಳೆ ನಡತೆಯುಳ್ಳವರೂ ಆಗಿರುವ ಮೂವತ್ತಾರು ಸಾವಿರ ವೈಕ್ಯಕುಮಾರರನ್ನು 
ಸೃಷ್ಟಿಸಿತು. ನಿನ್ನ ಕನ್ಯೆಯರಿಗೋಸುಗ ಶಿವನು ನಿನ್ನೆಡೆಗೆ ನನ್ನನ್ನು ಕಳುಹಿಸಿದನು. 
ಅವರನ್ನು ಆ ವಣಿಕ್ಟುತ್ರರಿಗಾಗಿ ಕೊಡು'' ಎಂದನು. 


ದಶಮೋಳಿಢ್ಕಾಯ॥ ೧೪೧ 


ಗಂಧರ್ವ ಉವಾಚ ;-- 
ದೇವಾನಾಂ ಚೈನ ಸರ್ನೇಷಾಂ ಗಂಧರ್ನಾಣಾಂ ಮಹಾನುತೇ | 
ಪರಿತ್ಯಜ್ಯ ಕಥ ಲೋಕೇ ಮಾನುಷಾಣಾಂ ದದಾಮಿ ವೈ: ॥ ೩೭ ॥ 
ಶ್ರುತ್ವಾ ತ ವಚನಂ ತಸ್ಯ ನಿನೃತ್ತೋ ನಿಜಯಸ್ತ್ರದಾ । | 
ಕಥಯಾಮಾಸ ತತ್ಸರ್ವಂ ಗಂಧರ್ಮಚರಿತಂ ಮಹತ್‌ ॥ ೩೮॥ 
ವ್ಯಾಸ ಉವಾಚ ;-- 
ತತಃ ಕೋಪಸಮಾನಿಷ್ಟೋ ಭಗನಾಂಲ್ಲೋಕಶಂಕರಃ । 
ವೃಷಭೇ ಚ ಸಮಾರೂಢಃ ಶೂಲಹಸ್ತಃ ಸದಾಶಿವಃ ॥೩೯॥ 
ಭೂತಪ್ರೇತಪಿಶಾಚಾದ್ಯೈಃ ಸಹಸ್ಪೈರಾವೃತಃ ಪ್ರಭುಃ । 
ತತೋ ದೇವಾಸ್ತಥಾ ನಾಗಾ ಭೂತನೇತಾಲಖೇಚರಾಃ ॥೪೦॥ 
ಕ್ರೋಥೇನ ಮಹತಾನಿಷ್ಟಾಃ ಸಮಾಜಗ್ಮುಃ ಸಹಸ್ರಶಃ । 
ಹಾಹಾಕಾರೋ ಮಹಾನಾಸೀತ್ತಸ್ಮಿನ್ಸೈನ್ಯೇ ನಿಸರ್ಪತಿ ॥ ೪೧॥ 
ಪ್ರಕಂಸಿತಾ ಧರಾದೇನೀ ದಿಶಾಪಾಲಾ ಭಯಾತುರಾಃ । 
ಘೋರಾ ವಾತಾಸ್ತದಾಂಶಾಂತಾಃ ಶಬ್ದಂ ಕುರ್ವಂತಿ ದಿಗ್ಗಜಾಃ ॥ ೪೨॥ 
ವ್ಯಾಸ ಉವಾಚ 
ತದಾಗತಂ ಮಹಾಸೈನ್ಯಂ ದೃಷ್ಟ್ಯಾ ಭಯನಿಲೋಲಿತಂ । 
ಸಹ ವಿವೇಶುಸ್ತೇ ದಿಶೋದಶ ॥ ೪೩ ॥ 





೩೭-೩೮. ಗಂಧರ್ವನು ಹೇಳುತ್ತಾನೆ: ಎಲ್ಲೆ ಪ್ರಾಜ್ಞ ನೇ! ಸ 
ಗಳನ್ನೂ ಗಂಧರ್ವರನ್ನೂ ಬಿಟ್ಟು ಭೂಲೋಕದ ನುನುವ್ನಂಗ ಈ ಕನ್ನೆಯ 
ರನ್ನು ಹೇಗೆ ಕೊಡಲಿ.” ಯು ಅವನ ಮಾತನ್ನು ಕೇಳಿ ಹಿಂದಿರುಗಿ 
ಬಂದು ಶಿವನಿಗೆ ಆ ಗಂಧರ್ವನ ಚರಿತ್ರೆಯೆಲ್ಲವನ್ನೂ ತಿಳಿಸಿದನು. 

೩೯-೪೨. ವ್ಯಾಸನು ಹೇಳುತ್ತಾನೆ: ಬಳಿಕ ಶಂಕರನು ಕೋಪಗೊಂಡು 

ಷಭವನ್ನೆ ರಿ ಶೂಲಪಾಣಿಯಾಗಿ ಸಾವಿರಾರು ಭೂತಪ್ರೇತ ವಿಶಾಚಾದಿಗಳಿಂದ 
ಅಲ್ಲಿಗೆ ಹೊರಟಿನು. ಅವನನ್ನು ದೇವತೆಗಳೂ. ನಾಗಗಳೂ, ಭೂತಾದಿ 
ಗಳೂ ಅತ್ಯಂತ ಕೋಪಾವಿಷ್ಟರಾಗಿ ಅನುಸರಿಸಿದರು. ಆ ಸೈನ್ಯವು ಮುನ್ನುಗ್ಗು 
ತ್ರಿರುವಾಗ ಮಹತ್ತಾದ ಹಾಹಾಕಾರವು ಉಂಟಾಯಿತು. ಭೂಮಿಯು ನಡು 
ಗಿತು. ದಿಕ್ಪಾಲಕರು ಭಯಗೊಂಡರು. ಬಿರುಗಾಳಿಯೆದ್ದಿತು. ದಿಗ್ಗಜಗಳು 
ಭಯಂಕರವಾಗಿ ಕೂಗಿದವು. 

೪೩, ವ್ಯಾಸನು ಹೇಳುತ್ತಾನೆ; ಭಯಂಕರವಾದ ಆ ಪರಶಿನನ ಸೇನೆ 
ಯನ್ನು ಕಂಡು ಗಂಧರ್ವನಗರವಾಸಿಗಳೆಲ್ಲರೂ ದಶದಿಕ್ಕುಗಳಲ್ಲಿಯೂ ಅಡಗಿ 
ಕೊಂಡರು. 


ಹ 


೧೪೨ ಶ್ರೀ ಸ್ಮಾಂದಮುಹಾಪುರಾಣಂ 


ಗಂಧರ್ವರಾಜೋ ನಗರಂ ತ್ಯಕ್ತ್ವಾ ಮೇರುಂ ಗತೋ ನೃಪ । 

ತಾಃ ಕನ್ಯಾ ಯೌನನೋಪೇತಾ ರೂಸೌದಾರ್ಯಸಮುನ್ನಿತಾಃ ॥ ೪೪ ೫ 
ಗೃಹೀತ್ವಾ ಪ್ರದದೌ ಸರ್ವಾ ವಣಿಗ್ನ ಶ್ವ ತದಾ ನೃಪ । 

ನೇಜೋಕ್ತೆ (ನ ನಿಧಾನೇನ ತಥಾ ಸ ದೇನಸನ್ನಿಧೌ ॥ ೪೫ ॥ 
ಆಜ್ಯಭಾಗಂ ತದಾ ದತ್ವಾ ಗದಾ ಗವಾತ್ಮ: ಜಾ । 

ದೇವಾನಾಂ ಪೂರ್ವಜಾನಾಂ ಚ ಸೂರ್ಯಾಚಂದ್ರಮಸೋಸ್ತಥಾ॥ ೪೬ ॥ 
ಯಮಾಯ ಮೃತ್ಯನೇ ಚೈನ ಆಜ್ಯಭಾಗಂ ತದಾ ದದುಃ । 


ದತ್ವ್ವಾಜ್ಯ ್ಯೈಭಾಗಾನ್ಸಿ ಧಿನದ ತ ರೇತೇ ಶುಭವ್ರತಾಃ ॥ ೪೭॥ 
ತತಃ yy ಸ್ರಭೃತಿ ಗ ಸಮುಪಸ್ಥಿ ತೇ। 

ಆಜೃಭಾಗಂ ಪ ಕ್ರಗೃಹ್ಣ ತಿ ಅದ್ಯಾಂಸಿ ಸರ್ವತೋ ಭೃಶಂ ॥ ೪೮॥ 
ಸಟ್ರ ಂಶಚ್ಚೆ ಸಹಸ್ರಾ ಣಿ ಕುಮಾರಾ ಯನ, ಶ್ಯ ವೇದಯನ್‌ | 

ತೇಷಾಂ ಪೆತ್ರಾ ತ್ಹ ಹೌತ್ರಾ ಶ್ಚ ಶತಶೋಂಥ ಸಹಸ್ರಶಃ ॥೪೯॥ 
ಅತ ಏನಹಿ ತಾಃ ಸಾನ ದಾಸತ್ಯೇ ಹಿ ನಿನಿರ್ಮಿತಾಃ | 

ಕ್ಸುತ್ರಿಯಾಶ್ಚ ಮಹಾವೀರಾ ಕಿಂಕರತ್ತೇ ಹಿ ನಿರ್ನಿತಾಃ ॥ ೫೦ ॥ 
ತತೋ ದೇವಾಸ್ತದಾರಾಜಂ ಜಗ್ಮುಃ ಸರ್ವೇ ಯಥಾ ತಥಾ! 

ಗತೇ ದೇನೇ ದ್ವಿಜಾಃ ಸರ್ವೇ ಸ್ಥಾನೇಇಸ್ಮಿನ್ನಿನಸಂತಿ ತೇ ॥ ೫೧॥ 


೪೪-೪೭. ಗಂಧರ್ವರಾಜನು ಪಟ್ಟ ಣವನ್ನು ತ್ಯಜಿಸಿ ಮೇರುಪರ್ವತಕ್ಕೆ 
ಹೋದನು. ಆಗ ಪರಮೇಶ್ವ ರನುಸೆ ಸಾರ ಮತ್ತು ಔದಾರ್ಯಾದಿಗುಣವುಳ್ಳ. 
ಯುವತಿಯರಾದ ಆ ಗಂಧರ್ನಕನ್ಯೆಯರನ್ನು ಕರೆದುಕೊಂಡು ಬಂದು ಆ ವರ್ತ 
ಕರಿಗೆ ಕೊಟ್ಟನು. ಆಗ ಅವರು ವೇದೋಕ್ತಕ್ರಮದಿಂದ ದೇವಸನ್ನಿಧಿಯಲ್ಲಿ 
ಗಂಧರ್ವನಿಗೆ ಆಜ್ಯಭಾಗವನ್ನು ಸಲ್ಲಿಸಿ ದೇವತೆಗಳಿಗೂ, ತಮ್ಮ ಪೂರ್ವಜರಿಗೂ, 
ಸೂರ್ಯ ಚಂದ್ರರಿಗೂ, ಯಮಧರ್ಮನಿಗೂ ಆಜ್ಯಭಾಗವನ್ನು ಕೊಟ್ಟರು. ಹೀಗೆ 
ಕ್ರಮವಾಗಿ ಆಜ್ಯಭಾಗವನ್ನಿತ್ತು ಆ ಕನ್ಯೆಯರನ್ನು ವಿವಾಹಮಾಡಿಕೊಂಡರು. 

೪೮. ಅದು ಮೊದಲುಗೊಂಡು ಗಾಂಧರ್ವವಿವಾಹವು ನಡೆಯುವಾಗ 
ಎಲ್ಲೆಡೆಯಲ್ಲಿಯೂ ಆಜ್ಯಭಾಗವನ್ನು ದೇವತೆಗಳು ಸ್ವೀಕರಿಸುವರು. 

೪೯, ತರುವಾಯ ಈ ಮೂವತ್ತಾರುಸಾವಿರ ಮಂದಿ ವೈಶ್ಯಕುಮಾರರಿಗೆ 
ಸಾವಿರಾರು ಮಂದಿ ಪುತ್ರಪೌತ್ರರು ಜನಿಸಿದರು. 

೫೦. ಆದ್ದ ರಿಂದಲೇ ಅವರೆಲ್ಲರೂ ದಾಸ್ಯಕ್ಕಾಗಿಯೂ, ವೀರರಾದ ಕ್ಚತ್ರಿ 
ಯರ ತೈಂಕರ್ಯಕ್ಕಾಗಿಯೂ ಆ ತಡಕು. 

೫೧. ದೇವತೆಗಳೆಲ್ಲ ತಮ್ಮತಮ್ಮ ಸ್ಥಾನಗಳಿಗೆ ತೆರಳಲು ಬ್ರಾ ಹ್ಮಣರೆಲ್ಲರೂ 
ಈ ಧರ್ಮಾರ್ಯಣ್ಯದಲ್ಲಿ ಸುಖವಾಗಿ ವಾಸಿಸುತ್ತಿದ್ದಾರೆ. 


ದಶಮೋತಧ್ಯಾಯಃ ೧೪೩ 


ಪುತ್ರಪೌತ್ರಯುತಾ ರಾಜನ್ನಿನಸಂತ್ಯಕುತೋ ಭಯಾಃ । 


ಪಠಂತಿ ವೇದಾನ್ಹೇದಜ್ಞಾಃ ಕೃಚಿಚ್ಛಾಸ್ಟ್ರಾರ್ಥಮುದ್ದಿರನ್‌ ॥ ೫೨ ॥ 
ಶೇಚಿದ್ದಿಷ್ಟುಂ ಜಪಂತೀಹ ಶಿನಂ ಕೇಚಿಜ್ಜಪಂತಿ ಹಿ | 

ಬ್ರಹ್ಮಾಣಂ ಚ ಜಪಂತ್ಯೇಕೇ ಯಮಸೂಕ್ತಂ ಹಿ ಕೇಚನ ॥ ೫೩! 
ಯಜಂತಿ ಯಾಜಕಾಶ್ಚೈವ ಅಗ್ನಿಹೋತ್ರಮುಪಾಸತೇ। 

ಸ್ವಾಹಾಕಾರ ಸೃಧಾಕಾರವಷಟ್ಯಾರೈಶ್ಚ ಸುವ್ರತ ॥ ೫೪ ॥ 
ಶಬ್ದೈರಾಸೂರ್ಯತೇ ಸರ್ವಂ ತ್ರೈಲೋಕ್ಕಂ ಸಚರಾಚರಂ । 

ನಣಿಜಶ್ಚ ಮಹಾದಕ್ಸಾ ದ್ವಿಜಶುಶ್ರೂಷಣೋತ್ಸುಕಾಃ ॥ ೫೫ ॥ 
ಧರ್ಮಾರಣ್ಯೇ ಶುಭೇ ದಿನ್ಯೇ ತೇ ವಸಂತಿ ಸುನಿಷ್ಮಿತಾಃ । 

ಅನ್ನಪಾನಾದಿಕಂ ಸರ್ವಂ ಸಮಿತ್ಯುಶಫಲಾದಿಕಂ ॥೫೬॥ 
ಆಸಪೂರಯಸ್ಸಿಜಾತೀನಾಂ ವಣಿಜಸ್ತೇ ಗವಾತ್ಮಜಾಃ ॥ ೫೭ ॥ 
ಪುಸಷ್ಪೋಪಹಾರನಿಚಯಂ ಸ್ನಾನವಸ್ತ್ರಾದಿಧಾನನಂ | 

ಉಪಲಾದಿಕ ನಿರ್ಮಾಣಂ ಮಾರ್ಜನಾದಿ ಶುಭಕ್ರಿಯಾಃ ॥ ೫೮ ॥ 
ವಣಿಕ್ಸ್ಮ್ರಿಯಃ ಪ್ರಕುರ್ವಂತಿ ಕಂಡನಂ ಪೇಷಣಾದಿಕಂ । 

ಶುಶ್ರೂಷಂತಿ ಚ ತಾನ್ಸಿಸ್ಪಾನ್ಯಾಜೇಶವಚನೇನ ಹಿ ॥೫೯॥ 





೫೨. ಇಲ್ಲಿ ಬ್ರಾಹ್ಮಣರು ಪುತ್ರಪೌತ್ರಯುತರಾಗಿ ಭಯವಿಲ್ಲದೆ ವೇದ 
ಪಠನಮಾಡುತ್ತಲೂ, ಶಾಸ್ತ್ರಾರ್ಥಗಳನ್ನು ಹೇಳುತ್ತಲೂ ವಾಸಮಾಡುತ್ತಿದ್ದಾರೆ. 

೫೩. ಕೆಲವರು ನಿಷ್ಣುಮಂತ್ರನನ್ನೂ, ಕೆಲವರು ಶಿವಮಂತ್ರವನ್ನೂ, 
ಕೆಲವರು ಬ್ರಹ್ಮಮಂತ್ರವನ್ನೂ ಜಸಿಸುತ್ತಾರೆ. ಕೆಲವರು ಯಮಸೂಕ್ತವನ್ನು 
ಪಠಿಸುತ್ತಾರೆ. 

೨೪-೬೦. ಕೆಲವರು ಖುತ್ತಿಜರು ಯಾಗಮಾಡುತ್ತಾರೆ. ಕೆಲವರು ಅಗ್ನಿ 
ಹೋತ್ರವನ್ನು ಮಾಡುತ್ತಾರೆ. ಇವರ ಸ್ವಾಹಾ, ಸ್ವಧಾ, ವಷಟ್ಟಾರಗಳ ಶಬ್ದ 
ಗಳಿಂದ ಚರಾಚರಾತ್ಮಕವಾದ ಮೂರು ಲೋಕವೂ ತುಂಬಿರುವುದು. ಧರ್ಮಾ 
ರಣ್ಯದಲ್ಲಿ ವಾಸಿಸುವ ಕಾಮಥೇನುಸಂಭೂತರಾದ ವೈಶ್ಯರು ಅತ್ಯಂತ ಕುಶಲರೂ, 
ಬ್ರಾಹ್ಮಣಸೇವೆಯಲ್ಲಿ ಉತ್ಸುಕರೂ ಆಗಿ ಬ್ರಾಹ್ಮಣರಿಗೆ ಅನ್ನ, ನೀರು, ಸಮಿತ್ತು, 
ದರ್ಭೆ, ಹಣ್ಣು, ಹೂವು ಮೊದಲಾದುವುಗಳನ್ನು ಒದಗಿಸುತ್ತಾರೆ. ಮತ್ತು 
ಸ್ನಾನವಸ್ತ್ರಗಳನ್ನು ಒಗೆಯುವುದು, ಕಲ್ಲು ಮೊದಲಾದುವುಗಳನ್ನು ಮಾಡಿ 
ಕೊಡುವುದು, ಗುಡಿಸುವುದು ಇವೇ ಮೊದಲಾದ ಶುಭಕಾರ್ಯಗಳಲ್ಲಿ ಸಹಾಯ 
ಮಾಡುತ್ತಾರೆ. ವೈಶ್ಯರ ಹೆಂಗಸರು ಬ್ರಹ್ಮಾದಿದೇವತೆಗಳ ಮಾತಿನಿಂದ ಕುಟ್ಟು 
ವುದು, ಬೀಸುವುದು ಮೊದಲಾದ ಕೆಲಸಗಳನ್ನು ಆ ಬ್ರಾಹ್ಮಣರಿಗೆ ಮಾಡಿಕೊಟ್ಟು 


೧೪೪ ಶ್ರೀ ಸ್ಕಾಂದಮಹಾಪುರಾಣಂ 


ಸ್ವಸ್ಥಾ ಜಾತಾಸ್ತದಾ ಸರ್ವೇ ದ್ವಿಜಾ ಹರ್ಷಸರಾಯಣಾಃ । 
ಕಾಜೆಸಿಶಾದೀನುಪಾಸಂತೇ ದಿನಾರಾತ್ರೌ ಹಿ ಸಂಸ್ಕ: ॥೬೦॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ” ಪೂರ್ವಭಾಗೇ ಧರ್ಮಾಂರಣ್ಯ ಮಾಹಾತ್ಮ 4« ವಣಿಳ್ಪರಿ 
ಗ್ರ ಹವರ್ಣನಂ?' ನಾಮ ದಶಮೋಂಡ್ಯಾಯಃ 





ಅವರನ್ನು ಸೇವಿಸುತ್ತಿರುತ್ತಾರೆ. ಇದರಿಂದ ಬ್ರಾಹ್ಮಣರು ಸಂತೋಷಗೊಂಡವ 
ರಾಗಿ: ಹಗಲು ರಾತ್ರಿಯೂ, ಸಂಧ್ಯಾಕಾಲಗಳಲ್ಲಿಯೂ ಬ್ರಹ್ಮಾದಿದೇವತೆಗಳ್ನು 
ಪೂಜಿಸುತ್ತಾರೆ. ಲ 


0 ಇಲ್ಲಿಗೆ ಎಂಬತ್ತೊಂದುಸಾವಿರ ತ €ಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀಸ್ಕಾ ದಮ ಹಾಪುರಾಣದ ಮೂರನೆಯ ಬ ್ರ)ಹ್ಮಖುಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ ರಲಿ ವಣಿಕ್ಟ “ಗ್ಗ ಹವರ್ಣನನೆಂಬ'' 
ಹತ್ತನೆ ಆಧ್ಯಾ ಯದು ಮುಗಿದುದು 


॥ ಶ್ರೀಃ 
ಅಥೈ ಕಾದಶೋಧ್ಯಾಯಃ 
ಲೋಲಜಿಹ್ವಾಂಸು ರವಧಪೂರ್ವಕಂ ಸತ್ಯನುಂದಿರ ಸಂಸ್ಥಾಪನವರ್ಣನಂ 
ಯುಧಿಷ್ಠಿರ ಉವಾಚ :-- 
ಅತಃಪರಂ ಕಿಮಭವದ್ಪ ನೀತು ದ್ವಿಜಸತ್ತಮ । 


ತ್ವದ್ವಚನಾಮೃತಂ ಹೀತ್ನಾ ತೃಪ್ತಿರ್ನಾಸ್ತಿ ಮಮ ಪ್ರಭೋ mon 
ವ್ಯಾಸ ಉವಾಚ:- 

ಅಥ ಕಿಂಚಿದ್ದತೇ ಕಾಲೇ ಯುಗಾಂತಸಮಯೇ ಸತಿ। 

ತ್ರೇತಾವೌ ಲೋಲಜಿಹ್ವಾಕ್ಸ ಅಭವದ್ರಾಕ್ಬಸೇಶ್ಚರಃ ॥೨॥ 

ತೇನ ವಿದ್ರಾನಿತಂ ಸರ್ವಂ ತ್ರೈಲೋಕ್ಯಂ ಸಚರಾಚರಂ । 

ಜಿತ್ಕಾ ಸ ಸಕಲಾಂಲ್ಲೋಕಾನ್ಸರ್ಮಾಃ ರಣ್ಯೇ ಸಮಾಗತಃ wan 

ತದ್ದೃಷ್ಟ್ಟ್ವಾ ಸಕಲಂ ಪುಣ್ಯಂ ರಮ್ಯಂ ದ್ವಿಜನಿಷೇನಿತಂ । | 

ಬ್ರಹ್ಮದ್ವೇಷಾಚ್ಚ ತೇನೈನ ದಾಹಿತಂ ಚ ಪುರಂ ಶುಭಂ ॥೪॥ 

ದಹ್ಯಮಾನಂ ಪುರಂ ದೃಷ್ಟ್ವಾ ಪ್ರಣಷ್ಟಾ ದ್ವಿಜಸತ್ತಮಾಃ । 


ಯಥಾಗತಂ ಪ್ರಜಗ್ಮುಸ್ತೇ ಧರ್ಮಾಂರಣ್ಯಸಿವಾಸಿನಃ 1೫ ॥ 





ಕನ್ನಡದ ಅನುನಾದ 
ಲೋಲಜಹ್ವಾಸುರವಧ. ಸತ್ಯ ಮಂದಿರ ಸಂಸ್ಥಾಪನ ವರ್ಣಸ 


೧. ಯುಧಿಷ್ಠಿನು ಕೇಳುತ್ತಾನೆ:--ಎಲ್ಫೈ ವ್ಯಾಸಮುನಿಯೆ ! ತರುವಾಯ 
ಏನಾಯಿತೆಂಬುದನ್ನು ಹೇಳುವವನಾಗು! ನಿಸ ವಚನಾಮೃತವನ್ನು ಪಾನ 
ಮಾಡಿ ನನಗೆ ಇನ್ನೂ ತೃಪ್ತಿಯಾಗಲಿಲ್ಲ. 

೨. ವ್ಯಾಸನು ಹೇಳುತ್ತಾನೆ: ತರುವಾಯ ಕೆಲವುಕಾಲ ಕಳೆಯಲು 
ಯುಗಾವಸಾನ ಸಮಯವೊದಗಿತು. ಆಗ ತ್ರೇತಾಯುಗದ ಆದಿಯಲ್ಲಿ ಲೋಲ 
ಜಿಹ್ವಾಕ್ಸನೆಂಬ ರಾಕ್ಸಸನು ಹುಟ್ಟಿದನು. 

ಹಿ ಆವನು ಚರಚರಾತ್ಮಕವಾದ ತೈಕೋಕ್ಯವನ್ನು ಕೊಳ್ಳೆ ಹೊಡೆದು ಸಕಲ 
ಲೋಕಗಳನ್ನೂ ಜಯಿಸಿ ಧರ್ಮಾರಣ್ಯಕ್ಕೆ ಬಂದನು, 

೪. ಅವನು ಪವಿತ್ರವಾಗಿಯೂ, ಮನೋಹರವಾಗಿಯೂ, ಬ್ರಾಹ್ಮಣರಿಂದ 
ಸೇವಿತವಾಗಿಯೂ ಇರುವ ಆ ಧರ್ಮಾರಣ್ಯವನ್ನು ಕಂಡು ಬ್ರಹ್ಮದ್ರೇಷದಿಂದ 
ಆ ಸಟ್ಟಣವನ್ನು ಸುಟ್ಟನು. 

೫. ಸುಡುತ್ತಿರುವ ಆ ಪಟ್ಟಣವನ್ನು ನೋಡಿ ಅಲ್ಲಿ ವಾಸಿಸುತ್ತಿದ್ದ ಬ್ರಾಹ್ಮ 
ಣೋತ್ತಮರು ತಾವು ಬಂದ ಸ್ಥಳಗಳಿಗೆ ಮತ್ತೆ ಹೊರಟುಹೋದರು. 


೧೪೬ ಶ್ರೀ ಸ್ಕಾಂದಮಹಾಪುರಾಣಂ 


ಶಿ ಶ್ರೀ ಮಾತಾದ್ಯಾಸ್ತ ದಾ ದೇವ್ಯ $4 ಶೋಪಿತಾ ರಾಕ್ಟಸೇನ ವೈ । 


ಘಾತಯಂತ್ಯೇವ ಶಬ್ದೇನ ತರ್ಜ ಯಿತ್ಕಾ ಚ ರಾಳ್ಸ ಸಂ ॥(೬॥ 
ಸಮುಚ್ಛಿತಾಸ್ತ್ರದಾ ದೇವ್ಯಃ ಶತಶೋಂಥ ಸಹಸ್ಸಶಃ | 
ತ್ರಿಶೂಲನರಧಾರಿಣ್ಯಃ ಶಂಖಚಕ್ರಗದಾಧರಾಃ ॥೭॥ 
ಕಮಂಡಲುದರಾಃ ಕಾಶ್ಚಿತ್ಯಶಾಖಡ್ಗಧರಾಃ ಪರಾಃ । 

ಹಾಶಾಂಕುಶಧರಾ ಕಾಚಿತೃಡ್ಗ ಖೇಟಿಕಧಾರಿಣೀ ॥೮॥ 
ಕಾಚಿತ್ಸರಶುಹಸ್ತಾ ಚ ದಿನ್ಯಾಯುಧಧರಾ ಪರಾ । 
ನಾನಾಭರಣಭೂಷಾಢ್ಯಾ ನಾನಾರತ್ನಾಂಭಿಶೋಭಿತಾ ॥೯॥ 
ರಾಕ್ಸಸಾನಾಂ ನಿನಾಶಾಯ ಬ್ರಾಹ್ಮಣಾನಾಂ ಹಿತಾಯ ಚ । 
ಆಜಗ್ಮುಸ್ತತ್ರ ಯತ್ರಾಸ್ತೇ ಲೋಲಜಿಹ್ಹೋಹಿ ರಾಕ್ಸಸಃ un ೧೦॥ 


ಮಹಾದಂಸ್ಟ್ರೋ ಮಹಾಕಾಯೋ ನಿದ್ಯುಜ್ಜಿಹ್ಟೋ ಭಯಂಕರಃ । 
ದೃಷ್ಟ್ವಾ ತಾ ರಾಕ್ಟುಸೋ ಘೋರಂ ಸಿಂಹನಾದಮಥಾಂಕರೋತ್‌ ॥೧೧॥ 
ತೇನ ನಾದೇನ ಮಹತಾ ತ್ರಾಸಿತಂ ಭುವನತ್ರಯಂ | 


ಆಸೂರಿತಾ ದಿಶಃ ಸರ್ವಾಃ ಕ್ಸುಭಿತಾಂನೇಕಸಾಗರಾಃ ॥ ೧೨ ॥ 
ಕೋಲಾಹಲೋ ಮಹಾನಾಸೀದ್ದ ರ್ಮಾಂರಣೆ € ತದಾ ಸೃಪ | 
ತಚ್ಛು ತ್ವಾ ನಾಸನೇನಾಥ ಪ್ರೆ (ಸಿತೋ ಸ ॥ ೧೩॥ 





೬-೧೦. ಆ ರಾಕ್ಸಸನಿಂದ ಕೋಪ ಪಗೊಳಿಸಲ್ಪಟ್ಟ ಶ್ರೀಮಾತಾದಿ 
ಸಾವಿರಾರು ಮಂದಿ ದೇವಿಯರು ಆ ರಾಕ್ಸಸನನ್ನು ಹೊಡೆಯುತ್ತಾ, ಹೆದರಿಸುತ್ತ 
ನುಗ್ಗಿ ಹೊರಟರು. ಕೆಲವರು ತ್ರಿಶೂಲ, ಶಂಖ, ಚಕ್ರ, ಗಡೆ, ಕಮಂಡಲ 
ಗಳನ್ನು ಧರಿಸಿದವರೂ, ಮತ್ತೆ ಕೆಲವರು ಛಾವುಟ, ಕತ್ತಿ ಗಳನ್ನು ಧರಿಸಿದವರೂ, 
ಒಬ್ಬಳು ಪ ಪಾಶ, ಅಂಕುಶಗಳನ್ನು ಧರಿಸಿದವಳೂ, ಒಬ್ಬಳು ಕತ್ತಿ, ಗುರಾಣಿಗಳನ್ನು 
ಹಿಡಿದವಳೂ, ಒಬ್ಬಳು ಕೊಡಲಿಯನ್ನು ಬಡಿದವಳೂ, ಮತ್ತೊಬ್ಬಳು ದಿವ್ಯಾಸ್ತ್ರ 
ಗಳನ್ನು ತರ ಬಗೆ ಬಗೆಯ ಒಡವೆಗಳನ್ನು ತೊಟ್ಟಿ ನಳೂ. ನಾನಾ ವಿಧ 
ರತ್ನಗಳಿಂದ ವಿರಾಜಿಸುವವಳೂ ಆಗಿ ಎಲ್ಲರೂ ಸೇರಿ ಆ ರಾಕ್ಷಸನಾಶಕ್ಕಾಗಿಯೂ, 
ಬ್ರಾಹ್ಮಣರ ಹಿತಕ್ಕಾಗಿಯೂ ಲೋಲಜಹ್ವನಿದ್ದೆಡೆಗೆ ನುಗ್ಗಿ ಬಂದರು. 

೧೧-೧೨. ದೊಡ್ಡ ಹಭ್ಲುಗಳುಳ್ಳ ವನೂ, ದೊಡ್ಡ ದೇಹೆವುಳ್ಳವನೂ, ಮಿಂಚಿ 
ನಂತೆ ನಾಲಿಗೆಯುಳ್ಳವನೂ ಭಯಂಕರನೂ ಆದ ಆ ರಾಕ್ರಸನು ಆ ದೇವಿಯರನ್ನು 
ನೋಡಿ ಸಿಂಹನಾದ ಮಾಡಿದನು. ಆ ಘೋರ ನಾದದಿಂದ ಮೂರು ಲೋಕವೂ 
ಭಯಗೊಂಡಿತು. ಸಕಲದಿಕ್ಟುಗಳು ಆ ನಾದದಿಂದ ತುಂಬಿಹೋದುವು. ಅನೇಕ 
ಸಾಗರಗಳು ಉಲ್ಲೋಲಕಲ್ಲೋಲವಾದುವು. 

೧೩-೧೪. ಆಗ ಧರ್ಮಾರಣ್ಯದಲ್ಲಿ ಬಹಳ ಗದ್ದಲವಾಯಿತು. ಅದನ್ನು 


ಏಳಾದಶೋಳ9ಧ್ಮಾಯಃ ೧೪೭ 


ಕಿಮಿದಂ ಪಶ್ಯ ಗತ್ಪಾತ್ಮ ಇ ಮುಹ್ಯಂ ನಿನೇದಯ । 

ತತ್ತಸ್ಯ ನಚನಂ ಶ್ರುಃ ತ್ವಾ ಸಂ ದೃಸ್ಟ್ಯಾ ವೈ 06406 ॥ ೧೪ I 
ದೃಷ್ಟಾ ತತ್ರ ಮಹಾಯುದ್ಧಂ ಶಿ ''ಮಾತಾಲೋಲಜಿಹ್ವ ಯೋಃ । 
ಯಥಾದೃ ಷ್ಟ 0 ಯಥಾಜಾತಂ ಕಳ್ತಾ ಗ್ರೇಸ ನ್ಯ ಜು ॥ ೧೫ ॥ 
ಉದ್ದೆ ಸಹಕ ಲೋಕಾಂಸ್ತ್ರಿ ನ ಮಾಂರಣ್ಯಮಿತೋ ಗತಃ । 

ತಚ್ಚು ೨ತ್ವಾ ನಾಸವೋ ನಸ್ಲೆ 0 “ನಿನೇಷ ್ಯ ಕ್ಲಿತಿಮಾಗಮತ್‌ ॥ ೧೬ ॥ 
ದಾಟಿತು ತತ್ಬು ರಂ ರಮ್ಯಂ ದನಾನಾಮಸಿ ದುರ್ಲಭಂ । 

ನದ ೈಷ್ಟಾ ನಾಡನಾಸ್ತ ತ್ರ ಗತಾಃ ಸರ್ವೇ ದಿಶೋದಶ ॥ ೧೭ ॥ 
ಶ್ರೀಮಾತಾ ಯೋಗಿನೀ ತತ್ರ ಕುರುತೇ ಯುದ್ಧಮುತ್ತಮಂ । 
ಹಾಹಾಭೂತಾಃ ಪ್ರಜಾಃ ಸರ್ವಾ ಇತಶ್ಚೇತಶ್ಚ ಧಾವತಿ ॥ ೧೮ ॥ 
ತಚ್ಛು ತ್ವಾ ವಾಸುದೇವೋ ಹಿ ಗೃಹೀತ್ವಾ ಚ ಸುದರ್ಶನಂ । 
ಸತ್ಯಲೋಕಾತ್ರದಾ ರಾಜನ್ಸಮಾಗಚ್ಛನ್ಮಹೀತಲೇ Horn 
ಧರ್ಮಾಂರಣ್ಯಂ ತತೋ ಗತ್ವಾ ತಚ್ಚಕ್ರಂ ಪ್ರಮುಮೋಚ ಹ। 
ಲೋಲಜಿಹ್ಹಸ್ತದಾ ರಕ್ಟ್ಕೋ ಮೂರ್ಛಿತೋ ನಿಪಪಾತ ಸಃ ॥ ೨೦ 





ಕೇಳಿ ದೇವರಾಜನು ನಳಕೂಬರನ್ನು ಕರೆದು ""ನೀನು ಧರ್ಮಾರಣ್ಯಕ್ಕೆ ಹೋಗಿ 
ಅಲ್ಲಿ ನಡೆಯುತ್ತಿರುವುದನ್ನು ನೋಡಿಬಂದು ನನಗೆ ತಿಳಿಸು'' ಎಂದು ಅವನನ್ನು 
ಧರ್ಮಾರಣ್ಯಕ್ಕೆ ಕಳುಹಿಸಿದನು. ಅವನು ಶುಕ್ರನ ವಚನದಂತೆ ಅಲ್ಲಿಗೆ ಹೋದನು. 

೧೫-೧೬. ಅವನು ಅಲ್ಲಿ ಶ್ರೀಮಾತಾ ಲೋಲಜಿಹ್ವರಿಗೆ ನಡೆಯುತ್ತಿದ್ದ 
ಯುದ್ಧವನ್ನು ನೋಡಿ ತಾನು ಕಂಡಂತೆ "" ಲೋಲಜಿಹ್ವನು ಇಲ್ಲಿಂದ ಧರ್ಮಾ 
ರಣ್ಯಕ್ಕೆ ಹೋಗಿ ಮೂರು ಲೋಕಗಳನ್ನು ಭಯಗೊಳಿಸುತ್ತಿದ್ದಾನೆ?' ಎಂದು 
ದೇವೆಂದ್ರನಿಗೆ ತಿಳಿಸಿದನು. ಅದನ್ನು ಕೇಳಿ ದೇವರಾಜನು ಈ ವಿಷಯವನ್ನು 
ವಿಷ್ಣುವಿಗೆ ವಿಜ್ಞಾ ಪಿಸಿ ತಾನೂ ಭೂಮಿಗೆ ಬಂದನು. 

೧೭. ದೇವದುರ್ಲಭವಾಗಿಯೂ, ಮನೋಹರವಾಗಿಯೂ ಇರುವ ಆ 
ಧರ್ಮನಗರವು ಭಸ್ಮವಾಗಿದ್ದಿತು. ಬ್ರಾಹ್ಮಣರೆಲ್ಲರೂ ದಶದಿಕ್ಕುಗಳಿಗೆ ಹೊರಟು 
ಹೋಗಿದ್ದುದರಿಂದ ಅವರೂ ಕಾಣಿಸಲಿಲ್ಲ. 

೧೮. ಶ್ರೀಮಾತಾದೇವಿಯು ಅಲ್ಲಿ ಘೋರಯುದ್ಧ ಮಾಡುತ್ತಿದ್ದಳು. 
ಜನರೆಲ್ಲರೂ ಹಾಹಾಕಾರಮಾಡುತ್ತ ಇಲ್ಲಿ ಅಲ್ಲಿ ಓಡಾಡುತ್ತಿದ್ದರು. 

೧೯. ಯುಧಿಷ್ಠಿರ! ವಾಸುದೇವನು ಅದನ್ನು ಕೇಳಿ ಚಕ್ರವನ್ನು ಹಿಡಿದು 
ಸತ್ಯಲೋಕದಿಂದ ಭೂಮಿಗೆ ಇಳಿದುಬಂದನು. 

೨೦. ಬಳಿಕ ಧರ್ಮಾರಣ್ಯಕ್ಕೆ ಹೋಗಿ ಲೋಲಜಿಹ್ವನಮೇಲೆ ಚಕ್ರವನ್ನು 
ಪ್ರಯೋಗಿಸಲು ಅವನು ಮೂರ್ಛೆಗೊಂಡು ಕೆಳಗೆ ಬಿದ್ದನು. 


೧೪೮ ಶ್ರೀ ಸ್ಕಾಂದನುಹಾಪುರಾಣಂ 


ತ್ರಿಶೂಲೇನ ತತೋ ಭಿನ್ನಃ ಶಕ್ತಿಭಿಃ ಕ್ರೋಧಮೂರ|್ಥಿತಃ 


ಹನ್ಯಮಾನಸ್ತದಾರಕ್ಸಃ ಪ್ರಾಣಾಂಸ್ಕ್ಯಕ್ತ್ವಾ ದಿನಂ ಗತಃ ॥೨೧॥ 
ತತೋ ದೇವಾಃ ಸಗಂಧರ್ವಾ ಹರ್ಷನಿರ್ಭರಮಾನಸಾಃ । 
ತುಷ್ಟುವುಸ್ತಂ ಜಗನ್ನಾಥಂ ಸತ್ಯಲೋಕಾತ್ಸಮಾಗತಾಃ ॥ ೨೨ ॥ 


ಉದ್ದಸಂ ತತ್ಸಮಾಲೋಕ್ಕ್ಯ ನಿಷ್ಣುರ್ವಚನಮಬ್ರನೀತ್‌ | 
ಕ್ವಚತೇ ಬ್ರಾಹ್ಮಣಾಃ ಸರ್ವೇ ಖಚುಹೀಣಾಮಾಶ್ರನೇ ಪುನಃ ॥ ೨೩॥ 
ತತೋ ದೇವಾಃ ಸ ಗಂಧರ್ವಾ ಇತಸ್ತತಃ ಪಲಾಯಿತಾನ್‌ । 


ಸಂಶೋಧ್ಯ ತರಸಾ ರಾಜನ್ಸಾ_$ಹ್ಮಣಾನಿದಮಬ್ರುವನ್‌ ॥ ೨೪॥ 
ಶ್ರೂಯತಾಂ ನೋ ವಚೋ ವಿಪ್ರಾ ನಿಹತೋ ರಾಕ್ಚಸಾಂಧಮಃ । 
ವಾಸುದೇವೇನ ದೇನೇನ ಚಕ್ರೇಣ ನಿರಕೃಂತತ ॥ ೨೫ ॥ 
ತಚ್ಚು ತ್ವಾ ವಾಡವಾಃ ಸರ್ವೇ ಪ್ರಹರ್ನೋತ್ಸುಲ್ಲಲೋಚನಾಃ | 
ಸಮಾಜಗ್ಮುಸ್ತದಾರಾಜನ್ಸ್ಪಸ್ಟಸ್ಥಾನೇ ಸಮಾವಿಶನ್‌ ॥ ೨೬॥ 


ಶ್ರೀಕಾಂತಾಯ ತದಾ ರಾಜನ್ವಾಕ್ಯಮುಕ್ತಂ ಮನೋರಮಂ । 
ಯಸ್ಮಾತ್ತ್ವಂ ಸತ್ಯಲೋಕಾಚ್ಚ ಆಗತೋಸಿ ಜಗತ್ರಭುಃ । 
ಸ್ಥಾಪಿತಂ ಚ ಪುರಂ ಚೇದಂ ಹಿತಾಯ ಚ ದ್ವಿಜಾತ್ಮನಾಂ ॥ ೨೭ ॥ 





೨೧. ತರುವಾಯ ಶ್ರೀಮಾತಾದಿ ದೇವಿಯರು ತ್ರಿಶೂಲದಿಂದ ಸೀಳಿ, 
ಶಕ್ಟ್ಯಾಯುಧದಿಂದ ಹೊಡೆದು ಫಾಸಿಗೊಳಿಸಲು ಆ ರಾಕ್ಬಸನು ಅಸುವನ್ನು 
ನೀಗಿ ದೇವಲೋಕಕ್ಕೆ ತೆರಳಿದನು. 

೨೨. ಆ ಮೇಲೆ ಸತ್ಯಲೋಕದಿಂದ ಬಂದ ದೇವತೆಗಳೂ, ಗಂಧರ್ವರೂ 
ಆ ವಾಸುದೇವವನ್ನು ಸ್ತುತಿಸಿದರು. 

೨೩. ಯಾರೂ ವಾಸವಾಗಿಲ್ಲದ ಆ ಧರ್ಮಾರಣ್ಯವನ್ನು ಕಂಡು ವಿಷ್ಣುವು 
ಖಸ್ಯಾಶ್ರಮದಲ್ಲಿ ವಾಸಮಾಡುತ್ತಿದ್ದ ಆ ಬ್ರಾಹ್ಮಣರೆಲ್ಲಿ ಎಂದು ಕೇಳಿದನು. 

೨೪, ಬಳಿಕ ದೇವತೆಗಳು ಗಂಧರ್ವರೊಡನೆ ಇಲ್ಲಿ ಅಲ್ಲಿ ಓಡಿಹೋಗಿದ್ದ 
ಬ್ರಾಹ್ಮಣರನ್ನು ಹುಡುಕಿ ಅವರನ್ನು ಕರೆತಂದು ಇಂತೆಂದರು. 

೨೫. "" ಅಯ್ಯಾ ಬ್ರಾಹ್ಮಣರೇ! ನಮ್ಮ ಮಾತನ್ನು ಕೇಳಿರಿ. ವಿಷ್ಣುವು 
ಚಕ್ರದಿಂದ ಕತ್ತರಿಸಿ ಆ ಲೋಲಜಿಹ್ವಾಧಮನನ್ನು ಕೊಂದನು, 

೨೬. ಅದನ್ನು ಕೇಳಿ ಸಕಲ ದ್ವಿಜರೂ ಹರ್ಷಚಿತ್ತರಾಗಿ ಅಲ್ಲಿಗೆ ಬಂದು 
ತಮ್ಮ ತಮ್ಮ ಸ್ಥಳಗಳಲ್ಲಿ ನೆಲೆಸಿದರು. 

೨೭-೨೮. ಆ ಬ್ರಾಹ್ಮಣರು ಆ ಕಮಲಾಪತಿಯನ್ನು ಕುರಿತು, "" ಎಲೈ 
ಹರಿಯೆ! ನೀನು ಸತ್ಯಲೋಕದಿಂದ ಇಲ್ಲಿಗೆ ಬಂದು ಬ್ರಾಹ್ಮಣರ ಹಿತಕ್ಕಾಗಿ 
ಈ ಪಟ್ಟಣವನ್ನು ಸ್ಥಾಪಿಸಿರುವೆ. ಆದುದರಿಂದ ಕೃತಯುಗದಲ್ಲಿ ಧರ್ಮಾರಣ್ಯ 


ಏಕಾದಶೋ9$ಧ್ಯಾಯ; ೧೪೯ 


ಸತ್ಯಮಂದಿರಮಿತಿ ಖ್ಯಾತಂ ತದಾಲೋಕೇ ಭವಿಷ್ಯತಿ | 

ಕೃತೇ ಯುಗೇ ಧರ್ಮಾಃರಣ್ಯಂ ತ್ರೇತಾಯಾಂ ಸತ್ಯಮಂದಿರಂ ॥ ೨೮॥ 
ತಚ್ಛ್ರುತ್ವಾ ವಾಸುದೇವೇನ ತಥೇತಿ ಪ್ರತಿಸದ್ಯ ಚ । 

ತತಸ್ತೇ ನಾಡನಾಃ ಸರ್ಮೇ ಪುತ್ರಪೌತ್ರಸಮನ್ನಿತಾಃ ॥೨೯॥ 
ಸಪತ್ಲೀಕಾಃ ಸಾನುಚರಾ ಯಥಾಪೂರ್ವಂ ನ್ಯನಾತ್ಸಿಷುಃ । 
ತಪೋಯಜ್ಜ ಕ್ರಿಯಾದ್ಯೇಷು ನರ್ತಂತೇಂಧ್ಯಯನಾದಿಷು । 

ಏವಂ ತೇ ಸರ್ವಮಾಖ್ಯಾತಂ ಧರ್ಮ ವೈ ಸತ್ಯಮಂದಿರೇ ॥೩೦॥ಓ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ9$ರಣ್ಯಮಾಹಾತ್ಮ್ಯೇ 
«" ರೋಲಜಿಹ್ವಾಸುರವಧಪೂರ್ವಕಂ ಸತ್ಯಮಂದಿರ ಸಂಸ್ಥಾಪನವರ್ಣನಂ 23 
ನಾಮ ಏಕಾದಶೋಂಧ್ಯಾಯಃ 





ವೆಂದು ಪ್ರಸಿದ್ಧವಾದ ಈ ಸಟ್ಟಣವು ತ್ರೇತಾಯುಗದಲ್ಲಿ ಸತ್ಯಮಂದಿರವೆಂದು 
ವಿಖ್ಯಾತವಾಗಲಿ'' ಎಂದು ವಿಜ್ಞಾ ನಿಸಿದರು. 

೨೯-೩೧. ಅದನ್ನು ಕೇಳಿ ವಾಸುದೇವನು ಹಾಗೆಯೇ ಆಗಲೆಂದು 
ಒಪ್ಪಿದನು. ಬಳಿಕ ಬ್ರಾಹ್ಮಣರೆಲ್ಲರೂ ಪುತ್ರಪೌತ್ರರಿಂದಲ್ಲೂ ಸತ್ಲಿಯರಿಂದಲೂ; 
ಸೇವಕರಿಂದಲೂ ಸಹಿತರಾಗಿ ತಪಸ್ಸು, ಯಜ್ಞ, ಅಧ್ಯಯನಾದಿಗಳಲ್ಲಿ ನಿರತರಾಗಿ 
ಅಲ್ಲಿ ಮೊದಲಿನಂತೆಯೆ ವಾಸಮಾಡತೊಡಗಿದರು. ಹೀಗೆ ನಿನಗೆ ಸತ್ಯಮಂದಿರದ 
ವೃತ್ತಾಂತವನ್ನೆಲ್ಲ ಹೇಳಿರುವೆನು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮು ಹಾಪುರಾಣದ ನೂರನೆಯ ಬ್ರಹ್ಮಖಂಡದ ಸೂರ್ವಭಾಗದ ಧರ್ಮಾರಣ 
ಮಾಹಾತ್ಮ್ಯದ ಲೋಲಜಿಹ್ವಾಸುರ ವಧ ಪೂರ್ವಕ ಸತ್ಯಮ ೦ದಿರ ಸಂಸ್ಕ್ಯಾಪನವರ್ಣನ'? 
ವೆಂಬ ಹನ್ನೊಂದನೆಯ ಅಧ್ಯಾಯವು ಮುಗಿದುದು 


» Been 
ಅಥ ದ್ದಾ ಿದಶೋಕಿಧ್ಯಾಯಃ 
ಗಣೇಶಪ್ರಸ್ಥಾ ಪನಾವರ್ಣನಂ 

ವ್ಕಾ ಸ ಉವಾಚ :-. 
ತತೋ ದೇವೈರ್ಸ್ಯಪಶ್ರೇಷ್ಠ ರಕ್ಸಾರ್ಥಂ ಸತ್ಯಮಂದಿರಂ । 
ಸ್ಥಾಪಿತಂ ತತ್ತ ದಾಣಿ ವ ಸತ್ಯಾಂಭಿಖ್ಯಾ ಹಿ ಸಾ ಪುರೀ ॥೧॥ 
ಪೂರ್ವಂ ಧರ್ಮೇಶ್ನರೋ ದೇವೋ ದಕ್ಷಿಣೇನ ಗಣಾಧಿಪಃ । 
ಪಶ್ಲಿಮೇ ಸ್ಥಾಪಿತೋ ಭಾನುರುತ್ತರೇ ಚ ಸ್ವಯಂಭುವಃ ॥೨॥ 

ಯುಧಿಷ್ಠಿರ ಉವಾಚ :- 
ಗಣೇಶಃ ಸ್ಥಾ ಹತಃ ಕೇನ ಕಸ್ಮಾತ್ಸಾ ಾಬತವಾನಸೌ | 
ಕಿನ್ನಾಮಾಂಸೌ ಮಹಾಭಾಗ ತೆ ಕ "ಕಥೆಯ ಮಾಚಿರಂ nan 

ವ್ಯಾ ಸ ಉವಾಚ: 
ಅಧುನಾ:ಹಂ ಪ್ರವಕ್ಟ್ರ್ಯಾನಿ ಗಣೇಶೋತ್ಪತ್ತಿಕಾರಣಂ ॥1೪॥ 
ಸಮಯೇ ಮಿಲಿತಾಃ ಸರ್ವೇ ದೇವತಾ ಮಾತರಸ್ತಥಾ। 
ಧರ್ಮಾಂರಣ್ಯೇ ಮಹಾರಾಜ ಸ್ಥಾ ಪಿತಶ್ಚ ಂಡಿಕಾಸುತಃ ॥೫॥ 
ಆದೌ ದೇವನೆ ೈರ್ಕ್ಯಪತ್ತೆ ಸ್ಮ ಭೂಮೌ ವೈ ಸತ್ಯ ಯೋಷಿತಾಂ । 
ಪ್ರಾಕಾರಶ್ಹಾಃಭನತ್ತತ್ತ ತ: ಸತಾಕಾಧ್ವಜಶೋಭತಃ HEN 





ಕನ್ನಡದ ಅನುವಾದ 
ಗಣೇತಪ್ರಸ್ಥಾಪನಾವರ್ಣನ 

೧-೨. ವ್ಯಾಸನು ಹೇಳುತ್ತಾನೆ: ಯುಧಿಷ್ಠಿರ! ಅದುಮೊದಲ್ಲೊಂಡು 
ಸತ್ಯಮಂದಿರವೆಂದು ಹೆಸರನ್ನು ಪಡೆದ ಆ ಪಟ್ಟಣದ ರಕ್ಷಣೆಗಾಗಿ ಪೂರ್ವ 
ದಿಕ್ಕಿನಲ್ಲಿ ಧರ್ಮೇಶ್ವರನನ್ನೂ, ದಕ್ಸಿಣದಲ್ಲಿ ಗಣೇಶನನ್ನೂ, ಪಶ್ಚಿಮದಲ್ಲಿ 
ಸೂರ್ಯನನ್ನೂ, ಉತ್ತರದಲ್ಲಿ ಬ್ರಹ್ಮನನ್ನೂ ಸ್ಥಾಪಿಸಲಾಯಿತು. 

೩. ಯುಧಿಷ್ಠಿರನು ಕೇಳುತ್ತಾನೆ:--ಗಣೇಶನನ್ನು ಯಾರು ಸ್ಥಾಪಿಸಿದರು? 
ಏತಕ್ಕೆ ಪ್ರತಿಷ್ಠಿಸಿದರು? ಇವನ ಹೆಸರೇನು? ವಿಳಂಬಮಾಡದೆ ನನಗೆ ತಿಳಿಸು. 

೪, ವ್ಯಾಸನು ಹೇಳುತ್ತಾನೆ: ಈಗ ನಾನು ಗಣೇಶನ ಉತ್ಪತ್ತಿಯ 
ಕಾರಣವನ್ನು ಹೇಳುವೆನು; ಕೇಳು. 

೫. ಮಹಾರಾಜ! ಧರ್ಮಾರಣ್ಯದಲ್ಲಿ ದೇವತೆಗಳೂ ಶ್ರೀಮಾತಾದಿ 
ದೇವಿಯರೂ ಸೇರಿದ ಸಮಯದಲ್ಲಿ ಚಂಡಿಕೆಯ ಮಗನಾದ ಗಣೇಶನು ಅಲ್ಲಿ 
ಸ್ಥಾನಿಸಲ್ಪಟ್ಟಿನು. 

೬೯. ನೃಪೇಂದ್ರ! ಮೊದಲು ಭೂಮಿಯಲ್ಲಿ ದೇವತೆಗಳು ಸತ್ಯದೇವಿಯರ 


ದ್ವಾದಶೋತಧ್ಯ್ಮಾಯಃ ೧೫೧ 


ಬ್ರಾಹ್ಮಣಾಯತನೇ ತತ್ರ ಪ್ರಾಕಾರಮುಂಡಲಾಂತರೇ | 


ತನ್ಮಧ್ಯೇ ರಚಿತಂ ಪೀಠಮಿಷ್ಟಕಾಭಿಃ ಸುಶೋಭಿತಂ ॥೭॥ 

ಪ್ರತೋಲ್ಯಶ್ಚ ಚತಸ್ರೋ ವೈ ಶುದ್ಧಾ ಏನ ಸತೋರಣಾಃ । 

ಪೂರ್ನೇ ಧರ್ಮೇಶ್ಚರೋ ದೇವೋ ದಕ್ಸಿಣೇ ಗಣನಾಯಕಃ ॥ ೮:॥ 

ಪಶ್ಚಿಮೇ ಸ್ಥಾಪಿತೋ ಭಾನುರುತ್ತರೇ ಚ ಸ್ಹಯಂಭುವಃ । 

ಧರ್ಮೆೇಶ್ವರೋತ್ಪತ್ತಿವೃತ್ತಮಾಖ್ಯಾತಂ ತತ್ತವಾಂಗ್ರತಃ ॥೯॥ 

ಅಧುನಾಹಂ ಪ್ರನಕ್ಸ್ಟ್ಯಾಮಿ ಗಣೇಶೋತ್ಪತ್ತಿಹೇತುಕಂ । 

ಕದಾಚಿತ್ಪಾರ್ವತೀ ಗಾತ್ರೋದ್ವರ್ತನಂ ಕೃತನತ್ಯಭೂತ್‌ u ೧೦ i 

ಮಲಂ ತಜ್ಮನಿತಂ ದೃಷ್ಟ್ಯಾ ಹಸ್ತೇ ಧೃತ್ವಾ ಸ್ವಗಾತ್ರಜಂ । 

ಪ್ರತಿಮಾಂ ಚ ತತಃ ಕೃತ್ವಾ ಸುರೂಪಂ ಚ ದದರ್ಶ ಹ ॥ ೧೧॥ 

ಜೀವಂ ತಸ್ಯಾಂ ಚ ಸಂಚಾರ್ಯ ಉದತಿಷ್ಮತ್ತದಗ್ರತಃ I 

ಮಾತರಂ ಸ ತದೋನಾಚ ಕಿಂ ಕರೋಮಿ ತವಾಜ್ಞಯಾ ॥ ೧೨॥ 
ಪಾರ್ವತ್ಕುವಾಚ na 

ಯಾನತ್ಸ್ಸಾನಂ ಕರಿಷ್ಯಾಮಿ ತಾನತ್ತ್ಯಂ ದ್ವಾರಿತಿಷ್ಠ ಮೇ । 

ಆಯುಧಾನಿ ಚ ಸರ್ವಾಣಿ ಪರಶ್ಮಾದೀನಿ ಯಾನಿ ತು ॥ ೧೩ ॥ 


ಪತಾಕೆಯಿಂದಲೂ, ಧ್ವಜದಿಂದಲೂ ಶೋಭಾಯಮಾನವಾದ ಪ್ರಾಕಾರವನ್ನು 
ರಚಿಸಿದರು. ಆ ಪ್ರಾಕಾರಸಮೂಹದ ಮಧ್ಯದಲ್ಲಿ ಬ್ರಾಹ್ಮಣರ ಮನೆಗಳನ್ನೂ, 
ಆ ಮನೆಗಳ ಮಧ್ಯದಲ್ಲಿ ಇಟ್ಟಿಗೆಗಳಿಂದ ಕಟ್ಟಿದ ರಮ್ಯವಾದ ಪೀಠವನ್ನೂ, ಶುದ್ಧ 
ವಾಗಿಯೂ, ತೋರಣಸಹಿತವಾಗಿಯೂ ಇರುವ ನಾಲ್ಕುಬೀದಿಗಳನ್ನೂ ನಿರ್ಮಿಸಿ 
ಪೂರ್ವದಿಕ್ಕಿನಲ್ಲಿ ಧರ್ಮೇಶ್ವರನನ್ನೂ, ದಕ್ಸಿಣದಲ್ಲಿ ಗಣೇಶನನ್ನೂ, ಪಶ್ಚಿಮದಲ್ಲಿ 
ಸೂರ್ಯನನ್ನೂ, ಉತ್ತರದಲ್ಲಿ ಬ್ರಹ್ಮನನ್ನೂ ಸ್ಥಾಪಿಸಿದರು. ಧರ್ಮೆಶ್ವರನ 
ಉತ್ಪತ್ತಿವೃತ್ತಾಂತವನ್ನು ನಿನಗೆ ಹಿಂದೆಯೇ ತಿಳಿಸಿರುತ್ತೇನೆ. 

೧೦-೧೨. ಈಗ ಗಣೇಶನ ಉತ್ಪತ್ತಿಕಾರಣವನ್ನು ಹೇಳುವೆನು. ಒಂದಾ 
ನೊಂದುದಿನ ಪಾರ್ವತಿಯು ಮೈಯನ್ನುಜ್ಜಿಕೊಳ್ಳುತ್ತಿದ್ದಳು. ಆಗ ತನ್ನ 
ದೇಹದಲ್ಲಿ ಹುಟ್ಟದ ಕೊಳೆಯನ್ನು ನೋಡಿ ಅದನ್ನು ಕೈಯಲ್ಲಿ ತೆಗೆದುಕೊಂಡು 
ಒಂದು ಪ್ರತಿಮೆಯನ್ನು ಮಾಡಿ ಅದರ ಆಕೃತಿಯನ್ನು ನೋಡಿ ಅದಕ್ಕೆ ಜೀವಕಳೆ 
ಯನ್ನು ತುಂಬಿದಳು. ಆಗ ಅದು ಅವಳ ಮುಂದೆ ಎದ್ದುನಿಂತು, "" ಜನನಿ! 
ಅಪ್ಪಣೆಮಾಡು ; ನಾನು ಮಾಡಬೇಕಾದುದೇನು?'' ಎಂದಿತು. 

೧೩. ಪಾರ್ವತಿಯು ಹೇಳುತ್ತಾಳೆ: ನಾನು ಸ್ನಾನಮಾಡುವವರೆಗೆ 
ನೀನು ಪರಶು ಮೊದಲಾದ ಆಯುಧಗಳೊಡನೆ ಬಾಗಿಲಿನಲ್ಲಿ ನಿಂತಿರು. 


೧೫೨ ಶ್ರೀ ಸ್ಯಾಂದಮಹಾಪುರಾಣಂ 


ತ್ವಯಿ ತಿಸ್ಮತಿ ನುದ್ದಾರೇ ಕೋಪಿ ನಿಫ್ನುಂ ಕರೋತು ನ । 


ಏನಮುಕ್ತೋ ನುಹಾದೇವ್ಯಾ ದ್ವಾರೇಃತಿಸ್ಮತ್ಸ ಸಾಯುಧಃ ॥ ೧೪॥ 
ಏತಸ್ಮಿನ್ನಂತರೇ ದೇವೋ ಮುಹಾದೇವೋ ಜಗಾಮ ಹ । 

ಆಭ್ಯಂತರೇ ಪ್ರನೇಷ್ಟುಂ ಚ ಮತಿಂ ದಧ್ರೇ ಮಹೇಶ್ವರಃ ॥ ೧೫ ॥ 
ದ್ವಾರಸ್ಥೇನ ಗಣೇಶೇನ ಪ್ರವೇಶೋಂದಾಯಿ ತಸ್ಯ ನ । | 
ತತಃ ಕ್ರುದ್ಧೋ ಮಹಾದೇವಃ ಪರಸ್ಪರಮುಯುಧ್ಯತ ॥ ೧೬.॥ 
ಯುದ್ಧಂ ಕೃತ್ವಾ ತತಶ್ಹೋಭೌ ಪರಸ್ಪರವಧೈಸಿಣೌ । 

ಸರಶುಂ ಜಫ್ನಿವಾನ್ಹೇನಲಲಾಟೀ ಪರಮೇ ಶುಭೇ ॥ ೧೭೫ 
ತತೋ ದೇವೋ ಮಹಾದೇವಃ ಶೂಲಮುದ್ಯಮ್ಯ ಚಾಂಹನತ್‌ । 
ಶಿರಶ್ಚಿಚ್ಛೇದ ಶೂಲೇನ ತದ್ಭೂಮೌ ನಿಪಹಾತ ಹ ॥ ೧೮ ॥ 
ಕಂ ದೃಷ್ಟ್ವಾ ಪತಿತಂ ಪುತ್ರಂ ಪಾರ್ವತೀ ಪ್ರರುರೋದ ಹ। 
ಹಾಹಾಕಾರೋ ಮಹಾನಾಸೀತ್ರದಾ ತತ್ರ ನಿಪಾತಿತೇ ॥೧೯॥ 


ಪಾರ್ವತೀಂ ನಿಕಲಾಂ ದೃಷ್ಟ್ಯಾ ದೇವದೇವೋ ಮಹೇಶ್ವರಃ! 
ಚಿಂತಯಾಮಾಸ ದೇವೋಪಿ 8೦ ಕೃತಂ ವಾಮುಧಾ ಮಯಾ ॥ ೨೦॥ 
ಏತಸ್ಮಿನ್ನಂತರೇ ತತ್ರ ಗಜಾಃಸುರಮಪಶ್ಯತ । 
ತಂ ದೃಷ್ಟ್ಯಾ ಚ ಮಹಾದೈತ್ಯಂ ಸರ್ನಲೋಕೈಕಪೂಜಿತಃ ॥ ೨೧॥ 

೧೪-೧೫. ನೀನು ಬಾಗಿಲಿನಲ್ಲಿ ನಿಂತಿರುವಾಗ ಯಾರೂ ವಿಫ್ಲವನ್ನುಂಟು 
ಮಾಡದಿರಲಿ'' ಎಂದು ಪಾರ್ವತಿಯು ಹೇಳಲು ಗಣೇಶನು ಆಯುಧಗಳನ್ನು 
ಹಿಡಿದುಕೊಂಡು ಬಾಗಿಲಿನಲ್ಲಿ ನಿಂತನು. ಈ ಮಧ್ಯದಲ್ಲಿ ಮಹೇಶ್ವರನು ಅಲ್ಲಿಗೆ 
ಬಂದು ಒಳಗೆ ಪ್ರವೇಶಿಸಲು ಅಪೇಕ್ಸಿಸಿದನು. 

೧೬. ಬಾಗಿಲಿನಲ್ಲಿರುವ ಗಣೇಶನು ಅವನಿಗೆ ಒಳಗೆ ಪ್ರವೇಶಿಸಲು ಅಡ್ಡಿ 
ಮಾಡಿದನು. ಆಗ ಶಿವನು ಕುಪಿತನಾದನು. ಇಬ್ಬರಿಗೂ ಕಾಳೆಗವು ನಡೆಯಿತು. 

೧೭. ಒಬ್ಬರನ್ನೊಬ್ಬರು ವಧಿಸಲಿಚ್ಛೆಯಿಂದ ಯುದ್ಧಮಾಡುತ್ತಿರಲು 
ಗಣೇಶನು ತನ್ನ ಕೊಡಲಿಯಿಂದ ಶಂಕರನ ಮಂಗಳಕರವಾದ ಹಣೆಗೆ ಹೊಡೆದನು. 

೧೮. ಬಳಿಕ ಮಹಾದೇವನು ಶೂಲವನ್ನೆತ್ತಿ ಬಡಿದು ಗಣೇಶನ ತಲೆಯನ್ನು 
ಕತ್ತರಿಸಿದನು. ಆ ತಲೆಯು ನೆಲದಲ್ಲಿ ಬಿದ್ದಿತು. 

೧೯. ತನಯನಾದ ಆ ಗಣೇಶನು ಭೂಮಿಯಲ್ಲಿ ಬೀಳಲು ಅವನನ್ನು 
ಕಂಡು ಶರ್ವಾಣಿಯು ಹಾಹಾಕಾರಮಾಡುತ್ತ ಗೋಳಾಡಿದಳು. 

೨೦. ದುಃಖಿತಳಾದ ಆ ಭವಾನಿಯನ್ನು ನೋಡಿ - ಭವನು, "" ನಾನು 
ವ್ಯರ್ಥವಾಗಿ ಎಂತಹ ಕಾರ್ಯವನ್ನು ಮಾಡಿದೆನು?' ಎಂದು ಚಿಂತಿಸಿದನು. 

೨೧-೨೨. ಈ ಮಧ್ಯದಲ್ಲಿ ಸಕಲ ಲೋಕಪೂಜಿತನಾದ ಆ ಮಹೇಶ್ವರನು 


ವ್ವಾಪಶೋ9ಧ್ಯಾಯಃ ೧೫೩ 
ಜಫ್ನಿವಾಂಸ್ತಚ್ಛೆರೋ ಗೃಹ್ಯ ಸಾರ್ನತ್ಯಾ ಕೃತಮರ್ಭಕಂ । 


ಉತ್ತಸ್ಕೌ ಸಗಣಸ್ತತ್ರ ಮಹಾದೇವಸ್ಯ ಸನ್ನಿಧೌ ॥ ೨೨ ॥ 
ತತೋ ನಾಮ ಚಕಾರಾಸ್ಯ ಗಜಾನನ ಇತಿ ಸ್ಪುಟಿಂ । 
ಸುರಾಃ ಸರ್ವೇ ಚ ಸಂಪೃಕ್ತಾ ಹರ್ಷಿತಾ ಮುನಯಸ್ತಥಾ ॥ ೨೩॥ 


ಸ್ತುವಂತಿ ಸ್ತುತಿಭಿಃ ಶಶ್ಚತ್ಯುಟುಂಬಕುಶಲಂಕರಂ ।` 
ವಿಕ್ರೀಣಾತಿ ಕುಟುಂಬಂ ಯೋ ಮೋದಕಾಂರ್ಥಂ ಸಮರ್ಚಕೇ ॥ ೨೪ ॥ 
ದಕ್ಷಿಣಸ್ಯಾಂ ಪ್ರತೋಲ್ಯಾಂ ತಮೇಕದಂತಂ ಚ ಪೀನರಂ । 


ಅರ್ಚಯಚ್ಚ ಮಹಾದೇವಂ ಸ್ವಯಂಭೂಃ ಸುರಪೂಜಿತಂ ॥ ೨೫ ॥ 
ಜಟಲಂ ವಾಮನಂ ಚೈನ ನಾಗಯಜ್ಜೋಪನೀತಕಂ KN 

ತ್ರ್ಯಕ್ಸುಂ ಚೈನ ಮಹಾಕಾಯಂ ಕರಧ್ವಜಕುಠಾರಕಂ ॥ ೨೬ ॥ 
ದಧಾನಂ ಕಮಲಂ ಹಸ್ತೇ ಸರ್ವನಿಫ್ನುನಿನಾಶನಂ । 

ರಕ್ಷಣಾಯ ಚ ಲೋಕಾನಾಂ ನಗರಾದ್ದಕ್ಸಿಣಾಶ್ರಿತಂ ॥ ೨೭ ॥ 
ಸುಪ್ರಸನ್ನಂ ಗಣಾಂಧ್ಯಕ್ಸಂ ಸಿದ್ಧಿ.ಬುದ್ಧಿನಮಸ್ಕೃತಂ I 

ಸಿಂದೂರಾಭಂ ಸುರಶ್ರೇಷ್ಮಂ ತೀವ್ರಾಂಕುಶಧರಂ ಶುಭಂ ॥ ೨೮ ॥ 
ಶತಪುಸ್ಸೈಃ ಶುಭೈಃ ಪುಷ್ಪೈರರ್ಜೆತಂ ಹ್ಯಮರಾಂಧಿಪಃ । ಸ 
ಪ್ರಣಮ್ಯ ಚ ಮಹಾಭಕ್ಕ್ಯಾ ತುಷ್ಟುವುಸ್ತಂ ಸುರಾಸ್ತ್ರತಃ ॥ ೨೯॥ 


ಇಯಂ 





ಅಲ್ಲಿರುವ ಗಜಾಸುರನೆಂಬ ದೈತ್ಯನನ್ನು ಕಂಡು ಅವನ ತಲೆಯನ್ನು ಕತ್ತರಿಸಿ 
ಆ ಪಾರ್ವತಿಕುಮಾರನ ಕುತ್ತಿಗೆಯಲ್ಲಿಟ್ಟನು. ಆ ಬಾಲಕನು ಗಣಗಳೊಡನೆ 
ಮಹಾದೇವನ ಹತ್ತಿರದಲ್ಲಿಯೇ ಜೀವತಾಳಿ ಮೇಲಕ್ಕೆದ್ದನು. ; 

೨೩-೨೪. ಬಳಿಕ ಅವನಿಗೆ ಶಿವನು ಗಜಾನನ ಎಂದು ನಾಮಕರಣ ಮಾಡಿ 
ದನು. ದೇವತೆಗಳೂ, ಮುನಿಗಳೂ ಸೇರಿ ಹರ್ಷಗೊಂಡು ಮೋದಕದಿಂದ 
ಪೂಜಿಸುವ ಭಕ್ತನಿಗೆ ಕುಟುಂಬವನ್ನಿತ್ತು ಯಾವಾಗಲೂ ಕ್ಲೇಮವನ್ಸೀಯುವ 
ಆ ಗಣೇಶನನ್ನು ಸ್ತುತಿಸಿದರು. 

೨೫. ದಕ್ಸಿಣವೀಥಿಯಲ್ಲಿ ಸುರಪೂಜಿತನಾಗಿಯೂ, ಪುಷ್ಪನಾಗಿಯೂ, 
ಇರುವ ಆ ಗಣೇಶನನ್ನು ಬ್ರಹ್ಮನೂ ಅರ್ಚಿಸಿದನು. 

೨೬-೨೯. ಬಳಿಕ ದೇವೇಂದ್ರನು ದೇವತೆಗಳೊಡನೆ ಜಟಾಧಾರಿಯೂ. 
ಕುಳ್ಳನೂ, ಸರ್ಪಯಜ್ಞೋಪವೀತವುಳ್ಳವನೂ,. ಮುಕ್ಕಣ್ಣನೂ, ಮಹಾ 
ಕಾಯನೂ, ಧ್ವಜ ಮತ್ತು ಕೊಡಲಿಗಳನ್ನು ಕೈಯಲ್ಲಿ ಹಿಡಿದವನೂ, ಕಮಲ 
ಪಾಣಿಯೂ, ಸಕಲವಿಫ್ನನಾಶಕನೂ, ಪ್ರಪಂಚದ ರಕ್ಬಣೆಗಾಗಿ ಪಟ್ಟಣದ ದಕ್ಷಿಣ 
ದಿಕ್ಕೆನಲ್ಲಿರುವವನೂ, ಪ್ರಸನ್ನನೂ, ಸಿದ್ಧಿಬುದ್ಧಿಗಳಿಂದ ನಮಸ್ಕಾರ ಮಾಡಲ್ಪಟ್ಟ 
ವನೂ, ಸಿಂದೂರದಂತೆ ಕಾಂತಿಯುಳ್ಳವನೂ, ಸುರೋತ್ತಮನೂ, ತೀಕ್ಷ್ಣವಾದ 


೧೫೪ ಶ್ರೀ ಸ್ಕಾಂದಮಹಾಪುರಾಣಂ 


ದೇವಾ ಊಚುಃ: 

ನಮಸ್ತೇಸ್ತು ಸುರೇಶಾಯ ಗಣಾನಾಂ ಪತಯೇ ನಮಃ । 

ಗಜಾನನ ನಮಸ್ತುಭ್ಯಂ ಮಹಾದೇನಾಧಿದೈವತ 1 ೩೦॥ 

'ಛಕ್ತಿಪ್ರಿಯಾಯ ದೇವಾಯ ಗಣಾಂಧ್ಯಕ್ಷ ನಮೋಸ್ತುತೇ । 

ಇತ್ಯೇತೈಶ್ಚ ಶುಭೈಃ ಸ್ತೋತ್ಸೈೆಃ ಸ್ತೂಯಮಾನೋ ಗಣಾಧಿಪಃ । 

ಸುಪ್ರೀತಶ್ಚ ಗಣಾಂಧ್ಯಕ್ರಸ್ತದಾಂಸೌ ವಾಕ್ಯಮಬ್ರವೀತ್‌ ॥ ೩೧॥ 
ಗಣಾಂಧ್ಯಕ್ರ ಉವಾಚ: 

ತುಷ್ಟೋ ಹಂ ವೋ ಸುರಾ ಬ್ರೂತ ನಾಂಛಿತಂ ಚ ದದಾಮಿ ವಃ ॥ ೩೨ ॥ 
ದೇವಾ ಊಚುಃ 

ತ್ವಮತ್ರಸ್ಗೋ ಮಹಾಭಾಗ ಕುರು ಕಾರ್ಯಂ ಚ ನಃ ಪ್ರಭೋ! 


ಧರ್ಮಾಃರಣ್ಯೇ ಚ ವಿಪ್ರಾಣಾಂ ವಣಿಗ್ನನನಿವಾಸಿನಾಂ | ೩೩ ॥ 
ಬ್ರಹ್ಮಚರ್ಯಾದಿ ಯುಕ್ತಾನಾಂ ಧಾರ್ಮಿಕಾಣಾಂ ಗಣೇಶರ । 
ವರ್ಣಾಶ್ರಮೇತರಾಣಾಂ ಚ ರಕ್ಷಿತಾ ಭವ ಸರ್ವದಾ ॥ ೩೪॥ 
ತ್ವೃತ್ರಸಾದಾನ್ಮಹಾಭಾಗ ಧನಸೌಖ್ಯಯುತಾ ದ್ವಿಜಾಃ । 

ಭವಂತು ಸರ್ನೇ ಸತತಂ ವಣಿಜಶ್ಚ ಮಹಾಬಲಾಃ ॥ ೩೫ ॥ 





ಅಂಕುಶಧರನೂ, ಮಂಗಳಕರನೂ ಆಗಿರುವ ಗಜಾನನನನ್ನು ತಾವರೆ ಮೊದಲಾದ 
ಶುಭ ಪುಷ್ಪಗಳಿಂದ ಪೂಜಿಸಿ ಭಕ್ತಿಯಿಂದ ವಂದಿಸಿ ಸ್ತೋತ್ರಮಾಡಿದರು. 

೩೦. ದೇವತೆಗಳು ಸ್ತುತಿಸುತ್ತಾರೆ:-- ಸುರೇಶ್ವರನೂ, ಗಣಗಳೊಡೆ 
ಯನೂ, ಮಹಾದೇವನಿಗೆ ದೇವತೆಯೂ ಆಗಿರುವ ಓ ಗಣೇಶ! ನಿನಗೆ 
ನಮಸ್ಕಾರವು. 

೩೧. ಭಕ್ತಿಗೆ ಮೆಚ್ಚುವ ಓ ಗಣಾಧ್ಯಕ್ಸ ! ನಿನಗೆ ವಂದನೆಯು'' ಎಂದು 
ಸೊತ್ರಮಾಡಲು ಗಣಪತಿಯು ಸಂತುಷ್ಟನಾಗಿ ಇಂತೆಂದನು. 

೩೨. ಗಣಪತಿಯು ಹೇಳುತ್ತಾನೆ:--ಅಯ್ಯಾ ದೇವತೆಗಳೇ! ಸಂತುಷ್ಟ 
ನಾಗಿದ್ದೇನೆ. ನಿಮ್ಮ ಈಸ್ಸಿತವೇನು? ಹೇಳಿರಿ. ಕೊಡುವೆನು. 

೩೩-೩೪. ದೇವತೆಗಳು ಹೇಳತ್ತಾರೆ:-ಗಣೇಶ್ವರ! ನೀನಿಲ್ಲಿಯೆ ನೆಲೆಸಿ 
ನಮ್ಮ ಕಾರ್ಯವನ್ನು ಆಗಮಾಡುತ್ತಿರು. ಧರ್ಮಾರಣ್ಯದಲ್ಲಿ ವಾಸಿಸುವ ಬ್ರಹ್ಮ 
ಚರ್ಯಾದಿಗಳಿಂದ ಕೂಡಿದ ಧಾರ್ಮಿಕರಾದ ಬ್ರಾಹ್ಮಣರನ್ನೂ, ವೈಶ್ಯರನ್ನೂ, 
ವರ್ಣಾಶ್ರಮಗಳಿಲ್ಲದ ಇತರ ಜನರನ್ನೂ ಯಾವಾಗಲೂ ಕಾಪಾಡು. 

೩೫. ಮಹಾಭಾಗ್ಯಶಾಲಿಯಾದ ಎಲೈ ಗಣೇಶನೇ! ನಿನ್ನ ಅನುಗ್ರಹ 
ತ ಧನ ಮತ್ತು ಸೌಖ್ಯವುಳ್ಳ ವರೂ, ವೈಶ್ಯರು ಬಲಿಷ್ಕರೂ 
ಆಗಿರಲ, 


ದ್ವಾಡಶೋ9ಧ್ಮಾಯಃ ೧೫೫ 


ಕಕ್ಟಿತವ್ಯಾಸ್ತ್ಯಯಾ ದೇವ ಯಾವಚ್ಚಂದ್ರಾಂರ್ಕಮೇದಿನೀ । 
ವಿನಮಸ್ಸಿತಿ ಸೋಂವಾದೀದ್ಗ ಣನಾಥೋ ಮಹೇಶ್ವರಃ ॥ ೩೬॥ 
ದೇವಾಶ್ಚ ಹರ್ಷಮಾಪನ್ನಾಃ ಪೂಜಯಂತಿ ಗಣಾಂಧಿಪಂ | 

ತತೋ ದೇವಾ ಮುದಾಯುಕ್ತಾಃ ಪುಷ್ಪಧೂಸಾದಿತರ್ಪಣೈಃ ॥೩೭॥ 
ಯೇ ಚಾಂನ್ಯೇ ಮನುಜಾ ಲೋಕೇ ನಿರ್ವಿಘ್ನಾರ್ಥಂ ಚ ಪೂಜಯನ್‌ ॥ 
ವಿನಾಹೋತ್ಸನಯಜ್ಞೇಷು ಪೂರ್ನಮಾರಾಧಿತೋ ಭವೇತ್‌ । 
ಧರ್ಮಾಂರಣ್ಯೋದ್ಭವಾನಾಂ ಚ ಪ್ರಸನ್ನಃ ಸಹಿ ಸರ್ವದಾ ॥೩೯॥ 


ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ$ರಣ್ಯಮಾಹಾತ್ಮ್ಯೇ ""ಗಣೇಶ 
ಪ್ರಸ್ಥಾಪನಾವರ್ಣನಂ ನಾಮ ದ್ವಾದಶೋಂಧ್ಯಾಯ; 


೩೬. ನೀನು ಇವರನ್ನೆಲ್ಲ ಚಂದ್ರ ಸೂರ್ಯ ಭೂಮಿಗಳಿರುವವರೆಗೂ 
ಕಾಪಾಡುತ್ತಿರು'' ಎಂದರು. ಗಣನಾಥನು ಹಾಗೆಯೇ ಆಗಲೆಂದು ಹೇಳಿದನು. 

೩೭-೩೯. ದೇವತೆಗಳೂ ಸಂತೋಷಗೊಂಡವರಾಗಿ ಹೂವು, ಧೂಪ, 
ಅರ್ಫ್ಯಾದಿಗಳಿಂದ ಗಣೇಶನನ್ನು ಪೂಜಿಸುತ್ತಾರೆ. ಇತರ ಮನುಷ್ಯರೂ 
ಗಣಾಧಿಸನನ್ನು ನಿವಾಹದಲ್ಲಿಯೂ, ಯಜ್ಞಗಳಲ್ಲಿಯೂ ನಿರ್ವಿಘ್ನತೆಗೋಸ್ಕರ 
ಪೂಜಿಸುತ್ತಾರೆ. ಧರ್ಮಾರಣ್ಯ ನಿವಾಸಿಗಳಿಗೆ ಆ ವಿಫ್ನೇಶ್ವರನು ಯಾವಾಗಲೂ 
ಪ್ರಸನ್ನನಾಗಿರುವನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮುಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಮ 
ಮಾಹಾತ್ಮ್ಮ್ಯದಲ್ಲಿ "ಗಣೇಶ ಪ್ರಸ್ತಾ ಪನಾವರ್ಣನಳ'ನೆಂಬ 
ಹನ್ನೆರಡನೆಯ ಅಧ್ಯಾಯವು ಮುಗಿದುದು 


॥ ಶ್ರೀಃ ॥ 


ಅಥ ತ್ರಯೋದಶೋಧ್ಯಾಯಃ 


ಬಕುಲಾಂರ್ಜ್ಕಮಾಹಾತ್ಮ್ಯ ಕಥನಂ 
ವ್ಯಾಸ ಉವಾಚ: 
ಶಂಭೋಶ್ಚ ಪಶ್ಚಿನೇ ಭಾಗೇ ಸ್ಥಾಪಿತಃ ಕಶ್ಯಪಾತ್ಮಜಕ । 
ತತ್ರಾಃಸ್ತಿ ತನ್ಮಹಾಭಾಗ ರನಿಕ್ಲೇತ್ರಂ ತದುಚ್ಯತೇ Hon 
ತತ್ರೋತ್ಸನ್ನೌ ನುಹಾದಿನ್ಕೌ ರೂಪಯೌವನಸಂಯುತೌ । 
ನಾಸತ್ಯಾವಶ್ಚಿನೌ ದೇವೌ ನಿಖ್ಯಾತೌ ಗದನಾಶನೌ WSU 


ಯುಧಿಷ್ಠಿರ ಉವಾಚ: 
ಪಿತಾಮಹ ಮಹಾಭಾಗ ಕಥಯಸ್ಟ ಪ್ರಸಾದತಃ । 


ಉತ್ಪತ್ತಿರಶ್ಶಿನೋಶ್ಚೆನ ಮೃತ್ಯುಲೋಕೇ ಚ ತತ್ಕಥಂ ॥೩॥ 

ರವಿಲೋಕಾತ್ಕಥಂ ಸೂರ್ಯೋ ಧರಾಯಾಮವತಾರಿತಃ । 

ಏತತ್ಸರ್ನಂ ಪ್ರಯತ್ನೇನ ಕಥಯಸ್ವ ಪ್ರಸಾದತಃ ॥೪॥ 

"ಯಚ್ಚ ತ್ವಾ ಹಿ ಮಹಾಭಾಗ ಸರ್ವಪಾಪೈಃ ಪ್ರಮುಚ್ಯತೇ ॥೫॥ 
ವ್ಯಾಸ ಉವಾಚ :-- 


ಸಾಧು ಪೃಷ್ಟಂ ತ್ವಯಾ ಭೂಪ ಊರ್ಧ್ವಲೋಕಕಥಾನಕಂ । 
ಯಚ್ಛುತ್ವಾ ನರಶಾರ್ದೂಲ ಸರ್ವರೋಗಾತ್ರ ಮುಚ್ಯತೇ I 
ವಿಶ್ವಕರ್ಮಸುತಾ ಸಂಜ್ಞಾ ಅಂಶುಮದ್ರನಿಣಾ ವೃತಾ wan 


ಕನ್ನಡದ ಅನುವಾದ 
ಬಹುಲಾರ್ಕ ಮಾಹಾತ್ಮ್ಯ ಕಥನ 

೧-೨. ವ್ಯಾಸರು ಹೇಳುತ್ತಾರೆ: ಮಹೇಶ್ವರನ ಪಶ್ಚಿಮದಿಗ್ಭಾಗದಲ್ಲಿ 
ಕಶ್ಯಸಸುತನಾದ ಸೂರ್ಯನನ್ನು ಸ್ಥಾಪಿಸಲಾಯಿತು. ಆ ಸ್ಥಳವನ್ನು ರನಿಕ್ಟೇತ್ರ 
ವೆನ್ನುವರು. ಅಲ್ಲಿ ರೂಪಯೌವನವಂತರೂ, ಪ್ರಸಿದ್ಧರೂ, ರೋಗನಾಶಕರೂ 
ಆಗಿರುವ ಅಶ್ವಿನೀ ದೇವತೆಗಳು ಸ್ಥಾಪಿತರಾಗಿ ಪ್ರಸಿದ್ಧರಾಗಿರುವರು. 

೩-೫. ಯುಧಿಸ್ಮಿರನು ಕೇಳುತ್ತಾನೆ: ಪಿತಾಮಹ! ಧರ್ಮಾರಣ್ಯದಲ್ಲಿ 
ಅಶ್ವಿನೀದೇವತೆಗಳ ಉತ್ಪತ್ತಿಯು ಹೇಗಾಯಿತೆಂಬುದನ್ನು ಅನುಗ್ರಹಮಾಡಿ 
ಹೇಳು. ಸೂರ್ಯಲೋಕದಿಂದ ಸೂರ್ಯನು ಭೂಮಿಗೆ ಇಳಿದುಬಂದುದು ಹೇಗೆ? 
ಇದನ್ನೂ ತಿಳಿಸು. ಸಕಲ ಜನರು ಇದನ್ನು ಕೇಳಿ ಪಾಪಮುಕ್ತರಾಗುವರು. 

೬-೭. ವ್ಯಾಸನು ಹೇಳುತ್ತಾನೆ: ರಾಜೇಂದ್ರ! ಸಕಲ ರೋಗಗಳನ್ನೂ 
ಪರಿಹರಿಸುವ ಊರ್ಧ್ವಲೋಕದ ಕಥೆಯನ್ನು ಕೇಳಿದೆ. ವಿಶ್ವಕರ್ಮನ ಮಗಳಾದ 
ಸಂಜ್ಞೆಯನ್ನು ಸೂರ್ಯನು ವಿವಾಹ ಮಾಡಿಕೊಂಡನು. ಸಂಜ್ಞೆಯು ಸೂರ್ಯ 


ತ್ರಯೋದಶತೋ *ಧ್ಯಾಯಃ ೧೫೭ 


ಸೂರ್ಯಂ ದೃಷ್ಟಾ ಸಡಾ ಸಂಜ್ಞಾ ಸ್ವಾಂಕ್ಸಿಸಂಯಮೆನಂ ವ್ಯಧಾತ್‌ । 
ಯತಸ್ತತಃ he SR ಸಂಜ್ಞಾ ೦ "ನಚನಮಬ್ರ ನೀತ್‌ 1೭॥ 
Ef ಉವಾಚ :- ೬ನೆ 


ಮಯಿ ದೃಷ್ಟೇ ಸದಾ ಯಸ್ಮಾತ್ಕುರುಸೇ ಸ್ಟಾಂಕ್ಷಿಸಂಯಮುಂ | 


ತಸ್ಮಾಜ್ನ ನಿಷ್ಟ ey ಮೂಢೇಪ್ರ ಹಾಸಂಯನುಕೋ ಯಮಃ ॥೮॥ 
ತತಃ ಸಾ NR ದೇವೀ ದದರ್ಶ ಚ ಭಯಾಕುಲಂ । 
ನಿಲೋಲಿತದೃಶಂ ದೃಷ್ಟಾ ಪುನರಾಹ ಚ ತಾಂ ರವಿಃ . 0೯4 
ಳಃ ದ್ವಿ ಲೋಲಿತಾದೃ ಸ್ಟಿರ್ಮಯಿದೃ ಷ್ಟೆ € ತ್ವಯಾ ಧುನಾ |. 
ಸ್ಮಾದ್ವಿಲೋಲಿತಾಂ ಸಂಜ್ಞೇ ಬಾ? ಸ್ರ ಸನಿಷ್ಯ ಸಿ noon 
ತ ಉವಾಚ :- 


ತತಸ್ತಸ್ಯಾಸ್ತು ಸಂಜಜ್ಞೇ ಭರ್ತೃಶಾಪೇನ ತೇನ ವೈ । 
ಯಮುಶ್ಚ ಯಮುನಾ ಯೇಯಂ ವಿಖ್ಯಾತಾ ಸುಮುಹಾನದೀ ॥ ೧೧॥ 
ಸಾಚ ಸಂಜ್ಞಾ ರನೇಸ್ತೇಜೋ ಮಹದ್ದುಃಖೇನ ಭಾಮಿನೀ । 


ಅಸಹಂತೀನ ಸಾ ಚಿತ್ತೇ ಚಿಂತಯಾಮಾಸ ವೈ ತದಾ 1 ೧೨॥ 
ಕಿಂಕರೋಮಿ ಕ್ಷ ಗಚಾ ಮಿ ಕ್ಷ ಗತಾಯಾಶ್ಚ "ವೃ ೯ತಿಃ 1 
ಭನೇನ್ಮನು ಕಥ ಭರ್ತುಃ ಕೋಷಮರ್ಕಸ್ನ' ನಕ್ಕ: ತಿ ॥ ೧೩॥ 


ನನ್ನು ಕಂಡು ಕಣ್ಣುಗಳನ್ನು ಮುಚ್ಚಿಕೊಂಡಳು. ಅದರಿಂದ ಕೋಪಗೊಂಡ 
ರವಿಯು ಮಡದಿಯಾದ ಆ ಸಂಜ್ಞೆಯನ್ನು ಕುರಿತು ಹೀಗೆಂದನು. 

೮೯. ಸೂರ್ಯನು ಹೇಳುತ್ತಾನೆ: "" ಮೂಢಳೆ! ನನ್ನನ್ನು ನೋಡಿದ 
ಕೂಡಲೆ ನೀನು : ಕಣ್ಣನ್ನು ಮುಚ್ಚಿ ಕೊಂಡುದರಿಂದ ನನ್ನಲ್ಲಿ ಪ್ರಜೆಗಳನ್ನು 
ದಂಡಿಸುವ ಯಮನು ಜನಿಸುವನು. ಗೆ ಬಳಿಕ ಅವಳು ಚಂಚಲನೇತ್ರಳಾಗಿ 
ಭಯಗೊಂಡು ಸೂರ್ಯನನ್ನು ನೆಟ್ಟನೆ ನೋಡಿದಳು. : ಹಾಗೆ ಚಂಚಲದೃಷ್ಟಿ 
ಬೀರಿದ ಅವಳನ್ನು ಕಂಡು ಸೂರ್ಯನು ಮತ್ತೆ ಹೀಗೆಂದನು. : 

೧೦. "« ಸಂಜ್ಞೆ! ನಾನು ನೋಡಿದಕೂಡಲೆ ನೀನು ಚಂಚಲದೃಷ್ಟಿಯುಳ್ಳ 
ವಳಾಡೆಯಾದುದರಿಂದ ಚಂಚಲಳಾದ ಓರ್ವ ಮಗಳನ್ನು ಪಡೆಯುವೆ. 

೧೧. ವ್ಯಾಸನು ಹೇಳುತ್ತಾನೆ:--ಬಳಿಕ ಗಂಡನ ಶಾಪದಿಂದ ಸಂಜ್ಞೆ 
ಯಲ್ಲಿ ಯಮನೂ, ಪ್ರಸಿದ್ಧಳಾದ ಯಮುನೆ (ನದಿ)ಯೂ ಹುಟ್ಟದರು. 

೧೨. ತರುವಾಯ ಆ ಸಂಜ್ಞೆಯು ಸೂರ್ಯನ ತೇಜಸ್ಸನ್ನು ಸಹಿಸದವಳಾಗಿ 
ಅಕಿ ದುಃಖದಿಂದ ಹೀಗೆ ಆಲೋಚಿಸಿದಳು. 

೧೩. ""ಏನು ಮಾಡಲಿ? ಎಲ್ಲಿಗೆ ಹೋಗಲಿ? ಎಲ್ಲಿಗೆ ಹೋದಕೆ ಸೌಖ್ಯ 
ವಾದೀತು? ಪತಿಯ ಕೋಪವು ಹೇಗೆ ಕಳೆದೀತು??? 


ಸಿರ ಶ್ರೀ ಸ್ಕಾಂದಮಹಾಪುರಾಜಂ 


ಇತಿ ಸಂಚಿಂತ್ಯ ಬಹುಧಾ ಪ್ರಜಾಪತಿಸುತಾ ತದಾ । 

ಸಾಧು ಮೇನೇ ಮಹಾಭಾಗಾ ಪಿತೃಸಂಶ್ರಯಮಾಪ ಸಾ ॥ ೧೪ ॥ 
ತತಃ ಪಿತೃಗೃಹಂ ಗಂತುಂ ಕೃತಬುದ್ಧಿರ್ಯಶಸ್ಥಿನೀ I 
ಛಾಯಾಮಾಹೂಯಾತ್ಮ ನಸ್ತು ಸಾ ದೇವೀ ದಯಿತಾ ರವೇಃ ॥ ೧೫ ॥ 
ತಾಂ ಚೋನಾಚ ತ್ವ ಯಾ ಸ್ಥೆ ಯಮತ್ರ ಭಾನೋರ್ಯಥಾಮಯಾ । 


ತಥಾ ಸಮ್ಯಗಪತ್ತೆ ಸು ವರ್ತಿತವ್ಯಂ ತಥಾ ರವೌ ॥ ೧೬ ॥ 

ಮಷ್ಪಮಖಿ ನ ವಾಚ್ಯ ತೇ Fe ಬಹುಮತಂ ಮಮ । 

ಸೈವಾಸ್ಮಿ ಸಂಜ್ಞಾಂಹಮಿತಿ ವಾಚ್ಯಮೇವಂ ತೃಯಾನಘೇ ॥ ೧೭॥ 
ಭಾಯಾಸಂಜ್ಞೋವಾಚ ಫಾ 

ಆಕೇಶಗ್ರಹಣಾಚ್ಹಾಂಹಮಾಶಾಪಾಚ್ಚ ವಚಸ್ತಥಾ । 

ಕರಿಷ್ಯೇ ಕಥಯಿಷ್ಯಾಮಿ ಯಾನತ್ಯೇಶಾಂ ಪಕರ್ಷಣಾತ್‌ ॥ ೧೮ ॥ 

ಇತ್ಯುಕ್ತಾ ಸಾ ತದಾ ದೇವೀ ಜಗಾಮ ಭವನಂ ಪಿತುಃ! 

ದದರ್ಶ ತತ್ರ ತ್ವಸ್ಟಾರಂ ತಪಸಾ ಧೂತಕಿಲ್ಬಿಷಂ ॥೧೯॥ 

ಬಹುಮಾನಾಚ್ಚ ತೇನಾಃಪಿ ಪೂಜಿತಾ ವಿಶ್ವಕರ್ಮಣಾ । 

ತಸ್ಕೌ ಪಿತೃಗೃಹೇ ಸಾತು ಕಿಂಚಿತ್ಕಾಲಮನಿಂದಿತಾ uw ೨೦॥ 








೧೪. ಹೀಗೆ ವಿಶ್ವಕರ್ಮನ ಮಗಳಾದ ಆ ಸಂಜ್ಞೆಯು ಬಹಳವಾಗಿ ಚಿಂತಿಸಿ 
ತಂದೆಯ ಬಳಿಯನ್ನು ಸೇರುವುದೇ ಒಳ್ಳೆಯದೆಂದು ತಿಳಿದಳು. 

೧೫-೧೭. ಹೀಗೆ ತಂದೆಯ ಮನೆಗೆ ಹೋಗಲು ಶಿಶ್ಚಯಿಸಿದ ರವಿಪತ್ನಿ 
ಯಾದ ಸಂಜ್ಞೆಯು ತನ್ನ ಛಾಯೆಯನ್ನು ಕರೆದು "" ನೀನು ನನ್ನ ಹಾಗೆಯೇ 
ಸೂರ್ಯನಲ್ಲಿ ವರ್ತಿಸಬೇಕು. ನನ್ನ ಮಕ್ಕಳನ್ನು ನನ್ನಂತೆಯೇ ನೋಡಿಕೊಳ್ಳ 
ಬೇಕು. ನನ್ನ ಅಭಿಮತದಂತಿದ್ದು ಪತಿಯವಿಷಯದಲ್ಲಿ ಕೆಡುನುಡಿಯಬಾರದು. 
ಆ ಸಂಜ್ಞೆಯೇ ನಾನೆಂದು ನೀನು ಹೇಳುತ್ತಿರಬೇಕು.” 

೧೮. ಛಾಯಾಸಂಜ್ಞೆಯು ಹೇಳಿದಳು :--ಪತಿಯು ಕೂದಲನ್ನು ಹಿಡಿದು 
ಎಳೆಯುವವರೆಗೂ, ಶಾಪವನ್ಲ್ನೀಯುವವರೆಗೂ ನೀನು ಹೇಳಿದಂತೆ ಮಾಡು 
ವೆನು.” 

೧೯. ಛಾಯೆಯು ಹೀಗೆ ಹೇಳಲು ಸಂಜ್ಞಾದೇವಿಯು ತವರುಮನೆ 
ಯನ್ನು ಸೇರಿ ಅಲ್ಲಿ ತಪಸ್ಸಿನಿಂದ ಕಳೆದುಹೋದ ಪಾಪವುಳ್ಳ ತನ್ನ ತಂದೆಯಾದ 
ವಿಶ್ವಕರ್ಮನನ್ನು ಕಂಡಳು. 

೨೦. ತಂದೆಯು ಬಹುಮಾನದಿಂದ ಅವಳನ್ನು ಕಾಣಲು ಅಲ್ಲಿಯೇ 
ಅವಳು ಕೆಲವುಕಾಲ ವಾಸವಾಗಿದ್ದಳು. 


ಶ್ರಯೋದಶೋರಿಧ್ಯಾಯಃ ೧೫೯ 


ತತಃ ಪ್ರಾಹ ಸ ಧರ್ಮಜ್ಞಃ ಪಿತಾ ನಾತಿಚಿಶೋಷಿತಾಂ | 

ವಿಶ್ವ ಕರ್ಮಾ ಸುತಾಂ ಪ್ರೆ ೇಮ್ನಾ ಬಹುಮಾನಪುರಸ್ಸರಂ ॥ ೨೧0 
ತ್ವಾಃ ಂತುಮೇ ಪಶ್ಯ ತೋ ನತ್ಸೇ ದಿನಾನಿ ಸುಬಹೂನ್ಯಸಿ । 
ಮುಹೂರ್ತೇನ ಸೆಮಾನಿನ್ಯುಃ ಕಂತು ಧರ್ಮೋ ನಿಲುಪ್ಯ ತೇ ೨೨೪ 
ಬಾಂಧನೇಷು ಚಿರಂ ಸೋ ನ ನಾರೀಣಾಂ ಯಶಸ್ಥ ಟೆ | 
ಮನೋರಥೋ ಬಾಂಧವಾನಾಂ ಭಾರ್ಯಾ ಪಿತೃಗೃ ಹೇ ಸ್ಥಿತಾ ॥ ೨೩॥ 
ಬಾ ತ್ವಂ ತ್ರೈಲೋಕ್ಕನಾಥೇನ ಭರ್ತಾ RE ಸಂಗತಾ | 


ಪಿತುಗ ರಹೇ ಚಿರಂ ಕಾಲಂ ವಸ್ಸು. ೦ ನಾರ್ಹಸಿ ಪುತ್ರಿಕೇ ॥ ೨೪ ೫ 

ಅತೋ ಭರ್ತೃಗೃಹಂ ಗಚ್ಛ ದೃ ಸ್ಟೊ € ಹಂ ಪೂಜಿತಾ ಚ ಮೇ! 

ಪುನರಾಗನುನಂ ಚಾರ್ಯ ದರ್ಶನಾಯ ಶುಭೇಕ್ಸಣೇ ॥ ೨೫ ॥ 
ವ್ಯಾಸ ಉವಾಚ. 

ಇತ್ಯುಕ್ತಾ ಸಾ ತದಾಕ್ಸಿಪ್ರಂ ತಥೇತ್ಯುಕ್ತ್ವಾ ಚ ನೈ ಮುನೇ! 

ಪೂಜಯಿತ್ವಾ ತು ಪಿತರಂ ಸಾ ಜಗಾಮೋತ್ತರಾನ್ಯುರೂನ್‌ ॥ ೨೬ ॥ 

ಸೂರ್ಯತಾಪಮಸನಿಚ್ಛಂತೀ ತೇಜಸಸ್ತಸ್ಯ ಬಿಭ್ಯತೀ । 

ತಸಶ್ಚಚಾರ ತತ್ರಾಪಿ ವಡವಾರೂಪಧಾರಿಣೇ ॥ ೨೭ ॥ 








೨೧. ಬಳಿಕ ವಿಶ್ವಕರ್ಮನು ಕೆಲವು ಕಾಲದಿಂದ ತನ್ನ ಮನೆಯಲ್ಲಿ ವಾಸ 
ನ ಮಗಳನ್ನು ಕುರಿತು ಗೌರವದಿಂದ ಹೀಗೆಂದನು. 

೨. "ಮಗೂ! ನಿನ್ನನ್ನು ನೋಡುತ್ತಿರುವ ನನಗೆ ಅನೇಕ ದಿನಗಳೂ 
ಒಂದು es ಸಮಾನವಾಗಿವೆ. ಆದರೆ ಧರ್ಮವು ಕೆಡುವುದು. 

೨೩. ಮದುವೆಯಾದ ಮಗಳು ತಂದೆಯ ಮನೆಯಲ್ಲಿರಬೇಕೆಂದು ಬಂಧು. 
ಗಳು ಆಶೆಪಡುವರು. ಆದರೆ ಹೆಂಗಸರಿಗೆ ತಂದೆಯ ಮನೆಯಲ್ಲಿ ವಾಸಿಸುವುದು 
ಯಶಸ್ಕರವಲ್ಲ. 

೨೪-೨೫. ಮಗು! ನಿನ್ನನ್ನು ಮೂರು ಲೋಕಗಳಿಗೂ ಒಡೆಯನಾದ. 
ಸೂರ್ಯನು ವಿವಾಹಮಾಡಿಕೊಂಡಿರುವನು. ಅಂತಹನ ಮಡದಿಯಾದ ನೀನು 
ತಂದೆಯ ಮನೆಯಲ್ಲಿ ವಾಸಮಾಡಲರ್ಹಳಲ್ಲ. ಆದುದರಿಂದ ಪತಿಗೃಹಕ್ಕೆ ತೆರಳು. 
ನಿನ್ನನ್ನು ನೋಡಿದ್ದೂ ಗೌರವಿಸಿದ್ದೂ ಆಯಿತು. ನನ್ನನ್ನು ನೋಡುವುದಕ್ಕೆ 
ಆಗಿಂದಾಗ್ಗೆ ಇಲ್ಲಿಗೆ ಬರುತ್ತಿ ಕಬಹುದು. 

೨೬. ವ್ಯಾಸನು ಹೇಳುತ್ತಾನೆ: ತಂದೆಯು ಹೀಗೆ ಹೇಳಿದ ಕೂಡಲೆ 
ಆ ಸಂಜ್ಞಾದೇವಿಯು ಹಾಗೆಯೇ ಆಗಲೆಂದು ತಂದೆಯನ್ನು ಪೂಜಿಸಿ ಉತ್ತರ 
ಕುರುದೇಶಕ್ಕೆ ಹೋದಳು. 

೨೭. ಸೂರ್ಯನ ತಾಪದಿಂದ ಜುಗುಪ್ಸೆಗೊಂಡು ಅವನ ತೇಜಸ್ಸಿಗೆ: 


೧ಿಹ೦ ಶ್ರೀ ಸ್ಕಾಂದಮಹಾಷುಕಾಜಂ 


ಸಂಜ್ಞಾನಿತ್ಯೇವ ಮನ್ಯಾನೋ ದ್ವಿತೀಯಾಯಾಂ ಡಿವಸ್ಪತಿಃ ।' 
ಜನಯಾಮಾಸ ತನಯೌ ಕನ್ಯಾ 0 ಬ್ಯ ಮನೋರಮಾಂ ॥೨೮॥ 
ಛಾಯಾ ಸ್ವತನಯೇಷ್ಟೇನ ಯಥಾ ಪೆ ಕ್ರೀಮ್ಹಾಃ ಧ್ಯವರ್ತತ | 

ತಥಾನ ಸಂಜ್ಞಾ ಕನ್ಯಾಯಾಂ ಪುತ್ರಯೋಶ್ಚಾಪ್ಯನರ್ತತ । 

'ಲಾಲನಾಸು ಚ ಭೋಜ್ಯೇಸು ನಿಶೇಷಮನುವಾಸರಂ . non 
ಮನುಸ್ತತ್ಕ್ಯಾಂತವಾನಸ್ಕಾ. ಯನುಸ್ತಸ್ಕಾ ನಚಾಂಕ್ಸಮತ್‌ । 
ತಾಡನಾಯ ತತಃ ಕೋಸಪಾತ್‌ ಸಾದಸ್ತೇನ ಸಮುದ್ಯತಃ । 


ತಸ್ಯಾಃ ಪುನಃ ಕ್ರಾಂತಮನಾ ನ ತು ದೇಹೇ ನೃಸಾತಯತ್‌ ॥೩೦॥ 
ತತಃ ಶಶಾಪ ತಂ ಕೋಪಾತ್‌ ಚ್ಛಾಯಾಸಂಜ್ಞಾ ಯಮಂ ನೃಪ । 
ಕಿಂಚಿತ್ರಸ್ಫುರಮಾಣೋಷ್ಠೀ ನಿಚಲತ್ಪಾಣಿಪಲ್ಲನಾ ॥ ೩೧॥ 
ಪತ್ನ್ಯಾಂ ಸಿತುರ್ಮಯಿ ಯದಿ ಪಾದಮುದ್ಯಚ್ಛಸೇ ಬಲಾತ್‌ । 

ಭುವಿ ತಸ್ಮಾದಯಂ ಸಾದಸ್ತನಾಂದ್ಯೈನ ಭವಿಷ್ಯತಿ ॥೩೨॥ 
ಇತ್ಯಾಕರ್ಣ್ಯ ಯಮಃ ಶಾಪಂ ಮಾತರ್ಯಿವಿಶಂಕಿತಃ । 

ಅ್ಯೇತ್ಯ, ಪಿತರಂ ಪ್ರಾಹ ಪ ಚ್ಟ ರಂ ॥ ೩೩ 





ಹೆದರುತ್ತ ಆ ಉತ್ತರಕುರುದೇಶದಲ್ಲಿ ಹೆಣ್ಣುಕುದುರೆಯ ರೂಪ ವನ್ನು ಧರಿಸಿ 
ತಪಸ್ಪನ್ನಾ ಚರಿಸಿದಳು. 

೨೮. ಆದಿತ್ಯನು ಛಾಯೆಯನ್ನು ಸಂಜ್ಞೆಯನ್ನಾಗಿಯೆೇ ತಿಳಿದು ಅವಳಲ್ಲಿ 
ಇಬ್ಬರು ಗಂಡು ಮಕ್ಕಳನ್ನೂ, ಸುಂದರಿಯಾದ ಒಬ್ಬ ಕನ್ಯೆಯನ್ನೂ ಪಡೆದನು. 

೨೯. ಛಾಯೆಯು ಲಾಲನೆಗಳಲ್ಲಿಯೂ, ಊಟದ ಪದಾರ್ಥಗಳನ್ನು 
ಫೀಡುವುದರಲ್ಲಿಯೂ ಪ್ರತಿದಿನವೂ ತನ್ನ ಮಕ್ಕಳಲ್ಲಿ ಪ್ರೀತಿಯನ್ನು ತೋರುತ್ತಿ 
ದ್ಹಂತೆ ಸಂಜ್ಞೆಯ ಮಗಳಲ್ಲಿಯೂ, ಪುತ್ರರಲ್ಲಿಯೂ ತೋರುತ್ತಿರಲಿಲ್ಲ. 

೩೦. ಇವಳು ಈ ರೀತಿ ಮಾಡುತ್ತಿರುವುದನ್ನು ಸಂಜ್ಞೆ ಯ Si 
ಪೈನಸ್ವತಮನುವು ಮಾತ್ರ ಸಹಿಸಿಕೊಂಡಿದ್ದನು. ಆದರೆ ಯಮನು ಸಹಿ 
ಕೋಪದಿಂದ ಅವಳನ್ನು ತುಳಿಯುವುದಕ್ಕಾಗಿ ಕಾಲನ್ನು ಎತ್ತಿದನು. Fh 
ಸಹನೆ ತಂದುಕೊಂಡು ಅದನ್ನು ಅವಳ ದೇಹದ ಮೇಲಿಡಲಿಲ್ಲ. 

೩೧-೩೨. ಬಳಿಕ ಛಾಯೆಯು ಕೋಪದಿಂದ ನಡುಗುವ ತುಟಿಯುಳ್ಳ 
ವಳೂ, ಅಲ್ಲಾಡುತ್ತಿರುವ ಕೈಯುಳ್ಳವಳೂ ಆಗಿ, "ನಿನ್ನ ತಂದೆಯ ಹೆಂಡತಿ 
ಯಾದ ನನ್ನಲ್ಲಿ ಛಲದ ಹೆಮ್ಮೆಯಿಂದ ಕಾಲನ್ನು ಎತ್ತಿದೆ. (ಆದರೆ ಈ ಪಾದವು 
ಈಗಲೇ ನೆಲದಮೇಲಿರುವುದು ನೋಡು'' ಎಂದು ಯಮನಿಗೆ ಶಾಪವನ್ಸಿತ್ತಳು. 

೩೩. ಇದನ್ನು ಕೇಳಿ ಯಮನು ಅವಳು ತಾಯಿಯೆಂಬುದರಲ್ಲಿ ಸಂದೇಹ 
ಗೊಂಡು ತಂದೆಯ ಹತ್ತಿರ ಹೋಗಿ ನಮಸ್ಕಾರಮಾಡಿ ಇಂತೆಂದನು. 


ತ್ರಯೋದಶೋತ ಧ್ಯಾಯಃ : ೧೬೧ 


ತಾತೈತನ್ಮಹದಾಶ್ಚರ್ಯಮದೃಷ್ಟಮಿತಿ ಚ ಕ್ವಚಿತ್‌ | 


ಮಾತಾ ವಾತ್ಸಲ್ಯರೂಹೇಣ ಶಾಪಂ ಪುತ್ರೇ ಪ್ರಯಚ್ಛತಿ Navn 
ಯಥಾ ಮಾತಾ ಮಮಾಚಷ್ಟ ನೇಯಂ ಮಾತಾ ತಥಾ ಮಮ । 
ನಿರ್ಗುಣೇಸ್ಮಪಿ ಪುತ್ರೇಷು ನ ಮಾತಾ ನಿರ್ಗುಣಾ ಭನೇತ್‌ ॥ ೩೫ ॥ 
ಯಮುಸ್ಕೈತದ್ದಚಃ ಶ್ರುತ್ವಾ ಭಗವಾಂಸ್ತಿಮಿರಾಂ ಪಹಃ । 
ಛಾಯಾಸಂಜ್ಞಾಮಥಾಹೂಯ ಪಪ್ರಚ್ಛ ಕೃ ಗತೇತಿ ಚ ॥ ೩೬ ॥ 
ಸಾಚಾಹ ತನಯಾ ತ್ವೃಷ್ಟುರಹಂ ಸಂಜ್ಞಾ ನಿಭಾವನಸೋ । 

ಪತ್ನೀ ತವ ತ್ವ್ವಯಾಂ ಪತ್ಯಾನ್ಯೇತಾನಿ ಜನಿತಾನಿ ಮೇ ॥೩೭॥ 


ಇತ್ನಂ ವಿವಸ್ವತಸ್ತಾಂ ತು ಬಹುಶಃಪೃಚ್ಛ ತೋ ಯದಾ । 
ನಾಚಚಕ್ಟೇ ತದಾ ಕ್ರುದ್ಧೋ ಭಾಸ್ಟಾಂಸ್ತಾಂ ಶಪ್ತುಮುದ್ಯತಃ 1 ೩೮ ॥ 
ತತಃ ಸಾ ಕಥಯಾಮಾಸ ಯಥಾವೃತ್ತಂ ವಿವಸ್ಕತೇ 1 


ವಿದಿತಾಂರ್ಥಶ್ಚ ಭಗನಾಂಜಗಾಮ ತ್ವಷ್ಟುರಾಲಯಂ ॥೩೯॥ 
ತತಃ ಸಂಪೂಜಯಾಮಾಸ ತ್ವಷ್ಟಾ ತ್ರೈಲೋಕ್ಯಪೂಜಿತಂ । 
ಭಾಸ್ಪನ್ಶಿಂ ರಹಿತಾ ಶಕ್ತ್ಯಾ ನಿಜಗೇಹಮುಪಾಗತಃ ॥ ೪೦॥ 


೩೪. ಅಪ್ಪಾ! ಮಗನಲ್ಲಿ ಪ್ರೀತಿಯಿರುವ ತಾಯಿಯು ಅವನಿಗೆ ಶಾಸ 
ವನ್ನು ಕೋಡುತ್ತಾಳೆಯೆ ? ಇದು ಬಹಳ ಆಶ್ಚರ್ಯವಾದುದು. ಎಲ್ಲಿಯೂ 
ನೋಡಲಿಲ್ಲ. 

೩೫. ನಮ್ಮ ತಾಯಿಯು ನನ್ನೊಡನೆ ಹೇಗೆ ಮಾತನಾಡುತ್ತಿದ್ದಳೊ, ಈ 
ತಾಯಿಯೆಂದು ಹೇಳಿಕೊಳ್ಳುವ ಇವಳು ಹಾಗೆ ಮಾತನಾಡುತ್ತಿಲ್ಲ. ಪುತ್ರರು 
ದುಷ್ಟರಾಗಿದ್ದರೂ ತಾಯಿಯು ಅವರ ವಿಷಯದಲ್ಲಿ ದುಷ್ಟಳಾಗಿರುವುದಿಲ್ಲ. 

೩೬, ಯಮನ ಈ ಮಾತನ್ನು ಕೇಳಿ ಪೂಜ್ಯನಾದ ಸೂರ್ಯನು ಛಾಯಾ 
ಸಂಜ್ಞೆಯನ್ನು ಕರೆದು ಸಂಜ್ಞೆಯು ಎಲ್ಲಿ ಹೋದಳೆಂದು ಪ್ರಶ್ನಿಸಿದನು. 

೩೭. ಅವಳು, ""ನಾಥ! ನಾನು ವಿಶ್ವಕರ್ಮನ ಮಗಳಾದ ಸಂಜ್ಞೆ. 
ನಿನ್ನ ಪತ್ನಿ. ಈ ಮಕ್ಕಳು ನನ್ನಲ್ಲಿ ಜನಿಸಿದವರು.?' 

೩೮-೩೯. ಹೀಗೆಯೇ ಸೂರ್ಯನು ಅನೇಕಬಾರಿ ಅವಳನ್ನು ಕೇಳಿದರೂ 
ಸತ್ಯವನ್ನು ಹೇಳದಿರಲು ಸೂರ್ಯನು ಕೋಪಗೊಂಡು ಅವಳನ್ನು ಶಪಿಸಲುದ್ಯುಕ್ತ 
ನಾದನು. ಆಗ ಅವಳು ಸೂರ್ಯನಿಗೆ ನಿಜವಾದ ವಿಷಯವನ್ನು ಹೇಳಲು 
ಅದನ್ನು ತಿಳಿದು ಅವನು ವಿಶ್ವಕರ್ಮನ ಭವನಕ್ಕೆ ತೆರಳಿದನು. 

೪೦. ಆಗ ವಿಶ್ವಕರ್ಮನು ತೈಲೋಕ್ಯಪೂಜ್ಯನಾದ ಆ ರವಿಯನ್ನು ಅರ್ಚಿಸಿ 
« ಸೂರ್ಯನೆ ! ಪತ್ತೀರಹಿತನಾಗಿ ಯಾವ ಕಾರಣದಿಂದ ನೀನು ಈ ನನ್ನ ಮನೆಗೆ 


ಬಂದಿರುವೆ?” ಎಂದು ಕೇಳಿದನು. 
6 


೧೬೨ ಶ್ರೀ ಸ್ಕಾಂದಮಹಾಪುರಾಣಂ 


ಸಂಜ್ಞಾಂ ಪಪ್ರಚ್ಛ ತಂ ತಸ್ಮೈ ಕಥಯಾಮಾಸ ತತ್ತ್ವನಿತ್‌ । 


ಆಗತಾ ಸೇಹ ಮೇ ನೇಶ್ಮ ಭವತಃ ಪ್ರೇಹಿತಾ ರವೇ ॥ von 
ದಿವಾಕರಃ ಸಮಾಧಿಸ್ಫೋ ವಡವಾರೂಪಧಾರಿಣೀಂ । 

ತಪಶ್ಚರಂತೀಂ ದದೃಶೇ ಉತ್ತರೇಷು ಕುರುಸ್ವಫ ॥ ೪೨ ॥ 
ಅಸಹ್ಯಮಾನಾ ಸೂರ್ಯಸ್ಯ ತೇಜಸ್ತೇನಾತಿಪೀಡಿತಾ । 
ವಹ್ಮ್ಯಾಭನಿಜರೂಪಂ ತು ಛಾಯಾರೂಪಂ ನಿಮುಚ್ಕಚ ॥ ೪೩ ॥ 


ಧರ್ಮಾಃ ರಣ್ಯೇ ಸಮಾಗತ್ಯ ತಪಸ್ತೇಸೇ ಸುದುಷ್ಕರಂ | 
ಛಾಯಾಪುತ್ರಂ ಶನಿಂ ದೃಷ್ಟ್ಯಾ ಯಮಂ ಚಾಂನ್ಯಂ ಚ ಭೂಪತೇ॥ ೪೪ ॥ 
ತದೈನ ವಿಸ್ಮಿತಃ ಸೂರ್ಯೋ ದುಷ್ಟಪುತ್ರೌ ಸವಿಸಾಕ್ಸ್ಯ ಚ । 


ಜ್ಞಾತುಂ ದಧ್ಮೌ ಕ್ಟಣಂ ಧ್ಯಾತ್ಮಾ ನಿದಿತ್ತಾ ತಚ್ಚಕಾರಣಂ ॥ ೪೫ ॥ 
ಫೃಣ್ಳ್ಯೌಷ್ಟ್ಯಾದ್ಜಗೃದೇಹಾ ಸಾ ತಪಸ್ತೇಪೇ ಪತಿವ್ರತಾ । 
ಯೇನ ಮಾಂ ತೇಜಸಾಸಹ್ಯಂ ದ್ರಷ್ಟುಂ ನೈವ ಶಶಾಕ ಹ ॥ ೪೬॥ 


ಪಂಚಾಶದ್ಧಾಯನೇ8ತೀತೇ ಗತ್ಕಾ ಸಾ ತಪ ಆಚರತ್‌ । 

ಪ್ರದ್ಯೋತನೋ ನಿಚಾರ್ಯೆನಂ ಗತ್ವಾ ಶೀಘ್ರಂ ಮನೋಜವಃ ॥ ೪೭ ॥ 
ಧರ್ಮಾಂರಣ್ಯೇ ವರೇ ಪುಣ್ಯೇ ಯತ್ರ ಸಂಜ್ಞಾಸ್ಥಿತಾ ತಪಃ । 

ಆಗತಂ ತಂ ರನಿಂ ದೃಷ್ಟ್ಯಾ ನಡವಾ ಸಮಜಾಯತ ॥ ೪೮ ॥ 
ಸೂರ್ಯಪತ್ನೀ ಸದಾ ಸಂಜ್ಞಾ ಸೂರ್ಯಶ್ವ್ಚಾಶ್ಚಸ್ತತೋ ಭವತ್‌ । 
ತಾಭ್ಯಾಂ ಸಹಾಭೂತ್ಸಂಯೋಗೋ ಘ್ರಾಣೇ ಲಿಂಗಂ ನಿನೇಶ್ಯ ಚ॥ ೪೯ ॥ 

೪೧-೪೨. ರವಿಯು 4 ಸಂಜ್ಞೆಯೆಲ್ಲಿ ? ಎಂದು ಕೇಳಲು ನಿಜವನ್ನರಿತ 
ವಿಶ್ವಕರ್ಮನು, "" ಅವಳು ನನ್ನ ಭವನಕ್ಕೆ ಬಂದಿದ್ದಳು. ನಿನ್ನೆಡೆಗೆ ಕಳುಹಿಸಿರು 
ವೆನು?” ಎಂದು ತಿಳಿಸಿದನು. ಬಳಿಕ ದಿವಾಕರನು ಐಕಾಗ್ರ್ಯದಿಂದ ಚಿಂತಿಸಿ 
ಉತ್ತರ ಕುರುದೇಶದಲ್ಲಿ ಹೆಣ್ಣುಕುದುರೆಯ ರೂಪದಿಂದ ತಪಸ್ಸನ್ನು ಮಾಡುತ್ತಿ, 
ರುವ ಅವಳನ್ನು ಕಂಡನು. 

೪೩-೫೦. ಅವಳು ತನ್ನ ತೇಜಸ್ಸನ್ನು ಸಹಿಸದೆ ಅತ್ಯಂತ ಪೀಡಿತಲಾಗಿ 
ಬೆಂಕಿಯಂತಿರುವ ಛಾಯಾರೂಪವನ್ನು ಬಿಟ್ಟು ಧರ್ಮಾರಣ್ಯಕ್ಕೆ ಬಂದು ಕಠಿನ 
ತಪಸ್ಸನ್ನು ಮಾಡುತ್ತಿರುವ ಸಂಗತಿಯನ್ನು ತಿಳಿದನು. ಛಾಯಾಪುತ್ರನಾದ 
ಶನಿಯೂ, ಯಮನೂ ದುಷ್ಟರಾಗಿರುವುದನ್ನು ಕಂಡು ಸ್ವಲ್ಪಹೊತ್ತು ಧ್ಯಾನಿ? 
ಅದರ ಕಾರಣವನ್ನರಿತನು. ಪತಿವ್ರತೆಯಾದ ಸಂಜ್ಞೆಯು ತನ್ನ ಕಿರಣಗಳ ದಾಹ 
ದಿಂದ ದಗ್ಮಳಾಗಿ ತೇಜಸ್ಸನ್ನು ನೋಡಲಾರದೆ ಐವತ್ತು ವರ್ಷಗಳು ಕಳೆದ 
ತರುವಾಯ ಭೂಮಿಯಲ್ಲಿ ತಪಸ್ಸನ್ನಾಚರಿಸಿದಳೆಂದೂ ಅರಿತು ಧರ್ಮಾರಣ್ಯದಲ್ಲಿ 
ಸಂಜ್ಞೆಯು ತಪಸ್ಸನ್ನು ಮಾಡುತ್ತಿರುವ ಸ್ಥಳಕ್ಕೆ ಬಂದನು. ಆಗ ಸಂಜ್ಞೆಯು 


ಶ್ರಯೋದಶತೋರಧ್ಯ್ಮಾಯಃ ೧೬4 


ತದಾ ತೌ ಚ ಸಮುತ್ಪನ್ನೌ ಯುಗಲಾವಶ್ವಿನೌ ಭುವಿ । 


ಪ್ರಾಮರ್ಭೂತಂ ಜಲಂ ತತ್ರ ದಕ್ಷಿಣೇನ ಖುರೇಣ ಚ n ೫೦ 
ವಿದಲಿತೇ ಭೂಮಿಭಾಗೇ ತತ್ರ ಕುಂಡಂ ಸಮುದ್ಧ ಭೌ । 

ದ್ವಿತೀಯಂ ತು ಪುನಃ ಕುಂಡಾ ಪಶ್ಚಾ ಎರ್ಥಚರಣೋದ್ಭ ವಂ ॥ ೫೧॥ 
ಉತ್ತ ರವಾಹಿನ್ಯಾಃ ಕಾಶ್ಯಾಃ ಕುರುಕ್ಟೇತ್ರಾ ದ್ಮಿವೈ ತಥಾ | 
ಗಂಗಾಪುರೀಸನುಫಲಂ ಕುಂಡೇಂತ್ರ ಮುನಿನೋದಿತಂ ॥ ೫೨ ॥ 
ತತ್ಫಲಂ ಸಮವಾಸ್ನೋತಿ ತಪ್ತ ಕುಂಡೇ ನ ಸಂಶಯಃ। 

ಸ್ದಾ ನಂ ನಿಧಾಯ ತತ್ರೈವ ಸರ್ವಪಾಪೈ ಪ್ರ ಮುಚ್ಯತೇ ॥೫೩॥ 
ನ pS ದೇಹಃ ಕುಷ್ಠಾದಿನ್ಯಾ ಫನೀಡಿತಃ | 

ಏತತ್ತೇ ಕಥಿತಂ ಭೂಪ ದಸ್ರಾಂಶೋತ್ಸತ್ತಿಕಾರಣಂ ॥ ೫೪ ॥ 
ತದಾ ಬ್ರಹ್ಮಾದಯೋ ದೇವಾ ಅಗತಾಸ್ತತ್ರ ಭೂಪತೇ । 

ದತ್ತಾ ಸಂಜ್ಞಾವರಂ ಶುಭ್ರಂ ಚಿಂತಿತಾದಧಿಕಂ ಹಿ ತೈಃ ॥ ೫೫ ॥ 
ಸ್ಥಾಪಯಿತ್ಥಾ ರವಿಂ ತತ್ರ ಬಕುಲಾಖ್ಯವನಾಂಧಿಪಂ | 

ಆನರ್ಚುಸ್ತೇ ತದಾ ಸಂಜ್ಞಾಂ ಪೂರ್ವರೂಪಾಂಭವತ್ತದಾ ॥ ೫೬॥ 


ಬಂದಿರುವ ರವಿಯನ್ನು ಕಂಡು ಹೆಣ್ಣುಕುದುರೆಯಾದಳು. ಸೂರ್ಯನೂ ಗಂಡು 
ಕುದುರೆಯಾದನು. ಅವರಿಗೆ ಲಿಂಗಾಘ್ರಾಣಪೂರ್ವಕವಾಗಿ ಸಂಗಮವಾಯಿತು. 
ಆಗ ಭೂಮಿಯಲ್ಲಿ ಯಮಳರಾದ ಅಶ್ವಿನೀ ದೇವತೆಗಳು ಜನಿಸಿದರು. 

೫೧. ಬಲಗಾಲಿನ ಗೊರಸಿನಿಂದ ನೆಲವನ್ನು ಕೆರೆಯಲು ಒಂದು ಕೊಳವು 
ಉದ್ಭವಿಸಿತು. ಮತ್ತೊಂದು ಕೊಳವು ಹಿಂಗಾಲಿನಿಂದುಂಬಾಯಿತು. 

೫೨-೫೩. ""ಉತ್ತರವಾಹಿನಿಯಾದ ಕಾಶಿಯ ಗಂಗೆ ಮತ್ತು ಕುರುಕ್ಸೇ 
ಗಳಿಗೆ ಸಮವಾದ ಫಲವನ್ನು ಈ ಕುಂಡಗಳು ಕೊಡುವುವು'' ಎಂದು ಸಟ 
ಹೇಳಿರುವರು. ನರನು ಈ ತಪ್ತಕುಂಡದಲ್ಲಿ ಸ್ಥಾ ನಮಾಡಿದರೆ ಸಕಲ ಪಾಪ 
ಮುಕ್ತ ನಾಗಿ ಗಂಗಾದಿ ಸ್ನಾನಫಲವನ್ನು ನಿಶ್ಚ ಜಾಗ: ಪಡೆಯುವನು. 

೫೪, ಕುಷ್ಕಾದಿ ರೋಗಪೀಡಿತವಾದ ಕರೀಕವುಳ್ಳ ಮನುಜನು ಇಲ್ಲಿ ಸ್ನಾನ 
ಮಾಡಿದರೆ ಮುಕ್ತನಾಗುವನು. ಅರಸ! ಹೀಗೆ ನಿನಸೆ ಈ ಅಶ್ವಿನೀ ದೇವತೆಗಳ 

ತ್ರಿಗೆ ಕಾರಣವನ್ನು ತಿಳಿಸಿರುವೆನು. 

೫೫-೫೬. ಆಗ ಬ್ರಹ್ಮಾದಿ ದೇವತೆಗಳು ಅಲ್ಲಿಗೆ ಬಂದು ಸಂಜ್ಞೆಗೆ ಅವಳ 
ಈನ್ಸಿತಕ್ಕೆಂತ ಅಧಿಕವಾದ ವರವನ್ನಿತ್ತು ಸೂರ್ಯನನ್ನು ಬಕುಲವನಕ್ಕೆ ಅಧಿಪತಿ 
ಯನ್ನಾಗಿ ಸ್ಥಾಪಿಸಿ ಸಂಜ್ಞೆಯನ್ನಾರಾಧಿಸಿದರು. ಆಗ ಅವಳು ತನ್ನ ಹಿಂದಿನ 
ರೂಪವನ್ನು ಪಡೆದಳು. 


೬೪ ಶ್ರೀ ಸ್ಕಾಂದನುಹಾಪುರಾಣಂ 


ಸ್ಥಾಪಿತಾ ತತ್ರ ರಾಜ್ಞೀ ಚ ಕುಮಾರೌ ಯುಗಲೌ ತದಾ । 

ಏತತ್ತೀರ್ಥ ಫಲಂ ವಕ್ಸ್ಯೇ ಶೃಣು ರಾಜನ್ಮಹಾಮತೇ ॥ ೫೭ ॥ 
ಆದಿಸ್ಥಾನಂ ಕುರುಶ್ರೇಷ್ಠ ದೇವೈರಪಿ ಸುದುರ್ಲಭಂ | 

ಕನಿಕುಂಡೇ ನರಃ ಸ್ನಾತ್ವಾ ಶ್ರದ್ಧಾಯುಕ್ತೋ ಜಿತೇಂದ್ರಿಯಃ ॥ ೫೮ ॥ 
ತಾರಯೇತ್ಸ ಪಿತ್ಳೂನ್ಸರ್ವಾ ನ್ಮಹಾನರಕಗಾನಸಿ | 

ಶ್ರದ್ಧಯಾ ಯಃ ಪಿಬೇತ್ತೋಯಂ ಸಂತರ್ಷ್ಯ ಸಿತೃದೇವತಾಃ ॥ ೫೯:॥ 
ಸ್ವಲ್ಪಂ ವಾಪಿ ಬಹು ವಾಪಿ ಸರ್ವಂ ಕೋಟಿಗುಣಂ ಭವೇತ್‌ । 
ಸಪ್ತ್ರಮ್ಯಾಂ ರನಿನಾರೇಣ ಗ್ರಹಣಂ ಚಂದ್ರಸೂರ್ಯಯೋಃ ॥೬೦॥ 
ರವಿಕುಂಡೇ ಚ ಯೇ ಸ್ನಾತಾಃ ನ ತೇ ವೈ ಗರ್ಭಗಾಮಿನಃ। 


ಸಂಕ್ರಾಂತೌ ಚ ವ್ಯತೀಪಾತೇ ವೈಧೃತೇಷು ಚ ಪರ್ವಸು ॥೬೧॥ 
ಪೂರ್ಣಮಾಸ್ಕಾಮುಮಾವಾಸ್ಕಾಂ ಚತುರ್ದಶ್ಯಾಂ ಸಿತಾಸಿತೇ। 
ರನಿಕುಂಡೇ ಚ ಯಃ ಸ್ನಾತಃ ಕ್ರತುಕೋಟಫಲಂ ಲಭೇತ್‌ ॥ ೬೨ ॥ 
ಪೂಜಯೇದ್ವಕುಲಾರ್ಕಂ ಚ ಏಕಚಿತ್ತೇನ ಮಾನವಃ । 

ಸ ಯಾತಿ ಪರಮಂ ಧಾಮ ಸ ಯಾವತ್ತಪತೇ ರವಿಃ ॥ ೬೩ ॥ 
ತಸ್ಯ ಲಕ್ಷ್ಮೀಃ ಸ್ಥಿರಾ ನೂನಂ ಲಭತೇ ಸಂತತಿಂ ಸುಖಂ | 

ಅರಿನರ್ಗಃ ಕ್ರಯಂ ಯಾತಿ ಪ್ರಸಾದಾಚ್ಚ ದಿನಸ್ಪತೇಃ ॥ ೬೪ ॥ 


೫೭. ಬ್ರಹ್ಮಾದಿಗಳು ಸಂಜ್ಞೆಯನ್ನೂ, ಅವಳ ಇಬ್ಬರು ಕುಮಾರರನ್ನೂ 
ಅಲ್ಲಿ ಸ್ಥಾಪಿಸಿದರು. ಈ ತೀರ್ಥದ ಫಲವನ್ನು ಹೇಳುವೆನು, ಕೇಳು. 

೫೮-೬೨, ಯುಧಿಷ್ಠಿರ! ನರನು ಜಿತೇಂದ್ರಿಯನಾಗಿ ಶ್ರದ್ಧೆಯಿಂದ 
ದೇವತೆಗಳಿಗೂ ಸುಲಭವಲ್ಲದ ಈ ರವಿಕುಂಡದಲ್ಲಿ ಮಿಂದರೆ ಅವನು ಮಹಾ 
ನರಕವಾಸಿಗಳಾಗಿರುವ ಪಿತೃಗಳನ್ನೂ ಉದ್ಧಾರಮಾಡುವನು. ಯಾವನು ಇಲ್ಲಿ 
ಪಿತೃತರ್ಷಣವನ್ನು ಮಾಡಿ ಸ್ವಲ್ಪ ವಾಗಲಿ, ಅಧಿಕವಾಗಲಿ ನೀರನ್ನು ಪಾನಮಾಡು 
ವನೊ, ಅವನು ಕುಡಿದ ನೀರು ಕೋಟಿಯಷ್ಟು ಹೆಚ್ಚಾಗುವುದು. ಸಪ್ತಮಾ 
ಭಾನುವಾರಗಳಲ್ಲಿಯೂ, ಚಂದ್ರಸೂರ್ಯರ ಗ್ರಹಣಕಾಲಗಳಲ್ಲಿಯೂ ರವಿಕುಂಡ 
ದಲ್ಲಿ ಸ್ನಾನಮಾಡಿದನರು ಮುಕ್ತರಾಗುತ್ತಾರೆ. ಅವರು ತಿರುಗಿ ಗರ್ಭವಾಸಿ 
ಗಳಾಗುವುದಿಲ್ಲ. ಸಂಕ್ರಮಣ, ವ್ಯತೀವಾತ, ವೈಧೃತಿ, ಹುಣ್ಣಿಮೆ, ಅಮಾವಾಸ್ಯೆ, 
ಪರ್ವದಿನಗಳು, ಶುಕ್ಲ ಕೃಷ್ಣಸಕ್ಸಗಳ ಚತುರ್ದಶಿಗಳು ಇವುಗಳಲ್ಲಿ ರವಿಕುಂಡದಲ್ಲಿ 
ಮಿಂದವರು ಕೋಟಯಜ್ಞದ ಫಲವನ್ನು ಪಡೆಯುವರು. 

೬೩. ಬಕುಲಾರ್ಕನನ್ನು ಒಮ್ಮನಸ್ಸಿನಿಂದ ಅರ್ಚಿಸಿದ ಮನುಜನು ಸೂರ್ಯ 
ನಿರುವ ಉತ್ತಮಸ್ಥಾನವನ್ನು ಪಡೆಯುವನು. 

೬೪, ಸೂರ್ಯನ ಅನುಗ್ರಹದಿಂದ ಅವನ ಸಂಪತ್ತು ಸ್ಥಿರವಾಗ ವುದು, 


ತ್ರಯೋದಶೋಧ6ಧ್ಯಾಯಃ ೧೬೫ 


ನಾಃಗ್ನೇರ್ಭಯಂ ಹಿ ತಸ್ಯಸ್ಕಾನ್ನನ್ಯಾಘ್ರಾನ್ನ ಚ ದಂತಿನಃ । 

ನ ಚ ಸರ್ಸಭಯಂ ಕ್ವಾಪಿ ಭೂತಪ್ರೇತಾದಿಭೀರ್ನಹಿ ॥ ೬೫ ॥ 
ಬಾಲಗ್ರಹಾಶ್ಚ ಸರ್ವೇಂಸಿ ರೇವತೀ ವೃದ್ಧರೇವತೀ | 

ತೇ ಸರ್ವೇ ನಾಶಮಾಯಾಂತಿ ಬಕುಲಾರ್ಕ ನಮೋಸ್ತುತೇ 0 ೬೬॥ 
ಗಾವಸ್ತಸ್ಯ ನಿವರ್ಧಂತೇ ಧನಂ ಧಾನ್ಯಂ ತಥೈನ ಚ! 


ಅನಿಚ್ಛೇದೋ ಭನೇದ್ವಂಶೋ ಬಕುಲಾರ್ಕೆೇ ನಮಸ್ಕೃತೇ ॥ ೬೭ ॥ 
ಕಾಕವನ್ಮ್ಯಾ ಚ ಯಾ ನಾರೀ ಅನಪತ್ಯಾ ಮೃತಪ್ರಜಾ । 

ವನ್ಮ್ಯಾ ವಿರೂಪಿತಾ ಚೈವ ನಿಷಕನ್ಯಾಶ ಯಾಃ ಸ್ತಿ ಯಃ ॥ ೬೮ ॥ 
ಏನಂ ದೋಷೈಃ ಪ್ರಮುಚ್ಯಂತೇ ಸ್ನಾತಾ ಕುಂಡೇ ಚ ಭೂಪತೇ | 
ಸೌಭಾಗ್ಯಸ್ತ್ರೀಸುತಾಂಶ್ಟೈವ ರೂಪಂ ಚಾಸ್ನೋತಿ ಸರ್ವಶಃ ॥ ೬೯॥ 
ವ್ಯಾಧಿಗ್ರಸ್ತೋಪಿ ಯೋ ಮರ್ತ್ಯಃ ಷಣ್ಮಾಸಾಚ್ಚೈವ ಮಾನವಃ । 
ರನಿಕುಂಡೇ ಚ ಸುಸ್ನಾತಃ ಸರ್ವರೋಗಾತ್ಸ್ರ ಮುಚ್ಯತೇ ॥೭೦॥ 
ನೀಲೋತ್ಸರ್ಗನಿಧಿಂ ಯಸ್ತು ರವಿಕ್ಸೇತ್ರೇ ಕರೋತಿ ವೈ । 
ಪಿತರಸ್ತೃಪ್ತಿಮಾಯಾಂತಿ ಯಾವದಾಭೂತಸಂಪ್ಲವಂ ॥೭೧॥ 





ಅವನು ಸಂತತಿಯೆನ್ನೂ ಸೌಖ್ಯವನ್ನೂ ಹೊಂದುವನು. ಅವನ ಶತ್ರುಗಳು 
ಕ್ಸಯಿಸುವರು. 

೬೫. ಅವನಿಗೆ ಅಗ್ನಿ, ಹುಲಿ, ಆನೆ, ಸರ್ಪ, ಭೂತಪ್ರೇತಗಳು ಇವುಗಳ 
ಭಯವಿರುವುದಿಲ್ಲ. 

೬೬, ಸಕಲ ಬಾಲಗ್ರಹಗಳ ಮತ್ತು ರೇವತೀ, ವೃದ್ಧರೇವತೀ ಎಂಬ 
ಮಾತೃದೇವತೆಗಳ ತೊಂದರೆಯೂ ತಪ್ಪುವುದು. ಓ ಬಕುಲಾರ್ಕ! ನಿನಗೆ 
ವಂದನೆಯು. ` 

೬೭, ಬಕುಲಾರ್ಕನನ್ನು ನಮಸ್ಕರಿಸಿದವನ ಗೋವುಗಳೂ, ಧನಧಾನ್ಯ 
ಗಳೂ ವೃದ್ಧಿಗೊಳ್ಳು ವುವು. ಸಂತತಿಯು ಅವಿಚ್ಛಿನ್ನವಾಗಿ ಸಾಗುವುದು. 

೬೮-೬೯, ಹುಟ್ಟುಬಂಜೆಯೂ, ಮಕ್ಕಳಿಲ್ಲದವರೂ, ಸಾಯುವ 
ಮಕ್ಕಳುಳ್ಳವರೂ, ಕುರೂಪಿಣಿಯೂ, ವಿಷಕನ್ಯೆಯೂ ಆಗಿರುವ ಹೆಂಗಸು 
ಈ ರವಿಕುಂಡದಲ್ಲಿ ಸ್ನಾನಮಾಡಿದರೆ ದೋಷಮುಕ್ತಳಾಗಿ ಸೌಭಾಗ್ಯವನ್ನೂ, 
ಮಕ್ಕಳನ್ನೂ ಸೌಂದರ್ಯವನ್ನೂ ಪಡೆಯುವಳು. 

೭೦. ರೋಗಿಯಾದ ಮನುಷ್ಯನು ಇಲ್ಲಿ ಸ್ನಾನಮಾಡಿದರೆ ಆರು ತಿಂಗಳಲ್ಲಿ 
ರೋಗಮುಕ್ತನಾಗುವನು. 

೭೧. ಈ ರವಿಕ್ಸೇತ್ರದಲ್ಲಿ ನೀಲವೃಷೋತ್ಸರ್ಗವನ್ನು ಮಾಡಿದರೆ ಅವನ 
ಪಿತೃಗಳು ಪಂಚಭೂತಗಳಿರವವರೆಗೆ ತೃಪ್ತರಾಗುವರು. 


೧೬೬ ಶ್ರೀಸಾ ಿಂಡಮ ಹಾಪುರಾಣಂ 


ಕನ್ಯಾ ದಾನಂ ಚ ಯಃ ಕುರ್ಯಾವಸಿ ನ್ಕೇತ್ರೇ ಚ ಪುತ್ರಕ । 


ಉದಾ ಿಹಪರಿಪೂತಾತ್ಮಾ ಬ್ರಹ್ಮ ಲೋಕೇ ಮಹೀಯತೇ” ॥ ೭೨ ॥ 
ಭೇನುದಾನಂ ಚ ಶಯ್ಯಾ 0 ಚ ಓದ್ರು ಮಂಚ ಹಯಂ ತಥಾ! 

ದಾಸೀ ಮಹಿಷೀ ಘಂಟಾಶ್ಚ ತಿಲಂ ಕಾಂಚನಸಂಯುತಂ ॥ ೭೩ ॥ 
ಧೇನುಂ ತಿಲಮುಂಬಾಂ ದದ್ಯಾ ದಸ್ಮಿನ್ಕೈತ್ರೇ ಚ ಭಾರತ । 

ಉಪಾನಹೌ ಚ ಛತ್ರಂ ಚ ಶೀತತಾ ಣಾದಿಕಂ ತಥಾ ॥ ೭೪ ॥ 
ಲಕ್ಷ್ಮಹೋಮಂ ತಥಾ ರುದ್ರಂ ರುದ್ರಾ $ತಿರುದ್ರಮೇವ ಚ । 

ತಸ: `ನ್ಸ್ಯಾನೇ ಚ ಯತ್ನಿಂಚಿಷ್ಟ ದಾತಿ ತ್ರ ದ ; ಯಾಸ್ವಿ ತಃ ॥ ೭೫ ॥ 
ಏಳ್ಗೆ ಕ್ಸ್‌ ಫಲಂ ತಾತ ನಕ್ಸಾ ತಮಿ ಶೃ ಜು "ತತ್ತ ಎತ | 

ದಾನೇನ" ಲಭತೇ ಭೋಗಾನಿಜಿ ಲೋಕೇ ಸರತ್ತೆ ಚ ॥ ೭೬ ॥ 


ರಾಜ್ಯಂ ಚ ಲಭತೇ ಮರ್ತ್ಯಃ ಕೃತ್ವೋದ್ವಾ ಹಂ": ತು ಮಾನುಷಾಃ । 

ಜಾಯಂತೇ ಧರ್ಮಕಾನಾರ್ಥಾಃ ಪ್ರಾಪ್ನಂತೇ ನಾತ್ರ ಸಂಶಯಃ ॥೭೭॥ 

ಪೂಜಯಾ ಲಭತೇ ಸೌಖ್ಯಂ ಭವೇಜ್ಜನ್ಮನಿ ಜನ್ಮನಿ । 

ಸಸ್ತಮ್ಯಾಂ ರನಿಯುಕ್ತಾಯಾಂ ಬಕುಲಾಂರ್ಕಂ ಸ್ಮರೇತ್ತು ಯಃ ॥ ೭೮ ॥ 

ಜ್ವರಾದೇಃ ಶತ್ರುತಶ್ಚೈವ ವ್ಯಾಧೇಸ್ತಸ್ಯ ಭಯಂ ನಹಿ Wen 
ಯುಧಿಷ್ಠಿರ ಉವಾಚ :- 

ಬಕುಲಾರ್ಕೇತಿ ನೈ ನಾಮ ಕಥಂ ಜಾತಂ ರವೇರ್ಮುನೇ ! 

ಏತನ್ಮೇ ನದತಾಂಶ್ರೇಷ್ಮ ತತ್ವಮಾಖ್ಯಾತುಮರ್ಹಸಿ neon 





೭೨. ವತ್ಸ! ಇಲ್ಲಿ ಕನ್ಯಾದಾನ ಮಾಡಿದವನು ಮದುವೆ ಮಾಡುವುದರಿಂದ 
ಪವಿತ್ರವಾದ ಮನಸ್ಸುಳ್ಳವನಾಗಿ ಬ್ರಹ್ಮಲೋಕದಲ್ಲಿ ಪೂಜ್ಯನಾಗುವನು. 

೭೩-೭೯. ಗೋವು, ಹಾಸಿಗೆ, ಹವಳ, ಕುದುರೆ, ದಾಸಿ, ಎಮ್ಮೆ, ಘಂಟಿ, 
ಚಿನ್ನದೊಡಗೂಡಿದ ಎಳ್ಳು, ನಳ್ಳಿನ ಹಸು, ಪಾದರಕ್ಷೆಗಳು, ಕೊಡೆ, ಕಂಬಳಿ 
ಇವುಗಳನ್ನು ದಾನಮಾಡಬೇಕು. ಲಕ್ಸರುದ್ರ, ಅತಿರುದ್ರ ಹೋಮವನ್ನೂ 
ಮಾಡಬೇಕು. ಈ ಸ್ಥಳದಲ್ಲಿ ಮಾನವನು ಶ್ರದ್ಧೆಯಿಂದ ಮಾಡಿದ ಕರ್ಮದ 
ಫಲವನ್ನು ಹೇಳುವೆನು; ಕೇಳು, ಈ ದಾನದಿಂದ ಇಹಪರಗಳಲ್ಲಿ ಸುಖಭೋಗ 
ಗಳನ್ನು ಪಡೆಯುವನು. ರಾಜ್ಯವನ್ನೂ ಹೊಂದುವನು. ಮದುವೆ ಮಾಡಿಕೊಂಡು 
ಪತ್ನಿಯಿಂದ ಧರ್ಮಕಾಮಾರ್ಥಗಳೆಂಬ ಪುರುಷಾರ್ಥಗಳನ್ನು ಗಳಿಸುವನು. 
ಪೂಜಯ ಜನ್ಮಜನ್ಮಗಳಲ್ಲಿಯೂ ಸೌಖ ವನ್ನು ಪಡೆಯುವನು. ಸಪ್ತಮಿಾ 
ಭಾನುವಾರ ಬಕುಲಾರ್ಕನನ್ನು ನೆನೆದವನಿಗೆ ಜ್ವರದಿಂದಲೂ, ಶತ್ರುಗಳಿಂದಲೂ, 
ಕೋಗಗಳಿಂದಲೂ ಭಯವಿರುವುದಿಲ್ಲ. 

೮೦. ಯುಧಿಷ್ಮರನು ಕೇಳುತ್ತಾನೆ;--ಎಲೈ 'ವ್ಯಾಸಮುನಿಯೆ! ರವಿಗೆ 
ಬಕುಲಾರ್ಕನೆಂಬ ಹೆಸರು ಹೇಗೆ ಬಂದಿತು? ಮಹಾ ವಾಗ್ಮಿಯಾದ ನೀನು 
ಇದನ್ನು ನನಗೆ ಅಪ್ಪಣೆ ಕೊಡಿಸು. 


ತ್ರಯೋದಕೋರಧ್ಯಾಂಃ ೧೬೭ 
ವ್ಯಾಸ ಉವಾಚ:- 

ಯದಾ ಸಂಜ್ಞಾ ಚ ರಾಜೇಂದ್ರ ಸೂರ್ಯಾಂರ್ಥಂ ಚೈಕಚೇತಸಾ। 
ತೇಸೇ ಬಕುಲವೃಕ್ಸಾಂಧಃ ಪತ್ಯುಸ್ತೇಜಃಪ್ರಶಾಂತಯೇ ॥ ೮೧॥ 
ಪ್ರಾ ದುರ್ಭಾವಂ ರನೇರ್ದೃಷ್ಟ್ಟಾ ವಡವಾ ಸಮಜಾಯತ । 
ಅತ್ಯಂತಂ ಗೋಪತಿಃ ಶಾಂತೋ ಬಕುಲಸ್ಯ ಸನಾಪತಃ ॥ ೮೨ । 
ಸುಷುನೇ ಚ ತದಾ ರಾಜ್ಞೀ ಸುತೌ ದಿವ್ಮೌ ನುನೋಹರೌ । 
ತೇನಾಂಸ್ಯ ಪ್ರಥಿತಂ ನಾಮ ಬಕುಲಾರ್ಕೆತಿ ವೈ ರವೇಃ ॥ ೮೩ ॥ 
ಯಸ್ತತ್ರ ಕುರುತೇ ಸ್ನಾನಂ ವ್ಯಾಧಿಸ್ತಸ್ಯ ನ ನೀಡಯೇತ್‌ । 
ಧರ್ಮಮರ್ಥಂ ಚ ಕಾಮಂ ಚ ಲಭತೇ ನಾಂತ್ರ ಸಂಶಯಃ ॥ ೮೪ ॥ 
ಷಣ್ಮಾಸಾತ್ಸಿದ್ಧಿಮಾಪ್ನೋತಿ ನೋಕ್ಸಂ ಚ ಲಭತೇ ನರಃ । 
ಏತದುಕ್ತಂ ಮಹಾರಾಜ ಬಕುಲಾರ್ಕಸ್ಯ ನೈಭವಂ ॥ ೮೫ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ 
" ಬಕುಲಾಂರ್ಕವರಾಹಾತ್ಮ್ಯ ಕಥನಂ'' ನಾಮ ತ್ರಯೋದಶೋಂಧ್ಯಾಯಃ 


೮೧. ವ್ಯಾಸನು ಹೇಳುತ್ತಾನೆ:--ರಾಜೇಂದ್ರ! ಸಂಜ್ಞೆಯು, ಪತಿಯಾದ 
ಸೂರ್ಯನ ತೇಜಸ್ಸಿನ ಶಾಂತಿಗಾಗಿ ಒಮ್ಮನಸ್ಸಿನಿಂದ ಬಕುಲವೃಕ್ಸದ ಕೆಳಗೆ 
ತಪಸ್ಸನ್ನಾಚರಿಸಿದಳು. 

೮೨, ಆಗ ಸೂರ್ಯನು ಅಲ್ಲಿಗೆ ಬರಲು ಅವಳು ಹೆಣ್ಣು ಕುದುರೆಯಾದಳು. 
ಸೂರ್ಯನು ಆ ಬಕುಲವೃಕ್ಸದ ಹತ್ತಿರವೇ ಅತ್ಯಂತ ಸೌಮ್ಯನಾದನು. 

೮೩. ಅವನ ರಾಣಿಯಾದ ಸಂಜ್ಞೆಯು ಅಲ್ಲಿ ಮನೋಹರವಾದ ಇಬ್ಬರು 
ಪುತ್ರರನ್ನು ಸಡೆದಳು. ಆದುದರಿಂದ ಸೂರ್ಯನಿಗೆ ಬಕುಲಾರ್ಕ ಎಂದು ಪ್ರಸಿದ್ಧಿ 
ಬಂದಿತು. 

೮೪. ಅಲ್ಲಿ ಸ್ಥಾನಮಾಡಿದವನಿಗೆ ರೋಗಬಾಧೆಯಿರುವುದಿಲ್ಲ. ಅವನು 
ಧರ್ಮಾರ್ಥಕಾಮಗಳನ್ನೂ ಸಡೆಯುವನು; ಇದರಲ್ಲಿ ಸಂದೇಹವಿಲ್ಲ. 

೮೫. ಮಹಾರಾಜ! ಅವನು ಆರು ತಿಂಗಳೊಳಗೆ ಕಾರ್ಯಸಿದ್ಧಿಯನ್ನು 
ಹೊಂದಿ ಮೋಕ್ಬವನ್ನು ಸಡೆಯುವನು. ಇಂತಹ ಬಕುಲಾರ್ಕನ ವೈಭವವನ್ನು 
ನಿನಗೆ ಹೇಳಿರುತ್ತೇನೆ. 


ಇಲ್ಲಿಗೆ ಎಂಬತ್ತೊಂದು ಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಧರ್ಮಾರಣ್ಯ ಮಾಹಾತ್ಮ್ಮದಲ್ಲಿ 
46 ಬಕುಲಾರ್ಕಮಾಹಾತ್ಮ್ಯಕಥನ ನೆಂಬ ಹದಿಮೂರನೆಯ ಅಧ್ಯಾಯವು ಮುಗಿದುದು 


॥| (84 


ರ 


ಅಥ ಚತುರ್ದತೋಂಧ್ಕಾಯಃ 


ವಿಷ್ಣು ಶಿರೋನಾಶವರ್ಣನಂ 
ಯುಧಿಸ್ಮಿರ ಉನಾಚ:- 
ಕೃಷಾಸಿಂಧೋ ಮಹಾಭಾಗ ಸರ್ವವ್ಯಾಸಿನ್ಸುರೇಶ್ಚರ । 
ಕದಾ ಹ್ಯತ್ರ ತಪಸ್ತಪ್ತಂ ವಿಷ್ಣುನಾಂವಿಂತತೇಜಸಾ non 
ಸೃಂದಾಯ ಕಥಿತಂ ಚೈನ ಶರ್ನೇಣ ಚ ಮಹಾತ್ಮನಾ । 
ಆನುಸಪೂರ್ನೇಣ ತತ್ಸರ್ವಂ ಕಥಯಸ್ವ ತ್ವಮೇವ ಹಿ ॥ ೨॥ 


ವ್ಯಾಸ ಉವಾಚ :-- 

ಶೃಣು ವತ್ಸ ಪ್ರನಕ್ಟ್ರ್ಯಾನಿ ಧರ್ಮಾಂರಣ್ಯೇ ನೃಪೋತ್ತಮ | 

ಏಕದಾಂತ್ರ ತಪಸ್ತಪ್ತಂ ವಿಷ್ಣುನಾಂಮಿತ ತೇಜಸಾ nan 
ಸ್ಕಂದ ಉವಾಚ: 

ಕಥಂ ದೇವಸರೋ ನಾಮ ಪಂಪಾ ಚಂಪಾ ಗಯಾ ತಥಾ | 

ವಾರಾಣಸ್ಯಧಿಕಾ ಚೈವ ಕಥಮಶ್ವಮು ಖೋ ಹರಿಃ NT 
ಈಶ್ವರ ಉವಾಚ :-- 

ಅತ್ರ ನಾರಾಯಣೋ ದೇವಸ್ತಪಸ್ತೇಹೇ ಸುದುಷ್ಕರಂ । 

ದಿವ್ಯವರ್ಷಶತಂ ತ್ರೀಣಿ ಜಾತಃ ಸುಷ್ಟ್ಯಾನನಶ್ತ ಸಃ ೫ 





ಕನ್ನಡದ ಅನುವಾದ 
ನಿಷ್ಣುಶಿರೋನಾಶವರ್ಣನ 

೧. ಯುಧಿಷ್ಠಿರನು ಕೇಳುತ್ತಾನೆ :-ದಯಾಸಮುದ್ರನೂ, ಸರ್ವವ್ಯಾಪಿಯೂ 
ಆಗಿರುವ ವ್ಯಾಸನೇ 1 ಅಪರಿಮಿತವಾದ ತೇಜಸ್ಸುಳ್ಳ ವಿಷ್ಣುವು ಇಲ್ಲಿ ಯಾವಾಗ 
ತಪಸ್ಸನ್ನು ಮಾಡಿದನು? 

೨. ಮಹಾತ್ಮನಾದ ಶಂಕರನು ಸ್ವಂದನಿಗೆ ಹೇಳಿರುವುದನ್ನೆಲ್ಲ ನೀನು ನನಗೆ 
ಹೇಳು. 

೩-೪, ವ್ಯಾಸನು ಹೇಳುತ್ತಾನೆ: ಮಗು! ಹೇಳುವೆನು ಕೇಳು. ಒಂದಾ 
ನೊಂದು ಸಮಯದಲ್ಲಿ ಅತ್ಯಂತ ತೇಜಸ್ವಿಯಾದ ಶ್ರೀವಿಷ್ಣುವು ಇಲ್ಲಿ ತಪಸ್ಸನ್ನು 
ಮಾಡಿದನು. ಸ್ಕಂದನು ಕೇಳುತ್ತಾನೆ: ಡೇವಸರೋವರವು ಪಂಪೆ, ಚಂಪೆ, 
ಗಯೆ, ಕಾಶಿಗಳಿಗಿಂತಲೂ ಹೇಗೆ ಶ್ರೇಷ್ಠವಾಯಿತು? ವಿಷ್ಣುವು ಹೇಗೆ ಅಶ್ವ 
ಮುಖನಾದನು. 

೫. ಈಶ್ವರನು ಹೇಳುತ್ತಾನೆ: ಇಲ್ಲಿ ಶ್ರೀಮನ್ನಾರಾಯಣನು ಮುನ್ನೂರು 
ವರ್ಷಗಳಕಾಲ ಘೋರತಪಸ್ಸನ್ನಾಚರಿಸಿದನು. ಅದರಿಂದ ಆತನು ಸುಂದರ 
ಮುಖವುಳ್ಳವನಾದನು. 


ಚತುರ್ದಶೋರಧ್ಯಾಯಃ ೧೬೯ 


ತಪಸ್ತೇಸೇ ಮಹಾನಿಷ್ಣುಃ ಸುರೂಪಾರ್ಥಂ ಚ ಪುತ್ರಕ । 


ವಾಜಿಮುಖೋ ಹರಿಸ್ತತ್ರ ಸಿದ್ಧಸ್ಥಾನೇ ಮಹಾದ್ಯುತೇ 1೬॥ 
ಸಂದ ಉವಾಚ: 

ಕಾರಣಂ ಬ್ರೂಹಿ ಮೇಂದೃತ್ತ ಮಶ್ಚಾನನಃ ಕಥಂ ಹರಿಃ । 

ಮಹಾರಿಪೋಶ್ಚ ಹಂತಾ ಚ ದೇನದೇವೋ ಜಗತ್ಪತಿಃ ॥೭॥ 


ಯಸ್ಕ ನಾಮ್ನಾ ಮಹಾಭಾಗ ಪಾತಕಾನಿ ಬಹೂನ್ಯಖಿ । 
ನಿಲೀಯಂತೇ ತು ವೇಗೇನ ತಮಃ ಸೂರ್ಯೋದಯೇ ಯಥಾ ॥೮॥ 
ಶ್ರೂಯಂತೇ ಯಸ್ಯ ಕರ್ಮಾಣಿ ಅದ್ಭುತಾನ್ಯದ್ಭುತಾನಿ ವೈ । 


ಸರ್ವೇಷಾಮೇವ ಜೀವಾನಇಣಂ ಕಾರಣಂ ಪರಮೇಶ್ವರಃ Hen 
ಪ್ರಾಣರೂಹೇಣ ಯೋ ದೇವೋ ಹಯರೂಪಃ ಕಥಂ ಭವೇತ್‌ । 
ಸರ್ವೇಷಾಮಪಿ ತಂತ್ರಾಣಾನೇಕರೂಪಃ ಪ್ರಕೀರ್ತಿತಃ ॥ ೧೦॥ 


ಭಕ್ತಿಗನ್ಕೋ ಧರ್ಮಭಾಜಾಂ ಸುಖರೂಪಃ ಸದಾ ಶುಚಿಃ । 
ಗುಣಾಂತೀತೋಪಿ ನಿತ್ಯೋಸೌ ಸರ್ವಗೋ ನಿರ್ಗುಣಸ್ತಥಾ ॥ ೧೧॥ 
ಸ್ಪಷ್ಟಾಂಸೌ ಪಾಲಕೋ ಹಂತಾ ಅವ್ಯಕ್ತಃ ಸರ್ವದೇಹಿನಾಂ । 
ಅನುಕೂಲೋ ಮಹಾತೇಜಾಃ ಕಸ್ಮಾದಶ್ಚಮುಖೋಂಭವತ್‌ ॥೧೨॥ 





೬. ಸಿದ್ದಿಸ್ಮಾನವಾದ ಆ ಧರ್ಮಾರಣ್ಯದಲ್ಲಿ ಅಶ್ವಮುಖನಾದ ವಿಷ್ಣುವು 
ಸುಂದರರೂಸವನ್ನು ಪಡೆಯಲೋಸುಗ ತಪಸ್ಸನ್ನು ಮಾಡಿದನು. 

೭. ಸ್ಫಂದನು ಕೇಳುತ್ತಾನೆ: ತಂದೆಯೆ! ಮಹಾ ವೈರಿಗಳನ್ನು ಸಂಹರಿಸು 
ವವನಾಗಿ ದೇವತೆಗಳಿಗೆಲ್ಲ ಒಡೆಯನಾದ ಆ ವಿಷ್ಣುವು ಅಶ್ವಮುಖನಾಗಲು 
ಕಾರಣವೇನು? ಹೇಳು. 

೮. ಎಲ್ಫೈ ಮಹಾಭಾಗ್ಯಶಾಲಿಯೆ ! ನಿಷ್ಣುವಿನ ಹೆಸರನ್ನು ಹೇಳುವುದ 
ರಿಂದ ಪಾಸಸ್ತೋಮಗಳು ಸೂರ್ಯೋದಯವಾದಾಗ ಕತ್ತಲೆಯು ಎಂತೋ 
ಅಂತು ನಾಶವಾಗುವುವು. 

೯-೧೨. ಸಕಲಜೀವಗಳಿಗೂ ಪ್ರಾಣರೂಪದಿಂದ ಕಾರಣನಾದ ಆ ವಿಷ್ಣು 
ವಿನ ಕಾರ್ಯಗಳು ಅತ್ಯಾಶ್ಚರ್ಯಕರವಾದುವುಗಳೆಂದು ಕೇಳಿದ್ದೇನೆ. ಸಕಲ 
ಸಿದ್ಧಾಂತಗಳಲ್ಲಿಯೂ ಏಕರೂಪನಾಗಿ ಪ್ರತಿಪಾದ್ಯನಾಗಿರುವ ಅವನು ಹಯರೂಪ 
ನಾದುದೆಂತು? ಈ ವಿಷ್ಣುವು ಧರ್ನಿಷ್ಮರಿಗೆ ಭಕ್ತಿಯಿಂದ ಮಾತ್ರನೇ ಹೊಂದಲು 
ಯೋಗ್ಯನೂ, ಸುಖಸ್ತರೂಪನೂ, ಯಾವಾಗಲೂ ಶುದ್ಧನೂ, ಸತ್ವರಜಸ್ತಮೋ 
ಗುಣಗಳಿಂದ ಬಾಹ್ಯೈನಾದಾಗ್ಗೂ ನಿತ್ಯನೂ, ಸರ್ವವ್ಯಾಪಿಯ್ಕೂ ನಿರ್ಗುಣನೂ 
ಆಗಿರುವನು. ಸೃಷ್ಠಿಸಿ ತಿಸಂಹಾರಕರ್ತೃವೂ, ಅಪ್ರ ತ್ಯಕ್ಟ » ಸಕಲ ಪ್ರಾಣಿಗಳಿಗೆ 
ಅನುಕೂಲನೂ, ಅತಿ ತೇಜಸ್ವಿಯೂ ಆಗಿರುವ ಇವನು ಅಶ್ವಮುಖನಾದು 
ದೆಂತು? 


೫: 


ವಿ೭೦ ಶ್ರೀ ಸ್ಕಾಂದಮಹಾಪುರಾಣಂ 


ಯಸ್ಯ ರೋಮೋದ್ಭನಾ ದೇವಾ ವೃಕ್ಲಾದ್ಯಾಃ ಪನ್ನಗಾ ನಗಾಃ । 

ಕಲ್ಪೇ ಕಲ್ಪೇ ಜಗತ್ಸರ್ವಂ ಜಾಯತೇ ಯಸ್ಯ ದೇಹತಃ ॥ ೧೩ ॥ 
ಸ ಏವ ನಿಶ್ಚಪ್ರಭವಃ ಸ ಏವಾಂತ್ಯಂತಕಾರಣಂ | 

ಯೇನಾಂನೀತಾಃ ಪುನರ್ನಿದ್ಯಾ ಯಜ್ಞಾ ಶ್ಚ ಪ್ರಲಯಂಗತಾಃ ॥ ೧೪ ॥ 
ಘಾತಿತೋ ದುಷ್ಟ ದೈತ್ಯೋಂಸೌ ವೇದಾರ್ಥಂ ಕೃತ ಉದ್ಯಮಃ । 


ಏವಮಾಸೀನ್ಮ ಹಾನಿಷ್ಣು ೩ ಕಥಮಶ್ಚ ಮುಖೋಜಭವತ್‌ ॥ ೧೫ ॥ 
ರತ್ನಗರ್ಭಾ ಧೃತಾ ಯೇನ ಪೃಷ್ಠ ದೇಶೇ ಚ ಲೀಲಯಾ । 

ಕೃತ್ವಾ ವ್ಯ ವಸ್ತಿ ತಂ ಸರ್ವಂ ಜಗತ್ಕಾ ಎವರಜಂಗಮಂ ॥ ೧೬ ॥ 
ಸ ದೇವೋ ನಿಶ ಶರೂಪೋ ವೈ ಕತಿ” ವಾಜಿಮುಖೋಂಭನತ್‌ । 
ಹರಣ್ಯಾಕ್ಸು ಸ್ಯ ಹಂ ಚೀ ರೂಪಂ ಕೃತ್ವಾ ವರಾಹಜಂ ॥ ೧೭॥ 
ಸುಪವಿತ್ತಂ ಜಾ [ಜಃ ಪ್ರನಿಶ್ಯ ಜಗ | 

ಉದ್ಭೃ ತಾ ಚ ನಹೀ ಸರ್ವಾ ಸಸಾಗರಮಹೀಧರಾ ॥ ೧೮॥ 
ಉದ್ಭ ತೌ ಚೆ ಮಹೀ ನೂನಂ ದಂಷ್ಟ್ರಾಗ್ರೆ ೀಯೇನ ಲೀಲಯಾ । 

ಕ್ಟ ತ್ತಾ ಸಾ ವರಾಹಂ ಚ ಕಪಿಲಂ ಶೋಕನಾಶನಂ HOF 


ಸ ದೇವಃ ಕಥಮಿಾಶಾನೋ ಹಯಗ್ರೀನತ್ವಮಾಗತಃ । 
ಪ್ರಹ್ಲಾದಾರ್ಥೆೇ ಸ ಜೇಶಾನೋ ಗೂ ಕೃತ್ವಾ ಭಯಾವಹಂ ॥ ೨೦ 





೧೩. ಇವನ ರೋಮಗಳಿಂದ ದೇವತೆಗಳೂ, ವೃಕ್ಸ ಮೊದಲಾದವುಗಳೂ, 
ಹಾವುಗಳೂ, ಪರ್ವತಗಳೂ ಉದ್ಭವಿಸಿದುವು. ಇವನ ಶರೀರದಿಂದ ಸ ಕ್ರತಿ ಕಲ್ಪ 
ದಲ್ಲಿಯೂ ಸಕಲ ಪ್ರಪಂಚಗಳೂ "ಹುಟು ವವು, 

೧೪-೧೫. ಇವನೇ ಸಕಲಕ್ಕೂ ಉತ್ಪ ತ್ರಿಕಾರಣನು. ಇವನೇ ನಾಶ 
ಕಾರಣನು. ಇವನು ವಿದ್ಯೆಗಳನ್ನೂ , ಯಜ್ಞ ಗಳನ್ನೂ ಕೆಡಿಸಿದ ದುಷ್ಟದೈತ್ಯರನ್ನು 
ಕೊಂದು ವೇದೋದ್ದಾರಕ್ಕಾಗಿ ಬಹೆಳ ಪ್ರಯತ್ತಿಸಿರುತ್ತಾನೆ. ಇಂತಹ ನಿಷ್ಣುವು 
ಹೆಯಗ್ರೀವನಾದುದು ಹೇಗೆ? 

೧೬-೨೭. ಇನನು ಬೆನ್ನಿನಿಂದ ಭೂಮಿಯನ್ನು ಅನಾಯಾಸವಾಗಿ 
ಹೊತ್ತಿರುವನು. ಸ್ಥಾವರ ಜಂಗಮಾತ್ಮಕವಾದ ಪ್ರಪಂಚವನ್ನೆಲ್ಲ ತನ್ನ ಕಾರ್ಯ 
ದಿಂದ ವ್ಯವಸ್ಥೆಗೊಳಿಸಿರುವನು. ವಿಶ್ವರೂಪಿಯಾದ ಇಂತಹ ವಿಷ್ಣುವು ಹೇಗೆ ಅಶ್ವ 
ಮುಖನಾದನು? ಪವಿತ್ರವಾದ ವರಾಹರೂಪವನ್ನು ಧರಿಸಿ ಜಲಧಿಯನ್ನು ಹೊಕ್ಕು 
ಹಿರಣ್ಯಾಕ್ಸನನ್ನು ಸದೆಬಡಿದು ಸಮುದ್ರಗಳಿಂದಲೂ ಬೆಟ್ಟಿಗಳಿಂದಲೂ ಸಹಿತವಾದ 
ಭೂಮಿಯನ್ನು ಕೋರೆದಾಡೆಯಿಂದ ಅನಾಯಾಸವಾಗಿ ಎತ್ತಿರುವ ಈ ವಿಷ್ಣುವು 
ಹಯಗ್ರೀವನಾದುದು ಹೇಗೆ? ಇವನು ಪ್ರಹ್ಲಾದನಿಗಾಗಿ ಸಕಲ ದುಷ್ಟನಾಶಕ 
ಪಾದ ಭಯಂಕರ ನಾರಸಿಂಹರೂಪನನ್ನು ತಾಳಿ ಸಂಧ್ಯಾಕಾಲದಲ್ಲಿ, ದಾಷ್ಟ್ರನಾದ 


ಚತು ರ್ಪಶೋ9ಧ್ಯಾಯಃ ೧೭೧ 


ನಾರಸಿಂಹಂ ಮಹಾದೇವಂ ಸರ್ವದುಷ್ಟನಿನಾರಣಃ | 


ಪರ್ವತಾಂಗ್ನಿಸಮುದ್ರಸ್ಥಂ ರರಕ್ಪ ಭಕ್ತಸತ್ತಮಂ ॥೨೧॥ 
ಹಿರಣ್ಯಕಶಿಪುಂ ದುಸ್ಬಂ ಜಘಾನ ರಜನೀಮುಖೇ । 

ಇಂದ್ರಾಸನೇ ಚ ಸಂಸ್ಥಾಪ್ಯ ಪ್ರಹ್ಲಾದಸ್ಯ ಸುಖಪ್ರದಂ ॥ ೨೨॥ 
ಪ್ರಹ್ಲಾದಾರ್ಥೀ ಚ ವೈ ನೂನಂ ನೃಸಿಂಹತ್ವಮುಪಾಗತಃ । 
ನಿರೋಚನಸುತಸ್ಯಾಗ್ರೆೇ ಯಾಚಕೋಂಸೌ ಭವೇತ್ತದಾ ॥ ೨೩ ॥ 
ಯಜ್ಞೇ ಚೈವಾಶ್ವಮೇಥಧೇ ನೈ ಬಲಿನಾ ಯಃ ಸಮರ್ಚಿತಃ । 

ಹೃತಾ ವಸುಮತೀ ತಸ್ಯ ತ್ರಿಪದೀ ಕೃತರೋದಸೀ ॥ ೨೪ ॥ 
ನಿಶ್ಚರೂಸೇಣ ವೈ ಯೇನ ಪಾತಾಳೇ ಕ್ಸಪಿತೋ ಬಲಿಃ । 

ತ್ರಿಃ&ಸಪ್ತವಾರಂ ಯೇನೈನ ಕ್ಸತ್ರಿಯಾಸನನೀತಲೇ ॥ ೨೫ ॥ 
ಹತ್ವಾ: ದದಾಚ್ಚ ನಿಪ್ರೇಭ್ಕೋ ಮಹೀಮತಿಮುಹೌಜಸಾ । 

ಘಾತಿತೋ ಹೈಹಯೋ ರಾಜಾ ಯೇನೈನ ಜನನೀ ಹತಾ ॥ ೨೬॥ 
ಯೇನ ವೈ ಶಿಶುನೋರ್ವ್ಯಾಂ ಹಿ ಘಾತಿತಾ ದುಷ್ಟಚಾರಿಣೀ | 

ರಾಕ್ಬಸೀ ತಾಟಿಕಾ ನಾಮಾ ಕೌಶಿಕಸ್ಯ ಪ್ರಸಾದತಃ 1 ೨೭ 
ವಿಶ್ವಾಮಿತ್ರಸ್ಯ ಯಜ್ಞೇ ತು ಯೇನ ಲೀಲಾನೃದೇಹಿನಾ । 
ಚತುರ್ದಶಸಹಸ್ರಾಣಿ ಘಾತಿತಾ ರಾಕ್ಚಸಾ ಬಲಾತ್‌ ॥ ೨೮ ॥ 
ಹತಾ ಶೂರ್ಪಣಖಾ ಯೇನ ತ್ರಿಶಿರಾಶ್ಚ ನಿಪಾತಿತಃ । 

ಸುಗ್ರೀನಂ ವಾಲಿನಂ ಹತ್ವಾ ಸುಗ್ರೀನೇಣ ಸಹಾಯವಾನ್‌ ॥ ೨೯॥ 





ಹಿರಣ್ಯಕಶಿಪುವನ್ನು ವಧಿಸಿ ಪರ್ವತ, ಅಗ್ನಿ, ಸಮುದ್ರಗಳಲ್ಲಿದ್ದ ಪ್ರಹ್ಲಾದನನ್ನು 
ಸಲಹಿ ಅವನನ್ನು ಇಂದ್ರಾಸನಕ್ಕೇರಿಸಿರುವನು. ಅಶ್ವಮೇಧಯಾಗದಲ್ಲಿ 
ವಿರೋಚನನ ಮಗನಾದ ಬಲಿಯಿಂದ ಪೂಜಿತನಾಗಿ ಅವನನ್ನು ಮೂರಡಿ 
ಭೂಮಿಯನ್ನು ಯಾಚಿಸಿ ತ್ರಿವಿಕ್ರಮರೂಸದಿಂದ ಸಕಲ ಭೂಮಿಯನ್ನು 
ಅಪಹರಿಸಿ ಪಾತಾಳಕ್ಕೆ ತಳ್ಳಿರುವನು. ಇಪ್ಪತ್ತೊಂದುಬಾರಿ ಭೂಮಿಯಲ್ಲಿರುವ 
ದುಷ್ಟಕ್ಸತ್ರಿಯರನ್ನು ಕೊಂದು ಬ್ರಾಹ್ಮಣರಿಗೆ ಆ ಕ್ಪತ್ರಿಯರ ಭೂಮಿಯನ್ನು 
ದಾನಮಾಡಿರುವನು. ಕಾರ್ತನೀರ್ಯನನ್ನೂ, ತಾಯಿಯಾದ ರೇಣುಕಾಡೇವಿ 
ಯನ್ನೂ ಕೊಂದಿರುವನು. ಬಾಲಕನಾಗಿರುವಾಗಲೆ ವಿಶ್ವಾಮಿತ್ರರ ಅನುಗ್ರಹ 
ದಿಂದ ದುರ್ನಡತೆಯುಳ್ಳ ತಾಟಕೆಯೆಂಬ ರಾಕ್ಸಸಿಯನ್ನು ಸಂಹರಿಸಿರುವನು. 

೨೮. ವಿಶ್ವಾಮಿತ್ರರ ಯಾಗದಲ್ಲಿ ರಾಘವನೆಂಬ ಲೀಲಾಮಾನುಷದೇಹ 
ದಿಂದ ಹದಿನಾಲ್ಕುಸಾವಿರ ರಕ್ಕಸರನ್ನು ಕೊಂದಿರುವನು. 

೨೯-೩೧. ಶೂರ್ಪಣಖಿಯನ್ನು ವಿರೂಪಳನ್ನಾಗಿ ಮಾಡಿರುವನು. ತ್ರಿಶಿರ 
ನನ್ನು ಸಂಹರಿಸಿರುವನು. ಮನೋಹರವಾದ ಕುತ್ತಿಗೆಯುಳ್ಳ ವಾಲಿಯನು 


೧೭೨ ಶ್ರೀ ಸ್ಕಾಂದಮಹಾಪುರಾಣಂ 


ಕೃತ್ವಾ ಸೇತುಂ ಸಮುದ್ರಸ್ಯ ರಣೇ ಹತ್ವಾ ದಶಾನನಂ | 


ಧರ್ಮಾಃರಣ್ಯಂ ಸಮಾಸಾದ್ಯ ಬ್ರಾಹ್ಮಣಾನನ್ನಪೂಜಯತ್‌ ॥ ೩೦॥ 
ಶಾಸನಂ ದ್ವಿಜನರ್ಯೇಭ್ಯೋ ದತ್ಕಾ ಗ್ರಾಮಾನ್ಪಹೂಂಸ್ತಥಾ । 

ಸ್ನಾತ್ವಾ ಚೈನ ಧರ್ಮವಾಷ್ಯಾಂ ಸುದಾನಾನ್ಯದದಾದ್ದವನಾಂ ॥೩೧॥ 
ಸಾಧೂನಾಂ ಪಾಲನಂ ಕೃತ್ವಾ ನಿಗ್ರಹಾಯ ದುರಾತ್ಮನಾಂ । 
ಏನಮನ್ಯಾನಿ ಕರ್ಮಾಣಿ ಶ್ರುತಾನಿ ಚ ಧರಾತಲೇ" ೩&೨ 
ಸ ದೇವೋ ಲೀಲಯಾ ಕೃತ್ವಾ ಕಥಂ ಚಾ ಶ್ವಮುಖೋಭವತ್‌ । 

ಯೋ ಜಾತೋ ಯಾದನೇ ನಂಶೇ ಪೂತನಾಶಕಬಾದಿಕಂ ॥ ೩೩॥ 
ಅರಿಷ್ಟದೈತ್ಯಃ ಕೇಶೀ ಚ ವೃಕಾಂಸುರಬಕಾಂಸುರೌ । 

ಶಕಟಾಸುರೋ ಮಹಾಂಸುರಸ್ತೃಣಾವರ್ತಶ್ಚ ಧೇನುಕಃ ॥ ೩೪॥ 


ಮಲ್ಲಕ್ಷೈವ ತಥಾ ಕಂಸೋ ಜರಾಸಂಧಸ್ತಥೈನ ಚ। 

ಕಾಲಯನನಸ್ಯ ಹಂತಾ ಚ ಕಥಂ ವೈ ಸ ಹಯಾನನಃ । 

ತಾರಕಾಂಸುರಂ ರಣೇ ಜಿತ್ತಾಯುತಷಟ್ಟುರಂ ತಥಾ ॥೩೫॥ 
ಕನ್ಯಾಶ್ಹೋದ್ಧಾಹಿನಾ ಯೇನ ಸಹಸ್ರಾಣಿ ಚ ಷಟ್‌ ದಶ । 

ಅಮಾನುಷಾಣಿ ಕೃತ್ವೇತ್ಮಂ ಕಥಂ ಸೋಂಶ್ಚಮುಖೋಂಭವತ್‌ ॥ ೩೬॥ 
ತ್ರಾತಾ ಯಃ ಸರ್ವಭಕ್ತಾನಾಂ ಹಂತಾ ಸರ್ವದುರಾತ್ಮನಾಂ । 


೨ 
ಧರ್ಮಸ್ಥಾಪನಕೃತ್ಸೋಪಿ ಕಲ್ಕಿರ್ನಿಷ್ಟುಪದೇ ಸ್ಥಿತಃ ॥೩೭॥ 


ಕೊಂದು ಅವನ ಅನುಜನಾದ ಸುಗ್ರೀವನ ಸಹಾಯದಿಂದ ಸಮುದ್ರದಲ್ಲಿ ಸೇತುವೆ 
ಯನ್ನು ಕಟ್ಟ ಯುದ್ಧದಲ್ಲಿ ದಶಕಂಠನನ್ನು ವಧಿಸಿ ಧರ್ಮಾರಣ್ಯಕ್ಕೆ ಬಂದು 
ದ್ವಿಜರನ್ನು ಪೂಜಿಸಿರುವನು. ಧರ್ಮವಾನಿಯಲ್ಲಿ ಮಿಂದು ಬ್ರಾಹ್ಮಣರಿಗೆ ಬಹು 
ಗ್ರಾಮಗಳನ್ನು ಕೊಟ್ಟು ಗೋದಾನಗಳನ್ನು ಮಾಡಿರುವನು. 

೩೨. ದುಷ್ಟಶಿಕ್ಸೆ ಶಿಷ್ಟಪರಿಪಾಲನೆಗಾಗಿ ಹೀಗೆಯೇ ಅನೇಕ ಕಾರ್ಯ 
ಗಳನ್ನು ಭೂಮಿಯಲ್ಲಿ ಮಾಡಿರುವನೆಂದೂ ಕೇಳಿದ್ದೇನೆ. 

೩೩-೩೬. ಅಂತಹ ಮಹಾಪ್ರಭುವು ಅಶ್ವಮುಖನಾದುದೆಂತು? ಯಾದವ 
ಕುಲದಲ್ಲಿ ಅವತರಿಸಿ ಪೂತನೆ, ಶಕಟಾಶುರ, ಮಲ್ಲ, ಕಂಸ, ಜರಾಸಂಧ, 
ಕಾಲಯವನ ಇವರನ್ನು ಕೊಂದಿರುವ ಈ ನಿಷ್ಣುವು ಹೇಗೆ ಹಯವದನನಾದನು? 
ತಾರಕಾಸುರನನ್ನೂ, ಅವನ ಅರುವತ್ತು, ಸಾವಿರ ಪಟ್ಟಣಗಳನ್ನೂ ಗೆದ್ದು ಹದಿನಾರು 
ಸಾವಿರ ಕನ್ಯೆಯರನ್ನು ವಿವಾಹಮಾಡಿಕೊಂಡಿರುವನು. ಹೀಗೆ ಅಮಾನುಷ 
ಕಾರ್ಯಗಳನ್ನು ವತಾಡಿದ ಈ ವಿಷ್ಣುವು ಹೇಗೆ ಅಶ್ವಮುಖನಾದನು? 

೩೭. ವಿಷ್ಣುವು ಕಲ್ಫಿರೂಪಿಯಾಗಿ ಸಕಲಭಕ್ತರನ್ನು ರಕ್ಸಿಸುವವನೂ, 
ದುಷ್ಟನಾಶಕನೂ, ಧರ್ಮವನ್ನು ಸ್ಥಾನಿಸುವನನೂ ಆಗಿರುವನು. 


: ಚತುರ್ದಶೋತಧ್ಯಾಯ॥ ೧೭ಕ್ಕಿ 


ಏತದ್ವೈ ಮಹದಾಶ್ಚರ್ಯಂ ಭವತಾ ಯತ್ಛ್ರಕಾಶಿತಂ । 


Re ಮೇ ಸರ್ವಂ ಕಾರಣಂ ತಿ ಪುರಾಂಂತಕ ॥೩೮॥ 
ಶ್ರೀರುದ್ಧ. ಬಾವಾಜಿ :- 

ಸಾಧು ಪೃಷ್ಠ ಷ್ಟಂ ಮಹಾಬಾಹೋ ಕಾರಣಂ ತಸ್ಯ ವಚ ಹ್ಯಹಂ | 

ಹಯಗ್ರಿ (ನಸ್ಯ ಕೃ ಷ್ಠ ಸ್ಯ ಶೃಣುಷಸ್ಟೈಕಾಗ್ರ ಮಾನಸಃ ॥೩೯॥ 
ವ್ಯಾ ನ KE — 

ಬಾ ದೇವೈಃ ಸಮಾರಬ್ಲೋ ಯಜ್ಞೋ ನೂನಂ ಧರಾತಲೇ । 

ವೇದಮಂತ್ರೆರಾಹ್ಹಯಿತುಂ ಸರ್ವೇ ರುದ್ರ ಪುರೋಗಮಾಃ ॥೪೦॥ 

ವೈಕುಂಠೇ ಚ ಗತಾಃ ಸರ್ವೇ ಕ್ಸೀರಾಜ್ಛೌ ಚ ನಿಜಾಲಯೇ!। 

ಪಾತಾಲೇಹಿ ಪುನರ್ಗತ್ವಾ ನ ವಿದುಃ ಕೃಷ್ಣದರ್ಶನಂ ॥೪೧॥ 

ಮೋಹಾವಿಷ್ಟಾಸ್ತತಃ ಸರ್ವೇ ಇತಶ್ಚೇತಶ್ಚ ಧಾವಿತಾಃ । 

ಸೈನ ದೃಷ್ಟಸ್ತದಾ ತೈಸ್ತು ಬ್ರಹ್ಮರೂಪೋ ಜನಾರ್ದನಃ ॥ ೪೨ ॥ 


ವಿಚಾರಯಂತಿ ತೇ ಸರ್ವೇ ದೇನಾ ಇಂದ್ರ ಪುರೋಗಮಾಃ । 
ಕ್ಷ ಗತೋಂಸೌ ಮಹಾವಿಷ್ಣುಃ ಕೇನೋಷಾಯೇನ ದೃಶ್ಯತೇ ॥ ೪೩॥ 
ಪ್ರಣಮ್ಯ ಶಿರಸಾ ದೇವಂ ವಾಗೀಶಂ ಪ್ರೋಚುರಾದರಾತ್‌ । 
ದೇವ ದೇನ ಮಹಾವಿಷ್ಣುಂ ಕಥಯಸ್ವ ಪ್ರಸಾದತಃ ॥ ೪೪ ॥ 

೩೮. ನೀನು ಹೇಳಿದ ವಿಷಯವು ನನಗೆ ಬಹಳ ಆಶ್ಚರ್ಯವನ್ನುಂಟು 
ಮಾಡಿದೆ. ಓ ತ್ರಿಪುರಾಂತಕ! ಇದರ ಕಾರಣವನ್ನು ತಿಳಿಸು. 

೩೯. ಶ್ರೀರುದ್ರನು ಹೇಳುತ್ತಾನೆ: ಸ್ಕಂದ! ಚೆನ್ನಾಗಿ ಪ್ರಶ್ನಿಸಿದೆ. ಶ್ರೀ 
ಮಹಾವಿಷ್ಣುವು ಹೆಯಗ್ರೀವನಾಗಲು ಕಾರಣವನ್ನು ಹೇಳುವೆನು. ಚಿತ್ರೈ ಕಾಗ್ರ್ಯ 
ದಿಂದ ಶ್ರವಣಮಾಡು. 

೪೦-೪೧. ವ್ಯಾಸನು ಹೇಳುತ್ತಾನೆ: ಹಿಂದೆ ರುದ್ರಾದಿ ದೇವತೆಗಳು 
ಭೂಮಿಯಲ್ಲಿ ಯಜ್ಞವನ್ನಾರಂಭಿಸಿ ವೇದಮಂತ್ರಗಳಿಂದ ವಿಷ್ಣು ವನ್ನು ಕರೆಯು 
ವುದಕ್ಕಾಗಿ ಎಲ್ಲರೂ ಸೇರಿ ವೈಕುಂಠ, ಕ್ಸೀರಸಮುದ್ರ, ee ಹೋಗಿ 
ಎಲ್ಲಿಯೂ ಆ ವಿಷ್ಣುವನ್ನು ಕಾಣದೆಹೋದರು. 

೪೨. ಮುಗ್ಧರಾಗಿ ಅವರು ಇಲ್ಲಿ ಅಲ್ಲಿ ಓಡುತ್ತ ಎಲ್ಲಿಯೂ ಶ್ರೀವಿಷ್ಣು 
ವನ್ನು ಕಾಣಲಿಲ್ಲ. 

೪೩. ಇಂದ್ರಾದಿ ದೇವತೆಗಳೆಲ್ಲರೂ "" ಮಹಾವಿಷ್ಣುವು ಎಲ್ಲಿಗೆ ಹೋದನು? 
ಇವನನ್ನು ನೊಡುವ ಬಗೆ ಹೇಗೆ” ಎಂದು ಆಲೋಚಿಸಿದರು. 

೪೪. ಬೃಹಸ್ಪತಿಗೆ ವಂದಿಸಿ "" ಸ್ವಾಮಿ! ಅನುಗ್ರಹಿಸಿ ಮಹಾವಿಷ್ಣುವು 
ಎಲ್ಲಿರುವನೆಂಬುದನ್ನು ಹೇಳಿರಿ” ಎಂದರು. 


೧೩೬೪ ಶ್ರೀ ಸ್ಕಾಂದಮಹಾಪುರಾಣಂ 


ಬೃಹಸ್ಪತಿರುವಾಚ :- 
ನ ಜಾನೇ ಕೇನ ಕಾರ್ಯೇಣ ಯೋಗಾರೂಢೋ ಮಹಾತ್ಮವಾನ್‌ । 
ಯೋಗರೂಪೊಇಭವದ್ದಿಷ್ಟುರ್ಯೋಗೀಶೋ ಹರಿರಚ್ಯುತಃ ॥ ೪೫ 
ಕ್ಪಣಂ ಧ್ಯಾತ್ವಾ ಸ್ವಮಾತ್ಮಾನಂ ಧಿಷಣೇನ ಖ್ಯಾಹಿತೋ ಹರಿಃ । 


ತತ್ರ ಸರ್ವೇ ಗತಾ ದೇವಾ ಯತ್ರ ದೇವೋ ಜಗತ್ಪತಿಃ ॥ ೪೬ 
ತದಾ ದೃಷ್ಟೋ ಮಹಾವಿಷ್ಣು ರ್ಧ್ಯಾನಸ್ಫೋಃ ಸೌ ಜನಾರ್ದನಃ ॥ 
ಧ್ಯಾತ್ವಾ ಕೃತ್ಯಸಮಾಕಾರಂ ಸಶರಂ ದೈತ್ಯಸೂದನಂ ॥ ೪೭ 


ಸಮಾಸಾ ನಂ ತತೋ ದೃಷ್ಟ್ಯಾ ಬೋಧೋಪಾಯಂ ಪ್ರಚಕ್ರನೇ। 

ಆಹ ತಾಂಶ್ಚ ತದಾನನ್ರ್ಯೋ ಧನುರ್ಗುಣಂ ಪ್ರಯತ್ನತಃ । 

ಭೇತ್ಸ್ಯಂತಿ ಚೇತ್ತಚ್ಛಬ್ದೇನ ಪ್ರಬುಧ್ಯೇತ ಹರಿಃ ಸ್ವಯಂ 1 ೪೮ 
ದೇವಾ ಊಚುಃ: 

ಗುಣಭಕ್ಪಂ ಕುರುಧ್ಯಂ ನೈ ಯೇನಾಸೌ ಬುಧ್ಯತೇ ಹರಿಃ । 

ಕ್ರತ್ವರ್ಥಿನೋ ವಯಂ ವಮ್ಯ್ಯಃ ಪ್ರಭುಂ ವಿಜ್ಞಾಪಯಾಮಹೇ ॥ ೪೯ 
ವಮ್ರ್ಯ ಊಚುಃ: 

ನಿದ್ರಾಭಂಗಂ ತಥಾ ಚ್ಛೇದಂ ದಂಪತ್ಯೋರ್ಮೈತ್ರಭೇದನಂ | 

ಶಿಶುಮಾತೃನಿಭೇದಂ ವಾ ಕುರ್ನಾಣಂ ನರಕಂ ವ್ರಜೇತ್‌ ॥ ೫೦ 





೪೫. ಬೃಹಸ್ಪತಿಯು ಹೇಳುತ್ತಾನೆ: ಎಲ್ಲೆ ಸುರರೇ! ಯೋಗಿಗಳಿ; 
ಒಡೆಯನಾದ ವಿಷ್ಣುವುಯಾವ ಕಾರಣದಿಂದ ಯೋಗರಿರತನಾದನೊ ನಾನರಿಯೆ 

೪೬. ಬೃಹಸ್ಪತಿಯು ಇಂತು ನುಡಿದು ಸ್ವಲ್ಪಹೊತ್ತು ಮನಸ್ಸಿನಲ್ಲಿಯೆ 
ಆಲೋಚಿಸಿ ವಿಷ್ಣುವಿರುವ ಸ್ಥಳವನ್ನು ತಿಳಿಸಿದನು. ದೇವತೆಗಳೆಲ್ಲರೂ ಸೇರಿ ವಿಷ್ಣು 
ನಿರುವ ಸ್ಥಳಕ್ಕೆ ತೆರಳಿದರು. 

೪೭-೪೮. ಅಲ್ಲಿ ಧ್ಯಾನಾರೂಢನಾದ ಆತನನ್ನು ನೋಡಿದರು. ತಪಸ್ಸಿಃ 
ಸರಿಯಾದ ಆಕೃತಿಯುಳ್ಳವನೂ, ಬಾಣಸಹಿತನೂ ಆಗಿರುವ ರೈತ್ಕಾ ೦ತಕನಾಂ 
ಆ ವಿಷ್ಣುವನ್ನು ಧ್ಯಾನಿಸಿ ಸಮಾಧಿಸ್ಥನಾದ ಅವನನ್ನು ಎಚ್ಚರಿಸುವ ಯುಕ್ತಿ 
ಯನ್ನು ಆಲೋಚಿಸಿದರು. ಆಗ ಬೃಹಸ್ಪತಿಯು ಗೆದ್ದಲು ಹುಳುಗಳು ಆ ವಿಷ್ಠು 
ವಿನ ಬಿಲ್ಲಿನ ಹಗ್ಗವನ್ನು ಕಡಿದರೆ ಅವನು ಎಚ್ಚರಗೊಂಡಾನೆಂದನು. 

೪೯. ದೇವತೆಗಳು ಹೇಳುತ್ತಾರೆ:--ಎಲ್ಫೆ ಗೆದ್ದಲುಹುಳುಗಳೆ! ವಿಷ್ಣುವಿನ 
ಬಿಲ್ಲಿನ ಹಗ್ಗವನ್ನು ಕತ್ತರಿಸಿರಿ. ಅದರಿಂದ ವಿಷ್ಣುವು ಎಚ್ಚರಗೊಳ್ಳುವನು. ಆ 
ಯಜ್ಞಾರ್ಥಿಗಳಾದ ನಾವು ಪ್ರಭುವಾದ ನಿಷ್ಣುವನ್ನು ಕುರಿತು ವಿಜ್ಞಾ ಪಿಸಿಕೊಳ್ಳು 
ತ್ತೇವೆ. 

೫೦. ಗೆದ್ದಲು ಹುಳುಗಳು ಹೇಳುತ್ತವೆ :-ನಿದ್ರಾಭಂಗವನ್ನೂ, ಕಥೆಯನ್ನು 
ಹೇಳುವಾಗ ಮಧ್ಯದಲ್ಲಿ ನಿ ಲ್ಲಿಸುವುದನ್ನೂ, ಗಂಡಹೆಂಡಿರ ಸ್ನೇಹಕ್ಕೆ 


ಚತುರ್ದಶೋರಧ್ಯಾಯಃ ೨೭೫ 


ಯೋಗಾರೂಢೋ ಜಗನ್ನಾಥಃ ಸಮಾಧಿಸ್ಫೋ ಮಹಾಬಲಃ | 

ತಸ್ಯ ಶ್ರೀ ಜಗದೀಶಸ್ಯ ನಿಫ್ನುಂ ಸೈನ ತು ಕುರ್ಮಹೇ ॥ ೫೧॥ 
ಬ್ರಹ್ಮೋವಾಚ;-- 

ಭವತಾಂ ಸರ್ವಭಕ್ಪತ್ವಂ ದೇವಕಾರ್ಯಂ ಕ್ರಿಯೇತ ಚೇತ್‌ । 

ಕರ್ತವ್ಯಂ ಚ ತತೋ ವನ್ಫ್ಯೋ ಯಜ್ಞ ಸಿದ್ಧಿರ್ಯಥಾ ಭನೇತ್‌ । 


ವನ್ರಾಶಾ ಸಾ ತದಾ ವತ್ಸ ಪುನರೇನಮುನಾಚ ಹ ॥ ೫೨ ॥ 
ವಮ್ರ್ರ್ಯುವಾಚ :-- 

ದುಃಖಸಾಧ್ಯೋ ಜಗನ್ನಾಥೋ ಮಲಯಾಃನಿಲಸನ್ನಿಭಃ । 

ಕಥಂ ವಾ ಬೋಧ್ಯತಾಂ ಬ್ರಹ್ಮನ್ನಸ್ಮಾಭಿಃ ಸುರಪೂಜಿತಃ ॥ ೫೩ ॥ 


ನೈನ ಯಜ್ಞೇನ ಮೇ ಕಾರ್ಯಂ ಸುರೈಶ್ಚೆನ ತಥೈನ ಚ । 

ಸರ್ವೇಷು ಯಜ್ಞಕಾರ್ಯೆೇಷು ಭಾಗಂ ದದತು ಮೇ ಸುರಾಃ ॥ ೫೪ ॥ 
ದೇವಾ ಊಚುಃ: 

ಪ್ರದಾಸ್ಯಾನೋ ವಯಂ ನಮ್ರ ಭಾಗಂ ಯಜ್ಞೇಷು ಸರ್ವದಾ । 

ಯಜ್ಞಾಯ ದತ್ತಮಸ್ಮಾಭಿಃ ಕುರುಷ್ಟೈವಂ ವಚೋಹಿ ನಃ ॥೫೫॥ 

ತಥೇತಿ ವಿಧಿನಾಪ್ಯುಕ್ತಂ ವಮ್ರ್ರಾ ಚೋದ್ಯಮುಮಾಶ್ರಿತಾ । 

ಗುಣಭಕ್ಸಾದಿಕಂ ಕರ್ಮ ತಯಾ ಸರ್ವಂ ಕೃತಂ ನೃಪ ॥ ೫೬ ॥ 





ಭಂಗತರುವದನ್ನೂ, ತಾಯಿ ಮತ್ತು ಶಿಶುಗಳ ಅಗಲಿಸುವಿಕೆಯನ್ನೂ, ಮಾಡು 
ವವನು ನರಕಭಾಗಿಯಾದಾನು. 

೫೧. ಜಗನ್ನಾಥನೂ, ಅತಿಬಲಿಷ್ಠನೂ ಆಗಿರುವ ಶ್ರೀ ಮಹಾವಿಷ್ಣುವು 
'ಯೋಗಾರೂಢನಾಗಿದ್ದಾನೆ. ಇವನಿಗೆ ನಾವು ನಿಫ್ಲನನ್ನು ಮಾಡಲಾರೆವು. 

೫೨. ಬ್ರಹ್ಮನು ಹೇಳುತ್ತಾನೆ:--ನೀವು ಸರ್ವಭಕ್ಸಕರಾಗಿದ್ದೀರಿ. ನಿಮ್ಮ 
ಕರ್ತವ್ಯವನ್ನು ನೀವು ನೆರವೇರಿಸಿ ಡೇವತೆಗಳ ಯಜ್ಞವನ್ನು ಸಾಂಗಗೊಳಿಸಿರಿ.?? 
ಮಗು! ಆಗ ಅವುಗಳ ಒಡೆಯಳು ತಿರುಗಿ ಹೀಗೆಂದಳು. 

೫೩. ಗೆದ್ದಲುಹುಳುಗಳ ಸ್ವಾಮಿನಿಯು ಹೇಳುತ್ತಾಳೆ:-ಎಲೈ ಬ್ರಹ್ಮನೆ! ಕಷ್ಟ 
ದಿಂದ ಹೊಂದಲುಮಾತ್ರ ಶಕ್ಯನೂ, ಜಗದೊಡೆಯನೂ, ಮಲಯ ಪರ್ವತದ ಗಾಳಿ 
ಯಂತಿರುವವನೂ, ದೇವಾಧಿಕನೂ ಆಗಿರುವ ವಿಷ್ಣುವನ್ನು ಹೇಗೆ ಎಚ್ಚರಿಸಲಿ? 

೫೪. ಈಗ ನನಗೆ ಯಜ್ಞದಿಂದಾಗಲಿ, ದೇವತೆಗಳಿಂದಾಗಲಿ ಪ್ರಯೋಜನ 
ವಿರುವುದಿಲ್ಲ. ಆದುದರಿಂದ ಸಕಲ ಯಜ್ಞ ಗಳಲ್ಲಿಯೂ ನನಗೆ ಭಾಗ ಸಲ್ಲಲಿ. 

೫೫-೫೬. ದೇವತೆಗಳು ಹೇಳುತ್ತಾರೆ:--ನಾವು ಯಜ್ಞಗಳಲ್ಲಿ ಗೆದ್ದಲಿಗೆ 
ಭಾಗವನ್ನು ಕೊಡುವೆವು. ನಾವು ಯಜ್ಞವನ್ನು ಮಾಡಲು ಮನಸ್ಸಸ್ಸಿಟ್ಟದ್ದೇವೆ. 
ನಮ್ಮ ಮಾತನ್ನು ನೆರವೇರಿಸು. ಬ್ರಹ್ಮನೂ ಅದಕ್ಕೆ ಸಮ್ಮತಿಸಿದನು. ಗೆದ್ದಲು 
ತನ್ನ ಕಾರ್ಯವನ್ನಾರಂಭಿಸಿತು. ಅದು ಹಗ್ಗವನ್ನು ಪೂರ್ತಿಯಾಗಿ ಭಕ್ಷಿಸಿತು. 


(೧೭೬ ಶ್ರೀ ಸ್ಕಾಂದಮಹಾಪುರಾಣಂ 


ಯಂಧಿಷ್ಠಿರ ಉವಾಚ: 
ಅಸ್ಯ ವಾ ಜೋಧನೇ ದೇವಾ ಗುಣಭಂಗೇ ಸಮಾಧಿಷು । 
ಏತದಾಶ್ಚರ್ಯಂ ವಿಪ್ರರ್ಷೇ ಸತ್ಯಂ ಸತ್ಯವತೀಸುತ ॥ ೫೭॥ 
ವ್ಯಾಸ ಉವಾಚ :- 
ವ್ಯಗ್ರಚಿತ್ತಾಃ ಸುರಾಃ ಸರ್ವೇ ಅಕೃಷ್ಣಂ ಹರಿಕಾರ್ಮುಕಂ | 
ನ ಜಾನೇ ಕೇನ ಕಾರ್ಯೇಣ ವಿಷ್ಣುಮಾಯಾ ನಿಮೋಹಿತಾ ॥ ೫೮॥ 
ಮುದಿತಾಸ್ತಾಃ ಪ್ರಮುಂಚಂತಿ ನಲ್ಮೀಕಂ ಚಾಂಗ್ರತೋ ಹರೇಃ । 
ಕೋಟಿಸಾರ್ಶ್ಮೇ ತತೋ ನೀತಂ ವಲ್ಮೀಕಂ ಸರ್ವತೋಪಮಂ ॥ ೫೯॥ 
ಗುಣೇ ಚ ಭಕ್ಸಿತೇ ತಸ್ಮಿಂಸ್ತತ್ಸ್ಸಣಾದೇನ ದೂಸಿತೇ । 
ವ್ಯಾಘಾತಕೋಟಭಿಃ ಸಾರ್ಧಂ ಶೀರ್ಷಂ ಛಿತ್ವಾ ದಿವಂ ಗತಂ ॥೬೦॥ 
ಗತೇ ಶೀರ್ಷೇ ಚ ತೇ ದೇನಾ ಭೃಶಮುದ್ದಿಗ್ಗಮಾನಸಾಃ । 
ಧಾವಂತಿ ಸರ್ವತಃ ಸರ್ವೇ ಶಿರ ಆಲೋಕನಾಯ ತೇ ॥೬೧॥ 
ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ತ್ರ್ಯಾಂ ಸಂಹಿತಾಯಾಂ 


ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರಾಂರಣ್ಯಮಾಹಾತ್ಮ್ಯೇ "ನಿಷ್ಣು 
ಶಿಕೋನಾಶವರ್ಣನಂ'' ನಾಮ ಚತುರ್ದಶೋಧ್ಯಾಯಃ 





೫೭. ಯುಧಿಷ್ಠಿರನು ಕೇಳುತ್ತಾನೆ:--ಎಲೈ ವ್ಯಾಸಮುನಿಯೆ! ದೇವತೆ 
ಗಳು ಸಮಾಧಿಸ್ಥನಾದ ವಿಷ್ಣುವನ್ನು ಎಚ್ಚರಿಸಲು ಅವನ ಬಿಲ್ಲಿನ ಹಗ್ಗವನ್ನು 
ಕತ್ತರಿಸುವುದರಲ್ಲಿ ತೊಡಗಿದುದು ಆಶ್ಚರ್ಯವನ್ನುಂಟುಮಾಡಿದೆ. 

೫೮. ವ್ಯಾಸನು ಹೇಳುತ್ತಾನೆ:--ಸಕಲಸುರರೂ ನಿಷ್ಣುಮಾಯೆಯಿಂದ 
ಮುಗ್ಧರಾಗಿ ಹರಿಯ ಚಾಪವನ್ನು ಸೆಳೆಯಲು ಆಸಕ್ತರಾದುದಕ್ಕೆ ಕಾರಣ 
ವೇನೆಂಬುದನ್ನು ನಾನರಿಯೆನು. 

೫೯. ಅವರಂತೂ ಬ್ರಹ್ಮನಮಾತಿನಂತೆ ಸಂತೋಷಗೊಂಡು ವಿಷ್ಣುವಿನ 
ಬಿಲ್ಲಿನ ತುದಿಯಲ್ಲಿ ಬೆಟ್ಟಿದಂತಿರುವ ಗೆದ್ದಲು ಗುಂಪನ್ನು ಬಿಟ್ಟರು. 

` ೬೦. ಹಗ್ಗವನ್ನು ಹುಳುಗಳು ಕತ್ತರಿಸಲು ಕೂಡಲೆ ಬಿಲ್ಲು ತನ್ನ ಕೊನೆ 
ಯಿಂದ ವಿಷ್ಣುವಿನ ಶಿರಸ್ಸನ್ನು ಕತ್ತರಿಸಿ ಆ ತಲೆಯೊಡನೆ ದೇವಲೋಕಕ್ಕೆ 
ಹೊರಟುಹೋಯಿತು. 
೬೧. ತಲೆಯು ಅದೃಶ್ಯವಾಗಲು ದೇವತೆಗಳು ಬಹಳವಾಗಿ ವ್ಯಥೆಗೊಂಡು 
ಅದನ್ನು ಹುಡುಕುವುದಕ್ಕಾಗಿ ಎಲ್ಲೆಡೆಗೂ ಓಡಿದರು. 

ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 


ಛ 
ಶ್ರೀ ಸ್ಕಾಂದಮಹಾಪುರಾಣದ ಎರಡನೆಯ ಬ್ರಹ್ಮಖಂಡದ ಧರ್ಮಾರಣ್ಯಮಾಹಾತ್ಮ ದಲ್ಲಿ 
«"ವಿಸ್ಸುಶಿರೋನಾಶವರ್ಣನ''ವೆಂಬ ಹದಿನಾಲ್ಕನೆಯ ಅಧ್ಯಾಯವು ಮುಗಿದುಡು 


॥ ಶ್ರೀಃ ॥ 
ಅಥ ಪಂಚದಶೋಂಧ್ಯಾಯಃ 
ಹಯಗ್ರೀವಾಖ್ಯಾನವರ್ಣನಂ 

ವ್ಯಾಸ ಉವಾಚ: 
ನ ಪಶ್ಯಂತಿ ತದಾ ಶೀರ್ಷಂ ಬ ಿಹ್ಮಾದ್ಯಾಸ್ತು ಸುರಾಸ್ತ್ರದಾ । 
ಕಂ ಕುರ್ಮ ಇತಿ ಹೇತ್ಯುಕ್ತಾಸ ಜ್ಞಾ ನಿನಸ್ತ €ವ್ಯ ಚಿಂತಯನ್‌ non 
ಉವಾಚ ನಿಶ್ವಕರ್ಮಾಣಂ ತದಾ ಬ್ರಹ್ಮಾ ಸುರಾಸ್ಸಿ ತಃ ॥೨॥ 

ಬ್ರ ಹ್ಮೊ ಚಃ — 
ನಿಶ್ಚಕರ್ಮಂಸ್ತ್ಯನೇವಾಂಸಿ ಕಾರ್ಯಕರ್ತಾ ಸದಾ ವಿಭೋ । 
ಶೀಘ್ರನೇನ ಕುರುತ್ವಂ ವೈ ವಕ್ತ್ರಂ ಸಾಂದ್ರಂ ಚ ಧನ್ಮಿನಃ NT 
ನಮಸ್ಕೃ ತ್ಯ ತದಾ ತಸ್ಮೈ ಸ್ತುತೋಸೌ ದೇವವರ್ಧಃ । 
ಜಾ ಪರಯಾ ಭೆಕ್ಟ್ಯಾ ಬ್ರಹ್ಮಾಣಂ ಕಮುಲೋದ್ಸವಂ NT 
ಯಜ್ಞ ಕಾರ್ಯಂ ನಿವೃ ತ್ಯಾ ಕು ವದಂತಿ ನಿವಿಧಾಃ ಸುರಾಃ । 
ಯಜ್ಞ ಭಾಗವಿಹೀನಂ ಹೆ ಕಂ ಪುನರ್ವಜ್ಮೆ ತೇಂಗ್ರತಃ । . 
ಯಜ್ಞಭಾಗಮಹಂ ದೇವ ಲಭೇಯ್ಕೆನಂ ಸುರೈಃ ಸಹ un 





ಕನ್ನಡದ ಅನುವಾದ 


ಹಯಗ್ರಿ ಇವಾಖ್ಯಾ ನನರ್ಣನ 


೧-೨. ವ್ಯಾಸನು ಹೇಳುತ್ತಾನೆ ಜ್ಞಾನಿಗಳಾದ ಬ್ರಹ್ಮಾದಿ ದೇವತೆಗಳು 
ವಿಷ್ಣುವಿನ ಮಸ್ತಕವನ್ನು ಕಾಣದೆ, ""ಅಯ್ಯೊ! ಈಗೇನು ಮಾಡಬೇಕು??? 
ಎಂದು ಆಲೋಚಿಸಿದರು. ಆಗ ಬ್ರಹ್ಮನು ಸುರರೊಡನೆ ವಿಶ್ವಕರ್ಮನಿಗೆ 
ಇಂತೆಂದನು. 

೩. ಬ್ರಹ್ಮನು ಹೇಳುತ್ತಾನೆ:--ನಿಶ್ವಕರ್ಮ! ನೀನು ಯಾವಾಗಲೂ 
ನಮ್ಮ ಕೆಲಸವನ್ನು ಮಾಡುವವನು. ಆದ್ದರಿಂದ ಧನುರ್ಧಾರಿಯಾದ ವಿಷ್ಣುವಿಗೆ 
ದೃಢವಾದ ಮುಖವೊಂದನ್ನು ನಿರ್ಮಿಸು. 

೪. ಹೀಗೆ ಸ್ತುತಿಸಲ್ಪಟ್ಟ ದೇವತೆಗಳ ಬಡಗಿಯಾದ ವಿಶ್ವಕರ್ಮನು 
ಆ ಕಮಲಸಂಭವನನ್ನು ಅತ್ಯಂತ ಭಕ್ತಿಯಿಂದ ವಂದಿಸಿ ಹೀಗೆಂದನು. 

೫. ದೇವತೆಗಳು ಯಜ್ಞದ ಕೆಲಸವನ್ನು ನನ್ನಿಂದ ಪೂರೈಸಿಕೊಂಡು 
ಹೀಗೆನ್ನುತ್ತಾರೆ. ನಾನು ಯಜ್ಞ ಭಾಗವಿಲ್ಲದವನು. ನಿನ್ನ ಮುಂದೇನೆಂದು 
ಹೇಳಲಿ. ನಾನು ಸಹ ದೇವತೆಗಳೊಡನೆ ಯಜ್ಞ ಭಾಗಿಯಾಗಬೇಕು. 


೧೭೮ ಶ್ರೀ ಸ್ಕಾಂದಮಹಾಪುರಾಣಂ 


ಬ್ರಹ್ಮೋವಾಚ :-- 
ದಾಸ್ಯಾಮಿ ಸರ್ವಯಚ್ಞೇಷು ನಿಭಾಗಂ ಸುರವರ್ಧಕೇ । 
ಸೋಮೇ ತ್ವಂ ಪ್ರಥಮಂ ವೀರ ಪೂಜ್ಯಸೇ ಶ್ರುತಿಕೋವಿದೈಃ ॥೬॥ 
ತದ್ದಿಷ್ಣೋಶ್ಚ ಶಿರಸ್ತಾವತ್ಸಂಧತ್ಸ್ಟಾಂ'ಮರವರ್ಥಕೇ | 
ನಿಶ್ಚಕರ್ಮಾಂಬ್ರವನೀದ್ದೇವಾನಾನಯದ್ದಂ ಶಿರಸ್ತ್ರಿತಿ ॥೭॥ 


ತನ್ನಾಸ್ತೀತಿ ಸುರಾಃ ಸರ್ವೇ ವದಂತಿ ನೃಪಸತ್ತಮ । 
ಮಧ್ಯಾಹ್ನೇ ತು ಸಮುದ್ಭೂತೇ ರಥಸ್ಕೋ ದಿವಿ ಚಾಂಶುಮಾನ್‌ ॥ ೮॥ 
ದೃಷ್ಟಂ ತದಾ ಸುರೈಃ ಸರ್ವೆ ರಥಾದಶ್ಚಮಥಾನಯನ್‌ । 


ಛಿತ್ಕಾ ಶೀರ್ಷಂ ಮಹೀಪಾಲ ಕಬಂಧಾದ್ವಾಜಿನೋ ಹರೇಃ nen 

ಕಬಂಥೇ ಯೋಜಯಾಮಾಸ ನಿಶ್ವಕರ್ಮಾಂತಿಚಾತುರಃ । 

ದೃಷ್ಟಾ ತಂ ದೇವದೇನೇಶಂ ಸುರಾಃ ಸ್ತುತಿಮಕುರ್ವತ ॥೧೦॥ 
ದೇವಾ ಊಚುಃ: 

ನಮಸ್ತೇಸ್ತು ಜಗದ್ಬೀಜ ನಮಸ್ತೇ ಕಮಲಾಪತೇ । 

ನಮಸ್ತೇಸ್ತು ಸುರೇಶಾನ ನಮಸ್ತೇ ಕಮಲೇಕ್ಬಣ i ೧೧॥ 


ತ್ವಂ ಸ್ಥಿತಿಃ ಸರ್ವಭೂತಾನಾಂ ತ್ವಮೇವ ಶರಣಂ ಸತಾಂ । 
ತ್ವಂ ಹಂತಾ ಸರ್ವದುಷ್ಟಾನಾಂ ಹಯಗ್ರೀನ ನಮೋಸ್ತುತೇ ॥ ೧೨॥ 

೬. ಬ್ರಹ್ಮನು ಹೇಳುತ್ತಾನೆ: ದೇವತೆಗಳ ಬಡಗಿಯಾದ ಎಲ್ಫೆ ವಿಶ್ವ 
ಕರ್ಮನೆ ! ಸಕಲ ಯಜ್ಞಗಳಲ್ಲಿಯೂ ನಿನಗೆ ಭಾಗವನ್ನು ಸಲ್ಲಿಸುವೆನು. ಸೋಮ 
ಪಾನದಲ್ಲಿ ನಿನ್ನನ್ನು ಮೊದಲು ಪೂಜಿಸುವರು. 

೭-೧೦, ವಿಶ್ವಕರ್ಮ! ಈಗ ವಿಷ್ಣುವಿನ ತಲೆಯನ್ನು ಸೇರಿಸು'' ಎಂದನು. 
ವಿಶ್ವಕರ್ಮನು ದೇವತೆಗಳನ್ನು ಕುರಿತು, “ತಲೆಯನ್ನು ತೆಗೆದುಕೊಂಡು ಬನ್ಸಿರಿ'? 
ಎಂದು ಹೇಳಿದನು. ""ಆ ತಲೆಯಿಲ್ಲವೆಂ''ದು ಅವರು ನುಡಿದರು. ಬಳಿಕ ಮಧ್ಯಾಹ್ನ 
ವಾಗಲು ಸೂರ್ಯನು ಆಕಾಶದಲ್ಲಿ ರಥವನ್ನೇರಿಬಂದನು. ಸುರರು ನೋಡಿ ಅವನ 
ರಥದಿಂದ ಕುದುರೆಯನ್ನು ತಂದರು. ಆಗ ಅತಿ ಕುಶಲನಾದ ವಿಶ್ವಕರ್ಮನು 
ಸೂರ್ಯನ ಕುದುರೆಯ ತಲೆಯನ್ನು ಛೇದಿಸಿ ಅದನ್ನು ವಿಷ್ಣುವಿನ ಮುಂಡದಲ್ಲಿ 
ಸೇರಿಸಿದನು. ಆಗಲಾ ಸುರರು ವಿಷ್ಣುವನ್ನು ಕಂಡು ಈ ರೀತಿ ಸ್ತುತಿಸಿದರು. 

೧೧. ದೇವತೆಗಳು ಸ್ತುತಿಸುತ್ತಾರೆ:-ಜಗತ್ಕಾರಣನೂ, ಲಕ್ಷ್ಮ್ಮೀಪತಿಯೂ, 
ದಿನಿಜಕೊಡೆಯನೂ, ಕಮಲಾಕ್ಸನೂ ಆಗಿರುವ ಶ್ರೀಹರಿಯೆ! ಕಿನಗೆ 
ನಮಸ್ಕಾರವು. 

೧೨. ಹಯವದನ! ನೀನು ಸಕಲ ಪ್ರಾಣಿಗಳನ್ನೂ ಕಾಪಾಡುವವನು. 
ಸಜ್ಜನರನ್ನು ರಕ್ಷಿಸುವವನು. ದುನ್ವಸಂಹಾರಕನು. ನಿನಗೆ ನಮಸ್ಕಾರವು. 





ಪಂಚಹಕೊ:$ಧ್ಯಾಯಃ ೧೭೯ 


ತ್ವನೋಂಕಾರೋ ವಷಟ್ಕಾರಃ ಸ್ವಾಹಾ ಸ್ವಧಾ ಚತುರ್ವಿಧಾ। 


ಆದ್ಯಸ್ತ್ಯೃಂ ಚ ಸುರೇಶಾನ ತ್ವ ಮೇನ ಶರಣಂ ಸದಾ ॥ ೧೩ ॥ 
ತೊ. ನೀ ಯಜ್ಞ ಸತಿರ್ಯಜ್ವಾ ದ್ರ ವ್ಯ ೦ ಹೋತಾ ಹುತಸ್ತಥಾ । 

ತ ;,ದರ್ಥಂ ಹೂಯತೇ ದೇನ ತ ಮೇನ ಶರಣಂ ಶಿಖಾ ॥ ೧೪ ॥ 
ಕಾಲಃ ಕರಾಲರೂಪಸ್ತಂ ತ್ವಂ ಮಾ ಶೀತದೀಧಿತಿಃ । 
ತ್ವಮಗ್ನಿರ್ವರುಣಶ್ಚೈನ ತ್ವಂ ಚ ಕಾಲಕ್ಸಯಂಕರಃ ॥ ೧೫ ॥ 


ಗುಣತ್ರಯಂ ತ್ವಮೇನೇಹ ಗುಣಹೀನಸ್ತ್ಯಮೇನ ಹಿ । 
ಗುಣಾನಾಮಾಲಯಸ್ವ್ವಂ ಚ ಗೋಷ್ತಾ ಸರ್ವೇಷು ಜಂತುಷು ॥ ೧೬ ॥ 
ಸ್ತ್ರೀಪುಂಸೋಶ್ಚ ದ್ವಿಧಾ ತ್ವಂ ಚ ಸಶುಪಕ್ಸ್ಯಾದಿಮಾನವೈಃ | 


ಚತುರ್ವಿಧಂ ಕುಲಂ ತ್ವಂ ಹಿ ಚತುರಾಶೀತಿಲಕ್ಸ್ಮಣಃ I ೧೭ 
ದಿನಾಂತಶ್ಚೆ ವ ಪಕ್ಸಾಂತೋ ಮಾಸಾಂತೋ ಹ್ಯ ಯನಂ ಯುಗಂ 

ಕಲ್ಬಾ ಂತಕ್ತೆ ಮಹಾಂತಕ್ಕ ಕಾಲಾಂತಸ್ತ್ಯಂ ಚ "ಮೈ ಹರೇ ॥ ೧೮ ॥ 
ಏನಂ. ವಿಧ್ಯೆ ರ್ಮಹಾದಿನೆ ಸ್‌ ಸ್ತೂ ತೂರು ಸುಕ್ಕೈ ರ್ನ್ವಪ । 

ಸಂತುಷ್ಕಃ "ಹಾ ಹ ಸರ್ಮೇಷಾಂ ಸೇನಾಂ Pi ಪ ಶ್ರಭುಃ ॥೧೯॥ 


೧೩. ಓಂಕಾರ, ವಷಟ್ಕಾರ, ಸ್ವಾಹಾ, ಸ್ವಧಾರೂಪದಿಂದ ನೀನು ನಾಲ್ಕು 
ವಿಧವಾಗಿರುವೆ. ಸುರಪತಿ! ನೀನು ಜಗದಾದಿಯಲ್ಲಿರುವವನು. ನೀನೇ 
ಯಾವಾಗಲೂ ರಕ್ಷಕನು. 

೧೪. ಯಜ್ಞವೂ, ಯಜ್ಞದೊಡೆಯನೂ, ಯಾಗಮಾಡುವವನೂ, ಯಾಗದ. 
ಸಾಮಗ್ರಿಯೂ, ಹೋಮಮಾಡುವನನೂ, ಹೋಮಮಾಡಲ್ಪಟ್ಟ ದ್ರವ್ಯವೂ 
ನೀನೆ! ನಿನಗಾಗಿಯೇ ಹೋತೃಗಳು ಹೋಮಮಾಡುವರು. ನೀನೇ ರಕ್ಷಕನು. 
ಮತ್ತು ಸಮಸ್ತರಿಗೂ ಸ್ನೇಹಿತನು. 

೧೫. ನೀನೇ ಭಯಂಕರರೂಪವಾದ ಕಾಲನು. ನೀನೇ ಸೂರ್ಯ ಮತ್ತು 
ಚಂದ್ರನು. ನೀನೇ ಅಗ್ನಿ ಮತ್ತು ವರುಣನು. ನೀನೇ ಕಾಲಾಂತಕನು. 

೧೬-೧೭. ನೀನೇ ಸತ್ವಾದಿಗುಣತ್ರಯನೂ, ನಿರ್ಗುಣನೂ, ಗುಣಗಳಿಗೆ 
ಆಶ್ರಯನೂ, ಸಕಲ ಪ್ರಾಣಿಗಳಲ್ಲಿ ಅಂತರ್ಯಾಮಿಯಾಗಿದ್ದು ಸಲಹುವನನೂ 
ಆಗಿರುವೆ. ಪಶುಪಕ್ಷಿ 3 ಮಾನವಾದಿ ಜಾತಿಗಳ ಸಿ ಸ್ತೀಪುಂರೂಸನೂ, ನಾಲ್ಕುವರ್ಣ 
ಗಳೂ, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೂ' ನೀನೇ ಆಗಿರುವೆ. 

೧೮. ಶ್ರೀಹರಿ! ಸಾಯಂಕಾಲ, ಹುಣ್ಣಿಮೆ, ಅಮಾನಾಸ್ಯೆ, ಸಂವತ್ಸರ, 
ಯುಗ, ಕಲ್ಪಾಂತ, ಮಹಾಪ್ರಲಯಾಂತ, ಕಾಲಾಂತ ಸರ್ವವೂ ನೀನೇ. 

ಪ್ರಭುವೆ! ದೇವತೆಗಳು ಇಂತಹ ದಿವ್ಯಸ್ತ್ಯೋತ್ರಗಳಿಂದ ವಿಷ್ಣುವನ್ನು 
ಹೊಗಳಲು ಅವನು ಆನಂದಗೊಂಡು ಸಕಲ ಡೇವತೆಗಳನ್ನೂಕುರಿತು ಹೀಗೆಂದನು. 


೧೮೦ ಶ್ರೀ ಸ್ಕಾಂದಮ ಹಾಪುರಾಣಂ 


ಶ್ರೀ ಭಗವಾನುವಾಚ :-- 
ಕಿಮರ್ಥಮಿಹ ಸಂಪ್ರಾಪ್ತಾಃ ಸರ್ವೇ ದೇವಗಣಾ ಭುನಿ । 
ಕಿಮೇತತ್ಕಾರಣಂ ದೇವಾಃ ಕಿಂ ನು ದೈತ್ಯಪ್ರಪೀಡಿತಾಃ ॥ ೨೦॥ 
ದೇವಾ ಊಚುಃಃ-- 
ನ ದೈತ್ಯಸ್ಯ ಭಯಂ ಜಾತಂ ಯಜ್ಞಕರ್ಮೋತ್ಸುಕಾ ವಯಂ! 
ತ್ವದ್ಧರ್ಶನಪರಾಃ ಸರ್ವೇ ಪಶ್ಯಾನೋ ವೈ ದಿಶೋ ದಶ ॥ ೨೧॥ 
ತ್ವನ್ಮಾಯಾಮೋಹಿತಾಃ ಸರ್ವೇ ವ್ಯಗ್ರಚಿತ್ತಾ ಭಯಾತುರಾಃ । 
ಯೋಗಾರೂಢಸ್ವರೂಪಂ ಚ ದೃಷ್ಟಂ ತೇಂಸ್ಮಾಭಿರುತ್ತಮಂ ॥ ೨೨ ॥ 
ವನ್ರಾ ಚ ನೋದಿತಾಃ ಸ್ಮಾಭಿರ್ಜಾಗರಾಯ ತವೇಶ್ವರ । 
ತತಶ್ಹಾಃಪೂರ್ವಮಭವಚ್ಛಿರಶ್ಛಿನ್ನಂ ಬಭೂವ ತೇ ॥ ೨೩ ॥ 
ಸೂರ್ಯಾಂಶ್ಚಶೀರ್ಷಮಾನೀಯ ವಿಶ್ವಕರ್ಮಾಂತಿಚಾತುರಃ । 
ಸಮಧತ್ತ ಶಿರೋ ನಿಷ್ಣೋ ಹಯಗ್ರೀವೋಸ್ಯತಃ ಪ್ರಭೋ ॥ ೨೪॥ 
ನಿಷ್ಲುರುವಾಚ ನಾ 
ತುಷ್ಟೋ ಹಂ ನಾಕಿನಃ ಸರ್ವೇ ದದಾಮಿ ನರಮಿನಾಪ್ಸಿತಂ | 
ಹಯಗ್ರೀವೋಂಸ್ಕ್ಯಹಂ ಜಾತೋ ದೇವದೇವೋ ಜಗತ್ಪತಿಃ: ॥ ೨೫ ॥ 


೨೦. ಶ್ರೀಮಹಾವಿಷ್ಣ್ಕುವು ಹೇಳುತ್ತಾನೆ :-ಎಲೈ ದೇವತೆಗಳೆ! ನೀವೆಲ್ಲರೂ 
ಭೂಲೋಕಕ್ಕೆ ಏತಕ್ಕೆ ಬಂದಿರಿ? ಇದಕ್ಕೆ ಕಾರಣವೇನು? ನಿಮಗೆ ದೈತ್ಯರಿಂದೇ 
ನಾದರೂ ತೊಂದರೆಯಾಗಿದೆಯೆ? 

೨೧. ದೇವತೆಗಳು ಹೇಳುತ್ತಾರೆ: ಪ್ರಭು! ನಮಗೆ ದೈತ್ಯರಿಂದ ಭಯ 
ವುಂಟಾಗಿಲ್ಲ. ನಾವು ಯಜ್ಞ ವನ್ನೆಸಗಲು ಉತ್ಸುಕರಾಗಿದ್ದೇವೆ. ನಿನ್ನನ್ನು 
ನೋಡಬಯಸಿ ಹತ್ತುದಿಕ್ಕುಗಳನ್ನೂ ಹುಡುಕುತ್ತಿದ್ದೆವು. 

೨೨-೨೩. ನಿನ್ನ ಮಾಯೆಯಿಂದ ಮೋಹಗೊಂಡ ಮನಸ್ಸುಳ್ಳವರೂ, 
ಭಯಾರ್ತರೂ ಆದ ನಾವೆಲ್ಲರೂ ಉತ್ತಮವಾದ ನಿನ್ನ ಯೋಗಾಸಕ್ತರೂಪವನ್ನು 
ಕಂಡೆವು. ನಿನ್ನನ್ನು ಎಚ್ಚರಿಸುವುದಕ್ಕಾಗಿ ಗೆದ್ದಲನ್ನು ಪ್ರೇರಿಸಿದೆವು. ಅದರಿಂದ 
ಅದ್ಭುತವಾದ ನಿನ್ನ ತಲೆಯು ಕತ್ತರಿಸಲ್ಪಟ್ಟತು. 

೨೪. ಸ್ವಾಮಿ! ಅತಿಕುಶಲನಾದ ವಿಶ್ವಕರ್ಮನು ಸೂರ್ಯನ ಅಶ್ವದ 
ಮಸ್ತಕವನ್ನು ತಂದು ನಿನ್ನ ಮುಂಡಕ್ಕೆ ಸೇರಿಸಿದನು. ಅದರಿಂದ ನೀನು 
ಹಯಗ್ರೀವನಾದೆ. 

೨೫. ವಿಷ್ಣುವು ಹೇಳುತ್ತಾನೆ:--ದೇವತೆಗಳೇ! ನಾನು ಸಂತೋಷ 
ಗೊಂಡಿದ್ದೇನೆ. ನಿಮಗೆ ಇಷ್ಟವಾದ ವರವನ್ನು ಕೊಡುವೆನು. ಜಗತ್ಸತಿಯಾದ 
ಪ್ರಕೃತದಲ್ಲಿ ನಾನು ಹೆಯಗ್ರೀವನಾದೆನು. 


ಸಂಚದಶೋಳಧ್ಯಾಯಃ ೧೮೧ 


ನ ರೌದ್ರಂ ನ ನಿರೂಸಂ ಚ ಸುರೈರಪಿ ಚ ಸೇನಿತಂ। 

ಜಾತೋಂಹಂ ನರದೋ ದೇನಾ ಹಯಾನನೇತಿ ತೋಷಿತಃ ॥ ೨೬ ॥ 
ವ್ಯಾಸ ಉವಾಚ: 

ಕೃತೇ ಸತ್ರೇ ತತೋ ಮೇಧಾ ಧೀಮಾನ್ಸಂತುಷ್ಪಚೇತಸಾ | 

ಯಜ್ಞಭಾಗಂ ತತೋ ದತ್ತ್ವಾ ನನ್ರಾಭ್ಯೋ ವಿಶ್ವಕರ್ಮಣೇ ॥ ೨೭॥ 

ಯಜ್ಹಾಂತೇ ಚ ಸುರಶ್ರೇಷ್ಮಂ ನಮಸ್ಕೃತ್ಯ ದಿನಂ ಯಯೌ | 

ಏತಚ್ಚ ಕಾರಣಂ ವಿದ್ಧಿ ಹಯಾನನೋ ಯತೋ ಹರಿಃ ॥ ೨೮ ॥ 
ಯುಧಿಷ್ಠಿರ ಉವಾಚ: 

ಯೇನಾಕ್ರಾಂತಾ ಮಹೀ ಸರ್ವಾ ಕ್ರಮೇಣೈಕೇನ ತತ್ವತಃ । 

ವಿವರೇ ನಿನಕೇ ಕೋಮ್ಲಾಂ ವರ್ತಂತೇ ಚ ಪೃಥಫಕ್ಟೃಥಕ್‌ ॥೨೯॥ 

ಬ್ರಹ್ಮಾಂಡಾನಿ ಸಹಸ್ರಾಣಿ ದೃಶ್ಯಂತೇ ಚ ಮಹಾದ್ಯುತೇ । 

ನ ವೇತ್ತಿ ವೇದೋ ಯತ್ಪಾರಂ ಶೀರ್ಷಘಾತೋಹಿ ವೈ ಕಥಂ ॥೩೦॥ 
ವ್ಯಾಸ ಉವಾಚ :_.. 

ಶೃಣು ತ್ವಂ ಸಾಂಡನಶ್ರೇಷ್ಮ ಕಥಾಂ ಪೌರಾಣಿಕೀಂ ಶುಭಾಂ । 

ಈಶ್ವರಸ್ಯ ಚರಿತ್ರಂ ಹಿ ನೈವ ವೇತ್ತಿ ಚರಾಚರೇ ॥ ೩೧॥ 


೨೬. ಎಲೈ ಸುರರೆ! ಭಯಂಕರವಲ್ಲದೆಯೂ ಕುರೂಪವಿಲ್ಲದೆಯೂ ಇರುವ 
ನಿಮ್ಮಿಂದ ಸೇವಿಸಲ್ಪಟ್ಟಿ ಹಯಗ್ರೀವರೂಪನಾದೆನೆಂದು ಸಂತೋಷಗೊಂಡ 
ನಾನು ವರಪ್ರದಾನಮಾಡುವೆನು. 

೨೭-೨೮. ವ್ಯಾಸನು ಹೇಳುತ್ತಾನೆ: ತರುವಾಯ ಯಜ್ಞವು ನಡೆಯು 
ತ್ತಿರಲು ಬ್ರಹ್ಮನು ಸಂತುಷ್ಟನಾಗಿ ಗೆದ್ದಲುಗಳಿಗೂ, ವಿಶ್ವಕರ್ಮನಿಗೂ ಯಜ್ಞ 
ಭಾಗಗಳನ್ನಿತ್ತು ಯಜ್ಞದ ಕೊನೆಯಲ್ಲಿ ವಿಷ್ಣುವಿಗೆ ವಂದಿಸಿ ದೇವಲೋಕಕ್ಕೆ ತೆರಳಿ 
ದನು. ವಿಷ್ಣುವು ಹೆಯಗ್ರೀವನಾಗಲು ಕಾರಣವನ್ನು ಇದೆಂದು ತಿಳಿದುಕೊ. 

೨೯-೩೦. ಯುಧಿಷ್ಠಿರನು ಕೇಳುತ್ತಾನೆ: ವಿಷ್ಣುವೊಬ್ಬನೆ ಸಮಸ್ತ 
ಭೂಮಿಯನ್ನೂ ಆಕ್ರಮಿಸಿರುವನು. ಇವನ ರೋಮಗಳ ಛಿದ್ರಗಳಲ್ಲಿ ನೆಲೆಸಿರುವ 
ಸಹಸ್ರ ಬ್ರಹ್ಮಾಂಡಗಳೂ ಪ್ರತ್ಯೇಕ ಪ್ರತ್ಯೇಕವಾಗಿ ಕಾಣುವುವು. ಇವನ 
ಸಂಪೂರ್ಣ ಚರಿತ್ರವಿಷಯಗಳು ವೇದಗಳಿಗೂ ತಿಳಿಯದು. ಇಂತಹ ವಿಷ್ಣುವಿನ 
ತಲೆಯು ಕಡಿದುಹೋಗಲು ಕಾರಣವೇನು? 

೩೧. ವ್ಯಾಸನು ಹೇಳುತ್ತಾನೆ:--ಪಾಂಡವನಶ್ರೇಷ್ಠನಾದ ಯುಧಿಸ್ಕಿರನೆ ! 
ಮಂಗಳಕರವಾದ ಈ ಪೌರಾಣಿಕ ಕಥೆಯನ್ನು ಕೇಳು. ಚರಾಚರಾತ್ಮಕ ಪ್ರಪಂಚ 
ದಲ್ಲಿ ವಿಷ್ಣುವಿನ ಈ ಚರಿತ್ರೆಯನ್ನು ಯಾರೂ ಅರಿಯರು. 


೧೮೨ ಶ್ರೀ ಸ್ಕಾಂದಮಹಾಪುರಾಣಂ 


ಏಕದಾ ಬ್ರಹ್ಮಸಭಾಯಾಂ ಗತಾ ದೇವಾಃ ಸನಾಸವಾಃ । 


ಭೂರ್ಲೊಕಾದ್ಯಾಶ್ಚ್ಹ ಸರ್ನೇಹಿ ಸ್ಥಾನರಾಣಿ ಚರಾಣಿ ಚ ॥೩೨॥ 
ದೇನಾ ಬ್ರಹ್ಮರ್ಷ್ನಯಃ ಸರ್ವೇ ನಮಸ್ಕರ್ತುಂ ನಿತಾಮಹಂ | 
ವಿಷ್ಣುರಷ್ಯಾಗತಸ್ತತ್ರ ಸಭಾಯಾಂ ಮಂತ್ರಕಾರಣಾತ್‌ ॥ ೩೩॥ 


ಬ್ರಹ್ಮಾಚಾಃಪಿ ಸು ಗರ್ನಿಷ್ಠ ಉನಾಚೇದಂ ನಚಸ್ತದಾ | 

ಭೋ ಭೋ ದೇವಾಃ ಶೃಣುಧ್ಧಂ ಕಸ್ಟ್ರೃಯಾಣಾಂ ಕಾರಣಂ ಮಹತ್‌ ॥ 

ಸತ್ಯಂ ಬ್ರುನಂತು ವೈ ದೇವಾ ಬ್ರಹ್ಮೇಶನಿಸ್ಲುಮಧ್ಯತಃ [ 

ತಾಂ ವಾಚಂ ಚ ಸಮಾಕರ್ಣ್ಯ ದೇವಾ ನಿಸ್ಮಯಮಾಗತಾಃ ॥ ೩೫ ॥ 

ಊಚುಶ್ಚೆನ ತತೋ ದೇವಾ ನ ಜಾನೀನೋ ವಯಂ ಸುರಾಃ । 

ಬ್ರಹ್ಮಪತ್ನೀ ತದೋವಾಚ ವಿಷ್ಣುಂ ಪ್ರತಿ ಸುರೇಶ್ವರಂ । 

ತ್ರಯಾಣಾಮಸಿ ದೇವಾನಾಂ ಮಹಾಂತಂ ಚ ನದಸ್ವ ಮೇ ॥ ೩೬ ॥ 
ವಿಷ್ಣರುವಾಚ :-- 

ನಿಷ್ಣುಮಾಯಾಬಲೇನೈನ ಮೋಹಿತಂ ಭುವನತ್ರಯಂ । 

ತತೋ ಬ್ರಹ್ಮೋವಾಚ ಚೇದಂ ನ ತ್ವಂ ಜಾನಾಸಿ ಭೋ ವಿಭೋ ॥ &೩೭॥ 

ನೈನ ಮುಹ್ಯಂತಿ ತೇ ಮಾಯಾಬಲೇನ ನೈನಮೇನ ಚ । 

ಗರ್ವಹಿಂಸಾಪರೋ ದೇವೋ ಜಗದ್ಭರ್ತಾ ಜಗತ್ಭ್ರಭುಃ ॥ ೩೮॥ 





೩೨-೩೩. ಒಂದಾನೊಂದು ಸಮಯದಲ್ಲಿ ಬ್ರಹ್ಮನ ಸಭೆಗೆ ಇಂದ್ರಾದಿ 
ದೇವತೆಗಳೂ, ಭೂರಾದಿ ಸಕಲ ರೋಕದವರೂ, ಸ್ಥಾವರ ಜಂಗಮಗಳೂ, 
ಬ್ರಹ್ಮರಿಗಳೂ ಬ್ರಹ್ಮನನ್ನು ವಂದಿಸುವುದಕ್ಕಾಗಿ ಹೋದರು. ವಿಷ್ಣುವು ಆ ಸಜೆಗೆ 
ಮಂತ್ರಾಲೋಚನೆಗಾಗಿ ಬಂದನು. 

೩೪-೩೫. ಆಗ ಬ್ರಹ್ಮನು ಗರ್ವಸಹಿತನಾಗಿ ""ಅಯ್ಯಾ ದೇವತೆಗಳೆ! ಬ್ರಹ್ಮ 
ವಿಷ್ಣು ಮಹೇಶ್ವರರಲ್ಲಿ ಪ್ರಪಂಚಕ್ಕೆ ಪ್ರಧಾನ ಕಾಣರರಾರು? ನಿಜವಾಗಿ ಹೇಳಿರಿ'' 
ಎಂದು ನುಡಿದನು. ಆ ಮಾತನ್ನು ಕೇಳಿ ದೇವತೆಗಳು ಅಚ್ಚರಿಗೊಂಡರು. 

೩೬. ತರುವಾಯ ಅವರು, "" ನಾವರಿಯೆವು?' ಎಂದರು. ಆಗ ಬ್ರಹ್ಮನ 
ರಾಣಿಯಾದ ವಾಣಿಯು ವಿಷ್ಣುವನ್ನು ಕುರಿತು ಬ್ರಹ್ಮಾದಿಗಳಲ್ಲಿ ಉತ್ತಮನಾ 
ಕೆಂಬುದನ್ನು ನನಗೆ ಹೇಳೆಂದಳು. 

೩೭-೩೯. ವಿಷ್ಣುವು ಹೇಳುತ್ತಾನೆ:-""ನಿಷ್ಣುವಿನ ಮಾಯಾಶಕ್ತಿಯಿಂದಲೆ 
ತ್ರಿಭುವನವೂ ಮೋಹಗೊಂಡಿದೆ.?' ವಿಷ್ಣುವು ಇಂತೆನಲು, ಬ್ರಹ್ಮನು ಮುನಿಸಿ 
ನಿಂದ ನಡುಗುತ್ತಿರುವ ತುಟಿಯುಳ್ಳವನಾಗಿ ವಿಷ್ಣುವನ್ನು ಕುರಿತು, ""ನಿನಗೆ 
ತಿಳಿಯದು. ನಿನ್ನ ಮಾಯಾಶಕ್ತಿಯಿಂದ ಯಾರೂ ಮೋಹಗೊಳ್ಳು ವುದಿಲ್ಲ. 
ನೀನು ಹೇಳಿದಂತಲ್ಲವೇ ಅಲ್ಲವು. ಜಗತ್ಸತಿಯಾದರೂ ನೀನು ಅಹಂಕಾರಿಯು. 


ಪಂಚದಶೋರಧ್ಯಾಯಃ॥ ೧೮೩ 


ಜ್ಯೇಷ್ಠಂ ತ್ವಾಂ ನನಿದುಃ ಸರ್ವೇ ವಿಷ್ಣುಮಾಯಾನೃತಾಃ ಖಲಾಃ । 


ತತೋ ಬ್ರಹ್ಮಾ ಸರೋಹಷೇಣ ಕ್ರುದ್ಧಃ ಪ್ರಸ್ಫುರಿತಾನನಃ ೩೯ 
ಉವಾಚ ವಚನಂ ಕೋಪಾದ್ದೇ ನಿಷ್ಣೋ ಶೃಣು ಮೇ ನಚಃ । 
ಯೇನ ನಕ್ಚ್ರೇಣ ಸಭಾಯಾಂ ನಚನಂ ಸಮುದೀರಿತಂ ॥೪೦॥ 


ತಚ್ಛೀರ್ಷಂ ಪತತಾದಾಶು ಚಾಲ್ಪಳಾಲೇನ ವೈ ಪುನಃ । 

ತತೋ ಹಾಹಾಕೃತಂ ಸರ್ವಂ ಸೇಂದ್ರಾಃ ಸರ್ಹಿಪುರೋಗಮಾಃ ॥ ೪೧॥ 
ಬ್ರಹ್ಮಾಣಂ ಕಮಯಾಮಾಸುರ್ನಿಷ್ಣುಂ ಪ್ರತಿ ಸುರೋತ್ತಮಾಃ । 
ನಿಷ್ಣುಶ್ಚ ತದ್ವಚಃ ಶ್ರುತ್ವಾ ಸತ್ಯಂ ಸತ್ಯಂ ಭವಿಷ್ಯತಿ ಟ ೪೨ ॥ 
ತತೋ ವಿಷ್ಣುರ್ಮಹಾತೇಜಾಸ್ತೀರ್ಥಸ್ಯೋತ್ಸಾದನೇನ ಚ । 

ತಪಸ್ತೇಪೇ ತು ಮೈ ತತ್ರ ಧರ್ಮಾಂರಣ್ಯೇ ಸುರೇಶ್ವರಃ । 


ಅಶ್ವಶೀರ್ಷಮುಖಂ ದೃಷ್ಟ್ವಾ ಹಯಗ್ರೀವೋ ಜನಾರ್ದನಃ ॥ ೪೩॥ 
ತಪಸ್ತೇಪೇ ಮಹಾಭಾಗ ವಿಧಿನಾ ಸಹ ಭಾರತ! 

ನ ಶಕ್ಕಂ ಕೇನ ಚಿತ್ಕರ್ತುಮಾತ್ಮನಾತ್ಮೆನ ತುಷ್ಟವಾನ್‌ ॥ ೪೪॥ 
ಬ್ರಹ್ಮಾಸಿ ತಪಸಾ ಯುಕ್ತಸ್ತೇಪೇ ವರ್ಷಶತತ್ರಯಂ । 

ತಿಷ್ಪನ್ನೇನ ಪುರೋ ನಿಷ್ಣೋರ್ನಿಷ್ಣುಮಾಯಾನಿನೋಹಿತಃ ॥ ೪೫ ॥ 


ಹಿಂಸಾಸರನು. ನಿನ್ನ ಮಾಯೆಯಿಂದ ಆವೃತರಾದ ಯಾರೂ ನಿನ್ನನ್ನು ಉತ್ತವ` 
ನನ್ನಾಗಿ ತಿಳಿದಿರುವುದಿಲ್ಲ. 

೪೦-೪೧. ಎಲೈ ನಿಷ್ಣುವೆ! ನನ್ನ ವಚನವನ್ನು ಕೇಳು. ನೀನು ಯಾವ 
ಬಾಯಿಯಿಂದ ಈ ಸಭೆಯಲ್ಲಿ ಈ ಮಾತನ್ನು ಆಡಿದೆಯೊ; ಆ ಬಾಯಿಯಿರುವ 
ತಲೆಯು ಸ್ವಲ್ಪ ಕಾಲದಲ್ಲಿಯೇ ಬಿದ್ದುಹೋಗಲಿ'' ಎಂದನು. ಬಳಿಕ ಇದನ್ನು 
ಫೇಳಿ ಖಯುಸಿಗಳೂ, ದೇವತೆಗಳೂ ಹಾಹಾಕಾರಮಾಡಿದರು. 

೪೨, ದೇವತೆಗಳು ವಿಷ್ಣುವಿನಲ್ಲಿ ಕುಪಿತನಾದ ಬ್ರಹ್ಮನನ್ನು ಸಮಾಧಾನ 
ಗೊಳಿಸಿದರು. ನಿಷ್ಣುವೂ ಆ ಬ್ರಹ್ಮನ ಮಾತನ್ನು ಕೇಳಿ ಇದು ಸತ್ಯವಾಗುವು 
ದೆಂ?' ದನು. 

೪೩-೪೪. ಬಳಿಕ ಮಹಾತೇಜಸ್ವಿಯಾದ ವಿಷ್ಣುವು ತನ್ನ ಅಶ್ವಮುಖ 
ವನ್ನು ಕಂಡು ಧರ್ಮಾರಣ್ಯದಲ್ಲಿ ತೀರ್ಥವನ್ನು ನಿರ್ಮಿಸಿ ಅಲ್ಲಿ ಬ್ರಹ್ಮನೊಡನೆ 
ಯಾರಿಂದಲೂ ಮಾಡಲಾಗದ ತಪಸ್ಸನ್ನು ಮಾಡಿ ತನ್ನಿಂದಲೇ ತಾನು ಸಂತೋಷ 
ಗೊಂಡನು. 

೪೫. ಬ್ರಹ್ಮನೂ ವಿಷ್ಣುಮಾಯೆಯಿಂದ ಮೋಹಿತನಾಗಿ ಅವನ ಮುಂದೆ 
ನಿಂತುಕೊಂಡೇ ಮುನ್ನೂರುವರ್ಷಗಳ ಕಾಲ ತಪಸ್ಸನ್ನಾಚರಿಸಿದನು. 


೧೮೪ ಶ್ರೀ ಸ್ಕಾಂದಮಹಾಪುರಾಣಂ 


ಯಥಾರ್ಥಮನದತ್ತುಷ್ಟೋ ದೇವದೇವೋ ಜಗತ್ಪತಿಃ । 
ಬ್ರಹ್ಮಂಸ್ತೇ ಮುಕ್ತತಾದ್ಯಾಸ್ತಿ ಮಮ ಮಾಯಾ ಪ್ಯದುಃಸಹಾ ॥ ೪೬॥ 
ತತೋ ಲಬ್ಧನರೋ ಬ್ರಹ್ಮಾ ಹೃಷ್ಟಜಿತ್ತೋ ಜನಾರ್ದನಃ । 


ಉವಾಚ ಮಧುರಾಂ ವಾಚಂ ಸರ್ವೇಷಾಂ ಹಿತಕಾರಣಾತ್‌ ॥ ೪೭॥ 
ಅತ್ರಾಃಭನನ್ಮಹಾಕ್ಸೇತ್ರಂ ಪುಣ್ಯಂ ಪಾಪಪ್ರಣಾಶನಂ । 
ವಿಧಿನಿಷ್ಣುಮಯಂ ಚೈತದ್ಭನತ್ನೇತನ್ನ ಸಂಶಯಃ ॥ ೪೮ ॥ 
ತೀರ್ಥಸ್ಯ ಮಹಿಮಾ ರಾಜನ್ಮ್ನಯಶೀರ್ಷಸ್ತದಾ ಹರಿಃ । 

ಶುಭಾನನೋ ಹಿ ಸಂಜಾತಃ ಪೂರ್ನೇಣೈನಾನನೇನ ತು ॥೪೯॥ 
ಕಂದರ್ಪಕೋಟಲಾನಣ್ಯೋ ಜಾತಃ ಕೃಷ್ಣಸ್ತದಾ ನೃಪ । 

ಬ್ರಹ್ಮಾಸಿ ತಪಸಾ ಯುಕ್ತೋ ದಿವ್ಯಂ ವರ್ಷಶತತ್ರಯಂ ॥ ೫೦॥ 


ಸಾನಿತ್ರ್ಯಾ ಚ ಕೃತಂ ಯತ್ರ ನಿಷ್ಣುಮಾಯಾ ನ ಬಾಧತೇ । 
ಮಾಯಯಾ ತು ಕೃತಂ ಶೀರ್ಷಂ ಪಂಚಮಂ ಶಾರ್ದುಲಸ್ಯ ವಾ ॥ ೫೧॥ 
ಧರ್ಮಾಂರಣ್ಯೇ ಕೃತಂ ರಮ್ಯಂ ಹರೇಣ ಛೇದಿತಂ ಪುರಾ । 

ತಸ್ಮೈ ದತ್ವಾ ವರಂ ನಿಷ್ಣುರ್ಜಗಾಮಾದರ್ಶನಂ ತತಃ ॥ ೫೨ ॥ 


೪೬. ಜಗದೊಡೆಯನಾದ ವಿಷ್ಣುವು. ಯಜ್ಞ ಕ್ಕಾಗಿ ಸಂತುಷ್ಟನಾಗಿ 
«ಅಯ್ಯಾ ಬ್ರಹ್ಮನೆ! ನೀನು ಮುಕ್ತನಾದೆ. ನಿನಗೆ ನನ್ನ ಮಾಯೆಯು ಸಹಿಸಲು 
ಶಕ್ಯವಾಗುವುದು'' ಎಂದು ವರವನ್ಲಿತ್ತನು. 

೪೭. ಬಳಿಕ ಬ್ರಹ್ಮನು ವಿಷ್ಣುವಿನಿಂದ ವರವನ್ನು ಪಡೆದು ಸಂತೋಷ 
ಗೊಂಡನು. ವಿಷ್ಣುವು ಸಕಲ ಜನರ ಹಿತಕ್ಕೋಸ್ಕರವಾಗಿ ಮಧುರವಾದ 
ಮಾತನ್ನಾಡಿದನು. 

೪೮. ಇಲ್ಲಿ ಪುಣ್ಯಕರವಾಗಿಯೂ ಪಾಸನಾಶಕವಾಗಿಯೂ ಇರುವ ಮಹಾ 
ಕ್ಷೇತ್ರವಾಗಿದೆ. ಇದು ಬ್ರಹ್ಮವಿಷ್ಣು ರೂಪವಾದುದು. ಇದರಲ್ಲಿ ಸಂದೇಹವಿಲ್ಲ. 

೪೯. ಈ ತೀರ್ಥದ ಮಹಿಮೆಯಿಂದ ಆಗಲೆ ಹಯವದನನಾದ ಆ ಹರಿಯು 
ಹಿಂದಿನ ಮುಖವನ್ನು ಸಡೆದು ಸುಂದರವಾದ ವದನವುಳ್ಳವನಾದನು. 

೫೦-೫೨. ಆಗಲಾತನು ಕೋಟಿಮನ್ಮಥರಂತೆ ಸೌಂದರ್ಯವುಳ್ಳವನಾದನು. 
ಮುನ್ನೂರು ವರ್ಷಗಳಕಾಲ ತಪಸ್ಸನ್ನು ಮಾಡಿದ ಬ್ರಹ್ಮನೂ ವಿಷ್ಣುಮಾಯೆಯ 
ಬಾಧೆಯಿಲ್ಲದವನಾದನು. ವಿಷ್ಣುಮಾಯೆಯಿಂದ ಹುಲಿಯ ತಲೆಯಂತಾದ 
ಅವನ ಐದನೆಯ ಮಸ್ತಕವು ಶಿವನಿಂದ ಕತ್ತರಿಸಲ್ಪಟ್ಟುದಾಗಿ ಇಲ್ಲಿ ಸುಂದರ 
ವಾಯಿತು. ನಿಷ್ಣುವು ಹೀಗೆ ಆ ಬ್ರಹ್ಮನಿಗೆ ವರವನ್ನಿತ್ತು ತಾನೂ ಕಣ್ಮರೆ 
ಯಾದನು. 


ಪಂಚದಶೋತಧ್ಯಾಯಃ ೧೮೫ 


ಸ್ಥಾಪಯಿತ್ವಾ ವಿಧಿಸ್ತತ್ರ ತೀರ್ಥಂ ಚೈನ ತ್ರಿಲೋಚನಂ | 


ಮುಕ್ತೇಶಂ ನಾಮ ದೇವಸ್ಯ ಮೋಕ್ಬತೀರ್ಥಮರಿಂದವು ॥ ೫೩ ॥ 
ಗತಃ ಸೋಪಿ ಸುರಶ್ರೇಷ್ಮಃ ಸ್ವಸ್ಥಾನಂ ಸುರಸೇನಿತಂ । 
ತತ್ರ ಪ್ರೇತಾ ದಿನಂ ಯಾಂತಿ ತರ್ಪಕೇನ ಪ್ರತರ್ಹಿತಾಃ ॥ ೫೪ ॥ 
ಅಶ್ಚಮೇಧಫಲಂ ಸ್ನಾನೇ ಸಾನೇ ಗೋದಾನಜಂ ಫಲಂ 
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ ॥ ೫೫ ॥ 


ಸ್ನಾನಾಂರ್ಥಮತ್ಪಾಗಚ್ಛಂತಿ ದೇವತಾಃ ಪಿತರಸ್ತಥಾ । 
ಕಾರ್ತಿಕ್ಯಾಂ ಕೃತ್ತಿಕಾಯೋಗೇ ಮುಕ್ತೇಶಂ ಪೂಜಯೇತ್ತು ಯಃ ॥೫೬॥ 
ಸ್ನಾತಾ ದೇವಸರೇ ರಮ್ಯೇ ನತ್ವಾ ದೇವಂ ಜನಾರ್ದನಂ । 


ಯಃ ಕರೋತಿ ನರೋ ಭಕ್ತ್ಯಾ ಸರ್ವಪಾಪೈಃ ಪ್ರಮುಚ್ಯತೇ ॥ ೫೭ ॥ 
ಭುಕ್ತ್ವಾ ಭೋಗಾನ್ಯಥಾಕಾಮಂ ನಿಷ್ಣುಲೋಕಂ ಸ ಗಚ್ಛತಿ | 

ಅಪುತ್ರಾ ಕಾಕನಂಧ್ಯಾ ಚ ಮೃತವತ್ಸಾ ಮೃತಪ್ರಜಾ ॥ ೫೮ ॥ 
ಏಕಾಂಂಬರೇಣ ಸುಸ್ನಾತೌ ಪತಿಪತ್ತೌ ಯಥಾನಿಧಿ । 

ತದ್ದೋಷಂ ನಾಶಯೇನ್ನೂನಂ ಪ್ರಜಾಪ್ತಿಪ್ರತಿಬಂಧಕಂ ॥೫೯॥ 





೫೩-೫೪. ಬ್ರಹ್ಮನು ಅಲ್ಲಿ ಮುಕ್ತೇಶನೆಂಬ ಹೆಸರಿನಿಂದ ಮಹೇಶ್ವರ 
ನನ್ನೂ, ಮೋಕ್ಸತೀರ್ಥವನ್ನೂ ಸ್ಥಾಪಿಸಿ ದೇವಸೇವಿತವಾದ ತನ್ನ ಸ್ಥಾನಕ್ಕೆ 
ಹೋದನು. ಆ ತೀರ್ಥದಲ್ಲಿ ತರ್ಸಣಮಾಡುವುದರಿಂದ ಪ್ರೇತಗಳು ತೃಪ್ತಿ 
ಗೊಂಡು ಸ್ವರ್ಗಕ್ಕೆ ಹೋಗುವುವು. 

೫೫. ಇಲ್ಲಿ ಪುಷ್ಪರಾದಿ ತೀರ್ಥಗಳೂ, ಗಂಗಾದಿ ನದಿಗಳೂ ಸನ್ನಿಹಿತ 
ವಾಗಿರುವುವು. ಇಲ್ಲಿ ಸ್ನಾನಮಾಡುವುದರಿಂದ ಅಶ್ವಮೇಧಯಾಗಫಲವೂ, 
ಇದರ ನೀರನ್ನು ಕುಡಿಯುವುದರಿಂದ ಗೋದಾನಫಲವೂ ಸಂಭವಿಸುವುವು. 

೫೬-೫೭. ದೇವತೆಗಳೂ, ಪಿತೃಗಳೂ ಇಲ್ಲಿಗೆ ಸ್ನಾನಕ್ಕಾಗಿ ಬರುವರು. 
ಕೃತ್ತಿಕಾನಕ್ಸತ್ರದ ಯೋಗವಿರುವ ಕಾರ್ತಿಕಮಾಸದ ಹುಣ್ಣಿಮೆಯಲ್ಲಿ ಈ ದೇವ 
ಸರೋವರದಲ್ಲಿ ಮಿಂದು ಭಕ್ತಿಯಿಂದ ಮುಕ್ತೇಶನನ್ನು ಪೂಜಿಸಿದರೂ ವಿಷ್ಣು 
ವನ್ನು ನಮಸ್ಕರಿಸಿದರೂ ನರನು ಸಕಲ ಪಾಸಮುಕ್ತನಾಗುವನು. 

೫೮-೫೯. ವಿಷಯಸುಖಗಳನ್ನು ಯಥೇಚ್ಛವಾಗಿ ಅನುಭವಿಸಿ ವೈಕುಂಠ 
ವನ್ನು ಸೇರುವನು. ಮಕ್ಕಳಿಲ್ಲದವಳೂ, ಹುಟ್ಟುಬಂಜೆಯೂ, ಸತ್ತಮಕ್ಕಳು 
ಳ್ಳವಳೂ ಆಗಿದ್ದರೆ ಆ ಸ್ತ್ರೀಯು ತನ್ನ ಗಂಡನೊಡನೆ ಒಂದೇ ಬಟ್ಟೆಯಿಂದ ಇಲ್ಲಿ 
ಶಾಸ್ತ್ರೋಕ್ತವಾಗಿ ಸ್ಲಾನಮಾಡಿದರೆ ಅವಳ ಸಂತತಿಗೆ ಅಡ್ಡಿಯಾದ ದೋಷವು 
ನೀಗುವುದು. 


೧೮೬ ಶ್ರೀ ಸ್ಯಾಂದಮುಹಾಪುರಾಣಂ 


ಮೋಕ್ಬೇಶ್ವರಪ್ರಸಾದೇನ ಪುತ್ರಸೌತ್ರಾದಿ ವರ್ಧಯೇತ್‌ | 


ದದ್ಯಾದ್ವೈ ಕೇನಚಿತ್ತೇನ ಫಲಾನಿ ಸತ್ಯಸಂಯಂತಾ ॥ ೬೦॥ 
ನಿಧಾಯ ವಂಶಪಾತ್ರೇಃಪಿ ನಾರೀ ದೋಷಾತ್ರಮುಚ್ಯತೇ । 

ಪ್ರಾಪ್ಲುವಂತಿ ಚ ದೇವಾಶ್ಚ ಅಗ್ನಿಷ್ಟೋಮಫಲಂ ನೃಪ ॥೬೧॥ 
ವೇಧಾ ಹರಿರ್ಹರಶ್ಚೆನ ತಪ್ಯಂತೇ ಪರಮಂ ತಪಃ । 

ಧರ್ಮಾಃರಣ್ಯೇ ತ್ರಿಸಂಧ್ಯಂ ಚ ಸ್ನಾತ್ವಾ ದೇವಸರಸ್ಯಥ ॥ ೬೨॥ 


ತತ್ರ ನೋಕ್ಸೇಶ್ವರಃ ಶಂಭುಃ ಸ್ಥಾಪಿತೋ ವೈ ತತಃ ಸುರೈಃ ! 

ತತ್ರ ಸಾಂಗಂ ಜಪಂ ಕೃತ್ವಾ ನ ಭೂಯಃ ಸ್ತನಪೋ ಭವೇತ್‌ ॥೬೩॥ 
ಏವಂ ಕ್ಲೇತ್ರಂ ಮಹಾರಾಜ ಪ್ರಸಿದ್ಧಂ ಭುವನತ್ರಯೇ । 

ಯಸ್ವತ್ರ ಕುರುತೇ ಶ್ರಾದ್ಧಂ ಪಿತ್ಳೂಣಾಂ ಶ್ರದ್ಧಯಾನ್ಸಿತಃ ॥ ೬೪ ॥ 
ಉದ್ಭರೇತ್ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಂ । 

ದೇನಸರೋ ಮಹಾರಮ್ಯಂ ನಾನಾಪುಷ್ಟೈಃ ಸಮಸ್ಸಿತಂ । 


ಶ್ಯಾಮಂ ಕಮಲಕಲ್ಹಾರೈರ್ವಿನಿಧೈರ್ಜಲಜಂತುಭಿಃ ॥ ೬೫ ॥ 
ಬ್ರಹ್ಮನಿಷ್ಣುಮಹೇಶಾದ್ಯೈಃ ಸೇವಿತಂ ಸುರಮಾನುಷೈಃ | 
ಸಿದ್ಧೈರ್ಯಕ್ಸೈೈಶ್ಚ ಮುನಿಭಿಃ ಸೇವಿತಂ ಸರ್ವತಃ ಶುಭಂ ॥ ೬೬॥ 





೬೦-೬೧. ಹೆಂಗಸು ಒಮ್ಮನಸ್ಸಿನಿಂದ ಸತ್ಯವನ್ನು ನುಡಿಯುತ್ತ ಬಿದಿರಿನ 
ಮೊರದಲ್ಲಿ ಹಣ್ಣುಗಳನ್ನಿರಿಸಿ ದಾನಮಾಡಿದರೆ ಅವಳು ದೋಷನಿಮುಕ್ತಳಾಗಿ 
ಮೋಕ್ಸೇಶ್ವರನ ಅನುಗ್ರಹದಿಂದ ಪುತ್ರಪೌತ್ರರನ್ನು ಸಡೆಯುವಳು. ದೇವತೆ 
ಗಳೂ ಅಗ್ನಿಷ್ಟೋಮಯಾಗದ ಫಲವನ್ನು ಹೊಂದುವರು. 

೬೨. ಹರಿಹರಬ್ರಹ್ಮರು ಈ ಧರ್ಮಾರಣ್ಯದ ದೇವಸರೋವರದಲ್ಲಿ ಮೂರು 
ಸಂಧ್ಯಾಕಾಲಗಳಲ್ಲಿಯೂ ಮಿಂದು ಉತ್ತಮವಾದ ತಪಸ್ಸನ್ನಾಚರಿಸುವರು. 

೬೩. ಅಲ್ಲಿ ದೇವತೆಗಳು ಮೋಕ್ಲೇಶ್ವರನಾದ ಶಂಕರನನ್ನು ಪ್ರತಿಷ್ಠೆ 
ಮಾಡಿರುವರು. ಅಲ್ಲಿ ಅಂಗನ್ಯಾಸ ಕರನ್ಯಾಸ ಸಹಿತವಾಗಿ ಜಪವನ್ಮುಮಾಡುವ 
ಮಾನವನು ತಿರುಗಿ ಹುಟ್ಟುವುದಿಲ್ಲ. 

೬೪-೬೬, ಈ ಕ್ಷೇತ್ರವು ಮೂರು ಲೋಕಗಳಲ್ಲಿ ವಿಖ್ಯಾತವಾಗಿರುವುದು. 
ಇಲ್ಲಿ ಶ್ರದ್ಧೆಯಿಂದ ನಿತೃಶ್ರಾದ್ಧವನ್ನು ಮಾಡುವ ನರನು ಏಳು ಗೋತ್ರಗಳನ್ನ್ಯೂ 
ನೂರೊಂದು ಕುಲಗಳನ್ನೂ ಉದ್ಭಾರಮಾಡುವನು. ಈ ದೇವಸರೋವರವು 
ಅತ್ಯಂತ ರಮಣೀಯವೂ, ಅನೇಕ ಪುಷ್ಪಗಳಿಂದ ಕಂಗೊಳಿಸುವುದೂ, ಕಮಲ 
ಕಲ್ಹಾರ ಪುಷ್ಪ ಮತ್ತು ಜಲಚರಪ್ರಾಣಿಗಳಿಂದ ನೀಲವರ್ಣವೂ, ಬ್ರಹ್ಮ ವಿಷ್ಣು 
ಮಹೇಶ್ವರರಿಂದಲೂ, ದೇವತೆಗಳು, ಮನುಷ್ಯರು, ಸಿದ್ಧರು, ಯಕ್ಸರು, 
ಮುನಿಗಳು ಇವರೇ ಮೊದಲಾ ನವರಿಂದ ಸೇವಿಸಲ್ಪಟ್ಟುದೂ ಆಗಿರುವುದು. 


ಪಂಚದರೋಧ್ಯಾರು ೧೫೭ 


ಯುಧಿಷ್ಠಿರ ಉನಾಚ:- 
ಕೀದೃಶಂ ತತ್ಸರಃ ಖ್ಯಾತಂ ತಸ್ಮಿನ್ನಾನೇ ದ್ವಿಜೆೀತ್ತಮ । 
ತಸ್ಯ ರೂಪಂ ಪ್ರಕಾರಂ ಚ ಕಥಯಸ್ವ ಯಥಾತಥಂ ॥ ೬೭ ॥ 
ವ್ಯಾಸ ಉವಾಚ:- 
ಸಾಧು ಸಾಧು ಮಹಾಪ್ರಾಜ್ಞ ಧರ್ಮಪುತ್ರ ಯುಡಿಸ್ಮಿರ । 
ಯಸ್ಯ ಸಂಕೀರ್ತನಾನ್ನೂನಂ ಸರ್ವಪಾಪೈಃ ಪ್ರಮುಚ್ಯತೇ ॥ ೬೮॥ 
ಅತಿಸ್ವಚ್ಛತರಂ ಶೀತಂ ಗಂಗೋದಕಸಮಪುಭಂ ! 
ಪವಿತ್ರಂ ಮಧುರಂ ಸ್ವಾದು ಜಲಂ ತಸ್ಯ ನೃಪೋತ್ತಮ ॥೬೯॥ 
ಮಹಾನಿಶಾಲಂ ಗಂಭೀರಂ ದೇವಖಾತಂ ನುನೋರಮಂ । 
ಲಹರ್ಯಾದಿಭಿರ್ಗಂಭೀರೈಃ ಫೇನಾನರ್ತಸಮಾಕುಲಂ ॥೭೦॥ 
ರುಷಮಂಡೂಕಕಮಕಠೈರ್ಮಕರೈಶ್ಚ ಸಮಾಕುಲಂ । 
ಶಂಖಶುಕ್ತ್ಯಾದಿಭಿರ್ಯುಕ್ತಂ ರಾಜಹಂಸೈಃ ಸುಶೋಭಿತಂ ॥೭೧॥ 
ವಟಿಪ್ಲಕ್ಸೈಃ ಸಮಾಯುಕ್ತಮ ಶ್ವತ್ಥಾಮ್ಟೈಶ್ತ ನೇಷ್ಟಿತಂ । 
ಚಕ್ರವಾಕಸಮೋಸೇತಂ ಬಕಸಾರಸಟಟ್ಟಭೈಃ ೭೨ 
ಕಮನೀಯಪ್ರಗಂಧಾಚೃಚ್ಛತ್ರಪತ್ತೈಃ ಸುಶೋಭಿತಂ । 
ಸೇವ್ಯಮಾನಂ ದ್ವಿಜೈಃ ಸರ್ವೈಃ ಸಾರಸಾಧದ್ಯೈಃ ಸುಶೋಭಿತಂ ॥ ೭೩ ॥ 
ಸದೇವೈರ್ಮುನಿಭಿಶ್ಚೈನ ನಿಸ್ತೈರ್ಮರ್ತೈಶ್ಹ ಭೂನಿಪ । 
ಸೇವಿತಂ ದುಃಖಹಂ ಚೈವ ಸರ್ವಪಾಪಸಪ್ರಣಾಶನಂ ॥ ೭೪ ॥ 





೬೭, ಯುಧಿಷ್ಠಿರನು ಹೇಳುತ್ತಾನೆ:--ಎಲೈ ವ್ಯಾಸನೆ! ಆ ಧರ್ಮಾರಣ್ಯ 
ದಲ್ಲಿ ಪ್ರಸಿದ್ಧವಾದ ಆ ಸರೋವರವು ಎಂತಾದುದು? ಅದರ ಸ್ವರೂಪವನ್ನೂ 
ಯಥಾರ್ಥವಾಗಿ ತಿಳಿಸು. 

೬೮. ವ್ಯಾಸನು ಹೇಳುತ್ತಾನೆ:--ಧರ್ಮತನಯನಾದ ಯುಧಿಷ್ಮಿರನೆ! 
ಒಳ್ಳೆಯದು. ಆ ತೀರ್ಥವನ್ನು ವರ್ಣಿಸುವುದರಿಂದ ಮನುಷ್ಯನು ಸಕಲ 
ಪಾತಕಗಳಿಂದಲೂ ಮುಕ್ತನಾಗುವನು. 

೬೯. ಅರಸ! ಆ ತೀರ್ಥದ ನೀರು ಅತಿಶುದ್ಧವೂ, ತಣ್ಣಗೂ, ಗಂಗೋ 
ದಕಕ್ಕೆ ಸಮಾನವಾದ ಕಾಂತಿಯುಳ್ಳದೂ, ಸಿಹಿಯೂ, ರುಚಿಯೂ ಆಗಿರುವುದು. 

೭೦-೭೬. ಆ ಸರೋವರವು ಅತ್ಯಂತ ವಿಶಾಲವೂ, ಆಳವೂ, ದೇವ 
ನಿರ್ಮಿತವೂ ಮನೋಹರವೂ, ಗಂಭೀರವಾದ ಅಲೆಗಳು ಮತ್ತು ನೊರೆಗಳ 
ಸುಳಿಗಳಿಂದ ಕೂಡಿದುದೂ, ಮಾನು, ಕಪ್ಪೆ, ಅಮೆ, ಮೊಸಳೆಗಳಿಂದ ಸಹಿತವೂ, 
ಮುತ್ತಿನಚಿಪ್ಪು, ರಾಜಹಂಸ ಪಕ್ಷಿಗಳಿಂದ ವಿರಾಜಿಸುವುದೂ, ಕೊಕ್ಕರೆ ಮೊದ 


೧೮೮ ಶ್ರೀ ಸ್ಕಾಂದಮ ಹಾಫುರಾಣಂ 


ಅನಾದಿನಿಧನೋದಂತಂ ಸೇವಿತಂ ಸಿದ್ಧಮಂಡಲೈಃ | 


ಸ್ನಾನಾದಿಭಿಃ ಸರ್ವದೈವ ತತ್ಸರೋ ನೃಪಸತ್ತಮ ॥ ೭೩೫೪ 
ವಿಧಿನಾ ಕುರುತೇ ಯಸ್ತು ನೀಲೋತ್ಸರ್ಗಂ ಚ ತತ್ತಟೇ 

ಪ್ರೇತಾ ನೈವ ಕುಲೇ ತಸ್ಯ ಯಾವದಿಂದ್ರಾಶ್ಚತುರ್ದಶ ॥ ೭೬ ॥ 
ಕನ್ಯಾದಾನಂ ಚ ಯೇ ಕುರ್ಯುರ್ನಿಧಿನಾ ತತ್ರ ಭೂಪತೇ । 

ತೇ ತಿಸ್ಮಂತಿ ಬ್ರಹ್ಮಲೋಕೇ ಯಾವದಾಭೂತಸಂಪ್ಲವಂ ॥ ೭೭0 
ಮಹಿಷೀಂ ಗೃಹದಾಸೀಂ ಚ ಸುರಭಿಂ ಸುತಸಂಯುತಾಂ । 

ಹೇಮವಿದ್ಯಾಂ ತಥಾ ಭೂಮಿಂ ರಥಾಂಶ್ಚ ಗಜವಾಸಸೀ ॥ ೭೮ ॥ 


ದದಾತಿ ಶ್ರದ್ಧಯಾ ತತ್ರ ಸೋಕ್ಸ್ಸಯಂ ಸ್ಪರ್ಗಮಶ್ನುತೇ I 
ದೇವಖಾತಸ್ಯ ಮಾಹಾತ್ಮ 8° ಯಃ ಪಠೇಚ್ಛೆ ನಸನ್ನಿಧೌ I 


ದೀರ್ಥಮಾಯುಸ್ತಥಾ ಸೌಖ್ಯಂ ಲಭತೇ ನಾಂತ್ರ ಸಂಶಯಃ nari 
ಯಃ ಶೃಣೋತಿ ನರೋ ಭಕ್ತ್ಯಾ ನಾರೀ ವಾ ತ್ವಿದಮದ್ಭುತಂ | 
ಕುಲೇ ತಸ್ಯ ಭವೇಚ್ಛೆಯಃ ಕಲ್ಬಾಂತೇಃಹಿ ಯುಧಿಷ್ಠಿರ neon 


ಲಾದ ಸಕಲ ಪಕ್ಷಿಗಳಿಂದ ಸೇನಿಸಲ್ಪಟ್ಟುದೂ, ದೇವತೆಗಳು, ಮುನಿಗಳು, 
ಬ್ರಾ ಹ್ಮಣರಿಂದಲೂ ಸಿದ್ಧರಿಂದಲೂ ಸೇವಿಸಲ್ಪಟ್ಟು ದೂ, ದುಃಖನಾಶಕವೂ, 
ಸಕಲ ಪಾಪಗಳನ್ನು ಪರಿಹರಿಸುವುದೂ, ಆದಿ ಮತ್ತು ಅಂತ್ಯವಿಲ್ಲದ 
ಪರಮಾತ್ಮನ ವೃತ್ತಾಂತವುಳ್ಳುದೂ ಆದುದು. ಆ ಸರೋವರದಲ್ಲಿ ಮಿಂದು 
ವಿಹಿತಕ್ರಮದಿಂದ ಅದರ ದಡದಲ್ಲಿ ವೃಷೋತ್ಸರ್ಗವನ್ನು ಮಾಡಿದರೆ ಅವನ 
ವಂಶದಲ್ಲಿ ಪ್ರೇತಗಳು ಹದಿನಾಲ್ಕು ಮಂದಿ ಇಂದ್ರರಿರುವವರೆಗೆ ಮಾಯ 
ವಾಗುವುವು. 

೭೭. ಅಲ್ಲಿ ಶಾಸ್ತ್ರರೀತಿಯಿಂದ ಕನ್ಯಾದಾನಮಾಡಿದವರು ಪ್ರಳಯಕಾಲದ 
ವರೆಗೆ ಬ್ರಹ್ಮಲೋಕದಲ್ಲಿ ವಾಸಿಸುವರು. 

೭೮-೭೯. ಅಲ್ಲಿ ಎಮ್ಮೆ, ದಾಸಿ, ಗಂಡು ಕರುವಿನಿಂದ ಸಹಿತವಾದ 
ಗೋವು, ಚಿನ್ನ, ವಿದ್ಯೆ, ಭೂಮಿ, ರಥ, ಆನೆ, ವಸ್ತ್ರಗಳನ್ನು ದಾನಮಾಡಿದವನು 
ಶಾಶ್ವತವಾದ ಸ್ವರ್ಗವನ್ನು ಹೊಂದುವನು. ಆ ದೇವಸರೋವರದ ಮಾಹಾತ್ಮ್ಮ್ಯೇ 
ಯನ್ನು ಶಿವನ ಹತ್ತಿರ ಪಠಿಸಿದವನು ದೀರ್ಫಾಯುಷ್ಯವನ್ನೂ , ಸೌಖ್ಯವನ್ನೂ 
ಹೊಂದುವನು, ಇದರಲ್ಲಿ ಸಂದೇಹವಿಲ್ಲ. 

೮೦. ಯುಧಿಸ್ಮಿರ! ಅದ್ಭುತವಾದ ಈ ಹಯಗ್ರೀವೋಪಾಖ್ಯಾನವನ್ನು 
ಗಂಡಸಾಗಲಿ, ಹೆಂಗಸಾಗಲಿ ಕೇಳಿದರೆ ಅವರ ವಂಶಕ್ಕೆ ಕಲ್ಬಾಂತ್ಯದವರೆಗೂ 
ಶ್ರೇಯಸ್ಸಾಗುತ್ತಿರುವುದು. 


ಪಂಚದಶೋತಧ್ಯಾಯಃ ೧೮೯ 


ಏತತ್ಸರ್ವಂ ಮಯಾಖ್ಯಾತಂ ಹಯಗ್ರೀನಸ್ಯ ಕಾರಣಂ | 
ಪ್ರಭಾವಸ್ತಸ್ಯ ತೀರ್ಥಸ್ಯ ಸರ್ವಸಾಪಾಂ ಪನುತ್ತಯೇ ॥ ೮೧॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ9ರಣ್ಯವರಾಹಾತ್ಮ್ಯೇ 
44 ಹಯಗ್ರೀವಾಖ್ಯಾನವರ್ಣನಂ > ನಾಮ ಪಂಚದಕೋತಧ್ಯಾಯಃ 


೮೧. ಸಕಲ ದುರಿತನಿವಾರಣೆಗಾಗಿ ವಿಷ್ಣುವು ಹಯಗ್ರೀವನಾಗಲು ಕಾರಣ 
ವನ್ನೂ ಆ ದೇವಸರೋವರದ ಮಾಹಾತ್ಮ್ಯವನ್ನೂ ಹೇಳಿದ್ದೇನೆ. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದನುಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ  ಹಯಗ್ರೀವಾಖ್ಯಾನವರ್ಣನ''ವೆಂಬ 
ಹದಿನೈದನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಸೋಡಶೋಂ್ಯಾಯಃ 
ಆನಂದಾಸ್ಥಾಸನನರ್ಣನಂ 
ಯುಧಿಷ್ಮಿರ ಉವಾಚ :-- 
ಫಕ್ಸಸಾಂ ಚೈವ ದೈತ್ಯಾನಾಂ ಯಕ್ಸಾಣಾಮಥ ಪಕ್ಸಿಣಾಂ । 


'ಭಯನಾಶಾಯ ಕಾಜೇಶೈರ್ಥರ್ಮಾಂರಣ್ಯನಿವಾಸಿನಾಂ won 

ಶಕ್ತೀಃ ಸಂಸ್ಥಾಪಿತಾ ನೂನಂ ನಾನಾರೂಸಪಾ ಹ್ಯನೇಕಶಃ । 

ತಾಸಾಂ ಸ್ಥಾನಾನಿ ನಾಮಾನಿ ಯಥಾರೂಪಾಣಿ ಮೇ ವದ ॥1೨॥ 
ವ್ಯಾಸ ಉವಾಚ: 

ಶೃಣು ಪಾರ್ಥ ಮಹಾಬಾಹೋ ಧರ್ಮಮೂರ್ತೆೇ ನೃಪೋತ್ತಮ । 

ಸ್ಥಾನೇ ನೈ ಸ್ಮಾಪಿತಾ ಶಕ್ತಿಃ ಕಾಜೇಶೈಶ್ಚೆನ ಗೋತ್ರಸಾ in 

ಶ್ರೀಮಾತಾ ಮದಾರಿಕಾಯಾಂ ಶಾಂತಾ ನಂದಾಪುರೇ ವರೇ । 

ರಿಕ್ಸಾರ್ಥಂ ದ್ವಿಜಮುಖ್ಯಾನಾಂ ಚತುರ್ದಿಕ್ಸು ಸ್ಥಿತಾಶ್ಚ ತಾಃ ॥೪॥ 

ಯುಕ್ತಾಶ್ಸೈನ ಸುರೈಃ ಸರ್ವೈಃ ಸ್ವ ಸ್ಪಸ್ಥಾನೇ ನೃಪೋತ್ತಮ । 

'ವನಮಧ್ಯೇ ಸ್ಥಿತಾಃ ಸರ್ವಾ ದ್ವಿಜಾನಾಂ ರಕ್ಸಣಾಯ ವೈ ॥೫॥ 

ಸಾ ಬಭೂವ ಮಹಾರಾಜ ಸಾನಿತ್ರೀತಿ ಪ್ರಥಾ ಶಿವಾ । 

ಅಸುರಾಣಾಂ ವಧಾರ್ಥಾಯ ಜ್ಞಾನಜಾ ಸ್ಥಾಪಿತಾ ಸುರೈಃ ॥೬॥ 





ಕನ್ನಡದ ಅನುವಾದ 
ಆನಂದಾಸ್ಥಾ ಪನ ವರ್ಣನ 
೧-೨. ಯುಧಿಷ್ಠಿರನು ಕೇಳುತ್ತಾನೆ: ಧರ್ಮಾರಣ್ಯನಿವಾಸಿಗಳಿಗೆ 
ರಾಕ್ಸಸರು, ದೈತ್ಯರು, ಯಕ್ಬರು, ಪಕ್ಷಿಗಳು ಇವರ ಭಯವನ್ನು ನಿವಾರಿಸ 
ಲೋಸುಗ ಬ್ರಹ್ಮ ವಿಷ್ಣು ಮಹೇಶ್ವರರು ಅನೇಕ ರೂಪರಾದ ಶಕ್ತಿದೇವತೆಗಳನ್ನು 
ಸ್ಥಾಪಿಸಿರುತ್ತಾರೆ. ಅವರ ಸ್ಥಳ, ಹೆಸರು, ರೂಪಗಳನ್ನು ನನಗೆ ತಿಳುಹಿಸು. 
೩-೪. ವ್ಯಾಸನು ಹೇಳುತ್ತಾನೆ :-ಧರ್ಮಮೂರ್ತಿಯಾದ ಪಾಂಡುನಂದನ! 
ಕೇಳು. ಬ್ರಹ್ಮನಿಷ್ಣು ಮಹೇಶ್ವರರು ಆ ಸ್ಥಳದಲ್ಲಿ ಶಕ್ತಿ ಮತ್ತು ಗೋತ್ರಪಾಲಿನಿ 
'ಯರನ್ನೂ, ಮದಾರಿಕೆಯಲ್ಲಿ ಶ್ರೀಮಾತೆಯನ್ನೂ, ನಂದಾಪುರದಲ್ಲಿ ಶಾಂತೆ 
ಯನ್ನೂ ಸ್ಥಾಪಿಸಿರುವರು. ಇವರು ಬ್ರಾಹ್ಮಣರ ರಕ್ಷಣೆಗಾಗಿ ನಾಲ್ಕು ದಿಕ್ಕು 
ಗಳಲ್ಲಿಯೂ ನೆಲಸಿರುವರು. 
೫. ಇವರು ಬ್ರಾಹ್ಮಣರನ್ನು ಕಾಪಾಡುವುದಕ್ಕಾಗಿ ಕಾಡಿನ ಮಧ್ಯದಲ್ಲಿ 
ತಮ್ಮ ತಮ್ಮ ಸ್ಥಾನದಲ್ಲಿ ಎಲ್ಲ ದೇವತೆಗಳೊಡನೆ ವಿರಾಜಿಸುತ್ತಿರುವರು. 
೬, ಮಹಾರಾಜ! ಸಾನಿತ್ರಿಯೆಂದು ಪ್ರಸಿದ್ಧಳಾದ ಪಾರ್ವತಿಯನ್ನು 
ಪೇವತೆಗಳು ಅಸುರರ ವಧೆಗಾಗಿ ಸ್ಥಾಪಿಸಿದ್ದಾರೆ. 


ಸೋಡಶೊ ($ಧ್ಯಾಯಃ ೧೯೧ 


ಗಾಯತ್ರೀ ಪಕ್ಸಿಣೇ ದೇವೀ ಛತ್ರಜಾ ದ್ವಾರವಾಸಿನೀ । 
ಶ್ರೀಹೋರೀ ಚೂಟಿಸಂಜ್ಞಾ ಯಾ ಪಿಪ್ಪಲಾಶಾಪುರೀ ತಥಾ । 


ಅನ್ಯಾಶ್ಚ ಬಹವಶ್ಚೈನ ಸ್ಥಾನಿತಾ ಭಯರಕ್ಸಣೇ nen 
ಪ್ರತೀಚ್ಯೋದೀಚ್ಯಾಂ ಯಾಮ್ಯಾಂ ವೈ ನಿಬುಧೈಃ ಸ್ಥಾಪಿತಾ ಹಿಸಾ। 
ನಾನಾಯುಧಧರಾ ಸಾ ಚ ನಾನಾಭರಣಭೂಷಿತಾ ॥೮॥ 
ನಾನಾನಾಹನಮಾರೂಢಾ ನಾನಾರೂಪಧರಾ ಚ ಸಾ। 
ನಾನಾಕೋಪಸಮಾಯುಕ್ತಾ ನಾನಾಭಯವಿನಾಶಿನೀ nen 
ಸ್ಥಾಸ್ಯ ಮ AEN ಯಥಾಯೋಗ್ಯಾ ದಿಶೋದಶ । 

ಗರುಡೇನ ಸಮಾರೂಢಾ ತ್ರಿಶೂಲನರಧಾರಿಣೀ ॥ ೧೦ 
ಸಿಂಹಾರೂಢಾ ಶುದ್ಧ ರೂಪಾ ವಾರುಣೀ ಪಾನದರ್ಪಿತಾ । 

ಖಡ | ಖೇಟಿಕಬಾಣಾಥ್ಛೈಃ ಕರೈರ್ಭಾತಿ ಶುಭಾನನಾ ॥ oon 
ರಕ್ತ ವಸ್ತ್ರಾವೃತಾ ಚೈನ ಸೀನೋನ್ನತಪಯೋಧರಾ | 

ಉದ್ಯದಾನಿತ್ಯ ಜಿಂಬಾಭಾ ಮದಾಘೂರ್ಣಿತಲೋಚನಾ ॥ ೧೨ ॥ 
ಏವಮೇಷಾ ಮುಹಾದಿವ್ಯಾ ಕಾಜೇಶೈಃ ಸ್ಥಾಪಿತಾ ತದಾ । 

ರಕ್ಸ್ರಾರ್ಥಂ ಸರ್ವಜಂತೂನಾಂ ಸತ್ಯಮಂದಿರವಾಸಿನಾಂ ॥ ೧೩ 1 





೭. ಭಯನಿವಾರಣೆಗಾಗಿ ಗಾಯತ್ರೀ, ಪಕ್ಷಿಣೀ, ಛತ್ರಜಾ, ದ್ವಾರ 
ವಾಸಿನೀ, ಶ್ರೀಹೋರೀ, ಚೂಟಾ, ನಿಪ್ಪಲಾ, ಆಶಾಪುರೀ ಎಂಬವರನ್ನೂ ಇನ್ನೂ 
ಇತರ ಬಹುಮಂದಿ ದೇವಿಯರನ್ನೂ ಸ್ಥಾ ಪಿಸಿದ್ದಾ ಕೆ. 

೮-೧೩. ಸತ್ಯಮಂದಿರದಲ್ಲಿ ವಾಸಿಸುವ ಸಕಲ ಪ್ರಾಣಿಗಳ ರಕ್ಸಣೆಗಾಗಿ 
ದೇವತೆಗಳು ಪಶ್ಚಿಮ, ಉತ್ತರ, ದಕ್ಸಿಣದಿಕ್ಕಿನಲ್ಲಿ ಸ್ಥಾಪಿಸಿರುವ ಆ ಜರು 
ನಾನಾಯುಧಗಳನ್ನು ಧರಿಸಿದವಳೂ, ಅನೇಕ ನಿಧಗಳಾದ ಒಡವೆಗಳಿಂದ ಭೂಷಿ 
ತಳೂ, ನಾನಾವಿಧವಾಹನಾರೂಢಳೂ, ನಾನಾರೂಪಗಳನ್ನುಧರಿಸಿದವಳೂ ಅನೇಕ 
ಬಗೆಯಾದ ಕೋಪಭಾವಗಳಿಂದ ಸಹಿತಳೂ, ವಿನಿಧ ಭಯವನ್ನು ನಿವಾರಿಸುವ. 
ವಳೂ ಆಗಿರುವಳು. ಇವಳು ಔಚಿತ್ಯವನ್ನನುಸರಿಸಿ ಹತ್ತು ದಿಕ್ಕುಗಳಲ್ಲಿಯ 
ಆಯಾ ಸ್ಥಾನದಲ್ಲಿ ಸ್ಥಾಪಿಸಲು ಯೋಗ್ಯಳು. ಸತ್ಯಮಂದಿರವಾಸಿಗಳಾದ ಸಕಲ 
ಪ್ರಾಣಿಗಳ ರಕ್ಬಣೆಗಾಗಿ ಬ್ರಹ್ಮ ವಿಷ್ಣು ಮಹೇಶ್ವರರು ಗರುಡ ಮತ್ತು ಸಿಂಹ 
ವಾಹನಳೂ, ತ್ರಿಶೂಲವನ್ನು ಧರಿಸಿದವಳೂ, ಸುರಾಪಾನದಿಂದ ಮತ್ತಳೂ, ಕತ್ತಿ, 
ಗುರಾಣಿ, ಬಾಣಗಳುಳ್ಳ ಕೈಗಳಿಂದ ಶೋಭಿತಳೂ, ಕೆಂಪುಬಟ್ಟಿ ಯನ್ನುಟ್ಟವಳ., 
ಪುಷ್ಟವಾದ ಉನ್ನತ ಕುಚಗಳುಳ್ಳವಳೂ, ಉದಯಿಸುತ್ತಿರುವ ಸೂರ್ಯನ 
ಬಿಂಬಕೆ ಸಮಾನವಾದ ಕಾಂತಿಯುಳ್ಳವಳೂ, ಮದದಿಂದ ಆಲುತ್ತಿರುವ 
ಕಣ್ಣುಳ್ಳವಳೂ ಆಗಿರುವ ಶುದ್ದರೂಪಳಾದ ದೇವಿಯನ್ನೂ ಸ್ಲಾಪಿಸಿರುವರು. 


ಕ್ತ) 


೧೯೨ ಶ್ರೀ ಸ್ಕಾಂದಮಹಾಟುರಾಣಂ 


ಸಾ ದೇವೀ ನೃಪಶಾರ್ದೂಲ ಸ್ತುತಾ ಸಂಪೂಜಿತಾ ಸಹ । 


ದದಾತಿ ಸಕಲಾನ್ಯಾಮಾನ್ವಾಂಛಿತಾನ್ಸೃ ಸಸತ್ತಮ ॥ ೧೪ ॥ 
ಧರ್ಮಾಂರಣ್ಯಾತೃಶ್ಚಿಮತಃ ಸ್ಕಾ ಪಿತಾ ಛತ್ರಜಾ ಶುಭಾ | 

ತತ್ರ ಸ್ಥಾ ರಕ್ಸು ತ ನಿಷಾ ಾನ್ಕಿಯಚ್ಛ ಕ್ತಿ ಕ್ರ ಸಮ್ಮ ತಾ ॥ ೧೫ ॥ 
ಭೈರವ್‌ ರೂಷಮಾಸ್ಥಾ ಯ ರಾಳ ಸಾನಾಂ ನಯ ಚ। 
ಧಾರಯಂತ್ಯಾಯುಧಾಫೀತ್ಮಂ ವಿಸ್ರಾಣಾನುಭಯಾಯ ಚ ॥ ೧೬ ॥ 
ಸರಶ್ಚಕಾರ ತಸ್ಯಾಗ್ರೇ ಉತ್ತಮಂ ಜಲಪೂರಿತಂ | 

ಸರಸ್ಕಸ್ಮಿನ್ಮಹಾಭಾಗ ಕೃತ್ವಾ ಸ್ನಾನಾದಿ ತರ್ಪಣಂ ॥ ೧೭॥ 
ಹಿಂಡದಾನಾದಿಕಂ ಸರ್ವಮಕ್ಸಯಂ ಚೈನ ಜಾಯತೇ । 

ಭೂಮೌ ಕ್ಸಿಷ್ಸ್ಟಾಂಂಜಲೀಸಿ ವ್ಯಾನ್ಭೂ ಪದೀಸಾದಿಕಂ ಸದಾ ॥೧೮॥ 
ತಸ್ಯ ನೋ ಬಾಧತೇ ವ್ಯಾಧಿಃ ಶತ್ರೂಣಾಂ ನಾಶ ಏವ ಚ । 
ಬಲಿದಾನಾದಿಕಂ ತತ್ರ ಕುರ್ಯಾದ್ಭೂಯಃ ಸ್ವಶಕ್ತಿತಃ “orn 
ಶತ್ರವೋ ನಾಶಮಾಯಾಂತಿ ಧನಂ ಧಾನ್ಯಂ ವಿವರ್ಧತೇ 

ಆನಂದಾ ಸ್ಮಾಪಿತಾ ರಾಜಂಚ್ಛಕ್ಷ್ಯಂಶಾ ಚ ಮನೋರಮಾ ॥ ೨೦॥ 
ರಕ್ಸ್ಮಣಾರ್ಥಂ ದ್ವಿಜಾತೀನಾಂ ಮಾಹಾತ್ಮ್ಯಂ ಶೃಣು ಭೂಪತೇ । 
ಶುಕ್ಲಾಂಬರಧರಾ ದಿವ್ಯಾ ಹೇಮಭೂಷಣಭೂಸಿತಾ ॥ ೨೧॥ 





೧೪. ಮಹಾರಾಜ! ಆ ದೇವಿಯನ್ನು ಪೂಜಿಸಿ ಸ್ತುತಿಸಿದರೆ ಸಮಸ್ತ 
ಇಷ್ಟಾರ್ಥಗಳನ್ನೂ ದಯೆಗೈ ಯುವಳು. 

೧೫-೧೬. ಧರ್ಮಾರಣ್ಯದ ಪಶ್ಚಿಮದಲ್ಲಿ ಮಂಗಳಕರಳಾದ ಛತ್ರಜೆಯನ್ನು 
ಪ್ರತಿಷ್ಠಿಸಿರುವರು. ಅಲ್ಲಿರುವ ಅಪರಿಮಿತ ಶಕ್ತಿಯುಕ್ತಳಾದ ಆ ದೇವಿಯು 
ರಾಕ್ಸಸರ ವಥೆಗಾಗಿ ಭಯಂಕರರೂಪವನ್ನೂ ಬ್ರಾಹ್ಮಣರ ಭಯನಿವಾರಣೆಗಾಗಿ 
ಆಯುಧಗಳನ್ನೂ ಧರಿಸಿ ಅವರನ್ನು ರಕ್ಸಿಸುವಳು. 

೧೭-೨೪. ಅವಳ ಮುಂಡೆ ಉತ್ಸಮವಾದ ನೀರಿನಿಂದ ತುಂಬಿದ 
ಸರೋವರವನ್ನು ನಿರ್ಮಿಸಿರುವರು. ಈ ಸರೋವರದಲ್ಲಿ ಸ್ನಾನತರ್ಪಣಗಳನ್ನೂ , 
ಪಿಂಡದಾನಾದಿಗಳನ್ನೂ ಮಾಡಿದರೆ ಅಕ್ಸಯವಾಗುವುವು. ಮಾನವನು ಭೂಮಿ 
ಯಲ್ಲಿ ಬಲಿಹರಣಮಾಡಿ ಧೂಪದೀಪಾದಿಗಳಿಂದ ಆ ದೇವಿಯನ್ನು ಅರ್ಚಿಸಿದರೆ 
ವ್ಯಾಧಿಯು ಅವನನ್ನು ಬಾಧಿಸುವುದಿಲ್ಲ. ಶತ್ರುಗಳೂ ನಾಶವಾಗುವರು. ಅಲ್ಲಿ ಬಹಳ 
ವಾಗಿ ತನ್ನ ಶಕ್ತ್ಯನುಸಾರ ಬಲಿದಾನಮಾಡಿದವರ ಶತ್ರುಗಳು ನಾಶವಾಗುವರು. 
ಧನಧಾನ್ಯಗಳು ವೃದ್ಧಿಗೊಳ್ಳುವುವು. ಬ್ರಾಹ್ಮಣರ ರಕ್ಷಣೆಗಾಗಿ ಶಕ್ತಿಯ ಅಂಶ 
ರೂಪಳಾದ ಆನಂದೆಯನ್ನು ಪ್ರತಿಷ್ಠಿಸಿರುವರು. ಅರಸ! ಅವಳ ಮಾಹಾತ್ಮ್ಯ 
ವನ್ನು ಕೇಳು. ಅವಳು ಬಿಳಿ ಬಟ್ಟೆಯನ್ನುಟ್ಟಿವಳೂ, ಸುವರ್ಣಭೂಷಣಗಳಿಂದ 


ಸೋಡಶೋ5ಧ್ಮಾಯಃ' ೧೯೩ 


ಸಿಂಹಾರೂಢಾ ಚತುರ್ಹಸ್ತಾ ಶಶಾಂಕಕೃತಶೇಖರಾ । 


ಮುಕ್ತಾಹಾರಲತೋಸೇತಾ ಪೀನೋನ್ನತಸಯೋಧರಾ ॥ ೨೨ ॥ 
ಅಕ್ಬ್ಚಮಾಲಾಸಿಹಸ್ತಾ ಚ ಗುಣತೋಮರಧಾರಿಣೇ । 
ದಿವ್ಯಗಂಧನರಾಧಾರಾ ದಿವ್ಯಮಾಲಾನಿಭೂಷಿತಾ ॥ ೨೩ ॥ 
ಸಾತ್ಮಿಕೀ ಶಕ್ತಿರಾನಂದಾ ಸ್ಥಿತಾ ತಸ್ಮಿನ್ಬುರೇ ಪುರಾ । 
ಪೂಜಯೇತ್ತಾಂ ಚ ವೈ ರಾಜನ್‌ ಕರ್ಪೂರಾರಕ್ತಚಂದನೈಃ ॥ ೨೪॥ 


ಭೋಜಯೇತ್ಸಾಯಸೈಃ ಶುಭ್ಹೈರ್ಮಧ್ವಾಜ್ಯಸಿತಯಾ ಸಹ । 
ಭವಾನ್ಯಾಃ ಪ್ರೀತಯೇ ರಾಜನ್ಯುಮಾರ್ಯಾಃ ಪೂಜನಂ ತಥಾ ॥ ೨೫ ॥ 
ತತ್ರ ಜಪ್ತಂ ಹುತಂ ದತ್ತಂ ಧ್ಯಾತಂ ಚ ನೃಸಸತ್ತಮ । 


ತತ್ಸರ್ವಂ ಚಾಂಕ್ಟ್ರಯಂ ತತ್ರ ಜಾಯತೇ ಸಾಂತ್ರ ಸಂಶಯಃ ॥ ೨೬ ॥ 
ತ್ರಿಗುಣೇತ್ರಿ ತ್ರಿಗುಣಾ ವೃದ್ಧಿಸ್ತ ಸೃಸ್ಮಿನ್ಸ್ಯಾನೇ ನೃಪೋತ್ತ ಮಟ 
ಸಾಧಕಸ್ಯ 'ಭನೇನ್ನೂ ಧನವಾಂತಿವಿಸಂಪದಃ ॥ ೨೭1 
ನ ಹಾನಿರ್ಸ ಚ ಕೋಗಕ್ಕ ನ ಶತ್ರುರ್ನ ಚ ದುಷ್ಕೃತಂ । 
ಗಾವಸ್ತಸ್ಯ ವಿವರ್ಧಂತೇ ಧನಢಾನ್ಯಾದಿಸಂಕುಲಂ. ॥ ೨೮ ॥ 


ಅಣ ತೈ 


ಭೂಷಿತಳೂ, ಸಿಂಹವನ್ನೇರಿದವಳೂ, ನಾಲ್ಕು ತೋಳುಳ್ಳವಳೂ, ಚಂದ್ರನಿಂದ 
ಅಲಂಕರಿಸಲ್ಪಟ್ಟ ಶಿರಸ್ಸುಳ್ಳವಳೂ, ಮುತ್ತಿನ ಸರವನ್ನು ಧರಿಸಿದವಳೂ, ಪುಷ್ಟ 
ವಾದ ಉನ್ನತಕುಚಗಳುಳ್ಳವಳೂ, ಜಪಸರ ಮತ್ತು ಕತ್ತಿಗಳನ್ನು ಕೈಯಲ್ಲಿ 
ಹಿಡಿದವಳೂ, ಹಗ್ಗ ಮತ್ತು ತೋಮರಗಳನ್ನು ಹಿಡಿದುಕೊಂಡಿರುವವಳೂ, 
ಮನೋಹರವಾದ ಗಂಧವನ್ನು ಹಚ್ಚೆಕೊಂಡಿರುವವಳೂ, ದಿವ್ಯವಾದ ಹೂವಿನ 
ಮಾಲೆಯುಳ್ಳ ವಳೂ ಆಗಿ ಆ ಪಟ್ಟ ಣದಲ್ಲಿ ನೆಲೆಸಿರುವ ಆನಂದೆಯೆಂಬ ಸಾತ್ತಿ ಕೆ 
ಶಕ್ತಿ ದೇವತೆಯನ್ನು ಕರ್ಪೂರ, ಸಲ ) ಕೆಂಪಾದ ಗಂಧ ಇವುಗಳಿಂದ ಆರಾಧಿಸ 
ಬೇಕು. 

೨೫. ಜೇನುತುಪ್ಪ, ಆಜ್ಯ, ಕಲ್ಲುಸ ಕೃರೆಗಳೊಡನೆ ಶುದ್ಧವಾದ ಪಾಯಸ 
ವನ್ನು ನೈವೇದ್ಯಮಾಡಿ ಆ ಪಾರ್ವತಿಯ ಪಿ ಪ್ರೀತಿಗಾಗಿ ಕನ್ಯೆಯನ್ನು ಪೂಜಿಸಬೇಕು. 

೨೬. ಅಲ್ಲಿ ಮಾಡಿದ ಜಪ, ೫೫1 ದಾನ, ಧ್ಯಾನಗಳೆಲ್ಲವೂ ಅಕ್ಬಯ 
ವಾಗುವುವು. ಇದರಲ್ಲಿ ಸಂದೇಹವಿಲ್ಲ. 

೨೭. ಅಲ್ಲಿ ಜಪಾದಿಗಳನ್ನು ಮಾಡಿದ ಮಾನವನ ಹಣ, ಪತ್ತಿ ಮೊದಲಾದ 
ಸಕಲ ಸಂಪತ್ತುಗಳೂ ಮುಮ್ಮಡಿಯಾಗಿ ವೃ ದ್ಧಿ ಗೊಳ್ಳು ವುವು, 

೨೮. ಕೇಡುಗಳೂ, ಕೋಗಳಿ, ಶತ್ರು ಗ ಪಾಪಗಳೂ ತೊಲಗು 
ವುವು. ಗೋವುಗಳೂ, ಧನಧಾನ್ಯಾದಿಗಳೂ ಹೆಚ್ಚು ವುವು, 

7 


೧೯೪ ಶ್ರೀ ಸ್ಥಾಂದಮಹಾಪುರಾಣಂ 


ನ ಶಾಕಿನ್ಯಾ ಭಯಂ ತಸ್ಯ ನ ಚ ರಾಜ್ಞಶ್ಚ ವೈರಿಣಃ । 

ನಚ ವ್ಯಾಧಿಭಯಂ ಚೈವ ಸರ್ವತ್ರ ವಿಜಯಾ ಭವೇತ್‌ ॥ ೨೯೫ 
ವಿದ್ಯಾಶ್ಚತುರ್ದಶಾಸ್ಕೈವ ಭಾಸಂತೇ ಪಠಿತಾ ಇವ । 
ಸೂರ್ಯನದ್ವ್ಯೋತತೇ ಭೂಮಾವಾನಂದಮಾಶ್ರಿತೋ ನರಃ ॥ ೩೦॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 


ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "" ಆನಂದಾ 
ಸ್ಥಾಪನವರ್ಣನಂ'' ನಾಮ ಸೋಡಶೋಂ$ ಧ್ಯಾಯಃ 


೨೯. ಶಾಕಿನೀಭಯ, ರಾಜ, ಶತ್ರು, ರೋಗಗಳ ಭಯಗಳೇನೂ ಇಲ್ಲದೆ 
ಎಲ್ಲೆಡೆಯಲ್ಲಿಯೂ ಜಯಶಾಲಿಯಾಗುವನು. 

೩೦. ಹದಿನಾಲ್ಕುವಿದ್ಯೆಗಳೂ ಓದದೆ ಇದ್ದಾಗ್ಲೂ ಓದಿದವುಗಳಂತೆ ವಿರಾಜಿ 
ಸುವುವು. ಆನಂದಗೊಂಡು ಸೂರ್ಯನಂತೆ ಭೂಮಿಯಲ್ಲಿ ಪ್ರಕಾಶಿಸುವನು. 





ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ "" ಆನಂದಾಸ್ಕಾಪನವರ್ಣನ''ವೆಂಬ 
ಹದಿನಾರನೆಯ ಅಧ್ಯಾಯವು ಮಂಗಿದುದು 


ಗ ಶ್ರೀಃ 
ಅಥ ಸಪ್ರದಶೋಧ್ಯಾಯಃ 


ತ್ರಿ ಮಾತಾಮಾಹಾತ ವರ್ಣ ನಂ 


ವ್ಯಾಸ ಉವಾಚ:- 
ದಕ್ಷಿಣೇ ಸ್ಥಾಸಿತಾ ರಾಜಂಛಾಂತಾ ದೇನೀ ಮಹಾಬಲಾ । 
ಸಾ ನಿಚಿತ್ರಾಂಂಬರಧರಾ ವನಮಾಲಾನಿಭೂಸಿತಾ nol 
ತಾಮಸೀ ಸಾ ಮಹಾರಾಜ ಮಧುಕೈಟಭನಾಶಿನೀ । 
ವಿಷ್ಣುನಾ ತತ್ರ ವೈ ನ್ಯಸ್ತಾ ಶಿವಸತ್ನೀ ನೃಪೋತ್ತಮ won 
ಸಾ ಚೈವಾಂಷ್ಟಭುಜಾ ರಮ್ಯಾ ಮೇಘಶ್ಯಾಮಾ ಮನೋರಮಾ । 
ಕೃಷ್ಣಾ ೦ಬರಥ್ಲರಾ ದೇವೀ ಘೆ ಫು ವಾಹನಸಂಸ್ಥಿ ತಾ nau 
ಜಿ ್ವೀಪಿಚರ್ಮ ಪರೀಧಾನಾ ದಿವಾ ಘರಣಭೂಷಿತ್ಸ್‌ | 
ಘಂಟಾತ್ರಿ ಶೂಲಾಂಕ್ಸಮಾಲಾ ಸಮಂಡಲುಧಕಾ ಶುಭಾ ॥೪॥ 
ಅಲಂಕೃತಭುಜಾ ದೇನೀ ಸರ್ವದೇನನಮಸ್ಕೃತಾ | 
ಧನಂ ಧಾನ್ಯಂ ಸುತಾನ್ಸೊ ೀಗಾನ್ಸ್ಪಭಕ್ತೆ ಭ್ಯಃ ಪ್ರ ಪ ಯಚ್ಛ ತಿ ॥೫॥ 
ಪೂಜಯೇತ್ಯ ಮಲೈ ರ್ದಿನೆ ತ ಕರ್ಪೂರಾಗರುಚಾವನೈ? I 
ತೆದುದ್ದೀಶೇನ ತ್ತೆ ವ ಪೂಜಯೇದ್ದಿ ಜಸತ್ತಮಾನ್‌ ॥೬॥ 





ಕನ್ನಡದ ಅನುವಾದ 
ಶ್ರೀಮಾತಾಮಾಹಾತ್ಮ್ಯವರ್ಣನ 

೧-೫. ವ್ಯಾಸನು ಹೇಳುತ್ತಾನೆ: --ಮಹಾರಾಜ! ಅತ್ಯಂತ ಬಲಿಷ್ಕಳೂ, 
ಆಶ್ಚರ್ಯಕರವಾದ ಬಟ್ಟಿ ಯನ್ನುಟ್ಟವಳೂ, ವನಮಾಲೆಯಿಂದಲಂಕೃತಳೂ 
ತಮೋಗುಣವುಳ್ಳವಳೂ, ಮಧುಕೈಟಭಧ್ವಂಸಕಳೂ, ಎಂಟು ತೋಳುಳ್ಳವಳೂ, 
ಸುಂದರಳೂ, ಮೇಘದಂತೆ ಕಪ್ಪುಬಣ್ಣವುಳ್ಳವಳೂ, ಕರಿಬಣ್ಣದ ವಸ್ತ್ರವನ್ನು 
ಧರಿಸಿದವಳೂ, ಹುಲಿಯನ್ನೇರಿದವಳೂ, ಹುಲಿಯ ಚರ್ಮವನ್ನು ಸುತ್ತಿಕೊಂಡಿರು 
ವವಳೂ, ದಿವ್ಯಾಭರಣಗಳಿಂದ ವಿರಾಜಿಸುವವಳೂ, ಘಂಟಿ, ತ್ರಿಶೂಲ, ಜಪಸರ, 
ಕಮಂಡಲುಗಳನ್ನು ಹಿಡಿದವಳೂ, ಸಕಲ ದೇವತೆಗಳಿಂದ ನಮಸ್ಕಾರ ಮಾಡ 
ಲ್ಪಟ್ಟವಳೂ ಆಗಿ ಶಾಂತಳಾದ ಭವಾನಿಯನ್ನು ವಿಷ್ಣುವು ಅಲ್ಲಿ ದಕ್ಷಿ ಕ್ಸಿಣದಿಕ್ಕಿನಲ್ಲಿ 
ಸ್ಥಾಪಿಸಿರುವನು. ಇವಳು ತನ್ನ ಭಕ್ತರಿಗೆ ಧನ, ಧಾನ್ಯ, ಮಕ್ಕಳನ್ನು 
ಕೊಡುತ್ತಾಳೆ. 

೬-೧೦. ಇವಳನ್ನು ದಿವ್ಯ ಕಮಲಗಳಿಂದಲೂ, ಕರ್ಪೂರ, ಅಗರು, ಗಂಧ 
ಗಳಿಂದಲೂ, ಧೂಪದೀಪಗಳಿಂದಲೂ, ಮನೋಹರವಾದ ಫಲಗಳಿಂದಲೂ, 


೧೯೬ ಶ್ರೀ ಸ್ಕಾಂದಮಹಾಪುರಾಣಂ 


ಕುಮಾರೀರ್ಭೋಜಯೇದನ್ನೈರ್ವಿನಿಥೈರ್ಭಕ್ತಿಭಾನತಃ | 


ಧೂಪೈರ್ದೀಸೈಃ ಫಲೈರನ್ಯೈಃ ಪೂಜಯೇಚ್ಚ ಸುರಾದಿಭಿಃ neh 
ಮಾಂಸೈಸ್ತು ನಿನಿಧೈರ್ದಿವೈೈರಥವಾ ಧಾನ್ಯಸಿಷ್ಟಜೈಃ | 

ಅನೈೈಶ್ಚ ನಿನಿಧೈರ್ಧಾನ್ಯೈಃ ಸಾಯಸೈರ್ವಟಕೈಸ್ತಥಾ ॥೮॥ 
ಓದನೈಃ ಕೃಸರಾಂ ಪೂಹೈಃ ಪೂಜಯೇತ್ಸುಸಮಾಹಿತಃ । 

ಸ್ತುತಿಸಾಶೇನ ತತ್ತೆೈನ ಶಕ್ತಿಸ್ಕೋತ್ರೆರ್ಮನೋಹಕರೈಃ uh 
ರಿಸನಸ್ತಸ್ಯ ನಶ್ಯಂತಿ ಸರ್ವತ್ರ ವಿಜಯಾ ಭವೇತ್‌ । 

ರಣೇ ರಾಜಕುಲೇ ದ್ಯೂತೇ ಲಭತೇ ಜಯಮಂಗಲಂ ॥೧೦॥ 


p) 
ಶ್ರೀಮಾತಾ ಸಾ ಪ್ರಸಿದ್ಧಾ ಚ ಮಾಹಾತ್ಮ್ಯಂ ಶೃಣು ಭೂಪತೇ ॥ ೧೧8 


ಕುಲಮಾತಾ ಮಹಾಶಕ್ತಿಸ್ತತ್ರಾಸ್ತೇ ನೃಪಸತ್ತಮ । 


An ಎ 


ಸೌಮ್ಯಾ ಶಾಂತಾ ಮಹಾರಾಜ ಸ್ಥಾಪಿತಾ ಹುಲಮಾತ, ಕಾ । 


ಕುಮಾರೀ ಬ್ರಹ್ಮಪುತ್ರೀ ಸಾ ರಕ್ಸಾರ್ಥಂ ನಿಧಿನಾ ಕೃತಾ ॥ ೧೨೫ 
ಸ್ಥಾನಮಾತಾ ಚ ಸಾ ದೇನೀ ಶ್ರೀಮಾತಾ ಸಾಭಿಧಾನತಃ । 

ತ್ರಿರಾಷಾ ಸಾ ದ್ವಿಜಾತೀನಾಂ ನಿರ್ಮಿತಾ ರಕ್ಟಣಾಯ ಚ ॥ ೧೩ ॥ 
ಕಮಂಡಲುಧರಾ ದೇವೀ ಘಂಟಾಭರಣಭೂಷಿತಾ | 
ಅಕ್ಟಮಾಲಾಯುತಾ ರಾಜಂಛುಭಾ ಸಾ ಶುಭರೂಪಿಣೀ ॥ ೧೪ ॥ 





ಮಧುವಿನಿಂದಲೂ, ನಾನಾ ವಿಧ ಮಾಂಸಗಳಿಂದಲೂ, ಅಥವಾ ಧಾನ್ಯಗಳ ಟ್ಟ 
ನಿಂದಾದ ವಸ್ತುಗಳಿಂದಲೂ, ಇತರ ನಾನಾ ವಿಧವಾದ ಧಾನ್ಯಗಳಿಂದಲೂ, 
ಪಾಯಸಗಳಿಂದಲೂ, ವಡೆಗಳಿಂದಲೂ, ಅನ್ನಗಳಿಂದಲೂ, ಹುಗ್ಗಿ ಮತ್ತು 
ಅಪೂಪಗಳಿಂದಲೂ ಪೂಜಿಸಬೇಕು. ಅಲ್ಲಿಯೇ ನಾನಾವಿಧವಾದ ಅನ್ನಗಳಿಂದ 
ಆ ಜೀವಿಯನ್ನುಡ್ಹೇಶಿಸಿ ದ್ವಿಜಶ್ರೇಷ್ಠರನ್ನು ಪೂಜಿಸಬೇಕು. ಕನ್ಯೆಯರನ್ನು 
ಊಟಮಾಡಿಸಬೇಕು. ಆ ದೇವಿಯನ್ನು ಮನೋಹರವಾದ ಶಕ್ತಿದೇವತಾ 
ಸ್ತೋತ್ರಗಳಿಂದ ಸ್ತುತಿಸಬೇಕು. ಹೀಗೆ ಪೂಜೆಮಾಡಿದವನ ಶತ್ರುಗಳು ನಾಶ 
ವಾಗುವರು. ಎಲ್ಲೆಡೆಯಲ್ಲಿಯೂ ಅವನು ಜಯಶಾಲಿಯಾಗುವನು. ಯುದ್ಧ 
ದಲ್ಲಿಯೂ, ರಾಜಗೃಹದಲ್ಲಿಯೂ, ಜೂಜಿನಲ್ಲಿಯೂ ಜಯವನ್ನು ಪಡೆಯುವನು. 

೧೧. ಆ ಧರ್ಮಾರಣ್ಯದಲ್ಲಿ ನೆಲೆಸಿರುವ ಸೌಮ್ಯಳೂ, ಶಾಂತಳೂ, ಕುಲ 
ಮಾತೆಯೂ ಆಗಿರುವ ಆ ಶ್ರೀಮಾತೆಯ ಮಾಹಾತ್ಮ್ಯೆಯನ್ನು ಕೇಳು. 

೧೨-೧೩. ಕುಲಮಾತೆ, ಸ್ಥಾನಮಾತೆ, ಶ್ರೀಮಾತೆ ಎಂಬ ಮೂರು ರೂಪ 
ಗಳಿಂದೊಪ್ಪುವ ಬ್ರಹ್ಮತನಯಳಾದ ಆ ಮಹಾಶಕ್ತಿಯನ್ನು ಪಿಶಾಮಹನು 
ಬ್ರಾಹ್ಮಣರ ರಕ್ಷಣೆಗಾಗಿ ಅಲ್ಲಿ ಸ್ಥಾಪಿಸಿರುವನು. 

೧೪-೧೯. ಕಮಂಡಲುವನ್ನು ಧರಿಸಿ ಘಂಟಾಭರಣಗಳಿಂದ ಅಲಂಕೃತಳೂ 


ಸಪ್ತದಶೋರಧ್ಯಾಯಃ ೧೯೭ 


ಕುಮಾರೀ ಚಾದಿಮಾತಾ ಚ ಸ್ಥಾನತ್ರಾಣಕರಾಃಸಿ ಚ 


ದೈತ್ಯಫ್ಲೀ ಕಾಮದಾ ಚೈವ ಮಹಾಮೋಹವಿನಾಶಿನೀ ॥ ೧೫ ॥ 
ಭಕ್ತಿಗಮ್ಯಾ ಚ ಸಾ ದೇನೀ ಕುಮಾರೀ ಬ್ರಹ್ಮಣಃ ಸುತಾ । 
ರಕ್ತಾಂಂಬರಧರಾ ಸಾಧುರಕ್ತ ಚಂದನಚರ್ಚಿತಾ 1 ೧೬ ॥ 
ರಕ್ತ? ಮಾಲ್ಯಾ ದಶಭುಜಾ ಪಂಚನಕ್ಕ್ರಾ ಸುರೇಶ್ವರೀ । 

ಚಂದ್ರಾ $ವತಂಸಿಕಾ ಮಾತಾ ಸುರಾಸುರನಮುಸ್ಯ ತಾ 1 ೧೭॥ 
ಸಾಕ್ಸಾ ತ್ಸರಸ್ವ ತೀರೂಪಾ ರಕ್ಸಾರ್ಥಂ ವಿಧಿನಾ ಕ್ಸ ತಾ। 

ಓಂಕಾರ್‌ ಹ ಮಹಾಸುಣ್ಯಾ 'ಉಾಜೇಶೇನ ನಿನಿರ್ನುತಾ ॥ ೧೮॥ 
ಯಷಿಭಿಃ ಸಿದ್ದಯಕ್ಷಾದಿಸುರಪನ್ನಗಮಾನನೈಃ | 

ಪ್ರಣಮ್ಮಾ ್ಯಿಂಫ್ರಿಯುಗಾ ತೇಭ್ಯೋ ದದಾತಿ ಮನಸೇಪ್ಸಿತಂ ` ॥೧೯॥ 
ಆಂ. ಚ ಸಂಸ್ಥಾ ನಂ ದ್ವಿಜಾತೀನಾಂ ಒತಾಯಾ ವೈ! 
ಯಥೌರಸಾನ್ಸುತಾನ್ಮಾ ತಾ ಯಂ ಸದ್ಗುಣೈಃ ॥ ೨೦॥ 
ಅಥ ಸಾಲಯತೀ ದೇನೀ ಶ್ರೀಮಾತಾ ಕುಲದೇವತಾ. | 

ಉಪದ್ರವಾಣಿ ಸರ್ವಾಣಿ ನಾಶಯೇತ್ಸತತಂ ಸ್ತುತಾ ॥ ೨೧॥ 
ಸರ್ವನಿಫಘ್ನೋಪಶಮನೀ ಶ್ರೀಮಾತಾ ಸ್ಮರಣೇನ ಒ। 

ನಿನಾಹೇ ಚೋಪನವೀತೇ ಚ ಸೀಮಂತೇ ಶುಭಕರ್ಮುಣಿ ॥ ೨೨ ॥ 


ಜಪಸರವನ್ನು ಹಿಡಿದನಳೂ ಮಂಗಳರೂಪಳೂ, ಆದಿಮಾತೆಯೂ, ಕ್ಷೇತ್ರ 
ರಕ್ಪಕಳ್ಕೂ ದೈತ್ಯರನ್ನು ಕೊಂದವಳೂ, ಇಷ್ಟಾರ್ಥಗಳನ್ನೀಯುವವಳೂ, ಗಾಢ 
ವಾದ ಅಜ್ಞಾನವನ್ನು ಪರಿಹರಿಸುವವಳೂ, ಭಕ್ತಿಯಿಂದ ಹೊಂದಲು ಯೋಗ್ಯಳ್ಕೂ 
ಬ್ರಹ್ಮಸುತೆಯೂ, ಕೆಂಪುಬಟ್ಟಿ ಯನ್ನುಟ್ಟವಳೂ, ಚೆನ್ನಾಗಿ ಗಂಧವನ್ನು ಬಳಿದು 
ಕೊಂಡವಳೂ, ಕೆಂಪುಹೂನಿನ ಮಾಲೆಯುಳ್ಳವಳೂ, ಹತ್ತುತೋಳುಗಳುಳ್ಳವಳೂ, 
ಐದು ಮುಖವುಳ್ಳವಳೂ, ಚಂದ್ರಶೇಖರಳೂ, ದೇವಾಸುರರಿಂದ ವಂದಿತಳೂ, 
ಸರಸ್ವತೀ ಸ್ವರೂಪಳ್ಕೂ, ಬ್ರಹ್ಮನಿರ್ಮಿತಳೂ, ಓಂಕಾರರೂಪಳೂ, ಅತಿಪವಿತ್ರಳೂ 
ಆಗಿರುವ ಆ ಶ್ರೀಮಾತೆಯನ್ನು ಖುಷಿಗಳೂ, ಸಿದ್ಧರೂ, ಯಕ್ಸರೂ, ಸುರರೂ, 
ನಾಗಗಳೂ, ಮನುಷ್ಯರೂ ನಮಸ್ಕರಿಸಿ ಇಷ್ಟಾರ್ಥಗಳನ್ನು ಪಡೆಯುವರು. 

೨೦-೨೧. ಇಲ್ಲಿ ಆ ಶ್ರೀಮಾತೆಯು ಸದ್ಗುಣಗಳಿಂದ ಕೂಡಿ ತಾಯಿಯು 
ತನ್ನ ಹೊಟ್ಟೆಯಲ್ಲಿ ಹುಟ್ಟದ ಮಕ್ಕಳನ್ನು ಸಲಹುವಂತೆ ಬ್ರಾಹ್ಮಣರ ಹಿತಕ್ಕಾಗಿ 
ಸ್ಪೇತ್ರವನ್ನು ಕಾಪಾಡುತ್ತಿರುವಳು. ಕುಲದೇವತೆಯಾದ ಶ್ರೀಮಾತೆಯನ್ನು 
ಸ್ತುತಿಸಿದರೆ ಎಲ್ಲ ತೊಂದರೆಗಳೂ ಮಾಯವಾಗುವುವು. 

೨೨-೨೫. ಸ್ಮರಣಮಾತ್ರದಿಂದ ಸಕಲವಿಫ್ನಗಳನ್ನು ನಿವಾರಿಸುವ ಆ 
ಶ್ರೀಮಾತೆಯನ್ನು ಭಕ್ತರು ವಿವಾಹ, ಉಪನಯನ, ಸೀಮಂತ ಮೊದಲಾದ 


೧೯೮ ಶ್ರೀ ಸ್ಕಾಂದನುಹಾಪುರಾಣಂ 


ಸರ್ವೇಷು ಭಕ್ತಕಾರ್ಯೇಷು ಶ್ರೀಮಾತಾ ಪೂಜ್ಯತೇ ಸದಾ। 

ಯಥಾ ಲಂಬೋದರಂ ದೇವಂ ಪೂಜಯಿತ್ವಾ ಸಮಾರಭೇತ್‌ ॥ ೨೩ ॥ 
ಕಾರ್ಯಂ ಶುಭಂ ಸರ್ವಮಸಿ ಶ್ರೀಮಾತರಂ ತಥಾ ನೃಪ । 
ಯತ್ನಿಂಚಿದ್ಭೋಜನಂ ತತ್ರ ಬ್ರಾಹ್ಮಣೇಭ್ಯಃ ಪ್ರಯಚ್ಛತಿ ॥ ೨೪ ॥ 
ಅಥವಾ ವಿನಿನೇದ್ಯಂ ಚ ಕ್ರಿಯತೇ ಯತ್ಸರಸ್ಸರಂ । 

ಅನಿನೇದ್ಯ ಚ ತಾಂ ರಾಜನ್ಯುರ್ನಾಣೋ ವಿಘ್ನಮೇಷ್ಯತಿ ॥ ೨೫ ॥ 
ತಸ್ಮಾತ್ತಸ್ಕೈ ನಿನೇದ್ಯಾಂಥ ತತಃ ಕರ್ಮ ಸಮಾರಭೇತ್‌ | 
ತದ್ವರೇಣಾಂಖಿಲಂ ಕರ್ಮ ಅನಿಫ್ಲ್ನೇನ ಹಿ ಸಿದೃತಿ । 

ಹೇಮಂತೇ ಶಿಶಿರೇ ಪ್ರಾಪ್ತೇ ಪೂಜಯೇದ್ಧರ್ನುಪುತ್ರಿಕಾಂ ॥ ೨೬॥ 
ಹೇಮಪತ್ರೇ ಸಮಾಲಿಖ್ಯ ರಾಜತೇ ನಾಥ ಕಾರಯೇತ್‌ । 

ಪಾದುಕಾಂ ಚೋತ್ತಮಾಂ ರಾಜಂಛ್ರೀಮಾತಾಯ್ಯೆ ನಿವೇದಯೇತ್‌ ॥ 
ಸ್ನಾತ್ವಾ ಚೈನ ಶುಚಿರ್ಭೂತ್ವಾ ತಿಲಾಮುಲಕನಿುಶ್ರಿತೈಃ 1 

ವಾಸೋಭಿಃ ಸುಮನೋಭಿಶ್ಚ ದುಕೂಲೈಃ ಸುಮನೋಹರೈಃ ॥೨೮॥ 
ಲೇಪಯೇಚ್ಹ್ಚಂದನೈಃ ಶುಭ್ಸೈಃ ಕುಂಕುಮೈಃ ಸಿಂದುರಾಸಕೈಃ । 


ಕರ್ಪೂರಾಗರುಕಸ್ತೂರೀಮಿಶ್ರಿತೈಃ ಕರ್ದಮೈಸ್ತಥಾ ॥೨೯॥ 
ಕರ್ಣಿಕಾರೈಶ್ಚ ಕಲ್ಲಾಕೈಃ ಕರನೀರೈಃ ಸಿತಾರುಣೈಃ | 
ಚಂಪಕೈಃ ಕೇತಕೀಭಿಶ್ಚ ಜಪಾಕುಸುಮಕೈಸ್ತಥಾ ॥೩೦॥ 





ಶುಭಕಾರ್ಯಗಳಲ್ಲಿ ಪೂಜಿಸುವರು. ಕಾರ್ಯಾರಂಭದಲ್ಲಿ ವಿಫ್ನರಾಜನನ್ನು 
ಪೂಜಿಸುವಂತೆ ಸಕಲ ಶುಭಕಾರ್ಯಗಳಲ್ಲಿಯೂ ಶ್ರೀಮಾತೆಯನ್ನು ಪೂಜಿಸಿ 
ಆರಂಭಿಸಬೇಕು. ಬ್ರಾಹ್ಮಣರಿಗೆ ಭೋಜನಮಾಡಿಸುವಾಗ ಅಥವಾ ಆಯಾಯ 
ದೇವತೆಗಳಿಗೆ ನೈವೇದ್ಯವನ್ನು ಸಮರ್ಪಿಸುವಾಗ ಆ ಶ್ರೀಮಾತೆಗೆ ಅರ್ಪಿಸದಿದ್ದರೆ 
ವಿಘ್ನವು ಒದಗುವುದು. 

೨೬-೩೩. ಆದುದರಿಂದ ಅವಳಿಗೆ ನಿವೇದಿಸಿ ಕಾರ್ಯವನ್ನಾರಂಭಿಸಬೇಕು. 
ಅವಳ ವರದಿಂದ ಸಕಲ ಕರ್ಮಗಳು ವಿಫ್ನವಿಲ್ಲದೆ ನೆರವೇರುವುವು. ಹೇಮಂತ 
ಶಿಶಿರ ಖುತುಗಳಲ್ಲಿ ದ್ವಿಜನು ಮಿಂದು ಶುದ್ಧನಾಗಿ ಆ ಧರ್ಮಪುತ್ರಿಕೆಯಾದ 
ಶ್ರೀಮಾತೆಯನ್ನು ಸುವರ್ಣ ಅಥವಾ ಬೆಳ್ಳಿಯ ಎಲೆಗಳಲ್ಲಿ ಬರೆದು ಉತ್ತಮ 
ಪಾದುಕೆಯನ್ನೊಪ್ಪಿಸಿ ಎಳ್ಳು, ನೆಲ್ಲಿಕಾಯಿ, ಬಟ್ಟಿ, ಪುಷ್ಪ, ಮನೋಹರವಾದ 
ಪಟ್ಟ, ಬಿಳಿಗಂಧ, ಕುಂಕುಮ, ಸಿಂದೂರಗಳಿಂದಲೂ, ಕರ್ಪೂರ ಅಗುರು 
ಕಸ್ತೂರಿಯಿಂದಲೂ ಸೇರಿದ ಗಂಧದಿಂದಲ್ಕೂ ಬೆಟ್ಟದ ತಾವಕಿ, ಕಮಲ, 
ಕಣಿಗಲು, ಬಿಳಿ ಮತ್ತು ಕೆಂಪು ಸಂಪಗೆ, ಕೇತಕ್ಕಿ ದಾಸವಾಳ ಮುಂತಾದ 


ಸಪ್ತದಶೋರಧ್ಯಾಯಃ ೧೯೯ 


ಯಕ್ಸಕರ್ಡಮಕೈಶ್ಚೆನ ಬಿಲ್ಬಸತ್ರೈರಬಂಡಿತೈಃ । 

ಷಾಲಾಶಜಾತಿಪುಷ್ಬೈಶ್ಚ ನಟಕೈರ್ಮಾಷಸಂಭವೈಃ । 
ಪೂಪಭಕ್ತಾದಿದಾಲೀಭಿಸ್ತೋಸಯೇಚ್ಛಾ ಕಸಂಚಯ್ಯೆಃ ॥ ೩೧॥ 
ಧೂಪದೀಪಾದಿಪೂರ್ವಂ ತು ಪೂಜಯೇಜ್ಞಗದಂಬಿಕಾಂ । 

ತದ್ಭಿಯೈನ ಕುಮಾರೀರ್ವೈ ನಿಪ್ರಾನಪಿ ಚ ಭೋಜಯೇತ್‌ । 


ಸಾಯಸೈರ್ಫೃತಯುಕ್ತೈಶ್ಚ ಶರ್ಕರಾಮಿಶ್ರಿತೈರ್ನ್ಯಸ ॥ ೩೨॥ 
ಪಕ್ಕಾನ್ನೈರ್ಮೋದಕಾದ್ಯೈಶ್ವ ತರ್ಪಯೇದ್ಭಕ್ತಿಭಾವತಃ | 

ತರ್ಪ್ಯಮಾಣೇ ದ್ವಿಜೈಕಸ್ಮಿನ್ಸಹಸ್ರಫಲಮಶ್ನುತೇ ॥ ೩೩॥ 
ದೈತ್ಯಾನಾಂ ಘಾತಕಂ ಸ್ತೋತ್ರಂ ವಾಚಯೇಚ್ಚ ಪುನಃ ಪುನಃ । 
ಏಕಾಗ್ರಮಾನಸೋ ಭೂತ್ವಾ ಶ್ರೀಮಾತರಂ ಸ್ತುನೀತ ಯಃ ॥ ೩೪॥ 
ತಸ್ಯ ತುಷ್ಟಾ ವರಂ ದದ್ಯಾತ್ಸ್ಸಾಪಿತಾ ಪೂಜಿತಾ ಸ್ತುತಾ। 

ಅನಿಷ್ಟಾನಿ ಚ ಸರ್ವಾಣಿ ನಾಶಯೇದ್ಭರ್ಮಪುತ್ರಿಕಾ ॥ ೩೫ ॥ 
ಅಪುತ್ರೋ ಲಭತೇ ಪುತ್ರಾನ್ನಿರ್ಧನೋ ಧನವಾನ್ಭ್ಫನೇತ್‌ | 

ರಾಜ್ಯಾರ್ಥೀ ಲಭತೇ ರಾಜ್ಯಂ ನಿದ್ಯಾರ್ಥೀ ಲಭತೇ ಚೆ ತಾಂ ॥ ೩೬ ॥ 
ಶ್ರಿಯೋರ್ಥೀ ಲಭತೇ ಲಕ್ಷ್ಮೀಂ ಭಾರ್ಯಾರ್ಥೀ ಲಭತೇ ಚ ತಾಂ! 
ಪ್ರಸಾದಾಚ್ಹ ಸರಸ್ವತ್ಯಾ ಲಭತೇ ನಾತ್ರ ಸಂಶಯಃ 1 ೩೭॥ 


ಹೂವುಗಳಿಂದಲೂ, ಸೀಳಿಹೋಗದಿರುವ ಬಿಲ್ವಪತ್ರೆಗಳಿಂದಲೂ, ಮುತ್ತುಗ, 
ಜಾಜಿ ಹೂವುಗಳಿಂದಲೂ, ಉದ್ದಿನವಡೆ, ದೋಸೆ, ಅನ್ನ, ಬೇಳೆ, ತರಕಾರಿ 
ಗಳಿಂದಲೂ, ಧೂಪದೀಪಗಳಿಂದಲೂ ಜಗನ್ಮಾತೆಯಾದ ಆ ಶ್ರೀಮಾತೆಯನ್ನು 
ಆರಾಧಿಸಬೇಕು. ಶ್ರೀಮಾತೆಯೆಂಬ ಭಾವನೆಯಿಂದಲೇ ಕನ್ಶೆಯರನ್ನೂ, 
ಬ್ರಾಹ್ಮಣರನ್ನೂ ಭಕ್ತಿಯಿಂದ ತುಪ್ಪ, ಸಕ್ಕರೆಗಳಿಂದ ಮಿಶ್ರಿತವಾದ ಪಕ್ವಾನ್ನ, 
ಪಾಯಸ, ಕಡುಬು ಮೊದಲಾದುವುಗಳನ್ನು ಬಡಿಸಿ ಭೋಜನಮಾಡಿಸಿ ತೃಪ್ತಿ 
ಗೊಳಿಸಬೇಕು. ಒಬ್ಬ ಬ್ರಾಹ್ಮಣನನ್ನು ಸಂತೋಷಗೊಳಿಸಿದರೆ ಸಾವಿರ ಬ್ರಾಹ್ಮಣ 
ರನ್ನು ಭೋಜನಮಾಡಿಸಿದ ಫಲವನ್ನು ಪಡೆಯುವನು. 

೩೪-೩೫. ದೈತ್ಯರನ್ನು ಕೊಲ್ಲುವ ದುರ್ಗಾಸಪ್ತಶತೀಸ್ತೋತ್ರವನ್ನು ಅನೇಕ 
ಬಾರಿ ಪಾರಾಯಣ ಮಾಡಿಸಿ ಒಮ್ಮನಸ್ಸಿನಿಂದ ಶ್ರೀಮಾತೆಯನ್ನು ಸ್ತೋತ್ರ 
ಮಾಡಿದರೆ, ಸ್ನಾನ, ಪೂಜೆ ಮತ್ತು ಸ್ತುತಿಗಳನ್ನು ಕೈಕೊಂಡ ದೇವಿಯು ಅವನ 
ಅನಿಷ್ಟಗಳನ್ನು ಕಳೆಯುವಳು. 

೩೬-೩೭. ಆ ಸರಸ್ವತಿಯ ಅನುಗ್ರಹದಿಂದ ಮಕ್ಕಳಿಲ್ಲದವನು ಮಕ್ಕ 
ಳನ್ನೂ, ದರಿದ್ರನು ಹೆಣವನ್ನೂ, ರಾಜ್ಯವನ್ನು ಬಯಸುವವನು ರಾಜ್ಯವನ್ನೂ, 
ವಿದ್ಯಾರ್ಥಿಯು ವಿದ್ಯೆಯನ್ನೂ, ಸಂಪತ್ತನ್ನು ಅಪೇಕ್ಸಿಸುವವನು ಸಂಪತ್ತನ್ನೂ, 


೨೦೦ ಶ್ರೀ ಸ್ಕಾಂದಮಹಾಪುರಾಣಂ 
ಅಂತೇ ಚ ಪರಮಂ ಸ್ಥಾನಂ ಯತ್ಸುಕೈರಪಿ ದುರ್ಲಭಂ । 


ಪ್ರಾಪ್ನೋತಿ ಪುರುಷೋ ನಿತ್ಯಂ ಸರಸ್ವತ್ಯಾಃ ಪ್ರಸಾದತಃ ॥ ೩೮ ॥ 
ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ " ಶ್ರೀಮಾತಾ 
ಮಾಹಾತ್ಮ್ಯ ವರ್ಣನಂ'ನಾಮ ಸಪ್ತದಶೋಂಧ್ಯಾಯಃ 





ಹೆಂಡತಿಯ ಅಸೇಕ್ಸೆಯುಳ್ಳವನು ಹೆಂಡತಿಯನ್ನೂ ಪಡೆಯುವನು. ಈ ವಿಷಯ 
ದಲ್ಲಿ ಯಾವ ಸಂದೇಹವೂ ಇರುವುದಿಲ್ಲ. 

೩೮. ಕೊನೆಯಲ್ಲಿ ಸರಸ್ವತಿಯ ಅನುಗ್ರಹದಿಂದ ದೇವತೆಗಳಿಗೂ ದುರ್ಲಭ 
ವಾದ ಶಾಶ್ವತವೂ, ಉತ್ತಮವೂ ಆಗಿರುವ ಸ್ಥಾನವನ್ನು ಹೊಂದುವನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀ ಸ್ಕಾಂದಮಹಾಫುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಮ 
ಮಾಹಾತ್ಮ್ಮ್ಯದಲ್ಲಿ "" ಶ್ರೀಮಾತಾಮಾಹಾತ್ಮ್ಯವರ್ಣನ''ನೆಂಬ 
ಹದಿನೇಳನೆಯ ಅಧ್ಯಾಯವು ಮುಗಿದುದು 


1 ಶ್ರೀಃ ॥ 
ಅಥಾಂಷ್ಟ್ರಾದಶೋಂಧ್ಯಾಯಃ 
ಮಾತಂಗೀಕರ್ಣಾಟಿಕೋಪಾಖ್ಯಾನವರ್ಣನಂ 
ಶ್ರೀರುದ್ರ ಉವಾಚ: 

ಶೃಣು ಸ್ಫಂದ ಮಹಾಪ್ರಾಜ್ಞ ಹ್ಯದ್ಭುತಂ ಯತ್ಕೃತಂ ಮಯಾ । 
ಧರ್ಮಾಂರಣ್ಯೇ ಮಹಾದುಷ್ಟೋ ದೈತ್ಯಃ ಕರ್ಣಾಟಕಾಂಭಿಧಃ non 
ನಿಭೃತಂ ಹಿ ಸಮಾಗತ್ಯ ದಂಪತ್ಯೋರ್ನಿಫಘ್ನುಮಾಚರತ್‌ । 
ತಂ ದೃಷ್ಟ್ಯಾ ತದ್ಭಯಾಲ್ಲೋಕಃ ಪ್ರದುದ್ರಾನ ನಿರಂತರಂ ॥೨॥ 
ತ್ಯಕ್ತ್ವಾ ಸ್ಥಾನಂ ಗತಾಃ ಸರ್ವೇ ವಣಿಜೋ ನಾಡವಾದಯಃ । 
ಮಾತಂಗೀರೂಪಮಾಸ್ಥಾಯ ಶ್ರೀಮಾತ್ರಾ ತ್ವನಯಾ ಸುತ 1೩ 
ಹತಃ ಕರ್ಣಾಟಿಕೋನಾಮ ರಾಕ್ಚಸೋ ದ್ವಿಜಘಾತಕಃ । 
ತದಾ ಸರ್ಮೇಸಿ ವೈ ವಿಪ್ರಾಃ ಹೃಷ್ಟಾಸ್ತೇ ತೇನ ಕರ್ಮಣಾ ॥೪॥ 
ಸ್ತುನಂತಿ ಪೂಜಯಂತಿ ಸ್ಮ ನಣಿಜೋ ಭಕ್ತಿತತ್ಸರಾಃ । 
ವರ್ಷೇ ನರ್ಷೇ ಪ್ರಕುರ್ವಂತಿ ಶ್ರೀಮಾತಾಪೂಜನಂ ಶುಭಂ !೫॥ 
ಶುಭಕಾರ್ಯೇಷು ಸರ್ವೇಷು ಪ್ರಥಮಂ ಪೂಜಯೇತ್ತು ತಾಂ । 
ನಸ ನಿಘ್ನುಂ ಪ್ರಪಶ್ಯೇತ ತದಾಪ್ರಭೃತಿ ಪುತ್ರಕ ॥ ೬॥ 


ಕನ್ನಡದ ಅನುವಾದ 
ಮಾತಂಗೀಕರ್ಗೂಟಕೋಪಾಖ್ಯಾನವರ್ಣನ 


೧-೪. ಶ್ರೀರುದ್ರನು ಹೇಳುತ್ತಾನೆ: ಪ್ರಾಜ್ಞನಾದ ಎಲೈ ಸ್ಫಂದನೆ! 
ನಾನು ಮಾಡಿದ ಅದ್ಭುತ ಕಾರ್ಯವನ್ನು ಕೇಳು. ಧರ್ಮಾರಣ್ಯದಲ್ಲಿ ಮಹಾ 
ದುಷ್ಟನಾದ ಕರ್ಣಾಟಿಕನೆಂಬ ದೈತ್ಯನು ಗುಟ್ಟಾಗಿ ಬಂದು ದಂಪತಿಗಳಿಗೆ 
ನಿಫ್ಲುವನ್ನೆಸಗಿದನು. ಅವನನ್ನು ಕಂಡು ಭಯದಿಂದ ಜನರು ಓಡಿಹೋದರು. 
ವರ್ತಕರೂ, ಬ್ರಾಹ್ಮಣರೂ ಆ ಸ್ಥಳವನ್ನು ತ್ಯಜಿಸಿ ಹೊರಟುಹೋದರು. ಆಗ 
ಶ್ರೀಮಾತೆಯು ಮಾತಂಗೀ ರೂಪವನ್ನು ಧರಿಸಿ ಬ್ರಾಹ್ಮಣಹಿಂಸಕನಾದ 
ಆ ಕರ್ಣಾಟಕ ರಾಕ್ಚಸನನ್ನು ಕೊಂದಳು. ಆಗ ಎಲ್ಲ ವಿಪ್ರರೂ ಅವಳ ಆ ದೈತ್ಯ 
ನಿಗ್ರಹ ಕಾರ್ಯದಿಂದ ಸಂತೋಷಗೊಂಡರು. 

೫-೬. ವರ್ತಕರೂ ಭಕ್ತಿಯುಕ್ತರಾಗಿ ಸ್ತುತಿಸಿ ಪೂಜಿಸಿದರು. ಹೀಗೆಯೇ 
ಅವರು ಪ್ರತಿವರ್ಷವೂ ಶ್ರೀಮಾತೆಯ ಶುಭಪೂಜೆಯನ್ನು ಮಾಡುತ್ತಾರೆ. ಸಮಸ್ತ 
ಶುಭಕಾರ್ಯಗಳಲ್ಲಿಯೂ ಮೊದಲು ಶ್ರೀಮಾತೆಯನ್ನಾರಾಧಿಸಿದವನು ಅದು 
ಮೊದಲ್ಗೊಂಡು ನಿಘ್ನವನ್ನು ಕಾಣಲಾರನು. 


೨೦೨ ಶ್ರೀ ಸ್ಕಾಂದಮಹಾಪುರಾಣಂ 


ಯಖಧಿಷ್ಠಿ ರ ಉವಾಚ ;-. 
ಕೋಂಸೌ ದುಷ್ಟೋ ಮಹಾದೈತ್ಯಃ ಕಸಿ ನ್ಸಂಶೇ ಸಮುದ್ಭವಃ | 
8೦ ಕಂ ತೇನ ಕೃ ತಂ ತಾತ ಸರ್ವಂ ಜತ್ತ ಯು ಸುವ್ರತ ॥೭॥ 
ವ್ಯಾಸ ಜತ ವ 
ಶೃಣು ರಾಜನ್ಮನಕ್ಸ್ಟ್ಯಾಮಿ ಕರ್ಣಾಟಕನಿಚೇಷ್ಟಿತಂ | 
ದೇವಾನಾಂ ದಾನನಾನಾಂ ಯೋ ದುಃಸಹೋ ನೀರ್ಯದರ್ಪಿತಃ ॥ ೮ ॥ 
ದುಷ್ಪಕರ್ಮಾ ದುರಾಚಾರೋ ಮಹಾರಾಷ್ಟ್ರೊ € ಮಹಾಭುಜಃ । 


ಜಿತ್ಹಾ ಚ ಸಕಲಾಂಲ್ಲೋಕಾನ' ತ್ರೈ ಲೋಕ್ಯೆ ತ ನ ಗತಾಗತಃ ॥೯॥ 
ಯತ್ರ ದೇವಾಶ್ಚ ಯಷಯಸ್ತತ್ರ ಗತ್ವಾ ಮುಕ 

ಛದ್ಮ ನಾವಾ ಬಲೇನೈ ವ ನಿಘ್ನಂ ಪ್ರ ಪ ಧು ನೃಪ noon 
ನ ನೇಡಾಧ್ಯಯನಂ' ಲೋಕೇ ಭನೇತ್ತಸ್ಯ ಚೆಯೇನ ಚ। 

ಕುರ್ನತೇ ವಾಡವಾ ದೇನಾ ನ ಚ ಸಂಧ್ಯಾದ್ಯುಪಾಸನಂ ॥ ೧೧॥ 
ನ ಕ್ರತುರ್ವರ್ತತೇ ತತ್ರ ನ ಚೈವ ಸುರಪೂಜನಂ । 

ದೇಶೇ ದೇಶೇ ಚ ಸರ್ವತ್ರ ಗ್ರಾಮೇ ಗ್ರಾಮೇ ಪುರೇ ಪುರೇ ॥ ೧೬॥ 
ತೀರ್ಥೇ ತೀರ್ಥೇ ಚ ಸರ್ವತ್ರ ನಿಘ್ನಂ ಪ್ರಕುರುತೇಸುರಃ । 

ಪರಂತು ಶಕ್ಯತೇ ನೈನ ಧರ್ಮಾಂರಣ್ಯೇ ಪ್ರವೇಶಿತುಂ 1 ೧೩॥ 





೭. ಯುಧಿಷ್ಠಿರನು ಕೇಳುತ್ತಾನೆ: ತಾತ! ಈ ದುಷ್ಟದೈತ್ಯನಾರು? 
ಇವನು ಯಾವ ವಂಶದಲ್ಲಿ ಜನಿಸಿದವನು? ಇವನು ತಿಕೇನುಮಾಜಿಸನು) ಎಲ್ಲ 
ವನ್ನೂ ಹೇಳು. 

೮-೯. ವ್ಯಾಸನು ಹೇಳುತ್ತಾನೆ: ಅರಸ! ಕೇಳು. ಕರ್ಣಾಟಕಾಸುರನ 
ಕಾರ್ಯವನ್ನು ಹೇಳುವೆನು. ಪರಾಕ್ರಮದಿಂದ ಮತ್ತನಾಗಿ ದೇವದಾನವರಿಗೆ 
ಸಹಿಸಲಾಗದವನೂ, ದುಷ್ಕಾರ್ಯಕರ್ತನೂ, ಕೆಟ್ಟ ನಡತೆಯುಳ್ಳ ವನೂ, ಮಹಾ 
ರಾಜ್ಯ ವುಳ್ಳ ವನೂ, ದೀರ್ಫ್ಥಬಾಹುವೂ ಆಗಿರುವ" ಆ ಮಹಾಜೆ ತ್ಯನು ಸಕಲ 
ಲೋಶಗಳನ್ನೂ ಗೆದ್ದು ಮೂರು ಲೋಕಗಳಲ್ಲಿಯೂ ಜತರ ಇಸು: 

೧೦. ಮಹಾರಾಜ ! le ಮಹಾಸುರನು ದೇವತೆಗಳೂ ಖುಷಿಗಳೂ ಇರುವ 
ಸ ೈಳಕ್ಕೆ ಹೋಗಿ ಕಪಟದಿಂದಾಗಲಿ, ಶಕ್ಷೆಯಿಂದಾಗಲಿ ವಿಘ್ನಗಳನ್ನು ಮಾಡಿದನು. 

೧೧. ಪ್ರಪಂಚದಲ್ಲಿ ಅವನ ಭಯದಿಂದ ಬ್ರಾಹ್ಮಣರೂ, ದೇವತೆಗಳೂ 
ನೇದಾಧ್ಯಯನವನ್ನೂ, ಸಂಧ್ಯಾನಂದನೆಯನ್ನೂ ಮಾಡಲಾಗಲಿಲ್ಲ. 

೧೨-೧೩. ಯಜ್ಞ ಸ. ವೂ, ದೇವಪೂಜೆಯೂ ಚೂ ಈ ಅಸುರನು 
ಪ ನ್ರತಿದೇಶದಲ್ಲಿಯೂ, ಪ್ರತಿಹಳ್ಳಿ ಯಲ್ಲಿಯೂ, ಪ್ರ ಪಟ್ಟ ಣದಲ್ಲಿಯ್ಕೂ ಪ್ರತಿ 
ತೀರ್ಥದಲ್ಲಿಯೂ, ಎಲ್ಲೆ 'ಡಯಲ್ಲಿಯೂ ತೊಂದಕೆ ೬... ದ ನು. ಆದರೆ 
ಧರ್ಮಾರಣ್ಯವನ್ನು ಮಾತ ತ್ರ ಪ್ರವೇಶಿಸಲು ಅವನು ಶಕ್ತ ನಾಗಲಿಲ್ಲ. 


ಅಸ್ಟಾದತೋ9ಧ್ಯಾಯಃ ೨೦೩ 


ಭಯಾಚ್ಛಕ್ಕ್ಯಾಶ್ಚ ಶ್ರೀಮಾತುರ್ದಾನವೋ ನಿಕ್ಸವಸ್ತದಾ । 
ಕೇನೋಸಾಯೇನ ತತ್ರೈವ ಗಮ್ಯತೇತ್ವಿತಿ ಚಿಂತಯನ್‌ ॥ ೧೪ I 
ನಿಘ್ನಂ ಕರಿಷ್ಯೇ ಹಿ ಕಥಂ ಬ್ರಾಹ್ಮಣಾನಾಂ ಮಹಾತ್ಮನಾಂ | 
ನೇದಾಂಧ್ಯಯನಕರ್ತೂಣಾಂ ಯಜ್ಞೇ ಕರ್ಮಾ ಧಿತಿಸ್ಠತಾಂ ॥೧೫॥ 
ವೇದಾಂಧ್ಯಯನಜಂ ಶಬ್ದಂ ಶ್ರುತ್ವಾ ದೂರಾತ್ಸದಾನವಃ । 


ನಿವ್ಯಥೇ ಸ ಯಥಾ ರಾಜನ್ವಜ್ರಾಹತ ಇನ ದ್ವಿಪಃ ॥ ೧೬ ॥ 
ನಿಃಶ್ವಾಸಾನ್ಮುಮುಚೇ ರೋಷಾದ್ದಂತೈರ್ದಂತಾಂಶ್ಚ ಫಘರ್ಷಯನ್‌ । 
ದಶಮಾನೋ ನಿಜಾವೋಷ್ಕೌ ಪೇಷಯಂಶ್ಲ ಕರಾವುಭೌ ॥ ೧೭॥ 
ಉನ್ಮತ್ತವದ್ವಿಚರತ ಇತಶ್ಹೇತಶ್ಚ ಮಾರಿಷ । 

ಸನ್ನಿಪಾತಸ್ಯ ದೋಷೇಣ ಯಥಾ ಭವತಿ ಮಾನವಃ ॥ ೧೮॥ 
ತಥೈವ ದಾನವೋ ಘೋರೋ ಧರ್ಮಾಂರಣ್ಯಸಮಿಾಪಗಃ । 

ಭ್ರಮತೇ ದಹತೇ ಚೈನ ದೂರಾದೇವ ಭಯಾನ್ಸಿತಃ ॥೧೯॥ 
ವಿವಾಹಕಾಲೇ ವಿಪ್ರಾಣಾಂ ರೂಪಂ ಕೃತ್ವಾ ದ್ವಿಜನ್ಮನಃ । 

ತತ್ರಾಗತ್ಯ ದುರಾಧರ್ಷೋ ನೀತ್ವಾ ದಾಂಪತ್ಯಮುತ್ತಮಂ ॥೨೦॥ 
ಉತ್ಸಪಾತ ನುಹೀಪೃಷ್ಠಾದ್ಗಗನೇ ಸೋಂಸುರಾಂಧಮಃ । 

ಸ್ವಯಂ ಚ ರಮತೇ ಪಾಪೋ ಡ್ವೇಷಾಜ್ಞಾತಿಸ್ಕಭಾವತಃ ॥ ೨೧॥ 


೧೪-೧೫. ಶ್ರೀಮಾತೆಯ ಭಯದಿಂದ ಆ ದಾನವನು ವ್ಯಥೆಗೊಂಡು, 
ಕ ಧರ್ಮಾರಣ್ಯವನ್ನು ಹೇಗೆ ಪ್ರವೇಶಿಸಿಯೇನು? ನೇದಾಧ್ಯಯನವನ್ನೂ ಯಜ್ಞ 
ವನ್ನೂ ಮಾಡುತ್ತಿರುವ ಮಹಾತ್ಮರಾದ ಈ ಬ್ರಾಹ್ಮಣರಿಗೆ ಹೇಗೆ ತೊಂದರೆ 
ಯನ್ನುಂಟುಮಾಡಿಯೇನು?'' ಎಂದೇ ಆಲೋಟಚಿಸುತ್ತಿದ್ದನು. 

೧೬. ಆವನು ದೂರದಿಂದ ಅವರ ವೇದಾಧ್ಯಯನ ಶಬ್ದವನ್ನು ಕೇಳಿ ವಜ್ರ 
ದಿಂದ ಹೊಡೆಯಲ್ಪಟ್ಟ ಐರಾವತದಂತೆ ವ್ಯಥೆಪಡುತ್ತಿದ್ದನು. 

೧೭. ರೋಷದಿಂದ ಹಲ್ಲುಗಳನ್ನು ಕಡಿಯುತ್ತಾ, ತುಟಿಗಳನ್ನು ಕಚ್ಚಿ 
ಕೊಳುತ್ತ ಎರಡು ಕೈಗಳನ್ನೂ ಹಿಸಿಕಿಕೊಳ್ಳುತ್ತ ನಿಟ್ಟುಸುರುಬಿಟ್ಟನು. 

೧೮-೧೯. ಸನ್ಸಿಪಾತ ಜ್ವರದಿಂದ ಮಾನವನು ಹುಚ್ಚನಾಗಿ ಅಲೆಯುವಂತೆ 
ಇಲ್ಲಿ ಅಲ್ಲಿ ಹುಚ್ಚನಂತೆ ಸಂಚರಿಸಿದನು. ಅಂತೆಯೇ ಧರ್ಮಾರಣ್ಯದ ಹತ್ತಿರದಲ್ಲಿ 
ರುವ ಈ ದಾನವನು ದೂರದಲ್ಲಿಯೇ ಭಯದಿಂದ ಅಲೆದಲೆದು ವ್ಯಥೆಗೊಂಡನು. 

೨೦-೨೧. ಬಲಶಾಲಿಯಾದ ಈ ದಾನವನು ಬ್ರಾಹ್ಮಣರ ಮದುವೆಯ 
ಸಮಯದಲ್ಲಿ ಅವರ ವೇಷವೇ ಉಳ್ಳವನಾಗಿ ಬಂದು ಉತ್ತಮ ದಂಪತಿಗಳನ್ನು 
ಅಪಹರಿಸಿ ಆಕಾಶಕ್ಕೆ ಹಾರಿ ಅಲ್ಲಿ ಜಾತಿಸ್ವಭಾವದಂತೆ ದ್ವೇಷದಿಂದ ಆ ದಂಪತಿ 
ಗಳನ್ನು ಕೆಡಿಸುತ್ತಿದ್ದನು. 


ಶಂ೪ ಶ್ರೀ ಸ್ಕಾಂದಮಹಾವುರಾಣಂ 


ಏನಂ ಚ ಬಹುಶಃ ಸೋಥ ಧರ್ಮಾಂರಣ್ಯಾಚ್ಚದಂಪತೀ | 


ಗೃಹೀತ್ವಾ ಕುರುಶೇ ಪಾಪಂ ದೇವಾನಾಮಪಿ ದುಃಸಹಂ 2೨ 
ವಿಘ್ನಂ ಕರೋತಿ ದುಷ್ಬ್ಟೋಂಸೌ ದಂಪತ್ಯೋಃ ಸತತಂ ಭುವಿ । 
ಮಹಾಘೋರತರಂ ಕರ್ಮ ಕುರ್ವಂಸ್ತಸ್ಮಿನ್ವರೇ ಪುರೇ ॥ ೨೩ ॥ 


ತತ್ರೋದ್ವಿಗ್ನಾ ದ್ವಿಜಾಃ ಸರ್ವೇ ಪಲಾಯಂತೇ ದಿಶೋದಶ । 
ಗತಾಃ ಸರ್ವೇ ಭೂಮಿದೇವಾಸ್ತ್ಯಕ್ತ್ವಾ ಸ್ಥಾನಂ ಮುನೋರನುಂ ॥ ೨೪॥ 
ಯತ್ರ ಯತ್ರ ಮಹತ್ತೀರ್ಥಂ ತತ್ರ ತತ್ರ ಗತಾ ದ್ವಿಜಾಃ । 


ಉದ್ದಸಂ ತತ್ಪುರಂ ಜಾತಂ ತಸ್ಮಿನ್ಯಾಲೇ ನೃಪೋತ್ತನು ॥ ೨೫ ॥ 
ನ ನೇದಾಂಧ್ಯಯನಂ ತತ್ರ ನ ಚ ಯಜ್ಞಃ ಪ್ರವರ್ತತೇ । 

ಮನುಜಾಸ್ತತ್ರ ತಿಷ್ಕಂತಿ ನ ಕರ್ಣಾಟಭಯಾರ್ದಿತಾಃ ॥ ೨೬ ॥ 
ದ್ವಿಜಾಃ ಸರ್ವೇ ತತೋ ರಾಜನ್ವಣಿಜಶ್ತ ಮಹಾಯಶಾಃ । 

ಏಕತ್ರ ಮಿಲಿತಾಃ ಸರ್ವೇ ವಕ್ತುಂ ಮಂತ್ರಂ ಯಥೋಚಿತಂ ॥೨೭॥ 
ಕರ್ಣಾಟಸ್ಯ ನಧೋಪಾಯಂ ಮಂತ್ರಯಂತಿ ದ್ವಿಜರ್ಷಭಾಃ । 
ವಿಚಾರ್ಯಮಾಣೇ ತೈರ್ದ್ವೈವಾದ್ಹಾಗ್ಹಾತಾ ಚಾಂಶರೀರಿಣೀ ॥ ೨೮ ॥ 
ಆರಾಧಯತ ಶ್ರೀಮಾತಾಂ ಸರ್ವದುಃಖಾಂಪಹಾರಿಣೇಂ । 
ಸರ್ವದೈತ್ಯಕ್ಷುಯಕರೀಂ ಸರ್ವೋಪದ್ರನನಾಶಿನೀಂ worn 





೨೨-೨೩. ಹೀಗೆ ಅವನು ಅನೇಕಬಾರಿ ಧರ್ಮಾರಣ್ಯದಿಂದ ದಂಸತಿಗಳನ್ನು 
ಅಪಹರಿಸಿಕೆಂಡು ಹೋಗಿ ದೇವತೆಗಳಿಗೂ ಸಹಿಸಲಾಗದ ಪಾಸವನ್ನು ಆಚರಿಸು 
ತ್ತಿದ್ದನು. ಈ ದುಷ್ಟನು ಆ ಪಟ್ಟದಲ್ಲಿ ಘೋರಕಾರ್ಯವನ್ನು ಆಚರಿಸುತ್ತ 
ದಂಪತಿಗಳಿಗೆ ಯಾವಾಗಲೂ ಉಪದ್ರವವನ್ನುಂಟುಮಾಡುತ್ತಿದ್ದನು. 

೨೪. ಅಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರೆಲ್ಲರೂ ಭಯದಿಂದ ಮನೋಹರ 
ವಾದ ಆ ಸ್ಥಳವನ್ನು ತ್ಯಜಿಸಿ ಹತ್ತು ದಿಕ್ಕುಗಳಿಗೂ ಓಡಿಹೋದರು. 

೨೫. ಮಹಾತೀರ್ಥಗಳಿರುವ ಪ್ರದೇಶಕ್ಕೆ ಬ್ರಾಹ್ಮಣರೆಲ್ಲರೂ ತೆರಳಿದ್ದರಿಂದ 
ಆ ಧರ್ಮಾರಣ್ಯವೆಲ್ಲವೂ ಶೂನ್ಯವಾಯಿತು. 

`೨೬. ಅಲ್ಲಿ ವೇದಾಧ್ಯಯನವೂ ಯಜ್ಞವೂ ನಡೆಯುತ್ತಿರಲಿಲ್ಲ. ಮನುಷ್ಯರು 
ಕರ್ಣಾಟಾಸುರನ ಭಯದಿಂದ ಪೀಡಿತರಾಗಿ ಅಲ್ಲಿ ವಾಸಿಸುತ್ತಿರಲಿಲ್ಲ. 

೨೭. ಬಳಿಕ ಆ ಬ್ರಾಹ್ಮಣರೂ, ವೈಶ್ಯರೂ ಉಚಿತರೀತಿಯಿಂದ ಆಲೋಚಿ 
ಸುವುದಕ್ಕಾಗಿ ಒಂದೆಡೆಯಲ್ಲಿ ಸೇರಿದರು. 

೨೮-೨೯. ಅವರು ಕರ್ಣಾಟಕನ ವಧೆಗೆ ಉಪಾಯವನ್ನು ಆಲೋಚಿಸು 
ತ್ರಿರಲು "" ಸಕಲ ದುಃಖಗಳನ್ನು ಥಿವಾರಿಸುವವಳೂ, ಸಮಸ್ತ ದೈತ್ಯರನ್ನೂ 
ನಾಶಗೊಳಿಸುವವಳೂ, ಎಲ್ಲ ತೊಂದರೆಗಳನ್ನು ಪರಿಹರಿಸುವವಳೂ ಆಗಿರುವ 


ಅಸ್ಪಾಡಶೋಕಿಧ್ಯಾಯೆ। ತಿಂಜ 


ತಚ್ಛ್ರುತ್ವಾ ವಾಡವಾಃ ಸರ್ವೇ ಹರ್ಷನ್ಯಾಕುಲಲೋಚನಾಃ | 


ಶ್ರೀಮಾತಾಂ ತು ಸಮಾಗತ್ಯ ಗೃಹೀತ್ವಾ ಬಲಿಮುತ್ತಮಂ 1೩೦॥ 
ಮಧು ಕ್ಸೀರಂ ದಧಿ ಘೃತಂ ಶರ್ಕರಾ ಪಂಚಧಾರಯಾ । 

ಧೂಪಂ ದೀಪಂ ತಥಾ ಚೈನ ಚಂದನಂ ಕುಸುಮಾನಿ ಚ 1 ೩೧॥ 
ಫಲಾನಿ ನಿನಿಧಾನ್ಯೇನ ಗೃಹೀತ್ವಾ ವಾಡವಾ ನೃಪ! 

ಧಾನ್ಯಂ ತು ವಿವಿಧಂ ರಾಜನ್ಸಕ್ತಾಂಪೂಪಾ ಫೃತಾಚಿತಾಃ ॥ ೩೨ ॥ 
ಕುಲ್ಮಾಷಾ ವಟಕಾಶ್ಚೆನ ಪಾಯಸಂ ಫೃತಮಿಶ್ರಿತಂ । 

ಸೋಹಾಲಿಕಾ ದೀಪಿಕಾಶ್ಚ ಸಾರ್ದ್ರಾಶ್ಚ ವಟಕಾಸ್ತಥಾ ॥ ಕಿತ ॥ 
ರಾಜಿಕಾಭಿಶ್ಚ ಸಂಲಿಸ್ತಾ ನವಚ್ಛಿ ದ್ರಸಮಸ್ಚಿತಾಃ । 
ಚಂದ್ರಬಿಂಬಪ್ರತೀಕಾಶಾ ಮಂಡಕಾಸ್ತತ್ರ ಕಲ್ಪಿತಾಃ ॥ 4೪ 
ಪಂಚಾಮೃತೇನ ಸ್ನೃಸನಂ ಕೃತ್ವಾ ಗಂಥೋದಕೇನ ಚ । 
ಧೂಪೈರ್ದಿೀಷೈಶ್ಚ ನೈನೇದ್ಯೈ ಸ್ತೋಷಯಾಮಾಸುರೀಶ್ಚರೀಂ 1 ೩೫॥ 
ನೀರಾಜನೈಃ ಸಕರ್ಪೂರೈಃ ಪುಸ್ಸೈರ್ದೀಪಷೈಃ ಸುಚಂದನೈಃ । 

ಶ್ರೀಮಾತಾ ತೋಷಿತಾ ರಾಜನ್ಸರ್ವೋಪದ್ರನನಾಶಿನೀ ॥ ೩೬ ॥ 
ಶ್ರೀಮಾತಾ ಚ ಜಗನ್ಮಾತಾ ಬ್ರಾಹ್ಮೀ ಸೌಮ್ಯಾ ನರಪ್ರದಾ | 

ರೂಪತ್ರಯಂ ಸಮಾಸ್ಥಾಯ ಸಾಲಯೇತ್ಸಾ ಜಗತ್ತ್ರಯಂ ೩೭ ॥ 








ಆ ಶ್ರೀಮಾತೆಯನ್ನು ಪೂಜಿಸಿರಿ” ಎಂದು ಅದೃಷ್ಟವಶದಿಂದ ಅಶರೀರವಾಣಿ 
ಯಾಯಿತು. 

೩೦-೩೬. ಅದನ್ನು ಕೇಳಿ ಬ್ರ್ರಾ ಹ್ಮಣರೆಲ್ಲರೂ ಹರ್ಷ್ನೋತ್ಸುಲ್ಲ ಲೋಚನರಾಗಿ 
ಶ್ರೀಮಾತೆಯ ಸನ್ನಿಧಿಗೆ ಬಂದರು; ಕಾಣಿಕೆಯನ್ನೂ, ಜೇನುತುಪ್ಪ, ಹಾಲು, 
ಮೊಸರು, ತುಪ್ಪ, ಸಕ್ಕರೆಗಳನ್ನೂ, ಧೂಪ, ದೀಪ, ಗಂಧ, ಹೂವು, ನಾನಾ ವಿಧ 
ವಾದ ಹಣ್ಣುಗಳನ್ನೂ, ಬಗೆ ಬಗೆಯ ಧಾನ್ಯಗಳನ್ನೂ, ಅನ್ನೆವನ್ನೂ, ತುಪ್ಪದಿಂದ 
ಕರೆದ ಭಕ್ಟ್ಯ್ಯಗಳನ್ನೂ, ಅಲಸಂಜೆಕಾಳು, ವಡೆ, ಪಾಯಸ, ತುಪ್ಪದ ಸಣ್ಣದೀಪ 
ಮೊದಲಾದುವುಗಳನ್ನೂ, ಸಾಸಿವೆಗಳಿಂದ ಲಿಪ್ತವಾಗಿಯೂ, ಒಂಬತ್ತು ರಂಧ್ರ 
ಗಳಿಂದ ಸಹಿತವಾಗಿಯೂ, ಚಂದ್ರಬಿಂಬಕ್ಕೆ ಸಮವಾಗಿಯೂ ಇರುವ ಪೂರಿ 
ಗಳನ್ನೂ ಸಿದ್ಧಪಡಿಸಿಕೊಂಡು ಪಂಚಾಮೃತದಿಂದಲೂ, ಗಂಧೋಧಕದಿಂದಲೂ 
ಅಭಿಸೇಕಮಾಡಿ, ಧೂಪ ದೀಪ ನೈವೇದ್ಯಗಳಿಂದಲೂ, ಕರ್ಸೂರಾರತಿಗಳಿಂದಲೂ 
ಎಲ್ಲ ತೊಂದರೆಗಳನ್ನೂ ನೀಗಿಸುವ ಸುರೇಶ್ವರಿಯಾದ ಆ ಶ್ರೀಮಾತೆಯನ್ನು 
ಪೂಜಿಸಿ ತೃಪ್ತಿಗೊಳಿಸಿದರು. 

೩೭-೩೯, ಜಗನ್ಮಾತೆಯೂ, ಬ್ರಹ್ಮನ ಮಗಳೂ, ಶಾಂತಳೂ, ವರವನ್ನು 
ಕೊಡುವವಳೂ ಆಗಿರುವ ಆ ಶ್ರೀಮಾತೆಯು ಮೂರು ರೂಪಗಳನ್ನು ತಳೆದು 


೨೦೬ ಶ್ರೀ ಸ್ಕಾಂದಮಹಾಪುರಾಣಂ 


ತ್ರಯಾರೂಪೇಣ ಧರ್ಮಾತ್ಮನ್ರಕ್ಸತೇ ಸತ್ಯಮಂದಿರಂ । 

ಜಿತೇಂದ್ರಿಯಾ ಜಿತಾತ್ಮಾನೋ ಮಿಲಿತಾಸ್ತೇ ದ್ವಿಜೋತ್ತಮಾಃ ॥ ೩೮ ॥ 
ತೈಃ ಸರ್ನೈರರ್ಚಿತಾ ಮಾತಾ ಚಂದನಾದ್ಯೇನ ತೋಷಿತಾ । 
ಸ್ತುತಿಮಾರೇಭಿರೇ ತತ್ರ ವಾಜ್ಮನಃಕಾಯಕರ್ಮಭಿಃ । 


ಏಕಚಿತ್ತೇನ ಭಾವನೇನ ಬ್ರಹ್ಮಪುತ್ರ್ಯಾಃ ಪುರಃ ಸ್ಥಿತಾಃ WAN 
ವಿಪ್ರಾ ಊಚುಃ:- 

ನಮಸ್ತೇ ಬ್ರಹ್ಮಪುತ್ರ್ಯಾಸ್ತು ನಮಸ್ತೇ ಬ್ರಹ್ಮಚಾರಿಣಿ । 

ನಮಸ್ತೇ ಜಗತಾಂ ಮಾತರ್ನಮಸ್ತೇ ಸರ್ವಗೇ ಸದಾ ॥ ೪೦॥ 

ಕ್ಸುನ್ನಿದ್ರಾ ತ್ವಂ ತೃಷಾ ತ್ವಂ ಚ ಕ್ರೋಧತಂದ್ರಾದಯಸ್ತಥಾ। 

ತ್ವಂ ಶಾಂತಿಸ್ತ್ರ್ಯೃಂ ರತಿಶ್ಚೈವ ತ್ವಂ ಜಯಾ ನಿಜಯಾ ತಥಾ ॥1 ೪೧॥ 

ಬ್ರಹ್ಮನಿಷ್ಣುಮಹೇಶಾದೈೈಸ್ತ್ಟಂ ಪ್ರಪನ್ನಾ ಸುರೇಶ್ವರಿ । 

ಸಾವಿತ್ರೀ ಶ್ರೀರುಮಾಚೈನ ತ್ವಂ ಚ ಮಾತಾ ವ್ಯವಸ್ಥಿತಾ ॥ ೪೨ ॥ 

ಬ್ರಹ್ಮನಿಷ್ಲಾಸುರೇಶಾನಾಸ್ತ್ಯದಾಧಾರೇ ವ್ಯವಸ್ಥಿತಾಃ । 

ನಮಸ್ತುಭ್ಯಂ ಜಗನ್ಮಾತರ್ಥತಿಪುಷ್ಟಿಸ್ಪರೂಪಿಣಿ ॥ ೪೩ ॥ 

ರತಿಃ ಕ್ರೋಧಾ ಮಹಾಮಾಯಾ ಛಾಯಾ ಜ್ಯೋತಿಃ ಸ್ವರೂಪಿಣೀ । 

ಸೃಸ್ಟಿಸ್ಥಿತ್ಯಂತಕೃದ್ಧೇನಿ ಕಾರ್ಯಕಾರಣದಾ ಸದಾ ॥ ೪೪॥ 


ತೈಲೋಕ್ಯವನ್ನು ಕಾಪಾಡುವಳು. ಮೂರು ವೇದಗಳ ರೂಪದಿಂದ ಸತ್ಯಮಂದಿರ 
ವನ್ನು ರಕ್ಷಿಸುವಳು. ಜಿತೇಂದ್ರಿಯರೂ, ಜಿತವಾದ ಮನಸ್ಸುಳ್ಳವರೂ ಆಗಿರುವ 
ಬ್ರಾಹ್ಮಣರೆಲ್ಲರೂ ಒಟ್ಟಿಗೆ ಸೇರಿ ಗಂಧ ಮೊದಲಾದುವುಗಳಿಂದ ಆ ಶ್ರೀಮಾತೆ 
ಯನ್ನಾರಾಧಿಸಿ ಸಂತೋಷಗೊಳಿಸಿ ಮಾತು, ಮನಸ್ಸು, ದೇಹ, ಕಾರ್ಯ, 
ಭಾವನೆಗಳಿಂದ ಒಂದಾಗಿ ಸ್ತುತಿಸಲಾರಂಭಿಸಿದರು. 

೪೦. ಬ್ರಾಹ್ಮಣರು ಸ್ತುತಿಸುತ್ತಾರೆ:--""ಬ್ರಹ್ಮಪುತ್ರಿಯೂ, ಬ್ರಹ್ಮಚಾರಿಣಿ 
ಯೂ, ಜಗದಂಜೆಯೂ, ಸರ್ವವ್ಯಾನಿನಿಯೂ ಆಗಿರುವ ನಿನಗೆ ನಮಸ್ಕಾರವು. 

೪೧. ಹಸಿವು, ನಿದ್ರೆ, ಬಾಯಾರಿಕೆ, ಕೋಪ, ಆಲಸ್ಯ, ಶಾಂತಿ, ಪ್ರೀತಿ, 
ಜಯ, ವಿಜಯ ಎಲ್ಲವೂ ನೀನೇ. 

೪೨. ಸುರರಿಗೆ ಒಡೆಯಳಾದ ಓ ದೇವಿಯೆ! ನಿನ್ನನ್ನು ಬ್ರಹ್ಮ ವಿಷ್ಣು 
ಮಹೇಶ್ವರರೂ ಸೇವಿಸುತ್ತಾರೆ. ಮಾತೆ! ನೀನು ಸಾವಿತ್ರೀ, ಲಕ್ಷ್ಮೀ, ಪಾರ್ವತಿ 
ಯರ ಸ್ವರೂಪಳಾಗಿರುವೆ. 

ಲಷ, ಬ್ರಹ್ಮನಿಷ್ಠುಮಹೇಶ್ವರರು ನಿನ್ನನ್ನು ಆಶ್ರಯಿಸಿಕೊಂಡಿರುವರು. 
ಸಂತೋಷ ಮತ್ತು ಪುಸ್ಟಿರೂಷಳಾದ ಓ ಜಗನ್ಮಾತೆ! ನಿನಗೆ ನಮಸ್ಕಾರವು. 

೪೪. ಪ್ರೀತಿ, ಕೋಪ, ಮಹಾಮಾಯೆ, ಛಾಯೆ, ತೇಜಸ್ಸು ಇವುಗಳ 


ಸ್ಟಾದಶೋ8ಧ್ಯಾಯಃ ೨೦೭ 


ಫರಾ ತೇಜಸ್ತಥಾ ವಾಯುಃ ಸಲಿಲಾಕಾಶಮೇನ ಚ । 


ನಮಸ್ತೇಸ್ತು ಮಹಾವಿದ್ಯೇ ಮಹಾಜ್ಞಾನಮಯೇಂನಘೇ ॥ ೪೫ ॥ 
ಹ್ರೀಂಕಾರೀ ದೇನರೂಪಾ ತ್ವಂ ಕ್ಲೀಂಕಾರೀ ತ್ವಂ ಮಹಾದ್ಯುತೇ । 
ಆದಿಮಧ್ಯಾಂವಸಾನಾ ತ್ವಂ ತ್ರಾ ಹಿ ಚಾಂಸ್ಮಾನ ಹಾಭಯಾತ್‌ ॥ ೪೬ ॥ 
ಮಹಾಷಾಪೋಹಿ ದುಷ್ಟಾತ್ಸಾ ಜೈ ತ್ಕೊ ಯ ಬಾಧತೇಂಧುನಾ । 
ತ್ರಾಣರೂಸಾ ತ್ವಮೇಕಾ ಚ ಅಸ್ಮಾ ಫಂ ಕುಲದೇನತಾ ॥೪೭॥ 
ತ್ರಾಹಿ ತ್ರಾಹಿ ನುಹಾಜೇವಿ ರಕ್ಸ ಕಕ್ಸ ಮಹೇಶ್ವರಿ । 

ಹನೈನಂ ದಾನವಂ ದುಷ್ಟಂ ದ್ವಿಜಾನಾಂ ನಿಘ್ನುಕಾರಕಂ ॥ ೪೮ ॥ 


ಏವಂ ಸ್ತುತಾ ತದಾ ದೇವೀ ಮಹಾಮಾಯಾ ದ್ವಿಜನ್ಮಭಿಃ I 

ಕರ್ಣಾಟಸ್ಯ ವಧಾರ್ಥಾಯ ದ್ವಿಜಾತೀನಾಂ ಹಿತಾಯ ಚ। 

ಪ್ರ ತ್ಯಕ್ಸಾ ಧನ ತ್ತತ್ರ ವರಂ ಬ್ರೂತೇತ್ಯುವಾಚ ಹ ॥೪೯॥ 
ಕ್ಮ RS ಎ 

ಕೇನ ವೈ ತ್ರಾಸಿತಾ ವಿಪ್ರಾಃ ಕೇನ ವೋದ್ದೇಜಿತಾಃ ಪುನಃ । 

ತಸ್ಯಾ ಹೆಂ ಸುತಾ ನಿಪ್ರಾ ನಯಿಷ್ಯೇ ಹ ಸಾದನಂ uw ೫೦ 1 
ಸ್ವರೂಷಳೂ, ಸೃಷ್ಟಿ ಸಿತಿ ಸಂಹಾರಗಳನ್ನು ಮಾಡುವವಳೂ, ಕಾರ್ಯಕಾರಣ 

ಗಳನ್ನು ಂಟುಮಾಡುವವಳೂ ಆದ ಎಲೌ ತಾಯೆ! ನಿನಗೆ ನಮಸ್ಕಾರವು. 

೪೫. ಭೂಮಿ, ತೇಜಸ್ಸು, ಗಾಳಿ, ನೀರು, ಆಕಾಶಗಳ ಸ್ವರೂಸಳಾಗಿ ಮಹಾ 
ವಿದ್ಯಾರೂಪಳೂ ಜ್ಞಾನಸ್ವರೂಸಳೂ ಟಿಗಿಕುವ ಓ ಡೇವಿ! ನಿನಗೆ ನಮಸ್ಕಾರವು. 

೪೬. ಹ್ರೀಂಕಾರ, ಕ್ಲೀಂಕಾರಗಳ ಸ್ವರೂಪಳೂ, ಮಹಾ ತೇಜಸ್ವಿನಿಯೂ, 
ಆದಿ, ಮಧ್ಯ, ಅಂತ್ಯರೂಪಳೂ ಆಗಿರುವ ನೀನು ನಮ್ಮನ್ನು ಅತ್ಯಂತವಾದ 
ಈ ದೈತ್ಯಭಯದಿಂದ ಕಾಪಾಡು. 

೪೭. ಅತಿಪಾಹಿಯಾದ ಕರ್ಣಾಟನೆಂಬ ದುಷ್ಪದೈತ್ಯನು ಈಗ ನಮ್ಮನ್ನು 
ಫೀಡಿಸುತ್ತಿದ್ದಾ ಕೆ. ನಮ್ಮ ಕುಲಜೀವತೆಯಾದ ನೀನೊಬ್ಬ ಳೆ ನಮ್ಮನ್ನು ಕಾಪಾಡ 
ತಕ್ಟವಳು. 

೪೮. ಮಹಾದೇವಿ! ಕಾಪಾಡು ಕಾಪಾಡು! ಮಹೇಶ್ವರಿ! ರಕ್ಸಿಸು ರಕ್ಷಿಸು! 
ಬ್ರಾಹ್ಮಣರಿಗೆ ತೊಂಧರಯನ್ನಸಗುನ ಈ ದುರುಳದೈ ತ್ಯನನ್ನು ಕೊಲ್ಲು ಕೊಲ್ಲು!” 

೪೯. ಬ್ರಾಹ್ಮಣರಿಂದ ಹೀಗೆ ಸ್ತುತಿಸಲ್ಪಟ್ಟ ಆ ಶ್ರೀಮಾತೆಯು ಕರ್ಣಾಟನ 
ವಥೆಗಾಗಿಯೂ, ಬ್ರಾಹ್ಮಣರ ಹಿತಕ್ಕಾಗಿಯೂ ಗ್‌ ನ ಪ್ರತ್ಯಕ್ಸಳಾಗಿ, "ವರವನ್ನು 
ಕೇಳಿರಿ? ಎಂದು ಹೇಳಿದಳು. 

೫೦. ಶ್ರೀಮಾತೆಯು ಹೇಳುತ್ತಾಳೆ: "ಎಲೈ ದ್ವಿಜರೆ! ನಿಮ್ಮನ್ನು 
ಯಾವನು ಹೆದರಿಸಿ ವ ಥೆಗೊಳಿಸುತ್ತಿ ದ್ವಾನೆ? ಹೇಳಿರಿ. ಸಿಟ್ಟೂ ಗೊಂಡಿರುವ 
ನಾನು ಅವನನ್ನು ಚನಾಗಿ ಕಳುಹಿಸುವೆನು. 


ಎ೦೮ ಶ್ರೀ ಸ್ಕಾಂದಮಹಾಪುರಾಣಂ 


ಕ್ಸೀಣಾಯುಷಂ ನರಂ ವಿತ್ತ ಯೇನ ಯೂಯಂ ನಿಪೀಡಿತಾಃ । 
ದದಾಮಿ ವೋ ದ್ವಿಜಾತಿಭ್ಯೋ ಯಥೇಷ್ಟಂ ನಕ್ತುಮರ್ಹಥ ॥ ೫೧೫8 


ಭಕ್ತ್ಯಾಹಿ ಭವತಾಂ ವಿಪ್ರಾಃ ಕರಿಷ್ಯೇ ನಾತ್ರ ಸಂಶಯಃ ॥ ೫೨ ॥ 
ದ್ವಿಜಾ ಊಚುಃ:-- 

ಕರ್ಣಾಟಾಖ್ಯೋ ಮಹಾರೌದ್ರೋ ದಾನವೋ ಮದಗರ್ನಿತಃ । 

ಪಿಫ್ನಂ ಪ್ರಕುರುತೇ ನಿತ್ಯಂ ಸತ್ಯಮಂದಿರವಾಸಿನಾಂ ॥ ೫೩॥ 


ಬ್ರಾಹ್ಮಣಾನ್ಸತ್ಯಶೀಲಾಂಶ್ಚ ವೇದಾಂಧ್ಯಯನತತ್ಸರಾನ್‌ । 

ದ್ವೇಷಾದ್ದೇಷ್ಟಿ ದ್ವೇಷಣಸ್ತಾನ್ನಿತ್ಯನೇವ ಮಹಾಮತೇ । 

ನೇದವಿದ್ದೇಷಣೋ ದುಷ್ಟೋ ಘಾತಯೈನಂ ಮಹಾದ್ಯುತೇ ॥ ೫೪ ॥ 
ವ್ಯಾಸ ಉವಾಚ: 


ತಥೇತ್ಯುಕ್ತ್ವಾ ತು ಸಾ ದೇವೀ ಪ್ರಹಸ್ಯ ಕುಲದೇನತಾ । 


ವಧೋಪಾಯಂ ವಿಚಿಂತ್ಯಾಂಸ್ಯ ಭಕ್ತಾನಾಂ ರಕ್ಟಣಾಯ ನೈ ॥ ೫೫॥ 
ತತಃ ಕೋಪಹರಾ ಜಾತಾ ಶ್ರೀಮಾತಾ ನೃಪಸತ್ತಮ । 

ಕೋಪೇನ ಭ್ರುಕುಟೀಂ ಕೃತ್ವಾ ರಕ್ತನೇತ್ರಾಂತಲೋಚನಾಂ ॥ ೫೬॥ 
ಕೋಪೇನ ಮಹತಾನಿಷ್ಟಾ ವಸಂತೀ ಪಾವಕಂ ಯಥಾ । 

ಮಹಾಜ್ವಾಲಾ ಮುಖಾನ್ನೇತ್ರಾನ್ನಾಸಾಕರ್ಣಾಚ್ಚ ಭಾರತ ॥ ೫೭ ॥ 


೫೧-೫೨, ಅಯ್ಯಾ ವಿಪ್ರರೇ! ನಿಮ್ಮನ್ನು ಪೀಡಿಸುತ್ತಿರುವ ಆ ರಾಕ್ಟೃಸನು 
ಕೇವಲ ಕ್ಸೇಣಾಯುವೆಂದು ತಿಳಿಯಿರಿ. ಅವನಾರೆಂಬುದನ್ನು ಯಥಾವತ್ತಾಗಿ 
ಹೇಳಿರಿ. ನಿಮ್ಮ ಮಾತಿಗೆ ವೃವಧಾನವನ್ನು ಕೊಡುತ್ತೇನೆ. ನಿಮ್ಮ ಭಕ್ತಿಯಿಂದ 
ಸುಪ್ರಸನ್ನಳಾಗಿರುವ ನಾನು ನಿಮ್ಮ ಕಾರ್ಯವನ್ನು ಮಾಡಿಕೊಡುವುದರಲ್ಲಿ 
ಯಾವ ಸಂಶಯವೂ ಇರುವುದಿಲ್ಲ.” 

೫೩. ಬ್ರಾಹ್ಮಣರು ಹೇಳುತ್ತಾರೆ :-"" ಅತ್ಯಂತ ಭಯಂಕರನಾದ ಕರ್ಣಾಟ 
ನೆಂಬ ದಾನವನು ಮತ್ತನಾಗಿ ಸತ್ಯಮಂದಿರದಲ್ಲಿ ವಾಸಿಸುವ ನಮ್ಮೆಲ್ಲರನ್ನೂ 
ಬಾಧಿಸುತ್ತಿದ್ದಾನೆ. 

೫೪. ಎಲ್‌ ಪ್ರಾಜ್ಞಳೆ! ವೇದವಿದ್ವೇಷಿಯಾದ ಆ ದುಷ್ಟದಾನವನು ವೇದಾ 
ಧ್ಯಯನನಿರತರೂ, ಸತ್ಯಪ್ರಭಾವದವರೂ ಆಗಿರುವ ಬ್ರಾಹ್ಮಣರನ್ನು ದ್ವೇಷದಿಂದ 
ನಿತ್ಯವೂ ದ್ವೇಷಮಾಡುತ್ತಿದ್ದಾನೆ. ಅವನನ್ನು ವಧಿಸು.” 

೫೫-೫೭. ವ್ಯಾಸನು ಹೇಳುತ್ತಾನೆ:--ಕುಲದೀವತೆಯಾದ ಆ ಜೀವಿಯು 
ನಕ್ಕು ಹಾಗೆಯೇ ಆಗಲೆಂದು ಆ ಭಕ್ತರನ್ನು ಸಂರಕ್ಸಿಸುವುದಕ್ಕಾಗಿ ಅವನನ್ನು 
ಕೊಲ್ಲುವ ಉಪಾಯವನ್ನು ಆಲೋಚಿಸಿ ಅತ್ಯಂತ ಕೋಪದಿಂದ ಹುಬ್ಬುಗಂಟಕ್ಕಿ 
ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಬಾಯಿ, ಕಣ್ಣು, ಮೂಗು, ಕಿವಿಗಳಿಂದ 
ಅಗ್ಲಿ ಸ್ಟ್ರಿಕೆಯು ಬೆಂಕಿಯನ್ನು ಸುರಿಸುವಂತೆ ಅಗ್ನಿಜ್ವಾಲೆಯನ್ನು ಸುರಿಸಿದಳು, 


ಅಸ್ಪಾದಶೋಳ9ಧ್ಯಾಯಃ ೨೦೯ 


ತತ್ತೇಜಸಾ ಸಮುದ್ಭೂತಾ ಮಾತಂಗೀ ಕಾಮರೂಸಪಿಣೇ | 


ಕಾಲೀ ಕರಾಲನದನಾ ದುರ್ದರ್ಶನದನೋಜ್ಕಲಾ ॥ ೫೮ ॥ 
ರಕ್ತಮಾಲ್ಯಾಂಂಬರಥರಾ ಮದಾಘೂರ್ಣಿತಲೋಚನಾ । 

ನ್ಯಗ್ರೋಧಸ್ಯ ಸನಿನಾಪೇ ಸಾ ಶ್ರೀಮಾತಾ ಸಂಶ್ರಿತಾ ತದಾ !(೫೯॥ 
ಅಷ್ಟಾದಶಭುಜಾ ಸಾತು ಶುಭಾ ಮಾತಾ ಸುಶೋಭನಾ । 
ಧನುರ್ಬಾಣಧರಾ ದೇವೀ ಖಡ್ಗಖೇಟಕಧಾರಿಣೀ ॥ ೬೦॥ 
ಕುಠಾರಂ ಕ್ಸುರಿಕಾಂ ಬಿಭ್ರತ್ರಿ ಶೂಲಂ ಪಾನಪಾತ್ರಕಂ । 

ಗದಾಂ ಸರ್ಪಂ ಚ ಪರಿಘಂ ಪಿನಾಕಂ ಚೈನ ಸಾಶಕಂ ॥ ೬೧॥ 
ಅಕ್ಚೃಮಾಲಾಧರಾ ರಾಜನ್ಮದ್ಯಕುಂಭಾಂನುಧಾರಿಣೀ | 

ಶಕ್ತಿಂ ಚ ಮುಸಲಂ ಚೋಗ್ರಂ ಕರ್ತರೀಂ ಖರ್ಪರಂ ತಥಾ ॥ ೬೨ ॥ 
ಕಂಟಿಕಾಢ್ಯಾಂ ಚ ಬದರೀಂ ಬಿಭ್ರತೀ ತು ಮಹಾನನಾ । 
ತತ್ರಾಃಂಭವನ್ಮಹಾಯುದ್ಧಂ ತುಮುಲಂ ಲೋಮಹರ್ಷಣಂ ॥ ೬೩ ॥ 
ಮಾತಂಗ್ಯಾಃ ಸಹ ಕರ್ಣಾಟದಾನನೇನ ನೃಪೋತ್ತಮ ॥ ೬೪॥ 


ಯುಧಿಷ್ಠಿರ ಉವಾಚ: 


ಕಥಂ ಯುದ್ಧ ೦ ಸಮಭವತ್ಯಥಂ ಚೈವಾಂಪವರ್ತತ । 
ಜಿತಂ ಕೇಸೈನ ಧರ್ಮಜ್ಞ ತನ್ಮ ಮಾಚಕ್ಟ ೩ ಮಾರಿಷ WH e೫ Nn 








೫೮-೫೯. ಆ ತೇಜಸ್ಸಿನಿಂದ ಸ್ವೇಚ್ಛಾರೂಪವುಳ್ಳವಳೂ, ಕೃಷ್ಣವರ್ಣಳೂ, 
ಭಯಂಕರವಾದ ಬಾಯುಳ್ಳವಳೂ, ARS ಕ್ರ ಮೂ ಬಜ ರ್ರಕಾಶ 
ಮಾನಳೂ, ಕೆಂಪುಹೂವಿನ "ಮಾಲೆಯನ್ನು ಧರಿಸಿದವಳೂ, ಮದದಿಂದ ಆಲುತ್ತಿ 
ರುವ ಕಣ್ಣುಗಳುಳ್ಳವಳೂ ಆಗಿರುವ AEN ಉದ್ಭವಿಸಿದಳು. ಆಗ 
ಶ್ರೀಮಾತೆಯು ಆಲದಮರದ ಸಮಿಾಪವನ್ನು ಆಶ್ರಯಿಸಿದಳು. 

೬೦೨೬೪. ಆ ಮಾತಂಗಿಯು ಹದಿನೆಂಟು ತೋಳುಗಳುಳ್ಳವಳೂ, ಮಂಗಳ 
ಕರಳೂ, ಬಿಲ್ಲು, ಬಾಣ, ಕತ್ತಿ, ಗುರಾಣಿ, ಕೊಡಲಿ, ಚೂರಿ, ತ್ರಿಶೂಲ, ಕುಡಿ 
ಯುವ ಪಾತ್ರೆ, ಗದೆ, ಸರ್ಪ, ಸರಿಘ, ಪಿನಾಕವೆಂಬ ಬಿಲ್ಲು, ಹಗ್ಗ, ಜನಮಾಲೆ, 
ಮದ್ಯಕುಂಭ, ಶಕ್ಟ್ಯಾಯುಧ, ಒನಕೆ, ಕತ್ತರಿ, ಕಪಾಲ, ಮುಳ್ಳುಗಳುಳ್ಳ ಬದರಿ 
ಇವುಗಳನ್ನು ಧರಿಸಿದವಳೂ ಆಗಿ ಆ ಕರ್ಣಾಟದಾನವನೊಡನೆ ಘೋರಯುದ್ಧ 
ವನ್ನು ಮಾಡಿದಳು. 

೬೫. ಯುಧಿಷ್ಠಿರನು ಕೇಳುತ್ತಾನೆ:-ಧರ್ಮವನ್ನರಿತ ಎಲೈ ಪೂಜ್ಯನೆ ! 
ದೇವಿಗೂ ಆ ದೈತ್ಯನಿಗೂ ಯುದ್ಧವು ಹೇಗೆ ನಡೆಯಿತು? ಅದು ಹೇಗೆ ಶಾಂತ 
ವಾಯಿತು? ಯಾರು ಗೆದ್ದರು? ಅದನ್ನು ನನಗೆ ಹೇಳುವವನಾಗು. 


೨೧೦ ಶ್ರೀ ಸ್ಕಾಂದಮಹಾಪುರಾಣಂ 


ವ್ಯಾಸ ಉವಾಚ:- 
ಏಕದಾ ಶೃಣು ರಾಜೇಂದ್ರ ಯಜ್ಞಾತಂ ದೈತ್ಯಸಂಗರೇ । 
ತತ್ಸರ್ವಂ ಕಥಯಾಮ್ಯಾಶು ಯಥಾವೃತ್ತಂ ಹಿ ತತ್ಪುರಾ ॥ ೬೬ 
ಪ್ರಣಷ್ಟಯೋಷಾ ಯೇ ನಿಪ್ರಾ ನಣಿಜಶ್ಚೈನ ಭಾರತ । 
ಚೈತ್ರಮಾಸೇ ತು ಸಂಪ್ರಾಪ್ತೇ ಧರ್ಮಾಂರಣ್ಯೇ ನೃಪೋತ್ತಮ 1 ೬೭॥ 
ಗೌರೀಮುದ್ವಾಹಯಾಮಾಸುರ್ವಿಪ್ರಾಸ್ತೇ ಸಂಶಿತವ್ರತಾಃ । 
ಸ್ಪಸ್ಥಾನಂ ಸುಶುಭಂ ಜ್ಞಾತ್ವಾ ತೀರ್ಥರಾಜಂ ತಥೋತ್ತಮಂ 1 ೬೮॥ 
ನಿವಾಹಂ ತತ್ರ ಕುರ್ವಂತೋ ಮಿಲಿತಾಸ್ತೇ ದ್ವಿಜೋತ್ತಮಾಃ । 
ಕೋಟಕನ್ಯಾಕುಲಂ ತತ್ರ ಏಕತ್ರಾಸೀನ್ಮಹೋತ್ಸವೇ । 


ಧರ್ಮಾಃರಣ್ಯೇ ಮಹಾಪ್ರಾಜ್ಞ ಸತ್ಯಂ ಸತ್ಯಂ ನದಾಮ್ಯುಹಂ ॥೬೯॥ 
ಚತುರ್ಥ್ಯಾಮಪರರಾತ್ರೇಂಭ್ಯಂತರತೋಂಗ್ನಿಮಾದಧುಃ | 

ಆಸನಂ ಬ್ರಹ್ಮ ದತ್ವಾ ಅಗ್ನಿಂ ಕೃತ್ವಾ ಪ್ರದಕ್ಟಿಣಂ ॥೭೦॥ 
ಸ್ಥಾಲೀಷಾಕಂ ಚ ಕೃತ್ವಾಃಥ ಕೃತ್ವಾ ನೇದೀಃ ಶುಭಾಸ್ತದಾ । 
ಚತುರ್ಹಸ್ತಾಃ ಸಕಲಶಾ ನಾಗಪಾಶಸಮನ್ಮಿತಾಃ ॥೭೧॥ 
ನೇದಮಂತ್ರೇಣ ಶುಭ್ರೇಣ ಮಂತ್ರಯಂತೇ ತತೋ ದ್ವಿಜಾಃ । 

ಚರತಾಂ ದಂಪತೀನಾಂ ಹಿ ಪರಿವೇಷ್ಯ ಯಥೋಜಚಿತಂ ॥ ೭೨॥ 
ಬ್ರಹ್ಮಣಾ ಸಹಿತಾಸ್ತತ್ರ ವಾಡವಾಸ್ತೇ ಸುಹರ್ಹಿತಾಃ । 

ಕುರ್ವತೇ ನೇದನಿರ್ಫೊೋಷಂ ತಾರಸ್ಕರನಿನಾದಿತಂ ॥ ೭೩ ॥ 


೬೬, ವ್ಯಾಸನು ಹೇಳುತ್ತಾನೆ: ಅರಸ! ಒಂದಾನೊಂದು ಸಲ ನಡೆದ 
ದೈತ್ಯಮಹಾಯುದ್ಧದಲ್ಲಿ ಏನೇನಾಯಿತೋ ಅದನ್ನೆಲ್ಲ ನಡೆದುದು ನಡೆದಂತೆಯೆ 
ನಿನಗೆ ಹೇಳುವೆನು; ಕೇಳು. 

೬೭-೬೯. ಮಹಾರಾಜ! ಚೈತ್ರಮಾಸವು ಬರಲು ಮೃತರಾದ ಪತ್ನಿಯ 
ರುಳ್ಳ ಬ್ರಾ ಹ್ಮಣರೂ, ವೈಶ್ಯರೂ ಹತ್ತುವರ್ಷದ ಹುಡುಗಿಯರನ್ನು ಮದುವೆಯಾ 
ದರು. ಆ ತಮ್ಮ ಸ್ಥಾನವಾದ ಧರ್ಮಾರಣ್ಯವನ್ನು ಒಳ್ಳೆಯ ಕ್ಸೇತ್ರವನ್ನಾಗಿಯೂ, 
ಉತ್ತಮ ತೀರ್ಥವನ್ನಾಗಿಯೂ ತಿಳಿದು ವಿವಾಹಕ್ಕಾಗಿ ಎಲ್ಲರೂ ಅಲ್ಲಿ ಒಟ್ಟಿಗೆ 
ಸೇರಿದರು. ಅಲ್ಲಿ ಒಂದು ಮಹೋತ್ಸವದಲ್ಲಿ ಕೋಟ ಕನ್ಯೆಯರು ಸೇರಿದ್ದರು. 

೭೦. ನಾಲ್ಕನೆಯ ದಿನ ಅಪರರಾತ್ರಿಯಲ್ಲಿ ಬ್ರಹ್ಮನಿಗೆ ಆಸನವನ್ನು ದಾನ 
ಮಾಡಿ, ಅಗ್ನಿಗೆ ಪ್ರದಕ್ಸಿಣೆ ಬಂದು ಅಗ್ನಿಸಹಿತವಾಗಿ ಗೃಹಪ್ರವೇಶಮಾಡಿದರು. 

೭೧-೭೩. ಬಳಿಕ ಮಂಗಳಕರವೂ, ನಾಲ್ಕು ಗೇಣು ಪರಿಮಾಣವುಳ್ಳುದೂ, 
ಕಲಶ ನಾಗಪಾಶಗಳಿಂದ ಸಹಿತವಾದುದೂ ಆಗಿರುವ ವೇದಿಯನ್ನು ನಿರ್ಮಿಸಿ 
ಅಲ್ಲಿ ಸ್ಕಾಲೀಪಾಕಹೋಮವನ್ನು ಮಾಡಿ ಬ್ರಾಹ್ಮಣರು ವೇದಮಂತ್ರವನ್ನು 


ಅಸ್ಟಾದಶೋರಿಧ್ಯಾಯಃ ೨೧೧ 


ತೇನ ಶಬ್ದೇನ ಮಹತಾ ಕೃತ್ಸ್ನಮಾಪೂರಿತಂ ನಭಃ । 
ತಂ ಶ್ರುತ್ವಾ ದಾನವೋ ಘೋರೋ ಮವೇದಧ್ವಾನಂ ದ್ವಿಜೇರಿತಂ ॥ ೭೪ ॥ 
ಉತ್ಪಪಾತಾಸನಾತ್ತೂರ್ಣಂ ಸಸೈನ್ಯೋ ಗತಚೇತನಃ । 


ಧಾವತಃ ಸರ್ವಭೃತ್ಯಾಸ್ತಂ ಯೇಚಾಂನ್ಯೇ ತಾನುವಾಚ ಸಃ ॥ ೭೫॥ 
ಶ್ರೂಯತಾಂ ಕುತ್ರ ಶಬ್ದೋಂಯಂ ವಾಡವಾನಾಂ ಸಮುತ್ನಿ ತಃ I 

ತಸ್ಯ ತದ್ವಚನಂ ಶ್ರುತ್ವಾ ದೈತೇಯಾಃ ಸತ್ವರಂ ಯಯುಃ ॥ ೭೬ ॥ 
ವಿಭ್ರಾಂತಚೇತಸಃ ಸರ್ವೇ ಇತಶ್ಹೇತಶ್ಚ ಧಾವಿತಾಃ । 

ಧರ್ಮಾಃರಣ್ಯೇ ಗತಾಃ ಕೇಚಿತ್ತತ್ರ ದೃಷ್ಟಾ ದ್ವಿಜಾತಯಃ ॥ ೭೭ ॥ 
ಉದ್ದಿರಂತೋ ಹಿ ನಿಗಮಾಸನ್ವಿನಾಹಸನಮುಯೇ ನೃಪ । 

ಸರ್ವಂ ನಿನೇದಯಾಮಾಸುಃ ಕರ್ಣಾಟಾಯ ದುರಾತ್ಮನೇ ॥ ೭೮ ॥ 
ತಚ್ಛ್ರುತ್ವಾ ರಕ್ತತಾಮ್ರಾಕ್ಸೋ ದ್ವಿಜದ್ವಿಟ್‌ ಕೋಪಪೂರಿತಃ । 
ಆಭ್ಯಧಾನನ್ಮಹಾಭಾಗ ಯತ್ರ ತೇ ದಂಪತೀ ನೃಪ Ween 
ಖಮಾಶ್ರಿತ್ಯ ತದಾ ದೈತ್ಯಮಾಯಾಂ ಕುರ್ನನ್ಸರಾಕ್ಬಸಃ । 

ಅಹರದ್ದಂಪತೀ ರಾಜನ್ಸರ್ನಾಃ ಲಂಕಾರಸಂಯುತಾನ್‌ mu on 





ಚ್ಛರಿಸುತ್ತ ದಂಪತಿಗಳನ್ನು ಉಚಿತಾಸನದಲ್ಲಿ ಕುಳ್ಳಿರಿಸಿ ಬ್ರಹ್ಮಸಹಿತರಾಗಿ 
ಸಂತೋಷದಿಂದ ವೇದಘೋಷವನ್ನು ಘಟ್ಟ ಯಾಗಿ ಮಾಡಿದರು. 

೭೪-೭೬. ಆ ಮಹಾಧ್ವನಿಯು ಸಂಪೂರ್ಣವಾಗಿ ಆಕಾಶವನ್ನು ತುಂಬಿತು. 
ಬ್ರಾಹ್ಮಣರ ವೇದಧ್ವನಿಯನ್ನು ಆ ಘೋರದಾನವನು ಕೇಳಿ ಜ್ಞಾನನಿಲ್ಲದವನಾಗಿ 
ಸೈನ್ಯಸಮೇತವಾಗಿ ಆಸನದಿಂದ ಜಾಗ್ರತೆಯಾಗಿ ಮೇಲಕ್ಕೆ ನೆಗೆದನು. ಸಕಲ 
ಸೇವಕರೂ ಅವನನ್ನು ಹಿಂಬಾಲಿಸಿದರು. ಆ ದೈತ್ಯನು ಆ ಸೇವಕರನ್ನು ಕುರಿತು 
"" ಬ್ರಾಹ್ಮಣರ ಈ ಶಬ್ದವು ಎಲ್ಲಿಯದು? ಕೇಳಿಬನ್ನಿರಿ?' ಎಂದನು. ಅವನ. 
ಆ ಮಾತನ್ನು ಕೇಳಿ ದೈತ್ಯರು ಶೀಘ್ರವಾಗಿ ಹೋದರು. 

೭೭. ಅವರಲ್ಲಿ ಕೆಲವರು ಭ್ರಾಂತಚಿತ್ತರಾಗಿ ಇಲ್ಲಿ ಅಲ್ಲಿ ಓಡಾಡುತ್ತ 
ಧರ್ಮಾರಣ್ಯವನ್ನು ಹೊಕ್ಕು ಅಲ್ಲಿ ಆ ಬ್ರಾಹ್ಮಣರನ್ನು ಕಂಡರು. 

೭೮. ವಿವಾಹಸಮಯದಲ್ಲಿ ವೇದಮಂತ್ರಗಳನ್ನು ಬ್ರಾಹ್ಮಣರು ಪಠಿಸು 
ಕ್ರಿದ್ದಾರೆಂದು ಎಲ್ಲವನ್ನೂ ದುಷ್ಟನಾದ ಕರ್ಣಾಟನಿಗೆ ತಿಳಿಸಿದರು. 

೭೯, ಅವನು ಅದನ್ನು ಕೇಳಿ ಕೋಪದಿಂದ ಕಣ್ಣುಗಳನ್ನು ಕೆಂಪಗೆ ಮಾಡಿ. 
ಕೊಂಡು ಆದಂಪತಿಗಳಿರುವ ಸ್ಥಳಕ್ಕೆ ಓಡಿಬಂದನು. 

೮೦. ಆ ದೈತ್ಯನು ಮಾಯೆಯಿಂದ ಆಕಾಶವನ್ನಾಶ್ರಯಿಸಿ ಸಮಸ್ತ ಒಡವೆ 
ಗಳಿಂದ ಭೂಷಿತರಾದ ಅಲ್ಲಿಯ ದಂಪತಿಗಳನ್ನು ಅಪಹರಿಸಿದನು. 


೨೧೨ ಶ್ರೀ ಸ್ಮಾಂದಮಹಾಪುರಾಣಿಂ 


ತತಸ್ತೇ ನಾಡವಾಃ ಸರ್ವೇ ಸಂಗತಾ ಭುವನೇಶ್ವರೀಂ | 


ಅಂಬಾರನಂ ಪ್ರಕುರ್ನಾಣಾಸ್ತ್ರಾಹಿತ್ರಾಹೀತಿ ಚೋಚಿಕೇ ॥ ೮೧ ॥ 
ತಚ್ಛ್ರುತ್ವಾ ವಿಶ್ಚಜನನೀ ಮಾತಂಗೀ ಭುನನೇಶ್ವರೀ । 

ಸಿಂಹನಾದಂ ಪ್ರಕುರ್ವಾಣಾ ತ್ರಿಶೂಲನರಧಾರಿಣೀ ॥ ೮೨ ॥ 
ತತಃ ಪ್ರವವೃತೇ ಯುದ್ಧಂ ದೇನೀಕರ್ಣಾಟಯೋಸ್ತಥಾ । 

ಯಷೀಣಾಂ ಪಶ್ಯತಾಂ ತತ್ರ ವಣಿಜಾಂ ಚ ದ್ವಿಜನ್ಮನಾಂ ॥ ೮೩ ॥ 
ಪಶ್ಯತಾಮಭನದ್ಯುದ್ಧಂ ತುಮುಲಂ ಲೋನುಹರ್ಷಣಂ । 
ಅಸ್ತೈಶ್ಚಿಚ್ಛೇದ ಮಾತಂಗೀ ಮದನಿಹ್ವಲಿತಂ ರಿಪುಂ ॥ ೮೪ ॥ 
ಸೋಸಿ ದೈತ್ಯಸ್ತತಸ್ತಸ್ಯಾ ಬಾಣೇನೈಕೇನ ನಕ್ಸಸಿ । 

ಅಸಾವಪಿ ತ್ರಿಶೂಲೇನ ಘಾತಿತಃ ಕಶ್ಮಲಂ ಗತಃ ॥ ೮೫ ॥ 
ಮುಷ್ಟಿಭಿಶ್ಚೈನ ತಾಂ ದೇನೀಂ ಸೋಸಿ ತಾಡಯತೇಂಸುರಃ । 

ಸೋಪಿ ದೇವ್ಯಾ ತತಃ ಶೀಘ್ರಂ ನಾಗಸಾಶೇನ ಯಂತ್ರಿತಃ ॥ ೮೬ ॥ 
ತತಸ್ತೇನೈನ ದೈತ್ಯೇನ ಗಾರುಡಾಸ್ತ್ರಂ ಸಮಾದಧೇ । 

ತಯಾ ನಾರಾಯಣಾಸ್ತ್ರಂ ತು ಸಂದಢೇ ಶರಪಾತನಂ ॥ ೮೭ 
ಏನಮನ್ಯೋನ್ಯಮಾಕೃಷ್ಯ ಯುಧ್ಯಮಾನೌ ಜಯೇಚ್ಛಯಾ | 

ತತಃ ಪರಿಘಮಾದಾಯ ಆಯಸಂ ದೈತ್ಯಪುಂಗವಃ ೮೮ ॥ 


೮೧-೮೨. ಬಳಿಕ ಬ್ರಾಹ್ಮಣರೆಲ್ಲರೂ ಸೇರಿ ಹಾಹಾಕಾರಮಾಡುತ್ತ ಭುವನೇ 
ಶ್ವರಿಯಾದ ಮಾತಂಗಿಯನ್ನು ಕುರಿತು, "ತಾಯೆ! ರಕ್ಷಿಸು ರಕ್ಸಿಸು'' ಎಂದು 
ಕೂಗಿಕೊಂಡರು. ಅದನ್ನು ಕೇಳಿ ಸಕಲಲೋಕಕ್ಕೂ ಜನನಿಯಾದ ಮಾತಂಗಿಯು 
ತ್ರಿಶೂಲವನ್ನು ಹಿಡಿದುಕೊಂಡು ಸಿಂಹನಾದ ಮಾಡುತ್ತ ಬಂದಳು. 

೮೩-೮೪. ಬಳಿಕ ಯಷಿಗಳೂ, ವರ್ತಕರೂ, ಬ್ರಾಹ್ಮಣರೂ ನೋಡುತ್ತಿರು 
ವಂತೆಯೆ ಆ ಮಾತಂಗೀ ಕರ್ಣಾಟರಿಗೆ ರೋಮಾಂಚವ ನ್ನುಂಟುಮಾಡುವ 
ಭಯಂಕರ ಯುದ್ಧವು ನಡೆಯಿತು. ಮಾತಂಗಿಯು ಆಯುಧಗಳಿಂದ ಮದಿಸಿದ 
ಆ ಶತ್ರುವನ್ನು ಕತ್ತರಿಸಿದಳು. 

೮೫. ಆ ದಾನವನು ಒಂದು ಬಾಣದಿಂದ ಆ ಮಾತಂಗಿಯ ಎದೆಗೆ ಹೊಡೆ 
ದನು. ಮಾತಂಗಿಯೂ ತ್ರಿಶೂಲದಿಂದ ಅವನನನ್ನು ಬಡಿದಳು. ಅದರಿಂದವನು 
ದುಃಖಗೊಂಡನು. 

೮೬-೮೭. ಆ ಅಸುರನು ಮುಷ್ಟಿಯಿಂದ ದೇವಿಯನ್ನು ಗುದ್ದಿದನು. ಕೂಡಲೆ 
ಅವಳು ಅವನನ್ನು ನಾಗಪಾಶದಿಂದ ಬಿಗಿದಳು. ಬಳಿಕ ದೈತ್ಯನು ಗಾರುಡಾಸ್ತ್ರ 
ವನ್ನು ಪ್ರಯೋಗಿಸಿದನು. ದೇವಿಯು ನಾರಾಯಣಾಸ್ತ್ರವನ್ನು ಹೂಡಿ ಬಿಟ್ಟಳು. 

೮೮-೮೯. ಹೀಗೆ ಪರಸ್ಪರಜಯಾಭಿಲಾಷೆಯಿಂದ ಅಸ್ತ್ರಗಳನ್ನೆಳೆಡೆಳೆದು 


ಸ 'ಅಪ್ಟಾದಕಶೋತಧ್ಯಾಯಃ ೨೧೨೩ 


ಮಾತಂಗೀಂ ಪ್ರತಿಸಂಕ್ರು ದ್ಧೊ € ಜಘಾನ ಪರವೀರಹಾ । 
ದೇನೀಕ್ರು ದ್ಧ್ಧಾ ಮುಸಿ ಘಾತ್ರ ಶ್ಹೂರ್ಣಯಾಮಾಸ ದಾನವಂ ॥೮೯॥ 
ತೇನ ಮುಷ್ಟಿ ಸ್ರ ಜಾರು ಭಟ ನಿಪಪಾತ ಹ। 


ತತಸ್ತು ಸಹಸೋತ್ಠಾಯ ಶಕ್ತಿಂ ಧೃತ್ವಾ ಕರೇ ಮುದಾ ॥೯೦॥ 
ಶತಫ್ನೀಂ ಪಾತಯಾಮಾಸ ತಸ್ಯಾ ಬಂ ದಾನವಃ । 

ಶಕ್ತಿಂ ಚಿಚ್ಛೇದ ಸಾ ದೇವೀ ಮಾಶಂಗೀ ಚ ಶುಭಾನನಾ ॥೯೧॥ 
'ಜಹಾಸೋಚ್ಚೆಸ್ತು ಸಾ ಸುಭ್ರೂಃ ಶತಫ್ಲೀಂ ವಜ್ರಸನ್ನಿಭಾಂ । 
ಏನನುನ್ಯೋನ್ಯಶಸ್ತೌೌಫೈರದರ್ಯಂತೌ ಪರಸ್ಪರಂ ॥ ೯೨ 


ತತಸ್ತ್ರಿ ಶೂಲೇನ ಹತೋ ಹೃದಯೇ ನಿಪಪಾತ ಹ । 
ಮೂರ್ಥ್ಫಾಂ ವಿಹಾಯ ದೈತ್ಯೋಂಸೌ ಮಾಯಾಂ ಕೃತ್ವಾ ಚ ರಾಕ್ಚಸೀಂ॥ 
ಪಶ್ಯತಾಂ ತತ್ರ ತೇಷಾಂ ತು ಅದೃಶ್ಯೋಂಭೂನ್ಮಹಾಸುರಃ । 


ಪಸೌ ಪಾನಂ ತತೋ ದೇವೀ ಜಹಾಸಾರುಣಲೋಚನಾ ॥ ೯೪॥ 
ಸರ್ವತ್ರಗಂ ತಂ ಸಾ ದೇನೀ ತ್ರೈಲೋಕ್ಕೇ ಸಚರಾಚರೇ ॥ ೯೫ ॥ 
ಸ್ಪಯಾಸ್ಯ ಸೀತಿ ಬ್ರೂತೇ ಸಾ ಬ್ರೂಹಿ ತ್ವಂ ಸಾಂಪ್ರತಂ ಹಿ ಮೇ 

ಕರ್ನಾಟಕ ಮಹಾಮಷ್ಟ ಏಹಿ * ಶೀಘ್ರಂ ಹಿ ಯುದ್ಧ ತಾಂ ॥ ೯೬॥ 





ಅವರಿಬ್ಬ ರೂ ಯುದ್ಧ ಮಾಡುತ್ತಿದ್ದರು. ಬಳಿಕ ಆ ದೈತ್ಯೇಂದ್ರನು ಕಬ್ಬಿಣದ 
ಪರಿಘಾಯುಧವನ್ನು “ತೆಗೆದುಕೊಂಡು ಕೋಪದಿಂದ ಮಾತಂಗಿಗೆ ಹೊಡೆದನು. 
ದೇನಿಯೂ ಸಿಟ್ಟುಗೊಂಡು ಮುಷ್ಟಿಯಿಂದ ಗುದ್ದಿ ಆ ದಾನವನನ್ನು ಪುಡಿ ಪುಡಿ 
ಮಾಡಿದಳು. 

೯೦-೯೧. ಆ ಮುಸ್ಟಿಘಾತದಿಂದ ದೈತ್ಯನು ಮೂರ್ಛೆಗೊಂಡು ಕೆಳಗೆ 
ಬಿದ್ದನು. ಕೂಡಲೆ ಎದ್ದು ಸಂತೊಷದಿಂದ ಕೈಯಲ್ಲಿ ಶಕ್ರ್ಯಾಯುಧವನ್ನು 

ಹಡಿದು ಆ ದೇವಿಯಮೇಲೆ ಪ್ರಯೋಗಿಸಿದನು. ದೇವಿಯು ಆ ಆಯುಧವನ್ನು 
ಕತ್ತರಿಸಿ ಗಟ್ಟಯಾಗಿ ನಕ್ಕಳು. 

೯೨. ಹೀಗೆ ಪರಸ್ಪರವಾಗಿ ಆಯುಧಗಳಿಂದ ಅನರಿಬ್ಬರೂ ಹೊಡೆದು 
ಕೊಳ್ಳುತ್ತ ಕಾಳೆಗ ನಡೆಸಿದರು. 

೯೩-೯೬. ತರುವಾಯ ಮಾತಂಗಿಯು ಆ ದಾನವನ ಎದೆಗೆ ತ್ರಿಶೂಲದಿಂದ 
ಬಡಿಯಲು ಅವನು ಕೆಳಕ್ಕೆ ಬಿದ್ದನು. ಅನಂತರ ಮೂರ್ಛೆಯಿಂದ ಎಚ್ಚರಗೊಂಡು 
ಅವನು ರಾಕ್ಸಸಮಾಯೆಯಿಂದ ಎಲ್ಲರೂ ನೋಡುತ್ತಿರುವಂತೆಯೆ ಮಾಯ 
ವಾದನು. ದೇವಿಯು ಆಗ ಮದ್ಯಪಾನ ಮಾಡಿ ಕೆಂಪೇರಿದ ಕಣ್ಣುಳ್ಳವಳಾಗಿ 
ನಕ್ಕಳು. ಚರಾಚರಜಗತ್ತಿನ ಎಲ್ಲೆಡೆಯಲ್ಲಿಯೂ ಆ ದೈತ್ಯನಿರುವುದನ್ನು ತಿಳಿದು 
"ಎಲ್ಲಿಗೆ ಹೋಗುವೆ? ಈಗ ಬಾ. ಶೀಘ್ರವಾಗಿ ಯುದ್ಧಮಾಡು”? ಎಂದಳು. 


೨೧೪ ಶ್ರೀ ಸ್ಕಾಂದಮಹಾಪುರಾಣಂ 


ತತೋಂಭವನ್ಮಹಾಯುದ್ಧಂ ದಾರುಣಂ ಚ ಭಯಾನಕಂ | 
ಸಸೌ ದೇವೀ ತು ಮೈರೇಯಂ ವಧಾರ್ಥಂ ಸುಮಹಾಬಲಾ ॥೯೭॥ 
ಮಾತಂಗೀ ಚ ತತಃ ಕ್ರುದ್ಧಾ ವಕ್ತ್ರೇ ಚಿಕ್ಲೇಪ ದಾನನಂ | 


ತತೋಃಸಿ ದಾನವೋ ರೌದ್ರೋ ನಾಸಾರಂಥಧ್ರೇಣ ನಿರ್ಗತಃ ॥೯೮॥ 
ಯುಧ್ಯತೇ ಸ ಪುನರ್ದೈತ್ಯಃ ಕರ್ಣಾಟೋ ಮದಪೂರಿತಃ । 

ತತೋ ದೇವೀ ಪ್ರಕುಸಿತಾ ಮಾತಂಗೀ ಮದಪೂರಿತಾ ॥೯೯॥ 
ದಶನೈರ್ಮಥಯಿತ್ವಾ ಚ ಚರ್ವಯಿತ್ವಾ ಪುನಃ ಪುನಃ । 
ಶವಾಸ್ಥಿಮೇದಸಾ ಯುಕ್ತಂ ಮಜ್ಞಾ ಮಾಂಸಾದಿಪೂರಿತಂ ॥ ೧೦೦ ॥ 
ನಖರೋಮಾಂಭಿಸಂಯುಕ್ತೆಂ ಪ್ರಕ್ಲಿಸ್ಯ ಚೋದರೇಸುರಂ | 

ಕರಕೇಣ ಮುಖಂ ರುದ್ಧಂ ಕರೇಣೈಕೇನ ನಾಸಿಕಾಂ ॥ ೧೦೧ 
ತತೋ ಮಹಾಬಲೋ ದೈತ್ಯಃ ಕರ್ಣರಂಥ್ರೇಣ ನಿರ್ಗತಃ । 

ತತಸ್ತಯಾ ಮಹಾದೇವ್ಯಾ ನಾಮ ಚಕ್ರೇ ತದಾ ಭುನಿ ॥ ೧೦೨ ॥ 


ಕರ್ಣರಂಧ್ರ ಪ್ರಸೂತೋಯಂ ಕರ್ಣಟೇೀತಿ ನಿದುರ್ಬುಧಾಃ । 
ಪುನರ್ಯುದ್ಧಾರ್ಥಮಾಯಾತೋ ದೈತ್ಯೋಹಿ ಬಲದರ್ಪಿತಃ ॥ ೧೦೩ ॥ 
ಗರ್ಜಮಾನೋಸುರಸ್ತತ್ರ ಸಾಯುಧೋ ಯುಧಿ ಸಂಸ್ಥಿತಃ | 

ತಂ ದೃಷ್ಟ್ಯಾ ದುಃಸಹಂ ದೈತ್ಯಂ ನಿಮೃಶ್ಯ ಚ ಪುನಃ ಪುನಃ ॥ ೧೦೪ ॥ 





೯೭. ಬಳಿಕ ಅವರೀರ್ವರಿಗೂ ಮತ್ತೆ ಘೋರಯುದ್ಧವು ನಡೆಯಿತು. 
ದೇವಿಯು ಅವನ ವಧೆಗಾಗಿ ಮದ್ಯವನ್ನು ಫಾನಮಾಡಿದಳು. 

೯೮-೧೦೧. ತರುವಾಯ ಆಕೆಯು ಕೋಪದಿಂದ ಅವನನ್ನು ಬಾಯಿಯಲ್ಲಿ 
ತುರುಕಿಕೊಂಡಳು. ಆ ದಾನವನಾದರೋ ಮೂಗಿನ ಹೊಳ್ಳೆಯಿಂದ ಹೊರಗೆ 
ಹೊರಟನು. ತಿರುಗಿ ಮತ್ತನಾಗಿ ಯುದ್ಧಹೂಡಿದನು. ಮತ್ತಳಾದ ದೇವಿಯು 
ಅತಿ ಕೋಪದಿಂದ ಅವನನ್ನು ಹಲ್ಲುಗಳಿಂದ ಕಡಿದು ಚೆನ್ನಾಗಿ ಅಗೆದು ಹೆಣವಾಗಿಸಿ 
ಮೂಳೆ, ಕೊಬ್ಬು, ಮಜ್ಞಾ, ಮಾಂಸ, ಉಗುರು, ರೋಮಗಳಿಂದ ಕೂಡಿದ 
ಅವನನ್ನು ನುಂಗಿ ಒಂದು ಕೈಯಿಂದ ಬಾಯಿಯನ್ನೂ, ಮತ್ತೊಂದು ಕೈಯಿಂದ 
ಮೂಗನ್ನೂ ಮುಚ್ಚಿಕೊಂಡಳು. 

೧೦೨-೧೦೩. ತರುವಾಯ ದೈತ್ಯನು ಕಿವಿಯ ರಂಧ್ರದಿಂದ ಈಚಿಗೆ 
ಬಂದನು. ಆಗ ದೇವಿಯು ಕಿವಿಯ ರಂಧ್ರದಿಂದ ಹೊರಗೆ ಬಂದುದರಿಂದ 
ಅವನಿಗೆ ಕರ್ಣಾಟನೆಂದು ಹೆಸರನ್ನಿಟ್ಟಳು. ಪ್ರಾಜ್ಞರೂ ಹಾಗೆಯೇ ತಿಳಿದಿರುವರು. 
ತಿರುಗಿಯೂ ಆ ದೈತ್ಯನು ಬಲದಿಂದ ಮತ್ತನಾಗಿ ಯುದ್ಧಕ್ಕೆ ನಿಂತನು. 

೧೦೪-೧೦೭. ಯುಧಿಷ್ಠಿರ! ಹೀಗೆ ಗರ್ಜಿಸುತ್ತ ಸಾಯುಧನಾಗಿ ಯುದ್ಧಕ್ಕೆ 
ನಿಂತಿರುವ ಆ ವೀರದೈತ್ಯುನನ್ನು ಕಂಡು ಅನನನ್ನು ವಧಿಸಲು ಉಪತಯವನ್ನು. 


ಅಸ್ಪಾದತೋತಿಧ್ಯಾಯ। ೨೧೫ 


ವಧೋಪಾಯಂ ಹಿ ಮಾತಂಗೀ ಚಿಂತಯಾಮಾಸ ಭಾರತ । 


ಯದಾ ಚಿಂತಯತೇ ದೇವೀ ಮಾತಂಗೀ ಮದಸೂರಿತಾ ॥ ೧೦೫ ॥ 
ಮಾಯಾರೂಪಂ ಸಮಾಸ್ಕಾ ಯ ಕರ್ಣಾಟಃ ಕುಸುಮಾಯುಧಃ । 
ಗೌರಶ್ಚ್ಹಾಂಂಬುಜಪತ್ವಾ ್ರಕ್ಸುಂ' ತಥಾ ಷೋಡಶವಾರ್ಹಿಕಂ ॥ ೧೦೬ ॥ 


ಅಭ್ಯೈ (ತ್ಯೆ ದೇವೀಂ ಬ್ರೂತೇಸ್ಮ ಮಾ ತ್ವಂ ವರಯ ಶೋಭನೇ ॥ ೧೦೭॥ 
ಶ್ರೀಮಾತೋವಾಚ ಮ 

ಸಾಧು ಚೇದಂ ತ್ವಯಾ ಪ್ರೋಕ್ತಂ ದೈತ್ಯರಾಜ ಸುನಿಶ್ಚಿತಂ । 

ರೂಹೇಣ ಸದೃಶೋ ನಾಂನ್ಕ್ಯೋ ವಿದ್ಯತೇ ಭುವನತ್ರಯೇ ॥ ೧೦೮ ॥ 

ಪ್ರತಿಜ್ಞಾ ಮೇ ಕೃತಾ ಪೂರ್ವಂ ಶ್ರುತಾ ಕಿಮಸುರೋತ್ತಮ । 

ಮನಮಾನುಜಾ ಶುಭಾ ಶ್ಯಾಮಾ ನಿವಾಹೇ ನಿಪ್ರಕಾಂಕ್ಸಿಣೇ ॥ ೧೦೯॥ 

ಪಿತ್ರಾ ಮೇ ಸ್ಥಾಪಿತಾ ದೈತ್ಯರಕ್ಸಾರ್ಥಂ ಹಿ ದ್ವಿಜನ್ಮನಾಂ । 


ಕೇವಲಂ ಶ್ಯಾಮಲಾಂಗೀ ಸಾ ಸರ್ವಲೋಕಹಿತಾನಹಾ ॥ ೧೧೦ ೧ 
ನ ಕಶ್ಲಿದ್ದರಯೇತ್ಕನ್ಯಾನಿತ್ಯುಕ್ತ್ಯಾ ಸ್ಥಾಪಿತಾತು ಸಾ। 
ಕಥಯಾಶು ತವ ಶುಭಂ ಶೃತ್ತೋಷಾಯಂ ಕಥಂ ಶುಭಂ ॥ ೧೧೧ ॥ 


ಭಗಿನೀ ಮೇಸ್ತಿ ದೈತ್ಯೇಂದ್ರ ಶ್ಯಾಮಲಾ ಹ್ಯಪರಿಗ್ರಹಾ । 
ತವಾರ್ಥಂ ರಕ್ಷಿತಾ ಶೂರ ತಾಂ 'ಚ ಜರಡಿ ಚೋಡ್ಯ ಹ ॥೧೧೨॥ 





ಚಿಂತಿಸಿದಳು. ಮದಿಸಿದ ಆ ಮಾತಂಗಿಯು ಹೀಗೆ ಚಿಂತಿಸುತ್ತಿರುವಾಗಲೆ 
ಕರ್ಣಾಟನು ಮಾಯೆಯ ಬಲದಿಂದ ಮನ ಥನಾಗಿ ಆ ದೇವಿಯ ಬಳಿಗೆ ಬಂದು, 
«ದೇವಿ! ಕಮಲಾಕ್ಸ್ಚನೂ, ಹದಿನಾರು ನಯಸ್ಸಿ ನವನೂ ಆಗಿರುವ ನನ್ನನ್ನು 
ವರಿಸೆಂ?' ದನು. 

೧೦೮. ಶ್ರೀಮಾತೆಯು ಹೇಳುತ್ತಾಳೆ:--""ದೈತತ್ಯರಾಜ! ನೀನು ನಿರ್ಣಯಿಸಿ 
ಚೆನ್ನಾಗಿ ಹೇಳಿದೆ. ತ್ರಿಭುವನದಲ್ಲಿ ನಿನಗೆ ಸೌಂದರ್ಯದಲ್ಲಿ ಎಣೆಯಾರೂ 
ಇರುವುದಿಲ್ಲ. 

೧೦೯-೧೧೦. ಆದಕೆ ನಾನು ಹಿಂದೆ ಮಾಡಿದ ಪ ಪ್ರತಿಜ್ಞೆ ಯನ್ನು ಕೇಳಿರು 
ವಿಯೊ? ನನಗೆ ವಿಪ್ರ ನನ್ನು ಮದುವೆಯಾಗಲಿಜೆ ಯುಳ್ಳ ಶಾಮಾ ಎಂಬ ತಂಗಿ 
ಯೊಬ್ಬ ಳಿರುವಳು. ನನ್ನ pp ಅವಳನ್ನು ಬ್ರಾ ್ರ್ರಾಹ್ಮಣರ ರಕ್ಸಣೆಗಾಗಿ ಇಲ್ಲಿ 
ಸಾ ಬಸಿರುವನು. Wh ಕರಿಬಣ್ಣ ದವಳಾದರೂ ಸಮಸ್ತ A ಹಿತ 
ವನ್ನುಂಟುಮಾಡುವಳು. 

೧೧೧-೧೧೨. ಯಾರೂ ಅವಳನ್ನು ವರಿಸಕೂಡದೆಂದು ಹೇಳಿ ತಂದೆಯು 
ಇಲ್ಲಿ ಸ್ಥಾಪಿಸಿರುವನು. ನನ್ನ ತಂಗಿಯಾದ ಅವಳಿಗೆ ಇನ್ನೂ ನಿನಾಹವಾಗಲಿಲ್ಲ. 
ನಿನಗಾಗಿ ರಕ್ಲಿಸಿಕೊಂಡಿರುವೆನು. ಅವಳನ್ನು ವರಿಸು. ಈ ಶುಭೋಪಾಯವು 
ನಿನಗೆ ಒಳ್ಳೆಯದೆಂದು ತೋರುವುದಾದರೆ ವಿವಾಹವಾಗು, 


೨೧೬ ಶ್ರೀ ಸ್ಕಾಂದಮಹಾಪುರಾಣಂ 


ಸಪಿತಾ ತಾಂ ಮಹಾನೀರ ದಾಸ್ಯತೇ ವೈ ಶುಭಾಮಿಮಾಂ | 
ಗಚ್ಛ ತ್ವಂ ವ್ರಿಯತಾಂ ಹ್ಯೇವ ಶ್ಯಾಮಲಾ ಕೋಪಸಂಯುತಾ ॥ ೧೧೩॥ 
ತತಃ ಕರ್ಣಾಟಕಃ ಕ್ರುದ್ಧೋ ಗೃಹೀತ್ವಾ ಶಕ್ತಿ ಮೂರ್ಜಿತಾಂ । 


ಅಭ್ಯಧಾವತ ದುಷ್ಟಾತ್ಮಾ ಶಾ ಮಲಾನಿಧನೇಚ್ಛಯಾ ॥ ೧೧೪ ॥ 
ಆಗತಂ ಚಾಂಸುರಂ "ದ ಷಾ ಶ್ಯಾನುಲಾ ಸುಮಹಾಮನಾಃ । 
ನಿವಾಹಾರ್ಥಂ ಪರಂ ಜ್ಞಾತ್ಪಾಭಿಪ್ರಾ ಯಂ ದುಷ್ಟ ಚೇತಸಃ ॥ ೧೧೫ ॥ 


ಮಹಾಯುದ್ಧ ಮಭೂತ್ತತ್ರ ಶ್ಯಾ ಮಂಚು ಜೀ | 
ಮಾಸತ್ರ ಯಂ ತತೋ ರಾಜಂಶ್ನಾಂಭನತ್ತು ಮುಲಂ ಸ್ಸಿತೌ ॥ ೧೧೬ ॥ 
ಮಾ ಕೃಷ್ಣತೃತೀಂಯಾಯಾಂ ಧರ್ಮಾಃರಣ್ಯೇ ಮೀಟು | 
ಮಧ್ಯಾಹ್ನಸಮಯೇ ಭೂಪ ಕರ್ಣಾಟಾಖ್ಯೋ ನಿಪಾತಿತಃ ॥ ೧೧೭ ॥ 
ಕಾರ್ಣಾಟಃ ಪತಿತಸ್ತತ್ರ ಯತ್ರ ದೇವ್ಯಾ ನಿಪಾತಿತಃ । 
ತಚೆ ಕ್ಳೈಲಶೃ ಂಗಪ್ರ ಸಮಂ ಪಸಾತ ಶಿರ ಉತ್ತ ಮಂ | 
ಘಟ ಸಕಲಾ ಪೃಥ್ಯೀ ಸಾಬ್ಲಿದ್ವೀಪಾ ಸಹರ್ವತಾ I 
ತತೋ ವಿಪ್ರಾಃ ಪ್ರ ಹೃ ಷ್ಟ್ರಾ ಸ್ತೇ ಜಯಮಾತರುದೈ ರಯಂನ್‌ un ೧೧೯ ॥ 
ಜಗುರಂ ಗಗ ಸನೃತುಶ್ಲಾಪ್ಸರೋಗಹಾಃ | 
ತತೋತ್ಸವಂ ಪ್ರಕುರ್ವಂತೋ ಗೀತಂ ನೃತ್ಯಂ ಶುಭಪ್ರದಂ ॥ ೧೨೦ ॥ 
೧೧೩. ತಂದೆಯು ಮಂಗಳಕರಳಾದ ಇವಳನ್ನು ನಿನಗೆ ಸುವ. 
ಹೋಗು. ಕುಪಿತಳಾದ ಆ ಶ್ಯಾಮಲೆಯನ್ನು ವರಿಸು. 
೧೧೪. ದೇವಿಯು ಹೀಗೆನ್ನಲು, ಕೋಪಗೊಂಡ ಆ ಕರ್ಣಾಟನು ಉತ್ತಮ 
ವಾದಶಶಕ್ಕ್ಯಾ ಯುಧವನ್ನು ಜಡಿದು ಶ್ಯಾಮಲೆ ರೆಯನ್ನು ಕೊಲ್ಲಲಿಚ್ಛೆ ಯಿಂದ ಓಡಿದನು. 
೧೫-೧೧೬. ಬುದ್ಧಿ ವಂತಳಾದ ಶ್ಯಾಮಲೆಯಾದರೊ ಈ ರೀತಿ ತನ್ನ ಬಳಿಗೆ 
ಬಂದ ಆ ದೈತ್ಯನನ್ನು ಕಂಡು ದುಷ್ವಚಿತ್ತನಾದ ಅವನ ವಿವಾಹ ವಿಷಯಕವಾದ 
ಅಭಿಪ್ರಾಯವನ್ನು ತಿಳಿದಳು. ಅನಂತರ ಶ್ಯಾಮಲಾ ಮತ್ತು ಕರ್ಣಾಟದೈ ತ್ಯರಿಗೆ 
ಮೂರು ತಿಂಗಳಕಾಲ ಭೂಮಿಯಲ್ಲಿ ಭಯಂಕರವಾದ ಕಾಳೆಗವು ನಡೆಯಿತು. 
೧೧೭. ಮಾಘಮಾಸದ ಕೃಷ್ಣಪಕ್ಸ ತದಿಗೆಯ ದಿನ ಮಧ್ಯಾಹ್ನ ಸಮಯ 
ದಲ್ಲಿ ಮಾತಂಗಿಯು ಕರ್ಣಾಟಾಸುರನನ್ನು ಧನ್ನಾರಣ್ರಾರಲ ಕೆಡನವಿದಳು. 
೧೧೮-೧೧೯. ದೇವಿಯು ಅವನನ್ನು ಕೆಡವಿದ ಸ ಳದಲ್ಲಿ ಅವನ ತಲೆಯು 
ಬೆಟ್ಟ ದ ಶಿಖರದಂತೆ ಉರುಳಿಬಿದ್ದಿ ತು. ಅದರಿಂದ ಸಮುದ್ರ. ದ್ವಿ (ಪ, ಪರ್ವತ 
ed ಸಹಿತವಾದ ಸಂಪೂರ್ಣ “ಭೂಮಿಯೇ ನಡುಗಿಜೋಯಿತು. EH 
ಬ್ರಾಹ್ಮಣರು ಸಂತೋಷಗೊಂಡು, "" ತಾಯೆ! ಜಯಿಸು ಜಯಿಸು!’ ಎಂದು 
ಘಟ್ಟಯಾಗಿ ಕೂಗಿದರು. 
೧೨೦-೧೨೧. ಗಂಧರ್ವರಾಜರು ಹಾಡಿದರು. ಅಪ್ಪರರು ಕುಣಿದರು. 


೧೧೮ ॥ 





`ಅಷ್ಟಾದಶೋರಧ್ಯಾಯಃ ೨೧೭ 


ಪಾಯಸೈರ್ವಟಕೈಶ್ಚೆನ ನೈನೇದ್ಯೈರ್ಮೊೋದಕೈಸ್ತಥಾ । 

ತುಷ್ಟುವುಃ ಶುಭವಾಣ್ಯಾ ತೇ ಸ್ಥಾನೇ ನೋಟೀರಕೇ ನರೇ ॥ ೧೨೧॥ 

ಶ್ರೀಮತೀ ಪೂಜಿತಾ ಸಾ ಚ ಸುತಸೌಖ್ಯಧನಪ್ರದಾ | 

ಮಹೋತ್ಸನೇ ಚ ಸಂಪ್ಪಾಪ್ತೇ ಮಾತಂಗೀಪೂಜನಂ ಹಿತಂ ॥ ೧೨೨ ॥ 

ಯೇಂರ್ಚಯಂತಿ ಸ್ಥಾಪಯಿತ್ವಾ ಧನಪುತ್ರಾಂರ್ಥಸಿದ್ಧಯೇ | 

ಸುಖಂ ಕೀರ್ತಿಂ ತಥಾಯುಷ್ಯಂ ಯಶಃ ಪುಣ್ಯಂ ಸಮಾಪ್ಲುಯುಃ ॥೧೨ ೩॥ 

ವ್ಯಾಧಯೋ ನಾಶಮಾಯಾಂತಿ ಚಾದಿತ್ಯಾದ್ಯಾ ಗ್ರಹಾಃ ಶುಭಾಃ । 

ಭೂತನವೇತಾಲಶಾಕಿನ್ಯೋ ಜಂಭಾದ್ಯಾಃ ಪೀಡಯಂತಿ ನ ॥ ೧೨೪ ॥ 

ನ ಜಾಯತೇ ತಥಾ ಕ್ಕಾಂಹಿ ಪ್ರೇತಾದೀನಾಂ ಪ್ರಪೀಡನಂ I 

ತತೋ ವಿಪ್ರಾಃ ಪ್ರಹೃಷ್ಟಾಶ್ಚ ಸ್ತುತಿಂ ಕರ್ತುಂ ಸಮುದ್ಯತಾಃ ॥ ೧೨೫ ॥ 

ಶ್ರೀಮಾತಾಂ ಚೈವ ಶಕ್ತೀಶ್ಚ ಮಾತಂಗೀಮಸ್ತುನಂಸ್ತದಾ । 

ಶ್ಯಾಮಲಾಂ ಚ ಮಹಾದೇನೀಂ ಹರ್ಷೇಣ ನುಹತಾಯುತಾ ॥ ೧೨೬॥ 
ವಿಪ್ರಾ ಊಚುಃ: 

ಮಾತಸ್ತಮೇವಮಸ್ಮಾಕಂ ರಕ್ಸಕಾ ಸ್ಥಾನಕೇ ಭವ! 

ದಂಪತೀನಾಂ ಹಿತಾರ್ಥಾಯ ಯಥಾ ನೋದ್ವಿಜತೇ ದ್ವಿಜಾಃ ॥ ೧೨೭ ॥ 


ಮೋಟೇರಕ ಸ್ಥಳದಲ್ಲಿರುವವರು ಗೀತ, ನೃತ್ಯಗಳಿಂದ ಉತ್ಸವವನ್ನು ನೆರವೇರಿ 
ಸುತ್ತ ಪಾಯಸ, ವಡೆ ಮೋದಕಗಳನ್ನು ನೈನೇದ್ಯಮೂಡಿ ಶುಭವಚನದಿಂದ 
ದೇವಿಯನ್ನು ಹೊಗಳಿದರು. 

೧೨೨. ಮಕ್ಕಳು, ಸೌಖ್ಯ, ಧನಗಳನ್ನೀಯುವ ಆ ದೇವಿಯನ್ನು ಪೂಜಿಸಿ, 
ಮಹೋತ್ಸವದಲ್ಲಿ ಇಷ್ಟಾರ್ಥಗಳು ಲಭಿಸುವುವು. 

೧೨೩. ಧನ ಪುತ್ರಾದಿಗಳ ಲಾಭಕ್ಕೋಸ್ಕರ ದೇವಿಯನ್ನು ಪೂಜಿಸಿದವರು 
ಸುಖ, ಕೀರ್ತಿ, ಆಯುಷ್ಯ, ಪುಣ್ಯಗಳನ್ನು ಸಡೆಯುವರು. 

೧೨೪. ರೋಗಗಳು ನಾಶವಾಗುವುವು. ಆದಿತ್ಯಾದಿ ಗ್ರಹಗಳು ಶುಭಫಲ 
ವನ್ಸೀಯುವುವು. ಭೂತ, ಭೇತಾಳ, ಶಾಕಿನೀ ಜಂಭಾದಿಗಳು ಪೀಡಿಸುವುದಿಲ್ಲ. 

೧೨೫. ಪ್ರೇತಬಾಧೆಯೂ ಇರುವುದಿಲ್ಲ. ಬಳಿಕ ಬ್ರಾಹ್ಮಣರು ಸಂತೋಷ 
ದಿಂದ ಆ ದೇನಿಯನ್ನು ಕುರಿತು ಸ್ತೋತ್ರಮಾಡಲುದ್ಭುಕ್ಕರಾದರು. 

೧೨೬. ಅವರು ಅತಿಸಂತೋಷದಿಂದ ಶ್ರೀಮಾತೆ, ಮಾತಂಗೀ, ಶ್ಯಾಮಲಾ 
ಎಂಬ ಮೂವರು ದೇವಿಯರನ್ನೂ ಸ್ತುತಿಸಿದರು. 

೧೨೭. ಬ್ರಾಹ್ಮಣರು ಹೇಳುತ್ತಾರೆ: ತಾಯೆ! ದಂಪತಿಗಳ ಹಿತಕ್ಕಾಗಿ 
ಬ್ರಾಹ್ಮಣರು ಭಯಪಡದಂತೆ ನೀನೇ ಈ ಸ್ಥಳದಲ್ಲಿ ನಮ್ಮ ರಕ್ಷಕಳಾಗಿರು. 


೨೧೪ ಶ್ರೀ ಸ್ಯಾಂದಮಹಾಪುರಾಣಂ 


ಮಾತಂಗ್ಳುವಾಚ ವಾ 


ತುಷ್ಟಾಃಹಂ ವೋ ಮಹಾಭಾಗಾಃ ಸ್ತನೇನಾಃನೇನ ವೋ ದ್ವಿಜಾಃ । 
ವರಯಧ್ಯಂ ವರಂ ಯದ್ದೋ ಮನಸಾ ಸಮಭೀಪ್ಸಿತಂ ॥ ೧೨೮ ॥ 
ಬ್ರಾಹ್ಮಣಾ ಊಚುಃ:- 
ದಾಸ್ಯಾಮಹೇ ಬಲಿಂ ದೇವಿ ಯಸ್ತೇ ಮನಸಿ ವರ್ತತೇ । 
ಅಸ್ಮಾಕಂ ಚೈನ ದಂಪತ್ಯೋ ರಕ್ಸಾರ್ಥಂ ತ್ವಂ ಸ್ಥಿರಾ ಭನ ॥ ೧೨೯ ॥ 
ದೇವ್ಯವಾಚ:- 
ಸ್ವಸ್ಥಾಃ ಸಂತು ದ್ವಿಜಾಃ ಸರ್ವೇ ನ ಚ ಪೀಡಾ ಭವಿಷ್ಯತಿ । 
ಮಯಿ ಸ್ಥಿತಾಯಾಂ ದುರ್ಧರ್ಷಾ ದೈತ್ಯಾ ಯೇಃನ್ಯೇ ಚ ರಾಕ್ಸಸಾಃ ॥ 
ಶಾಕಿನೀ ಭೂತಪ್ರೇತಾಶ್ಚ ಜಂಭಾದ್ಯಾಶ್ಚ ಗ್ರಹಾಸ್ತಥಾ । 
ಶಾಕಿನ್ಯಾದಿ ಗ್ರಹಾಶ್ಚೈನ ಸರ್ವಾ ವ್ಯಾಘ್ರಾ ದಯಸ್ತಥಾ ॥ ೧೩೧ ॥ 
ಪೀಡಯಿಷ್ಯಂತಿ ನ ಕ್ವಾಃಸಿ ಸ್ಥಿತಾಯಾಂ ಮಯಿ ಶಾಸನೇ । 
ಮುಹೋತ್ಸನಂ ಯಃ ಪ್ರಕುರುತೇ ನಿವಾಹೇ ಸಮುಪಸ್ಥಿತೇ ॥ ೧೩೨ ॥ 
ದಂಪತ್ಯೋಶ್ಚ ಹಿತಾರ್ಥಂ ಹಿ ಪೂಜಯೇನ್ಮಾಂ ಸದಾ ನರಃ । 
ತಸ್ಯಾಃಹಂ ಸಕಲಾಂ ಬಾಧಾಂ ನಾಶಯಿಷ್ಯಾಮ್ಯಸಂಶಯಂ ॥ ೧೩೩ 
ನಾಧಯೋ ವ್ಯಾಧಯಶ್ಚೆನ ನ ಕ್ಲೇಶೋ ನ ಚ ಸಂಭ್ರಮಃ । 
ಪ್ರಾಪ್ಯತೇ ಪರಮಂ ಸೌಖ್ಯಂ ಯಶಃ ಪುಣ್ಯಂ ಧನಂ ಸದಾ । 
ನಾಃಕಾಲೇ ಮರಣಂ ತಸ್ಯ ವಾತಪಿತ್ತಾದಿಕಂನಹಿ ॥ ೧೩೪ ॥ 
೧೨೮. ಮಾತಂಗಿಯು ಹೇಳುತ್ತಾಳೆ:--ಎಲೈ ಬ್ರಾಹ್ಮಣರೆ! ನಿಮ್ಮ ಈ 
ಸ್ತೋತ್ರದಿಂದ ನಾನು ಸಂತೋಷಗೊಂಡಿದ್ದೇನೆ. ನಿಮಗೆ ಬೇಕಾದ ನರವನ್ನು 
ಕೇಳಿಕೊಳ್ಳಿರಿ. 
೧೨೯. ಬ್ರಾಹ್ಮಣರು ಹೇಳುತ್ತಾರೆ:--ದೇವಿ! ನಿನಗಿಷ್ಟವಾದ ಬಲಿಯನ್ಸೀ 
ಯುವೆವು. ನೀನು ನಮ್ಮ ದಂಪತಿಗಳ ರಕ್ಷಣೆಗಾಗಿ ಇಲ್ಲಿಯೆ ಸ್ಥಿರವಾಗಿ ನೆಲೆಸು, 
೧೩೦-೧೩೪. ದೇವಿಯು ಹೇಳುತ್ತಾಳೆ :--ಎಲೈ ದ್ವಿಜರೆ! ನೀವೆಲ್ಲರೂ 
ಸ್ವಸ್ಥರಾಗಿರಿ. ರಕ್ಪಕಳಾದ ನಾನಿರುವಾಗ ದೈತ್ಯರೂ, -ರಾಕ್ಸಸರೂ, ಶಾಕಿಸಿ, 
ಭೂತ, ಪ್ರೇತ, ಜಂಭಾದಿ ಗ್ರಹಗಳೂ, ಸರ್ಪ, ಹುಲಿ ಮೊದಲಾದ ಘಾತುಕ 
ಪ್ರಾಣಿಗಳೂ ನಿಮ್ಮನ್ನು ಹೀಡಿಸುವುದಿಲ್ಲ. ವಿವಾಹಕಾಲದಲ್ಲಿ ನರನು ದಂಪತಿಗಳ 
ಹಿತಕ್ಕಾಗಿ ನನ್ನನ್ನು ಪೂಜಿಸಿದರೆ ಅವನ ಸಕಲ ತೊಂದರೆ ಗಳನ್ನೂ ಯಾವಾಗಲೂ 
ನ್ಯಾಯವಾಗಿ ನೀಗಿಸುವೆನು. ಅವನಿಗೆ ಮನೋವ್ಯಾಧಿ, ರೋಗ, ದುಃಖಗಳು 
ಉಂಟಾಗುವುದಿಲ್ಲ... ಪರಮ ಸೌಖ್ಯವನ್ನೂ, ಹಣ, ಕೀರ್ತಿ ಪುಣ್ಯಗಳ ನ್ನೂ 
ಪಡೆಯುವನು. ಅಕಾಲಮರಣವೂ, ವಾತಪಿತ್ತಾದಿಗಳ ಬಾಧೆಯೂ ಇರುವು ದಿಲ್ಲ. 


ಅಷ್ಟಾಡತೋತಧ್ಯಾಯಃ ೨೧೯ 


ನಿಪ್ರಾ ಊಚುಃ:- 
ಶೇನ ವಾ ವಿಧಿನಾ ಪೂಜಾ ನೈವೇದ್ಯಂ ಕೀದೃಶಂ ಭವೇತ್‌ | 
ಧೂಪಂ ಚ ಕೀದೃಶಂ ಮಾತಃ ಕಥಂ ಪೂಜಾಂ ಪ್ರಕಲ್ಪಯೇತ್‌ ॥ ೧೩೫ ॥ 
ಶ್ರೀದೇವ್ಯುನಾಚ :- 
ಶ್ರೂಯತಾಂ ಮೇ ನಚೋ ವಿಸ್ರಾ ಸತ್ರೇ ಚೈನ ಹಿರಣ್ಮಯ । 
ಲಿಖಿತ್ಸಾ ಸೂಜಯೇದ್ಯಸ್ತು ಚಿರಾಯುರ್ದಂಪತೀ ಭವೇತ್‌ ॥ ೧೩೬॥ 
ಅಥವಾ ರಾಜತೇ ಪತ್ರೇ ಕಾಂಸ್ಕಪತ್ರೇಃಥವಾ ಪುನಃ । 
ಅಸ್ಟಾದಶಭುಜಾ ದೇನೀ ಚಂದನೇನ ವಿಚರ್ಚಿತಾ ॥ ೧೩೭ ॥ 
ಶೂರ್ಪಂ ಶರೈಃ ಕರೇ ಶ್ವಾನಂ ಪದ್ಮಂ ತು ಪರಮಂ ಪುನಃ । 
ಕರ್ತರೀಂ ಕಾರಯೇದೇಕಾಂ ತೂಣೇರಂ ಚ ಧನೂಂಷಿ ಚ ॥ ೧೩೮ ॥ 
ಚರ್ಮಪಾಶಂ ಮುದ್ದರಂ ಚ ಕಾಂಸಾಲಂ ತೋಮರಂ ತಥಾ । 
ಶಂಖಂ ಚಕ್ರಂ ಗದಾಂ ಶುಭ್ರಾಂ ಮುಸಲಂ ಪರಿಘಂ ಶುಭಂ ॥ ೧೩೯॥ 
ಖಟ್ಕಾಂಗಂ ಬದರೀಂ ಚೈವ ಅಂಕುಶಂ ಚ ಮನೋರವಮಂಂ । 


ಅಷ್ಟಾದಶಾಯುಧೈರೇಭಿಃ ಸಂಯುತಾ ಭುವನೇಶ್ವರೀ ॥ ೧೪೦ ॥ 
ಲಿಹಖೇತ್ಸಕುಂಡಲಾಂ ದೇವೀಂ ಬಾಹೂನೂಪುರಭೂಸಿತಾಂ | 
ಕೇಯೂರಮುಕ್ತಾಪದ್ಮೆಶ್ಚ ಮುಂಡಮಾಲಾಭಿರನ್ವಿತಾಂ ॥ ೧೪೧ ॥ 
ಮಾತೃಕಾಂಕ್ಟರಪರಿನೃತಾಮಂಗುಲೀಯಕಸಂಯುತಾಂ | 
ನಾನಾಭರಣಶೋಭಾಢ್ಯಾಂ ಲಿಖಿತ್ಕಾ ಭುವನೇಶ್ವರೀಂ ॥ ೧೪೨ ॥ 





೧೩೫. ಬ್ರಾಹ್ಮಣರು ಹೇಳುತ್ತಾರೆ: ನಿನ್ನನ್ನು ಯಾವ ಕ್ರಮದಿಂದ 
ಪೂಜಿಸಬೇಕು? ನೈವೇದ್ಯವು ಎಂತಹುದಾಗಿರಬೇಕು? ಧೂಪವು ಎಂಥಾದ್ದು? 
ಹೇಗೆ ಪೂಜೆ ಮಾಡಬೇಕು. 

೧೩೬. ಶ್ರೀದೇವಿಯು ಹೇಳುತ್ತಾಳೆ:-- ಅಯ್ಯಾ ಬ್ರಾಹ್ಮಣರೆ! ನನ್ನ 
ಮಾತನ್ನು ಕೇಳಿರಿ. ಚಿನ್ನದ ತಗಡಿನಲ್ಲಿ ನನ್ನನ್ನು ಬರೆದು ಪೂಜಿಸಿದ ದಂಪತಿಗಳು 
ದೀರ್ಫಾಯುಷ್ಯವುಳ್ಳ ವರಾಗುವರು. 

೧೩೭-೧೪೩. ಬೆಳ್ಳಿ ಅಥವಾ ಕಂಚಿನ ತಗಡಿನಲ್ಲಿ ಹದಿನೆಂಟು ತೋಳುಗಳು 
ಳ್ಳವಳೂ ಆ ತೋಳುಗಳಲ್ಲಿ ಮೊರ, ಬಾಣ, ನಾಯ್ಕಿ ಪದ್ಮ, ಕತ್ತರಿ, ಬತ್ತಳಿಕೆ, 
ಬಿಲ್ಲು, ಗುರಾಣಿ, ಪಾಶ, ಮುದ್ಗರ, ಕಾಂಸಾಲ, ತೋಮರ, ಶಂಖ, ಚಕ್ರ, 
ಗದೆ, ಒನಕೆ, ಪರಿಘ, ಖಟ್ವಾಂಗ, ಬದರೀ, ಅಂಕುಶಗಳೆಂಬ ಆಯುಧಗಳುಳ್ಳ 
ವಳೂ, ಚಂದನಲಿಪ್ತ್ಕಳೂ, ಕುಂಡಲಸಹಿತಳೂ, ನಾಗಮುರಿಗೆ, ಕಾಲ್ಗೆಜ್ಜೆಗಳಿಂದ 
ಅಲಂಕೃತಳೂ, ಮುತ್ತು, ಪದ್ಮ, ಹೂಗಳ ಮಾಲೆಗಳುಳ್ಳವಳೂ, ಮಾತೃಕಾಕ್ಸರ, 


೨೨೦ ಶ್ರೀ ಸ್ಕಾಂದಮುಹಾಪುರಾಣಂ 


ಮಾತಂಗೀಮಿತಿನಿಖ್ಯಾತಾಂ ಪ್ರತಿಸ್ಮಾರ್ಥಂ ದ್ವಿಜೋತ್ತಮಾಃ । 


ಚಂದನೇನ ಚ ಹೃದ್ಯೇನ ಪುಷ್ಸೈಶ್ಚೈನ ಪ್ರಪೂಜಯೇತ್‌ ॥ ೧೪೩೫ 
ಯಕ ಕರ್ದಮುಮಾನೀಯ ಮಾತಂಗೀಂ ಪೂಜಯೇತ್ಸುಧೀಃ | 

ಫೃತೇನ ಜೋಧಯೇದ್ದೀಪಂ ಸಪ್ತವರ್ತಿಯುತಂ ಶುಭಂ , ॥ ೧೪೪॥ 
ಧೂಪಯೇದ್ದುಗ್ಲುಲೇನಾಥ ಸಾಜ್ಯೇನಾಂತಿಸುಗಂಧಿನಾ । 

ನಾಲಿಕೇರೇಣ ಶುಭ್ರೇಣ ದದ್ಯಾದರ್ಫ್ಯಂ ಚ ದಂಪತೀ ॥ ೧೪೫ ॥ 
ಪ್ರದಕ್ಸಿಣಾಃ ಪ್ರಕುರ್ವೀತ ಚತುರಃ ಸುಮನೋರಮಂ । 

ವಸ್ಟ್ರಾಂಂಶುಕಂ ಗುಂಶಯಿತ್ಕಾ ಅಗ್ರೇ ಕೃತ್ವಾ ಚ ದಂಪತೀ 10 ೧೪೬॥ 


ಪ್ರೋಕ್ಸಣೀಕೃತ್ಯ ಮಾತಂಗ್ಯಾಃ ಪ್ರಾಶ್ಯ ಮಾಧ್ವೀಕಮುತ್ತಮಂ | 
ಗೀತವಾದಿತ್ರ ನಿರ್ಫೋಷೈರ್ಮಾತಂಗೀಂ ಪೂಜಯೇತ್ಸುಧೀಃ ॥ ೧೪೭ ॥ 
ಸುವಾಸಿನೀಸ್ತು ತದ್ರೂಪಾ ಮಾತಂಗೀ ಸಂಭವಾ ಇತಿ । 
ನೃತ್ಯಂತೀ ದಂಪತೀ ಚಾಗ್ರೇ ಸರ್ವೋಪದ್ರವಶಾಂತಯೇ ॥ ೧೪೮ ॥ 
ನೈನೇದ್ಯಂ ವಿನಿಧಾಂನ್ನೇನ ಅಷ್ಟಾದಶವಿಧಂ ಶುಭಂ | 
ವಟಿಕಾಪೂಪಿಕಾಃ ಶುಭ್ರಾಃ ಕೀರಂ ಶರ್ಕರಯಾ ಯುತಂ ॥ ೧೪೯॥ 
ಬಲ್ಲಾಕರಂ ವರಂ ಯೂಪಾ ಕ್ಸಿಪ್ತಕುಲ್ಮಾಷಕಂ ತಥಾ । 
ಸೋಹಾಲಿಕಾ ಭಿನ್ನವಟಾ ಲಾಪ್ಸಿಕಾ ಪದ್ಮಚೂರ್ಣಕಂ ॥ ೧೫೦ ॥ 
ಉಂಗುರಗಳುಳ್ಳವಳೂ, ಆಗಿರುವ ಮಾತಂಗಿಯೆಂದು ವಿಖ್ಯಾತಳಾದ ಭುವನೇ 
ಶ್ವರಿಯನ್ನು ಬರೆದು ಗಂಧ, ಹೂವುಗಳಿಂದ ಆರಾಧಿಸಬೇಕು. 

೧೪೪. ಏಳುಬತ್ತಿಯುಳ್ಳ ತುಪ್ಪದ ದೀಪವನ್ನು ಹಚ್ಚೆ ಗಂಧಾದಿಗಳಿಂದ 
ಮಾತಂಗಿಯನ್ನು ಪೂಜಿಸಬೇಕು. 

೧೪೫. ಗುಗ್ಗುಳ, ತುಪ್ಪ ಸಹಿತವಾಗಿ ಸುವಾಸನೆಯಾದ ಧೂಪವನ್ನಿತ್ತು 
ದಂಪತಿಗಳು ತೆಂಗಿನಕಾಯಿಯಿಂದ ಅರ್ಥ್ಯವನ್ನು ಕೊಡಬೇಕು. 

೧೪೬. ಚೆನ್ನಾಗಿರುವ ಬಟ್ಟಿ ಯನ್ನು ಹೊದ್ದಿಸಿದ ದಂಪತಿಗಳನ್ನು ಮುಂದಿ 
ರಿಸಿಕೊಂಡು ನಾಲ್ಕು ಪ್ರದಕ್ಷಿಣೆ ಮಾಡಬೇಕು. 

೧೪೭. ಉತ್ತಮವಾದ ಜೇನುತುಪ್ಪವನ್ನು ಮಾತಂಗಿಗೆ ಪ್ರೋಕ್ಷಿಸಿ 
ಅದನ್ನು ಕುಡಿದು ಗೀತವಾದ್ಯಾದಿ ಧ್ವನಿಗಳಿಂದ ಅವಳನ್ನು ಆರಾಧಿಸಬೇಕು. 

೧೪೮. ದಂಪತಿಗಳು ಎಲ್ಲ ತೊಂದರೆಗಳ ಶಾಂತಿಗಾಗಿಯೂ ಮಾತಂಗಿಯ 
ಮುಂದೆ ನರ್ತನಮಾಡುತ್ತ ಸುಮಂಗಲಿಯರನ್ನು ಮಾತಂಗಿಯ ಮಕ್ಕಳೆಂಬ 
ಭಾವನೆಯಿಂದ ಪೂಜಿಸಬೇಕು. 

೧೪೯-೧೫೩. ವಡೆ, ದೋಸೆ, ಮೇಲಾದ ಹಾಲು, ಮೊಸರು, ಬಲ್ಲಾ ಕರ, 
ಯೂಪ, ಕ್ಲಿಪ್ತಕುಲ್ಮಾಸಕ, ಸೋಹಾಲಿಕ, ಭಿನ್ನವಡ, ಲಾಫ್ಸಿಕ, ಪದ್ಮಚೂರ್ಣಕ, 


ಅಪ್ಲಾದಶೋಕಧ್ಯಾಯಃ ೨೨೧ 


ಶೈನೇಯಾ ನಿಮಲಾಸ್ತತ್ರ ಪರ್ಪಟಾಃ ಶಾಲಕಾದಯಃ | 

ಪೂರಣಂ ತಸ್ಯ ಮಾಸಸ್ಯ ಕುರ್ಯಾಚ್ಛುಭ್ರಂ ಮನೋರಮಂ ॥ ೧೫೧॥ 
ರಾಜಮಾಷಾಃ ಸೂಪಚಿತಾಃ ಕಲ್ಪಯೇತ್ತತ್ರ ದಂಪತೀ । 

ಫೇಣಿಕಾ ರೋಪಿಕಾಸ್ತ್ರತ್ರ ಕುರ್ಯಾಚ್ಚೈವ ಮನೋರಮಾಃ ॥ ೧೫೨ ॥ 
ಏತಾನ್ಯಷ್ಟಾದಶಾನ್ಯಾನಿ ಸಕ್ಕಾನ್ನಾನಿ ಪ್ರಕಲ್ಪಯೇತ್‌ । 
ಆಜ್ಯಶರ್ಕರಯುಕ್ತಾನಿ ಯುಕ್ತಾನಿ ಶಾಕಸಂಚಯೈಃ ॥ ೧೫೩ ॥ 
ರಾತ್ರೌ ಜಾಗರಣಂ ಕಾರ್ಯಂ ಸುವಾಸಿನೀಂ ಚ ಪೂಜಯೇತ್‌ । 
ಮುಖಾಂವಲೋಕನಂ ಚಾಜ್ಯೇ ಕುರ್ನೀಯಾತಾಂ ಚ ದಂಪತೀ॥ ೧೫೪ ॥ 
ಪರಸ್ಪರಂ ಹಿ ಕುರ್ವೀತ ಉತ್ಪಾತಪರಿಶಾಂತಯೇ । 

ಏನಂ ನಿಧಂ ಮಯಾ ಖ್ಯಾತಂ ಮಾತಂಗೀಪೂಜನಂ ಶುಭಂ 8 ೧೫೫ ॥ 
ನ ಪೂಜಯತಿ ಯೋ ಮೂಢಸ್ತಸ್ಯ ವಿಘ್ನಂ ಕರೋತಿ ಸಾ । 


ದಂಪತ್ಯೋರ್ಮರಣಂ ಚಾಂಥ ಧನನಾಶಂ ಮುಹಾಭಯಂ ॥ ೧೫೬ ॥ 
ಕ್ಲೇಶಂ ರೋಗಂ ತಥಾ ನಹ್ನೇಃ ಪ್ರಾದುರ್ಭಾನಂ ಪ್ರಪಶ್ಯತಿ । 
ಏತಸ್ಮಾತ್ಕಾರಣಾದ್ವಿಷ್ರಾ ಮಾತಂಗೀಂ ಪೂಜಯೇತ್ಸುಧೀಃ ॥ ೧೫೭ ॥ 
ದಂಪತೀನಾಂ ಚ ಸರ್ವೇಷಾಂ ದ್ವಿಜಾತೀನಾಂ ಚ ಶಾಸನೇ । 

ವಣಿಜಾಂ ಚ ಮುಹಾದೇವೀ ನಿರ್ನಿಫ್ನಂ ಕುರುತೇ ಸದಾ ॥ ೧೫೮ ॥ 


ರಾ 


ಶೈನೇಯ, ಹಪ್ಪಳ, ಶಾಲಕ, ಪೂರಿ, ಅಲಸಂದೀತೊವ್ವೆ, ಫೇಣಿ, ರೋಪಿಕಾ 
ಎಂಬ ಹದಿನೆಂಟು ನಿಧ ಪದಾರ್ಥಗಳನ್ನೂ ಇನ್ನೂ ಇತರ ತುಪ್ಪ, ಸಕ್ಕರೆ, ತರ 
ಕಾರಿ ಸಹಿತವಾದ ಪಕ್ವಾನ್ನಗಳನ್ನೂ ಮಾಡಿಸಿ ದೇವಿಗೆ ನೈವೇದ್ಯಮಾಡಬೇಕು. 

೧೫೪-೧೫೫. ದಂಪತಿಗಳು ಉತ್ಪಾತಶಾಂತಿಗಾಗಿ ರಾತ್ರಿಯಲ್ಲಿ ಜಾಗರಣ 
ಮಾಡಿ ಸುವಾಸಿನಿಯರನ್ನು ಆರಾಧಿಸಬೇಕು. ತುಪ್ಪದಲ್ಲಿ ಮುಖವನ್ನು ನೋಡಿ 
ಕೊಳ್ಳಬೇಕು. ಆಮೇಲೆ ವಧೂವರರು ಪರಸ್ಪರವಾಗಿ ಮುಖವನ್ನು ನೋಡಿಕೊಳ್ಳ 
ಬೇಕು. ಹೀಗೆ ನಾನು ಮಾತಂಗೀಪೂಜೆಯ ವಿಧಾನವನ್ನು ಹೇಳಿರುನೆನು. 

೧೫೬-೧೫೭. ಹೀಗೆ ಪೂಜಿಸದ ಮೂಢನಿಗೆ ಅವಳು ವಿಘೃವನೈೆ ಸಗುವಳು. 
ದಂಪತಿಗಳ ಮರಣವೂ, ಧನನಾಶವೂ, ಅತ್ಯಂತ ಭಯವೂ. ದುಃಖವೂ, 
ರೋಗವೂ, ಬೆಂಕೆಯೂ ಉಂಟಾಗುವುದು. ಈ ಕಾರಣದಿಂದ ಪ್ರಾಜ್ಞನು 
ಮಾತಂಗಿಯನ್ನು ಅರ್ಚಿಸಬೇಕು. 

೧೫೮. ಮಾತಂಗಿಯು ಯಾವಾಗಲೂ ಸಕಲ ದಂಪತಿಗಳು, ಬ್ರಾಹ್ಮಣರು, 
ವರ್ತಕರು ಇವರ ರಕ್ಸೃಣೆಯಲ್ಲಿ ನಿರತಳಾಗಿ ವಿಘ್ನಗಳ ಭಯವಿಲ್ಲದಂತೆ ಮಾಡು 
ವಳು. 


೨೨೨ ಶ್ರೀ ಸ್ಕಾಂದಮಹಾಪುರಾಣಂ 


ತಥೇತಿ ಚೈನ ತೈರುಕ್ತೇ ಪುನರ್ವಚನಮಬ್ರನೀತ್‌ । 

ಶ್ರೂಯತಾಂ ಬ್ರಾಹ್ಮಣಾಃ ಸರ್ಮೇ ವಿನಾಹಾದಿಮಹೋತ್ಸವಂ ॥ ೧೫೯ ॥ 
ಮದೀಯವಚನಂ ಶ್ರುತ್ವಾ ತಥಾ ಕುರುತ ವೈ ವಿಧಿಂ । 

ಹಿವಾಹಕಾಲೇ ಸಂಪ್ರಾಪ್ತೇ ದಂಪತ್ಯೋಃ ಸೌಖ್ಯಹೇತವೇ 1 ೧೬೦॥ 
ಸಿರ್ನಿಘ್ನಾರ್ಥಂತು ಕರ್ತವ್ಯಂ ನಿಜೈೆಶ್ಚ ಸಹಸೇನಕೈಃ | 

'ಅಂಜನಂ ನಯನೇ ಕುರ್ಯಾತ್ಸಂಬಂಧೀನಾಂ ಚ ಸರ್ವಶಃ ॥ ೧೬೧॥ 
ಭ್ರೂಮಧ್ಯಾತ್ತು ಪ್ರಕರ್ತನ್ಯಮರ್ಥಚಂದ್ರಸಮಾಕೃತಿ | 

ಬಿಂದುಂ ತು ಕಾರಯೇದ್ವಿಪ್ರಾಸ್ತಸ್ಕೋಪರಿ ಮುನೋಪಹರಂ ॥ ೧೬೨ ॥ 
ಏವಂ ಕೃತೇ ತದಾ ವಿಪ್ರಾಃ ಶಾಂತಿರ್ಭವತಿ ನಾಂ ನ್ಯಥಾ । 

ಪುತ್ರವೃದ್ಧಿಕರಂ ಚೈತತ್ತಿಲಕಂ ಚಾಂರ್ಧ ಬಿಂಬಕಂ । 


ಸರ್ವನಿಫ್ನುಹರಂ ಸರ್ವದೌಸ್ಮ್ಯನ್ಯಾಧಿನಾಶನಂ ॥ ೧೬೩ ॥ 
ವ್ಯಾಸ ಉವಾಚ: 

ತತಃ ಶಾಂತಾಃ ಪ್ರಜಾಃ ಸರ್ವಾ ಧರ್ಮಾಂರಣ್ಯೇ ನರಾಂಧಿಸ । 

ಪ್ರಸಾದಾಚ್ಚೈನ ಮಾತಂಗ್ಯಾ ದೇವ್ಯಾ ವೈ ಸತ್ಯಮಂದಿರೇ ॥ ೧೬೪ ॥ 

ತತೋ ಹೃಷ್ಟಹೃದಾ ವಿಪ್ರಾಃ ಪುಸೂಜುಸ್ತೇ ವಿಧೇಃ ಸುತಾಂ । 

ಮಾತಂಗ್ಯಾಶ್ಚ ಪ್ರಕರ್ತವ್ಯಂ ವರ್ಷೇ ವರ್ಷೇ ಚ ಪೂಜನಂ ॥ ೧೬೫ ॥ 


೧೫೯-೧೬೨. ಹಾಗೆಯೇ ಆಗಲೆಂದ ಆ ಬ್ರಾಹ್ಮಣರು ಒಪ್ಪಲು ದೇನಿಯು 
ಮತ್ತೆ ಹೇಳಿದಳು. "ಬ್ರಾಹ್ಮಣರೆ ! ವಿವಾಹಾದಿ ಮಹೋತ್ಸವದಲ್ಲಿ ನಾನು 
ಹೇಳಿದ ಕ್ರಮವನ್ನನುಸರಿಸಿರಿ. ದಂಪತಿಗಳ ಸೌಖ್ಯಕ್ಕಾಗಿಯೂ, ತೊಂದರೆ 
ಯಿಲ್ಲದಿರುವುದಕ್ಕಾಗಿಯೂ ತಮ್ಮ ಸೇವಕರೊಡನೆ ಸಂಬಂಧಿಕಕೆಲ್ಲ ಕಣ್ಣುಗಳಿಗೆ 
ಕಾಡಿಗೆಯನ್ನು (ಕಪ್ಪನ್ನು) ಹಚ್ಚಿ ಕೊಳ್ಳ ಬೇಕು. ಹುಬ್ಬುಗಳ ನಡುವೆ ಅರ್ಧ 
ಚಂದ್ರನಂತೆ ರೇಖೆಯನ್ನು ಬರೆದು ಅದರ ಮೇಲ್ಲಡೆ ಮನೋಹರವಾದ ಬೊಟ್ಟ 
ಸ್ಲಿಡಬೇಕು. 

೧೬೩. ಬ್ರಾಹ್ಮಣರೆ! ಹೀಗೆ ಮಾಡಿದರೆ ನಿಫ್ಲುಶಾಂತಿಯಾಗುವುದು. ಇತರ 
ಕ್ರಮದಿಂದಾಗುವುದಿಲ್ಲ. ಈ ಅರ್ಧಚಂದ್ರಾಕಾರವಾದ ತಿಲಕವು ಪುತ್ರವೃದ್ಧಿ 
ಯನ್ನೂ ಸಕಲ ವಿಫ್ಲನಾಶನನ್ನೂ ಸಮಸ್ಕ ಆಸತ್ತು ಮತ್ತು ರೋಗಗಳ 
ಪರಿಹಾರವನ್ನೂ ಮಾಡುವುದು. 

೧೬೪. ವ್ಯಾಸನು ಹೇಳುತ್ತಾನೆ:-ಮಹಾರಾಜ | ಬಳಿಕ ಮಾತಂಗಿಯ 
ಅನುಗ್ರಹದಿಂದ ಧರ್ಮಾರಣ್ಯದ ಸತ್ಯಮಂದಿರದಲ್ಲಿರುವ ಪ್ರಜೆಗಳೆಲ್ಲರೂ ಸುಖ 
ಗೊಂಡರು. 


೧೬೫-೧೬೬, ಬಳಿಕ ಆ ವಿಪ್ರರು ಸಂತೋಷಗೊಂಡು ಬ್ರಹ್ಮನ ಮಗಳಾದ 


ಅಪ್ಕಾಹಶೋರಧ್ಯಾಯಃ '೨೨ಷ್ಟಿ 


ಮಾಘಾಸಿತೇ ತೃತೀಯಾಯಾಂ ಭಕ್ಸ ್ಸಳೋಜ್ಯಾದಿಭಿಸ್ತಥಾ । 


ಕರ್ಣಾಟಸ್ಯ ತಥೋತ್ಪತ್ತಿಃ ಪುನರ್ಜಾತಾತು ಭೂತಲೇ ॥ ೧೬೬॥ 
ಭಯಾಚ್ಛೆನ ಹಿ ತತ್ಸ್ಕಾನಂ ತ್ಯಕ್ತ್ವಾ ಯಾಮ್ಯುಮಗಾತ್ತತಃ | 
ಗಚ್ಛಮಾನಸ್ತದಾ ದೈತ್ಯೋ ಯಕ್ಸ್ಮರೂಪೋಹ್ಯಭಾಷತ ॥ ೧೬೭ ॥ 
ಶ್ರೂಯತಾಂ ಭೋ ದ್ವಿಜಾಃ ಸರ್ವೇ ಧರ್ಮಾಃ ರಣ್ಯನಿ ನಾಸಿನಃ | 
ವಣಿಜಶ್ಚ ಮಹಚ್ಚೇದಂ ಮದ್ವಾಕ್ಯಂ ಪರಿಪಾಲ್ಯತಾಂ ॥ ೧೬೮ ॥ 
ಮಾಘಮಾಸೇಹಿ ಮತ್ರೀತ್ಯಾ ನಿರ್ನಿಘ್ನ್ನಾರ್ಥಂ ಸದಾ ಭುವಿ । 

ತ್ರಿದಲೇನ ಚ ಧಾನ್ಯೇನ ಮೂಲಕೇನ ವಿಶೇಷತಃ ॥ ೧೬೯ 
ತಿಲತೈಲೇನ ವಾ ಕುರ್ಯಾತ್ಸುರುಷೋ ನಿಯತನ್ರತಃ । 

ಏಕಾಶನಂ ಹಿ ಕುರುತೇ ಯಕ್ಷ್ಮ್ಮಪ್ರೀತ್ಯೈ ನಿರಂತರಂ ॥ ೧೭೦ ॥ 


ಆಬಾಲಯೌನನೇನೈನ ವೃದ್ಧೇನಾಃ ಪೀಹ ಸರ್ವದಾ । 

ವರ್ಷೇ ನರ್ಷೇ ಪ್ರಕರ್ತನ್ಯಂ ಯಕ್ಷ್ಮಣೋ ವ್ರತಮುತ್ತಮಂ ॥ ೧೭೧ ॥ 
ಯಸ್ಮಿನ್ಭೃಹೇ ಹಿ ಯಾವಚ್ಚ ಪುರುಷಾಕಾರರತೇಪಿಣಃ । 

ತಸ್ಯಾಹ್ವಯಂ ಪ್ರಕುಯರರ್ಯುಸ್ತ ಏಕಭಕ್ತರತಾಃ ಸದಾ ॥ ೧೭೨ ॥ 
ಬಾಲಸ್ಯಾರ್ಥೇ ತು ಜನನೀ ಕುರುತೇ ವ್ರತಮುತ್ತಮಂ | 

ಪಿತಾ ವಾಪ್ಯಥವಾ ಭ್ರಾತಾ ಯನ್ನಿಮಿತ್ತಂ ವ್ರತಂ ಚರೇತ್‌ ॥ ೧೭೩ ॥ 
ಮಾತಂಗಿಯನ್ನು ಪೂಜಿಸಿದರು. ಹೀಗೆ ಪ್ರತಿ ವರ್ಷದಲ್ಲಿಯೂ ಮಾಘಮಾಸದ 
ಕೃಷ್ಣಸಕ್ಸ ತದಿಗೆಯ ದಿವಸ ಭಕ್ಷ್ಯಭೋಜ್ಯಾದಿಗಳಿಂದ ಮಾತಂಗಿಯನ್ನು 
. ಪೂಜಿಸಬೇಕು. ಒಮ್ಮೆ ಕರ್ಣಾಟದೈ ತ್ಯನು ಮತ್ತೆಯೂ ಭೂಮಿಯಲ್ಲಿ ಜನಿಸಿದನು. 

೧೬೭. ಆ ದೈತ್ಯನು ಹೆದರಿಕೆಯಿಂದ ಆ ಸ್ಥಳವನ್ನು ಬಿಟ್ಟು ದಕ್ಷಿಣ ದಿಕ್ಕಿಗೆ 
ಹೋಗುತ್ತ ಯಕ್ಟ್ಪ ರೂಪನಾಗಿ ಇಂತೆಂದನು. 

೧೬೮. "" ಧರ್ಮಾರಣ್ಯವಾಸಿಗಳಾದ ಎಲೈ ಬ್ರಾಹ್ಮಣರೆ ಮತ್ತು ವೈಶ್ಯರೆ! 
ಕೇಳಿರಿ ಈ ನನ್ನ ಒಳ್ಳೆಯ ಮಾತನ್ನು ಪಾಲಿಸಿರಿ. 

೧೬೯-೧೭೦. ಮಾಘಮಾಸದಲ್ಲಿ ಪ್ರಪಂಚದಲ್ಲಿ ತೊಂದರೆಗಳಿಲ್ಲದಿರುವುದ 
ಕ್ಳಾಗಿ ನನ್ನ ಪ್ರೀತಿಗೊಸ್ಬರ ಪುರುಷನು ತ್ರಿದಳಧಾನ್ಯದಿಂದಾಗಲಿ, ಗೆಣಸಿನಿಂದಾ 
ಗಲಿ, ಎಳ್ಳೆಣ್ಣೆಯಿಂದಾಗಲಿ ಸಹಿತವಾದ ಒಂದೇ ಭೋಜನವನ್ನು ಮಾಡಬೇಕು. 

೧೭೧. ಹುಡುಗರೂ, ಯುವಕರೂ, ಮುದಕರೂ ಪ್ರತಿ ವರ್ಷವೂ 
ಉತ್ತಮವಾದ ಈ ಯಕ್ಷ್ಣ್ಮವ್ರತನ್ನಾಚರಿಸಬೇಕು. 

೧೭೨-೧೭೪. ಬಾಲಕನಿಗೆ ಬದಲಾಗಿ ತಾಯಿಯಾಗಲಿ, ತಂಡೆಯಾಗಲಿ, 
ಸಹೋದರನಾಗಲಿ ಈ ವ್ರತವನ್ನು ಮಾಡಬೇಕು. ಪತಿಯ ಬದಲಾಗಿ ಹೆಂಡ 
ತಿಯೂ, ಅವಳಿಗೆ ಶಕ್ತಿಯಿಲ್ಲದಿದ್ದರೆ ಇತರರೂ ವ್ರತವನ್ನು ಮಾಡಬೇಕು. ಯಾರ 


೨೨೪ ಶ್ರೀ ಸ್ಥಾಂದಮಹಾಪುರಾಣಂ 


ನ ಚ ತಸ್ಯ ಭಯಂ ಕ್ವಾಪಿ ನ ವ್ಯಾಧಿರ್ನ ಚ ಬಂಧನಂ । 


ಭರ್ತುರ್ನಿಮಿತ್ತೇ ಸ್ತ್ರೀ ಕುರ್ಯಾತ್ವಶಕ್ತೇ ತ್ವಿತರೇಣ ಚ ೧೭೪ ॥ 
ಏವಂ ಸಮಾದಿಶನ್ಹೈತ್ಯಃ ಸತ್ಯಮಂದಿರಮುತ್ಸೃಜನ್‌ | 
ಗತೋಂಸೌ ಯಾಮ್ಯದಿಗ್ಟಾಗ ಉದಧೇಸ್ತೀರ ಉತ್ತಮೇ ॥ ೧೭೫ ॥ 


ವಿಪುಲಂ ದೇಹಮಾಸಾದ್ಯ ಕರ್ಣಾಟಃ ಸ ನರಾಧಿಪ । 

ಸ್ವನಾನ್ನಾ ಚೈನ ತಂ ದೇಶಂ ಸ್ಥಾ ಪಯಾಮಾಸ ಚೋತ್ತಮಂ ॥ ೧೭೬ ॥ 
ಯಸ್ಮಿ, ಶ್ಚ ಸರ್ವವಸ್ತೂ ನಿ ಧನಧಾನ್ಯಾನಿ ಭೂರಿಶಃ । 

ಕರ್ಣಾಟಿಜೀಶಂ ತಂ ರಾಜನ್ಸ ರಿವಾರ್ಯ ಚಿರಂ ಸ್ಥಿತಃ ॥ ೧೭೭ ॥ 
ಧರ್ಮಾಂರಣ್ಯಕಥಾಂ ಪುಣ್ಯಾಂ ಕಥಿತಾಂ ನರಸತ್ತಮ । 

ಶ್ರೀಮಾತುಶ್ಚೈನ ಮಾಹಾತ್ಮ್ಯಂ ಶೃಣ್ವಂತಿ ಶ್ರಾನಯಂತಿ ಯೇ ॥ ೧೭೮ ॥ 
ತೇಷಾಂ ಕುಲೇ ಕದಾಚಿತ್ತು ಅರಿಷ್ಟಂ ನೈವ ಜಾಯತೇ । 

ಅಪುತ್ರೋ ಲಭತೇ ಪುತ್ರಾನ್ಮನಹೀನಸ್ತು ಸಂಪದಃ । 
ಆಯುರಾರೋಗ್ಯಮೈ ಶ್ವರ್ಯಂ ಶ್ರೀಮಾತುಶ್ಚ ಪ್ರಸಾದತಃ 1 ೧೭೯॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಮೇ "" ಮಾತಂಗೀ 
ಕರ್ಣಾಟಕೋಪಾಖ್ಯಾನವರ್ಣನಂ ''ನಾಮಾಂಷ್ಟಾದಶೋಂಧ್ಯಾಯಃ 


ಮನೆಯಲ್ಲಿ ಜನರು ಒಂದೇ ಭೋಜನವುಳ್ಳ ವರಾಗಿ ಪುರುಷಾಕಾರನಾದ ಆ 
ಯಕ ನ ನಾಮವನ್ನು ಹೇಳುವರೊ, ಅನರಿಗೆ ಭಯವೂ, ವ್ಯಾಧಿಯೂ, ಬಂಧ 
ನವೂ ಉಂಟಾಗುವುದಿಲ್ಲ. 

೧೭೫-೧೭೬. ಮಹಾರಾಜ! ಆ ಕರ್ಣಾಟನು ಹೀಗೆ ಅಪ್ಪಣೆಮಾಡಿ 
ಸತ್ಯಮಂದಿರವನ್ನು ಬಿಟ್ಟು ದಕಿ ಕ್ಸಿಣದಿಕ್ಕೆಗೆ ಹೋಗಿ ಸಮುದ್ರದ ದಡದಲ್ಲಿ 
ಡೊಡ್ಡ ದೇಹವನ್ನು ಚೂ ತನ್ನ ಹೆಸರಿನಿಂದ ಆ ದೇಶವನ್ನು ಸ್ಥಾ ಪಿಸಿದನು. 

“ಎ೭೭. ಆ ದೇಶದಲ್ಲಿ ae ವಸ್ತುಗಳೂ, ಧನಧಾನ್ಯಗಳೂ, ಸಮ ದ್ಧಿ 
ಯಾಗಿರುವುದರಿಂದ ಆ ದೈತ್ಯನು ಅಲ್ಲಿಯೆ ಬಹುಕಾಲ ನೆಲಸಿದನು. 

೧೭೮-೧೭೯. ನಾನು ಹೇಳಿದ ಈ ಧರ್ಮಾರಣ್ಯದ ಕಥೆಯನ್ನೂ ಶ್ರಿ 
ಮಾತೆಯ ಮಹಾತ್ಮ್ಯವನ್ನೂ ಯಾರು ಕೇಳುವರೊ, ಮತ್ತು ಮತ್ತೊಬ್ಬ ರ 
ಹೇಳುವರೊ, ಅವರ ವಂಶದಲ್ಲಿ ಒಂದು ಸಾರಿಯೂ ಅನಿಷ್ಟವುಂಟಾಗುವುದಿಲ್ಲ. 
ಶ್ರೀಮಾತೆಯ ಅನುಗ್ರಹದಿಂದ ಮಕ್ಕಳಿಲ್ಲದವನು ಮಕ್ಕಳನ್ನೂ, ಧನವಿಲ್ಲ 
ದವನು ಸಂಪತ್ತನ್ನೂ, ಆಯುಸ್ಸು, ಆರೋಗ್ಯ, ಐಶ್ವರ್ಯಗಳನ್ನೂಪಡೆಯುವನು. 

ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 


ಮಾಹಾತ್ಮ್ಯ ದಲ್ಲಿ "" ಮಾತಂಗಿ ಕರ್ಣೂಟಿಕೋಪಾಖ್ಯಾನನರ್ಣನ'”ನೆಂಬ 
ಹದಿನೆಂಟನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 


ಅಥೈಕೋನವಿಂಶೋಧ್ಯಾಯಃ 
ಇಂದ್ರೇಶ್ವರ ಜಯಂತೇಶ್ವರನುಹಿಮಾನುವರ್ಣನಂ 
ವ್ಯಾಸ ಉವಾಚ :- 
ಇಂದ್ರಸರೇ ನರಃ ಸ್ನಾತ್ವಾ ದೃಷ್ಟ್ಯಾ ಚೇಂದ್ರೇಶ್ವರಂ ಶಿನಂ । 
ಸಪ್ತಜನ್ಮಕೃತಾತ್ಪಾಪಾನ್ಮುಚ್ಯತೇ ನಾಂತ್ರ ಸಂಶಯಃ nol 
ಯುಧಿಷ್ಠಿರ ಉವಾಚ ;-- 
ಹೇನ ಚಾದೌ ನಿರ್ಮಿತಂ ತತ್ತೀರ್ಥಂ ಸರ್ವೋತ್ತನೋತ್ತಮುಂ । 


ಯಥಾವದ್ವರ್ಣಯ ತ್ವಂ ಮೇ ಭಗವನ್ಹ್ಟಿಜಸತ್ತಮ _ ॥೨॥ 
ವ್ಯಾಸ ಉವಾಚ: 

ಇಂದ್ರೇಣೈನ ಮಹಾರಾಜ ತಪಸ್ತಪ್ತಂ ಸುದುಷ್ಕರಂ । 

ಗ್ರಾಮಾದುತ್ತರದಿಗ್ಭಾಗೇ ಶತನರ್ಷಾಣಿ ತತ್ರ ವೈ nan 


ಶಿವೋದ್ಲೇಶಂ ಮಹಾಘೋರಂ ಏಕಾಂಂಗುಷ್ಕೇನ ಭಾರತ । 
ಊರ್ಥ್ಯಬಾಹುರ್ಮಹಾತೇಜಾಃ ಸೂರ್ಯಸ್ಯಾಂಭಿಮುಖೋಂಭವತ್‌ 1 
ವೃತ್ರಸ್ಯ ವಧತೋ ಜ್ಞಾತಂ ಯತ್ಪಾಪಂ ತಸ್ಯ ನುತ್ತಯೇ । 

ಏಕಾಗ್ರಃ ಪ್ರ ಯತೋ"! ಭೂತ್ವಾ ಶಿನಸ್ಯಾ ರಾಥನೇ ರತಃ ॥೫॥ 


ಕನ್ನಡದ ಅನುವಾದ 
ಇಂದ್ರೆ ತ್ತ ರ ಜಯಂತೇಶ್ವ ರ ಮಹಿಮಾನುವರ್ಣನ 

೧.ವ್ಯಾ ಸನು ಹೇಳುತ್ತಾ ನೆ: ಕಾಟ ಮಾನವನು ಇಂದ್ರಸರೋ 
ವರದಲ್ಲಿ ಸ್ನಾಸಮಾಡಿ ಇಂದ್ರೆ ೇಶ್ವರನಾದ ಶಿವನನ್ನು ದರ್ಶನಮಾಡಿದರೆ ಏಳ 
ಜನ್ಮಗಳಲ್ಲಿ ಮಾಡಿದ ಹಿನ ಮುಕ್ತನಾಗುವನು. 

೨. ಯುಧಿಷ್ಠಿರನು ಕೇಳುತ್ತಾನೆ:--ದ್ವಿಜವರ್ಯನಾದ ಎಲೈ ವ್ಯಾಸನೆ! 
ಮೊದಲು ಸರ್ವೋತ್ರಮವಾದ ಆ ತೀರ್ಥವನ್ನು ಯಾರು ನಿರ್ಮಿಸಿದರು? ಎಲೈ 
ಪೂಜ್ಯನೆ! ಅದನ್ನು ನನಗೆ ಹೇಳುವವನಾಗು. 

೩. ವ್ಯಾಸನು ಹೇಳುತ್ತಾನೆ :- ಮಹಾರಾಜ! ಗ್ರಾಮದ ಉತ್ತರದಿಕ್ಕಿನಲ್ಲಿ 
ಇಂದ್ರನು ನೂರು ವರ್ಷಕಾಲ ದುಷ್ಕರವಾದ ತಪಸ್ಸನ್ನು ಮಾಡಿದನು. 

೪. ಯುಧಿಷ್ಠಿರ! ಮಹಾ ತೇಜಸ್ವಿಯಾದ ಆ ಇಂದ್ರನು ತೋಳುಗಳನ್ನು 
ಮೇಲಕ್ಕೆತ್ತಿಕೊಂಡು ಒಂದೇ ಬೆರಳಿನಿಂದ ನಿಂತು ಸೂರ್ಯಾಭಿಮುಖನಾಗಿ 
ಪರಶಿವನನ್ನುದ್ದೇಶಿಸಿ ಘೋರ ತಪಸ್ಸನ್ನಾಚರಿಸಿದನು. 

೫. ವೃತ್ರನ ಸಂಹಾರದಿಂದುಂಟಾದ ಪಾಪದ ನಿವಾರಣೆಗಾಗಿ ಶುದ್ಧವಾದ 
ಒಮ್ಮನಸ್ಸಿನಿಂದ ಶಿವನ ಆರಾಧನೆಯಲ್ಲಿ ಆಸಕ್ತನಾದನು. 

8 


೨೨೬ ಶ್ರೀ ಸ್ಕಾಂದಮ ಹಾಪುರಾಣಂ 


ತಪಸಾ ಚ ತದಾ ಶಂಭುಸ್ತೋಷಿತಃ ಶಶಿಶೇಖರಃ । 


ತತ್ರಾಜಗಾಮ ಜಟಲೋ ಭಸ್ಮಾಂಗೋ ನೃಷಭಧ್ಯ್ಮಜಃ ॥೬॥ 

ಖಟ್ವಾಂಗೀ ಸಂಚನಕೃ್ರಶ್ಚ ದಶಜಾಹುಸ್ತ್ರಿಲೋಚನಃ | 

ಗಂಗಾಧರೋ ನೃಷಾರೂಢೋ ಭೂತಪ್ರೇತಾದಿನೇಸ್ಟಿತಃ Hak 

ಸುಪ್ರಸನ್ನಃ ಸುರಶ್ರೇಷ್ಠಃ ಕೃಷಾಲುರ್ವರದಾಯಕಃ । 

ತದಾ ಹೃಷ್ಟಮನಾ ದೇವೋ ದೇನೇಂದ್ರಮಿದಮೂಚಿವಾನ್‌ Wen 
ಹರ ಉವಾಚ: 

ಯತ್ತ್ವಂ ಯಾಚಯಸೇ ದೇವ ತದಹಂ ಪ್ರದದಾನಿ ತೇ ॥೯॥ 
ಇಂದ್ರ ಉವಾಚ: 

ಯದಿ ತುಷ್ಬೊ (ಸಿ ದೇನೇಶ ಕೃಪಾಸಿಂಧೋ ಮಹೇಶ್ವರ । 

ಬ್ರಹ್ಮಹತ್ಯಾ ಣೆ ಮಾಂ ದೇವ ಉಜ್ಜಿ ಜಯತಿ ನಿತ್ಯ ತ. ॥ ೧೦॥ 

ವೃತ್ರಾಂಸುರಸ್ಯ ಹನನೇ ಜಾತಂ ಸಾಸಂ ಸುಕೋತ್ತಮ 

ತತ್ಪಾಪಂ ನಾಶಯ ವಿಭೋ ಮಮ ದುಃಖಪ್ರದಂ ಸದಾ ॥ ೧೧॥ 
ಹರ ಉವಾಚ: 

ಧರ್ಮಾಃರಣ್ಯೇ ಸುರಪತೇ ಬ್ರಹ್ಮಹತ್ಯಾ ನ ಪೀಡಯೇತ್‌ । 

ಚ ಗವಾಂ ದ್ವಿಜಾತೀನಾಂ ಬಾಲಾನಾಂ ಯೋಷಿತಾಮಪಿ ॥ ೧೨॥ 





೬. ಆಗ so ತಪಸ್ಸಿಗೆ ಮೆಚ್ಚಿದ ಚಂದ್ದ ್ರಮಾಳೀಶ್ವರನು ಚ 
ಯಾಗಿ ವ ೈಷಭವನ್ನೇರಿ ಭಸ್ಮವನ್ನು ಹಚ್ಚೆ ಕೊಂಡು ಅಲ್ಲಿಗೆ ಬಂದನು. . 

೩೯. ಖಟ್ವಾಂಗಧಾರಿಯೂ, ವದುಮುಖವುಳ್ಳ ವನೂ, ಹತ್ತು ತೋಳು 
ಗಳುಳ್ಳವನೂ, ಮುಕ್ಕಣ್ಣ ನೂ, ಭಾಗೀರಥಿಯನ್ನು ಧರಿಸಿದನನೂ, ವ ಷಭವನ್ನೇರಿ 
ದವನೂ, ಭೂತಸ್ರೇತಾದಿಗಳಿಂದ ಸುತ್ತುವರಿಯಲ್ಪಟ್ಟವನೂ, “ಪ್ರಸನ್ನನೂ, 
ಡೇಮೋತ್ತಮನೂ, ದಯಾಲುವೂ, ವರವನ್ನು ಕೊಡುವವನೂ ಆಗಿರುವ 
ಮಹೇಶ್ವರನು ಸಂತೋಷಗೊಂಡು ಆ ದೇವರಾಜನನ್ನು ಕುರಿತು ಈ ಮಾತನ್ನ್ನಾ 
ಡಿದನು:--ದೇವೇಂದ್ರ! ನೀನು ಯಾವುದನ್ನು ಬೇಡುವೆಯೊ, ಅದನ್ನು 
ಕೊಡುವೆನು. 

೧೦-೧೧. ಇಂದ್ರನು ಹೇಳುತ್ತಾ ನೆ:ಕರುಣಾಸಾಗರನಾದ ಓ ಮಹೇಶ್ವರ! 

ಬ್ರಹ್ಮಹತ್ಯಾ ದೋಷವು. ನನ್ನನ್ನು ಪ್ರತಿದಿನವೂ ವ್ಯ ೈಥೆಪಡಿಸುತ್ತಿ, ದೆ. ನೀನು 
ಮೆಟ್‌ ದ್ವಿ” ವೃ ತ್ರಾಸುರನ ನಥೆಯಿಂದುಂಟಾಗಿ ಇವಾಗ ನನಗೆ ದುಃಖ 
ವನ್ನು ಕೊಡುತ್ತಿ, ರುವ ಆ ಪಾಪವನ್ನು ನೀಗಿಸು. 

೧೨. ಹರನು ಹೇಳುತ್ತಾನೆ:--ಸುರೇಂದ್ರ ! ಈ ಧರ್ಮಾರಣ್ಯದಲ್ಲಿ ಗೋನು 
ಗಳು, ಬ್ರಾಹ್ಮಣರು, ಬಾಲಕರು, ಹೆಂಗಸರು ಇವರನ್ನು ಕೊಲ್ಲುವುದರಿಂದ 
ಉಂಟಾದ ಪಾಪವೂ ನೀಡಿಸುವುದಿಲ್ಲ. 


ಏಕೋನಪಿಂಶೋರಧ್ಯ್ಮಾಯಃ ೨೨೭ 


ವಚನಾನ್ಮನು ದೇನೇಂದ್ರ ಬ್ರಹ್ಮಣಃ ಕೇಶವಸ್ಯ ಚೆ! 
ಯಮಸ್ಯ ವಚನಾಜ್ಜಿಸ್ಟೋ ಹತ್ಯಾ ನೈನಾಂತ್ರ ತಿಷ್ಮತಿ | 


ಪ್ರವಿಶ್ಯ ತ್ವಂ ಮಹಾರಾಜ ಅತೋತ್ರ ಸ್ನಾನಮಾಚರ ॥ ೧೩॥ 
ಇಂದ್ರ ಉವಾಚ:- 

ಯದಿ ತ್ವಂ ಮಮ ತುಷ್ಟೋಸಿ ಕೃಪಾಸಿಂಥೋ ಮಹೇಶ್ವರ । 

ಮನ್ನಾಮ್ನಾ ಚ ಮಹಾದೇವ ಸ್ಥಾಪಿತೋ ಭನ ಶಂಕರ ॥ ೧೪ ॥ 

ತಥೇತ್ಯುಕ್ತ್ವಾ ಮಹಾದೇವಃ ಸುಪ್ರಸನ್ನೋ ಹರಸ್ತದಾ । 

ದರ್ಶಯಾಮಾಸ ತತ್ರೈನ ಲಿಂಗಂ ಪಾಪಸ್ರಣಾಶನಂ ॥ ೧೫ ॥ 

ಕೂರ್ಮಪೃಷ್ಠ್ಮಾತ್ಸಮುತ್ಪಾದ್ಯ ಆತ್ಮಯೋಗೇನ ಶಂಭುನಾ । 

ಸ್ಥಿತಸ್ತತ್ತೈವ ಶ್ರೀಕಂಠಃ ಕಾಲತ್ರಯವಿದೋ ವಿದುಃ ॥ ೧೬॥ 

ವೃತ್ರಹತ್ಯಾಸಮುತ್ತ್ರಸ್ತದೇವರಾಜಸ್ಯ ಸನ್ನಿಧೌ । 

ಇಂದ್ರೇಶ್ವರಸ್ತದಾ ತತ್ರ ಧರ್ಮಾಂರಣ್ಯೇ ಸ್ಥಿತೋ ನೃಪ ॥ ೧೭ 1 

ಸರ್ವಪಾಪನವಿಶುದ್ಧ್ಯರ್ಥಂ ಲೋಕಾನಾಂ ಹಿತಕಾಮ್ಯಯಾ | 

ಇಂದ್ರೇಶ್ವರಂ ತು ರಾಜೇಂದ್ರ ಪುಷ್ಪಧೂಪಾದಿಕೈಃ ಸದಾ ॥ ೧೮ ॥ 

ಪೂಜಯೇಚ್ಚ ನರೋ ಭಕ್ತ್ಯಾ ಸರ್ವಪಾಪೈಃ ಪ್ರಮುಚ್ಯತೇ ! 

ಅಷ್ಟಮ್ಯಾಂ ಚ ಚತುರ್ದಶ್ಯಾಂ ಮಾಘಮಾಸೇ ವಿಶೇಷತಃ ॥೧೯॥ 


೧೩. ದೇವೇಂದ್ರ! ನನ್ನ ಮತ್ತು ಬ್ರಹ್ಮ, ವಿಷ್ಣು, ಯಮರ ಮಾತಿನಂತೆ 
ಇಲ್ಲಿ ಬ್ರಹ್ಮಹತ್ಯೆಯು ಇರುವುದಿಲ್ಲ. ಆದುದರಿಂದ ನೀನು ಇಲ್ಲಿ ಸ್ನಾನಮಾಡು. 

೧೪. ಇಂದ್ರನು ಹೇಳುತ್ತಾನೆ:-ಕೃಪಾಳುವಾದ ಎಲೈ ಮಹೇಶ್ವರನೆ! ನೀನು 
ಸಂತುಷ್ಟನಾಗಿದ್ದರೆ ನನ್ನ ಹೆಸರಿನಿಂದ ಇಲ್ಲಿ ನೆಲೆಸು. 

೧೫. ಮಹಾದೇವನು ಸಂತುಷ್ಟನಾಗಿ ಹಾಗೆಯೇ ಆಗಲೆಂದು ಅಲ್ಲಿಯೇ 
ಪಾಸನಾಶಕವಾದ ತನ್ನ ಲಿಂಗಮೂರ್ತಿಯನ್ನು ತೋರಿದನು. 

೧೬. ಮಹೇಶ್ವರನು ಆತ್ಮಯೋಗದಿಂದ ಆದಿಕೂರ್ಮನ ಬೆನ್ನಿನಿಂಡೆದ್ದು 
ಅಲ್ಲಿ ನೆಲೆಸಿರುವನೆಂದು ತ್ರಿಕಾಲಜ್ಞಾನಿಗಳು ತಿಳಿದಿರುವರು. 

೧೭. ಆಗ ಇಂದ್ರೇಶ್ವರನು ಆ ಧರ್ಮಾರಣ್ಯದಲ್ಲಿ ಬ್ರಹ್ಮಹತ್ಯೆಯಿಂದ 
ಭಯಗೊಂಡ ಇಂದ್ರನ ಹತ್ತಿರ ನಿಂತನು. 

೧೮-೩೦. ನರನು ಜನರಿಗೆ ಹಿತವನ್ನುಂಟುಮಾಡಲಿಚ್ಛೆಯಿಂದ ಸಕಲ 
ಪಾಸಗಳ ಶುದ್ಧಿಗಾಗಿ ಇಂದ್ರೇಶ್ವರನನ್ನು ಪುಷ್ಪ ಧೂಪಾದಿಗಳಿಂದ ಯಾವಾಗಲೂ 
ಭಕ್ತಿಯಿಂದ ಪೂಜಿಸಿದರೆ ಸಕಲ ದುರಿತಗಳಿಂದಲೂ ಮುಕ್ತನಾಗುವನು. ಮಾಘ 
ಮಾಸದ ಅಷ್ಟಮಿ ಮತ್ತು ಚತುರ್ದಶಿಗಳಲ್ಲಿ ಸಕಲ ಪಾಪಗಳ ಶುದ್ಧಿಗಾಗಿ 
ಆರಾಧಿಸಿದರೆ ಶಿವಲೋಕದಲ್ಲಿ ಪೂಜ್ಯನಾಗುವನು. ಆ ಇಂದ್ರೇಶ್ವರನ ಮುಂಡೆ 


೨೨೮೪ ಶ್ರೀ ಸ್ಕಾಂಡಮಹಾಪುರಾಣಂ 


ಸರ್ವಪಾಪನಿಶುದ್ಧ ರಂ ಶಿನಲೋಕೇ ಮಹೀಯತೇ | 
ನೀಲೋತ್ಸ ರ್ಗಂ Ek ಯೋ ಮತ್ಯ ೯8 ಕರೋತಿ ಚ ತದಗ್ರ ತಃ ॥ oun 
ಉದ್ಭಕೇತ್ಸಪ್ತ ಪ ಗೋತ್ರಾ ಚಿ ಕುಲಸೇಕೋತ್ತ ರಂಶತಂ। 


ಸಾಂಗೆರುದ್ರಜಪಂ ಯಸ್ತು ಚತುರ್ದಶ್ಯಾಂ ಕರೋತಿ ನೈ ॥ ೨೧ ॥ 
ಸರ್ನಸಾಪನಿಶುದ್ಧಾತ್ಮಾ ಲಭತೇ ಪರನುಂ ಪದಂ ॥ ೨೨ ॥ 
ಸೌನರ್ಣನಯನಂ ಕೃತ್ವಾ ಮಧ್ಯೇ ರತ್ನಸಮನ್ನಿತಂ । 

ಯೋ ದದಾತಿ ದ್ವಿಜಾತಿಭ್ಯ ಇಂದ್ರತೀರ್ಥೇ ತಥೋತ್ತಮೇ ॥ ೨೩ ॥ 


ಅಂಧತಾ ನ ಭನೇತ್ತಸ್ಯ ಜನ್ಮಾನಿ ಸಹ್ಮಿಸಂಖ್ಯಯಾ । 

ನಿರ್ಮಲತ್ವಂ ಸದಾ ತೇಷಾಂ ನಯನೇಷು ಪ್ರಜಾಯತೇ । 
ಮಹಾರೋಗಾಸ್ತಥಾ ಚಾನ್ಯೇ ಸ್ನಾತ್ವಾ ಯಾಂತಿ ತದಗ್ರತಃ ॥ ೨೪ ॥ 
ಪೂಜಿತೇ ಚೈಕಚಿತ್ತೇನ ಸರ್ವರೋಗಾತ್ರಮುಚ್ಯತೇ । 

ಸ್ನಾತ್ವಾ ಕುಂಡೇ ನರೋ ಯಸ್ತು ಸಂತರ್ಪಯತಿ ಯಃ ಪಿತ್ಕೂನ್‌॥ ೨೫ ॥ 
ತಸ್ಯ ತೃಸ್ತಾಃ ಸದಾ ಭೂಪ ಪಿತರಶ್ಚ ಸಿತಾನುಹಾಃ । 

ಯೇ ಸೈ ಗೃಸ್ತಾ ಮಹಾರೋಗೈಃ 'ಕುಷ್ಕಾದೆ ಓೈಶ್ಚೈನ ದೇಹಿನಃ ॥೨೬॥ 
ಸ್ನಾನಮಾತ್ರೇಣ ಸಂಶುದ್ಧಾ ದಿನ್ಯ ದೇಹಾ ಭವಂತಿ ತೇ! 


ಜ್ಜ 'ಠಾದಿ ಕಷ್ಟಮಾಪನ್ನಾ ನರಾಃ ಸಾ ತ್ಮ ಹಿತಾಯ ವೈ ॥ ೨೭॥ 
ಸ್ನಾನಮಾತ್ರೇಣ ಸಂಶುದ್ಧಾ ದಿವ್ಯ ದೇಹಾ ಭವಂತಿ ತೇ | 
ಸ್ನಾತ್ವಾ ಚ ಪೂಜಯೇದ್ದೇವಂ ಮುಚ್ಯತೇ ಜೃರಬಂಧನಾತ್‌ ॥ ೨೮ ॥ 





ನರನು ನೀಲವೃಷೋತ್ಸರ್ಗವನ್ನು ಮಾಡಿದರೆ ಏಳು ಗೋತ್ರಗಳನ್ನೂ, 
ನೂರೊಂದು ಕುಲಗಳನ್ನೂ ಉದ್ಧಾರಮಾಡುವನು. ಚತುರ್ದಶೀ ದಿನ ರುದ್ರ 
ಜಪವನ್ನು ಸಾಂಗವಾಗಿ ಜಪಿಸಿದವನು ಸಮಸ್ತ ದುರಿತ ಮುಕ್ತನಾಗಿ ಉತ್ತಮ 
ಸ್ಥಾನವನ್ನು ಸಡೆಯುವನು. ನಡುವೆ ರತ್ನವನ್ನಿಟ್ಟು ಚಿನ್ನದ ಕಣ್ಣನ್ನು ಮಾಡಿ 
ಈ ಉತ್ತಮವಾದ ಇಂದ್ರತೀರ್ಥದಲ್ಲಿ ಬ್ಲಾ ್ರ್ರಾಹ್ಮಣರಿಗೆ ದಾನಮಾಡಿದರೆ ಅವರಿಗೆ 
ಅರುವತ್ತು ಜನ್ಮಗಳಲ್ಲಿ ಕುರುಡುತನವಿಲ್ಲದೆ ಕಣ್ಣು ಶುದ್ಧವಾಗಿರುವುದು. 
ಆ ಇಂದ್ರೇಶ್ವ ಹ ಮುಂದೆ ಮಿಂದು ಏಕಮನಸ್ಸಿ ಫಿ ಅವನನ್ನು ಪೂಜಿಸಿದಕೆ 
ಸಮಸ್ತ ರೋಗಗಳಿಂದಲೂ ಮುಕ್ತನಾಗುವನು. ಈ ಕುಂಡದಲ್ಲಿ ಮಿಂದು ವಿತ್ಛೃ 
ಶರ್ಪಣಗೈದರೆ ಅವನ ಪಿತೃವಿತಾಮಹಾದಿಗಳು ತೃಪ್ತಿಗೊಳ್ಳುವರು. ಕುಷ್ಕಾದಿ 
ಮಹಾರೋಗಪೀಡಿತರೂ ಸ್ನಾನಮಾತ್ರದಿಂದ ಶುದ್ಧರಾಗಿ ದಿವ್ಯ ದೇಹವನ್ನು 
ಪಡೆಯುವರು. ಜ್ವರಾದಿಗಳಿಂದ ಕಷ್ಟಪಡುತ್ತಿರುವ ಮನುಷ್ಯರು ತಮ್ಮ 
ಹಿತಕ್ಕಾಗಿ ಇಲ್ಲಿ ಮಿಂದರೆ ಶುದ್ಧರಾಗಿ ದಿವ್ಯದೇಹವುಳ್ಳ ವರಾಗುವರು. ಇಲ್ಲಿ 
ಮಿಂದು ಇಂದ್ರೇಶ್ವರನನ್ನು ಅರ್ಚಿಸಿದರೆ ದಿನಕ್ಕೆ, ಎರಡು ದಿನಗಳಿಗೆ. ಮೂರು 


ಏಕೋನವಿಂಶೋರತಧ್ಯಾಯಃ ೨೨೯ 


ಏಕಾಹಿಕಂ ದ್ವಾಹಿಕಂ ಚ ಚಾತುರ್ಥಂ ವಾ ತೃತೀಯಕಂ | 


ವಿಷಮಜ್ವರಸಪೀಡಾ ಚ ಮಾಸಪಕ್ಸಾದಿಕಂ ಜ್ವರೆಂ ॥೨೯॥ 
ಇಂದ್ರೇಶ್ಚರಪ್ರಸಾದಾಚ್ಚ ನಶ್ಯತೇ ನಾಂತ್ರ ಸಂಶಯಃ । 
ನಿಜೃರೋ ಜಾಯತೇ ನೂನಂ ಸತ್ಯಂ ಸತ್ಯಂ ಚ ಭೂಪತೇ non 


ವಂಧ್ಯಾ ಚ ದುರ್ಭಗಾ ನಾರೀ ಕಾಕನಂಧ್ಯಾ ಮೃತಪ್ರಜಾ । 
ಮೃತನತ್ಸಾ ಮಹಾದುಸ್ಟಾ ಸ್ನಾತ್ವಾ ಕುಂಡೇ ಶಿನಾಃಗ್ರತಃ | 


ಪೂಜಯೇದೇಕಚಿತ್ತೇನ ಸ್ನಾನಮಾತ್ರೇಣ ಶುದ್ಧ್ಯತಿ ॥೩೧॥/ 
ಏನಂವಿಧಾಂಶ್ಚ ಬಹುಶೋ ನರಾನ್ನತ್ನಾ  ನಿನಾಕಫೃಕ್‌ | 

ಗತೋಃಸೌ ಸ್ಪ ಪುರಂ ಪಾರ್ಥ ಸೇವ್ಯ ಮಾನಃ ಸುರಾಂಸುರೈಃ ॥ ೩೨॥ 
ತತಃ ಶಕ್ರೋ 'ನುಹಾತೇಜಾ ಗೆತೋ ವೈ ಸ್ವಪುರಂ ಪ್ರತಿ। 
ಜಯಂತೇಸಾಪಿ ತತ್ರೈವ ಸ್ಥಾಪಿತಂ ಅಿಂಗಮುತ್ತ ಮಂ ॥ ೩೩ ॥ 
ಜಯಂತಸ್ಯ ಹರಸ್ತು ್ಟಸ್ತಸ್ಟಿ್ಲಿಂಗೇ ಸ್ತುತಃ ಸದಾ | 

ತ್ರಿಕಾಲಂ ಪುತ್ರ ಸಂಯುಕ್ತಃ ಪೂಜನಾರ್ಥಂ ಸುರೇಶ್ವರಃ ॥ ೩೪ 
ಆಯಾತಿ ಚ ನುಹಾಬಾಹೋ ತ್ಯಕ್ತ್ವಾ ಸ್ಥಾನಂ ಸ್ವಕಂ ಹಿವೈಃ 
ಏತತ್ಸರ್ವಂ ಸಮಾಖ್ಯಾತಂ ಸರ್ವಸೌಖ್ಯಪ್ರದಾಯಕಂ ॥ ೩೫ ॥ 


ದಿನಗಳಿಗೆ, ನಾಲ್ಕು ದಿನಗಳಿಗೆ, ಪಕ್ಸಕ್ಕೆ, ತಿಂಗಳಿಗೆ ಒಂದಾವೃತ್ತಿ ಬರುತ್ತಿರುವ 
ವಿಷಮ ಜ್ವರದ ನೀಡೆಯು ಇಂದ್ರೇಶ್ವರನ ಅನುಗ್ರಹದಿಂದ ನಿಶ್ಚಃ ಯವಾಗಿಯೂ 
ಮಾಯವಾಗುವುದು. 

೩೧. ಬಂಜೆಯೂ, ಮಕ್ಕಳು ಸಾಯುವವಳೂ, ಅತಿದುಷ್ಟಳೂ ಆಗಿರುವ 
ನಾರಿಯು ಇಲ್ಲಿ ಇಂದ್ರೇಶ್ವರನ ಮುಂದೆ ಸ್ನಾನಮಾಡಿ ಅವನನ್ನು ಒಮ್ಮನಸ್ಸಿ 
ನಿಂದ ಅರ್ಚಿಸಿದರೆ ಅವಳು ದೋಷರಹಿತಳಾಗುವಳು. 

೩೨. ಯುಧಿಷ್ಠಿರ! ಪಿನಾಕಪಾಣಿಯಾದ ಶಿವನು ಇಂತಹ ಅನೇಕ ವರ 
ಗಳನ್ನಿತ್ತು ದೇವದಾನವರಿಂದ ಸೇವಿಸಲ್ಪಡುತ್ತ ತನ್ನ ನಗರಕ್ಕೆ ಹೋದನು. 

೩೩. ಬಳಿಕ ಶಕ್ರನು ತನ್ನ ಪಟ್ಟ ಕ್ಕೆ ಹೋದನು. ಅವನ ತನಯನಾದ 
ಜಯಂತನೂ ಅಲ್ಲಿಯೇ ಶಿವಲಿಂಗವನ್ನು ಸ್ಥಾಪಿಸಿರುವನು. 

೩೪-೩೫. ಜಯಂತನು ಆ ಲಿಂಗದಲ್ಲಿ ಸನ್ನಿಹಿತನಾದ ಹೆರನನ್ನು 
ಸ್ತುತಿಸಲು ಅವನು ಸಂತುಷ್ಟ ನಾದನು. ದೇವರಾಜನು ತ್ರಿಕಾಲದಲ್ಲಿಯೂ 
ಮಗನೊಡನೆ ತನ್ನ ಸ್ವಾ ನವನ್ನು ತೃ ಜಿಸಿ ಈ ಹರನ ಪೂಜೆಗಾಗಿ ಇಲ್ಲಿಗೆ ಬರು 
ತ್ತಾನೆ. ಸಕಲ ಸೌಖ್ಯಪ್ರ ದವಾದ ತ ಆಖ್ಯಾನವನ್ನು ಸಂಪೂರ್ಣವಾಗಿ ನಾನು 
ನಿನಗೆ ಹೇಳಿದ್ದೇನೆ. 


೨೩೦ ಶ್ರೀ ಸ್ಕಾಂದಮಹಾಪುರಾಣಂ 


ಇಂದ್ರೇಶ್ವರೇ ತು ಯತ್ಪುಣ್ಯಂ ಜಯಂತೇಶಸ್ಯ ಪೂಜನಾತ್‌ । 


ತದೇವಾಪ್ನೋತಿ ರಾಜೇಂದ್ರ ಸತ್ಯಂ ಸತ್ಯಂ ನ ಸಂಶಯಃ ॥ ೩೬॥ 
ಸ್ನಾತ್ವಾ ಕುಂಡೇ ಮಹಾರಾಜ ಸಂಪೂಜ್ಯೈಕಾಗ್ರಮಾನಸಃ । 
ಸರ್ವಸಾಪನಿಶುದ್ಧಾ ತ್ಮಾ ಇಂದ್ರಲೋಕೇ ಮಹೀಯತೇ ॥ ೩೭॥ 
ಯಃ ಶೃಣೋತಿ ನಕೋ. ಭಕ್ತ್ಯಾ ಸರ್ವಪಾಪೈಃ ಪ್ರಮುಚ್ಯತೇ । 
ಸರ್ವಾನ್ಯಾಮಾನನಾಸ್ನೋತಿ `ಓಯಂತೇಶಪ್ಪ ಸಾದತಃ ॥ ೩೮ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೆನ ಬ್ರಹ್ಮಖಂಡೇ ಪೂರ್ವಭಾಗೇ ಧವರ್ಕಾರಣ್ಯ ಮಾಹಾತೆ ಮೋ ("ಇಂದ್ರೇಶ್ವರ 
ಜಯಂತೇಶ್ವರಮಹಿಮಾನುನರ್ಣನಂ 35 ನಾಮೈ ಕೋನವಿಂತೋಂಧ್ಯಾಯ; 


೩೬. ಮಹಾರಾಜ! ಇಂದ್ರೇಶ್ವರನ ಪೂಜೆಯಿಂದಾಗುವ ಪುಣ್ಯವೇ 
ಜಯಂತೇಶ್ವರನ ಪೂಜೆಯಿಂದ ನಿಶ್ಚಯವಾಗಿಯೂ ಲಭಿಸುವುದು. 

೩೭. ಅರಸ! ಈ ಕುಂಡದಲ್ಲಿ ಸ್ನಾನಮಾಡಿ ಐಕಾಗ್ರ್ಯದಿಂದ ಇಂದ್ರೇಶ್ವರ 
ನನ್ನು ಪೂಜಿಸಿದರೆ ನರನು ಸಕಲಪಾಪನಿರ್ಮುಕ್ತನಾಗಿ ಇಂದ್ರಲೋಕದಲ್ಲಿ 
ಪೂಜ್ಯನಾಗುವನು. 

೩೮. ಇದನ್ನು ಭಕ್ತಿಯಿಂದ ಕೇಳುವ ನರನು ಜಯಂತೇಶ್ವರನ ಅನುಗ್ರಹ 
ದಿಂದ ಸಕಲ ಪಾಪಮುಕ್ತನಾಗಿ ಸಕಲೇಷ್ಟಗಳನ್ನು ಪಡೆಯುವನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಕ 
ಮಾಹಾತ್ಮ್ಯದಲ್ಲಿ "" ಇಂದ್ರೇಶ್ವರ ಜಯಂತೇಶ್ವರ ಮಹಿಮಾನುವರ್ಣನ''ವೆಂಬ 
ಹತ್ತೊಂಬತ್ತನೆಯ ಅಧ್ಯಾಯವು ಮುಗಿದುದು 


॥ ಶ್ರೀಃ ॥ 
ಅಥ ನಿಂಶೋಧ್ಯಾಯಃ 


ಧರಾಕ್ಷೇತ್ರನರ್ಣನಂ 
ವ್ಯಾ ಸ ಉವಾಚ: 


ಅತಃ ನರ ಪ್ರವಕ್ಸ್ಟಾಮಿ ಶಿನತೀರ್ಥಮನುತ್ತಮಂ । 

ಯತ್ರಾಂಸೌ ತಂಕಕೋ ದೇವಃ ಪುನರ್ಜನ್ಮಧರೋಂಭನತ್‌ mo 
ಕೀಲಿತೋ ದೇವದೇನೇಶಃ ಶಂಕರಶ್ಚ ತ್ರಿಲೋಚನಃ | 

ಗಿರಿಜಯಾ ಮಹಾಭಾಗ ಪಾತಿತೋ ಭೂಮಿಮಂಡಲೇ ॥೨॥ 
ಛಲಿತೋ ಮುಹ್ಯಮಾನಸ್ತು ದಿವಾರಾತ್ರಿಂ ನ ನೇತ್ರಿ ಚ । 

ಪುಂಸ್ತ್ರಿ ೀನಪುಂಸಕಾಶ್ಚೈವ ಜಡೀಭೂತಸ್ತ್ರಿ ಲೋಚನಃ 14 
ಕಲ್ಪ್‌ಃ ಂತನಿವ ಸಂ ತದಾ ತಸ್ಮಿ ಗ್‌ೆ ಕೀಲಿತೇ । 

ಸಾರ್ನತ್ಯಾ ಸಹಸಾ ತಸ್ಯ ಕೃತಂ ಕೀಲನಳೆಂ ತದಾ ॥೪॥ 

ಯುಧಿಜ್ಛ ರ ಉವಾಚ: 

ಏತದಾಶ್ಚರ್ಯಮತುಲಂ ವಚನಂ ಯತ್ತ್ಪಯೋದಿತಂ । 

ಯೋ ಗುರುಃ ಸರ್ವದೇವಾನಾಂ ಯೋಗಿನಾಂ ಚೈನ ಸರ್ವದಾ ॥೫॥ 
ಸಾರ್ವತ್ಯಾ ಕೀಲಿತಃ ಕಸ್ಮಾನ್ನಷ್ಟನೃತ್ತಿಃ ಶಿವಃ ಕಥಂ । 

ಕಾರಣಂ ಕಥ್ಯತಾಂ ತತ್ರ ಪರಂ ಕೌತೂಹಲಂ ಹಿ ಮೇ ॥೬॥ 


ಕನ್ನಡದ ಅನುವಾದ 
ಧರಾಕ್ಷೇತ್ರವರ್ಣನ 

೧. ವ್ಯಾಸನು ಹೇಳುತ್ತಾನೆ: ಇನ್ನುಮುಂದೆ, ಶಂಕರನು ಪುನರ್ಜನ್ಮವನ್ನು 
ಪಡೆದ ಅತ್ಯುತ್ತಮವಾದ ಶಿವತೀರ್ಥವನ್ನು ನಿನಗೆ ತಿಳಿಸುವೆನು. 

೨. pS ಶಿವನನ್ನು ಭೂಮಿಯಲ್ಲಿ ಕೆಡವಿ ಇಲ್ಲಿ ಬಂಧಿಸಿರುವಳು. 

೩. ಪಾರ್ವತಿಯಿಂದ ಮೋಸ ಗೊಳಿಸಲ್ಪ ಟ್ಟ ಶಿವನು ಮೋಹಗೊಂಡು 
ಸ್ತಬ್ಧನಾಗಿ ಪುರುಷಾದಿ ಜಾತಿಗಳನ್ನೂ ಹೆಗಲು ರಾತ್ರಿಗಳನ್ನೂ ತಿಳಿಯು 
ಕ್ರಿರಲಿಲ್ಲ. 

೪. ಪಾರ್ವತಿಯಿಂದ ಆಲೋಚಿಸದೆ ಶಿವನು ಬಂಧಿಸಲ್ಪಟ್ಟು ಅಲ್ಲಿರುವಾಗ 
ಕಲ್ಬಾಂತದಂತಾಯಿತು. 

೫-೬. ಯುಧಿಷ್ಠಿರನು ಕೇಳುತ್ತಾನೆ:--ನೀನು ಹೇಳಿದುದು ಅತ್ಯಂತ 
ಆಶ್ಚರ್ಯಕರವಾದುದು. ಸಕಲ ದಿವಿಜರಿಗೂ ಯೋಗಿಗಳಿಗೂ ಗುರುವಾದ 
ಶಂಕರನು ಪಾರ್ವತಿಯಿಂದ ಏಕೆ ಬದ್ಧನಾದನು? ಅವನು ಕಾರ್ಯವಿಲ್ಲದೆ 
ನಿಶ್ಚಲನಾದುದು ಹೇಗೆ? ಇದರ ಕಾರಣವನ್ನು ಹೇಳುವವನಾಗು. ನನಗೆ ಬಹಳ 
ಕುತೂಹಲವುಂಟಾಗಿದೆ. 


೨೩೨ ಶ್ರೀ ಸ್ಕಾಂದಮಹಾಪುಕಾಣಂ 


ವ್ಯಾಸ ಉವಾಚ:- 
ಮಂತ್ರೌಘಾ ವಿನಿಧಾ ರಾಜಂ ಛಂಕರೇಣ ಪ್ರಕಾಶಿತಾಃ । 
ಪಾರ್ವತ್ಯಗ್ರೇ ನುಹಾರಾಜ ಅಥರ್ವಣೋಪನೇದಜಾಃ wan 
ಶಾಕಿನೀ ಡಾಕಿನೀ ಚೈನ ಕಾಕಿನೀ ಹಾಕಿನೀ ತಥಾ । 
ಏಕಿನೀ ಲಾಕನೀ ಹ್ಮ (ತಾಃ ಸಡ್ಫೆ €ದಾಸ್ತತ್ರ ಕೀರ್ತಿತಾಃ ॥೮॥ 
ಬೀಜಾನ್ಯುದ್ಧ ತ್ಯ ಸೈ ತಾಭ್ಕೋ ಮಾಲಾ ಚೈಕಾ ವೃತಾ ಕೃತಾ! 
HE, ಕ ಚೈನ ಪಾ ತ್ಯಗ್ರೇ ನೈಪೋತ್ತ ಮು ॥೯॥ 
ತೈಶ್ಛೈನ ಅಷ್ಟಾ ಭವತಿ ಮಂತ್ರೊ ೇದ್ಭಾ ರಃ ಕೃತಸ್ತು ಸಾ। 
ಸಾಧಯೇತ್ನಾ" ಮಹಾದುಷ್ಟಾ `ನೀ ಪ ಕ ನುಡಾನಘೇ ॥ oon 
ಶ್ರಿ (ಪಾರ್ನತ್ಯು ವಾಚ: 
ಪ್ರಕಾಶಿತಾಸ್ತ್ವಯಾ ನಾಥ ಭೇದಾ ಹ್ಯೇತೇ ಷಡೇನ ಹಿ । 
ಷಡ್ತಿಧಾಃ ಶಕ್ತಯೋ ನಾಥ ಅಗಮ್ಯಾ ಯೋಗಮಾಲಿನೀಃ । 


ಸಡ್ಡಿಧೋಕ್ತಂ ತ್ವಯೈಕೇನ ಕೂಟಾತೃತಂ ವದಸ್ವ ಮಾಂ ॥ ೧೧॥ 
ಶ್ರೀ ಮಹಾದೇವ ಉವಾಚ :-- 
ಅಪ್ರಕಾಶೋ ಮಹಾದೇವಿ ದೇವಾಸುರೈಸ್ತು ಮಾನನೈಃ ॥ ೧೨ ॥ 


೭. ವ್ಯಾಸನು ಹೇಳುತ್ತಾನೆ :-ಮಹಾರಾಜ! ಶಂಕರನು ಪಾರ್ವತಿಯ 
ಮುಂದೆ ಅಥರ್ವವೇದದ ಉಪನವೇದದಲ್ಲಿ ಹೇಳಿರುವ ಮಂತ್ರಗಳ ಸಮೂಹ 
ವನ್ನು ಪ್ರಕಾಶಗೊಳಿಸಿದನು. 

೮. ಅವು ಶಾಕಿನೀ, ಡಾಕೆನೀ, ಕಾಕಿನೀ, ಹಾಕೆನೀ, ಏಕಿನೀ, ಲಾಕೆನೀ 
ಎಂದು ಆರು ವಿಧವಾಗಿರುವುವು. 

೯. ಶಂಕರನು ಆ ಮಂತ್ರಗಳಿಂದ ಮೂಲಮಂತ್ರಗಳನ್ನು ತೆಗೆದು ಮಂತ್ರ 
ಮಾಲೆಯನ್ನು ಮಾಡಿ ಪಾರ್ವತಿಯ ಮುಂದಿ ಹೇಳಿದನು. 

೧೦. "ಎಲೌ ನಿರ್ದಷ್ಟಳಾದ ಅಂಗನೆಯೆ! ಈ ಮಂತ್ರಗಳ ಅರಿಕೆ 
ಯಲ್ಲಿ ಎಂಟನೆಯವಳೂ, ಅತ್ಯಂತ ದುಷ್ಟಳೂ ಆದ ಶಾಕಿನಿಯು ಕಾರ್ಯವನ್ನು 
ಸಾಧಿಸುವಳು?' ಎಂದನು. 

೧೧. ಶ್ರೀಪಾರ್ವತಿಯು ಕೇಳುತ್ತಾಳೆ:--ನಾಥ! ನೀನು ಆರು ವಿಧವಾದ 
ಶಕ್ತಿದೇವತೆಗಳನ್ನು ಮಾತ್ರ ಹೇಳಿರುವೆ. ಆ ಮಂತ್ರಗಳಿಂದ ಕೂಟಮಂತ್ರ 
ವನ್ನು ಮಾಡಿದ ಕ್ರಮವನ್ನು ಹೇಳು. 

೧೨. ಶ್ರೀ ಮಹಾದೇವನು ಹೇಳುತ್ತಾನೆ: ಮಹಾದೇವಿ! ಇದು ದೇವ 
ದಾನವ ಮಾನವರಾರಿಗೂ ಪ್ರಕಾಶಗೊಳಿಸತಕ್ಕುದಲ್ಲ. 


ವಿಂಶೋ9ಧಭ್ಯಾಯಃ ಕ ಪಿಸಿ 


ಪಾರ್ವತ್ಕುವಾಚ »- 
ನಮಸ್ತೇ ಸರ್ವರೂಸಾಯ ನಮಸ್ತೇ ನೃಷಭಧ್ವಜ । 
ಜಟಲೇಶ ನಮಸ್ತುಭ್ಯಂ ನೀಲಕಂಠ ನಮೋಸ್ತುತೇ ॥ ೧೩॥ 
ಕೃಷಾಸಿಂಧೋ ನಮಸ್ತುಭ್ಯಂ ನಮಸ್ತೇ ಕಾಲರೂಪಿಣೇ 1 
ಏತೈಶ್ಚ ಬಹುಭಿರ್ವಾಕ್ಮೈಃ ಕೋಮಲೈಃ ಕರುಣಾನಿಧಿಂ ॥ ೧೪ ॥ 
ತೋಷಯಿತ್ವಾಂದ್ರಿತನಯಾ ದಂಡವತ್ರಣಿಸತ್ಯ ಚ । 
ಜಗ್ರಾಹ ಷಾದಯುಗಲಂ ತಾಂ ಪ್ರೋವಾಚ ದಯಾಪರಃ ॥ ೧೫ ॥ 
ಕಿಮರ್ಥಂ ಸ್ತೂಯಸೇ ಭದ್ರೇ ಯಾಚ್ಯತಾಂ ಮನಸೀಪ್ಸಿತಂ ॥ ೧೬॥ 
ಪಾರ್ವತ್ಕುವಾಚ:- 
ಸಮಾಹಾರಂ ಚ ಸಧ್ಯಾನಂ ಕಥಯಸ್ಕ ಸವಿಸ್ತರಂ । 
ಅಸಂದೇಹಮಶೇಷಂ ಚ ಯದ್ಯಹಂ ನಲ್ಲಭಾ ತವ ॥ ೧೭॥ 


ಶ್ರೀರುದ್ರ ಉವಾಚ: 
ನ ಪ್ರಕಾಶ್ಯಂ ತ್ವಯಾ ದೇವಿ ಸಮಾಹಾರೋದ್ಭನಂ ಫಲಂ । 
ಸರ್ವಂ ತತ್ತ್ವನುಹಂ ವಕ್ಸ್ಯ್ಯೇ ಮಂತ್ರಕೂಟಾದ್ಯಮೇವ ಹಿ ॥ ೧೮ ॥ 
ಮಾಯಾಬೀಜಂ ತು ಸರ್ವೇಷಾಂ ಕೂಬಾನಾಂ ಹಿ ವರಾನನೇ । 
ಸರ್ವೇಷಾಂ ಮಧ್ಯಮೋ ನರ್ಣೋ ಬಿಂದುನಾದಾದಿಶೋಭಿತಃ ॥ ೧೯॥ 





೧೩. ಪಾರ್ವತಿಯು ಹೇಳಿದಳು :-"" ಸರ್ವಸ್ವರೂಸನೂ, ವೃಷಭಧ್ವಜನೂ, 
ಜಟಾಧಾರಿಯೂ ಆಗಿರುವ ಓ ನೀಲಕಂಠ! ನಿನಗೆ ನಮಸ್ಕಾರವು. 

೧೪-೧೫. ದಯಾಸಮುದ್ರನೂ, ಕಾಲರೂಪನೂ ಆಗಿರುವ ನಿನಗೆ ವಂದನೆ.” 
ಪಾರ್ವತಿಯು ಕೋಮಲವಾದ ಈ ವಾಕ್ಯಗಳಿಂದ ದಯಾಲುವಾದ ಶಿವನನ್ನು 
ಸಂತೋಷಗೊಳಿಸಿ ಸಾಷ್ಟಾಂಗಪ್ರಣಾಮಮಾಡಿ ಎರಡು ಕಾಲುಗಳನ್ನೂ ಹಿಡಿದು 
ಕೊಳ್ಳಲು ದಯಾಳುವಾದ ಅವನು ಇಂತೆಂದನು. 

೧೬. "ಮಂಗಳಕರಳೆ! ನನ್ನನ್ನು ಏಕೆಸ್ತುತಿಸುತ್ತಿರುವೆ? ನಿನ್ನ ಇಷ್ಟಾರ್ಥ 
ವನ್ನು ಬೇಡಿಕೊ.?? 

೧೭. ಪಾರ್ವತಿಯು ಕೇಳುತ್ತಾಳೆ: ನಾಥ! ನಾನು ನಿನ್ನ ಸತಿಯಾಗಿ 
ದ್ದರೆ ಆ ಕೂಟಮಂತ್ರವನ್ನು ಧ್ಯಾನಸಹಿತವಾಗಿಯೂ, ಸಂದೇಹನಿಲ್ಲದಂತೆಯೂ 
ಸಂಪೂರ್ಣವಾಗಿಯೂ ನನಗೆ ತಿಳಿಯಹೇಳು. 

೧೮. ಶ್ರೀರುದ್ರನು ಹೇಳುತ್ತಾನೆ: “ದೇವಿ! ನಾನು ನಿನಗೆ ಸಮಾಹಾರ 
ದಿಂದುಂಟಾಗುವ ಫಲವನ್ನೂ, ಮಂಶ್ರಕೂಟವೇ ಮೊದಲಾಗುಳ್ಳ ತತ್ತ್ವವನ್ನೂ 
ಹೇಳುವೆನು. 

೧೯-೨೨, ಸಕಲ ಕೂಟಗಳಿಗೂ ಮಧ್ಯಮ ವರ್ಣವು ಬಿಂದು, ನಾದಾದಿ 


೪ ಶ್ರೀ ಸ್ಕಾಂದಮ ಹಾಪುರಾಣಂ 


ವಹ್ನಿಜೀಜಂ ಸವಾತಂ ಚ ಕೂರ್ಮುಬೀಜಸಮನ್ವಿತಂ 1 

ಆದಿತ್ಯಪ್ರಭವಂ ಬೀಜಂ ಶಕ್ತಿಬೀಜೋದ್ಭನಂ ಸದಾ ॥ ೨೦॥ 
ಏತತ್ಕೂಟಂ ಚಾಂದ್ಯಬೀಜಂ ದ್ವಿತೀಯಂ ಚ ನಿಭೋರ್ಮತಂ | 
ತೃತೀಯಂ ಚಾಂಗ್ನಿಬೀಜಂ ತು ಸಂಯುಕ್ತಂ ಬಿಂದುನೇಂದುನಾ ॥ ೨೧! 
ಚತುರ್ಥಂ ಯುಕ್ತಂ ಶೇಷೇಣ ಬ್ರಹ್ಮಬೀಜಮೃಸಿಸ್ತಥಾ | 


ಪಂಚಮಂ ಕಾಲಬೀಜಂ ಚ ಷಷ್ಮಂ ಪಾರ್ಥಿವಬೀಜಕಂ ॥ ೨೨ ॥ 
ಸಪ್ತಮೇ ಚಾಂಷ್ಟಮೇ ಬಾಹ್ಯಂ ನೃಸಿಂಹೇನ ಸಮನ್ವಿತಂ । 

ನನನೇ ದ್ವಿತೀಯಮೇಕಂ ಚ ದಶನೋ ಚಾಸ್ಟಕೂಟಿಕಂ ॥ ೨೩ ॥ 
ವಿಪರೀತಂ ತಯೋರ್ಬೀಜಂ ರುದ್ರಾಕ್ಟೇ ವರಚಾರಿಣಿ । 

ಚತುರ್ದಶೇ ಚತುರ್ಥ್ಯರ್ಥಂ ಪೃಥ್ವೀಬೀಜೇನ ಸಂಯುತಂ ॥ ೨೪ ॥ 
ಕೂಬಾಃ ಶೇಷಾಂಕ್ಟರಾಃ ಕೇಜಿದ್ರಕ್ಸಿತಾ ಮೇನಕಾತ್ಮಜೇ । 

ಸ ಪಪಾತ ಯದೋರ್ವ್ಯಾಂ ಹಿ ಶಿವಪತ್ನೀ ತದಾ ನೃಪ ॥ ೨೫ ॥ 
ರಾಮೇಣಾಶ್ವ್ಚಾಸಿತಾ ತತ್ರ ಪ್ರಹಸಂಸ್ಕ್ರಿಪುರಾಂಂತಕಃ | 

ಭದ್ರೇ ಯಸ್ಮಾತ್ರ್ವಯಾಪನ್ನಂ ಜೀನಶಕ್ತಿರ್ಭವಿಷ್ಯತಿ ॥ ೨೬ ॥ 
ಮಾರಣೇ ಮೋಹನೇ ನಶ್ಯೇ ಆಕರ್ಷಣೇ ಚ ಕ್ಪೋಭಣೇ । 

ಯಂ ಯಂ ಕಾಮುಯತೇ ನೂನಂ ತತ್ತತ್ಸಿದ್ದಿರ್ಭವಿಷ್ಯತಿ ॥ ೨೭॥ 


ಇತಿ ಶ್ರುತ್ವಾ ತದಾ ದೇವೀ ದುಷ್ಟಚಿತ್ತಾ ಶುಚಿಸ್ಮಿತಾ | 
ಕೂಟಶೇಷಾಸ್ತತೋ ವೀರಾಃ ಪ್ರೋಕ್ತಾಸ್ತಸ್ಕೈ ತು ಶಂಭುನಾ ॥ ೨೮॥ 


ಕೆಂ 





ಗಳಿಂದ ಪ್ರಕಾಶಮಾನವಾದುದು. ಮಾಯಾ, ವಹ್ನಿ, ವಾತ, ಕೂರ್ಮ, 
ಆದಿತ್ಯ, ಶಕ್ತಿಬೀಜಗಳೊಂದಾಗಿ ಈ ಕೂಟದ ಮೊದಲನೆ ಬೀಜವಾಗುವುದು. 
ವಿಭುಬೀಜವು ಎರಡನೆಯದು. ಇಂದುಬಿಂದುವಿನಿಂದ ಸಹಿತವಾದ ಅಗ್ನಿ 
ಬೀಜವು ಮೂರನೆಯದು. ಶೇಷ, ಬ್ರಹ್ಮ, ಖುಷಿ ಬೀಜವು ನಾಲ್ಕನೆಯದು. 
ಕಾಲಬೀಜವು ಐದನೆಯದು. ಪಾರ್ಥಿವಬೀಜವು ಆರನೆಯದು.” 

೨೩-೨೫. ಶಿವನು ಹೀಗೆ ಇನ್ನೂ ಕೆಲವು ಬೀಜಾಕ್ಸರಗಳನ್ನು ಹೇಳಿ 
«« ಕೆಲವು ಅಕ್ಬರಗಳನ್ನು ನಿನಗೆ ಹೇಳುವುದಿಲ್ಲವೆಂ''ದನು. ಆಗ ಪಾರ್ವತಿಯು 
ನೆಲದಮೇಲೆ ಬಿದ್ದು ಆತನಿಗೆ ವಂದಿಸಿದಳು. ಸ 

೨೬-೨೭. ಹರನು ನಗುತ್ತ ಅವಳನ್ನು ಸಮಾಧಾನಗೊಳಿಸಿ ನೀನು 
ಈ ರೀತಿಯೆಣಿಸಿದುದರಿಂದ ನಿನ್ನ ಅಪೇಕ್ಸೆಯಂತೆ ಕೊಲ್ಲುವುದು, ಮೋಹಗೊಳಿ 
ಸುವುದು, ವಶಮಾಡಿಕೊಳ್ಳುವುದು, ಸೆಳೆಯುವುದು, ಕ್ಸೋಭೆಗೊಳಿಸುವುದು-- 
ಇವುಗಳಲ್ಲಿ ಮಂತ್ರಸಿದ್ಧಿಯನ್ನು ಪಡೆಯುವೆ? ಎಂದನು. 

೨೮-೨೯. ಈ ಮಾತನ್ನು ಕೇಳಿ ದುಷ್ಟಮನಸ್ಸುಳ್ಳ ಆ ದೇವಿಯು ನಕ್ಕಳು. 


ಲತ ಪಿಂಕೋರಧ್ಯಾಯಗ ೨೩೫ 


ಉವಾಚ ಚ ಕೃಸಾಸಿಂಧುಃ ಸಾಧಯಸ್ವ ಯಥಾವಿಧಿ । 

ಸೈಲಾಸಾತ್ತು ಹರಸ್ತತ್ರ ಧರ್ಮಾಃರಣ್ಯಂ ಗತೋ ಭೃಶಂ ॥೨೯॥ 
ಜ್ಞಾತ್ವಾ ದೇನೀ ಯಯೌ ತತ್ರ ಯತ್ರಾಃಸೌ ವೃಷಭಧ್ಯಜಃ ! 
ತತ್ಕೃಣಾತೃತಿತೋ ಭೂಮೌ ಧರ್ಮಾಂರಣ್ಯೇ ನೃಪೋತ್ತಮ ॥೩ಂ೦॥ 
ಜಟಾಚಂದ್ರೋರಗಾಃ ಶೂಲಂ ವೃಷಭಾದ್ಯಾಯುಧಾನಿ ವೈ । 
ಮುಂಡಮಾಲಾ ಚ ಕೌಪೀನಂ ಕಪಾಲಂ ಬ್ರಹ್ಮಣಸ್ತು ವೈ ॥೩೧॥ 
ಗಂತಾ ಗಣಾಶ್ಚ ಸರ್ವತ್ರ ಭೂತಪ್ರೇತಾ ದಿಶೋದಶ । 

ವಿಸಂಜ್ಞಂ ಚ ಸ್ವಮಾತ್ಮಾನಂ ಜ್ಞಾತ್ಚಾ ದೇವೋ ಮಹೇಶ್ವರಃ ॥ ೩೨॥ 
ಸ್ವೇದಜಾಸ್ತು ಸಮುತ್ಪನ್ನಾ ಗಣಾಃ ಕೂಟಾದಯಸ್ತಥಾ । 


ಪಂಚಕೂಟಾನ್ಸಮುತ್ತಾದ್ಯ ತಸ್ಮಾತ್ತದಾಧಮೂಲಿನೇ 1 ೩೩॥ 
ಸಾಧಕಾಸ್ತೇ ಮಹಾರಾಜ ಜಪಹೋಮಪರಾಯಣಾಃ । 

ಪ್ರೇತಾಸನಾಸ್ತು ತೇ ಸರ್ವೇ ಕಾಲಕೂಟೋಪರಿ ಸ್ಥಿತಾಃ ॥ ೩೪॥ 
ಕಥಯಂತಿ ಸ್ವಮಾತ್ಮಾನಂ ಯೇನ ನೋಕ್ಸಃ ಏನಾಕಿನಃ । 

ತತಃ ಕಷ್ಟಸಮಾನಿಷ್ಟಾ ಗೌರೀ ವಹ್ನಿಭಯಾತುರಾ 1೩೫॥ 
ಸಭಾಜಿತಃ ಶಿನಸ್ತೈಶ್ಚ ಗೌರೀ ಹ್ರೀಣಾತ್ಮಥೋಮುಖೀ । 

ತಪಸ್ತೇಸೇ ಚ ತತ್ರಸ್ಥಾ ಶಂಕರಾದೇಶಕಾರಿಣೇ 1 ೩೬॥ 


ಶಂಕರನು ಅವಳಿಗೆ ಉಳಿದ ಕೂಟಮಂತ್ರಗಳ ರಹಸ್ಯವನ್ನು ತಿಳಿಸಿ ಕ್ರಮವರಿತು 
ಸಾಧಿಸೆಂದು ಹೇಳಿ ತಾನು ಕೈಲಾಸದಿಂದ ಧರ್ಮಾರಣ್ಯಕ್ಕೆ ತೆರಳಿದನು. 

೩೦. ದೇವಿಯು ಇದನ್ನು ತಿಳಿದು ಶಿವನೆಡೆಗೆ ಹೋದಳು. ಕೂಡಲೆ 
ಮಹೇಶ್ವರನು ಭೂಮಿಯಲ್ಲಿ ಬಿದ್ದನು. 

೩೧-೩೩. ಜಟೆ, ಚಂದ್ರ, ಸರ್ಪ, ಶೂಲ, ವೃಷಭ, ಆಯುಧಗಳು, 
ಮುಂಡಮಾಲೆ, ಕೌಪೀನ, ಬ್ರಹ್ಮಕಪಾಲ, ಗಣಗಳು, ಭೂತಪ್ರೇತಗಳು ಇವು 
ದಶದಿಕ್ಕುಗಳಿಗೆ ಹಾರಿಹೋದುವು. ಶಂಕರನು ನಿಶ್ಚೇತನನಾದ ತನ್ನನ್ನು ತಿಳಿದು 
ಬೆವರಿನಿಂದ ಹುಟ್ಟುವ ಐದು ಕೂಟಗಣಗಳನ್ನು ಸೃಷ್ಟಿಸಿದನು. 

೩೪-೩೫. ಕಾರ್ಯಸಾಧಕರಾದ ಆ ಗಣಗಳು ಕಾಲಕೂಟ ವಿಷದಮೇಲೆ 
ಪ್ರೇತಾಸನಗಳಲ್ಲಿ ಕುಳಿತು ಜಪಹೋಮನಿರತರಾಗಿ ತಮ್ಮಲ್ಲಿಯೇ ಶಿವನಿಗೆ 
ಈ ಆಪತ್ತು ಹೇಗೆ ಪರಿಹಾರವಾಗುವುದೆಂದು ಯೋಚಿಸಿದರು. ಅನಂತರ 
ಗೌರಿಯು ಬೆಂಕಿಯ ಭಯದಿಂದ ಫೀಡಿತಳಾಗಿ ಕಷ್ಟ ಪಟ್ಟಳು. 

೩೬. ಆ ಗಣಗಳು ಶಿವನನ್ನು ಸತ್ಯರಿಸಿದುವು. ಗೌರಿಯು ನಾಚಿಕೆಗೊಂಡು 
ತಲೆ ತಗ್ಗಿಸಿ ಅಲ್ಲಿದ್ದು ಶಂಕರನ ಅಪ್ಪಣೆಯನ್ನು ನೆರವೇರಿಸುವವಳಾಗಿ ತಪಸ್ಸ 
ನ್ಭಾಚರಿಸಿದಳು. 


ತಿಷ ಶ್ರೀ ಸ್ಕಾಂದವುಹಾಪುಕಾಣಂ 


ಪಂಚಾಗ್ನಿಸೇವನಂ ಕೃತ್ವಾ ಧೂಮ್ರಪಾನಮಧಥೋಮುಖೀ | 


ಕೂಟಬಾಃಕ್ಬರೈಃ ಸ್ತುತಸ್ತೈಸ್ತು ತೋಷಿತೋ ನೃಷಭಧ್ಯ್ಮಜಃ 1 ೩೭॥ 
ಧರಾಕ್ಟೇತ್ರನಿಡಂ ರಾಜನ್ಸಾಪಘ್ನುಂ ಸರ್ವಕಾಮದಂ । 

ದೇವಮಜ್ಜ ನಕಂ ಶುಭ್ರಂ ಸ್ಥಾನಕೇಂಸ್ಮಿನ್ಸಿರಾಜತೇ ॥ ೩೮ ॥ 
ಆಶ್ವಿನೇ ಕೃಷ್ಣಪಕ್ಸ್ನೇ ಚ ಚತುರ್ದಶ್ಯಾಂ ದಿನೇ ನೃಪ । 

ತತ್ರ ಸ್ನಾತ್ವಾ ಚ ಪೀತ್ವಾ ಚ ಸರ್ವಪಾಪೈಃ ಪ್ರಮುಚ್ಯತೇ Warn 
ಪೂಜಯಿತ್ವಾ ಚ ದೇನೇಶಮುಪೋಷ್ಯ ಚ ನಿಧಾನತಃ । 

ಶಾಕಿನೀ ಡಾಕಿನೀ ಚೈನ ನೇತಾಲಾಃ ಪಿತರೋ ಗ್ರಹಾಃ ॥೪೦॥ 
ಗ್ರಹಾ ಧಿಷ್ಮ್ಯಾ ನ ಪೀಡ್ಯಂತೇ ಸತ್ಯಂ ಸತ್ಯಂ ನರಾನನೇ । 

ಸಾಂಗಂ ರುದ್ರಜಪಂ ತತ್ರ ಕೃತ್ವಾ ಪಾಪೈಃ ಪ್ರಮುಚ್ಯತೇ nO 
ನಶ್ಯಂತಿ ತ್ರಿನಿಧಾ ರೋಗಾಃ ಸತ್ಯಂ ಸತ್ಯಂ ಚ ಭೂಪತೇ । 

ಏತತ್ಸರ್ವಂ ಮಯಾಖ್ಯಾತಂ ದೇವಮಜ್ಞನಕಂ ಶೃಣು ॥ ೪೨ ॥ 
ಅಶ್ವನೇಧಸಹಸ್ಸೆಸ್ತು ಕೃತೈಸ್ತು ಭೂರಿದಕ್ಷಿಣೈಃ । 

ತತ್ಸಲಂ ಸಮವಾಸ್ನೋತಿ ಶ್ರೋತಾ ಶ್ರಾನಯಿತಾ ನರಃ ॥ ೪೩॥ 


೩೭. ಪಂಚಾಗ್ನಿ ಮಧ್ಯದಲ್ಲಿ ಹೊಗೆಯನ್ನು ಕುಡಿಯುತ್ತ ಅಧೋಮುಖ 
ಳಾಗಿ ಆ ಕೂಟಾಕ್ಸರಗಳಿಂದ ಶಿವನನ್ನು ದೇವಿಯು ಸ್ತುತಿಸಿ ಸಂತೋಷಗೊಳಿ 
ಸಿದಳು. 

೩೮. ಈ ಧರಾಕ್ಷೇತ್ರವು ಪಾಸವನ್ನು ನೀಗಿಸುವುದೂ, ಸಕಲೇಷ್ಟಾರ್ಥ 
ಗಳನ್ನು ಕೊಡುವುದೂ ಆಗಿರುವುದು. ಇಲ್ಲಿ ದೇವಮಜ್ಞನಕನೆಂಬ ಶುದ್ಧವಾದ 
ಸರಸ್ಸು ಕಂಗೊಳಿಸುತ್ತಿದೆ. 

೩೯. ಆಶ್ವಯುಜಮಾಸದ ಕೃಷ್ಣಪಕ್ಸ ಚತುರ್ದಶಿಯ ದಿನ ಇಲ್ಲಿ ಮಿಂದು 
ನೀರನ್ನು ಪಾನಮಾಡಿದವನು ಸಕಲ ಪಾಸಮುಕ್ತನಾಗುವನು. 

೪೦-೪೨. ದೇವೇಶನಾದ ಶಂಕರನನ್ನು ಉಪವಾಸವಿದ್ದು ವಿಧಿಯಂತೆ 
ಪೂಜಿಸಿದವನಿಗೆ ನಿಜವಾಗಿಯೂ ಶಾಕಿನೀಡಾಕಿನ್ಯಾದಿ ಗ್ರಹಗಳ ಪೀಡೆಯು 
ಸಂಭವಿಸುವುದಿಲ್ಲ. ಅಂಗನ್ಯಾಸ ಸಹಿತವಾಗಿ ರುದ್ರಜಪವನ್ನು ಮಾಡಿದವನು 
ಸಕಲ ಪಾಪಮುಕ್ತನಾಗುವನು. ಮತ್ತು ಅವನ ತ್ರಿವಿಧ ರೋಗಗಳೂ ಮಾಯ 
ವಾಗುವುವು. ಹೀಗೆ ದೇವಮಜ್ಜನಕ ತೀರ್ಥದ ವಿಷಯವನ್ನು ಹೇಳಿರುವೆನು. 

೪೩. ಈ ಉಪಾಖ್ಯಾನವನ್ನು ಕೇಳಿದ ಮತ್ತು ಹೇಳಿದ ಮಾನವನು ಬಹು 
ವಾಗಿ ದಕ್ಸಿಣೆಗಳನ್ನಿತ್ತು ನೆರವೇರಿಸಿದ ಸಾವಿರಾರು ಅಶ್ಚಮೇಧಯಾಗಗಳ 
ಫಲವನ್ನು ಪಡೆಯುವನು. 


ವಿಂಶೋರಿಧ್ಯಾಯಃ ೨೩೬೭ 


ಅಪುತ್ರೋ ಲಭತೇ ಪುತ್ರಾನ್ನಿರ್ಧನೋ ಧನಮಾಪ್ಲುಯಾತ್‌ । 


ಆಯುರಾರೋಗ್ಯಮೈಶ್ಚರ್ಯಂ ೪ಭತೇ ನಾಂತ್ರ ಸಂಶಯಃ ॥ ೪೪ ॥ 
ಮನೋವಾಕ್ಕಾಯಜನಿತಂ ಪಾತಕಂ ತ್ರಿನಿಧಂ ಚ ಯತ್‌ । 
ತತ್ಸರ್ವಂ ನಾಶಮಾಯಾತಿ ಸ್ಮರಣಾತ್ಮೀರ್ತನಾನ್ಸೃಸ ॥ ೪೫॥ 


ಧನ್ಯಂ ಯಶಸ್ವ್ಯಮಾಯುಷ್ಯಂ ಸುಖಸಂತಾನದಾಯಕಂ | 

ಮಾಹಾತ್ಮ್ಯಂ ಶೃಣುಯಾದ್ದತ್ಸ ಸರ್ವಸೌಖ್ಯಾನ್ಮಿತೋ ಭವೇತ್‌ ॥ ೪೬॥ 
ಸರ್ವತೀರ್ಥೇಷು ಯತ್ಪುಣ್ಯಂ ಸರ್ವದಾನೇಷು ಯತ್ಸಲಂ | 
ಸರ್ವಯಜ್ಹ್ಜೈಶ್ಚ ಯತ್ಪುಣ್ಯಂ ಜಾಯತೇ ಶ್ರವಣಾನ್ಸೃಪ ॥೪೭॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾತರಣ್ಯ ಮಾಹಾತ್ಮ್ಯೇ "" ಧರಾಕ್ಸೇತ್ರ 
ವರ್ಣನಂ'' ನಾಮ ವಿಂಶೋ$ಧ್ಯಾಯಃ 


ಲಲ, ಮಕ್ಕಳಿಲ್ಲದವನು ಮಕ್ಕಳನ್ನೂ, ಧನನಿಲ್ಲದವನು ಧನವನ್ನೂ, 
ಆಯುಸ್ಸು, ಆರೋಗ್ಯ ಐಶ್ವರ್ಯಗಳನ್ನೂ ಪಡೆಯುವನು; ಸಂದೇಹವಿಲ್ಲ. 

೪೫. ಈ ಧರಾಕ್ಷೇತ್ರವನ್ನು ಸ್ಮರಿಸುವುದರಿಂದಲೂ ಅದರ ಮಾಹಾತ್ಮ್ಯೆ 
ಯನ್ನು ಹೇಳುವುದರಿಂದಲೂ ಮನಸ್ಸು, ಮಾತು, ದೇಹಗಳಿಂದುಂಟಾದ 
ತ್ರಿನಿಧ ಪಾಪವು ನಾಶವಾಗುವುದು. 

೪೬. ಮಗು! ಧನ, ಕೀರ್ತಿ, ಆಯುಷ್ಯ, ಸೌಖ್ಯ ಸಂತತಿಗಳನ್ನೀಯುವ 
ಈ ಮಾಹಾತ್ಮ್ಯೆಯನ್ನು ಕೇಳಿದವನು ಸಕಲ ಸೌಖ್ಯಗಳನ್ನೂ ಪಡೆಯುವನು. 

೪೭. ಇದರ ಶ್ರವಣದಿಂದ ಸರ್ವತೀರ್ಥಗಳಲ್ಲಿ ಸ್ನಾನಮಾಡಿದ ಪುಣ್ಯವೂ, 
ಸಕಲ ದಾನಗಳ ಫಲವೂ, ಸಕಲ ಯಜ್ಞಗಳನ್ನು ಮಾಡಿದ ಪುಣ್ಯವೂ 
ಉಂಟಾಗುವುದು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿಶೆಯೆಂದು ಪ್ರಸಿದ್ಧವಾದ 
ಶ್ರೀ ಸ್ಯಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮದಲ್ಲಿ "" ಧರಾಕ್ಟೇತ್ರವರ್ಣನ ''ನೆಂಬ 
ಇಪ್ಪತ್ತನೆಯ ಆಧ್ಯಾಯವು ಮುಂಗಿದುದು 


॥ ಶ್ರೀಃ n 


ಅಥೈೆಕವಿಂಶೋಂಧ್ಯಾಯಃ 
ಶ್ರೀಮಾತಾಕಥಿತ ನಾಮಗೋತ್ರಸ್ರವರಕೃತ ದೇವ್ಯವಟಂಕ ಕಥನಂ 
ವ್ಯಾಸ ಉವಾಚ ;-- 
ತಯಾ ಚೋತ್ಪಾದಿತಾ ರಾಜಂಛರೀರಾತ್ಯುಲದೇವತಾಃ | 
ಭಟ್ಟಾರಿಕಾ ೧ ತಥಾ ಛತ್ರಾ ೨ ಓನಿಕಾ ೩ ಜ್ಞಾನಜಾ ತಥಾ೪ ॥೧॥ 
ಭದ್ರಕಾಲೀಚ೫ ಮಾಹೇಶೀ ೬ ಸಿಂಹೋರೀ೭ ಧನನುರ್ದನೀಲ । ಗಾತ್ರಾ 
೯ ಶಾಂತಾ ೧೦ ಶೇಷದೇವೀ ೧೧ ವಾರಾಹೀ ೧೨ ಭದ್ರಯೋಗಿನೀ ೧೩॥೨॥ 
ಯೋಗೇಶ್ವರೀ೧೪ ಮೋಹಲಜ್ಜಾ ೧೫ ಕುಲೇಶೀ೧೬ ಶಕುಲಾಚಿತಾ ೧೭ 
ತಾರಣೀ೧೮ ಕನಕಾನಂದಾ ೧೯ ಚಾಮುಂಡಾ ೨೦ ಚ ಸುರೇಶ್ವರೀ೨೧॥೩॥ 
ದಾರಭಟ್ಟಾರಿಕೇತ್ಯಾ ೨೨ ದ್ಯಾ ಪ್ರತ್ಯೇಕಾ ಶತಧಾ ಪುನಃ । 
ಉತ್ಸನ್ನಾಃ ಶಕ್ತಯಸ್ತಿಸ್ರಸ್ತಸ್ಮಿನ್ನಾನಾರೂಪಾನ್ವಿತಾಃ ಶುಭಾಃ । 
ಅತಃ ಪರಂ ಪ್ರವಕ್ಸ್ಟ್ಯಾಮಿ ಪ್ರವರಾಣ್ಯಥ ದೇವತಾಃ Me 
ಔಪಮನ್ಯವಸ ಗೋತ್ರ ಪ್ರವರ ೩ ಗೋತ್ರ ದೇವ್ಯಾಗಾತ್ರಾ ವಸಿಷ್ಠ ೧ 
ಭರದ್ವಾಜ ೨ ಇಂದ್ರಪ್ರಮದ ಕಾಶ್ಯಪಸಗೋತ್ರ ಶಗೋತ್ರ ದೇವ್ಯಾ 
ಜ್ಞಾನಜಾ ೨ ಪ್ರವರ ೩ ಕಾಶ್ಯಪಃ ಅನತ್ಸಾರಃ ೨ ರೈಭ್ಯ8 ೩ ಮಾಂಡವ್ಯ 
ಸಗೋತ್ರ ೩ ಗೋತ್ರಜಾದಾಭದಾರಿಕಾ ೩ ಪ್ರವರ ೫ ಭಾರ್ಗವಚ್ಯವನಾ 
ಕನ್ನಡದ ಅನುವಾದ 
ಶ್ರೀಮಾತಾಕಥಿತ ನಾಮಗೋತ್ರಪ್ರವರಕೃತ ಜೇವ್ಯವಟಂಕ ಕಥನ 

೧-೪. ಆ ಶ್ರೀಮಾತೆಯು ತನ್ನ ಶರೀರದಿಂದ ೧ ಭಟ್ಟಾರಿಕೀ ೨ ಛತ್ರಾ 
೩ ಓವಿಕಾ ೪ ಜ್ಞಾನಜಾ ೫ ಭದ್ರಕಾಳೀ ೬ ಮಾಹೇಶೀ ೭ ಸಿಂಹೋರೀ ೮ ಧನ 
ಮರ್ದನೀ ೯ ಗಾತ್ರಾ ೧೦ ಶಾಂತಾ ೧೧ ಶೇಷದೇವೀ ೧೨ ವಾರಾಹೀ ೧೩ ಭದ್ರ 
ಯೋಗಿನೀ ೧೪ ಯೋಗೇಶ್ವರೀ ೧೫ ಮೋಹಲಜ್ಜಾ ೧೬ ಕುಲೇಶೀ .೧೬ 
ಶಕುಲಾಚಿತಾ ೧೮ ತಾರಣೀ ೧೯ ಕನಕಾನಂದಾ ೨೦ ಚಾಮುಂಡಾ ೨೧ 
ಸುರೇಶ್ವರೀ ೨೨ ದಾರಭಟ್ಟಾರಿಕಾ ಮೊದಲಾದ ದೇವಿಯರನ್ನು ಸೃಜಿಸಿದಳು. 
ಇವರಲ್ಲಿ ಒಬ್ಬೊಬ್ಬರಿಗೂ ನಾನಾ ರೂಪವುಳ್ಳ ನೂರು ಮಂದಿ ದೇವತೆಗಳು 
ಹುಟ್ಟಿದರು. ಇನ್ನು ಮುಂದೆ ಪ್ರವರ ಮತ್ತು ದೇವತೆಗಳನ್ನು ಹೇಳುವೆನು. 

೫. ಔಸಮನ್ಯವಗೋತ್ರರಿಗೆ ಗೋತ್ರದೇನೀ-ಗಾತ್ರಾ, ಪ್ರವರ-ವಸಿಷ್ಮ, 
ಭರದ್ವಾಜ. ಇಂದ್ರಪ್ರಮದಕಾಶ್ಯಸಸಗೋತ್ರದವರಿಗೆ ಗೋತ್ರದೇವೀ- 
ಜ್ಞಾನಜಾ, ಪ್ರವರ-ಕಾಶ್ಯನ, ಅವತ್ಸಾರ, ರೈಭ್ಯ. ಮಾಂಡವ್ಯಗೋತ್ರದವರಿಗೆ 
ಗೋತ್ರದೇನೀ-ದಾರಭಟ್ಟಾರಿಕಾ, ಪ್ರವರ-ಭಾರ್ಗವ, ಚ್ಯವನ, ಅತ್ರಿ, ಅನೀ, 


ಏಕವಿಂಶೋ$ಧ್ಕಾಯಃ ೨೩೯ 


ಅತ್ರಿಅವೀ ಜಮದಗ್ಗಿಃ ೫ ಕುಶಿಕ ಸಗೋತ್ರಃಜಾ ತಾರಿಣೀ ೬ ಮಹಾಬಲಾ 
ಪ್ರ ನರ ೩ ವಿಶ್ವಾಮಿತ್ರ ದೇವರಾಜ ಉದ್ದಾ ಲಕ ೬ ಶೌನಕಸಗೋತ್ರ ೭ 
ಗೋತ್ರ ದೇನೀ ೭ ಶಾಂತಾ ಪ್ರವರ ೩ ಭಾರ್ಗವಾಣೈ ನಹೋತ್ರಗಾತ್ಸ ೯ನುದ 
೩ ಕ್ಸ ಷ್ಲಾತ್ತೆ ತ್ರೇಯಸಗೋತ್ರೆ, ನೀಗೋತ್ರ ದೇವೀ ಭದ್ರ ಯೋಗಿನೀ ೮ 
ಪ್ರ ನರೆ ೩ ತ್ತೆ €ಯ ಅರ್ಚನಾನಸಶ್ಯಾನಾಶ್ವ ೩ ಗಾರ್ಗ್ಯಾಯಜಸಗೋತ್ರ 
ಗೋತ್ರ ಜಾ ಶಾಂತಾ ಪ್ರವರ ೫ ಭಾರ್ಗವಚ್ಯನನ ಆಪ್ನವಾನ್‌ ಅನೀಜಮ 
ದಗ್ಗಿಕ ೧೦ ಗಾರ್ಗಾಮಣ ಗೋತ್ರ ಗೋತ್ರಜಾ ಜ್ಞಾನಜಾ ಪ್ರವರ ೫ 
ಕಾಶ್ಯಪ ಅನತ್ಸಾರಶಾಂಡಿಲ ಅಸಿತನೇವಲ ೧೧ ಗಾಂಗೇಯಸಗೋತ್ರ 
ದೇವಾಶಾಂತಾ ದ್ವಾರವಾಸಿನೀ ಪ್ರವರ ೩ ಗಾರ್ಗ್ಯಗಾರ್ಗಿಶಂಖಲಿಖಿತ ೧೨ 
ಪೈಂಗ್ಯಸಗೋತ್ರ ಜಾ ಜ್ಞಾ ನಜಾ `ಕೇಷಲಉಧಪು ವರ ಆಂಗಿರಸ ಆಂಬರೀಷ 
ಯೌವೆನಾಶ್ವ ನ ವತ್ಸ ಸಗೋತ್ರ ಗೋತ್ರಜಾ ಜ್ಞಾ ನಜಾ ಪ್ರವರ ೫ 
ಭಾರ್ಗವಚ್ಯಾ ವನ ಆಸ್ಪೃವಾನ ಜಾರ್ವಪುಕೋಧಸಃ ೧೪" ವಾತ್ಸ ಸಗೋತ್ರ 
ಗೋತ್ರಜಾ ಜ್ಞಾ ನಜಾ ಪ್ರವರ ೫ ಭಾರ್ಗವಚ್ಯಾವನ ಆಪ್ಮ ವಾನ್‌ ಔರ್‌ 
ಪುಕೋಢಸಃ ೧೫ ನಾತ್ಸ $ ಸಗೋತ್ರಸ್ಯ ಗೋತ್ರ ಜಾ ಶೀಹರೀ ಪ್ರನರ ೫ 
ಭಾರ್ಗವಚ್ಯಾನನ ಆಪ್ಪ ಜಾನ್‌ ನಾರ್‌ಪುಕೋಧಸಃ ೧೬ ಶ್ಯಾ ಮಾಯನಸ 
ಗೋತ್ರಸ್ಯ ಗೋತ್ರಜಾ “ಹರೀ ಪ್ರವರ ಭಾರ್ಗವಚ್ಯಾವನ ಓಪ್ನ್ನನಾನ್‌ 
ಅನಿ ಜಮದಗ್ನಿಃ ೧೭ ಧಾರಣಸಗೋತ್ರಸ್ಯ ಗೋತ್ರಜಾ ಛತ್ರಜಾ ಪ್ರವರ ೩ 
ಜಮದಗ್ನಿ, ಕುಶಿಕಗೋತ್ರದವರಿಗೆ ಗೋತ್ರದೇವೀ-ತಾರಣೀ, ಪ್ರವರ- 
ವಿಶ್ವಾಮಿತ್ರ, ದೇವರಾತ, ಉದ್ದಾಲಕ. ಶೌನಕಗೋತ್ರದವರಿಗೆ ಗೋತ್ರದೇವೀ- 
ಶಾಂತಾ, ಪ್ರವರ-ಭಾರ್ಗವ, ಅಣೈನಹೋತ್ಪ, ಗಾರ್ತ್ಸಮದ, ಆತ್ರೇಯಸ 
ಗೋತ್ರದವರಿಗೆ ಗೋತ್ರದೇವೀ-ಭದ್ರ್ರ ಯೋಗಿನೀ, ಪ್ರವರ-ಆತ್ರೇಯ, 
ಅರ್ಚನಾನಸ, ಶ್ಯಾವಾಶ್ವ. ಗಾರ್ಗಾಯಣಗೋತ್ರದವರಿಗೆ ಗೋತ್ರದೇವೀ- 
ಶಾಂತಾ, ಪ್ರವರ-ಭಾರ್ಗವ, ಚ್ಯಾವನ, ಆಪ್ಪವಾನ, ಅನೀ, ಜಮದಗ್ನಿ. 
ಗಾರ್ಗಾಯಣಗೋತ್ರದವರಿಗೆ ಗೋತ್ರದೇವೀ ಜ್ಞಾನಜಾ, ಪ್ರವರ-ಕಾಶ್ಯಪ, 
ಅವನತ್ಸಾರ, ಶಾಂಡಿಲ, ಅಸಿತ, ದೇವಲ. ಗಾಂಗೇಯಗೋತ್ರದವರಿಗೆ ಗೋತ್ರ 
ದೇವೀ-ಶಾಂತಾ, ಪ್ರವರ-ಗಾರ್ಗಿ, ಅಗಾರ್ಗಿ, ಶಂಖ, ಲಿಖಿತ. ಪೈಂಗ್ಯಗೋತ್ರ 
ದವರಿಗೆ ಗೋತ್ರದೇನೀ-ಜ್ಞಾನಜಾ, ಪ್ರವರ-ಆಂಗಿರಸ, ಅಂಬರೀಷ, 
ಯೌವನಾಶ್ವ. ವತ್ಸ ಗೋತ್ರದವರಿಗೆ ಗೋತ್ರ ದೀನೀ-ಜ್ಞಾನಜಾ, ಪ್ರವರ- 
ಭಾರ್ಗವ, "್ಯಾನನು, ಆಪ ವಾನ, ಔರ್ವ, "ಫುಕೋಡಢಸ.” ವಾತ್ಸಗೋತ್ರ 
ದವರಿಗೆ ಗೋತ್ರದೇನೀ-ಜ್ಞಾ 'ನಜಾ, ಪ ಪ್ರವರ-ಭಾರ್ಗವ, ಚ್ಯಾವನ, ಆಪ್ನವಾನ್‌, 
ಔರ್ವ, ಪುಕೋಧಸಃ. 'ನಾತ್ಸ್ಯಗೋತ್ರದವರಿಗೆ ಗೋತ್ರದೇವೀ-ಶೀಹರೀ, 
ಪ್ರವರ-ಭಾರ್ಗವ, ಚ್ಯಾವನ, ಆಪ್ಲುವಾನ್‌ ಔರ್ವ, ಪುರೋಧಸಃ 
ಶ್ಯಾಮಾಯನಗೋತ್ರದವರಿಗೆ ಗೋತ್ರದೇವೀ-ಶೀಹರೀ, ಪ್ರವರ-ಭಾರ್ಗವ, 


೨೪೦ ಶ್ರೀ ಸ್ಕಾಂದಮಹಾಪುರಾಣಂ 


ಅಗಸ್ತ್ಯ ದಾರ್ವಚ್ಯುತ ದಧ್ಯನಾಹನ ೧೮ ಕಾಶ್ಯಪ ಗೋತ್ರಸ್ಯ ಗೋತ್ರಜಾ 
ಚಾಮುಂಡಾ ಪ್ರವರ ೩ ಕಾಶ್ಯಪಸ್ಯಾನತ್ಸಾರ ನೈದಧ್ರುನ ೧೯ ಭರದ್ವಾಜ 
ಗೋತ್ರಸ್ಯ ಗೋತ್ರಜಾ ಪಕ್ಷಿಣೇ ಪ್ರವರ ೩ ಆಂಗಿರಸ ಬಾರ್ಹಸ್ಪತ್ಯ 
ಭಾರದ್ವಾಜ ೨೨ ಮಾಂಡವ್ಯಸಗೋತ್ರಸ್ಯ ವತ್ಸಸ ವಾತ್ಸ್ಯಸ ವಾತ್ಸ್ಯಾಯನ. 
ಸ ೪ ಸಾಮಾನ್ಯಲೌಗಾಕ್ಸಸಗೋತ್ರಸ್ಯ ಗೋತ್ರಜಾ ಭದ್ರಯೋಗಿನೀ 
ಪ್ರವರ ೩ ಕಾಶ್ಯಪ ವಸಿಷ್ಠ ಅನತ್ಸಾರ ೨೦ ಕೌಶಿಕ ಸಗೋತ್ರಸ್ಯ ಗೋತ್ರಜಾ 
ಪಕ್ಸಿಣೀ ಪ್ರವರ ೩ ವಿಶ್ವಾಮಿತ್ರ ಅಥರ್ವ ಭಾರದ್ವಾಜ ೨೧ ಸಾಮಾನ್ಯ 
ಪ್ರನರ ೧ ಪೈಂಗ್ಯಸ ಭರದ್ವಾಜ ೨ ಸಮಾನ ಪ್ರನರಾ ೨ ಲೌಗಾಕ್ಸ ಸ 
ಗಾರ್ಗ್ಯಾಯನಸ ಕಾಶ್ಯಪ ಕಶ್ಯಸ ೪ ಸಮಾನ ಪ್ರವರ ೩ ಕೌಶಿಕ 
ಕುಶಿಕಸಾಃ ೨ ಸಮಾನ ಪ್ರವರಃ ೪ ಔಪಮನ್ಯು ಲೌಗಾಕ್ಸಸ ೨ ಸಮಾನ 
ಪ್ರವರಾಃ ೫. 
ಯಾವತಾಂ ಪ್ರವರೇಷ್ಟೇಕೋ ನಿಶ್ವಾನಿತ್ರೋನುವರ್ತತೇ । 
ನ ತಾವತಾಂ ಸಗೋತ್ರತ್ಪಾದ್ವಿವಾಹಃ ಸ್ಯಾತ್ಸರಸ್ಪರಂ | ॥೫॥ 
ತ್ಯಜೇತ್ಸಮಾನಪ್ರನರಾಂ ಸಗೋತ್ರಾಂ 
ಮಾತುಃ ಸ ಸಿಂಡಾಮಚಿಕಿತ್ಸ್ಯರೋಗಾಂ | 
ಅಜಾತಲೋಮ್ಮ್ನೀಂ ಚ ತಥಾ ನ ಪೂರ್ವಾಂ 
ಸುತೇನ ಹೀನಸ್ಯ ಸುತಾಂ ಸುಕೃಷ್ಣಾಂ ॥೬॥ 





ಚ್ಯಾವನ, ಆಪ್ಲುವಾನ್‌, ಅವಿ, ಜಮದಗ್ತಿ. ಧಾರಣಗೋತ್ರದವರಿಗೆ ಗೋತ್ರ 
ದೇವೀ-ಛತ್ರಜಾ, ಪ್ರವರ-ಅಗಸ್ತ್ಯ, ದಾರ್ವಚ್ಯುತ, ದಧ್ಯವಾಹನ. ಕಾಶ್ಯಪ 
ಗೋತ್ರದವರಿಗೆ ಗೋತ್ರದೇವೀ-ಚಾಮುಂಡಾ, ಪ್ರವರ-ಕಾಶ್ಯಪ, ಅವತ್ಸಾರ, 
ನೈದ್ರುವ. ಭರದ್ವಾಜಗೋತ್ರದವರಿಗೆ ಗೋತ್ರದೇವೀ-ಪಕ್ಸಿಣೀ, ಪ್ರವರ- 
ಆಂಗಿರಸ, ಬಾರ್ಹಸ್ಪೃತ್ಯ, ಭಾರದ್ವಾಜ. ಮಾಂಡವ್ಯಗೋತ್ರದವರಿಗೆ, ಪ್ರವರ- 
ವತ್ಸಸ, ವಾತ್ಸಸ, ವಾತ್ಸ್ಯಾಯನಸ. ಸಾಮಾನ್ಯಲೌಗಾಕ್ಸಗೋತ್ರದವರಿಗೆ 
ಗೋತ್ರದೇವೀ-ಭದ್ರಯೋಗಿನೀ, ಸ್ರವರ-ಕಾಶ್ಯನ, ವಸಿಷ್ಠ, ಅವತ್ಸಾರ. 
ಕಾಶಿಕಗೋತ್ರದವರಿಗೆ ಗೋತ್ರಡೇವೀ-ಪಕ್ಸಿಣೀ, ಪ್ರವರ-ವಿಶ್ವಾಮಿತ್ರ, 
ಅಥರ್ವ, ಭಾರದ್ವಾಜ. ಸಾಮಾನ್ಯ ಪ್ರವರದವರು-ಸ್ಟೆ ಗ್ಯಸ, ಭರದ್ವಾಜರು. 
ಲಾಗಾಕ್ಟಸ, ಗಾರ್ಗ್ಯಾಯನಸ, ಕಶ್ಯಪ ಕಾಶ್ಯಸರು. ಕೌಶಿಕ, ಕುಶಿಕಸರು. 
ಔನಮನ್ಯು, ಲೌಗಾಕ್ಸಸರು. ಎಷ್ಟು ಗೋತ್ರದವರ ಪ್ರವರಗಳಲ್ಲಿ ವಿಶ್ವಾಮಿತ್ರ 
ಪ್ರವರವು ಇರುವುದೊ, ಅವರು ಸಗೋತ್ರರಾದುದರಿಂದ ಅವರಲ್ಲಿ ಪರಸ್ಪರ 
ವಿವಾಹ ಮಾಡಕೂಡದು. 

೬. ಸಮಾನಪ್ರವರಳೂ, ಸಗೋತ್ರಳೂ, ತಾಯಿಯ ಸಪಿಂಡಳೂ, 
ಚಿಕಿತ್ಸೆ ಮಾಡಲಾಗದ ರೋಗವುಳ್ಳವಳೂ, ರೋಮಗಳು ಹುಟ್ಟಿದಿರುವಳೂ, 
ಇನ್ನೊಬ್ಬನಿಗೆ ಮದುವೆಯಾದವಳೂ, ಗಂಡುಮಕ್ಕಳಿಲ್ಲದವನ ಮಗಳೂ, 


ಏಕವಿಂಶೋತಧ್ಯಾಯಃ ೨೪೧ 


ಏಕ ಏನ ಖುಹಿರ್ಯತ್ರ ಪ್ರವರೇಷ್ಠನುವರ್ತತೇ 
ತಾವತ್ಸಮಾನಗೋತ್ರತ್ಸಮೃತೇ ಭೃಗ್ವಂಗಿರೋಗಣಾತ್‌ ॥೭॥ 
ಪಂಚಸು ತ್ರಿಷು ಸಾಮಾನ್ಯಾದನಿನಾಹಸ್ತಿಷು ದ್ವಯೋಃ । 
ಭೃಗೃಂಗಿರೋಗಣೇಷ್ಕೇನಂ ಶೇಷೇಷ್ಟೇಕೋನಿ ವಾರಯೇತ್‌ ॥೮॥ 
ಸಮಾನಗೋತ್ರಪ್ರವರಾಂ ಕನ್ಯಾಮೂಢ್ಹೋಪಗಮ್ಯ ಚ । 


`' ತಸ್ಯಾಮುತ್ಬಾದ್ಯ ಚಾಂಡಾಲಂ ಬ್ರಾಹ್ಮಣ್ಯಾದೇನ ಹೀಯತೇ nen 

॥ ಕಾತ್ಯಾಯನಃ I 

ಪರಿಣೀಯ ಸಗೋತ್ರಾಂ ತು ಸಮಾನಸ್ರವರಾಂ ತಥಾ । 

ತ್ಯಾಗಂ ಕೃತ್ವಾ ದ್ವಿಜಸ್ತಸ್ಯಾಸ್ತತಶ್ಹಾಂದ್ರಾಯಣಂ ಚರೇತ್‌ ॥೧೦॥ 

ಉತ್ಸೃಜ್ಯ ತಾಂ ತತೋ ಭಾರ್ಯಾಂ ಮಾತೃನತ್ಸರಿಷಾಲಯೇತ್‌ ॥ ೧೧॥ 
i ಯಾಜ್ಞ ನಲ್ಯ್ಯಃ ॥ 

ಅರೋಗಿಣೀೇಂ ಭ್ರಾತೃಮತೀಮಸಮಾನಾರ್ಷಗೋತ್ರಜಾಂ ! 

ಪಂಚಮಾತ್ಸಪ್ತಮಾದೂರ್ಥ್ಧ್ವಂ ಮಾತೃತಃ ಸಿತೃತ ಸ್ತಥಾ ॥ ೧೨॥ 


ಅಚ್ಚ ಕಪ್ಪುಬಣ್ಣದವಳೂ ಆಗಿರುವ ಕನ್ಯೆಯನ್ನು ವಿವಾಹಮಾಡಿಕೊಳ್ಳ 
ಕೂಡದು, 

ಈ ಭೃಗ್ವಂಗಿರರ ಗುಂಪನ್ನು ಬಿಟ್ಟು ಪ್ರವರಗಳಲ್ಲಿ ಒಬ್ಬನೆ ಖುಷಿಯು. 
ಅನುವರ್ತಿಸಿದರೆ ಆ ಪ್ರವರದವರೆಲ್ಲ ಸಮಾನ ಗೋತ್ರರು. 

೮. ಭೃಗ್ವಂಗಿರಗಣಗಳಲ್ಲಿಯೂ ಐದು ಪ್ರವರಗಳಲ್ಲಿ ಮೂರ" ಪ್ರವರಗಳು 
ಸಮಾನವಾಗಿದ್ದರೂ, ಮೂರು ಪ್ರವರಗಳಲ್ಲಿ ಎರಡು ಪ್ರವರಗಳು ಸಮಾನ 
ವಾಗಿದ್ದರೂ ಸಗೋತ್ರರೇ ಆಗುವರು. ಉಳಿದ ಗೋತ್ರಗಳಲ್ಲಿ ಒಂದು ಪ್ರವರವು 
ಸಮಾನವಾಗಿದ್ದರೂ ಸಗೋತ್ರರೇ ಆಗುವರು. 

೯. ಸಮಾನ ಗೋತ್ರ ಮತ್ತು ಪ್ರವರವುಳ್ಳ ಕನ್ಯೆಯನ್ನು ಮದುವೆಯಾಗಿ 
ಅವಳಲ್ಲಿ ಪುತ್ರನು ಜನಿಸಿದರೆ ಅವನು ಚಂಡಾಲನಾಗುವನು. ತಂದೆಯು 
ಬ್ರಾಹ್ಮಣ್ಯವನ್ನು ಕಳೆದುಕೊಳ್ಳುವನು. 

೧೦-೧೧. ಕಾತ್ಯಾಯನ :-ಸಗೋತ್ರಳೂ, ಸಮಾನಪ್ರವರಳೂ ಆಗಿರುವ 
ಕನ್ಯೆಯನ್ನು ಮದುವೆಮಾಡಿಕೊಂಡರೆ ಅನಳನ್ನು ಬಿಟ್ಟು ಪ್ರಾಯಶ್ಚಿತ್ತಕ್ಕಾಗಿ 
ಚಾಂದ್ರಾಯಣ ವ್ರತವನ್ನಾಚರಿಸಬೇಕು. ಅವಳನ್ನು ಬಿಟ್ಟಬಳಿಕ ಅವಳನ್ನು 
ತಾಯಿಯಂತೆ ಪಾಲಿಸಬೇಕು. 

೧೨, ಯಾಜ ನಲ್ಬ್ಯ :- ತಾಯಿಯ ಕುಲದಲ್ಲಿ ಐದನೆ ತಲೆಯ ಮೇಲೂ, 
ತಂದೆಯ ಕುಲದಲ್ಲಿ ಏಳನೆ ತಲೆಯ ಮೇಲೂ ರೋಗನಿಲ್ಲದೆಯೂ, ಸಹೋದರ 
ನುಳ್ಳವಳೂ ಆಗಿರುವ ಸಮಾನ ಗೋತ್ರಪ್ರವರದವಳಲ್ಲದ ಕನ್ಯೆಯನ್ನು ವಿವಾಹ. 
ಮಾಡಿಕೊಳ್ಳಬೇಕು. 


೨೪೨ ಶ್ರೀ ಸ್ಕಾಎದಮ ಹಾಪುರಾಣಂ 


॥ ಅಸಮಾನಪ್ರವಕೈರ್ವಿವಾಹ ಇತಿ ಗೌತಮಃ ॥ 
ಯದ್ಯೇಕಂ ಪ್ರವರಂ ಭಿನ್ನಂ ಮಾತೃಗೋತ್ರ ವರಸ್ಯ ಚ । 


ತತ್ರೋದ್ವಾಹೋ ನ ಕರ್ತವ್ಯಃ ಸಾ ಕನ್ಯಾ ಭಗಿನೀ ಭವೇತ್‌ ॥ ೧೩ ॥ 
ದಾರಾಂಗ್ನಿಹೋತ್ರಸಂಯೋಗಂ ಕುರುತೇ ಯೋಂಗ್ರಜೇ ಸ್ಥಿತೇ | 
ಪರಿನೇತ್ತಾ ಸ ವಿಜ್ಞೇಯಃ ಪರಿವಿತ್ತಿಸ್ತು ಪೂರ್ವಜಃ ॥ ೧೪ ॥ 
ಸದಾ ಸೌನರ್ಭವಾ ಕನ್ಯಾ ನರ್ಜನೀಯಾ ಕುಲಾಂಧಮಾ | 

ನಾಚಾದತ್ತಾ ಮನೋದತ್ತಾ ಕೃತಕೌತುಕಮಂಗಲಾ ॥ ೧೫ ॥ 
ಉದಕಸ್ಪರ್ಶಿತಾ ಯಾ ಚಯಾ ಚ ಪಾಣಿಗೃಹೀತಕಾ 1 

ಅಗ್ನಿಂ ಪರಿಗತಾಯಾ ಚ ಪುನರ್ಭೂಃ ಪ್ರಸನಾ ಚ ಯಾ ॥ ೧೬ ॥ 
ಇತ್ಯೇತಾಃ ಕಾಶ್ಯಸೇನೋಕ್ತಾ ದಹಂತಿಕುಲಮಗ್ನಿನತ್‌ ॥ ೧೭॥ 


ಅಥಾವಟಂಕಾಃ ಕಥ್ಯಂತೇ ಗೋತ್ರ ೧ ಪಾತ್ರ ೨ ದಾತ್ರ೩ ತ್ರಾಶಯತ್ರ ೪ 
ಲಡಕಾತ್ರ ೫ ಮಂಡಕೀಯಾತ್ರ ೬ ವಿಡಲಾತ್ರ ೭ ರಹಿಲಾ ೮ 
ಭಾದಿಲ ೯ ವಾಲೂಆ ೧೦ ಪೋಕೀಯಾ ೧೧ ವಾಕೀಯಾ ೧೨ 
ಮಕಾಲ್ಯಾ ೧೩ ಲಾಡಆ ೧೪ ಮಾಣವೇದಾ ೧೫ ಕಾಲೀಯಾ ೧೬ 
ತಾಲೀ ೧೭ ವೇಲೀಯಾ ೧೮ ಸಾವಲನ್ನೀಯಾ ೧೯ ಮೂಡಾ ೨೦ 

೧೩. ಗೌತಮರು ಅಸಮಾನಪ್ರವರದವರೊಡನೆ ವಿನಾಹಮಾಡಿಕೊಳ್ಳ 
ಬೇಕೆಂದು ಹೇಳಿರುವರು. ಕನ್ಶೈಯ ತಾಯಿಯ ಗೋತ್ರವೂ ವರನ ಗೋತ್ರವೂ 
ಒಂದಾಗಿ ಪ್ರವರ ಮಾತ್ರ ಬೇಕೆಯಾಗಿದ್ದರೆ ಆ ಕನೈೆಯು ಆ ವರನಿಗೆ 
ಸಹೋದರಿಯಾಗುವುದರಿಂದ ಅವರೀರ್ವರಿಗೆ ನಿವಾಹಮಾಡಕೂಡದು. 

೧೪. ಅಣ್ಣನಿಗೆ ಮದುವೆಯಾಗದಿರುವಾಗ ತಮ್ಮನು ಹೆಂಡತಿ ಮತ್ತು 
ಅಗ್ನಿಹೋತ್ರಗಳ ಸಂಬಂಧವನ್ನು ಮಾಡಿದರೆ ಅವನು ಪರಿವೇತ್ತ ಎಂದೂ, 
ಅಣ್ಣನು ಪರವಿತ್ತಿಯೆಂದೂ ಹೆಸರನ್ನು ಪಡೆಯುವರು. 

೧೫-೧೭. ಮಾತಿನಿಂದಲೂ, ಮನಸ್ಸಿನಿಂದಲೂ ದಾನಮಾಡಲ್ಪ ಟ್ವವಳೂ, 
ಕೌತುಕಮಂಗಳವಾಗಿರುವವಳೂ, ಉದಕಸ್ಪರ್ಶವಾದವಳೂ, ಪಾಣಿಗ್ರಹಣ 
ವಾದವಳೂ, ಸಪ್ತಪಸದಿಯಾದವಳೂ, ಪ್ರಸವಿಸಿದವಳೂ ಪುನುರ್ಭೂ ಎನ್ನಿಸಿ 
ಕೊಳ್ಳುವಳು. ಈ ನೀಚಳನ್ನು. ಪುನಃ ಮದುವೆಯಾಗಬಾರದು. ಕಾಶ್ಯಪರು 
ಹೇಳಿದ ಇವರನ್ನು ಮದುವೆಯಾದರೆ ಇವರು ವಂಶವನ್ನು ಅಗ್ನಿಯಂತೆ 
ಸುಡುವರು. 

೧೮, ಈಗ ಅವಟಂಕಗಳನ್ನು ಹೇಳುವೆನು :--ಇವು ಗೋತ್ರ, ಪಾತ್ರ, 
ದಾತ್ರ, ತ್ರಾಶಯತ್ರ, ಲಡಕಾತ್ರ, ಮಂಡಕೀಯಾತ್ರ, ವಿಡಲಾತ್ರ, ರಹಿಲಾ, 
ಭಾದಿಲ, ವಾಲೂಆ, ಪೋಕೀಯಾ, ವಾಕೀಯಾ, ಮಕಾಲ್ಯಾ, ಲಾಡಆ, 


ಏಕವಿಂಶೋರಧ್ಯಾಯಃ ೨೪೭ 


ಪೀತೂಲಾ ೨೧ ಧಿಗಮಘ ೨೨ ಭೂತಪಾದವಾದೀ ೨೩ ಹೋಪೋಯಾ. 
೨೪ ಶೇವಾರ್ದತ ೨೫ ವಪಾರ ೨೬ ವಥಾರ ೨೭ ಸಾಧಕಾ ೨೮ 


ಬಹುಧಿಯಾ ೨೯ 1 ೧೮ ॥ 
ಮಾತುಲಸ್ಯ ಸುತಾಮೂಡಢ್ವಾ ಮಾತೃಗೋತ್ರಾಂ ತಥೈವ ಚ । 
ಸಮಾನಪ್ರನರಾಂ ಚೈನ ತ್ಯಕ್ತ್ವಾ ಚಾಂದ್ರಾಯಣಂ ಚರೇತ್‌ ॥ ೧೯॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರರ್ಮಾಂರಣ್ಯಮಾಹಾತ್ಮ್ಯೇ "ಶ್ರೀಮಾತಾ 
ಕಥಿತ ನಾಮುಗೋತ್ರಪ್ರವರಕೃತ ದೇವ್ಯವಟಂಕಕಥನಂ' 
ನಾನೈೈ ಕನಿಂಶೋ$ಧ್ಯಾಯಃ 








ಮಾಣವೇದಾ, ಕಾಲೀಯಾ, ತಾಲೀ, ವೇಲಿಯಾ, ಪಾಂವಲಂಡೀಯಾ, 
ಮೂಢಾ, ಪೀತೂಲಾ, ಧಿಗಮಘ, ಭೂತಪಾದವಾದೀ, ಹೋಪೋಯಾಾ 
ತೇವಾರ್ದತ, ವಪಾರ, ವಥಾರ, ಸಾಧಕಾ, ಬಹುಧಿಯಾ ಎಂದು. 
ಇಪ್ಪತ್ತೊಂಬತ್ತು ವಿಧವು. 

೧೯, ಸೋದರಮಾವನ ಮಗಳನ್ನೂ, ತಾಯಿಯ ಗೋತ್ರದವಳನ್ನೂ, 
ಸಮಾನಪ್ರವರದವಳನ್ನೂ ಮದುನೆಮಾಡಿಕೊಂಡರೆ ಅವಳನ್ನು ಬಿಟ್ಟು ಚಾಂದ್ರಾ 
ಯಣವ್ರತವನ್ನಾಚರಿಸಬೇಕು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮ್ಯದಲ್ಲಿ 56 ಶ್ರೀಮಾತಾಕಥಿತ ನಾನುಗೋತ್ರಪ್ರವರಕೃತ ದೇವ್ಯವಟಿಂಕ 
ಕಥನ''ನೆಂಬ ಇಪ್ಪತ್ತೊಂದನೆಯ ಅಧ್ಯಾಯವು ಮುಗಿದುದು 


॥ Ben 
ಅಥ ದ್ವಾವಿಂಶೋಧ್ಯಾಯಃ 
ದೇವತಾಸ್ಥಾಷನಂ 

ಯುಧಿಷ್ಠಿರ ಉವಾಚ:- 
ಸ್ಥಾನವಾಸಿನ್ಯೋ ಯೋಗಿನ್ಯಃ ಕಾಜೇಶೇನ ನಿನಿರ್ಮಿತಾಃ । 
ಕಸ್ಮಿನ್ಸ್ಯಾನೇ ಹಿ ಕಾ ದೇವ್ಯಃ ಕೀದೃಶ್ಯಸ್ತಾ ನದಸ್ಮ ಮೇ non 

ವ್ಕಾ ಸ ಉವಾಚ :-- 
ಸರ್ನಜ್ಞೊ ಆಸಿ ಕುಲೀನೋಂಸಿ ಸಾಧು ಪೃ ಷ್ಟಂ ತ್ವಯಾಂನಘ । 
ಕಥಯಿಸ್ಯಾಮ್ಯ ಹಂ ಸರ್ವಮಖಿಲೇನ ಯುಧಿಷಿಕೆ ॥೨॥ 
ನಾನಾಭರಣಭೂಷಾಢ್ಯಾ ನಾನಾರತ್ನೋಸಶೋಭಿತಾಃ । 
ನಾನಾವಸನಸಂವೀತಾ ನಾನಾಯುಧಸಮನ್ವಿತಾಃ Han 
ನಾನಾವಾಹನಸಂಯುಕ್ತಾ ನಾನಾಸ್ಕರನಿನಾದಿನೀಃ । 
ಭಯನಾಶಾಯ ವಿಪ್ರಾಣಾಂ ಕಾಜೇಶೇನ ವಿನಿರ್ಮಿತಾಃ nen 
ಪ್ರಾಚ್ಯಾಂ ಯಾಮ್ಯಾಮುದೀಟ್ಯಾಂ ಚ ಪ್ರತೀಚ್ಯಾಂ ಸ್ಥಾಸಿತಾ ಜತಾಃ। 


$ $ 
ಆಗ ನೇಯ್ಯಾ 0 ನೈರ್ಜುತೇ ದೇಶೇ ನಾಯನ್ಯೆ ೇಶಾನಯೋಸ್ತ ಥಾ ॥೫॥ 


ಕನ್ನಡದ ಅನುವಾದ 
ದೇನತಾಸ್ಥಾಸನ 


೧. ಯುಧಿಸ್ಮಿರನು ಕೇಳುತ್ತಾನೆ:--ಬ್ರಹ್ಮಾದಿಗಳಿಂದ ನಿರ್ಮಿವಾದ ಈ 
ಕ್ಲೇತ್ರವಾಸಿಗಳಾದ ಯೋಗಿನಿಯರಲ್ಲಿ ಯಾವ ಯಾವ ದೇವಿಯರು ಎಲ್ಲೆಲ್ಲಿ 
ನೆಲೆಸಿದರೆಂಬುದನ್ನು ನನಗೆ ಹೇಳು. 

೨. ಮಾ 3ಸನು ಹೇಳುತ್ತಾನೆ :ಎಯುಧಿಸ್ಕಿ ರ! ನೀನು ಸಕಲವನ್ನರಿತವನೂ, 
ಸತ್ಯುಲಪ್ರ ಬೂ ಆಗಿರುವೆ. ಚೆನ್ನಾಗಿ ಕೇಳಿಜಿ, ನಾನು ನಿನಗೆ ಸಂಪೂರ್ಣ 
ವಾಗಿ ಹೇಳುವೆನು. 

೩-೪. ಬ್ರಹ್ಮಾದಿಗಳು ಬ್ರಾಹ್ಮಣರ ಭಯನಿವಾರಣೆಗಾಗಿ ಬಗೆ ಬಗೆಯ 
ಒಡವೆಗಳಿಂದ ಅಲಂಕೃತರೂ, ಅನೇಕ ವಿಧ ರತ್ನಗಳಿಂದ ವಿರಾಜಮಾನರೂ, 
ಬಗೆ ಬಗೆಯ ಬಟ್ಟೆಗಳನ್ನುಟ್ಟ ವರೂ, ಬಹು ವಿಧ ಆಯುಧಗಳನ್ನು ಹಿಡಿದವರೂ, 
ನಾನಾ ನಿಧ ವಾಹನವನ್ನೇರಿದವರೂ, ಅನೇಕವಿಧ ಸ್ವರವುಳ್ಳವರೂ ಆಗಿರುವ 
ದೇವಿಯರನ್ನು ಸೃಷ್ಟಿ ಸಿರುವರು. 

೫-೮. ಪೂರ್ವ, ದಕ್ಷಿಣ, ಉತ್ತರ, ಪಶ್ಚಿಮ, ಆಗ್ನೇಯ, ನೈಖುತ್ಯ 
ವಾಯವ್ಯ, ಈಶಾನ್ಯ ದಿಕ್ಕುಗಳಲ್ಲಿ ಆಶಾಪುರೀ, ಗಾತ್ರಾಈ, ಛತ್ರಾಕ, 


ವ್ವಾವಿಂಶೋಂಧ್ಯಾಯಃ ೨೪೫ 


ಆಶಾಪುರೀ ಚ ಗಾತ್ರಾಈ ಛತ್ರಾಈ ಜ್ಞಾನಜಾ ತಥಾ । 


ಪಿಪ್ಪಲಾಂಬಾ ತಥಾ ಶಾಂತಾ ಸಿದ್ಧಾ ಭಟ್ಟಾರಿಕಾ ತಥಾ ॥೬॥ 
ಕದಂಬಾ ನಿಕಟಾ ಮೀಠಾ ಸುಪರ್ಣಾ ವಸುಜಾ ತಥಾ । 

ಮಾತಂಗೀ ಚ ಮಹಾದೇನೀ ವಾರಾಹೀ ಮುಕುಟೇಶ್ವರೀ ॥೭॥ 
ಭದ್ರಾ ಚೈನ ಮಹಾಶಕ್ತಿಃ ಸಿಂಹಾರಾ ಚ ಮಹಾಬಲಾ । 

ಏತಾಶ್ವಾನ್ಯಾಶ್ಚ ಬಹವಃ ಕಥಿತುಂ ನೈವ ಶಕ್ಯತೇ nen 
ನಾನಾರೂಪಧರಾ ದೇವ್ಯೋ ನಾನಾನೇಷಸಮಾಶ್ರಿತಾಃ । 
ಸ್ಥಾನಾದುತ್ತರದಿಗ್ಸಾಗೇ ಆಶಾಪೂರ್ಣಾಸಮಿಾಪತಃ ॥೯॥ 
ಪೂರ್ಮೇ ತು ವಿದ್ಯತೇ ದೇವೀ ಆನಂದಾನಂದದಾಯಿನೀ । 

ವಸಂತಿ ಚೋತ್ತರೇ ದೇವ್ಯೋ ನಾನಾರೂಪಧರಾ ಮುದಾ ॥ ೧೦ n 
ಇಷ್ಟಾನ್ಕಾಮಾನ್ಹದಾತ್ಯೇತಾ ಜಲದಾನೇನ ತರ್ಪಿತಾಃ । 

ಸ್ಥಾನೇ ನೈರ್ಜುತಿದಿಗ್ಬಾಗೇ ಶಾಂತಾ ಶಾಂತಿಪ್ರದಾಯಿನೀ ॥ ೧೧॥ 
ಸಿಂಹೋಪರಿ ಸಮಾಸೀನಾ ಚತುರ್ಹಸ್ತಾ ನರಪ್ರದಾ । 

ಭಟ್ಟಾರೀ ಚ ಮಹಾಶಕ್ಷಿಃ ಪುನಸ್ತತ್ರೈನ ತಿಸ್ಮತಿ ॥ ೧೨ ॥ 
ಸಂಸ್ತುತಾ ಪೂಜಿತಾ ಭಕ್ತ್ಯಾ ಭಕ್ತಾನಾಂ ಭಯನಾಶಿನೀ । 

ಸ್ಥಾನಾತ್ತು ಸಪ್ತಮೇ ಕ್ರೋಶೇ ಕ್ರೇನುಲಾಭಾ ವ್ಯವಸ್ಥಿತಾ ॥ ೧೩ ॥ 


ಜ್ಞಾನಜಾ, ನಿಪ್ಪಲಾಂಬಾ, ಶಾಂತಾ, ಸಿದ್ಧಾ, ಭಟ್ಟಾರಿಕಾ, ಕದಂಬಾ, ವಿಕಟಾ, 
ಮಾತಾ, ಸುಪರ್ಣಾ, ವಸುಜಾ, ಮಾತಂಗೀ, ವಾರಾಹೀ, ಮಕುಟೀಶ್ವರೀ, 
ಭದ್ರಾ, ಸಿಂಹಾರ ಇವರನ್ನೂ ಇನ್ನೂ ಹೇಳಲಾಗದಷ್ಟು ಮಂದಿ ದೇನಿಯರನ್ನೂ 
ಸ್ಥಾಪಿಸಿರುತ್ತಾರೆ. 

೯. ಈ ಕ್ಷೇತ್ರದ ಉತ್ತರದಿಕ್ಕಿನಲ್ಲಿ ಆಶಾಪೂರ್ಣೆಯ ಬಳಿ ನಾನಾವೇಷ 
ರೂಪಗಳನ್ನು ಧರಿಸಿದ ಹಲವು ಮಂದಿ ದೇವಿಯರು ನೆಲೆಸಿದ್ದಾರೆ. 

೧೦. ಪೂರ್ವದಿಕ್ಕಿನಲ್ಲಿ ಆನಂದವನ್ಸ್ನೀಯುವ ಆನಂದೆಯು ವಾಸವಾಗಿ 
ದ್ಹಾಳೆ. ಇವಳಿಗೆ ಉತ್ತರದಿಕ್ಕಿನಲ್ಲಿ ನಾನಾ ರೂಪಗಳುಳ್ಳ ದೇವಿಯರಿದ್ದಾರೆ. 

೧೧. ಇವರು ಜಲವನ್ನರ್ಸಿಸುವುದರಿಂದ ಸಂತೋಷಗೊಂಡು ಇಷ್ಟಾರ್ಥ 
ಗಳನ್ಸೀಯುವರು. ಕೈರ್ಜುತ್ಯದಿಕ್ಕಿನಲ್ಲಿ ಶಾಂತಿಪ್ರದಳಾದ ಶಾಂತಿಯೂ ನೆಲೆಸಿ 
ರುವಳು. 

೧೨. ಅಲ್ಲಿಯೇ ಸಿಂಹದಮೇಲೆ ಕುಳಿತಿರುವವಳೂ, ನಾಲ್ಕು ಕೈಯುಳ್ಳ 
ವಳೂ, ವರವನ್ನು ಕೊಡುವವಳೂ ಆಗಿರುವ ಭಟ್ಟಾರಿಯೆಂಬ ಮಹಾಶಕ್ತಿ 
ಯಿರುವಳು. 

೧೩. ಇವಳು ಭಕ್ತಿಯಿಂದ ಸ್ತುತಿಸಿ ಪೂಜಿಸಿದ ಭಕ್ತರಿಗೆ ಭಯವನ್ನು 


೨೪೬ ಶ್ರೀ ಸ್ಕಾಂದಮ ಹಾಫುರಾಣಂ 


ಸಾ ವಿಲೇಪಮಯಾ ಪೂಜ್ಯಾ ಚಿಂತಿತಾ ಸಿದ್ಧಿದಾಯಿನೀ । 
ಪೂರ್ವಸ್ಯಾಂ ದಿಶಿ ಲೋಕೈಸ್ತು ಬಲಿದಾನೇನ ತರ್ಪಿತಾ । 


ಪರಿವಾರೇಣ ಸಂಯುಕ್ತಾ ಭುಕ್ತಿಮುಕ್ತಿಪ್ರದಾಯಿನೀ ॥ ೧೪ ॥ 
ಅಚಿಂತ್ಯರೂಪಚರಿತಾ ಸರ್ವಶತ್ರುನಿನಾಶಿನೀ 1 

ಸಂಧ್ಯಾಯಾಸ್ತ್ರಿಷು ಕಾಲೇಷು ಪ್ರತ್ಯಕ್ಸೈನ ಹಿ ದೃಶ್ಯತೇ ॥ ೧೫ ॥ 
ಸ್ಥಾನಾತ್ತು ಸಪ್ತಮೇ ಕ್ರೋಶೇ ದಕ್ಸಿಣಾ ವಿಂಧ್ಯವಾಸಿನೀ । 

ಸಾಯುಧಾ ರೂಪಸಂಪನ್ನಾ ಭಕ್ತಾನಾಂ ಭಯಹಾರಿಣೀ ॥ ೧೬ ॥ 
ಸಶ್ಚಿಮೇ ನಿಂಬಜಾ ದೇವೀ ತಾನದೂ ಮಿಸಮಾಶ್ರಿತಾ। 

ಮಹಾಬಲಾ ಸಾ ದೃಷ್ಟಾಂಸಿ ನಯನಾನಂದದಾಯಿನೀ 1 ೧೭॥ 
ಸಾನಾದುತ್ನರದಿಗಾ.ಗೇ ಶಾನದೂ ನಿಸಮಾಶಿ ತಾ । 

ಇ. ದು ಬ ಬು ಅ 
ಶಕ್ತಿರ್ಬಹುಸುವರ್ಣಾಕ್ಸಾ ಪೂಜಿತಾ ಸಾ ಸುವರ್ಣದಾ ॥ ೧೮॥ 
ಸ್ಥಾನಾದ್ಹಾಯನ್ಯಕೋಣೇ ಚ ಕ್ರೋಶಮಾತ್ರಮಿತೇ ಶ್ರಿತಾ। 
ಶ್ಪೇತ್ರಧರಾ ಮಹಾದೇವೀ ಸಮಯೇಚ್ಛಾಗಧಾರಿಣೀ HOF 





ಹೋಗಲಾಡಿಸುವಳು. ಈಸ್ತಳದಿಂದ ಏಳುಕ್ರೋಶಗಳ ದೂರದಲ್ಲಿ ಕ್ಸೇಮಲಾಭೆ 
ಇರುವಳು. 

೧೪-೧೫. ಲೇಪನದ್ರವ್ಯಗಳಿಂದ ಲಿಪ್ತಳಾಗಿ ಪೂಜ್ಯಳಾದ ಅವಳು ಧ್ಯಾನಿಸು 
ವುದರಿಂದಲೇ ಕಾರ್ಯಸಿದ್ಧಿಯನ್ಸೀಯುವಳು. ಪೂರ್ವದಿಕ್ಕಿನಲ್ಲಿ ಜನರಿಂದ ಬಲಿ 
ಯನ್ನಿತ್ತು ಸಂತೋಷಗೊಳಿಸಲ್ಪಟ್ಟನಳೂ, ಪರಿವಾರಸಹಿತಳೂ, ಭೋಗ ಮತ್ತು 
ಮೋಕ್ಸಗಳನ್ನು ಕೊಡುವವಳೂ, ಆಲೋಚಿಸಲಾಗದ ರೂಪ ಮತ್ತು ನಡತೆ 
ಯುಳ್ಳವಳೂ, ಸಕಲಶತ್ರುನಾಶಕಳೂ ಆಗಿರುವ ಈ ಕ್ಷೇಮಲಾಭೆಯು ಮೂರು 
ಸಂಧ್ಯಾಕಾಲಗಳಲ್ಲಿಯೂ ಪ್ರತ್ಯಕ್ಸವಾಗಿ ಕಾಣುವಳು. 

೧೬. ಈ ಸ್ಥಳದಿಂದ ಹದಿನಾಲ್ಕನೆಯ ಮೈಲಿಯಲ್ಲಿ ಆಯುಧಸಹಿತಳೂ, 
ರೂಪಸಂಪನ್ನಳೂ ಭಕ್ತರ ಭಯನಾಶಕಳೂ ಆಗಿರುವ ವಿಂಧ್ಯಪರ್ವತ ನಿವಾಸಿನಿ 
ಯಾದ ದಕ್ಸಿಣೆಯಿರುವಳು. 

೧೭. ಪಶ್ಚಿಮದಲ್ಲಿ ಅತಿ ಬಲಿಷ್ಠಳಾಗಿ ನೋಡುವ ಮಾತ್ರದಿಂದಲೇ ಕಣ್ಣು 
ಗಳಿಗಾನಂದವನ್ಲ್ನೀಯುವ ನಿಂಬಜಾದೇವಿಯು ಇರುವಳು. 

೧೮. ಉತ್ತರದಿಕೈನಲ್ಲಿ ಸುವರ್ಣದಂತೆ ನಯನಗಳುಳ್ಳ ಶಕ್ತಿದೇವತೆಯಿರು 
ವಳು. ಇವಳು ಪೂಜಿಸುವ ಭಕ್ತರಿಗೆ ಸುವರ್ಣವನ್ನು ಕೊಡುವಳು. , 

೧೯. ವಾಯುವ್ಯ ದಿಕ್ಕಿನಲ್ಲಿ ಎರಡು ಮೈಲಿಯಲ್ಲಿಯೇ ಆಡನ್ನು ಧರಿಸಿರುವ 
ಕ್ಸೇತ್ರಧರೆಯು ನೆಳೆಸಿರುವಳು. 


ಡ್ವಾನಿಂಶೋಂಧ್ಯಾಯಃ ೨೪೭ 


ಪುರಾದುತ್ತರದಿಗ್ಭಾಗೇ ಕ್ರೋಶಮಾತ್ರೇ ತು ಕರ್ಣಿಕಾ । 


ಸರ್ವೋಪಕಾರನಿರತಾ ಸ್ಥಾನೋಪದ್ರವನಾಶಿನೀ ॥ ೨೦॥ 
ಸ್ಥಾನಾನ್ನಿರ್ಬುತಿದಿಗ್ಬಾಗೇ ಬ್ರಹ್ಮಾಣೀಪ್ರಮು ಖಾಸ್ತಥಾ । 
ನಾನಾರೂಪಧರಾ ದೇವ್ಯೋ ನಿದ್ಯಂತೇ ಜಲಮಾತರಃ ॥ ೨೧॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "ದೇವತಾ 
ಸ್ಥಾಪನಂ''ನಾಮ ದ್ವಾನಿಂಶೋಂಧ್ಯಾಯಃ 


೨೦. ಪಟ್ಟಣದ ಉತ್ತರ ದಿಕ್ಕಿನಲ್ಲಿ ಎರಡು ಮೈಲಿ ದೂರದಲ್ಲಿ ಸಕಲರಿಗೂ 
ಉಪಕಾರವನ್ನು ಮಾಡುವವಳೂ, ಆ ಕ್ರೇತ್ರಕ್ಕೊದಗುವ ತೊಂದರೆಯನ್ನು 
ನೀಗಿಸುವವಳೂ ಆಗಿರುವ ಕರ್ಣಿಕೆಯಿದ್ದಾಳೆ. 

೨೧. ಈ ಕ್ಷೇತ್ರದ ನೈರ್ಜುತ್ಯದಿಕ್ಕಿನಲ್ಲಿ ಬ್ರಹ್ಮಾಣಿಯೆ ಮೊದಲಾದ 
ನಾನಾ ರೂಪಗಳನ್ನು ಧರಿಸಿದ ಜಲಮಾತೃಗಳಾದ ದೇವಿಯರು ನೆಲೆಸಿರುವರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧನಾದ 
ಶ್ರೀ ಸ್ಕಾಂದನುಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ 
ಧರ್ಮಾರಣ್ಯ ಮಾಹಾತ್ಮ್ಮ್ಯದಲ್ಲಿ ಆ ದೇವತಾಸ್ಥಾಪನ''ವೆಂಬ 
ಇಪ್ಪತ್ತೆರಡನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ತ್ರಯೋನಿಂಶೋಧ್ಯಾಯಃ 
ಜ್ಞಾತಿಭೇದವರ್ಣನಂ 
ವ್ಯಾಸ ಉವಾಚ :-- 
ಅತಃಪರಂ ಪ್ರನಕ್ಸ್ಟಾಮಿ ಬ್ರಹ್ಮಣಾ ಯತ್ನ ತಂ ಪುರಾ । 
ತತ್ಸರ್ವಂ ಕಥೆಯಾನ್ಕು ದ್ಯ ತ್ರ ಜುಷೆ ಕಾಸ್ಟ ಮಾನಸಃ 


ಜಾನಾ ಡಾಟಾ ಚ ವೈರಾದ್ಯು ದ್ಧ ಂ ಬಭೂವ ಹ । 


ತಸ್ತಿ ನ್ಯು ದೆ ಮಹಾದುಷ್ಟೆ ಜೇ ಸಂಕ ಷ್ಟಮಾನಸಾಃ 

ಬಭೊನುಸ್ತಿತ ಸೋದೆ ಗಾ ಬ್ರಹ್ಮಾಣಂ ಶೆರಣಂ ಯಯುಃ 
ದೇವಾ ಊಚು। 

ಬ್ರಹ್ಮನ್ಯೇನ ಪ್ರಕಾರೇಣ ದೈತ್ಯಾನಾಂ ವಧನೇನ ಚ । 

ಕುರ್ಮೋಂದ್ಕ ಉಪಾಯಂ ಹಿ ಕಥ್ಯತಾಂ ಶೀಘ್ರ ಮೇವ ನಃ 
ಬ್ರಹ್ಮೋವಾಚ:- 

ಮಯಾ ಹಿ ಶಂಕರೇಣೈನ ವಿಷ್ಣುನಾ ಹಿ ತಥಾ ಪುರಾ । 

ಯಮಸ್ಯ ತಪಸಾ ತುಷ್ಟೈರ್ಧರ್ಮಾಂರಣ್ಯಂ ವಿನಿರ್ನಿತಂ 

ತತ್ರ ಯದ್ದೀಯತೇ ದಾನಂ ಯಜ್ಞಂ ವಾ ತಪ ಉತ್ತಮಂ । 

ತತ್ಸರ್ನಂ ಕೋಟಗುಣಿತಂ ಭವೇದಿತಿ ನ ಸಂಶಯಃ 


ಕನ್ನಡದ ಅನುವಾದ 


ಜ್ಞಾ ತಿಭೇದವರ್ಣನ 


mon 


॥೨॥ 


॥ ೩॥ 


॥೪॥ 


॥ ೬ ॥ 


೧. ವ್ಯಾಸನು ಹೇಳುತ್ತಾನೆ: ಇನ್ನು ಮುಂದೆ ಬ್ರಹ್ಮನು ಮಾಡಿದ ಕೆಲಸ 


ವನ್ನು ಹೇಳುವೆನು. ಒಮ್ಮನಸ್ಸಿನಿಂದ ಕೇಳು. 


೨-೩. ದೇವದಾನವರಿಗೆ ದ್ವೇಷದಿಂದ ಯುದ್ಧವು ನಡೆಯಲು ದೇವತೆಗಳು 


ಆ ಕೆಟ್ಟಿಯುದ್ಧದಲ್ಲಿ ಕ್ಲೇಶಗೊಂಡು ಬ್ರಹ್ಮನನ್ನು ಮರೆಹೊಕ್ಕರು. 


೪. ದೇವತೆಗಳು ಕೇಳುತ್ತಾರೆ: ಪಿತಾಮಹ! ದೈತ್ಯರನ್ನು ಕೊಲ್ಲುವ 


ಬಗೆ ಹೇಗೆ? ಅದರ ಉಪಾಯವನ್ನು ಶೀಘ್ರವಾಗಿ ಹೇಳು. 


ಬ್ರಹ್ಮನು ಹೇಳುತ್ತಾನೆ:--ಯಮನ ತಪಸ್ಸಿಗೆ ಮೆಚ್ಚೆದ ನಾನೂ, 


ವಿಷ್ಣುವೂ, ಶಂಕರನೂ ಸೇರಿ ಧರ್ಮಾರಣ್ಯವನ್ನು ನಿರ್ಮಿಸಿದ್ದೇವೆ. 


೬. ಆ ಧರ್ಮಾರಣ್ಯದಲ್ಲಿ ಕೊಟ್ಟ ದಾನ, ಯಜ್ಞ, ಉತ್ತಮವಾದ ತಪಸ್ಸು 


ಗಳು ಇವುಗಳೆಲ್ಲ ಕೋಟಮಡಿಯಾಗುವುವು. 


ತ್ರಯೋಪಿಂಶೋತಧ್ಯಾಯಃ ೨೪೯ 


ಪಾಪಂ ವಾ ಯದಿ ನಾ ಪುಣ್ಯಂ ಸರ್ವಂ ಕೋಟಗುಣಂ ಭವೇತ್‌ । 


ತಸ್ಮಾದ್ವೈತ್ಯೈರ್ನ ಧರ್ಷಿತಂ ಕದಾಚಿದಪಿ ಭೋಃ ಸುರಾಃ Wen 
ಶ್ರುತ್ವಾ ತು ಬ್ರಹ್ಮಣೋ ವಾಕ್ಯಂ ದೇವಾಃ ಸರ್ವೇ ಸನಿಸ್ಮಯಾಃ । 
ಬ್ರಹ್ಮಾಣಂ ತ್ವಗ್ರತಃ ಕೃತ್ವಾ ಧರ್ಮಾಃರಣ್ಯ ಮುಪಾಯಯಂಃ Wen 


ಸತ್ರಂ ತತ್ರ ಸಮಾರಭ್ಯ ಸಹಸ್ರಾಬ್ಲಮನುತ್ತಮಂ । 
ವೃತ್ವಾಚಾರ್ಯಂ ಚಾಂಗಿರಸಂ ಮಾರ್ಕಂಡೇಯಂ ತಥೈವ ಚ ॥೯॥ 
ಅತ್ರಿಂ ಚ ಕಶ್ಯಸಂ ಚೈನ ಹೋತ್ರೂಕೃತ್ವಾ ಮಹಾಮತೀ | 


ಜನುದಗ್ನಿಂ ಗೌತಮಂ ಚ ಅಧ್ಲರ್ಯುತ್ತೇ ನ್ಯವೇದಯನ್‌ ॥೧೦॥ 
ಭರದ್ವಾಜಂ ವಸಿಷ್ಠಂ ತು ಪ್ರತ್ಯಧ್ವರ್ಯತ್ವಮಾದಿಶನ್‌ । 

ನಾರದಂ ಚೈನ ವಾಲ್ಮೀಕಿಂ ನೋದನಾಯಾಕರೋತ್ತದಾ uo 
ಬ್ರಹ್ಮಾಸನೇ ಚ ಬ್ರಹ್ಮಾಣಂ ಸ್ಮಾಪಯಾಮಾಸುರಾದರಾತ್‌ । 
ಕ್ರೋಶಚತುಷ್ಯಮಾತ್ರಾಂ ಚ ವೇದಿಂ ಕೃತ್ವಾ ಸುರೈಸ್ತತಃ ॥ ೧೨ ॥ 
ದ್ವಿಜಾಃ ಸರ್ನೇ ಸಮಾಹೂತಾ ಯಜ್ಞ ಸ್ಕಾರ್ಥೇ ಹಿ ಜಾಪಕಾಃ । 
ಯಗ್ಯಜು8ಸಾಮಾಂಥರ್ವಾನ್ಸೈ ವೇದಾನುದ್ಧಿರಯಂತಿ ಯೇ ॥ ೧೩ ॥ 
ಗಣನಾಥಂ ಶಂಭುಸುತಂ ಕಾರ್ತಿಕೇಯಂ ತಥೈನ ಚ । 

ಇಂದ್ರಂ ವಜ್ರಧರಂ ಚೈನ ಜಯಂತಂ ಚಂದ್ರಸೂನುಕಂ ॥ ೧೪ ॥ 





೭. ಡೇವತೆಗಳೆ! ಅಲ್ಲಿ ಮಾಡಿದ ಪಾಪವಾಗಲಿ, ಪುಣ್ಯವಾಗಲಿ ಕೋಟ 
ಮಡಿಯಾಗುವುದರಿಂದ ದೈತ್ಯರು ಯಾವಾಗಲೂ ಅದನ್ನು ಆಕ್ರಮಿಸಲಿಲ್ಲ. 

೮. ದೇವತೆಗಳೆಲ್ಲರೂ ಬ್ರಹ್ಮನ ಈ ನುಡಿಯನ್ನು ಹೇಳಿ ಆಶ್ಚರ್ಯಗೊಂಡು 
ಬ್ರಹ್ಮನನ್ನು ಮುಂದಿರಿಸಿಕೊಂಡು ಧರ್ಮಾರಣ್ಯಕ್ಕೆ ಹೋದರು. 

೯-೧೧. ಅಲ್ಲಿ ದೇವತೆಗಳು ಸಾವಿರವರ್ಷ ನೆರವೇರಿಸುವ ಸತ್ರವೊಂದನ್ನಾ 
ರಂಭಿಸಿ ಅದರಲ್ಲಿ ಅಂಗೀರಸ್ಕ ಮಾರ್ಕಂಡೇಯರನ್ನು ಆಚಾರ್ಯರನ್ನಾಗಿಯೂ, 
ಅತ್ರಿ, ಕಶ್ಯಪರನ್ನು ಹೋತ್ಸಗಳನ್ನಾಗಿಯೂ, ಜಮದಗ್ನಿ, ಗೌತಮರನ್ನು 
ಅಧ್ವರ್ಯುಗಳನ್ನಾಗಿಯೂ, ಭರದ್ವಾಜ, ವಸಿಷ್ಠರನ್ನು ಪ್ರತ್ಯಧ್ವರ್ಯುಗಳನ್ನಾಗಿಯೂ, 
ನೇಮಿಸಿ ನಾರದ, ವಾಲ್ಮೀಕಿಗಳನ್ನು ಚೋದನೆಗಾಗಿ ಇಟ್ಟರು. 

೧೨. ಎಂಟು ಮೈಲಿ ಪರಿಮಾಣದ ವೇದಿಯನ್ನು ನಿರ್ಮಿಸಿ ಅಲ್ಲಿ ಬ್ರಹ್ಮಾಸನ 
ದಲ್ಲಿ ಬ್ರಹ್ಮನನ್ನು ಕುಳ್ಳಿರಿಸಿಡರು. 

೧೩. ಯಜ್ಞಕ್ಕಾಗಿ ಜಪಿಸುವ ಬ್ರಾಹ್ಮಣರನ್ನೆಲ್ಲ ಕರೆಯಿಸಿದರು. ಅವರು 
ಖುಗ್ಯಜುಸ್ಸಾಮಾಥರ್ವ ವೇದಗಳನ್ನು ಪಾರಾಯಣಮಾಡಿದರು. 

೧೪-೧೫. ಗಣನಾಥ, ಷಣ್ಮುಖ, ವಜ್ರವನ್ನು ಹಿಡಿದಿರುವ ಇಂದ್ರ, 
ಚಂದ್ರನ ಮಗನಾದ ಜಯಂತ, ಈ ನಾಲ್ಕು ಜನ ಶೂರರಾದ ದೇವತೆಗಳನ್ನು 


೨೫೦ ಶ್ರೀ ಸ್ಕಾಂದಮಹಾಪುರಾಣಂ 


ಚತ್ವಾರೋ ದ್ವಾರಪಾಲಾಶ್ಚ ದೇವಾಃ ಶೂರಾ ವಿನಿರ್ಮಿತಾಃ । 
ತತೋ ರಾಕ್ಸೋಫ್ನಮಂತ್ರೇಣ ಹೂಯತೇ ಹನ್ಯವಾಹನಃ ॥ ೧೫ ॥ 
ತಿಲಾಂಶ್ಚ ಯನವಮಿಶ್ರಾಂಶ್ಚ ಮಧ್ಯಾಜ್ಕೇನ ಚ ಮಿಶ್ರಿತಾನ್‌ । 


ಜುಹುವುಸ್ತೇ ತದಾ ದೇವಾ ನೇದಮಂತ್ರೆರ್ನರೇಶ್ವರ ॥ ೧೬॥ 
ಆಘಾರಾವಾಜ್ಯಭಾಗೌ ಚ ಹುತ್ಕಾ ಚೈನ ತತಃ ಪರಂ | 
ದ್ರಾಕ್ಸೇಕ್ಸುಪೂಗನಾರಂಗಜಂಬೀರಂ ಬೀಜಪೂರಕಂ ॥ ೧೭॥ 
ಉತ್ತರತೋ ನಾಲಿಕೇರಂ ದಾಡಿಮಂ ಚ ಯಥಾಕ್ರಮಂ | 

ಮಧ್ವಾಜ್ಯಂ ಪಯಸಾ ಯುಕ್ತಂ ಕೃಶರಂ ಶರ್ಕರಾಯುತಂ ॥ ೧೮ ॥ 
ತಂಡುಲೈಃ ಶತಪತ್ತೆಶ್ಚ ಯಜ್ಞೇ ಸಾಕಂ ನಿಯಮ್ಯ್ಮ ಚ । 

ವಿಚಿಂತ್ಯ ಚ ಮುಹಾಭಾಗಾಃ ಕೃತ್ವಾ ಯಜ್ಞಂ ಸದಕ್ಟಣಂ ॥೧೯॥ 
ಉತ್ತಮಂ ಚ ಶುಭಂ ಸ್ತೋಮಂ ಕೃತ್ವಾ ಹರ್ಷಮುಷಾಯಯುಃ | 
ಅವಾರಿತಾನ್ನಮುದದನ್ನೀನಾಂಧಕೃಪಣೇಷ್ಮಸಿ ॥ ೨೦ # 
ಬ್ರಾಹ್ಮಣೇಭ್ಯೋ ವಿಶೇಷೇಣ ದತ್ತಮನ್ನಂ ಯಥೇಪ್ಸಿತಂ । 

ಪಾಯಸಂ ಶರ್ಕರಾಯುಕ್ತಂ ಸಾಜ್ಯಶಾಕಸಮನ್ನಿತಂ ॥೨೧॥ 
ಮಂಡಕಾ ವಟಿಕಾಃ ಪೂಸಾಸ್ತಥಾ ವೈವೇಷ್ಟಿಕಾಃ ಶುಭಾಃ । 
ಸಹಸ್ರಮೋದಕಾಶ್ಚಾಪಿ ಫೇಣಿಕಾ ಘುರ್ಥುರಾದಯಃ ॥ ೨೨॥ 
ಓದನಶ್ಚ ತಥಾ ದಾಲೀ ಆಢಕೀಸಂಭವಾ ಶುಭಾ | 


ತಥಾ ನೈ ಮುದ್ದದಾಲೀ ಚ ಸರ್ಪಬಾವಟಕಾ ತಥಾ ॥ ೨೩॥ 


ಮನಾಮ ಭಾಸ ಬ ಸುತತ ದ ಹ ಲಾ 





ದ್ವಾರಪಾಲಕರನ್ನಾಗಿ ನೇಮಿಸಿದರು. ಬಳಿಕ ರಕ್ಸೋಫ್ನಮಂತ್ರದಿಂದ ಅಗ್ವಿಯಲ್ಲಿ 
ಹೋಮಮಾಡಿದರು. 

೧೬, ಮಹಾರಾಜ! ಯವಧಾನ್ಯ, ಜೇನುತುಪ್ಪ, ತುಪ್ಪ ಇವುಗಳಿಂದ 
ಸೇರಿದ ಎಳ್ಳಿನಿಂದ ವೇದಮಂತ್ರಗಳನ್ನು ಹೇಳಿ ಹೋಮಮಾಡಿದರು. 

೧೭-೧೯. ಅಘಾರಾಜ್ಯಭಾಗಗಳಿಂದ ಹೋಮಿಸಿ ದ್ರಾಕ್ಸೆ, ಕಬ್ಬು, 
ಅಡಿಕೆ, ಕಿತ್ತಳೆ, ಲಿಂಬೆಹಣ್ಣು, ಪೇರಳೆಹಣ್ಣು, ತೆಂಗಿನಕಾಯಿ, ದಾಳಿಂಬದಹಣ್ಣು, 
ಜೇನುತುಪ್ಪ, ತುಪ್ಪ, ಹಾಲು, ಹುಗ್ಗಿ, ಸಕ್ಕರೆ, ಅಕ್ಕಿ, ತಾನರೆಹೂವು ಇವುಗಳನ್ನು 
ಸಮರ್ಪಿಸಿ ಮೌನವಾಗಿ ಧ್ಯಾನಿಸಿ ದಕ್ಷಿಣೆಯನ್ನ್ನಿತ್ತು ಯಜ್ಞವನ್ನು ಮಾಡಿದರು. 

೨೦. ಉತ್ತಮವಾದ ಬ್ರಾಹ್ಮಣರ ಸಭೆಯನ್ನು ಮಾಡಿ ಸಂತೋಷ 
ಗೊಂಡರು. ಬಡವರು, ಕುರುಡರು, ಕೃಪಣರು ಇವರಿಗೆ ತಡೆಯದೆ ಅನ್ನವನ್ನು 
ನೀಡಿದರು. K 

೨೧-೨೬, ಸಕ್ಕರೆ ಸಹಿತವಾದ ಪಾಯಸ, ತುಪ್ಪ, ಮಂಡಿಗೆ, ವಡೆ, 
ದೋಸೆ, ವೇಷ್ಟಿಕಾ, ಸಾವಿರಾರು ಕಡಬು, ಫೇಣಿ, ಘುರ್ಥ್ಫುರ, ತೊಗರಿ, ಹೆಸರು 


ತ್ರಯೋಪವಿಂಶೋ$ಧ್ಯಾಯಃ ೨೫೧ 


ಪ್ರಲೇಹ್ಯಾನಿ ನಿಚಿತ್ರಾಣೆ ಯುಕ್ತಾಸ್ತ್ರ್ಯೂಷಣಸಂಚಯೈಃ । 


ಕುಲ್ಮಾಷಾನೇಲ್ಲಕಾಶ್ಚೈನ ಕೋಮಲಾ ವಾಲಕಾಃ ಶುಭಾಃ ॥ ೨೪ ॥ 
ಕರ್ಕಜಕಾಶ್ಚಾರ್ದ್ವಯುತಾ ಮರಿಚೇನ ಸಮನ್ಹಿತಾಃ । 

ಏನಂ ವಿಧಾನಿ ಚಾಂನ್ನಾನಿ ಶಾಕಾನಿ ವಿನಿಧಾನಿ ಚ ॥ ೨೫ ॥ 
ಭೋಜಯಿತ್ವಾ ದ್ವಿಜಾನ್ಸ ರ್ನಾನ್ಸ ರ್ಮಾಂರಣ್ಯನಿನಾಸಿನಃ । 
ಅಷ್ಟಾದಶಸಹಸ್ರಾ ಕೆ ಸಪುತ್ರಾ ಂಶ್ಲೆ ತದಾ ನೃ ಸ ೨೬ ॥ 
ಪ್ರತಿದಿನಂ ತದಾ ದೇವಾ ಭೋಜಯಂತಿಸ್ಕ ಇತ್‌ | ` 

ಏನಂ ವರ್ಷಸಹಸ್ರಂ ವೈ ಕೃತ್ವಾ ಯಜ್ಞಂ. ತದಾಮರಾಃ ॥ ೨೭॥ 
ಕೃತ್ವಾ ದೈತ್ಯವಧಂ ರಾಜನ್ನಿರ್ಭಯತ್ವಮವಾಪ್ಪುವನ್‌ । 

ಸ್ವರ್ಗಂ ಜಗ್ಮುಸ್ತೇ ಸಹಸಾ ದೇವಾಃ ಸರ್ವೇ ಮರುದ್ದಣಾಃ ॥ ೨೮ ॥ 
ತಥೈನಾಃಪ್ಸರಸಃ ಸರ್ವಾ ಬ್ರಹ್ಮವಿಷ್ಣುಮಹೇಶ್ವರಾಃ | 

ಫೈಲಾಸಶಿಖರಂ ರಮ್ಯಂ ವೈಕುಂಠಂ ನಿಷ್ಣುವಲ್ಲಭಂ ॥ ೨೯॥ 
ಬ್ರಹ್ಮಲೋಕಂ ಮಹಾಪುಣ್ಯಂ ಪ್ರಾಪ್ಯ ಸರ್ವೇ ದಿನೌಕಸಃ । 

ಪರಂ" ಹರ್ಷ ಮುಪಾಜಸಗ್ಗು: 8 ಪಾ ಪ್ರಾಸ್ಯ 'ನಂದನಮುತ್ತ ಮಂ H ೩೦ 


ಸ್ವೇಸ್ಟೇ ಸ್ಥಾ ನೇಸಿ ರೀಭೂತ್ವಾ “ಸ್ಮ 8 ಸರ್ವೇ ಹಿ ನಿರ್ಭಯಾಃ ॥ ೩೧॥ 
ತತಃ ಕಾಲೇನ ಮಹತಾ ಕೃತಾಖ್ಯಯುಗಪರ್ಯಯೇ | 
ಲೋಹಾಃಸುರೋ ಮದೋನ್ಮತ್ತೋ ಬ್ರಹ್ಮನೇಷಧರಃ ಸದಾ ॥ ೩೨॥ 
ಆಗತ್ಯ ಸರ್ವಾನ್ವಿಪ್ರಾಂಶ್ಲ ಧರ್ಷಯೇದ್ದರ್ಮನಿತ್ತಮಾನ್‌ | 

ಶೂದ್ರಾಂಶ್ಚ ವಣಿಜಶ್ಚೈವ ದಂಡಘಾತೇನ ತಾಡಯೇತ್‌ ॥ ೩೩ 





ಬೇಳೆಗಳು, ಹಪ್ಪಳ, ನಾನಾ ವಿಧಗಳಾದ ಗೊಜ್ಜುಗಳು ಇವೇ ಮೊದಲಾದ 
ಅನೇಕ ಭೋಜ್ಯವಸ್ತುಗಳಿಂದ ಧರ್ಮಾರಣ್ಯನಿವಾಸಿಗಳಾದ ಹದಿನೆಂಟು ಸಾವಿರ 
ಬ್ರಾಹ್ಮಣರನ್ನು ಅವರ ಮಕ್ಕಳೊಡನೆ ಊಟಮಾಡಿಸಿದರು. 

೨೭-೨೮. ದೇವತೆಗಳು ಹೀಗೆ ಒಂದುಸಾವಿರ ವರ್ಷಕಾಲ ಪ್ರತಿದಿನವೂ 
ಬ್ರಾಹ್ಮಣಭೋಜನವನ್ನು ಮಾಡಿಸುತ್ತ ಯಜ್ಞವನ್ನು ಪೂರೈಸಿದರು. ತರುವಾಯ 
ದೈತ್ಯರನ್ನು ಕೊಂದು ನಿರ್ಭಯರಾಗಿ ಸ್ವರ್ಗವನ್ನು ಸೇರಿದರು. 

೨೯-೩೩. ಹಾಗೆಯೇ ಅಪ್ಸರರೂ, ಬ್ರಹ್ಮ, ವಿಷ್ಣು, ಮಹೇಶ್ವರರೂ 
ಎಲ್ಲರೂ ರಮ್ಯವಾದ ಕೈಲಾಸ, ವಿಷ್ಣುವಿಗೆ ಪ್ರಿ ಪ್ರಿಯವಾದ ವೈಕುಂಠ, ಅತಿಸವಿತ್ರ 
ವಾದ ಬ್ರಹ್ಮೆಶೋಕ, ನಂದನವನ ಇವುಗಳನ್ನು ಸೇರಿ ಅತ್ಯಂತ ಸಂತೋಷ 
ಪಟ್ಟರು. ಲೂ ನಿರ್ಭಯವಾಗಿ ತಮ್ಮತನ್ಮು ಸ್ಥಳಗಳಲ್ಲಿ ಸ್ಥಿರವಾಗಿ ನೆಲೆಸಿ 
ದರು. ಬಹುಕಾಲದ ಬಳಿಕ ಕೃತಯುಗಾವಸಾನದಲ್ಲಿ ಮತ್ತನಾದ ಲೋಹಾ 


ಪಿಜಿ ಶ್ರೀ ಸ್ಥಾಂದಮಹಾಪುರಾಣಂ 


ವಿಧ್ವೃಂಸಯೇಚ್ಚ ಯಜ್ಞಾದೀನ್ಹೋಮದ್ರವ್ಯಾಣಿ ಭಕ್ಸಯೇತ್‌ । 


ವೇದಿಕಾ ದೀರ್ಫಿಕಾ ದೃಷ್ಟಾ ಕಶ್ಮಲೇನ ಪ್ರದೂಷಯೇತ್‌ ॥ ೩೪ ॥ 
ಮೂತ್ರೋತ್ಸರ್ಗಪುರೀಷೇಣ ದೂಷಯೇತ್ಪುಣ್ಯಭೂಮಿಕಾಃ । 

ಗಹನೇನ ತಥಾ ರಾಜನ್ಸ್ಮ್ರಿಯೋ ದೂಷಯತೇ ಹಿ ಸಃ ॥ ೩೫ ॥ 
ತತಸ್ತೇ ನಾಡವಾಃ ಸರ್ವೇ ಲೋಹಾಸುರಭಯಾತುರಾಃ । 

ಪ್ರಣಷ್ಟಾಃ ಸಪರೀವಾರಾ ಗತಾಸ್ತೇ ವೈ ದಿಠೋದಶ ॥ ೩೬ ॥ 
ವಣಿಜಸ್ತೇ ಭಯೋದ್ವಿಗ್ನಾ ನಿಪ್ರಾನನುಯಯುರ್ನ್ಯಪ 1 

ಮಹಾಭಯೇನ ಸಂಭೀತಾ ದೂರಂ ಗತ್ವಾ ನಿಮೃಶ್ಯ ಚ ॥ ೩೭॥ 
ಸಹ ಶೂದ್ರೈರ್ದ್ವಿಜೈಃ ಸರ್ವ ಏಕೀಭೂತ್ವಾ ಗತಾಸ್ತದಾ । 

ಮುಕ್ತಾಂರಣ್ಯಂ ಪುಣ್ಯತಮಂ ನಿರ್ಜನಂ ಹಿ ಯಯುಶ್ಚ ತೇ ॥ ೩೮॥ 


ನಿನಾಸಂ ಕಾರಯಾಮಾಸುರ್ನಾಂತಿದೂರೇ ನರೇಶ್ವರ । 

ವಣಿಜ್ನಾಮ್ನ್ನಾ ಹಿ ತದಾ ಮುಂ ನಾಸಯಾಮಾಸುರೇನ ತೇ ॥ರ೩೯॥ 
ಲೋಹಾಸುರಭಯಾದ್ರಾಜನ್ಮಿಪ್ರನಾನ್ನಾ ನಿನಿರ್ನೀತಂ । 

ಶಂಭುನಾ ವಣಿಜಾ ಯಸ್ಮಾತ್ತಸ್ಮಾತ್ತನ್ನಾಮಧಾರಣಂ ॥ von 





ಸುರನು ಬ್ರಾಹ್ಮಣವೇಷವನ್ನು ಧರಿಸಿ ಧರ್ಮಾರಣ್ಯಕ್ಕೆ ಬಂದು ಧರ್ಮಜ್ಞ ರಾದ 
ಬ್ರಾಹ್ಮಣರನ್ನೂ, ಶೂದ್ರರನ್ನೂ, ವರ್ತಕರನ್ನೂ ದೊಣ್ಣೆಯಿಂದ ಹೊಡೆದನು. 

೩೪. ಯಜ್ಞ ಮೊದಲಾದುವುಗಳನ್ನು ಹಾಳುಮಾಡಿದನು. ಹೋಮದ 
ಸಾಮಗ್ರಿಗಳನ್ನು ತಿಂದನು. ಯಜ್ಞವೇದಿಗಳನ್ನೂ, ಕೊಳಗಳನ್ನೂ ಕೊಳೆಯಿಂದ 
ಕೆಡಿಸಿದನು. 

೩೫. ಮಲಮೂತ್ರಗಳಿಂದ ಪವಿತ್ರವಾದ ಸ್ಥಳಗಳನ್ನು ಅಶುದ್ಧಗೊಳಿಸಿದನು. 
ಕಾಡಿಗೆ ಹೆಂಗಸರನ್ನು ಒಯ್ದು ಅವರನ್ನು ಕೆಡಿಸಿದನು. 

೩೬. ಬಳಿಕ ಲೋಹಾಸುರನ ಭಯದಿಂದ ಪೀಡಿತರಾದ ಬ್ರಾಹ್ಮಣರೆಲ್ಲ 
ಪರಿವಾರ ಸಹಿತವಾಗಿ ಹತ್ತು ದಿಕ್ಕುಗಳಿಗೆ ಹೋಗಿ ಅಡಗಿಕೊಂಡರು. 

೩೭-೩೮. ವರ್ತಕರೂ ಭಯಾರ್ತರಾಗಿ ಬ್ರಾಹ್ಮಣರನ್ನು ಹಿಂಬಾಲಿಸಿದರು. 
ಅವರು ಅತ್ಯಂತ ಭಯದಿಂದ ದೂರಹೋಗಿ ಶೂದ್ರ ಮತ್ತು ಬ್ರಾಹ್ಮಣರೊಡಕೆ 
ಆಲೋಚಿಸಿ ಒಗ್ಗಟ್ಟಾಗಿ ಜನರಿಲ್ಲದ ಪವಿತ್ರವಾದ ಮುಕ್ತಾರಣ್ಯವನ್ನು ಸೇರಿದರು. 

೩೯. ಆ ಅರಣ್ಯದ ಹತ್ತಿರದಲ್ಲಿ ವಣಿಗೆಂಬ ಒಂದು ಗ್ರಾಮದಲ್ಲಿ ಅವರೆಲ್ಲರೂ 
ವಾಸಮಾಡಿದರು. 

೪೦. ಮಹಾರಾಜ! ವರ್ತಕರೂಪಿಯಾದ ಶಿವನೇಆ ಬ್ರಾಹ್ಮಣರ ಹೆಸರಿನಲ್ಲಿ 
ನಿರ್ಮಿಸಿ ಆ ಗ್ರಾಮಕ್ಕೆ ರೋಹಾಸುರನ ಭಯದಿಂದ ವಣಿಕ್ಟುರವೆಂದು 
ಹೆಸರನ್ನಿಟ್ಟನು. ಸ 


ತ್ರಯೋಪಿಂಶೋ9ಧ್ಯಾಯಃ ೨೫೩. 


ಗ್ರಾಮಮಿತಿ ಖ್ಯಾತಂ ಲೋಕೇ ವಿಖ್ಯಾತಿಮಾಗತಂ । 
ಕೇಚಿದ್ದಯಾನ್ನಷ್ಟಾ ವಣಿಜಃ ಪ್ರಥಮಂ ತದಾ ॥೪೧॥ 
ಇಂತಿದೂರೇ ಗತ್ವಾ ವೈ ಮಂಡಲಂ ಚಕ್ರುರುತ್ತಮಂ | 


ಗಮನಕಾಂಕ್ಸಾಸ್ತೇ ತತ್ರ ನಾಸಮಕಲ್ಪಯನ್‌ ॥ ೪೨ ॥ 
ತಲೇತಿ ಚ ನಾಮ್ನಾ ವೈ ಗ್ರಾಮಂ ಕೃತ್ವಾ ನ್ಯನೀವಸನ್‌ | 
ನಾರ್ಥಪರಿಭ್ರಷ್ಟಾಃ ಕೇಚಿತ್ತು ವಣಿಜಸ್ತದಾ ॥ ೪೩॥ 


ಹಾರ್ಗೇ ಗತಾ ಯೇ ವೈ ಲೋಹಾಂಸುರಭಯಾರ್ದಿತಾಃ । 
೨೯೩ರಣ್ಯಾನ್ನಾಂತಿದೂರೇ ಗತ್ವಾ ಚಿಂತಾನುುಷಾಯಯುಃ ॥ ೪೪ 0 
ಸ್ಮಾರ್ಗೇ ನಯಂ ಪ್ರಾಪ್ತಾಃ ಕಸ್ಮಿನ್ರಾಸ್ತಾ ದ್ವಿಜಾತಯಃ 1 


ತಿಂತಾಂ ಪರಂ ಪ್ರಾಪ್ತಾ ನಾಸಂ ತತ್ರ ತ್ವಕಾರಯನ್‌ ॥ ೪೫ ॥ 
ನಾರ್ಗೇ ಗತಾ ಯಸ್ಮಾತ್ತಸ್ಮಾತ್ರನ್ನಾಮ ಸಂಭವಂ । 

ಖಂ ನಿವಾಸಯಾಮಾಸುರಡಾಲಂಜಮಿತಿ ಕ್ಸಿತೌ ॥ ೪೬ ॥ 
ನ್ಮಾ್‌ಮೇ ನಿವಾಸೀ ಯೋ ಯುತ್ನಂಜ್ಹಶ್ಚ ವಣಿಗೃನೇತ್‌ ! 
ಗ್ರಾಮಸ್ಯ ತನ್ನಾಮ ಹ್ಯಭನತ್ಸೃಥಿನೀಪತೇ ॥ ೪೭॥ 
ಸಶ್ಚ ತಥಾ ವಿಪ್ರಾ ಮೋಹಂ ಪ್ರಾಪ್ತಾ ಭಯಾರ್ದಿತಾಃ । 
ನ್ಮೋಹೇತಿ ಸಂಜ್ಞಾಸ್ತ್ರೇ ರಾಜನ್ಸರ್ಮೇ ನಿರಬ್ರುವನ್‌ ॥ ೪೮ ॥ 








೪೧-೪೪. ಶಂಭುಗ್ರಾಮವೆಂದೂ ಆ ಗ್ರಾಮವು ಪ್ರಸಿದ್ಧವಾಯಿತು. 
ಲು ಭಯದಿಂದ ಓಡಿದ ವರ್ತಕರು ಸಮಿಸಾಪದಲ್ಲಿ ಗುಂಪು ಕೂಡಿ 
ಸ್ಮಣರ ಆಗಮನವನ್ನು ನಿರೀಕ್ಷಿಸುತ್ತ ಆ ಗ್ರಾಮಕ್ಕೆ ಮಂಡಲವೆಂದು 
ಟ್ಟು ವಾಸಿಸಿದರು. ಬ್ರಾಹ್ಮಣರ ಗುಂಪಿನಿಂದ ಚದರಿದಕೆಲವರು ವರ್ತಕರು 
ದಾರಿಯಲ್ಲಿ ಸಯಣಬೆಳೆಸಿ ಧರ್ಮಾರಣ್ಯದ ಸಮಾಸದಲ್ಲಿ ಒಟ್ಟು ಸೇರಿ 
ಇಕ್ರಾಂತರಾದರು. 

೪೫. "ಯಾವ ದಾರಿಯಲ್ಲಿ ನಾವು ಬಂದೆವೊ? ಯಾವ ದಾರಿಯಲ್ಲಿ 
ಹ್ಮಣರು ಸಾಗಿದರೊ? ಎಂದು ಚಿಂತಿಸುತ್ತ ಅಲ್ಲಿ ವಾಸಮಾಡಿದರು. 

೪೬. ಬೇರೆ ದಾರಿಯಲ್ಲಿ ಪ್ರಯಾಣ ಮಾಡಿದುದರಿಂದ ಅಡಾಲಂಜ 
ಹಿ ವಿಖ್ಯಾತವಾದ ಆ ಗ್ರಾಮದಲ್ಲಿ ನೆಲೆಸಿದರು. 

೪೭. ಅರಸ! ಯಾವ ಗ್ರಾಮದಲ್ಲಿ ಯಾವ ಹೆಸರಿನ ವೈಶ್ಯನು ವಾಸಿಸಿ 
3, ಆ ಗ್ರಾಮಕ್ಕೆ ಅವನ ಹೆಸರಾಯಿತು. 

೪೮. ವರ್ತಕರೂ, ವಿಪ್ರರೂ ಭಯಸೀಡಿತರಾಗಿ ಮೋಹಗೊಂಡುದರಿಂದ 
ಸ. ನೊೋಹನೆಂದು ಹೆಸರನು ಪಡೆದರು. 


ತಿ೫೪ ಶ್ರೀ ಸ್ಕಾಂದಮಹಾಪುರಾಣಂ 


ಏನಂ ಪ್ರಧರ್ಷಣಂ ನಷ್ಟಾಸ್ತೇ ಗತಾಶ್ಚ ದಿಶೋದಶ | 

ಧರ್ಮಾಂರಣ್ಯೇ ನ ತಿಸ್ಕಂತಿ ನಾಡವಾ ನಣಿಜೋಂಸಿವಾ ॥೪೯॥ 
ಉದ್ವಸಂ ಹಿ ತದಾ ಜಾತಂ ಧರ್ಮಾಂರಣ್ಯಂ ಚ ದುರ್ಲಭಂ । 

ಭೂಷಣಂ ಸರ್ವತೀರ್ಥಾನಾಂ ಕೃತಂ ಲೋಹಾಸುರೇಣ ತತ್‌ ॥ ೫೦॥ 
ನಷ್ಟದ್ದಿಜಂ ನಷ್ಟತೀರ್ಥಂ ಸ್ಥಾನಂ ಕೃತ್ವಾ ಹಿ ದಾನವಃ । 
ಪರಾಂ ಮುದಮನಾಷ್ಯೈನ ಜಗಾಮ ಸ್ವಾಲಯಂ ತತಃ ॥ ೫೧॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ95ರಣ್ಯಮಾಹಾತ್ಮ್ಯೇ "" ಜ್ಞಾತಿಭೇದ 
ವರ್ಣನಂ'' ನಾಮ ತ್ರಯೋನಿಂಶೋಧ್ಯಾಯಃ 





೪೯. ಹೀಗೆ ಬ್ರಾಹ್ಮಣರೂ ವರ್ತಕರೂ ದಿಕ್ಕುವಿದಿಕ್ಕುಗಳಿಗೆ ಓಡಿಹೋದು 
ದರಿಂದ ಧರ್ಮಾರಣ್ಯದಲ್ಲಿ ಯಾರೂ ಇರಲಿಲ್ಲ. 

೫೦. ಲೋಹಾಸುರನು ಸಕಲತೀರ್ಥಗಳಿಗೆ ಭೂಷಣವಾದ ಆ ಧರ್ಮಾರಣ್ಯ 
ವನ್ನು ಶೂನ್ಯಗೊಳಿಸಿದನು. 

೫೧. ಹೀಗೆ ಆ ಧರ್ಮಾರಣ್ಯವನ್ನು ಬ್ರಾಹ್ಮಣರೂ, ತೀರ್ಥವೂ ಇಲ್ಲದುದ 
ನ್ನಾಗಿಸಿ ಲೋಹಾಸುರನು ಸಂತೋಷಗೊಂಡು ತನ್ನ ಮನೆಗೆ ತೆರಳಿದನು. 








ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಮ 
ಮಾಹಾತ್ಮ್ಯದಲ್ಲಿ 46 ಜ್ಞ್ಞಾತಿಭೇದನರ್ಣನ''ವೆಂಬ 
ಇಪ್ಪತ್ತಮೂರನೆಯ ಅಧ್ಯಾಯವು ಮಂಗಿದುದು 


1 ಶ್ರೀಃ ॥ 


ಅಥ ಚತುರ್ವಿಂಶೊಣಧ್ಯಾಯಃ 


ಧರ್ಮಾರಣ್ಯತೀರ್ಥಪ್ರಭಾನಕಥನಂ 
ವ್ಯಾಸ ಉವಾಚ: 
ಏತತ್ತೀರ್ಥಸ್ಯ ಮಾಹಾತ್ಮ್ಯಂ ಮಯಾ ಪ್ರೋಕ್ತಂ ತವಾಂಗ್ರತಃ । 
ಅನೇಕಪೂರ್ವಜನ್ಮೋತ್ಕ ಶ್ಲ ಪಾತಕಫ್ನುಂ ಮಹೀಪತೇ noun 
ಸಾ ನಾನಾಮುತ್ತ ಮಂ ಸ್ಥಾ ನಂ ಪರಂ ಸ್ಕ ಸ್ಕಯನಂ ಮಹತ್‌ । 
ಸ್ವ ನಿಡಸ್ಕಾ ಗ್ರೆ € ಪುರಾ ಪ್ರೋಕ್ತ 0 ಮಕ ಓಡಿ ನ್ರೇಣ ಧೀಮತಾ ॥೨॥ 
ತಂ ಇ “ತತ್ರ ಸ್ನಾತ್ವಾ ಹಿ ಮೋಕ್ಸಸೇ ಸರ್ನಪಾತಕಾತ್‌ | 
ತಚ್ಛ್ರುತ್ವಾ ವ್ಯಾಸವಾಕ್ಯಂ ಹಿ ಧರ್ಮರಾಜೋ ಯುಧಿಷ್ಠಿರಃ nan 
ಧರ್ಮಾತ್ಮಜಸ್ತದಾ ತಾತ ಧರ್ಮಾಂರಣ್ಯಂ ಸಮಾವಿಶತ್‌ । 
ಮಹಾಪಾತಕನಾಶಾಯ ಸಾಧುಪಾಲನತತ್ಸರಃ men 
ವಿಗಾಹ್ಯ ತತ್ರ ತೀರ್ಥಾನಿ ದೇನತಾಯತನಾನಿ ಚ । 
ಇಷ್ಟಾಪೂರ್ತಾದಿಕಂ ಸರ್ವಂ ಕೃತಂ ತೇನ ಯಥೇಪ್ಸಿತಂ ॥೫॥ 
ತತಃ "ಸಾಸನಿನಿರ್ಮುಕ್ತ 8 ಬ್‌ ಸ ಸ್ವಕಂ ಪುರಂ।* 
ಇಂದ್ರಪ್ರಸ್ಥಂ ಮಹಾಸೇನ ಶಶಾಸ ೫ 40 ॥೬॥ 
ಕನ್ನಡದ ಅನುವಾದ 
ಧರ್ಮಾರಣ್ಯ ತೀರ್ಥಪ್ಪ ಭಾವಕಥನ 
೧. ವ್ಯಾಸನು ಹೇಳುತ್ತಾನೆ: ಮಹಾರಾಜ! ನಾನಾ ಜನ್ಮಗಳ ಪಾಪ 


ಗಳನ್ನು ನೀಗಿಸುವ ಈ ಧರ್ಮಾರಣ್ಯದ ಮಾಹಾತ್ಮ್ಯೆಯನ್ನು ನಾನು ನಿನಗೆ 
ಹೇಳಿದ್ದೆ (ನೆ. 

೨. ಹಿಂದೆ ಪಾ ್ರಿಜ್ಞ ನಾದ ಮಹಾದೇವನು ಸೃಂದನ ಮುಂದೆ ಈಕೆ ೀತ್ರವು 
ಸಕಲ ಕ್ಷೇತ್ರಗಳಲ್ಲಿ pe ಮವಾದುದೂ ಅತ್ಯಂತ ಮಂಗಳವನ್ನೀಯುವುದೂ 
ಆದ ಕ್ಷೇತ್ರವೆಂದು ಹೇಳಿರುವನು. 

೩-೪. ಧರ್ಮರಾಜ ! ನೀನು ಅಲ್ಲಿ ಮಿಂದರೆ ಸಕಲದುರಿತಗಳಿಂದ 
ಮುಕ್ತನಾಗುವೆ?' ಎಂದು ವ್ಯಾಸನು ಹೇಳಲು ಧರ್ಮರಾಜನು ಅದನ್ನು ಕೇಳಿ 
ಮಹಾ ಪಾಪನಿವಾರಣೆಗಾಗಿ ಧರ್ಮಾರಣ್ಯವನ್ನು ಹೊಕ್ಕನು. 

೫. ಅವನು ಅಲ್ಲಿ ತೀರ್ಥಗಳಲ್ಲಿ ಮಿಂದು ದೇವಾಲಯಗಳನ್ನು ಪ್ರವೇಶಿಸಿ 
ಯಥೇಚ್ಛವಾಗಿ ಯಾಗಮಾಡುವುದು, ಕೆರೆಕಟ್ಟುವುದು ಮೊದಲಾದ ಪವಿತ್ರ 
ಕಾರ್ಯಗಳನ್ನು ಮಾಡಿದನು. 

೬, ಜಲ ಜತ ಬಳಿಕ ಯುಧಿಷ್ಠಿರನು ಸಕಲ ಪಾಸಮುಕ್ತನಾಗಿ 
ಇಂದ್ರಪ್ರಸ್ಥ ಸ್ಕೈ ಪುರವನ್ನು ಸೆ (ರಿ ಭೂಮಂಡಲವನ್ನು ಆಳುತ್ತಿದ್ದನು. 


೨೫೬ ಶ್ರೀ ಸ್ಕಾಂಡಮಹಾಪುರಾಣಂ 


ಇದಂ ಹಿ ಸ್ಥಾನಮಾಸಾದ್ಯ ಯೇ ಶೃಣ್ವಂತಿ ನರೋತ್ತಮಾಃ । 


ತೇಷಾಂ ಭುಕ್ತಿಶ್ಚ ಮುಕ್ತಿಶ್ಚ ಭವಿಷ್ಯತಿ ನ ಸಂಶಯಃ ॥೭॥ 
ಳುಕ್ತ್ವಾ ಭೋಗಾನ್ಸಾರ್ಥಿವಾಂಶ್ಚ ಪರಂ ನಿರ್ವಾಣಮಾಪ್ಪ್ನಯುಃ । 
ಶ್ರಾದ್ಧಕಾಲೇ ಚ ಸಂಪ್ರಾಸ್ತೇ ಯೇ ಪಠಂತಿ ದ್ವಿಜಾತಯಃ HN 


ಉದೃತಾಃ ಪಿತರಸ್ತೈಸ್ತು ಯಾವಚ್ಚಂದ್ರಾರ್ಕಭೂನುಯಃ । 
ದ್ಯಾಪರೇ ಚ ಯುಗೇ ಭೂತ್ವಾ ನ್ಯಾಸೇನೋಕ್ತಂ ಮಹಾತ್ಮನಾ ॥೯॥ 
ವಾರಿಮಾತ್ರೇ ಧರ್ಮವಾಪ್ಕಾಂ ಗೆಯಾಶ್ರಾದ್ಧಫಲಂ ಲಭೇತ್‌ । 


ಅತ್ರಾಗತಸ್ಯ ಮರ್ತ್ಯಸ್ಯ ಸಾಪಂ ಯಮಪದೇ ಸ್ಥಿತಂ ॥೧೦॥ 
ಕಥಿತಂ ಧರ್ಮಪುತ್ರೇಣ ಲೋಕಾನಾಂ ಹಿತಕಾನ್ಯುಯಾ | 
ವಿನಾ ಅನ್ನೈರ್ನಿನಾ ದರ್ಭೈರ್ನಿನಾ ಚಾಸನನೇನ ವಾ ॥ ೧೧॥ 


ತೋಯೇನ ನಾಶಮಾಯಾತಿ ಕೋಟಿಜನ್ಮಕೃತಂ ತೃಘಂ । 
ಸಹಸ್ರ್ಪಮುರುಶೃಂಗೀಣಾಂ ಧೇನೂನಾಂ ಕುರುಜಾಂಗಲೇ । 

ದತ್ತಾ ಸೂರ್ಯಗ್ರಹೇ ಪುಣ್ಯಂ ಧರ್ಮವಾಪ್ಕಾಂ ಚ ತರ್ಪಣಂ ॥ ೧೨॥ 
ಏತದ್ದಃ ಕಥಿತಂ ಸರ್ವಂ ಧರ್ಮಾಂರಣ್ಯಸ್ಯ ಚೇಷ್ಟಿತಂ | 

ಯಚ್ಛುತ್ವಾ ಬ್ರಹ್ಮಹಾ ಗೋಫ್ನೋ ಮುಚ್ಯತೇ ಸರ್ವಪಾತಸೈಃ ॥ ೧೩ ॥ 

೭. ನರನು ಇಲ್ಲಿಗೆ ಬಂದು ಇದರ ಮಹಾತ್ಮ್ಯೆಯನ್ನು ಕೇಳಿದರೆ ಅವನಿಗೆ 
ನಿಷಯಭೋಗವೂ, ಮುಕ್ತಿಯೂ ಲಭಿಸುವುದು. 

೮೯, ಭೂಮಿಯಲ್ಲಿ ಸಕಲ ವಿಷಯಭೋಗಗಳನ್ನನುಭವಿಸಿ ನೋಕ್ಸವನ್ನು 
ಪಡೆಯುವನು. ಶ್ರಾದ್ಭ ಕಾಲದಲ್ಲಿ ಬ್ರಾಹ್ಮಣರು ಇದನ್ನು ಪಠಿಸಿದರೆ ಅವರ ಪಿತೃ 
ಗಳು ಚಂದ್ರ, ಸೂರ್ಯ, ಭೂಮಿಗಳು ಇರುವವರೆಗೆ ಉದ್ಭೃತರಾಗುವರು. 
ಹೀಗೆಂದು ದ್ವಾಪರಯುಗದಲ್ಲಿ ಮಹಾತ್ಮರಾದ ವ್ಯಾಸರು ಹೇಳಿರುವರು. 

೧೦-೧೨. ಇಲ್ಲಿರುವ ಧರ್ಮಕೂಪದಲ್ಲಿ ನೀರಿನಿಂದ ತರ್ಪಣಗೈ ದರೆ ಗಯಾ 
ಕ್ಸೇತ್ರದಲ್ಲಿ ಶ್ರಾದ್ಧ ಮಾಡಿದಷ್ಟು ಫಲವು ಲಭಿಸುವುದು. ಇಲ್ಲಿಗೆ ಬಂದ ಮನುಷ್ಯನ 
ಪಾಸವು ಯಮಪುರಿಯನ್ನೈದುವುದು. ಹೀಗೆಂದು ಧರ್ಮರಾಜನು ಲೋಕಕ್ಕೆ 
ಹಿತವನ್ನುಂಟುಮಾಡಲಿಚ್ಛೆಯಿಂದ ಹೇಳಿದ್ದಾನೆ. ಅನ್ನ, ದರ್ಭೆ, ಆಸನಗಳಿಲ್ಲದೆ 
ಕೇವಲ ತರ್ಪಣಹೊಂದುವುದರಿಂದ ಮಾನವನು ಅನೇಕ ಜನ್ಮಗಳಲ್ಲಿ ಮಾಡಿದ 
ಪಾಪದಿಂದ ಮುಕ್ತನಾಗುವನು. ಧರ್ಮವಾಪಿಯಲ್ಲಿ ತರ್ಪಣಮಾಡುವುದರಿಂದ 
ಕುರುಕ್ಷೇತ್ರದಲ್ಲಿ ಸೂರ್ಯಗ್ರಹಣಕಾಲದಲ್ಲಿ ದೊಡ್ಡಕೊಂಬುಗಳುಳ್ಳ ಸಾವಿರ 
ಹಸುಗಳನ್ನು ದಾನಮಾಡಿದ ಪುಣ್ಯವು ದೊರಕುವುದು. 

೧೩. ಧರ್ಮಾರಣ್ಯದ ಮಾಹಾತ್ಮ್ಯವನ್ನೆ ಲ್ಲ ನಿಮಗೆ ಹೇಳಿರುನೆನು. 
ಇದನ್ನು ಕೇಳಿದರೆ ಬ್ರಹ್ಯಹತ್ಯ ಮತ್ತು ಗೋಹತ್ಯಮಾಡಿದವನೂ ಸಮಸ್ತ 
ಮರಿತಗಳಿಂದ ಮುಕ್ತನಾಗುವನು. 


ಚತುರ್ನಿಂಶತೋತಿಧ್ಯಾಯಃ ೨೫೭ 


ಏಕವಿಂಶತಿನಾಕೈಸ್ತು ಗಯಾಯಾಂ ಪಿಂಡಪಾತನೇ । 
ತತ್ಸಲಂ ಸಮವಾಪ್ನೋತಿ ಸಕೃದಸ್ಮಿಂಛ್ರುತೇ ಸತಿ ॥ ೧೪ ॥ 


ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ನಭಾಗೇ ಧರ್ಮಾಂರಣ್ಯ ಮಾಹಾಕ್ಕೆ 3. ""ಧರ್ಮಾರಣ್ಯ 
ಸೇರ್ಥಪ ಫಭಾವಕಥನಂ'' ನಾಮ ಚತುರ್ವಿಂತೋಂಧಾ'ಯಃ 


೧೪. ಒಂದುಸಾರಿ ಈ ಮಾಹಾತ್ಮ್ಯೆಯನ್ನು ಕೇಳಿದರೆ ಇತ್ಬತ್ತೊಂದುಸಾರಿ 
ಗಯೆಯಲ್ಲಿ ನಿತೃ ಗಳಿಗೆ ಹಿಂಡಸ್ರ ದಾನಮಾಡಿದ ಫಲವು ಲಭಿಸುವುದು. 





ಇಲ್ಲಿಗೆ ಎಂಬತ್ತೊಂದುಸಾಪಿರ ಶ್ಲೊ «ಕಗಳ ಸಂಹಿತೆಯೆಂದು ಪ ಪ್ರಸಿದ್ಧನಾದ 
ಶ್ರೀ ಸ್ಕಾ ರದಮಹಾಪುರಾಣದ ಮೂರನೆಯ ಬ ನ್ರಿಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮದಲ್ಲಿ 64 ಧರ್ಮಾರಣ್ಯತೀರ್ಥಪ್ರ ಭಾನಕಥನ'3ನೆಂಬ 
ಇಪ್ಸತ್ತನಾಲ್ಯನೆಯ ಅಧ್ಯಾಯವು ಮುಗಿದುದು 


1 ಶ್ರೀಃ ॥ 


ಅಥ ಪಂಚವಿಂಶೋಧ್ಯಾಯಃ 


ಸರಸ್ತತೀಮಾಹಾತ್ಮ್ಯವರ್ಣನಂ 
ಸೂತ ಉವಾಚ: 

ಅಥಾಂನ್ಯತ್ಸಂಪ್ರವಕ್ಸ್ಸ್ಯಾಮಿ ತೀರ್ಥಮಾಹಾತ್ಮ್ಯಮುತ್ತಮಂ | 
ಧರ್ಮಾಂರಣ್ಕೇ ಯಥಾಃಃನೀತಾ ಸತ್ಯಲೋಕಾತ್ಸರಸ್ಸತೀ un 
ಮಾರ್ಕಂಡೇಯಂ ಸುಖಾಸೀನಂ ಮಹಾಮುನಿನಿಷೇನಿತಂ । 
ತರುಣಾದಿತ್ಯಸಂಕಾಶಂ ಸರ್ವಶಾಸ್ತ್ರನಿಶಾರದಂ ॥೨॥ 
ಸರ್ವತೀರ್ಥ ಮಯಂ ದಿನ್ಯಮೃಷೀಣಾಂ ಪ್ರನರಂ ದ್ವಿಜಂ | 

`ಆಸನಸ್ಥಂ ಸಮಾಯುಕ್ತಂ ಧನ್ಯಂ ಪೂಜ್ಯಂ ದೃಢವ್ರತಂ Han 
ಯೋಗಾತ್ಮಾನಂ ಪರಂ ಶಾಂತಂ ಕಮಂಡಲುಧರಂ ವಿಭುಂ । 
ಅಕ್ಸ್‌ಸೂತ್ರಧರಂ ಶಾಂತಂ ತಥಾ ಕಲ್ಫಾಂತವಾಸಿನಂ ॥೪॥ 
ಅಕ್ಲೋಭ್ಯಂ ಜ್ಞಾನಿನಂ ಸ್ವಸ್ಥಂ ಪಿತಾಮಹಸಮದ್ಯುತಿಂ । 

ಏನಂ ದೃಷ್ಟ್ಯಾ ಸಮಾಧಿಸ್ಸಂ ಪ್ರಹರ್ಸೊೋತ್ಸುಲ್ಲಲೋಚನಂ ॥೫॥ಭ 
ಪ್ರಣಮ್ಯ ಸ್ತುತಿಭಿರ್ಯುಕ್ತ್ಯಾ ಮಾರ್ಕಂಡಂ ಮುನಯೋಂಬ್ರುವನ್‌ । 
ಭಗವನ್ನೈಮಿಷಾಂರಣ್ಯೇ ಸತ್ರೇ ದ್ವಾದಶವಾರ್ಹಿಕೇ ॥೬॥ 


ಕನ್ನಡದ ಅನುವಾದ 
ಸರಸ್ವತೀಮಾಹಾತ್ಮ್ಯವರ್ಣನ 


೧. ಸೂತನು ಹೇಳುತ್ತಾನೆ: ತರುವಾಯ ನಿನಗೆ ಮತ್ತೊಂದು ಉತ್ತಮ 
ಕೀರ್ಥದ ಮಾಹಾತ್ಮ್ಯವನ್ನು ಹೇಳುವೆನು. ಧರ್ಮಾರಣ್ಯಕ್ಕೆ ಸತ್ಯಲೋಕದಿಂದ 
ಸರಸ್ವತಿಯನ್ನು ತಂದ ಬಗೆಯನ್ನು ತಿಳಿಸುವೆನು, ಕೇಳು. 

೨-೯, ಮುನಿಗಳು ಸುಖವಾಗಿ ಕುಳಿತಿರುವವನೂ, ಮಹರ್ಷಿಗಳಿಂದ 
ಸೇವಿಸಲ್ಪಟ್ಟಿ ವನೂ, ತರುಣಸೂರ್ಯನಿಗೆ ಸಮಾನನೂ, ಸಕಲ ಶಾಸ್ತ್ರ ನಿಪುಣನ್ಕೂ 
ಸಕಲ ದಿವ್ಯತೀರ್ಥರೂಪನೂ, ಮಹರ್ಷಿವರೇಣ್ಯನೂ, ಪುಣ್ಯಶಾಲಿಯೂ, 
ಪೂಜ್ಯನೂ, ಸ್ಥಿರವಾದ ವ್ರತವುಳ್ಳವನೂ, ಯೋಗಿಯೂ, ಅತಿ ಶಾಂತನೂ, 
ಕಮಂಡಲಧಾರಿಯೂ, ಜಪಸರವನ್ನುಹಿಡಿದವನೂ, ಚಿರಂಜೀವಿಯೂ, ಸ್ಥಿರನೂ, 
ಜ್ಞಾನಿಯೂ, ದೃಢವಾದ ಮನಸ್ಸುಳ್ಳವನೂ, ಬ್ರಹ್ಮನಿಗೆ ಸಮಾನವಾದ 
ಕಾಂತಿಯುಳ್ಳವನೂ, ಸಮಾಧಿನಿರತನೂ, ಸಂತೋಷದಿಂದರಳಿದ ನಯನ 
ಗಳುಳ್ಳವನೂ ಆಗಿರುವ ಮಾರ್ಕಂಡೇಯನನ್ನು ನಮಸ್ಕರಿಸಿ ಸ್ತುತಿಸಿ ಇಂತೆಂದರು. 
ಪೂಜ್ಯರೆ! ನೈಮಿಷಾರಣ್ಯದಲ್ಲಿ ಹನ್ನೆರಡುವರ್ಷ ನೆರವೇರಿಸುವ ಸತ್ರಯಾಗದಲ್ಲಿ 


ಪಂಚವಿಂಶೋಳಧ್ಮಾಯಃ ೨೫೯. 


ತ್ವಯಾಃನತಾರಿತಾ ಬ್ರಹ್ಮನ್ನದೀ ಯಾ ಬ್ರಹ್ಮಣಃ ಸುತಾ । 


ತಥಾ ಕೃತಂ ಚ ತತ್ರೈನ ಗಂಗಾಂನತರಣಂ ಕ್ಟಿತೌ nan 
ಗೀಯಮಾನೇ ಕುಲಪತೇಃ ಶೌನಕಸ್ಯ ಮುನೇಃ ಪುರಃ । 

ಸೂತೇನ ಮುನಿನಾ ಖ್ಯಾತನುನ್ಯೇಷಾಮುಪಿ ಶೃಣ್ವತಾಂ ॥೮॥ 
ತಚ್ಛು ತ್ವಾ ಮಹದಾಖ್ಯಾನಮಸ್ಮಾಕಂ ಹೃದಿ ಸಂಸ್ಥಿತಂ | 

ಪಾಸಸ್ಟೀ ಪುಣ್ಯಜನನೀ ಪ್ರಾಣಿನಾಂ ದರ್ಶನಾದಪಿ ॥೯॥ 


ಮಾರ್ಕಂಡೇಯ ಉವಾಚ: 
ಧರ್ಮಾಃ ರಣ್ಯೇ ಮಯಾ ವಿಪ್ರಾಃ ಸತ್ಯಲೋಕಾತ್ಸರಸ್ಥತೀ ] 


ಸಮಾನೀತಾ ಸುರೇಖಾದ್ರೌ ಶರಣ್ಯಾ ಶರಣಾಂರ್ಥಿನಾಂ noon 
ಭಾದ್ರಪದೇ ಸಿತೇಪಕ್ಸೇ ದ್ವಾದಶೀ ಪುಣ್ಯಸಂಯುತಾ । 

ತತ್ರ ದ್ಯಾರಾನತೀತೀರ್ಥೇೇ ಮುನಿಗಂಧರ್ವಸೇನಿತೇ ॥ ೧೧॥ 
ತಸ್ಮಿನ್ಹಿನೇ ಚ ತತ್ತೀರ್ಥೇ ಪಿಂಡದಾನಾದಿ ಕಾರಯೇತ್‌ । 

ತತ್ಸಲಂ ಸಮನಾಪ್ಲೋತಿ ಪಿತ್ರೂಣಾಂ ದತ್ತಮಕ್ಸಯಂ ॥ ೧೨ ॥ 
ಮಹದಾಖ್ಯಾನಮಖಿಲಂ ಪಾಪಫ್ನುಂ ಪುಣ್ಯದಂ ಚ ಯತ್‌ । 

ಪವಿತ್ರಂ ಯತ್ಪನಿತ್ರಾಣಾಂ ಮಹಾಪಾತಕನಾಶನಂ ॥ ೧೩॥ 
ಸರ್ವಮಂಗಲಮಾಂಗಲ್ಯಂ ಪುಣ್ಯಂ ಸಾರಸ್ಕತಂ ಜಲಂ । 

ಊರ್ಧ್ವಂ ಕಂ ದಿನಿ ಯತ್ಪುಣ್ಯಂ ಪ್ರಭಾಸಾಂತೇ ವ್ಯವಸ್ಥಿತಂ ॥ ೧೪ ॥' 


ಸೂತರು ಶೌನಕರ ಮುಂದೆ ಎಲ್ಲ ಮುನಿಗಳು ಕೇಳುತ್ತಿರುವಾಗ, ಬ್ರಹ್ಮನ 
ಮಗಳಾಗಿ ದರ್ಶನಮಾಡುವುದರಿಂದಲೇ ಎಲ್ಲ ಪ್ರಾಣಿಗಳ ಪಾಪಗಳನ್ನು ನೀಗಿಸಿ 
ಪುಣ್ಯವನ್ನುಂಟುಮಾಡುವ ಸರಸ್ವತೀನದಿಯನ್ನೂ, ಗಂಗೆಯನ್ನೂ, ಭೂಮಿಗೆ 
ಇಳಿಸಿದ ಕಥೆಯನ್ನು ನೀವು ಹೇಳಿದಿರಿ. ಅದು ಈಗ ನಮ್ಮ ಮನಸ್ಸಿನಲ್ಲಿ ನೆಲಸಿದೆ. 

೧೦. ಮಾರ್ಕಂಡೇಯನು ಹೇಳುತ್ತಾನೆ: ಅಯ್ಯಾ ದ್ವಿಜರೆ! ನಾನು 
ಧರ್ಮಾರಣ್ಯದಲ್ಲಿ ರಕ್ಷಣೆಯನ್ನಪಸೇಕ್ಸಿಸುವವರನ್ನು ಪೊರೆಯುವ ಸರಸ್ವತೀನದಿ 
ಯನ್ನು ಸತ್ಯಲೋಕದಿಂದ ಸುರೇಖಪರ್ವತದಲ್ಲಿಳಿಸಿದೆನು. 

೧೧-೧೨. ಭಾದ್ರಪದ ಕೃಷ್ಣ ಸಕ್ಟದ ದ್ವಾದಶಿಯ ದಿನ ಮುನಿಗಳಿಂದಲ್ಲೂ, 
ಗಂಧರ್ವರಿಂದಲೂ ಸೇವಿಸಲ್ಪಟ್ಟ ಆ ದ್ವಾರಾವತೀತೀರ್ಥದಲ್ಲಿ ಪಿತೃಗಳಿಗೆ 
ಮಾಡಿದ ಪಿಂಡಪ್ರದಾನವು ಅಕ್ಟಯವಾಗುವುದು. 

೧೩. ಈ ಮಹಾಖ್ಯಾನವು ಅತಿ ಸನಿತ್ರವೂ, ಪಾಸನಾಶಕವೂ, ಪುಣ್ಯ 
ಪ್ರದವೂ ಆಗಿರುವುದು. 

೧೪. ದೇವಲೋಕದಲ್ಲಿರುವ ಪ್ರಭಾಸತೀರ್ಥವು ಸಮಸ್ತ ಮಂಗಳವನ್ನೀ 
ಯುವ ಈ ಸರಸ್ವತೀತೀರ್ಥದಿಂದುಂಬಾಗಿರುವುದು. 


೨೬೦. ಶ್ರೀ ಸ್ಕಾಂದಮ ಹಾಪುರಾಣಂ 


ಸಾರಸ್ಪತಜಲಂ ನ್ರೂಣಾಂ ಬ್ರಹ್ಮಹತ್ಯಾಂ ನ್ಯಪೋಹತಿ । 


ಸರಸ್ಪತ್ಯಾಂ ನರಾಃ ಸ್ನಾತಾ ಸಂತರ್ಸ್ಯ ಸಿತೃದೇನತಾಃ | 


ಪಶ್ಚಾಶ್ಸಿಂಡಪ್ರದಾತಾರೋ ನ ಭವಂತಿ ಸ್ತನಂಧಯಾಃ ॥ ೧೫ ॥ 
ಯಥಾ ಕಾಮದುಘಾ ಗಾವೋ ಭವಂತೀಷ್ಟಫಲಪ್ರದಾಃ । 
ತಥಾ ಸ್ವರ್ಗಾಂಪನರ್ಗೈ ಕಹೇತುಭೂತಾ ಸರಸ್ವತೀ ॥ ೧೬॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "" ಸರಸ್ಪತೀ 
ಮಾಹಾತ್ಮ್ಯವರ್ಣನಂ ನಾಮ ಪಂಚನಿಂಶೋ6ಧ್ಯಾಯಃ 


೧೫. ಸರಸ್ವತೀನದಿಯ ನೀರು ಮಾನವರ ಬ್ರಹ್ಮಹತ್ಯಾದೋಷವನ್ನೂ 
ಪರಿಹರಿಸುವುದು. ಸರಸ್ವತೀನದಿಯಲ್ಲಿ ಮಿಂದು ನಿಂಡಪ್ರ ದಾನಮಾಡಿ ಪಿತೃ 
ಗಳನ್ನು ತೃಪ್ರಿಗೊಳಿಸುವವರು ತಿರುಗಿ ಭೂಲೋಕದಲ್ಲಿ ಹುಟ್ಟುವುದಿಲ್ಲ. 

೧೬. ಕಾಮದೇನುವು ಇಷ್ಟಾರ್ಥಗಳನ್ನೀಯುವಂತೆ ಸರಸ್ವತೀನದಿಯು 
ತನ್ನಲ್ಲಿ ಮಿಂದವರಿಗೆ ಸ್ವರ್ಗ ಮತ್ತು ಮೋಕ್ಬಗಳನ್ನು ಕೊಡುವುದು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ ದಲ್ಲಿ ಟ್ರಿ ಸರಸ್ಪತೀಮಾಹಾತ್ಮ್ಯವರ್ಣನ''ನೆಂಬ 
ಇಪ್ಪತ್ತೈದನೆಯ ಅಧ್ಯಾಯವು ಮಂಗಿದುದು 


॥| ಶ್ರೀಃ ॥ 


ಅಥ ಸಡ್ತಿಂಶೋಧ್ಯಾಯಃ 


ದ್ವಾರಕಾಮಾಹಾತ್ಮ್ಯನರ್ಣನಂ 
ವ್ಯಾಸ ಉವಾಚ:- 
ಮಾರ್ಕಂಡೇಯೋದ್ಭಾ ತಂ ವೈ ಸ್ಪರ್ಗದ್ವಾರಮಸಾವೃತಂ | 
ತತ್ರ ಯೇ ದೇಹಸಂತ್ಯಾಗಂ ಕುರ್ವಂತಿ ಫಲಕಾಂಕ್ಸ್ರಯಾ non 
ಲಭಂತೇ ತತ್ಸಲಂ ಹ್ಯಂತೇ ನಿಷ್ಠ್ಣೋಃ ಸಾಯುಜ್ಯಮಾಪ್ಟ್ನಯುಃ । 
ಅತಃ ಕಂ ಬಹುನೋಕ್ತೇನ ದ್ವಾರವತ್ಕಾಂ ಸದಾ ನರೈಃ ॥೨॥ 


ದೇಹತ್ಯಾಗಃ ಪ್ರಕರ್ತವ್ಯೋ ವಿಷ್ಣುಲೋಕಜಿಗೀಷಯಾ । 
ಅನಾಶಕೇ ಜಲೇ ನಾಂಗ್ಸ್ಸ್‌ ಯೇ ಚ ಸಂತಿ ನರೋತ್ತಮಾಃ । 


ಸರ್ವಪಾಪನಿನಿರ್ಮುಕ್ತಾ ಯಾಂತಿ ವಿಷ್ಣೋಃ ಪುರೀಂ ಸದಾ ॥೩॥ 
ಅನ್ಯೋಪಿ ವ್ಯಾಧಿರಹಿತೋ ಗಚ್ಛೇದನಶನಂ ತುಯಃ। 
ಸರ್ವಪಾಪನಿನಿರ್ಮುಕ್ತೋ ಯಾತಿ ವಿಷ್ಣೋಃ ಪುರೀಂ ನರಃ nen 
ಶತನರ್ಷಸಹಸ್ರಾಣಾಂ ನಸೇದಂತೇ ದಿನಿ ದ್ವಿಜಃ । 

ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಪವಿತ್ರಂ ಪಾನನಂ ಭುವಿ ॥೫॥ 


ಕನ್ನಡದ ಅನುವಾದ 
ದ್ವಾರಳಾಮಾಹಾತ್ಮ್ಯನರ್ಣನ 


೧-೩. ವ್ಯಾಸನು ಹೇಳುತ್ತಾನೆ :-ಮಾರ್ಕಂಡೇಯಮಹರ್ಷಿಯು ಸ್ವರ್ಗದ 
ಬಾಗಿಲನ್ನು ತೆಗೆದಿರುವನು. ಅಲ್ಲಿ ಯಾರು ಯಾವ ಫಲದ ಅನಸೇಕ್ಸೆಯಿಂದ 
ದೇಹವನ್ನು ಬಿಡುವರೊ, ಅವರು ಆ ಫಲವನ್ನು ಪಡೆದು ಕೊನೆಯಲ್ಲಿ ವಿಷ್ಣುವಿನ 
ಸಾಯುಜ್ಯವನ್ನು ಹೊಂದುವರು. ಇನ್ನು ಹೆಚ್ಚು ಹೇಳಿ ಪ್ರಯೋಜನವೇನು? 
ಆ ದ್ವಾರವತಿಯಲ್ಲಿ ವಿಷ್ಣುಲೋಕವನ್ನು ಹೊಂದುವ ಅಪೇಕ್ಷೆಯಿಂದ ನೀರಿನಲ್ಲಾ 
ಗಲಿ, ಅಗ್ನಿಯಲ್ಲಾಗಲಿ ದೇಹವನ್ನು ತ್ಯಜಿಸಿದ ನರೋತ್ತಮರು ಸಕಲ ಪಾಪ 
ಮುಕ್ತರಾಗಿ ವೈಕುಂಠವನ್ನು ಹೊಂದುವರು. 

೪-೫. ಅಲ್ಲಿ ರೋಗವಿಲ್ಲದವನು ಉಪವಾಸಮಾಡಿದರೆ ಸಕಲ ಪಾಪವಿಮುಕ್ತ 
ನಾಗಿ ನೈಕುಂಠವನ್ನು ಸೇರುವನು. ಒಂದುಲಕ್ಸ ವರ್ಷದವರೆಗೆ ಆ ದ್ವಿಜನು 
ಸ್ವರ್ಗವಾಸಿಯಾಗುವನು. ಭೂಮಿಯಲ್ಲಿ ಬ್ರಾಹ್ಮಣರಿಗಿಂತ ಪವಿತ್ರವಾದ ವಸ್ತುವು 


ಇಲ್ಲ. 


೨೬೨ ಶ್ರೀ ಸ್ಕಾಂಡೆಮಹಾಪುರಾಣಂ 


ಉಪನಾಸೈಸ್ತಥಾ ತುಲ್ಕಂ ತಪಃ ಕರ್ಮ ನ ವಿದ್ಯತೇ 

ನಾಸ್ತಿ ನೇದಾತ್ಸರಂ ಶಾಸ್ತ್ರಂ ನಾಸ್ತಿ ಮಾತೃಸಮೋ ಗುರುಃ ॥೬॥ 
ನ ಧರ್ಮಾತ್ಸರಮಸ್ತೀಹ ತಪೋ ನಾಂನಶನಾತ್ಸರಂ । 

ಸ್ನಾತ್ವಾ ಯಃ ಕುರುತೇಂತ್ರಾಪಿ ಶ್ರಾದ್ಧಂ ಪಿಂಡೋದಕಕ್ರಿಯಾಂ ॥೭॥ 
ತೃಪ್ಯಂತಿ ಸಿತರಸ್ತಸ್ಯ ಯಾವದ್ದ ಹ್ಮದಿವಾನಿಶಂ । 


ಬ್‌ 
ತತ್ರ ತೀರ್ಥೇ ನರಃ ಸ್ನಾತ್ವಾ ಕೇಶನಂ ಯಸ್ತು ಪೂಜಯೇತ್‌ wen 
ಸಮುಕ್ತಃ ಪಾತಕೈಃ ಸರ್ವೈರ್ನಿಷ್ಣುಲೋಕಮನಾಪ್ಲುಯಾತ್‌ । 
ತೀರ್ಥಾನಾಮುತ್ತಮಂ ತೀರ್ಥಂ ಯತ್ರ ಸನ್ನಿಹಿತೋ ಹರಿಃ nen 


ಹರತೇ ಸಕಲಂ ಪಾಪಂ ತಸ್ಮಿಂಸ್ತೀರ್ಥೇ ಸ್ಥಿತಸ್ಯ ಸಃ । 
ಮುಕ್ತಿದಂ ಮೋಕ್ಬ್ಸಕಾಮಾನಾಂ ಧನದಂ ಚ ಧನಾರ್ಥಿನಾಂ | 


ಆಯುರ್ದಂ ಸುಖದಂ ಚೈನ ಸರ್ವಕಾನುಫಲಪ್ರದಂ ॥೧೦॥ 
ಕಿಮನ್ಯೇನಾಂತ್ರ ತೀರ್ಥೇನ ಯತ್ರ ದೇವೋ ಜನಾರ್ದನಃ । 

ಸ್ವಯಂ ವಸತಿ ನಿತ್ಯಂ ಹಿ ಸರ್ವೇಷಾಮನುಕಂಪಯಾ ॥ ೧೦ ೧ 
ತತ್ರ ಯದ್ದೀಯತೇ ಕಿಂಚಿದ್ದಾನಂ ಶ್ರದ್ಧಾಸಮನ್ಹಿತಂ | 

ಅಕ್ಷುಯಂ ತದ್ಭನೇತ್ಸರ್ವಮಿಹಲೋಕೇ ಪರತ್ರ ಚ ॥ ೧೨॥ 


೬. ಉಪವಾಸಕ್ಕೆ ಸದೃಶವಾದ ತಪಸ್ಸೂ, ಕರ್ಮವೂ, ವೇದಕ್ಕಿಂತ 
ಉತ್ತಮವಾದ ಶಾಸ್ತ್ರವೂ, ತಾಯಿಗೆ ಸಮಾನವಾದ ಗುರುವೂ ಇಲ್ಲ. 

೭-೧೦. ಧರ್ಮಕ್ಕೆಂತಲೂ ಉತ್ತಮವಾದ ತಪಸ್ಸಿಲ್ಲ. ಉಪವಾಸ 
ಕ್ಕಿಂತಲೂ ಉತ್ತಮವಾದ ಧರ್ಮಾನುಷ್ಠಾನವಿರುವುದಿಲ್ಲ. ಇಲ್ಲಿ ಮಿಂದು ಶ್ರಾದ್ಧ 
ಮಾಡಿ ತರ್ಪಣಗೈ ದರೆ ಅವನ ಪಿತೃಗಳು ಬ್ರಹ್ಮನ ಹಗಲು ರಾತ್ರಿಗಳು ಇರುವ 
ವರಿಗೆ ತೃಪ್ತಿಗೊಳ್ಳು ತ್ತಾರೆ. ಈ ತೀರ್ಥದಲ್ಲಿ ಮಾನವನು ಮಿಂದು ವಿಷ್ಣುವನ್ನು 
ಪೂಜಿಸಿದರೆ ಅವನು ಪಾಸರಹಿತರಾದ ಎಲ್ಲರೊಡನೆ ನಿಷ್ಣುಲೋಕವನ್ನು ಸೇರು 
ವನು. ಸಮಸ್ತತೀರ್ಥಗಳಲ್ಲಿಯೂ ಉತ್ತಮವಾದ ಈ ತೀರ್ಥದಲ್ಲಿ ಶ್ರೀವಿಷ್ಣುವು 
ಸನ್ಸಿಹಿತನಾಗಿದ್ದು ಇಲ್ಲಿರುವ ಭಕ್ತರ ಸಕಲಪಾಪಗಳನ್ನು ಸರಿಹರಿಸುವನು. ಈ 
ತೀರ್ಥವು ನೋಕ್ಸಾರ್ಥಿಗಳಿಗೆ ಮೋಕ್ಷವನ್ನೂ, ಧನಾರ್ಥಿಗಳಿಗೆ ಧನವನ್ನೂ, 
ಆಯುಸ್ಸು, ಸುಖ, ಸಕಲೇಷ್ಟಾರ್ಥಗಳನ್ನೂ ಕೊಡುವುದು. 

೧೧. ಇಲ್ಲಿ ನಿಷ್ಣುವು ಸಮಸ್ತ ಜನರಲ್ಲಿ ದಯೆಯಿಂದ ನಿತ್ಯವೂ ವಾಸವಾಗಿ 
ರುವುದರಿಂದ ಬೇರೆ ತೀರ್ಥಗಳಿಂದೇನು? 

೧೨. ಇಲ್ಲಿ ಶ್ರದ್ಧೆಯಿಂದ ಯಾವ ಸಣ್ಣ ದಾನವನ್ನು ಮಾಡಿದರೂ ಅದು 
ಇಹಪರಗಳಲ್ಲಿ ಅಕ್ಸಯವಾಗುವುದು. 


ಸಡ್ದಿಂಶೋರಧ್ಯಾಯಃ ೨೬೩ 


ಯಜ್ಞೈರ್ದಾನೈಸ್ತಪೋಭಿಶ್ನ ಯತ್ಛಲಂ ಪ್ರಾಪ್ಯತೇ ಬುಧೈಃ । 


ತದತ್ರ ಸ್ನಾನಮಾತ್ರೇಣ ಶೂದ್ರೈರಪಿ ಸುಸೇವಕೈಃ ॥ ೧೩ ॥ 
ತತ್ರ ಶ್ರಾದ್ಧಂ ಚ ಯಃ ಕುರ್ಯಾದೇಕಾದಶ್ಯಾಮುಪೋಸಿತಃ । 

ಸ ಸಿತ್ರೂನುದ್ಧರೇತ್ಸರ್ನಾನ್ನರಕೇಭ್ಯೋ ನ ಸಂಶಯಃ 1 ೧೪ ॥ 
ಅಕ್ಬಯ್ಯಾಂ ತೃಪ್ತಿಮಾಪ್ಟೋತಿ ಪರಮಾತ್ಮಾ ಜನಾರ್ದನಃ । 
ದೀಯತೆಣತ್ರ ಯದುದ್ದಿಶ್ಯ ತದಕ್ಟಯ್ಯನುದಾಹೃತಂ ॥ ೧೫ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ " ದ್ವಾರಕಾ 
ಮಾಹಾತ್ಮ್ಯವರ್ಣನಂ?'ನಾಮ ಷಡ್ತಿಂಶೋಧ್ಯಾಯಃ 





೧೩. ಪ್ರಾಜ್ಞರು ಯಜ್ಞ, ದಾನ, ತಸಸ್ಸುಗಳಿಂದ ಪಡೆಯುವ ಫಲವನ್ನು 
ಇಲ್ಲಿ ಸ್ನಾನಮಾಡುವುದರಿಂದಲೇ ಪಡೆಯಬಹುದಲ್ಲದೆ, ಚೆನ್ನಾಗಿ ಸೇವಿಸುವ 
ಶೂದ್ರರೂ ಸ್ನಾನದಿಂದ ಅದೇ ಫಲವನ್ನೇ ಪಡೆಯುವರು. 

೧೪. ಇಲ್ಲಿ ಏಕಾದಶೀ ದಿವಸ ಉಪವಾಸವಿದ್ದು ಶ್ರಾದ್ಭಮಾಡಿದ ಮಾನವನು 
ಸಕಲ ಪಿತೃಗಳನ್ನು ನರಕದಿಂದ ಉದ್ಧಾರಮಾಡುವನು. 

೧೫, ಇಲ್ಲಿ ವಿಷ್ಣುನನ್ನುದ್ದೇಶಿಸಿ ಕೊಟ್ಟ ದಾನವು ಅಕ್ಬಯವಾಗುವುದು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರೆಣ್ಯ 
ಮಾಹಾತ್ಮ್ಮ್ಯದಲ್ಲಿ "" ದ್ವಾರಕಾಮಾಹಾತ್ಮ್ಯವರ್ಣನ''ವೆಂಬ 
ಇಪ್ಪತ್ತಾರನೆಯ ಅಧ್ಯಾಯವು ಮುಗಿದುದು 


1 ಶ್ರೀಃ 8 
ಅಥ ಸಪ್ತನಿಂಶೋಧ್ಯಾ ಯಃ 


ಬಲಾಹಕೋಪಾಖ್ಯಾನವರ್ಣನಂ 


ಸೂತ ಉವಾಚ:- 
ತತ್ರ ತಸ್ಯ ಸಮಿಾಪಸ್ಥ ಂ ಮಾರ್ಕಂಡೇನೋಪಲಕ್ಸಿತಂ | 
ತೀರ್ಥಂ” ಗೋವತ್ಸ ಸಂಜ್ಞ ೦ ತು ಸರ್ವತ್ರ ಭುನಿ ಸಂತ್ರು ತಂ mon 
ತತ್ರಾಃನತೀರ್ಯ "ಗೋವತ್ಸ ಸ್ಟ ರೂಪೇಣಾಂಬಿಕಾಪತಿಃ | 
ಸ ಯಂಭೂರ್ಲಿಂಗರೂಪೇಣ ಸಂಸ್ಕ ತೋ ಜಗತಾಂ ಪತಿಃ 1೨॥ 
ಆಸೀದ್ಪ ಲಾಹಕೋನಾಮ ರುದ ಪ್ರಭಕ್ತೊ € ಮಹಾಬಲಃ । 
ಆಖೇಟಕಸಮಾಯುಕ್ತೊ e ನೃಪಃ ಪರಪುರಂಜಯಃ nan 
ಮೃಗಯೂಥೇ ಸ್ಥ ತಂ ದೃ ಷ್ಟ್ಯಾ ಗೋವತ್ಸಂ ತತ್ಸದಾತಿನಾ । 
ಉತ್ತೊ € ರಾಜಾ ಜೂ ದ್ದ ಸ್ನ 0 ಕೌತುಕಂ ನೃಷಸತ್ತ ಮ ॥೪॥ 
ಗೋವತ್ಸೊ €ಮ ಫಗಯೂಥಸ್ಯ್ಯ ವೃ ಷ್ಟೋ ಮಧ್ಯಸ್ಥಿ ತೋ ಮಯಾ 
ತೇಷಾಮೇನಾಂನುರಕ್ತೋಂಸೌ ಜನನ್ನಾ ರಹಿತಸ್ತಥಾ ॥೫॥ 
ದ್ರಷ್ಟುಂ ತಂ ಕೌತುಕಂ ರಾಜಾ ತಂ ಪದಾತಿಂ ಪುರಸ್ಸ್ಥಿತಂ | 
ಉವಾಚ ದರ್ಶಯಸ್ವೇತಿ ಗೋವತ್ಸಂ ಚ ಸಮಾನಿಶತ್‌ ॥೬॥ 


ಕನ್ನಡದ ಅನುವಾದ 
ಬಲಾಹಳೋಪಾಖ್ಯಾಸವರ್ಣನ 

೧-೨. ಸೂತನು ಹೇಳುತ್ತಾನೆ;--ಆ ಧರ್ಮಾರಣ್ಯದ ಸಮಾಪದಲ್ಲಿಯೆ 
ಮಾರ್ಕಂಡೇಯನಿಂದ ಸಾಕ್ಸಾತ್ಸ ತವಾದ ಗೋವತ್ಸವೆಂಬ ಪ್ರಸಿದ್ಧ ತೀರ್ಥನಿರು 
ವುದು. ಅಲ್ಲಿ ಪರಮೇಶ್ವರನು ಗೋವತ್ಸರೂಪದಿಂದಿಳಿದು ಸ್ವಯಂಭುಲಿಂಗ 
ರೂಪದಿಂದ ನೆಲಸಿರುವನು. 

೩. ಶಿವಭಕ್ತನಾದ ಬಲಾಹಕನೆಂಬ ಬಲಿಷ್ಠನಾದ ರಾಜನೊಬ್ಬನು ಬೇಟಿ 
ಯಲ್ಲಾ ಸಕ್ತನಾಗಿದ್ದನು. 

೪-೫. ಅವನ ಕಾಲಾಳು ಜಿಂಕೆಗಳ ಹಿಂಡಿನಲ್ಲಿರುವ ಹಸುವಿನ ಕರುವನ್ನು 
ನೋಡಿ ರಾಜನನ್ನು ಕುರಿತು, "" ಮಹಾರಾಜ! ನಾನೊಂದು ಕೌತುಕವನ್ನುಂಟು 
ಮಾಡುವ ವಿಷಯವನ್ನು ಕಂಡಿರುವೆನು. ಒಂದು ಆಕಳ ಕರುವು ತಾಯಿಯಿಲ್ಲದೆ 
ಜಿಂಕೆಗಳಲ್ಲಿ ಪ್ರೀತಿಯುಳ್ಳುದಾಗಿ ಅವುಗಳ ಹಿಂಡಿನ ಮಧ್ಯದಲ್ಲಿದೆ.” 

೬. ರಾಜನು ಆ ಕೌತುಕವನ್ನು ನೋಡಲು ಬಯಸಿ ಅದನ್ನು ತೋರಿಸೆಂದು 
ಪದಾತಿಗೆ ಹೇಳಿದನು. ಅವನ ಮಾತಿನಂತೆ ಗೋವತ್ಸಕ್ಷೇತ್ರವನ್ನು ಪ್ರವೇಶಿ 
ಸಿದನು. 


ಸಪ್ನವಿಂತಶೋ9ಧ್ಯಾಯ॥ ೨೬೫ 


ಗತ್ವಾ: ಟಿವೀಂ ತದಾ ರಾಜ್ಞೇ ದರ್ಶಿತಃ ಸ ಪದಾತಿನಾ । 


ಪದಾತಿಭಿರ್ಮ್ಮಗಾಂನೀಕಂ ದುದ್ರಾನ ತ್ರಾಸಿತಂ ಯದಾ ॥೩॥ 
ನೀಲುಗುಲ್ಮಂ ಪ್ರತಿ ಗತಂ ಗೋನತ್ನಃ ಪ್ರಸ್ಥಿತಸ್ತದಾ | 

ರಾಜಾ ತದ್ಮರಣಾಕಾಂಕ್ಸೋ ಪ್ರಾಂನಿಶದ್ಗುಲ್ಮಮಾದರಾತ್‌ nen 
ತತ್ರ ಸ್ಥಿತಂ ಸ ಗೋನತ್ಸಮಪಶ್ಯನ್ನೃ ಪತಿಃ ಸ್ವಯಂ । 

ಯಾವದ್ಧ್ಗಹ್ಹ್ಣಾತಿ ತಂ ತಾವಲ್ಲಿಂಗಂ ಜಾತಂ ಸಮುಜ್ವಲಂ nen 
ತಂ ದೃಷ್ಟ್ಯಾ ನಿಸ್ಮಿತೋ ರಾಜಾ ಕಿಮೇತದಿತ್ಯಚೆಂತಯತ್‌ | 
ಯಾವಚ್ಚಿಂತಯತೇ ಹ್ಯೇನಂ ದೇಹಂ ತ್ಯಕ್ತ್ವಾದಿನಂ ಗತಃ ॥ ೧೦॥ 


ಅತ್ರಾಂತರೇ ಗಗನತಲೇ ಸಮಂತತಃ 
ಶ್ರೂಯತೇ ಸುರಜಯಕಾರಗರ್ಜಿತಂ । 
ಪಪಾತ ಪುಷ್ಪವೃಷ್ಟಿರಂಬರಾದ್ರಾಜಾ 


ಗತಃ ಶಿವಭುವನಂ ಚ ತತ್ಕೃಣಾತ್‌ ॥ ೧೧॥ 
ತಾವತ್ಪ ಶ್ಯತಿ ತನ್ನಾಭ್ಯಂ ಗೋವತ್ಸಂ ಬಾಲಕಂ ಸ್ಥಿತಂ | 
ನೂನನೇಷ ಮಹಾದೇವೋ ನತ್ಸರೂಪೀ ಮಹೇಶ್ವರಃ ॥ ೧೨॥ 


ತಮಾನೇತುಂ ಸಮುದ್ಯುಕ್ತೋ ರಾಜಾ ತಮುಜ್ಜಹಾರ ಚ 
ತದಾ ತದ್ದೇನಲಿಂಗಂ ತು ನೋತ್ರಿಷ್ಠತಿ ಕಥಂಚನ । 
ತದಾ ದೇವಾಃ ಸಹಾಂನೇನ ಪ್ರಾರ್ಥಯಾಮಾಸುರೀಶ್ವರಂ ॥ ೧೩॥ 





೭. ಕಾಲಾಳು ಕಾಡಿಗೆ ಹೋಗಿ ಆ ವತ್ಸವನ್ನು ತೋರಿಸಿದನು. ಅವರು 
ಜಿಂಕೆಗಳ ಹಿಂಡನ್ನು ಹೆದರಿಸಲು ಆ ಹಿಂಡು ಚೆದರಿತು. 

೮೯. ಆಗ ಗೋಣೀಮರದ ಪೊದೆಯನ್ನು ಹೊಕ್ಕು ಜಿಂಕೆಗಳ ಹಿಂಡನ್ನು 
ಹಿಂಬಾಲಿಸಿದ ಗೋವತ್ಸವನ್ನು ಹಿಡಿಯಲಪೇಕ್ಸೆಯಿಂದ ರಾಜನೂ ಪೊಡದೆಯನ್ನು 
ಪ್ರವೇಶಿಸಿದರು. ಅಲ್ಲಿರುವ ಆಕಳಕರುವನ್ನು ನೋಡಿ ನೃಪತಿಯು ಹಡಿಯಲು 
ಕೈಗಳನ್ನು ಚಾಚಲು ಅದು ಕೂಡಲೆ ಉಜ್ವಲವಾದ ಲಿಂಗವಾಯಿತು. 

೧೦. ಅದನ್ನು ಕಂಡು ದೊರೆಯು ಅಶ್ಚರ್ಯಗೊಂಡು ಇದೇನೆಂದು 
ಚಿಂತಿಸುತ್ತಿರುವಂತೆಯೆ ದೇಹವನ್ನು ತ್ಯಜಿಸಿ ಅಮರಲೋಕಕ್ಕೆ ತೆರಳಿತು. 

೧೧. ಈ ಮಧ್ಯದಲ್ಲಿ ಅಂಬರದಲ್ಲಿ ದೇವತೆಗಳ ಜಯಕಾರವು ಕೇಳಿಸಿತು. 
ಪುಷ್ಪವೃಷ್ಟಿಯಾಯಿತು. ಕೂಡಲೆ ದೊರೆಯು ಶಿವಾಲಯವನ್ನು ಸೇರಿದನು. 

* ೧೨-೧೩. ಅಲ್ಲಿ ಅವನ ನಾಭಿಯಲ್ಲಿರುವ ಆಕಳ ಕರುವನ್ನು ಕಂಡು 
ಈ ಮಹಾದೇವನೆ ವತ್ಸರೂಪಿಯಾಗಿರುವನೆಂದರಿತು ಆ ವತ್ಸವನ್ನು ಮೇಲಕ್ಕೆಳೆ 
ಯಲು ರಾಜನು ಉದ್ಯುಕ್ತನಾದನು. ಆದರೆ ಅವನ ಯತ್ನವು ಸಾಗಲಿಲ್ಲ. ಆಗ 
ದೇವತೆಗಳು ಈ ರಾಜನೊಡನೆ ಈಶ್ವರನನ್ನು ಪ್ರಾರ್ಥಿಸಿದರು. 

F 


೬೬ ಶ್ರೀ ಸ್ಥಾಂಡೆಮಹಾಪುರಾಣಂ 


ದೇವಾ ಊಚುಃ :-- 
ಭಗವನ್ಸರ್ನದೇವೇಶ ಸ್ಮಾತವ್ಯಂ ಭವತಾ ನಿಭೋ | 
ಶುಕ್ಲೇನ ಲಿಂಗರೂಪೇಣ ಸರ್ವಲೋಕಹಿತೈಸಿಣಾ ॥ ೧೪ ॥ 
ಶ್ರೀ ಮಹಾದೇವ ಉವಾಚ :-- 
ಸ್ಥಾಸ್ಕಾಮ್ಯಹಂ ಸದೈವಾಃತ್ರ ಲಿಂಗರೂಪೇಣ ದೇವತಾಃ । 
ಯಸ್ಮಾದ್ಭಾದ್ರಪದೇ ಮಾಸಿ ಕೃಷ್ಣಪಸಕ್ಸ್ನೇ ಕುಹೂದಿನೇ ॥ ೧೫ ॥ 
ತಥಾ ತದ್ದಿನಸೇ ತತ್ರ ಸ್ನಾನಂ ಕೃತ್ವಾ ನಿಧಾನತಃ । 
ಲಿಂಗಂ ಯೇ ಪೂಜಯಿಷ್ಯಂತಿ ನ ತೇಷಾಂ ವಿದ್ಯತೇ ಭಯಂ "1 ೧೬॥ 
ಖುತೇ ಚ ಸಿಂಡದಾನೇನ ಪೂರ್ನಜಾಃ ಶಾಶ್ವತೀಃ ಸಮಾಃ । 


ರೌರವೇ ನರಕೇ ಘೋರೇ ಕುಂಭೀಪಾಕೇ ಚ ಯೇ ಗತಾಃ ॥ ೧೭॥ 
ಅನೇಕನರಕಸ್ಥಾ ಶ್ತ ತಿರ್ಯಗ್ಯೊ ೇನಿಗತಾಶ್ಚ ಯೇ! 

ಸಕೃತ್ಸಿಂಡಪ್ರ ದಾನೇನ ಸ್ಯಾತ್ರೆ (ಷಾಮಕ್ತ ಯಾ ಗತಿಃ ॥ ೧೮ ॥ 
ತೋ ಬಲಾಹಳೋ ರಾಜಾ ಸರ್ವಡೀನಸಮನ್ಸಿ ತಃ । 

ಸ್ಥಾ ಪೆಯಾಮಾಸ ತಲ್ಲಿಂಗಂ ಸರ್ವದೇನಸಮಾಪತಃ ॥ ೧೯॥ 
ಚಕಾರ ಬಹುದಾನಾನಿ ಲೋಕಾನಾಂ ಹಿತಕಾನ್ಯು ಯಾ । 
ಯಾನದರ್ಚಯತೇ ಹೈ €ನಂ ರುದ್ರೋಪಿ ಸ್ಟ ಹಾಗ ॥೨೦॥ 


೧೪. ದೇವತೆಗಳು ಹೇಳುತ್ತಾರೆ ;:--ಓ ಮಹಾದೇವ! ನೀನು ಸಕಲ 
ಲೋಕದ ಹಿತದೃಷ್ಟಿಯಿಂದ ಇಲ್ಲಿ ಶುಕ್ಲಲಿಂಗ ರೂಪದಿಂದ ನೆಲಸು. 

೧೫-೧೬. ಶ್ರೀ ಮಹಾದೇವನು ಹೇಳುತ್ತಾನೆ: ದೇವತೆಗಳೆ! ನಾನಿಲ್ಲಿ 
ಯಾವಾಗಲೂ ಲಿಂಗರೂಪದಿಂದಿರುವೆನು. ಭಾದ್ರಪದ ಬಹುಳ ಅಮಾವಾಸ್ಯೆಯ 
ದಿನ ಇಲ್ಲಿ ಸ್ನಾನಮಾಡಿ ಶಾಸ್ತ್ರೋಕ್ತಕ್ರಮದಿಂದ ಲಿಂಗಪೂಜೆಗೈದ ಮಾನವರಿಗೆ 
ಭಯವಿರುವುದಿಲ್ಲ. 

೧೭-೧೮. ಹಿಂಡವಿಲ್ಲದೆ ಅನೇಕ ವರ್ಷಗಳಿಂದ ರೌರವ, ಕುಂಭೀಪಾಕ 
ಮೊದಲಾದ ಅನೇಕಬಗೆಯ ನರಕಗಳನ್ನು ಹೊಂದಿದವರೂ, ಪಶುಪಕ್ಸಿಗಳಾದ 
ವರೂ ಒಮ್ಮೆ ಇಲ್ಲಿ ಪಿಂಡದಾನ ಮಾಡುವುದರಿಂದ ಅಕ್ಸಯಗತಿಯನ್ನು ಸಡೆಯು 
ವರು. 

೧೯. ಬಳಿಕ ಬಲಾಹಕರಾಜನು ಸಮಸ್ತ ದೇವತೆಗಳೊಡನೆ ಆ ಲಿಂಗವನ್ನು 
ದೇವತೆಗಳ ಬಳಿಯಲ್ಲಿಯೆ ಸ ಕ ಕ 

೨೦. ಲೋಕಗಳ ಹಿತದೃಷ್ಟಿಯಿಂದ ಅನೇಕ ದಾನಗಳನ್ನು ಮಾಡಿದನು. 
ಆತನಿಂತು ಆ ಲಿಂಗವನ್ನು ಪೂಜಿಸುತ್ತಿರುವಾಗ ರುದ್ರನೂ ಅಲ್ಲಿಗೆ ಬಂದನು. 


ಸನ್ನವಿಂಕೋ9ಧಭ್ಯಾಯಃ: ತಿಸಿ 


ರುದ್ರ ಉವಾಚ:- 
ಅಸ್ಯಾಂ ರಾತ್ರೌ ತು ಮನುಜಾಃ ಶ್ರದ್ಧಾಭಕ್ತಿಸಮನ್ವಿತಾಃ । 
ಯೆೇಂರ್ಚಯಿಷ್ಯಂತಿ ದೇನೇಶಂ ತೇಷಾಂ ಪುಣ್ಯಮನಂತಕಂ ॥ ೨೦ 
ಜಾಗರಂ ಯೇ ಕರಿಷ್ಯಂತಿ ಗೀತಶಾಸ್ತ್ರ ಪುರಸ್ಸರಂ | 
ಉದ್ಭರಿಷ್ಯಂತಿ ತೇ ಮರ್ತ್ಯಾಃ ಕುಲಮೇಕೋತ್ತರಂ ಶತಂ ॥ ೨೨ ॥ 
ತಾನದ್ಗರ್ಜಂತಿ ತೀರ್ಥಾನಿ ನೈನಿಸಂ ಪುಷ್ಕರಂ ಗಯಾ । 
ಪ್ರಯಾಗಂ ಚ ಪ್ರಭಾಸಂ ಚ ದ್ವಾರಕಾ ಮಹುರಾಂರ್ಬುದಃ ॥ ೨೩. 
ಯಾನನ್ನ ದೃಶ್ಯತೇ ಲಿಂಗಂ ಗೋವತ್ಸಂ ಪರಮಾದ್ಬುತಂ । 
ಯದಾ ಹಿ ಕುರುತೇ ಭಾನಂ ಗೋನತ್ಸಗಮನಂ ಪ್ರತಿ ॥ ೨೪ ॥ 
ಸ್ವವಂಶಜಾಸ್ತದಾ ಸರ್ವೇ ನೃತ್ಯಂತಿ ಹರ್ಷಿತಾ ಧ್ರುವಂ ॥ ೨೫ ॥ 
ಸೂತ ಉವಾಚ :- 
ಯಚ್ಚಾಂನ [ದದ್ಭುತಂ ತತ್ರ ವೃತ್ತಾಂತಂ ಶೃಣುತ ದ್ವಿಜಾಃ. 
ಯೇನ ವೈ ಶ್ರುತಮಾತ್ರೆ ಸಾತಕ ಶ್ಚಯೋ ಭವೇತ್‌ ॥ ೨೬॥ 
ಯದಾ ವೈ ಸ್ಮ ಹಿತಂ 'ಠಂಗಂ ಸರ್ವಡೇನೈಃ ಪುರಾತನಂ । 
ನಿಷ್ಣೊ «8 "ಪ್ರ ತಿಸ್ಮಾ ನಗುಣಾತ್ಸರ್ನೇಷಾಂ ಚ ದಿನೌಕಸಾಂ ॥೨೭॥ 
ಅಣುಮಾತ್ರ ಪ್ರ ಮಾಣೇನ ಪ್ರ ತ್ಯ ಹಂ ಸಮವರ್ಧತ। 
ತತಸ್ತೇ ಮನುಜಾ ದೇನಾ ಫೀತಾಸ್ತ್ರಂ ಶರಣಂ ಯಯುಃ ॥ ೨೮ 


೨೧. ರುದ್ರನು ಹೇಳುತ್ತಾನೆ :--ಈ ದಿನ ರಾತ್ರಿ ಶ್ರದ್ಧಾಭಕ್ತಿಯಿಂದ 
ಮಹಾದೇವನನ್ನು ಪೂಜಿಸಿದ ಮನುಷ್ಯರ ಪುಣ್ಯವು ಅನಂತವಾದುದು. 

೨೨. ಸಂಗೀತವನ್ನು ಹಾಡುತ್ತ, ಶಾಸ್ತ್ರವನ್ನು ಹೇಳುತ್ತ ಜಾಗರಣಮಾಡಿದ 
ಮಾನವರು ನೂರೊಂದು ಕುಲವನ್ನು ಉದ್ಧಾರಮಾಡುವರು. 

೨೩. ಈ ಅದ್ಭುತವಾದ ಗೋವತ್ಸಲಿಂಗವನ್ನು ನೋಡದಿರುವತನಕ 
ನೈಮಿಷ, ಪುಷ್ಪರ, ಪ್ರಯಾಗ, ಪ್ರಭಾಸ, ದ್ವಾರಕಾ, ಮಥುರಾ, ಅರ್ಬುದ 
ತೀರ್ಥಗಳೆಲ್ಲ ಹೆಮ್ಮೆಸಡುವುವು. 

೨೪-೨೨೫, ಈ ಗೋವತ್ಸಕ್ಕೆ ಹೋಗುವೆನೆಂದು ಮಾನವನು ಆಲೋಚಿಸಲು 
ಅವನ ವಂಶದವರೆಲ್ಲ ಸಂತೋಷದಿಂದ ಕುಣಿಯುವರು. 

೨೬-೨೮. ಸೂತನು ಹೇಳುತ್ತಾನೆ :-- ಎಲೈ ಬ್ರಾಹ್ಮಣರೆ! ಅಲ್ಲಿ ನಡೆದ 
ಮತ್ತೊಂದು ಸಮಾಚಾರವನ್ನು ಕೇಳಿರಿ. ಅದನ್ನು ಕೇಳಿದ ಕೂಡಲೆ ಸಕಲ 
ದುರಿತಗಳೂ ಮಾಯವಾಗುವುವು. ವಿಷ್ಣುವೂ, ಸಕಲ ದೇವತೆಗಳೂ ಸೇರಿ ಪ್ರತಿಷ್ಕಿ 
ಸಿದ್ದರಿಂದ ಆ ಲಿಂಗವು ಪ್ರತಿದಿನವೂ ಪರಮಾಣುನಿನಷ್ಟು ಬೆಳೆಯುತ್ತಿದ್ದಿತು. 
ಆದುದರಿಂದ ಮಾನವರೂ ದೇವತೆಗಳೂ ಹೆದರಿ ಆ ಶಂಕರನನ್ನೇ ಮರೆಹೊಕ್ಕರು. 


ue ಶ್ರೀ ಖಾಸಿ'ಡೆಮೇಹಳಪು ಇಂ 


ದೇವಾ ಊಚುಃ: 
ವೃ ದ್ಕಿಂ ಸಂಹರ ದೇನೇಶ ಲೋಕಾನಾಂ ಸ್ಮಸಿ ಸ್ತಿ ತದ್ಭ ವೇತ್‌ । 
ಏನಮುಕ್ತೆ € ತತೋ ಲಿಂಗಾದ್ವಾ ಗುವ 'ಶರೀರಿಣೇ ॥೨೯॥ 
ಶಿವವಾಣ್ಯು ವಾಚ:- 
ಹೇ ಲೋಕಾ ಮಾಭಯಂ ವಮೋಸ್ತೂ ಉಪಾಯಃ ಶ್ರೂಯತಾಮಯಂ | 
ಕಂಚಿಚ್ಚಂಡಾಲಮಾನೀಯ ಮತ್ತುರಃ ಸ್ಥಾಪ್ಯತಾಂ ಧ್ರುವಂ ॥೩೦॥ 
ಚಂಡಾಲಾಂಶ್ಚ ಸಮಾನೀಯ ದಧುರ್ದೇವಸ್ಯ ತೇ ಪುರಃ । 
ತಥಾಪಿ ತಸ್ಯ ವೃದ್ಧಿಸ್ತು ಸೈವ ನಿರ್ವರ್ತತೇ ಪುನಃ ॥೩೧॥ 
ವಾಗುವಾಚ:- 
ಕರ್ಮಣಾ ಯಸ್ತು ಚಂಡಾಲಃ ಸೋಗ್ರೇ ಮೇ ಸ್ಕಾ ಪೃತಾಂ ಜನಾಃ । 
ತಚ್ಛು ೨ತ್ವಾ ನುಹದಾಶ್ಚ ರ್ಯಂ ಮತಿಂ `ಚಕ್ರು ರ್ನಿಲೋಚನೇ ॥ ೩೨॥ 
ಮಾಗು ಮಾಣ್ಯ ಸ್ತದಾ 'ತೇ ತು ಗ್ರಾಮಾಣಿ ಚ ಪುರಾಣಿ ಚ । 


ಕಂಚಿತ್ಯರ್ಮ ತಂ ಪಾಪಂ ದದ್ಭಶುರ್ಚ್ರಾಹ್ಮಣಬ್ರುವಂ 1 ೩೩॥ 
ವೃಷಭಾನ್ಭಾರಸಂಯುಕ್ತಾನ್ಮಧ್ಯಾಹ್ನೇ ವಾಹಯತ್ತುಸಃ । 
ಕ್ಸುತ್ತೃಟ್‌ಶ್ರಮಪರೀತಾಂಶ್ಚ ದುರ್ಬಲಾನ್ಯ್ಯೂರಮಾನಸಃ 1 ೩೪॥ 





೨೯. ದೇವತೆಗಳು ಹೇಳುತ್ತಾರೆ :--ದೇವೇಶ್ವರ! ನಿನ್ನ ಬೆಳವಣಿಗೆಯನ್ನು 
ಸಾಕುಮಾಡು. ಅದರಿಂದ ಲೋಕಗಳಿಗೆ ಕ್ಲೇನುವಾಗುವುದು. ಹೀಗೆನ್ನಲು 
ಆ ಲಿಂಗದಿಂದ ಅಶರೀರವಾಣಿಯಾಯಿತು. 

೩೦. ಶಿವವಾಣಿಯು ಹೇಳುತ್ತದೆ :-ಓ ಜನರೇ! ಹೆದರಬೇಡಿರಿ. ಒಂದು 
ಉಪಾಯವನ್ನು ಹೇಳುವೆನು; ಲಾಲಿಸಿರಿ. ಒಬ್ಬ ಚಂಡಾಲನನ್ನು ಕರೆತಂದು 
ನನ್ನೆದುರಿಗೆ ನಿಲ್ಲಿಸಿರಿ. 

೩೧. ಅವರು ಚಂಡಾಲರನ್ನು ಕರೆತಂದು ಲಿಂಗದ ಮುಂದೆ ನಿಲ್ಲಿಸಿದರೂ 
ಅದು ಮರಳಿ ಹಾಗೆಯೆ ಬೆಳೆಯುತ್ತಲಿದ್ದಿತು. 

೩೨. ಶಿವವಾಣಿಯು ಹೇಳುತ್ತದೆ :--ಕರ್ಮಚಂಡಾಲನನ್ನು ನನ್ನಮುಂದೆ 
ವಿಲ್ಲಿಸಿರಿ. ಶಿವವಾಣಿಯ ಆಶ್ಚರ್ಯಕರವಾದ ಆ ಮಾತನ್ನು ಕೇಳಿ ಅವರು 
ಅಂತಹವನನ್ನು ಹುಡುಕತೊಡಗಿದರು. 

೩೩. ಅವರು ಗ್ರಾಮ, ನಗರಗಳಲ್ಲಿ ಹುಡುಕುತ್ತ ಕೆಲಸಮಾಡುತ್ತಿರುವ 
ಒಬ್ಬ ಪಾಪಿಯಾದ ನೀಚಬ್ರಾಹ್ಮಣನನ್ನು ಕಂಡರು. 4 

೩೪. ಅವನು ಮಧ್ಯಾಹ್ನೆದ ವೇಳೆಯಲ್ಲಿ ಹಸಿವು, ಬಾಯಾರಿಕೆ, ಆಯಾಸ 
ಗೊಂಡ ಅಶಕ್ತವಾದ ಎತ್ತುಗಳನ್ನು ಹೊರೆಹೊರಿಸಿ ಹೊಡೆಯುತ್ತಿದ್ದನು. 


೨ 'ಸಪ್ತಪಿಂಕೋಕಿಧ್ಯಾಯ॥' ತಿರ್ಟ 


ಅಸ್ನಾತ್ಟ್ಯಾಸಿ ಸರ್ಯುಸಹಿತಂ ಭಕ್ಟಯಂತೀಹ ವೈ ದ್ವಿಜಾಃ । 


ತಂ ಯು ದೇವೇಶಂ ಜಗು! ರ್ಯತ್ರ ಜಗದು” gS 1೩೫ 

ದೇನಾಲಯಾಗ್ರಭೂಮೌ ತಂ ಸ್ಕಾ ೨ ಷಯಾಮಾಸುರಾದೃ ತಾಃ । 

ಭಸ್ಮಿ ಬಭೂವ ಸಹಸಾ ಗೋವತ್ಸಾ 'ಸ್ರೇ ನಿರೂಪಿತಃ ॥ ೩೬ 

ಚಂಡಾಲಸ್ಮಲ ಇತ್ಯೇಷ ಪ್ರಸಿದ್ಧೊೋಂಸಾನಭವತ್ಟಿ ತೌ । 

ತತ್ರ ಸ್ಥಿತೈರ್ನಚಾದ್ಯಾಪಿ ಪ್ರಾಸಾದೋ ದೃಶ್ಯತೇ ಹಿ ಸಃ ॥ ೩೭॥ 
ದಾ ಪ್ರಭೃತಿ ತಲ್ಲಿಂಗಂ ಸಾನ್ಯುಭಾನಮುಪಾಗತಂ | 

ಧೌತಪಾಸ್ಮಾ ಗತಸ್ತೀರ್ಥಂ ದ್ವಿಜೋ ಲಿಂಗನಿರೀಕ್ಷಣಾತ್‌ ॥ ೩೮ ॥ 

ಪ್ರತ್ಯಹಂ ಪೂಜಯಾಮಾಸ ಗೋವತ್ಸಂ ಗತಕಿಲ್ಪಿಷಃ । 

ವಿಶೇಷಾತೃ ಷ್ಣ ಪಕ್ಕ ಸ್ಯ ಚತುರ್ದಶ್ಯಾಂ ಸಮಾಗತಃ ॥೩೯/ 


ಏತತ್ತ ವಡ್ಡು ತಂ ತಸ ದೇವಸ್ಯ ಚ ತ್ರಿಶೂಲಿನಃ । 

ಶೃ ುಯಾಜ್ಯೂ ತ ಜೂ ಭಕ್ತ್ಯಾ ಸರ್ನಸಾಸೈಃ ಪ ಪ್ರಮುಚ್ಯತೇ ॥ ೪೦॥ 
ಸೂತ ಸನಕ — 

ಗೋವತ್ಸನಿತಿ ವಿಖ್ಯಾತಂ ನರಾಣಾಂ ಪುಣ್ಯದಂ ಪರಂ । 

ಅನೇಕಜನ್ಮಪಾಪಘ್ನಂ ಮಾರ್ಕಂಡೇಯೇನ ಭಾಷಿತಂ ॥೪೧॥ 


೩೫. ಮತ್ತು ಸ್ನಾನಮಾಡದೆ. ತಂಗಳನ್ನುಣ್ಣುವ ಆ ಬ್ರಾಹ್ಮಣನನ್ನು 
ಲಿಂಗದೆಡೆಗೆ ಕರೆತಂದರು. 

೩೬. ದೇವಾಲಯದಲ್ಲಿರುವ ಗೋವತ್ಸಲಿಂಗದ ಮುಂದೆ ಅವನನ್ನು 
ನಿಲ್ಲಿಸಲು ಕೂಡಲೆ ಅವನು ಬೂದಿಯಾಗಿಹೋದನು. 

೩೭. ಅಂದಿನಿಂದ ಆಸ್ಪ ಸ್ಥಳವು ಚಂಡಾಲಸ್ನ ಳವೆಂ ದು ವಿಖ್ಯಾತವಾಯಿತು. 
ಅಲ್ಲಿ ನಿಂತು ಈಗಲೂ ಯಾರೂ ದೇವಾಲಯವನ್ನು ಕಾಣುವುದಿಲ್ಲ. 

೩೮. ಅದು ಮೊದಲ್ಗೊಂಡು ಆ ಲಿಂಗವು ಬೆಳೆಯದೆ ಸಮಾನವಾಗಿದ್ದಿತು. 
ಬ್ರಾಹ್ಮಣನು ಲಿಂಗದರ್ಶನದಿಂದ ಪಾಪವನ್ನು ಕಳೆದುಕೊಂಡು ಹೊರಟು 
ಹೋದನು. 

೩೯. ಹೀಗೆ ಗತಕಿಲ್ಬಿಷನಾಗಿ ಪ್ರತಿದಿನವೂ, ವಿಶೇಷವಾಗಿ ಕೃಷ್ಣ 
ಚತುರ್ದಶೀದಿನವೂ ಅಲ್ಲಿಗೆ ಬಂದು ಗೋವತ್ಸ ಲಿಂಗವನ್ನು ಪೂಜಿಸಿದನು. 

೪೦. ಶಂಕರನ ಈ ಅದ್ಭುತಕಾರ್ಯವನ್ನು ಭಕ್ತಿಯಿಂದ ಕೇಳಿದ ನರನು 
ಸಕಲ ಪಾಪಮುಕ್ತನಾಗುವನು. 

೪೧, ಸೂತನು ಹೇಳುತ್ತಾನೆ :--ಮಾರ್ಕಂಡೇಯನು ಹೇಳಿದ ಗೋವತ್ಸ 
ಲಿಂಗವು ನರರ ಸಕಲಪಾಸವನ್ನೂ ಪರಿಹರಿಸಿ ಅಮಿತವಾದ ಪುಣ್ಯನನ್ನೀಯುವುದು. 


ಸಕ್ಸದ 


೨೭೦ ಶ್ರೀ ಸ್ಯಾಂಹಮಹಾಪುರಾಣಂ 


ತತ್ರ ತೀರ್ಥೇ ಸಕೃತ್ಸ್ನಾನಂ ರುದ್ರಲೋಕಪ್ರದಂ ನೃಣಾಂ । 


ಪಾಸದೇಹನಿಶುದ್ಧ ರಂ ಪಾಪೇನೋಪಹತಾತ್ಮ ನಾಂ ॥ ೪೨ ॥ 
ಕೂಸೇ ತರ್ಷಣತಶ್ವಿನ ಶ್ರಾದ್ಮತಶ್ಟಿನ ತೃಪ್ತತಾ 

ಭಾದ್ರಪದೇ ನಿಕ ಸಕ ಶಜ್ಯಾಂತೇ ಭನೇತ್ಯ ಲೌ ॥ ೪೩ ॥ 
ಏಕನಿಂಶತಿವಾರಾಂಸ್ತು ಗಯಾಯಾಂ ತರ್ಪಣ ಕೃತೇ। 

ಪಿತ್ರೂಣಾಂ ಸರಮಾ : ತೃಸ್ತಿಃ ಸಕೃದ್ವೈ ಗೂಟ ॥ ೪೪ ॥ 
ತಸಿ ್ಮಕ್ನೋವತ್ಸ ಸಾಮಿಸ್ಕೈ ೇ ತಿಸ್ಮತೇ ಗಾಂಗಕೂಪಕಃ । 
ತಸಿಂಸ್ತಿಲೋದಕೇನಾನಿ ಸದ್ಗತಿಂ ಯಾಂತಿ ತರ್ಪಿತಾಃ ॥ ೪೫ ॥ 
ಪಿತರೋ ನರಕಾದ್ವಾಪಿ ಸುಪುಣ್ಯೇನ ಸುಮೇಧಸಾ । 

ಗೋಪ್ರದಾನಂ ಪ್ರಶಂಸಂತಿ ತಸ್ಮಿಂಸ್ತೀರ್ಥೇ ಮುನೀಶ್ವರಾಃ ॥ ೪೬॥ 
ವಿಪ್ರಾಯ ಸ್ಪರ್ಣದಾನಂ ತು ರುದ್ರಲೋಕೇ ನಯೇನ್ನರಂ । 

ಸರಸ್ವತೀ ಶಿನಕ್ಸೇತ್ರೇ ಗಂಗಾ ಚ ಗಾಂಗಕೂಪಕೇ ॥ ೪೭॥ 
ಏಕಸ್ಸ ಮೇತ್ರಿ ಯಃ ಸ್ಫರ್ಗಾಾಪವರ್ಗಕಾರಣಂ | 

ಸೇವಿತಂ ಚಹ” ಭಿಃ ಸಿದೆ ಸ್ತ್ರೀರ್ಥಂ ಸರ್ವತ್ರ ವಿಶ್ರುತಂ ॥ ೪೮॥ 








೪೨. ಪಾಪಿಗಳು ಪಾಪದೇಹದ ಶುದ್ಧಿಗಾಗಿ ಆ ತೀರ್ಥದಲ್ಲಿ ಒಂದಾವೃತ್ತಿ 
ಮಿಂದರೆ ಅವರು ರುದ್ರಲೋಕವನ್ನೈದುವರು. 

೪೩. ಕಲಿಯುಗದಲ್ಲಿ ಭಾದ್ರಪದಮಾಸದ ಸಕ್ಸಾಂತ್ಯದಲ್ಲಿ ತರ್ಪಣ ಮತ್ತು 
ಶ್ರಾ ದ್ರ ವನ್ನು ಈ ಕೂಪದಲ್ಲಿ ಮಾಡುವುದರಿಂದ ಪಿತೃ ಗಳು ತೃ ಪ್ರರಾಗುವರು. 

ಇಳ. “ಯೆಯಲ್ಲಿ ಇಪ್ಪತ್ತೊಂದು ಸಾರಿ ತರ್ಪಣದಿಂದ ತೃಪ್ತರಾಗುವರು. 
ಆದರೆ ಈ ಗಾಂಗಕೂಪದಲ್ಲಿ ಕೇಸು ತರ್ಪಣಮಾಡುವುದರಿಂದ ತೃಪ್ತರಾ 
ಗುವರು. 

೪೫-೪೬. ಆ ಧರ್ಮಾರಣ್ಯದಲ್ಲಿ ಗೋವತ್ಸದ ಹತ್ತಿರ ಗಾಂಗಕೂಪವಿರು 
ವುದು. ಅಲ್ಲಿ ತಿಲೋದಕದಿಂದ ಪಿತೃಗಳು ನರಕದಿಂದ ಉದ್ಭ್ರೃತರಾಗಿ ಸದ್ಗತಿ 
ಪಡೆಯುವರು. ಆ ತೀರ್ಥದಲ್ಲಿ ಮಾಡಿದ ಗೋದಾನವನ್ನು ಮುನಿವರ್ಯರು 
ಬಹಳವಾಗಿ ಹೊಗಳುತ್ತಾರೆ. 

೪೭. ಆ ಶಿವಕ್ಕೈೇಶ್ರದಲ್ಲಿರುವ ಗಾಂಗಕೂಸದಲ್ಲಿ ಸರಸ್ವತೀಗಂಗೆಗಳಿರುವು 
ದರಿಂದ ಅಲ್ಲಿ ಮಾನವನು ಬ್ರಾ ಹ್ಮಣನಿಗೆ ಸ್ನ ಸರ್ಣದಾನನನ್ನೆ ಇಗಡಕಿ ಅವನನ್ನು 
ರುದ್ರಲೋಕಕ್ಕೆ ಸೇರಿಸುವುದು. 

೪೮. ಒಂದೇ ಎಡೆಯಲ್ಲಿರುವ ಸ್ವರ್ಗಮೋಕ್ಸಗಳನ್ನೀಯುವ ಈ ಮೂರು 
ದಿವ್ಯ ವಸ್ತುಗಳು ಮುನಿಗಳಿಂದಲೂ, ಸಿದ್ಧರಿಂದಲೂ ಸೇನಿತವಾಗಿ. ಪ್ರಪಂಚ 
ದಲ್ಲಿಯೆ ಪ್ರಸಿದ್ಧವಾಗಿವೆ. 


ಸಪ್ತವಿಂಶೋ5ಧ್ಯಾಯ। ೨೭೧ 


ಪೀಲುಯುಗ್ಮಂ ಸ್ಥಿ ಸ್ಥಿತಂ ತತ್ರ ತತ್ತೀರ್ಥಂ ಮುನಿಸೇವಿತಂ | ' 


ಸ್ನಾನಾತ್ಸೃರ್ಗಪ್ರ ದಂ ಚೈ ನ ಪಾನಾತ್ಸಾ ಪನಿಶುದ್ಧಿ ದಂ ॥೪೯॥ 
ಕೀರ್ತನಾತ್ಪು ಣ್ಯ ಸಸರ "ಸೀಪನಾನ್ಮು ಕ್ತಿದಂ ಸರಂ | 

ತದ್ವೆ  ಸತ್ಶಂತಿ ಯೇ ಭಕ್ತ್ಯಾ ಬ್ರಹ್ಮಹಾ ಯದಿ ಮಾತೃಹಾ ॥ ೫೦ ॥ 
ತ ಚ ಗೋಫ್ನಕೆ ಯೇ ye ಸ್ತ್ರೀಶೂದ್ರ FF | 

ಗರದಾಶಾ ಫೀಗ್ನಿದಾಶ್ಚ್ಮೈ ವ ಗುರುದ್ರೊ (ಹರೆತಾಶ್ಮ ಡೇ ॥೫೧॥ 
ತಪಸಿ ್ಲನಿಂಡಕಾಶ್ರೆ ವ ಕೂಟಿಸಾಕ್ಸ್ಯ್ಯಂ ಕರೋತಿ ಯಃ । 

ವಕ್ತಾ. ಚ ಸರದೋಷಸ್ಯ ಸರಸ್ಯ ಲೋ ನಕ? ॥ ೫೨ ॥ 
'ಸರ್ವಸಾಪಮಯೋಃ ಸೃತ್ರ ಮುಚ್ಯತೇ ಲಿಂಗದರ್ಶನಾತ್‌ ॥ ೫೩ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮೆ ಕ 
1 ಬಲಾಹಕೋಷಾಖ್ಶಾ ನವರ್ಣನಂ'' ನಾಮ ಸಪ್ತ ನಿಂಶೋಂಧ್ಯಾ ಯಕೆ 


೪೯. ಅಲ್ಲಿ ಎರಡು ಗೋಣೀಮರಗಳಿವೆ. ಮುನಿಸೇವಿತವಾದ ಆ ತೀರ್ಥವು 
ಸ್ನಾನಮಾಡುವುದರಿಂದ ಸ್ವರ್ಗವನ್ನೀಯುವುದು. ಪಾನದಿಂದ ಪಾಪಗಳನ್ನು 
ಕಳೆಯುವುದು. 

೫೦-೫೩. ಹೊಗಳುವುದರಿಂದ ಪುಣ್ಯವನ್ನೂ, ಸೇವಿಸುವುದರಿಂದ ಮುಕ್ತಿ 
ಯನ್ನೂ ಕೊಡುವುದು. ಬ್ರಾಹ್ಮಣ, ತಾಯಿ, ಬಾಲಕ, ಗೋವು, ಹೆಂಗಸು, 
ಶೂದ್ರರನ್ನು ಕೊಂದವರೂ, ವಿಷವನ್ನಿತ್ತವರೂ, ಬೆಂಕಿಯನ್ನು ಹಚ್ಚಿ ದವರೂ, 
ಗುರುದ್ರೋಹನಿರತರೂ, ಮುನಿಗಳನ್ನು ನಿಂದಿಸುವವರೂ, ಸುಳ್ಳು ಸಾಕ್ಸಿ ಹೇಳಿ 
ದವರೂ, ಪರರ ದೋಷವನ್ನು ಹೇಳುವವರೂ, ಪರರ ಗುಣಗಳನ್ನು ನಿಂದಿಸು 
ನವರೂ ಮೊದಲಾದ ಎಲ್ಲ ಪಾಪಿಗಳೂ ಈ ಲಿಂಗದ ದರ್ಶನದಿಂದ ಮುಕ್ತ 
ರಾಗುವರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮು ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ ದಲ್ಲಿ 44 ಬಲಾಹಕೋಪಾಖ್ಯಾನವರ್ಣನ''ನೆಂಬ 
ಇಪ್ಪತ್ತ್ವೇಳನೆಯ ಅಧ್ಯಾಯವು ಮಂಗಿದುದು 


॥$ ಶ್ರೀಃ ॥ 
ಅಥಾಷ್ಟಾವಿಂತೋಧ್ಯಾಯಃ 
ತೀರ್ಥಮಾಹಾತ್ಮ್ಯವರ್ಣನಂ 

ವ್ಯಾಸ ಉವಾಚ:- 
ಗೋನತ್ಸಾನ್ಸೈರ್ಯತೇ ಭಾಗೇ ದೃಶ್ಯತೇ ಲೋಹಯಸ್ಟಿಕಾ । 
ಸ್ವಯಂಭುಲಿಂಗರೂಪೇಣ ರುದ್ರಸ್ತತ್ರ ಸ್ಥಿತಃ ಸ್ವಯಂ non 

ಶ್ರೀ ಮಾರ್ಕಂಡೇಯ ಉವಾಚ: 
ಮೋಕ್ಬತೀರ್ಥೆೇ ಸರಸ್ಪತ್ಯಾ ನಭಸ್ಯೇ ಚಂದ್ರಸಂಕ್ಟಯೇ । 
ವಿಪ್ರಾನ್ಸಂಪೂಜ್ಯ ವಿಧಿನತ್ತೇಭ್ಯೋ ದತ್ವಾ ಚ ದಕ್ಷಿಣಾಂ uo 
ಏಕವಿಂಶತಿವಾರಾಂಸ್ತು ಭಕ್ತ್ಯಾ ಪಿಂಡಸ್ಯ ಯತ್ಸಲಂ | 
ಗಯಾಯಾಂ ಪ್ರಾಪ್ಯತೇ ಪುಂಸಾಂ ಧ್ರುವಂ ತದಿಹ ತರ್ಪಣಾತ್‌ ॥೩॥ 
ಲೋಹಯಷ್ಟ್ಯಾಂ ಕೃತೇ ಶ್ರಾದ್ಧೇ ನಭಸ್ಯೇ ಚಂದ್ರಸಂಕ್ಸಯೇ । 





ಪ್ರೇತಯೋನಿವಿನಿರ್ಮುಕ್ತಾಃ ಕ್ರೀಡಂತಿ ಪಿತರೋ ದಿವಿ ॥೪॥ 
ಅಪಿ ನಃ ಸಂಕುಲೇ ಭೂಯಾದ್ಯೋ ವೈ ದದ್ಯಾತ್ತಿಲೋದಕಂ । 
ನಿಂಡಂ ನಾಂಪ್ಯುದಕಂ ನಾಪಿ ಪ್ರೇತಪಕ್ಸೇ ನಿಧೂದಯೇ ॥೫॥ 
ಕನ್ನಡದ ಅನುವಾದ 
ತೀರ್ಥಮಾಹಾತ್ಮ್ಯವರ್ಣನ 


೧. ವ್ಯಾಸನು ಹೇಳುತ್ತಾನೆ:--ಗೋವತ್ಸದ ನೈರುತ್ಯದಿಕೈನಲ್ಲಿ ಲೋಹ 
ಯಷ್ಟಿಯೆಂಬ ತೀರ್ಥವು ಕಾಣಿಸುವುದು. ಅದರಲ್ಲಿ ಮಹಾದೇವನು ಸ್ವಯಂಚು 
ಲಿಂಗರೂಪದಿಂದ ಸನ್ನಿಧಾನಗೊಂಡಿರುವನು. 

೨-೩. ಶ್ರೀಮಾರ್ಕಂಡೇಯನು ಹೇಳುತ್ತಾನೆ: ಮೋಕ್ಸವನ್ನೀಯುವ 
ಸರಸ್ವತೀತೀರ್ಥದಲ್ಲಿ ಭಾದ್ರಸದಮಾಸದ ಅಮಾವಾಸ್ಯೆಯ ದಿನ ವಿಹಿತಕ್ರಮ 
ದಿಂದ ಬ್ರಾಹ್ಮಣರನ್ನರ್ಚಿಸಿ ಅನರಿಗೆ ದಕ್ಸಿಣೆಯನ್ನಿತ್ತು ತರ್ಪಣಮಾಡುವುದ 
ರಿಂದ ಗಯೆಯಲ್ಲಿ ಇಪ್ಪತೊಂದುಸಲ ಪಿಂಡಪ್ರದಾನ ಮಾಡಿದ ಫಲವು 
ಲಭಿಸುವುದು. 

೪-೫. ಲೋಹಯಸ್ಟಿಯಲ್ಲಿ ಭಾದ್ರಪದ ಬಹುಳ ಅಮಾವಾಸ್ಯೆಯ ದಿನ 
ಶ್ರಾದ್ಭಮಾಡಿದರೆ ಪಿತೃಗಳು ಪ್ರೇತಜನ್ಮವನ್ನು ತ್ಯಜಿಸಿ ಸ್ವರ್ಗದಲ್ಲಿ ನಿನೋದ 
ಪಡುವರು. ಪಿತೃಪಕ್ಷದಲ್ಲಿ ಪಿಂಡಪ್ರದಾನವನ್ನಾಗಲಿ, ತರ್ನಣವನ್ನಾಗಲಿ ಮಾಡ 
ವವನು ನಮ್ಮ ವಂಶದಲ್ಲಿ ಹುಟ್ಟಯಾನೇ ಎಂದೇ ಪಿತೃಗಳು ನಿರೀಕ್ಸಿಸುತ್ತಿರು 
ತ್ತಾರೆ. 


ಅಸ್ವಾವಿಂಶೋರಧ್ಯಾಯಃ ೨೭೩ 


ಲೋಹಯಷ್ಟ್ಯಾಮಮಾನಾಸ್ಯಾಂ ಕಾರ್ಯಂ ಭಾದ್ರಪದೇ ಜನೈಃ । 


ಶ್ರಾ ದ್ಧ ೦ ನೈ ಮುನಯಃ ಪ್ರಾಹುಃ ಪಿತರೋ ಯದಿ ವಲ್ಲಭಾಃ ॥೬॥ 
ಹೀರೇ ತು ತಿಲೈಃ ಶ್ಚೇತೈ `` ಸ್ನಾತ್ವಾ ಸಾರಸ್ಪತೇ ಜಲೇ । 

ಪಿತ್ರೂಂಸ್ತ ಚ “ಯಸ್ತು ತ್ರ ಪ್ರಾ ಸ್ತತಿ ತ್ರಿತಕೋ ಧ್ರುವಂ ॥೭॥ 
ತತ್ರ ಶಾ ಜ್ಞಾನಿ ಕುರ್ನೀತ ಸಳು ಭೀ ಸೆಯಸಾ ಸಹ। 

ಅನಮಾನಾಸ್ಕಾ ದಿನಂ ಪ್ರಾಪ್ಯ ಪಿತ್ರೂಣಾಂ ಮೋಕ್ಷ ಕ ಮಿಚ್ಛಕೈಃ nen 
ರುದ ್ರ ತೀರ್ಥೇ ತತೋ ತನುಂ ದವಾ ್ಯದ್ವಸ್ತಾ ತ್ರಿದಿಭೂಷಿತಾಂ | 

ವಿಷ್ಣು ತೀರ್ಥೇ ಹಿರಣ್ಯಂ ಚ ಪ್ರದದ್ಯಾ ನ KA ಮಿಚ್ಛು ಕಃ nen 


ಗೆಯಾಯಾಂ ಪಿತೃ ಸೇಕ ಸ ಹಿ ಕ | 

ತಂ ಧ್ಯಾತ್ವಾ ಪುಂಡರೀಕಾಕ್ಟ 0 ಮುಚ್ಯ ತೇ ಚ ಖುಣತ್ರಯಾತ್‌ ॥೧೦॥ 
ಪ್ರಾರ್ಥಯೇತ್ತತ್ರ ಗತ್ವಾ ತಂ ಡೇನದೇನಂ ಭನ | 

ಆಗತೋಸ್ಥಿ ಗಯಾಂ ದೇವ ಪಿತೃಭ್ಯಃ ಸಿಂಡದಿತ್ಸಯಾ । 


ಏಷ ನಿಂಡೋ ಮಯಾ ದತ್ತಸ್ತನ ಹಸ್ತೇ ಜನಾರ್ದನ ॥ ೧೧॥ 
ಪರಲೋಕಗತೇಭ್ಯಶ್ಚ ತ್ವಂ ಹಿ ದಾತಾ ಭವಿಷ್ಯಸಿ । 
ಅನೇನೈನ ಚೆ ಮಂತ್ರೇಣ ತತ್ರ ದದ್ಯಾದ್ದರೇಃ ಕರೇ ॥ ೧೨ ॥. 





೬. ಹಿತೃಗಳು ಪ್ರಿಯರಾಗಿದ್ದರೆ ಮಾನವರು ಲೋಹೆಯಸ್ಟಿಯಲ್ಲಿ 
ಭಾದ್ರಸದ ಬಹುಳ ಅಮಾವಾಸ್ಯೆಯ ದಿನ ಶ್ರಾದ್ಧಮಾಡಬೇಕೆಂದು ಮುನಿಗಳು. 
ನುಡಿದಿರುವರು. 

೭. ಸರಸ್ವತೀತೀರ್ಥದ ಜಲದಲ್ಲಿ ಮಿಂದು ಬಿಳಿಯ ಎಳ್ಳುಮಿಶ್ರವಾದ 
ಹಾಲಿನಿಂದ ತರ್ಪಣಮಾಡಿದವನ ಪಿತೃಗಳು ನಿಶ್ಚಯವಾಗಿಯೂ ತೃಪ್ತಿ 
ಗೊಳ್ಳುವರು. 

೮. ಅಲ್ಲಿ ಪಿತೃಗಳಿಗೆ ಮೋಕ್ಸವನ್ನು ಬಯಸುವ ಜನರು ಅಮಾವಾಸ್ಯೆ 
ದಿನ ಹಾಲು ಮಿಶ್ರವಾದ ಹಿಟ್ಟಿನಿಂದ ಶ್ರಾದ್ಧಮಾಡಬೇಕು. 

೯, ಮೋಕ್ಸಾರ್ಥಿಯು ರುದ್ರತೀರ್ಥದಲ್ಲಿ ಬಟ್ಟೆ ಮೊದಲಾದುವುಗಳಿಂದ 
ಅಲಂಕೃತವಾದ ಆಕಳನ್ನೂ, ವಿಷ್ಣುತೀರ್ಥದಲ್ಲಿ ಚಿನ್ನ ವನ್ನೂ ದಾನಮಾಡ 
ಬೇಕು. 

೧೦. ಗಯಾಕ್ಸೇತ್ರದಲ್ಲಿ ಶ್ರೀನಿಷ್ಣುವು ತಾನೇ ಸಾಕ್ಸಾತ್ತಾಗಿ ನಿತ್ಯರೂಪ 
ದಿಂದ ನೆಲೆಸಿರುವನು. ನರನು ಆ ಪುಂಡರೀಕಾ ಕ್ಪನನ್ನು ಧ್ಯಾನಿಸಿದರೆ ಯಣತ್ರ ಯ 
ಗಳಿಂದ ಮುಕ್ಕನಾಗುವನು. 

೧೧-೧೨. ಆ ಗಯೆಗೆ ಮಾನವನು ಹೋಗಿ, "ಸ್ವಾಮಿ! ಪಿತೃಗಳಿಗೆ 
ನಿಂಡಪ್ರ ದಾನಮಾಡಲು ನಾನು ಇಲ್ಲಿಗೆ ಬಂದಿರುವೆನು. ಈ 'ನಿಂಡವನ್ನು ನಾನು 


೨೭೪ ಶ್ರೀ ಸ್ಲ್ಯಾಂದಮಹಾಪುರಾಣಂ 


ಚಂದ್ರೇ ಕ್ಷೀಣೇ ಚತುರ್ದಶ್ಯಾಂ ನಭಸ್ಯೇ ಪಿಂಡಮಾಹರೇತ್‌ । 
ಪಿತ್ರೂಣಾಮಕ್ಸಯಾ ತೃಪ್ತಿರ್ಭವಿಷ್ಯತಿ ನ ಸಂಶಯಃ ॥ ೧೩ ॥ 
ಏಕವಿಂಶತಿನಾರಾಂಶ್ಚಗಯಾಯಾಂ ಪಿಂಡಪಾತನೈಃ । 

ಭಕ್ತ್ಯಾ ತೃಸ್ತಿನುವಾಪ್ನೋತಿ ಲೋಹಯಷ್ಟ್ಯಾಂ ಪಿತೃತರ್ಸಣೇ ॥ ೧೪ ॥ 
ವನಾರಿದಸ್ತೃಪ್ತಿಮಾಪ್ನೋತಿ ಸುಖಮಕ್ಸಯ್ಯಮತ್ರಹಿ! 

ಫಲಪ್ರದಃ ಸುತಾನ್ಸಕ್ತಾನಾರೋಗ್ಯಮಭಯಪ್ರದಃ ॥ ೧೫ ॥ 
ವಿತ್ತಂ ನ್ಯಾಯಾರ್ಜಿತಂ ದತ್ತಂ ಸ್ವಲ್ಪಂ ತತ್ರ ಮಹಾಫಲಂ । 
ಸ್ನಾನೇನಾಂಸಿ ಹಿ ತತ್ತೀರ್ಥೇ ರುದ್ರಸ್ಕಾನುಚರೋ ಭನೇತ್‌ ॥ ೧೬॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ5ರಣ್ಯಮಾಹಾತ್ಮ್ಯೇ 
4«ತೀರ್ಥನನಾಹಾತ್ಮ್ಯ ವರ್ಣನಂ' ನಾಮಾಷ್ಟಾವಿಂಶೋ9ಧ್ಯಾಯಃ 


ನಿನ್ನ ಕೈಯಲ್ಲಿಡುವೆನು. ಪರಲೋಕದಲ್ಲಿರುವ ಪಿತೃಗಳಿಗೆ ನೀನಿದನ್ನು ಒಪ್ಪಿಸು” 
ಎಂದು ಪ್ರಾರ್ಥಿಸಿ ಆ ವಿಷ್ಣುವಿನ ಹಸ್ತದಲ್ಲಿ ಪಿಂಡವನ್ನು ಕೊಡಬೇಕು. 

೧೩. ಚಂದ್ರನು ಕ್ಲೀಣನಾಗಿರುವ ಭಾದ್ರಪದ ಬಹುಳ ಚತುರ್ದಶಿಯ ದಿನ 
ಪಿತೃಗಳಿಗೆ ನಿಂಡಸ್ರದಾನ ಮಾಡಿದರೆ ಅವರು ಶಾಶ್ವತವಾದ ತೃಪ್ತಿಯನ್ನು 
ಪಡೆಯುವರು. ಶ್ಯ 

೧೪. ಗಯಾ ಕ್ಷೇತ್ರದಲ್ಲಿ ಇಪ್ಪತೊಂದು ಸಲ ಪಿಂಡಪ್ರದಾನದಿಂದ ಪಿತ್ಛ 
ಗಳು ತೃಪ್ತರಾಗುವರು. ಈ ಲೋಹಯಸ್ಟಿ ತೀರ್ಥದಲ್ಲಿ ಭಕ್ತಿಯಿಂದ ತರ್ಪಣ 
ಮಾಡುವುದರಿಂದ ಮಾತ್ರವೇ ಅವರು ತೃಪ್ತಿಗೊಳ್ಳುವರು. 

೧೫. ಇಲ್ಲಿ ಜಲದಾನಮಾಡಿದವನು ಶಾಶ್ವತಸುಖವನ್ನು ಸಡೆದು ತೃಪ್ತ 
ನಾಗುವನು. ಫಲದಾನವನ್ನಿತ್ತನನು ಭಕ್ತಿಯುಳ್ಳ ಪುತ್ರರನ್ನೂ, ಅಭಯ 
ದಾನಮಾಡಿದವನು ಆರೋಗ್ಯವನ್ನೂ ಹೊಂದುವನು. 

೧೬. ನ್ಯಾಯರೀತಿಯಿಂದ ಗಳಿಸಿದ ಸ್ವಲ್ಪ ದ್ರವ್ಯವನ್ನು ದಾನಮಾಡಿದರೂ 
ಅದು ಮಹಾಫಲನನ್ಲೀಯುವುದು. ಆ ತೀರ್ಥದಲ್ಲಿ ಸ್ನಾನಮಾಡುವುದರಿಂದಲೇ 
ಮಹೇಶ್ವರನ ಸೇವಕನಾಗುವನು. 





[3 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ 64 ತೀರ್ಥಮಾಹಾತ್ಮ್ಯವರ್ಣನ''ವೆಂಬ 
ಇಪ್ಪತ್ತೆಂಟಿನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ 


ಅಥೈಕೋನತ್ರಿಂಶೋಧ್ಯಾಯಃ 
ಲೋಹಾಂಸುರಮಾಹಾತ್ಮ್ಯಸಂಪೂರ್ತಿವರ್ಣನಂ 
ಸೂತ ಉವಾಚ: 
ಅತಃಪರಂ ಶೃಜುದ್ಧಂಹಿ ಲೋಹಾಸುರನಿಚೇಸ್ಟಿತಂ | 
ಬಲೇಃ ಪುತ್ರಶತಸ್ಕಾಃಪಿ ಕಥಯಿಷ್ಯಾಮಿ ವಿಶ್ರುತಂ non 
ಯಥಾ ತಾ; ಭ್ರಾ ತರಾ ವೃದ್ಲೌ ಪ್ರಾಪತುಃ ಸ್ಥಾ 'ಸಮುತ್ತ ಮಂ । 
ತದಾಪ್ರಭೃತಿ ಸ್ಯ ರಾಗ್ಯಂ ದೈ ತ್ಕೊ ತ್ತ ಲೋಹಾಸುರೇ ದಧೌ ॥೨॥ 
ಕಿಂ ಕರೋಮಿ ೪, ಗಳ್ಭಾಮಿ ತನಸೇ ಸ್ಥಾನಮುತ್ತ ಮಂ । 
ಯಸ್ಯ ಪಾರಂ ನ ನ ದೇವತಾ ಮುನಯೋ ನರಾಃ ॥೩॥ 
ಕೋ ಮಯಾರಾಧ್ಯತಾಂ ದೇವೋ ಹೃದಿ ಚಿಂತಯತೇ ಭೃಶಂ । 
ಇತಿ ಚಿಂತಯತಸ್ತಸ್ಯ ಮತಿರ್ಜಾತಾ ಮಹಾತ್ಮನಃ ॥೪॥ 
ದಧೌ ಗಂಗಾಂ ಸ್ವಶೀರ್ಷೇಣ ಪುಷ್ಪನಂತೌ ಚ ನೇತ್ರಯೋಃ । 
ಹೃದಾ ನಾರಾಯಣಂ ದೇವಂ ಬ್ರಹ್ಮಾಣಂ ಕಟಿಮುಂಡಲೇ ॥ ೫ ॥' 
ಇಂದ್ರಾದ್ಯಾ ದೇವತಾಃ ಸರ್ವೇ ಯದ್ದೇಹೇ ಪ್ರತಿಬಿಂಬಿತಾಃ । 
ಪ್ರಪಶ್ಯಂತಿ ತದಾತ್ಮಾನಂ ಭಾಸ್ಕರಃ ಸಲಿಲೇ ಯಥಾ ॥ ೬ ॥ 





ಕನ್ನಡದ ಅನುವಾದ 
ಳೋಹಾಸುರಮಾಹಾತ್ಮ್ಯಸಂಪೂರ್ತಿವರ್ಣನ 

೧. ಸೂತನು ಹೇಳುತ್ತಾನೆ:--ಇನ್ನು ಮುಂದೆ ಲೋಹಾಸುರನ ಕಾರ್ಯ 
ವನ್ನು ಕೇಳಿರಿ. ಬಲಿಯ ನೂರು ಜನ ಮಕ್ಕಳ ಪ ಪ್ರಸಿದ್ಧ ಚರಿತ್ರೆಯನ್ನೂ ಹೇಳು 
ವೆನು. 

೨. ಮುದುಕರಾದ ಆ ಈರ್ವರು ಸಹೋದರರು ಆ ಉತ್ತಮಕ್ಷೇತ ತ್ರಕ್ಸೆ 
ಬಂದರು. ಅದು ಮೊದಲ್ಲೊಂಡು ಲೋಹಾಸುರನು ವಿರಕ್ತನಾದನು. 

೩-೪. ಏನುಮಾಡಲಿ? ತಪಸ್ಸಿಗಾಗಿ ಯಾವ ಉತ್ತಮಸ್ಥಾನವನ್ನು 
ಸೇರಲಿ? ದೇವತೆಗಳಿಗೂ, ಮುನಿಗಳಿಗೂ, ನರರಿಗೂ ಸಂಪೂರ್ಣ ವಿಷಯವನ್ನ 
ರಿಯಲಾಗದ ಯಾವ ದೇವತೆಯನ್ನು ಪೂಜಿಸಲಿ?'' ಎಂದು ಬಹಳವಾಗಿ ಚಿಂತಿಸು 
ತ್ರಿರುವಾಗ ಅವನ ಮನಸ್ಸಿಗೆ ಹೀಗೆ ಹೊಳೆಯಿತು. 

೫-೭. ಆ ದೈತ್ಯನು ಗಂಗೆಯನ್ನು ತಲೆಯಲ್ಲಿಯೂ, ಸೂರ್ಯಚಂದ್ರರನ್ನು 
ಕಣ್ಣುಗಳಲ್ಲಿಯೂ, ನಾರಾಯಣನನ್ನು ಹೃ ದಯದಲ್ಲಿಯೂ, ಬ್ರಹ್ಮನನ್ನು 
ಸೊಂಟದಲ್ಲಿಯೂ ಧರಿಸಿ,""ಇಂದ್ರಾ ದಿಜೇವತೆಗೆಳು ದೇಹದಲ್ಲಿ ಪ್ರತಿಬಿಂಬಗೊಂಡು 


೨೭೬ ಶ್ರೀ ಸ್ಕಾಂದಮಹಾಪುರಾಣಂ 


ತಮೇವಾರಾಧಯಿಷ್ಯಾಮಿ ನಿರಂಜನಮಕಲ್ಮಹಂ । 

ಏನಂ ಕೃತ್ವಾ ಮತಿಂ ದೈತ್ಯಸ್ತಪಸ್ತ್ರೇಪೇ ಸುದುಷ್ಕರಂ । 

ಭೀತೋ ಜನ್ಮಭಯಾದ್ಭೋರಾದ್ದು ಷ್ಕರಂ ಯನ್ಮಹಾತ್ಮಭಿಃ ॥೭॥ 

ಅಂಬುಭಕ್ಲೋ ನಾಯುಭಕ್ಟಃ ಶೀರ್ಣಪರ್ಣಾಂಶನಸ್ತಥಾ । 

ದಿವ್ಯಂ ನರ್ಷಶತಂ ಸಾಗ್ರಂ ಯದಾ ತೇಪೇ ಮಹತ್ತಪಃ । 

ತತಸ್ತುತೋಷ ಭಗವಾಂಸ್ಕ್ರಿಶೂಲವರಧಾರಕಃ non 
ಈಶ್ವರ ಉವಾಚ :- 

ವರಂ ವೃಣೇಷ್ಟ ಭದ್ರಂ ತೇ ಮನಸಾ ಯದಭೀಪ್ಸಿತಂ । 

ಲೋಹಾಸುರ ಮಯಾ ದೇಯಂ ತನ ನಾಸ್ತಿ ತಪೋಬಲಾತ್‌ ೫೯॥ 

ಇತ್ಯುಕ್ತೋ ದಾನವಸ್ತೃತ್ರ ಶಂಕರಾಂಗ್ರೇ ವಚೋ ಬ್ರನೀತ್‌ ॥೧೦॥ 
ಲೋಹಾಂಸುರ ಉವಾಚ :-- 

ಯದಿ ತುಷ್ಟೋಃಸಿ ದೇನೇಶ ನರಮೇಕಂ ವೃಣೋವ್ಯಹಂ | 


ಶರೀರಸ್ಯಾಂಜರತ್ಚಂ ಚ ಮಾಮೃತ್ಕೋರಪಿ ಮೇ ಭಯಂ ॥ ೧೧॥ 
ಜನ್ಮನ್ಯಸ್ಮಿನ್ನ ಫ್ರೈಭೋ ಭೂಯಾತ್‌ ಸ್ಥಾತವ್ಯಂ ಹೃದಯೇ ಮಮ । 
ಏನಮಸ್ತು ಶಿನಃ ಪ್ರಾಹ ತತ್ರ ತಂ ದಾನವೇಶ್ವರಂ ॥ ೧೨ ॥ 
ಶರ್ವಲಬ್ಧನರೋ ದೈವಾತ್ಸುನಸ್ತೇಸೇ ಮಹತ್ತಪಃ । 

ರಮ್ಯೇ ಸರಸ್ಪತೀತೀರೇ ತರಣಾಯ ಭವಾಂರ್ಣವಾತ್‌ ॥ ೧೩ ॥ 


ನೀರಿನಲ್ಲಿ ಸೂರ್ಯನನ್ನು ಕಾಣುವಂತೆ ಕಾಣುತ್ತಿರುವ ನಿರ್ದೋಷಿಯಾದ 
ದೇವತೆಯನ್ನು ಆರಾಧಿಸುವೆನೆಂ''ದು ನಿರ್ಧರಿಸಿ ತಿರುಗಿತಿರುಗಿ ಹುಟ್ಟುವುದರಿಂದ 
ಭಯಗೊಂಡು ಮಹಾತ್ಮರಿಗೂ ಮಾಡಲಾಗದ ಫೋರತಪಸ್ಸನ್ನಾಚರಿಸಿದನು. 
೮. ಆ ದೈತ್ಯನು ನೀರನ್ನು ಕುಡಿಯುತ್ತಲೂ, ವಾಯುವನ್ನು ಸೇವಿಸು 
ತ್ಮಲೂ, ಒಣಗಿದ ಎಲೆಗಳನ್ನು ಭಕ್ಸಿಸುತ್ತಲೂ ನೂರು ದಿವ್ಯವರ್ಷಗಳಕಾಲ 
ತಪಸ್ಸನ್ನಾಚರಿಸಿದನು. ಆಗ ತ್ರಿಶೂಲಧಾರಿಯಾದ ಶಂಕರನು ಸಂತುಷ್ಟನಾದನು. 
೯-೧೦. ಈಶ್ವರನು ಹೇಳುತ್ತಾನೆ:--ಎಲೈ ಮಂಗಳಕರನೆ! ನಿನ್ನ ಅಭೀಷ್ಟ 
ವನ್ನು ಕೇಳಿಕೊ. ಲೋಹಾಸುರ! ನಿನ್ನ ಮಹಾತಸಸ್ಸಿಗೆ ಮೆಚ್ಚಿರುವ ನಾನು ನಿನಗೆ 
ಕೊಡದಿರುವುದೇನಿದೆ? ಶಂಕರನು ಹೀಗೆ ಹೇಳಲು ಲೋಹಾಸುರನು ಇಂತೆಂದನು. 
೧೧-೧೨. ಲೋಹಾಸುರನು ಕೇಳುತ್ತಾನೆ :--""ಶಂಕರ! ನೀನು ನನಗೆ 
ಪ್ರಸನ್ನನಾಗಿದ್ದರೆ ಮೃತ್ಯುವಿನ ಭಯವಿಲ್ಲದಂತೆ ಮಾಡಿ ನನ್ನ ದೇಹವನ್ನು 
ಶಾಶ್ವತಗೊಳಿಸು. ಈ ಜನ್ಮದಲ್ಲಿಯೆ ನೀನು ನನ್ನ ಹೃದಯದಲ್ಲಿ ನೆಲಸು'' 
ಎಂದನು. ಮಹಾದೇವನು ಹಾಗೆಯೇ ಆಗಲೆಂದು ಒಪ್ಪಿದನು. 
೧೩. ಆ ಲೋಹಾಸುರನು ಹೀಗೆ ಶಿವನಿಂದ ವರವನ್ನು ಪಡೆದು ಮರಳಿ 


`ಜಕೊಳಿಸತ್ರಿ ಂಶಾ15ಧ್ಯಾ'ಯಂ॥ ೨೭೭ 


ವತ್ಸರಾಣಾಂ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ! 


ಶಂಕತೇ ಭಗವಾನಿಂದ್ರೋ ಭೀತಸ್ತಸ್ಯ ತಪೋಬಲಾತ್‌ ॥ ೧೪॥ 

ಮಾನೇ ಸದಚ್ಯುತಿರ್ಭೂಯಾದ್ದೆ ತತ್ಯಾಲ್ಲೋಹಾಂಸುರಾತ್ಮ ಜಿತ್‌ | 

ಮಘವನಾನ್ಸುಪ್ತರೂಪೇಣ ಸಮೇತ್ಯಾಶ್ರಮಕಾನನಂ 1 ೧೫ ॥ 

ತಪೋಭಂಗಂ ಪ್ರಕುರುತೇ ಕಂಪಯಿತ್ವಾ ಮಹಾಸುರಂ । 

ತಾಡಯಂತಿ ಶರೀರೇ ತಂ ಮುಷ್ಟಿಭಿಸ್ತೀಕ್ಸ್ಟಕರ್ಕಶೈಃ ॥ ೧೬ ॥ 

ಅಥ ತೇನ ಚ ದೈತ್ಯೇನ ಧ್ಯಾನಮುಶ್ಸೃಜ್ಯ ವೀಕ್ಸಿತಂ। 

ಇಂದ್ರೇಣ ತತೃತಂ ಸರ್ವಂ ತಪೋಬಲನಿನಾಶನಂ ॥ ೧೭ ॥ 

ತಸ್ಯ ತೈರಭನದ್ಯುೂದ್ಧನಿಂದ್ರಾದ್ಕೈರಥಕರ್ಕಶೈಃ । 

ಏಕಸ್ಯ ಬಹುಭಿಃ ಸಾರ್ಧಂ ದೇವಾಸ್ತೇ ತೇನ ಸಂಯುಗೇ ॥ ೧೮ ॥ 

ರುಧಿರಾಕ್ಲಿನ್ನದೇಹಾ ನೈ ಪ್ರಹಾರೈರ್ಜರ್ಜರೀಕೃತಾಃ । 

ಫೇಶನಂ ಶರಣಂ ಪ್ರಾಸ್ತಾ ತ್ರಾಹಿ ತ್ರಾಹೀತಿ ಭಾಷಿಣಃ ॥೧೯॥ 
ಸೂತ ಉವಾಚ :- 

ದೇನಾನಾಂ ನಾಕ್ಯಮಾಕರ್ಣ್ಯ ವಾಸುದೇವೋ ಜನಾರ್ದನಃ । 

ಯುಯುಧೇ ಕೇಶವಸ್ತೇನ ಯುದ್ಧೇ ವರ್ಷಶತಂ ಕಿಲ ॥ ೨೦॥ 





ಸಂಸಾರಸಮುದ್ರವನ್ನು ದಾಟುವುದಕ್ಕಾಗಿ ರಮ್ಯವಾದ ಸರಸ್ವತೀನದಿಯ ತೀರ 
ದಲ್ಲಿ ಘೋರವಾದ ತಪಸ್ಸನ್ನಾಚರಿಸಿದನು. 

೧೪. ಸಹಸ್ರ, ಲಕ್ಷ್ಮ, ಅರ್ಬುದ ಸಂವತ್ಸರಗಳಕಾಲ ಅವನು ತಪಸ್ಸನ್ನು 
ಮಾಡಲು ಇಂದ್ರನು ಅವನ ತಪಸ್ಸಿನಿಂದ ಕಳವಳಗೊಂಡನು. 

೧೫-೧೬. ಈ ಲೋಹಾಸುರನ ತಪಸ್ಸಿನಿಂದ ನನ್ನ ಸ್ಥಾನವು ತಪ್ಪದಿರ 
ಲೆಂ?'ದು ಇಂದ್ರನು ಗುಟ್ಟಾಗಿ ಅವನ ತಪೋನನಕ್ಕೆ ಬಂದು ಅವನನ್ನು ನಡುಗಿಸಿ 
ತಪೋಭಂಗವನ್ನು ಮಾಡಿದನು. ಬಹಳ ಘಟ್ಟಿಯಾದ ತನ್ನ ಮುಷ್ಟಿಯಿಂದ 
ಅವನನ್ನು ಗುದ್ದಿ ಬಾಧಿಸಿದನು. 

೧೭. ಆಗ ದೈತ್ಯನು ಧ್ಯಾನವನ್ನು ತ್ಯಜಿಸಿ ಇಂದ್ರನು ಮಾಡಿದ ತಪೋಬಲ 
ನಾಶವನ್ನೆಲ್ಲ ಈಕ್ಸಿಸಿದನು. 

೧೮-೧೯. ಆ ಲೋಹಾಸುರನಿಗೂ ಇಂದ್ರಾದ್ಯನೇಕದೇವತೆಗಳಿಗೂ ಕಾಳೆಗ 
ವಾಯಿತು. ದೇವತೆಗಳು ಆ ಯುದ್ಧದಲ್ಲಿ ರಕ್ಷಸಿಕ್ತಾಂಗರಾಗಿ ಏಟುಗಳಿಂದ 
ಪುಡಿ ಪುಡಿಯಾದರು. ರಕ್ಷಿಸು ರಕ್ಸಿಸೆಂದು ಕೂಗುತ್ತ ವಿಷ್ಣುವನ್ನು ಮರೆ 
ಹೊಕ್ಕರು. 

೨೦. ಸೂತನು ಹೇಳುತ್ತಾನೆ :ಶ್ರೀಮಹಾವಿಷ್ಣುವು ದೇವತೆಗಳ ಮಾತನ್ನು 
ಕೇಳಿ ನೂರುವರ್ಷಗಳ ಕಾಲ ಆ ಅಸುರನೊಡನೆ ಯುದ್ಧಮಾಡಿದನು. 


`೨೩೮ ಶ್ರೀ ಸ್ಥಾಂದಮು ಹಾಪುರಾಅಂ 


ತತೋ ನಾರಾಯಣಂ ತತ್ರ ಜಿಗಾಯ ಸ ವರೋರ್ಜಿತಃ । 
ಅಥ ನಾರಾಯಣೋ ದೇವೋ ಜಿತೋ ಲೋಹಾಸುರೇಣ ತು ॥ ೨೧॥ 
ಮಂತ್ರಯಾಮಾಸ ರುದ್ರೇಣ ಬ್ರಹ್ಮಣಾ ಚ ಪುನಃ ಪುನಃ । 
ಮಾಮಾಂಸಿತ್ವಾ ತ್ರಯೋ ದೇವಾಃ ಪುನರ್ಯುದ್ಧ್ಯ ಸಮುದ್ಯಮಂ ॥೨೨॥ 
ಲೋಹಾಃಸುರಸ್ಯ ದೈತ್ಯಸ್ಯ ವಪುರ್ದೃಷ್ಟ್ಟಾ ಪುನರ್ನನಂ । 


ಮಹದಾಸೀತ್ಸುನರ್ಯುದ್ಧಂ ದೈತ್ಯಕೇಶನಯೋಸ್ತ ತಃ ॥ ೨೩॥ 
ನ ಮಮಾರ ಯದಾ ದೈತ್ಯೋ ನಿಷ್ಣುನಾ ಪ್ರಭವಿಷ್ಣುನಾ | 

ತರಸಾ ತಂ ಕೇಶವೋಂಪಿ ಸಾತಯಾಮಾಸ ಭೂತಲೇ ॥ 2೪ 
ಉತ್ತಾನಂ ಪತಿತಂ ದೃಷ್ಟಾ ಪಿನಾಕೀ ಪರಮೇಶ್ವರಃ । 

ದಧಾರ ಹೃದಯೇ ತಸ್ಯ ಸ್ವರೂಪಂ ರೂಪವರ್ಜಿತಃ ॥ ೨೫ ॥ 
ಕಂಠೇ ತಸ್ಥೌ ತತೋ ಬ್ರಹ್ಮಾ ತಸ್ಯ ಲೋಹಾಸುರಸ್ಯ ಚ । 

ಚರಣೌ ಪೀಡಯಾಮಾಸ ಸ್ಮಸ್ಥಿತ್ಯಾ ಪುರುಷೋತ್ತಮಃ ॥ ೨೬ 


ಅಥ ದೈತ್ಯಃ ಸಮುತ್ತಸ್ಥೌ ಭೃಶಂ ನಿದ್ಧೋಪಿ ಭೂತಲೇ । 
ದೃಷ್ಟೋತ್ಸಿತಂ ತತೋ ದೈತ್ಯಂ ಪಾತಯಂತಂ ಸುರೋತ್ತಮಾನ್‌ ॥೨೭॥ 


ಉವಾಚ ದಿವ್ಯಯಾ ವಾಚಾ ವಿರಿಂಚಿಃ ಕಮಲಾಸನಃ ॥ ೨೮ ॥ 
ಬ್ರಹ್ಮೋವಾಚ ವಾ 

ಲೋಹಾಃಸುರ ಸದಾ ರಕ್ಷ ವಾಚೋ ಧರ್ಮಮಭೀಕ್ಷ್ಣಶಃ | 

ತ್ವಯಾ ಯತ್ರಾರ್ಥಿತಂ ರುದ್ರಾತ್ತದೇವ ಸಮುಪಸ್ಥಿತಂ ॥ ೨೯॥ 





೨೧-೨೩. ಶಂಕರನ ವರದಿಂದ ಬಲಗೊಂಡ ಆ ಲೋಹಾಸುರನು. 
ನಾರಾಯಣನನ್ನು ಗೆದ್ದನು. ಅವರಿಂದ ಜಿತನಾದ ವಿಷ್ಣುವು ಬ್ರಹ್ಮರುದ್ರ 
ಕೊಡನೆ ತಿರುಗಿ ಆಲೋಚಿಸಿ ಯುದ್ಧವನ್ನು ಹೂಡಿದನು. ಮರಳಿ ಹೊಸ ಶರೀರ. 
ವನ್ನು ಪಡೆದ ಲೋಹಾಸುರನಿಗೂ ವಿಷ್ಣುನಿಗೂ ಘೋರ ಯುದ್ಧವು ನಡೆಯಿತು. 

೨೪-೨೫. ಸಮರ್ಥನಾದ ವಿಷ್ಣುವು ಆ ದೈತ್ಯನನ್ನು ಕೊಲ್ಲಲಾಗದೆ ಕೂಡಲೆ 
ಭೂಮಿಯಲ್ಲಿ ಅವನನ್ನು ಕೆಡವಿದನು. ಮೇಲ್ಮುಖನಾಗಿ ಬಿದ್ದಿರುವ ಅವನನ್ನು 
ಕಂಡು ಪರಮೇಶ್ವರನು ಅವನ ಹೃದಯದಲ್ಲಿ ನೆಲೆಸಿದನು. 

೨೬. ಬ್ರಹ್ಮನು ಆ ಲೋಹಾಸುರನ ಕಂಠದಲ್ಲಿ ನೆಲಸಿದನು. ವಿಷ್ಣುವು 
ಕಾಲುಗಳಲ್ಲಿದ್ದು ಅವುಗಳನ್ನು ಒತ್ತಿದನು. 

೨೭-೨೮. ಬಳಿಕ ಭೂಮಿಯಲ್ಲಿ ಬಿದ್ದಿದ್ದ ದೈತ್ಯನು ಮೇಲಕ್ಕೆದ್ದು ದೇವತೆ. 
ಗಳನ್ನು ಹೊಡೆದು ಕೆಡವುತ್ತಿರಲು ಬ್ರಹ್ಮನು ದಿವ್ಯವಾಣಿಯಿಂದ ಹೀಗೆಂದನು. 

೨೯, ಬ್ರಹ್ಮನು ಹೇಳುತ್ತಾನೆ :-ಲೋಹಾಸುರ! ನೀನು ಆಡಿದ ಮಾತನ್ನು 
ನಡೆಯಿಸು. ನೀನು ಮಹೇಶ್ವರನಿಂದ ಚೇಡಿದುದು ಇದೀಗ ಕೈಗೂಡಿತು. 


ಬಕೋನತ್ರಿಂಶೀತಧ್ಯಾಯಃ ಚಿಲ್‌ 


ಅಹಂ ವಿಷ್ಣುಶ್ಚ ರುದ್ರಶ್ಚ ತ್ರಯೋಮಿಾ ಸುರಸತ್ತಮಾಃ | 


ತ್ವದ್ದೇಹಮುಸನೇಕ್ಸ್ಯಾನೋ ಯಾವದಾಭೂತಸಂಸ್ಸನಂ  ॥೩೦॥ 
ದಾನನೇಶ ಶಿನಪ್ರಾಪ್ತಿರ್ಭಾನಭಕ್ರೈನ ಜಾಯತೇ । 

ಶಿವಂ ಚಾಲಯಿತುಂ ಬುದ್ಧಿಃ ಕಥಂ ತನ ಭವಿಷ್ಯತಿ ॥೩೧॥ 
ಅಚಲಾಂಶ್ಚಾಲಯೇದೃ್ಯಸ್ತು ಪ್ರಾಸಾದಾನ್ಬ್ವಾ ಹ್ಮಣಾನ್ಸುರಾನ್‌ । 
ಅಚಿರೇಣೈನ ಕಾಲೇನ ಪಾತಕೇನೈನ ಲಿಪ್ಯತೇ ॥ ೩೨॥ 
ಶ್ಮಶಾನನತ್ಪರಿತ್ಯಾಜ್ಯಃ ಸತ್ಯಧರ್ಮ ಬಹಿಷೃತಃ | 

ಸತ್ಯವಾಗಸಿ ಭದ್ರಂ ತೇ ಮಾನಿಚಾಲಯ ದೇನತಾಃ ॥ ೩೩ಓ 


ಯೇನ ಯಾತಾಸ್ತು ಪಿತರೋ ಯೇನ ಯಾತಾಃ ಪಿತಾಮಹಾಃ । 
ತೇನ ಮಾರ್ಗೇಣ ಗಂತವ್ಯಂ ನ ಚೋಲ್ಲಂಘ್ಯಾ ಸತಾಂ ಗತಿಃ ॥ ೩೪॥ 
ದಾನನೇಶ ಪಿತಾ ತೇಹಿ ದದೌ ಲೋಕತ್ರಯಂ ಹರೇಃ । 


ವಾಕ್ಸಾಶಬದ್ಧಃ ಪಾತಾಲೇ ರಾಜ್ಯಂ ಚಕ್ರೇ ಮಹೀಪತಿಃ ॥ ೩೫ ॥ 
ತಥಾ ತಮಸಿ ವಾಕ್ಟಾಶಾಚ್ಛಿವಭಕ್ತಿಸಮನ್ಸಿತಃ | 
ಭೂತಲೇ ತಿಸ್ಮ ದೈತ್ಯೇಂದ್ರ ಮಾನಾಗ್ಕೈಕಲ್ಪ್ಯಮಾಸ್ಲು ಹಿ ॥ 4೬ ॥ 





೩೦. ಪ್ರಳಯಕಾಲದವರೆಗೆ ನಾನೂ, ವಿಷ್ಣುವೂ, ಮಹೇಶ್ವರನೂ ಈ 
ಮೂವರೂ ನಿನ್ನ ಶರೀರದಲ್ಲಿ ನೆಲಸಿರುವೆವು. 

೩೧. ದಾನವೇಂದ್ರ! ಶಿವಪ್ರಾಪ್ತಿಯು ಭಕ್ತಿಯಿಂದಲೇ ಆಗುವುದು. 
ಶಿವನನ್ನು ಚಂಚಲನನ್ನಾಗಿ ಮಾಡಲು ನೀನೇತಕ್ಕೆ ಆರೋಚಿಸುವೆ. 

೩೨. ಸ್ಥಿರವಾದ ದೇವಾಲಯ, ಬ್ರಾಹ್ಮಣರು, ದೇವತಾಮೂರ್ತಿಗಳು 
ಇವುಗಳನ್ನು ಚಲಿಸುವಂತೆ ಮಾಡುವವನು ಕೂಡಲೇ ಪಾತಕಿಯಾಗುವನು. 

೩೩. ಸತ್ಯಧರ್ಮಗಳಿಂದ ಬಾಹ್ಯನಾದ ಮನುಜನು ಶ್ಮಶಾನದಂತೆ 
ತ್ಯಾಜ್ಯನು. ನೀನು ಸತ್ಯವಾದ ಮಾತುಳ್ಳವನಾಗಿರುವೆ. ನಿನಗೆ ಕಲ್ಯಾಣ 
ವಾಗಲಿ. ದೇವತೆಗಳನ್ನು ಚಲಿಸುವಂತೆ ಮಾಡಲು ಯತ್ನಿಸಬೇಡ. 

೩೪. ನೀನು ನಿನ್ನ ಸಿತೃಪಿತಾಮಹರು ನಡೆದ ದಾರಿಯಲ್ಲಿ ನಡೆಯಬೇಕು. 
ಸಜ್ಜನರ ಮಾರ್ಗವನ್ನು ಮಾರಬಾರದು. 

೩೫. ದಾನವೇಂದ್ರ! ನಿನ್ನ ತಂದೆಯು ಮಾತಿಗೆ ಕಟ್ಟುಬಿದ್ದು ಮೂರು 
ಲೋಕಗಳನ್ನೂ ಶ್ರೀಹರಿಗೆ ದಾನಮಾಡಿ ತಾನು ಪಾತಾಳದಲ್ಲಿ ರಾಜ್ಯವನ್ನು 
ಸಿರ್ಮಿಸಿದನು. 

೩೬. ಅಸುರೇಂದ್ರ! ನೀನೂ ಹಾಗೆಯೇ ಆಡಿದ ಮಾತನ್ನು ಮಾರದೆ 
ಶಿವಭಕ್ತಿಸಂಪನ್ನನಾಗಿ ಭೂಮಿಯಲ್ಲಿ ಬಾಳು. ವಚನೋಲ್ಲಂಘನವನ್ನು 
ಮಾಡಬೇಡ. 


೨೪೭ ಶ್ರೀ ಸ್ಯಾಂಜನುಹಾಪುರಾಣಂ 


ವರಾಂಸ್ತ್ರೇ ಚ ಪ್ರದಾಸ್ಯಾಮೋ ಮಾ ನಿಚಾಲ್ಯಾ ಹಿ ದೇವತಾಃ 1 ೩೭॥ 
ವ್ಯಾಸ ಉವಾಚ: 

ತಚ್ಚ ತ್ತಾ ಬ್ರಹ್ಮಣೋ ವಾಕ್ಯಂ ಸಂತುಷ್ಟೋ ದಾನವೇಶ್ವರಃ | 

ಪ್ರಾಹ ಪ್ರಸನ್ನಯಾ ವಾಚಾ ಬ್ರಹ್ಮಾಣಂ ಕೇಶವಂ ಹರಂ ॥೩೮॥ 
ಳೋಹಾಂಸುರ ಉವಾಚ: 

ವಾಕ್ಸಾಶಬದ್ಧಸ್ತಿಷ್ಠಾಮಿ ನ ಪುನರ್ಭನತಾಂ ಬಲೇ । 


ಬ್ರಹ್ಮಾನಿಷ್ಣುಶ್ಚ ರುದ್ರಶ್ಚ ತ್ರಯೋಂವಿರಾ ಸುರಸತ್ತಮಾಃ ॥ ೩೯. 
“ಸ್ಥಾ ಸ್ಯಂತಿ ಚೇಚ್ಛರೀರೇ ಮೇಕಿಂನ ಲಬ್ಧಂ ಮಯಾ ತತಃ । 
ಇದಂ ಕಲೇನರಂ ಮೇ ಹಿ ಸಮಾರೂಢಂ ತ್ರಿಭಿಃ ಸುರೈಃ ॥ ೪೦ ॥ 


ಭೂಮ್ಯಾಂ ಭವತು ವಿಖ್ಯಾತಂ ಮತ್ರ್ರಭಾವಾತ್ಸುರೋತ್ತಮಾಃ ॥೪೧॥ 

ಲೋಹಾಸುರಸ್ಯ ವಾಕ್ಯೇನ ಹರ್ಷಿತಾಸ್ತ್ರಿದಶಾದಯಃ 

ದದುಃ ಪ್ರತ್ಯುತ್ತರಂ ತಸ್ಮೈ ಬ್ರಹ್ಮನಿಷ್ಣುಸುರೇಶ್ವರಾಃ ॥ ೪೨॥ 

ಸತ್ಯವಾಕ್ಸಾಶತೋ ದೈತ್ಯೋನ ಸತ್ಯಾಚ್ಚಲಿತೋ ಯತಃ । 

ತೇನ ಸತ್ಯೇನ ಸಂತುಷ್ಟಾ ದಾಸ್ಯಾಮಸ್ತೇ ಮನೇಪ್ಸಿತಂ ॥ ೪೩॥ 
ಬ್ರಹ್ಮೋವಾಚ:-- 

ಯಥಾಸ್ನಾನಂ ಬ್ರಹ್ಮಜ್ಞಾನಂ ದೇಹತ್ಕಾಗೋ ಗಯಾತಲೇ । 

ಧರ್ಮಾಃರಣ್ಯೇ ತಥಾ ದೈತ್ಯ ಧರ್ಮೇಶ್ವರಪುರಃ ಸ್ಥಿತೇ ॥ ೪೪ ॥ 








೩೭. ನಿನಗೆ ವರವನ್ಸೀಯುವೆವು. ದೇವತೆಗಳನ್ನು ಚಂಚಲರನ್ನಾಗಿಸಬೇಡ. 

೩೮. ವ್ಯಾಸನು ಹೇಳುತ್ತಾನೆ:-ಆ ಫಿತಾಮಹನ ನುಡಿಯನ್ನು ಕೇಳಿ 
ಸಂತುಷ್ಟನಾದ ದಾನವೇಂದ್ರನು ಪ್ರಸನ್ನವಾಣಿಯಿಂದ ಬ್ರಹ್ಮ ವಿಷ್ಣು ಮಹೇಶ್ವರ 
ರನ್ನು ಕುರಿತು ಇಂತೆಂದನು. 

೩೯-೪೧. ಲೋಹಾಸುರನು ಹೇಳುತ್ತಾನೆ:--ನಾನು ನನ್ನಮಾತಿಗೆ ಕಟ್ಟು 
ಬಿದ್ದು ಹಾಗೆಯೆ ಮಾಡುವೆನು. ನಿಮ್ಮ ಬಲಕ್ಕೆ ಸೋತು ಹಾಗೆ ಮಾಡುವುದಿಲ್ಲ. 
ದೇವೋತ್ತಮರಾದ್ಯಬ್ರಹ್ಮ, ವಿಷ್ಣು, ಮಹೇಶ್ವರರು ನನ್ನ ದೇಹದಲ್ಲಿ ನೆಲಸಿರು 
ವುದಾದಕೆ ನನ್ನ ಮನೋರಥವು ಕೈಗೂಡಿತು. ಅಯ್ಯಾ ದೇವೋತ್ತಮರೆ! 
ಈ ವಿಷಯವು ಭೂಮಿಯಲ್ಲಿ ಪ್ರಸಿದ್ಧಿಗೊಳ್ಳಲಿ.'' i 

೪೨. ಲೋಹಾಸುರನ ಈ ಮಾತಿನಿಂದ ಹರ್ಷಗೊಂಡ ಬ್ರಹ್ಮಾದಿಗಳು 
ಹೀಗೆಂದರು. 

೪೩. "6 ದೈತ್ಯರಾಜ! ನೀನು ಸತ್ಯವಚನಕ್ಕೆ ತಪ್ಪದಿರುವಕಾರಣ ಬಹಳ 
ಸಂತೋಷಗೊಂಡ ನಾವು”ನಿನ್ನ ಇಷ್ಟಾರ್ಥವನ್ನು ಕೊಡುವೆವು. '` 

೪೪. ಬ್ರಹ್ಮನು ಹೇಳುತ್ತಾನೆ:-ಗಯಾಕ್ಟೇತ್ರದಲ್ಲಿ ಸ್ನಾನ, ಮರಣಗಳಿಂದ 
ಆಗುವ ಫಲವು ಈ ಧರ್ಮೇಶ್ವರನ ಮುಂದಿರುವ ಧರ್ಮಾರಣ್ಯದಲ್ಲಾಗುವುದು. 


ಏಳೋನತ್ರಿಂತೋಂಧ್ಕಾಯಃ ೨೮೧ 


ಕೂಪೇ ತರ್ಪಣಕಂಶಾ ್ರಿದ್ಧ ೦ ಶಂಸಂತಿ ಪಿತಕೋ ದಿವಿ । | 
ಸಂತುಷ್ಟಾ ನಿಂಡದಾನೇನ ““ಯಾಯಾಂ ಪಿತರೋ ಯಥಾ ॥ ೪೫ ॥ 


ವಾಂಛಂತಿ ತರ್ಪಣಂ ಕೂಸೇ ಧರ್ಮಾಃರಣ್ಕೇ ನಿಶುದ್ಧಯೇ | 
ದಾನನೇಂದ್ರ ಶರೀರಂ ತು ತೀರ್ಥಂ ತನ ಭವಿಷ್ಯತಿ ॥ ೪೬ ॥ 
ಏಕನಿಂಶತಿವಾರಾಂಸ್ತು ಗಯಾಯಾಂ ತರ್ಪಣೇ ಕೃತೇ। 

ಪಿತ್ಯೂಣಾಂ ಯಾ ಪರಾತೃಪ್ತಿರ್ಜಾಯತೇ ದಾನನಾಂಧಿಪ ॥ ೪೭॥ 
ಧರ್ಮೆೇಶ ಸೈರಪುರಸ್ತಾತ್ಸಾತ್ರೇಕದಾ ಪಿತೃತರ್ಪಣಾತ್‌ | 

ಸ್ಯಾದ್ಕೈ ದಶಗುಣಾ ತೃಸ್ತಿಃ ಸತ್ಯ ಮೇನ ನ ಸಂಶಯಃ ॥ ೪೮॥ 
ಪಿತ್ರೂಣಾಂ ನಿಂಡದಾಸೇನ ಅಕ್ಷ ಯ್ಯಾ ತೃಪ್ತಿರಸ್ತ್ಯಿಹ । 
ಶಿನರೂಸಾಂತರಾಲೇ ವೈ ಧರ್ಮಾರಣೆ! € ಧರಾತಲೇ ॥೪೯॥ 
ಶ್ರದ್ಧಯೈನ ಹಿ ಕರ್ತವ್ಯಾಃ ಶ್ರಾದ್ಮಪಿಂಡೋಡಕಕ್ರಿಯಾಃ | 
ತಥಾಂತರಾಲೇ ಚಾಂಸ್ಮಾಕಂ ಶ್ರಾದ್ಧಸಿಂಡೌ ನಿಶೇಷತಃ ॥೫೦॥ 
ತಥಾ ಶರೀರೇ ಕ್ಟಾಪ್ಯಾಸ್ತಾಂ ಚಿಂತಾ ಸತ್ಯೋಸಸಿ ಸುವ್ರತ | 

ತ್ರಿಸು ಲೋಕೇಷು ದುಷ್ಟ್ರಾಪಂ ಸತ್ಯಂ ತೇ ದಿನಿ ಸಂಸ್ಥಿತಂ, ॥೫೧॥ 
ಅಸ್ಮದ್ಧಾಕ್ಕೇನ ಸತ್ಯೇನ ತತ್ತಥಾಂಸುರಸತ್ತಮ । 

ಗಯಾ ಸಮಧಿಕಂ ತೀರ್ಥಂ ತನ ಜಾತಂ ಧರಾತಲೇ ॥ ೫೨ ॥ 





೪೫. ಸ್ವರ್ಗವಾಸಿಗಳಾದ ಪಿತೃಗಳು ಈ ಧರ್ಮಕೂಪದಲ್ಲಿ ನೆರವೇರಿಸುವ 
ತರ್ಪಣ, ಶ್ರಾ ದ್ಧ ಗಳನ್ನು ಹೊಗಳುತ್ತಾರೆ. ಇಲ್ಲಿ ಪಿಂಡಪ್ರದಾನಮಾಡುವುದ 
ರಿಂದ ಪಿತೃಗಳು "ಇಯೆಯೆಲ್ಲಿ ಎಂತೋ ಅಂತು ತೃಪ್ತ ಭಾಗವು. 

Ke ದಾನವೇಂದ್ರ! ಪಿತೃ ಗಳು ಶುದ್ಧಿಗಾಗಿ ಈ ಧರ್ಮಕೂಪದಲ್ಲಿ ತರ್ಪಣ 
ಮಾಡಬೇಕೆಂದು ಬಹೂ ಈ ನಿನ್ನ ಶರೀರವೇ ಇಲ್ಲಿ ತೀರ್ಥವಾಗುವುದು. 

೪೭-೪೮. ಅಸುರೇಂದ್ರ! ಗಯೆಯಲ್ಲಿ ಇಪ್ಪ ತ್ತೊ ದು ಸಾರಿ ತರ್ಪಣ 
ಮಾಡುವುದರಿಂದ ಪಿತೃಗಳಿಗಾಗುವ ತೃಪ್ತಿಗಿಂತ ಸ ಧರ್ಮೆಶ್ವರನ ಮುಂದೆ 
ಒಂದು ಸಾರಿ ಮಾಡುವ. ತರ್ಪಣದಿಂದ 'ಹತ್ತರಸ್ಟು ತೃಪ್ತಿ 20 

೪೯. ಧರ್ಮಾರಣ್ಯದ ಲ್ಲಿ ಧರ್ಮೇಶ್ವ ರನ ಯಡಿ ಮಾಡಿದ ಪಿಂಡದಾನ 
ದಿಂದ ಪಿತೃ ಗಳಿಗೆ ಅಕ ಕ್ಚಯವಾದ ತೃಪ್ತಿ ಯಾಗಲಿ, 

೫೦. ಶ್ರಾದ್ಧ ದಲ್ಲಿ ಫಿಂಡಪ ಪ್ರದಾನ, ತರ್ಪಣಗಳನ್ನು ಶ್ರ ಶ್ರದ್ಧೆಯಿಂದ ಮಾಡ 
ಬೇಕು. ಅದರಲ್ಲಿಯೂ ನಮ್ಮ ಮುಂಡೆ ಅತ್ಯಂತ ಶ್ರ ಜ್ಜ ಖಂಟ ಮಾಡಬೇಕು. 

೫೧-೫೨, ಮೂರು ಲೋಕದಲ್ಲಿ ಯಾರಲ್ಲಿಯೂ ಇಲ್ಲದ ಸತ್ಯವು ನಿನ್ನಲ್ಲಿ 
ನೆಲಸಿರುವುದು. ಅಸುರೇಂದ್ರ! ನಮ್ಮಾ ಸತ್ಯವಚನದಿಂದ ಭೂಮಿಯಲ್ಲಿ ನಿನ್ನ 
ಕ್ಟೇತ್ರವು ಗಯೆಗಿಂತಲೂ ಅಧಿಕವಾಗುವುದು. 


3೮೨ ಶ್ರೀ ಸ್ಕಾಂದಮ ಹಾಪುರಾಣಂ 


ಅಸ್ಮಾಕಂ ಸಿ ತಿರನ್ಯಗ್ರಾ ತವ ದೇಹೇ ನ ಸಂಶಯಃ । 


ಸತ್ಯಪಾಶೇನೆ ಬದ್ಧಾಃಸ್ಮ ದೃಢಮೇವ ತ್ವಯಾಂನಘ ॥ ೫೩॥ 
ವಿಷ ರುವಾಚ :- 

ಗಯಾ ಪ್ರಯಾಗತಸ್ಕಾಪಿ ಫಲಂ ಸಮಧಿಕಂ ಸ್ಮೃತಂ | 

ಚತುರ್ದಶ್ಯಾಮಮಾವಾಸ್ಯಾಂ ಲೋಹಯಷ್ಟ್ಯಾಂ ಸಿಂಡದಾನತಃ ॥ ೫೪ ॥ 


ಬಲಿಪುತ್ರಸ್ಯ ಸತ್ಯೇನ ಮಹತೀತೃಪ್ತಿರತ್ರ ಹಿ! 


ಮಾಕುರುಷ್ಟಾಂತ್ರ ಸಂದೇಹಂ ತನ ದೇಹೇ ಸ್ಥಿತಾ ಸ್ವಯಂ ॥ ೫೫ ॥ 
ಸರಸ್ವತೀ ಪುಣ್ಯತೋಯಾ ಬ್ರಹ್ಮಲೋಕಾತೃ್ರಯಾತ್ಯುತ । 
ಪ್ಲಾವಯಿಷ್ಯಂತಿ ದೇಹಾಂಗಂ ಮಯಾ ಸಹ ಸುಸಂಗತಾ ॥ ೫೬॥ 
ಯಥಾ ವೈ ದ್ವಾರಕಾವಾಸೋ ದೇವಸ್ತತ್ರ ಮಹೇಶ್ವರಃ । 
ವಿರಿಂಚಿರ್ಯತ್ರ ತೀರ್ಥಾನಿ ಶ್ರೀಣ್ಯೇತಾನಿ ಧರಾತಲೇ ॥ ೫೭॥ 
ಭವಿಷ್ಯತಿ ಚ ಸಾತಾಲೇ ಸ್ವರ್ಗಲೋಕೇ ಯಮಕ್ಪಯೇ 1 
ವಿಖ್ಯಾತಾನ್ಯಸುರಶ್ರೇಷ್ಠ್ಮ ಸಿತ್ಳೂಣಾಂ ತೃಸ್ತಿಹೇತನೇ 1 ೫೮ ॥ 


ಅಥಾಂನ್ಯತ್ಸಂಪ್ರವಕ್ಸ್ಟ್ಯಾಮಿ ಗಾಥಾಂ ಪಿತೃಕೃತಾಂ ಪರಾಂ । 
ಆಜ್ಞಾರೂಪಾಂ ಹಿ ಪುತ್ರಾಣಾಂ ತಾಂ ಶೃಣುಷ್ಟ ಮಮಾನಘ ॥೫೯॥ 


೫೩. ಓ ನಿರ್ದುಷ್ಟನಾದ ದೈತ್ಯನೆ! ನಾವು ನಿನ್ನ ಸತ್ಯವಾಕ್ಯವೆಂಬ ಪಾಶ 
ದಿಂದ ಬದ್ಧರಾಗಿ ನಿನ್ನ ಶರೀರದಲ್ಲಿ ಸ್ಥಿರವಾಗಿ ನೆಲಸಿರುವೆವು. 

೫೪. ವಿಷ್ಣುವು ಹೇಳುತ್ತಾನೆ: ಚತುರ್ದಶೀ ಅಮಾವಾಸ್ಯೆಯ ದಿನಗಳಲ್ಲಿ 
ಲೋಹಯಸ್ಟಿಯಲ್ಲಿ ಪಿಂಡದಾನ ಮಾಡಿದರೆ ಅದರ ಫಲವು ಗಯಾಪ್ರಯಾಗಗಳ 
ಫಲಕ್ಕಿಂತಲೂ ಮಿಗಿಲಾಗುವುದು. 

೫೫, ಬಲಿಯ ಮಗನಾದ ನಿನ್ನ ಸತ್ಯದಿಂದ ನಮಗೆ ಅತ್ಯಂತ ಸಂತೋಷ 
ವಾಗಿದೆ. ನೀನು ಸಂದೇಹಸಡಬೇಡ. ನಾವು ನಿನ್ನ ಡೇಹದಲ್ಲಿರುವೆವು. 

೫೬. ಬ್ರಹ್ಮಲೋಕದಿಂದ ಹೊರಟ ಪುಣ್ಯಜಲವುಳ್ಳ ಸರಸ್ವತೀ ನದಿಯು 
ನನ್ನೊಡನೆ ನಿನ್ನ ದೇಹವನ್ನು ಸೇರಿ ನೆನೆಯಿಸುವುದು. 

೫೭. ಬ್ರಹ್ಮ ವಿಷ್ಣು ಮಹೇಶ್ವರರು ವಾಸವಾಗಿರುವ ಮೂರು ತೀರ್ಥಗಳೂ 
ಈ ಭೂಮಿಯಲ್ಲಿ ನೆಲಸಿವೆ. 

೫೮. ಅಸುರೇಂದ್ರ! ಈ ತೀರ್ಥಗಳು ಪಿತೃಗಳ ತೃಪ್ತಿಗಾಗಿ ಸ್ವರ್ಗ, 
ಪಾತಾಳ, ಯಮಲೋಕಗಳಲ್ಲಿ ನಿಖ್ಯಾತವಾಗುವುವು. 

೫೯. ನಿರ್ದೋಷಿಯಾದ ಎಲೈ ರೈತ್ಯನೆ! ಪಿತೃಗಳು ತಮ್ಮ ಮಕ್ಕಳಿಗೆ 
ಕಳುಹಿಸಿದ ಈ ಸಂದೇಶವನ್ನು ಹೇಳುವೆನು ಕೇಳು. 


ಏಳೋನತ್ರಿಂತೋಳಧ್ಮಾಯಃ ೨೮೩ 


ಪಿತರ ಊಚುಃ: 
ಶಂಕರಸ್ಯಾಂಗ್ರತಃ ಸ್ಥಾನಂ ರುದ್ರಲೋಕಪ್ರದಂ ನೃಣಾಂ । 
ಪಾಪದೇಹನಿಶುದ್ಧ್ಯರ್ಥಂ ಸಾಪೇನೋಪಹತಾತ್ಮನಾಂ ॥ ೬೦॥ 
ತಸ್ಮಿಂಸ್ತಿಲೋದಕೇನಾಸಿ ಸದ್ಧತಿಂ ಯಾಂತಿ ತರ್ಪಿತಾಃ । 
ಸಿತರೋ ನರಕಾದ್ವಾಪಿ ಸುಪುತ್ರೇಣ ಸುಮೇಧಸಾ ॥೬೧॥ 
ಗೋಪ್ರದಾನಂ ಪ್ರಶಂಸಂತಿ ತತ್ತತ್ರ ಪಿತೃಮುಕ್ತಯೇ । 
ಸಿತ್ರಾದಿಕಾನ್ಸಮುದ್ದಿಶ್ಯ ದೃಷ್ಟ್ವಾ ರುದ್ರಂ ಚ ಕೇಶವಂ ॥ ೬೨ ॥ 
ತಿಲಸಿಣ್ಯಾಕಸಿಂಡೇನ ತೃಪ್ತಿಂ ಯಾಸ್ಯಾಮಹೇ ಪರಾಂ । 
ಚತುರ್ದಶ್ಯಾಮಮಾವಾಸ್ಯಾಂ ತಥಾ ಚ ಪಿತೃತರ್ಪಣಂ ॥ ೬೩ ॥ 
ಅಜ್ಞಾತಗೋತ್ರಜನ್ಮಾನಸ್ತೇಭ್ಯಃ ಹಿಂಡಾಂಸ್ತು ನಿರ್ವಪೇತ್‌ । 
ತೇಂಪಿ ಯಾಂತಿ ದಿವಂ ಸರ್ವೇ ಹಿಂಡೇ ದತ್ತ ಇತಿ ಶ್ರುತಿಃ ॥ ೬೪ ॥ 


ಸರ್ವಕಾರ್ಯಾಣಿ ಸಂತ್ಯಜ್ಯ ಮಾನನೈಃ ಪುಣ್ಯಮಿಾಪ್ಪುಭಿಃ । 
ಪ್ರಾಪ್ತೇ ಭಾದ್ರಸದೇ ಮಾಸೇ ಗಂತವ್ಯಾ ಲೋಹಯಸಷ್ಟಿಕಾ 


ಅಜ್ಜಾ ತಗೋತ್ರನಾಮ್ನಾ ತು ಸಿಂಡಮಂತ್ರಮಿಮಂ ಶೃಣು ॥ ೬೫ ॥ 
ಸಿತೃನಂಶೇ ಮೃತಾ ಯೇ ಚ ಮಾತೃನಂಶೇ ತಥೈವ ಚ । 
ಅತೀತಗೋತ್ರಜಾಸ್ತೇಭ್ಯಃ ಸಿಂಡೋಂಯಮುಪತಿಷ್ಮತು ॥ ೬೬॥ 








೬೦. ಪಿತೃಗಳು ಹೇಳುತ್ತಾರೆ: ಪಾಪಿಗಳ ಪಾಸದೇಹದ ಶುದ್ಧಿಗಾಗಿ 
ಶಂಕರನ ಮುಂದಿರುವ ಈ ಕ್ಲೇತ್ರವು ರುದ್ರಲೋಕನನ್ನೀಯುವುದು. 

೬೧. ಸುಪುತ್ರನು ಆ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಮಾಡಿದ ತಿಲತರ್ಪಣ 
ದಿಂದ ಪಿತೃಗಳು ನರಕವನ್ನು ತ್ಯಜಿಸಿ ಸದ್ಗತಿಯನ್ನೈೈದುವರು. 

೬೨. ಅವರು ಪಿತ್ರಾದಿಗಳನ್ನುದ್ದೇಶಿಸಿ ರುದ್ರ ಮತ್ತು ವಿಷ್ಣುವನ್ನು ದರ್ಶನ: 
ಗೈಯುತ್ತ ಪಿತೃಮುಕ್ತಿಗಾಗಿ ಮಾಡಿದ ಗೋದಾನವನ್ನು ಹೋಗಳುತ್ತಾರೆ. 

೬೩. ಚತುರ್ದಶೀ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಎಳ್ಳುಹಿಂಡಿಯ 
ನಿಂಡದಿಂದಲೂ, ತರ್ಪಣದಿಂದಲೂ ಅತ್ಯಂತ ತೃಪ್ತಿಗೊಳ್ಳುವೆವು. 

೬೪. ಗೋತ್ರ ಮತ್ತು ಹುಟ್ಟು ತಿಳಿಯದವರಿಗೂ ಹಿಂಡಪ್ರದಾನ ಮಾಡ 
ಬೇಕು. ಅವರು ಅದರಿಂದ ಸ್ವರ್ಗವಾಸಿಗಳಾಗುವರು. 

೬೫-೬೬, ಪುಣ್ಯವನ್ನು ಅಪೇಕ್ಸಿಸುವ ಮಾನವರು ಭಾದ್ರಪದ ಮಾಸದಲ್ಲಿ 
ಸಕಲ ಕಾರ್ಯಗಳನ್ನೂ ಬಿಟ್ಟು ಲೋಹಯಸ್ಟಿಗೆ ಹೋಗಬೇಕು. ಗೋತ್ರ 
ಮತ್ತು ಹೆಸರು ತಿಳಿಯದಿರುವವರಿಗೆ ""ತಂದೆ ಮತ್ತು ತಾಯಿಯ ವಂಶದಲ್ಲಿ 
ಮೃತರಾದ ಆಜ್ಞಾತ ಗೋತ್ರರಿಗೆ ಈ ಪಿಂಡವು ಸೇರಲಿ” ಎಂಬ ಮಂತ್ರದಿಂದ 
ಪಿಂಡವನ್ನು ಕೊಡಬೇಕು. 





೨೪ ಶ್ರೀ-ಸ್ಕಾಂದಮ ಹಾಪುರಾಣಂ 


ವಿಷ್ಲುರುವಾಚ:- 
ಅನೇನೈನ ತು ನುಂತ್ರೇಣ ಮುಮಾಗ್ರೇಸುರಸತ್ತಮ । 
ಕ್ಸೀಣೇಚಂದ್ರೇ ಚತುರ್ದಶ್ಯಾಂ ನಭಸ್ಯೇ ಪಿಂಡಮಾಹರೇತ್‌ ॥೬೭॥ 
ಸಿತ್ಛೂಣಾಮಕ್ಸ್ಟಯಾ ತೃಪ್ತಿರ್ಭನಿಷ್ಯತಿ ನ ಸಂಶಯಃ । 
ತಿಲನಿಣ್ಯಾಕಸಿಂಡೇನ ಪಿತರೋ ಮನೋಕ್ಸಮಾಪ್ಟ್ನಯುಃ ॥ ೬೮॥ 
ಕ್ಸಣತ್ರಯವಿನಿರ್ಮುಕ್ತಾ ಮಾನವಾ ಜಗತೀತಲೇ 1 
ಭವಿಷ್ಯಂತಿ ನ ಸಂದೇಹೋ ಲೋಹಯಷ್ಟ್ಯಾಂ ತಿಲತರ್ಪಣೇ ॥೬೯॥ 
ಸ್ನಾತ್ಚಾ ಯಃ ಕುರುತೇ ಚಾತ್ರ ಪಿತೃಪಿಂಡೋದಕಕ್ರಿಯಾಃ । 
ಪಿತರಸ್ತಸ್ಯ ತೃಸ್ಯಂತಿ ಯಾನದ್ಬೃ್ರ ಹ್ಮದಿನಾನಿಶಂ ॥೭೦॥ 
ಅಮಾವಾಸ್ಯಾ ದಿನಂ ಪ್ರಾಪ್ಯ ಮಾಸಿ ಭಾದ್ರಸದೇ ನರಃ । 
ಬ್ರಹ್ಮಣೋ ಯಷ್ಟಿಕಾಯಾಂ ತು ಯಃ ಕುರ್ಯಾತಿತೃತರ್ಪಣಂ ॥ ೭೧ ॥ 
ಪಿತರಸ್ವಸ್ಯ ತೃಪ್ತಾಃ ಸ್ಕುರ್ಯಾನದಾಭೂತಸಂಪ್ಣ್ಲವಂ | 


ತೇಷಾಂ ಪ್ರಸನ್ನೋ ಭಗವಾನಾದಿದೇವೋ ಮಹೇಶ್ವರಃ ॥ ೭೨ ॥ 
ಅಸ್ಯ ತೀರ್ಥಸ್ಯ ಯಾತ್ರಾಯಾಂ ಮತಿರ್ಯೇಷಾಂ ಭವಿಷ್ಯತಿ । 
ಗೋಕ್ಸೀರೇಣ ತಿಲೈಃ ಶ್ವೇತೈಃ ಸ್ನಾತಾ ಸಾರಸ್ವತೇ ಜಲೇ 1 ೭೩ ॥ 





೬೭. ವಿಷ್ಣುವು ಹೇಳುತ್ತಾನೆ:--ಅಸುರೇಂದ್ರ! ಭಾದ್ರಪದ ಬಹುಳ 
ಚತುರ್ದಶಿಯ ದಿನ ನನ್ನಮುಂದೆ ಈ ಮಂತ್ರದಿಂದ ಪಿಂಡಪ್ರದಾನ ಮಾಡಬೇಕು. 

೬೮. ಎಳ್ಳುಹಿಂಡಿಯ ಪಿಂಡದಿಂದ ಪಿತೃಗಳು ಅಕ್ಷಯವಾದ ತೃಪ್ತಿಯನ್ನು 
ಹೊಂದಿ ಮೋಕ್ಬವನ್ನು ಪಡೆಯುವರು. 

೬೯. ಲೋಹಯಷ್ಟಿಯಲ್ಲಿ ತಿಲತರ್ಪಣಮಾಡುವುದರಿಂದ ಮಾನವರು 
ಮೂರು ಕ್ಪಣದಲ್ಲಿಯೆ ಮುಕ್ತರಾಗುವರು. 

೭೦. ಇಲ್ಲಿ ಮಿಂದು ಪಿತೃಗಳಿಗೆ ಪಿಂಡಪ್ರದಾನ ಮತ್ತು ತರ್ಪಣಗಳನ್ನು 
ಮಾಡಿದವನ ಪಿತೃಗಳು ಬ್ರಹ್ಮ ಮತ್ತು ಹಗಲು ರಾತ್ರಿಗಳಿರುವವರೆಗೆ ತೃಪ್ತಿ 
ಗೊಳ್ಳುವರು. 

೭೧-೭೬. ಭಾದ್ರಪದಮಾಸದ ಅಮಾವಾಸ್ಯೆಯ ದಿನ ಲೋಹಯಸ್ಟಿಯಲ್ಲಿ 
ವಿತೃತರ್ನಣಮಾಡಿದವರ ಪಿತೃಗಳು ಪ್ರಳಯಕಾಲದವರೆಗೆ ತೃಪ್ತರಾಗಿರುವರು. 
ಈ ತೀರ್ಥಕ್ಕೆ ಹೋಗಬೇಕೆಂದು ಆಲೋಚಿಸಿದವರಿಗೆ ಮಹೇಶ್ವರನು ಪ್ರಸನ್ನ 
ನಾಗುವನು. ಈ ಸರಸ್ವತೀನದಿಯ ಜಲದಲ್ಲಿ ಮಿಂದು ಆಕಳ ಹಾಲಿನಿಂದಲೂ, 
ಬಿಳಿಎಳ್ಳಿನಿಂದಲೂ ತರ್ಪಣಮಾಡಿದರೆ ಪಿತೃಗಳಿಗೆ ಅಕ್ಟುಯವಾದ ತೃಪ್ತಿ 
ಯಾಗುವುದು. ಪಿತೃಗಳ ಸಂತುಸ್ಟಿಯನ್ನು ಬಯಸುವವನು ಇಲ್ಲಿ ಅಮಾವಾಸ್ಯೆ 
ದಿನ ಅರಳಹಿಟ್ಟು ಮತ್ತು ಹಾಲಿನಿಂದ ಶ್ರಾದ್ಮಮಾಡಬೇಕು. ಪಿತೃಗಳಿಗೆ 


ಏಕೋನತ್ರಿಂಶೋ5ಧ್ಯಾಯಃ ೨೮೫ 


ತರ್ಪಯೇದಕ್ಸಯಾ ತೃಪ್ತಿಃ ಪಿತ್ಕೂ ಹಾಂ ತಸ್ಯ ಜಾಯತೇ 1 


ಶ್ರಾದ್ಧಂ ಚೈ ನ” ಪ್ಪ ಕುರ್ವೀತ ಸಕು ಭಃ ಪಯಸಾ ಸಹ ॥ ೭೪॥ 
ಅಪಸವಾಸ್ಕಾ ದಿನಂ ಪ್ರಾಪ್ಯ ಪಿತ್ರೂಣಾಂ ನೋದಮಿಚ್ಛು ಕಃ । 
ರುದ ತೀರ್ಥೇ ತತೋ ಹತಃ ದಷ್ಯಾ ದ್ವಸ್ಟ್ರಾ ಚಿ ತೀರ್ಥಳೇ 1೭೫ 


ವಿಷ್ಣು ತೀರ್ಥೇ ಹಿರಣ್ಯಂ ಚ ಸಿತ್ರೂ ಹ “ನಸೇಕೃಮಿಚ್ಛುಕಃ | 

ನಿನಾಕ ಕ್ಸ ತೈರ್ನಿನಾ ದರ್ಭೈರ್ನಿನಾ ಚಾಸನಮೇನ ಚ । 

ವಾರಿಮಾತ್ರಾಲ್ಲೋಹಯಷ್ಟ್ಯಾಂ ಗಯಾಶಾ ತ್ರದೃಫಲಂ ಲಭೇತ್‌ ॥ ೭೩೬॥ 
ಸೂತ ಉವಾಚ: 

ಏತದ್ವಃ ಕಥಿತಂ ವಿಪ್ರಾ ಲೋಹಾಸುರನಿಚೇಷ್ಟಿತಂ | 

ಯಚ್ಛು ೨ತ್ಕಾ ಬ್ರಹ್ಮ ಹಾ ಗೋಫ್ನೋ ಮುಚ್ಯತೇ ಸರ್ವಪಾತಕ್ಕೆಃ॥ ೭೭ ॥ 

ಏಕವಿ$ತತಿನಾರಾ ತು ಗೆಯಾಯಾಂ ನಿಂಡಪುತನೇ | 

ತತ್ಸಲಂ ಸಮವಾಪ್ನೋತಿ ಸಕೃದಸ್ಮಿಂಛ್ರುತೇ ಸತಿ ॥೭೮॥ 

ಚತುಷ್ಕೊ "ಟಿದ್ದಿಲಕ್ಷಂ ಚ ಸಹಸ್ರಂ ಶತಮೇವ ಚ 

ಧೇನವಸೆ” €ನ ದತ್ತಾ ಃಸ್ಯು ರ್ಮಾಹಾತ ಶಂ ಶೃ ಜುಯಾತ್ತು ಯಃ ॥ ೭೯॥ 
ಇತಿ ಶ್ರೀ ಸ್ವಾಂಡೇ EES ಶಿಟಿಕಾಕಸಾ 3° ಇಂಹಿತಾಯಾಂ 


ತೃ ತೇ! ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯ ಮಾಹಾತ್ಮ್ಯೇ 
«"ಲೋಹಾಂಸುರಮಾಹಾತ್ಮ ಸಂಪೂರ್ತಿವರ್ಣನಂ'? ನಾಮ್ಕೆ ಕೋನತಿ ್ರಿಂತೋಕಧ್ಯಾಯಃ 





ಮೋಕ್ಸವಾಗಬೇಕೆಂದನೇಕ್ಷಿಸುವವನು ರುದ್ರತೀರ್ಥದಲ್ಲಿ ಗೋವನ್ನೂ, ಯಮ 
ತೀರ್ಥದಲ್ಲಿ ಬಟ್ಟೆ ಗಳನ್ನೂ, ವಿಷ್ಣುತೀರ್ಥದಲ್ಲಿ ಸುವರ್ಣವನ್ನೂ ದಾನಮಾಡ 
ಬೇಕು.  ಅಕ್ಸ KY ದರ್ಜೆ, ಆಸ ಸನಗಳಿಲ್ಲದೆ ಲೋಹೆಯಸ್ಟಿ ಯಲ್ಲಿ ನೀರಿನಿಂದ 
ಮಾತ್ರ ತರ್ನೇಣಮಾಡಿದರೂ ಗಯೆಯಲ್ಲಿ ಶ್ರಾ ದ ನಾಡಿದ 'ಫಲನು 
ಲಭಿಸುವುದು. 

೭೭. ಸೂತನು ಹೇಳುತ್ತಾನೆ: ಎಲ್ಪೆ ದ್ವಿಜರೆ! ಹೀಗೆ ಈ ಲೋಹಾಸುರನ 
ಚರಿತ್ರೆಯನ್ನು ನಿಮಗೆ ಹೇಳಿರುವೆನು. ಇದನ್ನು ಕೇಳಿದರೆ ಬ್ರಹ್ಮಹತ್ಯೆ ಮತ್ತು 
ಗೋಹತ್ಯೆ ಡಡಿದನನೂ ಸಕಲ ಪಾಪವಿಮುಕ್ತನಾಗುವನು. 

ಮಾನವನು ಇದನ್ನು ಒಂದು ಸಾರಿ ಕೇಳಿದ ಮಾತ್ರದಿಂದಲೆ ಗಯೆ' 
ಯಲ್ಲಿ ಇಪ್ಪ ಧ್ಛತ್ತೊ ದು ಸಾರಿ ಹಿಂಡಪ್ರದಾನ ಮಾಡಿದ ಫಲವನ್ನು “ಸಡೆಯುವನು. 

೭೯, ಟೆ ಮಾಹಾತ್ಮ ಕಿನನ್ನು ರವನು ನಾಲ್ಕುಕೋಟ ಎರಡುಲಕ್ಟೃದ 
ಸಾವಿರದ ನೂರು ಥೇನುಗಳೆನ್ನು ದಾನಮಾಡಿದಂತಾಗುವನು. 

ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾ 'ದನುಹಾಪುರಾಣದ ಮೂರನೆಯ ಬ್ರಹ್ಮ. ಖಂಡದ ಪೂರ್ವಭಾಗದ ಧರ್ಮಾರಣ್ಯ 

ಮಾಹಾತ್ಮ ದಲಿ « ಛೋಹಾಸುರಮಾಹಾತ್ಮ ೪ ಸಂಪೂರ್ತಿವರ್ಣನ””ವೆಂಬ 

"ಪ್ಪ ತ್ರೊಂಬತ್ತನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ 
ಅಥ ತ್ರಿಂಶೋಧ್ಯಾಯಃ 
ರಾಮಚರಿತ್ರವರ್ಣನಂ 
ವ್ಯಾಸ ಉವಾಚ: 
ಪುರಾ ತ್ರೇತಾಯುಗೇ ಪ್ರಾಪ್ತೇ ನೈಷ್ಣನಾಂಶೋ ರಘೂದ್ವಹಃ । 
ಸೂರ್ಯವಂಶೇ ಸಮುತ್ಸನ್ನೋ ರಾಮೋ ರಾಜೀನಲೋಚನಃ ॥೧॥ 
ಸರಾಮೋ ಲಕ್ಷ್ಮಣಶ್ಚೈನ ಕಾಕಪಕ್ಪಧರಾವುಭೌ । 





ತಾತಸ್ಯ ವಚನಾತ್ಕೌ ತು ವಿಶ್ವಾಮಿತ್ರಮನುವ್ರತೌ ॥೨॥ 
ಯಜ್ಞಸಂರಕ್ಸಣಾರ್ಥಾಯ ರಾಜ್ಞಾ ದತ್ತೌ ಕುಮಾರಕೌ । '` 
ಧನುಃ ಶರಧರೌ ನೀರೌ ಪಿತುರ್ವಚನಸಪಾಲಕೌ ॥೩॥ 
ಪಥಿ ಪ್ರವ್ರಜತೋ ಯಾನತ್ತಾಡಕಾ ನಾಮರಾಕ್ಚಸೀ। 
ತಾನದಾಗನ್ಯ ಪುರತಸ್ತಸ್ಥೌ ವೈ ನಿಫ್ಲುಕಾರಣಾತ್‌ ॥೪॥ 
ಯಷೇರನುಜ್ಞಯಾ ರಾಮಸ್ತಾಡಕಾಂ ಸಮಘಾತಯತ್‌ । 
ಪ್ರಾದಿಶಚ್ಚ ಧನುರ್ಮೇದನಿದ್ಯಾಂ ರಾಮಾಯ ಗಾಧಿಜಃ ॥೫॥ 
ತಸ್ಯ ಷಾದತಲಸ್ಸರ್ಶಾಚೈಲಾ ವಾಸನಯೋಗತಃ । 
ಅಹಲ್ಯಾ ಗೌತನುನಧೂಃ ಪುನರ್ಜಾತಾ ಸ್ವರೂಪಿಣೀ ॥೬॥ 
ಕನ್ನಡದ ಅನುವಾದ 
ರಾಮಚರಿತ್ರವರ್ಣನ 


೧. ವ್ಯಾಸನು ಹೇಳುತ್ತಾನೆ :--ಹಿಂದೆ ತ್ರೇತಾಯುಗದಲ್ಲಿ ವಿಷ್ಣುವಿನ 
ಅಂಶಾವತಾರನಾದ ರಾಮಚಂದ್ರನು ಸೂರ್ಯವಂಶದಲ್ಲಿ ಅವತರಿಸಿದನು. 

೨-೩. ಕಾಕಪಕ್ಸಧಾರಿಗಳಾದ ರಾಮಲಕ್ಷ್ಮಣರು ತಂದೆಯ ಅಪ್ಪಣೆ 
ಯಂತೆ ಬಿಲ್ಲುಬಾಣಗಳನ್ನು ಧರಿಸಿ ನಿಶ್ವಾಮಿತ್ರನ ಯಜ್ಞ ಸಂರಕ್ಷಣೆಗಾಗಿ 
ಅವನನ್ನು ಹಿಂಬಾಲಿಸಿದರು. 

೪-೫. ದಾರಿಯಲ್ಲಿ ಹೋಗುತ್ತಿರುವಾಗ ತಾಟಕೆಯೆಂಬ ರಾಕ್ಸಸಿಯು 
ಮುಂದೆಬಂದು ನಿಂತು ಅಡ್ಡಿ ಮಾಡಿದಳು. ಆಗ ರಾಮನು ವಿಶ್ವಾಮಿತ್ರನ 
ಆಜ್ಞೆಯಂತೆ ಆ ತಾಟಿಕೆಯನ್ನು ಕೊಂದನು. ಗಾಧಿಪುತ್ರನಾದ ನಿಶ್ವಾಮಿತ್ರನು 
ರಾಮನಿಗೆ ಧನುರ್ವಿದ್ಯೆಯನ್ನು ಕಲಿಸಿದನು. 

೬. ದಾರಿಯಲ್ಲಿ ಇಂದ್ರನ ಸಂಗದಿಂದ ಶಿಲೆಯಾಗಿ ಬಿದ್ದಿದ್ದ ಗೌತಮನ, 
ಪತ್ನಿಯಾದ ಅಹಲೈಯು ಆ ರಾಮನ ಪಾದಧೂಳಿನಿಂದ ತನ್ನ ಮೊದಲಿನ ರೂಪ 
ವನ್ನು ಪಡೆದಳು. 


ತ್ರಿಂತೋಶಭ್ಯಾಯಃ। ೨೪೭ 


ನಿಶ್ವಾಮಿತ್ರಸ್ಯ ಯಜ್ಞೇ ತು ಸಂಪ್ರವೃತ್ತೇ ರಘೂತ್ತಮಃ | 


'ಮಾರೀಚಂ ಚ ಸುಜಾಹುಂ ಚ ಜಘಾನ ಪರನೇಷುಭಿಃ 1೭॥ 
ಈಶ್ವರಸ್ಯ ಧನುರ್ಭಗ್ನಂ ಜನಕಸ್ಯ ಗೃಹೇಸ್ಥಿತಂ । 

ರಾಮಃ ಪಂಚದಶೇ ವರ್ಷೇ ಸಡ್ವರ್ಸಾಂ ಚೈನ ಮೈಥಿಲೀಂ ॥೮॥ 
ಉಪಯೇಮೇ ತದಾ ರಾಜನ್ರಮ್ಯಾಂ ಸೀತಾನುಯೋನಿಜಾಂ | 
ಕೃತಕೃತ್ಯಸ್ತದಾ ಜಾತಃ ಸೀತಾಂ ಸಂಪ್ರಾಪ್ಯ ರಾಘವಃ ॥೯॥ 
ಅಯೋಧ್ಯಾಮಗಮನ್ಮಾರ್ಗೇ ಜಾಮುದಗ್ಗ್ಯಮನೇಕ್ಸ್ಯ್ಯ ಚೆ! 
ಸಂಗ್ರಾನೋಃಭೂತ್ತದಾ ರಾಜನ್ನೇವಾನಾನುಪಿ ದುಃಸಹಃ ॥ ೧೦॥ 
ತತೋ ರಾಮಂ ಪರಾಜಿತ್ಯ ಸೀತಯಾ ಗೃಹಮಾಗತಃ । 

ತತೋ ದ್ವಾದಶನರ್ಷಾಣಿ ರೇಮೇ ರಾಮಸ್ತಯಾಸಹ ॥ ೧೧॥ 
ಸಪ್ತನಿಂಶತಿನೇ ವರ್ಷೇ ಯೌನರಾಜ್ಯಪ್ರದಾಯಕಂ | 

ರಾಜಾನಮಥ ಕೈಕೇಯಾ ನರದ್ದಯಮುಯಾಚತ 10೨ 
ತಯೋರೇಕೇನ ರಾಮಸ್ತು ಸಸೀತಃ ಸಹಲಕ್ಸ್ಕ್ಮಣಃ । 

ಜಟಾಧರಃ ಪ್ರವ್ರಜತಾಂ ವರ್ಷಾಣೀಹ ಚತುರ್ದಶ ॥ ೧೩॥ 
'ಭರತಸ್ತು ದ್ವಿತೀಯೇನ ಯೌನರಾಜ್ಯಾಧಿಪೋಸ್ತುಮೇ 1 


ಮಂಥರಾವಚನಾನ್ಮೂಢಾ ನರಮೇತಮಯಾಚತ ॥ ೧೪ ॥ 


೭. ವಿಶ್ವಾಮಿತ್ರರ ಯಜ್ಞದಲ್ಲಿ ರಾಮನು ಉತ್ತಮವಾದ ಬಾಣಗಳಿಂದ 
ಮಾರೀಚ ಸುಬಾಹುಗಳನ್ನು ಹೊಡೆದು ಕೊಂದನು. 

೮೯, ತರುವಾಯ ಶ್ರೀರಾಮನು ಜನಕರಾಜನ ಮನೆಯಲ್ಲಿರುವ ಹರ 
.ಧನುವನ್ನು ಮುರಿದು ತನ್ನ ಹದಿನೈದನೆಯ ವಯಸ್ಸಿನಲ್ಲಿ ಆರುವರ್ಷದ ವಯಸ್ಸಿನ 
ಅಯೋನಿಜಳೂ, ಸುಂದರಿಯೂ ಆದ ಸೀತೆಯನ್ನು ಮದುವೆಯಾಗಿ ಧನ್ಯನಾದನು. 

೧೦-೧೧. ಅಯೋಧ್ಯೆಗೆ ಹೋಗುತ್ತಿರುವ ಶ್ರೀರಾಮಚಂದ್ರನಿಗೆ ಜಮದಗ್ನಿ 
ತನಯನಾದ ಪರಶುರಾಮನೊಡನೆ ದೇವತೆಗಳಿಗೂ ಸಹಿಸಲಾಗದ ಯುದ್ಧವು 
ನಡೆಯಿತು. ಆ ಸಮರದಲ್ಲಿ ರಾಮನು ಪರಶುರಾಮನನ್ನು ಸೋಲಿಸಿ ಸೀತೆಯೊಡನೆ 
ಅರಮನೆಯನ್ನು ಸೇರಿ ಹನ್ನೆರಡುವರ್ಷಕಾಲ ಅವಳೊಡನೆ ಸುಖದಿಂದಿದ್ದನು. 

೧೨-೧೪. ರಾಮನಿಗೆ ಇಪ್ಪ ತ್ತೇಳನೆಯ ವಯಸ್ಸಿನಲ್ಲಿ ತಂದೆಯಾದ 
ದಶರಥನು ಯೌವರಾಜ್ಯಾಭಿಷೇಕ ಮಾಡಬಯಸಲು ರಾಜನ ಕಿರಿಯ ಹೆಂಡತಿ 
ಯಾದ ಕೈಕೇಯಿಯು ಮಂಥರೆಯ ಮಾತಿನಿಂದ ಪ್ರೇರಿತಳಾಗಿ ಒಂದು ವರದಿಂದ 
ರಾಮನು ಸೀತಾಲಕ್ಷ್ಮ್ಮಣರೊಡನೆ ಜಟಾಧಾರಿಯಾಗಿ ಹದಿನಾಲ್ಕು ವರ್ಷ 
ವನವಾಸಿಯಾಗಿಲೆಂದೂ, ಮತ್ತೊಂದು ವರದಿಂದ ತನ್ನ ಸುತನಾದ ಭರತನ" 
(ಯುವರಾಜನಾಗಿರಲೆಂದೂ ಎರಡು ವರಗಳನ್ನು ಕೇಳಿಕೊಂಡಳು. 


೨೮೮ ಶ್ರೀ ಸ್ಕಾಂದಮಹಾಪಾರಾಶಾರ 


'ಜಾನಕೀಲಕ್ಷ್ಮಣಸಖಂ ರಾಮಂ ಪ್ರವ್ರಾಜಯನ್ನೃ ಪಃ I 
ತ್ರಿರಾತ್ರಮುದಕಾಹಾರಶ್ಚತುರ್ಥೇಂಸ್ನಿ ಫಲಾಶನಃ ॥ ೧೫ ॥ 
ಪಂಚಮೇ ಚಿತ್ರಕೂಟೇ ತು ರಾಮೋ ವಾಸಮಕಲ್ಪಯತ್‌ । 

ಗತೇ ದಶರಥೇ ಸ್ವರ್ಗಂ ರಾಮರಾಮ ಇತಿ ಬ್ರುವನ್‌ । 


ಬ್ರಹ್ಮಶಾಸಂ ತು ಸಫಲಂ ಕೃತ್ವಾ ಸ್ವರ್ಗಂ ಜಗಾಮ ಸಃ ॥ ೧೬ ॥ 
ತತೋ ಭರತಶತ್ರುಫಗ್ನ್‌ ಚಿತ್ರಕೂಟೇ ಸಮಾಗತೌ ॥ ೧೭॥ 
ಸ್ವರ್ಗತಂ ಪಿತರಂ ರಾಜನ್ರಾಮಾಯ ಪಿನಿವೇದ್ಯ ಚ । 

ಸಾಂತ್ವನಂ ಭರತಸ್ಯಾಂಸ್ಯ ಕೃತ್ವಾ ನಿವರ್ತನಂ ಪ್ರತಿ ॥ ೧೮॥ 
ತತೋ ಭರತಶತ್ರುಘ್ನಿ ನಂದಿಗ್ರಾಮಂ ಸಮಾಗತೌ । 
ಪಾದುಕಾಪೂಜನರತೌ ತತ್ರ ರಾಜ್ಯಧರಾವುಭೌ ॥೧೯॥ 
ಅತ್ರಿಂ ದೃಷ್ಟ್ವಾ ಮಹಾತ್ಮಾನಂ ದಂಡಕಾಂರಣ್ಯಮಾಗಮತ್‌ | 
ಕಕ್ಪೋಗಣವಧಾರಂಭೇ ವಿರಾಧೇ ನಿನಿಸಾತಿತೇ ॥೨೦॥ 


ಅರ್ಧತ್ರಯೋದಶೇ ವರ್ಷೇ ಪಂಚನಟ್ಯಾಮುವಾಸ ಹ। 

ತತೋ ವಿರೂಪಯಾಮಾಸ ಶೂರ್ಪಣಖಾಂ ನಿಶಾಚರೀಂ । 

ವನೇ ವಿಚರತಸ್ತಸ್ಯ ಜಾನಕೀಸಹಿತಸ್ಯ ಚ ॥ ೨೧॥ 
ಆಗತೋ ರಾಶ್ಚಸೋ ಘೋರಃ ಸೀತಾಪಹರಣಾಯ ಸಃ । 

ತತೋ ಮಾಘಾಸಿತಾಷ್ಟಮ್ಯಾಂ ಮುಹೂರ್ತೇ ವೃಂದಸಂಜ್ಣಕೇ ॥ ೨೨ ॥ 

೧೫-೧೬. ದಶರಥನು ಸೀತಾಲಕ್ಷ್ಮಣರೊಡನೆ ರಾಮನನ್ನು ಹೊರಡಿಸಲು 
ಅವನು ಮೂರು ದಿನ ನೀರೇ ಆಹಾರವುಳ್ಳವನಾಗಿಯೂ, ನಾಲ್ಕನೆಯ ದಿನ ಹಣ್ಣಿನ 
ಆಹಾರವುಳ್ಳನನಾಗಿಯೂ ಇದ್ದು ಐದನೆಯ ದಿನ ಚಿತ್ರಕೂಟದಲ್ಲಿ ವಾಸಮಾಡಿ 
ದನು. ಆಗ ತಂದೆಯಾದ ದಶರಥನು "ರಾಮ! ರಾಮಾ! ಎಂದು ಪ್ರಲಸಿಸುತ್ತ 
ಬ್ರಾಹ್ಮಣ ಶಾಪವನ್ನು ಸಫಲಮಾಡುವನೊ ಎಂಬಂತೆ ಸ್ವರ್ಗಕ್ಕೆ ತೆರಳಿದನು. 

೧೭-೧೯. ಬಳಿಕ ಭರತ ಶತ್ರುಘ್ನರು ಚಿತ್ರಕೂಟಕ್ಕೆ ಬಂದು ತಂದೆಯ 
ಮರಣವಾರ್ತೆಯನ್ನು ರಾಮನಿಗೆ ತಿಳಿಸಿದರು. ರಾಮನು ಭರತನನ್ನು ಸಮಾ 
ಧಾನಗೊಳಿಸಿ ತನ್ನ ಪಾದುಕೆಗಳನ್ನು ಕೊಟ್ಟು ಹಿಂದಕ್ಕೆ ಕಳುಹಿಸಿದನು. ಆ ಭರತ 
ಶತ್ರುಘ್ನರು ನಂದಿಗ್ರಾಮವನ್ನು ಸೇರಿ ಅಲ್ಲಿ ರಾಮನ ಪಾದುಕೆಗಳನ್ನು ಪೂಜಿಸುತ್ತ 
ರಾಜ್ಯಭಾರಮಾಡುತ್ತಿದ್ದರು. 

೨೦-೨೭. ರಾಮನು ಮಹಾತ್ಮರಾದ ಅತ್ರಿ ಮುನಿಗಳನ್ನು ದರ್ಶನಮಾಡಿ 
ದಂಡಕಾರಣ್ಯಕ್ಕೆ ಬಂದನು. ರಾಕ್ಬಸರ ವಢೆಯಲ್ಲಿ ಮೊದಲು ವಥೆಗೆ ವಿಷಯನಾದ 
ವಿರಾಧನನ್ನು ಸದೆಬಡಿದು ಆರುವರೆವರ್ಷಗಳಕಾಲ ಪಂಚವಟಯಲ್ಲಿ ವಾಸಿಸಿದನು. 
ಅಲ್ಲಿ ಅವನು ಶೂರ್ಹನಖಿಯೆಂಬ ರಾಕ್ಸಸಿಯನ್ನು ವಿಕಾರಗೊಳಿಸಿದನು. ಜಾನಕಿ 


ತ್ರಿಂತೋಳ9ಧ್ಯಾಯಃ ತರ 


ರಾಘವಾಭ್ಯಾಂ ವಿನಾ ಸೀತಾಂ ಜಹಾರ ದಶಕಂಥರಃ । 


ಮಾರೀಚಸ್ಯಾಶ್ರಮಂ ಗತ್ವಾ ಮೃಗರೂಪೇಣ ತೇನ ಚ ॥೨೩॥ 
ನೀತ್ವಾ ದೂರಂ ರಾಘವಂ ಚ ಲಕ್ಷ್ಮಣೇನ ಸಮನ್ವಿತಂ । 

ತತೋ ರಾಮೋ ಜಘಾನಾಶು ಮಾರೀಚಂ ಮೃಗರೂಪಿಣಂ ॥ ೨೪ ॥ 
ಪುನಃ ಪ್ರಾಪ್ಯಾಶ್ರಮಂ ರಾಮೋ ವಿನಾಸೀತಾಂ ದದರ್ಶ ಹ। 

ತತ್ತೈನ ಹ್ರಿಯಮಾಣಾ ಸಾ ಚಕ್ರಂದ ಕುರರೀ ಯಥಾ ॥ ೨೫ ॥ 


ರಾಮರಾಮೇತಿ ಮಾಂ ರಕ್ಸರಕ್ಸು ಮಾಂ ರಕ್ಷಸಾ ಹೃತಾಂ | 
ಯಥಾ ಶ್ಯೇನಃ ಕ್ಲುಧಾಯುಕ್ತಃ ಕ್ರಂದಂತೀಂ ವರ್ತಿಕಾಂ ನಯೇತ್‌॥೨೬॥ 
ತಥಾ ಕಾಮವಶಂ ಪ್ರಾಪ್ತೋ ರಾಕ್ಸಸೋ ಜನಕಾತ್ಮಜಾಂ । 


ನಯತ್ಯೇಷ ಜನಕಜಾಂ ತಚು ತ್ವಾ ಸಕ್ಸಿರಾಟ್‌ ತದಾ ॥ ೨೭ ॥ 
ಯುಯುಧೇ ರಾಕ್ಚಸೇಂದ್ರೇಣ ರಾನಣೇನ ಹತೋಇಃಪತತ್‌ ! 
ಮಾಘಾಸಿತನವಮ್ಯಾಂ ತು ವಸಂತೀಂ ರಾನಣಾಲಯೇ ॥ ೨೮ ॥ 
ಮಾರ್ಗಮಾಣೌ ತದಾ ತೌ ತು ಭ್ರಾತರೌ ರಾಮಲಕ್ಕ್ಮ್ಮಣೌ ॥ ೨೯॥ 
ಜಟಾಯುಸಂ ತು ದೃಷ್ಟ್ಟೈನ ಜ್ಞಾತ್ವಾ ರಾಕ್ಸಸಸಂಹೃತಾಂ । 
ಸೀತಾಂ ಜ್ಞಾತ್ವಾ ತತಃ ಪಕ್ಸೀ ಸಂಸ್ಕೃತಸ್ತೇನ ಭಕ್ತಿತಃ 1 ೩೦॥ 





ಯೊಡನೆ ಕಾಡಿನಲ್ಲಿ ಸಂಚರಿಸುತ್ತಿದ್ದ ಈ ರಾಮನನ್ನು ರಾವಣನು ಮೃಗರೂಪಿ 
ಯಾದ ಮಾರೀಚನ ಮೂಲಕ ಮೋಸಗೊಳಿಸಿ ರಾಮಲಕ್ಷ್ಮ್ಮಣರಿಲ್ಲದ ಸಮಯ: 
ದಲ್ಲಿ ಮಾಘ ಕೃಷ್ಣಾಷ್ಟಮಿದಿನ ವೃಂದವೆಂಬ ಮುಹೂರ್ತದಲ್ಲಿ ಸೀತೆಯನ್ನು 
ಅಪಹರಿಸಿಕೊಂಡು ಹೋದನು. ರಾಮನು ಮಾರೀಚನನ್ನು ಕೊಂದು 
ಹಿಂದಿರುಗಿ ಆಶ್ರಮಕ್ಕೆ ಬಂದು ನೋಡಲು ಅಲ್ಲಿ ಸೀತೆಯಿರಲಿಲ್ಲ. ರಾವಣನು 
ಸೀತೆಯನ್ನು ಒಯ್ಯುತ್ತಿರುವಾಗ ಅವಳು ""ರಾಮ! ರಾಮ! ರಾಕ್ಸಸಥಿಂದ 
ಅಪಹೃತಳಾದ ನನ್ನನ್ನು ರಕ್ಸಿಸು'' ಎಂದು ಕುರರಿ ಎಂಬ ಪಕ್ಸಿಯಂತೆ ಅರಚಿ 
ಕೊಂಡಳು. ಆದರೇನು? ಕಾಮಾಂಧನಾದ ರಾವಣನು ಹಸಿದ ಗಿಡಗವು 
ಕಿರಿಚಿಕೊಳ್ಳುತ್ತಿ,ರುವ ಕೆಂದೆಲೆ. ಹಕ್ಕಿಯನ್ನು ಎತ್ತಿಕೊಂಡು ಹೋಗು 
ವಂತೆ ಜಾನಕಿಯನ್ನು ಒಯ್ಯ್ಯತಿ_ದ್ದನು. _ ಸೀತೆಯ ಕೂಗು ಜಟಾಯುನಿಗೆ 
ಕೇಳಿಸಿತು. 

೨೮-೩೦. ಅವನು ರಾವಣನೊಡನೆ ಜಗಳವಾಡಿ ಅವನಿಂದ ಕೊಲ್ಲಲ್ಪಟ್ಟು 
ಕೆಳಗೆ ಬಿದ್ದನು. ಸೀತೆಯು ಮಾಘಕೃಷ್ಣನವಮಿಾದಿನ ರಾವಣನ ಮನೆಯನ್ನು 
ಸೇರಿದಳು. ರಾಮಲಕ್ಸ ಟಾರು ಸೀತೆಯನ್ನು ಹುಡುಕುತ್ತ ರಾವಣನಿಂದ'ಹತನಾದ 
ಇಜಟಾಯುವನ್ನು ಕಂಡು ಅವನಿಂದ ಸೀತೆಯ ವಾರ್ಕೆಯನ್ನರಿತು ಆ ಪಕ್ಸಿಗೆ ಭಕ್ತಿ 
ಯಿಂದ ದಹನಾದಿ ಸಂಸ್ಕಾರಮಾಡಿದರು. 

10 


೨೪೦ ಶ್ರೀ ಸ್ಯಾಂದಮಹಾಪುರಾಣಂ 


ಅಗ್ರತಃ ಪ್ರಯಯೌ ರಾಮೋ ಲಕ್ಕ ಣಸ್ನತದಾನುಗಃ । 


ಫಿ 
ಪಂಪಾಭ್ಯಾಶಮನುಸ್ರಾಪ್ಯ ಕಬರೀಸುನುಗೃಹ್ಯ ಚ ॥೩೧॥ 
ತಜ್ಜಲಂ ಸಮುಪಸ್ಸೃಶ್ಯ ಹನುಮದ್ದರ್ಶನಂ ಕೃತಂ । 
ತತೋ ರಾನೋ ಹನುಮತಾ ಸಹ ಸಖ್ಯಂ ಚಕಾರ ಹ HASH 
ತತಃ ಸುಗ್ರೀನಮಭ್ಯೇತ್ಯ ಅಹನದ್ವಾಲಿನಾನರಂ । 
ಪ್ರೇಷಿತಾ ರಾನುದೇವೇನ ಹನುಮುತ್ರಮುಖಾಃ ಸ್ರಿಯಾಂ ॥ ೩೩0 
ಅಂಗುಲೀಯಕಮಾದಾಯ ವಾಯುಸೂನುಸ್ತದಾಗತಃ । 
ಸಂಪಾತಿರ್ದಶಮೇ ಮಾಸಿ ಆಚಖ್ಯೌ ನಾನರಾಯ ತಾಂ ॥ ೩೪ ॥ 


ತತಸ್ತದ್ವಚನಾದಲ್ಬಿಂ ಪುಪ್ಲುನೇ ಶತಯೋಜನಂ | 
ಹನುಮಾಾನ್ನಿಶಿ ತಸ್ಯಾಂತು ಲಂಕಾಯಾಂ ಹಪರಿತೋಂಚಿನೋತ್‌ ॥ ೩೫ ॥ 
ತದ್ರಾತ್ರಿಶೇಷೇ ಸೀತಾಯಾ ದರ್ಶನಂ ತು ಹನೂಮತಃ । 


ದ್ವಾದಶ್ಯಾಂ ಶಿಂಶುಪಾನೃಕ್ಸೇ ಹನುಮಾನ್ಸರ್ಯವಸ್ಥಿತಃ ॥ ೩೬ ॥ 
ತಸ್ಯಾಂ ನಿಶಾಯಾಂ ಜಾನಕ್ಕಾ ನಿಶ್ಚಾಸಾಯಾಹ ಸಂಕಥಾಂ । 
ಅಕ್ಸಾ ದಿಭಿಸ್ತ್ರಯೋದಶ್ಯಾಂ ತತೋ ಯುದ್ಧಮವರ್ತತ ॥ ೩೭॥ 


೩೧-೩೨, ಮುಂದೆ ರಾಮನು ನಡೆದನು. ಲಕ್ಷ್ಮಣನು ಅವನನ್ನು ಹಿಂಬಾಲಿಸಿ 
ದನು. ರಾಮನು ಪಂಪಾಸರೋವರದ ಸಮಾಸಕ್ಕೆ ಬಂದು ಶಬರಿಯನ್ನು ಅನು 
ಗ್ರಹಿಸಿ ಆ ಪಂಪೆಯ ನೀರಿನಿಂದ ಆಚಮನಮಾಡಿ ಹನುಮಂತನನ್ನು ನೋಡಿ 
ಅವನೊಡನೆ ಸ್ನೇಹಮಾಡಿಕೊಂಡನು. 

೩೩-೩೪. ಬಳಿಕ ಸುಗ್ರೀವನನ್ನು ಹೊಂದಿ ವಾಲಿಯನ್ನು ಕೊಂದನು. ಹನು 
ಮಂತನೆ ಮೊದಲಾದ ಕನಿಗಳನ್ನು ಸೀತೆಯನ್ನು ಹುಡುಕುವುದಕ್ಕಾಗಿ ಕಳುಹಿಸಿ 
ದನು. ವಾಯುತನಯನಾದ ಆಂಜನೇಯನು ರಾಮನ ಮುಡ್ರೆಯುಂಗುರ 
ವನ್ನು ತೆಗೆದುಕೊಂಡು ಹೊರಟನು. ಹತ್ತನೆತಿಂಗಳಲ್ಲಿ ಅವನಿಗೆ ಸಂಪಾತಿಯು 
ಸೀತೆಯಿರುವ ಸ್ಥಳವನ್ನು ತಿಳಿಸಿದನು. 

೩೫. ಅವನ ಮಾತಿನಂತೆ ಆಂಜನೇಯನು ನೂರು ಗಾವುದ ದೂರವುಳ್ಳ 
ಸಮುದ್ರವನ್ನು ದಾಟ ಲಂಕೆಯನ್ನು ಸೇರಿ ಅಲ್ಲಿ ರಾತ್ರಿಯಲ್ಲಿ ಸುತ್ತಲೂ ಸೀತೆ. 
ಯನ್ನು ಹುಡುಕಿದನು. 

೩೬. ದ್ವಾದಶಿಯಾದ ಆ ರಾತ್ರಿ ಬೆಳಗಿನ ಜಾಮದಲ್ಲಿ ಹನುಮಂತನು 
ಶಿಂಶುಪಾವೃಕ್ಸದೆಡೆಯಲ್ಲಿ ಸೀತೆಯನ್ನು ಕಂಡನು. 

೩೭. ಆ ರಾತ್ರಿಯಲ್ಲಿ ಜಾನಕಿಯ ನಂಬುಗೆಗಾಗಿ ರಾಮನ ಕಥೆಯನ್ನು 
ನುಡಿದನು. ತ್ರಯೋದಶಿದಿನ ಹನುಮಂತನು ಅಕ್ಬಕುಮಾರನೆ ಮೊದಲಾದವ 
ಕೊಡನೆ ಯುದ್ಧಮಾಡಿದನು. 


ತ್ರಿಂತೋಕಧ್ಕಾಯಃ ೨೪೧ 


ಬ್ರಹ್ಮಾ ಸ್ತ್ರೇಣ ತ್ರಯೋದಶ್ಯಾಂ ಬದ್ಧಃ ಶಕ್ರಜಿತಾ ಕಹಿಃ। 


ದಾರುಣಾನಿ ಚ ರೂಕ್ಸಾಣಿ ವಾಕ್ಯಾನಿ ರಾಕಸಾಂಧಿಪಂ ॥ ೩೮॥ 
ಅಬ್ರನೀದ್ವಾಯುಸೂನುಸ್ತಂ ಬಡ್ಗೋ ಬ್ರಹ್ಮಾ ಸ್ಟ್ರಸಂಯುತಃ । 

ವಹ್ನಿನಾ ಪುಚ್ಛಯುಕ್ತೇನ ಲಂಕಾಯಾ ದಹನಂ ಕೃತಂ 1೩೯॥ 
ಪೂರ್ಣಿಮಾಯಾಂ ಮಹೇಂದ್ರಾದ್ರೌ ಪುನರಾಗಮನಂ ಕಪೇಃ । 
ಮಾರ್ಗಶೀರ್ಷಪ್ರತಿಪದಃ ಪಂಚಭಿಃ ಪಥಿವಾಸರೈಃ ॥೪೦॥ 
ಪುನರಾಗತ್ಯ ನರ್ಷೇಸ್ನಿ ಧ್ವಸ್ತಂ ಮಧುವನಂ ಕಿಲ | 

ಸಪ್ತಮ್ಯಾಂ ಪ್ರತ್ಯಭಿಜ್ಞಾನದಾನಂ ಸರ್ವನಿನೇದನಂ ॥೪೧॥ 
ಮಣಿಪ್ರದಾನಂ ಸೀತಾಯಾಃ ಸರ್ವಂ ರಾಮಾಯ ಶಂಸಯತ್‌ । 
ಅಷ್ಟಮ್ಯುತ್ತರಘಫಾಲ್ಗುನ್ಯಾಂ ಮುಹೂರ್ತೇ ನಿಜಯಾಭಿಧೇ 1೪೨॥ 


ಮಧ್ಯಂ ಪ್ರಾಸ್ತೇ ಸಹಸ್ಪಾಂಶೌ ಪ್ರಸ್ಥಾನಂ ರಾಘನಸ್ಯ ಚ। 

ರಾಮಃ ಕೃತ್ವಾ ಪ್ರತಿಜ್ಞಾಂ ಹಿ ಪ್ರಯಾತುಂ ದಕ್ಷಿಣಾಂ ದಿಶಂ ॥೪೩॥ 
ತೀರ್ತ್ವಾಂಹಂ ಸಾಗರಮುಪಿ ಹನಿಷ್ಕೇ ರಾಕ್ಸಸೇಶ್ವರಂ । 

ದಕ್ಸಿಣಾಶಾಂ ಪ್ರಯಾತಸ್ಯ ಸುಗ್ರೀವೋಥಾಂಭನತ್ಸಖಾ ॥ ೪೪ ॥ 
ವಾಸರೈಃ ಸಪ್ತಭಿಃ ಸಿಂಧೋಸ್ತೀರೇ ಸೈನ್ಯನಿನೇಶನಂ । 
ಪೌಷಶುಕ್ಲಪ್ರತಿಸದಸ್ತೃತೀಯಾಂ ಯಾವದಂಬುಧೌ । 

ಉಪಸ್ಥಾನಂ ಸಸೈನ್ಯಸ್ಯ ರಾಘನಸ್ಯ ಬಭೂನ ಹ ॥ ೪೫ ॥ 

೩೮-೩೯. ಆ ದಿನವೆ ಇಂದ್ರಜಿತ್ತಿನ ಬ್ರಹ್ಮಾಸ್ತ್ರಕ್ಕೆ ಸಿಲುಕಿ ರಾನಣನ 
ಮುಂದೆ ಹೋಗಿ ಅವನನ್ನು ಬಹುವಾಗಿ ಬಿರುಸಾಗಿ ಬೈದನು. ಆಗ ರಾವಣನು 
ಇವನ ಬಾಲಕ್ಕೆ ಬೆಂಕಿಯನ್ನು ಹೊತ್ತಿಸಲು ಆ ಬೆಂಕಿಯಿಂದ ಲಂಕೆಯನ್ನು 
ಬೂದಿಮಾಡಿದನು. 

೪೦-೪೪. ಹನುಮಂತನು ಹುಣ್ಣಿಮೆದಿನ ಮಹೇಂದ್ರ ಪರ್ವತವನ್ನು 
ಸೇರಿ ಮಾರ್ಗಶೀರ್ಷ ಬಹುಳ ಸಂಚಮಾವರೆಗೆ ಪ್ರಯಾಣಮಾಡಿ ಮಧುವನನನ್ನು 
ಹೊಕ್ಕು ಅದನ್ನು ಪುಡಿಮಾಡಿ ಸಪ್ತಮಿಾದಿನ ಸೀತೆಯ ಚೂಡಾಮಣಿಯನ್ನ್ನು 
ರಾಮನಿಗೆ ಒಪ್ಪಿಸಿ ಸಕಲ ವೃತ್ತಾಂತವನ್ನು ಹೇಳಿದನು. ಶ್ರೀರಾಮನು ಅಷ್ಟಮಿ 
ದಿನ ಉತ್ತರ ಫಾಲ್ಲುನೀನಕ್ಸೃತ್ರ ಸಹಿತವಾದ ವಿಜಯವೆಂಬ ಮುಹೂರ್ತದಲ್ಲಿ 
ಮಧ್ಯಾಹ್ನ ವೇಳೆಯಲ್ಲಿ ನಿಜಯ ಪ್ರಸ್ಥಾನವನ್ನು ಬೆಳೆಸಿದನು. ದಕ್ಸಿಣದಿಕ್ಕಿಗೆ 
ಪ್ರಯಾಣಮಾಡಿ ಸಮುದ್ರವನ್ನು ದಾಟ ರಾವಣನನ್ನು ಕೊಲ್ಲುವೆನೆಂದು ಪ್ರತಿಜ್ಞೆ 
'ಮಾಡಿದನು. ಆಗ ಅವನಿಗೆ ಸುಗ್ರೀವನು ಬೆಂಬಲವಾಗಿದ್ದನು. 

೪೫. ರಾಮನು ಹೀಗೆ ಸುಗ್ರೀನನೊಡನೆ ಏಳುದಿನ ಪ್ರಯಾಣಮಾಡಿ ಪುಷ್ಯ 
ಶುದ್ಧ ತದಿಗೆದಿನ ದಕ್ಟಿಣಸಾಗರದ ಹತ್ತಿರ ಸೇನೆಯನ್ನು ತೇಖರಿಸಿದನು. 


ಪೀತ ಶ್ರೀ ಸ್ಕಾಂದಮಹಾಪುರಾಣಂ 


ವಿಭೀಷಣಶ್ಚತುರ್ಥ್ಯಾಂ ತು ರಾಮೇಣ ಸಹ ಸಂಗತಃ । 


ಸಮುದ್ರತರಣಾರ್ಥಾಯ ಸಂಚಮ್ಯಾಂ ಮಂತ್ರ ಉದ್ಯತೇಃ ॥ ೪೬ ॥ 
ಪ್ರಾಯೋಪನೇಶನಂ ಚಕ್ರೇ ರಾಮೋ ಡಿನಚತುಷ್ಟಯಂ | 
ಸಮುದ್ರಾದ್ವರಲಾಭಶ್ಚ ಸಹೋಪಾಯಪ್ರದರ್ಶನಃ ॥ ೪೭ ॥ 


ಸೇತೋರ್ದಶಮ್ಯಾಮಾರಂಭಸ್ಟ್ರಯೋದಶ್ಯಾಂ ಸಮಾಪನಂ । 
ಚತುರ್ದಶ್ಯಾಂ ಸುನೇಲಾದ್ರೌ ರಾಮಃ ಸೇನಾಂ ನ್ಯನೇಶಯತ್‌ ॥ ೪೮॥ 
ಪೂರ್ಣಿಮಾಸ್ಯಾ ದ್ವಿತೀಯಾಯಾಂ ತ್ರಿದಿನೈಃ ಸೈನ್ಯತಾರಣಂ । 


ತೀರ್ತ್ತಾ ತೋಯನಿಧಿಂ ರಾಮಃ ಶೂರವಾನರಸೈನ್ಯವಾನ್‌ ॥೪೯॥ 
ರುರೋಧ ಚ ಪುರೀಂ ಲಂಕಾಂ ಸೀತಾರ್ಥಂ ಶುಭಲಕ್ಪಣಃ । 

ತೃತೀಯಾದಿ ದಶಮ್ಯಂತಂ ನಿನೇಶಶ್ಚ ದಿನಾಂಷ್ಟಕಃ ॥೫೦॥ 
ಶುಕಸಾರಣಯೋಸ್ತತ್ರ ಪ್ರಾಪ್ತಿರೇಕಾದಶೀದಿನೇ । 

ಪೌಷಾಸಿತೇ ಚ ದ್ವಾದಶ್ಯಾಂ ಸೈನ್ಯಸಂಖ್ಯಾನಮೇವ ಚ ॥ ೫೧॥ 
ಶಾರ್ದೂಲೇನ ಕಪೀಂದ್ರಾಣಾಂ ಸಾರಾಸಾರೋಪವರ್ಣನಂ । 
ತ್ರಯೋದಶ್ಯಾದ್ಯಮಾಂತೇ ಚ ಲಂಕಾಯಾಂ ದಿವಸ ಸ್ತ್ರಿಭಿಃ ॥ ೫೨ ॥ 
ರಾವಣಃ ಸೈನ್ಯಸಂಖ್ಯಾನಂ ರಣೋತ್ಸಾಹಂ ತದಾಂಕರೋತ್‌ | 
ಪ್ರಯಯಾನಂಗದೋ ದೌತ್ಯೇ ಮಾಘ ಶುಕ್ಲಾದ್ಯವಾಸರೇ ॥ ೫೩ ॥ 








೪೬-೪೭. ಚತುರ್ಥೀದಿನ ರಾವಣನ ತಮ್ಮನಾದ ವಿಭೀಷಣನು ಬಂದು 
ರಾಮನೊಡನೆ ಸೇರಿಕೊಂಡನು. ರಾಮನು ಸಮುದ್ರವನ್ನು ದಾಟುವುದಕ್ಕಾಗಿ 
ಪ್ರಾಯೋಪವೇಶವನ್ನು ಮಾಡಲು ಸಮುದ್ರರಾಜನು ವರನನ್ನಿತ್ತು ದಾಟುವ 
ಬಗೆಯನ್ನೂ ತಿಳಿಸಿದನು. 

೪೮. ರಾಮನು ದಶಮಾದಿನ ಸೇತುವೆಯನ್ನು ಆರಂಭಿಸಿ ತ್ರಯೋದಶಿದಿನ 
ಪೂರ್ತಿಮಾಡಿ ಸುನೇಲ ಪರ್ವತದಲ್ಲಿ ಸೇನೆಯನ್ನು ನಿಲ್ಲಿಸಿದನು. 

೪೯-೫೦. ಹುಣ್ಣಿಮೆಯಿಂದ ತದಿಗೆವರೆಗೆ ವಾನರಸೈನ್ಯದೊಡನೆ ರಾಮನು 
ಸೇತುವೆಯಮೂಲಕ ಸಮುದ್ರವನ್ನು ದಾಟ ಸೀತೆಗಾಗಿ ಲಂಕೆಯನ್ನು ಸೇರಿ 
ಅಲ್ಲಿ ದಶಮಿಯವರೆಗೆ ಸೇನೆಯನ್ನು ಸಂಗ್ರಹಿಸಿ ನಿಲ್ಲಿಸಿದನು. 

೫೧. ಏಕಾದಶೀದಿನ ಶುಕಸಾರಣರು ಅಲ್ಲಿಗೆ ಬಂದರು. ಪುಷ್ಯ ಬಹುಳ 
ದ್ವಾದಶಿ ಸೈನ್ಯದ ಎಣಿಕೆಯಾಯಿತು. 

೫೨-೫೩. ಶಾರ್ದೂಲನು ಕನಿಮುಖ್ಯರ ಬಲಾಬಲಗಳನ್ನು ವರ್ಣಿಸಿದನು. 
ತ್ರಯೋದಶಿಯಿಂದ ಆರಂಭಿಸಿ ಮೂರುದಿನ ರಾವಣನು ತನ್ನ ಸೈನ್ಯವನ್ನು ಎಣಿಸಿ 
ಯುದ್ಧಕ್ಕೆ ಸಿದ್ಧನಾದನು. ಅಂಗದನು ಮಾಘ ಶುದ್ಧ ಪಾಡ್ಯಮಿದಿನ ದೂತನಾಗಿ 
ರಾವಣನ ಬಳಿಗೆ ಹೋದನು. 


ತ್ರಿಂತೋರಧ್ಯಾಯಃ ಹ 
ಸೀತಾಯಾಶ್ಚ ತದಾ ಭರ್ತುರ್ಮಾಯಾಮೂರ್ಧಾದಿದರ್ಶನಂ | . 


ಮಾಘ ಶುಕ್ಚದ್ನಿ ಿತೀಯಾಯಾಂ ದಿನೈಃ ಸಪ್ತ ಸ್ವಭಿರಷ್ಟನಿಖಾಂ ॥ ೫೪ ॥ 
ರಕ್ಷಸಾಂ ನಾ ಚ ಯುದ ಥೆ ಮಾಸೀಚ್ಚೆ ಸಂಕುಲ I 

ಮಾಘ ಶುಕ್ಲ ನವಮ್ಯಾ ೦ತುರಾತ್ರಾ ನಿಂದ್ರ ಜಿತಾ ರಣೇ 1 ೫೫ ॥ 
ರಾಮಲಕ್ಟ ಯೋರ್ನಾಗಪಾಕಬಂಧಃ ' ಕೃತಃ ಕಿಲ । 

ಆಶ ಕಪೀಶೇಷು ಹತಾಶೇಷು ಚ ನ 1 ೫೬॥ 


ವಾಯೂಪದೇಶಾದ್ದರುಡಂ ಸಸ್ಮಾರ ರಾಘವಸ್ತದಾ । 
ನಾಗಪಾಶನಿಮೋಕಾ ನ್ಸರ್ಥಂ ದಶಮ್ಯಾ ೦ ಗರುಡೋಂಭ್ಯಗಾತ್‌ ॥೫೭॥ 
ಅನಹಾರೋ ಮಾಘ ಶುಕ್ಲಸೆ ಕಾದಶ್ಯಾಂ ದಿನದ್ವಯಂ । 


ದ್ವಾದಶ್ಯಾ ಮಾಂಜನೇಯೇನ ಧೂಮ್ರಾಕ್ಸೃಸ್ಯ ವಧಃ ಕೃತಃ ॥೫೮॥ 
ತ ತ್ರಯೋಪಶ್ಶಾ ಂತುತೇನೈವನ ನಿಹತೋಂಕಂಪನೋ ರಣೇ | 
ನಾಯಾಸೀತಾಂ ದರ್ಶಯಿತ್ವಾ ರಾಮಾಯ ದಶಕಂಧರಃ ॥ ೫೯॥ 
ತ್ರಾಸಯಾಮಾಸ ಚ ತದಾ ಸರ್ವಾನ್ಸೈನ್ಯಗತಾನಪಿ । 

ಮಾಘ ಶುಕ್ಲ ಚತುರ್ದಶ್ಯಾಂ ಯಾವತೃಷ್ಣಾದಿವಾಸರಂ ॥೬೦॥ 
ತ್ರಿದಿನೇನ ಪ್ರಹಸ್ತಸ್ಯ ನೀಲೇನ ನಿಹಿತೋ ವಧಃ । 

ಮಾಘ ಕೃಷ್ಣದ್ವಿತೀಯಾಯಾಶ್ಚ ತುರ್ಥ್ಯಂತಂ ತ್ರಿಭಿರ್ದಿನೈಃ 1೬೧॥ 
ರಾಮೇಣ ತುಮುಲೇ ಯುದ್ಧೇ ರಾನಣೋ ದ್ರಾನಿತೋ ರಣಾತ್‌ । 
ಪಂಚಮ್ಯಾ ಅಷ್ಟಮಿಾ ಯಾವದ್ರಾನಣೇನ ಪ್ರಬೋಧಿತಃ ॥೬೨॥ 


೫೪-೫೭. ಆಗಲೆ ಸೀತೆಗೆ ಸತಿಯ ಮಾಯಾತಶಲೆಯ ದರ್ಶನವಾಯಿತು. 
ಮಾಘ ಶುದ್ಧ ಬಿದಿಗೆಯಿಂದ ಅಷ್ಟಮಿವರೆಗೆ ರಾಕ್ಚಸರಿಗೂ ವಾನರರಿಗೂ ಘೋರ 
ಸಮರವು ನಡೆಯಿತು. ನವಮಾರಾತ್ರಿ ಇಂದ್ರಜಿತ್ತು ರಾಮಲಕ್ಷ ಕ್ಸ್ಮ್ತಣರನ್ನು ನಾಗ 
ಪಾಶದಿಂದ ಬಿಗಿದನು. ಅಗ ಕಪಿವೀರರು ಹತಾಶರಾಗಿ ವಾ ;ಕುಲಗೊಳ್ಳುತ್ತಿ, ರಲು 
ವಾಯುದೇವನ ಉಪದೇಶದಿಂದ ರಾಘವನು ನಾಗಪಾಶದಿಂದ ಬಿಡಿಸುವುದಕ್ಕಾಗಿ 
ಗರುಡನನ್ನು ಸ್ಮರಿಸಿದನು. ಅವನು ದಶಮಾ ದಿನ ಬಂದನು. 

೫೮. ಗರುಡನಿಂದ ಏಕಾದಶೀದಿನ ನಾಗಪಾಶಮೋಚನವಾಗಲು ದ್ವಾದಶಿ 
ಹನುಮಂತನು ಧೂಮ್ರಾಕ್ಟೃನನ್ನು ಸಂಹರಿಸಿದನು. 

೫೯-೬೪, ತ್ರ ಯೋದಶಿಯುದ್ಧ ದಲ್ಲಿ ಅಕಂಪನನನ್ನೂ ಕೊಂದನು. ರಾವಣನು 
ರಾಮನಿಗೆ ಮಾಯಾ ಸೀತೆಯನ್ನು. ಪ್ರದರ್ಶಿಸಿ ಸೈನ್ಯದವರನ್ನೆಲ್ಲ ಹೆದರಿಸಿದನು. 
ಮಾಘ ಶುಕ್ಲ ಚತುರ್ದಶೀ ಮೊದಲ್ಗೊಂಡು ಕೃಷ್ಣಸಕ್ಸ ಪಾಡ್ಯಮಾವರೆಗೆ 
ನೀಲನು ಪ್ರಹಸ್ತನೊಡನೆ ಕಾಳಗವಾಡಿ. ಅವನನ್ನು ಹು ದ್ವಿತೀಯಾ 
ಮೊದಲ್ಗೊಂಡು ಚೌತಿತನಕ ಮೂರುದಿನ ರಾಮನು ಘೋರ ಸಮರದಲ್ಲಿ 


ತಳಳ ಶ್ರೀ ಸ್ಕಾಂದನುಹಾಪುರಾಣಂ 


ಕುಂಭಕರ್ಣಸ್ತದಾ ಚಕ್ರೇಭ್ಯನಹಾರಂ ಚತುರ್ದಿನಂ | 


ಕುಂಭಕರ್ಣೋಂಕರೋದ್ಯುದ್ಧಂ ನವಮ್ಯಾದಿಚತುರ್ದಿನೈಃ N೬೩ ॥ 
ರಾಮೇಣ ನಿಹತೋ ಯುದ್ಧೇ ಬಹುವಾನರಭಕ್ಬ ಈ । 
ಅಮಾನವಾಸ್ಯಾದಿನೇ ಶೋಕಾಂಭ್ಯವಹಾರೋ ಬಭೂವ ಹ ॥ ೬೪॥ 
ಫಾಲ್ಗುನಪ್ರತಿಪದಾದೌ ಚತುರ್ಥ್ಯಂತೈಶ್ಚತುರ್ದಿನೈಃ । 
ನರಾಂಂತಕಪ್ರಭೃತಯೋ ನಿಹತಾಃ ಪಂಚರಾಕ್ಸಸಾಃ ॥ ೬೫ ॥ 
ಸಂಚಮ್ಯಾಃ ಸಪ್ತಮಿಾ ಯಾವದಶಿಕಾಯವಧಸ್ತ್ರ್ಯಹಾತ್‌ | 

ಅಷ್ಟಮ್ಯಾ ದ್ವಾದಶೀ ಯಾನನ್ಸ್ನಿಹತೌ ದಿನಸಂಚಕಾತ್‌ ॥ ಓ೬॥ 
ನಿಕುಂಭಕುಂಭೌ ದ್ವಾವೇತೌ ಮಕರಾಕ್ಸಶ್ಚತುರ್ದಿನೈಃ । 

ಫಾಲ್ಗುನಾಸಿತ ದ್ವಿಶೀಯಾಯಾ ದಿನೇನೈ ಶಕ್ರಜಿಜ್ಜಿತಃ ॥ ಓ೭ ॥ 
ತೃತೀಯಾದೌ ಸಪ್ತಮ್ಯಂತದಿನಪಂಚಕಮೇನ ಚ । 
ಓಷಧ್ಯಾನಯನೈಯಗ್ರಾದನಹಾರೋ ಬಭೂವ ಹ ॥೬೮॥ 
ಅಷ್ಟಮ್ಯಾಂ ರಾನಣೋ ಮಾಯಾಮೈ ಥಿಲೀಂ ಹತವಾನ್ಯುಧೀಃ | 
ಶೋಕಾನೇಗಾತ್ತದಾ ರಾಮಶ್ಚಕ್ರೇ ಸೈನ್ಯಾಂವಧಾರಣಂ nan 
ತತಸ್ತ್ರಯೋದಶೀಂ ಯಾನದ್ದಿನೈಃ ಪಂಚಭಿರಿಂದ್ರಜಿತ್‌ । 

ಲಕ್ಷ್ಮಣೇನ ಹತೋ ಯುದ್ಧೇ ನಿಖ್ಯಾತಬಲಪೌರುಷಃ ॥೭೦॥ 








ರಾವಣನನ್ನು ಓಡಿಸಿದನು. ರಾವಣನು ಪಂಚಮಿಯಿಂದ ಅಷ್ಟಮಿವರೆಗೆ 
ಕುಂಭಕರ್ಣನನ್ನು ಎಬ್ಬಿ ಸಲು ಅವನು ನವನಿಯಿಂದ ನಾಲ್ಕುದಿನ ವಾನರರನ್ನು 
ಭಕ್ಸಿಸುತ್ತ ಯುದ್ಧಮಾಡಿ ರಾಮನಿಂದ ಹತನಾದನು. ಅಮಾವಾಸ್ಯೆದಿನ ದುಃಖ 
ಮಯವಾಯಿತು. 

೬೫. ಫಾಲ್ಗುನ ಶುದ್ಧ ಪಾಡ್ಯಮಿಾ ಮೊದಲು ಚೌತಿಯವರೆಗೆ ನಾಲ್ಕುದಿನ 
ನರಾಂತಕ ಮೊದಲಾದ ಐದುಮಂದಿ ರಕ್ಕಸರು ಯುದ್ಧಮಾಡಿ ಮಡಿದರು. 

೬೬-೬೭, ಸಂಚಮಿಯಿಂದ ಸಪ್ತಮಾವರೆಗೆ ಅತಿಕಾಯನು ಯುದ್ಧಮಾಡಿ 
ಹತನಾದನು. ಅಷ್ಟನಿಯಿಂದ ದ್ವಾದಶಿವರೆಗೆ ಐದುದಿನ ಕುಂಭನಿಕುಂಭರೂ, 
ತ್ರಯೋದಶಿಯಿಂದ ನಾಲ್ಕುದಿನ ಮಕರಾಕ್ಷನೂ ಯುದ್ಧಗೈದು ಹತರಾದರು. 
ಫಾಲ್ಗುನ ಬಹುಳ ದ್ವಿತೀಯಾದಿನ ಇಂದ್ರಜಿತ್ತು ಸೋಲಿಸಲ್ಪಟ್ಟನು. 

೬೮೨೬೯. ತದಿಗೆಯಿಂದ ಸಂಚಮಿಾನವರೆಗೆ ಔಷಧವನ್ನು ತರುವ ವ್ಯಗ್ರತೆ 
ಯಿಂದ ಯುದ್ಧವು ಸಾಗಲಿಲ್ಲ. ಅಷ್ಟಮಿಾದಿನ ದುಷ್ಟ ರಾವಣನು ಮಾಯಾಸೀತೆ 
ಯನ್ನು ವಧಿಸಲು ರಾಮನು ದುಃಖಾವೇಗದಿಂದ ಸೈನ್ಯವನ್ನು ಸ್ಥಿರಗೊಳಿಸಿದನು. 

೭೦. ಬಳಿಕ ತ್ರಯೋದಶಿಯವರೆಗೆ ಐದು ದಿನ ಇಂದ್ರಜಿತ್ತು ಯುದ್ಧ 
ಮಾಡಿ ಲಕ್ಷ್ಮ್ಮಣನಿಂದ ಹತನಾದನು. 


ತ್ರಿಂಶೋತಧ್ಯಾಯಃ ತೀಜ 


ಚತುರ್ದಶ್ಯಾಂ ದಶಗ್ರೀವೋ ದೀಕ್ಸಾಮಾಪಾವಹಾರತಃ । 
ಅಮಾವಾಸ್ಕಾದಿನೇ ಪ್ರಾಗಾದ್ಯು ದ್ಧಾ ಜಯ ದಶಕಂಧರಃ ॥ ೭೧॥ 
ಚೈತ್ರಶುಕ್ಲಪ್ರತಿಸದಃ ಸುಚಮಿಾ ದಿನೆಪಂಚಕೇ I 

Rc ಹುಧ್ಯಮಾನೋಂಭೂತ್ರಚುರೋ ರಕ್ಷಸಾಂ ವರಃ ॥ ೭೨ ॥ 
ಚೈತ್ರಶುಕ್ಲಾಂಷ್ಟನಿನಾಂ ಯಾವತ್ಸ್ಯಂದನಾಶ್ಚಾದಿಸೂದನಂ । 


ಚೈತ್ರಶುಕ್ಲನನಮ್ಯಾಂ ತು ಸೌಮಿತ್ರೇಃ ಶಕ್ತಿಭೇದನೇ ॥ ೭೩ ॥ 
ಕೋಪಾವಿಷ್ಟೇನ ರಾಮೇಣ.ದ್ರಾನಿತೋ ದಶಕಂಧರಃ । 
ನಿಭೀಷಣೋಪದೇಶೇನ ಪವ ನ ಜ್ಯ ಚ ॥ ೭೪॥ 


ದ್ರೋಣಾದ್ರೇರೋಷಧೀಂ ನೇತುಂ ಲಕ್ಷ್ಮಣಾಂರ್ಥಮುಪಾಗತಃ । 
ನಿಶಲ್ಯಾ 0 PR ಸಮಾದಾಯ ಲಕ್ಷ್ಮ ಣಂ ಮ 1 ೭೫॥ 


ದಶಮಾ ಮುವಹಾರೋಂಭೂದ್ರಾ ತ ಯುದ್ಧಂ ತು ರಕ್ಷಸಾಂ । 
ಏಕಾದಶ್ಯಾಂ ತು ರಾಮಾಯ ರಥೋ ಮಾತಶಿಸಾರಧಿಕ ॥ ೭೬ ॥ 
ಪ್ರಾಪ್ತೋ ಯುದ್ಧಾಯ ದ್ವಾದಶ್ಯಾಂ ಯಾವತ್ಯಷ್ಣಾ ಚತುರ್ದಶೀ। 
ಅಷ್ಟಾದಶದಿನೈ ರಾನೋ ರಾವಣಂ ದ್ರೈರಥೇಃನಧೀತ್‌ ॥ ೭೭॥ 





೭೧. ರಾವಣನು ಚತುರ್ದಶೀ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯುದ್ಧ 
ಮಾಡದೆ ದೀಕ್ಷೆಗೊಂಡನು. 

೭೨. ಅವನು ಚೈತ್ರ ಶುಕ್ಲ ಪ್ರತಿಪತ್ತಿನಿಂದ ಪಂಚಮಾವರೆಗೆ ಯುದ್ಧ 
ಮಾಡಿದನು. ಆಗ ಬಹಳ ಮಂದಿ ರಾಶ್ಟೃಸರು ಮಡಿದರು. 

೭೩. ಚೈತ್ರ ಶುಕ್ಲಾಷ್ಟಮಿದಿನ ರಾವಣನ ರಥ, ಕುದುರೆಗಳು ನಾಶ 
ವಾದುವು. ನವಮಾದಿನ ಲಕ್ಷ್ಮಣನಿಗೆ ರಾವಣನು ಶಕ್ತ್ಯಾಯುಧವನ್ನು ಪ್ರಯೋ 
ಗಿಸಿದನು. 

೭೪-೭೫, ರಾಮನು ಕೋಪದಿಂದ ಅವನನ್ನು ಓಡಿಸಿದನು. ಬಳಿಕ 
ವಿಭೀಷಣನ ಮಾತಿನಂತೆ ಹನುಮಂತನು ಯುದ್ಧಮಾಡಿ ಲಕ್ಷ್ಮಣನಿಗಾಗಿ 
ದೊ ್ರೀಣಾಚಲಕ್ಕೆ ಸಂಜೀವನೌಷಧವನ್ನು ತರುವುದಕ್ಕಾಗಿ ಹೋದನು. ಅದನ್ನು 
ತಂದು ಲಕ್ಸ್ಸ ನಾನ ಮೂರ್ಛೆಯನ್ನು ನಿವಾರಿಸಿದನು. 

೭೬. ಧೆಕಮಾದಿನ ಹಗಲು ಯುದ್ಧವಾಗಲಿಲ್ಲ. ರಾತ್ರಿ ರಾಕ್ಸಸರೊಡನೆ 
ಯುದ್ಧನಡೆಯಲು ಏಕಾದಶೀದಿನ ತಜಿ ರಾಮನಿಗೆ ರಥವನ್ನು 
ತಂದನು. 

೭೭. ರಾಮನು ದ್ವಾದಶೀ ಮೊದಲ್ಗೊಂಡು ಕೃ ಸ್ಥಚತುರ್ದಶಿಯವರೆಗೆ 
ಹದಿನೆಂಟುದಿನ ರಾವಣನೊಡನೆ ರಥದಲ್ಲಿ ಯುದ್ಧಮಾಡಿ ಅವನನ್ನು ಕೊಂದನು. 


ತೇ ಶ್ರೀ ಸ್ಕಾಂಡಮಹಾಪುರಾಣಂ 


ಸಂಸ್ಕಾರಾ ರಾನಣಾದೀನಾಮಮಾವಾಸ್ಯಾದಿನೇಂಭವನ್‌ । 

ಸಂಗ್ರಾಮೇ ತುಮುಲೇ ಜಾತೇ ರಾಮೋ ಜಯಮುವಾಸ್ತವಾನ್‌ ॥ ೬೮ ॥ 
ಮಾಫಶುಕ್ಲದ್ವಿತೀಯಾದಿ ಚೈತ್ರಕೃಷ್ಣ ಚತುರ್ದಶೀಂ । 
ಸಪ್ತಾಶೀತಿದಿನಾನ್ಯೇವಂ ಮಧ್ಯೇ ಸಂಚದಶಾಹಕಂ nan 
ಯುದ್ಧಾವಹಾರಃ ಸಂಗ್ರಾಮೋ ದ್ವಾಸಪ್ತತಿದಿನಾನ್ಯಭೂತ್‌ । 
ವೈಶಾಖಾದಿತಿಥೌ ರಾಮ ಉವಾಸ ರಣಭೂಮಿಷು ! 


ಅಭಿಹಿಕ್ತೋ ದ್ವಿತೀಯಾಯಾಂ ಲಂಕಾರಾಜ್ಯೇ ನಿಭೀಷಣಃ ॥ ೮೦ ॥ 
ಸೀತಾಶುದ್ಧಿಸ್ತೃತೀಯಾಯಾಂ ದೇವೇಭ್ಯೋ ವರಲಂಭನಂ । 
ದಶರಥಸ್ಯಾಗಮನಂ ತತ್ರ ಚೈನಾಃನುನೋದನಂ neon 
ಹತ್ವಾ ತ್ವರೇಣ ಲಂಕೇಶಂ ಲಕ್ಷ್ಮೃಣಸ್ಯಾಂಗ್ರಜೋ ವಿಭುಃ । 

ಗೃಹೀತ್ವಾ ಜಾನಕೀಂ ಪುಣ್ಯಾಂ ದುಃಖತಾಂ ರಾಕ್ಸಸೇನ ತು ॥ ೮೨ ॥ 
ಆದಾಯ ಪರಯಾ ಪ್ರೀತ್ಯಾ ಜಾನಕೀಂ ಸ ನೃನರ್ತತ । 

ವೈಶಾಖಸ್ಯ ಚತುರ್ಥ್ಯಾಂ ತು ರಾಮಃ ಪುಷ್ಪಕಮಾಶ್ರಿತಃ ॥ ೮೩ ॥ 


ವಿಹಾಯಸಾ ನಿವೃತ್ತಸ್ತು ಭೂಯೋಂಯೋಧ್ಯಾಂ ಪುರೀಂ ಪ್ರತಿ | 
ಪೂರ್ಣೇ ಚತುರ್ದಶೇ ವರ್ಷೇ ಪಂಚನ್ಯಾಂ ಮಾಧವಸ್ಯ ಚ ॥ ೮೪ ॥ 
ಭಾರದ್ವಾಜಾಶ್ರಮೇ ರಾಮಃ ಸಗಣಃ ಸಮುಪಾನಿಶತ್‌ । 

ನಂದಿಗ್ರಾನೇ ತು ಷಷ್ಕ್ಯಾಂ ಸ ಪುಷ್ಪಕೇಣ ಸಮಾಗತಃ ॥ ೪೫ ॥ 

೭೮. ಅಮಾವಾಸ್ಯೆ ದಿನ ರಾವಣಾದಿಗಳಿಗೆ ದಹನಾದಿ ಸಂಸ್ಕಾರಗಳು 
ನಜೆದುವು. ಹೀಗೆ ಘೋರ ಯುದ್ಧದಲ್ಲಿ ರಾಮನು ಜಯವನ್ನು ಸಡೆದನು. 

೭೯-೮೦. ಮಾಘ ಶುದ್ಧ ದ್ವಿತೀಯಾ ಮೊದಲ್ಗೊಂಡು ಚೈತ್ರ ಕೃಷ್ಣ 
ಚತುರ್ದಶೀವರೆಗೆ ಎಂಭತ್ತೇಳು ದಿನಗಳಲ್ಲಿ ಮಧ್ಯೆ ಹದಿನೈದು ದಿನಗಳು 
ಯುದ್ಧವು ನಡೆಯಲಿಲ್ಲ. ಉಳಿದ ಎಪ್ಪತ್ತೆರಡು ದಿನಗಳು ಯುದ್ಧವು ನಡೆಯಿತು. 
ವೈಶಾಖ ಶುದ್ಧ ಪಾಡ್ಯಮಿದಿನ ರಾಮನು ಯುದ್ಧಾಂಗಣದಲ್ಲಿದ್ದನು. ಬಿದಿಗೆದಿವಸ 
ವಿಜೀಷಣನು ಲಂಕಾರಾಜ್ಯಾಭಿಷಿಕ್ತನಾದನು. 

೮೧. ತದಿಗೆದಿವಸ ಸೀತೆಯ ಶುದ್ಧಿಯೂ, ದೇವತೆಗಳಿಂದ ವರಲಾಭವೂ, 
ದಶರಥನ ಆಗಮನವೂ, ಅವನ ಅನುಮತಿಯೂ ಆದುವು. 

೮೨. ರಾಮನು ಶೀಘ್ರವಾಗಿ ರಾವಣನನ್ನು ಕೊಂದು ಅವನಿಂದ ದುಃಖಿತ 
ಳಾದ ಜಾನಕಿಯನ್ನು ಪರಿಗ್ರಹಿಸಿ ವೈಶಾಖ ಶುದ್ಧ ಚತುರ್ಥೀದಿವಸ ಅವಳೊಡನೆ 
ಪುಷ್ಪ ಕವಿಮಾನವನ್ನೇರಿದನು. 

೮೩-೮೫. ಆಕಾಶಮಾರ್ಗದಿಂದ ಮರಳಿ ಅಯೋಧ್ಯೆಯನ್ನು ಕುರಿತು 
ಹೊರಟು ಹದಿನಾಲ್ಕನೆವರ್ಷ ಪೂರ್ತಿಯಾಗಲು ವೈ ಶಾಖಮಾಸ ಪಂಚ ಮಾದಿವಸ 





ತ್ರಿಂಶೋತಿಧ್ಯಾಯಃ. , ೨೪೭ 
ಸಪ್ತಮ್ಯಾಮಭಿಸಿಕ್ತೋಸೌ ಭೂಯೋಂಯೋಧ್ಯಾಯಾಂ ರಘೂದೃಹಃ । 


ದಶಾಹಾಂಧಿಕಮಾಸಾಂಶ್ಚ ಚತುರ್ದಶ ಹಿ ಮೈಥಿಲೀ ॥ ೮೬ ॥ 
ಉವಾಸ ರಾಮರಹಿತಾ ರಾವಣಸ್ಯ ನಿನೇಶನೇ । 

ದ್ವಾಚತ್ವಾರಿಂಶಕೇ ವರ್ಷೇ ರಾಮೋ ರಾಜ್ಯಮಕಾರಯತ್‌ ॥ ೮೭॥ 
ಸೀತಾಯಾಸ್ತು ತ್ರಯಸ್ತ್ರಿಂಶದ್ವರ್ಷಾಣಿ ತು ತದಾಂಭವನ್‌ । 

ಸ ಚತುರ್ದಶವರ್ಷಾಂತೇ ಪ್ರವಿಷ್ಟಃ ಸ್ಮಾಂ ಪುರೀಂ ಪ್ರಭುಃ ॥ ೮೮ ॥ 
ಅಯೋಧ್ಯಾಂ ನಾಮ ಮುದಿತೋ ರಾಮೋ ರಾವಣದರ್ಪಹಾ | 
ಭ್ರಾತೃಭಿಃ ಸಹಿತಸ್ತತ್ರ ರಾಮೋ ರಾಜ್ಯಮಕಾರಯತ್‌ NEF 
ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ। 

ರಾಮೋ ರಾಜ್ಯಂ ಸಾಲಯಿತ್ವಾ ಜಗಾಮ ತ್ರಿದಿವಾಲಯಂ Won 
ರಾಮರಾಜ್ಯೇ ತದಾ ಲೋಕಾ ಹರ್ಷನಿರ್ಭರಮಾನಸಾಃ । 
ಬಭೂವುರ್ಧನಧಾನ್ಯಾಢ್ಯಾಃ ಪುತ್ರಸೌತ್ರಯುತಾ ನರಾಃ ॥೯೧॥ 
ಕಾಮವರ್ಷೀಚ ಪರ್ಜನ್ಯಃ ಸಸ್ಯಾನಿ ಗುಣವಂತಿ ಚ । 

ಗಾವಸ್ತು ಘಟದೋಹಿನ್ಯಃ ಪಾದಪಾಶ್ಚ ಸದಾಫಲಾಃ ॥ ೯೨॥ 


ಸರಿವಾರಸಮೇತ ಭರದ್ವಾಜಾಶ್ರಮವನ್ನು ಹೊಕ್ಕನು. ಷಷ್ಮೀದಿನ ಪುಷ್ಪಕ 
ವಿಮಾನದಲ್ಲಿ ನಂದಿಗ್ರಾಮಕ್ಕೆ ಬಂದನು. 

೮೬-೮೭. ರಾಮಚಂದ್ರನು ವೈಶಾಖ ಶುದ್ಧ ಸಪ್ತಮಿಾದಿನ ತಿರುಗಿ 
ಅಯೋಧ್ಯೆಯಲ್ಲಿ ಪಟ್ಟಾ ಭಿಷಿಕ್ತನಾದನು. ಜಾನಕಿಯು ರಾಮನನ್ನಗಲಿ ಒಂದು 
ವರ್ಷ ಎರಡು ತಿಂಗಳು ಹೆತ್ತುದಿನಸಕಾಲ ರಾವಣನ ಮನೆಯಲ್ಲಿ ವಾಸ 
ವಾಗಿದ್ದಳು. ರಾಮನು ನಲವತ್ತೆರಡನೆ ವಯಸ್ಸಿನಲ್ಲಿ ರಾಜ್ಯವಾಳಲಾರಂಭಿ 
ಸಿದನು. 

೮೮-೯೦, ಆಗ ಸೀತೆಗೆ ಮೂವತ್ತಮೂರುವರ್ಷ ವಯಸ್ಸಾಗಿತ್ತು. 
ರಾಮನು ಹೀಗೆ ಹದಿನಾಲ್ಕು ವರ್ಷಗಳ ಕೊನೆಯಲ್ಲಿ ತನ್ನ ನಗರಿಯಾದ 
ಅಯೋಧ್ಯೆಯನ್ನು ಪ್ರವೇಶಿಸಿ ಅಲ್ಲಿ ಸಹೋದರರೊಡನೆ ರಾಜ್ಯವಾಳುತ್ತಿದ್ದನು. 
ಹೀಗೆ ಹನ್ನೊಂದು ಸಾವಿರ ವರ್ಷ ರಾಜ್ಯಭಾರಮಾಡಿ ದೇವಲೋಕಕ್ಕೆ ತೆರಳಿದನು. 

೯೧. ರಾಮನ ರಾಜ್ಯದಲ್ಲಿ ಆಗ ಪ್ರಜೆಗಳು ಹರ್ಷದಿಂದ ತುಂಬಿದವರೂ, 
ಧನಧಾನ್ಯಸಮೃದ್ಧಿ ಯುಳ್ಳವರೂ, ಪುತ್ರಪೌತ್ರಸಮೇತರೂ ಆಗಿದ್ದರು. 

೯೨, ಮಳೆಯು ಯಥೇಚ್ಛವಾಗಿ ಸುರಿದು ಸಸ್ಯಗಳು ಸಮೃದ್ಧಿಯಾಗಿ 
ಬೆಳೆದುವು. ಗೋವುಗಳು ಹೆಚ್ಚು ಹಾಲನ್ನು ಕರೆಯುತ್ತಿದ್ದುವು. ಮರಗಳು 
ಯಾವಾಗಲೂ ಫಲಭರಿತಗಳಾಗಿದ್ದುವು. 


೨೪೮ ಶ್ರೀ ಸ್ಕಾಂದಮಹಾಪುರಾಣಂ 


ನಾಧಯೋ ವ್ಯಾಧಯಕ್ಚೈನ ರಾಮರಾಜ್ಯೇ ನರಾಧಿಪ । 


ನಾರ್ಯಃ ಪತಿವ್ರತಾಶ್ವಾಸನ್ಸಿತೃಭಕ್ತಿಸರಾ ನರಾಃ ॥೯೩॥ 
ದ್ವಿಜಾ ನೇದಪರಾ ನಿತ್ಯಂ ಕ್ಸತ್ರಿಯಾ ದ್ವಿಜಸೇನಿನಃ | 

ಕುರ್ವತೇ ವೈಶ್ಯ ವರ್ಣಾಶ್ಚ ಗ್‌ೆ ಂದ್ವಿ ಗಾ ಸದಾ ॥ ೯೪॥ 
ನ ಯೋನಿಸಂಕರಶ್ಚಾಸೀತ್ತೆತ್ರ ತ ಸಾಚಾರಸಂಕರಃ | 

ನ ನಂಧ್ಯಾ ದುರ್ಭಗಾ ನಾರೀ ಕಾಕನಂಧ್ಯಾ ಮೃತಪ್ರಜಾ ॥ ೯೫ ॥ 


ನಿಧನಾ ನೈನ ಕಾಷ್ಯಾಸೀತ್ಸಭರ್ತೃಕಾ ನ ಲಪ್ಯತೇ । 

ನಾಂವಜ್ಞಾ 0 ಕುರ್ವತೇ ಕೋಪಿ “ ಮಾತಾಪಿತ್ರೊ ೀರ್ಗುರೋಸ್ತಥಾ ॥ ೯೬ ॥ 
ನಚೆ ವಾಕ್ಯಂ ಹಿ ನೃದ್ಧಾನಾಮುಲ್ಲಂಘಯಕಿ `ಪ್ರಣ್ಯಕೃ ತ್‌ । 

ನ ಭಾವಿಪರಣಂ ತತ್ರ 'ಸರನಾರೀಪರಾಜ್ಕು ಖಾಃ ॥೯೭॥ 
ನಾಂಸನಾದಪರೋ ಕೊಕೋ ನ ದರಿದ್ರೋ ನ ರೋಗಭಾಕ್‌ | 

ನ ಸ್ತೇಯೋ ದ್ಯೂತಕಾರೀ ಚ ನೈರೇಯಾ ಪಾಸಿನೋ ನಹಿ ॥೯೮॥ 
ನ ಹೇಮಹಾರೀ ಬ್ರಹ್ಮಘ್ನೋ ನ ಚೈನ ಗುರುತಲ್ಪಗಃ । 

ನ ಸ್ತ್ರೀಘ್ನೋನ ಚ ಬಾಲಘ್ನೋ ನ ಚೈವಾಂನೃತಭಾಷಣಃ ॥೯೯॥ 

೯೩-೯೪. ರಾಮನ ರಾಜ್ಯದಲ್ಲಿ ಆಧಿವ್ಯಾಧಿಗಳ ಸುಳಿವೇ ಇರಲಿಲ್ಲ. 
ಹೆಂಗಸರು ಪತಿವ್ರತೆಯರಾಗಿಯೂ, ಮಾನವರು ಹಿತ್ನ ಭಕ್ತಿ ಯುಳ್ಳವರಾಗಿಯೂ 
ಮೆರೆಯುತ್ತಿದ್ದರು. ದ್ವಿಜರು ನೇದಾಧ್ಯಯನನಿರತರೂ, ಕ್ಪತ್ರಿಯರು ಬ್ರಾಹ್ಮಣ 
ಸೇವಕರೂ ಆಗಿದ್ದರು. ವೈಶ್ಯರು ಬ್ರಾಹ್ಮಣರಲ್ಲಿಯೂ, ಗೋವುಗಳಲ್ಲಿಯೂ 
ಭಕ್ಕಿಯುಳ್ಳವರಾಗಿದ್ದರು. 

೯೫. ಜಾತಿಸಾಂಕರ್ಯವೂ, ಆಚಾರಸಾಂಕರ್ಯವೂ ಇರಲಿಲ್ಲ. ಬಂಜೆ, 
ಸಾಯುವ ಮಕ್ಕಳುಳ್ಳ ವಳು ಇವರಿರಲಿಲ್ಲ. 

೯೬, ಒಬ್ಬ ವಿಧನೆಯೂ ಇರಲಿಲ್ಲ. ಸುಮಂಗಲಿಯು ಪುತ್ರಾದಿ ಮರಣ 
ದಿಂದ ಗೋಳಾಡುತ್ತಿರಲಿಲ್ಲ. ಯಾರೂ ತಾಯಿ, ತಂದೆ, ಗುರುಗಳಿಗೆ ಅವಮಾನ 
ಮಾಡುತ್ತಿರಲಿಲ್ಲ... 

೯೭. ಪುಣ್ಯವಂತನಾದ ಮಾನವನು ವೃದ್ಧರ ಮಾತನ್ನು ಮಾರುತ್ತಿರಲಿಲ್ಲ. 
ಯಾರೊಬ್ಬರೂ ಪರರ ಭೂಮಿಯನ್ನು ಅಪಹರಿಸುತ್ತಿರಲಿಲ್ಲ. ಎಲ್ಲರೂ ಸರರ 
ಹೆಂಗಸರಲ್ಲಿ ವಿಮುಖರಾಗಿದ್ದರು. 

೯೮. ಇತರರ ಮೇಲೆ ಅಸವಾದವನ್ನು ಹೊರಿಸುವವನೂ, ಬಡವನೂ, 
ರೋಗಿಯೂ, ಕಳ್ಳನೂ, ಜೂಜುಗಾರನೂ, ಹೆಂಡವನ್ನು ಕುಡಿಯುವವನೂ, 
ಪಾಪಿಗಳೂ ಇರಲಿಲ್ಲ. 

೯೯. ಸುವರ್ಣವನ್ನು ಕದಿಯುವವನೂ, ಬ್ರಾಹ್ಮಣನನ್ನು ಕೊಂದವನೂ. 


ತ್ರಿಂಶೋ9ಧ್ಯಾಯಃ ರ ೯ 


ನ ವೃತ್ತಿಲೋಪಕಶ್ಚಾಸೀತ್ಕೂಟಸಾಕ್ಸ್ಮೀನ ಚೈನ ಹಿ। 


ನ ಶಠೋನ ಕೃತಫ್ನಶ್ಚ ಮಲಿನೋ ನೈನ ದೃಶ್ಯತೇ ॥ ೧೦೦ ॥ 
ಸದಾ ಸರ್ವತ್ರ ಪೂಜ್ಯಂತೇ ಬ್ರಾಹ್ಮಣಾ ನೇಡಪಾರಗಾಃ । 
ನಾಂನೈಷ್ಣವೋಂವ್ರತೀ ರಾಜನ್ರಾಮರಾಜ್ಯೇಂತಿನಿಶ್ರುತೇ . ॥ ೧೦೧॥ 


ರಾಜ್ಯಂ ಪ್ರಕುರ್ವತಸ್ತಸ್ಯ ಪುರೋಧಾ ನದತಾಂ ವರಃ । 
ನಸಿಷ್ಕೋ ಮುನಿಭಿಃ ಸಾರ್ಧಂ ಕೃತ್ವಾ ತೀರ್ಥಾನ್ಯನೇಕಶಃ ॥ ೧೦೨ ॥ 
ಆಜಗಾಮ ಬ್ರಹ್ಮಪುತ್ರೋ ಮಹಾಭಾಗಸ್ತಪೋನಿಧಿಃ । 


ರಾಮಸ್ತಂ ಪೂಜಯಾಮಾಸ ಮುನಿಭಿಃ ಸಹಿತಂ ಗುರುಂ ॥ ೧೦೩ ॥ 
ಅಭ್ಯುತ್ಕಾನಾಂರ್ಥಸಾದೈೈಶ್ಚ ಮಧುಪರ್ಕಾದಿಸೂಜಯಾ । 

ಸಪ್ರಚ್ಛ ಕುಶಲಂ ರಾಮಂ ವಸಿಷ್ಮೋ ಮುನಿಪುಂಗವಃ ॥ ೧೦೪ ॥ 
ರಾಜ್ಯೇ ಚಾಶ್ವೇ ಗಜೇ ಕೋಶೇ ದೇಶೇ ಸದ್ಭ್ರ್ರಾತೃಭೃತ್ಯಯೋಃ । 
ಕುಶಲಂ ವರ್ತತೇ ರಾಮ ಇತಿ ಪೃಷ್ಟೇ ಮುನೇಸ್ತದಾ ॥ ೧೦೫ ॥ 


ರಾಮ ಉವಾಚ :-- 
ಸರ್ವತ್ರ ಕುಶಲಂ ಮೇಂದ್ಯ ಪ್ರಸಾದಾದ್ಭವತಃ ಸದಾ । 
ಪಪ್ರಚ್ಛ ಕುಶಲಂ ರಾಮೋ ವಸಿಷ್ಮಂ ಮುನಿಪುಂಗನಂ H ೧೦೬ ॥ 
ಗುರುಪತ್ಲೀ ಸಂಗವನ್ನು ಮಾಡುವವನೂ, ಸ್ತ್ರೀ ಮತ್ತು ಬಾಲಕರನ್ನು ಕೊಂದ 
ವನೂ, ಸುಳ್ಳಾಡುವವನೂ ಇರಲಿಲ್ಲ. 

೧೦೦. ಜೀವನವನ್ನು ಹಾಳುಮಾಡುವವನೂ, ಸುಳ್ಳು ಸಾಕ್ಟಿಯನ್ನು 
ಹೇಳುವವನೂ, ಮೂರ್ಯನೂ, ಕೃತಫಪ್ಲುನೂ, ಮಲಿನನಾದವನೂ ಇರಲಿಲ್ಲ. 

೧೦೧. ಅತಿ ಪ್ರಸಿದ್ಧವಾದ ರಾಮರಾಜ್ಯದಲ್ಲಿ ವೇದಪಾರಂಗತರಾದ 
ಬ್ರಾಹ್ಮಣರು ಮಾನ್ಯರಾಗಿದ್ದರು. ವಿಷ್ಣುಭಕ್ತರಲ್ಲದವರೂ, ವ್ರತವಿಲ್ಲದವರೂ 
ಇರಲಿಲ್ಲ. 

೧೦೨-೧೦೫. ಶ್ರೀರಾಮನು ರಾಜ್ಯವಾಳುತ್ತಿರುವಾಗ ಬ್ರಹ್ಮತನಯನೂ, 
ಅತಿ ಭಾಗ್ಯವಂತನೂ, ತಪಸ್ವಿಯೂ, ವಾಗ್ಮಿಯೂ ಆಗಿರುವ ಪುರೋಹಿತನಾದ 
ವಸಿಷ್ಕನು ಮುನಿಗಳೊಡನೆ ಬಂದನು. ಗುರುವನ್ನು ಎದುರುಗೊಳ್ಳುವುದ 
ರಿಂದಲೂ, ಅರ್ಥ್ಯ, ಪಾದ್ಯ, ಮಧುಪರ್ಕ ಇವುಗಳಿಂದಲೂ ರಾಮನು ಪೂಜಿಸಿ 
ದನು. ಮುಧಿವರ್ಯನಾದ ವಸಿಷ್ಠನು ರಾಜ್ಯ, ಕುದುರೆ, ಆನೆ, ಬೊಕ್ಕಸ, ದೇಶ, 
ಸಹೋದರರು, ಸೇವಕರು ಇವರೆಲ್ಲ ಕ್ಲೇಮವಾಗಿರುವರೊ ಎಂದು ಪ್ರಶ್ನಿಸಿದನು. 

೧೦೬-೧೦೮. ರಾಮನು ಹೇಳುತ್ತಾನೆ: “ಗುರುವರ್ಯಾ! ತಮ್ಮ ಅನುಗ್ರಹ 
ದಿಂದ ನಾನು ಎಲ್ಲ ವಿಷಯದಲ್ಲಿಯೂ ಕ್ಲೇಮವಾಗಿರುವೆನು.” ಎಂದು ರಾಮನು 
ವಸಿಷ್ಠರಿಗೆ ಹೇಳಿ "“ಪಶ್ಚೀಪುತ್ರರಿಂದ ಸಹಿತರಾದ ತಾವು ಕ್ಟೇಮವಾಗಿ 


40೦0 ಶ್ರೀ ಸ್ಕಾಂದಮಹಾಪುರಾಣಂ 


ಸರ್ವತಃ ಕುಶಲೀ ತ್ವಂ ಹಿ ಭಾರ್ಯಾಪುತ್ರಸಮನ್ನಿತಃ । 


ಸ ಸರ್ವಂ ಕಥಯಾಮಾಸ ಯಥಾ ತೀರ್ಥಾನ್ಯಶೇಸತಃ ॥ ೧೦೭ ॥ 
ಸೇವಿತಾನಿ ಧರಾಪೃಷ್ಠೇ ಕ್ಲೇತ್ರಾಣ್ಯಾಯತನಾನಿ ಚ । 
ರಾಮಾಯ ಕಥಯಾನತಾಸ ಸರ್ವತ್ರ ಕುಶಲಂ ತದಾ ॥ ೧೦೮ ॥ 


ತತಃ ಸ ವಿಸ್ಮಯಾನಿಷ್ಟೋ ರಾಮೋ ರಾಜೀನಲೋಚನಃ । 
ಪಪ್ರಚ್ಛ ತೀರ್ಥಮಾಹಾತ್ಮ್ಯಂ ಯತ್ತೀರ್ಥೀಷೂತ್ತಮೋತ್ತಮಂ ॥೧೦೯॥ 


ಇಕಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯ ಮಾಹಾತ್ಮ್ಯೇ "ರಾಮ 
ಚರಿತ್ರವರ್ಣನಂ'' ನಾಮ ತ್ರಿಂಶೋಂಧ್ಯಾಯಃ 


ಕುವಿಕೊ?'' ಎಂದು ' ಕೇಳಿದನು. ಅದಕ್ಕೆ ವಶಿಷ್ಠನು ತಾವು ವಸುಧೆಯಲ್ಲಿ 
ಸೇವಿಸಿದ ಸಕಲ ತೀರ್ಥಗಳು ಮತ್ತು ದೇವಾಲಯಗಳನ್ನು ಸಮಗ್ರವಾಗಿ 
ತಿಳಿಸಿ ಎಲ್ಲ ವಿಷಯದಲ್ಲಿಯೂ ಕ್ಬೇಮವಾಗಿರುವೆವೆಂದು ಹೇಳಿದನು. 

೧೦೯. ಕಮಲದಂತೆ ಕಣ್ಣುಗಳುಳ್ಳ ರಾವಾನು ಆಶ್ಚರ್ಯಗೊಂಡು ತೀರ್ಥ 
ಗಳಲ್ಲಿ ಉತ್ತಮೋತ್ತಮವಾದುದನ್ನೂ, ಆ ತೀರ್ಥಗಳ ಮಾಹಾತ್ಮ್ಯೆಯನ್ನೂ 
ಕೇಳಿದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮದಲ್ಲಿ "4ರಾಮಚರಿತ್ರವರ್ಣನ''ವೆಂಬ 
ಮೂವತ್ತನೆಯ ಅಧ್ಯಾಯವು ಮುಗಿದುದು 


॥ ಶ್ರೀಃ in 
ಅಥ್ಸೆಕತ್ರಿಂಶೋಂಧ್ಯಾಯಃ 
ದೂತಾಗಮನಂ 
ಶ್ರೀರಾಮ ಉವಾಚ: 
ಭಗವನ್ಯಾನಿ ತೀರ್ಥಾನಿ ಸೇವಿತಾನಿ ತ್ವಯಾ ನಿಭೋ । 


ಏತೇಷಾಂ ಪರಮಂ ತೀರ್ಥಂ ತನ್ಮಮಾಚಕ್ಟ ಮಾನದ “non 
ಮಯಾ ತು ಸೀತಾಹರಣೇ ನಿಹತಾ ಬ್ರಹ್ಮರಾಕ್ಸಸಾಃ । 

ತತ್ಪಾಪಸ್ಯ ವಿಶುದ್ಧ್ಯರ್ಥಂ ವದ ತೀರ್ಥೊತ್ತ ನೋತ್ತಮಂ 1H ೨॥ 

ವಸಿಷ್ಠ ಉವಾಚ :-- 

ಗಂಗಾ ಚ ನರ್ಮದಾ ಶಾಪೀ ಯಮುನಾ ಚ ಸರಸ್ವತೀ । 

ಗಂಡಕೀ ಗೋಮತೀ ಪೂರ್ಣಾ ಏತಾ ನದ್ಯಃ ಸುಪಾವನಾಃ ॥೩॥ 
ಏತಾಸಾಂ ನರ್ಮದಾ ಶ್ರೇಷ್ಠಾ ಗಂಗಾ ತ್ರಿಪಥಗಾನಿನೀ । 

ದಹತೇ ಕಿಲ್ಪಿಷಂ ಸರ್ವಂ ದರ್ಶನಾದೇವ ರಾಘವನ ॥೪॥ 
ದೃಷ್ಟಾ ಜನ್ಮಶತಂ ಪಾಪಂ ಗತ್ವಾ ಜನ್ಮಶತತ್ರಯಂ । 

ಸ್ನಾತ್ವಾ ಜನ್ಮಸಹಸ್ರಂ ಚ ಹಂತಿ ರೇವಾ ಕಲೌ ಯುಗೇ "HB 

ಕನ್ನಡದ ಅನುವಾದ 
ದೂತಾಗಮನ 


೧. ಶ್ರೀರಾಮನು ಹೇಳುತ್ತಾನೆ: ಪೂಜ್ಯಗುರುಗಳೆ! ತಾವು ಯಾವ 
ತೀರ್ಥಗಳನ್ನು ಸೇವಿಸಿದಿರಿ? ಇವುಗಳಲ್ಲಿ ಉತ್ತಮವಾದುದಾವುದು? ಅದನ್ನು 
ನನಗೆ ಹೇಳಿರಿ. 

೨. ನಾನು ಸೀತೆಯನ್ನು ತರುವುದಕ್ಕಾಗಿ ಬ್ರಾಹ್ಮಣಜನ್ಮದ ರಾಕ್ಟಸರನ್ನು 
ಕೊಂದಿರುವೆನು. ಆ ಪಾಪದ ಶುದ್ಧಿಗಾಗಿ ಉತ್ತಮ ತೀರ್ಥವನ್ನು ಹೇಳಿರಿ. 

೩. ವಸಿಷ್ಠನು ಹೇಳುತ್ತಾನೆ:--ರಾಮ! ಗಂಗಾ, ನರ್ಮದಾ, ತಪತೀ, 
ಯಮುನಾ, ಸರಸ್ವತೀ, ಗಂಡಕೀ, ಗೋಮತೀ, ಪೂರ್ಣಾ ಈ ನದಿಗಳು ಅತಿ 
ಪವಿತ್ರವಾದುವು. 

೪. ಇವುಗಳಲ್ಲಿ ನರ್ಮದೆಯು ಉತ್ತಮವಾದುದು. ಗಂಗೆಯು ಕಂಡ 
ಕೂಡಲೆ ಎಲ್ಲ ಪಾಪಗಳನ್ನು ನೀಗಿಸುವುದು. 

೫. ನರ್ಮದೆಯು ಕಲಿಯುಗದಲ್ಲಿ ನೋಡುವುದರಿಂದ ನೂರು ಜನ್ಮಗಳ 
ಪಾಪವನ್ನೂ, ಅಲ್ಲಿಗೆ ಹೋಗುವುದರಿಂದ ಮುನ್ನೂರು ಜನ್ಮಗಳ ಪಾಸವನ್ನೂ, 
ಸ್ಪಾನದಿಂದ ಸಾವಿರ ಜನ್ಮಗಳ ಪಾಪವನ್ನೂ ಕಳೆಯುವುದು. 


೩೦೨ ಶ್ರೀ ಸ್ಕಾಂದಮ ಹಾಪುರಾಣಂ 


ನರ್ಮದಾತೀರಮಾಶ್ರಿತ್ಯ ಶಾಕಮೂಲಫಲೈರನಿ । 


ಏಕಸ್ಮಿನ್ಫೋಜಿತೇ ನಿಪ್ರೇ ಕೋಟಭೋಜಫಲಂ ಲಭೇತ್‌ ॥ ೬ ೫ 
ಗಂಗಾ ಗಂಗೇತಿ ಯೋ ಬ್ರೂಯಾದ್ಯೋಜನಾನಾಂ ಶತೈರಪಿ । 
ಮುಚ್ಯತೇ ಸರ್ವಪಾಹೇಜಭ್ಯೋ ವಿಷ್ಣು ಲೋಕಂ ಸ ಗಚ್ಛತಿ ॥೭/ 
ಫಾಲ್ಲುನಾಂತೇ ಕುಹೂಂ ಪ್ರಾಪ್ಯ ತಥಾ ಪ್ರೌಷ್ಠಪದೇಸಿತೇ । 
ಪಕ್ಷೇ ಗಂಗಾನುಧಿಪ್ರಾಪ್ಯ ಸ್ನಾನಂ ಚ ಪಿತೃತರ್ಪಣಂ ॥೮॥ 


ಕುರುತೇ ಪಿಂಡದಾನಾನಿ ಸೋಂಕ್ಸಯಂ ಫಲಮಕ್ನುತೇ। 

ಶುಚೌ ಮಾಸೇ ಚ ಸಂಪ್ರಾಪ್ತೇ ಸ್ನಾನಂ ನಾಪ್ಕಾಂ ಕರೋತಿ ಯಃ ॥ ೯ ॥ 
ಚತುರಶೀತಿನರಕಾನ್ನ ಪಶ್ಯತಿ ನರೋ ನೃಪ । 

ತಪತ್ಯಾಃ ಸ್ಮರಣೇ ರಾಮ ಮುಹಾಪಾತಕನಾಮಸಿ ॥ ೧೦ 
ಉದ್ಭರೇತ್ಸಸ್ತಗೋತ್ಪಾಣಿ ಕುಲಮೇಕೋತ್ತರಂ ಶತಂ | 
ಯಮುನಾಯಾಂ ನರಃ ಸ್ನಾತ್ಕಾ ಸರ್ವಪಾಪೈಃ ಪ್ರಮುಚ್ಯತೇ ॥ ೧೧॥ 
ಮಹಾಪಾತಕಯುಕ್ತೋಪಿ ಸ ಗಚ್ಛೇತ್ಸರಮಾಂ ಗತಿಂ । 


ಕಾರ್ತಿಕ್ಯಾಂ ಕೃತ್ತಿಕಾಯೋಗೇ ಸರಸ್ವತ್ಯಾಂ ನಿಮಜ್ಜಯೇತ್‌ ॥೧೨॥ 
ಗಚ್ಛೇತ್ಸ ಗರುಡಾರೂಢಃ ಸ್ತೂಯಮಾನಃ ಸುರೋತ್ತಮೈಃ। 
ಸ್ನಾತ್ವಾ ಯಃ ಕಾರ್ತಿಕೇ ಮಾಸಿ ಯತ್ರ ಪ್ರಾಚೀ ಸರಸ್ವತೀ ॥ ೧೩॥ 


೬. ನರ್ಮದಾತೀರದಲ್ಲಿ ತರಕಾರಿ, ಗೆಣಸು, ಹಣ್ಣುಗಳಿಂದಲಾದರೂ 
ಒಬ್ಬ ಬ್ರಾಹ್ಮಣನಿಗೆ ಊಟಮಾಡಿಸಿದರೆ ಕೋಟ ಬ್ರಾಹ್ಮಣರನ್ನು ಭೋಜನ 
ಮಾಡಿಸಿದಷ್ಟು ಫಲವು ಲಭಿಸುವುದು. 

೭. ಅನೇಕ ಗಾವುದಗಳ ದೂರದಲ್ಲಿ ಗಂಗೆ, ಗಂಗೆ ಎಂದು ಹೇಳಿದವನೂ 
ಸಕಲ ಪಾಸಮುಕ್ತನಾಗಿ ವಿಷ್ಣುಲೋಕವನ್ನು ಸೇರುವನು. 

೮-೩೨. ಫಾಲ್ಲುನ ಬಹುಳ ಅಮಾವಾಸ್ಯೆಯಲ್ಲಿಯೂ, ಭಾದ್ರಪದ ಕೃಷ್ಣ 
ಪಕ್ಸದಲ್ಲಿಯೂ ಗಂಗೆಯನ್ನು ಹೊಂದಿ ಮಿಂದು ಪಿತೃಗಳಿಗೆ ಹಿಂಡಪ್ರದಾನ 
ಮತ್ತು ತರ್ಪಣಗಳನ್ನು ಮಾಡಿದವನು ಅಕ್ಸಯ ಫಲವನ್ನು ಹೊಂದುವನು. 
ಜ್ಯೇಷ್ಠಮಾಸದಲ್ಲಿ ವಾಪಿಯಲ್ಲಿ ಮಿಂದವನು ಎಂಭತ್ತುನಾಲ್ಕು ನರಕಗಳನ್ನು 
ನೋಡುವುದಿಲ್ಲ. ರಾಮ! ತಪತೀಸ್ಮರಣೆಯನ್ನು ಮಹಾ ಪಾಪಿಗಳು ಮಾಡಿ 
ದರೂ ಅವರ ಏಳು ಗೋತ್ರಗಳೂ, ನೂರೊಂದು ವಂಶಗಳೂ. ಉದ್ಧಾರವಾಗು 
ವುವು. ನರನು ಅತ್ಯಂತ ಪಾಪಿಯಾದಾಗ್ಯೂ ಯಮುನೆಯಲ್ಲಿ ಸ್ನಾನಮಾಡಿದರೆ 
ಅವನು ಸಮಸ್ತ ಪಾಸಮುಕ್ತನಾಗಿ ಉತ್ತಮ ಗತಿಯನ್ನು ಹೊಂದುವನು. 
ಕಾರ್ತಿಕಮಾಸದಲ್ಲಿ ಕೃತ್ತಿಕಾನಕ್ಸತ್ರಯೋಗವಿರುವಾಗ ಸರಸ್ವತೀ ನದಿಯಲ್ಲಿ 
ಮಿಂದರೆ ಅವನು ದೇವತೆಗಳಿಂದ ಹೊಗಳಿಸಿಕೊಳ್ಳುತ್ತ ಗರುಡಾರೂಢನಾಗಿ 


ಏಕತ್ರಿಂಶೋತಧ್ಯಾಯೆಃ ಷಂತ 


ಪ್ರಾಚೀಂ ಮಾಧವಮಾಸ್ತೂಯ ಸ ಗಚ್ಛೇತ್ಸರಮಾಂ ಗತಿಂ । 


ಗಂಡಕೀಪುಣ್ಯತೀರ್ಥೇ ಹಿ ಸ್ನಾನಂ ಯಃ ಕುರುತೇ ನರಃ ॥ ೧೪॥ 
ಶಾಲಗ್ರಾಮಶಿಲಾನುರ್ಚ್ಯ ನ ಭೂಯಃ ಸ್ತನಪೋ ಭನೇತ್‌ । 
ಗೋನುತೀಜಲಕಲ್ಲೋಲೈರ್ಮಜ್ಞಯೇತ್ಕೃಷ್ಣಸನ್ನಿಧೌ ॥ ೧೫ ॥ 
ಚತುರ್ಭುಜೋ ನರೋ ಭೂತ್ವಾ ವನೈಕುಂಠೇ ಮೋದತೇ ಚಿರಂ । 
ಚರ್ಮುಣ್ವತೀಂ ನಮಸ್ಕೃತ್ಯ ಅಪಃ ಸ್ಪೃಶತಿ ಯೋ ನರಃ ॥ ೧೬ ॥ 


ಸ ತಾರಯತಿ ಪೂರ್ನ್ವಜಾನ್ನಶಪೂರ್ವಾನ್ನ ಶಾ ಪರಾನ್‌ । 


ದ್ವಯೋಶ್ಚ ಸಂಗಮಂ ದೃಷ್ಟ್ಯಾ ಶ್ರುತ್ವಾ ನಾ ಸಾಗರಧ್ವನಿಂ ೧೭ ॥ 
ಬ್ರಹ್ಮಹತ್ಯಾಯುತೋ ವಾಸಿ ಪೂತೋ ಗಚ್ಛೇತ್ಸರಾಂ ಗತಿಂ 1 
ಮಾಘಮಾಸೇ ಪ್ರಯಾಗೇ ತು ಮಜ್ಜನಂ ಕುರುತೇ ನರಃ ॥ ೧೮ ॥ 
ಇಹಲೋಕೇ ಸುಖಂ ಭುಕ್ತ್ವಾ ಅಂತೇ ನಿಷ್ಣುಪದಂ ವ್ರಜೇತ್‌ । 
ಪ್ರಭಾಸೇ ಯೇ ನರಾ ರಾನು ತ್ರಿರಾತ್ರಂ ಬ್ರಹ್ಮಚಾರಿಣಃ ॥೧೯॥ 


ಯಮುಲೋಕಂ ನ ಪಶ್ಯೇಯುಃ ಕುಂಭೀಪಾಕಾದಿಕಂ ತಥಾ! 
ನೈನಿಷಾರಣ್ಯನಾಸೀ ಯೋ ನರೋ ದೇವತ್ವಮಾಪ್ಪುಯಾತ್‌ ॥ ೨೦॥ 
ದೇನಾನಾಮಾಲಯಂ ಯಸ್ಮಾತ್ತದೇನ ಭುನಿ ದುರ್ಲಭಂ | 
ಕುರುಕ್ಸೇತ್ರೇ ನರೋ ರಾಮ ಗ್ರಹಣೇ ಚಂದ್ರಸೂರ್ಯಯೋಃ ॥ ೨೧॥ 
ವೈಕುಂಠಕ್ಕೆ ತೆರಳುವನು. ಕಾರ್ತಿಕಮಾಸದಲ್ಲಿ ಪೂರ್ವದಿಕ್ಕಿಗೆ ಹರಿಯುವ 
ಸರಸ್ವತೀನದಿಯಲ್ಲಿ ಮಿಂದು ವಿಷ್ಣುವನ್ನು ಸ್ತೋತ್ರಮಾಡಿದರೆ ಉತ್ತಮಗತಿ 
ಯನ್ನು ಪಡೆಯುವನು. ಮಾನವನು ಗಂಡಕೀನದಿಯಲ್ಲಿ ಸ್ಲಾನಮಾಡಿ ಶಾಲ 
ಗ್ರಾಮಶಿಲೆಯನ್ನು ಅರ್ಚಿಸಿದರೆ ಮರಳಿ ಹುಟ್ಟುವುದಿಲ್ಲ. ಗೋಮತಿಯ ನೀರಿನ 
ಅಲೆಗಳಲ್ಲಿ ಕೃಷ್ಣನ ಹತ್ತಿರ ಮಿಂದರೆ ನರನು ನಾಲ್ಕು ತೋಳುಗಳುಳ್ಳವನಾಗಿ 
ವೈಕುಂಠದಲ್ಲಿ ಅನೇಕ ವರ್ಷ ಸಂತೋಷಸಡುವನು. ಚರ್ನುಣ್ವತೀನದಿಯನ್ನು 
ವಂದಿಸಿ ಅದರ ನೀರನ್ನು ಮುಟ್ಟಿದರೆ ಅವನು ತನ್ನ ಹಿಂದಿನ ಹತ್ತುಜನರನ್ನೂ, 
ಮುಂದಿನ ಹತ್ತು ಜನರನ್ನೂ ಉದ್ಭರಿಸುವನು. ಈ ನದಿಯು ಸಮುದ್ರವನ್ನು 
ಸೇರುವ ಸ್ಥಳವನ್ನು ನೋಡಿದವನೂ, ಸಮುದ್ರದ ಶಬ್ದವನ್ನು ಕೇಳಿದನನೂ 
ಬ್ರಹ್ಮಹತ್ಯೆಯನ್ನು ಮಾಡಿದ್ದರೂ ಪವಿತ್ರನಾಗಿ ಉತ್ತಮ ಗತಿಯನ್ನು ಪಡೆಯು 
ವನು. ಮಾಘಮಾಸದಲ್ಲಿ ಪ್ರಯಾಗದಲ್ಲಿ ಮಿಂದವನು ಈ ಲೋಕದಲ್ಲಿ ಸುಖ 
ವನ್ನನುಭವಿಸಿ ಅವಸಾನದಲ್ಲಿ ವೈಕುಂಠಕ್ಕೆ ಹೋಗುವನು. ರಾಮ! ಪ್ರಭಾಸ 
ತೀರ್ಥದಲ್ಲಿ ಮೂರು ರಾತ್ರಿ ಬ್ರಹ್ಮಚಾರಿಗಳಾಗಿದ್ದವರು ಯಮಲೋಕವನ್ನೂ, 
ಕುಂಭೀಪಾಕ ನರಕನನ್ನೂ ನೋಡಲಾರರು. ನೈಮಿಷಾರಣ್ಯವು ಭೂಮಿಯಲ್ಲಿ 
ದುರ್ಲಭವಾದ ದೇವಾಲಯವಾದುದರಿಂದ ಅದರಲ್ಲಿ ವಾಸಮಾಡುವ ನರನು 


೩೦೪ ಶ್ರೀ ಸ್ಕಾಂದಮಹಾಪುರಾಣಂ 


ಹೇಮದಾನಾಚ್ಚ ರಾಜೇಂದ್ರ ನ ಭೂಯಃ ಸ್ತನಪೋ ಭವೇತ್‌ ! 

ಶ್ರೀಸ್ಥಲೇ ದರ್ಶನಂ ಕೃತ್ವಾ ನರಃ ಪಾಸಾತ್ರ ಮುಚ್ಯತೇ ॥ ೨೨ ॥ 
ಸರ್ವದಡುಃಖನಿನಾಶೇ ಚ ವಿಷ್ಣು ಲೋಕೇ ಮಹೀಯತೇ | 

ಕಾಶ್ಯಪೀಂ ಸ್ಪರ್ಶಯೇದ್ಯೋ ಗಾಂ ಮಾನವೋ ಭುನಿ ರಾಘವ ॥ ೨೩॥ 
ಸರ್ವಕಾನುದುಘಾವಾಸಮೃಷಿಲೋಕಂ ಸ ಗಚ್ಛತಿ | 

ಉಜ್ಜ ಯಿನ್ಯಾಂ ತು ವೈಶಾಖೇ ಶಿಪ್ರಾಯಾಂ ಸ್ನಾನಮಾಚರೇತ್‌ ॥ ೨೪ ॥ 
ಮೋಚಯೇದ್ರೌರವಾದ್ಭ್ಧೋರಾತ್ಸೂರ್ವಜಾಂಶ್ಚ ಸಹಸ್ರಶಃ । 
ಸಿಂಧುಸ್ನಾನಂ ನರೋ ರಾಮ ಪ್ರಕರೋತಿ ದಿನತ್ರಯಂ ॥ ೨೫ ॥ 
ಸರ್ವಪಾಪವಿಶುದ್ಧಾತ್ಮಾ ಕೈಲಾಸೇ ನೋದತೇ ನರಃ । 

ಹಸೋಟತೀರ್ಥೇ ನರಃ ಸ್ನಾತಾ ದೃಷ್ಟ್ವಾ ಹೋಟೀಶ್ವರಂ ಶಿವಂ ॥ ೨೬ ॥ 
ಬ್ರಹ್ಮಹತ್ಯಾದಿಭಿಃ ಸಾಪೈರ್ಲಿಸ್ಯತೇ ನ ಚ ಸ ಕ್ವಚಿತ್‌ । 

ಅಜ್ಞಾನಾಮಪಿ ಜಂತೂನಾಂ ಮಹಾಂ ಮೇಧ್ಯೇತು ಗಚ್ಛತಾಂ ॥೨೭॥ 
ಪಾದೋದ್ಭೂತಂ ಪಯಃ ಪೀತ್ವಾ ಸರ್ವಪಾಪಂ ಪ್ರಣಶ್ಯತಿ । 

ನೇದವತ್ಯಾಂ ನರೋ ಯಸ್ತು ಸ್ನಾತಿ ಸೂರ್ಯೋದಯೇ ಶುಭೇ ॥ ೨೮ ॥ 
ಸರ್ವರೋಗಾತ್ರಮುಚ್ಛೇತ ಪರಂ ಸುಖಮವಾಪ್ನುಯಾತ್‌ । 

ತೀರ್ಥಾನಿ ರಾಮ ಸರ್ವತ್ರ ಸ್ನಾನಸಾನಾಂನಗಾಹನೈಃ ॥ ೨೯॥ 
ದೇವತ್ವವನ್ನು ಹೊಂದುವನು. ರಾಮ! ಕುರುಕ್ಬೇತ್ರದಲ್ಲಿ ಚಂದ್ರಸೂರ್ಯರ 
ಗ್ರಹಣಕಾಲಗಳಲ್ಲಿ ಸುವರ್ಣದಾನ ಮಾಡಿದವನು ತಿರುಗಿ ಹುಟ್ಟುವುದಿಲ್ಲ. ಸಕಲ 
ದುಃಖನಿವಾರಕವಾದ ಶ್ರೀಸ್ಕೃಳವನ್ನು ದರ್ಶನಮಾಡಿದವನು ಪಾಪಮುಕ್ತನಾಗಿ. 
ವೈಕುಂಠಲೋಕದಲ್ಲಿ ಪೂಜ್ಯನಾಗುವನು. ರಾಘವ! ಕಾಶ್ಯಪೀನದಿಯ ನೀರನ್ನು 
ಮುಟ್ಟದವನು ಸಕಲೇಷ್ಟಾರ್ಥವನ್ಲ್ನೀಯುವ ಮಹರ್ಷಿಲೋಕವನ್ನೈದುವನು. 
ಉಜ್ಜಯಿನಿಯಲ್ಲಿರುವ ಶಿಪ್ರಾನದಿಯಲ್ಲಿ ವೈಶಾಖಮಾಸದಲ್ಲಿ ಮಿಂದವನು. 
ಸಹಸ್ರಾರು ಪೂರ್ವಿಕರನ್ನು ಘೋರವಾದ ರೌರವ ನರಕದಿಂದ ಪಾರುಮಾಡು 
ವನು. ಸಿಂಧುನದಿಯಲ್ಲಿ ಮೂರು ದಿನ ಸ್ನಾನಮಾಡಿದವನು ಸಕಲ ಪಾಪ 
ಮುಕ್ತನಾಗಿ ಕೈಲಾಸದಲ್ಲಿ ಸಂತೋಷಗೊಳ್ಳುವನು. ಕೋಟತೀರ್ಥದಲ್ಲಿ 
ಸ್ನಾನಮಾಡಿ ಕೋಟೀಶ್ವರ ಶಿವನನ್ನು ದರ್ಶನಗೈ ದವನು ಬ್ರಹ್ಮಹತ್ಯಾದಿ ಪಾಷ 
ಗಳಿಂದ ಮುಕ್ತನಾಗುವನು.' ಅತ್ಯಶುದ್ಧಸ್ಥಳದಲ್ಲಿ ಸಂಚರಿಸುವ ಮೂಢ 
ಪ್ರಾಣಿಗಳೂ ವಿಷ್ಣುಪಾದೋದಕವನ್ನು ಕುಡಿದರೆ ಸಕಲ ಪಾಸಮೋಚನವಾಗು 
ವುದು. ವೇದವತೀ ನದಿಯಲ್ಲಿ ಸೂರ್ಯೋದಯದ ಕಾಲದಲ್ಲಿ ಮಿಂದವನು 
ಸಮಸ್ತರೋಗರಹಿತನಾಗಿ ಸುಖವನ್ನು ಪಡೆಯುವನು. ರಾಮ! ಎಲ್ಲೆಡೆ 
ಯಲ್ಲಿರುವ ತೀರ್ಥಗಳೂ ಸ್ನಾನ, ಪಾನಾದಿಗಳಿಂದ ಮನುಷ್ಯರ ಸಮಸ್ತ ಪಾಪ 


ಏಕತ್ರಿಂಶೋರಧ್ಯಾಯಃ ೩೦೫ 


ನಾಶಯಂತಿ ಮನುಷ್ಯಾಣಾಂ ಸರ್ವಪಾಪಾನಿ ಲೀಲಯಾ । 
ತೀರ್ಥಾನಾಂ ಪರಮಂ ತೀರ್ಥಂ ಧರ್ಮಾಂರಣ್ಯಂ ಪ್ರಚಕ್ಷತೇ ॥೩೦॥ 
ಬ್ರಹ್ಮನಿಷ್ಣುಶಿನಾದ್ಯೈೆರ್ಯದಾದೌ ಸಂಸ್ಥಾಪಿತಂ ಪುರಾ । 


ಅರಣ್ಯಾನಾಂ ಚ ಸರ್ನೇಷಾಂ ತೀರ್ಥಾನಾಂ ಚ ನಿಶೇಷತಃ ॥೩೧॥ 
ಧರ್ಮಾರಣ್ಯಾತ್ಸರಂ ನಾಸ್ತಿ ಭುಕ್ತಿಮುಕ್ತಿಪ್ರದಾಯಕಂ । ಕ 

ಸ್ವರ್ಗೇ ದೇವಾಃ ಪ್ರಶಂಸಂತಿ ಧರ್ಮಾಂರಣ್ಯನಿವಾಸಿನಃ ॥ ೩೨ ॥' 
ತೇ ಪುಣ್ಯಾಸ್ತೇ ಪುಣ್ಯಕೃತೋ ಯೇ ವಸಂತಿ ಕಲೌ ನರಾಃ । 
ಧರ್ಮಾಂರಣ್ಯೇ ರಾಮದೇನ ಸರ್ವಕಿಲ್ಬಿಷನಾಶನೇ ॥ ೩೩ ॥ 
ಬ್ರಹ್ಮಹತ್ಕಾದಿಪಾಪಾನಿ ಸರ್ವಸ್ತೇಯಕೃತಾನಿ ಚ। 

ಪರದಾರಪ್ರಸಂಗಾದಿ ಅಭಕ್ಯ್ಯಭಕ್ಸಣಾದಿ ವೈ ॥ ೩೪ ॥ 
ಅಗಮ್ಯಾಗಮನಾದ್ಯಾನಿ ಅಸ್ಪರ್ಶಸ್ಪರ್ಶನಾದಿ ಚ । 

ಭಸ್ಮೀಭವಂತಿ ಲೋಕಾನಾಂ ಧರ್ಮಾಂರಣ್ಯಾಂನಗಾಹನಾತ್‌ ॥ ೩೫॥ 


ಬ್ರಹ್ಮಪ್ನುಶ್ಚ ಕೃತಪ್ನುಶ್ಚ ಬಾಲಫ್ನೋಂನೃತಭಾಷಣಃ । 


ಬ 


ಸ್ತ್ರೀಗೋಫ್ನಶ್ಚೈನ ಗ್ರಾಮಫ್ನೋ ಧರ್ಮಾಂರಣ್ಕೇ ವಿಮುಚ್ಯತೇ ॥ ೩೬॥ 


ಗಳನ್ನು ನೀಗಿಸುವುವು. ಹಿಂದೆ ಬ್ರಹ್ಮ ನಿಷ್ಣು ಮಹೇಶ್ವರರಿಂದ ಸ್ಥಾಪಿತವಾದ 
ಧರ್ಮಾರಣ್ಯವು ತೀರ್ಥಗಳಲ್ಲೆಲ್ಲ ಉತ್ತಮತೀರ್ಥವೆನಿಸುವುದು. ಸುಖಾನುಭವ 
ಮತ್ತು ಮೋಕ್ಸವನ್ನೀಯುವ ಧರ್ಮಾರಣ್ಯಕ್ಕಿಂತ ಉತ್ತಮವಾದ ಅರಣ್ಯ 
ವಾಗಲಿ, ತೀರ್ಥವಾಗಲಿ ಯಾವುದೂ ಇರುವುದಿಲ್ಲ. ಧರ್ಮಾರಣ್ಯದಲ್ಲಿ ವಾಸ 
ಮಾಡುವವರನ್ನು ಸ್ವರ್ಗದಲ್ಲಿರುವ ದೇವತೆಗಳೂ ಹೊಗಳುತ್ತಾರೆ. 

೩೩. ಸಮಸ್ತ ಪಾಪಗಳನ್ನು ನಾಶಗೊಳಿಸುವ ಧರ್ಮಾರಣ್ಯದಲ್ಲಿ 
ಕಲಿಯುಗದಲ್ಲಿ ವಾಸಿಸುವ ನರರೇ ಪುಣ್ಯಶಾಲಿಗಳು. ಅವರೆ ಪುಣ್ಯವನ್ನು 
ಮಾಡಿದವರು. 

೩೪-೩೫. ಧರ್ಮಾರಣ್ಯದಲ್ಲಿ ಸ್ನಾನಮಾಡುವುದರಿಂದ ಜನರ ಬ್ರಹ್ಮ 
ಹತ್ಯಾದಿ ಪಾಪಗಳೂ, ಸಕಲ ವಸ್ತುಗಳನ್ನು ಕದಿಯುವುದರಿಂದುಂಬಾದ 
ಪಾಪಗಳೂ, ಪರರ ಹೆಂಡತಿಯರ ಸಂಗದಿಂದುಂಟಾದ ಪಾಪವೂ, ಸಂಗಮಾಡ 
ಬಾರದ ಹೆಂಗಸಿನ ಸಂಗದಿಂದುಂಟಾದ ಪಾಪವೂ, ಅಸ್ಪೃಶ್ಯಸ್ಪರ್ಶದಿಂದುಂಟಾದ 
ಪಾಪವೂ ಬೂದಿಯಾಗುವುವು. 

೩೬. ಬ್ರಹ್ಮಹತ್ಯೆ ಮಾಡಿದವನೂ, ಕೃತಫ್ನುನೂ, ಬಾಲಕರನ್ನು ಕೊಂದ 
ವನೂ, ಸುಳ್ಳು ಹೇಳುವವನೂ, ಸ್ತ್ರೀ ಮತ್ತು ಗೋವುಗಳನ್ನು ಕೊಂದವನೂ, 
ಗ್ರಾಮವನ್ನು ಹಾಳುಮಾಡಿದವನೂ ಪಾಸಮುಕ್ತನಾಗುವನು. 


೩೦೬ ಶ್ರೀ ಸ್ಕಾಂದಮಹಾಪುರಾಣಂ 


ನಾಂತಃ ಪರಂ ಪಾವನಂ ಹಿ ಪಾಸಿನಾಂ ಪ್ರಾಣಿನಾಂ ಭುನಿ । 

ಸ್ವರ್ಗಂ ಯಶಸ್ಕಮಾಯುಷ್ಯಂ ವಾಂಛಿತಾರ್ಥಪ್ರದಂ ಶುಭಂ ॥ ೩೭॥ 
ಕಾನಿಂನಾಂ ಕಾಮದಂ ಕ್ಷೇತ್ರಂ ಯತೀನಾಂ ಮುಕ್ತಿದಾಯಕಂ | 
ಸಿದ್ಧಾನಾಂ ಸಿದ್ಧಿದಂ ಪ್ರೋಕ್ತಂ ಧರ್ಮಾಃರಣ್ಯಂ ಯುಗೇ ಯುಗೇ॥ ೩೮ ॥ 
, ಬ್ರಹ್ಮೋವಾಚ: 

ವಸಿಷ್ಮನಚನಂ ಶ್ರುತ್ವಾ ರಾಮೋ ಧರ್ಮಭೃತಾಂ ನರಃ । 


ಪರಂ ಹರ್ಷಮನುಪ್ಪಾಪ್ಯ ಹೃದಯಾನಂದಕಾರಕಂ ॥೩೯॥ 
ಪ್ರೋತ್ಸುಲ್ಲಹೃದಯೋ ರಾನೋ ರೋಮಾಂಚಿತತನೂರುಹಃ । 
ಗಮನಾಯ ಮತಿಂ ಚಕ್ರೇ ಧರ್ಮಾಂರಣ್ಯೇ ಶುಭವ್ರತಃ ॥೪೦॥ 
ಯಸ್ಮಿನ್ಕೀಟಿಪತಂಗಾದಿಮಾನುಷಾಃ ಪಶನಸ್ತಥಾ। 

ತ್ರಿರಾತ್ರಸೇನನೇನೈವ ಮುಚ್ಯಂತೇ ಸರ್ವಸಾತಕ್ಕೈಃ ॥೪೧॥ 


ಕುಶಸ್ಥೆ ಲೀಯಥಾ ಕಾಶೀ ತಾಜಾ ಶ ಭೈರವಃ I 

ತಥಾ ನ ಮುಕ್ತಿದೋ ರಾಮ ಧರ್ಮಾಂರಣ್ಯಂ ತಥೋತ್ತಮಂ ॥ ೪೨॥ 
ತತೋ ಜಾಮಾ ಮಹೇಷ್ವಾಸೋ ಮುದಾ ಪರಮುಖ ಯುತಃ । 
ಪ್ರಸ್ಥಿತಸ್ತೀರ್ಥಯಾತ್ರಾಯಾಂ ಸೀತಯಾ ಭ್ರಾತೃಭಿಃ ಸಹ ॥ ೪೩ ॥ 

೩೭. ಪಾಪಿಗಳಾದ ಪ್ರಾಣಿಗಳಿಗೆ ಭೂಮಿಯಲ್ಲಿ ಸ್ವರ್ಗ, ಯಶಸ್ಸು, 
ಆಯುಷ್ಯ ಇಷ್ಟಾ ಗಳನ್ನು ಕೊಡುವ ಪವಿತ್ರವಾದ ಕ್ಲೇತ್ರವು ಇದಕ್ಕಿಂತ 
ಮತ್ತೊಂದಿಲ್ಲ. 

೩೮. ಧರ್ಮಾರಣ್ಯವು ಪ್ರತಿ ಯುಗದಲ್ಲಿಯೂ ಕಾಮುಕರಿಗೆ ಕಾಮವನ್ನೂ 
ಯತಿಗಳಿಗೆ ಮೋಕ್ಸವನ್ನೂ, "ಸಿದ್ಧಯೋಗಿಗಳಿಗೆ ಇಷ್ಟ ತಸಿದ್ಧಿಯನ್ನೂ ಫಸ 
ಕ್ಲೇತ್ರವಾಗಿರುವುದು. 

೩೯-೪೦. ಬ್ರಹ್ಮನು ಹೇಳುತ್ತಾನೆ:- ಧರ್ಮಾತ್ಮರಲ್ಲಿ ಶ್ರೇಷ್ಠನಾದ 
ಶ್ರೀರಾಮನು ವಸಿಷ್ಠರ ಮಾತನ್ನು ಕೇಳಿ ಅತ್ಯಂತ ಸಂತೋಷಗೊಂಡು ಅರಳಿದ 
ಮನಸ್ಸುಳ್ಳವನಾಗಿಯೂ, ರೋಮಾಂಚಗೊಂಡವನಾಗಿಯೂ ಧರ್ಮಾರಣ್ಯಕ್ಕೆ 
ಹೋಗಬೇಕೆಂದು ಇಚ್ಛಿಸಿದನು. 

೪೧. ಈ ಧರ್ಮಾರಣ್ಯವನ್ನು ಕೇಟಿ, ಮಿಡತೆ, ಮನುಷ್ಯ, ಪಶುಗಳು 
ಮೂರು ರಾತ್ರಿ ಸೇವಿಸುವುದರಿಂದ ಸಮಸ್ತ ಪಾಸಮುಕ್ತಗಳಾಗುವುವು. 

೪೨, ಕುಶಸ್ತ `ಲೀ, ಕಾಶೀ, ತ್ರಿಶೂಲಧಾರಿಯಾದ ಮಹೇಶ್ವರರಂತೆ 
ಧರ್ಮಾರಣ್ಯವು ಮುಕ್ತಿ ಯನ್ಸೀಯುವ ಉತ್ತಮ ಕ್ಷೇತ್ರವಾಗಿರುವುದು. 

೪೩, ಬಳಿಕ ರಾಮನು ಅತ್ಯ ತ ಸಂತೋಷದಿಂದ ಸೀತೆ ಮತ್ತು 
ಸಹೋದರರೊಡನೆ ತೀರ್ಥಯಾತ್ರೆಗೆ `ೂರಟನು. 


ಏಕತ್ರಿಂಶೋರಧ್ಯಾಯಃ 4೦೭ 


ಅನುಜಗ್ಮುಸ್ತದಾ ರಾಮಂ ಹನುಮಾಂಶ್ಚ ಕಪೀಶ್ವರಃ । 


ಕೌಶಲ್ಯಾ ಸ ಸುಮಿತ್ರಾ ಚ ಕೈಕೇಯಾ ಚ ಮುದಾನ್ವಿತಾ ॥ ೪೪ ॥ 
ಲಕ್ಷ್ಮಣೋ ಲಕ್ಷ್ಮಣೋಹೇತೋ ಭರತಶ್ಚ ಮಹಾನುತಿಃ । 

ಶತ್ರುಘ್ನುಃ ಸೈನ್ಯಸಹಿತೋ ಪ್ಯಯೋಧ್ಯಾ ವಾಸಿನಸ್ತ್ವಥಾ ॥ ೪೫ ॥ 
ಪ್ರಕೃತಯೋ ನರವ್ಯಾಫ್ರು ಧರ್ಮಾಃರಣ್ಯೇ ವಿನಿರ್ಯಯುಃ । 
ಅನುಜಗ್ಮುಸ್ತದಾ ರಾಮಂ ಮುದಾ ಪರಮಯಾ ಯುತಾಃ ॥ ೪೬ ॥ 
ತೀರ್ಥಯಾತ್ರಾಮವಿಧಿಂ ಕರ್ತುಂ ಗೃಹಾತ್ರಚಲಿತೋ ನೃಪಃ | 

ವಸಿಷ್ಠಂ ಸ್ಥಕುಲಾಚಾರ್ಯನಿದಮಾಹ ಮಹೀಪತೇ ॥ ೪೭ ॥ 


ಶ್ರೀರಾಮ ಉವಾಚ :-- 
ಏತದಾಶ್ಚರ್ಯಮತುಲಂ ಕಿಮಾದಿ ದ್ಹಾರಕಾಂಭವತ್‌ । 


ಕಿಯತ್ಕಾಲಸಮುತ್ಸನ್ನಾ ವಸಿಷ್ಠೇದಂ ವದಸ್ಯ ಮೇ ॥ ೪೮ 1 
ವಸಿಷ್ಠ ಉವಾಚ :-- 

ನ ಜಾನಾವಿ ಮಹಾರಾಜ ಕಿಯತ್ಕಾಲಾದಭೂದಿದಂ | 

ಲೋಮಶ್ಶೋ ಜಾಂಬವಾಂಶ್ರೈವ ಜಾನಾತೀತಿ ಚ ಕಾರಣಂ ॥೪೯॥ 


ಶರೀರೇ ಯತೃತಂ ಪಾಪಂ ನಾನಾಜನ್ಮಾಂತರೇಷ್ಟನಿ । 
ಪ್ರಾಯಶ್ಚಿತ್ತಂ ಹಿ ಸರ್ನ್ದೇಷಾಮೇತತ್ಕೇತ್ರಂ ಪರಂ ಸ್ಮೃತಂ ॥೫೦॥ 


೪೪-೪೬. ಆಗ ರಾಮನನ್ನು ಹನುಮಂತ, ಸುಗ್ರೀವ, ಕೌಸಲ್ಯಾ, 
ಸುಮಿತ್ರಾ, ಕೈಕೇಯಾ, ಲಕ್ಷ್ಮಣ, ಮಹಾನುಭಾವನಾದ ಭರತ, ಸೈನ್ಯಸಹಿತ 
ನಾದ ಶತ್ರುಘ್ನ, ಅಯೋಧ್ಯಾವಾಸಿಗಳಾದ ಪ್ರಜೆಗಳು ಇವರೆಲ್ಲರೂ ಬಹು. 
ಸಂತೋಷದಿಂದ ಹಿಂಬಾಲಿಸಿದರು. 

೪೭. ತೀರ್ಥಯಾತ್ರೆಗಾಗಿ ಮನೆಯಿಂದ ಹೊರಟ ರಾಮನು ತನ್ನ ಕುಲ. 
ಪುರೋಹಿತನಾದ ವಸಿಷ್ಮನನ್ನು ಕುರಿತು ಇಂತೆಂದನು. 

೪೮. ಶ್ರೀರಾಮನು ಹೇಳುತ್ತಾನೆ:--ವಸಿಷ್ಠರೆ! ದ್ವಾರಕೆಯು ಮೊದಲು. 
ಹೇಗಾಯಿತು? ಅದು ಹುಟ್ಟ ಎಷ್ಟು ಕಾಲವಾಯಿತು? ಈ ವಿಷಯದಲ್ಲಿ ನನಗೆ 
ಬಹಳ ಆಶ್ಚರ್ಯವಾಗಿದೆ. ಇದನ್ನು ಹೇಳಿರಿ. 

೪೯, ವಸಿಷ್ಮನು ಹೇಳುತ್ತಾನೆ:-ಮಹಾರಾಜ! ಈ ದ್ವಾರಕೆಯು ಎಷ್ಟು 
ಕಾಲದಿಂದಿದೆ ಎಂಬುದನ್ನು ನಾನರಿಯೆ. ಇದನ್ನು ಲೋಮಶನೂ ಜಾಂಬ. 
ವಂತನೂ ತಿಳಿದಿದ್ದಾರೆ. 

೫೦. ಸಮಸ್ತ ಜನರಿಗೂ ಅನೇಕ ಜನ್ಮಗಳಲ್ಲಿ ಮಾಡಿದ ಪಾಪಗಳಿಗೆ 
ಪ್ರಾಯಶ್ಚಿತ್ತಮಾಡಿಕೊಳ್ಳಲು ಇದು ಉತ್ತಮ ಕ್ಸೇತ್ರವಾಗಿದೆ. 


4೦೮ ಶ್ರೀ ಸ್ಮಾಂದಮಹಾಪುರಾಣಂ 


ಶ್ರುತ್ತೇತಿ ವಚನಂ ತಸ್ಯ ರಾಮಂ ಜಾ ನವತಾಂ ವರಃ । 


ಗಂತುಂ ಕೃತಮತಿಸ್ತೀರ್ಥಂ ಯಾತ್ರಾವಿಧಿಮಥಾಚರತ್‌ 1೫ 
ವಸಿಷ್ಮಂ ಚಾಂಗ್ರತಃ ಕೃತ್ವಾ ಮಹಾಮಾಂಡಲಿಕೈರ್ನ್ಯಪೈಃ। 
ಪುನಶ್ಚರನಿಧಿಂ ಕೃತ್ವಾ ಪ್ರಸ್ಥಿತಶ್ಹೋತ್ತರಾಂ ದಿಶಂ 1 ೫ 
ವಸಿಷ್ಮಂ ಚಾಂಗ್ರತಃ ಕೃತ್ವಾ ಪ್ರತಸ್ಥೇ ಪಶ್ಚಿಮಾಂ ದಿಶಂ | 
ಗ್ರಾಮಾಜ್ಭಾಮಮತಿಕ್ರಮ್ಯ ದೇಶಾದ್ದೇಶಂ ವನಾದ್ವನಂ n ೫ 
ನಿಮುಚ್ಯ ನಿರ್ಯಂಯೌ ರಾಮಃ ಸಸೈನ್ಯಃ ಸಪರಿಚ್ಛದಃ I 
ಗಜವಾಜಿಸಹಸ್ರೌಫೈ ರಥೈರ್ಯಾನೈಶ್ಚ ಕೋಟಭಿಃ ॥ ೫ 
ಶಿಜಿಕಾಭಿಶ್ಹಾಂಸಂಖ್ಯಾಭಿಃ ಪ್ರಯಯೌ ರಾಘವನಸ್ತದಾ । 

ಗಜಾರೂರ್ಥ ಪ್ರಪಶ್ಯ ಶ್ವ ದೇಶಾನಿ _ನಿಧಸೌಹೃದಾನ್‌ 1 ೫ 
ತ್ತೆ ೇತಾತಪತ್ರ 0 `ನಿಧೃತ್ಯ ಸಮಿ ಶುಭೇನ ಚ! 

ನೀಜಿತಶ್ತ ವನೌಘೇನ ರಾಮಸ್ತತ್ರ ಸಮಭ್ಯಗಾತ್‌ ॥ ೫ 


ವಾದಿತ್ರಾಣಾಂ ಸ್ವನೈರ್ಫೊೋರೈರ್ನ್ಯತ್ಯಗೀತಪುರಸ್ಸರೈಃ। 
ಸ್ತೂಯಮಾನೋಪಿ ಸೂತೈಶ್ಚ ಯಯೌ ರಾಮೋ ಮುದಾಸ್ಚಿತಃ॥ ೫ 
ದಶಮೇಂಹನಿ ಸಂಪ್ರಾಪ್ತಂ ಧರ್ಮಾಂರಣ್ಯಮನುತ್ತಮಂ 1 

ಅದೂಕೇ ಹಿ ತತೋ ರಾಮೋ ದೃಷ್ಟ್ಯಾ ಮಾಂಡಲಿಕಂ ಪುರಂ ॥ ೫ 

೫೧. ಜ್ಞಾನಿವರೇಣ್ಯನಾದ ರಾಮನು ವಸಿಷ್ಠನ ಈ ಮಾತನ್ನು 
ಆ ತೀರ್ಥಕ್ಕೆ ಹೋಗಲು ಪ್ರಯಾಣವಿಧಿಯನ್ನಾಚರಿಸಿದನು. 

೫೨. ವಸಿಷ್ಮನನ್ನು ಮುಂದಿರಿಸಿಕೊಂಡು ಸಾಮಂತರಾಜರೊಡನೆ ಪ್ರ? 
ವಿಧಿಯನ್ನಾಚರಿಸಿ ಉತ್ತರದಿಕ್ಕಿಗೆ ಪ್ರಯಾಣಮಾಡಿದನು. 

೫೩-೫೬. ಹಾಗೆಯೇ ವಸಿಷ್ಠನನ್ನು ಮುಂದಿರಿಸಿಕೊಂಡು ಪಶ್ಚಿಮದಿ 
ಪ್ರಯಾಣಬೆಳೆಸಿ ಸೈನ್ಯ, ಆನೆ, ಕುದುರೆ, ರಥ, ಅನೇಕ ವಾಹನ, ಪ 
ಮೊದಲಾದ ಉಪಕರಣಗಳೊಡನೆ ಗ್ರಾಮದಿಂದ ಗ್ರಾಮವನ್ನೂ, ದೇಶ! 
ದೇಶವನ್ನೂ, ಕಾಡಿನಿಂದ ಕಾಡನ್ನೂ ದಾಟ ಮುಂದೆ ಸಾಗಿದನು. ಆನೆಯ; 
ನಾನಾ ಸ್ನೇಹಿತರುಳ್ಳ ದೇಶಗಳನ್ನು ನೋಡುತ್ತ ಶ್ವೇತಚ್ಛತ್ರಧಾರಿಂ 
ಜನರಿಂದ ಚಾಮರ ಬೀಸಿಕೊಳ್ಳಲ್ಪಡುತ್ತ ಅಲ್ಲಿಗೆ ಬಂದನು. 

೫೭. ಅವನು ಪ್ರಯಾಣಮಾಡುತ್ತಿರುವಾಗ ವಾದ್ಯಗಳು ಮೊಳಗಿದ 
ನೃತ್ಯ, ಗಾನಗಳು ನಡೆದುವು. ಹೊಗಳುಭಟ್ಟ ರು ಹೊಗಳಿದರು. 

೫೮-೬೨. ಹತ್ತನೆಯ ದಿನ ಜಾ ಧರ್ಮಾರಣ ಣ್ಯವನ್ನು ಸೇರಿ! 
ಹತ್ತಿರದಲ್ಲಿ ಮಾಂಡಲಿಕ ನಗರವನ್ನು ಕಂಡು ಅಲ್ಲಿ ಆ ಚ "ಸೈನ್ಯದ 
ತಂಗಿದನು. ಧರ್ಮಾರಣ್ಯವನ್ನು ನಿರ್ಜನವೂ, ಭಯಳಿ: ವ್ಯಾಘ್ರ ; 


ಏಳತ್ರಿಂಕೋರಿಧ್ಕಾಯಃ ತಿಂ 


ತತ್ರ ಸ್ಥಿತ್ವಾ ಸಸೈನ್ಯಸ್ತಉವಾಸ ನಿಶಿ ತಾಂ ಪುರೀಂ । 

ಶ್ರುತ್ವಾ ತು ನಿರ್ಜನಂ ಕ್ಲೇತ್ರಮುದ್ವಸಂ ಚ ಭಯಾನಕಂ ॥೫೯॥ 
ವ್ಯಾಘ್ರಸಿಂಹಾಕುಲಂ ತತ್ರ ಯಕ್ಪರಾಕ್ಪಸಸೇವಿತಂ । 

ಶ್ರುತ್ವಾ ಜನನುಖಾದ್ರಾನೋ ಧರ್ಮಾಃ ರಣ್ಯಮರಣ್ಯಕಂ । 


ತಚ್ಛ್ರುತ್ವಾ ರಾಮದೇವಸ್ತು ನ ಚಿಂತಾ ಕ್ರಿಯತಾನಮಿತಿ ॥೬೦॥ 
ತತ್ರಸ್ಥಾನ್ವಣಿಜಃ ಶೂರಾನ್ನಕ್ಟ್ರಾನ್ಸುವ್ಯವಸಾಯಕೇ 1 ೬೧॥ 
ಸಮರ್ಥಾನ್ಸಿ ಮಹಾಕಾಯಾನ್ಮಹಾಬಲಪರಾಕ್ರಮಾನ್‌ । 

ಸಮಾಹೂಯ ತದಾಕಾಲೇ ವನಾಕ್ಯಮೇತದಥಾಂಬ್ರವೀತ್‌ ॥ ೬೨ ॥ 
ಶಿಬಿಕಾಂ ಸುಸುನರ್ಣಾಂ ಮೇ ಶೀಘ್ರಂ ವಾಹಯತಾಂಿರಂ । 

ಯಥಾ ಕ್ಪಕೇನ ಚೈಕೇನ ಧರ್ಮಾಃರಣ್ಯಂ ವ್ರಜಾನಮ್ಯಹಂ ॥೬೩॥ 
ತತ್ರ ಸ್ನಾತ್ವಾ ಚ ಸೀತ್ವಾ ಚ ಸರ್ವಪಾಪಾತ್ರ ಮುಚ್ಯತೇ I 

ಏವಂ ತೇ ನಣಿಜಃ ಸರ್ವೇ ರಾಮೇಣ ಪ್ರೇರಿತಾಸ್ತದಾ ॥ ೬೪॥ 
ತಥೇತ್ಯುಕ್ತ್ವಾ ಚ ತೇ ಸರ್ವೇ ಊಹುಸ್ತಚ್ಛಿಬಿಕಾಂ ತದಾ। 
ಸ್ಪೇತ್ರಮಥ್ಯೇ ಯದಾ ರಾಮಃ ಪ್ರವಿಷ್ಟಃ ಸಹ ಸೈನಿಕಃ ॥ ೬೫ ॥ 
ತದ್ಯಾನಸ್ಯ ಗತಿರ್ಮಂದಾ ಸಂಜಾತಾ ಕಿಲ ಭಾರತ । 

ಮಂದಶಬ್ದಾನಿ ವಾದ್ಯಾನಿ ಮಾತಂಗಾ ಮಂದಗಾನಿನಃ ॥ ೬೬ ॥ 
ಹಯಾಶ್ನ ತಾದೃಶಾ ಜಾತಾ ರಾಮೋ ವಿಸ್ಮಯಮಾಗತಃ । 

ಗುರುಂ ಪಪ್ರಚ್ಛ ನಿನಯಾದ್ವಸಿಷ್ಠಂ ಮುನಿಪುಂಗನಂ ॥ ೬೭॥ 





ಗಳುಳ್ಳುದೂ, ಯಕ್ಬರಾಕ್ಬಸರಿಂದ ಸೇವಿಸಲ್ಪಟ್ಟುದೂ ಆಗಿರುವುದನ್ನಾಗಿ 
ಜನರಿಂದ ತಿಳಿದು ಅವರಿಗೆ ಚಿಂತಿಸಬೇಡಿರೆಂದು ಹೇಳಿ ರಾಮನು ಅಲ್ಲಿರುವ 
ತಮ್ಮ ಕಾರ್ಯದಲ್ಲಿ ಕುಶಲರಾದ ವೈಶ್ಯರನ್ನು ಕರೆದು ಅನರನ್ನು ಕುರಿತು 
ಹೀಗೆಂದನು. 

೬೩-೬೯. “ವರ್ತಕರೆ! ಸುವರ್ಣದ ನನ್ನ ಪಲ್ಲಕ್ಕಿಯನ್ನು ಹೊತ್ತುಕೊಳ್ಳಿರಿ, 
ಅದರಿಂದ ಕೂಡಲೆ ನಾನು ಧರ್ಮಾರಣ್ಯವನ್ನು ಸೇರಿ ಅಲ್ಲಿ ಸ್ನಾನಪಾನಮಾಡಿ 
ಸಮಸ್ತ ಪಾಪಮುಕ್ತನಾಗುವೆನು?' ಎಂದು ರಾಮನು ವೈಶ್ಯರನ್ನು ಪ್ರೇರಿಸಲು 
ಅವರದನ್ನೊಸಪ್ಪಿ ಪಲ್ಲಕ್ಕಿಯನ್ನು ಹೊತ್ತರು. ರಾಮನು ಸೈನ್ಯದೊಡನೆ 
ಆ ಕ್ಸೇತ್ರದ ಮಧ್ಯವನ್ನು ಪ್ರವೇಶಿಸಿದ ಕೂಡಲೆ ಆ ವಾಹನದ ಗತಿಯ" 
ಮೆಲ್ಲಗಾಯಿತು. ವಾದ್ಯಗಳ ದನಿಯು ಕುಗ್ಗಿತು. ಆನೆಗಳೂ, ಕುದುರೆಗಳೂ 
ಮೆಲ್ಲಗೆ ನಡೆದುವು. ಅದನ್ನು ನೋಡಿ ರಾಮನು ಆಶ್ಚರ್ಯಗೊಂಡು ಗುರುಗಳಾದ 
ವಸಿಷ್ಠರನ್ನು ಕುರಿತು, "ಗುರುಗಳೆ! ವಾಹನಾದಿಗಳು ಏತಕ್ಕೆ ಮಂದಗಾಮಿ 


೩೧೦ ಶ್ರೀ ಸ್ಕಾಂದಮ ಹಾಪುರಾಣಂ 


ಕಿಮೇತನ್ಮಂದಗತಯಶ್ಚಿ ತ್ರಂ ಹೃದಿ ಮುನೀಶ್ವರ । 


ತ್ರಿಕಾಲಜ್ಹೋ ಮುನಿಃ ಪ್ರಾಹ ಧರ್ಮಕ್ಟೇತ್ರಮುಷಾಗತಂ ॥ ಓ೬೮ ॥ 
ತೀರ್ಥೇ ಪುರಾತನೇ ರಾಮ ಸಾದಚಾರೇಣ ಗಮ್ಯತೇ । 

ಏವಂ ಕೃತೇ ತತಃ ಪಶ್ಚಾತ್ಸೈನ್ಯಸೌಖ್ಯಂ ಭವಿಷ್ಯತಿ ॥೬೯॥ 
ಪಾದಚಾರೀ ತತೋ ರಾಮಃ ಸೈನ್ಯೇನ ಸಹ ಸಂಯುತಃ । 
ಮಧುವಾಸನಕೇ ಗ್ರಾಮೇ ಪ್ರಾಪ್ತಃ ಪರಮಭಾವನಃ ॥೭೦॥ 
ಗುರುಣಾ ಚೋಕ್ತ ಮಾರ್ಗೇಣ ಮಾತೃಣಾಂ ಪೂಜನಂ ಕೃತಂ । 
ನಾನೋಪಹಾರೈರ್ನಿವಿಧೈಃ ಪ್ರತಿಷ್ಠಾವಿಧಿ ಪೂರ್ವಕಂ ॥೭೧॥ 
ತತೋ ರಾಮೋ ಹರಿಕ್ಬೇತ್ರಂ ಸುನರ್ಣಾದಕ್ಸಿಣೇ ತಟೇ । 

ನಿರೀಕ್ಷ್ಯ ಯಜ್ಞಯೋಗ್ಯಾಶ್ಚ ಭೂಮಾರ್ವೈ ಬಹುಶಸ್ತಥಾ ॥ ೭೨॥ 
ಕೃತಕೃತ್ಯಂ ತದಾತ್ಮಾನಂ ಮೇನೇ ರಾಮೋ ರಘೂದ್ವಹಃ । 
ಧರ್ಮಸ್ಥಾನಂ ನಿರೀಕ್ಸ್ಞ್ಯಾಥ ಸುನರ್ಣಾಕ್ಸೋತ್ತರೇ ತಟೇ 1 ೭೩॥ 
ಸೈನ್ಯಸಂಘಂ ಸಮುತ್ತೀರ್ಯ ಬಭ್ರಾಮ ಕ್ಪೇತ್ರಮಧ್ಯತಃ । 

ತತ್ರ ತೀರ್ಥೇಷು ಸರ್ವೇಷು ದೇನತಾಯತನೇಷು ಚ ॥ ೭೪ ॥ 
ಯಥೋಕ್ತಾನಿ ಚ ಕರ್ಮಾಣಿ ರಾಮಶ್ಚಕ್ರೇ ನಿಧಾನತಃ । 

ಶ್ರಾದ್ಧಾನಿ ವಿಧಿನಚ್ಚಕ್ರೇ ಶ್ರದ್ಧಯಾ ಪರಯಾ ಯುತಃ H ೭೫ ॥ 


ಗಳಾದುವು?'' ಎಂದು ಕೇಳಿದನು. ಆಗ ತ್ರಿಕಾಲವನ್ನರಿತ ಮುನಿಗಳು ""ರಾಮ ! 
ಇಗೊ, ಧರ್ಮಕ್ಷೇತ್ರವು ಸಮಾಸಿಸಿದೆ. ಈ ಪುರಾತನ ಕ್ಲೇತ್ರದಲ್ಲಿ ಪಾದಚಾರಿ 
ಗಳಾದಕೆ ಸೈನ್ಯಕ್ಕೆ ಸುಖವಾಗುವುದು?' ಎಂದರು. 

೭೦. ಬಳಿಕ ರಾಮನು ಅವರ ಮಾತಿನಂತೆ ಸೈನ್ಯದೊಡನೆ ಕಾಲ್ನಡಿಗೆ 
ಯಿಂದ ಮಧುವಾಸನಕವೆಂಬ ಗ್ರಾಮವನ್ನು ಸೇರಿದನು. 

೭೧. ರಾಮನು ಗುರುಗಳು ಹೇಳಿದಂತೆ ಶ್ರೀ ಮಾತ್ರಾದಿಗಳನ್ನು 
ಪ್ರತಿಷ್ಮಾಪಿಸಿ ನಾನಾವಿಧ ಪೂಜಾ ಸಾಮಗ್ರಿಗಳಿಂದ ಅವರನ್ನು ಪೂಜಿಸಿದನು. 

೭೨-೭೪, ತರುವಾಯ ಅವನು ಸುವರ್ಣಾನದಿಯ ದಕ್ಷಿಣ ದಡದಲ್ಲಿ ಹರಿ 
ಕ್ಷೇತ್ರವನ್ನೂ, ಯಜ್ಞಯೋಗ್ಯವಾದ ಅನೇಕ ಭೂಮಿಗಳನ್ನೂ ಕಂಡು ನಾನು 
ಧನ್ಯನಾದೆನೆಂದು ತಿಳಿದನು. ಅನಂತರ ಸುವರ್ಣಾನದಿಯ ಉತ್ತರ ದಡದಲ್ಲಿ 
ಧರ್ಮಕ್ಟೇತ್ರವನ್ನು ಕಂಡು ಸೈನ್ಯವನ್ನು ನಿಲ್ಲಿಸಿ ಕ್ಲೇತ್ರಮಧ್ಯದಲ್ಲಿರುವ ಸಕಲ 
ತೀರ್ಥಗಳಲ್ಲಿಯೂ, ದೇವಾಲಯಗಳಲ್ಲಿಯೂ ಸಂಚರಿಸಿದನು. 

೭೫. ಅಲ್ಲಿ ವಿಧಿಯಂತೆ ಸಕಲ ಕಾರ್ಯಗಳನ್ನೂ ಶ್ರಾದ್ಧಗಳನ್ನೂ ಅತಿ 
ಶ್ರದ್ಧೆಯಿಂದ ನೆರವೇರಿಸಿದನು. 


ಏಕತ್ರಿಂಶೋಧ್ಯಾಯಃ ೩೧೧ 


ಸ್ಥಾಸಯಾಮಾಸ ರಾನೇಶಂ ತಥಾ ಕಾಮೇಶ್ವರಂ ಪುನಃ । 


ಸ್ಥಾನಾದ್ವಾಯುಪ್ರದೇಶೇ ತು ಸುವರ್ಣೋಭಯತಸ್ತಟೇ 1೩೭೬ ॥ 
ಕೃತ್ತೈನಂ ಕೃತಕೃತ್ಯೋಭೂದ್ರಾನೋ ದಶರಥಾತ್ಮಜಃ । 
ಕೃತ್ವಾ ಸರ್ವನಿಧಿಂ ಚೈನ ಸಭಾಯಾಂ ಸಮುಸಾನಿಶತ್‌ ॥ ೭೭॥ 


ತಾಂ ನಿಶಾಂ ಸ ನದೀತೀರೇ ಸುಷ್ವಾಪ ರಘುನಂದನಃ । 
ತತೋರ್ಧರಾತ್ರೇ ಸಂಜಾತೇ ರಾನೋ ರಾಜೀವಲೋಚನಃ ॥ ೭೮ ॥ 
ಜಾಗೃತಸ್ತು ತದಾ ಕಾಲ ಏಕಾಕೀ ಧರ್ಮನತ್ಸಲಃ । 


ಅಶ್ರೌಸೀಚ್ಚ ಕ್ಸಣೇ ತಸ್ಮಿನ್ರಾನೋ ನಾರೀನಿರೋದನಂ mar 
ನಿಶಾಯಾಂ ಕರುಣೈರ್ನಾಕ್ಕೈ ರುದಂತೀಂ ಕುರರೀವಿನ 1 
ಚಾರೈರ್ನಿಲೋಕಯಾಮಾಸ ರಾಮಸ್ತಾಮತಿಸಂಭ್ರಮಾತ್‌ ॥ ೪೦॥ 
ದೃಷ್ಟ್ಟ್ವಾಂತಿನಿಹ್ಟಲಾಂ ನಾರೀಂ ಕ್ರಂದಂಶೀಂ ಕರುಣೈಃ ಸ್ವರೈಃ | 

ಸೃಷ್ಟಾ ಸಾ ದುಃಖಿತಾ ನಾರೀ ರಾಮುದೂತೈಸ್ತದಾಂನಘ ॥ ೮೧॥ 


ದೂತಾ ಊಚುಃ: 
ಕಾಸಿ ತ್ವಂ ಸುಭಗೇ ನಾರಿ ದೇನೀ ವಾ ದಾನನೀ ನು 8೦1 


ಕೇನ ವಾ ತ್ರಾಸಿತಾಸಿ ತ್ವಂ ಮುಷ್ಟಂ ಕೇನ ಧನಂ ತವ ॥ ೮೨ ॥ 
ನಿಕಲಾ ದಾರುಣಾನ ಬ್ಹಾನುದ್ದಿರಂತೀ ಮುಹುರ್ಮುಹುಃ | 
ಕಥಯಸ್ವ ಯಥಾ ತಥ್ಯಂ ರಾಮೋ ರಾಜಾಂಭಿಪೃಚ್ಛತಿ ॥ ೮೩ ॥ 


. ೭೬. ಸುವರ್ಣಾನದಿಯ ಎರಡ" ದಡಗಳ ವಾಯವ್ಯ ದಿಕ್ಕಿನಲ್ಲಿ 
ರಾಮೇಶ್ವರನನ್ನೂ ಕಾಮೇಶ್ವರನನ್ನೂ ಪ್ರತಿಷ್ಠೆ ಮಾಡಿದನು. 

೭೭-೭೯, ಹೀಗೆ ರಾಮನು ಸಕಲ ಕಾರ್ಯಗಳನ್ನು ಪೂರೈಸಿ ಸಭೆಯಲ್ಲಿ 
ಕುಳಿತುಕೊಂಡನು. ಆರಾತ್ರಿ ಅವನು ನದೀದಡದಲ್ಲಿ ಮಲಗಿ ಅರ್ಧರಾತ್ರಿ ವೇಳೆ 
ಯಲ್ಲಿ ಎಚ್ಚರಗೊಂಡು ಒಬ್ಬ ಹೆಂಗಸು ಅಳುವ ಶಬ್ದವನ್ನು ಕೇಳಿದನು. 

೮೦. ರಾತ್ರಿಯಲ್ಲಿ ದೀನನುಡಿಯಿಂದ ಕುರರಿಯೆಂಬ ಪಕ್ಷಿಯಂತೆ 
ಗೋಳಾಡುತ್ತಿರುವ ಅವಳನ್ನು ಅತಿ ವೇಗವಾಗಿ ದೂತರಿಂದ ಹುಡುಕಿಸಿದನು. 

೮೧. ಕರುಣಧ್ವನಿಯಿಂದ ಗೋಳಾಡುತ್ತಿರುವ ಅತ್ಯಂತ ವ್ಯಥೆಗೊಂಡ 
ಅವಳನ್ನು ನೋಡಿ ರಾಮದೂತರು ಹೀಗೆ ಕೇಳಿದರು. 

೮೨. ದೂತರು ಹೇಳುತ್ತಾರೆ :--ಸುಂದರಿಯೆ! ನೀನಾರು? ದೇವ 
ಸ್ತ್ರೀಯೊ? ದಾನನಿಯೊ? ಯಾರಿಂದ ಭಯಗೊಂಡಿರುವೆ? ನಿನ್ನ ಧನವನ್ನು 
ಯಾರು ಕದ್ದರು? 

೮೩. ರಾಮನು ಕೇಳುತ್ತಿರುನನು. ಭಯಂಕರವಾಗಿ ಗೋಳಾಡುತ್ತಿರುವ 
ನೀನು ನಿಜ ವಿಷಯವನ್ನು ತಿಳಿಸು. 


403 ಶ್ರೀ ಸ್ಯಾಂದಮಹಾಪುರಾಣಂ 


ತಯೋಕ್ತಂ ಸ್ವಾನಿನಂ ದೂತಾಃ ಪ್ರೇಷಯಧ್ಯಂ ಮಮಾಂತಿಕಂ । 
ಯಥಾಃಹಂ ಮಾನಸಂ ದುಃಖಂ ಶಾಂತ್ಕೈ ತಸ್ಮೈ ನಿವೇದಯೇ ॥ ೮೪ ॥ 
ತಥೇತ್ಯುಕ್ತ್ವಾ ತತೋ ದೂತಾ ರಾಮುಮಾಗತ್ಯ ಚಾಬ್ರುವನ್‌ ॥ ೮೫॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ 
44 ದೂತಾಗಮನಂ ನಾಮೆ ಕತ್ರಿಂಶೋ$ದಧ್ಯಾಯಃ 


೮೪. ದೂತರೆ! ಆ ರಾಮನನ್ನು ನನ್ನ ಸಮಾಪಕ್ಕೆ ಕಳುಹಿಸಿರಿ. ನಾನು 
ನನ್ನ ಮನಸ್ಸಿನ ದುಃಖವನ್ನು ಶಾಂತಿಗಾಗಿ ಅವನಿಗೆ ತಿಳಿಸುವೆನು. 

೮೫, ಬಳಿಕ ದೂತರು ಅವಳ ಮಾತನ್ನು ಒಪ್ಪಿ ಬಂದು ರಾಮನಿಗೆ 
ಹೇಳಿದರು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯೃದಲ್ಲಿ "" ದೂತಾಗಮನ:'ವೆಂಬ 
ಮೂವತ್ತೊಂದನೆಯ ಅಧ್ಯಾಯವು ಮುಂಗಿದುದು 


॥ ಶ್ರೀಃ 
ಅಥ ದ್ವಾತ್ರಿಂಶೋಧ್ಯಾಯಃ 
ಬ್ರಹ್ಮನಾರದಸಂವಾದೇ ಸತ್ಯಮಂದಿರಸ್ನಾ ಪನವರ್ಣನಂ 
ವ್ಯಾಸ ಉವಾಚ ;-- 

ತತಶ್ಚ ರಾಮದೂತಾಸ್ತೇ ನತ್ವಾ ರಾಮುಮಥಾಂಬ್ರುವನ್‌ । 
ರಾಮ ರಾಮ ಮಹಾಬಾಹೋ ವರನಾರೀಂ ಶುಭಾನನಾಂ non 
ಸುವಸ್ತ್ರಭೂಷಾಭರಣಾಂ ಮೃದುನಾಕ್ಯಪರಾಯಣಾಂ । 
ಏಕಾಕಿನೀಂ ಕ್ರಂದಮಾನಾಂ ದೃಷ್ಟ್ಯಾ ತಾಂ ವಿಸ್ಮಿತಾ ವಯಂ nn 
ಸಮಾಪನರ್ತಿನೋ ಭೂತ್ವಾ ಪೃಷ್ಟಾ ಸಾ ಸುರಸುಂದರೀ। 
ಕಾ ತ್ವಂ ದೇವಿ ನರಾರೋಹೇ ದೇವೀ ನಾ ದಾನವೀನು ಕಿಂ nA 
ರಾಮಃ ಪೃಚ್ಛತಿ ದೇನಿ ತ್ವಾಂ ಬ್ರೂಹಿ ಸರ್ವಂ ಯಥಾತಹಂ | 
ತಚ್ಛ್ರುತ್ವಾ ವಚನಂ ರಾಮ ಸೋವಾಚ ಮಧುರಂ ನಚಃ ॥೪॥ 
ರಾಮಂ ಪ್ರೇಷಯತ ಭದ್ರಂ ವೋ ಮನು ದುಃಖಾಂಪಹಂ ಪರಂ ॥ ೫॥ 
ತಕೋ ರಾಮಸ್ತದಾಕರ್ಣ್ಳ್ಯ ಸಂಭ್ರಮಾತ್ರೃರಿತೋ ಯಯೌ । 
ದೃಷ್ಟ್ವಾ ತಾಂ ದುಃಖಸಂತಪ್ತಾಂ ಸ್ವಯಂ ದುಃಖಮವಾಪ ಸಃ । 
ಉವಾಚ ನಚನಂ ರಾಮಃ ಕೃತಾಂಜಲಿಪುಟಸ್ತದಾ ॥೬॥ 


ಕನ್ನಡದ ಅನುವಾದ 
ಸತ್ಯಮಂದಿರಸ್ಕಾ ಪನ ವರ್ಣನ 


೧-೨. ಬಳಿಕ ಆ ದೂತರು ರಾಮನನ್ನು ನಮಸ್ಕರಿಸಿ ಹೀಗೆ ನುಡಿದರು. 
“ ಸ್ವಾಮಿ! ಸುಂದರಿಯೂ, ಒಳ್ಳೆ ಬಟ್ಟೆ ಒಡವೆಗಳಿಂದಲಂಕೃತಳೂ, ಮೃದುವಾಗಿ 
ಮಾತಾಡುವವಳೂ, ಒಬ್ಬಂಟಗಳೂ ಆಗಿರುವ ಅಳುತ್ತಿರುವ ಒಬ್ಬ ಹೆಂಗಸನ 
ನೋಡಿ ನಾವು ಆಶ್ಚರ್ಯಗೊಂಡೆವು. 

೩-೫. ಅವಳ ಹತ್ತಿರಹೋಗಿ ""ಅಂಗನೆಯೆ! ನೀನಾರು, ದೇವತಾ 
ಸ್ತ್ರೀಯೊ? ದಾನನಸ್ತೀಯೊ? ರಾಮನು ನಿನ್ನನ್ನು ಕೇಳುತ್ತಾನೆ. ಇದ್ದಂತೆಯೇ 
ಎಲ್ಲವನ್ನೂ ಹೇಳು'' ಎಂದು ಕೇಳಲು ಅವಳು ನಮ್ಮ ಮಾತನ್ನು ಕೇಳಿ 
ಮಧುರವಾಗಿ "" ನನ್ನ ದುಃಖವನ್ನು ಪರಿಹರಿಸುವ ರಾಮನನ್ನು ಕಳುಹಿಸಿರಿ? 
ಎಂದಳು. 

೬, ಅದನ್ನು ಕೇಳಿ ರಾಮನು ತ್ವರೆಯಿಂದ ಅಲ್ಲಿಗೆ ಹೋಗಿ ದುಃಖಗೊಂಡ 
ಅವಳನ್ನು ಕಂಡು ತಾನೂ ವ್ಯಥೆಯಿಂದ ಕೈಮುಗಿದುಕೊಂಡು ಹೀಗೆಂದನು. 


ಸಿ 


a೪ ಶ್ರೀ ಸ್ಕಾಂದಮಹಾಪುರಾಣಂ 


ಶ್ರೀರಾಮ ಉವಾಚ: 
ಕಾ ತ್ವಂ ಶುಭೇ ಕಸ್ಯ ಪರಿಗ್ರಹೋ ವಾ 
ಕೇನಾವಧೂತಾ ವಿಜನೇ ನಿರಸ್ತಾ । 
ಮುಷ್ಟಂ ಧನಂ ಕೇನ ಚ ತಾನಕೀನಂ 


ಆಚಕ್ಟ ಮಾತಃ ಸಕಲಂ ಮಮಾಂಗ್ರೇ 1೭॥ 
ಇತ್ಯುಕ್ತ್ವಾ ಚಾಂತಿದುಃಖಾರ್ತೋ ರಾಮೋ ಮತಿಮತಾಂ ವರಃ । 
ಪ್ರಣಾಮಂ ದಂಡನಚ್ಚಕ್ರೇ ಚಕ್ರಪಾಣಿರಿನಾಃ ಪರಃ nen 
ತಯಾಭಿವಂದಿತೋ ರಾಮಃ ಪ್ರಣಮ್ಯ ಚ ಪುನಃ ಪುನಃ । 
ತುಷ್ಟಯಾ ಪರಯಾ ಪ್ರೀತ್ಯಾ ಸ್ತುತೋ ಮಧುರಯಾ ಗಿರಾ nen 
ಪರಮಾತ್ಮನ್ಪರೇಶಾನ ದುಃಖಹಾರಿನ್ಸನಾತನ । 
ಯದರ್ಥಮನತಾರಸ್ತೇ ತಚ್ಚ ಕಾರ್ಯಂ ತ್ವಯಾ ಕೃತಂ ॥ ೧೦ 1 
ರಾವಣಃ ಕುಂಭಕರ್ಣಶ್ಚ ಶಕ್ರಜಿತ್ರ್ರಮುಖಾಸ್ತಥಾ | 
ಖರದೂಷಣತ್ರಿಶಿರೋಮಾರೀಚಾಕ್ಟೃಕುಮಾರಕಾಃ 1 ೧೧॥ 
ಅಸಂಖ್ಯಾ ನಿರ್ಜಿತಾ ರೌದ್ರಾ ರಾಕ್ಬಸಾಃ ಸಮರಾಂಗಣೇ ॥ ೧೨ ॥ 


೭. ಶ್ರೀರಾಮನು ಹೇಳುತ್ತಾನೆ:-ಮಂಗಳಕರಳೆ! ನೀನಾರು? ಯಾರ 
ಹೆಂಡತಿಯು? ಯಾರು ನಿನ್ನನ್ನು ಧಿಕ್ಕರಿಸಿದರು? ನಿರ್ಜನ ಸ್ಥಳದಲ್ಲಿ ಯಾರು 
ನಿನ್ನನ್ನು ತ್ಯಜಿಸಿದರು? ನಿನ್ನ ಧನವನ್ನು ಯಾರು ಕದ್ದರು? ತಾಯೆ! ಅದನ್ನೆಲ್ಲ 
ನನ್ನ ಮುಂದೆ ಹೇಳು. 

೮. ಅತ್ಯಂತ ದುಃಖಪೀಡಿತನೂ, ಮತಿಮಂತರಲ್ಲಿ ಅಗ್ರೇಸರನೂ ಆದ 
ರಾಮನು ಹೀಗೆಂದು ಮತ್ತೊಬ್ಬ ವಿಷ್ಣು ವಿನಂತೆ ಸಾಷ್ಟಾಂಗ ಪ್ರಣಾಮವನ್ನು 
ಮಾಡಿದನು. 

೯. ಸಂತೋಷಗೊಂಡ ಅವಳೂ ರಾಮನನ್ನು ಅನೇಕ ಸಾರಿ ನಮಸ್ಕರಿಸಿ 
ದಳು. ಮತ್ತು ಅತಿಪ್ರೀತಿಯಿಂದ ಸಹಿತಳಾಗಿ ಸವಿನುಡಿಯಿಂದ ಆತನನ್ನು 
ಹೊಗಳಿದಳು. 

೧೦. ಪರೇಶನೂ, ದುಃಖನಾಶಕನೂ, ಸನಾತನನೂ ಆಗಿರುವ 
ಪರಮಾತ್ಮನೆ! ಯಾವುದಕ್ಕಾಗಿ ನೀನು ಅವತಾರಮಾಡಿರುವೆಯೊ, ಆ ಕಾರ್ಯ 
ವನ್ನು ಪೂರೈಸಿರುವೆ. 

೧೧-೧೨. ಯುದ್ಧಭೂಮಿಯಲ್ಲಿ ರಾವಣ, ಕುಂಭಕರ್ಣ, ಇಂದ್ರಜಿತ್‌, 
ಖರ, ದೂಷಣ, ತ್ರಿಶಿರ, ಮಾರೀಚ, ಅಕ್ಬಕುಮಾರ ಇವರೇ ಮೊದಲಾದ 
ಅನೇಕ ಮಂದಿ ರಾಕ್ಸಸರನ್ನು ಕೊಂದಿರುವೆ. 


ಶಿತ್ರಿಂಶೋರಧ್ಯಾಂರುಃ ೩೧೫ 


ಕಿಂ ವಚ್ಮೆ ಲೋಕೇಶ ಸುಕೀರ್ತಿಮದ್ಯತೇ 
ನೇಧಾಸ್ತ್ವದೀಯಾಂಗಜಪದ್ಮಸಂಭವಃ । 
ವಿಶ್ವಂ ನಿವಿಷ್ಟಂ ಚ ತತೋ ದದರ್ಶ 
ನಟಿಸ್ಯ ಪತ್ರೇ ಹಿಯಥಾನಟೋ ಮತಃ ॥ ೧೩॥ 
ಧನ್ಯೋ ದಶರಥೋ ಲೋಕೇ ಕೌಸಲ್ಯಾ ಜನನೀ ತವ । 
ಯಯೋರ್ಜಾಶತೋಸಿ ಗೋವಿಂದ ಜಗದೀಶ ಪರಃ ಪುಮಾನ್‌ ॥ ೧೪ ॥ 
ಧನ್ಯಂ ಚ ತತ್ಯುಲಂ ರಾಮ ಯತ್ರ ತ್ವಮಾಗತಃ ಸ್ವಯಂ | 
ಧನ್ಯಾ:ಯೋಧ್ಯಾ ಪುರೀ ರಾಮ ದೆ ಲೋಕಸ್ತ ಎದಾಶ್ರಯಃ ॥ ೧೫ ॥ 
ಧನ್ಯಃ ಸೋಸಿ ಹಿ ವಾಲ್ಮೀಕಿರ್ಯೇನ ಸು ಕೃತಂ I 
ಕವಿನಾ ವಿಪ್ರಮುಖೆ ಸಭ್ಯ ಅತ್ಮ ಬುದ್ಧ್ಯಾ ಹ್ಯನಾಗತಂ ॥ ೧೬ ॥ 
ತೃತ್ತೊ ಪಂಭವತ್ಯು ಲಂ ಚೇದಂ" ತ್ವ ಯಾ ಜೇ ಸುಪಾವಿತಂ ॥ ೧೭॥ 
ನರಪತಿಸಿತಿ ಲೋಕೈಃ ಸ ಮರ್ಯತೇ ನೈ ಷ್ಠ ವಾಂಶಃ 
ಸ್ವಯಮಸಿ ರಮಚೇಯ್ಯೆಸ್ತ ೩೦ ಗುಣ ರ್ನಿಷ್ಣು ಕೇನ । 
ಕಿಮಪಿ pS ಯದ್ವಿ ಜೆಂತ್ಯಾ ತಿ 
ತದಿಹ ಘಟಯತಸ್ತೇ ವತ್ಸ ನಿರ್ನಿಫ್ನವಂಸ್ತು ॥ ೧೮ ॥ 


೧೩. ಲೋಕನಾಥ! ನಿನ್ನ ಕೀರ್ತಿಯನ್ನು ಏನೆಂದು ಹೇಳಲಿ. ಆಲದೆಲೆ 
ಯಲ್ಲಿ ಮಲಗಿರುವ ನಿನ್ನ ದೇಹದಲ್ಲಿ ಹುಟ್ಟಿದ ಕಮಲದಿಂದ ಸಂಭೂತನಾದ 
ಬ್ರಹ್ಮನು ನಿನ್ನಲ್ಲಿ ಅಡಗಿರುವ ಸಮಸ್ತ ಲೋಕಗಳನ್ನು ನೋಡಿರುವನು. 

೧೪. ಗೋವಿಂದ! ನಗರ ನಿನ್ನನ್ನು ಮಗನನ್ನಾಗಿ ಪಡೆದಿರುವ 
ಕೌಸಲ್ಯೆ ಮತ್ತು ದಶರಥರು ಪುಣ್ಯ ನಂತರು. 

ಬ ನೀನು ಹುಟ್ಟಿದ BR ಅಯೋಧ್ಯಾನಗರಿಯೂ, ನಿನ್ನನ್ನು 
ಆಶ್ರಯಿಸಿದ ಲೋಕವೂ ಧನ್ಯವಾದುದು. 

೧೬. ಯಾವ ಬ್ರಾ ಹ್ಮಣೋತ್ತ ಮರೂ ಹೇಳದಿರುವ ರಾಮಾಯಣವನ್ನು 
ತನ್ನ ಬುದ್ಧಿಯಿಂದಲೆ ಸ್‌ ವಾಲಿ ಕೆ ಕನಿಯೂ ಧನ್ಯನು. 

೧೭-೧೮. ಸ್ವಾಮಿ! ನನ್ನಿಂದ ಈ ವಂಶವು ಅತ್ಯಂತ ಶುದ್ಧವಾಯಿತು. 
ವೈಷ್ಣನಾಂಶನಾದ ನಿನ್ನನ್ನು ಜನರು ರಾಜನೆಂದು ತಿಳಿದುಕೊಂಡಿದ್ದಾರೆ. ರಮ್ಯ 
ಗಳಾದ ಗುಣಗಳಿಂದ ನೀನು ವಿಷ್ಣುವೇ ಆಗಿದ್ದೀಯೆ. ಯಾವುದೊ ಒಂದು 
ಪ್ರಪಂಚದ ಕೆಲಸವನ್ನು ನೆರವೇರಿಸಬೇಕೆಂದು ಅವತರಿಸಿ ಅದನ್ನು ಸಾಧಿಸುತ್ತಿ 
ರುವ ನಿನಗೆ ನಿಫ್ಲವುಂಬಾಗದಿರಲಿ. 


ಕಃ ಶ್ರೀ ಸ್ಯಾಂದಮಹಾಪುರಾಣಂ 
ಸ್ತುತ್ವಾ ವಾಚಾಂಥ ರಾಮಂ ಹಿ ತ್ವಂಯಿ ನಾಥೇ ನು ಸಾಂಪ್ರತಂ । 


ಶೂನ್ಯಾ ವರ್ತೇ ಚಿರಂ ಕಾಲಂ ಯಥಾದೋಸಷಸ್ತಥೈವ ಹಿ ॥೧೯॥ 
ಧರ್ಮಾಃಂರಣ್ಯಸ್ಯ ಕ್ಲೇತ್ರಸ್ಥ ವಿದ್ಧಿ ಮಾಮಧಿದೇವತಾಂ । 

ವರ್ಷಾಣಿ ದ್ವಾದಶೇಹೈವ ಆ ದುಃಖಿತಾಸ್ಕ್ಯಹಂ w ೨೦ I 
ನಿರ್ಜನತ್ವಂ ಮಮಾಷ್ಯ ತ್ವ ಮುದ್ಧ ರಸ್ಕ ಮಹಾನುತೇ | 
ಲೋಹಾಃಸುರಭಯಾದ್ರಾ ಹು ವಿಪ್ರಾ 8 “ಸರ್ವೇ ದಿಶೋದಶ ॥ ೨೧ ॥ 
ಗತಾಶ್ಚ ವಣಿಜಃ ಸರ್ವೇ `ಯಥಾಸ್ಕಾ ನಂ ಸುದುಃಖತಾಃ । 

ಸದೈ ತೊ ಸಬ ಘಾತಿತೋ ರಾಮ ದೇಷೈ 8 ಸುರಭಯಂಕರಃ ॥ ೨೨ ॥ 
ಆಕ್ರ ಮಾ $ತ್ರ ಮಹಾಮಾಯೋ ಜುಹೂ ದುರತ್ಯಯಃ । 

ನ ತೇ ಈ "ಸಾರೂ ತದ್ದಯಾದತಿಶಂಕಿತಾಃ ॥ ೨೩ 


ಅದ್ಯ ವೈ ದ್ವಾದಶ ಸಮಾಃ ಶೂನ್ಯಾಗಾರಮನಾಥವತ್‌ । 
ಯಸ್ಮ್ಮಾಚ್ಹ ದೀರ್ಫಿಕಾಯಾಂ ಮೇ ಸ್ನಾನದಾನೋದ್ಯತೋ ಜನಃ ॥ ೨೪ ॥ 
ರಾಮ ತಸ್ಯಾಂ ದೀರ್ಫಿಕಾಯಾಂ ನಿಪತಂತಿ ಚ ಸೂಕರಾಃ । 


ಯತ್ರಾಃ0ಗನಾ ಭರ್ತೃಯುತಾ ಜಲಕ್ರೀಡಾಪರಾಯಣಾಃ ॥ ೨೫ ॥ 
ಚಿಕ್ರೀಡುಸ್ತತ್ರ ಮಹಿಷಾ ನಿಪತಂತಿ ಜಲಾಶಯೇ । 
ಯತ್ರ ಸ್ಥಾನೇ ಸುಪುಷ್ಪಾಣಾಂ ಪ್ರಕರಃ ಪ್ರಚುರೋಂಭನತ್‌ ॥ ೨೬ ॥ 


೧೯. ಹೀಗೆ ರಾಮನನ್ನು ಹೊಗಳಿ ನೀನು ನಾಥನಾಗಿರುವಾಗಲೂ ನಾನು 
ಬಹಳ ಕಾಲದಿಂದ ಶೂನ್ಯಳಾಗಿದ್ದೇನೆ. ಆ ದೋಷವು ಹಾಗೆಯೇ ಇದೆಯೆಲ್ಲ. 

೨೦. ರಾಮ! ನಾನು ಧರ್ಮಾರಣ್ಯದ ಅಧಿದೇವತೆಯು. ನಾನು 
ಹೀಗೆಯೇ ಹನ್ನೆರಡು ವರ್ಷಗಳಿಂದ ದುಃಖಗೊಂಡಿರುತ್ತೇನೆ. 

೨೧-೨೩. ನಿರ್ಜನವಾಗಿರುವ ನನ್ನ ಕ್ಷೇತ್ರವನ್ನು ಉದ್ಧಾರಮಾಡು. 
ಬ್ರಾಹ್ಮಣರೂ, ವೈಶ್ಯರೂ ಎಲ್ಲರೂ ಲೋಹಾಸುರನ ಭಯದಿಂದ ಹತ್ತು ದಿಕ್ಕು 
ಗಳಿಗೆ ಹೊರಟುಹೋಗಿದ್ದಾರೆ. ಈಗ ಭಯಂಕರನೂ, ಅತ್ಯಂತ ಮಾಯೆ 
ಯುಳ್ಳವನೂ, ತಿರಸ್ಕರಿಸಲಶಕ್ಯನೂ, ನಾಶಮಾಡಲಸಾಧ್ಯನೂ ಆಗಿರುವ ಆ ದೈತ್ಯ 
ನನ್ನು ದೇವತೆಗಳು ಕೊಂದಿರುವರು. ಆದರೂ ಅವನಿಂದ ಭಯಗೊಂಡ ಆ ಜನರು 
ಈಗ ತಿರುಗಿ ಬರಲಿಲ್ಲ. 

೨೪-೩೩. ಈಗ ಹನ್ನೆರಡು ವರ್ಷಗಳಿಂದ ರಕ್ಬಶರಿಲ್ಲದಂತೆ ಮನೆಗಳು 
ಶೂನ್ಯವಾಗಿವೆ. ಜನರು ಸ್ನಾನಮಾಡುತ್ತಿದ್ದ ಕೊಳಗಳಲ್ಲಿ ಹಂದಿಗಳು ಹೊರಳಾ 
ಡುತ್ತಿವೆ. ಅಂಗನೆಯರು ಪತಿಗಳೊಡನೆ ಜಲಕ್ರೀಡೆಯಾಡುತ್ತಿದ್ದ ಕೊಳಗಳಲ್ಲಿ 
ಕೋಣಗಳು ಮುಳುಗುತ್ತಿವೆ. ಒಳ್ಳೆ ಪುಷ್ಪಗಳ ರಾಶಿಗಳುಳ್ಳ ಸ್ಥಳದಲ್ಲಿ ಸಿಂಹ 
ವ್ಯಾಘ್ರಗಳಿಂದ ವ್ಯಾಪ್ತಗಳಾದ ಮುಳ್ಳುಮರಗಳು ಬೆಳೆದಿವೆ. ಹುಡುಗರು 


ವಮ್ಯಾತ್ರಿಂಶೋಕಧ್ಯಾಯಃ ೩೧೭ 
ತದ್ರುದ್ಧಂ ಕಂಟಿಕೈರ್ವೃಕ್ಸೈಃ ಸಿಂಹವ್ಯಾಫ್ರುಸಮಾಕುಲೈತಃ | 


ಸಂಚಿಕ್ರೀಡುಃ ಕುಮಾರಾಶ್ಚ ಯಸ್ಯಾಂ ಭೂಮೌ ನಿರಂತರಂ ॥ ೨೭॥ 
ಕುಮಾರ್ಯಶ್ಚಿತ್ರಕಾಣಾಂ ಚ ತತ್ರ ಕ್ರೀಡಂತಿ ಹರ್ಷಿತಾ । 
ಅಕುರ್ವನ್ವಾಡವಾ ಯತ್ರ ಮೇದಗಾನಂ ನಿರಂತರಂ 1 ೨೮ ॥ 


ಶಿವಾನಾಂ ತತ್ರ ಫೇತ್ಕಾರಾಃ ಶ್ರೂಯಂತೇಂತಿಭಯಂಕರಾಃ । 
ಯತ್ರ ಧೂಮೋಗ್ಲಿಹೋತ್ರಾಣಾಂ ದೃಶ್ಯತೇ ನೈ ಗೃಹೇ ಗೃಹೇ ॥ ೨೯॥ 
ತತ್ರ ದಾನವಾಃ ಸಧೂಮಾಶ್ಹ ದೃಶ್ಯಂತೇಂತ್ಯುಲ್ಪಣಾ ಭೃಶಂ | 


ನೃತ್ಯಂತೇ ನರ್ತಕಾ ಯತ್ರ ಹರ್ಷಿತಾ ಹಿ ದ್ವಿಜಾಂಗ್ರತಃ ॥ ೩೦ ॥ 
ತತ್ರೈವ ಭೂತನೇತಾಲಾಃ ಪ್ರೇತಾ ನೃತ್ಯಂತಿ ಮೋಹಿತಾಃ । 
ನೃಪಾ ಯತ್ರ ಸಭಾಯಾಂ ತು ನ್ಯಷೀದನ್ಮಂತ್ರತತ್ಸರಾಃ ॥೩೧॥ 


ತಸ್ಮಿನ್ಸ್ಟಾನೇ ನಿಷೀದಂತಿ ಗನಯಾ ಯುಕ್ಸಶಲ್ಲಕಾಃ। 


ಆನಾಸಾ ಯತ್ರ ದೃಶ್ಯಂತೇ ದ್ವಿಜಾನಾಂ ವಣಿಜಾಂ ತಥಾ ॥೩೨॥ 
ಕುಟ್ಟಿಮಪ್ರತಿಮಾ ರಾಮ ದೃಶ್ಯಂತೇಂತ್ರ ಬಿಲಾನಿ ವೈ । 

ಕೋಟರಾಣೀಹ ವೃಕ್ಸಾಣಾಂ ಗನಾಕ್ಸಾಣೀಹ ಸರ್ವತಃ ॥ ೩೩೬ 
ಚತುಷ್ಕಾ ಯಜ್ಞ ವೇದಿರ್ಹಿ ಸೋಚ್ಛಾ_್ರಯಾ ಹ್ಯಭನತ್ಪುರಾ । 

ತೇತ್ರ ವಲ್ಮೀಕನಿಚಯೈರ್ದ್ಶಶ್ಯಂತೇ ಪರಿನೇಷ್ಟಿತಾಃ ॥ 49 
ಏನಂವಿಧಂ ನಿವಾಸಂ ಮೇ ವಿದ್ಧಿ ರಾಮ ನೃಪೋತ್ತಮ | 

ಶೂನ್ಯಂ ತು ಸರ್ವತೋ ಯಸ್ಮಾನ್ನಿವಾಸಾಯ ದ್ವಿಜಾ ಗತಾಃ ॥ ೩೫॥ 


ಮತ್ತು ಹುಡುಗಿಯರು ಯಾವಾಗಲೂ ಆಡುತ್ತಿದ್ದ ಸ್ಥಳದಲ್ಲಿ ಚಿರತೆಗಳು. 
ಸಂತೋಷದಿಂದ ಆಡುತ್ತಿವೆ. ಬ್ರಾಹ್ಮಣರು ವೇದಘೋಷಮಾಡುತ್ತಿದ್ದ ಸ್ಥಳ 
ದಲ್ಲಿ ನರಿಗಳ ಅತಿ ಭಯಂಕರವಾದ ಕೂಗುಗಳು ಕೇಳುತ್ತಿವೆ. ಅಗ್ನಿಹೋತ್ರ 
ಗಳ ಹೊಗೆಯಾಡುತ್ತಿದ್ದ ಮನೆಗಳಲ್ಲಿ ಕಾಳ್ಕಿಚ್ಚುಗಳು ಅತಿ ಭಯಂಕರವಾಗಿ 
ಹೊಗೆಯಿಂದ ಕೂಡಿ ಕಾಣುತ್ತಿವೆ. ನರ್ತಕರು ಸಂತೋಷದಿಂದ ಬ್ರಾಹ್ಮಣರ 
ಮುಂದೆ ಕುಣಿಯುತ್ತಿದ್ದ ಸ್ಥಳದಲ್ಲಿ ಭೂತ, ಬೇತಾಳ, ಪ್ರೇತಗಳು ಆನಂದ. 
ಗೊಂಡು ಕುಣಿಯುತ್ತಿವೆ. ರಾಜರು ಮಂತ್ರಾಲೋಚನೆಗಾಗಿ ಕೂತುಕೊಳ್ಳು 
ತ್ತಿದ್ದ ಸಭಾಭವನದಲ್ಲಿ ಗವಯ, ಕರಡಿ, ಮುಳ್ಳುಹಂದಿಗಳು ಮಲಗುತ್ತಿವೆ. 
ಬ್ರಾಹ್ಮಣರು ಮತ್ತು ವೈಶ್ಯರ ಮನೆಗಳಿರುವ ಸ್ಥಳಗಳಲ್ಲಿ ಬಿಲಗಳು ಕಾಣಿಸು 
ಕ್ರಿನೆ. ಮರಗಳ ಪೊಟರೆಗಳೆ ಗವಾಕ್ಸಗಳಾಗಿವೆ. 

೩೪. ಹಿಂದೆ ಚೌಕವಾಗಿಯೂ, ಎತ್ತರವಾಗಿಯೂ ಇರುವ ಯಜ್ಞ 
ವೇದಿಯು ನೆಲೆಸಿದ್ದ ಸ್ಥಳದಲ್ಲಿ ಈಗ ಹುತ್ತಗಳು ಸುತ್ತಿಕೊಂಡಿನೆ. 

೩೫. ಬ್ರಾಹ್ಮಣರು ಹೊರಟುಹೋಗಿರುವುದರಿಂದ ನನ್ನ ವಾಸಸ್ಥಳವು 
ಹೀಗೆ ಶೂನ್ಯವಾಗಿದೆಯೆಂದು ತಿಳಿ. 


೩೧೪ ತ್ರೀ ಸ್ಫಾಂದಮ ಹಾಪುರಾಣಂ 


ತೇನ ಮೇ ಸುಮಹದ್ದುಃಖಂ ತಸ್ಮಾತ್ರಾಹಿ ನರೇಶ್ವರ । 

ಏತಚ್ಛ್ರುತ್ವಾ ವಚೋ ರಾಮ ಉವಾಚ ನದತಾಂ ನರಃ nat 
ಶ್ರೀರಾಮ ಉವಾಚ:- 

ನ ಜಾನೇ ತಾನಕಾನ್ಸಿಪ್ರಾಂಶ್ಚತುರ್ದಿಕ್ಸು ಸಮಾಶ್ರಿತಾನ್‌ 

ನ ತೇಷಾಂ ನೇದ್ಮ್ಯಹಂ ಸಂಖ್ಯಾಂ ನಾಮಗೋತ್ರೇ ದ್ವಿಜನ್ಮನಾಂ ॥ ೩೭ ॥ 

ಯಥಾ ಜ್ಞಾತಿರ್ಯಥಾಗೋತ್ರಂ ಯಥಾತಥ್ಯಂ ನಿನೇದಯ । 


ತತ ಆನೀಯ ಶಾನ್ಸರ್ವಾನ್ಸ ೩ಸ್ಮಾನೇ ವಾಸಯಾನ್ಯುಹಂ ॥ ೩೮॥ 
ಶ್ರೀಮಾತೋವಾಚ:- 
ಬ್ರಹ್ಮನಿಷ್ಣುಮಹೇಶೈಶ್ಚ ಸ್ಥಾನಿತಾ ಯೇ ನರೇಶ್ವರ । 
ಅಷ್ಟಾದಶಸಹಸ್ರಾಣಿ ಬ್ರಾಹ್ಮಣಾ ನೇದಪಾರಗಾಃ ॥೩೯॥ 
ತ್ರಯಾನಿದ್ಯಾಸು ನಿಖ್ಯಾತಾ ಲೋಕೇ ಸ್ಮಿನ್ನನಿತದ್ಯುತೇ | 
ಚತುಷ್ಪುಸ್ಮಿಕಗೋತ್ರಾಣಾಂ ನಾಡವಾ ಯೇ ಪ್ರತಿಷ್ಠಿತಾಃ ॥೪೦॥ 
ಶ್ರೀಮಾತಾದಾತ್ರಯಿಾ ವಿದ್ಯಾಂ ಲೋಕೇ ಸರ್ವೇ ದ್ವಿಜೋತ್ತಮಾಃ । 
ಷಟ್ರ್ರಂಶಚ್ಚ ಸಹಸ್ರಾಣಿ ನೈಶ್ಯಾ ಧರ್ಮಪರಾಯಣಾಃ ॥ ೪೧॥ 


ಆರ್ಯವೃತ್ತಾಸ್ತು ನಿಜ್ಜೇಯಾ ದ್ವಿಜಶುಶ್ರೂಷಣೇ ರತಾಃ । 
ಬಹುಲಾರ್ಕೋ ನೃಪೋ ಯತ್ರ ಸಂಜ್ಞಯಾ ಸಹ ರಾಜತೇ ॥ ೪೨ ॥ 








೩೬. ಮಹಾರಾಜ! ಅದರಿಂದ ನನಗೆ ಬಹಳ ದುಃಖವಾಗಿದೆ. ಕಾಪಾಡು 
ಎಂದು ಮೊರೆಯಿಟ್ಟಳು. ಈ ಮಾತನ್ನು ಕೇಳಿ ವಾಗ್ಮಿಯಾದ ರಾಮನು 
ಹೀಗೆಂದನು. 

೩೭-೩೮. ಶ್ರೀರಾಮನು ಹೇಳುತ್ತಾನೆ: ಡೇವಿ! ನಾಲ್ಕು ದಿಕ್ಕುಗಳಿಗೆ 
ಚದರಿಹೋದ ಬ್ರಾಹ್ಮಣರೆಷ್ಟೆಂಬುದನ್ನೂ, ಅವರ ಹೆಸರು ಮತ್ತು ಗೋತ್ರ 
ಗಳನ್ನೂ ನಾನರಿಯೆನು. ಅವರ ಬಂಧುಗಳನ್ನೂ, ಗೋತ್ರಗಳನ್ನೂ ತಿಳಿಸು. 
ಅಲ್ಲಿಂದವರನ್ನೆಲ್ಲ ಕರೆತಂದು ಅವರವರ ಸ್ಥಳದಲ್ಲಿ ವಾಸಮಾಡಿಸುವೆನು. 

೩೯-೪೨. ಶ್ರೀಮಾತೆಯು ಹೇಳುತ್ತಾಳೆ :--ಮಹಾರಾಜ! ಬ್ರಹ್ಮ ವಿಷ್ಣು 
ಮಹೇಶ್ವರರು ವೇದಪಾರಂಗತರೂ, ಪ್ರಸಂಚದಲ್ಲಿ ವೇದನಿದ್ಯೆಯಲ್ಲಿ 
ಪ್ರಖ್ಯಾತರೂ ಆಗಿರುವ ಅರವತ್ತನಾಲ್ಕು ಗೋತ್ರಗಳಲ್ಲಿ ಹುಟ್ಟದ ಶ್ರೀಮಾತೆ 
ಯಿಂದ ವೇದನಿದ್ಯೆಯನ್ನು ಪಡೆದ ಹದಿನೆಂಟು ಸಾವಿರ ಬ್ರಾಹ್ಮಣರನ್ನೂ, 
ಧರ್ಮದಲ್ಲಿ ಆಸಕ್ತರೂ, ಯೋಗ್ಯನಡತೆಯುಳ್ಳವರೂ, ಬ್ರಾಹ್ಮಣರ ಸೇವೆಯಲ್ಲಿ 
ಫಿರತರೂ ಆಗಿರುವ ಮೂವತ್ತಾರು ಸಾವಿರ ವೈಶ್ಯರನ್ನೂ ಸ್ಥಾಪಿಸಿದರು. ಇಲ್ಲಿ 
ಖಹುಲಾರ್ಕನೆಂಬವನು ರಾಜನಾಗಿದ್ದನು. 


ದ್ವಾತ್ರಿಂಶೋ8ಧ್ಯಾಯಃ ೩೧೯ 


ಕುಮಾರಾವಶ್ವಿನೌ ದೇವೌ ಧನದೋ ನ್ಯಯಪೂರಕಃ | 

ಅಧಿಷ್ಮಾತ್ರೀ ತ್ವಹಂ ರಾಮ ನಾಮ್ನಾ ಭಟ್ಟಾರಿಕಾ ಸ್ಮೃತಾ ॥ ೪೩ ॥ 
ಶ್ರೀಸೂಶ ಉವಾಚ: 

ಸ್ಥಾ 'ನಾಚಾರಾಶ್ಚ ಯೇ ಕೇಚಿತ್ಯುಲಾಚಾರಾಸ್ತ ಥೈನ ಚ । 


ಶ್ರಿ ಮಾತಾ ಕಥಿತಂ ಸರ್ವಂ ರಾಮಸ್ಕಾಂಗ್ರೇ ಪುರಾತನಂ ॥ ೪೪ ॥ 
ತಸ್ಯಾ ಸ್ತು ವಚನಂ ಶ್ರುತ್ವಾ ರಾನೋ ಮುಡಮನಾಪ ಹ । 

ಸತ್ಯಂ ಸತ್ಯಂ ಪುನಃ ಸತ್ಯಂ “ಸತ್ಯಂ ಹಿ ಭಾಷಿತಂ ತ್ವಯಾ ॥ ೪೫ ॥ 
ಯಸ್ಮಾತ್ಸತ್ಯಂ ತ್ವಯಾ ಪ್ರೋಕ್ತಂ ತನ್ನಾಮ್ನಾ ನಗರಂ ಶುಭಂ | 
ವಾಸಯಾಮಿ ಜಗನ್ಮಾತಃ ಸತ್ಯಮಂದಿರಮೇವ ಚ ॥ ೪೬ ॥ 
ತ್ರೈಲೋಕ್ಯೇ ಖ್ಯಾತಿಮಾಪ್ಟೋತು ಸತ್ಯಮಂದಿರಮುತ್ತಮಂ ॥ ೪೭॥ 
ಏತದುಕ್ತ್ಯಾತತೋ ರಾಮಃ ಸಹಸ್ರಶತಸಂಖ್ಯಯಾ । 
ಸ್ವಭೃತ್ಯಾನ್ಛ್ರೇಷಯಾಮಾಸ ನಿಪ್ರಾನಯನಹೇತನೇ ॥ ೪೮ ॥ 


ಯಸ್ಮಿನ್ಹೇಶೇ ಪ್ರದೇಶೇ ನಾ ವನೇ ವಾ ಸರಿತಸ್ತಜೇ। 

ಪರ್ಯಂತೇ ವಾ ಯಥಾಸ್ಥಾನೇ ಗ್ರಾಮೇ ವಾ ತತ್ರತತ್ರ ಚ ॥೪೯॥ 
ಧರ್ಮಾಃರಣ್ಯನಿನಾಸಾಶ್ಚ ಯಥಾ ಯತ್ರ ದ್ವಿಜೋತ್ತಮಾಃ । 
ಅರ್ಥಸಾದ್ಯೈಃ ಪೂಜಯಿತ್ವಾ ಶೀಘ್ರಮಾನಯತಾಂತ್ರ ತಾನ್‌ ॥ ೫೦॥ 

೪೩. ಅಶ್ವಿನೀದೇವತೆಗಳೂ, ವೆಚ್ಚಕ್ಕೆ ಹಣಗಳನ್ನು ಒದಗಿಸುವ ಕುಬೇರನೂ, 
ಭಟ್ಟಾರಿಕೆ ಎಂಬ ಹೆಸರನ್ನು ಪಡೆದ ಅಧಿದೇವತೆಯಾದ ನಾನೂ ಮಾತ್ರ ಇದ್ದೆವು. 

೪೪. ಶ್ರೀ ಸೂತನು ಹೇಳುತ್ತಾನೆ:--ಶ್ರೀಮಾತೆಯು ರಾಮನಿಗೆ ಸ್ಥಳದ 
ಆಚಾರಗಳನ್ನೂ, ವಂಶದ ಆಚಾರಗಳನ್ನೂ ಹೇಳಿದಳು. 

೪೫. ರಾಮನು ಅವಳ ಮಾತನ್ನು ಕೇಳಿ ಸಂತೋಷಗೊಂಡು ನೀನು 
ಸತ್ಯವನ್ನು ನುಡಿದಿರುವೆ. 

೪೬-೪೭. ತಾಯೆ! ಆದ್ದರಿಂದ ಈ ನಗರವನ್ನು ಸತ್ಯಮಂದಿರವೆಂದು 
ಕರೆಯುವೆನು. ಇದು ಉತ್ತಮವಾದ ಸತ್ಯಮಂದಿರನೆಂದು ತ್ರಿಭುವನದಲ್ಲಿ 
ಪ್ರಸಿದ್ಧಿಗೊಳ್ಳಲಿ. 

೪೮. ರಾಮನು ಹೀಗೆಂದು ಬ್ರಾಹ್ಮಣರನ್ನು ಕರೆಯುವುದಕ್ಕಾಗಿ ಲಕ್ಷ 
ಮಂದಿ ತನ್ನ ಸೇವಕರನ್ನು ಕಳುಹಿಸಿದನು. 

೪೯-೫೦. ಚು ಸ್ವ ವಾಸವಾಗಿದ್ದ ಬ್ರಾಹ್ಮಣವರ್ಯರು ಯಾವ 
ದೇಶಕ್ಕಾಗಲಿ, ಯಾವ ಪ ಪ್ರದೇಶಕ್ಕಾಗಲಿ, ಬಸವ ES ಯಾವ ನದೀ 
ದಡಕ್ಕಾಗಲಿ ಹೋಗಿರಲಿ, ಅವರನ್ನು ಅರ್ಥ್ಯಪಾದ್ಯಾದಿಗಳಿಂದ ಪೂಜಿಸಿ ಶೀಘ್ರ 
ವಾಗಿ ಕರೆತನ್ಸಿರಿ. 


೩೨ರ ಶ್ರೀ ಸ್ಕಾಂದಮಹಾಪುರಾಣಂ 


ಅಹಮತ್ರ ತದಾ ಭೋಶ್ಸ್ಯೇ ಯದಾ ದ್ರಕ್ರ್ಯೇ ದ್ವಿಜೋತ್ತಮಾನ್‌ ॥೫೧॥ 
ವಿಮಾನ್ಯ ಚ ದ್ವಿಜಾನೇತಾನಾಗಮಿಷ್ಯತಿ ಯೋ ನರಃ । 


ಸಮೇ ವಧ್ಯಶ್ವ ದಂಡ್ಯಶ್ಚ ನಿರ್ವಾಸ್ಯೋ ವಿಷಯಾದ್ಬಹಿಃ 1 ೫೨ ॥ 
ತಚ್ಛು ತ್ಬಾ ದಾರುಣಂ ವಾಕ್ಯಂ ದುಃಸಹಂ ದುಪ್ರಧರ್ಷಣಂ | 
ಶಾಮಾಜ್ಞಾಕಾರಿಣೋ ದೂತಾ ಗತಾಃ ಸರ್ವೇ ದಿಶೋ ದಶ 1 ೫೩ ॥ 
ಶೋಧಿತಾ ವಾಡವಾಃ ಸರ್ವೇ ಲಬ್ಗಾಃ ಸರ್ವೇ ಸುಹರ್ಷಿತಾಃ । 
ಯಥೋಕ್ತೇನ ನಿಧಾನೇನ ಅರ್ಥಪಾದ್ಯೈ ರಪೂಜಯನ್‌ ॥ ೫೪ ॥ 
ಸ್ತುತಿಂ ಚಕ್ರುಶ್ಚ ವಿಧಿನದ್ವಿನಯಾಚಾರಪೂರ್ವಕಂ | 

ಆಮಂತ್ರ್ಯ ಚ ದ್ವಿಜಾನ್ಸರ್ನಾನ್ರಾಮವಾಕ್ಕ್ಯಂ ಪ್ರಕಾಶಯನ್‌ ॥ ೫೫ ॥ 


ತತಸ್ತೇ ನಾಡವಾಃ ಸರ್ಮೇ ದ್ವಿಜಾಃ ಸೇನಕಸಂಯುತಾಃ । 
ಗಮನಾಯೋದ್ಯತಾಃ ಸರ್ವೇ ವೇದಶಾಸ್ತ್ರಪರಾಯಣಾಃ ೨ NEN 
ಆಗತಾ ರಾಮಪಾರ್ಶ್ರಂ ಚ ಬಹುಮಾನಪುರಸ್ಸರಾಃ । 


ಸಮಾಗತಾಸ್ವ್ವಿಜಾನ್ಹೃಷ್ಟ್ಟಾ ರೋಮಾಂಚಿತತನೂರುಪಃ  ॥೫೭॥ 
ಕೃತಕೃತ್ಯನಿವಾತ್ಮಾನಂ ಮೇನೇ ದಾಶರಥಿರ್ನೃಸಃ । 
ಸ ಸಂಭ್ರಮಾತ್ಸಮುತ್ಕಾಯ ಪದಾತಿಃ ಪ್ರಯಯೌ ಪುರಃ ॥ ೫೮ ॥ 





೫೧. ನಾನು ಬ್ರಾಹ್ಮಣರನ್ನು ಕಾಣುವವರೆಗೂ ಭೋಜನವನ್ನು ಮಾಡು 
ವುದಿಲ್ಲ. 

೫೨, ಈ ಬ್ರಾಹ್ಮಣರನ್ನು ಅವಮಾನ ಮಾಡಿ ಬರುವವನು ವಥೆಗೂ, 
ಶಿಕ್ಷೆಗೂ, ದೇಶಭ್ರಷ್ಟತೆಗೂ ಯೋಗ್ಯನಾಗುವನು ಎಂದು ರಾಮನು 
ಆ ಭೃತ್ಯರಿಗೆ ಹೇಳಿಕಳುಹಿಸಿದನು. 

೫೩. ದೂತರು ಕಠಿನವೂ, ಸಹಿಸಲಾಗದುದೂ, ತಿರಸ್ಕರಿಸಲಸಾಧ್ಯವೂ 
ಆಗಿರುವ ರಾಮನ ಆ ಮಾತನ್ನು ಕೇಳಿ ಅವನ ಅಪ್ಪಣೆಯನ್ನು ನೆರವೇರಿಸು 
ವುದಕ್ಕಾಗಿ ದಿಕ್ಕು ದಿಕ್ಕುಗಳಿಗೆ ಹೊರಟರು. 

೫೪. ಅವರು ಹುಡುಕಿ ಬ್ರಾಹ್ಮಣರನ್ನೆಲ್ಲ ಕಂಡುಹಿಡಿದು ಸಂತೋಷ 
ಗೊಂಡು ಅವರನ್ನು ಅರ್ಫ್ಯಾದಿಗಳಿಂದ ವಿಧಿಯಂತೆ ಪೂಜಿಸಿದರು. 

೫೫. ಆ ಬ್ರಾಹ್ಮಣರನ್ನು ರಾಮಸೇವಕರು ಸ್ತುತಿಗೈದು ನಿನಯದಿಂದ 
ರಾಮನ ಮಾತನ್ನು ಹೇಳಿದರು. 

೫೬-೫೯. ಬಳಿಕ ವೇದಶಾಸ್ತ್ರಪಾರಂಗತರಾದ ಬ್ರಾಹ್ಮಣರೆಲ್ಲ ಸೇವಕ 
ಕೊಡನೆ ಬಹುಮಾನ ಸಹಿತರಾಗಿ ರಾಮನ ಹತ್ತಿರಕ್ಕೆ ಬಂದರು. ದಶರಥನ 
ತನಯನಾದ ರಾಮನು ಬಂದಿರುವ ಬ್ರಾಹ್ಮಣರನ್ನು ಕಂಡು ರೋಮಾಂಚ 
ಫೊಂಡು ನಾನು ಧನ್ಯನಾದೆನೆಂದು ತಿಳಿದನು. ಸಂಭ್ರಮದಿಂದೆದ್ದು ಕಾಲ್ನಡಿಗೆ 


ಹ್ವಾತ್ರಿತಕೋರಿಧ್ಯಾಯಃ "೩೨೧ 


ಕರಸಂಪುಟಿಕಂ ಕೃತ್ವಾ ಹರ್ಷಾಃತ್ರು ಪ್ರತಿಮುಂಚೆಯನ್‌ । 


ಜಾನುಭ್ಯಾಮವನಿಂ ಗತ್ವಾ ಇದಂ ವಚನಮುಬ್ರನೀತ್‌ 1 BF 
ನಿಪ್ರಪ್ರಸಾದಾತ ಮಲಾವರೋ ಹಂ 
ವಿಪ್ರಪ್ರಸಾದಾದ್ಧರಣೀಧರೋಹಂ | 
ನಿಪ್ರಪ್ರಸಾದಾಜ್ಞಗತೀಪತಿಶ್ಚ 
ವಿಪ್ರಪ್ರಸಾದಾನ್ಮಮ ರಾಮನಾನು 1೬೦॥ 


ಇತ್ಯೇನಮುಕ್ತಾ ರಾಮೇಣ ವಾಡವಾಸ್ತೇ ಪ್ರಹರ್ಷಿತಾಃ । 
ಜಯಾಶೀರ್ಭಿಃ ಪ್ರಪೂಜ್ಯಾಂಥ ದೀರ್ಫಾಯುರಿತಿ ಚಾಂಬ್ರುವನ್‌ ॥ ೬೧ ॥ 
ಆನರ್ಜಿತಾಸ್ತೇ ರಾಮೇಣ ಪಾದ್ಯಾರ್ಥ್ಯವಿಷ್ಟರಾದಿಭಿಃ । 


ಸ್ತುತಿಂ ಚಕಾರ ನಿಪ್ರಾಣಾಂ ದಂಡವತ್ರಣಿಸತ್ಯ ಚ 1 ೬೨॥ 
ಕತ ಸೈ ತಾಂಜಲಿಪುಟಃ ಸ್ಥಿ ತ್ತಾ ಚಕ್ರೇಸಾದಾಂಭಿನಂದನಂ । 

ಫಸ ವಿಚಿತ್ರಾ ಣಿ ಹೆ ಮಾನ್ಯಾ ಭರಣಾನಿ ಚ ॥ ೬೩ 
ಸಮರ್ಪಯಾನೂಸ ಚ ಜೀ ದಶರಥಾತ್ಮಜಃ । 
ಅಂಗುಲೀಯಕವನಾಸಾಂಸಿ ಉಪವೀತಾನಿ ಕರ್ಣಕಾನ್‌ 1 ೬೪॥ 
ಪ್ರದದೌ ವಿಪ್ರಮುಖ್ಯೇಭ್ಯೋ ನಾನಾವರ್ಣಾಶ್ಚ ಧೇನವಃ । 
ಏಕೈಕಶತಸಂಖ್ಯಾಕಾ ಘಹಟೋಧ್ಲೀಶ್ವ ಸವತ್ಸಕಾಃ ॥ ೬೫ ॥ 





ಯಿಂದ ಮುಂದೆ ಬಂದು ಕೈಜೋಡಿಸಿಕೊಂಡು ಆನಂದಬಾಷ್ಟಗಳನ್ನು ಸುರಿಸುತ್ತ 
ಮೊಣಕಾಲೂರಿ ನಮಸ್ಕರಿಸಿ ಇಂತೆಂದನು. 

೬೦. ""ನಾನು ಬ್ರಾಹ್ಮಣರ ಅನುಗ್ರಹದಿಂದ ಕಮಲಾಪತಿಯೂ, ಭೂಮಿ 
ಯನ್ನು ಹೊತ್ತವನೂ, ಜಗದೊಡೆಯನೂ, ರಾಮನೆಂದು ಹೆಸರುಳ್ಳವನೂ 
ಆದೆನು.?? 

೬೧. ರಾಮನು ಹೀಗೆ ನುಡಿಯಲು ಆ ಬ್ರಾಹ್ಮಣರು ಹರ್ಷಗೊಂಡು 
ಜಯಾಶೀರ್ವಾದದಿಂದ ಅವನನ್ನು ಪೂಜಿಸಿ ದೀರ್ಫಾಯುಷ್ಮಂತನಾಗೆಂದು 
ಹೇಳಿದರು. 

೬೨. ರಾಮನು ಆ ಬ್ರಾಹ್ಮಣರಿಗೆ ಪಾದ್ಯ, ಅರ್ಫೈ, ಆಸನಾದಿಗಳನ್ನಿತ್ತು 
ಪೂಜಿಸಿ ಸಾಷ್ಟಾ ಂಗಪ ಪ್ರ ಣಾಮಮಾಡಿ ಸ್ಫುತಿಸಿದನು. 

ಬ ಜ್‌ ಕೈಮುಗಿದುಕೊಂಡು ನಾನಾನಿಧವಾದ ಸುವರ್ಣಾ 
ಭರಣಗಳನ್ನೂ, ಉಂಗುರ, ವಸ್ತ್ರ ಯಜ್ಞೋಪವೀತ, ಕುಂಡಲಗಳನ್ನೂ 
ಕೊಟ್ಟು ಒಬ್ಬೊಬ್ಬ ಬ್ರಾಹ್ಮಣನಿಗೂ ಕರುವು, ವಸ್ತ್ರ, ಘಂಟಿಗಳಿಂದ ಸಹಿತ 
ವಾಗಿಯೂ, ಚಿನ್ನದ ಕೊಂಬುಗಳಿಂದ ಅಲಂಕೃತವಾಗಿಯೂ, ಬೆಳ್ಳಿ ಗೊರಸು 
ಗಳುಳ್ಳುವುಗಳಾಗಿಯೂ, ತಾಮ್ರದ ಬೆನ್ನಟ್ಟುಗಳುಳ್ಳವುಗಳಾಗಿಯೂ ಇರುವ 

11 


.&43 ಶ್ರೀ ಸ್ಕಾಂಡಮಹಾವಪುರಾಣಂ 
ಸನಸ್ವ್ರಾ ಬದ್ಭಘಂಟಾಶ್ಚ ಹೇಮಶೃಂಗತಿಭೂಸಿತಾಃ ! 
ರೂಪ್ಯಖುರಾಸ್ತಾಮ್ರಪೃಸಷ್ಠೀಃ ಕಾಂಸ್ಕಪಾತ್ರಸಮನ್ನಿತಾಃ ॥ ೬೬॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಮೇ "ಬ್ರಹ್ಮ 
ನಾರದಸಂವಾದೇ ಸತ್ಯಮಂದಿರಸ್ಕಾ ಪನವರ್ಣನಂ?'ನಾಮ ದ್ವಾತ್ರಿಂಶೋಂಧ್ಯಾಯಃ 





ಮಡಿಕೆ ಕೆಚ್ಚಲಿನ ನೂರು ಗೋವುಗಳನ್ನು ಕಂಚಿನ ಪಾತ್ರೆಗಳೊಡನೆ ದಾನ 
ಮಾಡಿದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮದಲ್ಲಿ ಬ್ರಹ್ಮನಾರದ ಸಂವಾದದಲ್ಲಿ "" ಸತ್ಯಮಂದಿರಸ್ಕಾಪನವರ್ಣನ''ವೆಂಬ 
ಮೂವತ್ತೆರಡನೆಯ ಅಧ್ಯಾಯವು ಮಂಗಿದುದು 


ಶ್ರೀಃ 
ಅಥ ತ್ರಯಸ್ಪ್ರಿಂಶೋಧ್ಯಾಯಃ 


ಶ್ರೀರಾಮಚಂದ್ರಸ್ಯ ಪುರಪ್ರತ್ಯಾಗಮನವರ್ಣನಂ 


ರಾಮ ಉವಾಚ: 
ಜೀರ್ಣೋದ್ಧಾರಂ ಕರಿಷ್ಯಾಮಿ ಶ್ರೀಮಾತುರ್ವಚನಾದಹಂ । 
ಆಜ್ಞಾ ಪ್ರದೀಯತಾಂ ಮಹ್ಯಂ ಯಥಾಜಾನಂ ದದಾಮಿ ವಃ ॥೧॥ 
ಪಾತ್ರೇ ದಾನಂ ಪ್ರದಾತವ್ಯಂ ಕೃತ್ವಾ ಯಜ್ಞನರಂ ದ್ವಿಜಾಃ । 
ನಾಃಪಾತ್ರೇ ದೀಯತೇ ಕಂಚಿದ್ದತ್ತಂ ನ ತು ಸುಖಾವಹಂ ॥೨॥ 


ಸುಪಾತ್ರಂ ನೌರಿನ ಸದಾ ತಾರಯೇದುಭಯೋರನಿ | 
ಲೋಹಸಪಿಂಡೋಪಮಂ ಚ್ಲೇಯಂ ಕುಪಾತ್ರಂ ಭಂಜನಾತ್ಮಕಂ ॥೩॥ 
ಜಾತಿಮಾತ್ರೇಣ ವಿಪ್ರತ್ವಂ ಜಾಯತೇ ನಹಿ ಭೋ ದ್ವಿಜಾಃ । 
ಕ್ರಿಯಾ ಬಲನತೀ ಲೋಕೇ ಕ್ರಿಯಾಹೀನೇ ಕುತಃ ಫಲಂ ॥೪॥ 
ಪೂಜ್ಯಾಸ್ತಸ್ಮಾತ್ಪೂಜ್ಯತಮಾ ಬ್ರಾಹ್ಮಣಾಃ ಸತ್ಯವಾದಿನಃ । 
ಯಜ್ಞಕಾರ್ಯೆೇ ಸಮುತ್ಸನ್ನೇ ಕೃಷಾಂ ಕುರ್ವಂತು ಸರ್ವದಾ ॥೫॥ 
ಕನ್ನಡದ ಅನುವಾದ 
ಶ್ರೀರಾಮಚಂದ್ರನ ಪುರಪ್ರತ್ಯಾಗಮನವರ್ಣನ 


೧. ರಾಮನು ಹೇಳುತ್ತಾನೆ: ದ್ವಿಜರಿ! ನಾನು ಶ್ರೀಮಾತೆಯ ಅಪ್ಪಣೆ 
ಯಂತೆ ಈ ಕ್ಸೇತ್ರದ ಜೀರ್ಣೋದ್ಧಾರವನ್ನು ಮಾಡುವೆನು. ನಿಮಗೆ ದಾನ 
ಕೊಡುವೆನು. ನೀವು ಅನುಮತಿಯನ್ನು ಕೊಡಿರಿ. 

೨. ವಿಪ್ರರೆ! ಯಜ್ಞವನ್ನು ಮಾಡಿ ಸತ್ಪಾತ್ರನಲ್ಲಿ ದಾನಮಾಡಬೇಕು. 
ಅಪಾತ್ರನಿಗೆ ನೀಡಿದ ದಾನವು ಸುಖದಾಯಕವಲ್ಲ. 

೩. ಸತ್ಪಾತ್ರನು ನಾವೆಯಂತೆ ಕೊಡುವ ಮತ್ತು ತೆಗೆದುಕೊಳ್ಳುವ 
ಇಬ್ಬರನ್ನೂ ಉದ್ಭರಿಸುವನು. ಕುಪಾತ್ರನು ಒಡೆದುಹೋಗುವ ಲೋಹದ 
ಮುದ್ದೆಯಂತಿರುವನು. 

೪. ಬ್ರಾಹ್ಮಣರೆ! ವಿಪ್ರಜಾತಿಯಲ್ಲಿ ಜನಿಸಿದ ಮಾತ್ರದಿಂದ ಬ್ರಾಹ್ಮಣ 
ನಾಗುವುದಿಲ್ಲ. ಬ್ರಾಹ್ಮಣನಿಗೆ ಕರ್ಮವು ಬಲಿಷ್ಕ್ಠವಾದುದು. ಅದಿಲ್ಲದಿದ್ದರೆ 
ಪ್ರಯೋಜನವಿಲ್ಲ. 

೫. ಸತ್ಯವನ್ನು ನುಡಿಯನ ಬ್ರಾಹ್ಮಣರು ಅತ್ಯಂತ ಪೂಜ್ಯರು. ಈಗ 
ಒದಗಿದ ಯಜ್ಞ, ಕಾರ್ಯದಲ್ಲಿ ನೀವು ದಯೆಯನ್ಸಿಡಬೇಕು. 


೩೨೪ ಶ್ರೀ ಸ್ಕಾಂದಮ ಹಾಪುರಾಣಂ 


ಬ್ರಹ್ಮೋವಾಜ:- 
ತತಸ್ತು ಮಿಲಿತಾಃ ಸರ್ವೇ ನಿಮೃಶ್ಯ ಚ ಪರಸ್ಪರಂ 
ಕೇಚಿದೂಚುಸ್ತದಾ ರಾಮಂ ನಯಂ ಶಿಲೋಂಛಜೀವಿಕಾಃ ॥೬॥ 
ಸಂತೋಷಂ ಪರಮಾಸ್ಕಾಯ ಸ್ಥಿ ಸಿತಾ ಧರ್ಮಪರಾಯಣಾಃ। 
ಪ್ರತಿಗ್ರಹಪ್ರಯೋಗೇಣ ನ ಚಾಂಸ್ಕಾ ಕಂಪ್ರ ಯೋಜನಂ nen 
ದಕಸೂನಾಸಮಶ್ನೆಕ್ರ € ದಶಚಕ್ರಿ ಸನೋ ಧ್ವಜ; | 
ದಶಧ್ಯಜಸಮಾ ವೇಶ್ಯಾ ದಶನೇಶ್ಯಾಸಮೋ ನೃಪಃ He 
ರಾಜಪ್ರತಿಗ್ರಹೋ ಘೋರೋ ರಾಮ ಸತ್ಯಂ ನ ಸಂಶಯಃ । 
ತಸ್ತಾ ದ್ವಯಂ ನ ಚೇಚ್ಛಾಮಃ ಪ್ರ ಪ್ರತಿಗ್ರಹಂ *ಯಾನಹಂ ॥೯॥ 
ಏಕಾಹಿಕಾ ದ್ವಿಜಾಃ ಕೇಚಿತ್ವೆ ಜಿತ್ಸಾ `ಮೃತವೃತ್ತ ತ್ಮಯಃ । 
ಕುಂಭೀಧಾನ್ಯಾ ದ್ವಿಜಾಃ ಕೇಚಿತ್ರೇ ಚಿತ್ಸಟ್ಟಿರ್ಮತತ್ಸರಾಃ ॥ ೧೦॥ 
ತ್ರಿ ಮೂರ್ತಿಸ್ಥಾ ನಿಶಾ ಸರ್ವೇ ಸ ಥಗ್ಳಾ ವಃ ಪ್ರ ಥಗ್ನು ಣಾಃ । 
ಇೇಜಿದೇನಂ ನೆದಂತಿ ಸ್ಮ ತ್ರಿ RR ನ್‌ಜ್ಞಾ 0 ನನಾ ನಯಂ 1 ೧೧॥ 


$ 
ಪ್ರತಿಗ್ರ ಹಸ್ಯ ಸ್ವೀಕಾರಂ “ಕಸಂ ಕುರ್ಯಾನುಹೇ ದ್ವಿಜಾಃ । 


ನ ತಾಂ ಸ್ತ್ರೀಕೃತಂ ನೋ ಹೃದ್ಮೋ ದಾನೇನ ಭಾಷಿತಂ ॥ ೧೨॥ 
೬-೭ ಬ್ರಹ್ಮನು ಹೇಳುತ್ತಾನೆ: ಬಳಿಕ ಆ ಬ್ರಾ ಹ್ಮಣರೆಲ್ಲ ಸೇರಿ 

ಕೋಟಿ); ಟಿ ರಾಮ! ನಾವು ಕಾಳಾರಿಸಿಕೊಂಡು ಜೀವಿಸುತ್ತ ಸಂತೋಷದಿಂದ 

ಧರ್ಮಾಸಕ್ತರಾಗಿದ್ದೇವೆ. ನಮಗೆ ದಾನಸಿ ್ರೀಕಾರದಿಂದ ಪ್ರಯೋಜನವಿಲ್ಲ. 

೮. ಒಬ್ಬ ಕುಂಬಾರನು ಹತ್ತು ಕಟುಕರಿಗೆ ಸಮಾನನು. ಒಬ್ಬ ಹೆಂಡ 
ಮಾರುವವನು ಹತ್ತುಮಂದಿ ಕುಂಬಾರರಿಗೆ ಸಮಾನನು. ಒಬ್ಬ ಸೂಳೆಯ" 
ಹತ್ತುಮಂದಿ ಹೆಂಡಮಾರುವನರಿಗೆ ಸಮಾನಳು. ಒಬ್ಬ ರಾಜನು ಹತ್ತುಮಂದಿ 
ಸೂಳೆಯರಿಗೆ ಸಮಾನನು. 

೯. ರಾಮ! ರಾಜನ ಸ್ವತ್ತಿನ ಸ್ವೀಕಾರವು ಅತಿ ಘೋರವಾದುದು, 
ಸಂಶಯವಿಲ್ಲ. ಆದುದರಿಂದ ನಾವು ಭಯಂಕರವಾದ ಈ ಪ್ರತಿಗ್ರಹವನ್ನು 
ಬಯಸುವುದಿಲ್ಲ. 

೧೦-೧೨. ಆ ಬ್ರಾಹ್ಮಣರಲ್ಲಿ ಕೆಲವರು ಒಂದು ದಿನದ ಆಹಾರವುಳ್ಳವರು. 
ಕೆಲವರು ಸಲಹ ಕೆಲವರು ಮಡಿಕೆಯಲ್ಲಿ ತುಂಬಿದ ಧಾನ್ಯಮಾತ್ರ 
ವುಳ್ಳವರು. ಕೆಲವರು ಷಟೃರ್ಮಿಗಳು, ಹೀಗೆ ತ್ರಿಮೂರ್ತಿಗಳಿಂದ ಸ್ಥಾನಿತರಾದ 
ಆ ಬ್ರಾಹ ್ಮಣರು ಬೇರೆ ಬೇಕೆ ಭಾವನೆ ಗುಣಗಳುಳ್ಳ ವರು. ಅವರಲ್ಲಿ ಕೆಲವರು 
« ತಾಂಬೂಲವನ್ನೂ, ದಾನವನ್ನೂ ತೆಗೆದುಕೊಳ್ಳ ಬಿದ್ದ ನಾವು ತ್ರಿಮೂರ್ತಿಗಳ 
ಆಜ್ಞೆ ಯಿಲ್ಲದೆ ರಾಜನಿಂದ ಪ್ರತಿಗ್ರಹನನ್ನು ಹೇಗೆ ಸ್ವೀಕರಿಸುವೆವು'' ಎಂದರು. 


ತ್ರಯಸ್ವಿಂತೋಳಧ್ಯಾಯ& 4೨೫ 
ವಿಪ್ಭುಶ್ಯ ಸ ತದಾ ರಾಮೋ ವಸಿಷ್ಮೇನ ಮಹಾತ್ಮನಾ । : 


ಬ್ರಹ್ಮನಿಷ್ಣುಶಿನಾದೀನಾಂ ಸಸ್ಮಾರ ಗುರುಣಾ ಸಹ ॥ ೧೩ ॥ 
ಸ್ಮೃತಮಾತ್ರಾಸ್ತತೋ ದೇವಾಸ್ತಂ ದೇಶಂ ಸಮುಪಾಗಮನ್‌ । 
ಸೂರ್ಯಕೋಟಪ್ರತೀಕಾಶನಿಮಾನಾವಲಿಸಂವೃತಾಃ ॥ ೧೪॥ 
ರಾಮೇಣ ತೇ ಯಥಾನ್ಯಾಯಂ ಪೂಜಿತಾಃ ಪರಯಾ ಮುದಾ । 
ನಿನೇದಿತಂ ತು ತತ್ಸರ್ವಂ ರಾಮೇಣಾಂತಿಸುಬುದ್ಧಿ ನಾ ॥ ೧೫॥ 
ಅಧಿದೇವ್ಯಾ ನಚನತೋ ಜೀರ್ಣೋದ್ಧಾ ರಂ ಕರೋಮ್ಯ ಪಂ । 
ಧರ್ಮಾಂರಣೈ  ಹರಿಕ್ಬ್ಸೇತ್ರೇ ಧರ್ಮಕೂಪಸಮಿಪತಃ' ॥ ೧೬ ॥ 


ತತಸ್ತೇ ನಾನಾ! ಸರ್ವೇ ತ್ರಿಮೂರ್ತಿಃ ಪ್ರಣಿಸತ್ಯ ಚ! 
ಮಹತಾ ಹರ್ಷವೃಂದೇನ ಪೂರ್ಣಾಃ ಪ್ರಾ ಪ್ರ ್ರ ಮನೋರಥಾಃ ॥ ೧೭॥ 
ಅರ್ಥ್ಯಪಸಾದ್ಯಾ ದಿವಿಧಿನಾ ಶ ಶ್ರದ್ಧ ಯಾ ತಾನಪೂಜಯನ್‌ | 


ಕ್ಚಣಂ ವಿಶ್ರ ನ್ಯು ತೇ ಜೀನಾ ಬ್ರ ಹ್ಮನಿಷ್ಣುಶಿನಾವಯಃ ॥ ೧೮ ॥ 

i ನಾಂ ಮಹಾಶಕ್ತಿಂ ವಿನಯಾ ತ ಶಿ ತಸಂಪುಟಿಂ ॥೧೯॥ 
ದೇವಾ ಊಚುಃ 

ದೇವದ್ರುಹಸ್ತ್ಯಯಾ ರಾಮ ಯೇ ಹತಾ ರಾನಣಾದಯಃ । 

ತೇನ ತುಷ್ಟಾ ವಯಂ ಸರ್ವೇ ಭಾನುವಂಶನಿಭೂಷಣ ॥೨೦॥ 





೧೩-೧೪. ಆಗ ಶ್ರೀರಾಮನು ವಸಿಷ್ಕರೊಡನೆ ಆಲೋಚಿಸಿ ತ್ರಿಮೂರ್ತಿಗಳೆ 
ಮೊದಲಾದ ದೇವತೆಗಳನ್ನು ಸ್ಮರಿಸಿದನು. ಕೂಡಲೆ ಅವರು ಕೋಟಸೂರ್ಯ 
ರಂತಿರುವ ವಿಮಾನಗಳಲ್ಲಿ ಕುಳಿತು ಅಲ್ಲಿಗೆ ಬಂದನು. 

೧೫-೧೬. ರಾಮನು ಅತಿ ಸಂತೋಷಗೊಂಡು ಶಾಸ್ತ್ರರೀತಿಯಿಂದ 
ಅವರನ್ನು ಪೂಜಿಸಿ ಸಕಲವನ್ನೂ ತಿಳುಹಿದನು. 

೧೭, ""ಅಧಿರೆಳವತೆಯಾದ ಶ್ರೀಮಾತೆಯ ಮಾತಿನಿಂದ ನಾನು ಧರ್ಮಾರಣ್ಯ 
ಕ್ಲೇತ್ರದ ಧರ್ಮ ಪದ ಬಳಿ ಜೀರ್ಣೋದ್ಧಾರಮಾಡುವೆನು'' ಎಂದು ರಾಮನು 
ಹೇಳಿದನು. 

೧೮೨೧೯. ಅನಂತರ ಕೈಗೂಡಿದ ಮನೋರಥವುಳ್ಳ ಆ ಬ್ರಾಹ್ಮಣರೆಲ್ಲ 
ಸಂತೋಷಗೊಂಡು ತ್ರಿಮೂರ್ತಿಗಳನ್ನು ವಂದಿಸಿ ಅರ್ಫ್ಯಪಾದ್ಯಾದಿಗಳಿಂದ 
ಶ್ರದ್ಧಾಯುಕ್ಷರಾಗಿ ಅವರನ್ನು ಅರ್ಚಿಸಿದರು. ಬ್ರಹ್ಮಾದಿ ದೇವತೆಗಳು ಸ್ವಲ್ಪ 
ಹೊತ್ತು ವಿಶ್ರಮಿಸಿಕೊಂಡು ವಿನಯದಿಂದ ಕೈಜೋಡಿಸಿಕೊಂಡಿರುವ ಅದ್ಭುತ 
ಶಕ್ತಿಯುಳ್ಳ ರಾಮನನ್ನು ಹೀಗೆಂದರು. 

೨೦-೨೧. ದೇವತೆಗಳು ಹೇಳುತ್ತಾರೆ :-ಸೂರ್ಯವಂಶಕ್ಕೆ ಲಲಾಮನಾದ 
ರಾಮನೆ! ನೀನು ಡೇವಡ್ರೋಹಿಗಳಾದ ರಾವಣಾದಿಗಳನ್ನು ಕೊಂದುದರಿಂದ 


ask ಶ್ರೀ 'ಸ್ಕಾಂಡೆಮುಹಾಪುರಾಣಂ 


ಉದ್ಧ ರಸ್ತ ಮಹಾಸ್ಥಾನಂ ಮಹತೀಂ ಕೀರ್ತಿಮಾಪ್ಲುಹಿ ॥ ೨೧ ॥ 
ಅಬ್ಬಾ ಇ ತೇಷಾಮಾಜ್ಞಾ ಂತು ಪ್ರೀತೋ ದಶರಥಾತ್ಮ! ಜಃ । 
ಜೀರ್ಣೋದ್ಧಾ ರೇನಂತಗೊಣಂ ಫರಮಿಚ್ಛ ಸ್ನಿಲಾಪತಿಃ ॥ ೨೨ ॥ 
ದೇವಾನಾಂ ಸನ್ನಿಧೌ ತೇಷಾಂ ಕಾರ್ಯಾರಂಭಮಥಾಂಕರೋತ್‌ । 
ಸ್ಥಂಡಿಲಂ ಪೂರ್ವತಃ ಕೃತ್ವಾ ಮಹಾಗಿರಿಸಮಂ ಶುಭಂ ॥ ೨೩ ॥ 
ತೆಸ್ಕೊ ಪರಿ ಬಹಿಃಶಾಲಾ ಗೃಹಶಾಲಾಹ್ಯನೇಕಶಃ । 

ಬ್ರಹ್ಮ 'ಾಲಾಶ್ವ ಬಹುಶೋ "ಇರ್ನ್ಹುಮೇ 'ಕೋಭನಾಕೃ ತೀಃ ॥ ೨೪ ॥ 
ನಿಧಾನೈತ್ಚ ಸಮಾಯುಕ್ತಾ ಗೃಹೋಪಕರಣೈರ್ವ್ವತಾಃ। 
ಸುವರ್ಣಕೋಟಸಂಪೂರ್ಣಾ ಸ ಶಸವಸಾ ೨ ದಿಪೂರಿತಾಃ ॥ 2೫ ॥ 
ಧನಧಾನ್ಯಸಮೃದ್ಧಾಶ್ಚ ಸರ್ವಧಾತುಯುತಾಸ್ತ ಥಾ। 
ಏತತ್ಸರ್ವಂ ಕಾರಯೆತ್ವಾ ಬ್ರಾಹ್ಮಣೇಭ್ಯಸ್ತದಾ ದದೌ ॥ ೨೬॥ 
ಏಕೈ ಕೋ ದಶದಶ ದನೌ ಥೇನೊಃ ಪಯಸ್ಸಿನೀಃ । 
ಹತ್ಮಾರಂಗೃತ: ಪ್ರಾದಾದ್ಭ್ಟ್ರಾಮಾಣಾಂ ಚತುರಾಧಿಕಂ ॥ ೨೭॥ 
ತ್ರೈನಿಧ್ಯದ್ವಿಜನಿಪ್ರೇಭ್ಯೋ ರಾಮೋ ದಶರಥಾತ್ಮಜಃ । 
ಕಾಜೇಶೇನ ತ್ರಯೇಣೈನ ಸ್ಥಾಪಿತಾ ದ್ವಿ ಜಸತ್ತ ನಾಃ ॥ ೨೮ ॥ 
ತಸ್ಮಾ ತ್ರ ಯಾ ವಿದ್ಯ ಖ್ಯಾ ತಿರ್ಲೊಕಕೇ ಬಳೂನ ಹ। 
ಏನಂವಿದಂ ದಿ ಜೇಧ್ಯಃ ಸ ದತ್ತಾ ದಾನಂ ಮಹಾಮ್ಭು ತಂ ॥೨೯॥ 


ನಾವೆಲ್ಲ ಸಂತೋಷಗೊಂಡಿರುವೆವು. ಈ ಮಹಾಕ್ಸೇತ್ರವನ್ನು ಉದ್ಭರಿಸಿ 
ಕೀರ್ತಿವಂತನಾಗು. 

೨೨-೨೬. ಮಹಾರಾಜನಾದ ರಾಮನು ಆ ದೇವತೆಗಳ ಆಜ್ಞೆಯನ್ನು 
ಪಡೆದು ಜೀರ್ಣೋದ್ಧಾರ ಮಾಡಿ ವಿಪುಲ ಫಲವನ್ನು ಗಳಿಸಲಿಚ್ಛೆಯಿಂದ ದೇವತೆ 
ಗಳ ಸನ್ನಿಧಿಯಲ್ಲಿ ಕಾರ್ಯನನ್ನಾರಂಭಿಸಿದನು. ಮೊದಲು ದೊಡ್ಡ ಬೆಟ್ಟದಂತೆ 
ಮನೋಹರವಾದ ಶುದ್ಧಾಂಗಣವನ್ನು ಏರ್ಪಡಿಸಿ ಅದರಲ್ಲಿ ನಿಧಿಗಳಿಂದಲೂ, 
ಗೃಹಸಾಮಗ್ರಿಗಳಿಂದಲೂ, ಧನಧಾನ್ಯಗಳಿಂದಲೂ, ಸಪ್ತಧಾತುಗಳಿಂದಲೂ 
ತುಂಬಿದ ಮನೋಹರವಾದ ಹೊರತೊಟ್ಟಿಗಳನ್ನೂ , ಗೃಹೆಶಾಲೆಗಳನ್ನೂ , 
ಬ್ರಹ್ಮಶಾಲೆಗಳನ್ನೂ ನಿರ್ಮಿಸಿ ಅವೆಲ್ಲವನ್ನೂ ಬ್ರಾಹ್ಮಣರಿಗೆ ದಾನಮಾಡಿದನು. 

೨೭-೩೬. ಒಬ್ಬ ಬ್ರಾಹ್ಮಣನಿಗೆ ಹತ್ತು ಹತ್ತು ಹಾಲನ್ನು ಕರೆಯುವ ಹಸು 
ಗಳನ್ನು ದಾನಮಾಡಿದನು. ಹಾಗೆಯೇ ರಾಘವನು ತೈನಿಧ್ಯದ್ವಿಜರಿಗೆ ನಾಲ್ಕು 
ಸಾವಿರದ ನಾನೂರು ಗ್ರಾಮಗಳನ್ನು ಹಂಚಿದನು. ತ್ರಿಮೂರ್ತಿಗಳು 
ಈ ಬ್ರಾಹ್ಮಣರನ್ನು ಸ್ಥಾಪಿಸಿದ್ದರಿಂದ ಇವರು ತೈವಿಧ್ಯರೆಂದು ಲೋಕದಲ್ಲಿ 
ಪ್ರಖ್ಯಾತರಾದರು. ಈ ರೀತಿ ರಾಮನು ಬ್ರಾಹ್ಮಣರಿಗೆ ದಾನ ಮಾಡಿ ತಾನು 


ತ್ರಯಸ್ವಿಂಶೋರಧ್ಯಾಯಃ ೩೨೩ 


ಆತಾ ನಂ ಚಾಪಿ ಮೇನೇ ಸ ಕೃ ತಕೃತ್ಯಂ ನರೇಶ್ವ ರಃ । 


ಬ್ರಹ್ಮ ಣಾ ಸ್ಥಾಪಿತಾಃ ಪೂರ್ವಂ "ನಷ್ಟು ನಾ ಶಂಕರೇಣ ಯೇ i ೩೦ ॥ 
ತೇ ಪೂಜಿತಾ *ಕಾಘನೇಣ ಜೀರ್ಣೋದ್ಧಾ ರೇ ಕೃತೇ ಸತಿ । 
ಷಟ್ಟ್ರಂಶಚ್ಚ ಸಹಸ್ರಾಣಿ ಗೋಭುಜಾ ಯೇ ವಣಿಗ ರಾಃ ॥೩೧॥ 
ಶುಶೊ ್ರಷಾರ್ಥಂ ಪ್ರ ದತ್ತಾ ವೈ ದೇವೈ ರ್ಹರಿಹರಾದಿಭಿಃ | 
ಸಂತುಪ್ಟೇನ ತು ಕರ್ನೇಣ ತೇಭ್ಯೋ "ದತ್ತಂ ತು ಚೇತನಂ N೩೨ 
ಶ್ವೇತಾಶ್ವಚಾಮರೌ ದತ್ತೌ ಖಡ್ಗಂ ದತ್ತಂ ಸುನಿರ್ಮಲಂ । 
ತದಾ ಪ್ರಜೋಧಿತಾಸ್ತೇ ಚ ದ್ವಿಜಶುಶ್ರೂಷಣಾಯ ವೈ ॥ ೩೩ ॥ 


ನಿವಾಹಾದೌ ಸದಾ ಭಾವ್ಯಂ ಚಾಮರೈರ್ಮಂಗಲಂ ವರಂ | 
ಖಡ್ಗಂ ಶುಭಂ ತದಾ ಧಾರ್ಯಂ ಮಮ ಚಿಹ್ನಂ ಕರೇ ಸ್ಥಿತಂ ॥ ೩೪॥ 
ಗುರುಪೂಜಾ ಸದಾ ಕಾರ್ಯಾ ಕುಲದೇವ್ಯಾಃ ಪುನಃ ಪುನಃ । 
ವೃದ್ಧ್ಯಾಗಮೇಷು ಪ್ರಾಹ್ತೇಷು ವೃದ್ಧಿದಾಯಕದಕ್ಲಿಣಾ ॥ ೩೫ ॥ 
ಏಕಾದಶ್ಯಾಂ ಶನೇರ್ವಾರೇ ದಾನಂ ದೇಯಂ ದ್ವಿಜನ್ಮನೇ । 
ಪ್ರದೇಯಂ ಬಾಲವೃದ್ಧೇಜಭ್ಯೋ ಮಮ ರಾಮಸ್ಕ ಶಾಸನಾತ್‌ ॥ ೩೬॥ 
ಮಂಡಲೇಷು ಚ ಯೇ ಶುದ್ಧಾ ವಣಿಗ್ಚೃತ್ತಿರತಾಃ ಪರಾಃ । 
ಸಸಾದಲಕ್ಸಾಸ್ತೇ ದತ್ತಾ ರಾಮಶಾಸನಸಾಲಕಾಃ ॥ ೩೭॥ 
ಧನ್ಯನಾದೆನೆಂದು ತಿಳಿದನು. ಹೀಗೆ ರಾಮನು ಜೀರ್ಣೋದ್ಧಾರ ಮಾಡಿ 
ಕ್ರಿಮೂರ್ತಿಗಳಿಂದ ಸ್ಥಾವಿತರಾದ ಆ ಬ್ರಾಹ್ಮಣರನ್ನು ಪೂಜಿಸಿದನು. ಈ 
ಬ್ರಾಹ್ಮಣರ ಸೇವೆಗಾಗಿ ತ್ರಿಮೂರ್ತಿಗಳು ಸ್ಥಾಪಿಸಿದ ಮೂನತ್ತಾರುಸಾವಿರ 
ಗೋಪಾಲಕರಾದ ವೈಶ್ಯರಿಗೆ ಶಿವನು ಸಂತುಷ್ಟನಾಗಿ ಜ್ಞಾನದಾನ ಮಾಡಿದ್ದನು. 
ರಾಮನು ಆ ವೈಶ್ಯರಿಗೆ ಬಿಳಿ ಕುದುರೆ, ಚಾಮರ, ನಿರ್ಮಲವಾದ ಕತ್ತಿಗಳು 
ಇವುಗಳನ್ನಿತ್ತು “ವೈಶ್ಯರೆ! ನೀವು ಬ್ರಾಹ್ಮಣರ ಸೇವೆಯನ್ನು ಮಾಡಬೇಕು. 
ವಿವಾಹ ಮೊದಲಾದ ಉತ್ಸವಗಳಲ್ಲಿ ಚಾಮರವನ್ನೂ , ಹಿಡಿಯಲ್ಲಿ ನನ್ನ ಚಿಹ್ನೆ 
ಯುಳ್ಳ ಮಂಗಳಕರವಾದ ಕತ್ತಿಯನ್ನೂ ಧರಿಸಬೇಕು. ಯಾವಾಗಲೂ ಗುರು 
ಗಳನ್ನೂ, ದೇವಿಯನ್ನೂ ಆರಾಧಿಸಬೇಕು. ಸಂಪತ್ಸಮೃದ್ಧಿಯಾಗಲು 
ಏಕಾದಶೀದಿನದಲ್ಲಿಯೂ, ಶಥಿವಾರದಲ್ಲಿಯೂ ಬ್ರಾಹ್ಮಣರಿಗೂ, ಬಾಲಕರು 
ಮತ್ತು ಮುದುಕರಿಗೂ ವೃದ್ಧಿದಕ್ಸಿಣೆಯನ್ನು ನನ್ನ ಅಪ್ಪಣೆಯಂತೆ ಕೊಡ 
ಬೇಕು” ಎಂದು ಎಚ್ಚರಿಸಿದನು. 

೩೭. ದೇಶಗಳಲ್ಲಿ ಶುದ್ಧರೂೂ ವಾಣಿಜ್ಯದಲ್ಲಿ ಆಸಕ್ತರೂ, ಅಪ್ಪಣೆಯನ್ನು 
ಪಾಲಿಸುವವರೂ ಆಗಿರುವ ಒಂದು ಲಕ್ಬದ ಇಪ್ಪತ್ತೈದುಸಾವಿರ ವರ್ತಕರನ್ನು 
ರಾಮನು ಅಲ್ಲಿ ಸ್ಥಾಪಿಸಿದನು. 


೩೨೮ ಶ್ರೀ ಸ್ಕಾಂದಮಹಾತುರಾಣಂ 


ಮಾಂಡಲೀಕಾಸ್ತು ತೇ ಜ್ಞೇಯಾ ರಾಜಾನೋ ಮಂಡಲೇಶ್ವರಾಃ I 


ದ್ವಿಜಶುಶ್ರೂಷಣೇ ದತ್ತಾ ರಾಮೇಣ ವಣಿಜಾಂ ನರಾಃ ॥ ೩೮ ॥ 
ಚಾಮರದ್ದಿತಯಂ ರಾಮೋ ದತ್ತವಾನ್ಪಡ್ಗ್ಸಮೇವ ಚೆ। 

ಕುಲಸ್ಯ ಸ್ವಾಮಿನಂ ಸೂರ್ಯಂ ಪ್ರತಿಸ್ಥಾನಿಧಿಪೂರ್ವಕಂ ॥೩೯॥ 
ಬ್ರಹ್ಮಾ ಜ್‌ ಸ್ಥಾ ಪಯಾಮಾಸ ಚತುರ್ನೇದ ಸಮನ್ಸಿತಂ । 

Ny ಶ್ರೇಮಾತರಂ ನುಹಾಶಕ್ತಿ ೦ ಶೂನ್ಯಸ್ವಾಮಿ ಹರಿಂ ತಥಾ ॥ ೪೦॥ 
ನಿಘ್ನಾ ಸಧ್ವಂಸನಾರ್ಥಾಯ ದಲ್ಲಿ ಇದ್ದಾ ರಸಂಸ್ಥಿ ತಂ! 

ಗಣಂ ಸಂಸ್ಥಾ ಪಯಾಮಾಸ ತಥಾಃನ್ಯಾಕ್ಷಿನ ದೇನತಾಃ ॥೪೧॥ 
ಕಾರಿತಾಸೆ ಸ್ತ್ರೇನೆ ನೀರೇಣ ಪ್ರಾಸಾದಾಃ ಸಪ್ತಭೂಮಿಕಾಃ । 
ಯತ್ನಿಂಚಿತ್ಯುರುತೇ ಕಾರ್ಯಂ ಶುಭಂ ಮಾಂಗಲ್ಯರೂಪಕಂ ॥ ೪೨ ॥ 


ಪುತ್ರೇ ಜಾತೇ ಜಾತಕೇ ವಾಂನ್ನಾಶನೇ ಮುಂಡನೇಸಿ ವನಾ। 
ಲಕ್ಷಹೋನೇ ಕೋಟಿಹೋಮೇ ತಥಾ ಯಜ್ಞಕ್ರಿಯಾಸು ಚ ॥೪೩॥ 
ವಾಸ್ತುಪೂಜಾಗ್ರಹಶಾಂತ್ಯೋಃ ಪ್ರಾಪ್ತೇ ಚೈನ ಮಹೋತ್ಸವೇ । 
ಯತ್ಕಿಂಚಿತ್ಯುರುತೇ ದಾನಂ ದ್ರವ್ಯಂ ನಾ ಧಾನ್ಯಮುತ್ತಮಂ ॥ ೪೪ ॥ 
ವಸ್ತ್ರಂ ವಾ ಧೇನವೋ ನಾಥ ಹೇಮುರೂಪ್ಯಂ ತಥೈವ ಚ | 
ನಿಪ್ರಾಣಾಮಥ ಶೂದ್ರಾಣಾಂ ದೀನಾಃನಾಥಾಂಂಧಕೇಷು ಚೆ ॥ ೪೫ ॥ 
ಪ್ರಥಮಂ ಬಕುಲಾರ್ಕಸ್ಯ ಶ್ರೀಮಾತುಶ್ಚೆನ ಮಾನವಃ । 

ಭಾಗಂ ದದ್ಯಾಚ್ಹ ನಿರ್ನಿಫ್ನಕಾರ್ಯಸಿದ್ಧ್ಯೈ ನಿರಂತರಂ ॥ ೪೬ ॥ 





೩೮-೪೧. ಅವರಿಗೆ ಮಾಂಡಲಿಕರೆಂದು ಹೆಸರಾಯಿತು. ಮತ್ತು ರಾಮನು 
ಶ್ರೇಷ್ಠರಾದ ಆ ವರ್ತಕರನ್ನು ಮಂಡಲೇಶ್ವರರಾದ ರಾಜರನ್ನಾಗಿಸಿ ಎರಡು 
ಚಾಮರಗಳನ್ನೂ ಕತ್ತಿಯನ್ನೂ ಕೊಟ್ಟು ಬ್ರಾಹ್ಮಣರ ಸೇವೆಗಾಗಿಟ್ಟನು. ತನ್ನ 
ವಂಶದ ಸ್ವಾಮಿಯಾದ ಸೂರ್ಯನನ್ನೂ, ಚತುರ್ವೇದಗಳಿಂದ ಸಹಿತನಾದ 
ಬ್ರಹ್ಮನನ್ನೂ, ಶ್ರೀಮಾತೆಯೆಂಬ ಮಹಾ ಶಕ್ತಿಯನ್ನೂ, ವಿಷ್ಣುವನ್ನೂ 
ಸ್ಲಾನಿಸಿದನು. ದಕ್ಷಿಣದ ಬಾಗಿಲಿನಲ್ಲಿ ವಿಘ್ನನಾಶಕ್ಕಾಗಿ ಗಣನಾಥನನ್ನೂ, 
ಇನ್ನೂ ಇತರ ದೇವತೆಗಳನ್ನೂ ಪ್ರತಿಷ್ಠೆಮಾಡಿದನು. 

೪೨-೪೬. ಏಳು ಮಹಡಿಗಳುಳ್ಳ ಅರಮನೆಗಳನ್ನೂ ಕಟ್ಟಿಸಿದನು. 
ಮಾನವನು ಮತ್ತೆ ಜನರ ಜಾತಕರ್ಮ, ಅನ್ನಪ್ರಾಶನ, ಚೌಲ, ಲಕ್ಷಹೋಮ, 
ಕೋಟಹೋಮ, ಯಜ್ಞ, ವಾಸ್ತುಪೂಜಾ, ನವಗ್ರಹಶಾಂತಿ ಇವೆ ಮೊದಲಾದ 
ಮಂಗಳೋತ್ಸವಗಳಲ್ಲಿ ಬ್ರಾಹ್ಮಣರು, ಶೂದ್ರರು, ಬಡವರು, ದಿಕ್ಕಿಲ್ಲದವರು, 
ಕುರುಡರು ಇವರಿಗೆ ದ್ರವ್ಯ, ಧಾನ್ಯ, ವಸ್ತ್ರ, ಗೋವು, ಚಿನ್ನ, ಬೆಳ್ಳಿ ಇವುಗಳನ್ನು 
ಕೊಡುವಾಗ ಮೊದಲು ಬಕುಲಾರ್ಕನಿಗೂ, ಶ್ರೀಮಾತೆಗೂ ನರ್ನಫ್ಲದಿಂದ 
ಕಾರ್ಯವು ನೆರವೇರುವುದಕ್ಕಾಗಿ ಭಾಗವನ್ನು ಕೊಡಬೇಕು. 


ತ್ರಯಸ್ವ್ವಿಂ ಶೋತಿಧ್ಯಾಯಃ ೩3೯ 


ವಚನಂ ಮೇ ಸಮುಲ್ಲಂಘ್ಯ ಕುರುತೇ ಯೋಂನ್ಯಥಾ ನರಃ । 


ತಸ್ಯ ತತ್ಕರ್ಮಣೋ ವಿಘ್ನಂ ಭವಿಷ್ಯತಿ ನ ಸಂಶಯಃ ॥ ೪೭॥ 
ಏವಮುಕ್ತ್ವಾ ತತೋ ರಾಮಃ ಪ್ರಹೃಷ್ಟೇನಾಂಂತರಾತ್ಮನಾ । 
ದೇನಾನಾಮಥ ವಾಪೀಶ್ಚ ಪ್ರಕಾರಾಂಸ್ತು ಸುಶೋಭನಾನ್‌ ॥ ೪೮॥ 
ದುರ್ಗೋಪಕರಣೈರ್ಯುಕ್ತಾನ್ಭ್ರತೋಲೀಶ್ಚ ಸುವಿಸ್ತೃತಾಃ । 
ನಿರ್ಮಮೇ ಚೈನ ಕುಂಡಾನಿ ಸರಾಂಸಿ ಸರಸೀಸ್ತಥಾ ॥೪೯॥ 


ಧರ್ಮವಾಸೀಶ್ನ ಕೂಪಾಂಶ್ಚ ತಥಾನ್ಯಾನ್ಹೇನನಿರ್ಮಿತಾನ್‌ । 

ಏತತ್ಸರ್ವಂ ಚ ನಿಸ್ತಾರ್ಯ ಧರ್ಮಾಃ ರಣ್ಯೆ (€ ಮನೋರಮೇ ॥೫೦॥ 
ದದೌ" ತ್ರೆನಿದ್ಯ ಮುಖ್ಯ ್ಯೇಭ್ಯಃ ಶ್ರ ದ್ಧ ಯಾ ಪರೆಯಾ ಪುನಃ । 

ತಾಮ್ರ ಪಟ್ಟ ಸ ತಂ ಉಾಮುಕಾಸನಿ ಲೋಪಯೇತ್ತು ಯಃ ॥೫೧॥ 
ಪೂನ್‌ಜಾಸ್ತ. ಸ್ಯ ನರಕೇ ಪತಂತ್ಯಗ್ರೇ ನ ಸಂತತಿಃ । 

ವಾಯುಪುತ್ರಂ 'ಸಮಾಹೊಯ ತೆ ರಾಮೋಂಬ್ರವೀದ್ವಚಃ ॥ ೫೨॥ 
ವಾಯುಪುತ್ರ ಮಹಾವೀರ ತನ ಪೂಜಾ ಭವಿಷ್ಯತಿ । 

ಅಸ್ಯ ಕ್ಷೇತ್ರ ಸ್ಯ ರಕ್ಸಾಯೈ ತ್ವಮತ್ರ ಸ್ಥ ಸಾಚ್‌ ॥ ೫೩ ॥ 
ಅಂಜನೇಯಸ್ತು ತದ್ವಾ ಕಂ ಸ್ರ ಉಮ್ಮ ರಸಾ ದಧೌ । 

ಜೀರ್ಣೋದ್ಧಾರಂ ತದಾ ಕೃ ತ್ವಾ ಕೃ ತಕ್ಕ ತ್ಯೊ ೀ ಬಭೂನ ಹ ॥ ೫೪ ॥ 


೪೭. ನರನು ನನ್ನ ಈ ಮಾತನ್ನು ಮಾರಿ ಬೇರೆ ವಿಧವಾಗಿ ನಡೆದರೆ ಅವನ 
ಕಾರ್ಯಕ್ಕೆ ವಿಘ್ನವೊದಗುವುದು.'' 

೪೮-೫೩. ರಾಮನು ಹೀಗೆಂದು ಹೇಳಿ, ಸಂತುಷ್ಟಮನಸ್ಸಿಥಿಂದ ಧರ್ಮಾ 
ರಣ್ಯದಲ್ಲಿರುವ ದೇವತೆಗಳ ಕೊಳಗಳನ್ನೂ, ಮನೋಹರವಾದ ದುರ್ಗಗಳಿಂದ 
ಸಹಿತವಾದ ಆವರಣಗಳನ್ನೂ, ವಿಸ್ತಾರವಾದ ಬೀದಿಗಳನ್ನೂ, ಕುಂಡಗಳನ್ನೂ, 
ಸರೋವರಗಳನ್ನೂ, ನದಿಗಳನ್ನೂ, ದೇವನಿರ್ಮಿತವಾದ ಇನ್ನೂ ಇತರ ಬಾವಿ 
ಮೊದಲಾದುವುಗಳನ್ನೂ ವಿಸ್ತಾರಗೊಳಿಸಿ ಅತಿಶ್ರದ್ಧೆಯಿಂದ ಬ್ರಾಹ್ಮಣರಿಗೆ 
ದಾನಮಾಡಿದನು. ತಾಮ್ರದ ತಗಡಿನಲ್ಲಿ ಬರೆದಿರುವ ಆ ರಾಮನ ಶಾಸನವನ್ನು 
ಸುಳ್ಳುಮಾಡಿದವನ ಹಿಂದಿನವರು ನರಕದಲ್ಲಿ ಬೀಳುವರು. ಮುಂದೆ ಅವರ 
ಸಂತತಿ ಬೆಳೆಯುವುದಿಲ್ಲ. ಬಳಿಕ ರಾಮನು ವಾಯುಸುತನಾದ ಆಂಜನೇಯ 
ನನ್ನು ಕರೆಸಿ ""ವೀರಾಂಜನೇಯ! ಈ ಕ್ಸೇತ್ರದ ರಕ್ಬಣೆಗಾಗಿ ನೀನು ಇಲ್ಲಿ 
ನೆಲಸು. ನಿನಗೆ ಪೂಜೆ ಸಲ್ಲುವುದು?” ಎಂದನು. 

೫೪-೫೫. ಆಂಜನೇಯನು ರಾಮನನ್ನು ವಂದಿಸಿ ಅವನ ಆಜ್ಞೆಯನ್ನು 
ಶಿರಸಾವಹಿಸಿದನು. ರಾಮನು ಹೀಗೆ ಜೀರ್ಣೋದ್ಧಾರವನ್ನು ಮಾಡಿ 

F 


೩40 ಶ್ರೀ ಸ್ಥಾಂದನುಹಾಪುರಾಣಂ 


ಶ್ರೀಮಾತರಂ ತದಾಂಭ್ಯರ್ಚ್ಯ ಪ್ರಸನ್ನೇನಾಂಂತರಾತ್ಮನಾ । 
ಶ್ರೀಮಾತರಂ ನಮಸ್ಕೃತ್ಯ ಶೀರ್ಥಾನ್ಯನ್ಯಾನಿ ರಾಘವಃ ॥ ೫೫ ॥ 
ತೇಪಿ ದೇವಾಃ ಸ್ವಕಂ ಸ್ಥಾನಂ ಯಯುರ್ಬ್ರಹ್ಮಪುರೋಗಮಾಃ ॥ ೫೬ ॥ 
ದತ್ವಾಶಿಸಂ ತು ರಾಮಾಯ ವಾಂಛಿತಂ ತೇ ಭವಿಷ್ಯತಿ । 


ರಮ್ಯಂ ಕೃತಂ ತ್ವಯಾ ರಾಮ ವಿಪ್ರಾಣಾಂ ಸ್ಥಾಸನಾದಿಕಂ ॥ ೫೭॥ 
ಅಸ್ಮಾಕಮಸಿ ವಾತ್ಸಲ್ಯಂ ಕೃತಂ ಪುಣ್ಯವತಾ ತ್ವಯಾ | 
ಇತಿ ಸ್ತುವಂತಸ್ತೇ ದೇವಾಃ ಸ್ವಾನಿ ಸ್ಥಾನಾನಿ ಭೇಜಿರೇ ॥ ೫೮ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ 
44ಶ್ರೀರಾಮಚಂದ್ರಸ್ಯ ಪುರಪ್ರತ್ಯಾಗಮನವಣ ೯ನಂ'' ನಾಮ ತ್ರಯಸ್ಪಿಂಶೋಂಧ್ಯಾಯಃ 





ಪ್ರಸನ್ನಾಂತಃಕರಣದಿಂದ ಶ್ರೀಮಾತೆಯನ್ನು ಅರ್ಚಿಸಿ ಅವಳನ್ನೂ, ಇತರ 
ತೀರ್ಥಗಳನ್ನೂ ನಮಸ್ಕರಿಸಿದನು. 

೫೬-೫೮. ಬ್ರಹ್ಮಾದಿ ದೇವತೆಗಳು ರಾಮನನ್ನು ಆಶೀರ್ವದಿಸಿ ""ರಾಮ! 
ನಿನ್ನ ವಾಂಛಿತಾರ್ಥಗಳು ಫಲಿಸುವುವು. ನೀನು ಬ್ರಾಹ್ಮಣಸ್ಥಾಪನೆ ಮೊದಲಾದ 
ಸತ್ಕಾರ್ಯವನ್ನು ಮಾಡಿರುವೆ. ಪುಣ್ಯವಂತನಾದ ನೀನು ನಮ್ಮಲ್ಲಿ ಸ್ನೇಹದಿಂದ 
ರುವೆ?' ಎಂದು ಹೋಗಳುತ್ತ ತಂತಮ್ಮ ಸ್ಥಾನಗಳಿಗೆ ತೆರಳಿದರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿಹ್ಹವಾದ 
ಶ್ರೀ ಸ್ಕ್ಯಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ "" ಶ್ರೀರಾಮಚಂದ್ರನ ಪುರಪ್ರತ್ಕಾಗಮುನ ವರ್ಣನ''ವೆಂಬ 
ಮೂವತ್ತಮೂರನೆಯ ಅಧ್ಯಾಯವು ಮುಗಿದುದು 


॥ ಶ್ರೀಃ ॥ 
ಅಥ ಚತುಸ್ತಿಂಶೋಧ್ಯಾಯಃ 
ಶ್ರೀರಾಮಕೃತ ಶಾಸನ ಪಟ್ಟಿ ಪ್ರದಾನವರ್ಣನಂ 
ವ್ಯಾಸ ಉವಾಚ :-- 
ಏನಂ ರಾಮೇಣ ಧರ್ಮಜ್ಞ ಜೀರ್ಣೋದ್ಧಾರಃ ಪುರಾ ಕೃತಃ । 


ದ್ವಿಜಾನಾಂ ಚ ಹಿತಾರ್ಥಾಯ ಶ್ರೀಮಾತುರ್ನಚನೇನ ಚ ॥೧॥ 
ಯುಧಿಷ್ಠಿರ ಉವಾಚ :-- 


ಕೀದೃಶಂ ಶಾಸನಂ ಬ್ರಹ್ಮನ್ರಾಮೇಣ ಲಿಖಿತಂ ಪುರಾ । 


ಕಹಯಸ್ವ ಪ್ರಸಾದೇನ ತ್ರೇತಾಯಾಂ ಸತ್ಯಮಂದಿರೇ ॥೨॥ 
ವ್ಯಾಸ ಉವಾಚ :-- 

ಧರ್ಮಾಂರಣ್ಯೇ ನರೇ ದಿವ್ಯೇ ಬಕುಲಾರ್ಕೇ ಸ್ಪಧಿಷ್ಮಿತೇ । 

ಶೂನ್ಯಸ್ವಾಮಿನಿ ವಿಪ್ರೇಂದ್ರ ಸ್ಥಿತೇ ನಾರಾಯಣೇ ಪ್ರಭೌ ॥೩॥ 

ರಕ್ಟಣಾಧಿಪತೌ ದೇವೇ ಸರ್ವಜ್ಞೇ ಗುಣನಾಯಕೇ । 

ಭವಸಾಗರಮಗ್ನಾನಾಂ ತಾರಿಣೀ ಯತ್ರ ಯೋಗಿನೀ ॥೪॥ 

ಶಾಸನಂ ತತ್ರ ರಾಮಸ್ಕ ರಾಘನಸ್ಯ ಚ ನಾಮತಃ । 

ಶೃಣು ತಾಮ್ರಾಶ್ರಯಂ ತತ್ರ ಲಿಖಿತಂ ಧರ್ಮಶಾಸ್ತ್ರತಃ ॥೫॥ 


ಕನ್ನಡದ ಅನುವಾದ 
ಶ್ರೀರಾಮಕೃತ ಶಾಸನಪಟ್ಟಪ್ರದಾನವರ್ಣನ 

೧. ವ್ಯಾಸನು ಹೇಳುತ್ತಾನೆ:--ಯುಧಿಷ್ಠಿರ! ಶ್ರೀರಾಮಚಂದ್ರನು 
ಶ್ರೀಮಾತೆಯ ಮಾತಿನಂತೆ ಬ್ರಾಹ್ಮಣರ ಹಿತಕ್ಕಾಗಿ ಜೀರ್ಣೋದ್ಧಾರವನ್ನು 
ಮಾಡಿದನು. 

೨. ಯುಧಿಷ್ಠಿರನು ಹೇಳುತ್ತಾನೆ: ಎಲೈ ವ್ಯಾಸಮುನಿಯೆ! ತ್ರೇತಾ 
ಯುಗದಲ್ಲಿ ಸತ್ಯಮಂದಿರದಲ್ಲಿ ಶ್ರೀರಾಮನು ಎಂತಹ ಶಾಸನವನ್ನುಬರೆಯಿಸಿದನು? 
ಅದನ್ನು ಅನುಗ್ರಹಿಸಿ ನನಗೆ ಹೇಳು. 

೩-೫. ವ್ಯಾಸನು ಹೇಳುತ್ತಾನೆ:--ಯುಧಿಷ್ಠಿರ! ಕೇಳು. ಬಕುಲಾರ್ಕನೂ, 
ಶೂನ್ಯಸ್ವಾಮಿಯಾದ ನಾರಾಯಣನೂ, ರಕ್ಸಾಧಿಕಾರಿಯಾದ ಗಜಾನನನೂ, 
ಭವಸಾಗರವನ್ನು ದಾಟಸುವ ಯೋಗಿನಿಯೂ ಇರುವ ಧರ್ಮಾರಣ್ಯದಲ್ಲಿ 
ಶ್ರೀರಾಮನು ತನ್ನ ಹೆಸರಿನಿಂದ ಧರ್ಮಶಾಸ್ತ್ರ ರೀತಿಯಾಗಿ ಶಾಸನವನ್ನು 
ಬರೆಯಿಸಿರುವನು. 


೩೩೨ ಶ್ರೀ ಸ್ಯಾಂಡಮಹಾಪುರಾಣಂ 


ಮಹಾಶ್ಚರ್ಯಕರಂ ತಚ್ಚ ಹ್ಯನೇಕಯುಗಸಂಸ್ಥಿತಂ । 
ಸರ್ವೋ ಧಾತುಃ ಕ್ಟಯಂ ಯಾತಿ ಸುವರ್ಣಂ ಕಯನೇತಿ ಚ ॥೬॥ 
ಪ್ರತ್ಯಕ್ಷಂ ದೃಶ್ಯತೇ ಪುತ್ರ ದ್ವಿಜಶಾಸನಮಕ್ಸಯಂ । 


ಅನಿನಾಶೋಹಿ ತಾಮ್ರಸ್ಯ ಕಾರಣಂ ತತ್ರ ವಿದ್ಯತೇ nen 
ವೇದೋಕ್ತಂ ಸಕಲಂ ಯಸ್ಮಾದ್ವಿಷ್ಟುರೇನ ಹಿ ಕಫ್ಯತೇ । 

ಪುರಾಣೇಷು ಚ ನೇದೇಷು ಧರ್ಮಶಾಸ್ತ್ರೇಷು ಭಾರತ nen 
ಸರ್ವತ್ರ ಗೀಯತೇ ನಿಷ್ಣುರ್ನಾನಾಭಾವಸಮಾಶ್ರಯಃ | 

ನಾನಾದೇಶೇಷು ಧರ್ಮೇಷು ನಾನಾಧರ್ಮನಿಷೇವಿಭಿಃ nen 
ನಾನಾಭೇದೈಸ್ತು ಸರ್ವತ್ರ ನಿಷ್ಣುರೇನೇತಿ ಚಿಂತ್ಯತೇ । 

ಅನತೀರ್ಣಃ ಸವೈ ಸಾಕ್ಸಾತ್ಪುರಾಣಪುರುಷೋತ್ತಮಃ nu ೧೦॥ 
ದೇವನೈರಿನಿನಾಶಾಯ ಧರ್ಮಸಂರಕ್ಷೃಣಾಯ ಚ । 

ತೇನೇದಂ ಶಾಸನಂ ದತ್ತಮುವಿನಾಶಾತ್ಮಕಂ ಸುತ ॥ ೧೧॥ 
ಯಸ್ಯ ಪ್ರತಾಪಾದ್ದೃಷದಸ್ತಾರಿತಾ ಜಲಮಧ್ಯತಃ । 

ವಾನಕೈರ್ನೇಷ್ಟಿತಾ ಲಂಕಾ ಹೇಲಯಾ ರಾಕ್ಸಸಾ ಹತಾಃ ॥ ೧೨ ॥ 
ಮುನಿಪುತ್ರಂ ಮೃತಂ ರಾಮೋ ಯಮಲೋಕಾದುಷಾನಯತ್‌ | 
ದುಂದುಭಿರ್ನಿಹತೋ ಯೇನ ಕಬಂಧೋಂಇಂಭಿಹತಸ್ತಥಾ ॥ ೧೩॥ 


೬-೭. ಸಕಲ ಲೋಹಗಳೂ ಕೆಲವು ದಿನಗಳ ತರುವಾಯ ಹಾಳಾಗುವುವು. 
ಆದರೆ ರಾಮನ ತಾಮ್ರಶಾಸನವು ಅನೇಕ ಯುಗಗಳಿಂದ ಅಕ್ಟುಯವಾಗಿರುವುದು 
ಆಶ್ಚರ್ಯವನ್ನುಂಟುಮಾಡುವುದು. ಹೀಗೆ ಶಾಸನವು ನಾಶವಾಗದಿರಲು ಕಾರಣ 
ಮೊಂದಿರುವುದು. 

೮. ಮಗು! ಸಕಲ ವೇದಗಳೂ, ಪುರಾಣಗಳೂ, ಧರ್ಮಶಾಸ್ತ್ರಗಳೂ 
ವಿಷ್ಣುವನ್ನೆ ಪ್ರತಿಪಾದಿಸುವುವು. 

೯-೧೧. ನಾನಾ ದೇಶಗಳಲ್ಲಿ ನಾನಾ ಧರ್ಮಿಗಳು ನಾನಾ ರೂಪಿಯಾದ 
ವಿಷ್ಣುವನ್ನು ನಾನಾ ರೂಪಗಳಿಂದ ಧ್ಯಾನಿಸುವರು. ಅನಾದಿಪುರುಷನಾದ 
ಅವನು ದೇವತೆಗಳ ಶತ್ರುಗಳಾದ ರಾಕ್ಷಸರ ನಾಶಕ್ಕಾಗಿಯೂ, ಧರ್ಮರಕ್ಷಣೆ 
ಗಾಗಿಯೂ ಭೂಲೋಕದಲ್ಲಿ ಶ್ರೀರಾಮನ ರೂಪದಿಂದವತರಿಸಿ ಶಾಶ್ವತವಾದ 
ಶಾಸನವನ್ನು ಬ್ರಾಹ್ಮೆಣರಿಗಿತ್ತಿರುವನು. 

೧೨-೧೩. ಇವನ ಸಾಮರ್ಥ್ಯದಿಂದಲೆ ಸಮುದ್ರದ ಜಲದಲ್ಲಿ ಕಲ್ಲುಗಳು 
ತೇಲಿದುವು. ಕಪಿಗಳು ಲಂಕೆಯನ್ನು ಮುತ್ತಿ ಅನಾಯಾಸವಾಗಿ ರಾಕ್ಸಸರನ್ನು 
ಕೊಂದರು. ಮುನಿಯ ಮೃತನಾದ ಮಗನನ್ನು ಯಮಲೋಕದಿಂದ ರಾಮನು 
ಹಿಂದಕ್ಕೆ ಕರೆತರಿಸಿರುವನು. ದುಂದುಭಿ ಮತ್ತು ಕಬಂಧನನ್ನು ವಧಿಸಿದ್ದಾನೆ. 


ಚತುಸ್ವಿ ರತೋ9ಧ್ಯಾಯ;` ಹ 


ನಿಹತಾ ತಾಡಕಾ ಚೈನ ಸಪ್ತತಾಲಾ ವಿಭೇಡಿತಾಃ । 


ಖರಶ್ಚ ದೂಷಣಕ್ಚೆ ವ ತ್ರಿ ಶಿರಾಶ್ಚ ಮಹಾಸುರಃ ॥ ೧೪॥ 
ಚತುರ್ನಶಸಹಸ್ಟ್‌ ಣಿ ಜನೇನ 'ನಿಹತಾ ರಣೇ! 

ತೇನೇದಂ ಶಾಸನಂ ದತ್ತಮಕ್ಸಯಂ ನ ಕಥಂ ಭವೇತ್‌ ॥ ೧೫ ॥ 
ಸ್ಹನಂಶವರ್ಣನಂ ತತ್ರ "ಠಿಪಿತ್ವಾ ಸ್ಮಯಮೇನ ತು । 

ದೇಶ ಕಾಲಾದಿಕಂ ಸರ್ವಂ ಲಿಲೇಖ ವಿಧಿಪೂರ್ವಕಂ ॥ ೧೬॥ 
ಸ್ಪಮುದ್ರಾಚಿಹ್ನಿತಂ ತತ್ರ ತ್ರೈನಿದ್ಯೇಭ್ಯಸ್ತಥಾ ದದೌ । 
ಚತುಶ್ಚತ್ಪಾರಿಂಶವರ್ಸೊೋ ರಾಮೋ ದಶರಥಾತ್ಮಜಃ 1H ೧೭॥ 
ತಸ್ಮಿನ್ಯಾಲೇ ಮಹಾಶ್ಚರ್ಯಂ ಸಂದತ್ತಂ ಕಿಲ ಭಾರತ । 

ತತ್ರ ಸ್ವರ್ಣೋಪನುಂ ಚಾಸಿ ರೌಪ್ಕೋಪಮಮಥಾಸಿ ಚ ॥ ೧೮ ॥ 
ಉನಾಹ ಸಲಿಲಂ ತೀರ್ಥೇ ದೇವರ್ಷಿಪಿತೃತೃಪ್ತಿದಂ | 
ಸ್ವನಂಶನಾಯಕಸ್ಯಾಂಗ್ರೇ ಸೂರ್ಯೇಣ ಕೃತಮೇವ ತತ್‌ ॥೧೯॥ 
ತದ್ದೃಷ್ಟ್ಯಾ ಮಹದಾಶ್ಚರ್ಯಂ ರಾಮೋ ನಿಷ್ಣುಂ ಪ್ರಪೂಜ್ಯ ಚ । 
ರಾಮಲೇಖನವಿಜಿತ್ತೆಸ್ತು ಲಿಖತಂ ಧರ್ಮಶಾಸನಂ ॥೨೦॥ 
ಯದ ಸೃಷ್ಟ್ರಾಥ ದ್ವಿಜಾಃ ಸರ್ವೇ ಸಂಸಾರಭಯಬಂಧನಂ । 

ಕುರ್ವತೇ ನೈನ ಯಸ್ಮಾಚ್ಹ ತಸ್ಮಾನ್ನಿಖಲರಕ್ಸಕಂ ॥ ೨೧॥ 


೧೪-೧೫. ತಾಟಕೆಯನ್ನು ಕೊಂದಿದ್ದಾನೆ. ಏಳು ತಾಳೆಮರಗಳನ್ನು 
ಸೀಳಿದ್ದಾನೆ. ಖರ, ದೂಷಣ, ತ್ರಿಶಿರರನ್ನೂ, ಹದಿನಾಲ್ಕುಸಾನಿರ ರಾಕ್ಸಸರನ್ನೂ 
ಜನಸ್ಕಾನದ ಯುದ್ಧದಲ್ಲಿ ಕೊಂದಿದ್ದಾನೆ. ಇಂತಹ ಮಹಾನುಭಾವನು ಕೊಟ್ಟ 
ಶಾಸನವು ಹೇಗೆ ಅಕ್ಸಯವಾಗಲಾರದು? 

೧೬-೧೭. ಶ್ರೀರಾಮನು ತನ್ನನಲವತ್ತನಾಲ್ಕನೆಯ ವರ್ಷದಲ್ಲಿ ತಾನೆ ತನ್ನ 
ವಂಶದ ವರ್ಣನೆಯನ್ನೂ, ದೇಶ ಕಾಲಾದಿಗಳನ್ನೂ ವಿಧಿಯಂತೆ ಬರೆದು ತನ್ನ 
ಮುದ್ರೆಯನ್ನೊತ್ತಿ ಆ ಶಾಸನವನ್ನು ತೈನಿದ್ಯಬ್ರಾ ಹ್ಮಣರಿಗಿತ್ತನು. 

೧೮-೨೦. ಆ ಸಮಯದಲ್ಲಿ ಅಫಿರುವ py ಪಿತೃ ತೃಪ್ತಿ _ಯನ್ನುಂಟು 
ಮಾಡುವ ನೀರು ಚಿನ್ನ, ಬೆಳ್ಳಿಯಂತಾಗಿ ಅತ್ಯಂತ ಆಕ್ಟ ರ್ಷುತಿಸಗಿತ 
ರಾಮನು ತನ್ನ ವಂಶನಾಯಕನಾದ ಸೂರ್ಯನ ಪ? ಅವನಿಂದ 
ಮಾಡಲ್ಪಟ್ಟ ಮಹದಾಶ್ಚರ್ಯವನ್ನು ಕಂಡು ವಿಷ್ಣುವನ್ನು ಪೂಜಿಸಿ ನಾನಾ 
ಲೇಖನಗಳಿಂದ ಧರ್ಮಶಾಸನವನ್ನು ಬರೆದನು. 

೨೧. ಸಕಲರನ್ನೂ ಪೊರೆಯುವ ಈ ಶಾಸನವನ್ನು ಬ್ರಾಹ ನಾರು ಸಂದರ್ಶಿಸಿ 
.ಸಂಸಾರಬಂಧನದ ಭಯವನ್ನು ತ್ಯಜಿಸುವರು. 


ಕ ಶ್ರೀ ಸ್ಕಾಂಹಮಹಾಪುರಾಣಂ 


ಯೇ ಪಾಪಿಷ್ಮಾ ದುರಾಚಾರಾ ಮಿತ್ರದ್ರೋಹರತಾಶ್ಚ ಯೋ 


ತೇಷಾಂ ಪ್ರಜೋಧನಾರ್ಥಾಯ ಪ್ರಸಿದ್ಧಿಮಕರೋತ್ಪುರಾ ॥ ೨೨ ॥ 
ರಾಮಲೇಖವಿಚಿತ್ರೆಸ್ತು ವಿಚಿತ್ರೇ ತಾಮ್ರ ಪಟ್ಟಿಕೇ। 
ವಾಕ್ಯಾನೀಮಾನಿ ಶ್ರೂಯಂತೇ ಶಾಸನೇ ಕಲ ನಾರದ ॥ ೨೩॥ 


ಆಸ್ಫ್ರೋಟಯಂತಿ ಪಿತರಃ ಕಥಯಂತಿ ಪಿತಾಮಹಾಃ । 
ಭೂಮಿದೋಸ್ಕತ್ಯುಲೇ ಜಾತಃ ಸೋಂಸ್ಮಾನ್ಸಂತಾರಯಿಷ್ಯತಿ ॥ ೨೪॥ 
ಬಹುಭಿರ್ಬಹುಧಾ ಭುಕ್ತಾ ರಾಜಭಿಃ ಪೃಥಿನೀ ತ್ವಿಯಂ । 


ಯಸ್ಯ ಯಸ್ಯ ಯದಾ ಭೂಮಿಸ್ತಸ್ಯ ತಸ್ಯ ತದಾ ಫಲಂ ॥ ೨೫ ॥ 
ಷಷ್ಮಿನರ್ಷಸಹಸ್ರಾಣಿ ಸ್ವರ್ಗೇ ವಸತಿ ಭೂಮಿದಃ । 

ಆಚ್ಛೇತ್ತಾ ಚಾಂವಮಂತಾ ಚ ತಾನ್ಯೇವ ನರಕಂ ವ್ರಜೇತ್‌ ॥ ೨೬ ॥ 
ಸಂದೇಶೈಸ್ತುದ್ಯಮಾನಸ್ತು ಮುದ್ಧಕೈರ್ನಿನಿಹತ್ಯ ಚ । 

ಸಾಶೈಃ ಸುಬಧ್ಯಮಾನಸ್ತು ರೋರನೀತಿ ಮಹಾಸ್ವರಂ ॥ ೨೭॥ 
ತಾಡ್ಯಮಾನಃ ಶಿರೇ ದಂಡೈಃ ಸಮಾಲಿಂಗ್ಯ ನಿಭಾವಸುಂ । 


ಕ್ಲುರಿಕಯಾ ಛಿದ್ಯಮಾನೋ ರೋರನೀತಿ ಮುಹಾಸ್ಕನಂ ॥ ೨೮ ॥ 


೨೨. ರಾಮನು ಪಾಪಿಗಳೂ, ದುರ್ನಡತೆಯುಳ್ಳವರೂ, ಸ್ನೇಹಿತರಿಗೆ 
ದ್ರೋಹಮಾಡುವವರೂ ಆಗಿರುವ ಜನರ ಜ್ಞಾನೋದಯಕ್ಕಾಗಿ ಈ ಶಾಸನವನ್ನು 
ಪ್ರಸಿದ್ಧಿ ಗೊಳಿಸಿದನು. 

೨೩. ನಾರದ! ರಾಮನ ಲೇಖನದಿಂದ ವಿಚಿತ್ರವಾದ ತಾಮ್ರ ಶಾಸನದಲ್ಲಿ 
ಈ ವಾಕ್ಯಗಳು ಬರೆಯಲ್ಪಟ್ಟಿರುವುವು. 

೨೪. "" ನಮ್ಮ ವಂಶದಲ್ಲಿ ಜನಿಸಿ ಭೂಮಿದಾನಗೈ ದವನು ನಮ್ಮನ್ನುದ್ಧರಿ 
ಸುವನು?” ಎಂದು ಪಿತೃಗಳೂ, ನಿತಾಮಕರೂ ಉದ್ಭೋಸಿಸುವರು. 

೨೫. ಈ ಭೂಮಿಯನ್ನು ಅನೇಕ ಮಂದಿ ರಾಜರು ಆಳಿರುವರು. 
ಯಾವನು ಯಾವಾಗ ಆಳುತ್ತಿದ್ದನೊ, ಅವನಿಗೆ ಆಗ ಈ ಭೂಮಿಯು ಫಲವಪನ್ನಿ 
ತ್ತಿರುವುದು. 

೨೬. ಭೂದಾನ ಮಾಡಿದವನು ಅರುವತ್ತುಸಾವಿರವರ್ಷ ಸ್ವರ್ಗದಲ್ಲಿ 
ವಾಸಿಸುವನು. ಆ ಭೂಮಿಯನ್ನು ಕಿತ್ತುಕೊಂಡವನೂ, ಹಾಗೆ ಕಿತ್ತುಕೊಳ್ಳು 
ವುದಕ್ಕೆ ಅನುಮತಿಯನ್ನಿತ್ತವನೂ ಅಷ್ಟೇ ವರ್ಷಕಾಲ ನರಕದಲ್ಲಿ ವಾಸ 
ಮಾಡುವನು. 

೨೭-೨೯. ಬ್ರಾಹ್ಮಣರ ಜೀವಿಕೆಯನ್ನು ಹಾಳುಮಾಡಿದವನನ್ನು ನಕರದಲ್ಲಿ 
ದುಷ್ಟರಾದ ಯಮದೂತರು ಇಕ್ಕಳದಿಂದ ಒತ್ತಿ, ಹಾರೆಯಿಂದ ಬಡಿದು, 


ಚತುಸ್ತ್ರಿಂಶೋಕಿಧ್ಯಾಯಃ ೩ಜಿ 


ಸುಮದೂತೈರ್ಮಹಾಘೋರೈರ್ಬ್ರಹ್ಮವೃತ್ತಿವಿಲೋಪಕಃ । 

ರಿನಂ ವಿಧೈರ್ಮಹಾದುಷ್ಟೈಃ ಪೀಡ್ಯಂತೇ ತೇ ಮಹಾಗಣೈಃ ॥ ೨೯॥ 
ತಸ್ತಿರ್ಯಕ್ರ್ವಮಾಪ್ನೊಂತಿ ಯೋನಿಂ ವಾ ರಾಕ್ಚಸೀಂ ಶುನೀಂ | 
ಕ್ಯಾಲೀಂ ಶೃಗಾಲೀಂ ಪೈಶಾಚೀಂ ಮಹಾಭೂತಭಯಂಕರೀಂ 1೩೦॥ 
ಹಸಾಮೇರಂಗುಲಹರ್ತಾ ಹಿ ಸ ಕಥಂ ಪಾಪಮಾಚರೇತ್‌ । 


ಹಾಮೇರಂಗುಲದಾತಾ ಚಸ ಕಥಂ ಪುಣ್ಯಮಾಚರೇತ್‌ ॥ ೩೧॥ 
ತಿಶ್ಚನೇಧಸಹಸ್ರಾಣಾಂ ರಾಜಸೂಯಶತಸ್ಯ ಚ । 

*ನ್ಯಾಶತಪ್ರದಾನಸ್ಯ ಫಲಂ ಪ್ರಾಪ್ನೋತಿ ಭೂಮಿದಃ ॥ ೩೨ ॥ 
ತಿಯುರ್ಯಶಃ ಸುಖಂ ಪ್ರಜ್ಞಾ ಧರ್ಮೋ ಧಾನ್ಯಂ ಧನಂ ಜಯಃ । 
ಕಂತಾನಂ ವರ್ಧತೇ ನಿತ್ಯಂ ಭೂಮಿದಃ ಸುಖಮಶ್ನುತೇ ॥ ೩೩ ॥ 


ನೊೂಮೇರಂಗುಲಮೇಕಂ ತು ಯೇ ಹರಂತಿ ಖಲಾ ನರಾಃ । 
ತಂಧ್ಯಾಂಟನೀಷ್ಟತೋಯಾಸು ಶುಷ್ಕ ಕೋಟಿರವಾಸಿನಃ | 


ಕೈಷ್ಣಸರ್ಪಾಃ ಪ್ರಜಾಯಂತೇ ದತ್ತದಾಯಾ ಪಹಾರಕಾಃ ॥ ೩೪॥ 
ಕಡಾಗಾನಾಂ ಸಹಸ್ರೇಣ ಅಶ್ಚನೇಧಶತೇನ ನಾ । 
1ವಾಂ ಕೋಟಿಪ್ರದಾನೇನ ಭೂಮಿಹರ್ತಾ ನಿಶುದ್ಧ್ಯತಿ ॥ ೩೫ ॥ 


ಹಗ್ಗದಿಂದ ಕಟ್ಟ, ದೊಣ್ಣೆಯಿಂದ ಹೊಡೆದು, ಬೆಂಕಿಯನ್ನುತಬ್ಬಿಸಿ, ಚೂರಿಯಿಂದ 
ಕತ್ತರಿಸಿ ಪೀಡಿಸುತ್ತಾರೆ. ಆಗ ಪಾಸಿಗಳು ಘಟ್ಟಿಯಾಗಿ ಕಿರಿಚಿಕೊಳ್ಳುವರು. 

೩೦, ಬಳಿಕ ರಾಕ್ಚಸ್ಕ, ನಾಯಿ, ಸರ್ಪ, ನರಿ, ಪಿಶಾಚ ಯೋನಿಗಳಲ್ಲಿ 
ಸನಿಸುವನು. 

೩೧. ಒಂದು ಅಂಗುಲ ಭೂಮಿಯನ್ನು ಅಪಹರಿಸಿದ ಪಾಪಕ್ಕೂ, ದಾನ 
ಮಾಡಿದ ಪುಣ್ಯಕ್ಕೂ ಸಮಾನವಾದ ಪಾಪಪುಣ್ಯಗಳಿಲ್ಲ. 

೩೨-೩೩. ಭೂದಾನವನ್ನಿತ್ತವನು ಸಹಸ್ರಾಶ್ವಮೇಧಯಾಗ, ನೂರು ರಾಜ 
ಕೂಯಯಾಗ, ನೂರು ಕನ್ಯಾದಾನ ಇವುಗಳನ್ನು ಮಾಡಿದ ಫಲಗಳನ್ನು 
ರಡೆಯುವನು. ಮತ್ತು ಅವನ ಆಯುಸ್ಸು, ಕೀರ್ತಿ, ಸುಖ, ಜ್ಞಾನ, ಧರ್ಮ, 
ಧಾನ್ಯ, ಹಣ, ಜಯ, ಸಂತತಿ ಇವುಗಳು ಹೆಚ್ಚುವುವು. 

೩೪. ಒಂದಂಗುಲ ಭೂಮಿಯನ್ನೂ, ಕೊಟ್ಟ ಸ್ವತ್ತನ್ನೂ ಅಸಹರಿಸುವ 
ದುಷ್ಟ ಮಾನವರು ನೀರಿಲ್ಲದ ಮರಳು ಕಾಡುಗಳಲ್ಲಿರುವ ಒಣಗಿದ ಪೊಟರು 
ಗಳಲ್ಲಿ ವಾಸಿಸುವ ಕೃಷ್ಣಸರ್ಪಗಳಾಗಿ ಹುಟ್ಟುವರು. 

೩೫. ಭೂಮಿಯನ್ನು ಅಸಹೆರಿಸಿದವನು ಸಾವಿರ ಕೆರೆಗಳನ್ನು ಕಟ್ಟುವುದ 
೨ಂದಲೂ, ನೂರು ಅಶ್ವಮೇಧಯಾಗಗಳನ್ನು ಮಾಡುವುದರಿಂದಲೂ, ಕೋಟಿ 
ಕೋವುಗಳನ್ನು ದಾನಮಾಡುವುದರಿಂದಲೂ ಶುದ್ಧನಾಗುವನು. 


ತೆ ಶ್ರೀ ಸ್ಥಾಂನಮುಹಾಪುರಾಣಂ 


ಯಾನೀಹ ದತ್ತಾನಿ ಪುನರ್ಧನಾನಿ 
ದಾನಾನಿ ಧರ್ಮಾರ್ಥಯಶಸ್ಕರಾಣಿ । 
ಔದಾರ್ಯತೋ ವಿಪ್ರನಿನೇದಿತಾನಿ 
ಕೋನಾಮ ಸಾಧುಃ ಪುನರಾದದೀತ ॥ ೩೬॥ 
ಚಲದಲದಲಲೀಲಾಚಂಚಲೇ ಜೀವಲೋಕೇ 
ತೃಣಲನಲಘುಸಾರೇ ಸರ್ವಸಂಸಾರಸೌಖ್ಯೇ 
ಅಪಹರತಿ ದುರಾಶಃ ಶಾಸನಂ ಬ್ರಾಹ್ಮಣಾನಾಂ 
ನರಕಗಹನಗರ್ತಾವರ್ತಪಾತೋತ್ಸುಕೋ ಯಃ ॥ ೩೭॥ 
ಯೇ ಪಾಸ್ಯಂತಿ ಮಹೀಭುಜಃ ಕ್ಲಿತಿನಿಮಾಂ ಯಾಸ್ಕಂತಿ ಭುಕ್ತ್ವಾಃಖಿಲಾಂ 
ನೋ ಯಾತಾನತುಯಾತಿ ಯಾಸ್ಯತಿ ನ ನಾ ಕೇನಾ ಪಿ ಸಾರ್ಧಂ ಧರಾ 
ಯತ್ಯಿಂಚಿದ್ದು ನಿ ತದ್ವಿನಾಶಿ ಸಕಲಂ pS ಪರಂ ಸ್ಥಾ ಯಿನೀ 
ತ್ವೇನಂ ನೈ ನೆಸುಧಾಪಿ ಯೈರುಪಕೃತಾ ಲೋಷ್ಯಾ ನ್‌ ಸತ್ಕೀರ್ತಯಃ i 
ಏಕೈನ ಭಗಿನೀ ಲೋಕೇ ಸರ್ಜೇಷಾಮೇನ ಭೂಜಿಚಾಕ | 
ನ ಭೋಜ್ಯಾ ನ ಕರಗ್ರಾಹ್ಯಾ ನಿಪ್ರದತ್ತಾ ವಸುಂಧರಾ CE: 


೩೬. ಈ ಪ್ರಪಂಚದಲ್ಲಿ ಯಾವ ಸಜ್ಜನರು ಔದಾರ್ಯದಿಂದ ಬಾ ಬ್ರಾಹ್ಮಣ 
ರಿಗೆ ಧರ್ಮ, ಅರ್ಥ, ಕೇರ್ತಿಗಾಗಿ ಕೊಟ್ಟಿ ದಾನಗಳನ್ನೂ, ದ್ರವ್ಯಗಳನ್ನೂ 
ಮರಳಿ ತೆಗೆದುಕೊಂಡಾರು? 

೩೭. ಜೀವಿಗಳು ಅಶ್ವತ್ವದ ಎಲೆಯಂತೆ ಚಂಚಲವಾಗಿರಲು, ಸಂಸಾರದ 
ಸಮಸ್ತ ಸೌಖ್ಯ ಗಳೂ ಸತ ಕಡ್ಡಿ ಯಂತೆ ನಿಸ್ಸಾರವಾಗಿರಲು ಯಾವ 
ನರನು ನರಕವಾಸಿಯಾಗುವ ಅಪೇಕ್ಷೆ, ಯಿಂದ ಬ್ರಾಹ್ಮಣರ ಶಾಸನವನ್ನು 
ಅಪಹರಿಸುತ್ತಾನೆ? 

೩೮. ಈ ಭೂಮಿಯನ್ನು ಆಳುತ್ತಿರುವ ರಾಜರು ಸಕಲ ಭೋಗಗಳನ್ನನು 
ಭವಿಸಿ ಅವಸಾನಗೊಳ್ಳುವರು. ಭೂಮಿಯು ಯಾವ ರಾಜರೊಡನೆಯೂ 
ಹೋಗಲಿಲ್ಲ. ಹೋಗುತ್ತಿಲ್ಲ. ಹೋಗುವುದೂ ಇಲ್ಲ. ಭೂಮಿಯಲ್ಲಿರುವುದೆಲ್ಲ 
ನಶ್ವರವಾದುದು. ಇಲ್ಲಿ ಉಪಕಾರಮಾಡಿದವರ ಕೀರ್ತಿಯು ಮಾತ್ರ ಶಾಶ್ವತ 
ವಾಗಿರುವುದು. 

೩೯. ಸಮಸ್ತ ರಾಜರಿಗೂ ಬ್ರಾಹ್ಮಣರಿಗಿತ್ತ ಭೂಮಿಯು ಸಹೋದರಿ 
ಯಂತಿರುವುದು.. ಅವಳಂತೆಯೇ ಈ ಭೂಮಿಯು ಸುಖಾನುಭವಕ್ಕೂ 
ಕಂದಾಯ ತೆಗೆದುಕೊಳ್ಳುವುದಕ್ಕೂ (ವಿವಾಹಕ್ಕೂ) ಉಚಿತವಾದುದಲ್ಲ. 


ಹಕುಸ್ತಿಂಶೋನಿಧ್ಯಾಯಃ 44 


ದತ್ವಾ ಭೂಮಿಂ ಭಾವಿನಃ ಪಾರ್ಥಿವೇಶಾ 
ನ್ಫೂಯೋ ಭೂಯೋ ಯಾಚತೇ ರಾಮುಚಂದ್ರಃ | 
ಸಾಮಾನ್ಯೋಂಯಂ ಧರ್ಮಸೇತುರ್ನ್ವಹಾಣಾಂ 


ಸ್ವೇ ಸ್ವೇ ಕಾಲೇ ಪಾಲನೀಯೋ ಭವದ್ಭಿಃ won 
ಅಸ್ಮಿನ್ವಂಶೇ ಕ್ಸಿತೌ ಕೋಂಪಿ ರಾಜಾ ಯದಿ ಭವಿಷ್ಯತಿ । 
ತಸ್ಯಾಂಹಂ ಕರಲಗ್ನೋಂ ಸ್ಮಿ ಮದ್ದತ್ತಂ ಯದಿ ಪಾಲ್ಯತೇ ॥೪೧॥ 
ಲಿಖತ್ವಾ ಶಾಸನಂ ರಾಮಶ್ಚಾತುರ್ವೇದ್ಯದ್ದಿಜೋತ್ತಮಾನ್‌ | 
ಸಂಪೂಜ್ಯ ಪ್ರದದೌ ಧೀಮಾನ್ವಸಿಷ್ಮ ಸ್ಯ ಚ ಸನ್ನಿಧೌ ॥ ೪೨ ॥ 


ತೇ ವಾಡನಾ ಗೃಹೀತ್ವಾ ತಂ ಪಟ್ಟಿಂ ರಾಮಾಜ್ಞಯಾ ಶುಭಂ ! 
ತಾಮ್ರಂ ಹೈಮಾಕ್ಸರಯುತಂ ಧರ್ಮಂ ಧರ್ಮನಿಭೂಷಣಂ ॥೪೩॥ 
ಪೂಜಾರ್ಥಂ ಭಕ್ತಿಕಾಮಾರ್ಥಾಸ್ತದ್ರಕ್ಟಣಮಕುರ್ವತ । 


ಚಂದನೇನ ಚ ದಿನ್ಯೇನ ಸುಷ್ಪೇಣ ಚ ಸತಾ ॥ ೪೪॥ 
ತಥಾ ಸುವರ್ಣಪುಷ್ಟೇಣ ರೂಪ್ಯಪುಷ್ಬೇಣ ವಾ ಪುನಃ । 

ಅಹನ್ಯಹನಿ ಪೂಜಾಂ ತೇ ಕುರ್ವತೇ ವಾಡವಾಃ ಶುಭಾಂ ॥ ೪೫ ॥ 
ತದಗ್ರೇ ದೀಪಕಂ ಚೈನ ಫೃತೇನ ನಿಮಲೇನ ಹಿ । 

ಸಪ್ತನರ್ತ್ಶಿಯುತಂ ರಾಜನ್ನರ್ಫ್ಯಂ ಪ್ರಕುರ್ವತೇ ದ್ವಿಜಾಃ ॥ ೪೬॥ 


೪೦. ರಾಮಚಂದ್ರನು ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿ. 
ಮುಂದೆ ಬರುವ ರಾಜರನ್ನು ಕುರಿತು, "" ಈ ಧರ್ಮದ ಕಟ್ಟು ಸಕಲ ರಾಜರಿಗೂ 
ಸಮಾನ್ಯವಾದುದು. ನೀವೆಲ್ಲರೂ ನಿಮ್ಮ ಕಾಲದಲ್ಲಿ ಇದನ್ನು ಕಾಪಾಡಬೇಕು?” 
ಎಂದು ಪ್ರಾರ್ಥಿಸುತ್ತಾನೆ. 

೪೧. ನಮ್ಮ ವಂಶದಲ್ಲಿ ಜನಿಸಿದ ಯಾವ ರಾಜನು ನಾನು ಕೊಟ್ಟುದನ್ನು 
ನಡಸಿಕೊಂಡುಬರುವನೊ, ನಾನು ಅವನ ದಾಸನು. 

_.. ೪೨. ರಾಮನು ಹೀಗೆ ಶಾಸನಗಳನ್ನು ಬರೆದು ವಸಿಷ್ಕರ ಮುಂದೆ 
ಚತುರ್ವಿದ್ಯ ಬ್ರಾಹ್ಮಣರನ್ನು ಪೂಜಿಸಿ ಅವರಿಗೆ ಕೊಟ್ಟನು. 

೪೩-೪೫. ಆ ಬ್ರಾಹ್ಮಣರು ರಾಮನ ಅಪ್ಪಣೆಯಂತೆ ಸುವರ್ಣಾಕ್ಬರ 
ಗಳುಳ್ಳುದಾಗಿ ಧರ್ಮಕ್ಕೆ ಭೂಷಣಪ್ರಾಯವಾದ ಆ ಶುಭ ತಾಮ್ರಶಾಸನಗಳನ್ನು 
ತೆಗೆದುಕೊಂಡು ಅದನ್ನು ಭಕ್ತಿ ಮತ್ತು ಕಾಮಗಳ ಅಪೇಕ್ಷೆಯುಳ್ಳನರಾಗಿ 
ಪೂಜೆಗಾಗಿ ರಕ್ಷಿಸಿದರು. ಮತ್ತು ಪ್ರತಿದಿನವೂ ಗಂಧ, ಪುಷ್ಪ, ಸುವರ್ಣ 
ಬೆಳ್ಳಿ ಹೂವುಗಳು ಇವುಗಳಿಂದ ಪೂಜಿಸುತ್ತಾರೆ. 

೪೬, ಆ ಶಾಸನಗಳ ಮುಂದೆ ಶುದ್ಧವಾದ ತುಪ್ಪದ ಏಳು ಬತ್ತಿಯ. 
ದೀಪವನ್ನು ಹಚ್ಚಿ ಅರ್ಥ್ಯಪ್ರ ದಾನಮಾಡುತ್ತಾರೆ. 


42ರ ಶ್ರೀ ಸ್ಮಾಂದಮಹಾವುರಾಣಂ 


ನೈನೇದ್ಯಂ ಕುರ್ವತೇ ನಿತ್ಯಂ ಭಕ್ತಿಪೂರ್ನಂ ದ್ವಿಜೋತ್ತಮಾಃ । 

ರಾಮ ರಾಮೇತಿ ರಾಮೇತಿ ಮಂತ್ರಮಪ್ರ್ಯುಚ್ಚರಂತಿ ಹಿ ॥ ೪೭॥ 
ಅಶನೇ ಶಯನೇ ಪಾನೇ ಗಮನೇ ಚೋಪವೇಶನೇ। 

ಸುಖೇ ನಾಂಪ್ಯಥ ವಾ ದುಃಖೇ ರಾಮನುಂತ್ರಂ ಸಮುಚ್ಚರೇತ್‌ ॥ ೪೮ ॥ 
ನ ತಸ್ಯ ದುಃಖಂ ದೌರ್ಭಾಗ್ಯಂ ನಾಧಿವ್ಯಾಧಿಭಯಂ ಭನೇತ್‌ । 


ಆಯುಃ ಶ್ರಿಯಂ ಬಲಂ ತಸ್ಯ ನರ್ಧಯಂತಿ ದಿನೇದಿನೇ ॥೪೯॥ 

ರಾಮೇತಿ ನಾಮ್ನಾ ಮುಚ್ಯೇತ ಪಾಪಾದ್ವೈ ದಾರುಣಾದನಿ । 

ನರಕಂ ನಹಿ ಗಚ್ಛೇತ ಗತಿಂ ಪ್ರಾಪ್ನೋತಿ ಶಾಶ್ಚತೀಂ i ೫೦8 
ವ್ಯಾಸ ಉವಾಚ :-- 

ಇತಿ ಕೃತ್ವಾ ತತೋ ರಾಮಃ ಕೃತಕೃತ್ಯಮಮನ್ಯತ | 

ಪ್ರದಕ್ಸಿಣೇಕೃತ್ಯ ತದಾ ಪ್ರಣಮ್ಯ ಚ ದ್ವಿಜಾನ್ಪಹೂನ್‌ ॥ ೫೧ ॥. 

ದತ್ತಾ ದಾನಂ ಭೂರಿತರಂ ಗವಾಂಶ್ಚಮಹಿಷೀರಥಂ । 

ತತಃ ಸರ್ವಾನ್ನಿಜಾಂಸ್ತಾಂಶ್ಚ ನಾಕ್ಕನೇತದುನಾಚ ಹ ॥ ೫೨ ॥ 

ಅತ್ತೆನ ಸ್ಥೀಯತಾಂ ಸರ್ವೈಂರ್ಯಾನಚ್ಚೆಂದ್ರದಿವಾಕರೌ । 

ಯಾನನ್ಮೇರುರ್ಮಹೀಪೃಷ್ಠೇ ಸಾಗರಾಃ ಸಪ್ತ ಏನ ಚ ॥ ೫೩ ॥ 





೪೭. ನೈವೇದ್ಯವನ್ನು ಸಮರ್ಪಿಸಿ ಭಕ್ತಿ ಪೂರ್ವಕವಾಗಿ ರಾಮಮಂತ್ರವನ್ನು 
ಉಚ್ಚರಿಸುತ್ತಾರೆ. 

೪೮. ಮನುಷ್ಯನು ಊಟ, ಶಯನ, ಪಾನ, ಗಮನಕಾಲಗಳಲ್ಲಿಯೂ, 
ಕುಳಿತಾಗಲೂ, ಸುಖದುಃಖಗಳಲ್ಲಿಯೂ ರಾಮಮಂತ್ರವನ್ನು ಉಚ್ಚರಿಸಬೇಕು. 

೪೯. ಹೀಗೆ ರಾಮಧ್ಯಾನಮಾಡಿದವನಿಗೆ ದುಃಖ, ದಾರಿದ್ರ್ಯ, ಮನೋವ್ಯಥೆ, 
ಮತ್ತು ರೋಗಗಳ ಭಯವಿರುವುದಿಲ್ಲ. ಅವನಿಗೆ ಪ್ರತಿದಿನವೂ ಆಯುಸ್ಸೂ, 
ಸಂಪತ್ತೂ, ಶಕ್ತಿಗಳೂ ಹೆಚ್ಚುವುವು. 

೫೦. ರಾಮನಾಮೋಚ್ಛಾರಣೆಯಿಂದ ಭಯಂಕರವಾದ ಪಾಪದಿಂದಲೂ 
ಮುಕ್ತನಾಗಿ ನರಕಗಾಮಿಯಾಗದೆ ಶಾಶ್ವತಮೋಕ್ಸವನ್ನೇ ಪಡೆಯುವನು. 

೫೧-೫೨. ವ್ಯಾಸನು ಹೇಳುತ್ತಾನೆ:-ರಾಮನು ಈ ರೀತಿ ಜೀರ್ಣೋದ್ಧಾರ 
ಮಾಡಿ ನಾನು ಧನ್ಯನಾದೆನೆಂದು ತಿಳಿದನು. ಆ ಬ್ರಾಹ್ಮಣರನ್ನೈಲ್ಲ ಪ್ರದಕ್ಷಿಣ 
ನಮಸ್ಕಾರಮಾಡಿ ಅವರಿಗೆ ಗೋವು, ಕುದುರೆ, ಎಮ್ಮೆ, ರಥ ಇವುಗಳನ್ನು 
ಬಹುವಾಗಿ ದಾನಕೊಟ್ಟು ಹೀಗೆಂದನು. 

೫೩-೫೮. ""ನೀವೆಲ್ಲರೂ ಚಂದ್ರಸೂರ್ಯರು, ಮೇರುಸರ್ವತ, ಸಪ್ತ 
ಸಮುದ್ರಗಳು ಭೂಮಿಯಲ್ಲಿ ಇರುವವರೆಗೆ ಇಲ್ಲಿಯೇ ವಾಸಮಾಡಬೇಕು. ಅಯ್ಯಾ 
ದ್ವಿಜರೆ! ನನ್ನ ಅಪ್ಪಣೆಯನ್ನು ರಾಜರಾಗಲಿ, ಮದೋನ್ಮತ್ತರಾದ ವೈಶ್ಯರಾಗಲಿ 





ಚತುಸ್ವ್ವಿಂಶೋರಧ್ಯಾಯಃ ತ್ಕ 


ತಾನದತ್ರೆನ ಸ್ಥಾತವ್ಯಂ ಭವದ್ಭಿರ್ಹಿ ನ ಸಂಶಯಃ । 


ಯದಾಹಿ ಶಾಸನಂ ವಿಪ್ರಾ ನ ಮನ್ಯಂತೇ ನೃಪಾ ಭುನಿ ॥ ೫೪ ॥ 
ಅಥವಾ ನಣಿಜಃ ಶೂರಾ ಮದಮಾಯಾನಿನೋಹಿತಾಃ । 

ಮದಾಜ್ಞಾಂ ನ ಪ್ರಕುರ್ವಂತಿ ಮನ್ಯಂತೇ ವಾನತೇ ಜನಾಃ ॥ ೫೫ ॥ 
ತದಾ ನೈ ನಾಯುಪುತ್ರಸ್ಯ ಸ್ಮರಣಂ ಕ್ರಿಯತಾಂ ದ್ವಿಜಾಃ । 
ಸ್ಮೃತಮಾತ್ರೋ ಹನೂಮಾನ್ವೈ ಸಮಾಗತ್ಯ ಕರಿಷ್ಯತಿ ॥ ೫೬ ॥ 
ಸಹಸಾ ಭಸ್ಮ ತಾನ್ಸತ್ಯಂ ನಚನಾನ್ಮೇ ನ ಸಂಶಯಃ । 

ಯ ಇದಂ ಶಾಸನಂ ರಮ್ಯಂ ಪಾಲಯಿಷ್ಯತಿ ಭೂಪತಿಃ 1 ೫೭॥ 


ವಾಯುಪುತ್ರಃ ಸದಾ ತಸ್ಯ ಸೌಖ್ಯಮೃದ್ಧಿಂ ಪ್ರದಾಸ್ಯತಿ । 

ದದಾತಿ ಪುತ್ರಾನ್ಸೌತ್ರಾಂಶ್ಚ ಸಾಧ್ವೀಂ ಪಶ್ಚೀಂ ಯಶೋ ಜಯಂ ॥ ೫೮ ॥ 
ಇತ್ಯೇವಂ ಕಥಯಿತ್ವಾ ಚ ಹನುಮುಂತಂ ಪ್ರಬೋಧ್ಯ ಚ। 

ನಿವರ್ತಿತೋ ರಾಮದೇವಃ ಸಸೈನ್ಯಃ ಸಪರಿಚ್ಛದಃ ॥೫೯॥ 
ವಾದಿತ್ರಾಣಾಂ ಸ್ಪನೈರ್ನಿಷ್ಟಕ್ಸೂಚ್ಯಮಾನಶುಭಾಗಮಃ । 
ಶ್ವೇತಾತಪತ್ರಯುಕ್ತೋಂಸೌ ಚಾಮರೈರ್ವೀಜಿತೋ ನರೈಃ । 
ಅಯೋಧ್ಯಾಂ ನಗರೀಂ ಪ್ರಾಪ್ಯ ಚಿರಂ ರಾಜ್ಯಂ ಚಕಾರ ಹ ॥ ೬೦॥ 


ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ರ್ಯಾಂ ಸಂಹಿತಾಯಾಂ 

ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ "ಬ್ರಹ್ಮ 

ನಾರದಸಂವಾದೇ ಶ್ರೀರಾಮೇಣ ಬ್ರಾಹ್ಮಣೇಭ್ಯಃ ಶಾಸನಪಟ್ಟ ಪ್ರದಾನನರ್ಣನಂ'' 
ನಾಮ ಚತುಸ್ವಿಂಶೋಂಧ್ಯಾಯಃ 


ನೆರವೇರಿಸದಿದ್ದರೆ ಆಗ ವಾಯುತನಯನಾದ ಆಂಜನೇಯನನ್ನು ಸ್ಮರಿಸಿರಿ. 
ಸ್ಮರಣಮಾತ್ರದಿಂದಲೇ ಹನುಮಂತನು ಇಲ್ಲಿಗೆ ಬಂದು ನನ್ನ ಮಾತಿನಂತೆ 
ಅವರನ್ನು ಬೂದಿಮಾಡುವನು. ಈ ನನ್ನ ಶಾಸನವನ್ನು ಕಾಪಾಡುವ ರಾಜನಿಗೆ 
ಹನುಮಂತನು ಸೌಖ್ಯವನ್ನೂ, ಸಂಪತ್ಸಮೃದ್ಧಿಯನ್ನೂ , ಪುತ್ರಪೌತ್ರರನ್ನೂ, 
ಪತಿವ್ರತೆಯಾದ ಪತ್ಲಿಯನ್ನೂ , ಯಶಸ್ಸನ್ನೂ, ಜಯವನ್ನೂ ಕೊಡುವನು. 

೫೯-೬೦. ಹೀಗೆ ಹನುಮಂತನಿಗೂ ತಿಳಿಸಿ ರಾಮನು ಸೈನ್ಯ ಸಾಮಗ್ರಿ 
ಗಳೊಡನೆ ವಾದ್ಯಗಳ ಧ್ವನಿಯಿಂದ ತನ್ನ ಶುಭಾಗಮನವನ್ನು ಸೂಚಿಸುತ್ತ 
ಶ್ವೇತಚ್ಛತ್ರವುಳ್ಳವನಾಗಿ ಚಾಮರಗಳಿಂದ ಬೀಸಿಸಿಕೊಳ್ಳುತ್ತ ಅಯೋಧ್ಯೆಗೆ. 
ಹೋಗಿ ಬಹುಕಾಲ ರಾಜ್ಯಭಾರಮಾಡಿದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ 
ಮಾಹಾತ್ಮ್ಮ್ಯದಲ್ಲಿ ಬ್ರಹ್ಮನಾರದ ಸಂವಾದದಲ್ಲಿ "" ಶಾಸನಪಟ್ಟ ಪ್ರದಾನನರ್ಣನ''ವೆಂಬ 
ಮೂನತ್ತನಾಲ್ಕನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಪಂಚತ್ರಿಂಶೋಧ್ಯಾಯಃ 
ಶ್ರೀರಾನುಚಂದ್ರಕೃತ ಧರ್ಮಾಂರಣ್ಯತೀರ್ಥಕ್ಷೇತ್ರ ಜೀಣೊೋೋದ್ಧಾರವರ್ಣನಂ 
ನಾರದ ಉವಾಚ: 

ಭಗವನ್ಹೇನದೇನೇಶ ಸೃಷ್ಟಿಸಂಹಾರಕಾರಕ । 
ಗುಣಾತೀತೋ ಗುಣೈರ್ಯುಕ್ತೋ ಮುಕ್ತೀನಾಂ ಸಾಧನಂ ಪರಂ ॥ ೧॥ 
ಸಂಸ್ಥಾಪ್ಯ ನೇದಭವನಂ ನಿಧಿನದ್ದಿಜಸತ್ತ ಮಾನ್‌ | 
ಕಂ ಚಕ್ರೇ ರಘುನಾಥಸ್ತು ಭೂಯೋ$ಯೋಧ್ಯಾಂ ಗತಸ್ತದಾ । 


ಸ್ವಸ್ಥಾನೇ ಬ್ರಾಹ್ಮಣಾಸ್ತತ್ರ ಕಾನಿ ಕರ್ಮಾಣಿ ಚಕ್ರಿರೇ ॥೨॥ 
ಬ್ರಹ್ಮೋವಾಚ:-- 

ಇಷ್ಟಾಪೂರ್ತರತಾಃ ಶಾಂತಾಃ ಪ್ರತಿಗ್ರಹಸರಾಜ್ಮುಖಾಃ nan 
ರಾಜ್ಯಂ ಚಕ್ತುರ್ವನಸ್ಯಾಸ್ಯ ಪುರೋಧಾ ದ್ವಿಜಸತ್ತಮಃ । 

ಉವಾಚ ರಾಮಪುರತಸ್ತ್ರೀರ್ಥ ಮಾಹಾತ್ಮ $ನುತ್ತಮುಂ ॥೪॥ 
ಪ್ರಯಾಗಸ್ಯ ಚ ಮಾಹಾತ್ಮ್ಯಂ ತ್ರಿನೇಣೀಫಲಮುತ್ತಮಂ । 
ಪ್ರಯಾಗತೀರ್ಥಮಹಿಮಾ ಶುಕ್ಲ ತೀರ್ಥಸ್ಯ ಚೈನ ಹಿ ॥೫॥ 
ಸಿದ್ಧಕ್ಸೇತ್ರಸ್ಯ ಕಾಶ್ಯಾಶ್ಚ ಗಂಗಾಯಾ ಮಹಿಮಾ ತಥಾ | 

ವಸಿಷ್ಮಃ ಕಥಯಾಮಾಸ ತೀರ್ಥಾನ್ಯನ್ಯಾನಿ ನಾರದ ॥೬॥ 





ಕನ್ನಡದ ಅನುವಾದ 
ಶ್ರೀರಾಮಚಂದ್ರ ಕೃತ ಧರ್ಮಾರಣ್ಯತೀರ್ಥಕ್ಸೇತ್ರ ಜೀರ್ಣೋಧ್ಭಾರನರ್ಣನ 

೧-೨. ನಾರದನು ಹೇಳುತ್ತಾನೆ:-ದೇವತೆಗಳಿಗೆ ಒಡೆಯನೂ ಪ್ರಪಂಚದ 
ಸೃಷ್ಟಿ ಮತ್ತು ಸಂಹಾರಗಳನ್ನು ಮಾಡುವವನೂ ಆಗಿರುವ ಓ ಬ್ರಹ್ಮದೇವನೆ! 
ನಿರ್ಗುಣನೂ ಗುಣಸಹಿತನೂ ಆಗಿರುವ ರಾಘವನು ಮುಕ್ತಿಸಾಧನವಾದ ವೇದ 
ಭವನದಲ್ಲಿ ದ್ವಿಜಶ್ರೇಷ್ಠರನ್ನು ಸ್ಥಾಪಿಸಿ ಅಯೋಧ್ಯೆಯನ್ನು ಸೇರಿ ಏನನ್ನು 
ಮಾಡಿದನು? ಬ್ರಾಹ್ಮಣರು ತಮ್ಮ ಸ್ಥಳದಲ್ಲಿಯೇ ನೆಲಸಿದವರಾಗಿ ಯಾವ 
ಯಾವ ಕರ್ಮಗಳನ್ನು ನೆರವೇರಿಸಿದರು? 

೩-೪. ಬ್ರಹ್ಮನು ಹೇಳುತ್ತಾನೆ:--ಅತ್ತ ಬ್ರಾಹ್ಮಣರು ಇಷ್ಟಾ ಪೂರ್ತಗಳಲ್ಲಿ 
ನಿರತರೂ, ಶಾಂತರೂ, ದಾನವನ್ನು ತೆಗೆದುಕೊಳ್ಳದವರೂ ಆಗಿ ವನರಾಜ್ಯದಲ್ಲಿ 
ವಾಸಿಸಿದರು. ಇತ್ತ ಪುರೋಹಿತರಾದ ವಸಿಷ್ಕರು ರಾಮನ ಮುಂದೆ ಉತ್ತಮ 
ವಾದ ತೀರ್ಥಮಾಹಾತ್ಮ್ರ್ಯೈಯನ್ನು ಹೇಳಿದರು. 

೫-೭. ನಾರದ! ವಸಿಷ್ಠರು ಪ್ರಯಾಗ, ತ್ರಿವೇಣೀ, ಶುಕ್ಲತೀರ್ಥ, ಸಿದ್ಧ 
ಕ್ಷೇತ್ರ, ಕಾಶೀ, ಗಂಗೆ ಇವುಗಳ, ಇನ್ನೂ ಇತರ ತೀರ್ಥಗಳ ಮಾಹಾತ್ಮ್ಯೆಯನ್ನು 


ಪಂಚತ್ರಿಂಶೋರಿಧ್ಯಾಯಃ ಇಸಿಲ 


ಧರ್ಮಾಃ ರಣ್ಯೇ ಸುವರ್ಣಾಯಾ ಹರಿಕ್ಸೇತ್ರಸ್ಯ ತಸ್ಯ ಚ। 
ಸ್ನಾಸದಾನಾದಿಕಂ ಸರ್ವಂ ವಾರಾಣಸ್ಕಾ ಯನಾಧಿಕಂ ॥೭॥ 
ಏತಚ್ಛ್ರುತ್ವಾ ರಾಮದೇವಃ ಸ ಚಮತೃತಮಾನಸಃ [ 

ಧರ್ಮಾಃರಣ್ಯೇ ಪುನರ್ಯಾತ್ರಾಂ ಕರ್ತುಕಾಮಃ ಸಮಭ್ಯಗಾತ್‌ ॥ ೮॥ 
ಸೀತಯಾ ಸಹ ಧರ್ಮಜ್ನೋ ಗುರುಸೈನ್ಯಪುರಸ್ಸರಃ । 


ಲಕ್ಷ್ಮಣೇನ ಸಹಭ್ರಾತ್ರಾ ಭರತೇನ ಸಹಾಯವಾನ್‌ ॥೯॥ 

ಶತ್ರುಫ್ನೇನ ಪರಿನೃತೋ ಗತೋ ಮೋಹೇರಕೇ ಪುರೇ 1 

ತತ್ರ ಗತ್ವಾ ನಸಿಷ್ಠಂ ತು ಪೃಚ್ಛತೇಂಸೌ ಮಹಾಮನಾಃ ॥ ೧೦ n 
ರಾಮ ಉವಾಚ:- 

ಧರ್ಮಾಃ ರಣ್ಯೇ ಮಹಾಕ್ಸೇತ್ರೇ ಕಂ ಕರ್ತವ್ಯಂ ದ್ವಿಜೋತ್ತನು । 

ದಾನಂ ವಾ ನಿಯಮೋ ವಾಥ ಸ್ನಾನಂ ನಾ ತಸಉತ್ತಮಂ ॥ ೧೧॥ 

ಧ್ಯಾನಂ ವಾಂಥ ಕ್ರತುಂ ವಾಂಥ ಹೋಮಂ ವಾ ಜಪಮುತ್ತಮಂ । 

ದಾನಂ ವಾ ನಿಯಮಂ ನಾಥ ಸ್ನಾನಂ ನಾ ತಪ ಉತ್ತಮಂ ॥೧೨॥ 

ಯೇನ ವೈ ಕ್ರಿಯಮಾಣೇನ ತೀರ್ಥೆಸ್ಮಿನ್ಹಿಜಸತ್ತಮ । 

ಬ್ರಹ್ಮಹತ್ಯಾದಿ ಪಾಸೇಭ್ಯೋ ಮುಚ್ಯತೇ ತದ್ಬ್ರನೀಹಿಮೇ 1 ೧೩ ॥ 
ವಸಿಷ್ಠ ಉವಾಚ:- 

ಯಜ್ಞ ೦ ಕುರು ಮಹಾಭಾಗ ಧರ್ಮಾಃರಣ್ಯೇತ್ವನುತ್ತಮಂ । 

ದಿನೇ ದಿನೇ ಕೋಟಗುಣಂ ಯಾನದ್ವ ರ್ಷಶತಂ ಭನೇತ್‌ ॥ ೧೪ ॥ 


ತಿಳಿಸಿದರು. ಧರ್ಮಾರಣ್ಯದಲ್ಲಿರುವ BH ಮತ್ತು ಹರಿಕ್ಸೇತ್ರ ಗಳಲ್ಲಿ 
ಮಾಡಿದ ಸ್ನಾನ ದಾನಾದಿಗಳು ಕಾಶಿಗಿಂತಲೂ ಸ್ನ ಲ್ಪ ಅಧಿಕವಾಡುನೆಂದರು. 

೮. ಇದನ್ನು ಕೇಳಿ ಕುತೂಹಲಗೊಂಡ ಜಾಸು ಮರಳಿ ಧರ್ಮಾರಣ್ಯಕ್ಕೆ 
ಯಾತ್ರೆಹೊರಟನು. 

೯-೧೦. ಅವನು ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ರಿಂದಲೂ, ದೊಡ್ಡ 
ಸೈನ್ಯದಿಂದಲೂ ಕೂಡಿ ಮೋಹೇರಕಪಟ್ಟಣನನ್ನು ಸೇರಿ ವಸಿಷ್ಠರನ್ನು ಹೀಗೆ 
ಕೇಳಿದನು. 

೧೧-೧೩. ರಾಮನು ಚಹಾ ಸೂಡಿ ದಾನ, ವ್ರತ, 
ಸ್ನಾನ, ಧ್ಯಾನ, ಯಜ್ಞ, ಹೋಮ, ಜಪ ಇವುಗಳಲ್ಲಿ ಯಾವುದನ್ನು ಈ ತೀರ್ಥ 
ದಲ್ಲಿ ಮಾಡಿದರೆ ಮಾನವನು ಬ ಹ ಒಹತ್ಯಾದಿ ಪ ಪಾಸಗಳಿಂದ ಮುಕ್ತನಾಗುವನು? 

೧೪. ವಸಿಷ್ಮನು ನ ನೆ:ಮಹಾನುಭಾವನಾದ ರಾಮ! ನೀನು 
ಧರ್ಮಾರಣ್ಯದಲ್ಲಿ ಉತ್ತಮವಾದ ಯಜ್ಞ ವನ್ನು ಮಾಡು. ಅದು ಒಂದು 
ನೂರು ವರ್ಷದವರೆಗೆ ಪ್ರತಿನಿತ್ಯವೂ ಕೋಟ ಮಡಿಯಾಗುವುದು. 


2೪೨ ಶ್ರೀ ಸ್ಥಾಂದಮಹಾಪುರಾಣಂ 


ತಚ್ಚ ತ್ಕಾ ಚೈವ ಗುರುತೋ ಯಜ್ಞಾರಂಭಂ ಚಕಾರ ಸಃ । 


ತಸ್ಮಿನ್ನವಸರೇ ಸೀತಾ ರಾಮಂ ವ್ಯಾಜ್ಞ ಪಯನ್ಮುದಾ ॥ ೧೫ ॥ 

ಸ್ವಾಮಿನ್ಸೂರ್ವಂ ತ್ವಯಾ ನಿಪ್ರಾ ವೃತಾ ಯೇ ನೇದಪಾರಗಾಃ । 

ಬ್ರಹ್ಮನಿಷ್ಣುಮಹೇಶೇನ ನಿರ್ನಿತಾಯೇ ಪುರಾ ದ್ವಿಜಾಃ ॥ ೧೬॥ 

ಕೃತೇ ತ್ರೇತಾಯುಗೇ ಚೈವ ಧರ್ಮಾಃ ರಣ್ಯನಿವಾಸಿನಃ | 

ನಿಪ್ರಾಂಸ್ತಾನ್ಹೈ ನೃಣುಷ್ಯ ತ್ವಂ ತೈರೇನ ಸಾಧಕೊಆಧ್ವರಃ ॥ ೧೭॥ 

ತಚ್ಚು ತ್ವಾ ರಾಮದೇನೇನ ಆಹೂತಾ ಬ್ರಾಹ್ಮಣಾಸ್ತದಾ | 

ಸ್ಥಾಪಿತಾಶ್ಚ ಯಥಾಪೂರ್ವನುಸ್ಮಿನ್ಮೋಹೇರಕೇ ಪುರೇ ॥ ೧೮ ॥ 

ತೈಸ್ತೃಷ್ಟಾದಶಸಂಖ್ಯಾಕೈಸ್ತ್ರೈನಿದ್ಯೈರ್ಮೆೇ ಹಿ ವಾಡವೈಃ । 

ಯಜ್ಞಂ ಚಕಾರ ನಿಧಿನತ್ತೈಕೇವಾಯತಬುದ್ಧಿಭಿಃ ॥೧೯॥ 

ಕುಶಿಕಃ ಕೌಶಿಕೋ ನತ್ಸ ಉಪಮನ್ಶ್ಯುಶ್ಚ ಕಾಶ್ಯಪಃ | 

ಕೃಷ್ಣಾತ್ರೇಯೋ ಭರದ್ವಾಜೋ ಧಾರಿಣಃ ಶೌನಕೋ ವರಃ ॥ ೨೦॥ 

ಮಾಂಡವ್ಕ್ಯೋ ಭಾರ್ಗವಃ ಸೈಂಗ್ಯೋ ವಾತ್ಸೋ ಲೌಗಾಕ್ಸ ಏನ ಚ । 

ಗಾಂಗಾಯನೋಫ ಗಾಂಗೇಯಃ ಶುನಕಃ ಶೌನಕಸ್ತಥಾ won 
ಬ್ರಹ್ಮೋವಾಚ :- 

ಏಭಿರ್ವಿಪ್ಟೈಃ ಕ್ರತುಂ ರಾಮಃ ಸಮಾಪ್ಯ ನಿಧಿವನ್ನೃಸಃ । 

ಚಕಾರಾಂವಭೃಥಂ ರಾಮೋ ವಿಪ್ರಾನ್ಸಂಪೂಜ್ಯ ಭಕ್ತಿತಃ ॥ ೨೨ ॥ 





೧೫. ರಾಮನು ಗುರುಗಳಿಂದ ಆ ಮಾತನ್ನು ಕೇಳಿ ಯಜ್ಞವನ್ನು ಆರಂಭಿಸಿ 
ದನು. ಆಗ ಸೀತೆಯು ರಾಮನಲ್ಲಿ ಸಂತೋಷದಿಂದ ಹೀಗೆ ವಿಜ್ಞಾಪಿಸಿ 
ಕೊಂಡಳು. 

೧೬-೧೮. ಆ ನಾಥ! ನೀನು ಹಿಂದೆ ಬ್ರಹ್ಮಾದಿಗಳಿಂದ ನಿರ್ಮಿತರಾದ ಕೃತ 
ತ್ರೇತಾಯುಗಗಳಿಂದ ಧರ್ಮಾರಣ್ಯವಾಸಿಗಳಾಗಿರುವ ಶ್ರೋತ್ರಿಯರಾದ 
ಬ್ರಾಹ್ಮಣರನ್ನು ವರಿಸಿರುವೆ. ಅವರನ್ನೆ ಈಗಲೂ ಕರೆಯಿಸಿ ಯಜ್ಞವನ್ನು 
ನೆರವೇರಿಸು” ಅದನ್ನು ಕೇಳಿ ರಾಮನು ಆ ಬ್ರಾಹ್ಮಣರನ್ನು ಕರೆಯಿಸಿ ಮೊದಲಿ 
ನಂತೆ ಮೋಹೇರಕಪಟ್ಟಿಣದಲ್ಲಿ ಸ್ಥಾಪಿಸಿದನು. 

೧೯-೨೧. ಕುಶಿಕ, ಕೌಶಿಕ, ವತ್ಸ, ಉಪಮನ್ಯು, ಕಾಶ್ಯಪ, ಕೃಷ್ಣಾ 
ತ್ರೇಯ, ಭರದ್ವಾಜ, ಧಾರಿಣ, ವರ, ಶೌನಕ, ಮಾಂಡವ್ಯ, ಭಾರ್ಗವ, ಪೈಂಗ್ಯ, 
ವಾತ್ಸ್ಯ, ಲೌಗಾಕ್ಸೃ, ಗಾಂಗಾಯನ, ಗಾಂಗೇಯ, ಶುನಕ, ಶೌನಕ ಎಂಬ 
ವಿಶಾಲ ಮನಸ್ಸುಳ್ಳ ಹದಿನೆಂಟು ಮಂದಿ ಮೋಹೇರಕವಾಸಿಗಳಾದ ತೈನಿದ್ಯ 
ಬ್ರಾಹ್ಮಣರಿಂದ ಯಜ್ಞ ಮಾಡಿಸಿದನು. 

೨೨. ಬ್ರಹ್ಮನು ಹೇಳುತ್ತಾನೆ: ಹೀಗೆ ಬ್ರಾಹ್ಮಣರಿಂದ ರಾವ"ನು 


ಪಂಚತ್ರಿಂಶೋರಿಧ್ಯಾಯಃ 4೪ 


ಯಜ್ಞಾಂತೇ ಸೀತಯಾ ರಾಮೋ ವಿಜ್ಞಪ್ತಃ ಸುವಿನೀತಯಾ । 


ಅಸ್ಯಾಂ ಧೃರಸ್ಯ ಸಂಪತ್ತೌ ದಕ್ಷಿಣಾಂ ದೇಹಿ ಸುವ್ರತ ॥ ೨೩॥ 
ಮನ್ನಾನ್ನಾ ಚ ಪುರಂ A ಸ್ಥಾಸ್ಯತಾಂ ಶೀಘ್ರಮೇನ ಚ । 

ಸೀತಾಯಾ ವಚನಂ ಶ್ರುತ್ವಾ ತಥಾ ಚಕ್ರೇ ನೃಪೋತ್ತಮಃ ॥ ೨೪ ॥ 
ತೇಷಾಂ ಚ ಬ್ರಾ ಹ್ರ ಣಾನಾಂ' ಚ ಸ್ಥಾ ನಸೇಕಂ ಸುನಿರ್ಭಯಂ । 

ದತ್ತಂ ರಾಮೇಣ ಸೀತಾಯಾಃ ಸಂತೋಷಾಯ ಮುಹೀಭೃತಾ ॥ ೨೫॥ 
ಸೀತಾಪುರಮಿತಿಖ್ಯಾ ತಂ ನಾಮ ಚಕ್ರೇ ತದಾ ಕಲ 

ತಸ್ಯಾಂ ಧಿದೇನ್ಯೌ ನರ್ತೇತೇ ಜಿ ಚೈನ ಸುಮಂಗಲಾ ॥ ೨೬ ॥ 
ಮೋಹೇರಕಸ್ಯ ಪುರತೋ ಗ್ರಾಮದ್ವಾದಶಕಂ ಪುರಃ । 

ದದೌ ವಿಪ್ರಾಯ ನಿದುಷೇ ಸಮುತ್ಕಾಯ ಪ್ರಹರ್ಹಿತಃ 1 ೨೭ 
ತೀರ್ಥಾಂತರಂ ಜಗಾಮಾಶು ಕಾಶ್ಯ ಪೀಸರಿತಸ್ತಟೇ । 

ವಾಡವಾಃ ಕೇಸಿ ನೀತಾಸ್ತೇ ರಾಮೇಣ ಸಹ ಧರ್ಮವಿತ್‌ ॥ ೨೮ ॥ 
ಧರ್ಮಾಲಯೇ ಗತಃ ಸದ್ಯೋ ಯತ್ರ ಮಾಲಾ ಕಮಂಡಲುಃ । 

ಪುರಾ ಧರ್ಮೇಣ ಸುಮ ಹತ್ಯೃತಂ ಯತ್ರ ತಪೋ ಮುನೇ ॥ ೨೯॥ 





ವಿಧಿಯಂತೆ ಯಜ್ಞವನ್ನು ಮುಗಿಸಿ ಭಕ್ತಿಯಿಂದ ಅವರನ್ನು ಪೂಜಿಸಿ ಅನಭೃಥ 
ಸ್ಪಾನಮಾಡಿದನು. 

೨೩. ಯಜ್ಞದ ಕೊನೆಯಲ್ಲಿ ವಿನೀತಳಾದ ಸೀತೆಯು ರಾಮನನ್ನು ಕುರಿತು 
ನಾಥ! ಈ ಯಜ್ಞವು ಸಾಂಗವಾಗುವುದಕ್ಕಾಗಿ ದಕ್ಷಿಣೆಯನ್ನು ಕೊಡು, 

೨೪. ಅಲ್ಲಿ ನನ್ನ ಹೆಸರಿನಿಂದ ಶೀಘ್ರವಾಗಿ ಪಟ್ಟಣವನ್ನು ಸ್ಥಾಪಿಸು 
ಎಂದು ವಿಜ್ಞಾನಿಸಿಕೊಳ್ಳಲು ರಾಮನು ಅವಳ ಮಾತಿನಂತೆ ನಡೆದನು. 

೨೫. ಸಾರ್ವಭೌಮನಾದ ರಾಮನು ಸೀತೆಯ ಸಂತೋಷಕ್ಕಾಗಿ 
ಆ ಬ್ರಾಹ್ಮಣರಿಗೊಂದು ನಿರ್ಭಯವಾದ ಸ್ಥ ಶಳವನ್ನೇರ್ಪಡಿಸಿದನು. 

೨೬, ಅದಕ್ಕೆ ಸೀತಾಪುರವೆಂಬ ಪ್ರಸಿದ್ಧ ವಾದ ಹೆಸ ಸರಸ್ನಿಟ್ಟನು. ಸೀತಾ 
ಪುರಕ್ಕೆ ಶಾಂತಾ 5 ಸುಮಂಗಳೆಯರು ಆಧಿಜೇವತೆಗಳಾದರು. 

೨೭. ಮೋಹೇರಕದ ಮುಂದಿರುವ ಹನ್ನೆರಡು ಗ್ರಾಮಗಳನ್ನು ವಿದ್ವಾಂಸ 
ನಾದ ಬ್ರಾಹ್ಮಣನಿಗೆ ಸಂತೋಷದಿಂದೆದ್ದು ದಾನಮಾಡಿದನು. 

೮-೨೯. ಕೂಡಲೆ ಧರ್ಮಜ್ಞನಾದ ರಾಮನು ಕಾಶ್ಯನೀನದಿಯ ದಡದಲ್ಲಿ 
ಮತ್ತೊಂದು ತೀರ್ಥಕ್ಕೆ ಪಯಣ ಬೆಳೆಸಿದನು. ಆಗ ಆತನು ಅಲ್ಲಿಗೆ ಕೆಲವು 
ಬ್ರಾಹ್ಮಣರನ್ನೂ ಕರೆದುಕೊಂಡುಹೋದನು. ಆತನು ತೀರ್ಥಯಾತ್ರೆ ಮಾಡುತ್ತ 
ಹಿಂದೆ ಯಮಧರ್ಮನು ತಪಸ್ಸನ್ನು ಮಾಡಿದುದರಿಂದ ಅವನ ಜಸಸರ ಮತ್ತು 
ಕಮಂ ಡಲುಗಳುಳ್ಳ ಧರ್ಮಾಲಯಕ್ಕೆ ಹೋದನು. 


ತ ಶ್ರೀಸಾ ಂದಮಹಾಪುರಾಂ 


ತದಾರಭ್ಯ ಸುವಿಖ್ಯಾತಂ ಧರ್ಮಾಲಯವನಿಂತಿ ಶ್ರುತಂ । 


ದದೌ ದಾಶರಥಿಸ್ತತ್ರ ಮಹಾದಾನಾನಿ ಸೋಡಶ aon 
ಯೇ ಪಂಚಾಶತ್ತದಾ ಗ್ರಾಮಾಃ ಸೀತಾಪುರಸಮನ್ನಿತಾಃ । 
ಸತ್ಯಮಂದಿರಸರ್ಯಂತಾ ರಘುನಾಥೇನ ವೈ ತದಾ ॥೩೧॥ 


ಸೀತಾಯಾ ವಚನಾತ್ತತ್ರ ಗುರುವಾಕ್ಕೇನ ಚೈನ ಹಿ । 
ಆತ್ಮನೋ ವಂಶವೃದ್ಧ್ಯರ್ಥಂ ದ್ವಿಜೇಭ್ಯೋಂದಾದ್ರಘೂತ್ತಮಃ ॥ ೩೨॥ 
ಅಷ್ಟಾದಶಸಹಸ್ರಾಣಾಂ ದ್ವಿಜಾನಾಮಭವತ್ಕುಲಂ | 


ವಾತ್ಸ್ಯಾಯನ ಉಪಮನ್ಯುರ್ಜಾತೂಕರ್ಣ್ಯೋಂ ಥಸಿಂಗಲಃ 1೩೩ 
ಭಾರದ್ಯಾಜಸ್ತಥಾ ವತ್ಸಃ ಕೌಶಿಕಃ ಕುಶ ಏನ ಚ । 

ಶಾಂಡಿಲ್ಯಃ ಕಶ್ಯಸಶ್ಚೈವ ಗೌತಮಶ್ಸಾಂಧನಸ್ತಥಾ ॥ ೩೪ ॥ 
ಕೃಷ್ಣಾತ್ರೇಯಸ್ತಥಾ ನತ್ಸೋ ವಸಿಷ್ಕೋ ಧಾರಣಸ್ತಥಾ | 

ಭಾಂಡಿಲಕ್ಷೈವ ನಿಜ್ಜೇಯೋ ಯೌವನಾಶ್ಚಸ್ತತಃ ಪರಂ ॥ ೩೫ ॥ 
ಕೃಷ್ಣಾಯನೋಪಮನ್ಯೂ ಚ ಗಾರ್ಗ್ಯಮುದ್ಧ ಲಮೌಖಕಾಃ । 

ಪುಶಿಃ ಪರಾಶರಶ್ಚೈವ ಕೌಂಡಿನ್ಯಶ್ಚ ತತಃ ಪರಂ ॥ ೩೬ ॥ 
ಪಂಚಪಂಚಾಶದ್ದಾ $ಮಾಣಾಂ ನಾಮಾನ್ಯೇವಂ ಯಥಾಕ್ರಮಂ | 
ಸೀತಾಪುರಂ ಶ್ರೀಕ್ಸೇತ್ರಂ ಚ ಮುಶಲೀ ಮುದ್ಧಲೀ ತಥಾ ॥೩೭॥ 
ಜ್ಯೇಷ್ಮಲಾ ಶ್ರೀಯಸ್ಥಾನಂ ಚ ದಂತಾಲೀ ವಟಪತ್ರಕಾ ] 

ರಾಜ್ಞಃ ಪುರಂ ಕೃಷ್ಣವಾಟಿಂ ದೇಹಂ ಲೋಹಂಚನಸ್ಥ ಲಂ ॥ ೩೮॥ 


೩೦. ಪ್ರಸಿದ್ಧವಾದ ಧರ್ಮಾಲಯದಲ್ಲಿ ದಾಶರಥಿಯು ಹದಿನಾರು ಮಹಾ 
ದಾನಗಳನ್ನು ಮಾಡಿದನು. 

೩೧-೩೨. ಸೀತಾಪುರದಿಂದ ಸತ್ಯಮಂದಿರದವರೆಗೆ ಇರುವ ಐವತ್ತು 
ಗ್ರಾಮಗಳನ್ನು ಸೀತೆಯ ಮತ್ತು ಗುರುಗಳ ಮಾತಿನಂತೆ ಆತನು ತನ್ನ ವಂಶ 
ವೃದ್ಧಿಗಾಗಿ ಬ್ರಾಹ್ಮಣರಿಗೆ ದಾನಮಾಡಿದನು. 

೩೩-೩೬. ಹದಿನೆಂಟುಸಾನಿರ ಮಂದಿ ಬ್ರಾಹ್ಮಣರಿಗೆ ವಾತ್ಸ್ಯಾಯನ, 
ಉಪಮನ್ಯು, ಜಾತೂಕರ್ಣ್ಯ್ಯ, ಪಿಂಗಲ, ಭಾರದ್ವಾಜ, ವತ್ಸ, ಕೌಶಿಕ, ಕುಶ, 
ಶಾಂಡಿಲ್ಯ, ಕಶ್ಯಪ, ಗೌತಮ, ಛಾಂದನ, ಕೃಷ್ಣಾತ್ರೇಯ, ವಸಿಷ್ಠ, ಧಾರಣ, 
ಭಾಂಡಿಲ, ಯಾವನಾಶ್ವ, ಕೃಷ್ಣಾಯನ, ಗಾರ್ಗ್ಯ, ಮುದ್ಗಲ, ಮೌಖಕ, ಪ್ರತಿ, 
ಪರಾಶರ, ಕೌಂಡಿನ್ಯ ಎಂಬ ಕುಲಗಳಾದುವು. 

೩೭-೪ಳ. ರಾಮನು ಸೀತಾಪುರ, ಶ್ರೀಕ್ಷೇತ್ರ, ಮುಶಲೀ, ಮುದ್ಧಲೀ, 
ಜ್ಯೇಷ್ಮಲಾ, ಶ್ರೀಯಸ್ಕಾನ, ದಂತಾಲೀ, ವಟಪತ್ರಕಾ, ರಾಜಪುರ, ಕೃಷ್ಣ ವಾಟ, 


ಐಲ 
ದೇಹ, ಲೋಹ, ಚನಸ್ಮಲ, ಕೋಹೇಳ, ಚಂದನಕ್ಸೇತ್ರ, ಥಲ, ಹಸ್ತಿನಾಪುರ, 


ಪಂಚತ್ರಿಂಕೋತಿಢ್ಕಾಯಃ ' ಸಿಳ 


ಕೋಹೇಳಂ ಚಂದನಕ್ಸೇತ್ರಂ ಫಲಂ ಚ ಹಸ್ತಿನಾಪುರಂ । 


ಕರ್ಪಟಂ ಕನ್ನಜಹ್ನನೀ ನನೋಡ ಫಲಫಾನಲೀ (ರ ॥ 

ನೋಹೋದಧಂ ಶನೋ ಹೋರಲೀ ಗೋನಿಂದಣಂ ಥಲತ್ಯಜಂ ! 

ಚಾರಣಸಿದ್ಧಂ ಸೋದ್ಲೀತ್ರಾಭಾಜ್ಯಜಂ ವಟಮಾಲಿಕಾ ॥೪೦॥ 

ಗೋದಧರಂ ಮಾರಣಜಂ ಚೈನ ಮಾತ್ರಮಧ್ಯಂ ಚ ಮಾತರಂ । 

ಬಲನತೀ ಗಂಧನತೀ ಈಆನ್ಲೀ ಚ ರಾಜ್ಯಜಂ ॥ ೪೧ ॥ 

ರೂಪಾನಲೀ ಬಹುಧನಂ ಛತ್ರೀಟಿಂ ನಂಶಜಂ ತಥಾ । 

ಜಾಯಾಸಂರಣಂ ಗೋತಿಕೀ ಚ ಚಿತ್ರಲೇಖಂ ತಥೈನ ಚ ॥ ೪೨ ॥ 

ದುಗ್ಗಾನಲೀ ಹಂಸಾನಲೀ ಚ ನೈಹೋಲಂ ಚೈಲ್ಲಜಂ ತಥಾ । 

ನಾಲಾನಲೀ ಆಸಾವಲೀ ಸುಹಾಲೀ ಕಾಮತಃ ಪರಂ ॥ ೪೩॥ 

ರಾಮೇಣ ಪಂಚಪಂಚಾಶದ್ದಾ ಮಾಣಿ ನಸನಾಯ ಚ । 

ಸ್ವಯಂ ನಿರ್ಮಾಯ ದತ್ತಾನಿ ದ್ವಿಜೇಭ್ಯಸ್ತೇಭ್ಯ ಏನ ಚ ॥ ೪೪॥ 

ತೇಷಾಂ ಶ್ರುಶ್ರೂಷಣಾರ್ಥಾಯ ವೈಶ್ಯಾನ್ರಾಮೋ ನ್ಯವೇದಯತ್‌ । 

ಷಟ್ರಿಂಶಚ್ಚ ಸಹಸ್ರಾಣಿ ಶೂದ್ರಾಂಸ್ತೇಭ್ಯಶ್ಚತುರ್ಗುಣಾನ್‌ ॥ ೪೫ ॥ 

ತೇಭ್ಯೋ ದತ್ತಾನಿ ದಾನಾನಿ ಗವಾಶ್ವವಸನಾನಿ ಚ । 

ಹಿರಣ್ಯಂ ರಜತಂ ತಾಮ್ರಂ ಶ್ರದ್ಧಯಾ ಪರಯಾ ಮುದಾ ॥ ೪೬॥ 
ನಾರದ ಉವಾಚ: 


ಅಸ್ಟ್ಪಾದಶಸಹಸ್ರಾಸ್ತೇ ಬ್ರಾಹ್ಮಣಾ ವೇಡಪಾರಗಾಃ । 
ಕಥಂತೇ ವ್ಯಭಜನ್ಸಾ ಮಾನ್ಸಾ ಮೋತ್ಸನ್ನಂ ತಥಾ ನಸು । 
ವಸ್ತ್ರಾದ್ಯಂ ಭೂಷಣಾದ್ಯಂ ಚ ತನ್ಮೇ ಕಥಯ ಸುವ್ರತ ॥ ೪೭॥ 


ಕರ್ಪಟ, ಕಂನಜಹ್ನನೀ, ನನೋಡ, ಫನಫಾವಲೀ, ಮೋಹೋಧ, ಶಮೋ 
ಹೋರಲಿ, ಗೋವಿಂದಣ, ಥಲತ್ಯಜ, ಚಾರಣಸಿದ್ಧ, ಸೋದ್ಲೀತ್ರ, ಭಾಜ್ಯಜ, 
ವಟಮಾಲಿಕಾ, ಗೋಧರ, ಮಾರಣಜ, ಮಾತ್ರಮಧ್ಯ, ಮಾತರ, ಬಲವತೀ, 
ಗಂಧವತೀ, ಈಅಮ್ಲೀ, ರಾಜ್ಯಜ, ರೂಪಾವಲೀ, ಬಹುಧನ, ಛತ್ರೀಟಿ, ವಂಶಜ, 
ಜಾಯಾಸಂರಣ, ಗೋತಿಕೀ, ಚಿತ್ರಲೇಖ, ದುಗ್ಧಾವಲೀ, ಹಂಸಾವಲೀ, 
ವೈಹೋಲ, ಚೈಲ್ಲಜ, ನಾಲಾವಲೀ, ಆಸಾವಲೀ, ಸುಹಾಲೀ ಮೊದಲಾದ 
ಐವತ್ತೈದು ಗ್ರಾಮಗಳನ್ನು ನಿರ್ಮಿಸಿ ವಾಸಕ್ಕಾಗಿ ಆ ಬ್ರಾಹ್ಮಣರಿಗಿತ್ತನು. 
೪೫-೪೬, ಅವರ ಸೇವೆಗಾಗಿ ಮೂವತ್ತಾರು ಸಾವಿರ ವೈಶ್ಯರನ್ನೂ, ಅವರ 
ನಾಲ್ಕರಷ್ಟು ಶೂದ್ರರನ್ನೂ ಸ್ಥಾಪಿಸಿ ಸಂತೋಷಗೊಂಡು ಅನರಿಗೆ ಗೋವು, 
ಕುದುರೆ, ಬಟ್ಟಿ, ಚಿನ್ನ, ಬೆಳ್ಳಿ, ತಾಮ್ರಗಳನ್ನು ಅತಿ ಶ್ರದ್ಧೆಯಿಂದ ಕೊಟ್ಟನು. 
೪೭, ನಾರದನು ಹೇಳುತ್ತಾನೆ ;--ನೇದಪಾರಂಗತರಾದ ಆ ಹದಿನೆಂಟು 


awk ಶ್ರೀ ಸ್ಯಾಳನಮಶಖಾಪುರಾಣಂ 


ಬ್ರಹ್ಮೋವಾಚ: -- 
ಯಜಚ್ಚಾಂತೇ ದಕ್ಷಿಣಾ ಯಾವತ್ಸರ್ತ್ತಿಗ್ಬಿಃ ಸ್ವೀಕೃತಾ ಸುತ । 
ಮಹಾದಾನಾದಿಕಂ ಸರ್ವಂ ತೇಭ್ಯ ಏವ ಸಮರ್ಪಿತಂ n 
ಗ್ರಾಮಾಃ ಸಾಧಾರಣಾ ದತ್ತಾ ಮಹಾಸ್ಥಾನಾನಿ ವೈ ತದಾ । 
ಯೇ ವಸಂತಿ ಚ ಯತ್ರೈನ ತಾನಿ ತೇಷಾಂ ಭವಂತ್ಛಿತಿ ॥ 
ವಸಿಷ್ಠವಚನಾತ್ತತ್ರ ಗ್ರಾಮಾಸ್ತೇ ವಿಪ್ರಸಾತೃತಾಃ । 
ರಘೂದ್ವಹೇನ ಧೀರೇಣ ನೋದ್ವಸಂತಿ ಯಥಾ ದ್ವಿಜಾಃ ॥ 
ಧಾನ್ಯಂ ತೇಷಾಂ ಪ್ರದತ್ತಂ ಹಿ ವಿಪ್ರಾಣಾಂ ಚಾಂಮಿತಂ ವಸು । 
ಕೃತಾಂಜಲಿಸ್ತತೋ ರಾಮೋ ಬ್ರಾಹ್ಮಣಾನಿದಮಬ್ರನೀತ್‌ n 
ಯಥಾ ಕೃತಯುಗೇ ವಿಷ್ರಾಸ್ತ್ರೇತಾಯಾಂ ಚ ಯಥಾ ಪುರಾ। 
ತಥಾ ಚಾದ್ಯೈವ ವಸ್ತವ್ಯಂ ಮಮ ರಾಜ್ಯೇ ನ ಸಂಶಯಃ |! 
ಯತ್ಛಿಂಚಿದ್ದನಧಾನ್ಯಂ ಮಾ ಯಾನಂ ವಾ ವಸನಾನಿ ವಾ। 
ಮಣಂಯಃ ಕಾಂಚನಾದೀಂಶ್ಚ ಹೇಮಾದೀಂಶ್ಚ ತಥಾ ವಸು i 
ತಾಮ್ರಾದ್ಯಂ ರಜತಾದೀಂಶ್ಚ ಪ್ರಾರ್ಥಯಧ್ವಂ ಮಮಾ ಧುನಾ । 
ಅಧುನಾ ವಾ ಭವಿಷ್ಯೇ ವಾಂಭ್ಯರ್ಥನೀಯಂ ಯಥೋಚಿತಂ i 


ಸಾವಿರ ಮಂದಿ ಬ್ರಾಹ್ಮಣರು ಆ ರಾಮನು ಕೊಟ್ಟ ಗ್ರಾಮಗಳನ್ನೂ, ಆ 
ಉತ್ಪನ್ನವಾದ ದ್ರವ್ಯವನ್ನೂ, ವಸ್ತ್ರ, ಒಡವೆ ಮೊದಲಾದುವನ್ನೂ ಹೇ? 
ಕೊಂಡರು? ಅದನ್ನು ನನಗೆ ಹೇಳು. 

೪೮. ಬ್ರಹ್ಮನು ಹೇಳುತ್ತಾನೆ: ಮಗು! ಯಜ್ಞದ ಕೊನೆಯಲ್ಲಿ 
ರಿಗೆ ಕೊಟ್ಟ ದಕ್ತಿಣೆಯಷ್ಟು ಮಹಾದಾನಗಳೆಲ್ಲ ಅವರಿಗೆ ಸಮರ್ಪಿಸಲ್ಪ & 

೪೯. ಆಗ ಕೊಟ್ಟ ಸಾಧಾರಣ ಗ್ರಾಮಗಳೂ, ದೊಡ್ಡ ಸ್ಥಳಗಳ 
ವಾಸಮಾಡುತ್ತಿರುವವರಿಗೇ ಒಪ್ಪಿಸಲಾಯಿತು. 

೫೦-೫೧. ವಸಿಷ್ಠರ ಮಾತಿನಂತೆ ಧೀರನಾದ ರಾಮನು ಬ್ರಾಃ 
ಕೊಟ್ಟ ಗ್ರಾಮಗಳನ್ನು ಅವರು ಬಿಟ್ಟು ಹೋಗದಂತೆ ಧನಧಾನ್ಯಗಳನ 
ವಾಗಿ ಕೊಟ್ಟು ಕೈಮುಗಿದುಕೊಂಡು ಹೀಗೆಂದನು. 

೫೨. ""ಅಯ್ಯಾ ಬ್ರಾಹ್ಮಣರೆ! ನೀವು ಕೃತ ಮತ್ತು ಈ ತ್ರೇತ 
ಗಳಲ್ಲಿ ವಾಸಿಸಿದಂತೆ ಯಾವಾಗಲೂ ನನ್ನ ರಾಜ್ಯದಲ್ಲಿರಬೇಕು. 

೫೩-೫೪. ಧನ, ಧಾನ್ಯ, ವಾಹನ, ವಸ್ತ್ರ, ರತ್ನ, ಚಿನ್ನ, ತಾಮ್ನ 
ಮೊದಲಾದುವುಗಳನ್ನು ಈಗ ನನ್ನನ್ನು ಕೇಳಿರಿ. ಅಥವಾ ಮುಂದೆ 
ರೀತಿಯಿಂದಲಾದರೂ ನೀವು ಕೇಳಿಕೊಳ್ಳಬಹುದು. 


ಸಂಚತ್ರಿಂಶೋಕಿಢ್ಕಾಯಃ ೩೪೩ 


ಪ್ರೇಷಣೀಯಂ ವಾಚಿಕಂ ಮೇ ಸರ್ವದಾ ದ್ವಿಜಸತ್ತಮಾಃ । 
ಯಂ ಯಂ ಕಾಮಂ ಪ್ರಾರ್ಥಯಧ್ವಂ ತಂ ತಂ ದಾಸ್ಯಾಮ್ಯಹಂ ದ್ವಿಜಾಃ ॥ 
ತತೋ ರಾಮಃ ಸೇವಕಾದೀನಾದರಾತ್ರತ್ಯಭಾಷತ | 


ನಿಪ್ರಾಜ್ಞಾ ನೋಲ್ಲಂಘನೀಯಾ ಸೇವನೀಯಾ ಪ್ರಯತ್ನತಃ I ೫೬ ॥ 

ಯಂ ಯಂ ಕಾಮಂ ಪ್ರಾರ್ಥಯಂತೇ ಕಾರಯಧ್ಹಂ ತತಸ್ತತಃ । 

ಏನಂ ನತ್ವಾ ಚ ವಿಪ್ರಾಣಾಂ ಸೇವನಂ ಕುರುತೇ ತು ಯಃ ॥೫೭॥ 

ಸ ಶೂದ್ರಃ ಸ್ಪರ್ಗಮಾಸ್ಟೋತಿ ಧನವಾನ್ಸುತ್ರವಾನ್ಸನೇತ್‌ | 

ಅನ್ಯಥಾ ನಿರ್ಧನತ್ವಂ ಹಿ ಲಭತೇ ನಾತ್ರ ಸಂಶಯಃ ॥ ೫೮ ॥ 

ಯವನೋ ಮ್ಲೇಚ್ಛ ಜಾತೀಯೋ ದೈತ್ಯೋ ವಾ ರಾಕ್ಟಸೋಪಿ ನಾ। 

ಯೋಂತತ್ರ ವಿಘ್ನಂ ಕರೋತ್ಯೇನ ಭಸ್ಮೀಭನತಿ ತತ್ಕೃಣಾತ್‌ ॥೫೯॥ 
ಬ್ರಹ್ಮೋವಾಚ :-- 

ತತಃ ಪ್ರದಕ್ಸಿಣೇಕೃತ್ಯ ದ್ವಿಜಾನ್ರಾನೋಂತಿಹರ್ಷಿತಃ । 

ಪ್ರಸ್ಮಾನಾಂಭಿಮುಖೋ ನಿಸ್ಟೈರಾಶೀರ್ಭಿರಭಿನಂದಿತಃ ॥೬೦॥ 


ಆಸೀಮಾಂತಮನುನ್ರಜ್ಯ ಸ್ನೇಹವ್ಯಾಕುಲಲೋಚನಾಃ । 
ದ್ವಿಜಾಃ ಸರ್ವೇ ವಿನಿರ್ವೃತ್ತಾ ಧರ್ಮಾಂರಣ್ಯೇ ನಿಮೋಹಿತಾಃ ॥ ೬೧॥ 


೫೫. ಎಲ್ಫೆ ಬ್ರಾಹ್ಮಣವರ್ಯರೆ! ಯಾವಾಗಲೂ ನನಗೆ ಸಂದೇಶವನ್ನು 
ಕಳುಹಿಸುತ್ತಿರಿ. ನೀವು ಅಸೇಕ್ಸಿಸಿದ್ದನ್ನೆಲ್ಲ ನಾನು ಕೊಡುವೆನು.” 

೫೬. ಬಳಿಕ ರಾಮನು ಸೇವಕರನ್ನು ಕುರಿತು ವಿಶ್ವಾಸದಿಂದ 
ಹೀಗೆಂದನು. " ನೀವು ಬ್ರಾಹ್ಮಣರ ಅಪ್ಪಣೆಯನ್ನು ವಿಸಾರಬಾರದು. ಅವರನ್ನು 
ಸೇವಿಸಬೇಕು. 

೫೭-೫೮. ಅವರು ಹೇಳಿದ್ದನ್ನೆ ಬ ಮಾಡುತ್ತಿರಿ. ಹೀಗೆ ಶೂದ್ರನು ನಮಸ್ಕರಿಸಿ 
ಬ್ರಾಹ್ಮಣರ ಸೇವೆಯನ್ನು ಮಾಡಿದರೆ ಸ್ವರ್ಗಲೋಕನನ್ನು ಹೊಂದುವನು. 
ಧನವನ್ನೂ, ಪುತ್ರರನ್ನೂ ಸಡೆಯುವನು. ಹಾಗೆ ಮಾಡದಿದ್ದರೆ ದರಿದ್ರನಾಗುನನು. 

೫೯. ಯವನನಾಗಲಿ, ಮ್ಲೇಚ್ಛನಾಗಲಿ, ದೈತ್ಯನಾಗಲಿ, ರಾಕ್ಸಸನಾಗಲಿ 
ಇಲ್ಲಿ ತೊಂದರೆಯನ್ನುಂಟುಮಾಡಿದರೆ ಕೂಡಲೆ ಅನನು ಬೂದಿಯಾಗುವನು.?' 

ಬ್ರಹ್ಮನು ಹೇಳುತ್ತಾನೆ: ಬಳಿಕ ರಾಮನು ಬ್ರಾಹ್ಮಣರನ್ನು 
ಪ್ರಧಕ್ಸಿಣೆ ಮಾಡಿ ಹೊರಡಲುದ್ಯುಕ್ತನಾಗಲು ಬ್ರಾಹ್ಮಣರು ಅವನನ್ನು 
ಆಶೀರ್ವದಿಸಿ ಸಂತೋಷಗೊಳಿಸಿದರು. 

೬೧. ಸ್ನೇಹದಿಂದ ವ್ಯಾಕುಲಗೊಂಡು ಎಲ್ಲೆ ಯವರೆಗೆ ಅನನನ್ನು 
ಹಿಂಬಾಲಿಸಿ ಧರ್ಮಾರಣ್ಯಕ್ಕೆ ಹಿಂದಿರುಗಿದರು. 


ತಳ ಶ್ರೀ ಸ್ಥಾಲದಡುಖಾಷುರಾಣಂ 


ಏನಂ ಕೃತ್ವಾ ತತೋ ರಾಮಃ ಪ್ರತಸ್ಥೇ ಸ್ವಾಂ ಪುರೀಂ ಪ್ರತಿ । 
ಕಾತ್ಯಪಾಶ್ಚೈವ ಗರ್ಗಾಶ್ಚ ಕೃತಕೃತ್ಯಾ ದೃಢವ್ರತಾಃ 1 ೬೨0 
ಗುರ್ವಾಸನಸಮಾನಿಷ್ಟಾಃ ಸಭಾರ್ಯಾ ಸಸುಹೃತ್ಸುತಾಃ । 

ರಾಜಧಾನೀಂ ತದಾ ಪ್ರಾಪ ರಾನೋಃಯೋಧ್ಯಾಂ ಗುಣಾನ್ಸಿತಾಂ ॥ ೬೩॥ 
ದೃಷ್ಟ್ಯಾ ಪ್ರಮುದಿತಾ ಸರ್ವೇ ಲೋಕಾಃ ಶ್ರೀ ರಘುನಂದನಂ । 


ತತೋ ರಾಮಃ ಸ ಧರ್ಮಾತ್ಮಾ ಪ್ರಜಾಸಾಲನತತ್ಪರಃ ॥ ೬೪॥ 
ಸೀತಯಾ ಸಹ ಧರ್ಮಾತ್ಮಾ ರಾಜ್ಯಂ ಕುರ್ವಂಸ್ತದಾ ಸುಧೀ । 
ಜಾನಕ್ಕಾಂ ಗರ್ಭಮಾಧತ್ತ ರನಿನಂಶೋದ್ಭವಾಯ ಚ ॥ ೬೫ ॥ 


ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ5ರಣ್ಯಮಾಹಾತ್ಮ್ಯೇ 
“ ಶ್ರೀರಾಮಚಂದ್ರ ಕೃತ ಧರ್ಮಾಂರಣ್ಯತೀರ್ಥಕ್ಟೇತ್ರ ಜೀರ್ಣೋದ್ಧಾರವರ್ಣನಂ'' 
ನಾಮ ಪಂಚತ್ರಿಂಶೋಂಧ್ಯಾಯಃ 


೬೨-೬೫. ರಾಮನು ಹೀಗೆ ಬ್ರಾಹ್ಮಣರಿಗೆ ಗ್ರಾಮಗಳನ್ನು ದಾನವಿತ್ತು 
ಶನ್ನ ಪಟ್ಟಿಣಕ್ಕ ಹಿಂದಿರುಗಿದನು. ಕಾಶ್ಯಸರು, ಗರ್ಗರೂ ಧನ್ಯರಾಗಿ ಸತೀ, 
ಮಿತ್ರ, ಸುತಕೊಡನೆ ಗುರ್ವಾಸನದಲ್ಲಿ ಕುಳಿತರು. ರಾಮನು ಅಯೋಧ್ಯೆಗೆ 
ಬರಲು ಸಮಸ್ತ ಪ್ರಜೆಗಳೂ ಅವನನ್ನು ಕಂಡು ಸಂತೋಷಗೊಂಡರು. ಬಳಿಕ 
ಧರ್ಮಾತ್ಮನಾದ ರಾಮನು ಪ್ರಜಾಪಾಲನದಲ್ಲಿ ಆಸಕ್ತನಾಗಿ ರಾಜ್ಯವನ್ನಾಳು 
ತ್ರಿದ್ದನು. ತರುವಾಯ ಜಾನಕಿಯು ಸೂರ್ಯವಂಶದ ವೃದ್ಧಿಗಾಗಿ ಗರ್ಭಧಾರಣೆ 
ಮಾಡಿದಳು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮದಲ್ಲಿ "" ಶ್ರೀರಾಮಚಂದ್ರಕೃತ ಧರ್ಮಾರಣ್ಯ ತೀರ್ಥಕ್ಷೇತ್ರ 
ಜೀರ್ಣೊೋದ್ಧಾರವರ್ಣನ'?ನೆಂಬ ಮೂನತ್ತೈದನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಷಟ್ರ್ರಂಶೋಂಧ್ಯಾಯಃ 
ಹಸುಮತ್ಸಮಾಗವುಃ 

'’ ನಾರದ ಉವಾಚ; 
ಅತಃ ಪರಂ ಕಿಮಭವತ್ತನ್ಮೇ ಕಥಯ ಸುವ್ರತ । 
ಪೂರ್ವಂ ಚ ತದಶೇಷೇಣ ಶಂಸ ಮೇ ನದತಾಂ ವರ ॥೧॥ 
ಸ್ಥಿರೀಭೂತಂ ಚ ತತ್ಸ್ಥಾನಂ ಕಿಯತ್ಕಾಲಂ ವದಸ್ಮ ಮೇ। 
ಜೇನ ವೈ ರಕ್ಷ ಮಾಣಂ ಚ ಕಸ್ಯಾಜ್ಞಾ ವರ್ತತೇ ಪ್ರಭೋ ॥೨॥ 

ಬ್ರಹ್ಮೋವಾಚ :-- 
ಶ್ರೇತಾತೋ ದ್ವಾಪರಾಂತಂ ಚೆ ಯಾವತ್ಕಲಿಸಮಾಗಮಃ | 
ತಾನತ್ಸಂರಕ್ಸಣೇ ಚೈಕೋ ಹನೂಮಾನ್ಸವನಾತ್ಮಜಃ HAN 
ಸಮರ್ಥೊೋ ನಾನ್ಯಥಾ ಕೋಪಿ ವಿನಾ ಹನುಮತಾ ಸುತ । 
ಲಂಕಾ ವಿಧ್ವಂಸಿತಾ ಯೇನ ರಾಕ್ಷಸಾಃ ಪ್ರಬಲಾ ಹತಾಃ 1೪॥ 
ಸ ಏನ ರಕ್ಪತೇ ತತ್ರ ರಾಮಾದೇಶೇನ ಪುತ್ರಕ । 
ದ್ವಿಜಸ್ಯಾಜ್ಞಾ ಪ್ರವರ್ತೇತ ಶ್ರೀಮಾತಾಯಾಸ್ತಥೈವ ಚ ॥೫॥ 
ದಿನೇ ದಿನೇ ಪ್ರಹರ್ಸೋಂಭೂಜ್ಹನಾನಾಂ ತತ್ರ ವಾಸಿನಾಂ | 
ಪಠಂತಿ ಸ್ಮ ದ್ವಿಜಾಸ್ತತ್ರ ಖುಗ್ಯಜುಕಸಾಮಲಕ್ಸಣಾನ್‌ Hn 





ಕನ್ನಡದ ಅನುವಾದ 
ಹನುಮತಶ್ಸಮಾಗವಮು 

೧-೨. ನಾರದನು ಹೇಳುತ್ತಾನೆ :-ನಿತಾಮಹ! ಅನಂತರ ಅಲ್ಲಿ ಏನು. 
ನಡೆಯಿತು? ಆ ಧರ್ಮಕ್ಟೇತ್ರವು ಎಷ್ಟು ಕಾಲದವರೆಗೆ ಸ್ಥಿರವಾಗಿದ್ದಿತು? 
ಅದನ್ನು ಯಾರು ಕಾಪಾಡುತ್ತಿದ್ದರು? ಯಾರು ಆಳುತ್ತಿದ್ದರು? ಇದನ್ನೆಲ್ಲ 
ಸಂಪೂರ್ಣವಾಗಿ ನನಗೆ ಹೇಳು. 

೩-೪. ಬ್ರಹ್ಮನು ಹೇಳುತ್ತಾನೆ: ವತ್ಸ! ತ್ರೇತಾಯುಗದಿಂದ ದ್ವಾಪರ 
ಯುಗದ ಕೊನೆಯವರೆಗೆ (ಕಲಿಯುಗವು ಬರುವತನಕ) ಲಂಕೆಯನ್ನು ಸುಟ್ಟ, 
ಪ್ರಬಲ ರಾಕ್ಸಸರನ್ನು ಸದೆಬಡಿದ ಆಂಜನೇಯನೊಬ್ಬನೆ ಆ ಧರ್ಮಾರಣ್ಯವನ್ನು 
ರಕ್ಸಿಸುವುದರಲ್ಲಿ ಶಕ್ತನಾಗಿದ್ದನು. 

೫. ಆ ಹನುಮಂತನು ರಾಮನ ಆಜ್ಞೆಯಂತೆ ಆ ಧರ್ಮಾರಣ್ಯವನ್ನು 
ಕಾಪಾಡುತ್ತಿರುವುದರಿಂದ ಬ್ರಾಹ್ಮಣರ ಮತ್ತು ಶ್ರೀಮಾತೆಯ ಆಣತಿಯು 
ನಡೆಯುತ್ತಿರುವುದು, 

೬-೭. ಅಲ್ಲಿ ವಾಸಿಸುವ ಜನರು ದಿನೇದಿನೇ ಸಂತೋಷಗೊಳ್ಳುತ್ತಿರುವರು, 


೩೫೦ ಶ್ರೀ ಸ್ಕಾಂದಮಹಾಪುರಾಣಂ 


ಅಥರ್ವಣಮಸಿ ತತ್ರ ಪಠಂತಿ ಸ್ಮ ದಿವಾನಿಶಂ । 

ವೇದನಿರ್ಫೋಷಜಃ ಶಬ್ದಸ್ತ್ರೆ ಲೋಕೇ ಸಚರಾಚರೇ ॥೭॥ 

ಉತ್ಸವಾಸ್ತತ್ರ ಜಾಯಂತೇ ಗ್ರಾಮೇ ಗ್ರಾಮೇ ಪುರೇ ಪುರೇ । 

ನಾನಾಯಜ್ಞಾಃ ಪ್ರವರ್ತಂತೇ ನಾನಾಧರ್ಮಸಮಾಶ್ರಿತಾಃ ॥೮॥ 
ಯುಧಿಷ್ಠಿರ ಉವಾಚ :-- 

ಕದಾಪಿ ತಸ್ಯ ಸ್ಥಾ ನಸ್ಯ ಭಂಗೋ ಜಾತೋಥವಾ ನ ನಾ। 

ಡೈತ್ಯೈರ್ಜಿತಂ ಕದಾ ಸೂ ್ಸಿನಮಥವಾ ದುಷ್ಟರಾಕ್ಚ ಸೈಃ ॥೯॥ 
ವ್ಕಾ ಸ ಉವಾಚ; 

ಸಾಧುಪೃಷ್ಟಂ ತ್ವಯಾ ರಾಜನ್ಸರ್ಮುಜ್ಞಸ್ತ 30 ಸದಾ ಶುಚಿಃ । 

ಆದೌ ಕಲಿಯುಗೇ ಪ್ರಾಪ್ತೇ ಯೆದ್ಭೃತ್ತೆಂ' ಕಃ ಕೈಜುಷ್ಟ ಭೋಃ ॥ ೧೦॥ 

ಲೋಕಾನಾಂ ಚ ಹಿತಾರ್ಥಾಯ ಕಾಮಾಯ ಇ ಸುಖಾಯ ಚ । 

ಯಜ್ಞಂ ಚ ಕಥಯಿಷ್ಯಾಮಿ ತತ್ಸರ್ವಂ ಶೃಣು ಭೂಪತೇ ॥ ೧೧॥ 

ಇದಾನೀಂ ಚ ಕಲೌ ಪ್ರಾಪ್ತ ಆಮೋನಾಮಾ ಬಭೂವ ಹ । 

ಕಾನ್ಯಕುಬ್ಬಾಂಧಿಪಃ ಶ್ರೀಮಾನ್ನ ರ್ಮಜ್ಞೋ ನೀತಿತತ್ಸರಃ ॥ ೧೨ ॥ 

ಶಾಂತೋದಾಂತಃ ಸುಶೀಲಶ್ಚ ಸತ್ಯಧರ್ಮಪರಾಯಣಃ | 

ದ್ವಾಪರಾಂತೇ ನೃಪಶ್ರೇಷ್ಠ ಅನಾಗತೇ ಕಲೌ ಯುಗೇ ॥ ೧೩॥ 


ಬ್ರಾಹ್ಮಣರು ಹೆಗಲು ರಾತ್ರಿಯೂ ನಾಲ್ಕು ವೇದಗಳನ್ನು ಪಾರಾಯಣಮಾಡು 
ತ್ತಿದ್ದರು. ಅವರ ವೇದಘೋಷವು ತ್ರಿಭುವನವನ್ನು ತುಂಬುತ್ತಿದ್ದಿತು. 

೮. ಪ್ರತಿಗ್ರಾಮದಲ್ಲಿಯೂ, ಪ್ರತಿಯೊಂದು ಪಟ್ಟಣದಲ್ಲಿಯೂ ಉತ್ಸವ 
ಗಳು ನಡೆಯುತ್ತಿದ್ದುವು. ನಾನಾ ಧರ್ಮಾವಲಂಬಿಗಳು ಅನೇಕ ವಿಧ ಯಜ್ಞ 
ಗಳನ್ನು ನೆರವೇರಿಸುತ್ತಿದ್ದರು. 

೯, ಯುಧಿಷ್ಠಿರನು ಹೇಳುತ್ತಾನೆ: ಯಾವಾಗಲಾದರೂ ಆ ಕೇತ್ರಕ್ಕೆ 
ಭಂಗಬಂದಿತೆ? ಅದನ್ನು ದೈ ತ್ಯರಾಗಲಿ, ದುಷ್ಟರಾಕ್ಸಸರಾಗಲಿ ಗೆದ್ದರೆ? 

೧೦. ವ್ಯಾಸನು ಹೇಳುತ್ತಾನೆ :-ಮಹಾರಾಜ! ಯಾವಾಗಲೂ ಶು ದೃನಾಗಿ 
ಧರ್ಮವನ್ನರಿತಿರುವ ನೀನು ಚೆನ್ನಾಗಿ ಕೇಳಿದೆ. ಕಲಿಯುಗವು ಬರಲು ಅಲ್ಲಿ ಏನು 
ನಡೆಯಿತೆಂಬುದನ್ನು ಹೇಳುತ್ತೇನೆ, ಕೇಳು. 

೧೧. ಜನರ ಹಿತಕ್ಕಾಗಿಯೂ, ಇಷ್ಟ ಮತ್ತು ಸುಖಕ್ಕಾಗಿಯೂ ಯಜ್ಞ 
ವನ್ನು ಹೇಳುತ್ತೇನೆ ಕೇಳು. 

೧೨-೧೫. ಕಲಿಯುಗವು ಪ್ರಾಸ್ತವಾದಾಗ ಕಾನ್ಯಕುಬ್ಬದ ಒಡೆಯನೂ, 
ಧರ್ಮಜ್ಞ ನೂ, ನೀತಿನಿರತನೂ, ಶಾಂತಿಯುಳ್ಳವನೂ, ಇಂದ್ರಿಯಜಯವುಳ್ಳ 
ವನೂ, ಒಳ್ಳೆಯ ಸ್ವಭಾವದವನೂ, ಸತ್ಯ, "ಧರ್ಮಗಳಲ್ಲಿ ಆಸಕ್ತನೂ ಆದ 


-  ಷಟ್ರಿಂಶೋ$ಧ್ಯಾಯಃ - ೩೫೧ 


ಭಯಾತ್ಯಲಿವಿಶೇಷೇಣ ಅಧರ್ಮಸ್ಯ ಭಯಾದಿಭಿಃ । 


ಸರ್ವೇ ದೇವಾಃ ಕ್ಸಿತಿಂ ತ್ಯಕ್ತ್ವಾ ನೈನಿಸಾಂರಣ್ಯಮಾಶ್ರಿತಾಃ ॥ ೧೪ ॥ 
ರಾನೋಪಿ ಸೇತುಬಂಧಂ ಹಿ ಸಸಹಾಯೋ ಗತೋ ನೃಪ ॥ ೧೫ ॥ 


ಯುಧಧಿಹ್ಮಿರ ಉವಾಚ ;- 
ಕೀದೃಶಂ ಹಿ ಕಲೌ ಪ್ರಾಪ್ತೇ ಭಯಂ ಲೋಕೇ ಸುದುಸ್ತರಂ | 


ಯಸ್ಮಿನ್ಸುರೈಃ ಪರಿತ್ಯಕ್ತಾ ರತ್ನಗರ್ಭಾ ವಸುಂಧರಾ ॥ ೧೬ ॥ 
ವ್ಯಾಸ ಉವಾಚ :- 

ಶೃಣುಷ್ಟ ಕಲಿಧರ್ಮಾಂಸ್ತ್ಯಂ ಭವಿಷ್ಯಂತಿ ಯಥಾ ನೃಪ । 

ಅಸತ್ಯವಾದಿನೋ ಲೋಕಾಃ ಸಾಧುನಿಂದಾಪರಾಯಣಾಃ ॥ ೧೭॥ 

ದಸ್ಯುಕರ್ಮರತಾಃ ಸರ್ವೆ ಸಿತೃಭಕ್ತಿನಿನರ್ಜಿತಾಃ । 

ಸ್ವಗೋತ್ರದಾರಾಭಿರತಾ ಲೌಲ್ಯಧ್ಯಾನಪರಾಯಣಾಃ ॥ ೧೮॥ 

ಬ್ರಹ್ಮನಿದ್ದೇಷಿಣಃ ಸರ್ವೇ ಪರಸ್ಪರನಿರೋಧಿನಃ । 

ಶರಣಾಗತಹಂತಾರೋ ಭನಿಷ್ಯಂತಿ ಕಲೌ ಯುಗೇ Horn 

ವೈಶ್ಯಾಚಾರರತಾ ವಿಪ್ರಾ ವೇದಭ್ರಷ್ಟಾಶ್ಚ ಮಾನಿನಃ । 

ಭವಿಷ್ಯಂತಿ ಕಲೌ ಪ್ರಾಸ್ತೇ ಸಂಧ್ಯಾಲೋಪಕರಾ ದ್ವಿಜಾಃ ॥೨೦॥ 

ಶಾಂತೌ ಶೂರಾ ಭಯೇ ದೀನಾಃ ಶ್ರಾದ್ಭತರ್ಸಣನವರ್ಜಿತಾಃ | 

ಅಸುರಾಚಾರನಿರತಾ ವಿಷ್ಣುಭಕ್ತಿನಿವರ್ಜಿತಾಃ `॥೨೧॥ 


ಆಮನೆಂಬವನು ರಾಜನಾದನು. ದ್ವಾಪರಯುಗದ ಕೊನೆಯಲ್ಲಿ ಕಲಿಯುಗದ 
ಅಧರ್ಮದ ಭಯದಿಂದ ಎಲ್ಲ ದೇವತೆಗಳೂ ಭೂಮಿಯನ್ನು ತ್ಯಜಿಸಿ ನೈಮಿಷಾ 
ರಣ್ಯವನ್ನು ಆಶ್ರಯಿಸಿದರು. 

೧೬. ಯುಧಿಸ್ಮಿರನು ಕೇಳುತ್ತಾನೆ:;--ಎಲೈ ವ್ಯಾಸಮುನಿಯೆ! ದೇವತೆ 
ಗಳು ಭೂಮಿಯನ್ನು ತ್ಯಜಿಸುವಷ್ಟು ಕಲಿಯುಗದಲ್ಲುಂಟಾದ ದುಸ್ತರವಾದ. 
ಭಯವಾವುದು? 

೧೭-೧೯. ವ್ಯಾಸನು ಹೇಳುತ್ತಾನೆ :--ಮಹಾರಾಜ! ಕಲಿಯುಗದ 
ಧರ್ಮವನ್ನು ಕೇಳು. ಕಲಿಯುಗದಲ್ಲಿ ಜನರು ಸುಳ್ಳಾಡುವವರೂ, ಸಜ್ಜನರ 
ನಿಂದೆಯಲ್ಲಿ ನಿರತರೂ, ಕದಿಯುವವರೂ, ತಂದೆಯಲ್ಲಿ ಭಕ್ತಿಯಿಲ್ಲದವರೂ, 
ತನ್ನ ಗೋತ್ರದ ಹೆಣ್ಣನ್ನು ವಿವಾಹಮಾಡಿಕೊಳ್ಳುವವರೂ, ಚಸಲರೂ, ವೇದ, 
ಬ್ರಾಹ್ಮಣದ್ವೇಷಿಗಳೂ, ಅನ್ಯೋನ್ಯ ಶತ್ರುಗಳೂ, ಮರೆಹೊಕ್ಕವರನ್ನು ಕೊಲ್ಲು 
ವವರೂ ಆಗುವರು. 

೨೦-೨5೩. ಬ್ರಾಹ್ಮಣರು ವೈಶ್ಯಾಚಾರವುಳ್ಳ ವರೂ, ವೇದಭ್ರಷ್ಟರೂ, 
ಅಹಂಕಾರಿಗಳೂ, ಸಂಧ್ಯಾವಂದನೆ ಮಾಡದವರೂ, ಶಾಂತಿಯಲ್ಲಿ ಶೌರ್ಯ 
ವನ್ನು ತೋರಿಸುವವರೂ, ಭಯ ವಿಷಯದಲ್ಲಿ ದೀನರೂ, ಶ್ರಾದ್ಧತರ್ಪಣ 








4೨ ಶ್ರೀ ಸ್ಕಾಂಡಮಹಾಪುರಾಣಂ 


ಪರವಿತ್ತಾಂಭಿಲಾಷಾಶ್ಚ ಉತ್ಕೋಚಗ್ರಹಣೇ ರತಾಃ । 
ಅಸ್ನಾತಭೋಜಿನೋ ವಿಪ್ರಾಃ ಕ್ಸತ್ರಿಯಾ ರಣವರ್ಜಿತಾಃ ॥ ೨೨ ॥ 
ಭವಿಷ್ಯಂತಿ ಕಲೌ ಪ್ರಾಪ್ತೇ ಮಲಿನಾ ದುಷ್ಪವೃತ್ತಯಃ । 
ಮದ್ಯಪಾನರತಾಃ ಸರ್ಮೇಃಪ್ಯಯಾಜ್ಯಾನಾಂ ಹಿ ಯಾಜಕಾಃ ॥ ೨೩ ॥ 
ಭರ್ತ,ದ್ವೇಷಕರಾ ರಾಮಾಃ ಪಿತೃದ್ವೇಷಕರಾಃ ಸುತಾಃ । 
ಭ್ರಾತೃದ್ಧೇಷಕರಾಃ ಕ್ಲುದ್ರಾ ಭವಿಷ್ಯಂತಿ ಕಲೌ ಯುಗೇ ॥ ೨೪॥ 
ಗವ್ಯನಿಕ್ರಯಿಣಸ್ತೇ ವೈ ಬ್ರಾಹ್ಮಣಾ ವಿತ್ತತತ್ಸರಾಃ । 

ಗಾವೋ ದುಗ್ಭಂ ನ ದುಹ್ಯಂತೇ ಸಂಪ್ರಾಪ್ತೇ ಹಿ ಕಲೌ ಯುಗೇ ॥ ೨೫ ॥ 
ಫಲಂತೇ ನೈವ ವೃಕ್ಸಾಶ್ಚ ಕದಾಚಿದಪಿ ಭಾರತ । 


ಕನ್ಯಾನಿಕ್ರಯಕರ್ತಾರೋ ಗೋಜಾನಿಕ್ರಯಕಾರಕಾಃ ॥ ೨೬ ॥ 
ನಿಷನಿಕ್ರಯಕರ್ತಾರೋ ರಸವಿಕ್ರಯಕಾರಕಾಃ | 
ನೇದವಿಕ್ರಯಕರ್ತಾರೋ ಭನಿಷ್ಯಂತಿ ಕಲೌ ಯುಗೇ ॥ ೨೭॥ 
ನಾರೀ ಗರ್ಭಂ ಸಮಾಧತ್ತೇ ಹಾಯನೈಶಕಾದಶೇನ ಹಿ । 
ಏಕಾದಶ್ಯುಪವಾಸಸ್ಯ ನಿರತಾಃ ಸರ್ವತೋ ಜನಾಃ ॥ ೨೮ ॥ 
ನ ತೀರ್ಥಸೇವನರತಾ ಭವಿಷ್ಯಂತಿ ಚ ವಾಡವಾಃ । 

ಬಹ್ವಾಹಾರಾ ಭವಿಷ್ಯಂತಿ ಬಹುನಿದ್ರಾಸಮಾಕುಲಾಃ ॥೨೯॥ 


ಮಾಡದವರೂ, ರಾಶ್ಚಸರ ಆಚಾರದಲ್ಲಿ ಆಸಕ್ತರೂ, ವಿಷ್ಣುಭಕ್ತಿಯಿಲ್ಲದವರೂ, 
ಇತರರ ಹಣದಲ್ಲಿ ಆಶೆಯುಳ್ಳವರೂ, ಲಂಚವನ್ನು ತೆಗೆದುಕೊಳ್ಳುವವರೂ, 
ಸ್ನಾನಮಾಡಡಿ ಉಣ್ಣುವವರೂ ಆಗಿರುವರು. ಕ್ಪತ್ರಿಯರು ಯುದ್ಧಮಾಡ 
ದವರೂ, ಮಲಿನರೂ, ದುರ್ನಡತೆಯುಳ್ಳವರೂ, ಹೆಂಡವನ್ನು ಕುಡಿಯುವವರೂ 
ಆಗುವರು. ಎಲ್ಲ ಬ್ರಾಹ್ಮಣರೂ ಯಾಗಕ್ಕನರ್ಹರಾದವರಿಂದ ಯಾಗಮಾಡಿಸು 
ವವರಾಗುವರು. 

೨೪. ಹೆಂಡತಿಯರು ಗಂಡನಲ್ಲಿ ದ್ವೇಷವುಳ್ಳವರೂ, ಮಕ್ಕಳು ತಂದೆಯಲ್ಲಿ 
ದ್ವೇಷವುಳ್ಳವರೂ, ಸಹೋದರ ದ್ವೇಸಿಗಳೂ, ಅಲ್ಪರೂ ಆಗುವರು. 

೨೫. ಬ್ರಾಹ್ಮಣರು ಹಣದಾಶೆಯಿಂದ ಗೋರಸವನ್ನು (ಹಾಲು, ತುಪ್ಪ, 
ಬೆಣ್ಣೆಗಳನ್ನು) ಮಾರುವರು. ಗೋವುಗಳು ಹಾಲನ್ನು ಕರೆಯುವುದಿಲ್ಲ. 

೨೬-೨೭. ಮರಗಳು ಫಲಗಳನ್ನು ಕೊಡುವುದಿಲ್ಲ. ಬ್ರಾಹ್ಮಣರು ಕನ್ಯಾ, 
ಗೋವು, ಆಡು, ನಿಷ, ರಸಪದಾರ್ಥ, ವೇದ ಇವುಗಳನ್ನು ಮಾರುವರು. 

೨೮. ಹೆಂಗಸು ಹನ್ನೊಂದನೆ ವರ್ಷದಲ್ಲಿಯೆ ಗರ್ಭಿಣಿಯಾಗುವಳು. ಎಲ್ಲಡೆ 
ಯಲ್ಲಿಯೂ ಜನರು ಏಕಾದಶೀ ಉಪವಾಸನನ್ನು ತ್ಯಜಿಸುವರು. 

೨೯-೩೧. ಬ್ರಾಹ್ಮಣರು ತೀರ್ಥಕ್ಲೇತ್ರಗಳನ್ನು ಸೇವಿಸುವುದಿಲ್ಲ. ಅವರ 


ಸಟ್ಟ್ವಂತೋ5ಧ್ಮಾಯಃ ೩೫೩ 


ಜಿಹ್ಮನೃತ್ತಿಸರಾಃ ಸರ್ವೇ ವೇವನಿಂದಾಪರಾಯಣಾಃ । 


ಯತಿನಿಂದಾಪರಾಶ್ಚೈನ ಛದ್ಮಾಕಾರಾಃ ಪರಸ್ಪರಂ 1 404 
ಸ್ಪರ್ಶದೋಷಭಯಂ ನೈವ ಭವಿಷ್ಯತಿ ಕಲೌ ಯುಗೇ । 

ಕ್ಪತ್ರಿಯಾ ರಾಜ್ಯಹೀನಾಶ್ಚ ಮ್ಲೇಚ್ಛೋ ರಾಜಾ ಭವಿಷ್ಯತಿ ॥೩೧॥ 
ವಿಶ್ವಾಸಘಾತಿನಃ ಸರ್ನೇ ಗುರುದ್ರೋಹರತಾಸ್ತಥಾ । 

ಮಿತ್ರದ್ರೋಹರತಾ ರಾಜಂಛಿಶ್ಲೋದರಪರಾಯಣಾಃ ॥ ೩೨॥ 
ಏಕನರ್ಣಾ ಭವಿಷ್ಯಂತಿ ವರ್ಣಾಶ್ಚತ್ಪಾರ ಏನ ಚ । 

ಕಲೌ ಪ್ರಾಸ್ತೇ ಮಹಾರಾಜ ನಾನ್ಯಥಾ ವಚನಂ ಮಮ ॥ ೩೩॥ 
ಏತಚ್ಛ್ರುತ್ವಾ ಗುರೋರೇವ ಕಾನ್ಯಕುಬ್ಹಾಂಧಿಪೋ ಬಲೀ । 

ರಾಜ್ಯಂ ಪ್ರಕುರುತೇ ತತ್ರ ಆನೋನಾಮಾ ಹಿ ಭೂತಲೇ 1 ೩೪॥ 
ಸಾರ್ವಭೌಮತ್ವಮಾಪನ್ನಃ ಪ್ರಜಾಸಾಲನತತ್ಪರಃ । 

ಪ್ರಜಾನಾಂ ಕಲಿನಾ ತತ್ರ ಸಾಹೇ ಬುದ್ಧಿ ರಜಾಯತ ॥ ೩೫ ॥ 
ವೈಷ್ಣನಂ ಧರ್ಮಮುತ್ಸೃಜ್ಯ ಬೌದ್ಧಧರ್ಮಮುಪಾಗತಾಃ [ 
ಪ್ರಜಾಸ್ತಮನುವರ್ತಿನ್ಯಃ ಕ್ಸಪಣೈಃ ಪ್ರತಿಬೋಧಿತಾಃ ॥ ೩೬॥ 


ಅಧಿಕಾಹಾರವುಳ್ಳವರೂ, ಅತಿ ನಿದ್ರೆಯುಳ್ಳವರೂ, ವಕ್ರವಾದ ನಡತೆಯುಳ್ಳ 
ವರೂ, ವೇದಗಳ ನಿಂದೆಯಲ್ಲಿಯೂ, ಸನ್ನ್ಯಾಸಿಗಳ ನಿಂಡೆಯಲ್ಲಿಯೂ ಆಸಕ್ತರೂ, 
ಅನ್ಯೋನ್ಯವಾಗಿ ಮೋಸಮಾಡುವವರೂ ಅಸ್ಪೃಶ್ಯತಾದೋಷದ ಭಯವಿಲ್ಲ 
ದವರೂ ಆಗುವರು. ಕ್ಪತ್ರಿಯರು ರಾಜ್ಯವನ್ನು ಕಳೆದುಕೊಳ್ಳುವರು. ಮ್ಲೇಚ್ಛನು 
ರಾಜನಾಗುವನು. 

೩೨. ಮಹಾರಾಜ! ಎಲ್ಲರೂ ವಿಶ್ವಾಸಘಾತುಕರೂ, ಗುರುಗಳಿಗೂ, 
ಮಿತ್ರರಿಗೂ ದ್ರೋಹಮಾಡುವುದರಲ್ಲಿ ಆಸಕ್ತರೂ, ಕಾಮ ಮತ್ತು ತಿನ್ನುವುದರಲ್ಲಿ 
ನಿರತರೂ ಆಗುವರು. 

೩೩. ಬ್ರಾಹ್ಮಣಾದಿ ನಾಲ್ಕು ವರ್ಣಗಳೂ ಒಂದೇ ವರ್ಣವಾಗುವುದು. 
ಈ ನನ್ನ ಮಾತು ಸತ್ಯವಾದುದು. 

೩೪-೩೫. ಬಲಿಷ್ಠನಾದ ಕಾನ್ಯಕುಬ್ಬದ ಆಮನೆಂಬ ದೊರೆಯು 
ಈ ಮಾತನ್ನು ಗುರುವಿನಿಂದ ಕೇಳಿ ಸಾರ್ವಭೌಮನಾಗಿ ರಾಜ್ಯವಾಳು 
ತ್ತಿದ್ದನು. ಆಗ ಕಲಿದೋಷದಿಂದ ಪ್ರಜೆಗಳಿಗೆ ಪಾಪಬುದ್ಧಿಯುಂಟಾ 
ಯಿತು. 

೩೬. ಅವನ ಪ್ರಜೆಗಳು ಬೌದ್ಧ ಸನ್ಯಾಸಿಗಳ ಉಪದೇಶದಿಂದ ವೈಷ್ಣವ 
ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಾವಲಂಬಿಗಳಾದರು. 

12 


ಸಿ೫೪ ಶ್ರೀ ಸ್ಥಾಂದಮಹಾಪುರಾಣಂ 


ತಸ್ಯ ರಾಜ್ಞೋ ಮಹಾದೇವೀ ಮಾಮಾನಾನಮ್ಮ್ಯ್ಯತಿನಿಶ್ರುತಾ | 


ಗರ್ಭಂ ದಧಾರ ಸಾರಾಜ್ಞೋ ಸರ್ವಲಕ್ಸಣಸಂಯುತಾ 1೩೭೫ 
ಸಂಪೂರ್ಣೇ ದಶಮೇ ಮಾಸಿ ಜಾತಾ ತಸ್ಯಾಃ ಸುರೂಸಿಣೇ । 

ದುಹಿತಾ ಸಮಯೇ ರಾಜ್ಞ್ಯಾಃ ಪೂರ್ಣಚಂದ್ರ ನಿಭಾನನಾ ॥ ೩೮೫ 
ರತ್ನಗಂಗೇತಿ ನಾಮ್ನಾ ಸಾ “ಮಾಣಿಕ ಭೂಷಿತಾ । 

ಏಕದಾ ದೈ ನಯೋಗೇನ ಜೇತಾಂತಂಉಾನ ಸಾಗಿತು ॥೩೯॥ 
ನಾಮ್ನಾ ಚೈನೇಂದ್ರಸೂರಿರ್ನೈ ದೇಶೇಂಸ್ಮಿನ್ಯಾನ್ಯಕುಬ್ಬಕೇ । 
ಷೋಡಶಾಬ್ದಾ ಚ ಸಾ ಕನ್ಯಾ ನೋಪನೀತಾ ನೃಪಾತ್ಮಜಾ ॥೪೦॥ 
ದಾಸ್ಯಾಂಂತರೇಣ ಮಿಲಿತಾ ಇಂದ್ರಸೂರಿಶ್ಚ ಜೀನಿಕಃ । 

ಶಾಬರೀಂ ಮಂತ್ರವಿದ್ಯಾಂ ಚ ಕಥಯಾಮಾಸ ಭಾರತ ॥೪೧॥ 
ಏಕಚಿತ್ತಾಂಭವತ್ಸಾ ತು ಶೂಲಿಕರ್ಮುನಿನೋಹಿತಾ । 

ತತಃ ಸಾ ಮೋಹಮಾಪನ್ನಾ ತತ್ತದ್ವಾಕ್ಯಸರಾಯಣಾ ॥ ೪೨ ॥ 
ಕ್ಸಸಣೈರ್ಜೊಧಿತಾ ವತ್ಸ ಜೆ ಓ[ೈನಧರ್ಮ ಪರಾಯಣಾ । 
ಬ್ರಹ್ಮಾನರ್ತಾಂಧಿಪತಯೇ ಭಂ ಧೀಮತೇ ॥ ೪೩ ॥ 
ರತ್ನಗಂಗಾಂ ಮಹಾದೇವೀಂ ದದೌ ತಾಮತಿವಿಕ್ರಮಾ । 

ನೋಹೇರಕಂ ದದೌ ತಸ್ಮೈ ನಿನಾಹೇ ದೈನನೋಹಿತಃ ॥ ೪೪॥ 


೩೭. ಮಾಮಾ ಎಂಬ ಸಮಸ್ತ ಲಕ್ಸಣಸಂಪನ್ನೆಯಾದ ಆ ರಾಜನ 
ರಾಣಿಯು ಗರ್ಭಿಣಿಯಾದಳು. 

೩೮. ಹತ್ತನೆಯ ತಿಂಗಳು ತುಂಬಲು ಅವಳಲ್ಲಿ ಸುಂದರಿಯಾದ ಕನ್ಯೈಯು 
ಜನಿಸಿದಳು. 

೩೯-೪೦. ರತ್ನಗಳಿಂದ ಅಲಂಕೃತಳಾದ ಅವಳಿಗೆ ರತ್ನಗಂಗೆಯೆಂದು 
ಹೆಸರಾಯಿತು. ಒಂದಾನೊಂದು ದಿನ ಅದೃಷ್ಟವಶದಿಂದ ಇಂದ್ರಸೂರಿಯೆಂಬ 
ವನು ದೇಶಾಂತರದಿಂದ ಕಾನ್ಯಕುಬ್ಬದೇಶಕ್ಕೆ ಬಂದನು. ಆಗ ರತ್ನಗಂಗೆಗೆ 
ಹದಿನಾರು ವರ್ಷ ವಯಸ್ಸಾಗಿತ್ತು. ವಿವಾಹವಾಗಿರಲಿಲ್ಲ. 

೪೧. ಸೇವೆಯಿಂದ ಜೀವಿಸುವುದಕ್ಕಾಗಿ ಅಲ್ಲಿಗೆ ಬಂದ ಇಂದ್ರಸೂರಿಯು 
ಮಾಯಾಮಂತ್ರ ವಿದ್ಯೆಯನ್ನು ಆ ರತ್ತಗಂಗೆಗೆ ಹೇಳಿದನು. 

೪೨. ಮಾಟದಿಂದ ಮೋಹಗೊಂಡು ಅವಳು ಅವನ ಮಾತನ್ನು ಕೇಳು 
ವುದರಲ್ಲಿ ಆಸಕ್ತಳಾದಳು. 

೪೩-೪೪. ಮಗು! ಬೌದ್ಧ ಸನ್ನ್ಯಾಸಿಗಳಿಂದ ಉಪದೇಶನಡೆದು ಜೈನ 
ಧರ್ಮದಲ್ಲಿ ಶ್ರ ದ್ಧ ಗೊಂಡ ಆ ರತ ಗಂಗೆಯನ್ನು ತಂಡೆಯು ಬ್ರಹ್ಮಾನರ್ತದರಸ 
ನಾದ ಕುಂಭೀಸಾಲನಿಗೆ ನಿವಾಹಮಾಡಿಕೊಟ್ಟನು. ಮದುವೆ ಕಾಲದಲ್ಲಿ 


ಸಟ್ರ್ರಂತೋಂಧ್ಯಾಯಃ 4೫ 


ಧರ್ಮಾಂರಣ್ಯಂ ಸಮಾಗತ್ಯ ರಾಜಧಾನೀ ಕೃತಾ ತದಾ । 
ದೇವಾಂಶ್ಚ ಸ್ಥಾ ಪಯಾಮಾಸ ಜೈನಧರ್ಮುಪ್ರಣೇತೃಕಾನ್‌ ॥ ೪೫ ॥ 
ಸರ್ವೇ ವರ್ಣಾಸ್ತಥಾಭೂತಾ ಜೈನಧರ್ಮಸಮಾಶ್ರಿತಾಃ । 


ಬ್ರಾಹ್ಮಣಾ ನೈವ ಪೂಜ್ಯಂತೇನ ಚ ಶಾಂತಿಕಸೌಸ್ಟಿಕಂ ॥ ೪೬ ॥ 
ನ ದದಾತಿ ತದಾ ದಾನಮೇವಂ ಕಾಲಃ ಪ್ರವರ್ತತೇ । 

ಲಬ್ಧಶಾಸನಕಾ ವಿಸ್ರಾ ಲುಪ್ತಸ್ವಾಮ್ಯಾ ಅಹರ್ನಿಶಂ ॥ ೪೭॥ 
ಸಮಾಕುಲಿತಚಿತ್ತಾಸ್ತೇ ನೃಸಮಾಮಂ ಸಮಾಯಯುಃ । 
ಕಾನ್ಯಕುಬ್ಬಸ್ಸಿತಂ ಶೂರಂ ಪಾಖಂಡೈಃ ಪರಿನೇಷ್ಟಿತಂ ॥೪೮॥ 


ಕಾನ್ಯಕುಬ್ಬಪುರಂ ಪ್ರಾಪ್ಯ ಕತಿಭಿರ್ವಾಸರೈರ್ಸ್ಯಪ । 
ಗಂಗೋಪಕಂಠೇ ನ್ಯವಸನ್‌ಸಂಛ್ರಾಂತಾಸ್ತೇ ನೋಢವಾಡವಾಃ ॥ ೪೯॥ 
ಚಾರೈಶ್ಚ ಕಥಿತಾಸ್ತೇ ಚ ನೃಪಸ್ಯಾಂಗ್ರೇ ಸಮಾಗತಾಃ । 


ಪ್ರಾತರಾಕಾರಿತಾ ವಿಪ್ರಾ ಆಗತಾ ನೃಪಸಂಸದಿ ॥೫೦॥ 
ಪ್ರತ್ಯುತ್ಥಾನಾಂಭಿನಾದಾದೀನ್ನ ಚಕ್ರೇ ಸಾದರಂ ನೃಪಃ । 
ತಿಸ್ಮತೋ ಬ್ರಾಹ್ಮಣಾನ್ಸರ್ವಾನ್ಪ್ಸರ್ಯಪೃಚ್ಛದಸೌ ತತಃ 1 ೫೦ 


ದೈವದಿಂದ ಭ್ರಾಂತಿಗೊಂಡ ಮಹಾ ಪರಾಕ್ರಮಿಯಾದ ಆ ಆಮನು ಕುಂಭೀ 
ಪಾಲನಿಗೆ ಮೋಹೇರಕಪುರವನ್ನೂ ಕೊಟ್ಟನು. 

೪೫. ಆ ಕುಂಭೀಪಾಲನು ಧರ್ಮಾರಣ್ಯಕ್ಕೆ ಬಂದು ಅದನ್ನು ರಾಜಧಾನಿ 
ಯನ್ನಾಗಿಸಿಕೊಂಡು ಜೈನಧರ್ಮಪ್ರವರ್ತಕರಾದ ದೇವತೆಗಳನ್ನು ಸ್ಥಾಪಿಸಿದನು. 

೪೬. ಎಲ್ಲಾ ಜಾತಿಯವರೂ ಜೈನಧರ್ಮವನ್ನು ಅವಲಂಬಿಸಿದರು. 
ಬ್ರಾಹ್ಮಣರ ಪೂಜೆಯೂ, ಶಾಂತಿ ಪೌಷ್ಟಿಕಕರ್ಮಗಳೂ ನಿಂತುಹೋದುವು. 

೪೭. ಆಗ ಯಾರೂ ದಾನಕೊಡುತ್ತಿರಲಿಲ್ಲ. ರಾಮನಿಂದ ಶಾಸನವನ್ನು 
ಪಡೆದ ಬ್ರಾಹ್ಮಣರು ದಿನೇದಿನೇ ತಮ್ಮ ಸ್ವತ್ತಿನ ಸ್ವಾಮಿತ್ವವನ್ನು ಕಳೆದು 
ಕೊಂಡರು. 

೪೮. ಅವರು ವ್ಯಥೆಗೊಂಡ ಮನಸ್ಸುಳ್ಳವರಾಗಿ ಪಾಷಂಡಿಗಳ ಪರಿವಾರ 
ವುಳ್ಳ ಶೂರನಾದ ಕಾನ್ಯಕುಬ್ಬದ ಆ ಆಮದೊರೆಯನ್ನು ನೋಡಲು ಬಂದರು. 

೪೯. ಆ ಮೋಹೇರಕಪುರದ ಬ್ರಾಹ್ಮಣರು ಕೆಲವು ದಿನಗಳಗಲ್ಲಿ 
ಕಾನ್ಯಕುಬ್ಬನ್ನು ಸೇರಿ ಬಳಲಿದವರಾಗಿ ಗಂಗೆಯ ಹತ್ತಿರ ವಾಸಮಾಡಿದರು. 

೫೦. ಅವರು ಬಂದಿರುವ ವಿಷಯವನ್ನು ಸೇವಕರು ದೊರೆಗೆ ತಿಳಿಸಲು 
ಅವನು ಬೆಳಗ್ಗೆ ಅವರನ್ನು ತನ್ನ ಸಭೆಗೆ ಕರೆಯಿಸಿದನು. 

೫೧. ಆಮನು ಏಳುವುದು, ನಮಸ್ಕರಿಸುವುದೇ ಮೊದಲಾದುವುಗಳಿಂದ 
ಬ್ರಾಹ್ಮಣರನ್ನು ಗೌರವಿಸದೆ ನಿಂತಿರುವ ಅವರನ್ನು ಹೀಗೆ ಕೇಳಿದನು. 


An ಶ್ರೀ ಸ್ಕಾಂದಮಹಾಸುಕಾಣಂ 


ಕಿಮರ್ಥಮಾಗತಾ ವಿಪ್ರಾಃ ಕಿಂಸ್ಟಿತ್ಕಾರ್ಯಂ ಬ್ರುವಂತು ತತ್‌ 8 ೫೨ ॥ 
ವಿಪ್ರಾ ಊಚುಃಃ-- 


ಧರ್ಮಾಃ ರಣ್ಯಾದಿಹಾಯಾತಾಸ್ತ್ಯೃತ್ಸನಿಖಾಸಂ ನರಾಂಧಿಪ । 


ರಾಜಂಸ್ತನ ಸುತಾಯಾಸ್ತು ಭರ್ತಾ ಕುಮಾರಸಾಲಕಃ ॥ ೫೩ ॥ 

ತೇನ ಪ್ರಲುಪ್ತಂ ನಿಪ್ರಾಣಾಂ ಶಾಸನಂ ಮಹದದ್ಭುತಂ । 

ವರ್ತತಾ ಜೈನಧರ್ಮೆೇಣ ಪ್ರೇರಿತೇನೇಂದ್ರಸೂರಿಣಾ ॥ ೫೪॥ 
ರಾಜೋವಾಚ: 

ಕೇನ ವೈ ಸ್ಥಾಪಿತಾ ಯೂಯಮುಸ್ಮಿನ್ಮೋಹೇರಕೇ ಪುರೇ। 

ಏತದ್ಧಿ ವಾಡವಾಃ ಸರ್ವಂ ಬ್ರೂತ ವೃತ್ತಂ ಯಥಾ ತಥಂ ॥ ೫೫ ॥ 
ವಿಪ್ರಾ ಊಚುಃ: 

ಕಾಜೇಶೈಃ ಸ್ಥಾಪಿತಾಃ ಪೂರ್ವಂ ಧರ್ಮರಾಜೇನ ಧೀಮತಾ । 

ಕೃತಾ ಚಾತ್ರ ಶುಭೇ ಸ್ಥಾನೇ ರಾಮೇಣ ಚ ತತಃ ಪುರೀ ॥ ೫೬ ॥ 

ಶಾಸನಂ ರಾಮಚಂದ್ರಸ್ಯ ದೃಷ್ಟ್ಟ್ವಾನ್ಶೈಶ್ಚೈನ ರಾಜಭಿಃ । 

ಪಾಲಿತಂ ಧರ್ಮತೋ ಹ್ಯತ್ರ ಶಾಸನಂ ನೃಪಸತ್ತಮ ॥ ೫೭ ॥ 

ಇದಾನೀಂ ತವ ಜಾಮಾತಾ ನಿಪ್ರಾನ್ಸಾಲಯತೇ ನಹಿ। 

ತಚ್ಛ್ರುತ್ವಾ ನಿಪ್ರವಾಕ್ಯಂ ತು ರಾಜಾ ನಿಸ್ರಾನಥಾಃಬ್ರನೀತ್‌ ॥ ೫೮ ॥ 


೫೨. ""ಎಲೈ ಬ್ರಾಹ್ಮಣರೆ! ಯಾವ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೀರಿ? 
ಅದನ್ನು ಹೇಳಿರಿ.” 

೫೩-೫೪. ಬ್ರಾಹ್ಮಣರು ಹೇಳುತ್ತಾರೆ :-ಮಹಾರಾಜ! ನಾವು ಧರ್ಮಾ 
ರಣ್ಯದಿಂದ ನಿನ್ನೆಡೆಗೆ ಬಂದಿದ್ದೇವೆ. ನಿನ್ನ ಅಳಿಯನಾದ ಕುಂಭೀಪಾಲನು 
ಜೈನನಾದ ಇಂದ್ರಸೂರಿಯ ಪ್ರೇರಣೆಯಿಂದ ಬ್ರಾಹ್ಮಣರ ಅದ್ಭುತವಾದ ಶಾಸನ 
ಗಳನ್ನು ಹಾಳುಮಾಡಿದ್ದಾನೆ. 

೫೫. ರಾಜನು ಹೇಳುತ್ತಾನೆ:--ದ್ವಿಜರೆ! ನಿಮ್ಮನ್ನು ಈ ಮೋಹೇರಕ 
ಪುರದಲ್ಲಿ ಯಾರು ಸ್ಥಾಪಿಸಿದರು? ಇದನ್ನು ಯಥಾರ್ಥವಾಗಿ ತಿಳಿಸಿರಿ. 

೫೬. ಬ್ರಾಹ್ಮಣರು ಹೇಳುತ್ತಾರೆ:--ಬ್ರಹ್ಮ, ವಿಷ್ಣು, ಮಹೇಶ್ವರರ 
ಯಮನೂ ನಮ್ಮನ್ನು ಇಲ್ಲಿ ಸ್ಥಾಪಿಸಿರುತ್ತಾರೆ. ಈ ಶುಭಸ್ಥಾನದಲ್ಲಿ ರಾಮನು 
ನಗರವನ್ನು ನಿರ್ಮಿಸಿರುವನು. 

೫೭. ಇತರ ರಾಜರು ಶ್ರೀರಾಮನ ಶಾಸನವನ್ನು ನೋಡಿ ಅದನ್ನು 
ಧರ್ಮದಿಂದ ಕಾಪಾಡಿರುತ್ತಾರೆ. 

೫೮. ಈಗ ನಿನ್ನ ಅಳಿಯನಾದ ಕುಂಭೀಪಾಲನು ಬ್ರಾಹ್ಮಣರನ್ನು ಪೊರೆಯು 
ವುದಿಲ್ಲ.'” ಅದನ್ನು ಕೇಳಿ ರಾಜನು ಆ ಬ್ರಾಹ್ಮಣರನ್ನು ಕುರಿತು ಹೀಗೆಂದನು. 


ಹಟ್ಟ ಂತೋಳಿಫ್ಶಾಯ ಆವ 


ಯಾಂತು ಶೀಘ್ರಂ ಹಿ ಭೋ ವಿಪ್ರಾಃ ಕಥಯಂತು ಮಮಾಜ್ಞಯಾ | 
ರಾಜ್ಞೇ ಕುಮಾರಪಾಲಾಯ ದೇಹಿ ತ್ವಂ ಬ್ರಾಹ್ಮಣಾಲಯಂ ॥೫೯॥ 
ಶ್ರುತ್ವಾ ವಾಕ್ಯಂ ತತೋ ವಿಪ್ರಾಃ ಪರಂ ಹರ್ಷಮುಪಾಗತಾಃ । 
ಜಗ್ಮುಸ್ತತೋಂತಿಮುದಿತಾ ವಾಕ್ಯಂ ತತ್ರ ನಿನೇದಿತಂ ॥೬೦॥ 
ಶ್ವಶುರಸ್ಯ ವಚಃ ಶ್ರುತ್ವಾ ರಾಜಾ ನಚನಮಬ್ರನೀತ್‌ । 

ಕುಮಾರಪಾಲ ಉವಾಚ: 


ರಾಮಸ್ಯ ಶಾಸನಂ ವಿಪ್ರಾಃ ಪಾಲಯಿಷ್ಯಾನ್ಯುಹಂ ನಹಿ 1೬೧॥ 
ತ್ಯಜಾಮಿ ಬ್ರಾಹ್ಮಣಾನ್ಯಜ್ಞೆ € ಪಶುಹಿಂಸಾಹಪರಾಯುಣಾನ್‌ । 
ತಸ್ಮಾದ್ಧಿ ಹಿಂಸಕಾನಾಂ ತು ನ ಮೇ ಭಕ್ತಿರ್ಭವೇದ್ದಿಜಾಃ ॥ ೬೨॥ 


ಬ್ರಾಹ್ಮಣಾ ಊಚುಃ. 


ಕಥಂ ಸಾಖಂಡಧರ್ಮೆೇಣ ಲುಪ್ತಶಾಸನಕೋ ಭವಾನ್‌ । 


ಪಾಲಯಸ್ವ ನೃಪಶ್ರೇಷ್ಮ ಮಾಸ್ಕ ಪಾಪೇ ಮನಃ ಕೃಥಾಃ ೬೩ ॥ 
ರಾಜೋವಾಚ: 

ಅಹಿಂಸಾ ಸರನೋಧರ್ಮ ಅಹಿಂಸಾ ಚ ಪರಂ ತಪಃ । 

ಅಹಿಂಸಾ ಪರಮಂ ಜ್ಞಾನಮಹಿಂಸಾ ಪರಮಂ ಫಲಂ ॥ ೬೪ ॥ 

ತೃಣೇಸು ಚೈವ ನೃಶ್ಸೇಸು ಸತಂಗೇಷು ನರೇಷು ಚ । 

ಕೀಟೀಷು ಮತ್ಯುಣಾದ್ಯೇಷು ಅಜಾಶ್ವೇಷು ಗಜೇಷು ಚ ॥ ೬೫॥ 


೫೯. ದ್ವಿಜರೆ! ನೀವು ಬೇಗನೆ ಹೋಗಿ ಕುಮಾರಪಾಲನಿಗೆ ಬ್ರಾಹ್ಮಣರ 
ಆಲಯಗಳನ್ನು ಮರಳಿ ಕೊಡುವಂತೆ ನಾನು ಅಪ್ಪಣೆಮಾಡಿರುವುದಾಗಿ ತಿಳಿಸಿರಿ. 

೬೦. ಬ್ರಾಹ್ಮಣರು ಆಮರಾಜನ ಮಾತನ್ನು ಕೇಳಿ ಅತಿ ಹರ್ಷಗೊಂಡು 
ಧರ್ಮಾರಣ್ಯಕ್ಕೆ ತೆರಳಿ ರಾಜನ ಅಪ್ಪಣೆಯನ್ನು ಕುಮಾರಪಾಲನಿಗೆ ತಿಳಿಸಿದರು. 

೬೧. ಮಾವನ ಮಾತನ್ನು ಕೇಳಿ ಕುಮಾರಪಾಲನು ಇಂತೆಂದನು. 
ಕುಮಾರಪಾಲನು ಹೇಳುತ್ತಾನೆ:--ವಿಪ್ರರೆ! ನಾನು ರಾಮನ ಆಜ್ಞೆಯನ್ನು 
ನಡಸುವುದಿಲ್ಲ. 

೬೨. ಯಜ್ಞದಲ್ಲಿ ಪಶುಹಿಂಸೆ ಮಾಡುವ ಬ್ರಾಹ್ಮಣರಲ್ಲಿ ನನಗೆ ಭಕ್ತಿಯಿಲ್ಲ. 
ಆದ್ದರಿಂದ ಅವರನ್ನು ನಾನು ತ್ಯಜಿಸುವೆನು. 

೬೩. ಬ್ರಾ ಹ್ಮಣರು ಹೇಳುತ್ತಾರೆ:--ಮಹಾರಾಜ! ನೀನು ಪಾಖಂಡ 
ಧರ್ಮವನ್ನವಲಂಬಿಸಿ ರಾಮನ ಶಾಸನವನ್ನು ಹೇಗೆ ಹಾಳುಮಾಡುವೆ? 
ಕಾಪಾಡು. ಪಾಪದಲ್ಲಿ ಮನಸ್ಸನ್ನಿಡಬೇಡ. 

೬೪. ರಾಜನು ಹೇಳುತ್ತಾನೆ:-ಪ್ರಾಣಿಹಿಂಸೆ ಮಾಡದಿರುವುದೇ ಉತ್ತಮ 
ವಾದ ಧರ್ಮವೂ, ತಸಸ್ಸೂ, ಜ್ಞಾನವೂ, ಫಲವೂ ಆಗಿರುವುದು. 

೬೫-೬೬. ವಿಪ್ರರೆ! ಹುಲ್ಲು, ಮರ, ಪತಂಗ, ಮನುಷ್ಯ, ಕೀಟ, ತಗಣೆ, 


4೫೮ ಶ್ರೀ ಸ್ಕಾಂದಮಹಾಪುರಾಣಂ 


ಲೂತಾಸು ಚೈವ ಸರ್ನೇಷು ಮಹಿಸ್ಕಾದಿಸು ನೈ ತಥಾ । 


ಜಂತನಃ ಸದೃಶಾ ನಿಪ್ರಾಃ ಸೂಕ್ಸ್ಮೇಷು ಚ ಮಹತ್ಸು ಚ ॥ ೬೬ ॥ 
ಕಥಂ ಯೂಯಂ ಪ್ರವರ್ತಢ್ರೇ ವಿಪ್ರಾ ಹಿಂಸಾಪರಾಯಣಾಃ । 

ತಚ್ಛ್ರುತ್ವಾ ವಜ್ರತುಲ್ಯಂ ಹಿ ವಚನಂ ಚ ದ್ವಿಜೋತ್ತಮಾಃ ॥೬೭॥ 
ಪ್ರತ್ಯೂಚುರ್ವಾಡವಾಃ ಸರ್ವೇ ಕ್ರೋಧರಕ್ತೇಕ್ಸೃಣಾ ದೃಶಾ ॥ ೬೮ ॥ 


ಬ್ರಾಹ್ಮಣಾ ಊಚುಃ: 
ಅಹಿಂಸಾ ಪರನೋ ಧರ್ಮಃ ಸತ್ಯಮೇತತ್ತ್ವಯೋದಡಿತಂ । 


ಪರಂ ತಥಾಪಿ ಧರ್ಮೊಸ್ತಿ ಶೃಣುಷ್ಟೈಕಾಗ್ರಮಾನಸಃ ॥ ೬೯ ॥ 
ಯಾ ವೇದವಿಹಿತಾ ಹಿಂಸಾ ಸಾ ನ ಹಿಂಸೇತಿ ನಿರ್ಣಯಃ । 

ಶಸ್ತ್ರೇಣಾಂ ಹನ್ಯತೇ ಯತ್ರ ಪೀಡಾ ಜಂತುಷು ಜಾಯತೇ ॥ ೭೦ ॥ 
ಸ ಏನಾಂಧರ್ಮ ಏವಾಸ್ತಿ ಲೋಕೇ ಧರ್ಮುನಿದಾಂ ವರ! 
ವೇದಮಂತ್ರೈರ್ವಿಹನ್ಯಂತೇ ನಿನಾ ಶಸ್ತ್ರೇಣ ಜಂತವಃ neon 
ಜಂತುಪೀಡಾಕರಾ ನೈನ ಸಾ ಹಿಂಸಾ ಸುಖದಾಯಿನೀ । 

ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ ॥ 2೨ 


ಆಡು, ಕುದುರೆ, ಆನೆ, ಜೇಡರಹುಳು, ಸರ್ಪ, ಎಮ್ಮೆ ಮೊದಲಾದ ಸಣ್ಣ 
ಮತ್ತು ದೊಡ್ಡ ಪ್ರಾಣಿಗಳಲ್ಲಿ ಪ್ರಾಣವು ಒಂಡೇರೀತಿಯಾಗಿರುವುದು. 

೬೭-೬೮. ನೀವು ಇಂತಹ ಪ್ರಾಣಿಗಳನ್ನು ಹಿಂಸೆ ಮಾಡುವುದರಲ್ಲಿ ಹೇಗೆ 
ತೊಡಗಿರುವಿರಿ? ಎಂದನು. ಬ್ರಾಹ್ಮಣರು ವಜ್ರಾಯುಧಕ್ಕೆ ಸಮಾನವಾದ 
ಆ ಮಾತನ್ನು ಕೇಳಿ ಸಿಟ್ಟಿನಿಂದ ಕೆಂಪೇರಿದ ಕಣ್ಣುಳ್ಳವರಾಗಿ ಹೀಗೆಂದರು. 

೬೯. ಬ್ರಾಹ್ಮಣರು ಹೇಳುತ್ತಾರೆ:--"" ಅರಸ! ಅಹಿಂಸೆಯು ಉತ್ತಮ 
ವಾದ ಧರ್ಮವೆಂದು ನೀನು ಹೇಳಿರುವುದು ನಿಜ. ಆದರೆ ಅದಕ್ಕಿಂತ ಉತ್ತಮ 
ವಾದ ಧರ್ಮವೊಂದಿದೆ. ಒಮ್ಮನದಿಂದ ಕೇಳು. 

೭೦. ವೇದದಲ್ಲಿ ಹೇಳಲ್ಪಟ್ಟ ಹಿಂಸೆಯು ಹಿಂಸೆಯಲ್ಲವೆಂದು ನಿಶ್ಚಿತ 
ವಾಗಿದೆ. ಆಯುಧದಿಂದ ಜಂತುಗಳನ್ನು ಕೊಲ್ಲುವುದರಿಂದ ಅವುಗಳಿಗೆ ಬಾಥೆ 
ಯಾಗುವುದು. 

೭೧-೭೨. ಧರ್ಮಜ್ಞನಾದ ದೊರೆಯೆ! ಶಸ್ತ್ರವಥೆಯೇ ಅಧರ್ಮವೆನ್ನೆಸಿ 
ಕೊಳ್ಳುವುದು. ಶಸ್ತ್ರಗಳಿಲ್ಲದೆ ವೇದ ಮಂತ್ರಗಳಿಂದ ಜಂತುಗಳನ್ನು ಕೊಂದರೆ 
ಅದು ಪ್ರಾಣಿಗಳಿಗೆ ಪೀಡೆಯನ್ನುಂಟುಮಾಡುವ ಹಿಂಸೆಯಾಗದೆ ಸುಖದಾಯಕ 
ವಾಗುವುದು. ಸರೋಪಕಾರವು ಪುಣ್ಯಕ್ಕೂ, ಪರಪೀಡೆಯು ಪಾಪಕ್ಕೂ 
ಕಾರಣವಾಗುವುದು. 


ಸಟ್ಟೃಂಶೋಂಧ್ಮಾಯಃ FUT: 


ವೇದೋದಿತಾಂ ವಿಧಾಯಾಪಿ ಹಿಂಸಾಂ ಸಾಸೈರ್ನ ಲಿಪ್ಯತೇ । 


ವಿಪ್ರಾಣಾಂ ವಚನಂ ಶ್ರುತ್ವಾ ಪುನರ್ನಚನಮಬ್ರನೀತ್‌ ॥೭೩॥ 
ರಾಜೋವಾಚ :-- 

ಬ್ರಹ್ಮಾದೀನಾಂ ಪರಂ ಕ್ಲೇತ್ರಂ ಧರ್ಮಾಂರಣ್ಯಮನುತ್ತಮಂ | 

ಬ್ರಹ್ಮನಿಷ್ಣುಮಹೇಶಾದ್ಯಾ ನೇದಾನೀಮತ್ರ ಸಂತಿ ತೇ ॥ ೭೪ ॥ 


ನ ಧರ್ಮೋ ವಿದ್ಯತೇ ನಾತ್ರ ಉಕ್ತೋ ರಾಮಃ ಸ ಮಾನುಷಃ | 
ಕ್ಟ ನಾಃಪಿ ಲಂಬಪುಚ್ಛೋಂಸೌ ಯೋ ಮುಕ್ತೋ ರಕ್ಸುಣಾಯ ವಃ ॥ 
ಶಾಸನಂ ಚೇನ್ನ ದೃಷ್ಟಂ ವೋ ನೈವ ತತ್ಸಾಲಯಾನ್ಯುಹಂ । 


ದ್ವಿಜಾಃ ಕೋಪಸಮಾನಿಷ್ಟಾ ದದುಃ ಪ್ರತ್ಯುತ್ತರಂ ತದಾ ॥ ೭೬ ॥ 
ದ್ವಿಜಾ ಊಚುಃ: 

ರೇ ಮೂಢ ತ್ವಂ ಕಥಂ ವೇತ್ಮಂ ಭಾಷಸೇ ಮದಲೋಲುಪಃ । 

ಸ ದೈತ್ಯಾನಾಂ ನಿನಾಶಾಯ ಧರ್ಮುಸಂರಕ್ಸ್ಸಣಾಯ ಚ ॥೭೭॥ 


ರಾಮಶ್ಚತುರ್ಭುಜಃ ಸಾಕ್ಸಾನ್ಮಾನುಷತ್ವಂ ಗತೋಭುನಿ | 
ಅಗತೀನಾಂ ಚ ಗತಿದಃ ಸ ವೈ ಧರ್ಮಪರಾಯಣಃ । 


ದಯಾಲುಶ್ಚ ಕೃಷಾಲುಶ್ಚ ಜಂತೂನಾಂ ಪರಿಪಾಲಕಃ ॥೭೮॥ 
ರಾಜೋವಾಚ. 

ಕುತೋಂದ್ಯ ವರ್ತತೇ ರಾಮಃ ಕುತೋ ವೈ ವಾಯುನಂದನಃ । 

ಭ್ರಷ್ಟಾಃಭ್ರನಿಂವನ ತೇ ಸರ್ವೇ ಕ್ವ ರಾಮೋ ಹನುಮಾನಿತಿ ॥೭೯॥ 


೭೩. ನರನು ವೇದೋಕ್ತವಾದ ಹಿಂಸೆಯನ್ನು ಮಾಡಿದರೂ ಪಾಹಿಯಾಗು 
ವುದಿಲ್ಲ.” ದೊರೆಯು ಬ್ರಾಹ್ಮಣರ ಈ ಮಾತನ್ನು ಕೇಳಿ ಮರಳಿ ಇಂತೆಂದನು. 

೭೪-೭೫. ರಾಜನು ಹೇಳುತ್ತಾನೆ :--ಧರ್ಮಾರಣ್ಯವು ಬ್ರಹ್ಮಾದಿ ದೇವತೆ 
ಗಳ ಕ್ಲೇತ್ರವು. ಅವರು ಈಗ ಇಲ್ಲಿಲ್ಲ. ಧರ್ಮವು ಇಲ್ಲ. ರಾಮನೊಬ್ಬ ಮನು 
ಷ್ಯನು. ನಿಮ್ಮ ರಕ್ಷಣೆಗಾಗಿ ನೇಮಿಸಲ್ಪಟ್ಟ ಆ ದೀರ್ಫಬಾಲದ ಕಪಿಯೆ್ಲಿ? 

೭೬, ನಿಮ್ಮ ಶಾಸನವನ್ನು ನಾನು ಕಾಣಲಿಲ್ಲ. ಅದನ್ನು ನಾನು ಕಾಪಾಡು 
ವುದಿಲ್ಲ. ಎನ್ನಲು ಬ್ರಾಹ್ಮಣರು ಕೋಪಗೊಂಡು ಪ್ರತ್ಯುತ್ತರ ಕೊಟ್ಟರು. 

೭೭-೭೮. ಬ್ರಾಹ್ಮಣರು ಹೇಳುತ್ತಾರೆ: ಎಲಾ ಮೂಢ! ಮದಾಂಧ 
ನಾಗಿ ಏಕೆ ಹೀಗೆ ಮಾಡುತ್ತಿರುವೆ? ಶ್ರೀಮನ್ನಾರಾಯಣನು ದೈತ್ಯರ ನಾಶ 
ಕ್ಕಾಗಿಯೂ, ಧರ್ಮಸಂರಕ್ಸಣೆಗಾಗಿಯೂ ಭೂಮಿಯಲ್ಲಿ ಮನುಷ್ಯನಾಗಿ ಅವತರಿ 
ಸಿರುವನು. ಗತಿಯಿಲ್ಲದವರಿಗೆ ಗತಿದಾಯಕನೂ, ಧರ್ಮನಿರತನೂ, ದಯಾಳುವೂ 
ಆದ ಅವನು ಪ್ರಾಣಿಗಳನ್ನು ರಕ್ಸಿಸುತ್ತಿದ್ದನು. 

೭೯. ರಾಜನು ಹೇಳುತ್ತಾನೆ:--ಈಗ ರಾಮನೆಲ್ಲಿ? ವಾಯುಸುತನಾದ 
ಆಂಜನೇಯನೆಲ್ಲಿ? ಅವರಿಬ್ಬರೂ ತುಂಡುಮೋಡದಂತೆ ಎಲ್ಲಿಯೋ ಹಾಳಾದರು. 


4೬೦ ಶ್ರೀ ಸ್ಕ್ಯಾಂದನುಹಾಪುರಾಣಂ 


ಪರಂತು ರಾಮೋ ಹನುಮಾನ್ಯದಿ ವರ್ತೇತ ಸರ್ವತಃ । 


ಇದಾನೀಂ ವಿಪ್ರಸಾಹಾಯ್ಯ ಆಗಮಿಷ್ಯತಿ ಮೇ ಮತಿಃ ॥ 6೦8 
ದರ್ಶಯದ್ಸಂ ಹನೂಮಂತಂ ರಾಮಂ ವಾ ಲಕ್ಷಣಂ ತಥಾ। 

ಯದ್ಯಸ್ತಿ ಪ್ರತ್ಯಯಃ ಕಶ್ಚಿತ್ಸ ನೋ ವಿಪ್ರಾಃ ಪ್ರದರ್ಶ್ಶತಾಂ 1 ೮೧॥ 
ಉಕ್ತಂ ತೈ ರಾಮದೇವೇನ ದೂತಂ ಕೃತ್ವಾ:0ಜನೀಸುತಂ । 
ಚತುಶ್ಚತ್ಪಾರಿಂಶದಧಿಕಂ ದತ್ತಂ ಗ್ರಾಮಶತಂ ನೃಪ ॥ ೮೨ ॥ 
ಪುನರಾಗತ್ಯ ಸ್ಥಾನೇಂಸ್ಮಿನ್ನತ್ತಾ ಗ್ರಾಮಾಸ್ತ್ರಯೋದಶ । 

ಕಾಶ್ಯಸ್ಯಾಂ ಚೈವ ಗಂಗಾಯಾಂ ಮಹಾದಾನಾನಿ ಷೋಡಶ ॥ ೮೩ ॥ 
ದತ್ತಾನಿ ನಿಪ್ರಮುಖ್ಯೇಭ್ಯೋ ದತ್ತಾ ಗ್ರಾಮಾಃ ಸುಶೋಭನಾಃ । 

ಪುನಃ ಸಂಕಲ್ಪಿತಾ ನೀರ ಷಟ್ಟಿಂಚಾಶಕಸಂಖ್ಯಯಾ ॥ ೮೪ ॥ 
ಸಟ್ಟ್ರಂಶಚ್ಚ ಸಹಸ್ರಾಣಿ ಗೋಭೂಜಾ ಜಜ್ಞಿರೇ ವರಾಃ । 

ಸಸಾದಲಕ್ಸಾ ವಣಿಜೋ ದತ್ತಾ ಮಾಂಡಲಿಕಾಭಿಧಾಃ ॥ ೪೫ ॥ 


ತೇನೋಕ್ತಂ ವಾಡವಾಃ ಸರ್ವೇ ದರ್ಶಯಧ್ಯಂ ಹಿ ಮಾರುತಿಂ । 
ಯಸ್ಕಾಂಭಿಜ್ಞಾನಮಾತ್ರೇಣ ಸ್ಥಿತಿಂ ಪೂರ್ನಾಂ ದದಾಮ್ಯಹಂ ॥ ೮೬॥ 
ವಿಪ್ರವಾಕ್ಯಂ ಕರಿಷ್ಯಾಮಿ ಪ್ರತ್ಯಯೋ ದರ್ಶ್ಶತೇ ಯದಿ । 

ತತಃ ಸರ್ವೇ ಭವಿಷ್ಯಂತಿ ನೇದಧರ್ಮ ಪರಾಯಣಾಃ ॥ ೮೭ ॥ 

೮೦. ರಾಮನೂ ಹನುಮಂತನೂ ಇದ್ದಿದ್ದರೆ ಅವರು ಈಗ ಬ್ರಾಹ್ಮಣರ. 
ಸಹಾಯಕ್ಕಾಗಿ ಬರುತ್ತಿದ್ದರೆಂದು ತಿಳಿಯುವೆನು. 

೮೧. ಬ್ರಾಹ್ಮಣರೆ! ನಿಮಗೆ ನಂಬಿಕೆಯಿದ್ದರೆ ಹನೂಮಂತನನ್ನಾಗಲಿ, 
ರಾಮನನ್ನಾಗಲಿ ನನಗೆ ತೋರಿಸಿರಿ ಎಂದನು. 

೮೨. ಆಗ ಬ್ರಾಹ್ಮಣರು ಮಹಾರಾಜ! ರಾಮದೇವನು ಆಂಜನೇಯನನ್ನು 
ದೂತನನ್ನಾಗಿ ಮಾಡಿ ನೂರನಲವತ್ತನಾಲ್ಕು ಗ್ರಾಮಗಳನ್ನಿತ್ತನು. 

೮೩. ಮತ್ತೆ ಬಂದು ಈ ಕ್ರೇತ್ರದಲ್ಲಿ ಹದಿಮೂರು ಗ್ರಾಮಗಳನ್ನಿತ್ತನು. 
ಕಾಶ್ಯಸೀನದಿಯಲ್ಲಿಯೂ, ಗಂಗೆಯಲ್ಲಿಯೂ ಹೋಡಶಮಹಾದಾನವನ್ನು 
ಮಾಡಿದನು. 

೮೪-೮೫. ಬ್ರಾಹ್ಮಣರಿಗೆ ಐವತ್ತಾರು ಗ್ರಾಮಗಳನ್ನು ಏರ್ಪಡಿಸಿದನು. ಇಲ್ಲಿ 
ಮೂನತ್ತಾರುಸಾವಿರ ಉತ್ತಮವೈಶ್ಯರು ಹುಟ್ಟಿದರು. ಒಟ್ಟಿಗೆ ಲಕ್ಷದ ಇಪ್ಪತ್ತೈದು 
ಸಾವಿರ ಮಂದಿಯಾದ ಅವರು ಮಾಂಡಲಿಕರೆಂಬ ವೈಶ್ಯರಾದರು ಎಂದರು. 

೮೬-೮೮. ರಾಜನು ಬ್ರಾಹ್ಮಣರನ್ನು ಕುರಿತು, "" ಅಯ್ಯಾ ದ್ವಿಜರೆ ! ಕೀವು 
ಹನುಮಂತನನ್ನು ನನಗೆ ತೋರಿಸಿರಿ. ಅವನನ್ನು ನೋಡಿದಕೂಡಲೆ ನಿಮ್ಮಹಿಂದಿನ 
ವೃತ್ತಿಯನ್ನು ಕೊಡುವೆನು. ನಂಬಿಕೆಯನ್ನು ತೋರಿಸಿದರೆ ನಿಮ್ಮ ಮಾತನ್ನು 
ನಡೆಯಿಸುನೆನು. ಅನಂತರ ನೀವು ವೇದಧರ್ಮಾಸಕ್ತರಾಗಬಹುದು. 


ಸಟ್ಟ್ರಂಶೋ9ಧ್ಯಾಯ॥ ೩೬೧ 


ಅನ್ಯಥಾ ಜೈನಧರ್ಮೇಣ ವರ್ತಯಧ್ವಂ ಹಿ ಸರ್ವಶಃ । 
ನೃಪವಾಕ್ಯಂ ತು ತೇ ಶ್ರುತ್ವಾ ಸ್ಟೇಸ್ತೇ ಸ್ಥಾನೇ ಸಮಾಗತಾಃ ॥ ೮೮ ॥ 
ವಾಡವಾಃ ಖನ್ನಮನಸಃ ಕ್ರೋಧೇನಾಂಂಧೀಕೃತಾ ಭುವಿ ! 


ನಿಶ್ಚಾಸಾನ್ಮುಂಚಮಾನಾಸ್ತೇ ಹಾಹೇತಿ ಪ್ರವದಂತಿ ಚ ॥೮೯॥ 
ದಂತಾನ್ಭ್ರಾಘರ್ಷಯನ್ಸರ್ವಾನ್ನ್ಯಪೀಡಂಶ್ಚ ಕರೈಃ ಕರಾನ್‌ । 
ಪರಸ್ಪರಂ ಭಾಷಮಾಣಾಃ ಕಥಂ ಕುರ್ನೊೋ ವಯಂತ್ರಿತಃ uo 


ಮಿಲಿತ್ವಾ ವಾಡವಾಃ ಸರ್ವೇ ಚಕ್ರುಸ್ತೇ ಮಂತ್ರಮುತ್ತಮಂ । 
ರಾಮನಾಕ್ಯ ೦ ಹೃದಿ ಧ್ಯಾತ್ವಾ ಧ್ಯಾತ್ವಾ ಚೈವಾಂಂಜನಾಸುತಂ ॥ ೯೧॥ 
ದಿ )ಜಮೇಲಾಪಕಂ ಚಕ್ರು ಬ ವೃ ದ್ಧ ತಮಾ ಅಪಿ । 

ತೇಷಾಂ ವೃದ್ಧ ತಮೋ ನಪ್ರೋ ವಾಕ್ಯ ಮೊ ಶುಭಂ ತದಾ ॥೯೨॥ 
ಚತುಕಷಸ್ಟಿ. ಶ್ತ ಗೋತ್ತಾ ಣಾಮಸ್ಕ್ಮಾ' ಕ್ರ, ಯೇ ದ್ವಿಸಪ್ತತಿಃ । 


ಸ್ವಸ್ಥ ಗೋತ್ತೆ ಸ್ಯಾಂವಭಂಕಾ ಏಿಕಗ್ರಾಮಾಭಿಭಾಷಿಣಃ ॥ ೯೩॥ 
ಪ್ರಯಾತು ಸೃಸ್ಥವರ್ಗಸ್ಯ ಏಕೋ ಹ್ಯೇಕೋ ದ್ವಿಜಃ ಸುಧೀಃ । 
ರಾಮೇಶ್ವರಂ ಸೇತುಬಂಧಂ ಹನೂಮಾಂಸ್ತತ್ರ ವಿದ್ಯತೇ ॥ ೯೪ ॥ 
ಸರ್ವೇ ಪ್ರಯಾಂತು ತತ್ರೈನ ರಾಮಪಾರ್ಶ್ಶೇ ನಿರಾಮಯಾಃ । 
ನಿರಾಹಾರಾ ಜಿತಕ್ರೋಧಾ ಮಾಯಯಾ ವರ್ಜಿತಾಃ ಪುನಃ ॥೯೫॥ 





ಹಾಗಿಲ್ಲದಿದ್ದರೆ ಜೈನಧರ್ಮವನ್ನು ಆಶ್ರಯಿಸಿರಿ. ರಾಜನ ಮಾತನ್ನು ಕೇಳಿ 
ಬಾ ್ರಾಹ್ಮಣರು ತಮ್ಮ ತಮ್ಮ ಸ್ಥ ಸ್ಥಳಗಳಿಗೆ : ಬಂದರು. 

೮೯೯೦. ವ ೈಥೆಗೊಂಡ "ಮನಸ್ಸುಳ್ಳ ವರೂ, ಕೋಸಗೊಂಡವರೂ, ನಿಟ್ಟು 
ಸಿರು i, ಹಾಹಾಕಾರ ಮಾಡಿ ಪ್ರಲಪಿಸುವವರೂ ಆದ ಬ್ರಾಹ್ಮ: ತ 
ಹಲ್ಲುಗಳನ್ನು ಕಡಿಯುತ್ತಲೂ, ಕೈಗಳನ್ನು 'ಏಸಿಕೆಕೊಳ್ಳುತ್ತಲೂ ಇನ್ನ ಮುಂಜಿ 
ನಾವು ಏನುಮಾಡೋಣ ಎಂದು ಮಾತನಾಡಿಕೊಳ್ಳುತ್ತಲೂ ಇದ್ದರು. 

೯೧-೯೨. ಆ ಬ್ರಾಹ್ಮಣರೆಲ್ಲ ಸೇರಿ ಆಲೋಚಿಸಿದರು: ರಾಮನನ್ನೂ 
ಹನುಮಂತನನ್ನೂ ಧ್ಯಾನಿಸುತ್ತ ಬ್ರಾಹ್ಮಣರ ಸಭೆಯನ್ನು ಸೇರಿಸಿದರು. ಆಗ 
ಅವರಲ್ಲಿ ಮುದುಕನಾದ ಒಬ್ಬ ಬ್ರಾಹ್ಮಣನು ಹೀಗೆಂದನು. 

೯೩-೯೫. ಅರುವತ್ತನಾಲ್ಕು ಗೋತ್ರಗಳಲ್ಲಿ ಜನಿಸಿದ ಎಪ್ಪತ್ತೆರಡು 
ಗೋತ್ರಾವಟಿಂಕವುಳ್ಳವರಾಗಿ ಒಂದೇ ಗ್ರಾಮದಲ್ಲಿ ವಾಸಿಸುತ್ತ ಒಂದೇ ಮಾತನ್ನ್ನಾ 
ಡುತ್ತಿರುವ ನಮ್ಮ ಲ್ಲಿ ಒಂದೊಂದು ಗುಂಪಿಗೆ ಒಬ್ಬೊಬ್ಬನಂತೆ ಎಲ್ಲರೂ ಸೇರಿ 
ಆಹಾರವನ್ನೂ, ಕೋಪ ವನ್ನೂ, ಕಸಟವನ್ನೂ ತ್ಯ ಜಿಸಿ ರಾಮನೂ ಹನುಮಂತನೂ 
ಇರುವ ರಾಮೇಶ್ವರಕ್ಸೇತ ಕ್ಕ ಹೋಗಬೇಕು. 


4೬೨ ಶ್ರೀ ಸ್ಕಾಂದೆಮಹಾಪುರಾಣಂ 


ಏಕಾಗ್ರ ಮಾನಸಾಃ ಸರ್ಮೇ ಸ್ತುತ್ವಾ ಧ್ಯಾತ್ವಾ ಜಪಂತು ತಂ | 


ತತೋ ದಾಶರಥೀ ರಾನೋ ದಯಾಂ ಕೃತ್ವಾ ದ್ವಿಜನ್ಮಸು `॥೯೬॥ 
ಶಾಸನಂ ಚ ಪ್ರದಾಸ್ಯತಿ ಅಚಲಂ ಚ ಯುಗೇ ಯುಗೇ | 

ಮಹತಾ ತಪಸಾ ತುಷ್ಟಃ ಪ್ರದಾಸ್ಯತಿ ಸವಿೋಸಾಹಿತಂ 1೯೭॥ 
ಯಸ್ಯ ವರ್ಗಸ್ಯ ಯೋ ನಿಪ್ರೋ ನ ಪ್ರಯಾಸ್ಯತಿ ತತ್ರ ನೈ! 

ಸ ಚ ನರ್ಗಾತ್ಸರಿತ್ಯಾಜ್ಯಃ ಸ್ಥಾನಧರ್ಮಾನ್ನ ಸಂಶಯಃ ॥ ೯೮॥ 
ವಣಿಗ್ಕೃತ್ತೇ ನ ಸಂಬಂಧೇ ನ ವಿವಾಹೇ ಕದಾಚನ । 

ಗ್ರಾಮನೃತ್ತೇ ನ ಸಂಬಂಧಃ ಸರ್ವಸ್ಥಾನೇ ಬಹಿಷ್ಕೃತಾಃ ॥೯೯॥ 
ಸಭಾವಾಕ್ಯಂ ಚ ತಚ್ಛು ತ್ವಾ ತನ್ಮಧ್ಯೇ ನಾಡವಃ ಶುಚಿಃ । 

ವಾಗ್ಮೀ ದಕ್ಷಃ ಸುಶಬ್ದಶ್ಚ ಶ್ರಿರವೈಃ ಶ್ರಾನಯನ್ಹ್ಟಿ ಜಾನ್‌ ॥ ೧೦೦ ॥ 


ಪ್ರತಿನಾಕ್ಯಂ ದತ್ತತಾಲಂ ತಿಷ್ಮನ್ನೇತದ್ವಚೋತ ಬ್ರವೀತ್‌ । 
ಅಸತ್ಯವಾದಿನಾಂ ಯಚ್ಚ ಪಾತಕಂ ಪರಿನಿಂದಕೇ । 

ಪರದಾರಾಃಭಿಗನುನೇ ಪರದ್ರೋಹರತೇ ನರೇ ॥ ೧೦೧॥ 
ಮದ್ಯಸೇಷು ಚ ಯತ್ಸಾಪಂ ಯತ್ಸಾಸಂ ಹೇಮಹಾರಿಸು । 

ತತ್ಸಾಪಂ ಚ ಭನೇತ್ತಸ್ಯ ಗಮನೇ ಯಃ ಹರಾಜ್ಮುಖಃ । 

ಅಥ ಕಿಂ ಬಹುನೋಕ್ತೇನ ಯಾಂತು ಸತ್ಯಂ ದ್ವಿಜೋತ್ತಮಾಃ ॥ ೧೦೨ ॥ 





೯೬-೯೭, ಎಲ್ಲರೂ ಒಮ್ಮನದಿಂದ ಶ್ರೀರಾಮನನ್ನು ಸ್ತೋತ್ರಗೈದು 
ಧ್ಯಾನಿಸಿ ಜಸಮಾಡಿದರೆ ಅವನು ಬ್ರಾಹ್ಮಣರಲ್ಲಿ ದಯೆಮಾಡಿ ಪ್ರತಿಯುಗ 
ದಲ್ಲಿಯೂ ನಿಶ್ಚಲವಾದ ಶಾಸನವನ್ನು ಕೊಡುವನು. ತಪಸ್ಸಿನಿಂದ ಸಂತುಷ್ಟ 
ನಾಗಿ ಇಷ್ಟಾರ್ಥವನ್ನೀಯುವನು. 

೯೮. ಯಾವ ಗುಂಪಿನ ಯಾವ ಬ್ರಾಹ್ಮಣನು ಅಲ್ಲಿಗೆ ಹೋಗುವುದಿಲ್ಲವೊ, 
ಅವನನ್ನು ಸಂಘದಿಂದಲೂ ಸ್ಥಾನಧರ್ಮದಿಂದಲೂ ಬಹಿಷ್ಕರಿಸಬೇಕು. 

೯೯. ಅವನು ವರ್ತಕವೃತ್ತಿಯಿಂದಲೂ, ವಿವಾಹಸಂಬಂಧದಿಂದಲೂ, 
ಗ್ರಾಮವೃತ್ತಿಯಿಂದಲೂ, ಎಲ್ಲೆಡೆಯಲ್ಲಿಯೂ ಬಹಿಷ್ನ ತನಾಗುವನು. 

೧೦೦-೧೦೨. ಸಭೆಯ ಆ ಮಾತನ್ನು ಕೇಳಿ ಸಭೆಯ ಮಧ್ಯದಿಂದ ಶುದ್ಧ 
ನಾದ ಒಬ್ಬ ಬ್ರಾಹ್ಮಣನೆದ್ದು ಬ್ರಾಹ್ಮಣರಿಗೆಲ್ಲ ಕೇಳಿಸುವಂತೆ ಪ್ರತಿಮಾತಿನಲ್ಲಿಯೂ 
ಚಪ್ಸಾಳೆಯನ್ನು ಹಾಕುತ್ತ ಮೂರಾವೃತ್ತಿ ಹೀಗೆಂದನು. ರಾಮೇಶ್ವರಕ್ಕೆ 
ಹೋಗಲೊಪ್ಪದಿರುವವನು ಸುಳ್ಳಾಡುವುದರಿಂದಲೂ, ನಿಂದಿಸುವುದರಿಂದಲೂ, 
ಸರಸ್ತ್ರೀಗಮನದಿಂದಲೂ, ಪರರಿಗೆ ದ್ರೋಹಮಾಡುವುದರಿಂದಲೂ, ಮದ್ಯಪಾನ 
ದಿಂದಲೂ, ಸುವರ್ಣವನ್ನು ಕದಿಯುವುದರಿಂದಲೂ ಉಂಟಾಗುವ ಪಾಪವನ್ನು 
ಹೊಂದುವನು. ಹೆಚ್ಚುಹೇಳಿ ಪ್ರಯೋಜನವೇನು? ಬ್ರಾಹ್ಮಣರೆಲ್ಲರೂ ನಿಶ್ಚಯ 
ವಾಗಿಯೂ ಅಲ್ಲಿಗೆ ತೆರಳಲಿ. 


ಷಟ್ಟ್ರಂಶೋಳಧ್ಯಾಯಃ ತಿ೬ಷ 


ಸ 
ತಚ್ಛು ತ್ವಾ ದಾರುಣಂ ವಾಕ್ಯಂ ಗಮನಾಯ ಮನೋ ದಥೇ। 
ಗಚ್ಛತಸ್ತಾನ್ಸಿಜಾನ್ನು ಎತ್ವಾ ರಾಜಾ ಕುಮಾರಪಾಲಕಃ ॥ ೧೦೩ ॥ 
ಸಮಾಹೂಯ ಕೃಷೇಃ ಕರ್ಮ ಭಿಕ್ಸಾಂಟನಮಥಾಸಿ ವಾ । 
ನಾನಾಗೋತ್ರೇಭ್ಯೋ ಬ್ರಾಹ್ಮಣೇಭ್ಯಃ ಪ್ರಾಸಯಿಷ್ಯೇ ನ ಸಂಶಯಃ ॥ 
ತಚ್ಛ್ರುತ್ವಾ ವ್ಯಥಿತಾಃ ಸರ್ವೇ ಕಿಂ ಭನಿಷ್ಯತ್ಯತಃ ಪರಂ | 


ತಥಾ ತ್ರೀಣಿ ಸಹಸ್ರಾಣಿ ಪ್ರಬಂಧಂ ಚಕ್ರಿರೇ ತದಾ ॥ ೧೦೫ ॥ 

ಗಮಿಷ್ಕಾನೋ ವಯಂ ಸರ್ವೇ ರಾಮಂ ಪ್ರತಿ ನ ಸಂಶಯಃ । 

ಹಸ್ತಾಂಕ್ಸರಪ್ರದಾನಂ ವೈ ಅನ್ಯೋನ್ಯಂ ತು ಕೃತಂ ದ್ವಿಜೈಃ ॥ ೧೦೬ ॥ 

ಕೃತಾಂಜಲಿ ಪುಟಾ ವಿಪ್ರಾ ವಾಕ್ಯಮೇತದಥಾಂಬ್ರುವನನ್‌ । 

ನಶ್ಯತೇಂತ್ರ ತ್ರಯಾವಿದ್ಯಾ ತ್ರಯಾಮೂರ್ತಿಃ ಪ್ರಕುಸ್ಯತಿ ॥ ೧೦೭ ॥ 

ತಸ್ಮಾತ್ತತ್ತೈನ ಗಂತವ್ಯಮಷ್ಟಾದಶಸಹಸ್ರಕೈೈಃ | 

ತತಃ ಸ ವಣಿಜಃ ಸರ್ವಾನ್ಸಮಾಹೂಯ ಚ ಗೋಭುಜಾನ್‌ ॥ ೧೦೮ ॥ 

ವಾಕ್ಯಮೂಚೇ ನೃಪಶ್ರೇಷ್ಠ್ಕೋ ನಾರಯಧ್ಯ್ವಂ ದ್ವಿಜಾನಿತಿ ॥ ೧೦೯॥ 
ವ್ಯಾಸ ಉವಾಚ: 

ನ ಜೈನಧರ್ಮೇ ಯೇ ಲಿಪ್ತಾ ಗೋಭುಜಾ ವಣಿಗುತ್ತಮಾಃ । 


ವೃತ್ತಿಭಂಗಭಯಾತ್ತತ್ರ ನೌನಮೇನ ಸಮಾಚರನ್‌ ॥ ೧೧೦ 1 
೧೦೩-೧೦೪. ಆ ಬ್ರಾಹ್ಮಣನ ದಾರುಣಭಾಷಣವನ್ನು ಕೇಳಿ ಎಲ್ಲರೂ 
ಪ್ರಯಾಣಮಾಡಲು ನಿಶ್ಚಯಿಸಿದರು.  ಕುಮಾರಪಾಲಕನು ಬ್ರಾಹ್ಮಣರು 
ಹೋಗುತ್ತಾರೆಂಬುದನ್ನು ಕೇಳಿ ಅವರನ್ನು ಕರೆಯಿಸಿ, "" ನಿಮ್ಮೆಲ್ಲರನ್ನೂ ವ್ಯವ 
ಸಾಯ ಮಾಡುವಂತೆಯೂ, ಭಿಕ್ಸೆಬೇಡುವಂತೆಯೂ ಮಾಡುವೆನು” ಎಂದನು. 

೧೦೫-೧೦೬. ಅದನ್ನು ಕೇಳಿ ಬ್ರಾಹ್ಮಣರೆಲ್ಲರೂ ಮುಂದೇನಾಗುವುದೊ 
ಎಂದು ಆಲೋಚಿಸುತ್ತ ನಾವೆಲ್ಲರೂ ರಾಮನಿದ್ದೆಡೆಗೆ ಹೋಗುವೆವು ಎಂದು 
ನಿಶ್ಚಯಿಸಿ ಮೂರುಸಾವಿರ ಪ್ರಬಂಧಗಳನ್ನು ಬರೆದು ಎಲ್ಲರೂ ತಮ್ಮ ಹಸ್ತಾಕ್ಸರ 
ವನ್ನು ಗುರುತಿಸಿದರು. 

೧೦೭-೧೦೯. ಕೈಮುಗಿದುಕೊಂಡು, "" ಇಲ್ಲಿ ವೇದವಿದ್ಯೆಯು ಹಾಳಾಗು 
ವುದು. ವೇದದೇವತೆಗೆ ಕೋಪಬರುವುದು. ಆದುದರಿಂದ ನಾವು ಹದಿನೆಂಟು 
ಸಾವಿರ ಜನರೂ ರಾಮೇಶ್ವರಕ್ಕೆ ಹೋಗುವೆವು? ಎಂದರು, ಬಳಿಕ ಆ ಕುಮಾರ 
ಪಾಲನು ಗೋಪಾಲಕರಾದ ವೈಶ್ಯರನ್ನು ಕರೆಯಿಸಿ, ಈ ದ್ವಿಜರನ್ನು ತಡೆಯಿರಿ? 
ಎಂದನು. 

೧೧೦. ವ್ಯಾಸನು ಹೇಳುತ್ತಾನೆ:--ಜೈನಧರ್ಮವನ್ನವಲಂಬಿಸದ ವೈತ್ಯೋ 
ತ್ರ್ರಮರು ತಮ್ಮ ಜೀವಿಕೆಯು ತಪ್ಪುವುದೆಂಬ ಹೆದರಿಕೆಯಿಂದ ಮೌನಗೊಂಡರು. 


ತಿಳಿ: ಶ್ರೀ ಸ್ಥಾಂಡಮ ಹಾಪುರಾಣಂ 


ವಾರಯಾಮ ಕಥಂ ವಿಸ್ರಾನೃಹ್ನಿರೂಸಾನ್ದಹಂತಿ ತೇ 


ಶಾಸಾಗ್ನಿನಾ ನರಪತೇ ದ್ವಿಜಾ ಮೃತ್ಯುಪರಾಯಣಾಃ ॥ ೧೧೧ ॥ 
ಅಂಡಾಲಯೇಷು ಯೇ ಜಾತಾಃ ಶೂದ್ರಾ ಆಹೂಯ ತಾನ್ಮ್ನೃಪಃ। 
ನಿವಾರ್ಯಂತಾಮಿತಿ ಪ್ರಾಹ ನಾಡವಾ ಗಮನೋದ್ಯತಾಃ 1 ೧೧೨ ॥ 
ತೇಷಾಂ ಮಧ್ಯೇ ಕತಿಸಯಾ ಜೈನಧರ್ಮಸಮಾಶ್ರಿತಾಃ । 

ಗತಾ ನಾಡವಪುಂಜೇಷು ರಾಜಾದೇಶಾನ್ನಿವಾರಣೇ ॥ ೧೧೩ ॥ 


ಕೇಚಿಚ್ಛೂದ್ರಾ ಊಚುಃ 
ಕ್ವ ರಾಮೋ ಲಕ್ಷ್ಮೃಣೋಪೇತಃ ಕ್ವ ಚ ನಾಯುಸುತೋ ಬಲೀ । 


ವರ್ತಮಾನೇನ ಕಾಲೇನ ನಕ್ತವ್ಯಂ ದ್ವಿಜಸತ್ತಮಾಃ ॥ ೧೧೪ ॥ 
ವ್ಯಾಫ್ರಸಿಂಹಾಕುಲೇ ದುರ್ಗೇ ನನೇ ವನಗಜಾಶ್ರಿತೇ । 

ಪರಿತ್ಯಜ್ಯ ಪ್ರಿಯಾನ್ರ್ರಾಣಾನ್ಸುತ್ರಾನ್ಹಾರಾನ್ನಿಕೇತನಾನ್‌ ॥ ೧೧೫ ॥ 
ಕಿಮರ್ಥಂ ಗಮ್ಯತೇ ವಿಪ್ರಾ ರಾಜ್ಯೇ ವೈ ದುಷ್ಟಶಾಸನೇ | 

ತಚ್ಛು ತ್ವಾ ವಾಡವಾಃ ಕೇಚಿದ್ವಾಕ್ಕೇನ ಮನಸಾಸ್ಮರನ್‌ ॥ ೧೧೬ ॥ 
ಪಂಚದಶಸಹಸ್ರ್ಪಾಸ್ತೇ ನಾಡವಾ ನೃಪಸತ್ತಮಾತ್‌ । 

ಭಯಾಲ್ಲೋಭಾಚ್ಚ ದಾನಾಚ್ಚ ತತ್ಸರ್ವಂ ಭವತಾಮಿತಿ ॥ ೧೧೭ ॥ 





೧೧೧. ಅವರು, "" ಮಹಾರಾಜ! ಸಾಯುವುದಕ್ಕೂ ಸಿದ್ಧರಾದ ಬ್ರಾಹ್ಮಣ 
ರನ್ನು ತಡದರೆ ಬೆಂಕಿಯಂತಿರುವ ಅವರು ಶಾಸಾಗ್ಲಿಯಿಂದ ನಮ್ಮನ್ನು ಸುಟ್ಟು 
ಬಿಡುವರು?” ಎಂದರು. 

೧೧೨. ತರುವಾಯ ರಾಜನು ಅಂಡಾಲಯಗಳಲ್ಲಿ ಹುಟ್ಟದ ಶೂದ್ರರನ್ನು 
ಕರೆಯಿಸಿ ಹೋಗುತ್ತಿರುವ ಬ್ರಾಹ್ಮಣರನ್ನು ತಡೆಯಿರಿ ಎಂದನು. 

೧೧೩. ಅವರಲ್ಲಿ ಜೈನಧರ್ಮವನ್ನವಲಂಬಿಸಿದ ಕೆಲವರು ರಾಜನ ಅಪ್ಪಣೆ 
ಯಂತೆ ಬ್ರಾಹ್ಮಣರನ್ನು ತಡೆಯುವುದಕ್ಕಾಗಿ ಅವರ ಗುಂಪಿಗೆ ಹೋದರು. 

೧೧೪. ಕೆಲಮಂದಿ ಶೂದ್ರರು ಹೇಳುತ್ತಾರೆ :-ದ್ವಿಜೋತ್ತಮರೆ! ಈ ಕಾಲ 
ದಲ್ಲಿ ಲಕ್ಷ್ಮಣಸಹಿತನಾದ ರಾಮನೂ, ವಾಯುಪುತ್ರನಾದ ಆಂಜನೇಯನೂ 
ಎಲ್ಲಿದ್ದಾರೆ? 

೧೧೫-೧೧೬. ಪ್ರಿಯವಾದ ಪ್ರಾಣವನ್ನೂ, ಪುತ್ರರನ್ನೂ, ಮಕ್ಕಳನ್ನೂ, 
ಮನೆಗಳನ್ನೂ ತ್ಯಜಿಸಿ ದುಷ್ಟರು ಆಳುತ್ತಿರುವ ವ್ಯಾಘ್ರ, ಸಿಂಹ, ಆನೆಗಳಿಂದ 
ಭಯಂಕರವಾದ ದುರ್ಗಮವಾಗಿರುವ ಕಾಡಿಗೆ ಏಕೆ ಹೋಗುತ್ತಿದ್ದೀರಿ? ಎಂದು 
ಶೂದ್ರರು ಕೇಳಲು ಆ ಮಾತನ್ನು ಕೇಳಿ ಕೆಲವು ಬ್ರಾಹ್ಮಣರು ಮನಸ್ಸಿನಲ್ಲಿ 
ಆಲೋಚಿಸಿದರು. 

೧೧೭. ಆ ಹದಿನೆಂಟುಸಾನಿರ ಬ್ರಾಹ್ಮಣರಲ್ಲಿ ಹದಿನೈದು ಸಾವಿರ 


ಷಟ್ರ್ರಿಂಶೋರಧ್ಯಾಯಃ ೩೬8 


ವೃತ್ತೋಪಕಲ್ಪನೇನೈನ ಕರಿಷ್ಕಾನುಃ ಕದಾಚನ । 

ಕೃಷಿಕರ್ನು ಕರಿಷ್ಯಾನೋ ಭಿಕ್ಸಾಟಿನಮಥಾಃಸಿ ನಾ ॥ ೧೧೮ ॥ 
ತತಶ್ಚ ತೆ ಸಂಚದಶಸಹಸ್ರಾ ದ್ವಿಜಸತ್ತಮಾಃ । 

ದಾರುಣಂ ವಾಕ್ಯಮೂಚುಸ್ತಾನ್ಯಾಂತು ಚಾನ್ಯೇ ಯಥೋಚಿತಂ ॥೧೧೯॥ 
ಶಾಸನಂ ಭನತಾಮಸ್ತು ರಾಮದತ್ತಂ ನ ಸಂಶಯಃ । 


ತ್ರಯಿಾವಿದ್ಯಾಸ್ತು ವಿಖ್ಯಾತಾಃ ಸರ್ವೇ ವಾಡವಪುಂಗವಾಃ ॥ ೧೨೦ ॥ 

ಸಹಸ್ರಾ ಣೆ ಚೆ ತಿ ಕ್ರೀಣ್ಯ €ವ ತ್ರೈನಿದ್ಯಾ ಅಭವನ್ನು ವಂ ॥ ೧೨೧॥ 
ಕತತ ಜಾ 

ಚತುರ್ಥಾಂಶೇನ ರಾಜ್ಯಂ ಚೆ ಕಿಂಚಿದ್ದತ್ತಾ ವಸುಂಧರಾ । 

ತಸ್ಮಾಚ್ಚೆ ತುರ್ನಿಥೇತ್ಯೆ 1 ಜ್ಞಾತಿಬಂಧಮತಃ ಪರಂ ॥ ೧೨೨ ॥ 

ಚ್ಯನನೋ ದಾಸ್ಯತೇ ಕನ್ಯಾಂ ಯೂಯಂ ಕನ್ಯಾಮವಾಪ್ಪುತ । 

ನ ವೃತ್ತಿರ್ನ ಚ ಸಂಬಂಧೋ ಭನತಾಂ ಸ್ಯಾತ್ಮದಾಹಿವಾ ॥೧೨೩॥ 

ಇತಿ ತಸ್ಯ ನಚಃ ಶ್ರುತ್ವಾ ತ್ರಯಾನಿದ್ಯಾಶ್ಚ ವಾಡವಾಃ । 

ಸ್ವೇಸ್ಟೇ ಸ್ಥಾನೇ ಗತಾಃ ಸರ್ವೇ ಸಂಕೇತಾದನಿನೃತ್ಯ ಚ ॥ ೧೨೪ ॥ 


ಪಂಚದಶಸಹಸ್ರಾಣಿ ತತಸ್ತು ದ್ವಿಜಪುಂಗನಾಃ । 
ಯಥಾಗತಂ ಗತಾಃ ಸರ್ನೇ ಚಾತುರ್ನಿದ್ಯಾ ದ್ವಿಜೋತ್ತಮಾಃ ॥ ೧೨೫ ॥ 





ಬ್ರಾಹಣರು ರಾಜನಿಂದ ಹಾ ಅವನು ಕೊಡುವ ದಾನಕ್ಕೆ ಆತೆಸಟ್ಟು 
ಆ ಶೂದ್ರ ರ ಮಾತನ್ನು ಒಪ್ಪಿ ಪ್ರಯಾಣವನ್ನು ನಿಲ್ಲಿಸಿದರು. 

೧೧೮-೧೨೧. 1 ಅವರು, "ನಾವು ಕ ೈಸಿಯನ್ನಾಗಲಿ ಫಿಕ್ರಾಟಿೆ 
ಯನ್ನಾಗಲಿ ಮಾಡಿ ಜೇವಿಸುವೆವು.?' ಎಂದು ನಿಶ್ಚಯಿಸಿ ಉಳಿದೆ ಮೂರು 
ಸಾವಿರ ಜನರನ್ನು ಕುರಿತು "" ನೀವು ನಿಮಗೆ ಇಷ್ಟಬಂದಂತೆ ತೆರಳಿರಿ. ರಾಮನ 
ಶಾಸನವು ನಿಮಗೆ ಉಳಿಯಲಿ?'' ಎಂದು ಕಠಿನವಾಗಿ ಹೇಳಿದರು. ಆಗ ಮೂರು 
ಸಾವಿರ ತೈವಿದ್ಯಬ್ರಾಹ್ಮಣರು ಮಾತ್ರ ಬೇರೆಯಾದರು. 

೧೨೨-೧೨೩. ರಾಜನು ಹೇಳುತ್ತಾನೆ:--ದ್ವಿಜರೆ! ನಿಮಗೆ ನಾಲ್ಕನೆ 
ಒಂದಂಶ ರಾಜ್ಯವನ್ನು ಕೊಟ್ಟಿದ್ದೇನೆ. ಆದುದರಿಂದ ನೀವು ಚತುರ್ವಿಧರೆನ್ನಿಸಿ 
ಕೊಳ್ಳುವಿರಿ. ಇನ್ನು ಮುಂದೆ ನಿಮಗೆ ಚ್ಯವನನು ಕೊಡುವ ಕನ್ಶೆಯಿಂದ ನಿಮ್ಮ 
ಬಂಧುವರ್ಗವು ಬೆಳೆಯುವುದು. ಇನ್ನು ಯಾನ ವೃತ್ತಿಯೂ, ಸಂಬಂಧವೂ 
ನಿಮಗಿರುವುದಿಲ್ಲ. 

೧೨೪-೧೨೫, ಅವನ ಈ ಮಾತನ್ನು ಕೇಳಿ ಹದಿನೈ ದುಸಾವಿರ ತೈನಿದ್ಯ 
ಬ್ರಾ ಹ್ಮಣರು ಸಂಕೇತವನ್ನು ಮಾರದೆ ತಮ್ಮತಮ್ಮ ಸ್ಥಾನಕ್ಕೆ ಹೋದರು. 


೩೬ ಶ್ರೀ ಸ್ಕಾಂದಮಹಾಪುರಾಣಂ 


ತದ್ದಿನೇ ಅತಿವಾಹ್ಯಾಃಥ ಚಿಂತಾವಿಷ್ಟೇನ ಚೇತಸಾ । 

ನಾರ್ಯಮಾಣಾಃ ಸ್ವಪುತ್ರೆಸ್ತೇ ದಾರೈಶ್ಚ ನಿನಯಾನ್ವಿತೈಃ ॥ ೧೨೬ ॥ 
ಏಕಾಗ್ರಮಾನಸಾಃ ಸರ್ವೇ ನ ನಿದ್ರಾಮುಪಲೇಭಿರೇ । 

ಬ್ರಾಹ್ಮೇ ಮುಹೂರ್ತೇ ಚೋತ್ಕಾಯ ಮಾಯಾಂ ತೃಕ್ತ್ವಾಹಿ ಲೌಕಿಕೀಂ ॥ 
ಪರಿತ್ಯಜ್ಯ ಸ್ರಿಯಾನ್ಸುತ್ರಾನ್ನಾರಾನ್ಸ್ಪನಿಲಯಾನಹಿ । 

ಗ್ರಾಮೋಪಾಂತೇಷು ಮಿಲಿತಾಃ ಸರ್ವೇ ನಾಡನಪುಂಗನಾಃ ॥ ೧೨೮ ॥ 
ಸಹಸ್ರಾಣಿ ತದಾ ತ್ರೀಣಿ ಕೃತನಿತ್ಯಾಹ್ನಿಕಕ್ರಿಯಾಃ । 

ವಿಪ್ರೇಭ್ಯೋ ದಕ್ಷಿಣಾಂ ದತ್ತ್ವಾ ಸಂಪೂಜ್ಯ ಕುಲಮಾತರಂ ॥ ೧೨೯॥ 
ವಿಫ್ನುಸಂಘನಿನಾಶಾಯ ದಕ್ಸಿಣದ್ವಾರಸಂಸ್ಥಿ ತಃ | 


ಸಿಂದೂರಪುಷ್ಪಮಾಲಾಭಿಃ ಪೂಜಿತೋ ಗಣನಾಯಕಃ ॥ ೧೩೦ ॥ 
ಪೂಜಿತೋ ಬಕುಲಸ್ವಾಮಿಾಣ ಸೂರ್ಯಃ ಸರ್ವಾರ್ಥಸಾಧಕಃ । 
ಆದರಾಚ್ಚ ಮಹಾಶಕ್ತಿಃ ಶ್ರೀಮಾತಾ ಪೂಜಿತಾ ತಥಾ ॥ ೧೩೧ ॥ 


ಶಾಂತಾಂ ಚೈವ ನಮಸ್ಕೃತ್ಯ ಜ್ಞಾನಜಾಂ ಗೋತ್ರಮಾತರಂ। 

ಗಮನೇ ನೋದ್ಯಮಾನಾಸ್ತೇ ಸರಂ ಹರ್ಷಮುಪಾಯಯುಃ ॥ ೧೩೨ ॥ 
ಚಾತುರ್ನಿದ್ಯಾ ದ್ವಿಜಾಶ್ಚೈನ ಪುನರಾಮಂತ್ರ್ಯ ತಾನ್ರೃತಿ | 

ಪಪ್ರಚ್ಛುಶ್ನ ಮುಹುಃ ಸರ್ವಂ ಸಮಾಗಮನಕಾರಣಂ ॥ ೧೩೩ ॥ 





೧೨೬-೧೨೮. ತಮ್ಮ ಮಕ್ಕಳಿಂದಲೂ, ಪತ್ನಿಯರಿಂದಲೂ ವಿನಯದಿಂದ 
ತಡೆಯಲ್ಪಟ್ಟು ಒಮ್ಮನಸ್ಸಿನ ಆ ಮೂರುಸಾವಿರ ಮಂದಿ ಬ್ರಾಹ್ಮಣರು ಚಿಂತೆ 
ಯಿಂದ ಫಿದ್ರೆಮಾಡದೆ ಆ ದಿನವನ್ನೆಲ್ಲ ಕಳೆದು ಬ್ರಾಹ್ಮಮೂಹೂರ್ತದಲ್ಲೆದ್ದು 
ಲೌಕಿಕಮಾಯಾಬಂಧನವನ್ನು ತ್ಯಜಿಸಿ ಪ್ರಿಯಪುತ್ರರನ್ನೂ, ಹೆಂಡತಿಯರನ್ನೂ, 
ಮನೆಯನ್ನೂ ಬಿಟ್ಟು ಗ್ರಾಮದ ಸಮಾಸದಲ್ಲಿ ಒಟ್ಟಿಗೆ ಸೇರಿದರು. 

೧೨೯-೧೩೦. ಅವರು ಆಹ್ಲಿಕಗಳನ್ನು ಪೂರೈಸಿ ಬ್ರಾಹ್ಮಣರಿಗೆ ದಕ್ಷಿಣೆ 
ಕೊಟ್ಟು ಕುಲಮಾತೆಯನ್ನೂ ವಿಫ್ನನಿವಾರಣೆಗಾಗಿ ದಕ್ಷಿಣದ ಬಾಗಿಲಿನಲ್ಲಿರುವ 
ಗಣನಾಥನನ್ನೂ ಸಿಂದೂರ, ಹೂಮಾಲೆಗಳಿಂದ ಪೂಜಿಸಿದರು. 

೧೩೧-೧೩೨. ಬಕುಲಸ್ವಾಮಿಯನ್ನೂ, ಶ್ರೀಮಾತೆಯನ್ನೂ ಅರ್ಚಿಸಿದ 
ತರುವಾಯ ಗೋತ್ರಮಾತೆಯಾದ ಶಾಂತೆಯನ್ನೂ, ಜ್ಞಾನಜೆಯನ್ನೂನಮಸ್ಕರಿಸಿ 
ಪ್ರಯಾಣೋದ್ಯುಕ್ತರಾಗಿ ಅತ್ಯಂತ ಸಂತೋಷವನ್ನು ಹೊಂದಿದರು. 

೧೩೩. ಇತರ ಬ್ರಾಹ್ಮಣರು ಅವರನ್ನು ಒಟ್ಟಗೆ ಸೇರಲು ಕಾರಣವನ್ನು 
ಕೇಳಿದರು. 


ಸಟ್ಟ್ವಂಶೋರಧ್ಯಾಯಃ ೩೬೭ 


ನಿಪ್ರಾ ಊಚುಃ:- 
ನ ಗಂತವ್ಯಂ ಭವದ್ಧಿ ರ್ವ ಗತ್ವಾ ನಾಂಂಯಾಂತು ಸತ್ವರಾಃ ॥ ೧೩೪ ॥ 
ಯಹಾ ರಾಮಪ್ರದತ್ತಂ ಹಿ ಉಪಕಲ್ಪಯಸೇಇಚಿರಾತ್‌ । 
ಶ್ರುತ್ವಾ ಪುನರಥೋಚುಸ್ತೇ ಚಾತುರ್ವಿದ್ಯಾ ದ್ವಿಜೊಕೆತ್ತಮಾಃ ॥ ೧೩೫ ॥ 
ನ ಸ್ಥಾನೇನ ದ್ವಿಜೈರ್ನಾಃಪಿ ನ ಚ ವೃತ್ಯಾಂ ಕಥಂಚನ । 
ನಯಂ ನೈವಾಗಮಿಷ್ಯಾಮಃ ಕಥನೀಯಂ ನ ವೈ ಪುನಃ ॥ ೧೩೬ ॥ 
ರಘೂದ್ವಹೇನ ದತ್ತಾ ನೈ ನೃತ್ತಿರ್ನೋ ದ್ವಿಜಸತ್ತಮಾಃ । 
ತಾಂ ವೃತ್ತಿಂ ಪ್ರತಿಯಾಸ್ಯಾನೋ ಜಪಹೋಮಾರ್ಚನಾದಿಭಿಃ ॥ ೧೩೭ ॥ 
ತೇ ಸಂಚ ದಶಸಾಹಸ್ರಾಃ ಪುನಸ್ತಾನೂಚುರಾದರಾತ್‌ । 
ಅಸ್ಮಾಭಿರತ್ರ ಸ್ಥಾತವ್ಯಮಗ್ನಿಸೇನಾರ್ಥತತ್ಸರೈಃ ॥ ೧೩೮ ॥ 
ಯುಷ್ಮಾಭಿಸ್ತತ್ರ ಗಂತವ್ಯಂ ಸರ್ವೇಷಾಂ ಕಾರ್ಯಸಿದ್ಧಯೇ । 
ಅನ್ಯೋನ್ಯಂ ಸರ್ವಸಾಹಾಯಾ ವೃತ್ತಿಂ ಯಾವನು ನ ಸಂಶಯಃ ॥ ೧೩೯ ॥ 
ತ್ಯಕ್ತಸ್ಟಕೀಯವಚನಾ ವೃತ್ತಿಹೀನಾ ಭನಿಷ್ಯಥ । 
ತತಸ್ತನ್ಮಧ್ಯತಃ ಕಶ್ಚಿಚ್ಚಾತುರ್ನಿದ್ಯ ಉನಾಚ ಹ ॥ ೧೪೦ ॥ 
ಚಾತುರ್ನಿದ್ಯ ಉವಾಚ:- 

ಪೂರ್ವಂ ಹಿ ವೃತ್ತಿಮಸ್ಮಾಕಂ ರಾಮೋ ವೈ ದತ್ತನಾನ್ಸಿಜಾಃ । 
ಚಾತುರ್ನಿದ್ಯಾ ಮುಹಾಸತ್ವಾಃ ಸ್ವಧರ್ಮಪ್ರತಿಸಾಲಕಾಃ ॥ ೧೪೧ ॥ 

೧೩೪-೧೩೫. ಬ್ರಾ ಹ್ಮಣರು ಹೇಳುತ್ತಾರೆ: ನೀವು ಇಲ್ಲಿಂದ ಹೋಗ 
ಬಾರದು. ಹೋದರೂ ರಾಮನು ಕೊಟ್ಟ ವೃತ್ತಿಯನ್ನು ಸಂಪಾದಿಸಿಕೊಂಡು 
ಜಾಗ್ರತೆಯಾಗಿ ಬನ್ನಿರಿ” ಆ ಬ್ರಾಹ್ಮಣರು ಅವರ ಮಾತನ್ನು ಕೇಳಿ ಹೀಗೆಂದರು. 

೧೩೬. ""ನಮಗೆ ಈ ಸ್ಥಳವೂ, ಈ ಬ್ರಾಹ್ಮಣರೂ, ಈ ವೃತ್ತಿಯೂ ಬೇಡ. 
ನಾವು ಹಿಂತಿರುಗಿ ಬರುವುದೂ ಇಲ್ಲ. ನೀವೂ ಹಾಗೆ ಹೇಳಬೇಡಿರಿ. 

೧೩೭. ದ್ವಿಜೋತ್ತಮರೆ! ರಾಮನು ವೃತ್ತಿಯನ್ನಿತ್ತಿರುವನು. ಜಪ 
ಹೋಮಾದಿಗಳನ್ನು ಮಾಡುತ್ತ ನಾವು ಆ ವೃತ್ತಿಯನ್ನು ಸಡೆಯುವೆವು.?' 

೧೩೮-೧೪೦. ಅ ಹದಿನೈ ದುಸಾವಿರ ಬ್ರಾಹ್ಮಣರು ಮತ್ತೆ ಅವರನ್ನು 
ಕುರಿತು, ""ನಾವು ಇಲ್ಲಿ ಜಸಹೋಮಾದಿಗಳನ್ನು ಮಾಡುತ್ತ ಇರುವೆವು. ನೀವು 
ರಾಮನೆಡೆಗೆ ಎಲ್ಲರ ಕಾರ್ಯಸಿದ್ಧಿಗಾಗಿ ತೆರಳಿರಿ, ಹೀಗೆ ಪರಸ್ಪರ ಸಹಾಯಕ 
ರಾಗಿ ವೃತ್ತಿಯನ್ನು ನಿಜವಾಗಿ ಸಡೆಯುವೆವು. ಈ ಮಾತನ್ನು ನೀವು ಮಾರಿದರೆ 
ವೃತ್ತಿಹೀನರಾಗುತ್ತೀರಿ'' ಎಂದರು. ಆಗ ಆ ಬ್ರಾಹ್ಮಣರ ಮಧ್ಯದಲ್ಲಿರುವ 
ಚಾತುರ್ವಿದ್ಯನೊಬ್ಬನು ಹೀಗೆಂದನು. 

೧೪೧-೧೪೨. "" ಮಹಾಸತ್ವರೂ, ಸ್ವಧರ್ಮವನ್ನು ಕಾಪಾಡುವವರೂ, 


೩೬೮ ಶ್ರೀ ಸ್ಥಾಂವಮಹಾಪುರಾಣಂ 


ಯಾಜನಾಂ ಧ್ಯಯನಾಯುಕ್ತಾಃ ಕಾಜೇಶೇನ ವಿನಿರ್ಮಿತಾಃ ! 

ದಾನಂ ದತ್ತಾ ತು ರಾಮೇಣ ಉಕ್ತಂ ಹಿ ಭವತಾಂ ಪುನಃ ॥ ೧೪೨ ಗ 
ಸ್ಥಾನಂ ತ್ಯಕ್ತ್ವಾ ನ ಗಂತನ್ಯಮಿತ್ಸಂ ಹಿ ನಿಯಮಃ ಕೃತಃ । 

ಆಪತ್ಕಾಲೇ ತು ಸ್ಮತಕಿವ್ಯೋ ವಾಯುಪುತ್ರೋ ಮಹಾಬಲಃ ॥ ೧೪೩0 
ಇತಿ ರಾಮೇಣ ಪೂರ್ವಂ ಹಿ ಸ್ಟೇ ಸ್ಥಾನೇ ಸ್ಥಾಪಿತಾಸ್ತದಾ । 
ರಾಮವಾಕ್ಯಮನ್ಯಥಾ ತತೃತ್ವಾ ಗಚ್ಛೇತ್ಮಥಂ ಪುನಃ ॥ ೧೪೪ ॥ 
ತಸ್ಮಾದ್ಯುಷ್ಮಾನ್ಸೆಯಂ ಬ್ರೂಮೋ ಗಚ್ಛತಃ ಕಾರ್ಯಸಿದ್ಧ ಯೇ। 

ಭನತಾಂ ಕಾರ್ಯಸಿದ್ಧ್ಯರ್ಥಂ ವಯಂ ಹೋಮಾರ್ಚನಾದಿಭಿಃ॥ ೧೪೫ ॥ 
ರುಟಿತಿ ಕಾರ್ಯಸಿದ್ಧಿಃ ಸ್ಯಾತ್ಸತ್ಯಂ ಸತ್ಯಂ ನ ಸಂಶಯಃ । 


ಇತಿ ವಾಕ್ಯಂ ತತಃ ಶ್ರುತ್ವಾ ತೇ ದ್ವಿಜಾಗಮನಂ ಪ್ರತಿ ॥ ೧೪೬ ॥ 
ಪ್ರಸ್ಥಾನಂ ಚ ನಿಧಾಯಾದೌ ಗಮನಾಯ ಮನೋ ದಧುಃ । 
ತ್ರಿಸಾಹಸ್ಪಾಸ್ತದಾ ತಸ್ಮಾತ್ರಸ್ಸಿತಾ ದ್ವಿಜಸತ್ತಮಾಃ ॥ ೧೪೭ ॥ 


ದೇಶಾದ್ದೇಶಾಂತರಂ ಗತ್ವಾ ವನಾಚ್ಚೈವ ವನಾಂತರಂ । 

ತೀರ್ಥೇ ತೀರ್ಥೇ ಕೃತಶ್ರಾದ್ಧಾಃ ಸುಸಂತರ್ಸಿತಪೂರ್ವಜಾಃ ॥ ೧೪೮ ॥ 
ಧ್ಯಾಯಂತೋ ರಾಮರಾಮೇತಿ ಹನುಮಂತೇತಿ ನೈ ಪುನಃ । 

ಏಕಾಃಶನಾಃ ಸದಾಚಾರಾ ದ್ವಿಜಾ ಜಗ್ಮುಃ ಶನೈಃ ಶನೈಃ . ॥ ೧೪೯॥ 
ಯಾಜನ ಮತ್ತು ಅಧ್ಯಯನದಲ್ಲಿ ನಿರತರೂ, ಬ್ರಹ್ಮಾದಿಗಳಿಂದ ನಿರ್ಮಿತರೂ ಆಗಿ 
ರುವ ಜಾತುರ್ವಿದ್ಯರೆ! ಹಿಂದೆ ರಾಮನು ವೃತ್ತಿಯನ್ನು ಕೊಟ್ಟು ಹೀಗೆಂದಿರುವನು. 

೧೪೩. ""ಈ ಸ್ಥಾನವನ್ನು ಬಿಟ್ಟುಹೋಗಬಾರದು. ಆಪತ್ಕಾಲವು ಒದಗಿ 
ದಾಗ ಮಹಾಬಲಿಷ್ಯನಾದ ಹನುಮಂತನನ್ನು ಸ್ಮರಿಸಿರಿ.?? 

೧೪೪. ರಾಮನು ಹೀಗೆ ಹೇಳಿ ಆಯಾಸ್ಥಾನದಲ್ಲಿ ಸ್ಥಾಪಿಸಲ್ಪಟ್ಟ ನೀವು 
ಅವನ ಮಾತನ್ನು ಮಾರಿ ಇಲ್ಲಿಂದ ಹೇಗೆ ಹೋಗುತ್ತೀರಿ? 

೧೪೫-೧೪೭. ಆದ್ದರಿಂದ ನಿಮ್ಮ ಕಾರ್ಯಸಿದ್ಧಿಗಾಗಿ ನಾವಿಲ್ಲಿದ್ದು ಹೋಮ, 
ಪೂಜೆ ಮೊದಲಾದುವುಗಳನ್ನು ನೆರವೇರಿಸುವೆವು. ಅದರಿಂದ ಕಾರ್ಯವು ಕೂಡಲೆ 
ಕೈಗೂಡುವುದು. ಇದು ನಿಶ್ಚಯ?” ಎಂದನು. ಈ ಮಾತನ್ನು ಆ ಮೂರುಸಾವಿರ 
ಬ್ರಾಹ್ಮಣರು ಕೇಳಿ ಪ್ರಸ್ಥಾನ ವಿಧಿಯನ್ನು ನೆರವೇರಿಸಿ ಅಲ್ಲಿಂದಹೊರಟರು. 

೧೪೮-೧೪೯. ಆ ಬ್ರಾಹ್ಮಣರು ಒಂದೇ ಭೋಜನವುಳ್ಳವರಾಗಿಯೂ, 
ಸದಾಚಾರಸಂಪನ್ನರಾಗಿಯೂ ದೇಶದಿಂದ ದೇಶಕ್ಕೂ, ಕಾಡಿನಿಂದ ಕಾಡಿಗೂ 
ಪ್ರಯಾಣಮಾಡಿ ಪ್ರತಿಯೊಂದು ತೀರ್ಥದಲ್ಲಿಯೂ ಶ್ರಾದ್ಧದಿಂದ ಪಿತೃಗಳನ್ನು 
ಸಂತೋಷಗೊಳಿಸುತ್ತಲೂ, ರಾಮಾಂಜನೇಯರನ್ನು ನೆನೆಯುತ್ತಲೂ ಮುಂದಕ್ಕೆ 
ಮೆಲ್ಲಗೆ ಸಾಗಿದರು. 


ಸಟ್ರ್ರಂಶೋಳ$ಧ್ಯಾಯಃ ಸ ೩ರ ೯ 


ತ್ಕಕಪೃತಿಗೃಹಾಃ ಶಾಂತಾಃ ಸತ್ಯವ್ರತಪರಾಯಣಾಃ | 


ಹಾದಿ 
ತೇ ಗತಾ ನೂರಮದ್ವಾನಂ ಹನುಮದ್ದರ್ಶನಾರ್ಥಿನಃ ॥ ೧೫೦ ॥ 
ಸಂಧ್ಯಾಮುಪಾಸತೇ ನಿತ್ಯಂ ತ್ರಿಕಾಲಂ ಚೈಕಮಾನಸಾಃ । 
ಏನಂತು ಗಚ್ಛತಾಂ ತೇಷಾಂ ಶಕುನಾ ಅಭವನ್ಸುಭಾಃ ॥ ೧೫೦೧ 
ಏನಂ ತು ಗಚ್ಛತಾಂ ತೇಷಾಂ ಸಾಥೇಯಂ ತ್ರುಟಿತಂ ತದಾ । 
ಶ್ರಾಂತಾ ಗ್ಲಾನಿಂ ಗತಾಃ ಸರ್ವೇ ಪದಂ ಪರಮಮಾಸ್ಕಿತಾಃ ॥ ೧೫೨ ॥ 
ಕ್ರಮಿತ್ವಾ ಕಿಯತೀಂ ಭೂಮಿಂ ಪದಂ ಗಂತುಂ ನತುಶ್ಪಮಾಃ। 
ಮನಸಾ ನಿಶ್ಚಯಂ ಕೃತ್ವಾ ದೃಢೀಕೃತ್ಯ ಸ್ವಮಾನಸಂ ॥ ೧೫೩ ॥. 
ಹನೂಮಂತಮದೃಷ್ಟ್ಟೈನ ನ ಯಾಸ್ಕಾಮೋ ವಯಂ ಗೃಹಾನ್‌ । 
ತ್ರೈನಿದ್ಯಾಸ್ತು ಗತಾಸ್ತತ್ರ ಯತ್ರ ರಾಮೇಶ್ವರೋ ಹರಿಃ ॥ ೧೫೪ ॥ 


ದೃಢವ್ರತಾಃ ಸತ್ಯಸರಾಃ ಕಂದಮೂಲಫಲಾಶನಾಃ । 

ಧ್ಯಾಯಂತೋ ರಾಮರಾಮೇತಿ ಹನೂಮಂತೇತಿ ವೈ ಪುನಃ ॥ ೧೫೫ ॥ 
ಗೃಹೀತ್ವಾ ನಿಯಮಂ ತೇಂಪಿ ತ್ಯಕ್ತ್ವಾ ಚಾಂನ್ಡಂ ತಥೋದಕಂ । 
ತೃಷಾರ್ತಾಶ್ಚ ಕ್ಸುಧಾರ್ತಾಶ್ಚ ಯಯುರ್ವ್ರತಪರಾಯಣಾಃ ॥ ೧೫೬ ॥ 
ಏನಂ ತು ಕ್ಲಿಶ್ಯಮಾನಾನಾಂ ದ್ವಿಜಾನಾಂ ಭಕ್ತಿಭಾಜನಃ । 


ಉದ್ದಿಗ್ನಮಾನಸೋ ರಾಮೋ ಹನೂನುಂತಮಥಾಬ್ರವೀತ್‌ 1 ೧೫೭ ॥ 


೧೫೦. ಅವರು ಪ್ರತಿಗ್ರಹವನ್ನು ತ್ಯಜಿಸಿ ಶಾಂತರೂ, ಸತ್ಯವ್ರತನಿರತರೂ 
ಆಗಿ ಹನುಮಂತನನ್ನು ನೋಡಲೋಸುಗ ಬಹುದೂರ ನಡೆದರು. 

೧೫೧. ಚಿತ್ರೈಕಾಗ್ರ್ಯದಿಂದ ನಿತ್ಯವೂ ತ್ರಿಕಾಲಸಂಧ್ಯಯನ್ನುಪಾಸಿಸುತ್ತ 
ಮುಂದೆ ಸಾಗುತ್ತಿರುವ ಅವರಿಗೆ ಶುಭಶಕುನಗಳಾದುವು. 

೧೫೨-೧೫೬. ಮುಂದೆ ಅವರು ಹೋಗುತ್ತಿರಲು ಅವರ ಬುತ್ತಿಯು. 
ಮುಗಿಯಿತು. ಅವರು ಅತ್ಯಂತವಾಗಿ ಬಳಲಿದರು. ಎಷ್ಟು ದಾರಿ ನಡೆದರೂ ಉದ್ದಿಷ್ಟ 
ಸ್ಥಾನವನ್ನು ಸೇರಲು ಅವರು ಸಮರ್ಥರಾಗಲಿಲ್ಲ. ಆದರೂ ಆ ತ್ರೈನಿದ್ಯರು 
ಹನುಮಂತನ ದರ್ಶನವನ್ನುಮಾಡದೆ ತಮ್ಮ ಸ್ಥಳಕ್ಕೆ ಹಿಂದಿರುಗುವುದಿಲ್ಲವೆಂದು 
ಮನಸ್ಸನ್ನು ದೃಢಮಾಡಿಕೊಂಡು ಅನ್ನೋದಕಗಳನ್ನು ಬಿಟ್ಟು ಗೆಡ್ಡೆ, ಗೆಣಸು, 
ಹಣ್ಣು ಇವುಗಳನ್ನು ಮೆಲ್ಲುತ್ತ, ರಾಮಾಂಜನೇಯರನ್ನು ಧ್ಯಾನಿಸುತ್ತ 
ವ್ರತನಿಷ್ಠರಾಗಿ, ಹಸಿವು ಬಾಯಾರಿಕೆಗಳಿಂದ ಪೀಡಿತರಾಗಿ ರಾಮೇಶ್ವರಕ್ಕೆ 
ಹೋದರು. 

೧೫೭. ಹೀಗೆ ವ್ಯಥೆಸಡುತ್ತಿರುವ ಬ್ರಾಹ್ಮಣರ ಭಕ್ತಿಗೆ ಮೆಚ್ಚಿದ. 
ಶ್ರೀರಾಮನು ವ್ಯಾಕುಲಗೊಂಡು ಹನುಮಂತನನ್ನು ಕುರಿತು ಹೀಗೆಂದನು. 


೩೩೭೦ ಕ ಶ್ರೀ ಸ್ಕಾಂದಮಹಾಪುರಾಣಂ 


ಶೀಘ್ರಂ ಗಚ್ಛ ದ್ವಿಜಾರ್ಥೇ ತ್ವಂ ಪನನಾತ್ಮಜ ಧರ್ಮನಿತ್‌ । 

ಕ್ಲಿ ಶ್ಯಂತೇ ವಾಡವಾಃ ಸರ್ವೇ ಧರ್ಮಾಃರಣ್ಯನಿವಾಸಿನಃ 1 ೧೫೮ ॥ 
ದಹ್ಯತೇ ಮಾನಸಂ ಮೇಂದ್ಯ ನಾನ್ಯಥಾ ಶಾಂತಿರಸ್ತಿ ಮೇ । 

ವಿಪ್ರಾಣಾಂ ದುಃಖಕರ್ತಾ ಚ ಶಾಸ್ತ್ರವ್ಯೋ ನಾತ್ರ ಸಂಶಯಃ ॥ ೧೫೯॥ 
ಯೇನ ವೈ ದುಃಖಿತಾ ವಿಪ್ರಾಸ್ತೇನಾಂಹಂ ದುಃಖಿತಃ ಕಸೇ । 

ಯಾಹಿ ಶೀಘ್ರಂ ಹಿ ಮಾಂ ತ್ಯಕ್ತ್ವಾ ವಿಪ್ರಾಣಾಂ ಪರಿಸಾಲನೇ ॥ ೧೬೦ ॥ 
ರಾಮಸ್ಯ ವಚನಂ ಶ್ರುತ್ವಾ ನಮಸ್ಕೃತ್ಯ ಚ ರಾಘವನಂ । 

ಕೃಪಯಾ ಪರಯಾವಿಷ್ಟಃ ಪ್ರಾದುರಾಸೀದ್ದರೀಶ್ವರಃ ॥ ೧೬೧ ॥ 
ವೃದ್ಧಬ್ರಾಹ್ಮಣರೂಪೇಣ ಪರೀಕ್ಸಾರ್ಥಂ ದ್ವಿಜನ್ಮನಾಂ । 

ಉನಾಚ ಪರಯಾ ಭಕ್ತ್ಯಾ ಬ್ರಾಹ್ಮಣಾಂಛ್ರ ಮದುರ್ಬಲಾನ್‌ ॥ ೧೬೨ ॥ 
ಕೃತಾಂಜಲಿಪುಟೋ ಭೂತ್ವಾ ಕರಾನ್ಮುಕ್ಷ್ಯಾ ಕಮಂಡಲುಂ | 


ಸರ್ವಾನ್ಭ್ರ ತ ್ಯ ಭಿವಾದ್ಯಾ ಥ ನಚನಂ ಚೇದನುಬ್ರ ನೀತ್‌ i ೧೬೩ ॥ 
ಕುತಃ ಸ ಸಾದಿಹ ಪ್ರಾಪ್ತಾ ಗಂತುಕಾಮಾಶ್ಚ ವೈ ಕುತಃ । 
ಕಿಮರ್ಥಂ ವೈ ಭವದ್ಧಿ ಗ್ರ  ಗೆಮ್ಮತೇ ದಾರುಣಂ ವಸಂ ॥ ೧೬೪ ॥ 


೧೫೮-೧೫೯. ""ವಾಯುತನಯ! ಧರ್ಮಾರಣ್ಯನಿವಾಸಿಗಳಾದ ದ್ವಿಜರು 
ಕಷ್ಟಪಡುತ್ತಿದ್ದಾರೆ. ಅವರಿಗಾಗಿ ಕೂಡಲೆ ಹೊರಡು. ನನ್ನ ಮನಸ್ಸು 
ದಹಿಸುತ್ತಿದೆ. ಬ್ರಾಹ್ಮಣರನ್ನು ಪೀಡಿಸುತ್ತಿರುವ ಆ ನೀಚನನ್ನು ದಂಡಿಸದಿದ್ದರೆ 
ನನ್ನ ಮನಸ್ಸು ಶಾಂತವಾಗುವುದಿಲ್ಲ. 

೧೬೦. ಬ್ರಾಹ್ಮಣರನ್ನು ಪೀಡಿಸುತ್ತಿರುವವನಿಂದಲೆ ನಾನು ದುಃಖ 
ಗೊಂಡಿದ್ದೇನೆ. ಆದ್ದರಿಂದ ನನ್ನನ್ನಗಲಿ ಬ್ರಾಹ್ಮಣರ ರಕ್ಷಣೆಗಾಗಿ ಬೇಗನೆ 
ಹೊರಡು.” 

೧೬೧-೧೬೩. ಹನುಮಂತನು ರಾಮನ ಮಾತನ್ನು ಕೇಳಿ ಅವನನ್ನು 
ವಂದಿಸಿ ಅತ್ಯಂತದಯೆಗೊಂಡು ಬಾ ್ರಾಹ್ಮಣರನ್ನು ಪರೀಕ್ಸಿಸ ಸುವುದಕ್ಕಾಗಿ ವೃ ದ್ಭೃ 
ಬ್ರ್ರಾಹ್ಮಣರೂಪವನ್ನು ಧರಿಸಿ ಕೈಯಲ್ಲಿರುವ ಕಮಂಡಲುವನ್ನು ಕೆಳಗಿಟ್ಟು 
ಎಲ್ಲ ಬ್ರಾಹ್ಮಣರನ್ನೂ ವಂದಿಸಿ ಕೈಮುಗಿದುಕೊಂಡು ಅತಿ ಭಕ್ತಿಯುಕ್ತ ನ 
ಬಹಳವಾದ ಬಳಲಿಕೆಯಿಂದ ಅಶಕ್ತರಾಗಿಹೋಗಿದ್ದ ಅವರನ್ನು ಕುರಿತು 
ಹೀಗೆಂದನು. 

೧೬೪. "ಎಲೈ ವಿಪ್ರರೆ! ನೀವು ಎಲ್ಲಿಂದ ಬಂದ್ಮಿರಿ? ಎಲ್ಲಿಗೆ ಹೋಗ- 
ತ್ತೀರಿ? ಈ ಗೊಂಡಾರಣ್ಯವನ್ನು ಏಕೆ ಪ್ರವೇಶಿಸುತ್ತಿದ್ದೀರಿ? 


ಸಟ್ರ್ರಂಶೋರ$ಧ್ಯಾಯಃ ೩೭೧ 


ವಿಪ್ರಾ ಊಚುಃ:- 
ಧರ್ಮಾಂರಣ್ಯಾತ್ಸಮಾಯಾತಾ ನಿಜದುಃಖಂ ನಿವೇದಿತುಂ | 
ರಾಮಸ್ಯ ದರ್ಶನಾರ್ಥಂ ಹಿ ಗಂತುಕಾಮಾ ವಯಂ ದ್ವಿಜಾಃ ॥ ೧೬೫ ॥ 
ಸೇತುಬಂಧಂ ಮಹಾತೀರ್ಥಂ ಸರ್ವಕಾಮಪ್ರದಾಯಕಂ | 
ನಿಯಮಸ್ಥಾ ಕ್ಸೀಣದೇಹಾ ರಾಮಂ ದ್ರಷ್ಟುಂ ಸಮುತ್ಸುಕಾಃ ॥ ೧೬೬ ॥ 
ಯತ್ರ ರಾಮೇಶ್ವರೋ ದೇವಃ ಸಾಕ್ಸ್ಟಾದ್ವಾಯುಸುತಃ ಕವಿಃ । 
ತಚ್ಚ ತ್ವಾ ಸದ್ದಿಜಃ ಪ್ರಾಹ ಕ್ಕ ರಾಮಃ ಕ್ಕ ಚ ವಾಯುಜಃ ॥ ೧೬೭ ॥ 
ಕ್ವ ಸೇತುಬಂಧರಾಮೇಶೋ ದೂರಾದ್ಧೂರತರೋ ದ್ವಿಜಾಃ । 
ವ್ಯಾಘ್ರಸಿಂಹಾಕುಲಂ ಚೋಗ್ರಂ ವನಂ ಘೋರತರಂ ಮಹತ್‌ ॥ ೧೬೮ ॥. 
ಗತ್ವಾ ಯಸ್ಮಾನ್ನ ವರ್ತಂತೇ ತದುಗ್ರಮನುಜೀನಿನಃ । 
ನಿವರ್ತಧ್ವಂ ಮುಹಾಭಾಗಾ ಯದಿ ಕಾರ್ಯಂ ಹಿ ಮದ್ದಿಜಃ ॥ ೧೬೯॥ 
ಅಥವಾ ಗಮ್ಯುತಾಂ ವಿಪ್ರಾಶ್ಚಿರಂ ಜೀವ ಸುಖೀಭವ । 
ವೃ ದೃಸ್ಯ ವಾಕ್ಯಂ ತಚ್ಛು ತ್ವಾ ವಾಡವಾಕ್ಚೆಕಮಾನಸಾಃ ॥ ೧೭೦ ॥ 
ನಿಪ” ಗ ಮಹೇ ಸಖೇ ಠಾಮಪಾಕ್ಯ ER | 
ಮ್ರಿ `ಹೀತ ಯದಿ ಮಾರ್ಗೆೇಸ್ಮಿನ್ರಾ ನುಲೋಕನುವಾಸ್ತ್ನ ಯಾತ" ॥ 
ಜೀನನ್ಹೃತ್ತಿಮನಾಪ್ನೋತಿ ರಾಮಾಜೇನ ನ ಸಂಶಯಃ | 


ಅನ್ಯಥಾ ಶರಣಂ ನಾಸ್ತಿ ಅಸ್ಮಾಕಂ ರಾಘುವಂ ನಿನಾ ॥ ೧೭೨ ॥ 
೧೬೫-೧೬೭. ಬ್ರಾಹ್ಮಣರು ಹೇಳುತ್ತಾರೆ: "" ವ್ರತಾನುಷ್ಮಾನದಿಂದ 


ಕೃಶದೇಹರಾದ ನಾವು ಧರ್ಮಾರಣ್ಯದಿಂದ ಬಂದಿದ್ದೇವೆ. ಶ್ರೀರಾಮನೂ, 
ಹನುಮಂತನೂ ಇರುವ ರಾಮೇಶ್ವರಕ್ಕೆ ಹೋಗಿ ಸಕಲೇಷ್ಟಾರ್ಥಗಳನ್ನೀಯುವ 
ಆ ಸೇತುಬಂಧಮಹಾತೀರ್ಥದಲ್ಲಿ ಶ್ರೀರಾಮನನ್ನು ಸಂದರ್ಶಿಸಿ ನಮ್ಮ ದುಃಖ 
ವನ್ನು ನಿವೇದಿಸಲುತ್ತುಕರಾಗಿದ್ದೇವೆ.?' ಅದನ್ನು ಕೇಳಿ ಆ ವೃದ್ಧಬ್ರಾ ಹ್ಮಣನು. 
ಇಂತೆಂದನು. *"ಬ್ರ್ರಾಹ್ಮಣರೆ! ರಾಮನೆಲ್ಲಿ? ಹನುಮಂತನೆಲ್ಲಿ? 

೧೬೮-೧೭೨. ಅತ್ಯಂತ ದೂರದಲ್ಲಿರುವ ರಾಮೇಶ್ವರವೆಲ್ಲ? ಈ ಅರಣ್ಯವು. 
ವ್ಯಾಘ್ರ ಸಿಂಹಗಳಿಂದ ಭಯಂಕರವಾಗಿದೆ. ಇದರಲ್ಲಿ ಪ್ರಯಾಣಮಾಡುವವರ: 
ಹಿಂದಿರುಗುವುದಿಲ್ಲ. ನನ್ನ ಮಾತು ನಿಮಗೆ ಸಥ್ಯವಾದರೆ ಹಿಂದಿರುಗಿರಿ. ಅಥವಾ 
ಮುಂದಕ್ಕೆಸಾಗಿ ಚಿರಂಜೀನಿಗಳಾಗಿ ಸುಖದಿಂದ ಬಾಳಿರಿ.'' ಮುದಿಬ್ರಾ ಹ್ಮಣನ 
ಆ ಮಾತನ್ನು ಕೇಳಿ ಒಮ್ಮನಸ್ಸುಳ್ಳ ಬ್ರಾಹ್ಮಣರು, "" ಎಲ್ಫೆ ಬ್ರಾಹ್ಮಣನೆ! 
ನಾವು ನಿಶ್ಚಯವಾಗಿಯೂ ರಾಮನ ಬಳಿಯನ್ನು ಸೇರುವೆವು. ಒಂದುವೇಳೆ 
ಈ ದಾರಿಯಲ್ಲಿ ಮಡಿದರೂ ರಾಮನ ಲೋಕವು ಲಭಿಸುವುದು. ಬದುಕಿದ್ದರೆ. 
ರಾಮನಿಂದಲೇ ವೃತ್ತಿಯನ್ನು ಪಡೆಯುವೆವು. ರಾಮನನ್ನು ಬಿಟ್ಟರೆ ನಮಗೆ. 
ಬೇಕೆ ರಕ್ಸಶರಿಲ್ಲ.'' 


4೭೨ ಶ್ರೀ ಸ್ಕಾಂಡಮುಹಾಪುರಾಣಂ 


ಇತ್ತುಕ್ಲಾ, ನಿರ್ಗಶಾಃ ಸರ್ವೇ ರಾಮದರ್ಶನತತ್ಪ ರಾಃ 


ದಿ 
ದಿನಾಂತಮತಿವಾಹ್ಯಾಥ ಪ್ರಭಾತೇ ನಿಮಲೇ ಪುನಃ 1 ೧೭೩॥ 
ಹನುಮಾನ್ಪ್ರಹ್ಮರೂಪೀ ಸ ವೃದ್ಧಃ ಪೂರ್ವಗುಣಾನ್ವಿತಃ । 
ಕಮಂಡಲುಧರೋ ಧೀಮಾನಭಿವಾದನತತ್ಸರಃ ॥ ೧೭೪ ॥ 


ಕುತ್ರಸ್ಥಾನಾದಿಹ ಸ್ರಾಸ್ತಾಃ ಸರ್ನೇ ಯೂಯಂ ಹಿ ನಾಡವಾಃ । 
ಕುತ್ರಾಸ್ತಿ ನಾ ಮಹಾಲಾಭೋ ನಿನಾಹೋತ್ಸನ ಏನ ವಾ ॥ ೧೭೫ ॥ 
ಇತಿ ತಸ್ಯ ವಚಃ ಶ್ರುತ್ವಾ ವಾಡವಾ ವಿಸ್ಮಯಂ ಗತಾಃ । 
ಪ್ರಣಾಮಪೂರ್ನಾಂ ವಿಜ್ಞಪ್ತಿಂ ಕಥಯಾಮಾಸುರಾದೃತಾಃ 1 ೧೭೬ ॥ 
ಅಸ್ಮಾಕಂ ತು ಪುರಾವೃತ್ತಂ ಮಹದಾಶ್ಚರ್ಯಕಾರಕಂ । 


ಭೂಮಿದೇನ ಶೃಣುಷ್ವ ತ್ವಂ ದಯಾಲುರ್ಥ್ದ್ಯಶ್ಯಸೇ ಯತಃ ॥ ೧೭೭ ॥ 
ಆದೌಸೃ ಷ್ಟಿ ಸನಂ ಸ್ಥಾ ಹಿತಾ ಕೇಶನೇನ ಚ। 

ಶಿನೇನ ಬ ಹ್ಮ ಣಾ ಚೈ ವತಿ ತ್ರಿಮೂರ್ತಿಸ್ಥಾಸಿತಾ ವಯಂ 1 ೧೭೮ ॥ 
ಶ್ರಿ ರಜೆ ತತಃ ಸಕ್ಲಾ ಜ್ಜ ೀರ್ಣೋದ್ಧಾ ರೇಣ ಸ್ಥಾಪಿತಾಃ | 

ಗ್ರಾ ಮಾಣಾಂ ವೇತನಂ ದತ್ತ ೦ ಹರಿರಾಜೇನ ಚಾದರಾತ್‌ ॥ ೧೭೯॥ 
ಚತುಕ್ನೆತ್ವಾ ರಿಂಶದಧಿಕಚತುಃಶತಮಿತಾತ ಮನಾಂ | 
ಗ್ರಾಮಾಸ್ತ್ರಯೋದಶಾರ್ಚಾರ್ಥಂ ಸೀತಾಪುರಸಮತ್ವಿತಾಃ n ೧೮೦ ॥ 


೧೭೩-೧೭೫. ಹೀಗೆಂದು ಎಲ್ಲರೂ ರಾಮನನ್ನು ನೋಡಲು ಹ 
ಹೊರಟರು. ಸಾಯಂಕಾಲ ಕಳೆದು ಬೆಳಗಾಗಲು ಮರಳಿ ಆಂಜನೇಯನು 
ಹಿಂದಿನಂತೆಯೇ ವೃದ್ಧಬ್ರಾಹ್ಮಣನಾಗಿ ಕಮಂಡಲುವನ್ನು ಹಿಡಿದುಕೊಂಡು 
ಬ್ರಾಹ್ಮಣರಿಗೆ ವಂದಿಸಿ, "" ದ್ವಿಜರೆ! ನೀವೆಲ್ಲ ಎಲ್ಲಿಂದ ಇಲ್ಲಿಗೆ ಬಂದಿರಿ? ಎಲ್ಲಿ 
ಯಾದರೂ ದೊಡ್ಡ ಲಾಭವಾಗಲಿ, ಮದುವೆಯಾಗಲಿ ಆಗುವುದೊ?'' ಎಂದು 
ಕೇಳಿದನು. 

೧೭೬. ಬಾ ಶ್ರಹ್ಮಣರು ಅವನ ಮಾತನ್ನು ಕೇಳಿ ಆಶ್ಚರ್ಯಗೊಂಡು 
ನಮಸ್ಕಾರಮಾಡಿ ಪ್ರಿ ಪ್ಲೀತಿಯಿಂದ ವಿಜ್ಞಾ ಪಿಸಿದರು. 

೧೭೭. ವಿಪ್ರ ! ನೀನು ದಯಾಳುವಾಗಿ ಕಾಣುತ್ತೀಯೆ. ನಮ್ಮ ಹಿಂದಿನ 
ಆಶ್ಚರ್ಯಕರವಾದ ವೃತ್ತಾಂತವನ್ನು ಕೇಳು. 

೧೭೮. ಮೊದಲು ಸೃಷ್ಟಿಯ ಆರಂಭದಲ್ಲಿ ತ್ರಿಮೂರ್ತಿಗಳು ನಮ್ಮನ್ನು 
ಧರ್ಮಾರಣ್ಯದಲ್ಲಿ ಸ್ಥಾಪಿಸಿದರು. 

೧೭೯-೧೮೦. ಬಳಿಕ ಶ್ರೀರಾಮನು ಜೀರ್ಣೋದ್ಧಾರಮಾಡಿ ಹನುಮಂತ 
ನನ್ನು ಸ್ಥಾಪಿಸಿ ನಾನೂರನಲವತ್ತನಾಲ್ಕುಜನ ಬ್ರಾಹ್ಮಣರಿಗೆ ಪೂಜೆಗಾಗಿ 
ಸೀತಾಪುರಡೊಡನೆ ಹದಿಮೂರು ಗ್ರಾಮಗಳನ್ನು ದಾನಗೈದಿರುವನು. 


ಸಟ್ಟ್ರಂಶೋಂಧ್ಯಾಯ: ಷಿ೭ತ್ಲಿ 


ಷಟ್ರಿಂಶಚ್ಚ ಸಹಸ್ರಾಣಿ ನಣಿಜೋ ದ್ವಿಜಪಾಲನೇ । 
ಗೋಭೂಜಸಂಜ್ಞಾಸ್ತೇ ಶೂದ್ರಾಸ್ತೇಭ್ಯಃ ಸಪಾಡಲಕ್ಸೃಕಾಃ ॥ ೧೮೧॥ 
ತೇಚ ಜಾತಾಸ್ತ್ರಿಧಾ ತಾತ ಗೋಭೂಜಾಡಾಲಜಾಸ್ತಥಾ | 
ಮಾಂಡಲೀಯಾಸ್ತಥಾ ಚೈತೇ ತ್ರಿನಿಧಾಶ್ಚ ಮನೋರಮಾಃ ॥೧೮೨॥ 
ವೃತ್ತ್ಯರ್ಥಂ ತೇನ ದತ್ತಾ ವೈ ಹ್ಯನರ್ಫ್ಯಾ ರತ್ನಕೋಟಯಃ । 

ತದಾ ತೇ ನೋಢ (೧೮,೦೦೦) ಗೋಭೂಜಾ (೧೮,೦೦೦) ! 
ಮಾಂಡಲೀಯಾ (೧,೨೫,೦೦೦) ಅಡಾಲಜಾಃ (೧೮,೦೦೦) ॥ ೧೮೩ ॥ 
ಅಥುನಾ ನಾಡನಶ್ರೇಷ್ಠ ಆನೋ ನಾಮ ಮಹೀಪತಿಃ । 


ತಾಸನಂ ರಾಮಚಂದ್ರಸ್ಯ ನ ಮಾನಯತಿ ದುರ್ಮತಿಃ ॥ ೧೮೪ ॥ 
ಜಾಮಾತಾ ತಸ್ಯ ದುಷ್ಟೋ ನೈ ನಾಮ್ನಾ ಕುಮಾರಸಾಲಕಃ । 
ಪಾಷಂಡೈರ್ನೇಸ್ಟಿತೋ ನಿತ್ಯಂ ಕಲಿಧರ್ಮೇಣ ಸಂಮತಃ ॥ ೧೮೫ ॥ 
ಇಂದ್ರಸೂತ್ರೇಣ ಜೈನೇನ ಪ್ರೇರಿತೋ ಬೌದ್ಧಧರ್ಮಿಣಾ | 

ಶಾಸನಂ ತೇನ ಲುಪ್ತಂ ಹಿ ರಾನುದತ್ತಂ ನ ಸಂಶಯಃ ॥ ೧೮೬ ॥ 
ವಾಣಿಜಸ್ತಾದೃಶಾಃ ಕೇಂಪಿ ತನ್ಮನಸ್ಕಾ ಬಭೂವಿರೇ। 

ನಿಷೇಧಯಂತಿ ರಾಮಂ ತೇ ಹನುಮಂತಂ ಮಹಾಮತಿಂ ॥ ೧೮೭ ॥ 


ಪ್ರತ್ಯಯಂ ತು ವಿನಾ ವಿಪ್ರಾ ನ ದಾಸ್ಕಾಮಾತಿ ನಿಶ್ಚಿತಂ । 
ತಂ ಜ್ಞಾತ್ವಾ ತು ಇಮೇ ವಿಪ್ರಾ ರಾಮಂ ಶರಣಮಾಯಯುಃ ॥ ೧೮೮ ॥ 


೧೮೧. ಈ ಬ್ರಾಹ್ಮಣರ ರಕ್ಸಣೆಗಾಗಿ ಗೋಭುಜರೆಂಬ ಮೂವತ್ತಾರುಸಾವಿರ 
ವೈಶ್ಯರನ್ನೂ, ಒಂದು ಲಕ್ಷದ ಇಪ್ಪತ್ತೈ ದುಸಾವಿರ ಶೂದ್ರರನ್ನೂ ಇಟ್ಟಿರುವನು. 

೧೮೨-೧೮೩. ಅವರು ಗೋಭುಜ ಮಾಂಡಲೀಯ ಅಡಾಲಜರೆಂದು 
ಮೂರು ವಿಧರಾದರು. ಇವರ ಜೀವನಕ್ಕಾಗಿ ಅಮೂಲ್ಯವಾದ ಕೋಟ್ಯಂತರ 
ರತ್ನಗಳನ್ನು ಕೊಟ್ಟಿರುವನು. 

೧೮೪. ಈಗ ದುರ್ಬುದ್ಧಿಯುಳ್ಳ ಆಮನೆಂಬ ರಾಜನು ರಾಮಚಂದ್ರನ 
ಶಾಸನವನ್ನು ನಡಸುವುದಿಲ್ಲ. 

೧೮೫-೧೮೬. ಈ ಆಮನ ಅಳಿಯನಾದ ಕುಮಾರಸಪ್ಲಾಲಕನೆಂಬ ದುರುಳನು 
ಪಾಷಂಡರಿಂದಲೂ ಕಲಿಧರ್ಮದಿಂದಲೂ ಆಕ್ರಮಿಸಲ್ಪಟ್ಟು ಜೈನಧರ್ಮಿಯಾದ 
ಇಂದ್ರಸೂತ್ರನಿಂದ ಪ್ರೇರಿತನಾಗಿ ರಾಮನ ಶಾಸನವನ್ನು ಹಾಳುಮಾಡಿದ್ದಾನೆ. 

೧೮೭, ಕೆಲವು ವರ್ತಕರು ಆ ಕುಮಾರಪಾಲಕನಂತೆ ಮನಸ್ಸುಳ್ಳವರಾಗಿ 
ರಾಮ ಮತ್ತು ಹನುಮಂತನನ್ನು ನಿಷೇಧಿಸುತ್ತಾರೆ. 

೧೮೮. ಆ ಆಮನು, "ಬ್ರಾಹ್ಮಣರೆ ! ನಂಬಿಕೆಯಿಲ್ಲದೆ ನಿಮಗೆ ವೃತ್ತಿ 


೩೭೪ ಶಿ ಸ್ಕ್ಯಾಂದಮಹಾಪುರಾಣಂ 


ಹನೂಮಂತಂ ಮಹಾವೀರಂ ರಾಮಶಾಸನಪಾಲಕಂ | 


ತಸ್ಮಾದ್ದಚ್ಛಾಮಹೇ ಸರ್ವೇ ರಾಮಂ ಪ್ರತಿ ಮಹಾಮತೇ 1 ೧೮೯ ॥ 

ಆಂಜನೇಯೋ ಯದಾಂಸ್ಮಾಕಂನ ದಾಸ್ಯತಿ ಸಮಿಾಹಿತಂ । 

ಅನಾಹಾರವ್ರತೇನೈನ ಪ್ರಾಣಾಂಸ್ಕೃಕ್ಟ್ಯಾಮುಹೇ ವಯಂ ॥ ೧೯೦॥ 

ಅಸ್ಮಾಭಿಸ್ತೇ ನಿಶೇಷೇಣ ಕಥಿತಂ ಪರಿಪೃಚ್ಛತೇ | 

ಸ್ನೇಹಭಾವಂ ವಿಚಿಂತ್ಯಾಶು ನಿಜವೃತ್ತಿಂ ಪ್ರಕಾಶಯ ॥ ೧೯೧ ॥ 
ಹನುಮಾನುವಾಚ :-- 


ಪ್ರಾಪ್ತೇ ಕಲಿಯುಗೇ ವಿಪ್ರಾಃ ಕೃ ದೇವದರ್ಶನಂ ಭವೇತ್‌ । 
ನಿವರ್ತಧ್ವಂ ಹಿ ವಿಪ್ರೇಂದ್ರಾ ಯದೀಚ್ಛಥ ಸುಖಂ ಮಹತ್‌ ॥ ೧೯೨ ॥ 
ವ್ಯಾಘ್ರಸಿಂಹಾಕುಲೇ ಶೂನ್ಯೇ ನನೇ ವನಗಜಾಶ್ರಿತೇ । 


ಬಹುದಾವ ಸಮಾನಿಷ್ಟೇ ಪ್ರವೇಷ್ಟುಂ ನೈನ ಶಕ್ಯತೇ ॥ ೧೯೩ ॥ 
ವಿಪ್ರಾ ಊಚುಃ 

ಅತೀತೇ ದಿವಸೇ ವಿಪ್ರ ಏಕಃ ಕಥಿತವಾನಿದಂ । 

ಅದ್ಕೈನ ತ್ವಂ ಸಮಾಗನ್ಯು ಏವಮೇವ ಪ್ರಭಾಷಸೇ ॥ ೧೯೪ ॥ 


ಕಸ್ತೃಂ ನಾಡನರೂಸೇಣ ರಾಮೋ ವಾಂ ಪ್ಯಥ ವಾಯುಜಃ । 
ಸತ್ಯಂ ಕಥಯ ನಃ ಸ್ವಾಮಿನ್‌ ದಯಾಂ ಕೃತ್ವಾ ಮಹಾದ್ವಿಜ ॥ ೧೯೫ ॥ 





ಯನ್ನು ಕೊಡಲಾರೆನು'' ಎಂದನು. ಇದರಿಂದ ಬ್ರಾಹ್ಮಣರು ರಾಮನನ್ನು ಮಕೆ 
ಹೊಕ್ಕಿರುವರು. 

೧೮೯. ಪ್ರಾಜ್ಞನೆ! ರಾಮನ ಶಾಸನವನ್ನು ಪಾಲಿಸುವ ವೀರಾಂಜನೇಯ. 
ನನ್ನೂ ರಾಮನನ್ನೂ ನೋಡಲು ಈಗ ಹೋಗುತ್ತಿದ್ದೇವೆ. 

೧೯೦. ಆಂಜನೇಯನು ನಮ್ಮ ಅಭೀಷ್ಟವನ್ನು ನೆರನೇರಿಸದಿದ್ದರೆ ನಾವು 
ಉಪವಾಸದಿಂದ ಪ್ರಾಣನನ್ನು ಬಿಡುವೆವು. 

೧೯೧. ನಾವು ಕೇಳುತ್ತಿರುವ ನಿನಗೆ ನಮ್ಮ ವಿಷಯವನ್ನು ವಿಶೇಷವಾಗಿ 
ಹೇಳಿದ್ದೇವೆ. ನಮ್ಮಲ್ಲಿ ಪ್ರೀತಿಯಿಟ್ಟು ನಿನ್ನ ನಿಷಯವನ್ನು ತಿಳಿಸು. 

೧೯೨-೧೯೩. ಹನುಮಂತನು ಹೇಳುತ್ತಾನೆ:--ಎಲೈ ವಿಪ್ರರೆ! ಕಲಿಯುಗ 
ದಲ್ಲಿ ದೇವತೆಗಳ ದರ್ಶನವಾಗುವುದೆಂತು? ನಿಮಗೆ ಸುಖವಾಗಿ ಬಾಳಬೇಕೆಂದು 
ಅಸೇಕ್ಸೆಯಿದ್ದರೆ ಹಿಂದಿರುಗಿರಿ. ಹುಲಿ, ಸಿಂಹ, ಆನೆಗಳಿಂದಲೂ, ಕಾಳ್ಕಿಚ್ಚೆ 
ನಿಂದಲೂ ಆವರಿಸಲ್ಪಟ್ಟ ಶೂನ್ಯಾರಣ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.” 

೧೯೪. ವಿಪ್ರರು ಹೇಳುತ್ತಾರೆ: ದ್ವಿಜನೆ ! ಒಬ್ಬನು ನಿನ್ನೆಯೂ ಈಗ 
ಹೇಳಿದಂತೆಯೇ ಹೇಳಿದನು. 

೧೯೫. ನೀನಾರು? ಬ್ರಾ ಹ್ಮಣರೂಪಿಯಾದ ರಾಮನೊ? ಅಥವಾ 
ಹನುಮಂತನೊ? ನಮ್ಮಲ್ಲಿ ದಯೆಯಿಟ್ಟು ನಿಜವಾದ ವಿಷಯವನ್ನು ಹೇಳು. 


ಷಟ್ಟಂಶೋತಧ್ಯಾಯಃ ೩೭೫ 


ಹನುಮಾನ್ಯ ಥಯಾಮಾಸ ಗೋಪಿತಂ ಯದ್ದ್ವಿಜಾಗ್ರತಃ । 


ಹನುಮಾನಿತ್ಯಹಂ ನಿಪ್ರಾ ಬುಧ್ಯಧ್ವಂ ನಿಶ್ಚಿತಾ ಹಿ ಮಾಂ ॥ ೧೯೬॥ 
ಸ್ವರೂಪಂ ಪ್ರಕಟೀಕೃತ್ಯ ಲಾಂಗೂಲಂ ದರ್ಶಯನ್ಮಹತ್‌ 1॥೧೯೭॥ 
ಹನುಮಾನುವಾಚ :- 


ಅಯಮಂಭೋನಿಧಿಃ ಸಾಕ್ಸಾತ್ಸೇತುಬಂಥೋ ಮುನೋರನುಃ । 

ಅಯಂ ರಾಮೇಶ್ವರೋ ದೇವೋ ಗರ್ಭವಾಸನಿನಾಶಕೃತ್‌ ॥ ೧೯೮ ॥ 
ಇಯಂ ತು ನಗರೀ ಶ್ರೇಷ್ಠಾ ಲಂಕಾನಾಮೇತಿ ವಿಶ್ರುತಾ । 

ಯತ್ರ ಸೀತಾ ಮಯಾ ಪ್ರಾಪ್ತಾ ರಾಮಶೋಕಾಂಪಹಾರಿಣೀ ॥ ೧೯೯॥ 
ತರ್ಜನ್ಯಗ್ರೇ ದ್ವಿಜಶ್ರೇಷ್ಠಾ ಅಗಮ್ಯಾ ಮಾಂ ನಿನಾ ಪರೈಃ । 

ಸಾ ಸುವರ್ಣಮಯಿ ಭಾತಿ ಯಸ್ಯಾಂ ರಾಜ್ಯೇ ನಿಭೀಷಣಃ ॥ ೨೦೦ ॥ 
ಸ್ಲಾಸಿತೋ ರಾಮದೇನೇನ ಸೇಯಂ ಲಂಕಾಮಹಾಪುರೀ 1 


ನಿಯಮಸ್ಥೈಃ ಸಾಧುವೃಂದೈಸ್ತೀರ್ಥಯಾತ್ರಾಪ್ರಸಂಗತಃ ॥ ೨೦೧॥ 
ಆನೀಯ ಗಂಗಾಸಲಿಲಂ ರಾಮೇಶನುಭಿಷಿಚ್ಯ ಚ । 
ಕ್ಸಿಸ್ತಾ ಏತೇ ಮಹಾಭಾರಾ ದೃಶ್ಯಂತೇ ಸಾಗರಾಂತರೇ ॥ ೨೦೨ ॥ 


ನಿಷ್ಸಾಸಾಸ್ತೇನ ಸಂಜಾತಾಃ ಸಾಧವಸ್ತೇ ದೃಢನ್ರತಾಃ । 
ನೂನಂ ಪುಣ್ಯೋದಯೇ ವೃದ್ಧಿ ಸಾಹೇ ಹಾನಿಶ್ಚ ಜಾಯತೇ ॥ ೨೦೩ ॥ 











೧೯೬-೧೯೭. ಹನುಮಂತನು ತಾನು ಮರೆಮಾಚಿದ ಹನುಮಂತ 
ನೆಂಬುದನ್ನು ಬ್ರಾಹ್ಮಣರಿಗೆ ತಿಳಿಸಿ ಉದ್ದವಾದ ತನ್ನ ಬಾಲವುಳ್ಳ ಆಕೃತಿಯನ್ನು 
ತೋರಿಸಿದನು. 

೧೯೮-೧೯೯. ಹನುಮಂತನು ಹೇಳುತ್ತಾನೆ ಇದು ಪ್ರತ್ಯಕ್ಸುವಾದ 
ಸಮುದ್ರವು. ಇದು ರಮ್ಯವಾದ ಸೇತುವು. ಇವನು ಪುನರ್ಜನ್ಮವನ್ನು ಪರಿಹರಿ 
ಸುವ ರಾಮೇಶ್ವರಸ್ವಾಮಿಯು. ಇದು ರಾಮನ ದುಃಖವನ್ನು ನಿವಾರಿಸುವ 
ಸೀತೆಯನ್ನು ನಾನು ಕಂಡ ಲಂಕೆಯೆಂಬ ಪ್ರಸಿದ್ಧನಗರಿಯು. 

೨೦೦-೨೦೩. ಎಲ್ಫೈ ದ್ವಿಜೋತ್ತಮರೆ! ನಾನು ತರ್ಜನೀಬೆರಳಿನ ಕೊನೆ 
ಯಿಂದ ತೋರಿಸುತ್ತಿರುವುದು ಸುವರ್ಣಮಯವಾದ ಲಂಕಾಸಟ್ಟಣವು. ನನ್ನ 
ಹೊರತು ಬೇರೆಯವರು ಇದನ್ನು ಪ್ರವೇಶಿಸಲಾರರು. ಇದರಲ್ಲಿ ರಾಮದೇವನು 
ನಿಭೀಷಣನನ್ನು ಸ್ಥಾಪಿಸಿರುವನು. ವ್ರತಾನುಷ್ಠಾನಮಾಡುವ ಸಾಧುಗಳು 
ತೀರ್ಥಯಾತ್ರೆಯನ್ನು ಮಾಡುವಾಗ ಗಂಗೆಯ ನೀರನ್ನು ತಂದು ರಾಮೇಶ್ವರನಿಗೆ 
ಅಭಿಷೇಕಮಾಡಿ ಸಮುದ್ರದಲ್ಲಿ ಚೆಲ್ಲಿದರು. ಅದೇ ಈಗ ಇಷ್ಟುವೃದ್ಧಿಗೊಂಡಿ 
ರುವುದು. ಅದರಿಂದ ಸಾಧುಗಳು ಪಾಪರಹಿತರಾದರು. ಪುಣ್ಯವು ಹೆಚ್ಚೆ 
ದಾಗ ವೃದ್ಧಿಯೂ, ಪಾಸಾಭಿವೃದ್ಧಿಯಲ್ಲಿ ಕೇಡೂ ಸಂಭವಿಸುವುದು. 


೩೩೬ ಶ್ರೀ ಸ್ಕಾಂದಮಹಾಪುರಾಣಂ 


ಸ್ಥಾನಭ್ರಷ್ಟಾಃ ಕೃತಾಃ ಪೂರ್ವಂ ಚಾತುರ್ನಿದ್ಯಾ ದ್ವಿಜಾತಯಃ । 
ಜೀರ್ಣೋದ್ಧಾರೇಣ ರಾಮೇಣ ಸ್ಥಾಪಿತಾಃ ಪುನರೇನ ಹಿ । 
'ಪೂರ್ವಜನ್ಮನಿ ಭೋ ವಿಪ್ರಾ ಹರಿಪೂಜಾ ಕೃತಾ ಮಯಾ ॥ ೨೦೪ ॥ 
ಸಾಂಪ್ರತಂ ನಿಶ್ಚಲಾ ಭಕ್ತಿರ್ಭನತ್ಸೇವಾ ಹಿ ದೃಶ್ಯತೇ | 

ತೇನ ಪುಣ್ಯಪ್ರಭಾವೇಣ ತುಷ್ಟೋ ದಾಸ್ಯಾಮಿ ವೋ ನರಂ ॥ ೨೦೫ ॥ 
ಧನ್ಕ್ಯೋಂಹಂ ಕೃತಕೃತ್ಯೋಂಹಂ ಸುಭಾಗ್ಯೋಃ ಹಂ ಧರಾತಲೇ । 


ಅದ್ಯ ಮೇ ಸಫಲಂ ಜನ್ಮ ಜೀವಿತಂ ಚ ಸುಜೀವಿತಂ ೨೦೬ ॥ 

ಯದಹಂ ಬ್ರಾಹ್ಮಣಾನಾಂ ಚ ಪ್ರಾಪ್ತವಾಂಶ್ಚರಣಾಂತಿಕಂ ॥ ೨೦೩೭ ॥ 
ವ್ಯಾಸ ಉವಾಚ; 

ದೃಷ್ಟ್ಟೈನ ಹನುಮಂತಂ ತು ಪುಲಕಾಂಕಿತನಿಗ್ರಹಾಃ । 

ಸಗದ್ಗದಂ ಯಥೋಚುಸ್ತೇ ವಾಕ್ಯಂ ವಾಕ್ಯನಿಶಾರದಾಃ ॥ ೨೦೮ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧವರ್ನಾಂರಣ್ಯಮಾಹಾತ್ಮ್ಮ್ಯೇ 
4" ಹನುಮತ್ಸಮಾಗಮೋಗ''ನಾಮ ಷಟ್ರಂಶೋಂಧ್ಯಾಯಃ 


೨೦೪. ಹಿಂದೆ. ಚಾತುರ್ವಿದ್ಯಬ್ರಾಹ್ಮಣರು ಸ್ಥಾನವಿಲ್ಲದವರಾಗಿದ್ದರು. 
ಆಗ ರಾಮನು ಜೀರ್ಣೋದ್ಧಾರಮಾಡಿ ಆ ಬ್ರಾಹ್ಮಣರನ್ನು ತಿರುಗಿ ಸ್ಥಾಪಿಸಿ 
ದನು. ವಿಪ್ರರೆ! ನಾನು ಹಿಂದಿನ ಜನ್ಮದಲ್ಲಿ ಹರಿಪೂಜೆಯನ್ನು ಮಾಡಿರುವೆನು. 
ಅದರಿಂದ ಈಗ ದೃಢವಾದ ಭಕ್ತಿಯೂ, ನಿಮ್ಮ ಸೇವೆಯೂ ದೊರಕಿರುವುದು. 
ಆ ಪುಣ್ಯದ ಪ್ರಭಾವದಿಂದ ಸಂತೋಷಗೊಂಡು ನಿಮಗೆ ವರವನ್ನು ಕೊಡುವೆನು. 

೨೦೫-೨೦೭. ನಾನು ಬ್ರಾಹ್ಮಣರ ಚರಣಸನ್ನಿಧಿಯನ್ನು ಹೊಂದಿರುವುದ 
ರಿಂದ ಭೂಮಿಯಲ್ಲಿ ಧನ್ಯನು. ಪುಣ್ಯವಂತನು. ಇಂದು ನನ್ನ ಜನ್ಮವು ಸಫಲ 
ವಾಯಿತು. ಜೀವನವು ಉತ್ತಮವಾಯಿತು. 

೨೦೮. ಆ ಬ್ರಾಹ್ಮಣರು ಹನುಮಂತನನ್ನು ಕಂಡು ರೋಮಾಂಚ 
ಗೊಂಡವರಾಗಿ ಗದ್ಗದಧ್ವನಿಸಹಿತವಾಗಿ ಹೇಳಿದರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮುಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಕ 
ಮಾಹಾತ್ಮ್ಮ್ಯದಲ್ಲಿ "" ಹನುಮತ್ಸಮಾಗಮ''ವೆಂಬ 
ಮೂನತ್ತಾರನೆಯ ಅಭ್ಯಾಯವು ಮಂಗಿದುದು 


1 ಶ್ರೀಃ! 
ಅಥ ಸಪ್ತ ತ್ರಿಂಶೋಧ್ಯಾಯಃ 
ಬ್ರಾಹ್ಮಣಾನಾಂ ಪ್ರತ್ಯಾಗಮನವರ್ಣನಂ 
ವ್ಯಾಸ ಉವಾಚ: 

ತತಸ್ತೇ ಬ್ರಾಹ್ಮಣಾಃ ಸರ್ವೇ ಪ್ರತ್ಯೂಚುಃ ಪವನಾತ್ಮಜಂ | 
ಅಧುನಾ ಸಫಲಂ ಜನ್ಮ ಜೀವಿತಂ ಚ ಸುಜೀನಿತಂ won 
ಅದ್ಯ ನೋ ನೋಢಲೋಕಾನಾಂ ಧನ್ಕೋ ಧರ್ಮಶ್ಚ ವೈ ಗೃಹಾಃ । 
ಧನ್ಯಾ ಚ ಸಕಲಾ ಪೃಥ್ವೀ ಯಜ್ಞಧರ್ಮಾ ಹ್ಯನೇಕಶಃ ॥೨॥ 
ನಮಃ ಶ್ರೀರಾಮಭಕ್ತಾಯ ಅಕ್ಬವಿಧ್ಯಂಸನಾಯ ಚ । 
ನಮೋ ರಕ್ಷಃಪುರೀದಾಹಕಾರಿಣೇ ನಜ್ರಧಾರಿಣೇ Han 
ಜಾನಕೀಹೃದಯತ್ರಾಣಕಾರಿಣೇ ಕರುಣಾತ್ಮನೇ । 
ಸೀತಾನಿರಹತಪ್ತಸ್ಯ ಶ್ರೀರಾಮಸ್ಯ ಪ್ರಿಯಾಯ ಚ ॥೪॥ 
ನಮೋಸ್ತು ತೇ ಮಹಾವೀರ ರಕ್ಸಾಸ್ಮಾನ್ಮಜ್ಜತಃ ಕ್ಸಿತೌ । 
ನಮೋ ಬ್ರಾಹ್ಮಣದೇವಾಯ ನಾಯುಪುತ್ರಾಯ ತೇ ನಮಃ ॥೫॥ 
ನಮೋಸ್ತು ರಾಮಭಕ್ತಾಯ ಗೋಬ್ರಾಹ್ಮಣಹಿತಾಯ ಚ । 
ನಮೋಸ್ತು ರುದ್ರರೂಪಾಯ ಕೃಷ್ಣವಕ್ಕ್ರಾಯ ತೇ ನಮಃ mn 





ಕನ್ನಡದ ಅನುವಾದ 
ಬ್ರಾಹ್ಮಣಪ್ರುತ್ಯಾಗಮನವರ್ಣನ 

೧-೨. ವ್ಯಾಸನು ಹೇಳುತ್ತಾನೆ: ಬಳಿಕ ಬ್ರಾಹ್ಮಣರು ಹನುಮಂತ 
ನನ್ನು ಕುರಿತು ಹೀಗೆಂದರು. ಈಗ ನಮ್ಮ ಜನ್ಮವು ಸಫಲವಾಯಿತು. ಬದುಕು 
ಒಳ್ಳೆಯದಾಯಿತು. ಮೋಡಬ್ರಾಹ್ಮಣರ ಧರ್ಮವೂ, ಮನೆಗಳೂ ಧನ್ಯ 
ವಾದುವು. ಸಮಸ್ತಭೂಮಿಯೂ, ಯಜ್ಞಧರ್ಮಗಳೂ ಧನ್ಯವಾದುವು. 

೩. ಶ್ರೀರಾಮನ ಭಕ್ತನೂ, ಅಕ್ಬಶುಮಾರನನ್ನು ಕೊಂದವನೂ, ಲಂಕಾ 
ಪಟ್ಟಣವನ್ನು ಸುಟ್ಟವನೂ, ವಜ್ರವನ್ನು ಧರಿಸಿದವನೂ ಆದ ಓ ಆಂಜನೇಯ! 
ನಿನಗೆ ನಮಸ್ಕಾರವು. 

೪-೫. ಸೀತೆಯ ಹೃದಯಕ್ಕೆ ಬಲವಿತ್ತು ಕಾಪಾಡಿದವನೂ, ಕರುಣಾಳುವೂ, 
ಸೀತಾವಿಯೋಗದಿಂದ ದುಃಖಗೊಂಡ ರಾಮನಿಗೆ ಪ್ರಿಯನೂ ಆದ ಆಂಜನೇಯ! 
ನಮಸ್ಕಾರವು. ಮಹಾನೀರನೂ, ಬ್ರಾಹ್ಮಣದೇವನೂ ಆದ ನಿನಗೆ ನಮಸ್ಕಾರವು. 
ಭೂಮಿಯಲ್ಲಿ ಮುಳುಗುತ್ತಿರುವ ನಮ್ಮನ್ನು ಕಾಪಾಡು. 

೬. ರಾಮಭಕ್ತನೂ, ಗೋಬ್ರಾಹ್ಮಣರಿಗೆ ಹಿತವನ್ನುಂಟುಮಾಡುವವನೂ, 
ಭಯಂಕರರೂಪನೂ, ಕೃಷ್ಣಮುಖನೂ ಆದ ನಿನಗೆ ನಮಸ್ಕಾರವು. 


ಷರ ಶ್ರೀ ಸ್ಕಾಂದಮಹಾಪುರಾಣಂ 


ಅಂಜನಾಸೂನವೇ ನಿತ್ಯಂ ಸರ್ವವ್ಯಾಧಿಹರಾಯ ಚ। 


ನಾಗಯಜ್ಞೋಪನೀತಾಯ ಪ್ರಬಲಾಯ ನಮೋಸ್ತು ತೇ nan 

ಸ್ವಯಂ ಸಮುದ್ರತೀರ್ಣಾಯ ಸೇತುಬಂಧನಕಾರಿಣೇ ॥೪॥ 
ವ್ಯಾ ಸ PMG ಹಾ 

ಸ್ತೊ ತ್ರೆ ೇಣೈನಾಃಮುನಾ ತುಷ್ಟೋ ವಾಯುಪುತ್ರೋಬ್ರವೀದ್ವ ಚಃ । 

ಶ್ರ | ಜುಫ್ಪಂ ಸ ವರಂ ವಿಪ್ರಾ ಯಜೊ ಸೀ ಮನಸಿ ಕೋಚತೇ ॥೯॥ 
ವಿಪ್ರಾ ಊಚುಃ; 


ಯದಿ ತುಷ್ಬೋಸಿ ದೇವೇಶ ರಾಮಾಜ್ಞಾಸಾಲಕಪ್ರಭೋ । 
ಸ್ವರೂಪಂ ದರ್ಶಯಸ್ವಾಂದ್ಯ ಲಂಕಾಯಾಂ ಯತೃತಂ ಹರೇ (॥೧೦॥ 
ತಥಾ ನಿಧ್ವಂಸಯಾಂದ್ಯ ತ್ವಂ ರಾಜಾನಂ ಪಾಪಕಾರಿಣಂ । 


ದುಷ್ಟಂ ಕುಮಾರಪಾಲಂ ಹಿ ಆಮಂ ಚೈನ ನ ಸಂಶಯಃ ॥ ೧೧॥ 
ವೃತ್ತಿಲೋಭಫಲಂ ಸದ್ಯಃ ಪ್ರಾಪ್ಲುಯಾತ್ತ್ಯಂ ತಥಾ ಕುರು । 
ಪ್ರತೀತ್ಯರ್ಥಂ ಮಹಾಬಾಹೋ ಕಂ ನಿಲಂಬಂ ವದಸ್ವ ನಃ ॥ ೧೨ ॥ 
ತ್ವಯಿ ಚಿತ್ರೇನ ದತ್ತೇನ ಸ ರಾಜಾ ಪುಣ್ಯಭಾಗ್ಭನೇತ್‌ | 

ಪ್ರ ತ್ಯ ಯೇ ದರ್ಶಿತೇ ನೀರ ಶಾಸನಂ ಸಾಲಯಿಸ್ಯ ತಿ ॥ ೧೩ ॥ 





೭-೮. ಅಂಜನೆಯ ಪುತ್ರನೂ, ಸಕಲರೋಗಗಳನ್ನು ಪರಿಹರಿಸುವವನೂ, 
ಸರ್ಪವೇ ಜನಿವಾರವಾಗುಳ್ಳವನೂ, ಸಮರ್ಥನೂ, ಸಮುದ್ರವನ್ನು ದಾಟ 
ದವನೂ, ಸೇಶುವನ್ನು ಕಟ್ಟಲು ಕಾರಣನೂ ಆದ ನಿನಗೆ ನಮಸ್ಕಾರವು. 

೯. ಈ ಸ್ತೋತ್ರದಿಂದ ಸಂತೋಷಗೊಂಡ ಹನುಮಂತನು "“ ವಿಪ್ರರೆ! 
ನಿಮ್ಮ ಅಭೀಷ್ಟವನ್ನು ಕೇಳಿಕೊಳ್ಳಿರಿ?' ಎಂದನು. 

೧೦. ಬ್ರಾಹ್ಮಣರು ಹೇಳುತ್ತಾರೆ:--ರಾಮನ ಅಪ್ಪ ಧೃಣೆಯನ್ನು ನಡಸಿದ 
ಎಲ್ಪೆ ಹನುಮಂತನೆ! ನೀನು ಸಂತೋಷಗೊಂಡಿದ್ದರೆ ಅಂಕೆಯಲ್ಲಿ ನೀನು 
ತೋರಿಸಿದ ಸ ಸ್ವರೂಪವನ್ನು ನಮಗೆ ತೋರಿಸು. 

೧೧. ಹಾಗೆಯೇ ಪಾಪಿಯಾದ ಕುಮಾರಪಾಲನನ್ನೂ ಆಮರಾಜ 
ನನ್ನೂ ಧ್ವಂಸಮಾಡು. 

೧೨. ಆ ಕುಮಾರಪಾಲನು ನಮ್ಮ ವೃತ್ತಿಯನ್ನು ಹಾಳುಮಾಡಿದುದಕ್ಕೆ 
ತಕ್ಕ ಫಲವನ್ನು ಹೊಂದಲಿ. ಅವನನ್ನು ನಂಬಿಸುವುದಕ್ಕೆ ಏಕೆ NEWS, 
ತ್ತೀಯೆ? 

೧೩. ನೀನು ಕೊಟ್ಟ ಮನಸ್ಸಿನಿಂದ ಆ ರಾಜನು ಪುಣ್ಯವಂತನಾದಾನು. 
ನಂಬಿಕೆಯನ್ನು ತೋರಿಸಿದರೆ ರಾಮನ ಶಾಸನವನ್ನು ಅವನು ಕಾಪಾಡುವನು. 


ಸಪ್ತತ್ರಿಂಶೋತಧ್ಯಾಯಃ a೯ 


$ ಯಾಧರ್ಮಃ ಪೃಥಿವ್ಯಾಂ ತು ವಿಸ್ತಾರಂ ಪ್ರಾಪಯಿಷ್ಯತಿ I 


ಧರ್ಮಧೀರ ಮಹಾವೀರ ಸ್ವರೂಪಂ ದರ್ಶಯಸ್ವ ನಃ 1೧೪ 
ಹನುಮಾನುವಾಚ :- 

ನುತ್ಸರೂಪಂ ಮಹಾಕಾಯಂ ನ ಚಕ್ಸುರ್ನಿಷಯಂ ಕಲೌ । 

ಕೇಜೋರಾಶಿನಮುಯಂ ದಿನ್ಯನಿತಿ ಜಾನಂತು ನಾಡನಾಃ 1 ೧೫ ॥ 

ತಥಾಂಸಿಸರಯಾ ಭಕ್ತ್ಯಾ ಪ್ರಸನ್ನೋಃಹಂ ಸ್ತವಾದಿಭಿಃ। 

ನಸನಾಂತರಿತಂ ರೂಪಂ ದರ್ಶ ಯಿಷ್ಯಾಮಿ ಪಶ್ಯತ ॥ ೧೬ ॥ 

ಏನಮುಕ್ತಾಸ್ತದಾ ನಿಪ್ರಾಃ ಸರ್ವಕಾರ್ಯಸಮುತ್ಸುಕಾಃ । 

ಮಹಾರೂಪಂ ಮಹಾಕಾಯಂ ಮಹಾಪುಚ್ಛಸಮಾಕುಲಂ ॥ ೧೭॥ 


ದೃಷ್ಟ್ವಾ ದಿವ್ಯಸ್ಥರೂಪಂ ತಂ ಹನುಮಂತಂ ಜಹರ್ಷಿರೇ। 
ಕಥಂಚಿದ್ಭೈರ್ಯಮಾಲಂಬ್ಯ ವಿಪ್ರಾಃ ಪ್ರೋಚುಃ ಶನೈಃ ಶನೈಃ ॥ ೧೮ ॥ 
ಯಥೋಕ್ತಂ ತು ಪುರಾಣೇಷು ತತ್ತಥೈನ ಹ ದೃಶ್ಯತೇ 


ಉವಾಚ ಸ ಹಿ ತಾನ್ಸರ್ನಾಂಶ್ಚಕ್ಸುಃ ಪ್ರಚ್ಛಾದ್ಯ ಸಂಸ್ಥಿತಾನ್‌ ॥೧೯॥ 
ಫಲಾನೀಮಾನಿ ಗೃಹ್ಮೀಧ್ವಂ ಭಕ್ಷ್ಮಣಾರ್ಹ ಮೃಹೀಶ್ವರಾಃ । 
ಏಭಿಸ್ತು ಭಕ್ತಿತೈರ್ನಿಪ್ರಾ ಹ್ಯತಿತೃಪ್ತಿರ್ಭನಿಷ್ಯತಿ u ೨೦ 1 


ಧರ್ಮಾಃ ರಣ್ಯಂ ವಿನಾ ಚಾಂದ್ಯ ಕ್ಸುಧಾ ನಃ ಶಾಮ್ಯತಿ ಧ್ರುವಂ ॥೨೧॥ 





೧೪. ವೇದಧರ್ಮವು ಭೂಮಿಯಲ್ಲಿ ವಿಸ್ತಾರಗೊಳ್ಳುವುದು. ವೀರನಾದ 
ಆಂಜನೇಯನೆ! ನಿನ್ನ ಸ್ವರೂಪವನ್ನು ನಮಗೆ ತೋರಿಸು. 

೧೫. ಹನುಮಂತನು ಹೇಳುತ್ತಾನೆ:-ಬ್ರಾಹ್ಮಣರೆ! ನನ್ನ ತೇಜಸ್ಸರೂಪ 
ವಾದ ದಿವ್ಯ ಮಹಾಕಾಯವನ್ನು ಈ ಕಲಿಯುಗದಲ್ಲಿ ನೋಡಲಾಗುವುದಿಲ್ಲ. 

೧೬. ಆದರೂ ನೀವು ಭಕ್ತಿಯಿಂದ ಮಾಡಿದ ಸ್ಕ್ತೋತ್ಪಾದಿಗಳಿಂದ ಪ್ರಸನ್ನ 
ನಾದ ನಾನು ಬಟ್ಟಿ ಯಿಂದ ಮುಚ್ಚಿದ ಸ್ವರೂಪವನ್ನು ತೋರಿಸುವೆನು, ನೋಡಿರಿ. 

೧೭-೧೮. ಹೀಗೆ ಆಂಜನೇಯನು ನುಡಿಯಲು ಸಕಲಕಾರ್ಯಗಳಲ್ಲಿಯೂ 
ಉತ್ಸುಕರಾದ ಬ್ರಾಹ್ಮಣರು ಉದ್ದವಾದ ಬಾಲವುಳ್ಳ ಅವನ ದಿವ್ಯಾಕೃತಿಯ 
ಸ್ಪೀಕ್ಸಿಸಿ ಸಂತೋಷಗೊಂಡು ಅತಿಕಷ್ಟದಿಂದ ಧೈರ್ಯವನ್ನು ತಾಳಿ ಮೆಲ್ಲಗೆ 
ಹೀಗೆಂದರು. 

೧೯-೨೧. " ಪುರಾಣಗಳಲ್ಲಿ ಕೇಳಿದಂತೆಯೆ ಇರುವ ನಿನ್ನ ದಿವ್ಯಾಕೃತಿ 
ಯನ್ನು ನೋಡುತ್ತಿದ್ದೇವೆ?” ಆಂಜನೇಯನು ಕಣ್ಣನ್ನು ಮುಚ್ಚಿಕೊಂಡು 
ನಿಂತಿರುವ ಅವರನ್ನು ಕುರಿತು, "" ಮುನೀಶ್ವರರೆ! ಈ ಹೆಣ್ಣುಗಳನ್ನು ತಿನ್ನುವುದ 
ಕ್ಕಾಗಿ ತೆಗೆದುಕೊಳ್ಳಿರಿ. ಇವುಗಳನ್ನು ತಿಂದರೆ ಅತ್ಯಂತ ತೃಪ್ತಿಯಾಗುವುದು. 
ಧರ್ಮಾರಣ್ಯಕ್ಕೆ ಹೋಗದಿದ್ದರೂ ನಿಮ್ಮ ಹಸಿವು ಅಡಗುವುದು'' ಎಂದನು 


ಹಲ ಶ್ರೀ ಸ್ಕಾಳಿಹಷುಪಾತುರಾಣಂ 


ವ್ಯಾಸ ಉವಾಚ; 
ಕ್ಸುಧಾಕ್ಪಾಂತೈಸ್ತದಾವಿಪ್ಪೆಃ ಕೃತಂ ವೈ ಫಲಭಕ್ಷಣಂ । 
ಅಮೃತಪ್ರಾಶನನಿವ ತೃಪ್ತಿಸ್ತೇಷಾಮಜಾಯತ ॥ ೨೨ ॥ 
ನ ತೃಷಾ ನೈನ ಕ್ಸುಚ್ಚೈನ ನಿಪ್ರಾಃ ಸಂಕ್ಲಿಷ್ಟಮಾನಸಾಃ । 
ಅಭವನ್ಸಹಸಾ ರಾಜನ್ವಿಸ್ಮಯಾನಿಷ್ಟಚೇತಸಃ ॥ ೨೩॥ 
ತತಃ ಸ್ರಾಹಾಂಂಜನಾಪುತ್ರಃ ಸಂಪ್ರಾಪ್ತೇ ಹಿ ಕಲೌ ದ್ವಿಜಾಃ । 
ನಾಗನಿಷ್ಕಾಮ್ಯಹಂ ತತ್ರ ಮುಕ್ತ್ವಾ ರಾಮೇಶ್ವರಂ ಶಿನಂ ॥ ೨೪ ॥ 
ಅಭಿಜ್ಞಾನಂ ಮಯಾ ದತ್ತಂ ಗೃಹೀತ್ವಾ ತತ್ರ ಗಚ್ಛತ । 
ತಫ್ಯಮೇತತ್ಪತೀಯೇತ ತಸ್ಯ ರಾಜ್ಞೋ ನ ಸಂಶಯಃ ॥ ೨೫ ॥ 
ಇತ್ಯುಕ್ತ್ವಾ ಬಾಹುಮುದ್ಭೃತ್ಯ ಭುಜಯೋರುಭಯೋರನಿ । 
ಪೃಥಗ್ರೋಮಾಣಿ ಸಂಗೃಹ್ಯ ಚಕಾರ ಪುಟಕಾದ್ವಯಂ ॥ ೨೬ ॥ 


ಭೂರ್ಜಪತ್ರೇಣ ಸಂವೇಷ್ಟ್ಯ ತೇದಾದ್ವಿಪ್ರಕಕ್ಸುಯೋಃ | 
ವಾಮೇ ತು ವಾಮಕಕ್ಟೋತ್ಥಾಂ ದಕ್ಷಿಣೋತ್ಥಾಂತು ದಕ್ಷಿಣೇ ॥ ೨೭॥ 
ಕಾಮದಾಂ ರಾನುಭಕ್ತಸ್ಯ ಅನ್ಯೇಷಾಂ ಕ್ಸಯಕಾರಿಣೇಂ 1 
ಉವಾಚ ಚ ಯದಾ ರಾಜಾ ಬ್ರೂತೇ ಚಿಹ್ನಂ ಪ್ರದೀಯತಾಂ ॥ ೨೮ ॥ 

೨೨. ವ್ಯಾಸನು ಹೇಳುತ್ತಾನೆ: ಆಗ ಹಸಿವುಗೊಂಡ ಬ್ರಾಹ್ಮಣರು 
ಆ ಹಣ್ಣುಗಳನ್ನು ತಿಂದರು. ಅವರಿಗೆ ಅಮೃತವನ್ನುಕುಡಿದಷ್ಟು ತೃಪ್ತಿಯಾಯಿತು. 

೨೩. ಹಸಿವೂ ಬಾಯಾರಿಕೆಯೂ ಆಗಲಿಲ್ಲ. ಕೂಡಲೆ ಬ್ರಾಹ್ಮಣರು 
ಆಶ್ಚರ್ಯಗೊಂಡರು. 

೨೪-೨೫. ತರುವಾಯ ಆಂಜನೇಯನು, "ದ್ವಿಜರೆ! ಕಲಿಯುಗದಲ್ಲಿ ನಾನು 
ರಾಮೇಶ್ವರನಾದ ಮಹೇಶ್ವರನನ್ನು ಬಿಟ್ಟು ಅಲ್ಲಿಗೆ ಬರುವುದಿಲ್ಲ. ನಾನೊಂದು 
ಅಭಿಜ್ಞಾನವನ್ನು ಕೊಡುವೆನು. ಅದನ್ನು ತೆಗೆದುಕೊಂಡು ಅಲ್ಲಿಗೆ ಹೋಗಿರಿ. 
ಆ ರಾಜನು ಸತ್ಯವಾಗಿಯೂ ಇದನ್ನು ನಂಬುತ್ತಾನೆ.' 

೨೬-೨೭. ಹೀಗೆಂದು ಹನುಮಂತನು ತೋಳನ್ನು ಎತ್ತಿ ಎರಡುಭುಜಗಳ 
ಕೋಮಗಳನ್ನು ತೆಗೆದು ಪ್ರತ್ಯೇಕವಾಗಿ ಎರಡು ಸುರುಳಿ ಸುತ್ತಿದನು. ಭೂರ್ಜ 
ಪತ್ರೆಯಿಂದ ಅವೆರಡನ್ನೂ ಸುತ್ತಿ ಬ್ರಾಹ್ಮಣರ ಎಡಕಂಕುಳಲ್ಲಿ ತನ್ನ ಎಡ 
ಕಂಕುಳಿನ ಕೂದಲಿನ ಸುರುಳಿಯನ್ನೂ, ಬಲಕಂಕುಳಲ್ಲಿ ಬಲಕಂಕುಳಿನ 
ಕೂದಲಿನ ಸುರಳಿಯನ್ನೂ ಇಟ್ಟನು. 

೨೮. ರಾಜನು ಕೇಳಿದಾಗ ರಾಮಭಕ್ತನಿಗೆ ಇಷ್ಟಾರ್ಥವನ್ಲೀಯುವುದೂ, 
ರಾಮನ ಶತ್ರುಗಳನ್ನು ನಾಶಗೊಳಿಸುವುದೂ ಆಗಿರುವ ಈ ಗುರುತನ್ನು ಅವನಿಗೆ 
ಕೊಡಿರಿ. 





ಸಪ್ಪತ್ರಿಶೋ$ಧ್ಯಾಯ;। ತಿಳ೧ಣ 


ತದಾ ಪ್ರದೀಯತಾಂ ಶೀಘ್ರಂ ವಾಮಕಕ್ಸೋದ್ಭವಾ ಪುಟೀ। 


ಅಥವಾ ತಸ್ಯ ರಾಜ್ಞಸ್ತು ದ್ವಾರೇ ತು ಪುಟಿಕಾಂ ಕ್ಸಿಸ ॥೨೯॥ 
ಜ್ವಾಲಯತಿ ಚ ತತ್ಸೈನ್ಯಂ ಗೃಹಂ ಕೋಶಂ ತಥೈನ ಚ। 

ಮಹಿಷ್ಯಃ ಪುತ್ರಕಾಃ ಸರ್ವಂ ಜೃಲಮಾನಂ ಭವಿಷ್ಯತಿ ॥೩೦॥ 
ಯದಾತು ವೃ. ತ್ತಿಂಗ್ರಾ ಮಾಂಶ್ಚೆ ವಣಿಜಾನಾಂ ಬಲಾ ತಥಾ । 

ಪೂರ್ವಂ ಸ್ಥಿ ತ ತು ಯತ್ಛಿಂಚಿತ್ಲೆತ್ತ ತ್ತ್ರದ್ಧಾಸ್ಯತಿ ನಾಡನಾಃ ॥೩೧॥ 
ಲಿಖತ್ವಾ ನಿಶ್ಚ ಯಂ ಕೃತ್ವಾಂಪ್ಯಥ ದದ್ಯಾತ | ಪೂರ್ವವತ್‌ । 
ಕರಸಂಸುಟಿಕೆಂ ಕೃತ್ವಾ ಸ್ರಣಮೇಚ್ಛ ಯದಾ ನೃಪಃ ॥ ೩೨॥ 
ಸಂಪ್ರಾಪ್ಯ ಚ ಪುರಾವೃತ್ತಿಂ ರಾಮದತ್ತಾಂ ದ್ವಿಜೋತ್ತಮಾಃ । 

ತತೋ ದಕ್ಸಿಣಕಕ್ಸಾಸ್ಥ ಕೇಶಾನಾಂ ಪುಟಕಾ ತ್ವಿಯಂ ॥ ೩೩ ॥ 
ಪ್ರಕ್ಸಿಸ್ಯತಾಂ ತದಾ ಸೈನ್ಯಂ ಪುರಾನಚ್ಚ ಭನಿಷ್ಯತಿ । 

ಗೃಹಾಣಿ ಚ ತಥಾ ಕೋಶಃ ಪುತ್ರಸೌತ್ರಾವಯಸ್ತಥಾ ॥ ೩೪॥ 


ವಹ್ನಿನಾ ಮುಚ್ಯಮಾನಾಸ್ತೇ ದೃಶ್ಯಂತೇ ತತ್ಕ್ಸಣಾದಿತಿ । 
ಶ್ರುತ್ಹಾಃಮೃತಮಯಂ ವಾಕ್ಯಂ ಹನುಮಂತೋದಿತಂ ಪರಂ ॥ ೩೫॥ 
ಅಲಭಂತ ಮುದಂ ವಿಪ್ರಾ ನನೃತುಃ ಪ್ರಜಗುರ್ಭ್ಯಶಂ । 


ಜಯಂ ಚೋದೈರಯನ್ಸೇಂಪಿ ಪ್ರಹಸಂತಿ ಪರಸ್ಪರಂ ॥ ೩೬॥ 
ಪುಲಕಾಂಕಿತ ಸರ್ವಾಂಗಾಃ ಸ್ತುವಂತಿ ಚ ಮುಹುರ್ಮುಹುಃ । 
ಪುಚ್ಛಂ ತಸ್ಯ ಚ ಸಂಗೃಹ್ಯ ಚುಚುಂಬುಃ ಕೇಚಿದುತ್ಸುಕಾಃ ॥೩೭॥ 


೨೯-೩೨, ಎಡ ಕಂಕುಳಿನ ಕೂದಲನ್ನು ಕೈಯಲ್ಲಿ ಕೊಡಿರಿ ಅಥವಾ ಅವನ 
ಬಾಗಿಲಿನಲ್ಲಿ ಎಸೆಯಿರಿ. ಆಗ ಅದು ಅವನ ಸೈನ್ಯವನ್ನೂ, ಮನೆಯನ್ನೂ 
ಬೊಕ್ಕಸವನ್ನೂ, ರಾಣಿಯರನ್ನೂ, ಮಕ್ಕಳನ್ನೂ ದಹಿಸುವುದು. ಅವನು ಬಂದಿನೆ 
ವೃತಿ ತ್ರಿಯನ್ನೂ, ಗ್ರಾಮಗಳನ್ನೂ ವರ್ತಕರ ಕಾಣಿಕೆಯನ್ನೂ ಮೊದಲಿನಂತೆ 
ಬಳೆದುಕೊಟ್ಟು ಕೈಜೋಡಿಸಿ ನಮಸ್ಕಾರ ಮಾಡುವನು. 

೩೩-೩೭, ಎಲ್ಲೆ ದ್ವಿಜೋತ್ತಮರೆ! ರಾಮನಿತ್ತ ಹಿಂದಿನ ವೃತ್ತಿಯನ್ನು 
ತಿರುಗಿ ಪಡೆದು ಈ ಬಲಕಂಕುಳಿನ ಕೂದಲನ್ನು ಎಸೆಯಿರಿ, ಆಗ ಅವನ ಸೈನ್ಯವೂ. 
ಮನೆಗಳೂ, ಬೊಕ್ಕಸವೂ, ಪುತ್ರಪೌತ್ರಾದಿಗಳೂ ಬೆಂಕಿಯಿಂದ ಕೂಡಲೆ 
ಬಿಡಲ್ಪಟ್ಟು ಮೊದಲಿನಂತೆ ಕಾಣಿಸುವುವು''. ಎಂದನು. ಬ್ರಾಹ್ಮಣರು. 
ಹನುಮಂತನ ಅಮೃತರೂಪವಾದ ಈ ಮಾತನ್ನು ಕೇಳಿ ಸಂತೋಷಗೊಂಡು. 
ಕುಣಿದರು, ಅತ್ಯಂತವಾಗಿ ಹಾಡಿದರು. ಜಯಕಾರಮಾಡಿದರು. ಕೆಲವರು. 
ಪರಸ್ಪರವಾಗಿ ನಕ್ಕರು. ರೋಮಾಂಚಗೊಂಡು ಬಹುವಾಗಿ ಅವನನ್ನು 
ಸ್ತುತಿಸಿದರು. ಕೆಲವರು ಔತ್ಸುಕ್ಯದಿಂದ ಅವನ ಬಾಲವನ್ನು ಹಿಡಿದುಕೊಂಡು 
ಮುದ್ದಿಟ್ಟರು. 


ತ೮೨ ಶ್ರೀ ಸತ್ಕಿ೦ಂದಮಹಾಪುರಾಣಂ 


ಬ್ರೂತೇನ್ಕೋ ಮನು ಯತ್ನೇನ ಕಾರ್ಯಂ ನಿಯತನೇವ ಹಿ । 


ಅನ್ಕ್ಯೋ ಬ್ರೂತೇ ಮಹಾಭಾಗ ಮುಯೇದಂ ಕೃತಮಿತ್ಯುತ ॥ ೩೮ ॥ 
ತತಃ ಪ್ರೋವಾಚ ಹನುಮಾಂಸ್ಟ್ರಿರಾತ್ರಂ ಸ್ಥೀಯತಾಮಿಹ । 
ಕಾಮತೀರ್ಥಸ್ಯ ಚ ಫಲಂ ಯಥಾ ಪ್ರಾಸ್ಟ್ಯಥ ನಾಡವಾಃ ॥೩೯॥ 
ತಥೇತ್ಯುಕ್ತ್ವಾ£ಥ ತೇ ನಿಪ್ರಾ ಬ್ರಹ್ಮಯಜ್ಞಂ ಪ್ರಚಕ್ರಿರೇ । 
ಬ್ರಹ್ಮಘೋಷೇಣ ಮಹತಾ ತದ್ವನಂ ಬಧಿರಂ ಕೃತಂ ॥೪೦॥ 
ಸ್ಥಿತ್ವಾ ತ್ರಿರಾತ್ರಂ ತೇ ನಿಪ್ರಾ ಗಮನೇ ಕೃತಬುದ್ಧಯಃ | 

ರಾತ್ರೌ ಹನುಮತೋಇಗ್ರೇ ತ ಇದಮೂಚುಃ ಸುಭಕ್ತಿತಃ neon 


ಬ್ರಾಹ್ಮಣಾ ಊಚುಃ: 
'ನಯಂ ಪ್ರಾತರ್ಗನಿಷ್ಯಾನೋ ಧರ್ಮಾಂರಣ್ಯಂ ಸುನಿರ್ಮಲಂ ! 


ನ ವಿಸ್ಮಾರ್ಯಾ ವಯಂ ತಾತ ಕ್ಸನ್ಯತಾಂ ಕ್ಸಮ್ಯತಾಮಿತಿ 1 ೪೨॥ 
ತತೋ ನಾಯುಸುತೋ ರಾಜನ್ಪರ್ವತಾನ್ಮಹತೀಂ ಶಿಲಾಂ । 

ಬೃಹತೀಂ ಚ ಚತುಃಶಾಲಾಂ ದಶಯೋಜನಮಾಯತೀಂ ॥ ೪೩॥ 
'ಆಸ್ತೀರ್ಯ ಪ್ರಾಹ ತಾನ್ಮಿಪ್ರಾಂಛಿಲಾಯಾಂ ದ್ವಿಜಸತ್ತಮಾಃ । 
ರಕ್ಷ್ಯಮಾಣಾ ಮಯಾ ವಿಪ್ರಾಃ ಶಯಾಧ್ಯಂ ನಿಗತಜ್ಜರಾಃ ॥ ೪೪ ॥ 
ಇತಿ ಶ್ರುತ್ವಾ ತತಃ ಸರ್ವೇ ನಿದ್ರಾಮಾಪುಃ ಸುಖಪ್ರದಾಂ । 

ಏವಂ ತೇ ಕೃತಕೃತ್ಯಾಸ್ತು ಭೂತ್ವಾ ಸುಪ್ತಾ ನಿಶಾಮುಖೇ 1 ೪೫ ॥ 


೩೮. ಒಬ್ಬನು «ಇದು ನನ್ನ ಪ್ರಯತ್ನದಿಂದಾಯಿತು'' ಎಂದನು. 
ಮತ್ತೊಬ್ಬನು "" ಇದನ್ನು ನಾನು ಮಾಡಿದೆ? ನೆಂದನು. 

೩೯. ಅನಂತರ ಹನುಮಂತನು " ಬ್ರಾಹ್ಮಣರೆ! ನೀವು ಮೂರುರಾತ್ರಿ 
“ಇಲ್ಲಿರಿ. ಅದರಿಂದ ನಿಮಗೆ ರಾಮತೀರ್ಥದ ಫಲವು ಲಭಿಸುವುದು'' ಎಂದನು. 

೪೦. ಬ್ರಾಹ್ಮಣರು ಅವನ ಮಾತನ್ಮೊಪ್ಪಿ ಬ್ರಹ್ಮಯಜ್ಞವನ್ನು ಆರಂಭಿ 
ಸಿದರು. ಅವರ ವೇದಘೋಷದಿಂದ ಆ ವನವು ಕಿವುಡಾಯಿತು. 

೪೧. ಮೂರುರಾತ್ರಿ ಅವರಲ್ಲಿದ್ದು ಹೊರಡಲುದ್ಯುಕ್ತರಾಗಿ ರಾತ್ರಿಯಲ್ಲಿ 
ಹನುಮಂತನನ್ನು ಕಂಡು ಭಕ್ತಿಯಿಂದ ಹೀಗೆಂದರು. 

೪.೨. ಬ್ರಾಹ್ಮಣರು ಹೇಳುತ್ತಾರೆ: ತಾತ! ನಾವು ನಿರ್ಮಲವಾದ 
ಧರ್ಮಾರಣ್ಯಕ್ಕೆ ಹಿಂದಿರುಗುವೆವು. ನಮ್ಮನ್ನು ಮರೆಯಬೇಡ. ಕ್ಸಮಿಸು. 

೪೩-೪೪. ಬಳಿಕ ಆಂಜನೇಯನು ಪರ್ವತದಿಂದ ಹತ್ತುಯೋಜನ ವಿಶಾಲ 
ವಾದ ದೊಡ್ಡಶಿಲೆಯನ್ನು ತಂದುಹಾಸಿ "" ಬ್ರಾಹ್ಮಣರೆ! ನಾನು ರಕ್ಷಿಸುತ್ತೇನೆ. 
ನೀವು ವ್ಯಥೆಯಿಲ್ಲದೆ ಇದರಲ್ಲಿ ಮಲಗಿರಿ'' ಎಂದನು. 

೪೫. ಇದನ್ನು ಕೇಳಿ ಆ ದ್ವಿಜರೆಲ್ಲರೂ ಕೃತಕೃತ್ಯರಾಗಿ ಆ ಶಿಲೆಯಲ್ಲಿ ರಾತ್ರಿ 
ಮಲಗಿ ಸುಖನಿದ್ರೆಗೈ ದರು. 


ಸಪ್ತತ್ರಿಂಶೋ5ಧ್ಯಾಯ॥ 4೮೩ 


ಕೃಪಾಲುಃ ಸ ಚ ರುದ್ರಾತ್ಮಾ ರಾಮಶಾಸನಪಾಲಕಃ । 

ರಕ್ಸಣಾರ್ಥಂ ಹಿ ವಿಪ್ರಾಣಾಮತಿಸ್ಮಚ್ಚ ಧರಾತಲೇ ॥ ೪೬೫ 
ವ್ಯಾಸ ಉವಾಚ: 

ಅರ್ಧರಾತ್ರೇ ತು ಸಂಪ್ರಾಪ್ತೇ ಸರ್ವೇ ನಿದ್ರಾಮುಪಾಗತಾಃ । 

ತಾತಂ ಸಂಪ್ರಾರ್ಥಯಾಮಾಸ ಕೃತಾನುಗ್ರಹಕೋ ಭವಾನ್‌ ॥ಳ೪೭॥ 

ಸಮಾರಣ ದ್ವಿಜಾನೇತಾನ್ಸ್ಯಾನಂ ಸ್ವಂ ಪ್ರಾಪಯಸ್ವ ಭೋಃ । 


ತತೋ ನಿದ್ರಾಭಿಭೂತಾಂಸ್ತಾನ್ವಾಯುಪುತ್ರಪ್ರ ಣೋದಿತಃ ॥ ೪೮ ॥ 
ಸಮುದ್ಧೃತ್ಯ ಶಿಲಾಂ ತಾಂ ತು ಪಿತಾ ಪುತ್ರೇಣ ಭಾರತ । 
ನಿಶಿಷ್ಟೋ ಯಾಪಯಾಮಾಸ ಸ್ವಸ್ಥಾನಂ ದ್ವಿಜಸತ್ತಮಾನ್‌ ॥೪೯॥ 


ಷಡ್ಭಿರ್ಮಾಸೈಶ್ಚ ಯಃ ಪಂಥಾ ಅತಿಕ್ರಾಂತೋ ದ್ವಿಜಾತಿಭಿಃ । 
ತ್ರಿಭಿರೇವ ಮುಹೂರ್ತೈಸ್ತು ಧರ್ಮಾಂರಣ್ಯಮವಾಪ್ತವಾನ್‌ ॥ ೫೦॥ 
ಭ್ರಮಮಾಣಾಂ ಶಿಲಾಂ ಜ್ಞಾತ್ವಾ ವಿಪ್ರ ಏಕೋ ದ್ವಿಜಾಂಗ್ರತಃ । 


ವಾತ್ಸ್ಯಗೋತ್ರಸಮುತ್ಸನ್ನೋ ಲೋಕಾನ್ಸಂಗೀತವಾನ್ಯಲಂ ॥೫೧॥ 
ಗೀತಾನಿ ಗಾಯನೋಕ್ತಾನಿ ಶ್ರುತ್ವಾ ನಿಸ್ಮಯಮಾಯಯುಃ । 

ಪ್ರಭಾತೇ ಸುಪ್ರಸನ್ನೇ ತು ಉದತಿಷ್ಮನ್ಸರಸ್ಸರಂ ॥ ೫೨% 
ಊಚುಸ್ತೇ ವಿಸ್ಮಿತಾಃ ಸರ್ವೇ ಸ್ಪಸ್ನೋಂಯಂ ವಾಂಥ ವಿಭ್ರಮಃ ! 

ಸ ಸಂಭ್ರಮಾಃ ಸಮುತ್ಥಾಯ ದದೃಶುಃ ಸತ್ಯಮಂದಿರಂ ॥ ೫೩॥ 








೪೬. ದಯಾಳುವೂ, ಭಯಂಕರರೂಸನೂ, ರಾಮನ ಶಾಸನವನ್ನು 
ಕಾಪಾಡುವವನೂ ಆದ ಆಂಜನೇಯನು ತಾನು ವಿಪ್ರರ ರಕ್ಸಣೆಗಾಗಿ ಭೂಮಿ. 
ಯಲ್ಲಿ ಠಿಂತನು. 

೪೭-೪೯. ವ್ಯಾಸನು ಹೇಳುತ್ತಾನೆ: ಆ ಬ್ರಾಹ್ಮಣರೆಲ್ಲರೂ ನಿದ್ರಿಸಿರಲು 
ಆಂಜನೇಯನು ಅರ್ಧರಾತ್ರಿಯಲ್ಲಿ ತಂದೆಯಾದ ವಾಯುವನ್ನು ಕುರಿತು ""ನೀನು 
ದಯೆಮಾಡಿ ಈ ಬ್ರಾಹ್ಮಣರನ್ನು ಅವರ ಸ್ಥಳಕ್ಕೆ ಸೇರಿಸು'' ಎಂದು ಪ್ರಾರ್ಥಿ 
ಸಲು ವಾಯುಜೀವನು ಮಗನು ಹೇಳಿದಂತೆ ಆ ಶಿಲೆಯನ್ನು ಎತ್ತಿ ಎಲ್ಲ 
ಬ್ರಾಹ್ಮಣರನ್ನೂ ಅವರ ಸ್ಥಾನಕ್ಕೆ ಸಾಗಿಸಿದನು. 

೫೦. ಆ ಬ್ರಾಹ್ಮಣರು ತಾವು ಆರುತಿಂಗಳಿಂದ ನಡೆದ ದಾರಿಯನ್ನು 
ಮೂರು ಮುಹೂರ್ತಗಳಲ್ಲಿ ದಾಟ ಧರ್ಮಾರಣ್ಯವನ್ನು ಸೇರಿದರು. 

೫೧. ವಾತ್ಸ್ಯಗೋತ್ರದಲ್ಲಿ ಹುಟ್ಟಿದ ಒಬ್ಬ ಬ್ರಾಹ್ಮಣನು ಶಿಲೆಯು. 
ತಿರುಗುವುದನ್ನು ತಿಳಿದು ಬ್ರಾಹ್ಮಣರ ಮುಂದೆ ಇಂಪಾಗಿ ಹಾಡಿದನು. 

೫೨-೫೩, ಆ ಹಾಡನ್ನು ಕೇಳಿ ಎಲ್ಲರೂ ಅತ್ಯಂತ ಆಶ್ಚರ್ಯಗೊಂಡರು. 
ಬೆಳಗ್ಗೆ ಎದ್ದು ಸತ್ಯಮಂದಿರವನ್ನು ಕಂಡು ಆಶ್ಚರ್ಯದಿಂದ ಇದು ಸ್ವಪ್ನವೊ? 
ಅಥವಾ ಭ್ರಾಂತಿಯೊ? ಎಂದು ಪರಸ್ಪರ ಮಾತಾಡಿಕೊಂಡರು. 


೪೪ ಶ್ರೀ ಸ್ಕಾಂಡಮಹಾಪುರಾಣಂ 


ಅಂತರ್ಬುದ್ಧ್ಯಾ ಸಮಾಲೋಕ್ಕ ಪ್ರಭಾವೋ ವಾಯುಜಸ್ಯ ಚ 


ಶ್ರುತ್ವಾ ವೇದಧ್ವನಿಂ ವಿಪ್ರಾಃ ಪರಂ ಹರ್ಷಮುಪಾಗತಾಃ ॥ ೫೪ ॥ 
ಗ್ರಾಮಾಣಾಶ್ಚ ತತೋ ಲೋಕಾ ದೃಷ್ಟಾ ತು ಮಹತೀಂ ಶಿಲಾಂ । 
ಅದ್ಭುತಂ ಮೇನಿರೇ ಸರ್ವೇ ಕಿಮಿದಂ ಕಿಮಿದಂ ತ್ಮಿತಿ 1 ೫೫ 8 


ಗೃಹೇಗೃಹೇಹಿ ತೇ ಲೋಕಾಃ ಪ್ರವದಂತಿ ತಥಾದ್ಭುತಂ | 

ಬ್ರಾಹ್ಮಣೈಃ ಸೂರ್ಯಮಾಣಾ ಸಾ ಶಿಲಾ ಚ ಮಹತೀ ಶುಭಾ ॥ ೫೬8 
ಅಶುಭಾ ನಾ ಶುಭಾ ವಾಪಿ ನ ಜಾನೀಮೋ ವಯಂ ಕಲ! 
ಸಂವಡಂತೇ ತತೋ ಲೋಕಾಃ ಪರಸ್ಪರನಿದಂ ವಚಃ ॥೫೭॥ 

ವ್ಯಾಸ ಉವಾಚ:- 

ತತೋ ದ್ವಿಜಾನಾಂ ತೇ ಪುತ್ರಾಃ ಸೌತ್ರಾಶ್ಚೆನ ಸಮಾಗತಾಃ । 

'ಊಚುಸ್ತೇ ದಿಷ್ಟ್ಯಾ ಭೋ ವಿಪ್ರಾ ಆಗತಾಃ ಪಥಿಕಾ ದ್ವಿಜಾಃ ॥ ೫೮8 
ತೇ ತು ಸಂತುಷ್ಟಮನಸಾ ಸನ್ಮುಖಾಃ ಪ್ರಯಯುರ್ಮುದಾ । 


ಪ್ರತ್ಯುತ್ಥಾನಾಂಭಿವಾದಾಭ್ಯಾಂ ಪರಿರಂಭಣಕಂ ತಥಾ ॥೫೯॥ 
ಆಫಘ್ರಾಣಕಾದೀಂಶ್ಚ ಕೃತ್ವಾ ಯಥಾಯೋಗ್ಯಂ ಪ್ರಪೂಜ್ಯ ಚ । 

ಸರ್ವಂ ವಿಸ್ತಾರ್ಯ ಕಥಿತಂ ಶೀಘ್ರಮಾಗಮಮಾತ್ಮನಃ ॥೬೦॥ 
ತತಃ ಸಂಪೂಜ್ಯ ತಾನ್ಸರ್ವಾನ್ನಂಧತಾಂಬೂಲಕುಂಕುಮೈಃ । 

ಶಾಂತಿಸಾಠಂ ಪಠಂತಸ್ತೇ ಹೃಷ್ಟಾ ನಿಜಗೃಹಾನ್ಯಯುಃ ॥೬೧॥ 


೫೪-೨೫೫. ಬಳಿಕ ಜ್ಞಾನದೃಷ್ಟಿಯಿಂದ ಹನೂಮಂತನ ಪ್ರಭಾವದಿಂದ 
ಆಗಿರುವ ಆ ಕಾರ್ಯವನ್ನರಿತು ಅಲ್ಲಿ ಬ್ರಾಹ್ಮಣರ ವೇದಘೋಷವನ್ನು ಕೇಳಿ 
ಬಹಳ ಸಂತೋಷಗೊಂಡರು. ಗ್ರಾಮದವರು ಆ ದೊಡ್ಡ ಶಿಲೆಯನ್ನು ಕಂಡು 
ಇದೇನೆಂದು ಅಚ್ಚರಿಗೊಂಡರು. 

೫೬-೫೭. "ಬ್ರಾಹ್ಮಣರಿಂದ ತುಂಬಿದ ಈ ದೊಡ್ಡ ಶಿಲೆಯು ಒಳ್ಳೆಯದ 
ನ್ನುಂಟುಮಾಡುವುದೊ ಅಥವಾ ಕೆಟ್ಟುದನ್ನುಂಟುಮಾಡುವುದೊ ನಾವರಿಯೆವು?' 
ಎಂದು ಪ್ರತಿ ಮನೆಯಲ್ಲಿಯೂ ಜನರು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. 

೫೮-೬೧. ವ್ಯಾಸನು ಹೇಳುತ್ತಾನೆ:--ಬಳಿಕ ಆ ಬ್ರಾಹ್ಮಣರ ಮಕ್ಕಳೂ, 
ಮೊಮ್ಮಕ್ಕಳೂ ಬಂದು ಬಂದು, ""ಬಹುದೂರ ಪ್ರಯಾಣಮಾಡಿದ ನೀವು ಅದೃಷ್ಟ 
ವಶದಿಂದ ಬಂದಿರಲ್ಲ!?' ಎಂದು ಸಂತೋಷದಿಂದ ಪ್ರತ್ಯುತ್ಥಾನ, ನಮಸ್ಕಾರ, 
ಆಲಿಂಗನ, ಮಸ್ತಕಾಘ್ರಾಣ ಮೊದಲಾದುವುಗಳನ್ನು ಮಾಡಿ ವಿಧಿಯಂತೆ 
ಗಂಧಾದಿಗಳಿಂದ ಪೂಜಿಸಿ ವಿಸ್ತಾರವಾಗಿ ಹೇಳಿದ ಅವರ ಆಗಮನ ಕ್ರಮವನ್ನು 
ಕೇಳಿ ಶಾಂತಿಪಾಠವನ್ನು ಪಠಿಸುತ್ತ ಸಂತೋಷದಿಂದ ತಮ್ಮ ಮನೆಗಳಿಗೆ 
ಹೊರಟುಹೋದರು. 


ಸಪ್ತತ್ರಿಂಶೋಧ್ಯಾಯಃ ಷಿಲಜ 


ಆನಂದಾಯಾ ಮಹಾಪೀಠೇ ಪ್ರಾತಃ ಸಾಂಥಾಃ ಸಮುತ್ನಿತಾಃ | 


ದದೃಶುಸ್ತೇ ಮಹಾಸ್ಥಾನಂ ಸೋತ್ಕಂಠಾ ಹರ್ಷಪೂರಿತಾಃ ॥ ೬೨॥ 
ಆಶ್ಚರ್ಯಂ ಪರಮಂ ಪ್ರಾಪುಃ ಕಿಮೇತತ್ಸ್ಟಾನಮುತ್ತಮಂ | 
ಅಯಂ ತು ದಕ್ಷಿಣದ್ದಾರೇ ಶಾಂತಿಪಾಶೋತ್ರ ಪಠ್ಯತೇ ॥ ೬೩॥ 


ಗೃಹಾ ರಮ್ಯಾಃ ಪ್ರದೃಶ್ಯಂತೇ ಶಚೀಪತಿಗೃಹೋಪಮಾಃ । 

ಪ್ರಾಸಾದಾಃ ಕುಲಮಾತ್ಯೂಣಾಂ ದೃಶ್ಯಂತೇ ಚಾಂಗ್ಸಿಶೋಭನಾಃ ॥ ೬೪ ॥ 
ಏನಂ ಬ್ರುನತ್ಸು ನಿಪ್ರೇಷು ಮಹಾಶಕ್ತಿ ಪ್ರಪೂಜನೇ । 

ಆಗತೋ ಬ್ರಾಹ್ಮಣೋ ಪಶ್ಯತ್ತತ್ರ ನಿಪ್ರಕದಂಬಕಂ ॥ ೬೫ ॥ 
ಹರ್ಷಿತೋ ಭಾವಿತಸ್ತತ್ರ ಯತ್ರ ವಿಪ್ರಾಃ ಸಭಾಸದಃ । 

ಉನಾಚ ದಿಷ್ಟ್ಯಾ ಭೋ ನಿಪ್ರಾ ಹ್ಯಾಗತಾಃ ಪಥಿಕಾ ದ್ವಿಜಾಃ ॥ ೬೬॥ 
ಪ್ರತ್ಯುತ್ತಸ್ಲುಸ್ತತೋ ವಿಪ್ರಾಃ ಪೂಜಾಂಗೃಹ್ಯ ಸಮಾಗತಾಃ । 
ಪ್ರತ್ಯುತ್ಥಾನಾಃಭಿವಾದೌ ಚಾಂಕುರ್ವಂಸ್ತೇ ಚ ಸರಸ್ಪರಂ ॥೬೭॥ 
ತೇತೇ ಸಂಪೂಜ್ಯ ನೇಗಾತ್ತು ಯಥಾಯೋಗ್ಯಂ ಯಥಾವಿಧಿ । 
ಹರೀಶ್ಚರಸ್ಯ ಯದ್ವೃತ್ತಂ ನಿಪ್ರಾಗ್ರೇ ಸಂಪ್ರಕಾಶಿತಂ ॥ ೬೮॥ 
ಪಥಿಕಾನಾಂ ನಚಃ ಶ್ರುತ್ವಾ ಹರ್ಷಪೂರ್ಣಾ ದ್ವಿಜೋತ್ತಮಾಃ । 
ಶಾಂತಿಸಾಠಂ ಪಠಂತಸ್ತೇ ಹೃಷ್ಟಾ ನಿಜಗೃಹಾನ್ಯಯುಃ ॥೬೯॥ 


೬೨. ಬೆಳಗ್ಗೆ ಆ ಬ್ರಾಹ್ಮಣರು ಎದ್ದು ಆನಂದಾಪೀಠದಲ್ಲಿರುವ ಆ ಮಹಾ 
ಸ್ಥಾನವನ್ನು ಕಂಡು ಅತ್ಯಂತ ಸಂತೋಷಗೊಂಡರು. 

೬೩, ಆಶ್ಚರ್ಯಗೊಂಡು «(ಘು ಸ್ಥಳವಾವುದು? ಇದರ ಬಲಗಡೆಯಲ್ಲಿ 
ಶಾಂತಿಪಾಠವು ಪಠಿಸಲ್ಪಡುತ್ತಿದೆ. 

೬೪. ಇಂದ್ರನ ಮನೆಯಂತಿರುವ ರಮ್ಯಭವನಗಳೂ, ಅಗ್ಲಿಯಂತ್ರೆ ಬಹು 
ಮನೋಹರವಾಗಿ ಬೆಳಗುವ ಕುಲಮಾತೆಯರ ಪ್ರಾಸಾದಗಳೂ ಕಾಣುತ್ತಿವೆ.” 

೬೫, ಹೀಗೆ ಅವರು ಮಾತನಾಡಿಕೊಳ್ಳುತ್ತಿರಲು ಮಹಾ ಶಕ್ತಿ ಪೂಜೆಗೆ 
ಬಂದ ಬ್ರಾಹ್ಮಣರು ಅವರ ಗುಂಪನ್ನು ಕಂಡರು. 

೬೬. ಅವರು ಅಲ್ಲಿ ಸಭೆಯಲ್ಲಿ ಕುಳಿತಿರುವ ಬ್ರಾಹ್ಮಣರನ್ನು ಕಂಡು "" ಬಹು 
ದೂರ ಪ್ರಯಾಣಮಾಡಿದ ನೀವು ಅದೃಷ್ಟವಶದಿಂದ ಬಂದಿರಿ” ಎಂದರು. 

೬೭-೬೮. ಆ ಬ್ರಾಹ್ಮಣರು ಮಹಾಶಕ್ತಿ ಪೂಜಕರನ್ನು ಪರಸ್ಪರ ಪ್ರತ್ಯು 
ತ್ಥಾನಾದಿಗಳಿಂದ ಸನ್ಮಾನಿಸಿ ಅವರಿಂದ ಪೂಜೆಯನ್ನು ಪರಿಗ್ರಹಿಸಿ ತಾವೂ 
ವಿಧಿಯಂತೆ ಅವರನ್ನು ಪೂಜಿಸಿ ಆಂಜನೇಯನ ವೃತ್ತಾಂತವನ್ನು ತಿಳಿಸಿದರು. 

೬೯. ಅವರು ಪಥಿಕರಾದ ಈ ಬ್ರಾಹ್ಮಣರ ಮಾತನ್ನು ಕೇಳಿ ಸಂತೋಷ 
ಗೊಂಡು ಶಾಂತಿಪಾಠವನ್ನು ಪಠಿಸುತ್ತ ಮನೆಗೆ ತೆರಳಿದರು. 


ತಲ ಶ್ರೀ ಸ್ಕಾಂದಮಹಾಪುರಾಣಂ 


ನಿಮೃಶ್ಯ ಮಿಲಿತಾಃ ಪ್ರಾತರ್ಜ್ಯ್ಯೋತಿರ್ನಿದ್ದೀ ಪ್ರತಿಷ್ಠಿತಾಃ I 
ಬ್ರಾಹ್ಮೇ ಮುಹೂರ್ತೇ ಚಜೋತ್ಕಾಯ ಕಾನ್ಯಕುಬ್ಬಂ ಗತಾ ದ್ವಿಜಾಃ ॥೭೦॥ 
ದೋಲಾಭಿರ್ನಾಹಿತಾಃ ಕೇಚಿತ್ಯೇಚಿದಶ್ಟೈ ರಥೈಸ್ತಥಾ । 


ಕೇಚಿತ್ತು ಶಿಬಿಕಾರೂಢಾ ನಾನಾನಾಹನಗಾಶ್ಚ ತೇ ॥ ೭೧॥ 
ತತ್ಪುರಂ ತು ಸಮಾಸಾದ್ಯ ಗಂಗಾಯಾಃ ಶೋಭನೇ ತಟೇ । 
ಅಕುರ್ವನ್ಹಸತಿಂ ಧೀರಾಃ ಸ್ನಾನದಾನಾದಿ ಕರ್ಮ ಚ ॥ ೭೨॥ 


ಚರೇಣ ಕೇನಚಿದ್ದೃಷ್ಟಾಃ ಕಥಿತಾ ಸೈಸಸನ್ನಿಧೌ | 

ಅಶ್ವಾಶ್ಚ ಬಹುಶೋ ದೋಲಾ ರಥಾಶ್ಚ ಬಹುಶೋ ನೃಷಾಃ ॥೭೩॥ 
ವಿಪ್ರಾಣಾನಿಹ ದೃಶ್ಯಂತೇ ಧರ್ಮಾಂರಣ್ಯನಿವಾಸಿನಾಂ । 

ನೂನಂ ತೇ ಚ ಸಮಾಯಾತಾ ನೃಷೇಣೋಕ್ತಂ ಮಮಾಗ್ರತಃ ॥ ೭೪॥ 
ಅಭಿಜ್ಞಾಪಯ ಮೇ ಪೂರ್ವಂ ಪ್ರೇಷಿತಾಃ ಕಸಿಸನ್ನಿಧೌ ॥ ೭೫ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾ9ರಣ್ಯವರಾಹಾತ್ಮ್ಯೇ 
"ಬ್ರಾಹ್ಮಣಾನಾಂ ಪ್ರತ್ಯಾಗಮನವರ್ಣನಂ ?'ನಾಮ ಸಪ್ತತ್ರಿಂಶೋತಧ್ಯಾಯಃ 


೭೦. ತರುವಾಯ ಆ ಪಥಿಕಬ್ರಾಹ್ಮಣರು ಒಟ್ಟುಸೇರಿ ಜೋಯಿಸರೊಡನೆ 
ಆಲೋಚಿಸಿ ಬ್ರಾಹ್ಮಮುಹೂರ್ತದಲ್ಲಿ ಕಾನ್ಯಕುಬ್ಜಕ್ಕೆ ಹೊರಟರು. 

೭೧. ಅವರಲ್ಲಿ ಕೆಲವರು ಮೇನವನ್ನೂ, ಕೆಲವರು ಕುದುರೆಗಳನ್ನೂ 
ಕೆಲವರು ರಥಗಳನ್ನೂ, ಕೆಲವರು ಪಲ್ಲಕ್ಕಿಯನ್ನೂ ಏರಿ ನಾನಾ ವಾಹನಗಳಿಂದ 
ಪ್ರಯಾಣಮಾಡಿದರು. 

೭೨. ಆ ಕಾನ್ಯುಕುಬ್ಬವನ್ನು ಸೇರಿ ಗಂಗೆಯ ರಮ್ಯವಾದ ತೀರದಲ್ಲಿ ವಸತಿ 
ಯನ್ನು ಕಲ್ಪಿಸಿಕೊಂಡು ಸ್ಲಾನದಾನಾದಿಕರ್ಮಗಳನ್ನು ಪೂರೈಸಿದರು. 

೭೩-೭೫. ಆಗ ಒಬ್ಬ ದೂತನು ಇವರನ್ನು ಕಂಡು ರಾಜನ ಹತ್ತಿರ 
ಹೋಗಿ, "" ಧರ್ಮಾರಣ್ಯವಾಸಿಗಳಾದ ಬ್ರಾಹ್ಮಣರ ಕುದುರೆಗಳೂ, ಮೇನಗಳೂ, 
ರಥಗಳೂ, ಎತ್ತುಗಳೂ ಬಹಳವಾಗಿ ಕಾಣುತ್ತಿವೆ” ಎಂದನು. ರಾಜನು ಹಿಂದೆ 
ಆಂಜನೇಯನ ಬಳಿಗೆ ಕಳುಹಿಸಿದ ಬ್ರಾಹ್ಮಣರು ಬಂದಿರಬೇಕೆಂದು ಹೇಳಿದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮ ಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಮ್ಯದಲ್ಲ "" ಬ್ರಾಹ್ಮಣಪ್ರತ್ಯಾಗಮನ ''ವೆಂಬ 
ಮೂವತ್ತೇಳನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥಾತಷ್ಟತ್ತಿ ತ್ರಿಂಶೋಧ್ಯಾಯಃ 
ಬ್ರಾ ಹ್ಮ ಣಾನಾಂ ಶಾಸನವೃತ್ತಿಸ್ರಾಸ್ತಿವರ್ಣನಂ 

ವ್ಯಾಸ ಉವಾಚ: 
ತತಃ ಪ್ರಭಾತೇ ನಿಮಲೇ ಕೃತಪೂರ್ವಾಹ್ನಿಕಕ್ರಿಯಾಃ । 

ಶುಭ್ರ ಫಸ ಸ್ತ್ರ ಪರೀಧಾನಾಃ ಫಲಹಸ್ತಾ $ ಹೆ! ಥಕ ಥಕ್‌ 1 ೧॥ 
ರತ್ಪಾ ಂಗಣಢ್ಯದೋರ್ಡಂಡಾ ಎಂಗ ಪ್‌ | 
ಕರ್ಣಾಭರಣಸಂಯುಕ್ತಾಃ ಸಮಾಜಗ್ಮುಃ ಪ್ರಹರ್ಷಿತಾಃ ॥ ೨॥ 
ರಾಜದ್ವಾರಂ ತು ಸಂಪ್ರಾಪ್ಯ ಸಂತಸ್ಸುಬ್ಬ ರ್ಬ್ರ್ಮಣ್ಮಃ ವಾದಿನಃ । 
ತಾನ ಸ ರಾಜಪುತ್ರ ಸು ಈಷತ್ರ *ಹಸಿತೋ ಬಲೀ 1೩॥ 
ರಾಮಂ ಚ ಹನುಮಂತಂ ಜೆ ಗತ್ನಾ” ನಿಪ್ರಾಃ ಸಮಾಗತಾಃ । 
ಶ್ರೂಯತಾಂ ಮಂತ್ರಿಣಃ ಸರ್ವೇ ದೃಶ್ಯಂತೋ ದ್ವಿಜಸತ್ತಮಾನ್‌ ॥ ೪॥ 
ಏತದುಕ್ತ್ವಾ ತು ವಚನಂ ತೂಷ್ಲೀಂ ಭೂತ್ವಾ ಸ್ಥಿತೋ ನೃಪಃ । 


ತತೋ ದ್ವಿತ್ರಾ ದ್ವಿಜಾಃ ಸರ್ವೇ ಉಪನಿಷ್ಟಾಃ ಕ್ರಮಾತ್ರತಃ ॥೫॥ 
ಕ್ಸೇಮಂ ಪಪ್ರಚ್ಛುರ್ನ್ವಪತಿಂ ಹಸ್ತಿರಥಪದಾತಿಷು । 
ತತಃ ಪ್ರೋವಾಚ ನೃಪತಿರ್ನಿಪ್ರಾನ್ರ್ರತಿ ಮಹಾಮನಾಃ ॥೬॥ 
ಅರ್ಹಂತಸ್ಯ ಪ್ರಸಾದೇನ ಸರ್ವತ್ರ ಕುಶಲಂ ಮಮ । 
ಸಾ ಜಿಹ್ಮಾ ಯಾ ಜಿನಂ ಸ್ತೌತಿ ತೌ ಕರೌ ಯೌ ಜಿನಾರ್ಚನೌ 1೭॥ 


ಕನ್ನಡದ ಅನುವಾದ 
ಬ್ರಾ ಹ್ಮ ಣ ಶಾಸನವೃತ್ತಿಸ್ರಾಪ್ತಿವರ್ಣನ 

೧-೫. ವ್ಯಾಸನು ಹೇಳುತ್ತಾ ನೆ: ಬಳಿಕ ಬೆಳಗ್ಗೆ ಆ ಬ್ರಾಹ್ಮಣರು ಪ್ರಾತ 
ಸ್ಪಂಧ್ಯೋಪಾಸನೆಮಾಡಿ ಮಂಗಳವಸ ಸ್ತ್ರಗಳನ್ನುಟ್ಟು ಫಲಗಳನ್ನು ಕೈಯಲ್ಲಿ ಹಿಡಿದು 
ರತ್ನದ ನಾಗಮುರಿಗೆ, ಉಂಗುರ, ಕುಂಡಲ ಇವುಗಳಿಂದ ಭೂಷಿತರಾಗಿ 
ಸತರ ರಾಜದ್ವಾರಕ್ಕೆ ಬಂದು ನಿಂತರು. ಅವರನ್ನು ನೋಡಿ ರಾಜನು 
ಸ್ವಲ್ಪ ನಕ್ಕು, ""ಮಂತ್ರಿಗಳೆ! ಕೇಳಿರಿ ಬ್ರಾಹ್ಮಣರು ರಾಮಾಂಜನೇಯರ 
ಬಳಿಗೆ ಹೋಗಿಬಂದಿದ್ದಾರೆ ನೋಡಿರಿ?” ಎಂದು ಹೇಳಿ ಸುಮ್ಮನಾದನು. 
ಅನಂತರ ಬ್ರಾಹ್ಮಣರು ಇಬ್ಬಿಬ್ಬರೂ ಮೂವರು ಮೂವರೂ ಒಟ್ಟಾಗಿ ಕ್ರಮವಾಗಿ 
ಕುಳಿತುಕೊಂಡರು. 

೬. ರಾಜನನ್ನು "" ನೃಪ! ಆನೆ, ರಥ, ಕಾಲಾಳುಗಳೊಡನೆ ನೀನು 
ಕ್ಸೇಮವೆ?'' ಎಂದು ಕೇಳಲು, ಅವನು ಬ್ರಾಹ್ಮಣರನ್ನು ಕುರಿತು ಇಂತೆಂದನು. 
೭-೧೦. ""ಅರ್ಹಂತನ ಅನುಗ್ರಹದಿಂದ ನಾನು ಎಲ್ಲ ವಿಷಯದಲ್ಲಿಯೂ 
ಕ್ಪೇಮವಾಗಿರುವೆನು. ಜಿನನನ್ನು ಸ್ತುತಿಸುವ ನಾಲಿಗೆಯೇ ನಾಲಿಗೆಯು. 


೩೮೮ ಶ್ರೀ ಸ್ಮಾಂದಮಹಾಪುರಾಣಂ 


ಸಾ ದೃಷ್ಟಿರ್ಯಾ ಜಿನೇ ಲೀನಾ ತನ್ಮನೋ ಯಜ್ಞೆನೇ ರತಂ | 


ದಯಾ ಸರ್ವತ್ರ ಕರ್ತವ್ಯಾ ಜೀನಾತ್ಮಾ ಪೂಜ್ಯತೇ ಸದಾ nen 

ಯೋಗಶಾಲಾ ಹಿ ಗಂತವ್ಯಾ ಕರ್ತವ್ಯಂ ಗುರುವಂದನಂ । 

ನಚಕಾರಂ ಮುಹಾಮಂತ್ರಂ ಜಪಿತನ್ಯಮಹರ್ನಿಶಂ ॥೯॥ 

ಪಂಚೂಷಣಂ ಹಿ ಕರ್ತವ್ಯಂ ದಾತವ್ಯಂ ಶ್ರಮಣೇ ಸದಾ । 

ಶ್ರುತ್ವಾ ವಾಕ್ಯಂ ತಪೋ ವಿಪ್ರಾಸ್ತಸ್ಯ ದಂತಾನಸೀಡಯನ್‌ ॥ ೧೦॥ 

ನಿಮುಚ್ಯ ದೀರ್ಥನಿಃಶ್ಛಾಸಮೂಚುಸ್ತೇ ನೃಪತಿಂ ಪ್ರತಿ । 

ರಾಮೇಣ ಕಥಿತಂ ರಾಜನ್ಸೀಮತಾ ಚ ಹನೂಮತಾ ॥ ೧೧॥ 

ದೀಯತಾಂ ವಿಪ್ರನೃತ್ತಿಂ ಚ ಧರ್ಮಿಷ್ಕೋಸಿ ಧರಾತಲೇ | 

ಜ್ಞಾಯತೇ ತನ ದತ್ತಾ ಸ್ಯಾನ್ಮದ್ದತ್ತಾ ನೈವ ನೈನ ಚ ॥ ೧೨ ೫ 

ರಕ್ಷಸ್ಪ ರಾಮವಾಕ್ಯಂ ತ್ವಂ ಯತೃತ್ವಾ ತ್ವಂ ಸುಖೀಭವ ॥ ೧೩ ॥ 
ರಾಜೋವಾಚ: 

ಯತ್ರ ರಾಮಹನೂಮಂತೌ ಯಾಂತು ಸರ್ವೇಃಪಿ ತತ್ರವೈ। 

ರಾಮೋ ದಾಸ್ಯತಿ ಸರ್ವಸ್ಯಂ ಕಂ ಪ್ರಾಪ್ತಾ ಇಹ ವೈ ದ್ವಿಜಾಃ ॥ ೧೪॥ 

ನ ದಾಸ್ಯಾಮಿ ನ ದಾಸ್ಯಾಮಿ ಏಕಾಂ ಚೈನ ವರಾಟಕಾಂ । 

ನ ಗ್ರಾಮಂ ನೈನ ವೃತ್ತಿಂ ಚ ಗಚ್ಛಧ್ವಂ ಯತ್ರ ರೋಚತೇ ॥ ೧೫ ॥ 


ಅವನನ್ನು ಪೂಜಿಸುವ ಕೈಗಳೇ ಕ್ಸೆಗಳು. ಅವನನ್ನು ಕಾಣುವ ಕಣ್ಣೇ ಕಣ್ಣು. 
ಅವನಲ್ಲಿ ಆಸಕ್ತವಾದ ಮನಸ್ಸೇ ಮನಸ್ಸು. ಸಕಲಪ್ರಾಣಿಗಳಲ್ಲಿಯೂ ದಯೆಯಿಡ 
ಬೇಕು. ಜೀವನನ್ನು ಯಾವಾಗಲೂ ಪೂಜಿಸಬೇಕು. ಯೋಗಶಾಲೆಗೆ ಹೋಗಿ 
ಗುರುಗಳನ್ನು ವಂದಿಸಬೇಕು. ಪ್ರತಿದಿನವೂ ನಚಕಾರ ಮಹಾಮಂತ್ರವನ್ನು 
ಜಪಿಸಬೇಕು. ಪಂಚೂಷಣವನ್ನು ಮಾಡಬೇಕು. ಶ್ರಮಣರಿಗೆ ಯಾವಾಗಲೂ 
ದಾನಮಾಡಬೇಕು?' ಎಂದನು. ಬ್ರಾಹ್ಮಣರು ಅವನ ಮಾತನ್ನು ಕೇಳಿ ಹಲ್ಲು 
ಗಳನ್ನು ಕಟಕಟನೆ ಕಡಿದರು. 

೧೧-೧೩. ಸಿಟ್ಟುಸಿರುಬಿಟ್ಟು ಅವರು ರಾಜನನ್ನು ಕುರಿತು, ಮಹಾರಾಜ! 
" ಬ್ರಾಹ್ಮಣರ ವೃತ್ತಿಯನ್ನು ಮರಳಿ ಕೊಡು. ನೀನು ಧರ್ಮಿಷ್ಠನಾಗಿದ್ದೀಯೆ. 
ಭೂಮಿಯಲ್ಲಿ ನೀನು ದಾನಮಾಡಿದ್ದೆಂದೇ ಅದು ಪ್ರಸಿದ್ಧಿ ಗೊಳ್ಳಲಿ. ನಾನು 
ಕೊಟ್ಟುದೆಂಬ ಪ್ರಸಿದ್ದಿಬೇಡ' ಎಂದು ರಾಮಾಂಜನೇಯರು ಹೇಳಿದ್ದಾರೆ. 
ಆ ರಾಮನ ಮಾತನ್ನು ನಡಸಿ ಸುಖದಿಂದ ಬಾಳು'' ಎಂದರು. 

೧೪-೧೫. ರಾಜನು ಹೇಳುತ್ತಾನೆ :-ಅಯ್ಯಾ ದ್ವಿಜರೇ! ರಾಮಾಂಜನೇಯ 
ರಿರುವೆಡೆಗೇನೆ ನೀವು ತೆರಳಿರ. ನಿಮಗೆ ರಾಮನು ಎಲ್ಲವನ್ನೂ ಕೊಡುವನು. 
ಇಲ್ಲಿಗೆ ಏಕೆ ಬಂದಿರಿ? ನಿಮಗೆ ಗ್ರಾಮವನ್ನಾಗಲಿ, ವೃತ್ತಿಯನ್ನಾಗಲಿ, ಒಂದು 
ಕನಡೆಯನ್ನಾಗಲಿ ನಾನು ಕೊಡಲಾರೆ. ನಿಮಗೆ ಇಷ್ಟಬಂದಕಡೆಗೆ ಹೋಗಿರಿ. 


ಅಷ್ಟತ್ರಿಂಶೋ$ಧ್ಯಾಯಃ ೩೮೯ 


ತಚ್ಛ್ರುತ್ವಾ ದಾರುಣಂ ವಾಕ್ಯಂ ದ್ವಿಜಾಃ ಕೋಪಾಕುಲಾಸ್ತದಾ । 


ಸಹಸ ರಾಮಕೋಪಂ ಹಿ ಸಾಂಪ್ರತಂ ಚ ಹನೂಮತಃ ॥ ೧೬ ॥ 
ಇತ್ಯುಕ್ತ್ವಾ ಹನುಮದ್ದತ್ತಾ ನಾಮಕಕ್ಟೋದ್ಭನಾ ಪುಟೀ । 

ಪ್ರಕ್ಸಿಷ್ತಾ ಚಾಸ್ಯ ನಿಲಯೇ ವ್ಯಾವೃತ್ತಾ ದ್ವಿಜಸತ್ತಮಾಃ ॥ ೧೭॥ 
ಗತೇ ತದಾ ನಿಪ್ರಸಂಘೇ ಜ್ಹಾಲಾಮಾಲಾಕುಲಂ ತೃಭೂತ್‌ | 
ಅಗ್ಲಿಜ್ವಾಲಾಕುಲಂ ಸರ್ವಂ ಸಂಜಾತಂ ಚೈನ ತತ್ರ ಹಿ ॥ ೧೮ ॥ 
ದಹ್ಯಂತೇ ರಾಜವಸ್ತೂನಿ ಛತ್ರಾಣಿ ಚಾಮರಾಣಿ ಚ । | 
ಕೋಶಾಗಾರಾಣಿ ಸರ್ವಾಣಿ ಆಯುಧಾಗಾರಮೇವ ಚ ॥ ೧೯ ॥ 
ಮಹಿಷ್ಯೋ ರಾಜಪುತ್ರಾಶ್ಚ ಗಜಾ ಅಶ್ವಾ ಹ್ಯನೇಕಶಃ । 

ವಿಮಾನಾನಿ ಚ ದಹ್ಯಂತೇ ದಹ್ಯಂತೇ ವಾಹನಾನಿ ಚ ॥ ೨೦ ॥ 
ಶಿಬಿಕಾಶ್ಚ ವಿಚಿತ್ರಾ ವೈ ರಥಾಶ್ಚೈವ ಸಹಸ್ರಶಃ I 

ಸರ್ವತ್ರ ದಹ್ಯಮಾನಂ ಚ ದೃಷ್ಟ್ವಾ ರಾಜಾಸಿ ನಿವ್ಯಥೇ ॥ ೨೧॥ 
ನ ಕೋಸಿ ತ್ರಾತಾ ತಸ್ಯಾಸ್ತಿ ಮಾನವಾ ಭಯವಿಕ್ಲವಾಃ । 

ನ ಮಂತ್ರಯಂತ್ರೆರ್ನಹ್ನಿಃ ಸ ಸಾಧ್ಯತೇ ನ ಚ ಮೂಲಿಕೈಃ ॥ ೨೨ ॥ 
ಕೌಟಿಲ್ಯಕೋಟನಾಶೀ ಚ ಯತ್ರ ರಾಮಃ ಪ್ರಕುಸ್ಯತೇ 

ತತ್ರ ಸರ್ವೇ ಪ್ರಣಶ್ಯಂತಿ ಕಿಂ ತತ್ಕುಮಾರಪಾಲಕಃ ॥ ೨೩ ॥ 





೧೬-೧೭. ದಾರುಣವಾದ ಆ ಮಾತನ್ನು ಕೇಳಿ ಬ್ರಾಹ್ಮಣರು ಕುಪಿತರಾಗಿ 
ದೊರೆಯೆ! ಈಗ ರಾಮಾಂಜನೇಯರ ಕೋಪವನ್ನು ಸಹಿಸು?” ಎಂದು 
ಹನುಮಂತನಿತ್ತ ಎಡಕಂಕುಳಿನ ಕೂದಲನ್ನು ಅವನ ಮನೆಯಲ್ಲಿ ಎಸೆದು. 
ಹಿಂದಿರುಗಿದರು. 

೧೮. ಬ್ರಾಹ್ಮಣರು ಹೊರಟುಹೋಗಲು ಅಲ್ಲಿರುವ ಸಮಸ್ತ ವಸ್ತುಗಳೂ 
ಬೆಂಕಿಯ ಜ್ವಾಲೆಯಿಂದ ಉರಿದುವು. 

೧೯-೨೨. ರಾಜನ ಛತ್ರಚಾಮರ, ಬೊಕ್ಕಸ, ಆಯುಧಶಾಲೆ, ರಾಣಿ 
ಯರು, ಕುಮಾರರು, ಆನೆ, ಕುದುರೆ, ವಿಮಾನ, ಪಲ್ಲಕಿ, ರಥ ಇವುಗಳೇ 
ಮೊದಲಾದ ಸಕಲವಸ್ತುಗಳೂ ಬೂದಿಯಾದುವು. ರಾಜನು ಸುಡುತ್ತಿರುವ 
ಅವುಗಳನ್ನು ಕಂಡು ಬಹಳ ವ್ಯಥೆಗೊಂಡನು. ಅವನನ್ನು ಯಾರೂ ಕಾಪಾಡು 
ವವರಿರಲಿಲ್ಲ. ಅಲ್ಲಿದ್ದವರೆಲ್ಲರೂ ಭಯಗೊಂಡರು. ಮಂತ್ರ, ಯಂತ್ರ, ಮೂಲಿಕೆ 
ಗಳಿಂದ ಬೆಂಕಿಯನ್ನು ಆರಿಸಲಾಗಲಿಲ್ಲ. 

೨೩. ಅನೇಕ ಕೋಟ ಕಪಟಗಳನ್ನು ನಾಶಮಾಡುವ ರಾಮನು ಕೋಪ 
ಗೊಂಡಲ್ಲಿ ಎಲ್ಲವೂ ಹಾಳಾಗುವುವೆಂದಮೇಲೆ ಕುಮಾರಪಾಲಕನ ವಿಷಯ 
ವನ್ನೇನು ಹೇಳಬೇಕು! 


ರಿಂ ಶ್ರೀ ಸ್ಕಾಂದಮಹಾಪುರಾಣಂ 


ಸರ್ವಂ ತಜ್ಜೃಲಿತಂ ದೃಷ್ಟ್ವಾ ನಗ್ನಕ್ಸಪಣಕಾಸ್ತದಾ । 


ಧೃತ್ವಾ ಕರೇಣ ಸಾತ್ರಾಣಿ ನೀತ್ಚಾ ದಂಡಾಂಛುಭಾನಪಿ ॥ ೨೪॥ 
ರಕ್ತಕಂಬಲಿಕಾಂ ಗೃಹ್ಯ ನೇಸಮಾನಾ ಮುಹುರ್ಮುಹುಃ । 
ಅನುಸಾನಹಿಕಾಶ್ಚೈನ ನಷ್ಟಾಃ ಸರ್ವೇ ದಿಶೋ ದಶ ॥ ೨೫ ॥ 
ಕೋಲಾಹಲಂ ಪ್ರಕುರ್ವಾಣಾಃ ಪಲಾಯಧ್ಯನಿತಿ ಬ್ರುವನ್‌ । 

ದಾಹಿತಾ ನಿಪ್ರಮುಖ್ಯೈಶ್ಚ ನಯಂ ಸರ್ನೇನ ಸಂಶಯಃ ॥ ೨೬ ॥ 
ಕೇಚಿಚ್ಚ ಭಗ್ನಪಾತ್ರಾಸ್ತೇ ಭಗ್ನದಂಡಾಸ್ತ್ರಥಾಂಪರೇ । 

ಪ್ರಣಷ್ಟಾಶ್ಚ ನಿವಸ್ತ್ರಾಸ್ತೇ ನೀತರಾಗ ಇತಿ ಬ್ರುವನ್‌ ॥ ೨೭॥ 
ಅರ್ಹಂತಮೇವ ಕೇಚಿಚ್ಚ ಪಲಾಯನಪರಾಯಣಾಃ । 

ತತೋ ವಾಯುಃ ಸಮಭನದೃಹ್ಟಿಮಾಂದೋಲಯನ್ನಿವ ॥೨೮॥ 
ಪ್ರೇಷಿತೋ ವೈ ಹನುನುತಾ ವಿಪ್ರಾಣಾಂ ಪ್ರಿಯಕಾಮ್ಯಯಾ | 

ಧಾನನ್ಸ ನೃಪತಿಃ ಸಶ್ಚಾದಿತಶ್ಚೇತಶ್ಚ ವೈ ತದಾ ॥೨೯॥ 


ಪದಾತಿರೇಕಃ ಪ್ರರುದನ್ಯೃ ವಿಪ್ರಾ ಇತಿ ಜಲ್ಪಕಃ । 

ಲೋಕಾಚ್ಛು ತ್ವಾ ತತೋ ರಾಜಾ ಗತಸ್ತತ್ರ ಯತೋ ದ್ವಿಜಾಃ ॥ ೩೦॥ 
ಗತ್ವಾ ತು ಸಹಸಾ ರಾಜನ್ಸೃಹೀತ್ವಾ ಚರಣೌ ತದಾ । 

ವಿಪ್ರಾಣಾಂ ನೃಪತಿರ್ಭೂಮೌ ಮೂರ್ಥಿತೋ ನ್ಯಪತತ್ತದಾ ॥೩೧॥ 





೨೪-೨೬, ಆಗ ಎಲ್ಲವೂ ಉರಿದು ಹೋಗುತ್ತಿರುವುದನ್ನು ಕಂಡು ದಿಗಂಬರ 
ಜೈನಸನ್ಯಾಸಿಗಳು ತಮ್ಮ ಪಾತ್ರೆಗಳನ್ನೂ, ದಂಡಗಳನ್ನೂ, ಕೆಂಪು ಕಂಬಳಿ 
ಗಳನ್ನೂ ತೆಗೆದುಕೊಂಡು ನಡುಗುತ್ತ ಪಾದರಕ್ಸೆಗಳಿಲ್ಲದೆ, ""ಬ್ರಾಹ್ಮಣರು 
ನಮ್ಮನ್ನು ಸುಡುತ್ತಿದ್ದಾರೆ ಓಡಿರಿ'” ಎಂದು ಕೂಗುತ್ತ ಹತ್ತುದಿಕ್ಳುಗಳಿಗೂ 
ಪಲಾಯನಮಾಡಿದರು. 

೨೭-೩೧. ಕೆಲವರ ಪಾತ್ರೆಗಳು ಒಡೆದುವು. ಇನ್ನು ಕೆಲವರ ದಂಡಗಳು 
ಮುರಿದುವು. ಮತ್ತೆ ಕೆಲವರು ವಸ್ತ್ರಗಳನ್ನು ಕಳೆದುಕೊಂಡು, " ಅರ್ಹಂತ?” 
ಎಂದು ಕೂಗುತ್ತ ಓಡತೊಡಗಿದರು. ಬಳಿಕ ಬ್ರಾಹ್ಮಣರಿಗೆ ಹಿತವನ್ನುಂಟು 
ಮಾಡುವ ಇಚ್ಛೆಯಿಂದ ಹನುಮಂತನು ಕಳುಹಿಸಿದ ಗಾಳಿಯು ಬೆಂಕಿಯನ್ನು 
ಉಜ್ವಲಗೊಳಿಸಲು ಅದು ಎತ್ತೆತ್ತಲೂ ಹರಡತೊಡಗಿತು. ಆ ರಾಜನು ಪಾದ 
ಚಾರಿಯಾಗಿ ಒಬ್ಬನೆ ಅಳುತ್ತಲೂ, ಬ್ರಾಹ್ಮಣರೆಲ್ಲಿ ಎಂದು ಕೇಳುತ್ತಲೂ ಇಲ್ಲಿ 
ಅಲ್ಲಿ ಓಡಾಡಿದನು. ಅನಂತರ ಜನರಿಂದ ಬ್ರಾಹ್ಮಣರಿರುವ ಸ್ಥಳವನ್ನು ತಿಳಿದು 
ಅಲ್ಲಿಗೆ ಕೂಡಲೆ ಹೋಗಿ ಅವರ ಕಾಲುಗಳನ್ನು ಹಿಡಿದು ಮೂರ್ಛೆಗೊಂಡು 
ನೆಲದಮೇಲೆ ಬಿದ ನು. 


ಅಸ್ಪತ್ರಿಂಶೋ$ಧ್ಯಾಯಃ ೩೯೧ 


ಉನಾಚ ನಚನಂ ರಾಜಾ ನಿಪ್ರಾನ್ಸಿನಯತತ್ಸರಃ | 


ಜಪನ್ನಾಶರಥಿಂ ರಾಮಂ ರಾಮರಾಮೇತಿ ವೈ ಪುನಃ ॥ ೩೨॥ 
ತಸ್ಯ ದಾಸಸ್ಯ ದಾಸೋಹಂ ರಾಮಸ್ಯ ಚ ದ್ವಿಜಸ್ಯ ಚ । 
ಅಜ್ಞಾನತಿನಿಂರಾಂಧೇನ ಜಾತೋಸ್ಮ $ಥೋ ಹಿ ಸಂಪ್ರತಿ ೩೩ 


ಅಂಜನಂ ಚ ಮಯಾ ಲಬ್ಧಂ ರಾಮನಾಮಮಹೌಷಧಂ । 
ರಾಮಂ ಮುಕ್ತ್ವಾ ಹಿ ಯೇ ಮರ್ತ್ಯಾಹ್ಯನ್ಯಂ ದೇನನುಪಾಸತೇ । 


ದಹ್ಯಂತೇ ತೇಂಗ್ನಿನಾ ಸ್ವಾಮಿನ್ಯಥಾಂಹಂ ಮೂಢಚೇತನಃ ॥ ೩೪॥ 
ಹರಿರ್ಭಾಗೀರಥೀ ವಿಪ್ರಾ ನಿಪ್ರಾ ಭಾಗೀರಥೀ ಹರಿಃ । 

ಭಾಗೀರಥೀ ಹರಿರ್ನಿಪ್ರಾಃ ಸಾರಮೇಕಂ ಜಗತ್ತಯೇ ॥ ೩೫ ॥ 
ಸ್ವರ್ಗಸ್ಯ ಚೈವ ಸೋಸಾನಂ ವಿಪ್ರಾ ಭಾಗೀರಥೀ ಹರಿಃ । 

ರಾಮನಾಮ ಮಹಾರಜ್ಜ್ವಾ ವೈಕುಂಠೇ ಯೇನ ನೀಯತೇ ॥ ೩೬ ॥ 


ಇತ್ಯೇನಂ ಪ್ರಣಮನ್ರಾಜಾ ಪ್ರಾಂಜಲಿರ್ನಾಕ್ಯಮಬ್ರವೀತ್‌ । 

ವಹ್ನಿ ಪ್ರಶಾಮ್ಕತಾಂ ನಿಪ್ರಾಃ ಶಾಸನಂ ವೋ ದದಾಮ್ಯಹಂ 1೩೭8 
ದಾಸೋಸಸ್ಮಿ ಸಾಂಪ್ರತಂ ವಿಪ್ರಾ ನಮೇ ವಾಗನ್ಯಥಾ ಭನೇತ್‌ । 
ಯತ್ಭಾಪಂ ಬ್ರಹ್ಮಹತ್ಯಾಯಾಃ ಪರದಾರಾಃಭಿಗಾಮಿನಾಂ ॥ ೩೮ ॥ 


೩೨, ಅವನು ರಾಮಮಂತ್ರವನ್ನು ಜಪಿಸುತ್ತ ವಿನಯದಿಂದ ಬ್ರಾಹ್ಮಣ 
ರನ್ನು ಕುರಿತು ಹೀಗೆಂದನು. 

೩೩. "" ನಾನು ರಾಮದಾಸರಾದ ಆ ನಿಮ್ಮೆಲ್ಲರ ದಾಸನು. ಈಗ ಅಜ್ಞಾನ 
ವೆಂಬ ಕತ್ತಲೆಯಿಂದ ಕುರುಡನಾಗಿದ್ದೇನೆ. 

೩೪. ನಾನು ರಾಮನಾಮವೆಂಬ ಅಂಜನವನ್ನು ಪಡೆದಿರುವೆನು. ಜನರು 
ರಾಮನನ್ನು ತ್ಯಜಿಸಿ ಬೇರೆ ದೇವರನ್ನು ಸೇವಿಸಿದರೆ ಮೂಢನಾದ ನನ್ನಂತೆಯೇ 
ಬೆಂಕಿಯಿಂದ ಬೂದಿಯಾಗುವರು. 

೩೫. ವಿಷ್ಣು, ಭಾಗೀರಥೀ, ಬ್ರಾಹ್ಮಣರು ಇವರು ಮೂವರೂ ಮೂರು 
ಲೋಕದ ಸಾರವಾದ ವಸ್ತುಗಳು. 

೩೬. ಬ್ರಾಹ್ಮಣರು, ಗಂಗೆ, ವಿಷ್ಣು ಈ ಮೂವರೂ ಸ್ವರ್ಗದ ಮೆಟ್ಟಲು 
ಗಳು. ರಾಮನಾಮನೆಂಬ ಹಗ್ಗವು ಭಕ್ತನನ್ನು ವೈಕುಂಠಕ್ಕೆ ಒಯ್ಯುವುದು.?? 

೩೭. ಹೀಗೆ ಹೇಳಿ, ಆ ರಾಜನು ಕೈಮುಗಿದುಕೊಂಡು ನಮಸ್ಕರಿಸುತ್ತ, 
«« ವಿಪ್ರರೆ! ಬೆಂಕಿಯನ್ನು ಆರಿಸಿರಿ. ನಿಮಗೆ ಶಾಸನವನ್ನು ಕೊಡುವೆನು. 

೩೮-೩೯. ಈಗ ನಾನು ನಿಮ್ಮ ದಾಸನಾಗಿರುವೆನು. ನಾನು ಆಡಿದ 
ಮಾತನ್ನು ಮಾರುವುದಿಲ್ಲ. ಹಾಗೆ ಮಾರಿದಕೆ ಬ್ರಹ್ಮಕತ್ಯೆ, ಪರಸತ್ಸೀಗಮನ, 


ರ್ಷೀ೨ ಶ್ರೀ ಸ್ಕಾಂದಮಹಾಪುರಾಣಂ 


ಯತ್ಸಾಪಂ ಮದ್ಯಪಾನಾಂ ಚ ಸುವರ್ಣಸ್ತೇಯಿನಾಂ ತಥಾ । 


ಯತ್ಸಾಪಂ ಗುರುಘಾತಾನಾಂ ತತ್ಪಾಪಂ ವಾ ಭವೇನ್ಮನು 1 ೩೯॥ 

ಯಂ ಯಂ ಚಿಂತಯತೇ ಕಾಮಂ ತಂ ತಂ ದಾಸ್ಯಾಮ್ಯಹಂ ಪುನಃ । 

ವಿಪ್ರಭಕ್ತಿಃ ಸದಾ ಕಾರ್ಯಾ ರಾಮಭಕ್ತಿಸ್ತಥೈನ ಚ ॥ ೪೦॥ 

ಅನ್ಯಥಾ ಕರಣೀಯಂ ಮೇ ನ ಕದಾಚಿದ್ದಿಜೋತ್ತಮಾಃ ॥ ೪೧॥ 
ವ್ಯಾಸ ಉವಾಚ: 

ತಸ್ಮಿನ್ನವಸರೇ ನಿಪ್ರಾ ಜಾತಾ ಭೂಪ ದಯಾಲವಃ । 

ಅನ್ಯಾ ಯಾ ಪುಟಕಾ ಚಾಸೀತ್ಸಾ ದತ್ತಾ ತಾಪಶಾಂತಯೇ ॥ ೪೨ ॥ 

ಜೀವಿತಂ ಚೈವ ತತ್ಸೈನ್ಯಂ ಜಾತಂ ಸ್ಸಿಪ್ರೇಷು ರೋಮಸು । 

ದಿಶಃ ಪ್ರಸನ್ನಾಃ ಸಂಜಾತಾಃ ಶಾಂತಾ ದಿಗ್ಮನಿತಸ್ವನಾಃ ॥ ೪೩॥ 

ಪ್ರಜಾಃ ಸ್ವಸ್ಥಾ:ಭವತ್ತತ್ರ ಹರ್ಷನಿರ್ಭರಮಾನಸಾಃ । 

ಅವತಸ್ಥೇ ಯಥಾಪೂರ್ವಂ ಪುತ್ರಪೌತ್ರಾದಿಕಂ ತಥಾ ॥ ೪೪ ॥ 

ವಿಪ್ರಾಜ್ಞಾಕಾರಿಹೋ ಲೋಕಾಃ ಸಂಜಾತಾಶ್ಚ ಯಥಾ ಪುರಾ । 

ವಿಷ್ಣುಧರ್ಮಂ ಪರಿತ್ಯಜ್ಯ ನಾಂನ್ಯಂ ಜಾನಂತಿ ತೇ ವೃಷಂ Pes ॥ 

ನನೀನಂ ಶಾಸನಂ ಕೃತ್ವಾ ಪೂರ್ವವದ್ವಿಧಿಸಪೂರ್ವಕಂ । 

ನಿಷ್ಠಾಸಿತಾಸ್ತು ಪಾಷಂಡಾಃ ಕೃತಶಾಸ್ತ್ರಪ್ರಯೋಜಕಾಃ ॥ ೪೬ ॥ 





ಮದ್ಯಪಾನ, ಚಿನ್ನವನ್ನು ಕದಿಯುವುದು, ಗುರುಗಳನ್ನು ಕೊಲ್ಲುವುದು ಇವು 
ಗಳನ್ನು ಮಾಡಿದವರಿಗೆ ಸಂಭವಿಸುವ ಪಾಪವು ನನಗೆ ಬರಲಿ. 

೪೦-೪೧. ನಿಮ್ಮ ಅಭೀಷ್ಟವನ್ನೆಲ್ಲ ನಾನು ನಡಸಿಕೊಡುವೆನು. ಬ್ರಾಹ್ಮಣ 
ರಲ್ಲಿಯೂ, ರಾಮನಲ್ಲಿಯೂ ಭಕ್ತಿಯನ್ನಿಡುವೆನು. ಯಾವಾಗಲೂ ಇದನ್ನು 
ಮಾರುವುದಿಲ್ಲ. 

೪೨. ವ್ಯಾಸನು ಹೇಳುತ್ತಾನೆ:-ಆ ಸಮಯದಲ್ಲಿ ಬ್ರಾಹ್ಮಣರೂ ದಯಾಳು 
ಗಳಾಗಿ ತಾಪದ ಶಾಂತಿಗೋಸ್ಕರ ಬಲಕಂಕುಳಿನ ಕೂದಲನ್ನು ಎಸೆದರು. 

೪೩. ಆ ರೋಮಗಳನ್ನು ಎಸೆಯಲು ಸೈನ್ಯವು ಬದುಕಿತು. ದಿಕ್ಕುಗಳು 
ಪ್ರಸನ್ನವಾದುವು. ದಿಕ್ಕುಗಳಲ್ಲುಂಟಾದ ಧ್ವನಿಯು ಶಾಂತವಾಯಿತು. 

೪೪. ಪ್ರಜೆಗಳು ಮೊದಲಿನಂತೆ ಸ್ವಸ್ಥರಾಗಿ ಸಂತೋಷಗೊಂಡರು. 
ಮಕ್ಕಳು ಮೊಮ್ಮಕ್ಕಳು ಮೊದಲಿನಂತೆ ಸುಖಗೊಂಡರು. 

೪೫. ಜನರು ಮೊದಲಿನಂತೆ ಬ್ರಾಹ್ಮಣರ ಆಜ್ಞೆಯನ್ನು ನೆರವೇರಿಸುವವ 
ರಾದರು. ಅವರಿಗೆ ವಿಷ್ಣುಧರ್ಮವನ್ನು ಬಿಟ್ಟು ಬೇರೆ ಧರ್ಮದ ಅರಿವಿರಲಿಲ್ಲ. 

೪೬. ಹಿಂದಿನಂತೆಯೇ ದೊರೆಯು ಹೊಸ ಶಾಸನವನ್ನು ಮಾಡಿ ಪಾಷಂಡ 
ಶಾಸ್ತ್ರಕರ್ತರನ್ನು ತನ್ನ ರಾಜ್ಯದಿಂದ ಹೊರಹೊರಡಿಸಿದನು. 


ಅಸ್ಪತ್ರಿಂಶೋ$ಧ್ಯಾಯಃ ೩೯ 


ನೇದಬಾಹ್ಯಾಃ ಪ್ರಣಷ್ಟಾಸ್ತೇ ಉತ್ತಮಾಃ ಧಮನುಧ್ಯಮಾಃ । 
ಷಟ್ಟ್ರಂಶಚ್ಚ ಸಹಸ್ರಾಣಿ ಯೇಂಭೂವನ್ನೋಭುಜಾಃ ಪುರಾ ॥೪೭॥ 
ತೇಷಾಂ ಮಧ್ಯಾತ್ತು ಸಂಜಾತಾ ಅಡನೀಜಾ ವಣಿಗ್ಜನಾಃ । 
ಶುಶ್ರೂಷಾರ್ಥಂ ಬ್ರಾಹ್ಮಣಾನಾಂ ರಾಜ್ಞಾ ಸರ್ವೇ ನಿರೂಪಿತಾಃ ॥ ೪೮ ॥ 
ಸದಾಚಾರಾಃ ಸುನಿಪುಣಾ ದೇನಬ್ರಾಹ್ಮಣಸೂಜಕಾಃ । 


ತ್ಯಕ್ತ್ಹಾ ಸಾಖಂಡಮಾರ್ಗಂ ತು ವಿಷ್ಣುಭಕ್ತಿಪರಾಸ್ತು ತೇ ॥೪೯॥ 
ಜಾಹ್ನನೀತೀರಮಾಸಾದ್ಯ ತ್ರೈನಿದ್ಯೇಭ್ಯೋ ದದೌ ನೃಪಃ । 

ಶಾಸನಂ ತು ಯವಾ ದತ್ತಂ ತೇಷಾಂ ವೈ ಭಕ್ತಿಪೂರ್ವಕಂ ॥ ೫೦॥ 
ಸ್ಥಾನಧರ್ಮಾತ್ಟ್ರಚಲಿತಾ ವಾಡವಾಸ್ತೇ ಸಮಾಗತಾಃ । 

ನೃಪೋ ನಿಜ್ಞಾಪಿತೋ ವಿಪ್ಟೆಸ್ತೈರೇವಂ ಕ್ಲೇಶಕಾರಿಭಿಃ ॥೫೧॥ 
ಯೇತ್ಯಕ್ತನಾಚೋ ವಿಪ್ರೇಂದ್ರಾಸ್ತಾನ್ನಿಃಸಾರಯ ಭೂಪತೇ । 

ಪರಸ್ಪರಂ ವಿವಾದಾಸ್ತು ಸಂಜಾತಾ ದತ್ತವೃತ್ತಯೇ ॥ ೫೨ ॥ 
ನ್ಯಾಯಪ್ರದರ್ಶನಾರ್ಥಂ ಚ ಕಾರಿತಾಸ್ತು ಸಭಾಸದಃ । 

ಹಸ್ತಾಕ್ಸರೇಷು ದೃಷ್ಟೇಷು ಸೃಥಕೃೃಥಕ್ರತಿಸಾದಿತಂ ॥ ೫೩ ॥ 
ಏತಚ್ಛ್ರುತ್ವಾ ತತೋ ರಾಜಾ ತುಲದಾನಂ ಚಕಾರ ಹ । 


ದೀಯಮಾನೇ ತದಾ ದಾನೇ ಚಾತುರ್ವಿದ್ಯಾ ಬಭಾಷಿರೇ ॥ ೫೪ ॥ 

೪೭-೪೮. ನೇದಬಾಹ್ಯರಾದ ಉತ್ತಮ ಮಧ್ಯಮ ಅಧಮ ಜನರು 
ಹಾಳಾದರು. ಹಿಂದೆ ಇದ್ದ ಮೂವತ್ತಾರುಸಾವಿರಮಂದಿ ವೀರವೈಶ್ಯರ ಮದ್ಯದಲ್ಲಿ 
ಅಡವೀಜರೆಂಬ ವೈಶ್ಯರನ್ನು ಬ್ರಾಹ್ಮಣರ ಸೇವೆಗಾಗಿ ನೇಮಿಸಿದನು. 

೪೯, ಆ ವೈಶ್ಯರು ಸದಾಚಾರಸಂಪನ್ನರೂ, ದೇವಬ್ರಾಹ್ಮಣರನ್ನು ಪೂಜಿಸು 
ವವರೂ, ಆಗಿ ಪಾಷಂಡಮಾರ್ಗವನ್ನು ತ್ಯಜಿಸಿ ವಿಷ್ಣುಭಕ್ತಿನಿರತರಾದರು. 

೫೦. ತರುವಾಯ ರಾಜನು ಗಂಗೆಯ ದಡವನ್ನು ಸೇರಿ ಅಲ್ಲಿ ತೈವಿದ್ಯ 
ಬ್ರಾಹ್ಮಣರಿಗೆ ಶಾಸನವನ್ನು ಭಕ್ತಿಯಿಂದ ಕೊಟ್ಟನು. 

೫೧-೫೨. ಕ್ಲೇತ್ರವನ್ನೂ, ಬ್ರಾಹ್ಮಣಧರ್ಮವನ್ನೂ ತ್ಯಜಿಸಿದ ಬ್ರಾಹ್ಮಣರು 
ಬಂದು ರಾಜನನ್ನು ಕುರಿತು, "" ಮಹಾರಾಜ! ನಿನ್ನ ಮಾತನ್ನು ಮಾರಿದ 
ಬ್ರಾಹ್ಮಣರನ್ನು ಹೊರಡಿಸು'' ಎಂದು ವಿಜ್ಞಾಪಿಸಿಕೊಂಡರು. ವೃತ್ತಿಗಾಗಿ 
ಆ ಎರಡು ಗುಂಪಿನ ಬ್ರಾಹ್ಮಣರಿಗೆ ಪರಸ್ಪರ ಜಗಳವಾಯಿತು. 

೫೩. ನ್ಯಾಯನಿರ್ಣಯಕ್ಕಾಗಿ ನೇಮಿಸಿದ ಸದಸ್ಯರು ಹಸ್ತಾಕ್ಸರಗಳನ್ನು 
ನೋಡಿ ಬೇರೆಬೇರೆಯಾಗಿ ಪ್ರತಿಪಾದಿಸಿದರು. 

೫೪-೫೬, ಇದನ್ನು ಕೇಳಿ ರಾಜನು ತುಲಾದಾನವನ್ನು ಕೊಡಲು 
ಚಾತುರ್ನಿದ್ಯಬ್ರಾಹ್ಮಣರು, "" ಜಾತಿಬಾಹ್ಯರಾದ ನಾವು ಹೇಗೆ ಪ್ರತಿಗ್ರಹವನ್ನು 


ಷೀ೪ ಶ್ರೀ ಸ್ಕಾಂದಮಹಾಪುರಾಣಂ 


ಅಸ್ಮಾಭಿರ್ಹಾರಿತಾ ಜಾತಿಃ ಕಥಂ ಕುರ್ಮಃ ಪ್ರತಿಗ್ರಹಂ | 


ಸಿವಾರಿತಾಸ್ತು ತೇ ಸರ್ವೇ ಸ್ಥಾನಾನ್ಮೋಹೇರಕಾ ದ್ವಿಜಾಃ ॥ ೫೫ ॥ 
ದಶಪಂಚಸಹಸ್ರಾಣಿ ನೇದನೇದಾಂಗಪಾರಗಾಃ । 

ತತಸ್ತ್ರೇನ ತದಾ ರಾಜನ್ರಾಜ್ಞಾ ರಾಮಾಂನುವರ್ತಿನಾ ॥ ೫೬॥ 
ಆಹೂತಾ ವಾಡನಾಂಸ್ತಾಸ್ತು ಜ್ಞಾತಿಭೇದಂ ಚಕಾರ ಸಃ । 

ತ್ರಯಾನಿದ್ಯಾ ವಾಡನಾ ಯೇ ಸೇತುಬಂಧಂ ಪ್ರತಿ ಪ್ರಭುಂ ॥ ೫೭ ॥ 
ಗತಾಸ್ತೇ ವೃತ್ತಿಭಾಜಃಸ್ಯುರ್ನಾಃನ್ಯೇ ವೃತ್ಯಭಿಭಾಗಿನಃ । 

ತತ್ರ ನೈನ ಗತಾ ಯೇ ವೈ ಚಾತುರ್ನಿದ್ಯತ್ವಮಾಗತಾಃ ॥ ೫೮ ॥ 
ವಣಿಗ್ರಿರ್ನಚ ಸಂಬಂಧೋನ ನಿವಾಹಶ್ಚ ತೈಃ ಸಹ । 

ಗ್ರಾಮವೃತ್ತೌ ನ ಸಂಬಂಧೋ ಜ್ಞಾತಿಭೇದೇ ಕೃತೇ ಸತಿ ॥ರ೫೯॥ 


ದ್ವಿಜಭಕ್ತಿಪರಾಃ ಶೂದ್ರಾಃ ಯೇ ಪಾಖಂಡೈರ್ನ ಲೋಪಿತಾ॥ಃ । 
ಜೈನಧರ್ಮಾತ್ಸರಾವೃತ್ತಾಸ್ತೇ ಗೋಭೂಜಾಸ್ತಥೋತ್ತಮಾಃ ॥೬೦॥ 
ಯೇ ಚ ಪಾಖಂಡನಿರತಾ ರಾಮಶಾಸನಲೋಪಕಾಃ । 


ಸರ್ವೇ ವಿಪ್ರಾಸ್ತಥಾ ಶೂದ್ರಾ ಪ್ರತಿಬಂಧೇನ ಯೋಜಿತಾಃ ॥೬೧॥ 
ಸತ್ಯಪ್ರತಿಜ್ಞಾಂ ಕುರ್ನಾಣಾಸ್ತ್ರತ್ರಸ್ಥಾಃ ಸುಖಿನೋ€ಭವನ್‌ । 
ಜಾತುರ್ನಿದ್ಯಾ ಬಹಿರ್ಗ್ರಾಮೇ ರಾಜ್ಞಾ ತೇನ ನಿನಾಸಿತಾಃ ॥ ೬೨॥ 
ಯಥಾ ರಾನೋ ನ ಕುಸ್ಯೇತ ತಥಾ ಕಾರ್ಯಂ ಮಯಾ ಧ್ರುನಂ । 
ಪರಾಜ್ಮುಖಾ ಯೇ ರಾಮಸ್ಕ ಸನ್ಮುಖಾನುಗತಾಃ ಕಲ ॥ ೬೩ ॥ 


ಮಾಡುವುದು'' ಎಂದರು. ಬಳಿಕ ರಾಮಭಕ್ಕನಾದ ಆ ರಾಜನು ಆ ಹದಿನೈದು 
ಸಾವಿರ ಮೋಹೇರಕ ಬ್ರಾಹ್ಮಣರನ್ನು ಆ ಸ್ಥಳದಿಂದ ಹೊರಡಿಸಿದನು. 

೫೭-೫೯. ಅವರಿಂದ ರಾಮೇಶ್ವರಕ್ಕೆ ಹೋಗಿ ಬಂದ ತೈನಿದ್ಯಬ್ರಾಹ್ಮಣರಿಗೆ 
ಸಂಬಂಧವನ್ನು ತೊಡೆದುಹಾಕಿ ಆ ಮೂರುಸಾವಿರ ತೈವಿದ್ಯಬ್ರಾ ಹ್ಮಣರಿಗೆಮಾತ್ರ 
ವೃತ್ತಿಯನ್ನು ಕೊಟ್ಟನು. ಜ್ಞಾತಿಭೇದವಾದ ಮೇಲೆ ರಾಮೇಶ್ವರಕ್ಕೆ ಹೋಗದ 
ಬ್ರಾಹ್ಮಣರಿಗೆ ವರ್ತಕರ ಸಂಬಂಧವೂ, ಅವರೊಡನೆ ವಿವಾಹವೂ, ಗ್ರಾಮವೃತ್ತಿ 
ಸಂಬಂಧವೂ ಇರಲಿಲ್ಲ. 

೬೦. ದ್ವಿಜರಲ್ಲಿ ಭಕ್ತಿಯುಳ್ಳೆ ಶೂದ್ರರೂ, ಜೈನಧರ್ಮವನ್ನವಲಂಬಿಸದ 
ವರೂ, ಪಾಷಂಡಿಗಳಲ್ಲದವರೂ ಆದ ವೈಶ್ಯರೂ ಉತ್ತಮರಾದರು. 

೬೧. ಪಾಷಂಡಿಗಳಾಗಿ ರಾಮಶಾಸನವನ್ನು ಹಾಳುಮಾಡಿದ ಬ್ರಾ ಹ್ಮಣರೂ, 
ಶೂದ್ರರೂ ಸ್ಥಾನಭ್ರಷ್ಟರಾದರು. 

೬೨-೬೪, ಅಲ್ಲಿರುವ ತೈನಿದ್ಯಬ್ರಾ ಹ್ಮಣರು ಸತ್ಯಪ್ರತಿಜ್ಞೆ ಮಾಡಿದುದರಿಂದ 
ಸುಖಿಗಳಾದರು. . ರಾಮನು ಕುಪಿತನಾಗದಂತೆ ನಾನು ಕರ್ತವ್ಯನಿರತನಾಗ 


ಅಸ್ಪತ್ರಿಂಶೋಳ$ಧ್ಯಾಯಃ॥ ೩೯೫ 


ಚಾತುರ್ವಿದ್ಯಾಸ್ತೇ ವಿಜ್ಞೇಯಾ ವೃತ್ತಿಬಾಹ್ಯಾಃ ಕೃತಾಸ್ತದಾ । 


ಕೃತಕೃತ್ಯಸ್ತದಾ ಜಾತೋ ರಾಜಾ ಕುಮಾರಪಾಲಕಃ ॥ ೬೪ ॥ 
ವಿಪ್ರಾಣಾಂ ಪುರತಃ ಪ್ರಾಹ ಪ್ರಶ್ರಯೇಣ ವಚಸ್ತದಾ । 
ಗ್ರಾಮನೃತ್ತಿರ್ನಮೇ ಲುಪ್ತಾ ಏತದ್ವೈ ದೇವನಿರ್ನಿತಂ ॥ ೬೫ ॥ 
ಸ್ವಯಂ ಕೃತಾಃ ಪರಾಧಾನಾಂ ದೋಸೋ ಕಸ್ಯ ನ ದೀಯತೇ! 

ಯಥಾ ವನೇ ಕಾಷ್ಮನರ್ಸಾದ್ವಹ್ನಿಃ ಸ್ಯಾದ್ದೈ ನಯೋಗತಃ ॥೬೬॥ 
ಭವದ್ಧಿಸ್ತು ಪಣಃ ಪ್ರೋಕ್ತೋಹ್ಯಭಿಜ್ಞಾನಸ್ಯ ಹೇತವೇ । 

ರಾಮಸ್ಯ ಶಾಸನಂ ಕೃತ್ವಾ ನಾಯುಪುತ್ರಸ್ಯ ಹೇತವೇ ॥ ೬೭॥ 
ವ್ಯಾನೃತ್ತಾ ನಾಡವಾ ಯೂಯಂ ಸ ದೋಷಃ ಕಸ್ಯ ದೀಯತೇ । 
ಅನಸಾನೇ ಹರಿಂ ಸ್ಮೃತ್ವಾ ಮುಹಾಪಾಪಯುತೊೋಸಿ ವಾ ॥ ೬೮ ॥ 


ನಿಷ್ಣುಲೋಕಂ ವ್ರಜತ್ಯಾಶು ಸಂಶಯಸ್ತು ಕಥಂ ಭನೇತ್‌ । 
ಮಹತ್ಪುಣ್ಯೋದಯೇ ನ್ಯೂಣಾಂ ಬುದ್ಧಿಃ ಶ್ರೇಯಸಿ ಜಾಯತೇ ॥ ೬೯ ॥ 
ಪಾಪಸ್ಕೋದಯಕಾಲೇ ಚ ವಿಸರೀತಾ ಹಿ ಸಾ ಭವೇತ್‌ । 


ಸಕೃತ್ಸಾಲಯತೇ ಯಸ್ತು ಧರ್ಮೇಣೈತಜ್ಞಗತ್ತಯಂ 1 ೭೦॥ 
ಯೋಂತರಾತ್ಮಾ ಚ ಭೂತಾನಾಂ ಸಂಶಯಸ್ತತ್ರ ನೋ ಹಿತಃ । 
ಇಂದ್ರಾದಯೋಂಮರಾಃ ಸರ್ವೇ ಸನಕಾದ್ಯಾಸ್ತ ಪೋಧನಾಃ ॥೭೧॥ 


ಬೇಕೆಂದು ರಾಜನು ಚಾತುರ್ವಿದ್ಯಬ್ರಾ ಹ್ಮಣರನ್ನು ಗ್ರಾಮದ ಹೊರಗೆ ವಾಸಿಸು 
ವಂತೆ ಕಟ್ಟುಮಾಡಿದನು. ರಾಮಭಕ್ತರಲ್ಲದ ಚಾತುರ್ವಿದ್ಯಬ್ರಾಹ್ಮಣರು ವೃತ್ತಿ 
ಹೀನರಾದರು. ಆಗ ಕುಮಾರಪಾಲಕನು ಕೃತಕೃತ್ಯನಾದನು. 

೬೫. ಆಗ ರಾಜನು ಚಾತುರ್ವಿದ್ಯಬ್ರಾಹ್ಮಣರ ಮುಂದೆ ನಿಂತು ವಿನಯ 
ದಿಂದ ಹೀಗೆಂದನು: "ರಾಮನು ನಿರ್ಮಿಸಿದ ಗ್ರಾಮವೃತ್ತಿಯನ್ನು ನಾನು 
ಹಾಳುಮಾಡಲಿಲ್ಲ. 

೬೬. ತಾವಾಗಿಯೇ ಅಪರಾಧಮಾಡಿದ ಯಾರಿಗೆತಾನೆ ಕೆಡಕಾಗುವುದಿಲ್ಲ. 
ಕಾಡಿನಲ್ಲಿ ಕಟ್ಟಗೆಯು ಹೆಚ್ಚಿ ದರೆ ದೈವವಶದಿಂದಲೇ ಬೆಂಕಿಯು ಉದ್ಭವಿಸುವುದು. 

೬೭. ರಾಮನ ಶಾಸನವನ್ನು ಊರ್ಜಿತಗೊಳಿಸಬೇಕಾದರೆ ಆ ರಾಮಾಂಜ 
ನೇಯರ ಅಭಿಜ್ಞಾನವನ್ನು ತಂದುಕೊಡಿರಿ ಎಂದೆನು. 

೬೮-೭೪, ನೀವು ಹಾಗೆಮಾಡಲಿಲ್ಲ. ಅದರ ಕೇಡು ಬೇರೆ ಯಾರಿಗಾದೀತು. 
ಅತಿ ಪಾಪಿಯಾದರೂ ಅವಸಾನಕಾಲದಲ್ಲಿ ಹರಿಸ್ಮರಣೆ ಮಾಡಿದರೆ ನಿಶ್ಚಯ 
ವಾಗಿಯೂ ವೈಕುಂಠವನ್ನು ಹೊಂದುವನು. ಪುಣ್ಯವು ಹೆಚ್ಚಿದಾಗ ಮನುಷ್ಯರ 
ಬುದ್ಧಿಯು ಶ್ರೇಯಸ್ಸಿನಲ್ಲಿಯೂ, ಪಾಪವು ಹೆಚ್ಚಿ ದಾಗ ಕೆಟ್ಟುದರಲ್ಲಿಯೂ 
ಪ್ರವರ್ತಿಸುವುದು. ಧರ್ಮದಿಂದ ಮೂರುಲೋಕವನ್ನು ಕಾಪಾಡುವವನೂ, 


ಷ್ಷ೯ಓ೬ ಶ್ರೀ ಸ್ಕಾಂದಮಹಾಪುರಾಣಂ 


ಮುಕ್ತರ್ಥಮರ್ಜಯಂತೀಹ ಸಂಶಯಸ್ತತ್ರ ನೋ ಹಿತಃ 


ಸಹಸ್ರನಾಮತತ್ತುಲ್ಕಂ ರಾಮನಾಮೇತಿ ಗೀಯತೇ ॥ ೭೨॥ 
ತಸ್ಮಿನ್ನನಿಶ್ಚಯಂ ಕೃತ್ವಾ ಕಥಂ ಸಿದ್ದಿರ್ಭನೇದಿಹ | 
ಮಮ ಜನ್ಮ ಕೃತಾತ್ಪುಣ್ಯಾದಭಿಜ್ಞಾನಂ ದದೌ ಹರಿಃ ॥೭೩॥ 


ಪಾಖಂಡಾದ್ಯತೃತಂ ಪಾಪಂ ಮೃಷ್ಟಂ ತದ್ವಃ ಪ್ರಣಾಮತಃ । 

ಪ್ರಸೀದಂತು ಭವಂತಶ್ಚ ತ್ಯಕ್ತ್ವಾ ಕ್ರೋಧಂ ಮನಾಥುನಾ ॥ ೭೪ ॥ 
ಬ್ರಾಹ್ಮಣಾ ಊಚುಃ; 

ರಾಜನ್ನರ್ಮೋನಿಲುಪ್ತಸ್ತೇ ಪ್ರಾಪಿತಾನಾಂ ತಥಾ ಪುನಃ । 


ಅವಶ್ಯಂ ಭಾವಿನೋ ಭಾವಾ ಭವಂತಿ ಮಹತಾಮಪಿ ॥ ೭೫ ॥ 
ಸಗ್ಗತ್ವಂ ನೀಲಕಂಠಸ್ಯ ನುಹಾಃಹಿಶಯನಂ ಹರೇಃ । 

ಏತದ್ದೈನಕೃತಂ ಸರ್ವಂ ಪ್ರಭುರ್ಯಃ ಸುಖದುಃಖಯೋಃ ॥ ೭೬॥ 
ಸತ್ಯಪ್ರತಿಜ್ಞಾ ಸ್ತ್ರೈನಿದ್ಯಾ ಭಜಂತು ರಾಮಶಾಸನಂ । 

ಅಸ್ಮಾಕಂ ತು ಹರಂ ದೇಹಿ ಸ್ಥಾನಂ ಯತ್ರ ನಸಾಮಹೇ ॥ ೭೭॥ 
ತೇಷಾಂ ತು ವಚನಂ ಶ್ರುತ್ವಾ ಸುಖಮಿಚ್ಛುರ್ದ್ವಿಜನ್ಮನಾಂ | 

ತೇಷಾಂ ಸ್ಥಾನಂ ತು ದತ್ತಂ ವೈ ಸುಖವಾಸಂ ತು ನಾಮತಃ 1೭೮॥ 





ಸಕಲ ಪ್ರಾಣಿಗಳ ಅಂತರಾತ್ಮನೂ ಆಗಿರುವ ಆ ರಾಮನಲ್ಲಿ ಸಂಶಯಪಡುವುದು 
ಹಿತಕರವಲ್ಲ. ಇಂದ್ರಾದಿ ದೇವತೆಗಳೂ, ಸನಕಾದಿ ಮುನೀಶ್ವರರೂ ಮುಕ್ತಿಗಾಗಿ 
ಶ್ರೀರಾಮನನ್ನು ಅರ್ಚಿಸುತ್ತಾರೆ. ಅವನಲ್ಲಿ ಸಂಶಯಪಡುವುದು ಹಿತಕರವಲ್ಲ. 
ರಾಮನಾಮವು ಸಹಸ್ರನಾಮಕ್ಕೆ ಸಮಾನವಾದುದು. ಆ ರಾಮನಲ್ಲಿ ದೃಢ 
ಭಕ್ತಿಮಾಡದಿದ್ದರೆ ಕಾರ್ಯಸಿದ್ಧಿಯಾಗುವುದು ಹೇಗೆ? ನನ್ನ ಹಿಂದಿನ ಪುಣ್ಯ 
ಪ್ರಭಾವದಿಂದ ಹನುಮಂತನು ಅಭಿಜ್ಞಾನವನ್ನಿತ್ತನು. ಪಾಷಂಡತನದಿಂದ 
ಮಾಡಿದ ಪಾಪವು ನಿಮ್ಮ ವಂದನೆಯಿಂದ ಪರಿಹೃತವಾಯಿತು. ನೀವು ಕೋಪ 
ವನ್ನು ಬಿಟ್ಟು ನನ್ನಲ್ಲಿ ಪ್ರಸನ್ನರಾಗಿರಿ.'' 

೭೫. ಬ್ರಾಹ್ಮಣರು ಹೇಳುತ್ತಾರೆ:--ಮಹಾರಾಜ! ನೀನು ಲುಪ್ತವಾದ 
ಧರ್ಮವನ್ನು ತಿರುಗಿ ಉದ್ದಾರಮಾಡಿರುನೆ. ಅವಶ್ಯವಾಗಿ ಆಗತಕ್ಕುದು 
ಮಹಾತ್ಮರಿಗೂ ಆಗಿಯೇ ಆಗುತ್ತದೆ. 

೭೬. ಸುಖದುಃಖಗಳಿಗೆ ಕಾರಣವಾದ ದೈವದ ವಶದಿಂದ ಮಹೇಶ್ವರನು 
ಬತ್ತಲೆಯಾದನು. ವಿಷ್ಣುವು ಸರ್ಸಶಯನನಾದನು. 

೭೭. ಸತ್ಯವಾದ ಪ್ರತಿಜ್ಞೆಯುಳ್ಳ ತೈನಿದ್ಯಬ್ರಾಹ್ಮಣರು ರಾಮನ ಶಾಸನ 
ವನ್ನು ಪಡೆಯಲಿ. ನಮಗೂ ವಾಸಕ್ಕೆ ಉತ್ತಮವಾದ ಸ್ಥಳವನ್ನು ಕೊಡು. 

೭೮. ದೊರೆಯು ಆ ಬ್ರಾಹ್ಮಣರ ಮಾತನ್ನು ಕೇಳಿ ಅವರಿಗೆ ಸುಖವನ್ನು 
ಬಯಸಿ ಸುಖವಾಸವೆಂಬ ಸ್ಥಳವನ್ನು ಅವರಿಗೆ ಏರ್ಪಡಿಸಿಕೊಟ್ಟನು. 


ಅಸ್ಪತ್ರಿಂಶೋ$ಧ್ಯಾಯಃ ೩೯೭ 


ಹಿರಣ್ಯಂ ಪುಷ್ಪವಾಸಾಂಸಿ ಗಾವಃ ಕಾನುದುಘಾ ನೃಪ । 
ಸ್ವರ್ಣಾಂಲಂಕರಣಂ ಸರ್ವಂ ನಾನಾನಸ್ತುಚಯಂ ತಥಾ nan 
ಶ್ರ ದ್ಧ ಯಾ ಪರಯಾ ದತ್ತಾ ಮುದಂ ಲೇಭೇ ನರಾಧಿಪಃ । 

ತ್ರ ಯಾವಿದ್ಯಾ ಸ್ತುತೇ ಜ್ಜ Fee ಸ್ಥಾ ಪಿತಾ ಯೇ ತ್ರಿಮೂರ್ತಿಭಿಃ ॥೮೦॥ 
ಚತುರ್ಥೇಸೈನ ಭೂಪೇನ ಸ್ಥಾಪಿತಾಃ ೌಸುಖನಾಸನೇ | 

ತೇ ಬಭೂನುರ್ದಿಜಶ್ರೇಸ್ಠಾ ಶ್ಚ ತುರ್ನಿದ್ಯಾಃ ಕಲೌ ಯುಗೇ ॥ ೮೧॥ 
ಚಾತುರ್ವಿದ್ಯಾಶ್ಚ ತೀ ಸರ್ವೇ ಧರ್ಮಾಃ ರಜೇ ಪ್ರತಿಷ್ಠಿತಾಃ । 
ನೇದೋಕ್ತಾ ಆಶಿಷೋ ದತ್ತ್ವಾ ತಸ್ಮೆ 4 ರಾಜ್ಞೆ € ಮಹಾತ್ಮನೇ ॥ ೮೨॥ 
ರಥೈರಶ್ಚೈ ರುಹ್ಯಮಾನಾಃ ಕೃ ತಕ ತ್‌ ದ್ವಿ ಜಾತಯಃ | 
ಮುಹತ್ರನೋದಯುಕ್ತಾಸ್ತೆ ಸ ಷಾ ಫ್ರಪ್ರುರ್ಮೋಹೇರಕಂ ಮಹತ್‌ ॥ ೮೩॥ 
ಸೌಷತುಕ್ಸ ತ್ರಯೋಡಶ್ಯಾಂ ಲಬ್ಧಂ ಶಾಸನಕಂ ದ್ವಿಜೈಃ । '` 





ಬಲಿಪ್ರದಾನಂ ತು ಕೃತಮುದ್ದಿಶ್ಯ ಕುಲದೇವತಾಂ ॥ ೮೪ ॥ 

ವರ್ಷೇ ವರ್ಷೇ ಪ್ರಕರ್ತವ್ಯಂ ಬಲಿದಾನಂ ಯಥಾವಿಧಿ । 

ಕಾರ್ಯಂ ಚ ಮಂಗಲಸ್ನಾನಂ ಪುರುಷೇಣ ಮಹಾತ್ಮನಾ ॥ ೮೫ ॥ 

ಗೀತಂ ನೃತ್ಯಂ ತಥಾ ವಾದ್ಯಂ ಕುರ್ನೀತ ತದ್ದಿ ನೇ ಧ್ರುನಂ। 

ತನ್ಮಾಸೇ ತದ್ದಿನೇ ನೈವ ವೃತ್ತಿನಾಶೋ ಭನೇಷ್ಯಥಾ ॥ ೮೬ ॥ 
೭೯-೮೦. ಚಿನ್ನ, ಪುಷ್ಪ » ಇಷ್ಟಾ ರ್ಥವನ್ನು ಕರೆಯುವ ಗೋವುಗಳು, 


ಸ್ವರ್ಣಾಭರಣಗಳು, ಅನೇಕ. ಹ ಗಳ eS ಇವುಗಳನ್ನು ಅತಿ ಶ್ರದ್ಧೆ 
ಯಿಂದಿತ್ತು ಸಂತೋಷಗೊಂಡನು. ಹೀಗೆ ತ್ರಿಮೂರ್ತಿಗಳಿಂದ ಸ್ಥಾ ಪಿತರಾದೆ 
ಆ ಬ್ರಾಹ್ಮಣರು ತೈವಿದ್ಯರೆನಿಸಿಕೊಂಡರು. 

೮೧. ಕಲಿಯುಗದಲ್ಲಿ ನಾಲ್ಕನೆಯವನಾದ ಕುಮಾರಪಾಲ ರಾಜನಿಂದ ಸುಖ 
ವಾಸನದಲ್ಲಿ ಸ್ಥಾಪಿತರಾದ ದ್ವಿಜರು ಚಾತುರ್ವಿದ್ಯರೆಂದು ಪ್ರಖ್ಯಾತಿಗೊಂಡರು. 

೮೨-೮೪. ಧರ್ಮಾರಣ್ಯದಲ್ಲಿ ಸ್ಥಾಪಿಸಲ್ಪಟ್ಟ ಆ ಚಾತುರ್ವಿದ್ಯರು 
ಮಹಾತ್ಮನಾದ ಆ ರಾಜನಿಗೆ ವೇದೋಕ್ತಾಶೀರ್ವಾದಗಳನ್ನು ಮಾಡಿ ಧನ್ಯರಾಗಿ 
ರಥ, ಕುದುರೆ ಇವುಗಳನ್ನೇರಿ ಅತಿ ಸಂತೋಷದಿಂದ ಮೋಹೇರಕಪುರವನ್ನು 
ಸೇರಿದರು. ಪುಷ್ಯಶುಕ್ಲ ತ್ರಯೋದಶಿಯ ದಿನ ಬ್ರಾಹ್ಮಣರು ಶಾಸನವನ್ನು ಪಡೆದು 
ಕುಲಜೇವತೆಯನ್ನುದ್ದೇಶಿಸಿ ಬಲಿಯನ್ನು ಕೊಟ್ಟರು. 

೮೫. ಹಾಗೆಯೇ ಪುರುಷನು ಪ್ರತಿವರ್ಷವೂ ವಿಧಿಯಂತೆ ಬಲಿದಾನ 
ಮಾಡಿ ಮಂಗಳಸ್ನಾನಗೈಯಬೇಕು. 

೮೬, ಆ ತಿಂಗಳ ಆ ದಿನದಲ್ಲಿ ವೃತ್ತಿಯು ಹಾಳಾಗದಂತೆ ಕುಲದೇವತಾ 
ಸನ್ನಿಧಿಯಲ್ಲಿ ಸಂಗೀತ, ನೃತ್ಯ, ವಾದ್ಯಗಳನ್ನು ಮಾಡಿಸಬೇಕು. 


ಷಲ ಶ್ರೀ ಸ್ಕಾಂದಮಹಾಪುರಾಣಂ 


ದೈನಾದತೀತಕಾಲೇ ಚೇತ್‌ ವೃದ್ಧಿರಾಪದ್ಯತೇ ಯದಾ । 


ತದಾ ಪ್ರಥಮತಃ ಕೃತ್ವಾ ಪಶ್ಚಾದ್ಭೃದ್ಧಿರ್ನಿಧೀಯತೇ ॥೮೭॥ 
ಯೇಚ ಭಿನ್ನಪ್ರಪಾಪ್ರಾಯಾಸ್ತ್ರೈವನಿದ್ಯಾ ಮೋಡವಂಶಜಾಃ । 
ತಥಾ ಚಾತುರ್ವೆೇದಿನಶ್ಚ ಕುರ್ವಂತಿ ಗೋತ್ರಪೂಜನಂ ॥ ೮೮ ॥ 


ವರ್ಷಮಧ್ಯೇ ಪ್ರಕುರ್ನೀತ ತಥಾ ಸುಪ್ತೇ ಜನಾರ್ದನೇ । 
ಸೌಷೇ ಚ ಲುಪ್ತಂ ಕೃತ್ವಾ ಚ ಶ್ರೌತಂ ಸ್ಮಾರ್ತಂ ಕರೋತಿ ಯಃ ॥ ೮೯॥ 
ತತ್ರ ಕ್ರೋಧಸಮಾವಿಷ್ಟಾ ನಿಘ್ನುಂತಿ ಕುಲದೇವತಾ । 


ನಿವಾಹೋತ್ಸವಕಾಲೇ ಚ ಮೌಂಜೀಬಂಧಾದಿ ಕರ್ಮಣಿ ॥೯೦॥ 
ಮುಹೂರ್ತಂ ಗಣನಾಥಸ್ಯ ತತಃ ಪ್ರಭೃತಿ ಶೋಭನಂ ॥೯೧॥ 
ನಿರ್ವಾಸಿತಾಸ್ತು ಯೇ ವಿಪ್ರಾ ಆಮರಾಜ್ಞಾ ಸ್ಪಶಾಸನಾತ್‌ । 

ಪಂಚದಶ ಸಹಸ್ರಾ ಣಿ ಯಯುಸ್ತೆ ಸುಖಪಾಸಕಂ ॥ ೯೨॥ 
ಪಂಚ ಪಂಚಾಶತೋ ಗಾ ್ರ್ರಮಾನ್ನದೌ ರಾಮಃ ಪುರಾ ಸ್ವಯಂ | 
ತತ್ರಸ್ಥಾವಣಿಜಕ್ರೈಿನ ತೇಷಾಂ ವೃತ್ತಿಮಕಲ್ಪಯನ್‌ ॥ ೯೩॥ 


೮೭, ಒಂದು ವೇಳೆ ತ್ರಯೋದಶಿಯು ವೃದ್ಧಿಯಾಗಿ ಮರುದಿನವೂ 
ವ್ಯಾಪಿಸಿದರೆ ಆಗ ಮೊದಲನೆಯ ದಿನವೇ ಕುಲದೇವತಾಪೂಜೆ, ಬಲಿಸಮರ್ಪಣ, 
ಗೀತ ನೃತ್ಯ ನಿವೇದನಾದಿ ಕಾರ್ಯಗಳನ್ನು ನೆರವೇರಿಸಬೇಕು. 

೮೮. ಹಾಳಾದ ಅರವಟ್ಟಿಗೆಯಂತಿರುವ ಮೋಡಢವಂಶದ ತೈನಿದ್ಯ 
ಬ್ರಾಹ್ಮಣರೂ, ಚಾತುರ್ವಿದ್ಯಬ್ರಾ ಹ್ಮಣರೂ ಗೋತ್ರದೇವತೆಯ ಪೂಜೆಯನ್ನು 
ಮಾಡಬೇಕು. 

೮೯೯೧. ವರ್ಷ ಮಧ್ಯದಲ್ಲಿಯೂ, ಚಾತುರ್ಮಾಸ್ಯದಲ್ಲಿಯೂ ಗೋತ್ರ 
ದೇವತೆಯನ್ನು ಆರಾಧಿಸಬೇಕು. ಪುಷ್ಯ ಶುಕ್ಲ ತ್ರಯೋದಶಿಯಲ್ಲಿ ಕುಲ 
ದೇವತೆಯನ್ನು ಆರಾಧಿಸದೆ ಶ್ರೌತ ಸ್ಮಾರ್ತ ಕರ್ಮಗಳನ್ನಾಚರಿಸಿದ ನರನನ್ನು 
ಕುಪಿತರಾದ ಕುಲದೇವತೆಯರು ವಧಿಸುವರು. ಮದುವೆ, ಉಪನಯನ 
ಮೊದಲಾದ ಶುಭಕಾರ್ಯಗಳಲ್ಲಿ ಮುಹೂರ್ತಕಾಲ ಗಣನಾಥನನ್ನು ಪೂಜಿಸಿದರೆ 
ಅದು ಮೊದಲ್ಗೊಂಡು ಶುಭವಾಗುವುದು. ಆದುದರಿಂದ ಪುಷ್ಯಶುಕ್ಲ ತ್ರಯೋದಶಿ 
ಯಲ್ಲಿಯೇ ಕುಲದೇವತಾ ಪೂಜೆಯನ್ನು ಮಾಡತಕ್ಕುದು. 

೯೨. ಆ ತರುವಾಯ ಆಮರಾಜನು ವೃತ್ತಿ ಕ್ರಿಹೀನರನ್ನಾಗಿಸಿ ತೈನಿದ್ಯ ವಿಪ್ರ 
ರಿಂದ ಸಂಬಂಧವನ್ನು ತೊರೆಯಿಸಿ ಹೊರಡಿಸಿದ ಆ ಹದಿನೈ ದುಸಾವಿರ ಮಂದಿ 
ಬ್ರಾಹ್ಮಃ ಇರು ಸುಖವಾಸನಸ್ಥಾ ನಕ್ಕೆ ಹೋದರು. 

ಚ ರಾಮನು ೬ನ ಹಿಂದೆ ಐವತ್ತೈದು ಗ್ರಾಮಗಳನ್ನು ಕೊಟ್ಟ 
ದನು. ಅಲ್ಲಿರುವ ಅಡಾಲಜ, ಮಾಂಡಲೀಯ, ಗೋಭೂಜ ಎಂಬ ತ್ರಿವಿಧ 


ಅಸ್ಪತ್ರಿಂಶೋ8$ಧ್ಯಾಯಃ ರೀ 
ಅಡಾಲಜಾ ಮಾಂಡಲೀಯಾ ಗೋಭೂಜಾಶ್ಚ ಪನಿತ್ರಕಾಃ । 
ಬ್ರಾಹ್ಮಣಾನಾಂ ವೃತ್ತಿದಾಸ್ತೇ ಬ್ರಹ್ಮಸೇವಾಸು ತತ್ಪರಾಃ ॥ ೯೪॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯ ಮಾಹಾತ್ಮ್ಯೇ 
“ಬ್ರಾಹ್ಮಣಾನಾಂ ಶಾಸನವೃತ್ತಿ ಪ್ರಾಪ್ತಿವರ್ಣನಂ'' ನಾಮಾಂಷೃೃತ್ರಿಂಶೋಂಧ್ಭಾಯಃ 





ಪವಿತ್ರ ವೈಶ್ಯವಂಶದವರು ಬ್ರಾಹ್ಮಣರ ಸೇನೆಯಲ್ಲಿ ನಿರತರಾಗಿ ಅವರ ವೃತ್ತಿ 
ಯನ್ನು ನೋಡಿಕೊಳ್ಳುತಿದ್ದರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯದಲ್ಲಿ "" ಬ್ರಾಹ್ಮಣಶಾಸನವೃತ್ತಿಪ್ರಾಸ್ತಿವರ್ಣನ''ವೆಂಬ 
ಮೂವತ್ತೆಂಟಿನೆಯ ಅಧ್ಯಾಯವು ಮಂಗಿದುದು 


| ಶ್ರೀಃ n 


ಅಥ್ಛೆ ಕೋನಚತ್ವಾರಿಂಶೋಧ್ಯಾಯಃ 
ಜ್ಞಾ ತಿಭೇದವರ್ಣನ 

ಬ್ರಹ್ಮೋವಾಚ:- 
ಶೃಣು ಪುತ್ರ ಪ್ರವಕ್ಟ್ಯಾನಿಂ ರಹಸ್ಯಂ ಪರಮಂ ಮತಂ । 
ಏತೇ ಬ್ರಹ್ಮನಿದಃ ಪ್ರೋಕ್ತಾಶ್ಚಾತುರ್ನಿದ್ಯಾ ಮಹಾದ್ವಿಜಾಃ ॥೧॥ 

ಸ್ವಾಧ್ಯಾಯಾಶ್ಚ ವಷಟ್ಕಾ ರಾಃಸ ಸಧಾಕಾರಾಶ್ಚ ನಿತ್ಯಶಃ । 
ರಾಮಾಜ್ಞಾ ಪಾಲಕಾಶ್ಚೆ ತ್ರ ಹನುಮದ್ಭ ಕ್ತಿ ತತ್ಸರ ರಾಃ ॥೨॥ 
ಏಕದಾ ತು ತತೋ ಚಾ ಬ್ರಹ್ಮಾ ಹ ನ | 
ಬ್ರಾಹ್ಮಣಾನ್ನ | ಷ್ಟುಕಾಮಾಸ್ತೇ « ಬ್ರಹ್ಮನಿಷ್ಣು ಪುರೋಗಮಾಃ ॥೩॥ 
ತಾನೆ ಕೀನಾನಾಸತಾನ್ಸ್ಹ ಸ್ಟ್ಟಾಸ್ಟಾ ಸ್ಥಾ "ನಾಚ ಲಿತಾಸ್ತು ತೇ । 
ಅರ್ಥ್ಯಪಾದ್ಯಂ ಪುರಸ್ಕೃ ತ್ಯ 'ಮೆಥುಪರ್ಕೆಂ ತಥ್ಸೈ ವ ಚ ॥೪॥ 
ಪೂಜಯಿತ್ವಾ ತತೋ" ನಿಷ್ರಾ ದೇವಾನ್ಸ್ರ ಹ್ಮ ಪುರೋಗಮಾನ್‌ | 
ಬ್ರಹ್ಮಾಗ್ರ ಉಪನಿಷ್ಟಾಸ್ತೇ ವೇದಾನುಚ್ಚಾರಯಂತಿ ಹಿ ೫ 
ಸಂಹಿತಾಂ ಚ ಸದಂ ಚೈನ ಕ್ರಮಂ ಘನಂ ತಥೈನ ಚ । 
ಉಚ್ಛೆಃ ಸ್ವರೇಣ ಕುರ್ವೀತ ಯುಚಾಮೃಗ್ಹೇದಸಂಹಿತಾಂ ॥೬॥ 








ಕನ್ನಡದ ಅನುವಾದ 


ಜ್ಞಾ ತಿಭೇದವರ್ಣನ 


೧-೨. ಬ್ರಹ್ಮನು ಹೇಳುತ್ತಾನೆ:--ಮಗು! ಕೇಳು. ಉತ್ತಮವಾದ 
ರಹಸ್ಯವನ್ನು ನಿನಗೆ ಹೇಳುವೆನು. ಈ ಚಾತುರ್ನಿದ್ಯಬ್ರಾಹ್ಮಣರು ವೇದಾಧ್ಯಯನ, 
ಯಜ್ಞ ಶ್ರಾ ದೃಗಳನ್ನು ಮಾಡುತ್ತ ರಾಮನ ಆಜ್ಞೆಯನ್ನು ಪಾಲಿಸುವವರೂ, 
ಹನುಮಂತನಲ್ಲಿ ಭಕ್ತಿಯುಳ್ಳವರೂ ಆಗಿ ಬ್ರ ್ರ) ಹೈಜ್ಞಾನಿಗಳೆನಿಸಿಕೊಂಡರು. 

೩. ತರುವಾಯ ಒಳದಾನೊತದು ಸ ಸಮಯದಲ್ಲಿ ದೇವತೆಗಳು ತ್ರಿ ಮೂರ್ತಿ 
ಗಳೊಡನೆ ಆ ಬ್ರಾಹ್ಮಣರನ್ನು ನೋಡಲೋಸುಗ ಅವರ ಬಳಿಗೆ ಸಕಕ 

೪-೫, ಆ ಬ್ರಾಹ್ಮಣರು ಹೀಗೆ ಬಂದಿರುವ ದೇವತೆಗಳನ್ನು ಕಂಡು ತಮ್ಮ 
ಸ್ಥಳದಿಂದ ಹೊರಟು ಅರ್ಫ್ಯಪಾದ್ಯಾದಿಗಳಿಂದ ಆ ಬ್ರಹ್ಮಾದಿ ದೇವತೆಗಳನ್ನು 
ಆರಾಧಿಸಿ ಬ್ರಹ್ಮನಮುಂದೆ ಕುಳಿತು ವೇ ದಾಧ್ಯಯನಮಾಡಿದರು. 

೬. ಖುಕ್ಕಾಖೆಯವರು ಸಂಹಿತೆ, ಪದ, ಕ್ರಮ, ಘನಗಳನ್ನೂ ಉಚ್ಚಸ್ವರ 
ದಿಂದ ಪಠಿಸಿದರು. 


ಏಕೋನಚತ್ವಾರಿಂಶೋ$ಧ್ಯಾಯಃ ೪೦೧ 


ಸಾಮಗಾ ಶ್ಚ ಪ್ರಕುರ್ವಂತಿ ಸ್ತೋತ್ರಾಣಿ ನಿನಿಧಾನಿ ಚ । 
ಶಾಸ್ತ್ರಾಣಿ ಚ ತಥಾ ಯಾಜ್ಯಾ ಪುರೋನುನಾಕ್ಕಾಸ್ತಥಾ nen 
ಚತುರಕ್ಸರಂ ಪರಂ ಚೈವ ಚತುರಕ್ಪರಮೇನ ಚ । 


ದ್ವ್ಯಕ್ಸರಂ ಚ ತಥಾ ಪಂಚಾಕ್ಟರಂ ದ್ವ್ಯಕ್ಸರ ಮೇನ ಚ! 


ಏತದ್ಯಜ್ಞಸ್ವರೂಪಂ ಚ ಯೋ ಜಪೇತ್‌ ಜ್ಞಾನಪೂರ್ವಕಂ hen 
ಅಂತೇ ಬ್ರಹ್ಮಸದಸ್ರಾಪ್ತಿಃ ಸತ್ಯಂ ಸತ್ಯಂ ವದಾಮ್ಯಹಂ | 
ಏಕಾಗ್ರಮಾನಸಾಃ ಸರ್ವೇ ವೇದಪಾಠರತಾ ದ್ವಿಜಾಃ men 
ತೇಸಾಮುಂಗಣದೇಶೇಷು ಕಂಡೂಯಂತೇ ಕಚಾನ್ಮೃಗಾಃ । 

ಬ್ರಾಹ್ಮಣಾ ನೇದಮಾತಾಂ ಚ ಜಪಂತಿ ನಿಧಿಸೂರ್ವಕಂ 1.೧೦॥ 
ಹಸ್ತೇ ಧೃತಾಂಶ್ಚ ತೈರ್ದರ್ಭಾನೃಕ್ಸಂತೇ ಮೃಗಪೋತಕಾಃ । 

ನಿರ್ವೈರಂ ತಂ ತದಾ ದೃಷ್ಟ್ಯಾ ಆಶ್ರಮಂ ಗೃಹಮೇಧಿನಾಂ ॥೧೧॥ 
ತುತುಷುಃ ಪರಮಂ ದೇನಾ ಊಚುಸ್ತೇ ಚ ಪರಸ್ಪರಂ । 
ತ್ರೇತಾಯುಗಮಿದಾನೀಂ ಚ ಸರ್ವೇ ಧರ್ಮಪರಾಯಣಾಃ ॥ ೧೨॥ 
ಕಲಿರ್ದುಷ್ಟಸ್ತಥಾ ಪ್ರೋಕ್ತಃ ಕಿಂ ಕರಿಷ್ಕತಿ ಸಾಪಕಃ । 
ಚಾತುರ್ವಿದ್ಯಾನ್ಸಮಾಹೂಯ ಊಚುಸ್ತೇ ತ್ರಯ ಏನ ಚ ॥ ೧೩॥ 
ವೃತ್ಯರ್ಥಂ ಭನತಾಂ ಚೈನ ತ್ರೆನಿದ್ಯಾನಾಂ ತಥೈವ ಚ । 

ನಿಭಾಗಂ ವಃ ಪ್ರದಾಸ್ಯಾನೋ ಯಥಾವತ್ತತಿಸಾಲ್ಯತಾಂ ॥ ೧೪ ॥ 





೭-೯. ಸಾಮವೇದಿಗಳು ಸ್ರೋತ್ರಗಳನ್ನೂ, ವಿವಿಧ ಶಾಸ್ತ್ರಗಳನ್ನೂ, 
ಯಾಜ್ಯಪುರೋನುವಾಕ್ಯಗಳನ್ನೂ, ಜ್ಞಾನ ಪೂರ್ವಕವಾಗಿ ಜನಿಸಿದರು; ಬ್ರಹ್ಮನದ 
ವನ್ನು ಕೊಡುವ ಯಜ್ಞ ಸಂಬಂಧವಾದ ಯಜಾಮಹೇ, ಅಸ್ತುಶ್ರೌಷಟ್‌, 
ಯಜ, ಯಜಾಮಹೇ, ವೌಷಟ್‌ ಎಂಬ ಎರಡು ಚತುರಕ್ಸರ, ದ್ವ್ಯಕ್ಸುರ, 
ಪಂಚಾಕ್ಟರ, ವಾಕ್ಯಗಳನ್ನೂ ಒಮ್ಮನಸ್ಸಿನಿಂದ ಪಠಿಸಿದರು. 

೧೦-೧೪. ಅವರ ಅಂಗಣಗಳಲ್ಲಿ ಮೃಗಗಳು ಕೂದಲುಗಳನ್ನು ತುರಿಸಿ 
ಕೊಳ್ಳುತ್ತಿದ್ದುವು. ಬ್ರಾಹ್ಮಣರು ವಿಧಿಯಂತೆ ವೇದಮಂತ್ರಗಳನ್ನು ಜಪಿಸಿದರು. 
ಅವರು ಕೈಯಲ್ಲಿ ಹಿಡಿದ ದರ್ಭೆಗಳನ್ನು ಜಿಂಕೆ ಮರಿಗಳು ತಿನ್ನುತ್ತಿದ್ದುವು. ಹೀಗೆ 
ವೈರವಿಲ್ಲದ ಆ ಗೃಹಸ್ಥರ ಆಶ್ರಮಗಳನ್ನು ಕಂಡು ದೇವತೆಗಳು ಹರ್ಷಗೊಂಡು 
« ಇವರೆಲ್ಲರೂ ಧರ್ಮನಿರತರಾದುದರಿಂದ ಈಗಲೇ ತ್ರೇತಾಯುಗವೆಂದು ಹೇಳ 
ಬೇಕು. ಕಲಿಯು ದುಷ್ಟನಾದರೂ ಪಾಪಿಯಾದ ಅವನು ಏನುಮಾಡಬಲ್ಲನು?'' 
ಹೀಗೆಂದು ಪರಸ್ಪರ ಮಾತನಾಡಿಕೊಂಡರು. ಆ ತ್ರಿಮೂರ್ತಿಗಳು ಚಾತುರ್ವಿದ್ಯ 
ರನ್ನು ಕರೆದು, ""ನಿಮ್ಮ ಮತ್ತು ತೈವಿದ್ಯರ ವೃತ್ತಿಯನ್ನು ನಿಭಾಗಮಾಡುನೆವು. 
ನೀವು ಅದರಂತೆ ನಿಮ್ಮನಿಮ್ಮ ವೃತ್ತಿಗಳನ್ನು ರಕ್ಸಿಸಬೇಕು. 


೪೦೨ ಶ್ರೀ ಸ್ಮಾಂದಮ ಹಾಪುರಾಣಂ 


ಯೇ ವಣಿಜಃ ಪುರಾ ಪ್ರೋಕ್ತಾಃ ಷಟ್ಟ್ರಂಶಚ್ಚ ಸಹಸ್ರಕಾಃ । 


ತ್ರಿಸಹಸ್ರಾಸ್ತು ತ್ರೆನಿದ್ಯಾ ದಶಪಂಚಸಹಸ್ರಕಾಃ ॥ ೧೫ ॥ 
ಚಾತುರ್ನಿದ್ಯಾಸ್ತಥಾ ಪ್ರೋಕ್ತಾ ಅನ್ಯೋನ್ಯಂ ವೃತ್ತಿಮಾಶ್ರಿತಾಃ । 
ಸತ್ತ್ರಿಭಾಗಾಸ್ತು ತ್ರೈನಿದ್ಯಾಶ್ಹತುರ್ಭಾಗಾಸ್ತು ಚಾತ್ರಿಣಃ ॥ ೧೬ ॥ 
ವಣಿಜಾಂ ಗೃಹಮಾಗತ್ಯ ಪೌರೋಹಿತ್ಯಸ್ಯ ನಿತ್ಯಶಃ । 

ಭಾಗಂ ವಿಭಜ್ಯ ಸಂಪ್ರಾಪುಃ ಕಾಜೇಶೇನ ವಿನಿರ್ಮಿತಾಃ ॥ ೧೭ ॥ 
ಪರಸ್ಪರಂ ನ ನಿವಾಹಶ್ಚಾತುರ್ನಿದ್ಯ ತ್ರಿನಿದ್ಯಯೋಃ । 

ಚಾತುರ್ನಿದ್ಯಾ ಮಯಾ ಪ್ರೋಕ್ತಾಸ್ತ್ರಿನಿದ್ಯಾಸ್ತು ತಥೈನ ಚ ॥ ೧೮ ॥ 
ತ್ರೈನಿಭಾಗೇನ ತ್ರೈನಿದ್ಯಾಶ್ಚತುರ್ಭಾಗೇನ ಚಾತ್ರಿಣಃ । 

ಏನಂ ಜ್ಞಾತಿನಿಭಾಗಸ್ತು ಕಾಜೇಶೇನ ನಿನಿರ್ನೀತಃ ॥೧೯॥ 
ಕೃತಕೃತ್ಯಾಸ್ತು ತೇ ವಿಪ್ರಾಃ ಪ್ರಣೇಮುಸ್ತಾನ್ಸುರೋತ್ತಮಾನ್‌ । 

ವೃತ್ತಿಂ ದತ್ವಾ ತತೋ ದೇವಾಃ ಸ್ವಸ್ಥಾನಂ ಚ ಪ್ರತಸ್ಥಿರೇ ॥ ೨೦॥ 
ಪಂಚ ಸಂಚಾಶದ್ಧಾಮಾಣಾಂ ತೇ ದ್ವಿಜಾಶ್ಚ ನಿವಾಸಿನಃ । 
ಚತುರ್ನಿದ್ಯಾಸ್ತು ತೇ ಸ್ರೋಕ್ತಾಸ್ತದಾದಿತು ತ್ರಿನಿದ್ಯಕಾಃ ॥ ೨೧॥ 
ಚಾತುರ್ನಿದ್ಯಸ್ಯ ಗೋತ್ರಾಣಿ ದಶಪಂಚ ತಥೈವ ಚ। 

ಭಾರದ್ವಾಜಸ್ತಥಾ ವತ್ಸಃ ಕೌಶಿಕಃ ೩ ಕುಶ ಏವ ಚ ॥ ೨೨ ॥ 


ತಾಂಡಿಲ್ಯಃ ೫ ಕಶ್ಯಪಶ್ರೈನ ಗೌತಮಶ್ಸಾದನ ಸ್ತಥಾ ೮। 
ಜಾತೂಕರ್ಣ್ಯಸ್ತಥಾಕುಂತೋ ವಸಿಷ್ಠೋ ೧೧ ಧಾರಣ ಸ್ತಥಾ ॥ ೨೩॥ 





೧೫-೧೭. ಹಿಂದೆ ಹೇಳಿದ ಮೂವತ್ತಾರು ಸಾವಿರ ವರ್ತಕರೂ, ಮೂರು 
ಸಾವಿರ ತೈವಿದ್ಯರೂ, ಹದಿನೈದು ಸಾವಿರ ಚಾತುರ್ವಿದ್ಯರೂ ಆದ ನೀವು ಪರಸ್ಪರ 
ವೃತ್ತಿಯನ್ನಾಶ್ರಯಿಸಿದ್ದೀರಿ. ತ್ರಿಮೂರ್ತಿಗಳಿಂದ ನಿರ್ಮಿತರಾದ ನಿಮ್ಮಲ್ಲಿ 
ಮೂರು ಭಾಗದ ತೈವಿದ್ಯರೂ, ನಾಲ್ಕು ಭಾಗದ ಚಾತುರ್ವಿದ್ಯರೂ ವೈಶ್ಯರ 
ಮನೆಯ ಪೌರೋಹಿತ್ಯವನ್ನು ವಿಭಾಗಿಸಿ ಅನುಭವಿಸಬೇಕು. 

೧೮-೧೯. ಮೂರು ಭಾಗದ ತ್ರೈನಿದ್ಯರಿಗೂ, ನಾಲ್ಕು ಭಾಗದ ಚಾತುರ್ವಿದ್ಯ 
ನಿಗೂ ಪರಸ್ಪರ ವಿವಾಹವು ಕೂಡದು.” 

೨೦. ಕೃತಕೃತ್ಯರಾದ ಬ್ರಾ ಹ್ಮಣರು ಆ ದೇವತೆಗಳನ್ನು ನಮಸ್ಕರಿಸಿದರು. 
ಜೀವತೆಗಳು ಹೀಗೆ ವೃತ್ತಿವಿಭಾಗಮಾಡಿ ತಮ್ಮ ಸ್ಥಾನಕ್ಕೆ ತೆರಳಿದರು. 

೨೧. ಅದು ಮೊದಲ್ಗೊಂಡು ಐನತ್ರೈದು ಗ್ರಾಮಗಳಲ್ಲಿ ತೈವಿದ್ಯರೂ 
ಚಾತುರ್ನಿದ್ಯರೂ ವಾಸಮಾಡಿಕೊಂಡಿದ್ದರು. 

೨೨-೨೪, ಚಾತುರ್ವಿದ್ಯರು ಹದಿನೈದು ಗೋತ್ತವುಳ್ಳವರು. ಆ ಗೋತ್ರ 
ಗಳು :--ಭಾರದ್ದಾಜ, ವತ್ಸ, ಕೌಶಿಕ, ಕುಶ, ಶಾಂಡಿಲ್ಯ, ಕಶ್ಯಪ, ಗೌತಮ, 


ಏಕೋನಚತ್ವಾರಿಂಶೋ$ಧ್ಯಾಯ।ಃ ೪೦೩೭ 


ಆತ್ರೆ ೀಯೋರ್ಮಾಂಡಿಲಕ್ಟೆ ವನ ೧೪ ಲೌಗಾಕ್ಟ, ಶ್ಚ ೧೫ ತತಃ ಹರಂ । 


ಸ್ಟ ಸಾ ನಾನಾಂ ಚ ಪಿ ಪ್ರನಕ್ಸ್ಯ್ಯಾ ಮ್ಮನುಪೂರ್ವಶಃ ॥ ೨೪॥ 
ಸೀತಾಪುರಂ ಚ ಶ್ರೀಕ್ಸೇತ್ರಂ ೨ 'ಮುಗೋಡೀ ಚ೩ ತಥಾಸ್ಮೃತಾ। 
ಜ್ಯೇಕಲೋಜಸ್ತ್ವಫಾ ಚಿ ನ ಶೇರಥಾ ಚ ತತಃ ಪರಂ ॥ ೨೫ ॥ 
ಛೇದೇ ತಾಲೀ ಕೋಡಿ! ಚ ಗೋವ್ಯಂದಲೀ ತಥೈವ ಚ। 

ಕಂಟಾ ಚೋಷಲೀ ಚೈನ ಕೋಹೇ ಚಂ ಚಂದನಸ್ತಥಾ ॥ ೨೬ ॥ 


ಥಲಗ್ರಾಮಶ್ಚ ಸೋಹಂ ಚ ಹಾಥಂಜಂ ಕಪಡವಾಣಕಂ । 

ವ ಪ್ರಜನ್ಹೊ €ರೀ ಚ ನನೋಡೀ ಚ ಫೀಣಾಂ ನಗೋಲಂ ದೃಣ ಸ್ತಥಾ ॥೨೭॥ 
ಇರಾ "ಚಾರಣಂ ಸಿದ್ಧಾ ಭಾಲಜಾಶ್ಚ ತತಃ ಪರಂ । 

ಮಹೋವೀ ಆಈಯಾ “ುಲೀಆ ಗೋಧರೀ ಆಮತಃ ಪರಂ ॥೨೮॥ 
ವಾಠಸುಹಾಲೀ ತಥಾ ಚೈನ ಮಾಣಜಾಸಾನದೀಯಾ ಸ್ತಥಾ । 
ಆನಂದೀಯಾ ಪಾಟಿಡೀ ಅಟೀಕೋಲೀಯಾ ತತಃ ಪರಂ ॥೨೯॥ 
ಗಂಭೀ ಧಣೇ ಆಮಾತ್ರಾಚ ನಾತಮೋರಾಸ್ತಥೈನ ಚ । 

ವಲೋಲಾ ರಾಂತ್ಯಜಾಶ್ಚೈನ ರೂಪೋಲಾ ಬೋಧಣೇ ಚವೈ ॥೩೦॥ 
ಛತ್ರೋಟಾ ಅಲು ಏವಾ ಚ ವಾಸತಡೀ ಆಮತಃ ಪರಂ । 

ಜಾಷಾಸಣಾ ಗೋತೀಯಾ ಚ ಚರಣೀಯಾ ದುಧೀಯಾಸ್ತಥಾ ॥ ೩೧॥ 
ಹಾಲೋಲಾ ವೈಹೋಲಾ ಚ ಅಸಾಲಾ ನಾಲಾಡಾಸ್ತಥಾ । 
ದೇಹೋಲೋ ಸೌಹಾಸೀಯಾ ಚ ಸಂಹಾಲೀಯಾ ಸ್ತಫೈವ ಚ ॥ ೩೨॥ 





ಛಾದನ, ಜಾತೂಕರ್ಣ್ಯ್ಯ, ಕುಂತ, ವಸಿಷ್ಠ, ಧಾರಣ, ಆತ್ರೇಯ, ಮಾಂಡಿಲ, 
ಲೌಗಾಕ್ಸ ಎಂಬವು. ಸ್ವಸ್ಥಾನಗಳ ಹೆಸರುಗಳನ್ನು ಕ್ರಮವಾಗಿ ಹೇಳುವೆನು. 
೨೫-೩೩. ಸೀತಾಪುರ, ಶ್ರೀಕ್ಷೇತ್ರ, ಮಗೋಡೀ, ಜ್ಯೇಠಶಲೋಜ, 
ಶೇರಥಾ, ಛೇದೇ, ಗೋವ್ಯಂದಲೀ, ಕ ಬಾಚಸಇಳ್ಳ ಕೋಹೇಚ, ಚಂದನ, 
ಥಲಗ್ರಾಮ, ತಾಲೀ, ವನೋಡೀ, ಸೋಹ, ಹಾಥಂಜ, ಕಪಡವಾಣಕ, 
ವ್ರಜನ್ನೋರೀ, ಫೀಣಾ, ವಗೋಲ, ದೃಣ, ಧಲಜಾ, ಚಾರಣ, ಸಿದ್ಧಾ, 
ಭಾಲಜಾ, ಮಹೋವೀ, ಆಈಯಾ, ಆ ಗೋಧರೀ, ವಾಠಸುಹಾಲೀ, 
ಮಾಣಜಾ, ಸಾನದೀಯಾ, ಆನಂದೀಯಾ, ಪಾಟಡೀಅ, ಹೀಕೊಲೀಯಾ, 
ಗಂಭೀ, ಧಣೀಆ, ಮಾತ್ರ, ನಾತಮೋರಾ, ವಲೋಲಾ, ರಾಂತ್ಯಜಾ, 
ರೂಪೋಲಾ, ಬೋಧಣೇ, ಛತ್ರೋಟಾ, ಅಲುವಿವಾ, ವಾಸತಡೀ, ಜಾಷಾಸಣಾ, 
ಗೋತೀಯಾ, ಚರಣೀಯಾ, ದುಧೀಯಾ, ಹಾಲೋಲಾ, ವೈಹೋಲಾ, 
ಅಸಾಲ್ಲಾ, ನಾಲಾಡಾ, ದೇಹೋಲೊ, ಸಾಹಾಸೀಯಾ, ಸಂಹಾಲೀಯಾ, 


೪೦೪ ಶ್ರೀ ಸ್ಕಾಂದಮಹಾಪುರಾಣಂ 


ಸ್ವಸ್ಥಾನಂ ಪಂಚ ಪಂಚಾಶದ್ದಾ್‌ಮಾ ಏತೇಹ್ಯನುಕ್ರ ಮಾತ್‌ | 


ಪತ್ತಾ ರಾಮೇಣ ನಿಧಿವತೃತ್ವಾ ನಿಪ್ರೇಭ್ಯ ಏನ ಚ ॥ ೩೩॥ 

ಅತಃ ಪರಂ ಪ್ರನಕ್ಸ್ಟ್ಯಾಮಿ ಸ್ಪಸ್ಥಾನಸ್ಯ ಚ ಗೋತ್ರಜಾನ್‌ । 

ತಥಾಹಿ ಪ್ರವರಾಂಶ್ಚೆವ ಯಥಾನದ್ವಿಧಿಪೂರ್ವಕಂ ॥ ೩೪॥ 

ಜ್ಞಾತ್ವಾ ತು ಗೋತ್ರದೇವೀಂ ಚ ತಥಾ ಪ್ರನರ ಮೇನ ಚ । 

ಸ್ವಸ್ಥಾನಂ ಜಾಯತೇ ಚೈನ ದ್ವಿಜಾಃ ಸ್ವಸ್ಥಾನ ನಾಸಿನಃ ॥ ೩೫ ॥ 
ನಾರದ ಉವಾಚ :-- 

ಕಥಂ ಚ ಜಾಯತೇ ಗೋತ್ರಂ ಕಥಂ ತು ಜ್ಞಾಯತೇ ಕುಲಂ । 

ಕಥಂ ವಾ ಜ್ಞಾಯತೇ ದೇನೀ ತದ್ಧದಸ್ವ ಯಥಾರ್ಥತಃ ॥ ೩೬ ॥ 
ಬ್ರಹ್ಮೋವಾಚ :- 

ಸೀತಾಪುರಂ ತು ಪ್ರಥಮಂ ಪ್ರನರದ್ವಯಮೇನ ಚ । 

ಕುಶನತ್ಸ್‌ ತಥಾ ಚಾಂತ್ರ ಮಯಾ ತೇ ಪರಿಕೀರ್ತಿತೌ ‘NaN 

೧ ಶ್ರೀಕ್ಸೇತ್ರೇ ದ್ವಿತೀಯಂ ಚೈವ ಗೋತ್ರಾಣಾಂ ತ್ರಯಮೇವ ಚ । 

ಛಾಂದನಸಸ್ತಥಾನತ್ಸಸ್ತೃತೀಯಂ ಕುಶಮೇವ ಚ ॥೩೮॥ 

ತೃತೀಯಂ ಮುದ್ದಲಂ ಚೈವ ಕುಶಭಾರದ್ವಾಜಮೇನ ಚ ೩ । 

ಶೋಹೋಲೀಚ ಚತುರ್ಥಂ ವೈ ಕುಶಪ್ರನರನೇನ ಚ ॥೩೯॥ 


ಸಂಹಾಲೀಯಾ, ಎಂಬ ಐವತ್ರೈದುಗ್ರಾಮಗಳನ್ನು ರಾಮನು ಬ್ರಾಹ್ಮಣರಿಗೆ 
ಕೊಟ್ಟನು. 

೩೪. ಇನ್ನು ಮುಂದೆ ಆಸ್ಥಾ ನದ ಬ್ರಾಹ್ಮಣರ ಗೋತ್ರಜರನ್ನೂ , ಪ್ರವರ 
ಗಳನ್ನೂ ಕ್ರಮದಂತೆ ಹೇಳುವೆನು. 

೩೫. ಗೋತ್ರದೇನವಿಯನ್ನೂ, ಪ್ರವರವನ್ನೂ ತಿಳಿದುಕೊಂಡರೆ 
ಬ್ರಾಹ್ಮಣರು ಸ್ವಸ್ಥಾನವಾಸಿಗಳಾಗುವರು. 

೩೬. ನಾರದನು ಹೇಳುತ್ತಾನೆ:--ಗೋತ್ರ, ಕುಲ, ಗೋತ್ರದೇವಿ 
ಇವರನ್ನು ತಿಳಿದುಕೊಳ್ಳುವ ಬಗೆ ಹೇಗೆ? ಅದನ್ನು ಯಥಾರ್ಥವಾಗಿ ಹೇಳು. 

೩೭. ಬ್ರಹ್ಮನು ಹೇಳುತ್ತಾನೆ: ಮೊದಲನೆ ಸೀತಾಪುರಕ್ಕೆ ಕುಶ, ವತ್ಸ 
ಎಂಬ ಎರಡು ಪ್ರವರಗಳು. 

೩೮. ಎರಡನೆ ಶ್ರೀ ಕೇತ್ರಕ್ಕೆ ಛಾಂದನಸ, ವತ್ಸ, ಕುಶ ಎಂಬ ಮೂರು 
ಪ್ರವರಗಳು. 

೩೯. ಮೂರನೆ ಕ್ಷೇತ್ರಕ್ಕೆ ಮುದ್ಗಲ, ಕುಶ, ಭಾರದ್ವಾಜ ಪ್ರವರಗಳು. 
ತೋಹೋಲೀ ಎಂಬ ನಾಲ್ಕನೇ ಕ್ಷೇತ್ರಕ್ಕೆ ಕುಶ ಎಂಬ ಪ್ರವರವು. 


ಏಕೋನಚತ್ವಾರಿಂಶೋರ6ಧ್ಯಾಯಃ ೪೦೫ 


ಜ್ಯೇಷ್ಮಲಾ ಸಂಚನುಶ್ಚೆನ ವತ್ಸಕುಶೌ ಪ್ರಕೀರ್ತಿತೌ ೫ | 


ಶ್ರೇಯಸ್ಥಾನಂ ಹಿ ಷಷ್ಮಂ ವೈ ಭಾರದ್ವಾಜಃ ಕುಶಸ್ತಥಾ n von 
ದಂತಾಲೀ ಸಪ್ತಮಂ ಚೈವ ಭಾರದ್ವಾಜಃ ಕುಶಸ್ತಥಾ ೧1 
ವಟಿಸ್ಥಾನಮಷ್ಟಮಂ ಚ ನಿಬೋಧ ಸುತಸತ್ತಮ ॥ ೪೧॥ 
ತತ್ರ ಗೋತ್ರಂ ಕುಶಂ ಕುತ್ಸಂ ಭಾರದ್ವಾಜಸ್ತಥೈನ ಚ । 

ರಾಜ್ಞ $ ಪುರಂ ನನಮಂ ಚ” ಭಾರದ್ವಾ ಜಪ್ರ ವರನೇವ ಚ ೯ ॥ ೪೨॥ 
ಕೃ ಸ್ಥ ನಾಟಂ ದಶಮಂ ಚೈವ ಕುಶಪ್ಪ ನರಮೇವ ಚ। 
ಧಮಾಕ “ನತ ಪ್ರ ನರಮೇವ ಹಿ ॥ ೪೩ 1 
ಚೇಖಲೀ ದ್ವಾದಶಂ ಪೌಕಕುಕಪ್ರವರನೇವ ಚ ॥ ೪೪ ॥ 


ಚಾಂಚೋದಖೇ ೧೨ ದೇಹೊಲೋಡೀ ಆತ್ರೇಯಶ್ಚ ವತ್ಸಕುತ್ಸಕಕ್ಷೆನ | 
ಭಾರದ್ವಾಜೀ ಕೋಣಾಯಾ ಚ ಭಾರದ್ವಾಜ ಗೋಲಂ ದೃಣಾಶಕುಸ್ತಥಾ॥ 
ಫಲತ್ಯಜಾದ್ವ್ಧಯೇ ಚೈನ ಕುಶಧಾರಣಮೇವ ಚ । 


ನಾರಣಸಿದ್ದಾ. ಚ ಸ್ಟ ಸ್ಪಾ ನಂ ಕುತ್ಸಂ ಗೋತ್ರ ೦ ಪ್ರಕೀರ್ತಿತಂ ॥ ೪೬॥ 
ಭಾಲಜಾಂ ಕುತ್ಸ ನತ್ತಾ ಚ ವಾಸಿ ಆಕುಶಸ ಸ್ಪಥಾ । 
ಈಯಾಶ್ಲೀಆ ಶಾಂಡಿಶಿಕ್ಟ ಗೋಧರೀ ಪಾತ್ರ ಮೇನ. ಚ ॥ ೪೭॥ 


೪೦. ಐದನೆ ಜ್ಯೇಷ್ಠಲಾಕ್ಸೇತ್ರಕ್ಕೆ ವತ್ಸ, ಕುಶ ಪ್ರವರಗಳು. ಶ್ರೇಯ 
ಸ್ಥಾನವೆಂಬ ಆರನೆ ಕ್ಸೇತ್ರಕ್ಸೆ ಭಾರದ್ವಾಜ, ಕುಶ ಪ್ತ ತ್ರ ವರಗಳು. 

೪೧-೪೨. ಏಳನೆ ದಂತಾಲೀ ಕೇತ್ರಕ್ಕೆ ಭಾರದ್ವಾಜ, ಕುಶ ಪ್ರವರಗಳು. 
ಎಂಟನೆ ವಟಸ್ಥಾನಕ್ಕೆ ಕುಶ, ಕುತ್ಸ, ಭಾರದ್ವಾಜ ಪ್ರವರಗಳು. ಒಂಬತ್ತನೆ 
ರಾಜಪುರಕ್ಕೆ ಭಾರದ್ವಾಜ ಪ್ರವರವು. 

೪೩. ಹತ್ತನೆ ಕೃಷ್ಣವಾಟಕ್ಲೇತ್ರಕ್ಕೆ ಕುಶಪ್ರವರವು. ದಹಲೋಡವೆಂಬ 
ಹನ್ನೊಂದನೆ ಕ್ಲೇತ್ರ ಕ ವತ್ಸಪ್ರವರವು. 

೪೪. ಹನ್ನೆರಡನೆ ಜೇಖಲೀ ಕ್ಷೇತ್ರಕ್ಕೆ ಪೌಕಕುಶಪ್ರವರವು. 

೪೫-೪೬. *.ಚಾಂಚೋದಖಕ್ಟೇತ್ರತ್ಕೆ ಆತ್ರೇಯ ಪ್ರವರವು. ದೇಹೊ 
ಲೋಡೀ ಕ್ಸೇತ್ರಕ್ಕೆ ವತ್ಸಕುತ್ಸಕಪ್ರವರವು, ಭಾರದ್ವಾಜೀ ಕೋಣಾಕೆ ಕೇತ ಕ್ಕೆ 
ಭಾರದ್ವಾಜ, ಗೋಲಂದೃಣ, ಆಕುಶ ಪ್ರವರಗಳು, ಥಲತ್ಯಜಾ ಕ್ಲೇತ್ರಗಳಿಗೆ 
ಕುಶಧಾರಣ ಪ್ರವರಗಳು. ನಾರಣ ಸಿದ್ಧಾ ಕ್ಸೇತ್ರಕ್ಕೆ ಕುತ್ಸ | ತ್ರ ವರವು. 

೪೭. ಭಾಲಜಾಕ್ಸೇತ್ರಕ್ಕೆ ಕುತ್ಸ ವತ್ತ ಪ್ರ ಕ ಮೋಹೋವೀ 
ಕ್ಷೇತ್ರಕ್ಕೆ ಆಕುಶಪ್ರವರವು. ಈ ಯಾಶ್ಸೀಅಕ್ಷೇತ್ರಕ್ಕೆ ಶಾಂಡಿಲಪ್ರವರವು. 
ಗೋಧರಿಗೆ ಪಾತ್ರಪ್ರವರವು. 


೪೦೬ ಶ್ರೀ ಸ್ಕಾಂದಮಹಾಪುರಾಣಂ 


ಆನಂದೀಯಾ ದ್ವೇ ಚೈವ ಭಾರದ್ವಾಜ । 


ಶಾಂಡಿಲಶ್ಚೈನ ಪಾಟಿಡೀಆ ಕುಶಮೇನ ಚ ॥ ೪೮೪ 
ವಾಸಂಡೀಆಶ್ಚೆನ ಜಾಸ್ಟಾ ಕೌತ್ಸಮಣಾ । 
ನತ್ಸ ಆತ್ರೇಯೌ ಗೀತಾ ಆಕುಶ ಗೌತಮೌ ॥೪೯॥ 
ಚರಣೀ ಆ ಭಾರದ್ವಾಜಃ ದುಧೀಆಧಾರಣಸಾ ಹಿ । 
ಆಹೋ ಸೋನ್ನಾಮಾಂಡಿಲ್ಯ ಸ್ತಥಾ ॥ ೫೦॥ 
ನೈಲೋಲಾ ಹುಶಶ್ಚೈವಾ ಅಸಾಲಾ । 
ಕುಶಶ್ಚೈನ ಧಾರಣಾಚ ದ್ವಿತೀಯಕಂ ॥ ೫೧॥ 
ನಾಲೋಲಾ ನತ್ಸಧಾರಣೇಯಾ ಚ ದೇಲೋಲಾ ಕುತ್ಸಮೇನ ಚ । 
ಸೋಹಾಸೀಯಾ ಭಾರದ್ವಾಜ ಕುಶನತ್ಸಮೇನ ಚ ॥ ೫೨ ॥ 


ಸುಹಾಲೀ ಆ ನತ್ಸಂ ವೈ ಪ್ರೋಕ್ತಂ ಗೋತ್ರಾಣಿ ಯಥಾಕ್ರಮಂ | 
ಮಯಾ ಪ್ರೋಕ್ತಾನಿ ಚೈವಾಂತ್ರ ಸ್ಪಸ್ಥಾನಾನಿ ಯಥಾಕ್ರಮಂ ॥ ೫೩॥ 
ಶೀತವಾಡಿಯಾ ಯೇ ಪ್ರೋಕ್ತಾಃ ಕುಶೋ ವತ್ಸಸ್ತಥೈನ ಚ । 


ವಿಶ್ವಾಮಿತ್ರೋ ದೇವರಾತಸ್ತೃತೀಯೋ ದಲಮೇವ ಚ ॥ ೫೪ ॥ 
ಭಾರ್ಗವಚ್ಯಾವನಾಪ್ನವಾನೌರ್ವಜಮದಗ್ನಿರೇವ ಹಿ । 
ವಚಾರ್ದ್ಹ್ವಶೇಷಾವುಟಲಾ ಗೋತ್ರದೇವ್ಯಃ ಪ್ರಕೀರ್ತಿತಾಃ ॥ ೫೫ ॥ 


॥ ಇತಿ ಪ್ರಥಮಂ ಗೋತ್ರಂ ॥ 

೪೮. ಆನಂದೀಯಾ ಕೇತ್ರಕ್ಕೆ ಭಾರದ್ವಾಜ, ಶಾಂಡಿಲ ಪ್ರವರಗಳು, 
ಪಾಟಡೀಯಾ ಕ್ಲೇತ್ರಕ್ಕೆ ಕುಶಪ್ರವರವು. 

೪೯. ವಾಸಂಡಿಯಾ, ಜಾಸ್ವಾ, ಕೌತ್ಸಮಣಾ ಕ್ಷೇತ್ರಗಳಿಗೆ ವತ್ಸ, 
ಆತ್ರೇಯ, ಕುಶ ಗೌತಮ ಪ್ರವರಗಳು. 

೫೦. ಚರಣೀಯಾ ಕೇತ್ರಕ್ಕೆ ಭಾರದ್ವಾಜಪ್ರವರವು, ದುಧೀ ಕ್ಸೇತ್ರಕ್ಕೆ 
ಆಧಾರಣಸಾ ಪ್ರವರವು ಸೊನ್ನಾ ಕೇತ್ರಕ್ಕೆ ಮಾಂಡಿಲ್ಯ ಪ್ರವರವು. 

೫೧. ವೈಲೋಲಾ ಕ್ಷೇತ್ರಕ್ಕೆ ಹುಶಪ್ರವರವು, ಅಸಾಲಾಕ್ಸೇತ್ರಕ್ಕೆ ಕುಶ, 
ಧಾರಣಾ ಪ್ರವರಗಳು. 

೫೨. ನಾಲೋಲಾ ಕ್ಲೇತ್ರಕ್ಕೆ ವತ್ಸಧಾರಣೀಯಾ ಪ್ರವರಗಳು, ದೇಲೋ 
ಲಾಕ್ಸೇತ್ರಕ್ಕೆ ಕುತ್ಸಪ್ರವರವು. ಸೋಹಾಸೀಯಾ ಶ್ಪೇತ್ರಕ್ಕೆ ಭಾರದ್ವಾಜ, 
ಕುಶ, ವತ್ಸ ಪ್ರವರಗಳು. 

೫೩. ಸುಹಾಲೀಯಾ ಕ್ಲೇತ್ರಕ್ಕೆ ವತ್ಸಪ್ರವರವು. ಹೀಗೆ ಕ್ರಮವಾಗಿ 
ಸ್ಥಾನಪ್ರವರಗಳನ್ನು ಹೇಳಿರುವೆನು. 

೫೪-೫೫. ಶೀತವಾಡಿಯಕ್ಕೆ ಕುಶ, ವತ್ಸ, ವಿಶ್ವಾಮಿತ್ರ, ದೇವರಾತ, 


ಏಕೋನಚತ್ವಾರಿಂಶೋ9ಧ್ಯಾಯಃ ೪೦೭ 


ಶ್ರೀ ಕ್ಸ್ಟೇತ್ರಂ ದ್ವಿತೀಯಂ ಪ್ರೋಕ್ತಂ ಗೋತ್ರ ದ್ವಿತಯಮೇವನ ಚ । 


'ಭಾಂದನಸಸ್ತಥಾ ವತ್ಸಂ ದೇನೀ ದ್ವಿತಯಮೇನ ಚ ॥ ೫೬॥ 
ಆಂಗಿರಸಾಂಂಬರೀಷಶ್ಚ ಯೌವನಾಶ್ಚಸ್ತಥೈವ ಚ। 

ಭೃಗುಚ್ಯವನ ಆಸ್ಪವಾನೌರ್ವ ಜಮದಗ್ನಿ ಮೇವ ಚ ॥ ೫೭॥ 
ಜೇನೀ ಭಟ್ಟಾರಿಕಾ ಪ್ರೋಕ್ತಾ ದ್ವಿತೀಯಾ ಶೇಷಲಾ ತಥಾ । 
ಏತದ್ವಂಶೋದ್ಧ ವಾಯೇಚ ಶೃಣುತಾನ್ಮುನಿಸತ್ತಮ ॥ ೫೮ ॥ 


ಸಕ್ರೋಧನಾಃ ಸದಾಚಾರಾಃ ಶ್ರೌತಸ್ಮಾರ್ತಕ್ರಿಯಾಷರಾಃ । 

ಪಂಚೆಯಜ್ಞರತಾ ನಿತ್ಯಂ ಸಂಬಂಧಂ ಚ ಸಮಾಶ್ರಿತಾಃ । 

ಸ್ಪೃತಜ್ಞಾಃ ಕ್ರತುಜಾಶ್ಚೆನ ತೇ ಸರ್ವೇ ನೃಪಸತ್ತಮಾಃ ॥೫೯॥ 
॥ ಇತಿ ದ್ವಿತೀಯಂ ಗೋತ್ರಂ ॥ 

ತೃತೀಯಂ ಮಗೋಡೋ ಆ ನೈ ಗೋತ್ರ ದ್ವಿತಯಮೇವ ಚ । 


ಭಾರದ್ವಾಜಸ್ತಥಾ ಕುತ್ಸಂ ದೇನೀ ದ್ವಿತಯಮೇವ ಚ ॥೬೦॥ 
ಆಂಗಿರಸ ಬಾರ್ಹಸ್ಪತ್ಯ ಭಾರದ್ವಾಜಸ್ತಥೈನ ಚ । 
ವಿಶ್ವಾಮಿತ್ರ ದೇನರಾತೌ ಪ್ರವರತ್ರಯಮೇನ ಚ ॥೬೧॥ 


ಔದಲ, ಭಾರ್ಗವ, ಚ್ಯಾವನ, ಆಪ್ಪವಾನ, ಔರ್ವ, ಜಮದಗ್ನಿ ಎಂಬ 
ಗೋತ್ರಗಳು, ವರ್ಚಾ, ಅರ್ದ್ವಶೇಷಾ, ಉಟಲಾ ಎಂಬವರು ಗೋತ್ರದೇವಿ 
ಯರು. ಇಲ್ಲಿಗೆ ಮೊದಲನೆ ಗೋತ್ರವು ಮುಗಿಯಿತು. 

೫೬-೫೭. ಎರಡನೆ ಶ್ರೀಕ್ಷೇತ್ರಕ್ಕೆ ಛಾಂದನಸ, ವತ್ಸ ಗೋತ್ರಗಳು. 
'ಆಂಗಿರಸ್ಯ ಆಂಬರೀಷ, ಯಾವನಾಶ್ವ, ಭೃಗು, ಚ್ಯವನ, ಆಪ್ಲ್ಲುವಾನ, ಔರ್ವ, 
ಜಮದಗ್ನಿ ಪ್ರವರಗಳು. 

೫೮. ಭಟ್ಟಾರಿಕಾ, ಶೇಪಲಾ ಇವರು ಕುಲದೇನಿಯರು. ಈ ವಂಶದಲ್ಲಿ 
ಜನಿಸಿದವರನ್ನು ಹೇಳುನೆನು ಕೇಳು. 

೫೯. ಈ ವಂಶದವರು ಸಿಟ್ಟುಳ್ಳವರೂ, ಸದಾಚಾರಸಂಸನ್ನರೂ, ಶ್ರೌತ 
ಸ್ಮಾರ್ತ ಕರ್ಮನಿರತರೂ, ಪಂಚಯಜ್ಞದಲ್ಲಾಸಕ್ತರೂ, ಪರಸ್ಪರ ಸಂಬಂಧ 
ವುಳ್ಳವರೂ, ಹಿಂಸೆಯನ್ನರಿತವರೂ, ಯಜ್ಞೋದ್ಭವರೂ, ನೃಪೋತ್ತಮರೂ 
ಆಗಿರುವರು. ಇಲ್ಲಿಗೆ ಎರಡನೆಯ ಗೋತ್ರ ಮುಗಿಯಿತು. 

೬೦. ಮೂರನೆ ಮಗೋಡಕ್ಕೆ ಭಾರದ್ವಾಜ, ಕುತ್ಸಗಳೆಂಬ ಎರಡು 
ಗೋತ್ರಗಳೂ, ಇಬ್ಬರು ದೇವಿಯರೂ ಇರುವರು. 


೬೧. ಆಂಗಿರಸ, ಬಾರ್ಹಸ್ಸತ್ಯ, ಭಾರದ್ವಾಜ, ವಿಶ್ವಾಮಿತ್ರ, ದೇವರಾತ 
-ಗಳು ಪ್ರವರಗಳು. 


೪೦೮ ಶ್ರೀ ಸ್ಕ್ಯಾಂದಮಹಾಪುರಾಣಂ 


ಶೇಷಲಾ ಬುಧಲಾ ಪ್ರೋಕ್ತಾ ಧಾರಶಾಂತಿಸ್ತಥೈನ ಚ । 

ಅಸ್ಮಿನ್ನಾ್‌ ಮೇ ಚ ಯೇ ಜಾತಾ ಬ್ರಾಹ್ಮಣಾಃ ಸತ್ಯವಾದಿನಃ ॥ ೬೨ ॥ 

ದ್ವಿಜಪೂಜಾ ಕ್ರಿಯಾಯುಕ್ತಾ ನಾನಾಯಜ್ಞಕ್ರಿಯಾಪರಾಃ । 

ಅಸ್ಮಿನ್ಸೋತ್ರೇ ಸಮುತ್ಪನ್ನಾ ದ್ವಿಜಾಃ ಸರ್ವೇ ಮುನೀಶ್ವರಾಃ ॥ ೬೩ ॥ 
॥ ಇತಿ ತೃತೀಂತುಂ ಗೋತ್ರಂ ॥ 

ಚತುರ್ಥಂ ಶೀಹೋಲೀಯಾಗ್ರಾನುಂ ಗೋತ್ರದ್ಧಿತಯಮೇವ ಚ । 

ವಿಶ್ವಾಮಿತ್ರದೇನರಾತ ತೃತೀಯೌದಲನೇನ ಚ ॥ ೬೪ ॥ 

ದೇನೀ ಚಚಾಈ ವೈ ತೇಷಾಂ ಗೋತ್ರದೇನೀ ಪ್ರಕೀರ್ತಿತಾ । 

ಅಸ್ಮಿನ್ನೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ ॥೬೫॥ 

ಅಸತ್ಯಭಾಷಿಣೋ ವಿಪ್ರಾ ಲೋಭಿನೋ ನೃಪಸತ್ತಮ । 

ಸರ್ವನಿದ್ಯಾ ಪ್ರನೀಣಾಶ್ಚ ಬ್ರಾಹ್ಮಣಾ ಬ್ರಹ್ಮಸತ್ತಮು ॥ ೬೬ ॥ 
1 ಇತಿ ಚತುರ್ಥಂ ಸ್ಥಾನಂ ॥ 

ಜ್ಯೇಷ್ಠಲೋಜಾ ಪಂಚಮಂ ಚ ಸ್ವಸ್ಥಾನಂ ಪ್ರತಿಕೀರ್ತಿತಂ । 


ವತ್ಸಶೀಯಾ ಕುತ್ಸಶೀಯಾ ಪ್ರವರದ್ಧಿತಯಂ ಸ್ಮೃತಂ ॥೬೭॥ 
ಆನರಿವೃವಾಪ್ರಃ ಯೌನನಾಶ್ವ ಭೃಗುಚ್ಕವನ 
ಆಪ್ಟ್ರೋರ್ವ ಜಮದಗ್ನಿ ಸ್ತಥೈವ ಹಿ ॥ ೬೮ ॥ 
ಚಚಾಈ ನತ್ಸಗೋತ್ರಸ್ಯ ಶಾಂತಾ ಚ ಕುತ್ಸಗೋತ್ರಜಾ । 
ಏತೈಸ್ತ್ರಿಭಿಃ ಪಂಚಭಿಶ್ಚ ದ್ವಿಜಾ ಬ್ರಹ್ಮಸ್ವರೂಸಿಣಃ ॥೬೯॥ 


4 





೬೨-೬೩. ಶೇಷಲಾ, ಬುಧಲಾ, ಧಾರಶಾಂತಿಯರು ಕುಲದೇವಿಯರು. 
ಈ ಗ್ರಾಮದಲ್ಲಿ ಜನಿಸಿದ ಬ್ರಾಹ್ಮಣರು ಸತ್ಯವಾದಿಗಳೂ, ಬ್ರಾ ಹ್ಮಣಪೂಜಾ 
ನಿರತರೂ, ಅನೇಕ ಯಜ್ಞ, ಗಳನ್ನೆಸಗುವವರೂ, ಮುನಿವರ್ಯರೂ ಆಗಿರುವರು. 
ಇಲ್ಲಿಗೆ ಮೂರನೆಯ ಗೋತ್ರವು ಮುಗಿಯಿತು. 

೬೪. ನಾಲ್ಕನೆಯ ಶೀಹೋಲಿಯಾ ಗ್ರಾಮಕ್ಕೆ ಎರಡು ಗೋತ್ರಗಳು. 
ವಿಶ್ವಾಮಿತ್ರ, ದೇವರಾತ, ಔದಲಗಳು ಪ್ರವರಗಳು. 

೬೫-೬೬, ಚಚಾಕಈಯು ಗೋತ್ರದೇನಿಯು. ಈ ಗೋತ್ರದ ಬ್ರಾ ಹ್ಮಣರು 
ಅಶಕ್ತರೂ, ದೈನ್ಯವುಳ್ಳ ವರೂ, ಸುಳ್ಳಾಡುವವರೂ, ಅತ್ಯಾಶೆಯುಳ್ಳವರೂ, 
ಸಮಸ್ತವಿದ್ಯೆಗಳಲ್ಲಿ ಕುಶಲರೂ ಆಗಿರುವರು. ಇಲ್ಲಿಗೆ ನಾಲ್ಕನೆ ಸ್ಥಾನವು 
ಮುಗಿಯಿತು. 

೬೭-೬೯, ಐದನೆಯ ಜ್ಯೇಷ್ಠಲೋಜಾಗ್ರಾಮಕ್ಕೆ ವತ್ಸ, ಕುತ್ಸಗೋತ್ರಗಳು, 
ಆವಾರಿವೃವ, ಆಪ್ರ, ಯೌವನಾಶ್ವ, ಭೃಗು, ಚ್ಯವನ, ಆಪ್ಪುವಾನ, ಔರ್ವ, 
ಜಮದಗ್ನಿಗಳು ಪ್ರವರಗಳು, ವತ್ಸಗೋತ್ರಕ್ಕೆ ಚಚಾಈಯೂ, ಕುತ್ಸಗೋತ್ರಕ್ಕೆ 
ಶಾಂತೆಯೂ ಗೋತ್ರದೇವಿಯರು. 


ಏಕೋನಚತ್ವಾರಿಂಶೋತಧ್ಯಾಯಃ ೪೦೯ 


ಶಾಂತಾ ದಾಂತಾಃ ಸುಶೀಲಾಶ್ಚ ಧನಪುತ್ರೆಶ್ಚ ಸಂಯುತಾಃ । 


ವೇಡಾಧ್ಯಯನಹೀನಾಶ್ಚ ಕುಶಲಾಃ ಸರ್ವಕರ್ಮಸು ॥೭೦॥ 
ಸೂರೂಪಾಶ್ಚ ಸದಾಚಾರಾಃ ಸರ್ವಧರ್ಮೆಷು ನಿಷ್ಮಿತಾಃ । 
ದಾನಧರ್ಮುರತಾಃ ಸರ್ವೇ ಅತ್ರಜಾ ಜಲದಾ ದ್ವಿಜಾಃ 1 ೭೦॥ 


1 ಇತಿ ಪಂಚಮಂ ಸ್ಥಾನಂ ॥ 
ಶೇರಥಾಗ್ರಾ ಮೇಷು ವೈ ಜಾತಾಃ ಪ್ರವರದ್ದಯಸಂಯುತಾಃ । 


ಕುಶಭಾರದ್ಹಾಜಾಶ್ಚೈನ ದೇನೀದ್ವಯಂ ತಥೈವ ಚ 1 ೭೨ ॥ 
ವಿಶ್ವಾಮಿತ್ರೋ ದೇನರಾತಸ್ತೃತೀಯೋ ದಲ ಏವ ಚ । 
ಆಂಗಿರಸ ಬಾರ್ಹಸ್ಪತ್ಯ ಭಾರದ್ವಾಜಾಸ್ತಥೈನ ಚ ॥ ೭೩॥ 


ಕಮಲಾ ಚ ಮಹಾಲಕ್ಷ್ಮಿ ಒದಿ ಯಾ ಯಕ್ಸಿಣೀ ತಥಾ |. | 

ಅಸ್ತಿ ನ್ಗೊ ಆತ್ರೇ ಚ ಹ ಜಾತಾಃ ಶ್ರೌತಸ್ಮಾ Pe ಬುಧಾಃ ॥ ೭೪ ॥ 

ನೇದಾಂಧ್ಯಮನಶೀಲಾಶ್ಮ ತಾಪಸಾತ್ಟಾ 5ರಿಮರ್ದನಾಃ | 

ರೋಷಿಣೋ ಲೋಭಿನೋ ದುಷ್ಟಾ ಯಜನೇ ಯಾಜನೇ ರತಾಃ । 
ಬ್ರಹ್ಮ: ಕ್ರಯಾಪರಾಃ ಸರ್ವೇ ಬ್ರಾ ಪ್ಲೆ ಣಾಸ್ತೇ ಮಯೋದಿತಾಃ ॥ ೭೫॥ 

॥ ಇತಿ `ಸನ್ನಂ ಸ್ಥಾನಂ ॥ 

ದಂತಾಲೀಯಾ ಭಾರದ್ವಾಜ ಕುತ್ಸಶಾಯಾಸ್ತಥೈನ ಚ । 

ಆಂಗಿರಸಬಾರ್ಹಸ್ಪತ್ಯ ಭಾರದ್ವಾಜಾಸ್ತಥೈನ ಚ ॥ ೭೬॥ 

೭೦-೭೧. ಈ ಗೋತ್ರದ ಬ್ರಾಹ್ಮಣರು ಶಾಂತರೂ, ಜಿತೇಂದ್ರಿಯರೂ, 
ಒಳ್ಳೆಯ ನಡತೆಯುಳ್ಳವರೂ, ಧನಪುತ್ರರಿಂದ ಕೂಡಿದವರೂ, ವೇದಾಧ್ಯಯನ 
ರಹಿತರೂ, ಸಕಲ ಕಾರ್ಯಗಳಲ್ಲಿ ಕುಶಲರೂ, ಸುಂದರರೂ, ಸದಾಚಾರಿಗಳೂ, 
ಸಕಲಧರ್ಮನಿರತರೂ, ದಾನಾಸಕ್ತರೂ, ಜಲದಾನಮಾಡುವವರೂ ಆಗಿರು 
ವರು. ಇಲ್ಲಿಗೆ ಐದನೆಯ ಸ್ಟಾ ನವು ಮುಗಿದುದು. 

೭೨-೭೫. ಶೇರಥಾಗ್ರಾ 'ಮುಜರಿಗೆ ಕುಶ, ಭಾರದ್ವಾಜ ಮಹಾಲಕ್ಟೀ 
ಯಕ್ಸಿಣೀ ಎಂಬ ಇಬ್ಬರು ಕುಲದೇವಿಯರು, ವಿಶ್ವಾಮಿತ್ರ, ದೇವರಾತ, 
ದಲ, ಆಂಗಿರಸ್ಕ ಸ ಸೈ ತ್ಯ, ಭಾರದ್ವಾಜ ಪ್ರವರಗಳು. ಈ ಗೋತ್ರದ 
ಬ್ರಾ ಹ್ಮ ಣರು ಶ್ರೌತ ಸ್ಮಾರ್ತಕರ್ಮನಿರತರೂ, ವೇದಾಧ್ಯಯನಶೀಲರೂ, 
ಮತಗಳೂ, ಶತ್ರುನಾಶಕರೂ, ಕೋಪಿಷ್ಯ ರೂ, ಲೋಭಿಗಳೂ, ದುಷ್ಟರ್ಕೂ 
ಯಜನ ವು ಸತತ ಬ್ರಾಹ್ಮಣ ಕರ್ಮಾಸ ಕ್ಷರೂ ಆಗಿರುವರು. ಇಲ್ಲಿಗೆ 
ಆರನೆಯ ಸಾ ನವು ಮುಗಿದುದು. 

೭೬-೭೮. ದಂತಾಲೀಗ್ರಾಮದವರಿಗೆ ಭಾರದ್ವಾಜ ಕುತ್ಸಗೋತ್ರಗಳು. 
ಆಂಗಿರಸ, ಬಾರ್ಹಸ ಸತ್ಯ, ಭಾರದ್ವಾ ಜ ಪ್ರವರಗಳು. ಚ ಕ್ಸಿಣೀ `ಕಮಲೆ 


೪೧೦ ಶ್ರೀ ಸ್ಕಾಂದಮಹಾಪುರಾಣಂ 


ದೇವೀ ಚ ಯಕ್ಸಿಣೇ ಪ್ರೋಕ್ತಾ ದ್ವಿತೀಯಾ ಕಮಲಾ ತಥಾ । 


ಅಸ್ಮಿನ್ಲೋತ್ರೇ ಚಯೇ ಜಾತಾ ವಾಡವಾ ಧನಿನಃ ಶುಭಾಃ ॥ ೭೭ ॥ 
ನಸ್ಟ್ರಾಂ ಲಂಕರಣೋಪೇತಾ ದ್ವಿಜಭಕ್ತಿಪರಾಯಣಾಃ । 
ಬ್ರಹ್ಮಭೋಜ್ಯಪರಾಃ ಸರ್ವೇ ಸರ್ವೇ ಧರ್ಮಪರಾಯಣಾಃ ॥ ೭೮ ॥ 


॥ ಇತಿ ಸಪ್ತಮಂ ಸ್ಥಾನಂ ॥ 
ನಡೋದ್ರೀಯಾನ್ಹಯೇ ಜಾತಾಶ್ಚತ್ಪಾರಃ ಪ್ರವರಾಃ ಸ್ಮ ತಾಃ । 


ಕುಶಃ ಕುತ್ಸಶ್ಚ ವತ್ಸಶ್ಚ ಭಾರದ್ವಾಜಸ್ತಥೈನ ಚ nari 
ತತ್ಸನರಾಣ್ಯಹಂ ವಕ್ಷ್ಯೇ ತಥಾ ಗೋತ್ರಾಣ್ಯನುಕ್ರಮಾತ್‌ | 
ವಿಶ್ವಾಮಿತ್ರೋ ದೇವರಾತಸ್ತೃತೀಯೌದಲ ಏನ ಚ ॥ ೮೦॥ 
ಆಂಗಿರಸಾಂಂಬರೀಷಶ್ಚ ಯೌನನಾಶ್ಚಸ್ತೃತೀಯಕಃ । 
ಭಾರ್ಗವಚ್ಯಾವನಾಪ್ನವಾನೌರ್ವಜಮದಗ್ಗಿ ಸ್ತಥೈವ ಚ ॥ ೮೪೧ ॥ 
ಆಂಗಿರಸ ಬಾರ್ಹಸ್ಪತ್ಯ ಭಾರದ್ವಾಜಾಸ್ತಥೈನ ಚ । 

ಕಮಲಾ ಕ್ಲೇಮಲಾ ಚೈನ ಧಾರಭಟ್ಟಾರಿಕಾ ತಥಾ ॥ ೮೨॥ 
ಚತುರ್ಥೀ ಶ್ಪೇಮಲಾ ಪ್ರೋಕ್ತಾ ಗೋತ್ರಮಾತಾ ಅನುಕ್ರಮಾತ್‌ | 
ಅಸ್ಮಿನ್ನೋತ್ರೇ ತು ಯೇ ಜಾತಾಃ ಸಂಚಯಜ್ಞ ರತಾಃ ಸದಾ ॥ ೮೩ ॥ 
ಲೋಭಿನಃ ಕ್ರೋಧಿನಶ್ಚೈನ ಪ್ರಜಾಯಂತೇ ಬಹುಪ್ರಜಾಃ । 
ಸ್ನಾನದಾನಾದಿನಿರತಾಃ ಸದಾನಿನಿರ್ಜಿತೇಂದ್ರಿಯಾಃ ॥ ೮೪ ॥ 





ಯರು ಗೋತ್ರದೇವಿಯರು. ಈ ಗೋತ್ರದ ಬ್ರಾಹ್ಮಣರು ಹೆಣಗಾರರೂ, 
ವಸ್ತ್ರಾಲಂಕಾರ ಸಹಿತರೂ, ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, ಬ್ರಾಹ್ಮಣರಿಗೆ 
ಭೋಜನಮಾಡಿಸುವುದರಲ್ಲಿ ಆಸಕ್ತರೂ, ಧರ್ಮನಿರತರೂ ಆಗಿರುವರು. ಇಲ್ಲಿಗೆ 
ಏಳನೆಯ ಸ್ಥಾನವು ಮುಗಿದುದು. 

೭೯-೮೫. ವಡೋದ್ರೀಯ ವಂಶದವರಿಗೆ ಕುಶ ಕುತ್ಸ, ವತ್ಸ, 
ಭಾರದ್ವಾಜ ಎಂಬ ನಾಲ್ಕು ಗೋತ್ರಗಳು. ವಿಶ್ವಾಮಿತ್ರ, ದೇವರಾತ್ಮ 
ಔದಲ, ಅಂಗಿರಸ, ಆಂಬರೀಷ, ಯಾವನಾಶ್ವ, ಭಾರ್ಗವ, ಚ್ಯಾವನ, 
ಆಪ್ನವಾನ, ಔರ್ವ, ಜಮದಗ್ನಿ, ಆಂಗಿರಸ, ಬಾರ್ಹಸ್ಪತ್ಯ, ಭಾರದ್ವಾಜ 
ಪ್ರವರಗಳು. ಕಮಲಾ, ಕ್ಲೇಮಲಾ, ಧಾರಭಟ್ಟಾರಿಕಾ, ಕ್ಲೇಮಲಾ ಎಂಬ 
ವರು ಗೋತ್ರಮಾತೆಯರು. ಈ ಗೋತ್ರದ ದ್ವಿಜರು ಪಂಚಮಹಾಯಜ್ಞ 
ನಿರತರೂ, ಲೋಭಿಗಳೂ, ಕೋಪಿಷ್ಕರೂ, ಬಹುಮಂದಿ ಮಕ್ಕಳುಳ್ಳವರೂ, 
ಸ್ನಾನದಾನಾದಿಗಳಲ್ಲಾಸಕ್ತರೂ, ಜಿತೇಂದ್ರಿಯರೂ, ಬಾವಿ, ಕೆರೆ ಮೊದಲಾದು 
ವುಗಳನ್ನು ನಿರ್ಮಾಣಮಾಡುವವರೂ, ನಿಯಮಶೀಲರೂ, ಗುಣಜ್ಞರೂ, 


ಏಕೋನಚತ್ವಾರಿಂಶೋತಧ್ಯಾಯಃ ೪೧೧ 


ನಾಪೀಕೂಪತಡಾಗಾನಾಂ ಕರ್ತಾರಶ್ಚ ಸಹಸ್ರಶಃ | 

ವ್ರತಶೀಲಾ ಗುಣಜ್ಜಾಶ್ಚ ಮೂರ್ಹಾ ವೇದವಿನರ್ಜಿತಾಃ 1 ೮೫॥ 
॥ ಇತ್ಯೃಷ್ಟಮಂ ಸ್ಥಾನಂ ॥ 

ಗೋದಣೀಯಾಭಿಧೇ ಗ್ರಾಮೇ ಗೋತ್ರೌ ದ್ವೌ ತತ್ರ ಸಂಸ್ಥಿತೌ । 


ವತ್ಸಗೋತ್ರಂ ಪ್ರಥಮಕಂ ಭಾರದ್ವಾಜಂ ದ್ವಿತೀಯಕಂ ॥ ೮೬ ॥ 
ಭೃಗುಚ್ಕವನಾಷ್ನವಾನೌರ್ನಪುರೋಧಸಮೇನ ಚ । 

ಶ್ರೀಹರೀ ಪ್ರಥಮಾ ಜ್ಞೇಯಾ ದ್ವಿತೀಯಾ ಯಕ್ಸಣೀ ತಥಾ ॥ ೮೭ ॥ 
ಅಸ್ಮಿನ್ಸೋತ್ರೋದ್ಭವಾ ವಿಪ್ರಾ ಧನಧಾನ್ಯಸಮನ್ನಿತಾಃ । 

ಸಾಮರ್ಷಾ ಲೌಲ್ಯಹೀನಾಶ್ಚ ದ್ವೇಷಿಣಃ ಕುಟಿಲಾಸ್ತೃಥಾ ॥ ೮೮ ॥ 


ಹಿಂಸಿನೋ ಧನಲುಬ್ಛಾಶ್ಚ ಮಯಾ ಪ್ರೋಕ್ತಾಸ್ತು ಭೂಪತೇ ॥೮೯॥ 
1 ಇತಿ ನವಮಂ ಸ್ಥಾನಂ ॥ 
ಶಂಟನಾಡೀಆ ಗ್ರಾಮೇ ವಿಪ್ರಾಃ ಕುಶಗೋತ್ರಸಮುದ್ಭವಾಃ | 


ಪ್ರವರಂ ತಸ್ಯ ನಕ್ಸ್ಯಾಮಿ ಶೃಣು ತ್ವಂ ಚ ನೃಪೋತ್ತಮ ॥೯೦॥ 
ವಿಶ್ವಾಮಿತ್ರೋ ದೇವರಾತ ಉದಲಶ್ಚ ತ್ರಯಃ ಸ್ಮೃತಾಃ । 

ಚಚಾಈ ದೇನೀ ಸಾಪ್ರೋಕ್ತಾ ಶೃಣುತ್ವಂ ನೃಪಸತ್ತಮ ॥ ೯೧॥ 
ಯಜಂತೇ ಕ್ರತುಭಿಸ್ತತ್ರ ಹೃಷ್ಟಚಿತ್ತೈ ಕಮಾನಸಾಃ । 

ಸರ್ವವಿದ್ಯಾಸು ಕುಶಲಾ ಬ್ರಾಹ್ಮಣಾಃ ಸತ್ಯವಾದಿನಃ ॥ ೯೨॥ 


॥ ಇತಿ ದಶಮಂ ಸ್ಥಾನಂ ॥ 








ಮೂರ್ಯರೂ, ವೇದಬಾಹ್ಯರೂ ಆಗಿರುವರು. ಇಲ್ಲಿಗೆ ಎಂಟನೆಯ ಸ್ಥಾನವು 
ಮುಗಿದುದು. 

೮೬-೮೭, ಗೋದಣೀಯ ಗ್ರಾಮದವರಿಗೆ ವತ್ಸ ಭಾರದ್ವಾಜಗೋತ್ರಗಳು. 
ಭೃಗುಚ್ಯವನ, ಆಪ್ಲುನಾನ, ಔರ್ವ, ಪುರೋಧಸ ಪ್ರವರಗಳು. ಶ್ರೀಹರೀ 
ಯಕ್ಸಿಣೀ ಇವರು ಗೋತ್ರದೇವಿಯರು. 

೮೮-೮೯. ಈ ಗೋತ್ರದ ಬ್ರಾಹ್ಮಣರು ಧನಧಾನ್ಯಸಹಿತರೂ, ಸಿಟ್ಟುಳ್ಳ 
ವರೂ, ಸ್ಥಿರಚಿತ್ತರೂ, ದ್ವೇಷವುಳ್ಳವರೂ, ವಕ್ರಸ್ವಭಾವದವರೂ, ಹಿಂಸಕರೂ, 
ಹೆಣದಾಸೆಯುಳ್ಳವರೂ ಆಗಿರುವರು. ಇಲ್ಲಿಗೆ ಒಂಬತ್ತನೆಯ ಸ್ಥಾನವು 
ಮುಗಿದುದು. 

೯೦-೯೨. ಕಂಟವಾಡೀಯಾ ಗ್ರಾಮದವರಿಗೆ ಕುಶಗೋತ್ರ, ವಿಶ್ವಾ 
ಮಿತ್ರ, ದೇವರಾತ, ಉದಲಪ್ರವರಗಳು. ಚಚಾಈ ಗೋತ್ರದೇವಿಯು, 
ಈ ಗೋತ್ರದ ಬ್ರಾಹ್ಮಣರು ಯಾಗಮಾಡುವವರೂ, ಸಂತುಷ್ಟಚಿತ್ತರೂ, ಸಕಲ 
ವಿದ್ಯಾನಿಪುಣರೂ, ಸತ್ಯವಂತರೂ ಆಗಿರುವರು. ಇಲ್ಲಿಗೆ ಹತ್ತನೆಯ ಸ್ಥಾನವು 
ಮುಗಿದುದು. 


೪೧೨ ಶ್ರೀ ಸ್ಕಾಂದಮಹಾಪುರಾಣಂ 


ವೇಖಲೋಯಾ ಮಯಾ ಪ್ರೋಕ್ತಾ ಕುತ್ಸವಂಶೇ ಸಮುದ್ಧವಾ. । 
ಪ್ರವರತ್ರಯಸಂಯುಕ್ತಾಃ ಶೃಣು ತ್ವಂ ಚ ನೃಪೋತ್ತಮ ॥೯೩॥ 
ನಿಶ್ವಾಮಿತ್ರೋ ದೇನರಾಜೌದಲಶ್ಚೇತಿ ತ್ರಯಃ ಸ್ಮೃತಾಃ । 


ಚಚಾಈ ದೇನೀ ತೇಷಾಂ ವೈ ಕುಲರಕ್ಸಾಕರೀ ಸ್ಮೃತಾ ॥ ೯೪ ॥ 

ಬ್ರಾಹ್ಮಣಾಶ್ಚ ಮಹಾತ್ಮಾನಃ: ಸತ್ತ ನಂತೋ ಗುಣಾನ್ಸಿತಾಃ। 

ತಪಸಿ ಯೋಗಿನಶ್ಚೆ ವ ನೇದವೇದಾಂಗಪಾರಗಾಃ ॥ ೯೫ ॥ 

ಸಾಧನಶ್ಚ ಸವ ಜಡ ನಿಷ್ಣುಭಕ್ತಿ ಪರಾಯಣಾಃ । 

ಸ್ನಾನಸಂಧ್ಯಾಪರಾ ನಿತ್ಯಂ ಬ್ರಹ್ಮೆಭೋಜ್ಯಸರಾಯಣಾಃ 1 ೯೬ ॥ 

ಅಸ್ಮಿನ್ನಂಶೇ ಮಯಾಪ್ರೋಕ್ತಾಃ ಶೃಣುತ್ವಂ ಚ ಅತಃಪರಂ nen 
॥ ಇತ್ಯೇಕಾದಶಂ ಸ್ಥಾನಂ n 

ದೇಹಲೋಡೀಆ ಯೇ ಪ್ರೋಕ್ತಾಃ ಕುತ್ಸಪ್ರನರ ಸಂಯುತಾಃ । 

ಆಂಗಿರಸ ಆಂಬರೀಷೋ ಯುವನಾಶ್ಚಸ್ಥ ತೀಯಕಃ ॥ ೯೮ ॥ 

ಗೋತ್ರದೇನೀ ಮಯಾಪ್ರೋಕ್ತಾ ಶ್ರೀಶೇಷದುರ್ಬಲೇತಿ ಚ । 

ಕುತ್ಸವಂಶೇ ಚ ಯೇ ಜಾತಾಃ ಸದ್ದಾತ್ತಾಃ ಸತ್ಯಭಾಷಿಣಃ ॥೯೯॥ 


ವೇದಾಧ್ಯಯನ ಶೀಲಾಶ್ಚ ಪರಚ್ಛಿದ್ದೆಕದರ್ಶಿನಃ | 

ಸಾಮರ್ಷಾ ಲೌಲ್ಯತೋ ಹೀನಾ ದ್ವೇಷಿಣಃ ಕುಟಿಲಾಸ್ತಥಾ ॥ ೧೦೦ ॥ 

ಹಿಂಸಿನೋ ಧನಲುಬ್ಭಾಶ್ಚಯೇ ಚ ಕುತ್ಸಸಮುದ್ಭವಾಃ ॥ ೧೦೧ ॥ 
॥ ಇತಿ ದ್ವಾದಶಂ ಸ್ಥಾನಂ ॥ 





೯೩೯೪. ವೇಖಲೋಯಾ ಗ್ರಾಮದವರು ಕುತ್ಸಗೋತ್ರರು. ವಿಶ್ವಾ 
ಮಿತ್ರ, ದೇವರಾಜ, ಔದಲ ಎಂಬ ಪ್ರವರಗಳು. ಚಚಾಈಯು ಕುಲ 
ದೇವಿಯು. 

೯೫೨೯೭. ಈ ಗೋತ್ರದ ಬ್ರಾಹ್ಮಣರು ಮಹಾತ್ಮರೂ, ಬಲಶಾಲಿಗಳೂ, 
ಗುಣವಂತರೂ. ತಪಸ್ವಿಗಳೂ, ಯೋಗಿಗಳೂ, ವೇದವೇದಾಂಗ ಪಾರಂಗತರೂ, 
ಸಜ್ಜನರೂ, ಸದಾಚಾರಿಗಳೂ, ವಿಷ್ಣುಭಕ್ತಿನಿರತರೂ, ಸ್ಲಾನಸಂಧ್ಯಾವಂದನಾ 
ಸಕ್ತರೂ, ಬ್ರಾಹ್ಮಣರನ್ನು ಭೋಜನಮಾಡಿಸುವವರೂ ಆಗಿರುವರು. ಇಲ್ಲಿಗೆ 
ಹನ್ನೊಂದನೆಯ ಸ್ಥಾನವು ಮುಗಿಯಿತು. 

೯೮-೧೦೧. ದೇಹಲೋಡಿಆ ಗ್ರಾಮದವರಿಗೆ ಕುತ್ಸಗೋತ್ರವು. ಆಂಗಿ 
ರಸ, ಅಂಬರೀಷ, ಯುವನಾಶ್ವ ಪ್ರವರಗಳು, ಶ್ರೀಶೇಷದುರ್ಬಲೆಯು 
ಗೋತ್ರದೇವಿಯು, ಈ ಕುತ್ಸವಂಶದ ದ್ವಿಜರು ಒಳ್ಳೆಯ ನಡತೆಯುಳ್ಳವರೂ, 
ಸತ್ಯವಂತರೂ, ವೇದಾಧ್ಯಯನಶೀಲರೂ, ಇತರರ ದೋಷಗಳಲ್ಲಿ ದೃಷ್ಟಿ 
ಯುಳ್ಳ ವರೂ, ಕೋಪಿಷ್ಮರೂ, ಸ್ಥಿರಚಿತ್ತರೂ, ದ್ವೇಷವುಳ್ಳವರೂ, ವಕ್ರ 








ಏಕೋನಚತ್ವಾರಿಂಶೋತಿಧ್ಯಾಯಃ ೪೧ಕ್ತಿ 


ಕೋಹೇಚ ಬ್ರಾಹ್ಮಣಾಃ ಪ್ರೋಕ್ತಾ ಗೋತ್ರತ್ರಿತಯ ಸಂಯುತಾಃ । 


ಭಾರದ್ವಾಜಸ್ತಥಾನತ್ಸಸ್ತೃತೀಯಃ ಕುಶ ಏನಚ ॥ ೧೦೨ ॥ 
ಪ್ರವರಾಣ್ಯಹಂ ತಥಾವಕ್ಟ್ಯೇ ಯಥಾ ಗೋತ್ರಕ್ರಮೇಣ ಹಿ । 
ಭಾರ್ಗವಚ್ಕ ನನಾಸ್ನವಾನೌರ್ವ ಜಮದಗ್ನಿಸ್ತಥೈನ ಚ ॥ ೧೦೩ ॥ 
ಕುಶಪ್ರವರಂ ತೃತೀಯಂ ತು ಪ್ರವರ ತ್ರಯಮೇನ ಚ! 

ನಿಶ್ಚಾಮಿತ್ರೋ ದೇವರಾತಸ್ತೃತೀಯೌದಲಮೇನ ಚ ॥ ೧೦೪ ॥ 


ಯಕ್ಸಿಣೇ ಪ್ರಥಮಾ ಪ್ರೋಕ್ತಾ ದ್ವಿತೀಯಾ ಶೀಹುರೀ ತಥಾ । 

ತೃತೀಯಾ ಚಚಾಈ ಪ್ರೋಕ್ತಾ ಯಥಾನುಕ್ರಮಗೋತ್ರಜಾ ॥ ೧೦೫ ॥ 

ಅಸ್ಮಿನ್ಲೋತ್ರೇ ಭವಾ ವಿಪ್ರಾಃ ಶ್ರೌತಸ್ಮಾರ್ತರತಾ ಬುಧಾಃ । 

ವೇದಾಧ್ಯಯನ ಶೀಲಾಶ್ಚ ತಾಪಸಾಶ್ವಾರಿಮರ್ದನಾಃ ॥ ೧೦೬ ॥ 

ರೋಷಿಣೋ ಲೋಭಿನೋ ದುಷ್ಬಾ ಯಜನೇ ಯಾಜನೇ ರತಾಃ । 

ಬ್ರಹ್ಮಕರ್ನುಪರಾಃ ಸರ್ವೇ ಮಯಾ ಪ್ರೋಕ್ತಾ ದ್ವಿಜೋತ್ತಮಾಃ ॥೧೦೭॥ 
॥ ಇತಿ ತ್ರಯೋದಶಂ ಸ್ಥಾನಂ ॥ 

ಚಾಂದಣಖೇಡೇ ಯೇ ಜಾತಾ ಭಾರದ್ವಾಜಸಮುದ್ಭವಾಃ | 

ಆಂಗಿರಸೋ ಬಾರ್ಹಸ್ಪತ್ಯ ಸ್ತೃತೀಯೋ ಭಾರದ್ವಾಜಸ್ತಥಾ ॥ ೧೦೮ ॥ 

ಯಕ್ಸಿಣೀ ಚಾಸ್ಯ ವೈ ದೇನೀ ಪ್ರೋಕ್ತಾ ನ್ಯಾಸೇನ ಧೀಮತಾ । 

ಭಾರದ್ವಾಜಾಸ್ತು ಯೇ ಜಾತಾ ದ್ವಿಜಾ ಬ್ರಹ್ಮಸ್ವರೂಪಿಣಃ ॥ ೧೦೯ ॥ 


ಸ್ವಭಾವದವರೂ, ಹಿಂಸಕರೂ, ಹಣದಾಶೆಯುಳ್ಳವರೂ ಆಗಿರುವರು. ಇಲ್ಲಿಗೆ 
ಹನ್ನೆರಡನೆಯ ಸ್ಥಾನವು ಮುಗಿದುದು. 

೧೦೨-೧೦೫. ಕೋಹಗ್ರಾಮದ ಬ್ರಾಹ್ಮಣರಿಗೆ ಭಾರದ್ವಾಜ, ವತ್ಸ, 
ಕುಶ ಎಂಬ ಗೋತ್ರಗಳು. ಭಾರ್ಗವ, ಚ್ಯವನ, ಆಸ್ಪವಾನ, ಔರ್ವ, 
ಜಮದಗ್ಬಿ, ಕುಶ, ವಿಶ್ವಾಮಿತ್ರ, ದೇವರಾತ, ಔದಲಪ್ರವರಗಳು. ಯಕ್ಷಿಣಿ, 
ಶೀಹುರೀ, ಚಚಾಈ ಎಂದು ಮೂರುಜನ ಗೋತ್ರದೇವಿಯರು. 

೧೦೬-೧೦೭. ಈ ಗೋತ್ರದ ಬ್ರಾಹ್ಮಣರು ಶ್ರೌತಸ್ಮಾರ್ತಕರ್ಮನಿರತರೂ, 
ನೇದಾಧ್ಯಯಶೀಲರೂ, ತಪಸ್ವಿಗಳೂ, ಶತ್ರುನಾಶಕರೂ, ಕೋಪಿಷ್ಯರೂೂ 
ಲೋಭಿಗಳೂ, ದುಷ್ಟರೂ, ಯಜನಯಾಜನಾಸಕ್ತರೂ, ಬ್ರಾಹ್ಮಕರ್ಮಗಳಲ್ಲಿ 
ನಿರತರೂ ಆಗಿರುವರು. ಇಲ್ಲಿಗೆ ಹದಿಮೂರನೆಯ ಸ್ಥಾನವು ಮುಗಿದುದು. 

೧೦೮. ಚಾಂದಣಖೇಡಗ್ರಾಮದವರಿಗೆ ಭಾರದ್ವಾಜಗೋತ್ರ, ಆಂಗಿರಸ್ಕ 
ಬಾರ್ಹಸ್ಪತ್ಯ, ಭಾರದ್ವಾಜ ಪ್ರವರಗಳು. 

೧೦೯-೧೧೧. ಯಕ್ಷಿಣಿಯು ಗೋತ್ರದೇವಿಯು. ಭಾರದ್ವಾಜಗೋತ್ರದ 


೪೧೪ ಶ್ರೀ ಸ್ಕಾಂದಮಹಾಪುರಾಣಂ 


ಶಾಂತಾ ದಾಂತಾಃ ಸುಶೀಲಾಶ್ಚ ಧನಪುತ್ರಸಮನ್ನಿತಾಃ । 

ಧರ್ಮಾಃರಣ್ಕ್ಯೇ ದ್ವಿಜಾಃ ಶ್ರೇಷ್ಠಾಃ ಕ್ರತುಕರ್ಮುಣಿ ಕೋವಿದಾಃ ॥ ೧೧೦ ॥ 

ಗುರುಭಕ್ತಿರತಾಃ ಸರ್ವೇ ಭಾಸಯಂತಿ ಸೃಕಂ ಕುಲಂ ॥ ೧೧೧ ೪ 
॥ ಇತಿ ಚತುರ್ದಶಂ ಸ್ಥಾನಂ i 

ಫಲಗ್ರಾಮೇ ಚ ಯೇ ಜಾತಾ ಭಾರದ್ವಾಜ ಸಮುದ್ಧವಾಃ | 


ಆಂಗಿರಸೋ ಬಾರ್ಹಸ್ಪತ್ಕೋ ಭಾರದ್ದಾಜಸ್ತೃತೀಯಕಃ ॥ ೧೧೨ ॥ 
ಅಸ್ಮಿನ್ನೋತ್ರೇ ಚ ಯೇ ಜಾತಾ ವಾಡವಾ ಧನಿನಃ ಶುಭಾಃ । 
ವಸ್ತ್ರಾಂ ಲಂಕರಣೋಹೇತಾ ದ್ವಿಜಭಕ್ತಿಪರಾಯಣಾಃ ॥ ೧೧೩ ॥ 


ಬ್ರಹ್ಮಭೋಜ್ಯಪರಾಃ ಸರ್ವೇ ಸರ್ವೇ ಧರ್ಮಪರಾಯಣಾಃ । 

ಗೋತ್ರದೇನೀ ಮಯಾ ಖ್ಯಾತಾ ಯಕ್ಷಿಣೀ ನಾಮರಕ್ಷಿಣೇ ॥ ೧೧೪ ॥ 
॥ ಇತಿ ಪಂಚದಶಂ ಸ್ಥಾನಂ ॥ 

ಮೋಯಊತ್ರೀಯಾಶ್ಚ ಯೇ ಜಾತಾ ದೌ ಗೋತ್ರೌ ತತ್ರ ಕೀರ್ತಿತೌ। 


ಭಾರದ್ವಾಜಃ ಕಶ್ಯಪಶ್ತ ದೇನೀದ್ವಿತಯಮೇವನ ಚ ॥ ೧೧೫ ॥ 
ಚಾಮುಂಡಾ ಯಕ್ಸಿಣೇ ಚೈನ ದೇನೀ ಚಾತ್ರ ಪ್ರಕೀರ್ತಿತಾ । 
ಕಶ್ಯಪಾಂವತ್ಸಾರಶ್ಚೈವ ನೈಧ್ರುನಶ್ಚ ತೃತೀಯಕಃ ॥ ೧೧೬ ॥ 
ಆಂಗಿರಸೋ ಬಾರ್ಹಸ್ಪತ್ಕೋ ಭಾರದ್ದಾಜಸ್ತೃತೀಯಕಃ । 
ಪ್ರಿಯವಾಕ್ಕಾ ಮಹಾದಕ್ಸಾ ಗುರುಭಕ್ತಿರತಾಃ ಸದಾ ॥ ೧೧೭ ॥ 


ದ್ವಿಜರು ಬ್ರಹ್ಮರೂಪರೂ, ಶಾಂತರೂ, ಜಿತೇಂದ್ರಿಯರೂ, ಒಳ್ಳೆಯ ನಡತೆಯುಳ್ಳ 
ವರೂ, ಹಣ, ಮಕ್ಕಳು ಇವರಿಂದ ಕೂಡಿದವರೂ, ಯಜ್ಞ ಕರ್ಮದಲ್ಲಿ ಚತುರರೂ, 
ಗುರುಭಕ್ತಿಯುಕ್ತರೂ ಆಗಿ ತಮ್ಮ ವಂಶವನ್ನು ಪ್ರಕಾಶಗೊಳಿಸುವರು. ಇಲ್ಲಿಗೆ 
ಹದಿನಾಲ್ಕನೆಯ ಸ್ಥಾನವು ಮುಗಿದುದು. 

೧೧೨. ಥಲಗ್ರಾಮದಲ್ಲಿ ಜನಿಸಿದವರಿಗೆ ಭಾರದ್ವಾಜ ಗೋತ್ರವು. 
ಆಂಗಿರಸ್ಕ ಬಾರ್ಹಸ್ಸತ್ಯ, ಭಾರದ್ವಾಜ ಪ್ರವರಗಳು. 

೧೧೩-೧೧೪. ಈ ಗೋತ್ರದಲ್ಲಿ ಹುಟ್ಟದ ಬ್ರಾಹ್ಮಣರ: ಹಣಗಾರರೂ, 
ವಸ್ತ್ರಾಲಂಕಾರಗಳಿಂದ ಸಹಿತರೂ, ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, ಬ್ರಹ್ಮ 
ಭೋಜ್ಯದಲ್ಲಾ ಸಕ್ತರೂ, ಧರ್ಮನಿರತರೂ ಆಗಿರುವರು. ಇವರಿಗೆ ಯಕ್ಸಣೀ 
ಎಂಬ ಗೋತ್ರದೇವಿಯು ರಕ್ಟಕಳಾಗಿರುವಳು. ಇಲ್ಲಿಗೆ ಹದಿನೈದನೆಯ ಸ್ಥಾನವು 
ಮುಗಿದುದು. 

೧೧೫-೧೧೯. ಮೋಲೂತ್ರೀಯ ಗ್ರಾಮದಲ್ಲಿ ಹುಟ್ಟಿದ ಬ್ರಾಹ್ಮಣರಿಗೆ 
ಭಾರದ್ವಾಜ, ಕಶ್ಯಪ ಎಂಬ ಎರಡು ಗೋತ್ರಗಳು. ಚಾಮುಂಡಾ, ಯಕ್ಸಿಣೀ 
ಇವರಿಬ್ಬರು ಗೋತ್ರದೇವಿಯರು. ಕಶ್ಯಪ, ಅವತ್ಸಾರ, ನೈಧ್ರುವ, ಆಂಗಿರಸ, 


ಏಕೋನಚತ್ವಾರಿಂಶೋರಧ್ಯಾಯಃ ೪೧೫ 


ಸದಾ ಪ್ರತಿಸ್ಮಾನಂತಶ್ನ ಸರ್ವಭೂತಹಿತೇ ರತಾಃ । 

ಯಜ ತೇ 'ನುಹಾಯಜಾ ್ಲಾನ್ಯಾಶ್ಯ ಪಾ ಯೇ ದ್ವಿಜಾತಯಃ ॥೧೧೮॥ 

ಸರ್ವೇಷಾಂ ಯಾಜನಕರಾ ಯಾಜ್ಞಿಕಾಃ ಪರಪನ ಸ್ಮೃತಾಃ ॥ ೧೧೯॥ 
॥ ಇತಿ ಸೋಡಶಂ ಸ್ಥಾನಂ n 

ಹಾಥೀಜಣೇ ಚ ಯೇ ಜಾತಾ ವತ್ಸಾ ಭಾರದ್ವಾಜಾಸ್ತಥಾ | 


ಜ್ಞಾನಜಾ ಯಕ್ಷಿಣೀ ಚೈನ ಗೋತ್ರದೇವ್ಯೌ ಪ್ರಕೀರ್ತಿತೇ ॥ ೧೨೦ ॥ 
ಅಸ್ಮಿನ್ನೋತ್ರೇ ಚ ಯೇ ಜಾತಾಃ ಪಂಚಯಜ್ಞ ರತಾಃ ಸದಾ। 

ಲೋಭಿನಃ ಕ್ರೋಧಿನಶ್ಚೆವ ಪ್ರಜಾನಂತೋ ಬಹುಶ್ರುತಾಃ ॥ ೧೨೧ ॥ 
ಸ್ಥಾ ನದಾನಾದಿನಿರತಾ `ಷ್ಟು ಭಕ್ತಿ ಪರಾಯಣಾಃ । 

ವ್ರ ನಲ ಗುಣಜ್ಞಾ ನ ಮೂಖಾ ೯ ನೇದವಿವರ್ಜಿತಾಃ ॥ ೧೨೨ ॥ 


॥ ಇತಿ ಸಪ್ತದಶಂ ಸ್ಥಾನಂ ॥ 
ಕಪಡ್ಕಾಣಜಾ ಬ್ರಾಹ್ಮಣಾಸ್ತು ಭಾರದ್ವಾಜಾಃ ಕುಶಾಸ್ತ್ರಥಾ । 
ದೇನೀ ಚ ಯಕ್ಸಿಣೀ ಪ್ರೋಕ್ತಾ ದ್ವಿತೀಯಾ ಚಚಾಈ ತಥಾ ॥ ೧೨೩॥ 
ಆಂಗಿರಸ ಬಾರ್ಹಸ್ಪತ್ಕೌ ಭಾರದ್ವಾಜಸ್ತೃತೀಯಕಃ । 
ವಿಶ್ವಾಮಿತ್ರೋ ದೇವರಾತಸ್ತೃತೀಯೌದಲನೇವನ ಚ | 


೧೨೪ ॥ 





ಬಾರ್ಹಸ್ಪತ್ಯ, ಭಾರದ್ವಾಜ ಪ್ರವರಗಳು. ಈ ಬ್ರಾಹ್ಮಣರು ಹಿತವಾದ ಮಾತು 
ಳ್ಳವರೂ, ಅತ್ಯಂತ ಕುಶಲರೂ, ಗುರುಗಳಲ್ಲಿ ಭಕ್ತಿಯುಳ್ಳವರೂ, ಯಾವಾಗಲೂ 
ಕೀರ್ತಿವಂತರೂ, ಸಕಲಪ್ರಾಣಿಗಳಿಗೂ ಏತವನ್ನುಂಟುಮಾಡುವುದರಲ್ಲಿ 
ಆಸಕ್ಕರೂ, ಮಹಾ ಯಜ್ಞ ಕರ್ತರೂ, ಸಕಲರಿಂದಲೂ ಯಾಗವನ್ನು ಮಾಡಿಸು 
ವವರೂ ಆಗಿರುವರು. ಇಲ್ಲಿಗೆ ಹದಿನಾರನೆಯ ಸ್ಥಾನವು ಮುಗಿದುದು. 

೧೨೦-೧೨೨. ಹಾಧೀಜಣ ಗ್ರಾಮದಲ್ಲಿರುವವರಿಗೆ ವತ್ಸ ಭಾರದ್ವಾಜ 
ಗೋತ್ರಗಳು. ಜ್ಞಾನಜ ಯಕ್ಸಿಣಿಯರು ಗೋತ್ರದೇವಿಯರು. ಈ ಗೋತ್ರದಲ್ಲಿ 
ಹುಟ್ಟದ ಬ್ರಾಹ್ಮಣರು ಪಂಚಯಜ್ಞನಿರತರೂ, ಲೋಭಿಗಳೂ, ಕೋಪಿಷ್ಕರೂ, 
ಮಕ್ಕಳುಳ್ಳೆ ವರೂ, ಅತ್ಯಂತ ವಿದ್ಯಾವಂತರೂ, ಸ್ನಾನದಾನಾದಿಗಳಲ್ಲಿ ಆಸಕ್ತರೂ, 
ವಿಷ್ಣುಭಕ್ತಿಯುಳ್ಳವರೂ, ವ್ರತಶೀಲರೂ, ಗುಣಜ್ಞಾ ನನಿಲ್ಲದವರೂ, ವೇದ 
ಬಾಹ್ಯರೂ ಆಗಿರುವವರು. ಇಲ್ಲಿಗೆ ಹದಿನೇಳನೆಯ ಸ್ಥಾನವು ಮುಗಿದುದು. 

೧೨೩-೧೨೪. ಕಪಡ್ವಾಣ ಗ್ರಾಮದವರಿಗೆ ಭಾರದ್ವಾಜ, ಕುಶಗೋತ್ರ 
ಗಳು. ಯಕ್ಸಿಣೀ, ಚಚಾಈ ಕುಲದೇವತೆಗಳು. ಆಂಗಿರಸ್ಕ ಬಾರ್ಹಸ್ಸ ತ್ಯ, 
ಭಾರದ್ವಾಜ, ವಿಶ್ವಾಮಿತ್ರ, ಹೇವರಾತ, ಔದಲ ಪ್ರವರಗಳು. 


೪೧೬ ಶ್ರೀ ಸ್ಥಾಂದಮಹಾಪುರಾಣಂ 


ಅಸ್ಮಿನ್ಸೋತ್ರೇ ಚ ಯೇ ಜಾತಾಃ ಸತ್ಯವಾದೀ ಜಿತವ್ರತಾಃ । 

ಜಿತೇಂದ್ರಿಯಾಃ ಸುರೂಪಾಶ್ಚ ಅಲ್ಪಾಹಾರಾಃ ಶುಭಾನನಾಃ ॥೧೨೫॥ 

ಸದೋದ್ಯತಾಃ ಪುರಾಣಜ್ಞಾ ಮಹಾದಾನಪರಾಯಣಾಃ । 

ನಿರ್ದೇಷಿಣೋ ಲೋಭಯುತಾ ವೇದಾಧ್ಯಯನ ತತ್ಪ್ಸರಾಃ ॥ ೧೨೬॥ 

ದೀರ್ಥದರ್ಶಿನೋ ಮಹಾತೇಜಾ ಮಹಾಮಾಯಾನಿನೋಹಿತಾಃ ॥೧೨೩॥ 
॥ ಇತ್ಯಷ್ಟಾದಶಂ ಸ್ಥಾನಂ ॥ 

ಜನ್ನೋರೀ ನಾಡವಾಃ ಪ್ರೋಕ್ತಾಃ ಕುಶಪ್ರವರ ಸಂಯುತಾಃ । 


ವಿಶ್ವಾಮಿತ್ರೋ ದೇನರಾತ ಸ್ತೃತೀಯೌದಲ ಏನ ಚ ॥ ೧೨೮ ॥ 
ತಾರಣೀ ಚ ಮಹಾಮಾಯಾ ಗೋತ್ರದೇವೀ ಪ್ರಕೀರ್ತಿತಾ । 

ಅಸ್ಮಿನ್ವಂಶೇ ಸಮುತ್ಪನ್ನಾ ವಾಡವಾ ದುಃಸಹಾ ನೃಪ ॥ ೧೨೯॥ 
ಮಹೋತ್ಕಟಾ ಮಹಾಕಾಯಾಃ ಪ್ರಲಂಬಾಶ್ಚ ಮಹೋದಡ್ಧ್ಭತಾಃ | 
ಕ್ಲೇಶರೂಸಾಃ ಕೃಷ್ಣವರ್ಣಾಃ ಸರ್ವಶಾಸ್ತ್ರನಿಶಾರದಾಃ ॥ ೧೩೦ ॥ 
ಬಹುಭುಗ್ಧನಿನೋ ದಕ್ಸಾ ದ್ವೇಷಪಾಪನಿವರ್ಜಿತಾಃ । 

ಸುವಸ್ತ್ರಭೂಷಾ ವೈರೂಪಾ ಬ್ರಾಹ್ಮಣಾ ಬ್ರಹ್ಮನಾದಿನಃ ॥ ೧೩೧ ॥ 








೧೨೫-೧೨೭. ಈ ಗೋತ್ರದ ವಿಪ್ರರು ಸತ್ಯವಂತರೂ, ವ್ರತಿಗಳೂ, 
ಜಿತೇಂದ್ರಿಯರೂ, ಸುಂದರರೂ, ಸ್ವಲ್ಪಾ ಹಾರವನ್ನು ತಿನ್ನುವವರೂ, ಸುಂದರ 
ವಾದ ಮುಖವುಳ್ಳವರೂ, ಯಾವಾಗಲೂ ಕಾರ್ಯೊೋದ್ಯುಕ್ತರೂ, ಪುರಾಣ 
ಗಳನ್ನರಿತವರೂ, ಅತಿಶಯವಾಗಿ ದಾನಮಾಡುವವರೂ, ದ್ವೇಷವಿಲ್ಲದವರೂ, 
ಲೋಭಿಗಳೂ, ವೇದಾಧ್ಯಯನ ನಿರತರೂ, ದೂರಾಲೋಚನೆಯುಳ್ಳವರೂ, 
ಅತ್ಯಂತ ತೇಜಸ್ವಿಗಳೂ, ಮಾಯೆಯಿಂದ ಮೂಢರೂ ಆಗಿರುವರು. ಇಲ್ಲಿಗೆ 
ಹದಿನೆಂಟನೆಯ ಸ್ಥಾನವು ಮುಗಿದುದು. 

೧೨೮-೧೩೧. ಜನ್ಹೋರೀ ಗ್ರಾಮದವರಿಗೆ ಕುಶಗೋತ್ರವು, ವಿಶ್ವಾಮಿತ್ರ, 
ದೇವರಾತ, ಔದಲಪ್ರವರಗಳು. ತಾರಣೀ ಮಹಾಮಾಯೆಯರು ಗೋತ್ರ 
ದೇವಿಯರು. ಈ ವಂಶದ ಬ್ರಾಹ್ಮಣರು ಸಹಿಸಲಾಗದವರೂ, ಅತಿಭಯಂ 
ಕರರೂ, ದೊಡ್ಡದೇಹವುಳ್ಳವರೂ, ಉದ್ದವಾದವರೂ, ಅತ್ಯಂತೋದ್ಭತರೂ, 
ಕಷ್ಟಪಡುವವರೂ, ಕರಿಬಣ್ಣ ದವರೂ, ಸಮಸ್ತಶಾಸ್ತ್ರ ಪಂಡಿತರೂ, ಹೆಚ್ಚು 
ತಿನ್ನುವವರೂ, ಹಣಗಾರರೂ, ಕುಶಲರೂ, ದ್ವೇಷಪಾಪಗಳಿಲ್ಲದವರೂ, ಒಳ್ಳೆಯ 
ಬಟ್ಟಿ ಗಳನ್ನುಡುವವರೂ, ವಿಕಾರರೂಪರೂ, ಬ್ರಹ್ಮಜ್ಞಾನಿಗಳೂ ಆಗಿರುವರು. 
ಇಲ್ಲಿಗೆ ಹತ್ತೊಂಭತ್ತನೆಯ ಸ್ಥಾನವು ಮುಗಿದುದು. - 


ಏಕೋನಚತ್ವಾರಿಂಶೋ9$ಧ್ಯಾಯಃ ೪೧೭ 


॥ ಇತ್ಯೇಕೋನನಿಂಶತಿತಮಂ ಸ್ಥಾನಂ ॥ 
ನನೋಡೀಯಾಶ್ಚ ಯೇ ಜಾತಾ ಗೋತ್ರಾಣಾಂ ತ್ರಯಮೋವ ಚ। 


ಕುಶಕುತ್ಸ್‌ ಚ ಪ್ರನರೌ ತೃತೀಯೋ ಭಾರದ್ವಾಜ ಸ್ತಥಾ ॥ ೧೩೨ 0 
ನಿಶ್ವಾನಿತ್ರೋ ದೇವರಾತಸ್ತೃತೀಯೌದಲಮೇನ ಚ! 
ಆಂಗಿರಸ ಆಂಬರೀಷೋ ಯುವನಾಶ್ವಸ್ತೃತೀಯಕಃ ॥ ೧೩೩ ॥ 


ಆಂಗಿರಸ ಬಾರ್ಹಸ್ಸತ್ಯ ಭಾರದ್ವಾಜಾಸ್ತಥೈನ ಚ। 

ಶೇಷಲಾ ಪ್ರಥಮಾ ಸ್ರೋಕ್ತಾ ತಥಾ ಶಾಂತಾ ದ್ವಿತೀಯಕಾ 1 ೧೩೪ ॥ 

ತೃತೀಯಾ ಧಾರಶಾಂತಿಶ್ಚ ಗೋತ್ರದೇನ್ಯೋಹ್ಯನುಕ್ರಮಾತ್‌ । 

ಅಸ್ಮಿನ್ಸೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ ॥ ೧೩೫ ॥ 

ಅಸತ್ಯಭಾಷಿಣೋ ವಿಪ್ರಾ ಲೋಭಿನೋ ನೃಪಸತ್ತಮ । 

ಸರ್ವನಿದ್ಯಾಕುಶಲಿನೋ ಬ್ರಾಹ್ಮಣಾ ಬ್ರಹ್ಮನಿತ್ತಮಾಃ ॥ ೧೩೬ ॥ 
॥ ಇತಿ ನಿಂಶತಿತಮಂ ಸ್ಥಾನಂ i 

ಕೀಣಾನಾಚನಕಂ ಸ್ಥಾನಂ ಯದೇಕಾಧಿಕನಿಂಶತಿ । 

ಭಾರದ್ವಾಜಾಶ್ಚ ನಿಪ್ರೇಂದ್ರಾಃ ಕಥಿತಾ ಬ್ರಾಹ್ಮಣಾಃ ಶುಭಾಃ ॥ ೧೩೭ ॥ 

ಆಂಗಿರಸ ಬಾರ್ಹಸ್ಪತ್ಯ ಭಾರದ್ದಾಜಾಸ್ತಥೈವ ಚ । 


ಯಕ್ಸಿಣೇ ಚ ತಥಾ ದೇನೀ ಗೋತ್ರದೇವೀ ಪ್ರಕೀರ್ತಿತಾ ॥ ೧೩೮ ॥ 
ಅಸ್ಮಿನ್ಲೋತ್ರೇ ಚ ಯೇ ಜಾತಾ ನಾಡವಾ ಧನಿನಃ ಶುಭಾಃ । 
ವಸ್ಟ್ರಾಂಂಲಕರಣೋಪೇತಾ ದ್ವಿಜಭಕ್ತಿಪರಾಯಣಾಃ ॥ ೧೩೯ ॥ 


ಬ್ರಹ್ಮಭೋಜ್ಯಪರಾಃ ಸರ್ವೇ ಸರ್ವೇ ಧರ್ಮಪರಾಯಣಾಃ ॥ ೧೪೦ ॥ 
॥ ಇತ್ಯೇಕನಿಂಶತಿತಮಂ ಸ್ಥಾನಂ ॥ 








೧೩೨-೧೩೬. ವನೋಡಿಯಾ ಗ್ರಾಮದವರಿಗೆ ಕುಶ, ಕುತ್ಸ, ಭಾರದ್ವಾಜ 
ಗೋತ್ರಗಳು. ಕ್ರಮವಾಗಿ ವಿಶ್ವಾಮಿತ್ರ, ದೇವರಾತ, ಔದಲ, ಆಂಗಿರಸ, 
ಆಂಬರೀಷ, ಯುವನಾಶ್ವ ಆಂಗಿರಸ, ಬಾರ್ಹಸ್ಪ ತ್ಯ, ಭಾರದ್ವಾಜ ಪ್ರವರಗಳು. 
ಶೇಷಲಾ, ಶಾಂತಾ, ದಾರಶಾಂತಿ ಯೆಂಬವರು ಗೋತ್ರದೇವಿಯರು. ಈ 
ಗೋತ್ರದ ಬ್ರಾಹ್ಮಣರು ಅಶಕ್ತರೂ, ದೈನ್ಯವುಳ್ಳವರೂ, ಸುಳ್ಳಾಡುವವರೂ, 
ಲೋಭಿಗಳೂ, ಸಕಲವಿದ್ಯೆಗಳಲ್ಲಿ ನಿಪುಣರೂ, ಬ್ರಹ್ಮೆಜ್ಞಾನಿಗಳೂ ಆಗಿರುವರು. 
ಇಲ್ಲಿಗೆ ಇಪ್ಪತ್ತನೆಯ ಸ್ಥಾನವು ಮುಗಿದುದು. 

೧೩೭-೧೪೦. ಕೀಣಾವಾಚನಕಸ್ಥಾನದವರಿಗೆ ಭಾರದ್ವಾಜಗೋತ್ರವು. 
ಆಂಗಿರಸ್ಕ ಬಾರ್ಹಸ್ಪತ್ಯ, ಭಾರದ್ವಾಜ ಪ್ರವರಗಳು. ಯಕ್ಸಿಣಿಯು ಗೋತ್ರ 
ದೇವಿಯು. ಈ ಗೋತ್ರದ ಬ್ರಾಹ್ಮಣರು ಹಣಗಾರರೂ, ವಸ್ತ್ರಾಲಂಕಾರ 
ಭೂಷಿತರೂ, ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರೂ, ಬ್ರಾಹ್ಮಣ ಭೋಜನದಲ್ಲಿ 

14 


೪೧೮ ಶ್ರೀ ಸ್ಕಾಂದಮಹಾಪುರಾಣಂ 


ಗೋವಿಂದಣಾಚ ಸ್ವಸ್ಥಾನೇ ಯೇ ಜಾತಾ ಬ್ರಹ್ಮಸತ್ತಮಾಃ । 


ಕುಶಗೋತ್ರಂ ಚ ನೈ ಪ್ರೋಕ್ತಂ ಪ್ರನರತ್ರಯಮೇನ ಚ ॥ ೧೪೧॥ 
ವಿಶ್ವಾಮಿತ್ರೋ ದೇವರಾತೌದಲಪ್ರವರಮೇವನ ಚ 
ಚಚಾಈ ಚ ಮಹಾದೇವೀ ಗೋತ್ರದೇವೀ ಪ್ರಕೀರ್ತಿತಾ ॥ ೧೪೨ ॥ 


ಅಸ್ಮಿನ್ಗೋತ್ರೇ ಚ ಯೇ ಜಾತಾ ಬ್ರಾಹ್ಮಣಾ ಬ್ರಹ್ಮನೇದಿನಃ | 


ಯಜಂತೇ ಕ್ರತುಭಿಸ್ತತ್ರ ಹೃಷ್ಟಚಿತ್ತೈಕಮಾನಸಾಃ ॥ ೧೪೩ ॥ 

ಸರ್ವನಿದ್ಯಾಸು ಕುಶಲಾ ಬ್ರಹ್ಮಣ್ಯಾ ಬ್ರಹ್ಮನಿತ್ತಮಾಃ ॥ ೧೪೪ ॥ 
॥ ಇತಿ ದ್ವಾವಿಂಶತಿತಮಂ ಸ್ಥಾನಂ ॥ 

ಥಲತ್ಯಜಾಹಿ ನಿಸ್ರೇಂದ್ರಾ ದ್ನೌ ಗೋತ್ರೌಚಾಂಪ್ಯಧಿಷ್ಠಿತೌ | 

ಧಾರಣಂ ಸಂಕುಶಂ ಚೈವ ಗೋತ್ರದ್ಧಿತಯನೇನ ಚ ॥ ೧೪೫ ॥ 

ಅಗಸ್ಟ್ಯೋ ದಾರ್ಥ್ಯಚ್ಯುತಶ್ನ ರಥ್ಯವಾಹನಮೇವ ಚ | 

ವಿಶ್ವಾಮಿತ್ರೋ ದೇವರಾತಸ್ತೃತೀಯೌದಲ ಏನ ಚ । ॥ ೧೪೬ ॥ 


ದೇನೀ ಚ ಛತ್ರಜಾ ಪ್ರೋಕ್ತಾ ದ್ವಿತೀಯಾ ಥಲಜಾ ತಥಾ । 
ಧಾರಣಸ ಗೋತ್ರೇ ಯೇ ಜಾತಾ ಬ್ರಹ್ಮಣ್ಯಾ ಬ್ರಹ್ಮವಿತ್ತಮಾಃ ॥ ೧೪೭ ॥ 
ತ್ರಿಪ್ರನರಾಶ್ಚೈನ ನಿಖ್ಯಾತಾ ಸತ್ತ್ಯವಂತೋ ಗುಣಾನ್ವಿತಾಃ । 


ತದನ್ಹಯೇ ಚ ಯೇ ಜಾತಾ ಧರ್ಮಕರ್ಮಸಮಾಶ್ರಿತಾಃ ॥ ೧೪೮ ॥ 





ನಿರತರೂ, ಧರ್ಮಾಸಕ್ತರೂ ಆಗಿರುವರು. ಇಲ್ಲಿಗೆ ಇಪ್ಪತ್ತೊಂದನೆಯ ಸ್ಥಾನವು 
ಮುಗಿದುದು. 

೧೪೧-೧೪೨. ಗೋವಿಂದಣಾಸ್ಥಾನದ ಬ್ರಾಹ್ಮಣರಿಗೆ ಕುಶಗೋತ್ರವು. 
ವಿಶ್ವಾಮಿತ್ರ, ದೇವರಾತ, ಔದಲ ಪ್ರವರಗಳು, ಚಚಾಈಯು ಗೋತ್ರ 
ದೇವಿಯು. 

೧೪೩-೧೪೪. ಈ ಗೋತ್ರದ ಬ್ರಾಹ್ಮಣರು ಬ್ರಹ್ಮಜ್ಞಾನಿಗಳೂ, ಯಾಗ 
ಮಾಡುವವರೂ, ಸಂತುಷ್ಟಚಿತ್ತರೂ, ಒಮ್ಮನಸ್ಸುಳ್ಳವರೂ, ಸಕಲನಿದ್ಯಾ 
ದಕ್ಬರೂ, ಬ್ರಾಹ್ಮಣಪ್ರಿಯರೂ, ಬ್ರಹ್ಮಜ್ಞಾನಿಗಳೂ ಆಗಿರುವರು. ಇಲ್ಲಿಗೆ 
ಇಪ್ಪತ್ತೈರಡನೆಯ ಸ್ಥಾನವು ಮುಗಿದುದು. 

೧೪೫-೧೪೬. ಥಲತ್ಯಜಾ ಗ್ರಾಮದವರಿಗೆ ಧಾರಣ, ಸಂಕುಶಗೋತ್ರ 
ಗಳು. ಅಗಸ್ತ್ಯ, ದಾರ್ಡ್ಯಚ್ಯುತ, ರಥ್ಯವಾಹನ, ವಿಶ್ವಾಮಿತ್ರ, ದೇವರಾತ್ಮ 
ಔದಲ ಪ್ರವರಗಳು. 

೧೪೭-೧೪೯. ಛತ್ರಜಾ, ಥಲಜೆಯರು ಗೋತ್ರದೇವಿಯರು, ಈ 
ಗೋತ್ಸದ ಬ್ರಾಹ್ಮಣರು ಬ್ರಹ್ಮಜ್ಞಾನಿಗಳೂ, ಬಲವುಳ್ಳವರೂ, ಧರ್ಮಕರ್ಮ 


ಏಕೋನಚತ್ವಾರಿಂಶೋ$ಧ್ಯಾಯಃ ೪೧೯ 


ಧನಿನೋ ಜ್ಞಾನನಿಷ್ಕಾಶ್ಚ ತಪೋಯಜ್ಞಸ್ರಿಯಾದಿಷು । 

ತ್ರಯೋಪಿಂಶಂ ಪ್ರೋಕ್ತಮೇತತ್ಸ್ಯಾನಂ ಮೋಢಕಜ್ಞಾತಿನಾಂ ॥ ೧೪೯॥ 
n ಇತಿ ತ್ರಯೋವಿಂಶತಿತಮಂ ಸ್ಥಾನಂ ॥ 

ವಾರಣಸಿದ್ಧಾಶ್ಚ ಯೇ ಪ್ರೋಕ್ತಾ ಬ್ರಾಹ್ಮಣಾ ಜ್ಞಾನವಿತ್ತಮಾಃ । 


ಅಸ್ಮಿನ್ಸೋಶ್ರೇ ಚ ಯೇ ವಿಪ್ರಾಃ ಸತ್ಯವಾದಿಜಿತವ್ರತಾಃ ॥ ೧೫೦ ॥ 
ಜಿತೇಂದ್ರಿಯಾಃ ಸುರೂಪಾಶ್ಚ ಅಲ್ಪಾಹಾರಾಃ ಶುಭಾನನಾಃ । 
ಸದೋದ್ಯತಾಃ ಪುರಾಣಜ್ಞಾ ಮಹಾದಾನಪರಾಯಣಾಃ ॥ ೧೫೧ ॥ 


ನಿರ್ದೇಷಿಣೋ ಲೋಭಯುತಾ ವೇದಾಂಧ್ಯಯನತತ್ಸರಾಃ । 

ದೀರ್ಥ್ಫ್ಥದರ್ಶಿನೋ ಮಹಾತೇಜಾ ಮಹಾಮಾಯಾನಿನೋಹಿತಾಃ ॥ 

ಚತುರ್ನಿಂಶತಿತಮಂ ಪ್ರೋಕ್ತಂ ಸ್ವಸ್ಥಾನಂ ಪರಮಂ ಮತಂ ॥ ೧೫೩॥ 
॥ ಇತಿ ಚತುರ್ವಿಂಶತಿತಮಂ ಸ್ಥಾನಂ ॥ 

ಭಾಲಜಾಶ್ಚಾತ್ರ ವೈ ಪ್ರೋಕ್ತಾ ಬ್ರಾಹ್ಮಣಾಃ ಸತ್ಯವಾದಿನ: ॥ ೧೫೪ ॥ 

ನತ್ಸಗೋತ್ರಂ ಕುಶಂ ಚೈನ ಗೋತ್ರ ದ್ವಿತಯಮೇನ ಚ । 

ತೇಷಾಂ ಪ್ರನರಾಣ್ಯಹಂ ನಕ್ಸ್ಯೇ ಸಂಚತ್ರಿತಯಮೇನ ಚ । 


ಭೃಗುಚ್ಕನನಾಸ್ನವಾನೌರ್ವಜಮದನಗ್ನಿಸ್ತಥೈನ ಚ ॥ ೧೫೫ ॥ 
ಆಂಗಿರಸಾಂಬರೀಷೌ ಚ ಯೌವನಾಶ್ಚಸ್ತೃತೀಯಕಃ । 
ಶಾಂತಾ ಚ ಶೇಷಲಾ ಚಾಂತ್ರ ದೇನೀದ್ವಿತಯಮೇವನ ಚ 1 ೧೫೬ ॥ 


ನಿರತರೂ, ಹಣವಂತರೂ, ತಪಸ್ಸು ಮತ್ತು ಯಜ್ಞಕ್ರಿಯೆಗಳಿಲ್ಲ ಆಸಕ್ತರೂ 
ಆಗಿರುವರು. ಇಲ್ಲಿಗೆ ಇಪ್ಪ ತ್ತಮೂರನೆಯ ಸ್ಥಾನವು ಮುಗಿದುದು. 

೧೫೦-೧೫೩. ವಾರಣಸಿದ್ಧ ಗ್ರಾಮದವರು ಜ್ಞಾನಿಗಳೂ, ಸತ್ಯವಂತರೂ, 
ವ್ರತಿಗಳೂ, ಜಿತೇಂದ್ರಿಯರೂ, ಸುಂದರರೂ, ಸ್ವಲ್ಪಾ ಹಾರವುಳ್ಳವರೂ, ಒಳ್ಳೆಯ 
ಮುಖದವರೂ, ಯಾವಾಗಲೂ ಉದ್ಯಮಿಗಳೂ, ಪುರಾಣವನ್ನರಿತವರೂ, 
ಅತ್ಯಂತದಾನಾಸಕ್ತರೂ, ದ್ರೇಷವಿಲ್ಲದವರೂ, ಆಶೆಯಿಲ್ಲದವರೂ, ವೇದಾ 
ಧ್ಯಯನನಿರತರೂ, ದೂರಾಲೋಚನೆಯುಳ್ಳವರೂ, ಅತ್ಯಂತ ತೇಜಸ್ವಿಗಳೂ, 
ಮಾಯೆಯಿಂದ ಮೋಹೆಗೊಂಡವರೂ ಆಗಿರುವರು. ಇಲ್ಲಿಗೆ ಇಪ್ಪತ್ತನಾಲ್ಕನೆಯ 
ಸ್ಥಾನವು ಮುಗಿದುದು. 

೧೫೪-೧೫೬. ಭಾಲಜಗ್ರಾಮದವರಿಗೆ ವತ್ಸ, ಕುಶಗೋತ್ರಗಳು. ಭೃಗು, 
ಚ್ಯವನ, ಆಪ್ಲುವಾನ, ಔರ್ವ, ಜಮದಗ್ನಿ, ಆಂಗಿರಸ್ಕ ಅಂಬರೀಷ, ಯಾನ 
ನಾಶ್ವ ಎಂಬ ಐದು ಮತ್ತು ಮೂರು ಪ್ರವರಗಳು. ಶಾಂತಾ, ಶೇಷಲಾ ಎಂಬವರು 
ಗೋತ್ರದೇವಿಯರು. 


೪೨೦ ಶ್ರೀ ಸ್ಕಾಂದಮಹಾಪುರಾಣಂ 


ಅಸ್ಮಿನ್ವಂಶೇ ಸಮುತ್ಸನ್ನಾಃ ಸದ್ವೃತ್ತಾಃ ಸತ್ಯಭಾಷಿಣಃ । 

ಶಾಂತಾಶ್ಚ ಭಿನ್ನನರ್ಣಾಶ್ಚ ನಿರ್ಧನಾಶ್ಚ ಕುಚೈಲಿನಃ ॥ ೧೫೭ ॥ 

ಸಗರ್ವಾ ಲೌಲ್ಯಯುಕ್ತಾಶ್ಚ ವೇಡಶಾಸ್ತ್ರೇಷು ನಿಶ್ಚಲಾಃ । 

ಪಂಚವಿಂಶತಿಮಂ ಪ್ರೋಕ್ತಂ ಸ್ವಸ್ಥಾನಂ ಮೋಢಜ್ಜಾತಿನಾಂ ॥ ೧೫೮ ॥ 
॥ ಇತಿ ಪಂಚನಿಂಶತಿತಮಂ ಸ್ಥಾನಂ ॥ 

ಮಹೋಮನೀಆಶ್ಚ ಯೇ ಸಂತಿ ಬ್ರಾಹ್ಮಣಾ ಬ್ರಹ್ಮನಿತ್ತಮಾಃ । 


ಏಕನೇನ ಚ ವೈ ಗೋತ್ರ 0 ಕುಶಸಂಜ್ಞ ೦ ಪವಿತ್ರಕಂ ॥ ೧೫೯॥ 
ವಿಶ್ವಾಮಿತ್ರೋ ಜೀವರಾತಸ ಸ್ತೃತೀಯೌದಲ ಏನ ಚೆ । 

ಜೀನೀ ಚನಾ ಚೈನಾ ತ್ರ ರಕ್ಸಾರೂಪಾ ವ್ಯ ವಸ್ಥಿ ತಾ ॥ ೧೬೦ ॥ 
ಅಸ್ಮಿನ್ಸೋತ್ರೇ ಚ ಯೇ ಜಾತಾಃ ಸತ್ಯ ವಾದಿಜಿತೇಂದ್ರಿ ಯಾಃ । 

ಸತ್ಯ: ವ್ರತಾಃ `ಸುರೂಪಾಶ್ಚ ಅಲ್ಪಾಹಾರಾಃ ತುಭಾರಾ॥ ॥ ೧೬೧ ॥ 
ಪರನ ಕೃ ಪಾಲವಃ ಸರ್ವಭೂತಹಿತೇ ರತಾಃ । 

ಷಡ್ಡಿ ಸತತ ಪ್ರೋಕ್ತ 0 ಸ್ಟ ಸಾ ್ಲಿನಂ ಬ್ಲ ಬ್ರಹ್ಮವಾದಿನಾಂ ॥ ೧೬೨ ॥ 
ರಾನೇಣ ಸಂಸ್ತುತಾಶ್ಚೈವ ಸಾಂನುಜೇನ ತಥೈನ ಚ ॥ ೧೬೩ ॥ 


i ಷಡ್ವಿಂಶತಿತಮಂ ಸ್ಕಾ ನಂ ॥ 
ತಿಯಾಶ್ರೀಯಾಮಥೋ ವತ್ಸ್ಯೇ ಸ್ವಸ್ಥಾ ನಂ ಸಪ್ತ ವಿಂಶಕಂ । 
ಅಸ್ಮಿನ್ಸಾ ನೇ ಚಯೇ ಜಾತಾಬ್ರಾ ಹ್ಮ ಣಾ ನೇದಸಾರಗಾಃ ॥ ೧೬೪ ॥ 

೧೫೭-೧೫೮. ಈ ವಂಶದ ಬ್ರಾಹ್ಮಣರು ಸಚ್ಚರಿತರೂ, ಸತ್ಯವಾದಿಗಳೂ, 
ಶಾಂತರೂ, ಬೇರೆ ಬೇರೆ ಬಣ್ಣದವರೂ, ಬಡವರೂ, ಕೊಳಕುಬಟ್ಟಿಯುಳ್ಳ 
ವರೂ, ಅಹಂಕಾರಿಗಳೂ, ಚಂಚಲರೂ, ವೇದಶಾಸ್ತ್ರಗಳಲ್ಲಿ ದೈ ನಂಬಿಕೆ 
ಯುಳ್ಳವರೂ ಆಗಿರುವರು. ಇಲ್ಲಿಗೆ ಇಪ್ಪತ್ತೈದನೆಯ ಸ್ಥಾ ನವು. ಚ ನು. 

೧೫೯-೧೬೦. ಮಹೋವೀಆ ಗ್ರಾಮದವರಿಗೆ ಕುಶಗೋತ್ರ ವು. ವಿಶ್ವಾ 

» ದೇವರಾತ, ಔದಲ ಪ್ರವರಗಳು. ಚವಾಈಯು ರಕ್ಷಿಸುವ ಸೋತ 
ದೇವಿಯು. 

೧೬೧-೧೬೩. ಈ ಗೋತ್ರದ ಬ್ರಾಹ್ಮಣರು ಸೆತ್ಯವಂತರೂ, ಜಿತೇಂದ್ರಿ 
ಯರೂ, ವ್ರತಿಗಳೂ, ಸುಂದರರೂ, ಸ್ವಲ್ಪಾಹಾರವುಳ್ಳವರೂ, ಒಳ್ಳೆಯ ಮುಖ 
ವುಳ್ಳವರೂ, ದಯಾಳುಗಳೂ, ಸಕಲಪ್ಪಾಣಿಗಳಿಗೆ ಹಿತವನ್ನುಂಟುಮಾಡು 
ವವರೂ ಆಗಿರುವರು. ರಾಮಲಕ್ಷ ರು ಸ್ತೋತ್ರಮಾಡಿರುವ ಇವರ 
ಸ್ಥಾನವು ಇಪ್ಪತ್ತಾರನೆಯದಾಗಿರುವುದು. ಇಲ್ಲಿಗೆ ಇಪ್ಪತ್ತಾರನೆಯ ಸ್ಥಾನವು 
ಮುಗಿದುದು. 

೧೬೪-೧೬೯. ತಿಯಾಶ್ರೀಯಾ ಗ್ರಾಮದವರಿಗೆ ಶಾಂಡಿಲ್ಯಗೋತ್ರವು. 


ಏಕೋನಚತ್ವಾರಿಂಶೋ$ಧ್ಯಾಯಃ ೪೨೧ 


ಶಾಂಓಷ್ಯ...ತ್ರಂ ಚೈವಾಃತ್ರ ಕಥಿತಂ ನೇದಸತ್ತಮೈಃ । 
ಪಂಚಪ್ರನರಮಥೋ ಪ್ರೋಕ್ತಂ ಜ್ಞಾನಜಾ ಚಾತ್ರ ದೇವತಾ ॥ ೧೬೫ ॥ 
ಕಾಶ್ಯಸಾಂವತ್ಸಾರಶ್ಚೈವ ಶಾಂಡಿಲೋಸಿತ ಏನ ಚ । 

ಪಂಚನೋ ದೇನಲಶ್ಚೈನ ಪ್ರನರಾಣಿ ತಥಾ ಕ್ರಮಾತ್‌ । 


ಜ್ಞಾನಜಾ ಚ ತಥಾ ದೇವೀ ಕಥಿತಾ ಸ್ಥಾನದೇನತಾ ॥ ೧೬೬ ॥ 
ಅಸ್ಮಿನೃಂಶೇ ಚ ಯೇ ಜಾತಾಸ್ತೇ ದ್ವಿಜಾಃ ಸೂರ್ಯನರ್ಚಸಃ । 
ಚಂದ್ರನಚ್ಛ್ರೇತಲಾಃ ಸರ್ವೇ ಧರ್ಮಾರಣ್ಯೇ ವ್ಯವಸ್ಥಿ ತಾಃ ॥ ೧೬೭॥ 
ಸದಾಚಾರಾ ಮಹಾರಾಜ ವೇದಶಾಸ, ಪರಾಯುಣಾಃ । 

'ಯಾಜ್ಞೆಕಾಶ್ಚ ಶುಭಾಚಾರಾಃ ಸತ್ಯಶೌಚಸರಾಯಣಾಃ ॥ ೧೬೮ ॥ 


ಧರ್ಮಜ್ಞಾ ದಾನಶೀಲಾಶ್ಚ ನಿರ್ಮಲಾ ಹಿ ಮದೋತ್ಸುಕಾಃ । 

ತಪಃ ಸ್ವಾಧ್ಯಾಯನಿರತಾ ನ್ಯಾಯಧರ್ಮಸರಾಯಣಾಃ | 

ಸಪ್ತನಿಂಶತಿತಮಂ ಸ್ಥಾನಂ ಕಥಿತಂ ಬ್ರಹ್ಮನಿತ್ತಮೈಃ ॥ ೧೬೯॥ 
॥ ಇತಿ ಸಪ್ತವಿಂಶಂ ಸ್ಥಾನಂ ॥ 

ಗೋಧರೀಯಾಶ್ಚ ಯೇ ಜಾತಾ ಬ್ರಾಹ್ಮಣಾ ಜ್ಞಾನಸತ್ತಮಾಃ | 

ಗೋತ್ರತ್ರಯಮಥೋ ವಳ್ಬ್ಕ್ಯೇ ಯಥಾ ಚೈವಾಪ್ಯನುಕ್ರಮಾತ್‌ ॥೧೭೦॥ 

ಪ್ರಥಮಂ ಧಾರಣಸಂ ಚೈನ ಜಾತೂಕರ್ಣಂ ದ್ದಿತೀಯಕಂ । 

ತೃತೀಯಂ ಕೌಶಿಕಂ ಚೈನ ಯಥಾ ಚೈವಾಪ್ಯನುಕ್ರಮಾತ್‌ ॥ ೧೭೧೫ 

ಧಾರಣಸ ಗೋತ್ರೇ ಯೇ ಜಾತಾಃ ಪ್ರನರತ್ರಯ ಸಂಯುತಾಃ । 

ಅಗಸ್ತಿಶ್ಚ ದಾರ್ಥಚ್ಯುತ ಇಧ್ಮವಾಹನಸಂಜ್ಞಕಃ ॥ ೧೭೨ ॥ 

ವಸಿಷ್ಠಶ್ಹ ತಥಾತ್ರೇಯೋ ಜಾತೂಕರ್ಣಸ್ತೃತೀಯಕಃ । 

ವಿಶ್ವಾಮಿತ್ರೋ ಮಾಧುಶೃಂದಸ ಅಘಮರ್ಷಣಸ್ತೃತೀಯಕಃ ॥ ೧೭೩ ॥ 


ಕಾಶ್ಯಸ, ಅವತ್ಸಾರ, ಶಾಂಡಿಲ, ಅಸಿತ, ದೇವಲ ಪ್ರವರಗಳು. ಜ್ಞಾನಜೆಯು 
ಗೋತ್ರದೇನಿಯು. ಈ ಗೋತ್ರದ ಬ್ರಾಹ್ಮಣರು ವೇದಪಾರಂಗತರೂ, ಸೂರ್ಯ 
ನಂತೆ ತೇಜಸ್ವಿಗಳೂ ಚಂದ್ರನಂತೆ ಶಾಂತರಾಗಿರುವವರೂ, ಸದಾಚಾರ ' 
ಸಂಪನ್ನರೂ, ಶಾಸ್ತ್ರಜ್ಞರೂ, ಯಜ್ಞ ಮಾಡುವವರೂ, ಸತ್ಯಶಾಚಗಳಲ್ಲಿ ನಿರತರೂ, 
ಧರ್ಮಗಳನ್ನರಿತವರೂ, ದಾನಶೀಲರೂ, ನಿರ್ಮಲರೂ, ಮತ್ತರೂ, ತಪಸ್ಸು 
ಮತ್ತು ವೇದಾಧ್ಯಯನಗಳಲ್ಲಿ ನಿರತರೂ, ನ್ಯಾಯಾಸಕ್ತರೂ ಆಗಿರುವರು. 
ಇದನ್ನು ಇಪ್ಪತ್ತೇಳನೆಯ ಸ್ಥಾನವೆಂದು ಹೇಳುತ್ತಾರೆ. ಇಲ್ಲಿಗೆ ಇಪ್ಪತ್ತೇಳನೆಯ 
ಸ್ಥಾನವು ಮುಗಿದುದು. 

೧೭೦-೧೭೪. ಗೋಧರೀ ಗ್ರಾಮದವರಿಗೆ ಧಾರಣಸ, ಜಾತೂಕರ್ಣ, 
ಕಾಶಿಕನೆಂಬ ಮೂರು ಗೋತ್ರಗಳು. ಇವರಿಗೆ ಕ್ರಮವಾಗಿ ಅಗಸ್ತಿ, ದಾರ್ಥಚ್ಯುತ, 
ಇದ್ಮವಾಹನ, ವಸಿಷ್ಠ, ಆತ್ರೇಯ, ಜಾತೂಕರ್ಣ, ವಿಶ್ವಾಮಿತ್ರ, ಮಾಧುಚ್ಛಂದಸ, 


೪೨೨ ಶ್ರೀ ಸ್ಥ್ಕಾಂದಮ ಹಾಪುರಾಣಂ 


ಮಹಾಬಲಾ ಚ ಮಾಲೇಯಾ ದ್ವಿತೀಯಾ ಚೈವ ಯಕ್ಷೀಣೀ 1 
ತೃತೀಯಾ ಚ ಮಹಾಯೋಗೀ ಗೋತ್ರದೇವ್ಯಃ ಪ್ರಕೀರ್ತಿತಾಃ 1 ೧೭೪ ॥ 
ಅಸ್ಮಿನ್ವಂಶೇ ಚ ಯೇ ಜಾತಾ ಬ್ರಾಹ್ಮಣಾಃ ಸತ್ಯವಾದಿನಃ | 


ಅಲೌಲ್ಯಾಶ್ಚ ಮಹಾಯಜ್ಹಾ ನೇದಾಜ್ಞಾ ಪ್ರತಿಷಾಲಕಾಃ ॥ ೧೭೫ ॥ 
i ಇತ್ಯಷ್ಟಾವಿಂಶಂ ಸ್ಥಾನಂ ॥ 

ವಾಟಿಸ್ತ್ರಹಾಲೇ ಯೇ ಜಾತಾ ಗೋತ್ರತ್ರಿತಯಮೇವ ಚ। 

ಧಾರಣಂ ಪ ಸ್ರಥಮಂ ಜೆ ಹ್ಲೇಯಂ ವತ್ಸ ಸಂಜ್ಞ ೦ ದ್ವಿತೀಯಕಂ ॥ ೧೭೬ ॥ 

ತೃತೀಯಂ `ಕುತ್ಬ ಸಂಜ್ಞ, ಚ ಗೋತ್ರ ಜೀವ ೈಸ್ತಥ್ಛೈೆವ ಚ । 

ಪೆ ಕ್ರಥಮಂ ಧಾರಣಸಗೋತ್ರ ಪ್ರ ವರತ ತ್ರಯಮೇವ ಚ ॥ ೧೭೭ ॥ 

ಅಗಸಿ ಸ್ತಿದಾರ್ಥ್ಯಚ್ಯು ತಶ್ಚೈನ `ಇನ್ಮನಾಹನ ಏನ ಚ। 

ದ್ವಿತೀಯಂ ವತ್ಸಸಂಬ್ಞಂ ಹಿ ಪ್ರನರಾಣಿ ಚ ಪಂಚ ನೈ ॥ ೧೭೮ ॥ 

ಭೃಗುಚ್ಛವನಾಪ್ನನಾನೌರ್ವಜಮದಗ್ನಿಸ್ತಫೈನ ಚ। 

ತೃ ತೀಯಂ ಕುತ್ಸ ಸಂಜ್ಞ ಹಿ ಪ್ರ ವರತ ತ್ರಯಮೇವ ಚೆ 1 ೧೭೯॥ 

ಬಾಜ್‌ ಚಿ ಯೌವನಾಶ್ನಸ ಸ್ತೃತೀಯಕಃ । 

ದೇನೀ ಚ ಛತ್ರಜಾ ಚೈನದ್ದಿ ತೀಯಾ' ಶೇಷಲಾ ತಥಾ ॥ ೧೮೦ ॥ 

ಜ್ಞಾನಜಾ ಚೈ ವ ದೇವಿ ಚ ಸೋತ ತ್ರದೇವ್ಯೋ ಹ್ಯನುಕ್ರಮಾತ್‌ । 

ಅಸಿ ನ್ನೊ ತ್ರೆ € ಚ ಯೇ ವಿಪ್ರಾಃ ಸತ್ಯ ವಾದಿಜಿತೇಂದ್ರಿ ಮ ॥ ೧೮೧ ॥ 


Ca: ಠರೀಲ್ಬಾಹಾರಾಶ್ಚ `ಓಹಾದಾನಪರಾಯಸಾಃ | 

ನಿದ್ದೆ ೯ಸಿಣೋ ಲೋಭಯುತಾ ನೇದಾಧ್ಯಯನತತ್ಸರಾಃ ೧೮೨ ॥ 
ಅಘಮರ್ಷಣ ಎಂಬ ಪ್ರವರಗಳು. ಮಾಲೇಯಾ, ಯಕ್ಸಿಣೀ, ಮಹಾಯೋಗಿ 
ಎಂಬ ಈ ಮೂವರೂ ಗೋತ್ರದೇವಿಯರು. 

೧೭೫. ಈ ವಂಶದ ಬ್ರಾಹ್ಮಣರು ಸತ್ಯವಂತರೂ, ಸ್ಥಿರಚಿತ್ತರೂ, ಮಹಾ 
ಯಜ್ಞಗಳನ್ನು ಮಾಡುವವರೂ, ವೇದದಲ್ಲಿ ಹೇಳಿದಂತೆ ನಡೆಯುವವರೂ 
ಆಗಿರುವರು. ಇಲ್ಲಿಗೆ ಇಪ್ಪ ತ್ರೈಂಟನೆಯ ಸ್ಟಾ ನವು ಮುಗಿದುದು. 

೧೭೬-೧೮೩. ವಾಟಸ ಸ್ತಹಾಲ ಗ್ರಾ ಮದವರಿಗೆ ಧಾರಣ, ವತ್ಸ, ಕುತ್ಸ 
ಎಂಬ ಮೂರು ಗೋತ್ರ ಗಳು. ಮೊದಲನೆಯ ಧಾರಣಸ ಗೋತ್ರದವರಿಗೆ ಅಗಸ್ತಿ 
ದಾರ್ಡಚ್ಯುತ, ಇಧ್ಮವಾಹನ ಪ್ರವರಗಳು. ಎರಡನೆಯ ವತ್ಸಗೋತ್ರದವರಿಗೆ 
ಭೃಗು, ಚ್ಯವನ, ಆಪ್ಪೃವಾನ, 'ಔರ್ನ, ಜಮದಗ್ನಿ ಪ್ರವರಗಳು. ಮೂರನೆಯ 
ಕುತ್ಸಗೋತ್ರದವರಿಗೆ ಆಂಗಿರಸ, ಆಂಬರೀಷ, ಯೌವನಾಶ್ಚ ಪ್ರವರಗಳು. 
ಕ್ರಮವಾಗಿ ಚೃತ್ರಜಾ, ಶೇಷಲಾ, ಜ್ಞಾನಜಾ ಎಂಬವರು ಗೋತ್ರದೇವಿಯರು. 
ಈ ಗೋತ್ರದ ಬ್ರಾಹ್ಮಣರು ಸತ್ಯವಂತರೂ, ಜಿತೇಂದ್ರಿಯರೂ, ಸುಂದರರೂ, 


ಏಕೋನಚತ್ವಾರಿಂಶೋತಧ್ಯಾಯಃ ೪ತಷಿ 


ದೀರ್ಥದರ್ಶಿನೋ ಮಹಾತೇಜಾ ಮಹೋತ್ಕಾಃ ಸತ್ಯವಾದಿನಃ ॥ ೧೮೩ ॥ 
Ki ಇತ್ಯೆ €ಕೋನತ್ತಿ ಂಶತ್‌ ಸ್ಥಾ ನಂ॥ 
ಮಾಣಜಾ ಚ ಮಹಾಸ್ಥಾ ಚ ಗೋತ್ರದ್ದಿ ್ವತಯನೇನ ಚ। 


ಶಾಂಡಿಲ್ಯಶ್ಚ ಕುಶಶ್ಚೆೈ ವ ಗೋತ್ರ ದ್ವ ಯೆ 'ನಿತೀರಿತಂ ॥ ೧೮೪ ॥ 
ಕಾಶ್ಮಪೋ:ವತ್ಸಾರಕ್ಟೆ ಶಾಂಡಿಶ್ಕೋಸಿತ ಬನ ಚಃ 

ಪಂಚನೋ ದೇನಲಶ್ಚೈನ ಏಕಗೋತ್ರಂ ಪ್ರಕೀರ್ತಿತಂ ॥ ೧೮೫ ॥ 
ಚ್ಲಾನಜಾ ಚ ತಥಾ ದೇವೀ ಕಥಿತಾ ಚಾತ್ರ ಸೈನ ಚ। 

ವ್ವಿತೀಯಂ ಚ ಕುಶಂ ಗೋತ್ರಂ ಪ್ರನರತ್ರಯಮೇವ ಚ ॥ ೧೮೬ ॥ 
ನಿಶ್ಚಾಮಿತ್ರೋ ದೇವರಾಜಸ್ತೃತೀಯೌದಲಮೇವ ಚ। 

ಜ್ಞಾನದಾ ಚಾತ್ರ ವೈ ದೇನೀ ದ್ವಿತೀಯಾ ಸಂಪ್ರಕೀರ್ತಿತಾ ೧೮೭ ॥ 
ಅಸ್ಮಿನ್ನೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ । 
ಅಸತ್ಯಭಾಷಿಣೋ ವಿಪ್ರಾ ಲೋಭಿನೋ ನೃಪಸತ್ತಮ ॥ ೧೮೮ ॥ 
ಸರ್ವವಿದ್ಯಾಕುಶಲಿನೋ ಬ್ರಾ ಹ್ಮಣಾ ಬ್ರಹ್ಮ: ಸತ್ತಮಾಃ ॥ ೧೮೯ ॥ 


॥ ಸ 3 ಕ ಸ್ಕಾ ನ ॥ 
ಸಾಣದಾ ಚ ಪರಂ ಸ್ಥಾ ನಂ ಪನಿತ್ರಂ ರ ಮತಂ । 


ಕುಶಪ್ರವರಜಾ ನಿಪ್ರಾಸ್ತ್ರತ್ರಸ್ಮಾ $ 'ಸಾನನಾಃ ಸ್ಕೃ ॥ ೧೯೦॥ 
ವಿಶ್ವಾ ತೂ ತ್ರೀ ದೇವರಾತಸ ಸ ತೀಯೌದಲ ಹ ಸ್ಯ 1 
ಜ್ಞಾನದಾ ಮಹಾದೇವೀ ಗೋತ್ರಡೇನೀ ಪ್ರಕೀರ್ತಿತಾ ॥ ೧೯೧ ॥ 


ಸ್ವಲ್ಪಾಹಾರವುಳ್ಳೆ ವರೂ, ಅತ್ಯಂತದಾನಾಸಕ್ತರೂ, ದ್ವೇಷವಿಲ್ಲದವರೂ, 
ಲೋಭಿಗಳೂ, ವೇದಾಧ್ಯಯನನಿರತರೂ, ದೂರಾಲೋಚನೆಯುಳ್ಳವರೂ, 
ಮಹಾ ತೇಜಸ್ವಿಗಳೂ, ಅತ್ಯುತ್ಸುಕರೂ ಆಗಿರುವರು. ಇಲ್ಲಿಗೆ ಇಪ್ಪ ತ್ರೊಂಬತ್ತ 
ನೆಯ ಸ್ಥಾ ನವು ಮುಗಿದುದು. 

ee. ಮಾಣಜಾಸ್ಕಾ ನದವರಿಗೆ ಶಾಂಡಿಲ್ಯ ಕುಶವೆಂಬ ಎರಡು 
ಗೋತ್ರಗಳು. ಶಾಂಡಿಲ್ಯಗೋತ್ರ "ದವರಿಗೆ ಕಾಕ್ಯನ್ಯ ಅವತ್ಸಾರ, ಶಾಂಡಿಲ್ಯ, 
ಅಸಿತ, ದೇವಲ ಎಂಬ ಪ್ರವರಗಳು. ಜ್ಞಾನಜಾ ಗೋತ್ರ ನ ಕುಕ 
ಗೋತ್ರದವರಿಗೆ ವಿಶ್ವಾಮಿತ್ರ, ದೇವರಾಜ, ಔದಲಪ್ರವರಗಳು. ಜ್ಞಾನದಾ 
ಗೋತ್ರದೇವಿಯು. ಈ ಗೋತ್ರದವರು ಅಶಕ್ತ ಮ ದೈನ್ಯವುಳ್ಳವರೂ, 
ಸುಳ್ಳಾಡುವನರೂ, ಲೋಭಿಗಳೂ, ಸರ್ವವಿದ್ಯಾಕುಶಲರೂ ಆಗಿರುವರು. ಇಷ್ಟಿ 
ಮೂವತ್ತನೆ ಸ್ಥಾ ನವು ಮುಗಿದುದು. 

೧೯೦-೧೯೩, ಪವಿತ್ರವಾದ ಸಾಣದಾಸ್ಥಾನದಲ್ಲಿರುವವರಿಗೆ ಕುಶ 
ಗೋತ್ರವು. ವಿಶ್ವಾಮಿತ್ರ. ದೇವರಾತ, ಔದಲ ಎಂಬ ಮೂರು ಪ್ರವರಗಳು. 


೪೨೪ ಶ್ರೀ ಸ್ಕಾಂದಮಹಾಪುರಾಣಂ 


ಅಸ್ಮಿನ್ನೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ । 

ಅಸತ್ಯಭಾಷಿಣೋ ವಿಪ್ರಾ ಲೋಭಿನೋ ನೃಸಸತ್ತಮ ॥ ೧೯೨ ॥ 

ಸರ್ವವಿಜ್ಯಾ ಕುಶಲಿನೋ ಬ್ರಾಹ್ಮಣಾ ಬ್ರಹ್ಮನಿತ್ತಮಾಃ 1 ೧೯೩ ॥ 
॥ ಇತ್ಯೇಕತ್ರಿಂಶಂ ಸ್ಕಾ ನಂ॥ 

ಆನಂದೀಯಾ ಚ ಸಂಸ್ಥಾ ನಂ ಗೋತ್ರದ್ದಿ ತಯ ಮೇವ ಚ। 

ಭಾರದ್ವಾಜಂ ನಾಮಚ್ಛಕಂ ಶಾಂಡಿಲ್ಯಂ "ಚ ದ್ವಿತೀಯಕಂ 1೧೯೪ 

ಅಂಗಿರಸೋ ಬಾರ್ಹಸ್ಪತ್ಕೋ ಭಾರಡ್ವಾಜಸ್ತ ೃತೀಯಕಃ 

ಚಚಾಈ ಚಾತ್ರ ಯಾ ದೇವೀ ಗೋತ್ರದೇನೀ ಪ್ರಕೀರ್ತಿತಾ ॥ ೧೯೫ ॥ 

ಕಾಶ್ಯಸಾಂವತ್ಸಾರಶ್ಚ ಶಾಂಡಿಲ್ಯೋಸಿತ ಏನ ಚ । 

ಪಂಚನೋ ದೇವಲಶ್ಚೈನ ಪ್ರವರಾಣಿ ಯಥಾಕ್ರವಂಂ ॥ ೧೯೬ ॥ 

ಜ್ಞಾನಜಾ ಚ ತಥಾ ದೇವೀ ಕಥಿತಾ ಗೋತ್ರದೇನತಾ । 

ಅಸ್ಮಿನ್ನೋತ್ರೇ ಚಯೇ ಜಾತಾ ನಿರ್ಲೋಭಾಃ ಶುದ್ಧಮಾನಸಾಃ nore 

ಯದೃಚ್ಛಾಲಾಭಸಂತುಷ್ಟಾ ಬ್ರಾಹ್ಮಣಾ ಬ್ರಹ್ಮನಿತ್ತಮಾಃ ॥ ೧೯೮ ॥ 
1 ಇತಿ ದ್ವಾತ್ರಿ ೦ಶಂ ಸ್ಥಾ ನಂ॥ 

ಪಾಟಡೀಯಾ ಹರಂ ಸ್ಥಾ ನಂ ಪನಿತ್ರಂ ಪರಿಕೀರ್ತಿತಂ I 


ಕುಶಗೋತ್ರಂ ಭವೇದತ್ತ್‌ ಪ್ರ ನರತ್ರ ಸಂ 8೧೯೯ ॥ 
ವಿಶ್ವಾ ಮಿತ್ರೊ e ದೇವರಾತಸ್ತ ೃತೀಯೌಡಲಮೇವ ಹಿ । 
ಅಸ್ಮಿನ್ಲೋತ್ರೇ ಚಯೇ Wd ವೇದಶಾಸ್ತ್ರ ಪರಾಯಣಾಃ ॥ ೨೦೦ ॥ 


ಮದೋದ್ಭುರಾಶ್ಚ ತೇ ವಿಪ್ರಾ ನ್ಯಾಯಮಾರ್ಗಪ್ರವರ್ತಕಾಃ 1೨೦೧ ॥ 
॥ ಇತಿ ತ್ರಯಸ್ವ್ರಿಂಶಂ ಸ್ಥಾನಂ 1 


ಜ್ಞಾನದೆಯು ಗೋತ್ರದೇವಿಯ. ಈ ಗೋತ್ರದಲ್ಲಿ ಜನಿಸಿದವರು ಅಶಕ್ತರೂ, 
ದೀನರೂ, ಸುಳ್ಳಾಡುವವರೂ, ಲೋಭಿಗಳೂ, ಸಮಸ್ತ ವಿದ್ಯೆಗಳಲ್ಲಿಯೂ ದಕ್ಬರೂ, 
ಜ್ಞಾನಿಗಳೂ ಆಗಿರುವರು. ಇಲ್ಲಿಗೆ ಮೂವತ್ತೊಂದನೆ ಸ್ಲಾನವು ಮುಗಿದುದು. 

೧೯೪-೧೯೮. ಅನಂದಾಸ್ಟಾ ನದವರಿಗೆ ಭಾರದ್ವಾಜ, ಶಾಂಡಲ್ಯ ಗೋತ್ರ 
ಗಳು. ಭಾರದ್ವಾಜಗೋತ್ರದವರಿಗೆ ಆಂಗಿರಸ್ಕ ಬಾರ್ಹಸ್ಪತ್ಯ, ಭಾರದ್ವಾಜ 
ಪ್ರವರಗಳು. ಚಚಾಕಈ ಗೋತ್ರದೇನಿಯು. ಕಾಂಜಿಲ್ಲಸೋತ್ರದವರಿಗೆ 
ಕಾಶ್ಯಪ, ಅವತ್ಸಾರ, ಶಾಂಡಿಲ್ಯ, ಅಸಿತ, ದೇವಲ ಎಂದು ಐದು ಪ್ರವರಗಳು. 
ಜ್ಞಾನಜಾ ಗೋತ್ರದೇನಿಯು. ಈ ಗೋತ್ರದಲ್ಲಿ ಜನಿಸಿದವರು ಉದಾರರೂ, 
ಶುದ್ಧ ಚಿತ್ತರೂ, `ಕ್ಕಿದಷ್ಟ ರಿಂದ ತೃಪಿ ಸ್ರಿಗೊಳ್ಳು ವವರೂ, ಬ್ರಾಹ್ಮಜ್ಞಾ ನಿಗಳೂ 
ಆಗಿರುವರು. ಇಲ್ಲಿಗೆ ಮೂವತ್ತೆ, ರಡ ಸಾ ನವು ಮುಗಿದುದು. 

೧೯೯-೨೦೧. ಪವಿತ್ರವಾದ ಪಾಟಡಿಳಯಾಸಾ ನದವರಿಗೆ ಕುಶ ಗೋತ್ರವು. 
ವಿಶ್ವಾಮಿತ್ರ, ದೇವರಾತ, ಔಡಲ ಪ್ರವರಗಳು. ಈ ಗೋತ್ರದವರೂ ವೇದ 


ಏಳೊ(ಸಚತ್ವಾರಿಂತೋ9ಧ್ಯಾಯ!। ೪೨೫ 


ಚೀಕೋಲಿಯಾ ಪರಂ ಸ್ಥಾನಂ ಕುಶಗೋತ್ರಂ ತಥೈವ ಚ! 


ವಿಶ್ವಾಮಿತ್ರೋ ದೇನರಾತಸ್ತ್ರೃತೀಯೌದಲಮೇನ ಚ ॥ ೨೦೨ ॥ 
ಚಚಾಈ ಚಾತ್ರ ವೈ ದೇನೀ ಗೋತ್ರದೇನೀ ಪ್ರಕೀರ್ತಿತಾ । 
ಅಸ್ಮಿನ್ಸೋತ್ರೇ ಭವಾ ನಿಪ್ರಾಃ ಶ್ರುತಿಸ್ಮೃತಿಷರಾಯಣಾಃ ॥ ೨೦೩ ॥ 


ರೋಗಿಣೋ ಲೋಭಿನೋ ದುಷ್ಟಾ ಯಜನೇ ಯಾಜನೇ ರತಾಃ ।  _-, 
ಬ್ರಹ್ಮಕ್ರಿಯಾಸರಾಃ ಸರೇ ಮೋಡಢಾಃ ಪ್ರೋಕ್ತಾ ಮಯಾಂತ್ರವೈಃ॥ 

॥ ಇತಿ ಚತುಸ್ತ್ರಿಂಶಂ ಸ್ಥಾನಂ ॥ 
ಗನಿಖಾ ಧಾಣೇಯಂ ಪರಮಂ ಸ್ಥಾನಂ ಪ್ರೋಕ್ತಂ ನೈ ಪಂಚತ್ರಿಂಶಕಂ । 


ಗೋತ್ರಂ ಧಾರಣಸಂ ಚೈನ ದೇನೀ ಚಾತ್ರ ಮಹಾಬಲಾ ॥ ೨೦೫ ॥ 
ಅಗಸ್ತಿ ದಾರ್ಥಚ್ಯುತ ಇದ್ನ ವಾಹನ ಸಂಜ್ಞಕಾಃ | 

ಅಸ್ಮಿನ್ನಂಶೇ ಚ ಯೇ ಜಾತಾ ಬ್ರಾಹ್ಮಣಾ ಬ್ರಹ್ಮತತ್ಪರಾಃ ॥ ೨೦೬ ॥ 
ಅಲೌಲ್ಯಾಶ್ಚ ಮುಹಾಪ್ರಾಜ್ಞಾ ನೇದಾಜ್ಞಾ ಪ್ರತಿಸಾಲಕಾಃ ॥ ೨೦೭ ॥ 


1 ಇಕಿ ಪಂಚತ್ರಿಂಶಂ ಸ್ಥಾನಂ i 
ಮಾತ್ರಾ ಚ ಸರಮಂ ಸ್ಥಾನಂ ಪವಿತ್ರಂ ಸರ್ವದೇಹಿನಾಂ । 
ಕುಶಗೋತ್ರಂ ಪವಿತ್ರಂ ತು ಪರಮಂ ಚಾಂತ್ರ ಧಿಸ್ಮಿತಂ ॥ ೨೦೮ ॥ 


ಶಾಸ್ತ್ರನಿರತರೂ, ಮತ್ತರೂ, ನ್ಯಾಯಮಾರ್ಗದಲ್ಲಾಸಕ್ತರೂ ಆಗಿರುವರು. 
ಇಲ್ಲಿಗೆ ಮೂವತ್ತಮೂರನೆಯ ಸ್ನಾನವು ಮುಗಿದುದು. 

೨೦೨-೨೦೪. ಟೀಕೋಲಿಯಾಸ್ಥಾನದವರಿಗೆ ಕುಶಗೋತ್ರವು. ವಿಶ್ವಾಮಿತ್ರ, 
ಜೀವರಾತ, ಔದಲಪ್ರವರಗಳು. ಚಚಾಈಯು ಗೋತ್ರದೇವಿಯು. ಈ ಗೋತ್ರ 
ದಲ್ಲಿ ಹುಟ್ಟದ ಬ್ರಾಹ್ಮಣರು ಶ್ರುತಿಸ್ಮೃತಿನಿರತರೂ, ರೋಗಿಗಳೂ, ಲೋಭಿಗಳೂ, 
ಮಷ್ಟರೂ, ಯಾಗ ಮಾಡುವುದರಲ್ಲಿಯೂ ಮಾಡಿಸುವುದರಲ್ಲಿಯೂ ಅಸಕ್ತರೂ, 
ಬ್ರಾಹ್ಮಣ ಕರ್ಮದಲ್ಲಿ ನಿರತರೂ ಆಗಿರುವರು. ಇಲ್ಲಿಗೆ ಮೂವತ್ತನಾಲ್ಕನೆಯ 
ಸ್ಥಾನವು ಮುಗಿದುದು. 

೨೦೫-೨೦೭. ಮೂವತ್ರೈದನೆಯ ಗಮಾಧಾಣೇಯಸ್ಥಾನದವರಿಗೆ ಧಾರಣ 
ಸಕೋತ್ರವು. ಮಹಾಬಲಾ ಗೋತ್ರದೇವಿಯು. ಆಗಸ್ತಿ, ದಾರ್ಡಚ್ಯುತ, ಇದ್ದ 
ವಾಹನ ಪ್ರವರಗಳು. ಈ ವಂಶದ ಬ್ರಾಹ್ಮಣರು ಬ್ರಹ್ಮಜ್ಞಾನಿಗಳೂ, ಸ್ಥಿರ 
ಚಿತ್ತರೂ, ಅತ್ಯಂತ ಬುದ್ಧಿವಂತರೂ, ವೇದದಲ್ಲಿ ಹೇಳಿದಂತೆ ನಡೆಯುವವರೂ 
ಆಗಿರುವರು. ಇಲ್ಲಿಗೆ ಮೂವತ್ತೈ ದನೆಯ ಸ್ಥಾನವು ಮುಗಿದುದು. 

೨೦೮-೨೦೯, ಸವಿತ್ರವಾದ ಮಾತ್ರಾಸ್ಥಾನದವರಿಗೆ ಕುಶಗೋತ್ರವು. 
ವಿಶ್ವಾಮಿತ್ರ, ದೇವರಾತ, ಔದಲ ಪ್ರವರಗಳು. ಸಮಸ್ತ ಲೋಕರಕ್ಸಕಳಾದ 
ಜ್ಞಾ,ನದೆಯು ಗೋತ್ರದೇನಿಯು. 

15 


೪4೬ ಶ್ರೀ ಸ್ಕಾಂದಮಹಾಪುಕಾಣಂ 


ವಿಶ್ವಾಮಿತ್ರೋ ದೇವರಾತೋದಲಕ್ಚೈವ ತೃತೀಯಕಃ | 


ಜ್ಞಾನದಾಚ ಮಹಾದೇವೀ ಸರ್ವಲೋಕೈಕರಕ್ಸಿಣೀ ॥ ೨೦೯ ॥ 
ಅಸ್ಮಿನ್ವಂಶೇ ಸಮುದೂತಾ ಬ್ರಾಹ್ಮಣಾ ದೇವತತ್ಸರಾಃ | 
ಸಸ್ಕಾಧ್ಯಾಯನಷಟ್ಕಾರಾ ವೇದಶಾಸ್ತ್ರ ಪ್ರವರ್ತಕಾಃ ॥ 2೧೦ ॥ 


n ಇತಿ ಷಟ್ರಿಂಶಂ ಸ್ಥಾನಂ ॥ 
ನಾತನೋರಾ ಪರಂ ಸ್ಥಾನಂ ಪನಿತ್ರಂ ಪರಮಂ ಶುಭಂ । 
ಕುಶಗೋತ್ರಂ ಚ ತತ್ರಾಃಸ್ತಿ ಪ್ರವರತ್ರಯಸಂಯುತಂ ॥ ೨೧೧॥ 
ವಿಶ್ವಾಮಿತ್ರೋ ದೇವರಾತ ಸ್ತೃತೀಯೌದಲಮೇವ ಚ । 
ಜ್ಞಾನಜಾ ಚಾತ್ರ ವೈ ದೇವೀ ಗೋತ್ರದೇನೀ ಪ್ರಕೀರ್ತಿತಾ ॥ ೨೧೨ ॥ 
ಅಸ್ಮಿನ್ವಂಶೇ ಭನಾ ಯೇ ಚ ಬ್ರಾಹ್ಮಣಾ ಬ್ರಹ್ಮವಿತ್ತಮಾಃ । 
ಧರ್ಮಜ್ಞಾಃ ಸತ್ಯವಕ್ತಾರೋ ವ್ರತದಾನಪರಾಯಣಾಃ ॥ ೨೧೩ ॥ 
1 ಇತಿ ಸಪ್ತತ್ರಿಂಶಂ ಸ್ಥಾನಂ ॥ 
ಬಲೋಲಾ ಚ ಮಹಾಸ್ಥಾನಂ ಸವಿತ್ರಂ ಪರಮಾದುತಂ । 
ಕುಶಗೋತ್ರಂ ಸಮಾಖ್ಯಾತಂ ಪ್ರವರತ್ರಯಮೇನ ಚ ॥ ೨೧೪ 0 
ಪೂರ್ವೋಕ್ತಂ ಪ್ರವರಂ ಚೈವ ದೇನೀ ಚೈವಾಃತ್ರಮಾನದಾ । 
ನಂಶೇಂಸ್ಮಿನ್ಸರಮಾಃ ಪ್ರೋಕ್ತಾಃ ಕಾಜೇಶೇನ ನಿನಿರ್ನಿತಾಃ ॥ ೨೧೫ ॥ 
ಅಸತ್ಯಭಾಷಿಣೋ ವಿಪ್ರಾ ಲೋಭಿನೋ ನೃಪಸತ್ತಮ । 
ಸರ್ವವಿದ್ಯಾಕುಶಲಿನೋ ಬ್ರಾಹ್ಮಣಾ ಬ್ರಹ್ಮಸತ್ತಮಾಃ ॥ ೨0೬ I 


ಆ). 4 ಇವಿ 
॥ ಇತ್ಯಪ್ಪತ್ರಿಂಶಂ ಸ್ಥಾನಂ ॥ 





೨೧೦, ಈ ವಂಶದಲ್ಲಿ ಜನಿಸಿದ ಬ್ರಾಹ್ಮಣರು ದೈವಭಕ್ತರೂ, ಶ್ರಾದ್ಧ 
ಯಜ್ಞ ಕಾರ್ಯಗಳಲ್ಲಿ ನಿರತರೂ, ವೇದಶಾಸ್ತ್ರಪ್ರವರ್ತಕರೂ ಆಗಿರುವರು. 
ಇಲ್ಲಿಗೆ ಮೂವತ್ತಾರನೆಯ ಸ್ಥಾನವು ಮುಗಿದುದು. 

೨೧೧-೨೧೨. ನಾತಮೋರಾಸ್ಕಾನದವರಿಗೆ ಕುಶಗೋತ್ರವು. ವಿಶ್ವಾಮಿತ್ರ, 
ದೇವರಾತ್ಕ ಔದಲ ಪ್ರವರಗಳು. ಜ್ಞಾನಜಾ ಗೋತ್ರದೇವಿಯು. 

೨೧೩. ಈ ವಂಶದ ಬ್ರಾಹ್ಮಣರು ಬ್ರಹ್ಮಜ್ಞಾನಿಗಳೂ, ಧರ್ಮಜ್ಞರೂ, 
ಸತ್ಯವಾದಿಗಳೂ, ವ್ರತ ಮತ್ತು ದಾನಗಳಲ್ಲಿ ಆಸಕ್ತರೂ ಆಗಿರುವರು. ಇಲ್ಲಿಗೆ 
ಮೂವತ್ತೀಳನೆಯ ಸ್ಥಾನವು ಮುಗಿದುದು. 

೨೧೪-೨೧೬. ಬಲೋಲಾಸ್ಕಾನದವರಿಗೆ ಕುಶಗೋತ್ರವು. ಹಿಂದೆ ಹೇಳಿದ 
ಕುಶಗೋತ್ರದ ಪ್ರವರಗಳೆ ಆಗಿರುವುವು. ಮಾನದಾ ಗೋತ್ರದೇವಿಯು. 
ಬ್ರಹ್ಮಾದಿಗಳಿಂದ ನಿರ್ಮಿತರಾದ ಈ ವಂಶದ ಬ್ರಾಹ್ಮಣರು ಸುಳ್ಳಾಡುವವರೂ, 


ಏಕೋನಚತ್ತಾರಿಂಶೋಳಿಧ್ಯಾಯೆಃ ೪೨೭ 


ಕಾಜ್ಯಜಾ ಚ ಮಹಾಸ್ಥಾನಂ ಲೌಗಾಕ್ಟಾಪ್ಪವರಂ ತಥಾ | 


ಕಾಶ್ಯಪಾವತ್ಸಾರವಾಸಿಸ್ಕಂ ಪ್ರವರತ್ರಯಮೇೋನ ಚ 1 ೨೧೭॥ 
ಭದ್ರಾಚ ಯೋಗಿನೀ ಚೈವ ಗೋತ್ರದೇನೀ ಪ್ರಕೀರ್ತಿತಾ । 

ಅಸ್ಮಿನ್ವಂಶೇ ಸಮದ್ಭೂತಾ ಬ್ರಾಹ್ಮಣಾ ನೇದತತ್ಸರಾಃ 1 ೨೧೮ ॥ 
ನಿತ್ಯಸ್ನಾನನಿತ್ಯಹೋಮ ನಿತ್ಯದಾನಪರಾಯಣಾಃ | 

ಸಿತ್ಯಧರ್ಮರತಾಶ್ಚೆನ ನಿತ್ಯನೈವಿತ್ತತತ್ಸರಾಃ ॥ ೨೧೯॥ 


i ಇತ್ಯೇಕೋನಚತ್ವಾರಿಂಶಂ ಸ್ಥಾನಂ ॥ 


ರೂಪೋಲಾ ಪರಮಂಸ್ಕಾನಂ ಪನಿತ್ರಮತಿ ಪುಣ್ಯದಂ । 
ಅಸ್ಮಿನ್ಲೋತ್ರತ್ರಯೇ ಚೈನ ದೇನೀ ತ್ರಿತಯಮೇವ ಚ ॥ ೨೨೦॥ 
ಪ್ರಥಮಂ ಕುತ್ಸನತ್ಸಾಖ್ಯೌ ಭಾರದ್ವಾಜ ಸ್ತೃತೀಯಕಃ । 
ಆಂಗಿರಸೋಂಂಬರೀಷಶ್ಚ ಯೌವನಾಶ್ವಸ್ತ್ರೃತೀಯಕಃ ॥ 2೨೧ 
ಭೃಗುಚ್ಕನನಾಸ್ನನಾನೌರ್ವ ಜಮದಗ್ನಿ ಸ್ತಥೈನ ಚ! 

ಆಂಗಿರಸ ಬಾರ್ಹಸ್ಸತ್ಯ ಭಾರದ್ವಾಜಸ್ತಥೈನ ಚ ॥ ೨೨೨ ॥ 
ಶ್ಸೇಮಲಾ ಚೈನ ನೈ ದೇವೀ ಧಾರಭಟ್ಟಾರಿಕಾ ತಥಾ । 

ತೃತೀಯಾ ಕ್ಲೇಮಲಾ ಪ್ರೋಕ್ತಾ ಗೋತ್ರಮಾತಾಹ್ಯನುಕ್ರಮಾತ್‌ ॥೨೨೩॥ 


ಲರೋಭಿಗಳೂ, ಸರ್ವವಿದ್ಯಾಕುಶಲರೂ, ಬ್ರಾಹ್ಮಣತ್ರೇಷ್ಠರೂ ಆಗಿರುವರು. 
ಇಲ್ಲಿಗೆ ಮುವತ್ತೆಂಟನೆಯ ಸ್ಥಾನವು ಮುಗಿದುದು. 

೨೧೭-೨೧೯. ರಾಜ್ಯಜಾಸ್ಥಾನದವರಿಗೆ ಲೌಗಾಕ್ಟಗೋತ್ರವು. ಕಾಶ್ಯಪ, 
ಅವತ್ಸಾರ, ವಸಿಷ್ಠ ಪ್ರವರಗಳು. ಭದ್ರೆಯು ಗೋತ್ರದೇವಿಯು, ಈ ವಂಶದಲ್ಲಿ 
ಜನಿಸಿದ ಬ್ರಾಹ್ಮಣರು ವೇದದಲ್ಲಿ ಆಸಕ್ತರೂ, ನಿತ್ಯವೂ ಸ್ನಾನ, ಹೋಮ, ದಾನ 
ಧರ್ಮಗಳಲ್ಲಿ ನಿರತರೂ, ನಿತ್ಯ ನೈಮಿತ್ತಿಕ ಕರ್ಮಾಸಕ್ತರೂ ಆಗಿರುವರು. 
ಇಲ್ಲಿಗೆ ಮೂವತ್ತೊಂಬತ್ತನೆಯ ಸ್ಥಾನವು ಮುಗಿದುದು. 

೨೨೦-೨೨೩, ಅತಿಪುಣ್ಯಕರವಾದ ರೂಪೋಲಾ ಸ್ಥಾನದನರಿಗೆ ಕುತ್ಸ, 
ವತ್ಸ, ಭಾರದ್ವಾಜವೆಂಬ ಮೂರು ಗೋತ್ರಗಳು. ಕುತ್ಸಗೋತ್ರದವರಿಗೆ 
ಆಂಗಿರಸ, ಆಂಬರೀಷ, ಯಾೌವನಾಶ್ವಪ್ರವರಗಳು. ವತ್ಸಗೋತ್ರದವರಿಗೆ 
ಭೃಗು, ಚ್ಯವನ, ಆಸ್ಪವಾನ, ಔರ್ವ, ಜಮದಗ್ನಿ ಪ್ರವರಗಳು. ಭಾರದ್ವಾಜ 
ಗೋತ್ರದವರಿಗೆ ಆಂಗಿರಸ, ಬಾರ್ಹಸ್ಸತ್ಯ, ಭಾರದ್ವಾಜ ಪ್ರವರಗಳು. ಕ್ರಮ 
ವಾಗಿ ಕೇಮಲಾ, ಧಾರಭಟ್ಟಾರಿಕಾ, ಕ್ಲೇಮಲಾ ಎಂಬವರು ಗೋತ್ರ 
ಮಾತೆಯರು. 


೪.೨೪ ಶ್ರೀ ಸ್ಯಾಲದಮ ಹಾಪುರಾಣಂ 


ಅಸ್ಮಿಸ್ಸೋತ್ರೇ ಚ ಯೇ ಜಾತಾ ಪಂಚಯಜ್ಞ ರತಾಃ ಸದಾ । 


ಲೋಭಿನಃ ಕ್ರೋಧಿನಶ್ಚೈವ ಪ್ರಜಾಯಂತೇ ಬಹುಪ್ರಜಾಃ ॥ ೨೨೪ 
ಸ್ನಾನದಾನಾದಿ ನಿರತಾಃ ಸದಾ ಚ ವಿಜಿತೇಂದ್ರಿಯಾಃ ] 
ವಾಸೀಕೂಪತಡಾಗಾನಾಂ ಕರ್ತಾರಶ್ಚ ಸಹಸ್ರಶಃ ॥ ೨೨೫ 


1 ಇತಿ ಚತ್ವಾರಿಂಶಂ ಸ್ಥಾನಂ ॥ 
ಬೋಧಣೇ ಪರಮಂ ಸ್ಥಾ ನಂ ಪನಿತ್ರಂ ಸಾಸನಾಶನಂ | 


ಕುಶಂ ಚ ಕೌಶಿಕಂ ಚೈ ವ ಗೋತ್ರ ದ್ವಿ ತಯ ಮೇವ ಚ ॥ ೨೨೬ 
ನಿಶ್ವಾಮಿತ್ರಶ್ಚ ಪ್ರ ಕ್ರಥನೋ ದೇವರಾತೌದಲೇತಿ ಚ। 
ವಿಶ್ವಾಮಿತ್ರ ಘನುರ್ಷಣಕೌಶಿಕೇತಿ ತಥೈನ ಚ ॥ ೨೨೭ 


ಯಕ್ಸಿಣೀ ಪ್ರಥಮಾ ಚೈನ ದ್ವಿತೀಯಾ ತಾರಣೀ ತಥಾ । 

ಅಸ್ಮಿನ್ನೋತ್ರೇ ತು ಯೇ ಜಾತಾ ದುರ್ಬಲಾ ದೀನಮಾನಸಾಃ ॥ ೨೨೮ 

ಅಸತ್ಯಭಾಷಿಣೋ ನಿಪ್ರಾ ಲೋಭಿನೋ ನೃಪಸತ್ತಮ । 

ಸರ್ವನಿದ್ಯಾಕುಶಲಿನೋ ಬ್ರಾಹ್ಮಣಾ ಬ್ರಹ್ಮಸತ್ತಮಾಃ ॥ ೨೨೯ 
॥ ಇತ್ಯೇಕಚತ್ವಾರಿಂಶಂ ಸ್ಥಾನಂ ॥ 

ಛತ್ರೋಟಾ ಚ ಪರಂ ಸ್ಥಾ ನಂ ಸರ್ವಲೋಕೆ ) ಕಪೂಜಿತಂ | 


ಕುಶಸೋತ್ರ 0 ಸಮಾಖ್ಯಾ ತೆಂ ಪ್ರ ವರತ ತ್ರಯಮೇನ ಹಿ ॥ ೨೩೦ 
ವಿಶ್ವಾ ನಿತ್ರೂ ತ ಜೀವರಾಶಸ್ತ್ರ ತೀಯೋಡಲನೇವ ವೈ । 
ಚ ಚಾತ್ರ ವೈ ದೇನೀ ಸೋತ್ರದೇನೀ ಪ್ರಕೀರ್ತಿತಾ ॥ ೨೩೧ 


೨೨೪... ೨೨೫. ಈ ಗೋತ್ರದಲ್ಲಿ ಜನಿಸಿದವರು ಪಂಚಯಜ್ಞನಿರತರ 
ಲೋಭಿಗಳೂ, ಕೋಪಿಷ್ಯ್ಕರೂ, ಬಹಳಮಂದಿಮಕ್ಕಳುಳ್ಳವರೂ, ಸ್ನಾನ ದಾನ: 
ಗಳಲ್ಲಿ ಆಸಕ್ತರೂ, ಜಿತೇಂದ್ರಿಯರೂ, ಬಾವಿ, ಕೆಕೆ ಮೊದಲಾದುವುಗಳ; 
ನಿರ್ಮಿಸುವವರೂ ಆಗಿರುವರು. ಇಲ್ಲಿಗೆ ನಲವತ್ತನೆಯ ಸ್ಟಾ ನವು ಮುಗಿದು£ 

೨೨೬-೨೨೯. ಬೋಧಣೀ ಎಂಬ ಸ್ಥಾನದಲ್ಲಿರುವವನಿಗೆ ಕುಶ, ಕೌ. 
ಎಂಬ ಎರಡು ಗೋತ್ರಗಳು. ಕುಶಗೋತ್ರ ಔವರಿಗೆ ವಿಶ್ವಾಮಿತ್ರ, ದೇವರಾ 
ಔದಲ ಎಂಬ ಮೂರು ಪ್ರವರಗಳು. ಕೌಶಿಕ ಗೋತ್ರದವರಿಗೆ ವಿಶ್ವಾಮಿ: 
ಅಘಮರ್ಷಣ, ಕೌಶಿಕ ಎಂಬ ಮೂರು ಪ್ರವರಗಳು. ಯಕ್ಸಿಣೇ, ತಾರ! 
ಎಂಬವರು ಗೋತ್ರದೇವಿಯರು. ಈ ಗೋತ್ರದಲ್ಲಿ ಹುಟ್ಟಿದವರು ಅಶಕ್ತರ 
ದೀನರೂ, ಸುಳ್ಳಾಡುವವರೂ, ಲೋಭಿಗಳೂ, ಸಮಸ್ತ ವಿದ್ಯೆಗಳಲ್ಲಿ ಕುಶಲ! 
ಆಗಿರುವರು. ಇಲ್ಲಿಗೆ ನಲವತ್ತೊಂದನೆ ಸ್ಥಾನವು ಮುಗಿದದು. 

೨೩೦-೨೩೧. ಛತ್ರೋಟಾಸ್ಥಾನದವರಿಗೆ ಕುಶಗೋತ್ರವು. ವಿಶ್ವಾಮಿ 
ದೀವರಾತ, ಔಡಲ ಪ್ರವರಗಳು. ಚಚಾಈಯು ಗೋತ್ರದೇವಿಯು. 


ಏಳೋನಚತ್ವಾರಿಂಶೋ$ಧ್ಯಾಯಃ ೪೨೯ 


ಅಸ್ಮಿನ್ಸಂಶೇ ಭವಾಶ್ಚೈನ ವೇದಶಾಸ್ತ್ರ ಪರಾಯಣಾಃ | ॥ 
ಮಹೋದಯಾಶ್ಚ ತೇ ವಿಪ್ರಾ ನ್ಯಾಯಮಾರ್ಗಪ್ರವರ್ತಕಾಃ ॥ ೨೩೨ ॥ 
॥ ಇತಿ ದ್ವಿಚತ್ವಾರಿಂಶಂ ಸ್ಥಾನಂ I 
ಖಲ ಏವಾಂತ್ರ ಸಂಸ್ಥಾನಂ ತ್ರಯಶ್ಚತ್ವಾರಿಂಶನೇನ ಜ। 
ವತ್ಸಗೋತ್ರೋದ್ಭವಾ ವಿಪ್ರಾಃ ಕೃಷಿಕರ್ಮಪ್ರವರ್ತಕಾಃ ॥ ೨೩೩ 
ಗೋತ್ರಜಾ ಜ್ಞಾನಜಾ ದೇನೀ ಪ್ರನರಾಃ ಪಂಚ ಏನ ಹಿ । 
ಭಾರ್ಗವಚ್ಯಾವನಾಪ್ನವನಾನೌರ್ವ ಜಾಮದಗ್ನ್ಟೇತಿ ಚೈನಹಿ ॥ ೨೩೪॥ 
ಅಸ್ಮಿನ್ಲೋತ್ರೇ ಭವಾ ವಿಪ್ರಾಃ ಶ್ರೌತಾಂಗ್ನಿಸುನಿಸೇನಕಾಃ । 


ನೇದಾಂಧ್ಯಯನಶೀಲಾಶ್ಚ ತಾಪಸಾಶ್ವಾಂರಿಮರ್ದನಾಃ ೪ ೨೩೫ ॥ 
ರೋಷಿಣೋ ಲೋಭಿನೋ ಹೃಷ್ಟಾ ಯಜನೇ ಯಾಜನೇ ರಶಾಃ । 
ಸರ್ವಭೂತದಯಾನಿಸ್ಟಾಸ್ತಥಾ ಪರೋಪಕಾರಿಣಃ ॥ ೨೩೬ ॥ 


॥ ಇತಿ ತ್ರಯಶ್ನ ತ್ವಾರಿಂಶಂ ಸ್ಥಾನಂ 8 
ವಾಸಂತಡ್ಯಾಂ ಚ ವಿಪ್ರಾಣಾಂ ಕುಶಗೋತ್ರ ಮುದಾಹೃತಂ । 
ವಿಶ್ವಾಮಿತ್ರೋ ದೇವರಾತಸ್ತೃತೀಯೌದಲಮೇನ ಹಿ ॥ ೨೩೭ ॥ 
ಚಚಾಈ ಚಾತ್ರ ನೈ ದೇನೀ ಗೋತ್ರದೇನೀ ಪ್ರಕೀರ್ತಿತಾ | 
ಅಸ್ಮಿನ್ವಂಶೇ ಚ ಯೇ ಜಾತಾಃ ಪೂರ್ವೋಕ್ತಾ ಬ್ರಹ್ಮತತ್ಸರಾಃ ॥ ೨೩೮ ॥ 


೨೩೨. ಈ ವಂಶದವರು ವೇದಶಾಸ್ತ್ರನಿರತರೂ, ಮಹೋದಯರೂ, 
ನ್ಯಾಯಮಾರ್ಗದಲ್ಲಿ ನಡೆಯುವವರೂ ಆಗಿರುವರು. ಇಲ್ಲಿಗೆ ನಲವತ್ತೆರಡನೆಯ 
ಸ್ಥಾನವು ಮುಗಿದುದು. 

೨೩೩-೨೩೪. ಖಲಸ್ಥಾನದವರಿಗೆ ವತ್ಸ ಗೋತ್ರವು. ಜ್ಞಾನಜೂ ಗೋತ್ರ 
ಜೀವಿಯು. ಭಾರ್ಗವ, ಚ್ಯಾವನ, ಆಸ್ನವಾನ, ಔರ್ವ, ಜಾಮದಗ್ವ್ಯ 
ಪ್ರವರಗಳು. 

೨೩೫-೨೩೬. ಈ ಗೋತ್ರದವರು ಕೃಷಿಯಲ್ಲಾಸಕ್ತರೂ, ಶ್ರೌತಾಗ್ನಿ 
ಸೇವಕರೂ, ವೇದಾಧ್ಯಯನಶೀಲರೂ, ಮುನಿಗಳೂ, ಶತ್ರುನಾಶಕರೂ, 
ಕೋಸಿಷ್ಠರೂ, ಲೋಭಿಗಳೂ, ಸಂತುಷ್ಟರೂ, ಯಾಗದಲ್ಲಿಯೂ ಯಾಗಮಾಡಿ 
ಸುವುದರಲ್ಲಿಯೂ ಆಸಕ್ತರೂ, ಸಕಲ ಪ್ರಾಣಿಗಳಲ್ಲಿ ದಯೆಯುಳ್ಳ ನರೂ, 
ಪರೋಪಕಾರಿಗಳೂ ಆಗಿರುವರು. ಇಲ್ಲಿಗೆ ನಲವತ್ತಮೂರನೆಯ ಸ್ಥಾನವು 
ಮುಗಿದುದು. 

೨೩೭-೨೩೯. ವಾಸಂತಡೀ ಗ್ರಾಮದ ಬ್ರಾಹ್ಮಣರಿಗೆ ಕುಶ ಗೋತ್ರವು. 
ವಿಶ್ವಾಮಿತ್ರ, ದೇವರಾತ, ಔದಲ ಪ್ರವರಗಳು. ಚಚಾಈಯು ಗೋತ್ರ 
ದೇವಿಯು. ಈ ಗೋತ್ರದಲ್ಲಿ ಹುಟ್ಟಿದವರು ಬ್ರಹ್ಮನಿಷ್ಠರೂ, ಪರೋಪಕಾರಿ 


೪2೦ ಶ್ರೀ ಸ್ಕಾಂದಮಹಾಪುರಾಣಂ 


ಪರೋಪಕಾರಿಣಶ್ಚೆನ ಪರಚಿತ್ತಾಃನುವರ್ತಿನಃ । | 

ಪರಸ್ಪವಿಮುಖಾಶ್ಚೆವ ಪರಮಾರ್ಗ ಪ್ರವರ್ತಕಾಃ ॥ ೨೩೯॥ 
1 ಇತಿ ಚತುಶ ಕ ತ್ವಾರಿಂತಂ ಸ್ಥಾ ನಂಟ 

ಅತಃ ಪರಂ ಚ ಸಂಸ್ಥಾ ನಂ ಜಾಖಾಸಣನಮುದಾಹೃ ತೆಂ | 

ಗೋತ್ರಂ ವೈ ವಾತ್ಸ 'ಸಂಜ್ಞ ತು ಗೋತ್ರ ಜಾ ಬಹುರಿ ತಥಾ! 

ಪ್ರ ನರಾಣಿ ಚ ಸಂಜೆ ವ ಮೆಯಾ ತವ ಪ್ರಕಾಶಿತಂ ॥ ೨೪೦% 

ಭಾರ್ಗವಚಾ ವನಾಪ್ನನಾನೌರ್ವಪುರೋಧಸಃ ಸ್ಮೃತಃ | 

ಅಸ್ಮಿನ್ನಂಶೇ ಚ ಯೇ ಜಾತಾ ವಾಡವಾಃ ಸುಖವಾಸಿನಃ । 


ವಿಪ್ರಾ _ ಸೂ ಲಾಶ್ಚ ಜ್ಞಾ ತಾರಃ ಸರ್ವಕರ್ಮರತಾಶ್ಚ ವೈ ॥ ೨೪೧॥ 
ಸರ್ವೇ ಧರ್ಮೈಕನಿಶ್ಚಾ: ಸಾಃ ಸರ್ವಲೋಕೆ ) ಕಪೂಬೆತಾಃ I 
ವೇದಶಾಸಾ ್ರಾರ್ಶನಿಪುಣಾ ಯಜನೇ ಯಾಜನೇ ರತಾಃ ॥ ೨೪೨ ॥ 
ಸದಾಚಾರ ಸುರೂಪಾಶ್ಚ ತುಂದಿಲಾ ದೀರ್ಥದರ್ಶಿನಃ । 
ಶೀಹುರೀ ಚಾಂತ್ರ ನೈ ದೇವೀ ಕುಲದೇನೀ ಪ್ರಕೀರ್ತಿತಾ ॥ ೨೪೩ ॥ 


॥ ಇತಿ ಪಂಚಚತ್ವಾರಿಂಶಂ ಸ್ಥಾ ನಂ॥ 
ಷಟ್ಟಿ ತ್ವಾ ರಿಂಶಕಂ ಸ್ಥಾ ನಂ ನೋಡಾನಾಂ ತು ಸ್ರಕಾಶಿತಂ | 


ನನಸು ಸಂಜ್ಞಾ ತು ಕುಶಗೋತ್ರ ಮಿಹಾಸ್ತಿ ಚ ॥ ೨೪೪ ॥ 
ವಿಶ್ವಾಮಿತ್ರಂ ಪ್ರ ಪ್ರಥಮಂ 2 ಚೈವ ದ್ವಿತೀಯಂ “ಡೇವರಾತಳಂ | 
ತೃತೀಯನೌದಲಂ ಚೈವ 'ಪ್ರವರತ್ತ್ರಿತಯಂತ್ರಿದಂ 1 ೨೪೫ ॥ 





ಗಳೂ, ಇತರರ ಮನಸ್ಸನ್ನು ಅನುಸರಿಸುವವರೂ, ಮತ್ತೊಬ್ಬರ ಸ್ವತ್ತನ್ನು 
ತೆಗೆದುಕೊಳ್ಳದವರೂ, ಇತರರ ಮಾರ್ಗವನ್ನವಲಂಬಿಸುವವರೂ ಆಗಿರುವರು. 
ಇಲ್ಲಿಗೆ ನಲವತ್ತನಾಲ್ಪನೆಯ ಸ್ಥಾನವು ಮುಗಿದುದು. 

೨೪೦-೨೪೩. ಜಾಖಾಣಸ್ಥಾನದವರಿಗೆ ವಾತ್ಸ್ಯಗೋತ್ರವು. ಶೀಹುರೀಯು 
ಗೋತ್ರದೇವಿಯು. ಭಾರ್ಗವ, ಚ್ಯಾವನ, ಆಸ್ಮವಾನ, ಔರ್ವ, ಪುರೋಧಾಃ 
ಪ್ರವರಗಳು. ಈ ವಂಶದ ಬ್ರಾಹ್ಮಣರು ಸುಖವಾಗಿ ವಾಸಿಸುವವರೂ, ದಪ್ಪ 
ವಾಗಿರುವರೂ, ಜ್ಞಾನಿಗಳೂ, ಸಕಲಕರ್ಮಗಳಲ್ಲಾಸಕ್ತರೂ, ಧರ್ಮದಲ್ಲಿ 
ನಂಬಿಕೆಯುಳ್ಳ ವರೂ, ಸಕಲಲೋಕಗಳಲ್ಲಿ ಪೂಜ್ಯರೂ ವೇದಶಾಸ್ತ್ರರ್ಥಗಳಲ್ಲಿ 
ಕುಶಲರೂ, ಯಜನ ಯಾಜನಗಳಲ್ಲಿ ಆಸಕ್ತರೂ, ಸದಾಚಾರಿಗಳೂ, ಸುಂದರರೂ, 
ಡೊಡ್ಡ ಹೊಟ್ಟೆ ಯವರೂ, ದೂರಾಲೋಚನೆಯುಳ್ಳವರೂ ಆಗಿರುವರು. ಇಲ್ಲಿಗೆ 
ನಲನತ್ತೈದನೆಯ ಸ್ಥಾನವು ಮುಗಿದುದು. 

೨೪೪೨೨೪೭. ಗೋತೀಆ ಸ್ಥಾನದವರಿಗೆ ಕುಶ ಗೋತ್ರವು. ವಿಶ್ವಾಮಿತ್ರ, 
ದೇವರಾತ, ಔದಲ ಪ್ರವರಗಳು. ರಾಕ್ಸಸರನ್ನು ಕೊಲ್ಲುವ ಯಕ್ಸಿಣಿಯು 


ಏಕೋನಚತ್ವಾರಿಂಶೋರಧ್ಯಾಯೆಃ ೪೩೦ 


ಯಕ್ಸಿಣೇ ಚಾತ್ರ ನೈ ದೇನೀ ರಾಕ್ಪೃಸಾನಾಂ ಪ್ರಭಂಜನೀ । ಕ 

ಅಸ್ಮಿನ್ವಂಶೇ ಚ ಯೇ ಜಾತಾ ಬ್ರಾಹ್ಮಣಾ ಬ್ರಹ್ಮತತ್ಸರಾಃ ॥ ೨೪೬ ॥ 

ಧರ್ಮೇ ಮತಿಪ್ರವೃತ್ತಾಶ್ಚ ಧರ್ಮಶಾಸ್ತ್ರೇಷು ನಿಷ್ಠಿತಾಃ ೨೪೭ ॥ 
» ಇತಿ ಷಟ್ಟಿತ್ವಾರಿಂಶಂ ಸ್ಥಾನಂ ॥ 

ಸಪ್ರಚತ್ವಾರಿಂಶಕಂ ಚ ಸಂಸ್ಥಾನಂ ಪರಿಕೀರ್ತಿತಂ । 


ವರಲೀಯಾಖ್ಯಸಂಸ್ಥಾನಂ ಪನಿತ್ರಂ ಪರಮಂ ಮತಂ ॥ ೨೪೮ ॥ 
ಭಾರದ್ವಾಜಂ ತಥಾಗೋತ್ರಂ ಪ್ರವರಾಣಿ ತಥೈವ ಚ । 
ಯಸ್ಸಿಣೀ ಚಾತ್ರ ವೈ ದೇವೀ ಕುಲದೇವೀ ಪ್ರಕೀರ್ತಿತಾ ॥ ೨೪೯ ॥ 


ಆಂಗಿರಸಂ ಬಾರ್ಹಸ್ಸತ್ಯಂ ಭಾರದ್ವಾಜಂ ತೃತೀಯಕಂ । 

ಅಸ್ಮಿನ್ನಂಶೇ ಚ ಯೇ ಜಾತಾ ಬ್ರಾಹ್ಮಣಾಃ ಪೂತಮೂರ್ತಯಃ ॥ ೨೫೦ ॥ 

ಯೇಷಾಂ ನಾಕ್ಯೋದಕೇನೈನ ಶುಧ್ಯಂತಿ ಸಾಪಿನೋ ನರಾಃ ॥ ೨೫೧ ॥ 
॥ ಇತಿ ಸಪ್ತಚತ್ವಾರಿಂಶಕಂ ಸ್ಥಾನಂ | 

ದುಧೀಯಾಖ್ಯಂ ಪರಂ ಸ್ಥಾನಂ ಗೋತ್ರದ್ಧಿತಯಮೇವ ಚ। 


ಧಾರಣಸಂ ತಥಾ ಗೋತ್ರಮಾಂಗಿರಸಕಮೇವ ಚ ॥ ೨೫೨ ॥ 
ಅಗಸ್ತಿದಾರ್ಥಚ್ಯುತ ಇಧ್ಮನಾಹನ ಸಂಜ್ಞಕಂ | 

ಛತ್ರಾಈ ಚ ಮಹಾದೇನೀ ದ್ವಿತೀಯಂ ಪ್ರವರಂ ಶೃಣು ॥ ೨೫೩ ॥ 
ಆಂಗಿರಸಾಂಬರೀಷೌ ಚ ಯೌವನಾಶ್ಚಸ್ತೃತೀಯಕಃ । 

ಜ್ಞ್ಞಾನದಾ ಶೇಷಲಾಚ್ಛೈವ ಜ್ಞಾನದಾ ಸರ್ವದೇಹಿನಾಂ ॥ ೨೫೪ ॥ 


ಗೋತ್ರದೇವಿಯು. ಈ ವಂಶದ ಬ್ರಾಹ್ಮಣರು ಬ್ರಹ್ಮಜ್ಞಾನಿಗಳೂ ಧರ್ಮ 
ನಿರತರೂ, ಧರ್ಮಶಾಸ್ತ್ರಗಳಲ್ಲಿ ಪಂಡಿತರೂ ಆಗಿರುವರು. ಇಲ್ಲಿಗೆ ನಲವತ್ತಾ 
ರನೆಯ ಸ್ಥಾನವು ಮುಗಿದುದು. 

೨೪೮-೨೫೧. ವರಲೀಯಾ ಎಂಬ ನಲವತ್ತೇಳನೆ ಸ್ಥಾನದವರಿಗೆ 
ಭಾರದ್ವಾಜ ಗೋತ್ರವು. ಯಕ್ಸಿಣಿಯು ಕುಲದೇನವಿಯು. ಆಂಗಿರಸ್ಕ 
ಬಾರ್ಹಸ್ಪತ್ಯ, ಭಾರದ್ವಾಜ ಪ್ರವರಗಳು. ಈ ವಂಶದ ಬ್ರಾಹ್ಮಣರು ಪವಿತ್ರರೂ, 
ಮಾತೆಂಬ ನೀರಿನಿಂದಲೇ ಪಾಪಿಗಳನ್ನು ಸವಿತ್ರಗೊಳಿಸುವವರೂ ಆಗಿರುವರು. 
ಇಲ್ಲಿಗೆ ನಲವತ್ರೈೇಳನೆಯ ಸ್ಥಾನವು ಮುಗಿದುದು. 

೨೫೨-೨೫೪. ದುದೀಯ ಎಂಬ ಸ್ಮಾನದವರಿಗೆ ಧಾರಣಸ, ಆಂಗಿರಸ 
ಗೋತ್ರಗಳು. ಧಾರಣಸ ಗೋತ್ರದವರಿಗೆ ಅಗಸ್ತಿ, ದಾರ್ಥಚ್ಯುತ, ಇಧ್ಮನಾಹನ 
ಪ್ರವರಗಳು, ಛತ್ರಾಈಯು ಗೋತ್ರದೇವಿಯು. ಆಂಗಿರಸ ಗೋತ್ರದವರಿಗೆ 
ಆಂಗಿರಸ, ಆಂಬರೀಷ, ಯಾವನಾಶ್ವಪ್ರವರಗಳು, ಸಕಲರಿಗೂ ಜ್ಞಾನವ 
ನ್ಸೀಯುವ ಶೇಷಲಾ ಎಂಬವಳು ಗೋತ್ರದೇವಿಯು. 


೪೩3 ಶ್ರೀ ಸ್ಕಾಂದಮಹಾಪುರಾಣಂ 


ಅಸ್ಮಿನ್ವಂಶೇ ಸಮುತ್ಸನ್ನಾ ವಾಡವಾ ದುಃಸಹಾ ನೃಪ | 

ಮದೋತ್ಯ ಟಾ ಮಹಾಕಾಯಾಃ ಪ್ರಲಂಬಾಶ್ವ ಮಹೋದ್ಧ ತಾಃ ೨೫೫ ॥ 

ಶೆ ್ಲೇಶರೂಪಾಃ ಕೃ ಸ್ನ ವರ್ಣಾಃ ಸರ್ವಶಾಸ ನಿಶಾರದಾಃ | 

ಬಹುಭುಗ್ಭ ನಿನೋ 'ದಕಾ ತ ದ್ವೇಷಪಾಪನಿವರ್ಜಿತಾಃ ॥ ೨೫೬ ॥ 
॥ ಹ [ಷ್ಟಾಚತ್ವಾರಿಂಶಕಂ ಸ್ಥಾನಂ / 

ಹಾಸೋಲಾಸಂ ಪ್ರನಕ್ಸಾ ತಮಿ ಸ್ಟ ಸ್ಥಾ ನಂ ಚಾಂತ್ರ ಸಂಶ್ರುತಂ | 

ಶಾಂಡಿಲ್ಯಗೋತ್ರಂ ಚೈ ನಾತ್ರ ಪ್ರ “ನಲ್ಲಿ $ ಪಂಚಭಿರ್ಮುತಾ ॥ ೨೫೭ ॥ 


ಭಾರ್ಗವಚ್ಶಾ ವನಾಷ್ಟೆ ಸರ್ಪ ವಃ ಜಾಮದಗ್ನ ತಂ | 


ಯಕ್ಸಿಣೇ ಚಾತ್ರ ನೈ ದೇವೀ ಪವಿತ್ರಾ ಪಾಸನಾಶಿನೀ 1 ೨೫೮ ॥ 
ಅಸ್ಮಿನ್ವಂಶೇ ಚಯೇ ಜಾತಾ ಬ್ರಾಹ್ಮಣಾಃ ಸ್ಥೂಲದೇಹಿನಃ I 

ಲಂಬೋದರಾ ಲಂಬಕರ್ಣಾ ಲಂಬಹಸ್ತಾ ಮಹಾದ್ವಿಜಾಃ n ೨೫೯ ॥ 
ಅರೋಗಿಣಃ ಸದಾ ದೇವಾಃ ಸತ್ಯವ್ರತಪರಾಯಣಾಃ ॥ ೨೬೦ ॥ 


1 ಇತ್ತೆ (ಕೋನಪಂಚಾಶತ್ತಮಂ ಸ್ಥಾ ನಂ॥ 
ವೆ ಕೈಹಾಲಾಖ್ಯಂ ಚ ಸಂಸ್ಥಾ ನಂ ಪಂಚಾಶತ್ತ ಮುಮೇನ ಹಿ । 


ಕುಶಗೋತ್ರ ಂತಥಾಚೈ ನ ದೇವೀ ಚಾಂತ್ರ ಮಹಾಬಲಾ ॥ ೨೬೧ ॥ 
ಅಸ್ತಿ ್ಮಕ್ಲೋತ್ರೆ ೀಭವಾ ನಿಸ್ರಾ ದುಷ್ಬಾಃ ಕುಟಲಗಾಮಿನಃ | 
ಧನಿನೋ ಧರ್ಮನಿಷ್ಠಾಶ್ಚ 'ಫೇಡನೇದಾಂಗಪಾರಗಾಃ 1 ೨೬೨ ॥ 


೨೫೫-೨೫೬. ಈ ವಂಶದಲ್ಲಿ ಹುಟ್ಟಿದ ಬ್ರಾಹ್ಮಣರು ಸಹಿಸಲಶಕ್ಕರೂ, 
ಮತ್ತರೂ, ದೊಡ್ಡ ದೇಹವುಳ್ಳವರೂ, ಉದ್ದವಾದವರೂ, ಕಷ್ಟಪಡುವವರೂ, 
ಕರಿಬಣ್ಣದವರೂ, ಸಕಲಶಾಸ್ತ್ರಕುಶಲರೂ, ಬಹಳ ತಿನ್ನುವವರೂ, ಹಣ 
ಗಾರರೂ, ಕುಶಲರೂ, ದ್ವೇಷಪಾಪಗಳಿಲ್ಲದವರೂ ಆಗಿರುವರು. ಇಲ್ಲಿಗೆ 
ನಲವತ್ತೆಂಟನೆಯ ಸ್ಥಾನವು ಮುಗಿದುದು. 

೨೫೭-೨೫೮. ಹಾಸೋಲಾಸ ಸ್ಥಾನದವರಿಗೆ ಶಾಂಡಿಲ್ಯ ಗೋತ್ರವು. 
ಭಾರ್ಗವ, ಚ್ಯಾವನ, ಆಪ್ಲವಾನ, ಔರ್ವ, ಜಾಮದಗ್ರ್ಬ್ಯ ಪ್ರವರಗಳು. ಪವಿತ್ರ 
ಳಾದ ಯಕ್ಸಿಣಿಯು ಗೋತ್ರದೇನಿಯು. 

೨೫೯-೨೬೦. ಈ ವಂಶದಲ್ಲಿ ಜನಿಸಿದ ಬ್ರಾಹ್ಮಣರು ಸ್ಮೂಲದೇಹರೂ, 
ಜೋಲು ಹೊಟ್ಟೆಯವರೂ, ಜೋಲು ಕೆನಿಯುಳ್ಳವರೂ, ಉದ್ದವಾದ ಕೈಯುಳ್ಳ 
ವರೂ, ರೋಗವಿಲ್ಲದವರೂ, ಸತ್ಯನಿರತರೂ ಆಗಿರುವರು. ಇಲ್ಲಿಗೆ ನಲವ 
ತೊಂಬತ್ತನೆಯ ಸ್ಥಾ ನವು ಮುಗಿದುದು. 

೨೬೧-೨೬೩. ಪೈಹಾಲಾ ಸ್ಥಾನದವರಿಗೆ ಕುಶಗೋತ್ರ ವು. ಮಹಾಬಲೆಯು 
ಗೋತ್ರದೇವಿಯು. ಈ ಗೋತ್ರದ ಬ್ರಾಹ್ಮಣರು ದುಷ್ಟ ರೂ, ವಕ್ರಸ್ವಭಾವ 


ಏಕೋನಚತ್ವಾರಿಂಶೋ$ಧ್ಯಾಯಃ ೪ಕಿತ್ತಿ 


ದಾನಭೋಗರತಾಃ ಸರ್ವೇ ಶ್ರೌತೇ ಚ ಕೃತಬುದ್ಧಯಃ ॥ ೨೬೩ ೫ 


1 ಇತಿ ಸಂಚಾಶತ್ತಮಂ ಸ್ನಾನಂ ॥ 
ಅಸಾಲಾ ಪರಮಂ ಸ್ಥಾನಂ ಪ್ರನರದ್ವಯಮೇನ ಹಿ | 


ಕುಶಂ ಚ ಧಾರಣಂ ಚೈವ ಪ್ರವರಾಣಿ ಕ್ರಮೇಣ ತು ॥ ೨೬೪ ॥ 
ವಿಶ್ವಾಮಿತ್ರೋ ದೇನರಾತೋ ದೇವಲಸ್ತು ತೃತೀಯಕಃ । 
ಜ್ಞಾನಜಾ ಚ ತಥಾ ದೇನೀ ಗೋತ್ರದೇನೀ ಪ್ರಕೀರ್ತಿತಾ ॥ ೨೬೫ ॥ 


! ಇತ್ಯೇಕಪಂಚಾಶತ್ತಮಂ ಸ್ಥಾನಂ ॥ 
ನಾಲೋಲಾ ಪರಮಂ ಸ್ಥಾನಂ ದ್ವಿಸಂಚಾಶತ್ತಮಂ ಕಿಲ । 
ವತ್ಸಗೋತ್ರಂ ತಥಾ ಖ್ಯಾತಂ ದ್ವಿತೀಯಂ ಧಾರಣಸಂ ತಥಾ ॥ ೨೬೬॥ 
ಪ್ರವರಾಶ್ಚೆನ ಸೂರ್ವೋಕ್ತಾ ದೇವ್ಯುಕ್ತಾ ಪೂರ್ವಮೇನ ಹಿ । 


ಅಸ್ಮಿನ್ವಂಶೇ ಚ ಯೇ ಜಾತಾಃ ಪನಿತ್ರಾಃ ಪರಮಾ ಮತಾಃ 1 ೨೬೭ ॥ 
ಬಹುನೋಕ್ತೇನ 8೦ ವಿಪ್ರಾಃ ಸರ್ವ ಏವಾತ್ರ ಸತ್ತಮಾಃ । 
ಸರ್ವೇ ಶುದ್ಧಾ ಮಹಾತ್ಮಾನಃ ಸರ್ವೇ ಕುಲಪರಂಪರಾಃ ॥ ೨೬೮ ॥ 


॥ ಇತಿ ದ್ವಿಷಂಚಾಶತ್ತವುಂ ಸ್ಥಾನಂ ॥ 
ದೇಹೋಲಂ ಪರಮಂ ಸ್ಥಾನಂ ಬ್ರಾಹ್ಮಣಾನಾಂ ಪರಂತಪ । 
ಕುಶವಂಶೋದ್ಭವಾ ನಿಪ್ಲಾಸ್ನ್ಥತ, ಜಾತಾ ನೃಸತ್ತಮ I 


SNS) 
ಪೂರ್ವೋಕ್ತಪ್ರನರಾಣ್ಯೇನ ದೇವೀ ಪೂರ್ವೋದಿತಾನುಯಾ ॥ ೨೬೯॥ 
ತಸ್ಮಿನ್ಲೋತ್ರೇ ದ್ವಿಜಾ ಜಾತಾಃ ಪೂರ್ವೋಕ್ತಗುಣಶಾಲಿನಃ ॥ ೨೭೦ ॥ 


» ಇತಿ ತ್ರಿಪಂಚಾಶತ್ತಮಂ ಸ್ಥಾನಂ i 


ದವರೂ, ಹಣವಂತರೂ, ಧರ್ನ್ಮಿಷ್ಮರೂ, ವೇದವೇದಾಂಗನಿಷ್ಠಾತರೂ, ದಾನ 
ಮತ್ತು ಸುಖಾನುಭವಗಳಲ್ಲಿ ಆಸಕ್ತರೂ, ಶ್ರೌತಕರ್ಮದಲ್ಲ ಕುಶಲರೂ ಅಗಿರು 
ವರು. ಇಲ್ಲಿಗೆ ಐವತ್ತನೆಯ ಸ್ಥಾನವು ಮುಗಿದುದು. 

೨೬೪-೨೬೫. ಅಸಾಲಾ ಸ್ಥಾನದವರಿಗೆ ಕುಶ ಧಾರಣ ಗೋತ್ರಗಳು. 
ವಿಶ್ವಾಮಿತ್ರ, ದೇವರಾತ, ದೇವಲ ಪ್ರವರಗಳು. ಜ್ಞಾನಜೆಯು ಗೋತ್ರ 
ಜೀವಿಯು. ಇಲ್ಲಿಗೆ ಐವತ್ತೊಂದನೆಯ ಸ್ಥಾನವು ಮುಗಿದುದು. 
 ಹಿ೬ಿ-೨೬ಲ. ನಾಲೋಲಾ ಸ್ಥಾನದವರಿಗೆ ವತ್ಸ ಧಾರಣರ ಗೋತ್ರಗಳು 
ಪ್ರವರ ಮತ್ತು ದೇವಿಯರು ಹಿಂದೆ ಹೇಳಿದವರೆ. ಈ ವಂಶದ ಬ್ರಾಹ್ಮಣರು 
ಅತ್ಯಂತ ಶುದ್ದರೂ, ಸಾಧುಗಳೂ, ವಂಶಪಾರಂಪರ್ಯದಿಂದಲೂ ಮಹಾತ್ಮರೂ 
ಆಗಿರುವರು. ಇಲ್ಲಿಗೆ ಐವತ್ತೆರಡನೆಯ ಸ್ಥಾನವು ಮುಗಿದುದು. 

೨೬೯-೨೭೦. ದೇಹೋಲ ಸ್ಥಾನದವರಿಗೆ ಕುಶವಂಶವು. ಪ್ರವರ ಮತ್ತು 


೪೩೪ ಶ್ರೀ ಸ್ಕಾಂದಮಹಾಪುರಾಣಂ 


ಸೋಹಾಸೀಯಾಪುರಂ ಸ್ಥಾನಂ ಗೋತ್ರತ್ರಿತಯಮೇನ ಹಿ । 


ಭಾರದ್ವಾಜ ಸ್ತಥಾಖ್ಯಾತಂ ಗೋತ್ರಂ ವತ್ಸಂ ತಥೈನ ಚ ॥೨೭೧॥ 
ಯಕ್ಸಿಣೇ ಜ್ಞಾನಜಾ ಚೈನ ಸಿಹೋಲೀ ಚ ಯಥಾಕ್ರಮಂ । 
ಏತದ್ವಂಶಪರೀಕ್ಸಾ ಚ ಸೂರ್ವೋಕ್ತಾ ನೃಪಸತ್ತಮ ॥ ೨೭೨ ॥ 


॥ ಇತಿ ಚತುಃಪಂಚಾಶತ್ತಮಂ ಸ್ಥಾನಂ ॥ 
ಪಂಚ ಪಂಚಾಶಕಂ ಸ್ಥಾನಂ ಪ್ರನಕ್ಸ್ಸ್ಯಾನಿ: ತನಾಂಧುನಾ । 
ನಾಮ್ನಾಸಂಹಾಲಿಯಾಸ್ಥಾನಂ ದತ್ತಂ ರಾಮೇಣ ವೈ ಪುರಾ ॥೨೭೩॥ 
ತತ್ರ ವೈ ಕುತ್ಸಗೋತ್ರಸ್ಥಾ ಬ್ರಾಹ್ಮಣಾ ಬ್ರಹ್ಮನರ್ಚಸಃ | 


ಸ್ಪಧರ್ಮ ನಿರತಾ ನಿತ್ಯಾಃ ಸ್ವಕರ್ಮನಿರತಾಶ್ಚ ತೇ ॥ ೨೭೪ ॥ 
ಆಂಗಿರಸಾಂ೦ಂಬರೀಷೇ ಚ ಯೌನನಾಶ್ವನುತಃ ಪರಂ । 
ಶಾಂತಾ ಚೈವಾಂತ್ರ ವೈ ದೇನೀ ಶಾಂತಿಕರ್ಮಣಿ ಶಾಂತಿದಾ 1 ೨೭೫ ॥ 


» ಇತಿ ಪಂಚಪಂಚಾಶತ್ತಮಂ ಸ್ಥಾನಂ ॥ 
ಏನಂ ಮಯಾ ತೇ ಗೋತ್ರಾಣಿ ಸ್ಮಾನಾನ್ಯಪಿ ತಥೈನ ಚ । 
ಪ್ರವರಾಣಿ ತಥೈನಾಂತ್ರ ಬ್ರಾಹ್ಮಣಾನಾಂ ಪರಂತಪ ॥ ೨೭೬ ॥ 
ಅತಃ ಪರಂ ಪ್ರವಕ್ಟ್ರ್ಯಾನಿ ತ್ರೈನಿದ್ಯಾನಾಂ ಪರಂತಪ । 
ಸ್ಹಸ್ಥಾನಂ ಚ ಮಯಾಪ್ರೋಕ್ತಂ ಯಥಾಂನುಕ್ರಮಣೇನ ತು ॥ ೨೭೭ ॥ 
ದೇವಿಯು ಹಿಂಜಿ ಹೇಳಿದವರೇ. 'ಈ ಗೋತ್ರದ ಬ್ರಾಹ್ಮಣರು ಹಿಂದೆ ಹೇಳಿದ 
ಗುಣವುಳ್ಳ ವರೆ. ಇಲ್ಲಿಗೆ ಐವತ್ತಮೂರನೆಯ ಸ್ಥಾನವು ಮುಗಿದುದು. 

೨೭೧-೨೭೨. ಸೋಹಾಸೀಯ ಸ್ಥಾನದವರಿಗೆ ಭಾರದ್ವಾಜ, ಕುತ್ಸ, ವತ್ಸ 
ಎಂಬ ಮೂರು ಗೋತ್ರಗಳು. ಯಕ್ಸಿಣೀ, ಜ್ಞಾನಜಾ, ಸಿಹೋಲೀ ಗೋತ್ರ 
ದೇವಿಯರು. ಈ ವಂಶದ ಜನರು ಹಿಂದೆ ಹೇಳಿದಂತೆಯೇ ಆಗಿರುವರು. ಇಲ್ಲಿಗೆ 
ಐವತ್ತಮೂರನೆಯ ಸ್ಥಾ ನವು ಮುಗಿದುದು. 

೨೭೩-೨೭೫. ಈಗ ಐವತ್ತೈ ದನೆಯ ಸಾ ನವನ್ನು ಹೇಳುವೆನು. ರಾಮಸಿತ್ತ 
ಸಂಹಾಲಿಯಾ ಸ್ಥಾನದವರಿಗೆ ಸ್ವ ಗೋತ್ರವು. ಆಂಗಿರಸ್ತ ಆಂಬರಿಷ್ಯ 
ಯೌಾವನಾಶ್ವ ಪ್ರವರಗಳು. ಶಾಂತಿ ಕರ್ಮದಲ್ಲಿ ಶಾನಿಯಸನ್ಸೀಯುವ 
ಶಾಂತೆಯು ಗೋತ್ರದೇವಿಯು. ಈ ಗೋತ್ರದ ಬ್ರಾ ತ್ರಾಹ್ಮಣರು ಬಹ್ಮವರ್ಚಸ್ಸುಳ್ಳ 
ವರೂ, ಸ್ವಧರ್ಮ ಸ್ವಕರ್ಮಗಳಲ್ಲಿ ನಿರತರೂ ಆಗಿರುವರು. ಇಲ್ಲಿಗೆ ಐನತ್ತೈ ಜಿ 
ಸ್ಥಾ ನವು RE 

೨೭೬. ಹೀಗೆ ಬ್ರಾಹ್ಮಣರ ಗೋತ್ರ, Hi ಪ್ರವರಗಳನ್ನು ಹೇಳಿರುವೆನು. 

೨೭೭. ಇನ್ನು A ತ್ರೆ ಕೈವಿದ್ಯಬ್ರಾ ಹ್ಮಣರ ಸ್ವಸ್ಥಾ ನಗಳನ್ನು ಕ್ರಮವಾಗಿ 
ಹೇಳುವೆನು. 


ಏಕೋನಚತ್ವಾರಿಂಶೋ€ಧ್ಯಾಯಃ ೪೩೫ 


ಶೀಲಾಯಾಃ ಪ್ರಥಮಂ ಸ್ಥಾನಂ ಮಂಡೋರಾ ಚ ದ್ವಿತೀಯಕಂ । 


ಏನಡೀ ಚ ತೃ ಹುಂ ಹಿ ಗುಂದರಾಣಾ ಚತುರ್ಥಕ£ ॥ ೨೭೮ ॥ 

ಪಂಚಮಂ ಕಲ್ಯಾಚೇಯಾ ದೇಗಾಮಾ ಷಷ್ಮಕಂ ತಥಾ।' 

ನಾಯಕಪುರಾ ಸಪ್ತಮಂ ಚ ಡಲೀಆ ಚಾಂಷ್ಟಮಂ ತಥಾ ॥ ೨೭೯ i 

ಕಡೋವ್ಯಾ ನವಮಂ ಚೈವ ಕೋಹಾಟೋಂಯಾ ದಶಂ ತಥಾ । 

ಹರಡೀಯೈಕಾದಶಂ ಚೈನ ಭದುಕೀಯಾದ್ವಾದಶಂ ತಥಾ nu ೨೮೦ ॥ 

ಸಂಪ್ರಾಣಾವಾ ತಥಾಚಾತ್ರ ಕಂದರಾವಾ ಪ್ರಕೀರ್ತಿತಂ । 

ವಾಸರೋವಾ ತ್ರಯೋದಶಂ ಶರಂಡವಾ ಚತುರ್ದಶಂ ॥ ೨೮೧ ॥ 

ಲೋಲಾಸಣಾ ಪಂಚದಶಂ ವಾರೋಲಾ ಹೋಡಶಂ ತಥಾ । 

ನಾಗಲಪುರಾ ಮಯಾಚಾತ್ರ ಉಕ್ತಂ ಸಪ್ತದಶಂ ತಥಾ ॥ ೨೮೨ ॥ 
ಬ್ರಹ್ಮೋವಾಚ :-- 

ಚಾತುರ್ನಿದ್ಯಾ ಸ್ತು ಯೇ ನಿಪ್ರಾನಾಗತಾಃ ಪುನರಾಗತಾಃ । 

ವಸಂತಿ ತತ್ರ ಕಮ್ಮೆ «ಚ ಚಕ್ರಿ ಕ ತೇ ದ್ವಿಜೋತ್ತಮಾಃ ॥ ೨೮೩ ॥ 

ಚತುರ್ನಿಂತತಿ ಸಂಖ್ಯಾಕಾ ರೌಮಶಾಸನಲಿಷ್ಟಯಾ | 

ಹನೂಮಂತಂ ಪ್ರತಿಗತಾ ವ್ಯಾವೃತ್ತಾಃ ಪುನರಾಗತಾಃ ॥ ೨೮೪ ॥ 

ತೇಷಾಂ ದೋಷಾತ್ಸಮಸ್ತಾಸ್ತ್ರೇ ಸ್ಥಾನಭ್ರಂಶತ್ವಮಾಗತಾಃ । 

ಕಿಯತ್ಕಾಲೇ ಗತೇ ತೇಷಾಂ ನಿರೋಧಃ ಸಮಪದ್ಯತ ॥ ೨೮೫ ॥ 

ಭಿನ್ನಾಚಾರಾ ಭಿನ್ನಭಾಷಾವೇಶ ಸಂಶಯನಾಗತಾಃ । 

ಪಂಚದಶಸಹಸ್ರಾಣಿ ಮಧ್ಯೇ ಯೇ ಕೇಚ ನಾಡವಾಃ ॥ ೨೮೬ ॥ 


೨೭೮-೨೮೨, ಶೀಲಾ, ಮಡೋರಾ, ಏವಡೀ, ಗುಂದರಾಣಾ, ಕಲ್ಯಾ 
ಣೀಯಾ, ದೇಗಾಮಾ, ನಾಯಕಪುರಾ, ಡಲೀಆ, ಕಂಡೋವ್ಯಾ, ಕೋಹಾ 
ಟೋಯಾ, ಹೆರಡೀಯಾ, ಭದುಕೀಯಾ, ವಾಸರೋವಾ, ಶರಂಡಾವಾ, 
ಟೋಲಾಸಣಾ, ವಾರೋಲಾ, ನಾಗಲವುರಾ ಹೀಗೆ ಹದಿನೇಳು ಸ್ಥಾನಗಳು. 

೨೮೩. ಬ್ರಹ್ಮನು ಹೇಳುತ್ತಾನೆ:--ಸ್ಥಾನಭ್ರಷ್ಟರಾಗಿದ್ದ ಚಾತುರ್ವಿದ್ಯರು 
ತಿರುಗಿ ಬಂದು ಆ ಕ್ಲೇತ್ರದಲ್ಲಿ ಮನೋಹರವಾದ ವಾಸಸ್ಕಳಗಳನ್ನು ಕಲ್ಪಿಸಿ 
ಕೊಂಡು ವಾಸವಾಗಿದ್ದರು. 

೨೮೪-೨೮೫. ಹನುಮಂತನ ಅನುಗ್ರಹದಿಂದ ರಾಮಶಾಸನವನ್ನು ತಿರುಗಿ 
ಪಡೆದ ತೈನಿದ್ಯಬ್ರಾ ಹ್ಮಣರ ದೋಷದಿಂದ ಚಾತುರ್ವಿದ್ಯರು ಸ್ಥಾನಭ್ರ ಷ್ಟ 
ರಾಗಿದ್ದರು. ಕೆಲವು ಕಾಲದ ಮೇಲೆ ಆ ಎರಡು ಪಂಗಡದವರಿಗೆ ಪರಸ್ಪರ 
ದ್ವೇಷಪುಂಟಾಯಿತು. 

೨೮೬-೨೯೦, ಆ ಹದಿನೈದು ಸಾವಿರ ಮಂದಿ ಚಾತುರ್ನಿದ್ಯರು ಬೇರೆ 
ಬೇರೆ ಆಚಾರನುಳ್ಳವರಾಗಿಯೂ, ನಾನಾ ಭಾಷೆಗಳನ್ನಾಡುವವರಾಗಿಯೂ 


ಕ್ಷೆ ಶ್ರೀ ಸ್ಕಾಂದಮೆಹಾಪುರಾಣಂ 


ಕೃಷಿಕರ್ಮರತಾ ಆಸನ್ಫೇಚಿದ್ಯಜ್ಞ ಸರಾಯಣಾಃ | 


ಕೇಚಿನ್ಮಲ್ಲಾಶ್ಚ ಸಂಜಾತಾಃ ಕೇಚಿದ್ದೈ ನೇದಸಾಠಕಾಃ ॥ ೨೮೭ ॥ 
ಆಯುರ್ವೇದರತಾಃ ಕೇಚಿತ್ಕೇಚಿದ್ರಜಕಯಾಜಕಾಃ | 

ಸಂಧ್ಯಾಸ್ನಾನಪರಾಃ ಕೇಚಿನ್ನೀಲೀಕರ್ತೃ ಪ್ರಯಾಜಕಾಃ ॥ ೨೮೮ ॥ 
ತಂ ತು ಕೃದಾಚನರತಾಸ್ತಂತುವಾಯಾದಿ ಯಾಜಕಾಃ । 

ಕಲೌ ಪ್ರಾಪ್ತೇ ದ್ವಿಜಾ ಭ್ರಸ್ಟಾ ಭವಿಷ್ಯಂತಿ ನ ಸಂಶಯಃ ॥ ೨೮೯ ॥ 
ಶೂದ್ರೇಷು ಜಾತಿಭೇದಃ ಸ್ಯಾತ್ಕಲೌ ಪ್ರಾಪ್ತೇ ನರಾಧಿಪ । 

ಭ್ರಷ್ಟಾಚಾರಾಃ ಪರಂ ಜ್ಞಾತ್ವಾ ಜ್ಞಾತಿಬಂಧೇನ ಪೀಡಿತಾಃ ॥೨೯೦॥ 


ಭೋಜನಾಚ್ಛಾದನೇ ರಾಜನ್ಬರಿತ್ಯಕ್ತಾ ನಿಜೈರ್ಜನೈಃ । 

ನ ಕೋಪಿ ಕನ್ಯಾಂ ನಿನಹೇತ್ಸಂಸರ್ಗೇಣ ಕದಾಚನ । 

ತತಸ್ತೇ ವಣಿಜೋ ರಾಜಂಸ್ಕೈಲಕಾರಾಃ ಕಲೌ ಕಲ ॥ ೨೯೧॥ 
ಕೇಚಿಚ್ಚ ಕಲಕಾರಾಶ್ಚ ಕೇಚಿತ್ತಂದುಲಕಾರಿಣಃ । 

ರಾಜಪುತ್ರಾಶ್ರಿತಾಃ ಕೇಚಿನ್ನಾನಾನರ್ಣಸಮಾಶ್ರಿತಾಃ । 


ಕಲೌ ಪ್ರಾಸ್ತೇ ತು ವಣೆಜಃ ಭ್ರಷ್ಟಾಃ ಕೇಂಪಿ ಮಹೀತಲೇ ॥೨೯೨॥ 
ತೇಷಾಂ ತು ಪೃಥಗಾಜಾರಾಃ ಸಂಬಂಧಾಶ್ಚ ಪೃಥಕೃತಾಃ | 
ಸೀತಾಪುರೇ ಚ ನಸತಿಃ ಕೇಷಾಂಚಿತ್ಸಮಜಾಯತ ॥ ೨೯೩ ॥ 





ಉಡುಪಿನಿಂದ ಬ್ರಾಹ್ಮಣರೊ ಅಲ್ಲವೊ ಎಂಬ ಸಂಶಯಕ್ಕಾಸ್ಪದರಾದರು. 
ಅವರಲ್ಲಿ ಕೆಲವರು ಕೃಷಿಯನ್ನು ಮಾಡತೊಡಗಿದರು. ಕೆಲವರು ಯಜ್ಞನಿರತ 
ರಾದರು. ಕೆಲವರು ಜಟ್ಟಿಗಳೂ, ಕೆಲವರು ವೇದಾಧ್ಯಯನ ನಿರತರು, ಕೆಲವರು 
ಅಯುರ್ಮೇದದಲ್ಲಿ ಆಸಕ್ಕರೂ, ಕೆಲವರು ಅಗಸರಿಂದ ಯಾಗಮಾಡಿಸುವವರೂ, 
ಕೆಲವರು ಸ್ನಾನ ಸಂಧ್ಯಾವಂದನೆಗಳಲ್ಲಿ ನಿರತರೂ, ಕೆಲವರು ನೀಲಿಯನ್ನು 
ನಿರ್ಮಿಸುವವರಿಂದ ಯಾಗಮಾಡಿಸುವವರೂ, ನೂಲು ಮಾಡುವವರನ್ನೂ, 
ನೇಯ್ಗೆಯವರನ್ನೂ ಬೇಡುವವರೂ ಆದರು. ಕಲಿಯುಗದಲ್ಲಿ ಬ್ರಾಹ್ಮಣರು 
ಹೀಗೆ ಕರ್ಮಭ್ರಷ್ಟರಾಗುವರು. ಶೂದ್ರರಲ್ಲಿ ಬೇರೆ ಬೇರೆ ಜಾತಿಗಳಾದುವು. 
ಹೀಗೆ ಭ್ರಷ್ಟರಾದುದನ್ನು ತಿಳಿದು ಇವರನ್ನು ಜ್ಞಾತಿಗಳು ಪೀಡಿಸಿದರು. 

೨೯೧-೨೯೨. ಬಂಧುಗಳು ಊಟಿ, ವಸ್ತ್ರಗಳನ್ನು ಕೊಡಲಿಲ್ಲ. ಕನ್ಯೆ 
ಯನ್ಸಿತ್ತು ವಿವಾಹ ಸಂಬಂಧವನ್ನು ಬೆಳೆಯಿಸಲಿಲ್ಲ. ಬಳಿಕ ವರ್ತಕರಲ್ಲಿ 
ಕೆಲವರು ಗಾಣಿಗರೂ, ಕೆಲವರು ಸಂಗೀತಗಾರರೂ, ಕೆಲವರು ಅಕ್ಕಿಮಾಡು 
ವವರೂ, ಕೆಲವರು ರಾಜಕುಮಾರರನ್ನು ಆಶ್ರಯಿಸಿದನರೂ, ಕೆಲವರು ನಾನಾ 
ಜಾತಿಯವರನ್ನು ಆಶ್ರಯಿಸಿದವರೂ ಆಗಿ ಭ್ರೃಷ್ಟರಾದರು. 

೨೯೩. ಅವರ ಆಚಾರಗಳೂ, ಸಂಬಂಧಗಳೂ ಬೇರೆಯಾದವು. ಕೆಲವರು 
ಸೀತಾಪುರದಲ್ಲಿ ವಾಸಿಸಿದರು. 


ಏಕೋನಚತ್ವಾರಿಂಶೋತಧ್ಯಾಯಃ ೪೩೭ 


ಸಾಭ ಮತ್ಕಾಸ್ತಟೀ ಕೇಚಿದ್ಯತ್ರ ಕುತ್ರ ವ್ಯವಸ್ಥಿತಾಃ | 
ಸೀತಾಪುರಾತ್ತು ಯೇ ಪೂರ್ವಂ ಭಯಭೀತಾಃ ಸಮಾಗತಾಃ ॥ ೨೯೪ ॥ 
ಸಾಭ್ರಮತ್ಯುತ್ತರೇ ಕೂಲೇ ಶ್ರೀಕ್ಸೇತ್ರೇ ಯೇ ವ್ಯವಸ್ಥಿತಾಃ । 


ಯದಾ ತೇಷಾಂ ಪದಂ ಸ್ಥಾನಂ ದತ್ತಂ ವೈ ಸುಖನಾಸಕಂ 1 ೨೯೫॥ 
ಪುನಸ್ತೇಂಸಿ ಗತಾಃ ಸದ್ಯಃ ತಸ್ಮಿನ್ಸೀತಾಪುರೇ ಸ್ವಯಂ । 
ಪಂಚಪಂಚಾಶದ್ಭಾಮಾಶ್ಚ ದತ್ತಾಸ್ತು ಪುನರಾಗಮೇ ॥೨೯೬॥ 
ರಾಮೇಣ ನೋಡನಿಪ್ರಾಣಾಂ ನಿವಾಸಾಂಸ್ತೇಷು ಚಕ್ರೇ । 
ವೃತ್ತಿಬಾಹ್ಯಾಸ್ತು ಯೇ ನಿಪ್ರಾ ಧರ್ಮಾರಣ್ಯಾಂನ್ರರಸ್ಥಿತಾಃಐ  ॥ ೨೯೭॥ 


ನಾಂಸ್ಕಾಕಂ ವಣಿಜಾಂ ವೃತ್ತೌ ಗ್ರಾಮವೃತ್ತೌ ನ ಕಿಂಚನ । 
ಪ್ರಯೋಜನಂ ಹಿ ವಿಪ್ರೇಂದ್ರಾ ನಾಸೋಂಸ್ಮಾಕಂ ತು ರೋಚತೇ ॥೨೯೮॥ 
ಇತ್ಯುಕ್ತೇ ಸಮನುಜ್ಹಾತಾಸ್ತೈೈನಿದ್ಯೈಸ್ತೈರ್ದ್ವಿಜೋತ್ತಮೈಃ। 

ತೇಷು ಗ್ರಾಮೇಷು ತೇ ನಿಪ್ರಾಶ್ವಾತುರ್ನಿದ್ಯಾ ದ್ವಿಜೋತ್ತಮಾಃ॥ ೨೯೯॥ 
ಸ್ವಕರ್ಮ ನಿರತಾಃ ಶಾಂತಾಃ ಕೃಷಿಕರ್ಮಪರಾಯಣಾಃ । 
ಧರ್ಮಾಃರಣ್ಯಾನ್ನಾಂತಿದೂರೇ ಧೇನೂಃ ಸಂಚಾರಯಂತಿತೇ ॥ ೩೦೦॥ 
ಬಹನಸ್ತತ್ರ ಗೋಪಾಲಾ ಬಭೂವುರ್ದ್ವಿಜಜಾಲಕಾಃ । 
ಚಾತುರ್ನಿದ್ಯಾಸ್ತು ಶಿಶವಸ್ತೇಸಾಂ ಧೇನೂರಚಾರಯನ್‌ । 

ತೇಷಾಂ ಭೋಜನಕಾಮಾಯ ಅನ್ನ ಸಾನಾದಿ ಸತ್ಯೃತಂ ॥೩೦೧॥ 


೨೯೪-೩೦೦. ಕೆಲವರು ಸಾಭ್ರಮತಿಯ ದಡದಲ್ಲಿ ಎಲ್ಲೆಲ್ಲಿಯೋ ವಾಸಿಸಿ 
ದರು. ಹಿಂದೆ ಸೀತಾಪುರದಿಂದ ಹೆದರಿ ಬಂದು ಸಾಭ್ರ್ರಮತಿಯ ಉತ್ತರದಡ 
ದಲ್ಲಿರುವ ಶ್ರೇಕ್ಸೇತ್ರದಲ್ಲಿ ನೆಲಸಿದ್ದ ಚಾತುರ್ನಿದ್ಯ ಬ್ರಾಹ್ಮಣರಿಗೆ ಕುಮಾರ 
ಪಾಲನು ಸುಖವಾಸಕಸ್ಥಾನವನ್ನು ನೊಡಲು ಅವರು ತಿರುಗಿ ಸೀತಾಪುರಕ್ಕೇ 
ತೆರಳಿದರು. ಮೋಢಬ್ರಾಹ್ಮಣರು ರಾಮನಿತ್ತ ಐವತ್ತೈದು ಗ್ರಾಮಗಳಲ್ಲಿ 
ವಾಸಮಾಡುತ್ತಿದ್ದರು. ಧರ್ಮಾರಣ್ಯದ ವೃತ್ತಿಗಳಿಲ್ಲದ ಬ್ರಾಹ್ಮಣರು "ನಮಗೆ 
ವರ್ತಕವೃತ್ತಿಯಿಂದಲೂ, ಗ್ರಾಮವೃತ್ತಿಯಿಂದಲೂ ಪ್ರಯೋಜನವಿಲ್ಲ. 
ದ್ವಿಜರೆ! ನಮಗೆ ವಾಸಕ್ಕೆ ಸ್ಥಳವನ್ನು ಕೊಡಿರಿ' ಎಂದು ತ್ರ್ಯೈನಿದ್ಯರನ್ನು ಪ್ರಾರ್ಥಿ 
ಸಲು ಅವರೂ ಅನುಮೋದಿಸಿದರು. ಅದರಂತೆ ಆ ಬ್ರಾಹ್ಮಣರು ಆ ಗ್ರಾಮ 
ಗಳಲ್ಲಿಯೇ ವಾಸಿಸುತ್ತ ತಮ್ಮ ಕರ್ಮಗಳಲ್ಲಿ ಆಸಕ್ತರೂ, ಶಾಂತರೂ, ಕೃಷಿ 
ಕರ್ಮನಿರತರೂ ಆಗಿ ಧರ್ಮಾರಣ್ಯದ ಸಮಿಾಪದಲ್ಲಿ ದನಗಳನ್ನು ಕಾಯು 
ತ್ರಿದ್ದರು. 

೩೦೧-೩೦೨, ಚಾತುರ್ನಿದ್ಯರ ಅನೇಕಮಂದಿ ಬಾಲಕರು ಗೋಪಾಲಕ 


ಇತ್ತ ಶ್ರೀ ಸ್ಕಾಂದಮಹಾಪುರಾಣಂ 


ಅನಯನ್ಹೈ ಯುವತಯಃ ವಿಧವಾ ಅಪಿ ಬಾಲಕಾಃ ॥ ೩೦೨ ॥ 
ಕಾಲೇನ ಕಿಯತಾ ರಾಜಂಸ್ತೇಷಾಂ ಪ್ರೀತಿರಭೂನ್ಮಿಥಃ । 

ಗೋಪಾಲಾ ಬುಭುಜುಃ ಪ್ರೇಮ್ಡಾ ಕುಮಾರ್ಯೊ ದ್ವಿಜಬಾಲಿಕಾಃ॥೩೦೩॥ 
ಜಾತಾಃ ಸಗರ್ಭಾಸ್ತಾಃ ಸರ್ವಾದೃಷ್ಟಾಸ್ತೈರ್ದ್ವಿಜಸತ್ತಮೈಃ । 
ಪರಿತ್ಯಕ್ತಾಶ್ಚ ಸದನಾದ್ಮಿಕೃತಾಃ ಪಾಪಕರ್ಮಣಾ ॥ ೩೦೪ ॥ 
ತೇಭ್ಯೋ ಜಾತಾ ಕುಮಾರಾ ಯೇ ಕಾತೀಭಾ ಗೋಳಕಾಸ್ತಥಾ । 
ಧೇನುಜಾಸ್ತೇ ಧರಾಲೋಕೇ ಖ್ಯಾತಿಂ ಜಗ್ಮುರ್ದ್ದಿಜೋತ್ತಮಾಃ ॥ ೩೦೫ ॥ 
ವೃತ್ತಿಜಾಹ್ಯಾಸ್ತುತೇ ವಿಪ್ರಾ ಭಿಕ್ಲಾಂ ಕುರ್ವಂತಿ ನಿತ್ಯಶಃ । 


ಅನ್ಯಚ್ಚ ಶ್ರೂಯತಾಂ ರಾಜಂಸ್ರ್ರೈನಿದ್ಯಾನಾಂ ದ್ವಿಜನ್ಮನಾಂ ॥ ೩೦೬ I 
ಕುಷ್ಮೀ ಕೋಪಿ ತಥಾ ಸಂಗುರ್ಮೂರ್ಯೋ ನಾ ಬಧಿರೋಿ ವಾ। 
ಕಾಣೋ ವಾಾಸ್ಯಥ ಕುಬ್ದೋವಾ ಬದ್ಧವಾಗಥವಾ ಪುನಃ 1 ೩೦೭ ॥ 
ಅಪ್ರಾಪ್ತ ಕನ್ಯಕಾಹ್ಯೇತೇ ಚಾತುರ್ನಿದ್ಯಾನ್ಸಮಾಶ್ರಿತಾಃ | 

ನಿತ್ತೇನ ಮಹತಾ ರಾಜನ್ಸುತಾಂಸ್ತೇಷಾಂ ಕುಮಾರಿಕಾಃ ॥ ೩೦೮ ॥ 
ಉದ್ಭಾಹಿತಾಸ್ತದಾ ರಾಜಂಸ್ತೃಸ್ಮಾಜ್ಞಾತಾಂರ್ಭಕಾಸ್ತು ಯೇ । 
ತ್ರಿದಧಳಜಾಸ್ತೇ ನಿಖ್ಯಾತಾಃ ಕ್ಸಿತಿರೋಕೇಂಭವಂ ಸ್ವತಃ ॥೩೦೯॥ 
ವೃತ್ತಿಂ ಚಕ್ರುರ್ಪ್ರಾಹ್ಮಣಾಸ್ತೆ ಆನ್ಯೋನ್ಯಮಿಶ್ರಸಮುದ್ಭವಾಃ । 

ಅನ್ಯಚ್ಚ ಶ್ರೂಯತಾಂ ರಾಜಂಸ್ಕ್ರೈವಿದ್ಯಾನಾಂ ದ್ವಿಜನ್ಮನಾಂ ॥ ೩೧೦ ॥ 








ರಾಗಿ ತೈನಿದ್ಯರ ದನಗಳನ್ನು ಮೇಯಿಸುತ್ತಿದ್ದರು. ತೈವಿದ್ಯರ ಯುವತಿಯರೂ, 
ವಿಧನೆಯರೂ ಆ ಬಾಲಕರಿಗೆ ಅನ್ನ ನೀರನ್ನು ಕೊಟ್ಟು ಸತ್ಕರಿಸುತ್ತಿದ್ದರು. 

೩೦೩. ಕೆಲವು ಕಾಲದ ಮೇಲೆ ಈ ಗೋಪಾಲಕರು ತೈವಿದ್ಯರ ಕುಮಾರಿ 
ಯರಲ್ಲಿ ಪ್ರಣಯವನ್ನು ಬೆಳೆಯಿಸಿದರು. 

೩೦೪. ಅವರಿಂದ ಗರ್ಭಿಣಿಯರಾದ ತಮ್ಮ ಮಕ್ಕಳನ್ನು ನೋಡಿ ದ್ವಿಜೋ 
ತ್ರಮರು ಅವರನ್ನು ಬೈದು ಮನೆಯಿಂದ ಹೊರಡಿಸಿದರು. 

೩೦೫. ಆ ಗೋಪಾಲಕರಿಂದ ಹುಟ್ಟಿದ ಕುಮಾರರು ಕಾತೀಭ, ಗೋಲಕ್ಕ 
ಥೇನುಜರೆಂದು ಲೋಕದಲ್ಲಿ ಪ್ರಸಿದ್ಧರಾದರು. 

೩೦೬-೩೦೯. ವೃತ್ತಿಯಿಲ್ಲದ ಅವರು ನಿತ್ಯವೂ ಭಿಕ್ಷೆಬೇಡಿದರು. 
ತ್ರೈವಿದ್ಯಬ್ರಾಹ್ಮಣರ ಕುಷ್ಕರೋಗವುಳ್ಳವರೂ, ಕುಂಟರೂ, ಮೂರ್ಬರೂ, 
ಕಿವುಡರೂ, ಕುರುಡರೂ, ಗೂನುಬೆನ್ನಿನನರೂ, ಮೂಕರೂ ಆದ ಕುಮಾರರು. 
ತಮ್ಮನರಲ್ಲಿ ಕನ್ಯೆಯರು ಸಿಕ್ಕದೆ ಇರುವುದರಿಂದ ಬಹಳ ಹಣವನ್ನು ಕೊಟ್ಟು 
ಚಾತುರ್ನಿದ್ಯರ ಕನ್ಯೆಯರನ್ನು ಪಡೆದು ಮದುವೆಯಾದರು. ಅವರಲ್ಲಿ ಜನಿಸಿದ 
ಮಕ್ಕಳು ತ್ರಿದಲರೆಂದು ಪ್ರಪಂಚದಲ್ಲಿ ವಿಖ್ಯಾತರಾದರು. 

೩೧೦. ಆ ಮಿಶ್ರಜಾತಿಯ ಬ್ರಾಹ್ಮಣರು ಪರಸ್ಪರಸೇರಿ ಜೀವನವನ್ನು 


ವಿಕೋನಚತ್ವಾರಿಂಶೋರತಧ್ಯಾಯಃ ೪ 


ರಾಮದತ್ತೇನ ಗ್ರಾಮೇಣ ಕರಗ್ರಹಣಹೇತನೇ 1 
ಏಕೀಭೂಯ ದ್ವಿಜೈಃ ಸರ್ವೈೈರ್ಗ್ರಾಮಂ ಪ್ರದಾಯ ತಂ ಬಲಿಂ ॥ ೩೧೧ ॥ 
ಅರ್ಥಂ ನಿನೇದಯಾಮಾಸುರರ್ಧಂ ಚೈವೋಪರಕ್ಸಿತಂ । 


ಏತಲ್ಲಬ್ಬಂ ಹಿ ಮನ್ವಾನಾಸ್ತೇ ದ್ವಿಜಾ ಲೌಲ್ಯಭಾಗಿನಃ ॥ ೩೧೨ ॥ 

ಮಹಾಸ್ಥಾನಗತಾ ಯೇಚ ತೇಹಿ ವಿಸ್ಮಯಮಾಯಯು£ | 

ತನ್ಮಧ್ಯೇ ಕೋಸಿ ವಿಪ್ರಸ್ತಾನುವಾಚ ಕುಪಿತೋ ವಚಃ ॥ ೩೧೩ ॥ 
ನಿಪ್ರ ಉನಾಚ:- 

ಅನೃತಂ ಚೈವ ಭಾಷಂತೇ ಲೌಲ್ಯೇನ ನುಹತಾವೃತಾಃ । 

ಪುತ್ರಸೌತ್ರನಿನಾಶಾಯ ಬ್ರಹ್ಮಸ್ಟೇಷ್ಟತಿಲೋಲುಸಾಃ ॥ ೩೧೪ ॥ 

ನ ನಿಷಂ ನಿಷಮಿತ್ಯಾಹುರ್ಬ್ರಹ್ಮಸ್ಸಂ ನಿಷಮುಚ್ಯತೇ । 

ನಿಷಮೇಕಾಕನಂ ಹಂತಿ ಬ್ರಹ್ಮಸ್ಕಂ ಪುತ್ರಸೌತ್ರಕಂ ॥ ೩೧೫ ॥ 

ಬ್ರಹ್ಮಸ್ಥೇನ ಚ ದಗ್ಗೇಷು ಪುತ್ರದಾರಗೃಹಾದಿಷು । 

ನ ಚ ತೇಂಪಿಚ ತಿಸ್ಮಂತಿ ಬ್ರಹ್ಮಸ್ವೇನ ನಿನಾಶಿತಾಃ ॥ ೩೧೬ ॥ 

ನ ನಾಕಂ ಲಭತೇ ಸೋ ಸದಾ ಬ್ರಹ್ಮಸೃಹಾರಕಃ । 

'ಯದಾ ನರಾಟಕಾಂ ಚೈವ ಬ್ರಾಹ್ಮಣಸ್ಯ ಹರಂತಿ ಯೇ ॥ ೩೧೭ ॥ 





ಮಾಡುತ್ತಿದ್ದರು. ಮಹಾರಾಜ! ತ್ರೈನಿದ್ಯರ ಮತ್ತೊಂದು ವೃತ್ತಾಂತವನ್ನು 
ಹೇಳುವೆನು, ಕೇಳು. 

೩೧೧-೩೧೩. ಈ ತ್ರೈನಿದ್ಯರು ಒಟ್ಟು ಸೇರಿ ಕಂದಾಯಕ್ಕಾಗಿ ರಾಮನು 
ಕೊಟ್ಟ ಗ್ರಾಮಗಳಲ್ಲಿ ಅರ್ಥಭಾಗವನ್ನುಮಾರಿ ಅರ್ಧವನ್ನುಳಿಸಿಕೊಂಡರು. 
ಚಂಚಲರಾದ ಮಹಾಸ್ಥಾನದ ಬ್ರಾಹ್ಮಣರು ಇದನ್ನು ಕೊಂಡುಕೊಂಡು 
ವಿಸ್ಮಿತರಾದರು. ಆಗ ಅವರಲ್ಲೊಬ್ಬ ಬ್ರಾಹ್ಮಣನು ಅವರನ್ನು ಕುರಿತು 
ಹೀಗೆಂದನು. 

೩೧೪. ಬ್ರಾಹ್ಮಣನು ಹೇಳುತ್ತಾನೆ: ಪುತ್ರ ಪೌತ್ರರ ನಾಶಕ್ಕಾಗಿ 
ಬ್ರಾಹ್ಮಣರ ಸ್ವತ್ತಿನಲ್ಲಿ ಆಶೆಯುಳ್ಳವರಾಗಿ ಸುಳ್ಳನ್ನು ಹೇಳುತ್ತಿದ್ದೀರಿ. 

೩೧೫. ವಿಷವು ವಿಷವಲ್ಲ. ಬ್ರಾಹ್ಮಣರ ಸ್ವತ್ತು ನಿಷವೆನ್ಸಿಸಿಕೊಳ್ಳುವುದು. 
ವಿಷವು ಒಬ್ಬನನ್ನುಮಾತ್ರ ಕೊಲ್ಲುವುದು. ಬ್ರಾಹ್ಮಣರ ಸ್ವತ್ತು ಮಕ್ಕಳು ಮೊನ್ಮು 
ಕೃಳನ್ನೂ ಕೊಲ್ಲುವುದು. 

೩೧೬. ಬ್ರಹ್ಮಸ್ವದಿಂದ ಮಕ್ಕಳು, ಹೆಂಡತಿ, ಮನೆ ಮೊದಲಾದುವು 
ಸುಟ್ಟುಹೋಗಲು ಬ್ರಹ್ಮಸ್ವಾಸಹಾರಕನೂ ಸಾಯುವನು. 

೩೧೭, ಕವಡೆಯಷ್ಟು ಬ್ರಾಹ್ಮಣನ ಸ್ವತ್ತನ್ನು ಅಸಹರಿಸಿದವನೂ ಸ್ವರ್ಗ 
ವನ್ನು ಹೊಂದುವುದಿಲ್ಲ. 


೪೪೦ ಶ್ರೀ ಸ್ಕಾಂದಮಹಾಪುರಾಣಂ 


ತತೋ ಜನ್ಮತ್ರಯಾಣ್ಯೇನ ಹರ್ತಾ ನಿರಯಮಾವ್ರಜೇತ್‌ | 


ಪೂರ್ವಜಾ ನೋಸಭುಂಜಂತಿ ತತ್ರದತ್ತಂ ಜಲಂ ಕೃಚಿತ್‌ ॥ ೩೧೮ ಗ 
ಕ್ಷಯಾಹೇ ನೋಪಭುಂಜಂತಿ ತಸ್ಯ ಪಿಂಡೋದಕಕ್ರಿಯಾಃ । 

ಸಂತತಿಂ ನೈವ ಲಭತೇ ಲಭ್ಯಮಾನಾ ನ ಜೀವತಿ ॥ ೩೧೯॥ 
ಯದಿ ಜೀವತಿ ದೈವಾಜ್ಹೇದ್ಭ್ರಷ್ಟಾಚಾರಾ ಭನೇದಿತಿ ॥ ೩೨೦ 


ಏಕಾದಶ ವಿಪ್ರಾ ಊಚುಃ:-- 
ನಾಂಸತ್ಯಂ ಭಾಷಿತಂ ನಿಪ್ರಾಃ ಕಥಂ ದೂಷಯಸೇಹಿ ನಃ । 


ಅಪರಾಧಂ ವಿನಾ ಕಸ್ಯ ಕಟೂಕ್ತಿರ್ಯುಜ್ಯತೇ ಕಿಲ ॥ ೩೨೧ ॥ 
ತಚ್ಛ್ರುತ್ವಾ ತೈರ್ದ್ವಿಜೈಃ ಸಾರ್ಥ ಗ್ರಾಮಗ್ರಾಹಯಿತಾ ವಣಿಕ್‌ । 
ಸರಿಸೃಷ್ಟಃ ಸ ತತ್ಸರ್ನಂ ಕಥಯಾಮಾಸ ಕಾರಣಂ ॥ ೩೨೨ ॥ 
ವಣಿಜೈರೇನ ಮೇ ದತ್ತೋ ಬಲಿಶ್ಚ ದ್ವಿಜಸತ್ತಮಾಃ । 

ತತ್ಸರ್ನಂ ಶುದ್ಧಭಾವೇನ ಕಥಿತಂ ತು ದ್ವಿಜನ್ಮಸು ೩೨೩ ॥ 
ತತೋರ್ಧದಲಂ ಜ್ಞಾತ್ವಾ ತೇ ಕುಪಿತಾ ದ್ವಿಜಪುತ್ರಕಾಃ | 
ವೃತ್ತೇರ್ಬಹಿಷೃತಾಸ್ತೇವೈ ಏಕಾದಶ ದ್ವಿಜಾಸ್ತ್ರತಃ ॥ ೩೨೪ ॥ 


೩೧೮. ಬ್ರಹ್ಮಸ್ವವನ್ನು ಅಸಹರಿಸಿದವನು ಮೂರು ಜನ್ಮದಲ್ಲಿಯೂ ನರಕ 
ವಾಸಿಯಾಗುವನು. ಪಿತೃಗಳು ಅವನು ಕೊಟ್ಟಿ ತರ್ಪಣದ ನೀರನ್ನು ಕುಡಿಯು. 
ವುದಿಲ್ಲ. 

೩೧೯. ಉತ್ತರ ಕ್ರಿಯೆಯಲ್ಲಿ ಅವನು ಕೊಟ್ಟ ಪಿಂಡಾದಿಗಳನ್ನು ನಿತ್ಯ 
ಗಳು ಪರಿಗ್ರಹಿಸುವುದಿಲ್ಲ. ಅವನಿಗೆ ಸಂತತಿಯಾಗುವುದಿಲ್ಲ. ಆದರೂ ಆ 
ಸಂತತಿಯು ಬದುಕುವುದಿಲ್ಲ. 

೩೨೦-೩೨೧. ದೈವವಶದಿಂದ ಬದುಕಿದರೂ ಆ ಮಕ್ಕಳು ಆಚಾರಭ್ರಷ್ಟ 
ರಾಗುವರು. ಹನ್ನೊಂದು ಜನ ಬ್ರಾ ಹ್ಮಣರು ಹೇಳುತ್ತಾರೆ:--ದ್ವಿಜನೆ! ನಾವು. 
ಸುಳ್ಳನ್ನು ಹೇಳಲಿಲ್ಲ. ನಮ್ಮನ್ನು ಏತಕ್ಕೆ ನಿಂದಿಸುವ? ತಪ್ಪಿಲ್ಲದವನನ್ನು 
ಕುರಿತು ಇಂಥ ಕಠಿನವಾದ ಮಾತುಗಳನ್ನಾಡಬಾರದಷ್ಟೆ. 

೩೨೨. ಅದನ್ನು ಕೇಳಿ ಆ ಬ್ರಾಹ್ಮಣರು ಗ್ರಾಮವನ್ನು ಕೊಡಿಸಿದ ವರ್ತಕ 
ನನ್ನು ಕೇಳಲು ಅವನು ಕಾರಣವನ್ನೆಲ್ಲ ಹೇಳಿದನು. 

೩.೨೩. ಬ್ರಾಹ್ಮಣರೆ! ವರ್ತಕರೆ ನನಗೆ ಕಂದಾಯಕ್ಕಾಗಿ ಗ್ರಾಮವನ್ನು 
ಕೊಟ್ಟರು. ಎಂದು ಎಲ್ಲವನ್ನು ಬ್ರಾಹ್ಮಣರಿಗೆ ಹೇಳಿದನು. 

೩೨೪. ಬಳಿಕ ಆ ಬ್ರಾಹ್ಮಣರ ಮಕ್ಕಳು ಗ್ರಾಮದ ಅರ್ಥಭಾಗವು ನಷ್ಟ 
ವಾದುದನ್ನು ತಿಳಿದು ಆ ಹನ್ನೊಂದುಜನ ಬ್ರಾಹ್ಮಣರನ್ನು ವೃತ್ತಿಬಾಹ್ಯರನ್ನಾಗಿ 
ಮಾಡಿದರು. 


ಏಕೋನಚತ್ವಾರಿಂಶೋ6ಧ್ಯಾಯಃ ೪೪೧ 


ಏಕಾದಶಸಮಾಜ್ಞಾ ತಿರ್ನಿಖ್ಯಾತಾ ಭುವನತ್ರಯೇ | 

ನ ತೇಷಾಂ ಸಹ ಸಂಬಂಧೋ ನ ನಿವಾಹಶ್ಚ ಜಾಯತೇ ॥ ೩೨೫ ॥ 
ಏಕಾದಶಸಮಾ ಯೇ ಚ ಬಹಿರ್ಗ್ರ್ರಾಮೇ ವಸಂತಿ ತೇ । 

ಏವಂ ಭೇದಾಃ ಸಮಭವನ್ನಾನಾನೋಢದ್ವಿಜನ್ಮನಾಂ | 
ಯುಗಾಃನುಸಾರಾತ್ಕಾಲೇನ ಜ್ಞಾತೀನಾಂ ಚ ನೃಷಸ್ಯವಾ ॥ ೩೨೬ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃತೀಯೇ ಬ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂರಣ್ಯಮಾಹಾತ್ಮ್ಯೇ ""ಜ್ವ್ಞಾತಿಭೇದ. 
ವರ್ಣನಂ'' ನಾಮ ಏಕೋನಚತ್ವಾರಿಂಶೋ$ಧ್ಯಾಯಃ 


೩೨೫. ಬಳಿಕ ಲೋಕದಲ್ಲಿ ವಿಕಾದಶಸಮಾ ಎಂಬ ಜಾತಿಯು ಪ್ರಸಿದ್ಧಿ 
ಗೊಂಡಿತು. ಆ ಜಾತಿಯನರೊಡನೆ ವಿವಾಹಾದಿ ಸಂಬಂಧವನ್ನು ಇತರ 
ಬ್ರಾಹ್ಮಣರು ಬೆಳೆಯಿಸಲಿಲ್ಲ. 

೩೨೬. ಈ ಏಕಾದಶ ಸಮಜಾತಿಯವರು ಗ್ರಾಮದ ಹೊರಗೆ ವಾಸಿಸಿದರು. 
ಹೀಗೆ ಕಾಲಕ್ರಮದಿಂದ ಯುಗಾನುಸಾರವಾಗಿ ಮೋಡಢಬ್ರಾಹ್ಮಣರ ಜ್ಞಾಕಿಗಳೂ 
ಧರ್ಮಗಳೂ ಬಗೆ ಬಗೆಯಾದುವು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಕ 
ಮಾಹಾತ್ಮ್ಮದಲ್ಲಿ 4 ಜ್ಞಾತಿಭೇದವರ್ಣನ””ನೆಂಬ 
ಮೂನತ್ತೊಂಬತ್ತನೆಯ ಅಧ್ಯಾಯವು ಮಂಗಿದುದು 


1 ಶ್ರೀಃ 
ಅಥ ಚತ್ವಾರಿಂಶೋಧ್ಯಾಯಃ 


ಧರ್ಮಾಂರಣ್ಯಸಿವಾಸಿ ವ್ಯವಸ್ಥಾ ಪನ ಪೂರ್ವಕ ಧರ್ಮಾಂರಣ್ಯ 
ಪುರಾಣಶ್ರನಣಮಾಹಾತ್ಮ್ಯನರ್ಣನಂ 


ನಾರದ ಉವಾಚ: 
ಜ್ಞಾತಿಭೇದೇ ತು ಸಂಜಾತೇ ತಸ್ಮಿನ್ಮೋಹೇರಕೇ ಪುರೇ । 
ತ್ರೆನಿದ್ಯೆಃ ಕಿಂ ಕೃತಂ ಬ್ರಹ್ಮಂಸ್ತನ್ಮಮಾಚಕ್ಸ ಪೃಚ್ಛತಃ HON 
ಬ್ರಹ್ಮೋವಾಚ :-- 
ಸ್ವ ಸ್ಥಾ ನೇ ನಾಡವಾಃ ಸರ್ವೇ ಹರ್ಷನಿರ್ಭರಮಾನಸಾಃ 1 
ಅಗ್ನಿಹೋತ್ರ ಪರಾಃ ಕೇಪಿ ಕೇಪಿ ಯಜ್ಞ ಪರಾಯಣಾಃ ॥೨॥ 
ಕೇಂಪಿ ಚಾಗ್ನಿಸಮಾಧಾನಾಃ ಕೇಸಿ ಸ್ಥಾ “ರ್ತಾ ನಿರಂತರಂ । 
ಪುರಾಣನ್ಯಾಯವೇತ್ತಾರೋ ನೇಡವೇದಾಂಗವಾದಿನಃ ॥೩॥ 
ಸುಖೇನ ಸ್ಥಾನ್ಸದಾಚಾರಾನ್ಯುರ್ವಂತೋ ಬ್ರಹ್ಮನಾದಿನಃ । 
ಏನಂ ಧರ್ಮಸಮಾಚಾರಾನ್ಯುರ್ವತಾಂ ಕುಶಲಾತ್ಮನಾಂ nH 
ಸ್ಥಾನಾಚಾರಾನ್ಯುಲಾಚಾರಾನಧಿದೇವ್ಯಾಶ್ಚ ಭಾಷಿತಾನ್‌ । 
ಧರ್ಮ ಶಾಸ್ತ್ರಸ್ಥಿತಂ ಸರ್ವಂ ಕಾಜೇಶೈರುದಿತಂ ಚ ಯತ್‌ 1೫॥ 


ಪರಂಪರಾಗತಂ ಧರ್ಮಮೂಚುಸ್ತೇ ನಾಡವೋತ್ತಮಾಃ ॥೬॥ 


ಕನ್ನಡದ ಅನುವಾದ 
ಧರ್ಮಾರಣ್ಯ ಪುರಾಣಶ್ರನಣ ಮಾಹಾತ್ಮ್ಯವರ್ಣನ 

೧. ನಾರದನು ಹೇಳುತ್ತಾನೆ: ಪಿತಾಮಹ! ಹೀಗೆ ಜ್ಞಾತಿಭೇದ 
ವುಂಟಾಗಲು ಆ ಮೋಹೇರಕ ಪುರದಲ್ಲಿ ತ್ರೈವಿದ್ಯ ಬ್ರಾಹ್ಮಣರು ಏನನ್ನುಮಾಡಿದ 
ಕೆಂಬುದನ್ನು ನನಗೆ ಹೇಳು. 

೨-೨೩. ಬ್ರಹ್ಮನು ಹೇಳುತ್ತಾನೆ: ಬ್ರಾಹ್ಮಣರೆಲ್ಲರೂ ಸಂತೋಷದಿಂದ 
ತಮ್ಮ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಕೆಲವರು ಅಗ್ನಿಹೋತ್ರ 
ನಿರತರೂ, ಕೆಲವರು ಯಜ್ಞಾ ಸಕ್ತರೂ, ಕೆಲವರು ಅಗ್ಟ್ಯಾಧಾನಪರರೂ, 
ಕೆಲವರು ಸ್ಮೃತ್ಯುಕ್ತಕರ್ಮನಿರತರೂ, ಪುರಾಣ, ನ್ಯಾಯಶಾಸ್ತ್ರಗಳನ್ನು ತಿಳಿ 
ದವರೂ, ವೇದ ವೇದಾಂಗಗಳನ್ನು ಹೇಳುವವರೂ ಆಗಿದ್ದರು. 

೪-೬. ಹೀಗೆ ಸದಾಚಾರ ಸಂಸಪನ್ನರಾಗಿ ಕುಶಲರಾದ ಆ ಬ್ರಾಹ್ಮಣರ: 
ಬ್ರಹ್ಮಾದಿಗಳು ಹೇಳಿದ ಕುಲಕ್ರಮದಿಂದ ಬಂದ ಸ್ಥಾನಾಚಾರಗಳನ್ನೂ, ಕುಲಾ 
ಚಾರಗಳನ್ನೂ, ಗೋತ್ರದೇವತೆಯ ಮಾತುಗಳನ್ನೂ ಧರ್ಮಶಾಸ್ತ್ರ ದಲ್ಲಿ 
ಹೇಳಿದ ಧರ್ಮಗಳನ್ನೂ ಹೇಳಿದರು. 


ಚತ್ತಾರಿಂಶೋರಧ್ಯಾಯಃ ೪೪೩ 


ಬ್ರಾಹ್ಮಣಾ ಊಚುಃ:- 
ಉಸಾಸ್ತೇ ಯಶ್ಚ ಲಿಖಿತಂ ರಕ್ತಪಾದೈಸ್ತು ವಾಡವಾಃ । 


ಜ್ಞಾತಿಶ್ರೇಷ್ಠಃ ಸ ನಿಜ್ಜೇಯೋ ಬಲಿರ್ದೇಯಸ್ತತಃ ಪರಂ Han 
ರಕ ಠ'ಚಂದನಂ ಪ ಕ್ರಸಾಧ್ಯಾಂಥ ಪ್ರ ಸಿದ್ಧ ಸ್ಟ ಕುಲಂ ತಥಾ । 

ಕುಂಕುಮಾರಕ ಕೃಷಾದೈಸ್ತೆ ೃರ್ಗಂಧಪುಷ್ಟಾ ನಿ ಚರ್ಚಿತೈಃ nen 
ಸಂಭೂಯ ಲಿಖಿತಂ ತಚ್ಚ" ರಕ್ತಸಾದಂ ತದುಚ್ಯತೇ । 

ರಾಮಸ್ಯ ಲೇಖ್ಯಂ ತೇ ಸರ್ಜೇ ಪೂಜಯಂತು ಸಮಾಹಿತಾಃ ॥೯॥ 


ರಾಮಸ್ಯ ಕರಮುದ್ರಾ ೦ ಚ ಪೂಜಯಂತು ದ್ವಿಜಾಃ ಸದಾ । 
ಯಸ್‌ ಡೋಸ ಸದಾಚಾರೇ ವ್ಯಭಿಚಾರಾದಯೋ ಯದಿ ॥೧೦॥ 
ತೇಷಾಂ ದಂಡೋ ನಿಧೇಯಸ್ತು ಯ ಉಕ್ರೋ ನಿಧಿವದ್ದಿಜೈೆಃ । 


ಚಿಹ್ನಂ ನ ರಾಮುಮುದ್ರಾಯಾ ಯಾವದ್ದಂಡಂ ದದಾತಿನ ॥೧೧॥ 
ವಿನಾ ದಂಡಪ್ರದಾನೇನ ಮುದ್ರಾಚಿಹ್ನಂ ನಧಾರ್ಯತೇ। 

ಮುದ್ರಾಹಸ್ತಾ ಶ್ಚ ವಿಜ್ಞೆ €ಯಾ ವಾಡವಾ ನೃಪಸತ್ತಮ ॥ ೧೨ ॥ 
ಪುತ್ರೇ ತೇ ಖಿತಾ ದದಾ ದ್ಯಾಲ್ರ್ರೀಮಾತ್ರೇ ತು ಬಲಿಂ ಸದಾ । 
ಫಲಾನಿವಿಂಶತಿಃ ಸರ್ಪಿರ್ಗುಡಃ ಪಂಚಪಲಾನಿ ಚ ॥ ೧೩ ॥ 
ಕುಂಕುಮಾದಿಭಿರಭ್ಯಚ್ಯ ೯ ಜಾತಮಾತ್ರಃ ಸುತಸ್ತದಾ । 

ಷಷ್ಕೇ ಚ ದಿವಸೇ ರಾಜನ್ಸಷ್ಮೀಂ ಪೂಜಯತೇ "ಸದಾ ॥ ೧೪ ॥ 





೭. ಬ್ರಾಹ್ಮಣರು ಹೇಳುತ್ತಾರೆ :--ರಕ್ತಪಾದಗಳಿಂದ ಬರೆಯಲ್ಪಟ್ಟ 
ಕುಲದೇವತೆಯನ್ನು ಉಪಾಸನೆಮಾಡಿ ಬಲಿಯನ್ನೀಯುವ ಬ್ರಾಹ್ಮಣರು ಜ್ಞಾತಿ 
ಶ್ರೇಷ್ಮಕೆನಿಸಿಕೊಳ್ಳುವರು. 

೮-೧೨. ಪಾದಗಳಿಗೆ ಕುಂಕುಮದ ಕೆಂಪು ಗಂಧಗಳನ್ನು ಬಳಿದು ಹೂವು. 
ಗಳನ್ನಲಂಕರಿಸಿ ಬರೆದ ಪ್ರಸಿದ್ಧವಾದ ಸ್ವಕುಲದೇವತೆಯು ರಕ್ತಪಾದನೆನ್ನಿಸಿ 
ಕೊಳ್ಳುವುದು. ಆ ಬ್ರಾಹ್ಮಣರು ರಾಮನ ಶಾಸನವನ್ನೂ, ಅವನ ಉಂಗುರ 
ವನ್ನೂ ಯಾವಾಗಲೂ ಪೂಜಿಸಬೇಕು. ಅವರ ಸದಾಚಾರದಲ್ಲಿ ವ್ಯಭಿಚಾರಾದಿ 
ದೋಷಗಳು ಕಂಡರೆ ಅವರಿಗೆ ಬ್ರಾಹ್ಮಣರು ಶಾಸ್ತ್ರದಲ್ಲಿ ಹೇಳಿದ ದಂಡವನ್ನು 

ವಿಧಿಸಬೇಕು. ರಾಮಮುದ್ರೆಯ ಚಿಹ್ನೆಯನ್ನು ಧರಿಸದೆಯೂ, ದಂಡವನ್ನು 
ಕೊಡದೆಯೂ ಇರುವ ಬ್ರಾಹ್ಮಣರು ಮುದ್ರಾ ಹಸ ಸ್ತರೆನ್ಸಿಸಿಕೊಳ್ಳುವರು. 

೧೩-೧೬. ಪುತ್ರನು NETS ತಂದೆಯು ಶ್ರೀಮಾತೆಯನ್ನು 
ಕುಂಕುಮಾದಿಗಳಿಂದ ಪೂಜಿಸಿ ಇಪ್ಪತ್ತು ಹಣ್ಣುಗಳು, ಹದಿನೈದು ತೊಲೆ ತುಪ್ಪ 
ಬೆಲ್ಲ ಇವುಗಳನ್ನು ನೈನೇದ್ಯಮಾಡಬೇಕು. ಆರನೆ ದಿನ ಶ್ರೀಮಾತೆಯನ್ನು 


೪೪% ಶ್ರೀ ಸ್ಕಾಂದಮಹಾಪುರಾಣಂ 


ದದ್ಯಾತ್ತತ್ರಬಲಿಂ ಸಾಜ್ಯಂ ಕುರ್ಯಾದ್ಧಿ ಬಲಿಪಂಚಕಂ । 
ಪಂಚಪ್ರ ಸ್ಕಾ ನ್ಪಲೀನ್ನ ದ್ಯಾತ್ನ ತ್ಸ ವಸಾ ್ರಂಲ್ಲೇಫಲೈ ರ್ಯುತಾನ್‌ ॥ ೧೫ ॥ 
ಕುಂಕುಮಾದಿಭಿರ ಜ್ಯ ಹ ಕ ಶ್ರೀಮಾತ್ರೆ € ಭಕ್ತಿಪೂರ್ವಕಂ । 


ವಿತ್ತಶಾಠ್ಯಂ ನ ಕುರ್ನೀತ ಕುಲೇ ಸಂತತಿವೃ ದ ಯೇ ॥ ೧೬ ॥ 
ತದ್ಧಿ ನಯಕ ದ್ರವ್ಯಂ ವೃ ದ್ಧೌ ಯದಿ ಜಿತಂ ಪುನಃ । 

ಜನ್ಮ ನೋನಂತರಂ ಹ RC ಬೊಹಾನಿಧಿ ॥ ೧೭॥ 
ನಿಸಾ ್ರ್ರ8 ನುಕೀರ್ತಿತಾ ಯಾತ್ರ ವೃತ್ತಿಃ ಸಾಂಪಿ ನಿಭಜ್ಯ ತೇ 

ಪ್ರಫಮಾ ಲಭ್ಯಮಾನಾ ಚ ನೈತ್ತಿರ್ನ್ಯೆ ಯಾನತೀ ಪುರಃ ॥ ೧೮॥ 
ತಸ್ಯಾನೃತ್ತೇರರ್ಧಭಾಗೋ ಗೋತ್ರ ದೇವ್ಯೈ ತು ಕಲ್ಪ್ಯತಾಂ | 

ದ್ವಿಗುಣಂ ವಣಿಜಾ ಚೈನ ಪುತ್ರೇ ಜಾತೇ ಭವೇದಿತಿ morn 
ಮಾಂಡಲೀಯಾಶ್ಚ ಯೇ ಶೂದ್ರಾಸ್ತೇಷಾನುರ್ಕಕರಂ ತ್ವಿದಂ 1 
ಅಡಾಲಜಾನಾಂ ತ್ರಿಗುಣಂ ಗೋಭುಜಾನಾಂ ಚತುರ್ಗುಣಂ ॥ ೨೦॥ 


ಇತ್ಯೇತತ್ಕಥಿತಂ ಸರ್ವಮನ್ಯಚ್ಚ ಶೂದ್ರಜಾತಿಷು । 
ಯಸ್ಯ ದೋಷಸ್ತು ಹತ್ಯಾಯಾಃ ಸಮುದ್ಭೂತೋ ನಿಧೇರ್ವಶಾತ್‌ ॥೨೧॥ 
ಚಡ ವಿಧಿವತ್ತಸ್ಯ ಕರ್ತವ್ಯೋ ವೇದಶಾಸಿ ಸ್ತ್ರಿಭಿಃ । 

ನ್ಯಾಯೋ ನ್ಯಾಯನಾದೀಸ್ಯಾನ್ನಿ ರ್ಜೋಷೇ" ದೋಷದಾಯಕಃ ॥ ೨೨ ॥ 





ಕುಂಕುಮಾದಿಗಳಿಂದ ಅರ್ಚಿಸಿ ಷಸ್ಮೀದೇವಿಯನ್ನು ವಸ್ತ ಸ್ತ್ರ, ಬಿಲ್ವಫಲ, ಐದು 
ಬಳ್ಳ ಧಾನ್ಯ ಗಳಿಂದ ತುಪ್ಪ ಸಹಿತವಾಗಿ ಐದು ಬಲಿಯನ್ನಿತ್ತು ಪೂಜಿಸಬೇಕು. 
ಸಂತಾನವ್ಯ! ದ್ಮಿಗಾಗಿ ದ ್ರವ್ಯಲೋಭವಿಲ್ಲದೆ ಅರ್ಚಿಸಬೇಕು. 

೧೭. ಸತತಿವೃದ್ಧಿಗಾಗಿ ವ್ಯಯಮಾಡಿದ ದ್ರವ್ಯವೇ ದ್ರವ್ಯವೆನ್ಸಿಸಿ 
ಕೊಳ್ಳು ವುದು. ಶಿಶುವು ಜನಿಸಿದ ಕೂಡಲೆ ಶಾಸ್ತ್ರ AS ಜಾತಕರ್ಮ 
ವನ್ನು" ಮಾಡಬೇಕು. 

೧೮-೨೦. ಬ್ರಾಹ್ಮಣರು ತಮಗೆ ಕಲ್ಪಿತವಾದ ವೃತ್ತಿ ತಿಯ ಅರ್ಧಭಾಗ 
ವನ್ನು ಜಾತಕರ್ಮದಲ್ಲಿ ಗೋತ್ರದೇವಿಗೆ ಒಪಿ ಸಬೇಕು. ವೈಶ್ಯನು ಅದರ 
ಇವು ಒಡಿಯನ್ನೂ ಕ ಮಾಂಡಲೀಯರೆಂಬ ಶೂಡ್ಲ ರು ಅದರ ಅರ್ಧಭಾಗವನ್ನೂ, 
ಬಡಾ ಜರು ಅದರ ಮುಮ್ಮಡಿಯನ್ನೂ ಚ ಅದರ ಚತುರ್ಗುಣ 
ವನ್ನು ಒಪ್ಪಿಸಬೇಕು. 

೨೧-೨೩. ಶೂದ್ರರು ಕೊಲೆಯನ್ನು ಮಾಡಿದರೆ ಅವರಿಗೆ ವೇದಶಾಸ್ತ್ರ 
ಜ್ಞರು ಶಾಸ್ತ್ರರೀತಿಯಿಂದ ದಂಡವನ್ನು ವಿಧಿಸಬೇಕು. ಅನ್ಯಾಯವನ್ನು 
ಮಾಡುವ ನ್ಯಾಯಾಧಿಸತಿಯೂ, ನಿರ್ದುಷ್ಟರಲ್ಲಿ ದೋಷಾರೋಪಮಾಡು 


ಚತ್ವಾರಿಂಶೋ$ಧ್ಕಾಯಃ ೪೪೫ 


ಪಂಕ್ತಿಭೇದಸ್ಯ ಕರ್ತಾ ಚ ಗೋಸಹಸ್ರನಧಃ ಸ್ಮೃತಃ । 
ವೃತ್ತಿಭಾಗನಿಭಜನಂ ತಥಾ ನ್ಯಾಯನಿಚಾರಣಂ । 


ಶ್ರೀರಾನುದೂತಕಸ್ಯಾಗ್ರೇ ಕರ್ತವ್ಯಮಿತಿ ನಿಶ್ಚಯಃ ॥ ೨೩ ॥ 
ತಸ್ಯ ಪೂಜಾಂ ಪ್ರಕುರ್ನೀತ ತದಾ ಕಾಲೇಂಥನಾ ಸದಾ । 

ತೈಲೇನ ಲೇಸಯೇತ್ತಸ್ಯ ದೇಹೇ ನೈ ನಿಘ್ನಶಾಂತಯೇ ॥ ೨೪ ॥ 
ಧೂಪಂ ದೀಪಂ ಫಲಂ ದದ್ಯಾತ್ಪುಷ್ಬೈರ್ನಾನಾನಿಧಥೈಃ ಕಿಲ । 

ಪೂಜಿತೋ ಹನುಮಾನೇವ ದದಾತಿ ತಸ್ಯ ವಾಂಛಿತಂ ॥ ೨೫ ॥ 
ಪ್ರತಿಪುತ್ರಂ ತು ತಸ್ಯಾಗ್ರೇ ಕುರ್ಯಾನ್ನಾನ್ಯತ್ರ ಕುತ್ರಚಿತ್‌ । 

ಶ್ರೀಮಾತಾ ಬಕುಲಸ್ವಾನಿ ಭಾಗಧೇಯಂ ತು ಪೂರ್ವತಃ ॥ ೨೬॥ 


ಪಶ್ಚಾತೃ್ರತಿಗ್ರಹಂ ವಿಪ್ಪೈಃ ಕರ್ತವ್ಯಮಿತಿ ನಿಶ್ಚಿತಂ | 
ಸಮಾಗಮೇಷು ವಿಪ್ರಾಣಾಂ ನ್ಯಾಯಾನ್ಯಾಯ ನಿನಿರ್ಣಯೇ ॥ ೨೭॥ 
ನಿರ್ಣಯಂ ಹೃದಯೇ ಧೃತ್ಯಾ ತತ್ರಸ್ಥಂ ಶ್ರಾನಯೇದ್ದಿಜಾನ್‌ | 


ಕೇನಲಂ ಧರ್ಮುಬುದ್ಧ್ಯಾ ಚ ಪಕ್ಸಸಾತಂ ನಿವರ್ಜಯೇತ್‌ ॥ ೨೮ ॥ 
ಸರ್ವೇಷಾಂ ಸಂಮತಂ ಕಾರ್ಯಂ ತದ್ಧ್ಯನಿಕೃತಮೇವ ಚ। 
ಆಕಾರಿತಸ್ತತೋ ವಿಪ್ರಃ ಸಭಾಯಾಂ ಭಯಮೇತಿ ಚೇತ್‌ ॥೨೯॥ 


ವವನೂ, ಪಂಕ್ತಿಭೇದಮಾಡುವವನೂ ಸಾವಿರ ಗೋವುಗಳನ್ನು ವಧಿಸಿದಷ್ಟು 
ಪಾಸವುಳ್ಳವನಾಗುವನು. ವೃತ್ತಿ ನಿಭಾಗವನ್ನೂ ನ್ಯಾಯ ವಿಚಾರವನ್ನೂ 
ಹನುಮಂತನ ಮುಂದೆ ಮಾಡಬೇಕು. 

೨೪-೨೫. ಆ ಸಮಯದಲ್ಲಿ ಅಥವಾ ಯಾವಾಗಲೂ ಆಂಜನೇಯನನ್ನು 
ಪೂಜಿಸಬೇಕು. ವಿಫ್ಲೆಶಾಂತಿಗಾಗಿ ಅವನ ದೇಹಕ್ಕೆ ಎಣ್ಣೆಯನ್ನು ಹಚ್ಚಿ ಧೂಪ, 
ದೀಪ, ಫಲ, ಪುಷ್ಪಗಳಿಂದ ಪೂಜಿಸಿದರೆ ಆಂಜನೇಯನು ಇಷ್ಟಾರ್ಥವನ್ನೀ 
ಯುವನು. 

೨೬. ಪ್ರತಿಯೊಬ್ಬ ಪುತ್ರನ ಜನನ ಕಾಲದಲ್ಲಿಯೂ ಆ ಆಂಜನೇಯನ 
ಮುಂದೆಯೇ ಜಾತಕರ್ಮವನ್ನು ಮಾಡಬೇಕು. ಹಿಂದೆ ಹೇಳಿದಂತೆ ಶ್ರೀಮಾತೆ 
ಬಕುಲಸ್ವಾಮಿಯರಿಗೆ ಮೊದಲು ಭಾಗವನ್ಲ್ನೀಯಬೇಕು. 

೨೭-೩೧. ಅನಂತರ ಬ್ರಾಹ್ಮಣರು ದಾನಸ್ವೀಕಾರಮಾಡಬೇಕು. ನ್ಯಾಯ 
ಮತ್ತು ಅನ್ಯಾಯಗಳ ನಿರ್ಣಯ ವಿಷಯದಲ್ಲಿ ಬ್ರಾಹ್ಮಣರ ಸಭೆಯನ್ನು ಸೇರಿಸಿ 
ಅವರಿಗೆ ವಿಷಯವನ್ನು ತಿಳಿಸಬೇಕು. ಪಕ್ಸಪಾತವನ್ನು ತ್ಯಜಿಸಿ ಕೇವಲ ಧರ್ಮ 
ಬುದ್ಧಿಯಿಂದ ಆ ಬ್ರಾಹ್ಮಣರ ಒಂದೇ ವಿಧವಾದ ಸಮ್ಮತಿಯನ್ನು ಪಡೆಯ 
ಬೇಕು. ಸಭೆಯಲ್ಲಿ ಕರೆದಾಗ ಬ್ರಾಹ್ಮಣನು ಭಯಕೊಂಡರೆ ನಿರ್ಣಯ ವಿಷಯ 
ದಲ್ಲಿ ಅನನ ಮಾತನ್ನು ಕೇಳಕೂಡದು. ಸಮಸ್ತ ದ್ವಿಜರು ಸೇರಿ ಬಹಿಷ್ಕರಿಸಿದವ 


೪೪೬ ಶ್ರೀ ಸ್ಕಾಂದಮಹಾಪುರಾಣಂ 


ನ ತಸ್ಯ ವಾಕ್ಯಂ ಶ್ರೋತವ್ಯಂ ನಿರ್ಣೇತಾರ್ಥನಿವಾರಣೇ । 


ಯಸ್ಯ ವರ್ಜಸ್ತು ಕ್ರಿಯತೇ ಮಿಲಿತ್ವಾ ಸರ್ವವಾಡನವೈಃ ॥೩೦॥ 
ಸ್ನಾನ ಪಾನಾದಿಕಂ ಸರ್ವಂ ಕಾರ್ಯಂ ತೇನ ವಿವರ್ಜಯೇತ್‌ । 

ತಸ್ಯ ಕನ್ಯಾ ನ ದಾತವ್ಯಾ ತತ್ಸಂಸರ್ಗೀ ಚ ತಾದೃಶಃ ॥೩೧॥ 
ತತೋ ದಂಡಂ ಪ್ರಕುರ್ನೀತ ಸರ್ನ್ವೈರೇನ ದ್ವಿಜೋತ್ತಮೈಃ । 

ಭೋಜನಂ ಕನ್ಯಕಾ ದಾನಮಿತಿ ದಾಶರಥೇರ್ಮತಂ ॥ ೩೨॥ 
ಯತ್ಮಿಂಚಿತ್ಯುರುತೇ ಪಾಪಂ ಲಬ್ಧುಂ ಸ್ಥಲಮಥಾಪಿವಾ | 

ಶುಷ್ಕಾರ್ರ್ರಂ ವಸತೇ ಚಾಂನ್ನೇ ತಸ್ಮಾದನ್ನಂ ಪರಿತ್ಯಜೇತ್‌ ॥ ೩೩ ॥ 
ಕುರ್ನಂಸ್ತತ್ಪಾಪಭಾಗೀಸ್ಯಾತ್ತಸ್ಯ ದಂಡೋ ಯಥಾವಿಧಿ । 

ನ್ಯಾಯಂ ನ ಪಶ್ಯತೇ ಯಸ್ತು ಶಕ್ಟೌ ಸತ್ಯಾಂ ಸದಾಯತಃ ॥ ೩೪॥ 


ಪಾಪಭಾಗೀ ಸ ವಿಜ್ಞೇಯ ಇತಿ ಸತ್ಯಂ ನ ಸಂಶಯಃ । 
ಉತ್ಕೋಚಂ ಯಸ್ತು ಗೃಹ್ಣಾತಿ ಪಾಪಿನಾಂ ದುಷ್ಟಕರ್ಮಿಣಾಂ । 


ಸಕಲಂ ಚ ಭವೇತ್ತಸ್ಯ ಸಾಪಂ ನೈವಾಂತ್ರ ಸಂಶಯಃ ॥ ೩೫ ॥ 
ತಸ್ಯಾಂನ್ನಂ ಗೃಹ್ಯತೇ ನೈನ ಕನ್ಯಾಪಿ ನ ಕದಾಚನ । 

ಹಿತಮಾಚರತೇ ಯಸ್ತು ಪುತ್ರಾಣಾಮಸಿ ನೈ ನರಃ ॥ ೩೬೧0 
ಸ ಏತಾನ್ನಿಯಮಾನ್ಸರ್ನಾನ್ಪಾಲಯೇನ್ನಾಂತ್ರ ಸಂಶಯಃ । 

ಏನಂ ಪತ್ರಂ ಲಿಖಿತ್ವಾ ತು ವಾಡವಾಸ್ತೇ ಪ್ರಹರ್ಷಿತಾಃ ॥ ೩೭॥ 








ನೊಡನೆ ಪಾನಾದಿ ಸಕಲಕಾರ್ಯಗಳನ್ನು ತ್ಯಜಿಸಬೇಕು. ಅವನಿಗೆ ಕನ್ಯೆಯನ್ನು 
ಕೊಡಬಾರದು. ಅವನೊಡನೆ ಸಂಬಂಧವನ್ನು ಮಾಡಿದವನೂ ಅವನಂತೆಯೇ 
ಆಗುವನು. 

೩೨. ಆದುದರಿಂದ ಎಲ್ಲ ಬ್ರಾಹ್ಮಣರಿಗೂ ಸಮ್ಮತವಾದ ಶಿಕ್ಷೆಯನ್ನು 
ಮಾಡಿ ಅನಂತರ ಅವನಿಗೆ ಭೋಜನವನ್ನೂ ಕನ್ಯೆಯನ್ನೂ ಕೊಡಬಹುದು. 

೩೩-೩೮. ಸ್ಥಳವನ್ನಾಗಲಿ, ಒಣಶುಂಠಿಯನ್ನಾಗಲಿ ನಡೆಯಲು ಪಾಸ 
ಮಾಡಿದವನ ಅನ್ನವನ್ನು ತ್ಯಜಿಸಬೇಕು. ಹಾಗೆ ಅನ್ನವನ್ನು ಪರಿಗ್ರಹಿಸಿದರೆ 
ಅವನ ಪಾಪವು ಇವನಿಗೆ ಬರುವುದರಿಂದ ಇವನು ಶಾಸ್ತ್ರೋಕ್ತವಾದ ಶಿಕ್ಷೆಗೆ 
ಗುರಿಯಾಗುತ್ತಾನೆ. ಶಕ್ತಿಯಿದ್ದರೂ ನ್ಯಾಯವನ್ನು ವಿಮರ್ಶಿಸದಿರುವವನು 
ಪಾಹಿಷ್ಠನು. ದುಷ್ಕಾರ್ಯನಿರತರಾದ ಪಾಪಿಗಳಿಂದ ಲಂಚವನ್ನು ಪಡೆದರೆ 
ಪಾಪಿಗಳ ಪಾಪವು ಲಂಚವನ್ನು ತೆಗೆದುಕೊಂಡವರಿಗೆ ಸಂಭವಿಸುವುದು. ಅವನ 
ಅನ್ಸವನ್ಟ್ಯೂ ಕನ್ಯೆಯನ್ನೂ ತೆಗೆದುಕೊಳ್ಳಬಾರದು. ತಮ್ಮ ಮಕ್ಕಳಿಗೆ 
ಹಿತವನ್ನು ಬಯಸುವ ನರನು ಈ ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು, 
ಹೀಗೆ ಬ್ರಾಹ್ಮಣರು ನಿಯಮ ಪತ್ರವನ್ನು ಬರೆದು ಸಂತೋಷಗೊಂಡರು. 


ಚತ್ವಾರಿಂಶೋರಧ್ಮಾಯಃ ೪೪೭ 


ಪ್ರಾಪ್ತೇ ಕಲಿಯುಗೇ ಘೋರೇ ಯಥಾಪಾಪಂ ನ ಕುರ್ವತೇ 


ಇತಿ ಜ್ಞಾತ್ವಾ ತು ಸರ್ನೇ ತೇ ನ್ಯಾಯಧರ್ಮಂ ಪ್ರಚಕ್ರಿರೇ' ॥೩೮॥ 
ವ್ಯಾಸ ಉವಾಚ :- 

ಕಲೌ ಪ್ರಾಸ್ತೇ ದ್ವಿಜಾಃ ಸರ್ವೇ ಸ್ಥಾನಭ್ರಷ್ಟಾ ಯತಸ್ತತಃ । 

ಪಕ್ಸಮುತ್ಯಲಂ ಗ್ರಹೀಷ್ಯಂತಿ ತಥಾಸ್ಕುಃ ಪಕ್ಸಪಾತಿನಃ 1೩೯ 

ಭೋಕ್ಸ್ಯ್ಯಂತೇ ಮ್ಲೇಚ್ಛಕಾನ್ನಾ್ರ ಮಾನ್ಕೋಲಾನಿಧ್ವಂಸಿಭಿಃ ಕಿಲ! 

ನೇದಭ್ರಷ್ಟಾಶ್ಚ ತೇ ವಿಪ್ರಾ ಭವಿಷ್ಯಂತಿ ಕಲೌ ಯುಗೇ ॥೪೦॥ 
ಯುಧಿಷ್ಠಿರ ಉವಾಚ :-- 

ದೇಶೇ ದೇಶೇ ಗಮಿಷ್ಯಂತಿ ತೇ ನಿಪ್ರಾ ನಣಿಜಸ್ತಥಾ । 

ಕಥಂ ವೈಜ್ಞಾ ಯತೇ ಸರ್ವೈಃ ಕೇನ ಚಿಹ್ನೇನ ಮಾರಿಷ ॥ ೪೧॥ 

ಯಸಿ ನೊ ತ್ರೆ ೀ ಸಮುತ ನ್ನ್ನ ವಾಡನಾ ಜೀ ಮಹಾಬಲಾಃ ॥ ೪೨॥ 

ವ್ಯಾಸ ಜು — 

ಜ್ಞಾಯತೇ ಗೋತ್ರ ಸಂಜ್ಞಾಂಥ ಕೇಚಿಚ್ಚೈನ ಸರಾಕ್ರಮೈಃ । 

ಯಸ್ಕ ಯಸ್ಯ ಚ ಯತ್ಕರ್ಮ ತಸ್ಯ ತಸ್ಯಾಂವಟಂಕಕಃ ॥ ೪೩॥ 

ಅನಟಿಂಕೈರ್ಹಿ ಜ್ಞ್ಞಾಯಂತೇ ನಾನ್ಯಥಾ ಜ್ಞಾಯತೇ ಕ್ಲಚಿತ್‌ । 

ಗೋತ್ಸೆಶ್ಚ ಪ್ರನರೈಶ್ಚೆನ ಅನಟಂಕ್ರೆ ರ್ನ ಸಾತ್ಮಜ ॥ ೪೪ ॥ 








ಘೋರ ಕಲಿಯುಗದಲ್ಲಿ ಜನರು ಪಾಪವನ್ನೆಸಗದಂತೆ ಆ ಬ್ರಾಹ್ಮಣರು ನ್ಯಾಯ 
ಧರ್ಮವನ್ನು ನಿರ್ಮಿಸಿದರು. 

೩೯. ವ್ಯಾಸನು ಕೇಳುತ್ತಾನೆ: ಕಲಿಯುಗದಲ್ಲಿ ಸಮಸ್ತ ಬ್ರಾಹ್ಮಣರು 
ಸ್ಕಾ ್ಲಿನಭ್ರಷ್ಟ್ರರೂ, ಪಕ್ಸಪಾತಿಗಳೂ ಆಗುವರು. 

೪೦. ಬ ಸ್ಲೀಚ್ಛ ಗ್ರಾಮಗಳಲ್ಲಿ ಹಂದಿಗಳನ್ನು ಕೊಲ್ಲುವವರೊಡನೆ ವಾಸಿ 
ಸುತ್ತ ವೇದಭಸ್ಟರಾಗುವರು. 

೪೧-೪೨. ಯುಧಿಷ್ಠಿರನು ಹೆಳುತ್ತಾನೆ:--ದೇಶದೇಶಕ್ಕೆ ತೆರಳುತ್ತಿರುವ 
ಬ್ರಾಹ್ಮಣರು ಯಾವ ಗೋತ್ರದಲ್ಲಿ ಜನಿಸಿದವರೆಂಬುದನ್ನು ಯಾವ ಚಿಹ್ನೆ 
ಗಳಿಂದ ಕಂಡುಹಿಡಿಯಬಹುದೆಂಬುದನ್ನು ತಿಳಿಸು. 

೪೩. ಗೋತ್ರನಾಮವನ್ನು ಆಯಾ ಬ್ರಾಹ್ಮಣನ ಶಕ್ತಿಯಿಂದ ತಿಳಿಯ 
ಬಹುದು. ಯಾವನು ಯಾವ ಕೆಲಸವನ್ನು ಮಾಡುವನೊ ಅವನಿಗೆ ಅದೇ 
ಅವಟಂಕವು. 

೪೪. ಮೋಡಢ ಬ್ರಾಹ್ಮಣರನ್ನು ಅನಟಂಕ, ಗೋತ್ರ, ಪ್ರವರಗಳಿಂದಲೇ 
ಗುರುತಿಸಬೇಕಾಗುತ್ತದೆ. 


೪೪೮ ಶ್ರೀ ಸ್ಕಾಂದಮಹಾಪುರಾಣಂ 


ಜ್ಞಾಯಂತೇ ಹಿ ದ್ವಿಜಾ ರಾಜನ್ಮೋಢ ಬ್ರಾಹ್ಮಣ ಸತ್ತಮಾಃ ॥೪೫॥ 
ಯುಧಿಷ್ಠಿರ ಉವಾಚ :-- 
ಗೋತ್ಪೆಶ್ಚ ಪ್ರವರೈಕ್ಷೈನ ಶ್ರುತಾ ಏತೇ ತವಾನನಾತ್‌ । 


ಕಾಂವಾ ಶಾಖಾಮಧೀಯಾನಾಸ್ತನ್ಮೇ ಬ್ರೂಹಿ ಪಿತಾಮಹ ॥ ೪೬॥ 
ವ್ಯಾಸ ಉವಾಚ ;-- 

ಜ್ಞ್ಞಾಯಂತೇ ಯತ್ರ ಯತ್ರಸ್ಥಾ ಮಾಧ್ಯಂದಿನೀಯಾ ಮಹಾಬಲಾಃ । 

ಕೌಥುಮಿಾಂ ಚ ಸಮಾಶ್ರಿತ್ಯ ಕೇಚಿದ್ದಿಪ್ರಾ ಗುಣಾನ್ವಿತಾಃ ॥ ೪೭ ॥ 

ಯಗಥರ್ವಣಜಾ ಶಾಖಾ ನಷ್ಟಾಸಾ ಚ ಮಹಾಮತೇ! 

ಏನಂ ನೈ ವರ್ತಮಾನಾಸ್ತೇ ವಾಡವಾ ಧರ್ಮಸಂಭವಾಃ ॥ ೪೮ ॥ 

ಧರ್ಮಾಂರಣ್ಯೇ ಮಹಾಭಾಗಾಃ ಪುತ್ರಸೌತ್ರಾಸ್ವಿತಾ ಭವನ್‌ । 

ಶೂದ್ರಾಃ ಸರ್ವೇ ಮಹಾಭಾಗಾಃ ಪುತ್ರಪೌತ್ರ ಸಮಾವೃತಾಃ 1೪೯॥ 

ಧರ್ಮಾಃರಣ್ಯೇ ಮುಹಾತೀರ್ಥೇ ಸರ್ವೇ ತೇ ದ್ವಿಜಸೇವಕಾಃ । 

ಅಭವನ್ರಾಮಭಕ್ತಾಶ್ಚ ರಾಮಾಜ್ಞಾಂ ಸಾಲಯಂತಿ ಚ ॥ ೫೦ ॥ 


ಆಜ್ಞಾಮತ್ಯಾಂಂದರೇಣೇಹ ಹನೂನುಂತಶ್ಚ ವೀರ್ಯವಾನ್‌ । 
ಸಾಲಯೇತ್ಸೋಪಿ ಚೇದಾನೀಂ ಸಂಪ್ರಾಸ್ತೇ ವೈ ಕಲೌಯುಗೇ॥ ೫೧ ॥ 
ಅದೃಷ್ಟರೂಪೀ ಹನುಮಾಂಸ್ತೃತ್ರಭ್ರಮತಿ ನಿತ್ಯಶಃ । 

ತ್ರೈನಿದ್ಯಾ ವಾಡನಾ ಯತ್ರ ಚಾತುರ್ನಿದ್ಯಾಸ್ತಥೈವ ಚ ॥ ೫೨ ॥ 





೪೫-೪೬. ಯುಧಿಷ್ಠಿರನು ಕೇಳುತ್ತಾನೆ:--ನಿತಾಮಹ! ಈ ಬ್ರಾಹ್ಮಣರ 
ಗೋತ್ರಪ್ರವರಗಳನ್ನು ನಿನ್ನ ಮುಖದಿಂದ ಕೇಳಿದೆನು. ಇವರು ಯಾವ ಶಾಖೆ 
ಯನ್ನು ಅಧ್ಯಯನ ಮಾಡುತ್ತಾರೆಂಬುದನ್ನು ತಿಳಿಸು, 

೪೭-೫೦. ವ್ಯಾಸನು ಹೇಳುತ್ತಾನೆ:--ಧರ್ಮಾರಣ್ಯದಲ್ಲಿರುವ ಬ್ರಾಹ್ಮಣ 
ಕೆಲ್ಲ ಮಾಧ್ಯಂದಿನರೇ, ಕೆಲವರು ಮಾತ್ರ ಕಾಥಮಾ ಶಾಖಾವಲಂಬಿಗಳಾಗಿ 
ಪುತ್ರ ಪೌತ್ರಾದಿಗಳಿಂದ ಸಹಿತರಾದರು. ಖುಗ್ವೇದ ಮತ್ತು ಅಥರ್ವಣ 
ವೇದಗಳಿಂದೊಡೆದ ಶಾಖೆಗಳು ನಷ್ಟವಾದುವು. ಶೂದ್ರರೆಲ್ಲ ಪುತ್ರ ಪೌತ್ರ 
ಕೊಡನೆ ದ್ವಿಜಸೇವಕರೂ, ರಾಮಭಕ್ತರೂ ಆಗಿ ರಾಮನ ಆಜ್ಞೆಯನ್ನು ನಡೆಯಿ: 
ಸುವರು. 

೫೧. ಕಲಿಯುಗದಲ್ಲಿ ಹನುಮಂತನು ರಾಮನ ಅಪ್ಪಣೆಯಂತೆ ಶ್ರದ್ಧೆ 
ಯಿಂದ ಇವರನ್ನು ಕಾಪಾಡುತ್ತಾನೆ. 

೫೨. ತ್ರೈವಿದ್ಯರೂ ಚಾತುರ್ವಿದ್ಯರೂ ಇರುವ ಸ್ಥಳದಲ್ಲಿ ಹನುಮಂತನು 
ಅದೃಶ್ಯನಾಗಿ ನಿತ್ಯವೂ ಸಂಚರಿಸುತ್ತಾನೆ. 


ಚತ್ವಾರಿಂಶೋಳಿಧ್ಕಾಯಃ ೪೪೯ 


ಸಭಾಯಾಮುಪ ನಿಷ್ಟಾ ಯೇಃನ್ಯಾಯಾತ್ಸಾಪಂ ಪ್ರಕುರ್ವತೇ ೪3 


ಜಯೋಹಿ ನ್ಯಾಯಕರ್ತೃಣಾನುಜಯೋಂಇನ್ಯಾಯಕಾರಿಣಾಂ ॥ ೫೩ ॥ 
ಸಾಪರಾಧೇ ಯಸ್ತು ಪುತ್ರೇ ತೇತೇ ಭ್ರಾತರಿ ಚಾಪಿ ನಾ। 

ಪಕ್ಸಸಾತಂ ಪ್ರಕುರ್ನೀತ ತಸ್ಯ ಕುಸ್ಕತಿ ವಾಯುಜಃ 1 ೫೪ ॥ 
ಕುತೋ ಹನುಮಾನೇಷ ಧನನಾಶಂ ಕರೋತಿ ವೈ । 

ಪುತ್ರನಾಶಂ ಕರೋತ್ಯೇವ ಧಾಮನಾಶಂ ತಥೈನ ಚ ॥ ೫೫ ॥ 
ಸೇನಾರ್ಥಂ ನಿರ್ಮಿತಃ ಶೂದ್ರೋ ನ ನಿಪ್ರಾನ್ಪರಿಷೇವತೇ । 

ವೃತ್ತಿಂ ವಾ ನದದಾತ್ಕೇವ ಹನುಮಾಂಸ್ತಸ್ಯ ಕುಪ್ಯತಿ ॥ ೫೬॥ 
ಅರ್ಥನಾಶಂ ಪುತ್ರನಾಶಂ ಸ್ಥಾನನಾಶಂ ಮಹಾಭಯಂ । 

ಕುರುತೇ ನಾಯುಪುತ್ರೋ ಹಿ ರಾಮವಾಕ್ಯಮನುಸ್ಮರನ್‌ ॥ ೫೭ ॥ 
ಯತ್ರ ಕುತ್ರ ಸ್ಥಿತಾ ವಿಪ್ರಾಃ ಶೂದ್ರಾ ವಾ ನೃಪಸತ್ತಮ । 

ನ ನಿರ್ಧನಾ ಭನೇಯುಸ್ತೇ ಪ್ರಸಾದಾದ್ರಾಘವಸ್ಯ ಚ ॥ ೫೮ ॥ 
ಯೋ ಮೂಠಶ್ಚಾಂಪ್ಯಧರ್ಮಾತ್ಮಾ ಪಾಪಪಾಷಂಡನಾಶ್ರಿತಃ। 
ನಿಜಾನ್ವಿಪ್ರಾನ್ಪರಿತ್ಯಜ್ಯ ಪರಜ್ಜಾತೀಂಶ್ಚ ಮನ್ಯತೇ ॥೫೯॥ 


ತಸ್ಯ ಪೂರ್ವಕೃತಂ ಪುಣ್ಯಂ ಭಸ್ಮೀಭವತಿ ನಾನ್ಯಥಾ । 
ಅನ್ಯೇಷಾಂ ದೀಯತೇ ದಾನಂ ಸ್ವಲ್ಪಂ ವಾಯದಿವಾ ಬಹು ॥೬೦॥ 


೫೩. ಸಭೆಯಲ್ಲಿ ಕುಳಿತವರು ಅನ್ಯಾಯದಿಂದ ಪಾಪವನ್ನು ಮಾಡಿದರೆ 
ಅವರಿಗೆ ಅಪಜಯವೂ, ನ್ಯಾಯಸ್ಕರಿಗೆ ಜಯವೂ ಲಭಿಸುವುದು. 

೫೪. ತಪ್ಪು ಮಾಡಿದ ಮಗ, ತಂದೆ, ಸಹೋದರರಲ್ಲಿಯೂ ಪಕ್ಸಪಾತ 
ಮಾಡಿದರೆ ವಾಯುಪುತ್ರನು ಅವನಲ್ಲಿ ಸಿಟ್ಟಾಗುವನು. 

೫೫-೫೬. ಕೋಪಗೊಂಡ ಅವನು ಧನ, ಪುತ್ರ, ಭವನಗಳನ್ನು ಹಾಳು 
ಮಾಡುವನು. ಸೇವೆಗಾಗಿ ನಿರ್ಮಿತನಾದ ಶೂದ್ರನು ಬ್ರಾಹ್ಮಣರನ್ನು ಸೇವಿಸ 
ದಿದ್ದರೂ, ವೃತ್ತಿಯನ್ನು ಕೊಡದಿದ್ದರೂ ಹನುಮಂತನು ಅವನಲ್ಲಿ ಕೋಪ 
ಗೊಳ್ಳುವನು. 

೫೭. ರಾಮನ ವಾಕ್ಯದಂತೆ ಧನ, ಪುತ್ರ, ಸ್ಥಾನಗಳನ್ನು ಹಾಳುಮಾಡಿ 
ಅತ್ಯಂತ ಭಯವನ್ನುಂಟುಮಾಡುವನು. 

೫೮. ಆ ಧರ್ಮಾರಣ್ಯದವರು ಬ್ರಾಹ್ಮಣರಾಗಲಿ, ಶೂದ್ರರಾಗಲಿ ಅವರು 
ಎಲ್ಲಿದ್ದರೂ ರಾಘವನ ಅನುಗ್ರಹದಿಂದ ಬಡವರಾಗುವುದಿಲ್ಲ. 

೫೯-೬೧, ಮೂಢನೂ, ಅಧರ್ಮಿಷ್ಮನೂ, ಪಾಪಿಯಾದ ಪಾಷಂಡನನ್ನು 
ಆಶ್ರಯಿಸಿದವನೂ ಆಗಿ ಬ್ರಾಹ್ಮಣನು ಬ್ರಾಹ್ಮಣರನ್ನು ಬಿಟ್ಟು ಪರರನ್ನು 
ಜ್ಞಾತಿಗಳನ್ನಾಗಿ ತಿಳಿದರೆ ಅವನು ಹಿಂದೆಮಾಡಿದ ಪುಣ್ಯವು ಬೂದಿಯಾಗು 


೪೫೦ ಶ್ರೀ ಸ್ಕಾಂದಮ ಹಾಪುರಾಣಂ 


ಯಥಾ ಭವತಿ ವೈ ಪೂರ್ವಂ ಬ್ರಹ್ಮನಿಷ್ಣು ಶಿನೈಃ ಕೃತಂ । 


ತಸ್ಯ ಜೇನಾ ನ ಗೃಹ್ಹಂತಿ ಹನ್ಯಂ ಕನ್ಯಂ ಚ ಪೂರ್ವಜಾಃ ॥೬೧॥ 
ವಂಚಯಿತ್ವಾ ನಿಜಾನ್ನಿಸ್ರಾನನ್ಯೇಭ್ಯಃ ಪ್ರದದೇತು ಯಃ । 
ತಸ್ಯ ಜನ್ಮಾರ್ಜಿತಂ ಪುಣ್ಯಂ ಭಸ್ಮೀಭವತಿ ತತ್ಸೃಣಾತ್‌ 1೬೨ 


ಬ್ರಹ್ಮನಿಷ್ಸು ಶಿವೈಶ್ಚೈನ ಪೂಜಿತಾ ಯೇ ದ್ವಿಜೋತ್ತಮಾಃ । 
ತೇಷಾಂ ಯೇ ನಿಮುಖಾಃ ಶೂದ್ರಾ ರೌರನೇ ನಿವಸಂತಿ ತೇ | ೬೩ ॥ 
ಯೋ ಲೌಲ್ಯಾಚ್ಚ ಕುಲಚಾರಂ ಗೋತ್ರಾಚಾರಂ ಪ್ರಲೋಪಯೇತ್‌ | 


ಸ್ವಾಚಾರಂ ಯೋ ನ ಕುರ್ನೀತ ಕದಾಚಿದ್ವೈ ನಿನೋಹಿತಃ ॥ ೬೪॥ 
ಸರ್ವನಾಶೋ ಭವೇತ್ರಸ್ಯ ಭಸ್ಮೀ ಭವತಿ ತತ್ಕಣಾತ್‌ | 

ತಸ್ಮಾತ್ಸರ್ವಃ ಕುಲಾಚಾರಃ ಸ್ಥಾನಾಚಾರ ಸ್ತಥೈವ ಚ ॥ ೬೫॥ 
ಗೋತ್ರಾಚಾರಃ ಪಾಲನೀಯೋ ಯಥಾ ವಿತ್ತ್ವಾನುಸಾರತಃ । 

ಏನಂ ತೇ ಕಥಿತಂ ರಾಜನ್ಮರ್ಮಾಃರಣ್ಯಂ ಪುರಾತನಂ ॥ ೬೬॥ 


ಸ್ಥಾಪಿತಂ ದೇನದೇನೈಶ್ಚ ಬ್ರಹ್ಮನಿಷ್ಣು ಶಿನಾದಿಭಿಃ । 

ಧರ್ಮಾಃರಣ್ಯಂ ಕೃತಯುಗೇ ತ್ರೇತಾಯಾಂ ಸತ್ಯಮಂದಿರಂ । 

ದ್ವಾಪರೇ ನೇದಭನನಂ ಕಲೌ ನೋಹೇರಕಂ ಸ್ಮೃತಂ ॥೬೭॥ 
ವುದು. ಹಿಂದೆ ಬ್ರಹ್ಮಾದಿಗಳು ಮಾಡಿದ ನಿಯಮವನ್ನು ಬಿಟ್ಟು ಬೇರೆಯವರಿಗೆ 
ಸ್ವಲ್ಪವಾಗಲಿ ಹೆಚ್ಚಾಗಲಿ ದಾನವನ್ನುಮಾಡಿದರೆ ಅವನು ಕೊಟ್ಟ ಹವ್ಯ ಕವ್ಯ 
ಗಳನ್ನು ದೇವತೆಗಳೂ, ನಿತೃಗಳೂ ಸ್ವೀಕರಿಸುವುದಿಲ್ಲ. 

೬೨. ತಮ್ಮ ಬ್ರಾಹ್ಮಣರನ್ನು ಮೋಸಗೊಳಿಸಿ ಬೇರೆಯವರಿಗೆ ದಾನಮಾಡಿ 
ದವನ ಪುಣ್ಯವೆಲ್ಲ ಕೂಡಲೆ ಹಾಳಾಗುವುದು. 

೬೩. ಬ್ರಹ್ಮನಿಷ್ಣುಶಿವರು ಪೂಜಿಸಿದ ಬ್ರಾಹ್ಮಣರಲ್ಲಿ ವಿಶ್ವಾಸಮಾಡದ 
ಶೂದ್ರರು ರೌರವ ನರಕದಲ್ಲಿ ವಾಸಿಸುವರು. 

೬೪-೬೭. ಅತಿ ಚಾಪಲ್ಯದಿಂದ ಕುಲಾಚಾರವನ್ನೂ, ಗೋತ್ರಾಚಾರ 
ವನ್ನೂ, ಸ್ವಾಚಾರವನ್ನೂ ಕಾಪಾಡದ ಮನುಷ್ಯನ ಸಕಲವೂ ಕೂಡಲೆ ಬೂದಿ 
ಯಾಗುವುದು. ಆದುದರಿಂದ ತನ್ನ ಐಶ್ವರ್ಯಕೃನುಸಾರವಾಗಿ ಪ್ರತಿಯೊಬ್ಬನೂ 
ಕುಲ, ಸ್ಥಾನ, ಗೋತ್ರಗಳ ಆಚಾರಗಳನ್ನು ಪಾಲಿಸಬೇಕು. ಮಹಾರಾಜ! 
ಬ್ರಹ್ಮಾದಿಗಳಿಂದ ಸ್ಥಾಪಿತವಾದ ಪುರಾತನವಾಗಿರುವ ಧರ್ಮಾರಣ್ಯದ ವಿಷಯ 
ವನ್ನು ನಿನಗೆ ತಿಳಿಸಿರುವೆನು. ಈ ಕ್ಷೇತ್ರವು ಕೃತಯುಗದಲ್ಲಿ ಧರ್ಮಾರಣ್ಯ 
ವೆಂದೂ, ತ್ರೇತಾಯುಗದಲ್ಲಿ ಸತ್ಯಮಂದಿರವೆಂದೂ, ದ್ವಾಪರಯುಗದಲ್ಲಿ 
ನೇದಭವನವೆಂದ್ಕೂ ಕಲಿಯುಗದಲ್ಲಿ ಮೋಹೇರಕಪುರವೆಂದೂ ಪ್ರಖ್ಯಾತ 
ವಾಯಿತು. 


ಚತ್ವಾರಿಂಶೋರಧ್ಕಾಯಃ॥ ೪೫೧ 


ಬ್ರಹ್ಮೋವಾಚ: 
ಯ ಇದಂ ಶೃಣುಯಾತ್ಸುತ್ರ ಶ್ರದ್ಧಯಾ ಪರಯಾ ಯುತಃ । 
ಧರ್ಮಾಂರಣ್ಯಸ್ಯ ಮಾಹಾತ್ಮ್ಯಂ ಸರ್ವಕಿಲ್ಬಿಸನಾಶನಂ ॥೬೮॥ 
ಮನೋವಾಕ್ಕಾಯಜನಿತಂ ಪಾತಕಂ ತ್ರಿವಿಧಂ ಚೆ ಯತ್‌ | 
ತತ್ಸರ್ನಂ ನಾಶಮಾಯಾತಿ ಶ್ರವಣಾತ್ಮೀರ್ತನಾತ್ಸಕೃತ್‌ ॥೬೯॥ 


ಧನ್ಯಂ ಯಶಸ್ಯಮಾಯುಷ್ಯಂ ಸುಖಸಂತಾನದಾಯಕಂ | 
ಮಾಹಾತ್ಮ್ಯಂ ಶೃಜುಯಾದೃತ್ಸ ಸರ್ವಸೌಖ್ಯಾಪ್ತಯೇ ನರಃ ॥೭೦॥ 
ಸರ್ವತೀರ್ಥೇಷು ಯತ್ಪುಣ್ಯಂ ಸರ್ನಕ್ಸೇತ್ರೇಷು ಯತ್ಛಲಂ | 


ತತ್ಫಲಂ ಸಮುವಾಪ್ನೋತಿ ಧರ್ಮಾಂರಣ್ಯಸ್ಯ ಸೇನನಾತ್‌ ॥೭೧॥ 
ನಾರದ ಉವಾಚ :- 

ಧರ್ಮಾಃ ರಣ್ಯಸ್ಯ ಮಾಹಾತ್ಮ್ಯಂ ಯಚು ವ್ರತಂ ತ್ವನ್ಮುಖಾಂಬುಜಾತ್‌ [ 

ಧರ್ಮನಾಸ್ಯಾಂ ಯತ್ರ ಧರ್ಮಸ್ತಪಸ್ತ್ರೇಪೇ ಸುದುಷ್ಕರಂ ॥ ೭೨ ॥ 

ತಸ್ಯ ಕ್ಷೇತ್ರಸ್ಯ ಮುಹಿಮಾ ಮಯಾ ತ್ವತ್ತೋವಧಾರಿತಃ । 

ಸ್ವಸ್ತಿ ತೇಸ್ತು ಗಮಿಷ್ಯಾನಿ ಧರ್ಮಾಂರಣ್ಯ ದಿದೃಕ್ಟುಯಾ ॥ ೭೩. 

ತನನಾಕ್ಕ ಜಲೌಫಘೇನ ಪಾನಿತೋ ಹಂ ಚತುರ್ಮುಖ ॥ ೭೪ ॥ 


೬೮-೭೦. ಬ್ರಹ್ಮನು ಹೇಳುತ್ತಾನೆ: ಮಗು! ಸಕಲಪಾಪಗಳನ್ನು ನಾಶ 
ಮಾಡುವ ಧರ್ಮಾರಣ್ಯ ಮಾಹಾತ್ಮ್ಯವನ್ನು ಅತಿಶ್ರದ್ಧಯಿಂದ ಒಂದು ಸಲ 
ಕೇಳಿದವನ ಮತ್ತು ಹೇಳಿದವನ ಕಾಯಿಕ, ವಾಚಿಕ, ಮಾನಸಿಕವಾದ ಮೂರು 
ವಿಧವಾದ ಪಾಪನೆಲ್ಲ ನಾಶವಾಗುವುದು. ಮಾನವನು ಸಕಲ ಸೌಖ್ಯವನ್ನು 
ಪಡೆಯಲೋಸುಗ ಪುಣ್ಯಕರವೂ, ಯಶಸ್ಥರವೂ, ಸುಖಕರವೂ, ಸಂತಾನ 
ದಾಯಕವೂ ಆಗಿರುವ ಧರ್ಮಾರಣ್ಯದ ಮಾಹಾತ್ಮ್ಯವನ್ನು ಕೇಳಬೇಕು. 

೭೧. ಮಾನವನು ಧರ್ಮಾರಣ್ಯವನ್ನು ಸೇವಿಸುವುದರಿಂದ ಸಕಲ ತೀರ್ಥ 
ಕ್ಸೇತ್ರಗಳನ್ನು ಸೇವಿಸಿದ ಪುಣ್ಯವನ್ನೂ, ಫಲವನ್ನೂ ಪಡೆಯುವನು. 

೭೨. ನಾರದನು ಹೇಳುತ್ತಾನೆ: ನಿನ್ನ ಮುಖದಿಂದ ಧರ್ಮಾರಣ್ಯದ 
ಮಾಹಾತ್ಮ್ಯವನ್ನು ಕೇಳಿದೆನು. ಆ ಧರ್ಮಾರಣ್ಯದಲ್ಲಿರುವ ಧರ್ಮವಾಪಿ 
ಯಲ್ಲಿ ಯಮಧರ್ಮನು ದುಷ್ಕರವಾದ ತಪಸ್ಸನ್ನು ಮಾಡಿರುತ್ತಾನೆ. 

೭೩. ಆ ಕ್ಷೇತ್ರದ ಮಾಹಾತ್ಮ್ಯವನ್ನು ನಾನು ನಿನ್ನಿಂದ ತಿಳಿದುಕೊಂಡಿ 
ರುವುದರಿಂದ ಅದನ್ನು ನೋಡಲು ಅಲ್ಲಿಗೆ ಹೋಗುವೆನು. ನಿನಗೆ ಮಂಗಳ 
ವಾಗಲಿ. 

೭೪, ಚತುರ್ಮುಖ! ನಾನು ನಿನ್ನ ಮಾತುಗಳೆಂಬ ನೀರಿನ ಪ್ರವಾಹ 
ದಿಂದ ಪವಿತ್ರನಾದೆನು. 


೪೫೨ ಶ್ರೀ ಸ್ಕಾಂದಮಹಾಪುರಾಣಂ 


ವ್ಯಾಸ ಉವಾಚ:- 
ಇದಮಾಖ್ಯಾನಕಂ ಸರ್ವಂ ಕಥಿತಂ ಪಾಂಡುನಂದನ । 
ಯಚ್ಛತ್ವಾ ಗೋ ಸಹಸ್ಪಸ್ಯ ಫಲಂ ಪ್ರಾಪ್ನೋತಿ ಮಾನವಃ ॥೭೫॥ 
ಅಪುತ್ರೋ ಲಭತೇ ಪುತ್ರಾನ್ನಿರ್ಧನೋ ಧನವಾನ್ಸನೇತ್‌ | 
ರೋಗೀ ರೋಗಾತ್ರಮುಚ್ಯೇತ ಬದ್ಭೋಮುಚ್ಯೇತ ಬಂಧನಾತ್‌ ॥ ೭೬॥ 
ನಿದ್ಯಾರ್ಥೀ ಲಭತೇ ವಿದ್ಯಾಮುತ್ತಮಾಂ ಕರ್ಮಸಾಧನಾಂ | 


ತೀರ್ಥಯಾತ್ರಾಫಲಂ ತಸ್ಯ ಕೋಟಕನ್ಯಾಫಲಂ ಲಭೇತ್‌ '  ೭೭॥ 
ಯಃ ಶೃಣೋತಿ ನರೋ ಭಕ್ತ್ಯಾ ನಾರೀನಾಂಥ ನರೋತ್ತಮ । 

ನಿರಯಂ ಸೈನ ಪಶ್ಯಂತಿ ನಕೋತ್ತರಶತೈಃ ಸಹ ॥೭೮॥ 
ಶುಭೇ ದೇಶೇ ನಿವೇಶ್ಯಾಂಥ ಕ್ಸೌನವಸ್ವ್ರಾದಿಭಿ ಸ್ತಥಾ। 

ಪುರಾಣಪುಸ್ತಕಂ ರಾಜನ್ಛ್ರಯತಃ ಶಿಷ್ಟಸಂಮತಃ ॥೭೯॥ 
ಅರ್ಚಯೇಚ್ಚ ಯಥಾ ನ್ಯಾಯಂ ಗಂಧಮಾಲ್ಕೈಃ ಪೃಫಕ್ಟೃಫಕ್‌ । 
ಸಮಾಪ್ತೌ ನೃಪಗ್ರಂಥಸ್ಯ ವಾಚಕಸ್ಯಾಂನುಪೂಜನಂ ॥ ೮೦॥ 
ದಾನಾದಿಭಿರ್ಯಥಾನ್ಯಾಯಂ ಸಂಪೂರ್ಣಫಲಹೇತವೇ । 

ಮುದ್ರಿಕಾಂ ಕುಂಡಲಂ ಚೈನ ಬ್ರಹ್ಮಸೂತ್ರಂ ಹಿರಣ್ಮಯಂ ॥ ೮೧॥ 





೭೫. ವ್ಯಾಸನು ಹೇಳುತ್ತಾನೆ: ಪಾಂಡುತನಯ! ನಿನಗೆ ಈ ಕಥೆಯ 
ನ್ನೆಲ್ಲ ಹೇಳಿರುವೆನು. ಮಾನವನು ಇದನ್ನು ಕೇಳಿದರೆ ಸಹಸ್ತಗೋದಾನದ 
ಫಲವನ್ನು ಪಡೆಯುವನು. 

೭೬. ಮಕ್ಕಳಿಲ್ಲದವನು ಮಕ್ಕಳನ್ನೂ ಧನವಿಲ್ಲದವನು ಧನವನ್ನೂ 
ಹೊಂದುವನು. ರೋಗಿಯು ರೋಗದಿಂದಲೂ, ಬದ್ಧನಾದವನು ಬಂಧನ 
ದಿಂದಲೂ ಮುಕ್ತನಾಗುವನು. 

೭೭, ವಿದ್ಯಾರ್ಥಿಯು ಕರ್ಮಸಾಧಕವಾದ ಉತ್ತಮ ವಿದ್ಯೆಯನ್ನು ಪಡೆ 
ಯುವನು. ಅಲ್ಲದೆ ಕೇಳಿದ ಮಾನವನು ಕೋಟ ಕನ್ಯಾದಾನದ ಫಲವನ್ನು 
ಹೊಂದುವನು. 

೭೮. ಯುಧಿಷ್ಠಿರ! ಗಂಡಸಾಗಲಿ, ಹೆಂಗಸಾಗಲಿ ಈ ಉಪಾಖ್ಯಾನ 
ವನ್ನು ಭಕ್ತಿಯಿಂದ ಕೇಳಿದರೆ ಅವರೂ ಅವರ ನೂರೊಂದು ಕುಲದವರೂ ನರಕ 
ವನ್ನು ನೋಡುವುದಿಲ್ಲ. 

೭೯-೮೨. ನರನು ಶುದ್ಧನೂ, ಶಿಷ್ಟಸಂಮತನೂ ಆಗಿ ಗ್ರಂಥ ಸಮಾಪ್ತಿ 
ಯಾದ ಮೇಲೆ ಈ ಪುರಾಣದ ಪುಸ್ತಕವನ್ನು ಒಳ್ಳೆಯ ಸ್ಥಳದಲ್ಲಿ ಕೇಷ್ಮೆನಸ್ರ್ರಗಳೊ 
ಡನೆ ಇಟ್ಟು ವಿಧಿಯಂತೆ ಗ್ರಂಥಮೂಲ್ಯಗಳಿಂದ ಪೂಜಿಸಬೇಕು. ಅನಂತರ 
ಸಂಪೂರ್ಣಫಲದ ಲಾಭಕ್ಕಾಗಿ ಪುರಾಣಿಕನನ್ನು ಗಂಧ, ಮಾಲ್ಯ, ಲೇಪನ 


ಚತ್ಕಾರಿಂಶೋ$ಧ್ಯಾಯಃ ೪೫೩ 


ವಸ್ತ್ರಾಣಿ ಚ ವಿಚಿತ್ರಾಣಿ ಗಂಧಮಾಲ್ಯಾನುಲೇಪನೈಃ । 


ದೇವವತ್ಸೂ ಜನಂ ಕೃತ್ವಾ ಗಾಂಚ ದದ್ಯಾತ್ಸಯಸ್ವಿನೀಂ 1 ೮೨॥ 
ಏನಂ ವಿಧಾನತಃ ಶ್ರುತ್ವಾ ಧರ್ಮಾಃರಣ್ಯ ಕಥಾನಕಂ । 
ಧರ್ಮಾಃರಣ್ಯ ನಿವಾಸಸ್ಯ ಫಲಮಾಸ್ನೋತ್ಯಸಂಶಯಂ ॥ ೮೩ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ತೃ ತೀಯೇ ಬ ಶ್ರಹ್ಮಖಂಡೇ ಪೂರ್ವಭಾಗೇ ಧರ್ಮಾಂಕಣ್ಯ ಮಾಹಾತ್ಮ್ಯೇ 
4 ಧರ್ವ್ವಾಂರಣ್ಯ ನಿವಾಸಿ ವ ೈವಸ್ಥಾಪನ ಪೂರ್ವಕ ಧರ್ಮಾಂರಣ್ಯ ಪುರಾಣಶ್ರ ವಣ 
ಮಾಹಾತ್ಮ್ಯವರ್ಣನಂ ನಾಮ ಚತ್ವಾರಿಂಶೋಂಧ್ಯಾಯಃ 


ಧರ್ಮಾಃರಣ್ಯಮಾಹಾತ್ಮ್ಯಂ ಸಮಾಪ್ತಂ 
ವಸ್ತುಗಳಿಂದ ದೇವರಂತೆ ಪೂಜಿಸಿ ಉಂಗುರ, ಕುಂಡಲ, ಚಿನ್ನದ ಜನಿವಾರ, 
ನಾನಾಬಗೆಯ ಬಟ್ಟೆ, ಹಾಲನ್ನು ಕರೆಯುವ ಹಸು ಇವುಗಳನ್ನು ದಾನಮಾಡ 
ಬೇಕು. 
೮೩. ಹೀಗೆ ವಿಧಿಯಂತೆ ಧರ್ಮಾರಣ್ಯದ ಕಥೆಯನ್ನು ಕೇಳಿದ ಮನುಷ್ಯನು. 
ನಿಶ್ಚಯ ವಾಗಿಯೂ ಅಲ್ಲಿ ವಾಸಮಾಡಿದ ಫಲವನ್ನು ಹೊಂದುವನು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಲದಮಹಾಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ 
ಮಾಹಾತ್ಮ್ಯ ದಲ್ಲಿ "" ಧರ್ಮಾರಣ್ಯ ಪುರಾಣಶ್ರವಣ ಮಾಹಾತ್ಮ್ಯವರ್ಣನ''ವೆಂಬ 
ನಲವತ್ತನೆಯ ಅಧ್ಯಾಯವು ಮುಗಿದುದು 


ಇಲ್ಲಿಗೆ ಸ್ಕಾಂದಮಹಾಪುರಾಣದಲ್ಲಿ ಮೂರನೆ ಬ್ರಹ್ಮಖಂಡದಲ್ಲಿ 
ಧರ್ಮಾರಣ್ಯಮಾಹಾತ್ಮ ನು ಮುಗಿದುದು 








೫೦೨.47. ಬೆಂಗಳೂರು ಸಿಟ ಬೆಂಗಳೂರು ಪ್ರೆಸ್ಸಿನಲ್ಲಿ ಸೂಪರಿಂಟೆಂಡೆಂಟರಾದ 
ಜಿ. ಶ್ರೀನಿವಾಸರಾಯರವರು ಮುದ್ರಿಸಿರುವರು